ಬ್ಯಾರಿ, ಷಾಪ್ರ್ಲೆ ಕೆ (1941--) -2001
Barry , Sharpless.K
ಅಸಂಸಂ-ರಸಾಯನಶಾಸ್ತ್ರ-ರಾಸಾಯನಿಕ ಕ್ರಿಯೆಗಳಲ್ಲಿ ಅಸಮಾಂಗೀಯ ಉತ್ಕರ್ಷಣಾ ತಂತ್ರ ಪರಿಚಯಿಸಿದಾತ.
ಷಾಪ್ರ್ಲೆ 28 ಏಪ್ರಿಲ್ 1941ರಂದು ಪೆನ್ಸಿಲ್ವೇನಿಯಾದ ಫಿûಲೆಡೆಲ್ಫಿಯಾದಲ್ಲಿ ಜನಿಸಿದನು. ಷಾಪ್ರ್ಲೆ 1968ರಲ್ಲಿ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಿಂದ ಜೀವ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದನು. 1970ರಲ್ಲಿ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆ¥sóï ಟೆಕ್ನಾಲಜಿ ಸೇರಿದನು. 1990ರಲ್ಲಿ ಕ್ಯಾಲಿಫೊರ್ನಿಯಾದ ಲಾ ಜೊಲ್ಲದಲ್ಲಿರುವ ಸ್ಕ್ರಿಪ್ಸ್ ರಿಸರ್ಚ ಇನ್ಸ್ಟಿಟ್ಯೂಟ್ ಸೇರಿದನು. ಹಲವಾರು ಜೈವಿಕ ಅಣುಗಳು ಪರಸ್ಪರ ಅಧ್ಯಾರೋಪಣಗೊಳಿಸಲಾಗದ (Non-Superimposable) ಕನ್ನಡಿ ಬಿಂಬಗಳಂತೆ ಎರಡು ಬಗೆಯ ರಾಚನಿಕ ಸ್ವರೂಪದಲ್ಲಿ ಅಸ್ತಿತ್ವದಲ್ಲಿವೆ. ಇಂತಹ ರಾಚನಿಕ ಸ್ವರೂಪಗಳನ್ನು ಎನ್ಯಾಂಟಿಯರ್ಸ್ಗಳೆನ್ನುತ್ತಾರೆ. ಇಂತಹ ಜೈವಿಕ ಅಣುಗಳಿಂದಾದ ಕಿಣ್ವಗಳು, ರಾಸಾಯನಿಕಗಳು ವರಣಾತ್ಮಕವಾಗಿದ್ದು (Selective) ನಿರ್ದಿಷ್ಟ ರಾಚನಿಕ ಸ್ವರೂಪದ ಅಣುಗಳೊಂದಿಗೆ ಮಾತ್ರ ರಾಸಾಯನಿಕ ಕ್ರಿಯೆಗೊಳಗಾಗುತ್ತವೆ. ರೋಗ ನಿವಾರಣೆಗಾಗಿ ಹ¯ವಾರು ಬಗೆಯ ಜೈವಿಕ ಔಷಧಿಗಳು ಎನ್ಯಾಂಟಿಮರ್ಸಗಳ ಮಿಶ್ರಣಗಳಾಗಿರುತ್ತವೆ. ರೋಗ ನಿವಾರಣೆಗೆ ಕೆಲ ಎನ್ಯಾಂಟಿಮರ್ಸ್ ನೆರವಾದರೆ, ಇವುಗಳೊಂದಿಗಿರುವ ಬೇರೆಯವು ದೇಹದ ಮೇಲೆ ಪಾಶ್ರ್ವ ಪರಿಣಾಮ ಬೀರುತ್ತವೆ. ಥ್ಯಾಲಿಡೋಮೈಡ್ನಂತಹ ಔಷಧಿಗಳಲ್ಲಿ ಪಾಶ್ರ್ವ ಪರಿಣಾಮ ಬಹು ಪ್ರಭಾವಶಾಲಿಯಾಗಿರುತ್ತದೆ. ರೋಗ ಸ್ಥಿತಿಯ ನಿವಾರಣೆಗಾಗಿ ಬೇಕಾದ ಬಗೆಯ ಎಲ್ಯಾಂಟೊಮರ್ ಮಾತ್ರ ರಾಸಾಯನಿಕ ಕ್ರಿಯೆಗೊಳಗಾಗಬೇಕು. ಷಾಪ್ರ್ಲೆಯ ಸಂಶೋಧನೆಗಳು ಇಂತಹ ನಿರ್ದಿಷ್ಟ ರಾಸಾಯನಿಕ ಕ್ರಿಯೆಗಳ ಪ್ರತಿಬಿಂಬರೂಪಿ ಉತ್ಕರ್ಷಣೆಯಲ್ಲಿ (Oxidation) ಕೇಂದ್ರೀಕೃತವಾಗಿವೆ. 1980ರಿಂದ ಷಾಪ್ರ್ಲೆ ನಡೆಸಿದ ಸಂಶೋಧನೆಗಳ ಫಲವಾಗಿ ಎಪೊಕ್ಸೈಡ್ ಸಂಯುಕ್ತಗಳನ್ನು ಪಡೆಯಲು ರೂಪಿಸಿದ ಅಸಮಾಂಗೀಯ ಉತ್ಕರ್ಷಣಾ (Assymetric Oxidation) ತಂತ್ರ ವ್ಯಾವಹಾರಿಕವಾಗಿ ಔಷಧಿ ತಯಾರಿಕೆಗೆ ನೆರವಾಯಿತು. ಈ ಸಾಧನೆಗಾಗಿ ಷಾಪ್ರ್ಲೆ 2001ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತವಾದನು.
ರಯೋಜಿ , ನೊಯೊರ್ (1938--) 2001
Ryoji , Noyor
ಜಪಾನ್-ವೈದ್ಯಕೀಯ-ಜೈವಿಕ ರಾಸಾಯನಿಕಗಳ ಉತ್ಪಾದನೆಗೆ ಸಾವಯವ ಲೌಹಿಕ ರಸಾಯನಶಾಸ್ತ್ರ (Organic Metallic Chemistry) ಅಭಿವೃದ್ಧಿಪಡಿಸಿದಾತ
ರಯೊಜಿ 3 ಸೆಪ್ಟೆಂಬರ್ 1938ರಂದು ಕೋಬೆ ನಗರದಲ್ಲಿ ಜನಿಸಿದನು. ರಯೊಜಿ ತಂದೆ ಖಾಸಗಿ ರಾಸಾಯನಿಕ ಕಂಪನಿಯೊಂದರಲ್ಲಿ ಸಂಶೋಧಕನಾಗಿದ್ದನು. ಈತ ಮನೆಗೆ ಹಲವಾರು ವೈಜ್ಞಾನಿಕ ನಿಯತಕಾಲಿಕ ಪತ್ರಿಕೆಗಳನ್ನು ತರಿಸುತ್ತಿದ್ದನು. ಆಗ ತಾನೆ ಹೊಸದಾಗಿ ಉಪಜ್ಞೆಗೊಂಡಿದ್ದ ನೈಲಾನ್ ಎಳೆಗಳ ಬಗೆಗೆ ಓದಿ ಪುಳಕಿತನಾಗಿದ್ದ ರಯೊಜಿ ರಸಾಯನಶಾಸ್ತ್ರವನ್ನು ವಿಸ್ಮಯ ಗೌರವ ಬೆರೆತ ದೃಷ್ಟಿಯಿಂದ ನೋಡುತ್ತಿದ್ದನು. ಹನ್ನೆರಡು ವರ್ಷದ ಬಾಲಕನಾಗಿದ್ದ ರಯೊಜಿಗೆ ತಾನು ಉತ್ತಮ ರಸಾಯನಶಾಸ್ತ್ರಜ್ಞನಾಗಿ ಜಪಾನ್ನ್ನು ಬಡತನದಿಂದ ಹೊರ ತರುವ ಕಾರ್ಯದಲ್ಲಿ ಅಳಿಲು ಸೇವೆ ಸಲ್ಲಿಸಬೇಕೆಂದು ಆಶಿಸಿದನು. 1957ರಲ್ಲಿ ಹದಿನೆಂಟನೇ ವಯಸ್ಸಿನಲ್ಲಿ ರಯೊಜಿ ಕ್ಯೋಟೋ ವಿಶ್ವವಿದ್ಯಾಲಯ ಸೇರಿದನು. ಇದೇ ವರ್ಷ ಸೋವಿಯೆತ್ ರಷ್ಯಾ ತನ್ನ ಮೊದಲ ಉಪಗ್ರಹ ಸ್ಪುತ್ನಿಕ್ ಹಾರಿಸಿತು. ಸೋವಿಯತ್ನ ಈ ಸಾಧನೆ ಹಾಗೂ ವಿಜ್ಞಾನದ ಸಾಮಥ್ರ್ಯಗಳನ್ನು ಜನ ಸಾಮಾನ್ಯರಂತೆ ಜಪಾನಿನ ವೈಜ್ಞಾನಿಕ ರಂಗವೇ ಬೆರಗಿನಿಂದ ನೋಡಿ ಆನಂದಿಸಿ ಮೆಚ್ಚಿತು. ಇದು ರಯೊಜಿಯ ಮೇಲೆ ಆಳ ಪ್ರಭಾವ ಬೀರಿತು. 1961ರಲ್ಲಿ ಪದವಿ ಹಾಗೂ 1963ರಲ್ಲಿ ಡಾಕ್ಟರ್ ಗಳಿಸಿದ ರಯೊಜಿ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ಹಿಟೊಸಿ ನೊಝೊಕಿಯ ಮಾರ್ಗದರ್ಶನದಲ್ಲಿ ಸಂಶೋಧನೆ ಪ್ರಾರಂಭಿಸಿದನು. ಈ ಸಂದರ್ಭದಲ್ಲಿ ಕ್ರಮಬದ್ದವಾದ ಸಾವಯವ ಲೌಹಿಕ ಸಂಯುಕ್ತಗಳ (Organic Metallic Compounds) ಪ್ರತಿಕ್ರಿಯೆಯಲ್ಲಿ ಅಸಮಾಂಗೀಯ (Unsymmetric) ನಡವಳಿಕೆಯನ್ನು ರಯೊಜಿ ಮೊದಲ ಬಾರಿಗೆ ಗುರುತಿಸಿದನು. ಇವುಗಳ ಅಧ್ಯಯನ ರಯೊಜಿಯ ಜೀವನದುದ್ದಕ್ಕೂ ಸಾಗಿತು. 1967ರ ನಂತರ ನಗೊಯಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನ ಆಹ್ವಾನ ಬಂದಾಗ ರಯೊಜಿಗೆ 29ರ ಪ್ರಾಯ. ಇಲ್ಲಿ ರಯೊಜಿ ಸಾವಯವ ಲೌಹಿಕ ಸಂಯುಕ್ತಗಳ ಸಂಶೋಧನೆಗೆ ಕಟಿಬದ್ದವಾದ ಯುವ ವಿಜ್ಞಾನಿಗಳ ತಂಡವನ್ನು ಕಟ್ಟತೊಡಗಿದನು. 1969ರಲ್ಲಿ ಅಸಂಸಂದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಇ.ಜೆ.ಕೊರಿ ಮಾರ್ಗದರ್ಶನದಲ್ಲಿ ಸಂಶೋಧಿಸಲು ತೆರಳಿದನು. ಇಲ್ಲಿದ್ದ ಕೊನಾರ್ಡ್ ಬ್ಲಾಕ್ನ ಕೆಳಗೆ ಕೆ. ಬ್ಯಾರಿ ಷಾಪ್ಲೆ ಕೆಲಸ ಮಾಡುತ್ತಿದ್ದನು. ಈ ಇಬ್ಬರಲ್ಲೂ ಅತ್ಯುತ್ತಮ ಸ್ನೇಹ, ಸಹಕಾರಗಳ ಮೂಡಿದವು. 1970ರಲ್ಲಿ ಜಪಾನ್ಗೆ ಮರಳಿ ನಗೋಮಾ ವಿಶ್ವವಿದ್ಯಾಲಂiÀiದಲ್ಲಿ ಪ್ರಾಧ್ಯಾಪಕನಾದ ರಯೊಜಿ ಅಸಮಾಂಗೀಯ ಜಲಕರಣ (Hydrogenation) ಕುರಿತಾಗಿ ವ್ಯಾಪಕ ಸಂಶೋಧನೆ ನಡೆಸಿದನು. ಇದರ ಫಲಿತಾಂಶವಾಗಿ ಟರ್ಪಿನ್ , ವಿಟಮಿನ್, ಬೀಟಾ-ಅಲ್ಯಾಕ್ಟಂ ಪ್ರತಿ ಜೈವಿಕಗಳು, ಆಲ್ಫಾ, ಬೀಟಾ, ಅಮೈನೋ ಆಮ್ಲ, ಆಲ್ಕಲಾಯಿಡ್ಸ್, ಪ್ರೊಸ್ಟ್ಗ್ಲಾಂಡಿನ್ಸ್ ಹೋಲುವ ನೂರಾರು ಜೈವಿಕ ಸಾಮಾಗ್ರಿಗಳನ್ನು ಸಂಶ್ಲೇಷಿಸುವ ತಂತ್ರಗಳು ಅಭಿವೃದ್ಧಿಗೊಂಡವು. ರಯೊಜಿ ತಂಡದ ನೆರವಿನಿಂದ ಟಕಸಾಗೋ ಇಂಟರ್ನ್ಯಾಷನಲ್ ಕಂಪನಿ ಕಾರ್ಬಪೆನೆಮ್ ಹಾಗೂ ಲೆವೊಪೆÇ್ಲಕ್ಯಾಸಿನ್ನಂತಹ ಪ್ರತಿಬೈವಿಕಗಳನ್ನು ಭೂರಿ ಪ್ರಮಾಣದಲ್ಲಿ (Mass Production) ಉತ್ಪಾದಿಸತೊಡಗಿತು. ಸಾವಯವ ಲೌಹಿಕ ರಸಾಯನಶಾಸ್ತ್ರದಿಂದ ಔಷಧಿಗಳು ಲಭ್ಯವಾಗತೊಡಗಿ ಸಾಮಾಜಿಕ ಲಾಭಗಳು ದಕ್ಕತೊಡಗಿದವು. ಈ ರಾಸಾಯನಿಕಗಳ ಕ್ರಿಯೆ, ಜಲಕರಣ ತಂತ್ರಗಳನ್ನು ರೂಪಿಸಿದ್ದಕ್ಕಾಗಿ ರಯೊಜಿ 2001ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ವಿಲಿಯಂ , ಎಸ್ ನೊಲೆಸ್ (1917--) 2001
William , S. Knowles
ಅಸಂಸಂ-ರಸಾಯನಶಾಸ್ತ್ರ- ಜೀವರಸಾಯನಗಳ ವಿಶ್ಲೇಷಣೆಗೆ ಅಸಮಾಂಗೀಯ ಜಲಜನಕೀಕರಣದ (Unsymmetrical Hydrogenation) ತಂತ್ರವನ್ನು ಪರಿಚಯಿಸಿದಾತ.
ಅಸಂಸಂಗಳ ಮೆಸಾಚುಸೆಟ್ಸ್ ಪ್ರಾಂತ್ಯದ ಟಾನ್ಟನ್ನಲ್ಲಿ 1 ಜೂನ್ 1917ರಂದು ನೊಲೆಸ್ ಜನಿಸಿದನು. ಈತನ ಕುಟುಂಬದಲ್ಲಿ ವ್ಯಾಪಾರ ಪ್ರಾಶಸ್ತ್ಯ ಹೊಂದಿ ಶಿಕ್ಷಣಕ್ಕೆ ಅಂತಹ ಆದ್ಯತೆಯಿರಲಿಲ್ಲ. ಆದರೆ ನೊಲೆಸ್ನ ತಾಯಿ ಮಗ ದೊಡ್ಡ ವೈದ್ಯನಾಗಬೇಕೆಂದು ಆಶಿಸಿದ್ದಳು. ಪದವಿಪೂರ್ವ ಶಿಕ್ಷಣ ಮುಗಿಸಿದ ನಂತರ ಇಂಜಿನ್ ರಹಿತವಾದ ನೌಕೆಯಲ್ಲಿ ನಾರ್ವೆಗೆ ಯಾನ ಸಜ್ಜುಗೊಂಡಿದ್ದಿತು. ನೊಲೆಸ್ ಈ ಯಾನದಲ್ಲಿ ಭಾಗಿಯಾಗಿದ್ದನು. ಈ ನೌಕೆ ಬಾಲ್ವಿಕ್ ಸಮುದ್ರ ಹಾದು ಸ್ಟಾಕ್ಹೋಂ ತಲುಪಿದ್ದಿತು. 1939ರಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಗಳಿಸಿದ ನೊಲೆಸ್ ಕೆಲಕಾಲ ಕೊಲಂಬಿಯಾದಲ್ಲಿ ಕೆಲಸ ಮಾಡಿದನು. 1942ರಲ್ಲಿ ಓಹಿಯೋ ರಾಜ್ಯದ ಡೇಟನ್ನ ಥಾಮಸ್ ಅಂಡ್ ಹಾಕ್ವಾಲ್ಟ್ ಸಂಸ್ಥೆ ಸೇರಿದನು. 1944ರಲ್ಲಿ ಯುದ್ದದ ಸಮಯದಲ್ಲಿ ಸೈನಿಕ ಉಡುಗೆಗಳನ್ನು ಚಿಗಟ ದೂರವಿರುವಂತೆ ಮಾಡುವ ರಾಸಾಯನಿಕಗಳ ಸಂಶೋಧನೆಯಲ್ಲಿದ್ದನು. ಈ ವೇಳೆಗೆ ಕಾರ್ಟಿಸೋನ್ನ್ನು ಪ್ರತ್ಯೇಕಿಸಲಾಗಿದ್ದಿತು. ಮೊನ್ಸಾಂಟೋ ಕಂಪನಿ ಇದನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಿ, ಚೈಕಿತ್ಸಕವಾಗಿ ಬಳಸುವ ಯೋಜನೆ ಹಮ್ಮಿಕೊಂಡಿತು. ಈ ಯೋಜನೆಯಲ್ಲಿ ನೊಲೆಸ್ ಭಾಗಿಯಾದನು. ಇಲ್ಲಿರುವಾಗ ಅಸಮಾಂಗೀಯ ಜಲಜನಕೀಕರಣದ ತಂತ್ರವನ್ನು ನೊಲೆಸ್ ರೂಪಿಸಿದನು. ಇದು ಜೀವರಸಾಯನಗಳ ವಿಶ್ಲೇಷಣೆಗೆ , ರಾಚನಿಕ ಸ್ವರೂಪ ನಿರ್ಧಾರಕ್ಕೆ ಅಪಾರ ನೆರವಿತ್ತಿತು. ಈ ಸಾಧನೆಗಾಗಿ ನೊಲೆಸ್ 2001ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಜಾನ್ , ಬಿ. ಫೆನ್ (1917--) 2002
John , B.Fenn
ಅಸಂಸಂ_ ರಸಾಯನಶಾಸ್ತ್ರ -ನೋದಕಾರಿಗಳನ್ನು ಕುರಿತಾದ ಸಂಶೋಧನೆಗಳ ಮುಂದಾಳು.
ಫೆನ್ ತಂದೆ ವೈದ್ಯುತ್ ಇಂಜಿನಿಯರಿಂಗ್ನಲ್ಲಿ ಪದವಿ ಗಳಿಸಿದ್ದನು. ನಂತರ ಬಟ್ಟೆ ತಯಾರಿಕಾ ಕಂಪನಿಯಲ್ಲಿ ಕೆಲಸಕ್ಕೆ ಸೇರಿದನು. ನಂತರ ತಬೇತಿ ಪಡೆದು ಧರ್ಮ ಪ್ರಚಾರ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿದನು. ಜಾನ್ ತಾಯಿ ಈತನ ಸಹೋದ್ಯೋಗಿಯಾಗಿದ್ದಳು. 1917ರಲ್ಲಿ ನ್ಯೂಜೆರ್ಸಿಯಲ್ಲಿ ಜಾನ್ನ ಜನನವಾಯಿತು. ಬಟ್ಟೆ ತಯಾರಿಕಾ ಕಂಪನಿಯ ಮಾಲಿಕತ್ವ ಬದಲಾಗಿ ಜಾನ್ನ ತಂದೆ ಕೆಲಸ ಕಳೆದುಕೊಂಡನು. ಆಗ ಅಸಂಸಂದಲ್ಲಿ ಆರ್ಥಿಕ ಖಿನ್ನತೆಯ ಕಾಲ. ಈ ಸಂಕಷ್ಟದ ದಿನಗಳಲ್ಲಿ ಕಡುಕಷ್ಟದಿಂದ ಕುಟುಂಬವನ್ನು ಸಲಹಿದನು. ಈ ಕಾಲದಲ್ಲಿ ಅರ್ಹ ಬಡ ವಿದ್ಯಾರ್ಥಿಗಳ ನೆರವಿಗಾಗಿ ಸ್ಥಾಪಿಸಿದ್ದ ಶಾಲೆಯಲ್ಲಿ ಜಾನ್ ವಿದ್ಯಾಭ್ಯಾಸ ಸಾಗಿತು. ರಸಾಯನಶಾಸ್ತ್ರದ ಅಧ್ಯಯನಕ್ಕಾಗಿ ಜಾನ್ ಯೇಲ್ ವಿಶ್ವವಿದ್ಯಾಲಯ ಸೇರಿದನು. ಇಲ್ಲಿ ಮುಂದೆ ನೊಬೆಲ್ ಪ್ರಶಸ್ತಿ ಪಡೆದ ಲಾರ್ಸ್ ಆನ್ಸೇಜರ್ಫೆನ್ನ ಸಹಪಾಠಿಯಾಗಿದ್ದನು. ರಸಾಯನಶಾಸ್ತ್ರದಲ್ಲಿ ಪದವಿ ಮುಗಿಸಿದ ನಂತರಫೆನ್ ವ್ರೆನ್ಸ್ ಮೊನ್ಸಾಂಟೋ ಕೆಮಿಕಲ್ ಕಂಪನಿಯ ¥sóÁಸ್ಪೇಟ್ ವಿಭಾಗದಲ್ಲಿ ಕೆಲಸಕ್ಕೆ ಸೇರಿದನು. ಈ ಕಂಪನಿ ಸ್ಟಾನ್ ಕಂಪೆನಿಯನ್ನು ಖರೀದಿಸಿತು. ಹೊಸದಾಗಿ ಸೇರ್ಪಡೆಗೊಂಡ ಈ ಘಟಕದಲ್ಲಿ ಕ್ಲೋರಿನ್ನಿಂದ ಸಂಪನ್ನಗೊಳಿಸಿದ ಬೈಫಿûನೈಲ್ಗಳನ್ನು ಆರೋಕ್ಲೋರ್ ರಾಸಾಯನಿಕ ಸಂಯುಕ್ತಗಳನ್ನು ತಯಾರಿಸಲಾಗುತ್ತಿದ್ದಿತು. ಈ ಸಂಯುಕ್ತಗಳಿಗೆ ಅತ್ಯುತ್ತಮ ಶಾಖ ವರ್ಗಾಂತರ ಗುಣಗಳಿದ್ದು ವಿದ್ಯುತ್ ಪರಿವರ್ತಕಗಳಲ್ಲಿ (Transformers) ಶಾಖ ವಿಸರಣ ಮಾಧ್ಯಮಗಳಂತೆ ಬಳಕೆಯಾಗುತ್ತವೆ.ಫೆನ್ ಈ ಕಂಪನಿಯಲ್ಲಿ ಒಂದು ವರ್ಷವಿದ್ದನು. ನಂತರ ಮಿಷಿಗನ್ನಲ್ಲಿದ್ದ ಷಾಪ್ಲೆಸ್ ಕೆಮಿಕಲ್ ಕಂಪನಿ ಸೇರಿದನು. ಮೊನ್ಸಾಂಟೋ ಕಂಪನಿಯಲ್ಲಿದ್ದ ಜೇಮ್ಸ್ ಡಬ್ಲ್ಯೂ ಮುಲ್ಲೆನ್ ತಮ್ಮದೇ ಆದ ಒಂದು ಸಂಶೋಧನಾ ಪ್ರಯೋಗಾಲಯವನ್ನು ತೆರೆಯುವ ಹೊಂಗನಸನ್ನುಫೆನ್ ಮನದಲ್ಲಿ ಬಿತ್ತಿದ್ದನು. 1945ರಲ್ಲಿ ಎಕ್ಸಪೆರಿಮೆಂಟ್ ಇನ್ಕ್ ಸ್ಥಾಪನೆಯೊಂದಿಗೆ ಇದು ನನಸಾಯಿತು. ಇಲ್ಲಿ ಗುತ್ತಿಗೆ ಆಧಾರದ ಮೇಲೆ ಸರ್ಕಾರದ ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದಿತು. ಇಲ್ಲಿ ಏಳು ವರ್ಷಗಳ ಕಾಲವಿದ್ದಫೆನ್, ಅಪಾರ ಜ್ಞಾನ ಹಾಗೂ ವೃತ್ತಿ ನೈಪುಣ್ಯ ಗಳಿಸಿದನು. ಇಲ್ಲಿರುವಾಗ ಶಬ್ಥಾತೀತ ವೇಗದ ವಿಮಾನಗಳಲ್ಲಿ ಬಳಸುವ ರಾಸಾಯನಿಕ ನೋದಕಾರಿಗಳ (Propellent) ಬಗೆಗೆ ವಿಸ್ತೃತವಾಗಿ ಅರಿತನು. ಇದರ ಫಲವಾಗಿ ಪ್ರಿನ್ಸ್ಟನ್ ವಿಶ್ವ ವಿದ್ಯಾಲಯ ಜೆಟ್ ನೋದಕೀಕರಣ ಕುರಿತಾದ ಸಂಶೋಧನೆಗಾಗಿ ಪ್ರಾರಂಭಿಸಿದ್ದ ಯೋಜನೆಯ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುವ ಆಹ್ವಾನ ನೀಡಿತು. ರಾಕೆಟ್ನ ಇಂಧನವಾಗಿ ಬಳಸುವ ಹೈಡ್ರೊಝೈನ್ ಕುರಿತಾದ ಸಂಶೋಧನೆಗಳನ್ನು ಫೆನ್ ನಿರ್ವಹಿಸಿದನು. ಇದರ ಅಂಗವಾಗಿ ಬ್ರಿಟನ್ನ ವಿಜ್ಞಾನಿಗಳೊಂದಿಗೆ ಕೆಲಸ ಮಾಡುವ ಅವಕಾಶ ದಕ್ಕಿತು.
ರಾಕೆಟ್ ಹಾಗೂ ವಿಮಾನಗಳ ಇಂಧನಗಳ ಅಧ್ಯಯನದಲ್ಲಿ ಉರಿಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಇಂಧನಗಳು ಹೊತ್ತು ಉರಿಯುವ ತಾಪಮಾನ, ರಾಸಾಯನಿಕ ಸಂಯೋಜನೆ ಬಹು ಸಂಕೀರ್ಣ ವಿದ್ಯಾಮಾನಗಳಾಗಿದ್ದು ಇವುಫೆನ್ನ ಗಮನ ಸೆಳೆದಿದ್ದವು. ಅಲ್ಪ ಕಾಲದಲ್ಲೇ ಉರಿಗಳು ಸಹ ಒಂದು ಬಗೆಯ ಜೀವಿಗಳಂತೆಫೆನ್ಗೆ ಭಾಸವಾಗತೊಡಗಿತು. ಉರಿಗಳು ಜೀವಿಗಳಂತೆ ಉಗಮಗೊಂಡು, ಅಸ್ತಿತ್ವಕ್ಕಾಗಿ ಇಂಧನ ಅವಲಂಬಿಸಿ , ಆರೋಗ್ಯಕರ ಕಾರ್ಯ ನಿರ್ವಹಣೆಗೆ ಆಮ್ಲಾಕಾರಕಗಳನ್ನು ಬೇಡುತ್ತಿದ್ದು ಅವು ಕ್ರಮೇಣ ವ್ಯಾಪಿಸಿ ಹಲವಾಗಿ, ನಿಧಾನ ಗತಿಯಲ್ಲಿ ನಂದಿ ಹೋಗುವುದು ಜೀವಿಯ ಜೀವನ ಕ್ರಮಕ್ಕಿಂತ ಬೇರೆಯಲ್ಲ ಎನಿಸಿತು. ಉರಿಯ ಒಳ ತಿರುಳು ಹೊರ ತಿರುಳಿಗಿಂತಲೂ ವಿಭಿನ್ನವಾಗಿರುತ್ತದೆ. ಇದೇ ನಿಜವಾದ ಉರಿಯ ಆತ್ಮ. ಇದರ ಅಧ್ಯಯನ ಬಹು ಕ್ಲಿಷ್ಟಕರ. ಏಕೆಂದರೆ ಇದರ ವ್ಯಾಪ್ತಿ ಅತ್ಯಲ್ಪ ಇದರ ತಾಪಮಾನ ವ್ಯತ್ಯಾಸ ತೀವ್ರ ಹಾಗೂ ಸಂಯೋಜನೆ ಸಂಕೀರ್ಣ ಇಂತಹ ಉರಿಯ ಮೇಲೆ ಪ್ರಯೋಗಗಳನ್ನು ಅರಿಯಲು , ಭೌತಶಾಸ್ತ್ರಜ್ಞರು ಕಣ ದೂಲಗಳನ್ನು ಬಳಸುವಂತೆ ಉರಿಯನ್ನು ಅರಿಯಲು ಅದೇ ಬಗೆಯ ತಂತ್ರಗಳಿಂದೇಕೆ ಸಾಧ್ಯವಾಗುವುದಿಲ್ಲ ಎಂಬ ಪ್ರಶ್ನೆಫೆನ್ನ್ನು ಕಾಡತೊಡಗಿತು. ಮೆಸಾಚುಸೆಟ್ಸ್ ಇನ್ಟಿಟಿಟ್ಯೂಟ್ ಆಫ್ಟೆಕ್ನಾಲಜಿಯ ಅಮೆಡರ್ ಹಾಗೂ ಫ್ರೆಡರಿಕ್ ಕೆಯೆಸ್, ಅನಿಗಳ ವರ್ಗಾವಣೆ ಗುಣ ಲಕ್ಷಣ ಅಳೆಯಲು ವಿಶಿಷ್ಟ ತಂತ್ರಗಳನ್ನು ರೂಪಿಸಿದ್ದರು. ಆದರೆ ಉರಿಗಳ ಅಧ್ಯಯನಕ್ಕೆ ಇವು ಅಷ್ಟೊಂದು ಸಮರ್ಪಕವಾಗಿರಲಿಲ್ಲ. ಇ.ಡಬ್ಲ್ಯೂ ಬೇಕರ್ ಮತ್ತು ಕೆ. ಬೀರ್ ಸಹ ಈ ನಿಟ್ಟಿನಲ್ಲಿ ವಿಭಿನ್ನ ಯೋಜನೆಯೊಂದನ್ನು ವಿವರಿಸಿದ್ದರು. 1929ರಲ್ಲಿ ಇವರಿಗಿಂತ ಇಪ್ಪತ್ತೈದು ವರ್ಷ ಮುಂಚೆಯೇ ಯೇಲ್ ವಿಶ್ವ ವಿದ್ಯಾಲಯದಲ್ಲಿದ್ದ ಟಿ.ಎಚ್.ಜಾನ್ಸನ್ ಪಾದರಸ ಪರಮಾಣುಗಳನ್ನು ಬಳಸಿ ಇವರಿಗಿಂತಲೂ ಉತ್ತಮ ತಂತ್ರವನ್ನು ವಿವರಿಸಿದ್ದನು. ಆದರೆ ಇದನ್ನು ಗಂಭೀರವಾಗಿ ಯಾರೂ ಪರಿಗಣಿಸಿರಲಿಲ್ಲ. ಈ ಅಧ್ಯಯನದ ಮುಂದುವರೆದ ಭಾಗವಾಗಿ ಫ್ರಾಂಕ್ಲಿನ್ ಇನ್ಸ್ಟಿಟ್ಯೂಟ್ನಲ್ಲಿರುವಾಗ ಜಾನ್ಸನ್ ರಾಸಾಯನಿಕ ಕ್ರಿಯೆಯಲ್ಲಿರುವ ಜಲಜನಕ್ಕಿಂತ ಭಾರವಾದ ಪರಮಾಣುಗಳ ವಿವರ್ತನ ವಿದ್ಯಾಮಾನವನ್ನು ಸಹ ಗುರುತಿಸಿದ್ದನು. ಆದರೆ ಇದನ್ನು ಪ್ರಕಟಿಸಿರಲಿಲ್ಲ. ಇದೇ ಸಮಯದಲ್ಲಿ ಗಟ್ಟಿಂಜೆನ್ನಲ್ಲಿದ್ದ ಫ್ರಿಷ್ಕ್ , ಎಸ್ಟರ್ಮನ್ ಮತ್ತು ಸ್ಟರ್ನ್ ಇದೇ ಫಲಿತಾಂಶ ಪಡೆದು, ಜಾನ್ಸನ್ಗಿಂತ ಎಂಟು ವಾರ ಮೊದಲೇ ಪ್ರಕಟಿಸಿದರು. ಇದಕ್ಕಾಗಿ ಸ್ಟರ್ನ್ಗೆ ನೊಬೆಲ್ ಪ್ರಶಸ್ತಿ ದಕ್ಕಿತು. ಸಂಶೋಧನೆಯಲ್ಲಿ ಬೇರೆಯವರಿಗಿಂತ 25 ವರ್ಷ ಮೊದಲಿದ್ದರೂ, ಪ್ರಕಟಣೆಯಲ್ಲಿ ಎಂಟು ವಾರ ಜಾನ್ಸನ್ ಹಿಂದಿದ್ದನು. ಹೀಗಾಗಿ ವಿಜ್ಞಾನದ ಮಹಾ ಆವಿಷ್ಕಾರವನ್ನು ನಡೆಸಿಯೂ ಅದರ ಕೀರ್ತಿ ದಕ್ಕದ ದುರ್ದೈವಿಯಾಗಿ ಜಾನ್ಸನ್ ಪರಿಗಣಿತನಾಗಿದ್ದಾನೆ. ಈ ಎಲ್ಲಾ ಹಿನ್ನೆಲೆಗಳನ್ನು ಪರಿಗಣಿಸಿಫೆನ್ ಹಾಗೂ ತಂಡ ರಾಕೆಟ್ನ ಇಂಧನ , ಅದು ಹೊತ್ತಿ ಉರಿಯುವ ಕ್ರಿಯೆ, ವಿಸರ್ಜನಾ ನಳಿಕೆಯ ಮೂಲಕ ಹೊರ ಬರುವ ವಿದ್ಯಾಮನದ ಸಂಪೂರ್ಣ ಅರಿವಿಗೆ ಯತ್ನಿಸಿ ಅದರಲ್ಲಿ ಸಾಫಲ್ಯ ಕಂಡರು. 1960ರ ವೇಳೆಗೆ ರಾಕೆಟ್ನಂತಹ ಅತ್ಯಧಿಕ ವೇಗ ಕಾಯಗಳ ಇಂಧನ ಹೊತ್ತಿ ಉರಿಯುವ ಸ್ವರೂಪ ಸುಸ್ಪಷ್ಟವಾಯಿತು. ಇದಕ್ಕಾಗಿ ಫೆನ್ 2002ರಲ್ಲಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದನು.
ಕೊಯಿಚಿ , ತನಾಕ (1959--) 2002
Koichi , Tanaka
ಜಪಾನ್-ರಸಾಯನಶಾಸ್ತ್ರ-ಜೈವಿಕ ದ್ರವ್ಯರೋಹಿತ ಮಾಪಕದ ( Bio Mass Spectrometer) ನಿರ್ಮಾಣದ ಯಶಸ್ಸನ್ನು ಸಾಧಿಸಿದಾತ.
ಕೊಯಿಚಿ 3 ಆಗಸ್ಟ್ 1959ರಂದು ಜನಿಸಿದನು. ತಾಯ್ತನದ ವಯಸ್ಸು ಮೀರುವ ಸಮಯದಲ್ಲಿ ಮಗನನ್ನು ಪಡೆದಿದ್ದ ಈತನ ತಾಯಿ ಕೊಯಿಚಿ ಜನಿಸಿದ ಒಂದೇ ತಿಂಗಳಲ್ಲಿ ಮೃತಳಾದಳು. ಹೀಗಾಗಿ ಕೊಯಿಚಿ ಚಿಕ್ಕಪ್ಪನ ಆಸರೆಯಲ್ಲಿ ಬೆಳೆದನು. ಹದಿನೆಂಟನೇ ವರ್ಷದವರೆಗೆ ಇದು ಕೊಯಿಚಿಗೆ ತಿಳಿದಿರಲಿಲ್ಲ. ಆದ್ದರಿಂದ ಸಾಕಿದವರನ್ನೇ ತನ್ನ ಹೆತ್ತವರೆಂದು ಭಾವಿಸಿದ್ದನು. ನಿಜ ತಿಳಿದ ನಂತರವೂ ಅವರನ್ನು ತಂದೆ ತಾಯಿಗಳೆಂದು ಕೊಯಿಚಿ ಪರಿಗಣಿಸುತ್ತಿದ್ದಾನೆ. ಇವರಿಂದ ಕೊಯಿಚಿ ಕಾಯಕದ ಮಹತ್ವವನ್ನು ಅರಿತನು. 1966ರಲ್ಲಿ ಟೊಯಾಮ ನಗರದಲ್ಲಿ ಪ್ರಾಥಮಿಕ ಶಾಲೆಗೆ ಕೊಯಿಚಿ ಸೇರಿದನು. ಶಾಲಾ ಬಾಲಕನಾಗಿ ಈತ ಸಾಧಾರಣ ವಿದ್ಯಾರ್ಥಿಯಾಗಿದ್ದನು. 1970ರಲ್ಲಿ ಒಸಾಕಾದಲ್ಲಿ ಜರುಗಿದ ವಿಶ್ವ ಮೇಳಕ್ಕೆ ಬಾಲಕ ಕೊಯಿಚಿ ಹೋಗಿದ್ದನು. ಇಲ್ಲಿ ವಿಜ್ಞಾನದ ಬಗ್ಗೆ ಕೊಯಿಚಿಯ ಮನದಲ್ಲಿ ಒಂದು ಅಧ್ಬುತ ಚಿತ್ರಣ ಮೂಡಿತು. ಹಿgಯ ಪ್ರಾಥಮಿಕ ಶಾಲೆಯಲ್ಲಿ ಕೊಯಿಚಿಯ ಗುರುವಾಗಿದ್ದ ಕಯೊಚಿ ಸವೆಗಾಕಿ ಯಾವುದನ್ನೂ ಕಂಠಪಾಠ ಮಾಡಬಾರದೆಂದೂ, ವಿಚಾರಿಸುವುದು ಹಾಗೂ ವಿಶ್ಲೇಷಿಸುವುದು ಮಾತ್ರವೇ ವಿಜ್ಞಾನವೆಂದು ಮನದಟ್ಟು ಮಾಡಿದನು. ಪ್ರವೇಶ ಪರೀಕ್ಷೆ ಬರೆದು ಕೊಯಿಚಿ ವಿಶ್ವವಿದ್ಯಾಲಯದ ಪದವಿ ಅಧ್ಯಯನಕ್ಕೆ ಪ್ರವೇಶ ಪಡೆದನು. ಜಪಾನಿನಲ್ಲಿ ಪದವಿಗೆ ಸೇರುವ ಮುನ್ನ ಎಲ್ಲಾ ಕೌಟುಂಬಿಕ ದಾಖಲೆಗಳನ್ನು ಒದಗಿಸಬೇಕು. ಆಗ ಕೊಯಿಚಿಯ ಚಿಕ್ಕಪ್ಪ ಒಲ್ಲದ ಮನಸ್ಸಿನಿಂದ ಸಲ್ಲಿಸಿದ ವಿವರಗಳಿಂದ ಕೊಯಿಚಿಗೆ ತಾನು ಅವರ ನಿಜವಾದ ಮಗನಲ್ಲವೆಂದು ತಿಳಿದು ಬಂದಿತು. 1978ರಲ್ಲಿ ಟೊಹುಕು ವಿಶ್ವವಿದ್ಯಾಲಯದಲ್ಲಿ ವೈದ್ಯುತ್ ಇಂಜಿನಿಯರಿಂಗ್ ಪದವಿ ಪ್ರವೇಶ ಕೊಯಿಚಿಗೆ ದಕ್ಕಿತು. ಪದವಿಯ ಎರಡನೇ ವರ್ಷದಲ್ಲಿ ಜರ್ಮನಿ ಭಾಷೆಯಲ್ಲಿ ಅಲ್ಪ ಅಂಕ ಗಳಿಸಿ, ಮತ್ತೊಮ್ಮೆ ಅದೇ ತರಗತಿಯಲ್ಲಿ ಮುಂದುವರೆಯುವ ಸ್ಥಿತಿ ಕೊಯಿಚಿಗೆ ಬಂದೊದಗಿತು. ಲೌಹಿಕ ಶಾಸ್ತ್ರದಲ್ಲಿ ವಿಖ್ಯಾತನಾಗಿದ್ದ ಕೊಟೊರೊ ಹೊಂಡ , ಯಾಗಿ ಅ್ಯಂಟೆನ್ ಸ್ವಾಮ್ಯ ಪಡೆದ ಹಿಡೆಟ್ ಸುಗು ಯಾಗಿ ಅರೆವಾಹಕಗಳಲ್ಲಿ ಅಧಿಕೃತವಾಣಿಯಾಗಿದ್ದ ಜುನ್ ಇಚಿಷಿಜಾತ ಟೊಹೊಕು ವಿಶ್ವವಿದ್ಯಾಲಯದ ಸಿಬ್ಬಂದಿಯಾಗಿದ್ದರು. ಇದು ವಿದ್ಯಾರ್ಥಿಗಳಲ್ಲಿ ಸಾಧನೆಯ ಪ್ರೇರಣೆಯನ್ನೊದಗಿಸಿದ್ದಿತು. ಪದವಿ ಮುಗಿದ ನಂತರ ಕೊಯಿಚಿ ಗೃಹೋಪಕರಣ ತಯಾರಿಸುವ ವೈದ್ಯುತ್ ಕಂಪನಿ ಸೇರಿದನು. ಇಲ್ಲಿ ಕೊಯಿಚಿ ಅಂತಹ ಯಶಸ್ಸನ್ನು ಕಾಣಲಿಲ್ಲ. ಅಲ್ಲದೆ ವೈದ್ಯುತ್ ಇಂಜಿನಿಯರಿಂಗ್ನಲ್ಲಿ ತನಗಿರುವ ಜ್ಞಾನ ಅಲ್ಪವೆಂದು ಭಾಸವಾಯಿತು. ಇದಕ್ಕೆ ಪರಿಹಾರವಾಗಿ, ವೈದ್ಯಕೀಯ ಉಪಕರಣ ತಯಾgಸುವ ಷಿಮಡ್ಜು ಕಂಪನಿಗೆ ಸೇರಲು ಶಿಫಾರಸ್ಸು ಮಾಡಬೇಕೆಂದು ತನ್ನ ಗುರುವಾದ ಅಡಚಿಯನ್ನು ಕೋರಿದನು. ಇದರ ಫಲವಾಗಿ ಕೊಯಿಚಿಗೆ ಕೆಲಸ ದಕ್ಕಿತಾದರೂ, ಆತನನ್ನು ಆತ ಬಯಸಿದ ಉಪಕರಣ ತಯಾರಿಕಾ ಘಟಕಕ್ಕೆ ಹಾಕದೆ ವೈಶ್ಲೇಷಿಕ ಉಪಕರಣ ವಿಭಾಗದಲ್ಲಿ ನಿಯೋಜಿಸಲಾಯಿತು. ಇದು ಮುಂದೆ ಕೊಯಿಚಿಗೆ ವರ ಪ್ರದಾನವೆಸಿತು. ಷುಮಡ್ಜುವಿನ ಮುಖ್ಯ Œಕಛೇರಿ ಕ್ಯೋಟೋ ನಗರದಲ್ಲಿದ್ದಿತು. ಜಪಾನಿನ ಒಂಬತ್ತು ಜನ ನೊಬೆಲ್ ಪ್ರಶಸ್ತಿ ವಿಜೇತರಲ್ಲಿ ಆರು ಜನ ಈ ನಗರದವರು ಎಂಬುದೊಂದು ವಿಶೇಷ. ಹಿಡೆಕಿ ಯುಕಾವ (1949) , ಷಿನಿಚಿರೋ ಟೊಮೊನಾಗ (1965) , ಕೆನಿಚಿ ಫುಕುಯಿ (1981) ,ರಯೊಜಿ ನೊಯೊರಿ (2001) ಕೊಯಿಚಿ ತನಾಕ (1932) ನೊಬೆಲ್ ಪ್ರಶಸ್ತಿ ಪಡೆದ ಕ್ಯೋಟೋ ನಗರವಾಸಿಗಳು. ಷಿಮಡ್ಜು ಕಂಪನಿ ಅರೆವಾಹಕ ಹಾಗೂ ಲೋಹಗಳ ಮೇಲ್ಮೈ ಸ್ವರೂಪವನ್ನು ಲೇಸರ್ ಕಿರಣದಿಂದ ಓದಿ ನಕಾಶೆಗೊಳಿಸುವ ಉಪಕರಣ ನಿರ್ಮಾಣದ ಯೋಜನೆ ಹಮ್ಮಿಕೊಂಡಿದ್ದಿತು. ಈ ಕಂಪನಿಗೆ ಪ್ರತಿಸ್ಪರ್ಥಿಯಾಗಿದ್ದ ಜರ್ಮನಿಯ ಕಂಪನಿ ಇವರಿಗಿಂತಲೂ ಉತ್ತಮವಾದ ಇಂತಹುದೇ ಉಪಕರಣ ನಿರ್ಮಿಸಿದ್ದಿತು. ಆದ್ದರಿಂದ ಇದಕ್ಕೆ ಪರ್ಯಾಯವಾಗಿ ಜೈವಿಕ ಪದಾರ್ಥಗಳ ಲಕ್ಷಣ ಹರಿಯುವ ಯತ್ನ ನಡೆಸಲಾಯಿತು. ಇದಕ್ಕಾಗಿ ಲೇಸರ್ ಚೈತನ್ಯವನ್ನು ಹೀರಿಕೊಂಡು, ವಿನಾಶಗೊಳ್ಳದಂತೆ ಬೃಹತ್ ಅಣುಗಳನ್ನು ಅಯಾನಿಕರಣಗೊಳಿಸುವ ಮಾಧ್ಯಮದ ಹುಡುಕಾಟಕ್ಕೆ ಕೊಯಿಚಿಯನ್ನು ನಿಯೋಜಿಸಲಾಂ¬ತು. ತಾನು ಹಿಂದೆಂದೂ ಅಭ್ಯಾಸ ಮಾಡದ ರಾಸಾಯನಿಕಶಾಸ್ತ್ರದ ಪರಿಧಿಗೆ ಧುಮುಕುವ ಅನಿವಾರ್ಯತ ಕೊಯಿಚಿಗೆ ಬಂದೊದಗಿತು. ಈ ಸಂಶೋಧನೆಯ ಅಂಗವಾಗಿ ಕೊಯಿಚಿ ನೂರಾರು ಮಾಧ್ಯಮಗಳನ್ನು ತನ್ನ ಪರೀಕ್ಷೆಗೆ ಒಡ್ಡಿದನು. 1985ರಫೆಬ್ರವರಿಯಲ್ಲಿ ಪ್ರಯೋಗಕ್ಕಾಗಿ ಸಿದ್ದಪಡಿಸಿದ್ದ ಶುದ್ಧ ಕೊಬಾಲ್ಟ್ನ ಅತಿಸೂಕ್ಷ್ಮ ಪುಡಿ ಗ್ಲಿಸೆರಿನ್ನಿಂದ ಕಲುಷಿತಗೊಂಡಿತು. ಇದನ್ನು ಸಂಶೋಧನಾ ತ್ಯಾಜ್ಯವೆಂದು ಕೊಯಿಚಿ ಪರಿಗಣಿಸಿದ್ದನು. ಆದರೆ ಬಾಲ್ಯದಲ್ಲಿ ಆತನ ಅಜ್ಜಿ ಯಾವುದನ್ನೇ ಆಗಲಿ ನಿರರ್ಥಕವೆಂದು ಬಿಸುಡಬಾರದೆಂದು ಮೇಲಿಂದ ಮೇಲೆ ಹೇಳುತ್ತಿದ್ದಳು. ಇದು ಕೊಯಿಚಿಯ ಮನದಾಳದಿಂದ ಮೇಲೆದ್ದಿತು. ಹೀಗಾಗಿ ಕಲುಷಿತ ಪ್ರತಿಚಯದ (Specimen) ಮೇಲೆ ಕೊಯಿಚಿ ಕೆಲ ಪ್ರಯೋಗಗಳನ್ನು ನಡೆಸಿದನು. ಆಶ್ಚರ್ಯವೆಂಬಂತೆ ಕೊಯಿಚಿ ಯಾವ ಮಾಧ್ಯಮಕ್ಕಾಗಿ ತಡಕಾಡುತ್ತಿದ್ದನೋ ಅದು ತಾನಾಗಿಯೇ ಕಾಲಿಗೆ ತಾಗಿ ಸಿಕ್ಕಿದಂತಾಯಿತು. ಷಿಮಡ್ಜು ಕಂಪನಿ ಈ ದಿಶೆಯಲ್ಲಿ ಇನ್ನು ಹೆಚ್ಚಿನ ಸಂಶೋಧನೆ ನಡೆಸುವಚಿತೆ ಕೊಯಿಚಿಗೆ ಪೂರ್ಣ ಬೆಂಬಲ ನೀಡಿತು. ಇದರ ಫಲಿತಾಂಶವಾಗಿ ಜೈವಿಕ ವಸ್ತುಗಳ ದ್ರವ್ಯ ರೋಹಿತಮಾಪಕ (Mass Spectrometer)1987ರ ವೇಳೆಗೆ ನಿರ್ಮಾಣಗೊಂಡಿತು. ಇದು ಜಪಾನಿ ಭಾಷೆಯಲ್ಲಿ ಪ್ರಕಟಗೊಂಡಿದ್ದರಿಂದ ಬಾಹ್ಯ ಜಗತ್ತಿಗೆ ಅಜ್ಞಾತವಾಗಿಯೇ ಉಳಿಯಿತು. 1987ರಲ್ಲಿ ಕೊಯಿಚಿ ಮೊಟ್ಟ ಮೊದಲ ಬಾರಿಗೆ ಇಂಗ್ಲೀಷ್ನಲ್ಲಿ ತನ್ನ ಲೇಖನ ಪ್ರಕಟಿಸಿದಾಗ ಜಗತ್ತಿನಾದ್ಯಂತ ಇದಕ್ಕೆ ಮನ್ನಣೆ ದಕ್ಕಿತು. ಮುಂದೆ ಷಿಯುಡ್ಜು ಕಂಪನಿ ಹಲವಾರು ಜೈವಿಕ ದ್ರವ್ಯ ರೋಹಿತ ದರ್ಶಕಗಳನ್ನು ನಿರ್ಮಿಸಿ ಮಾರಿತು. ಸಂಶೋಧನಾಲಯಗಳಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆಗಳು ಬಂದವು. ಜೈವಿಕ ದ್ರವ್ಯ ರೋಹಿತದರ್ಶಕ ತಂತ್ರಗಳ ಅಭಿವೃದ್ಧಿಗಾಗಿ ಕೊಯಿಚಿ 2002ರಲಿ ನೊಬೆಲ್ ಪ್ರಶಸ್ತಿ ಪಡೆದನು.
ಕುರ್ಟ್, ವುಥ್ರಿಕ್ (1938--) 2002
Kurt , Wüthrich
ಸ್ವಿಟ್ಸರ್’ಲ್ಯಾಂಡ್-ರಸಾಯನಶಾಸ್ತ್ರ –ಜೈವಿಕ ಸಾಮಗ್ರಿಗಳ ಅಧ್ಯಯನದಲ್ಲಿ ಕಾಂತೀಯ ಅನುರಣನ ತಂತ್ರದ (Magnetic Resonanace Technique) ಬಳಕೆ ಪರಿಚಯಿಸಿದಾತ.
ಕುರ್ಟ್ 4 ಅಕ್ಟೋಬರ್ 1938 ರಂದು ಆರ್ಬರ್ಗ್ನಲ್ಲಿ ಜನಿಸಿದನು. ಈತನ ಕುಟುಂ¨ ಕೃಷಿ ಹಿನ್ನೆಲೆಯದು. ಕುರ್ಟ್ನ ಬಾಲ್ಯದ ನೆನಪುಗಳೆಲ್ಲವೂ ದಟ್ಟ ಗ್ರಾಮೀಣ ಪರಿಸರದವಾಗಿವೆ.ಫೆ್ರಂಚ್ ಪ್ರಾಮುಖ್ಯತೆ ಗಳಿಸಿದ್ದ ದ್ವಿ ಭಾಷಾ ಶಾಲೆಯಲ್ಲಿ ಓದಿದ ಕುರ್ಟ್ಫೆ್ರಂಚ್ ಸಾಹಿತ್ಯ ಸಂಸ್ಕೃತಿ, ಸಿನಿಮಾಗಳಲ್ಲಿ ಆಸಕ್ತಿ ತಳೆದನು. ರಸಾಯನಶಾಸ್ತ್ರದಲ್ಲಿ ಪದವಿ ಪಡೆದ ಕುರ್ಟ್, ರಾಸಾಯನಿಕ ಶಾಸ್ತ್ರದಲ್ಲಿ ಅನ್ವಯಿಸುವಂತೆ ಬೈಜಿಕ ಕಾಂತೀಯ ಅನುರಣನ ವಿಧಾನದ ಅಧ್ಯಯನ ನಡೆಸಿದನು. 1967ರಲ್ಲಿ ಈ ವಿಧಾನ ಬಳಸಿ ಜೈವಿಕ ಬೃಹತ್ ಅಣುಗಳ ಬಗೆಗೆ ಸಂಶೋಧನೆ ನಡೆಸಿದನು. 1965ರಲ್ಲಿ ಅಸಂಸಂಗಳಿಗೆ ಹೋಗಿ ಕ್ಯಾಲಿ¥sóÉರ್Çರ್ನಿಯಾ ವಿಶ್ವ ವಿದ್ಯಾಲಯದಲ್ಲಿ ವೃತ್ತಿ ಜೀವನ ಪ್ರಾರಂಭಿಸಿದನು. 1967ರಲ್ಲಿ ನ್ಯೂಜೆರ್ಸಿಯಾ ಮುರ್ರೆಹಲ್ನಲ್ಲಿರುವ ಬೆಲ್ ಪ್ರಯೋಗಾಲಯ ಸೇರಿದನು. ಇಲ್ಲಿ ಅತಿವಾಹಕ ಅಧಿಕ ವಿಯೋಜನೆಯ (High Resolution) ಬೈಜಿಕ ಕಾಂತೀಯ ಅನುರಣನ ದರ್ಶಕದ ( Nuclear Magnetic Resonance) ಪರಿಪಾಲನೆಯ ಹಾಗೂ ಸಂಶೋಧನೆಯ ಹೊಣೆ ಹೊತ್ತನು. 1969ರಲ್ಲಿ ಸ್ವಿಟ್ಸಲ್ರ್ಯಾಂಡ್ಗೆ ಹಿಂದಿರುಗಿ ಜೂರಿಕ್ನಲ್ಲಿದ್ದ ಎಟಿಎಚ್ ಸಂಸ್ಥೆ ಸೇರಿದನು. ಮುಂದೆ 32 ವರ್ಷಗಳ ಕಾಲ ಇಲ್ಲಿಯೇ ಉಳಿದನು. ಇಲ್ಲಿ ಕುರ್ಟ್ ಹಿಮೊಪೆÇ್ರೀಟೀನ್ಗಳ ರಾಚನಿಕ ಸ್ವರೂಪ ನಿರ್ಧರಿಸಲು ಯತ್ನಿಸಿದನು. 1976ರ ನಂತರ ಬೈಜಿಕ ಕಾಂತೀಯ ಅನುರಣನ ವಿಧಾನದಲ್ಲಿದ್ದ ಹೊಸ ತಂತ್ರಗಳನ್ನು ಬಳಸಿ ಬೈಜಿಕ ಅಣುಗಳ ತ್ರಿದಿಶಾ ಚಿತ್ರ ಪಡೆದನು. ಕುರ್ಟ್ ತನ್ನ ವೃತ್ತಿ ಜೀವನದಲ್ಲಿ ಹಲವಾರು ಸಂಕೀರ್ಣ ಬೈಜಿಕ ವಸ್ತುಗಳ ರಾಚನಿಕ ಸ್ವರೂಪ ನಿರ್ಧರಿಸಿದನು. ಇದಕ್ಕಾಗಿ ಕುರ್ಟ್ 2002ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಪೀಟರ್, ಅಗ್ರೆ (1949--) 2003
Peter Agre
ಅಸಂಸಂ-ರಸಾಯನಶಾಸ್ತ್ರ-ಕೋಶಪೆÇರೆಗಳಲ್ಲಿನ ಪ್ರೋಟಿನ್ಗಳ ಅಧ್ಯಯನದ ಮುಂದಾಳು.
1862ರಲ್ಲಿ ಅಬ್ರಹಂ ಲಿಂಕನ್ ಹೋಮ್ಸೈಡ್ ಮಸೂದೆಗೆ ಸಹಿ ಹಾಕುವ ಮೂಲಕ ಅಸಂಸಂದ ಪಶ್ಚಿಮ ಗಡಿಯಲ್ಲಿ ಜನಕ್ಕೆ ವ್ಯವಸಾಯಕ್ಕೆ ಭೂಮಿ ಹಂಚಿಕೆಯಾಗಿ, ಐದು ವರ್ಷಗಳ ನಂತರ ಅವರಿಗೆ ಮಾಲಿಕತ್ವ ಲಭ್ಯವಾಗುವ ಸದಾವಕಾಶ ದಕ್ಕಿತು. ಇದರಿಂದ ಆಕರ್ಷಿತರಾಗಿ ಹೊರದೇಶಗಳಿಂದ ಜನ ಬಂದು ಅಸಂಸಂಗಳಲ್ಲಿ ನೆಲೆಸತೊಡಗಿದರು. ಇಂತಹವರಲ್ಲಿ ನಾರ್ವೆ ಮೂಲದಿಂದ ಬಂದ ಪೀಟರ್ ತಾತನೂ ಸೇರಿದ್ದನು. ಪೀಟರ್ ತಂದೆ ಮಿನ್ನೆಸೊಟಾ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿ, ಎರಡನೇ ಜಾಗತಿಕ ಯುದ್ದದಲ್ಲಿ 3 ಎಂ ಕಂಪನಿ ಸೇರಿ ಸರ್ಕಾರದ ಪರವಾಗಿ ಪಾಲಿಮರ್ ಸಂಶೋಧನೆಯಲ್ಲಿ ಭಾಗಿಯಾಗಿದ್ದನು. 30 ಜನವರಿ 1949ರಂದು ಪೀಟರ್ ಜನನವಾಯಿತು. 1954ರಲ್ಲಿ ರಸಾಯನಶಾಸ್ತ್ರ ಹಾಗೂ 1962ರಲ್ಲಿ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ಪೌಲಿಂಗ್ ಲಿನಸ್ ಕಾರ್ಲ್ ಪೀಟರ್ನ ತಂದೆಯ ಸ್ನೇಹಿತನಾಗಿದ್ದನು. ಈತ ಹಲವಾರು ಪೀಟರ್ ಮನೆಯಲ್ಲಿದ್ದನು. ಇದು ಪೀಟರ್ನ ಮೇಲೆ ಅಗಾಧ ಪ್ರಭಾವ ಬೀರಿದ್ದಿತು. 1970ರಲ್ಲಿ ವೈದ್ಯಕೀಯ ವ್ಯಾಸಂಗಕ್ಕೆ ಕಾಲೇಜು ಸೇರುವ ಮುನ್ನ ಪೀಟರ್ ಇಡೀ ಏಷ್ಯಾದ ಪರ್ಯಟನೆ ನಡೆಸಿದನು. ಇದರಲ್ಲಿ ಗಣನೀಯ ದೂರವನ್ನು ಬೈಕ್ನಲ್ಲಿ ಒಬ್ಬಂಟಿಯಾಗಿ ಕ್ರಮಿಸಿದ ಸಾಹಿಸಿ ಈತ. ಇದೇ ವರ್ಷ ಜಾನ್ ಹಾ¥sóïಕಿನ್ಸನಲ್ಲಿ ವೈದ್ಯಕೀಯ ವ್ಯಾಸಂಗ ಪ್ರಾರಂಭಿಸಿದನು. 1975ರ ವೇಳೆಗೆ ಡಾಕ್ಟರೇಟ್ ಗಳಿಸಿದ ಪೀಟರ್ ನಾರ್ತ್ ಕೆರೋಲಿನಾದ ವೆಲ್ಕಮ್ ಲ್ಯಾಬೋರೇಟರಿ ಸೇರಿ ಸಂಶೋಧನೆ ಪ್ರಾರಂಭಿಸಿದನು. ಇಲ್ಲಿ ಪೀಟರ್ನ ಸಹೋದ್ಯೋಗಿಯಾಗಿದ್ದ ವಾನ್ ಕೆಂಪು ರಕ್ತ ಕಣದ ಪೆÇರೆಗಳ ರಾಚನಿಕ ಪ್ರೋಟಿನ್ಗಳಾದ ಸೈಕ್ಟ್ರಿನ್ಗಳನ್ನು ಕುರಿತಾದ ಸಂಶೋಧನೆ ನಡೆಸಿದ್ದನು. ಈತನೊಂದಿಗಿದ್ದ ಕ್ಯಾಂಪ್ಬೆಲ್ ಮೆಕ್ಮಿಲನ್ ಅನುವಂಶಿಕವಾದ ಸ್ಪೆರೋಸೈಟೋಸಿಸ್ ಲಕ್ಷಣ ಹೊಂದಿದ ಇಬ್ಬರು ಸಹೋದರಿಯರನ್ನು ಗುರುತಿಸಿದ್ದನು. ರಕ್ತಕೋಶಗಳು ಭಾರಿ ನವಿರಾಗಿ, ನಮ್ಯವಾಗುವಂತಾಗುವ (Flexible) ಅನಾರೋಗ್ಯವೇ ಸ್ಪೆರೋಸೈಟಿಸ್. ಇದು ಉಂಟಾದಾಗ ರಕ್ತ ಕೋಶದ ಆಕಾರದಲ್ಲಿ ವಿಕೃತಿಗಳಾಗುತ್ತವೆ. ವಾನ್ ಹಾಗೂ ಪೀಟರ್ ಈ ಕೋಶಗಳನ್ನು ಸಮೂಲಾಗ್ರವಾಗಿ ಅಭ್ಯಸಿಸಿ, ಇವುಗಳಲ್ಲಿ ಸ್ಪೆಕ್ಟಿನ್ ಕೊರತೆ ಇರುವುದನ್ನು ಖಚಿತಗೊಳಿಸಿದರು. ಸ್ಪೆರೋಸ್ಪೈಟೋಸಿಸ್ ಅಲ್ಪ ರಕ್ತ ಹೀನತೆಗೂ ಕಾರಣವಾಗುವುದನ್ನು ಗುರುತಿಸಿದರು. ಇದರ ನಂತರ ಪೀಟರ್ ರಕ್ತದ ಜೀವಭೌತಿಕ ಸ್ವರೂಪ ಅರಿಯುವಲ್ಲಿ ತನ್ನ ಗಮನ ಹರಿಸಿದನು. ರಕ್ತದಲ್ಲಿರುವ ಅರ್ಎಚ್ ಅಂಶ ಹಾಗೂ ಅದರ ಪ್ರಾಮುಖ್ಯತೆ ಎಲ್ಲರಿಗೂ ತಿಳಿದಿತ್ತಾದರೂ, ಇದರ ಅಣ್ವಯಿಕ ಸ್ವರೂಪ ಅಜ್ಞಾತವಾಗಿಯೇ ಉಳಿದಿದ್ದಿತು. ಆರ್ಎಚ್ ಪ್ರತಿಜನಕದಲ್ಲಿರುವ (Antigen) ಪಾಲಿಪೆಪ್ಟೈಡ್ನ್ನು ಪ್ರತ್ಯೇಕಿಸುವ ಯೋಜನೆಯನ್ನು ಪೀಟರ್ ಹಮ್ಮಿಕೊಂಡನು. ಇದು ಮುಂದೆ ರಕ್ತಕೋಶಗಳ ಪದರದ ಪ್ರೋಟಿನ್'ಗಳನ್ನು ಪ್ರತ್ಯೇಕಿಸುವಲ್ಲಿ ಅಂತ್ಯಗೊಂಡಿತು. ಈ ಕೋಶಗಳು ನೀರು ಸಾಗಾಣಿಕೆಯ ಕಾಲುವೆಗಳಂತೆ ಕಾರ್ಯ ನಿರ್ವಹಿಸುವುದು ಖಚಿತಗೊಂಡಿತು. ಉಳಿದ ವಿಜ್ಞಾನಿಗಳು ಕ್ಷ-ಕಿರಣ ಸ್ಪಟಿಕಾಲೇಖದೊಂದಿಗೆ ಈ ಪ್ರೋಟೀನ್ಗಳ ಸೂಕ್ಷ್ಮ ರಚನೆಯನ್ನು ವಿವರಿಸಿದರು. ಕೋಶ ಪೊರೆಗಳಲ್ಲಿನ ಪ್ರೋಟಿನ್ಗಳ ಅಧ್ಯಯನದಲ್ಲಿನ ಪರಿಶ್ರಮಕ್ಕಾಗಿ ಪೀಟರ್ 2003ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ರೊಡೆರಿಕ್, ಮೆಕ್ಕಿನೆನ್ (1956--) 2003
Roderick , MacKinnon
ಅಸಂಸಂ-ರಸಾಯನಶಾಸ್ತ್ರ- ಪ್ರೋಟಿನ್ಗಳು ದ್ರವ ಸಾಗಿಸುವ ಕಾಲುವೆಗಳಚಿತೆ ವರ್ತಿಸುವುವೆಂದು ತೋರಿಸಿದಾತ.
ರೊಡೆರಿಕ್ 19ಫೆಬ್ರವರಿ 1956 ರಂದು ಜನಿಸಿದನು. ಈತನ ತಂದೆ ಅಂಚೆ ಇಲಾಖೆಯಲ್ಲಿ ಕಾರ್ಮಿಕನಾಗಿದ್ದನು. ಸದಾ ಕುತೂಹಲಿಯಾಗಿದ್ದ ರೊಡೆರಿಕ್ ಬಾಲ್ಯದಲ್ಲಿ ಏಕೆ ? ಏನು ? ಹೇಗೆ? ಎಂಬ ಪ್ರಶ್ನೆಗಳಿಂದ ಸದಾ ಸಿದ್ದನಾಗಿರುತ್ತಿದ್ದನು. ನಾನಾ ಬಗೆಯ ಕಲ್ಲು ಕೀಟ, ಪತಂಗ, ಹಾವು, ಆಮೆಗಳ ಸಂಗ್ರಹ ರೊಡೆರಿಕ್ನ ಬಾಲ್ಯದ ಪ್ರಮುಖ ಹವ್ಯಾಸವಾಗಿದ್ದಿತು. ಬೋಸ್ಟನ್ನ ಮೆಸಾಚುಸೆಟ್ಸ್ನ ವಿಶ್ವವಿದ್ಯಾಲಯದಲ್ಲಿ ಜೀವ ರಸಾಯನಶಾಸ್ತ್ರದ ಅಧ್ಯಯನವನ್ನು ರೊಡೆರಿಕ್ ಆರಿಸಿಕೊಂಡನು. ಆದರೆ ಇದೇ ಮಾರ್ಗದಲ್ಲಿ ಮುಂದುವರೆಯದೆ ವೈದ್ಯಕೀಯ ವ್ಯಾಸಂಗಕ್ಕೆ ಟಫ್ಟ್ಸ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಸೇರಿದನು. ವೈದ್ಯಕೀಯದಲ್ಲಿ ವಿಶ್ಲೇಷಣೆಗಿಂತಲೂ ಜ್ಞಾಪಕಕ್ಕೆ ಹೆಚ್ಚಿನ ಪ್ರಾಶಸ್ತ್ಯವಿರುವುದು ರೊಡೆರಿಕ್ನಲ್ಲಿ ನಿರಾಶೆ ತಂದಿತು. ತಾನು ವೈದ್ಯಕೀಯಕ್ಕೆ ಸೇರಿ ತಪ್ಪು ಮಾಡಿರುವೆನೇನೋ ಎಂಬ ಸಂದೇಹವೂ ತಲೆದೋರಿತು. ಇದನ್ನು ಮರೆಯಲು ಗಣಿತದ ಅಭ್ಯಾಸವನ್ನು ಸಹ ಮುಂದುವರಿಸಿದನು. ಪದವಿ ಮುಗಿಸಿದ ನಂತರ ಹಾರ್ವರ್ಡ್ನಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ ರೊಡೆರಿಕ್ ಅಲ್ಪ ಕಾಲದಲ್ಲೇ ಕ್ಷ-ಕಿರಣ ಸ್ಪಟಿಕಶಾಸ್ತ್ರದಲ್ಲಿ (X-Ray Crystallography) ಪರಿಣಿತಿ ಗಳಿಸಿ ಪೆÇರೆ ಪ್ರೊಟೀನ್ ಜೀವ ರಸಾಯನ ಶಾಸ್ತ್ರದಲ್ಲಿ ತಲ್ಲೀನನಾದನು. ಟಾರ್ಸ್ಟೆನ್ ವೀಸೆಲ್ನ ಸಲಹೆಯ ಮೇರೆಗೆ ರೊಡೆರಿಕ್ ರಾಕ್ ಫೆಲರ್ ವಿಶ್ವವಿದ್ಯಾಲಯಕ್ಕೆ ಸೇರಿದನು. ಇಲ್ಲಿ ಪೆÇ್ರೀಟೀನ್ಗಳು ದ್ರವ ಸಾಗಿಸುವ ಕಾಲುವೆಗಳಂತೆ ವರ್ತಿಸುವ ಅಮೂಲಾಗ್ರ ಚಿತ್ರಣ ರೊಡೆರಿಕ್ ತಂಡದಿಂದ ಅನಾವರಣಗೊಂಡಿತು. ಈ ಸಾಧನೆಯನ್ನು ಗುರುತಿಸಿ 2003ರಲ್ಲಿ ನೊಬೆಲ್ ಪ್ರಶಸ್ತಿ ಪ್ರದಾನಿಸಲಾಯಿತು.
ಆ್ಯರನ್ , ಸಿಕ್ನೊವೆರ್ (1947--) 2004
Aaron , Clechanover (CHE.) 2004
ಇಸ್ರೇಲ್-ವೈದ್ಯಕೀಯ-ಸಾಮಾನ್ಯ ಪ್ರೊಟೀನ್ಗಳ ಶ್ರೇಣೀಕರಣದ ಕ್ರಿಯಾವಿನ್ಯಾಸ ವಿವರಿಸಿದಾತ.
ಆ್ಯರನ್ ಇಸ್ರೇಲ್ನ ಹೈಫ್ ಪಟ್ಟಣದಲ್ಲಿ ಜನಿಸಿದನು. ಈತ ಜನಿಸುವ ಒಂದು ತಿಂಗಳು ಮೊದಲು ವಿಶ್ವ ಸಂಸ್ಥೆ ಇಸ್ರೇಲ್ನ್ನು ಸ್ವತಂತ್ರ ದೇಶವೆಂದು ಪುರಸ್ಕರಿಸಿದ್ದಿತು. ಆದರೆ ಇಸ್ರೇಲ್ನ್ನು ಸುತ್ತುವರಿದಿದ್ದ ಅರಬ್ ರಾಷ್ಟ್ರಗಳು ಇದನ್ನು ಒಪ್ಪಲಿಲ್ಲ. ಇದರ ಫಲವಾಗಿ ಇಸ್ರೇಲ್ ಹಾಗೂ ಇತರ ಅರಬ್ ರಾಷ್ಟ್ರಗಳೊಂದಿಗೆ ಸುಮಾರು ಒಂದು ವರ್ಷಗಳ ಕಾಲ ತೀವ್ರ ಕದನ ಜರುಗಿತು. ಇದು ಆಗ ಹಸುಳೆಯಾಗಿದ್ದ ಆ್ಯರನ್ ಜೀವನದ ಮೇಲೂ ಪ್ರಭಾವ ಬೀರಿತು. ಮೂಲತ: ಪೆÇೀಲೆಂಡ್ನವರಾಗಿದ್ದ ಅ್ಯರನ್ ತಂದೆ ತಾಯಿ 1917ರಲ್ಲಿ ಯಹೂದಿ ಚಳುವಳಿಗೆ ಓಗೊಟ್ಟು, ಬ್ರಿಟಿಷ್ ಅಧೀನನಲ್ಲಿದ್ದ ಇಸ್ರೇಲ್ಗೆ ಬಂದು ನೆಲೆಸಿದ್ದರು. ಬಾಲ್ಯದಿಂದಲೂ ಆ್ಯರನ್ಗೆ ಸಸ್ಯ ಹಾಗೂ ಜೀವಿಗಳ ಬಗೆಗೆ ಅತೀವ ಆಸಕ್ತಿಯಿದ್ದಿತು. 1965ರಲ್ಲಿ ಇಸ್ರೇಲ್ ವಿಶ್ವವಿದ್ಯಾಲಯದ ಏಕೈಕ ವೈದ್ಯಕೀಯ ಕಾಲೇಜನ್ನು ಸೇರಿದ ಆ್ಯರನ್ 1969ರಲ್ಲಿ ಪದವಿ ಗಳಿಸಿದನು. ವೃತ್ತಿ ಜೀವನ ಪ್ರಾರಂಭಿಸಿದ ಅಲ್ಪ ಕಾಲದಲ್ಲೇ ಆ್ಯರನ್ಗೆ ರೋಗಗಳ ಬಗ್ಗೆ ಅದರ ಕಾರಣ ಹಿನ್ನೆಲೆಯ ಅರಿವಿನ ಬಗ್ಗೆ ಅತೃಪ್ತಿ ಮೂಡಿತು. ದೈನಂದಿನ ವೈದ್ಯಕೀಯ ವೃತ್ತಿಯಲ್ಲಿ ರೋಗ ಕಾರಣವನ್ನು ಅರಿಯುವುದಕ್ಕಿಂತಲೂ, ಅದರ ಪ್ರಮುಖ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡುವುದು ಜ್ಞಾನಾರ್ಜನೆಗೆ ನೆರವಾಗದೆಂದು ಭಾಸವಾಯಿತು. ಆದ್ದರಿಂದ ಆ್ಯರನ್ ಜೀವರಸಾಯನಶಾಸ್ತ್ರದಲ್ಲಿ ಹೆಚ್ಚಿನ ಅಧ್ಯಯನ ಕೈಗೆತ್ತಿಕೊಂಡನು.
ಸ್ಯಾನ್’ಫ್ರಾನ್ಸಿಸ್ಕೊದಕ್ಯಾಲಿಫೊರ್ನಿಯಾವಿಶ್ವವಿದ್ಯಾಲಯದಲ್ಲಿದ್ದ ಅವ್ರಮ್ ಹೆರ್ಷಕೋ ಹೈ¥sóÁದಲ್ಲಿ ಹೊಸದಾಗಿ ಮುಖ್ಯಸ್ಥನಾಗಿ ಪ್ರಾರಂಭವಾಗಿದ್ದ ವೈದ್ಯಕೀಯ ನೇಮಕಗೊಂಡನು. ಈತನ ಕೈಕೆಳಗೆ ಆ್ಯರನ್ ಸಂಶೋಧನೆಗೆ ಸೇರಿದನು. ಡಾಕ್ಟರೇಟ್ ಗಳಿಸಿದ ನಂತರ ರಾಷ್ಟ್ರೀಯ ನೀತಿಗನುಗುಣವಾಗಿ 1973ರಿಂದ 1976 ರವರೆಗೆ ಕಡ್ಡಾಯ ಮಿಲಿಟರಿ ತರಭೇತಿ ಪಡೆದನು. ಕೋಶಗಳೊಳಗೆ ಸಾಮಾನ್ಯ ಪ್ರೊಟೀನ್ಗಳ ಶ್ರೇಣೀಕರಣದ (Gradation) ಕ್ರಿಯಾವಿನ್ಯಾಸ (Mechanism) ಹಾಗೂ ಕಾರಣಗಳನ್ನು ಕುರಿತಾಗಿ ಆ್ಯರನ್ ಪರಿಶೀಲನೆ ನಡೆಸತೊಡಗಿದನು. ಇದರ ಫಲವಾಗಿ ಯುಬಿಕ್ವಿಟಿನ್ ಮಧ್ಯವರ್ತಿ ಕ್ರಿಯೆಯಿಂದ ಜರುಗುವ ಅಪಶ್ರೇಣೀಕರಣದ (Degradation)ವಿವರವನ್ನು ಬಹಿರಂಗಗೊಳಿಸಿದನು. ಇದಕ್ಕಾಗಿ 2004ರಲ್ಲಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಗಳಿಸಿದನು.
ಆವ್ರ್ಯಾಮ್ , ಹೆರ್ಷ್ಕೊ (1937--) -2004
Avram Hershko
ಹಂಗರಿ -ವೈದ್ಯಕೀಯ-ಪ್ರೊಟೀನ್ಗಳು ಯುಬಿಕ್ವಿಟಿನ್ನ ಮಧ್ಯಸ್ಥಿಕೆಯಿಂದ ಅಪಶ್ರೇಣಿಕರಣಗೊಳ್ಳುವುದನ್ನು ಅನಾವರಣಗೊಳಿಸಿದನು.
ಬುಡಾಪೆಸ್ಟ್ನಿಂದ 150 ಕಿ.ಮೀ ದೂರದ ಕ್ಯಾರ್ಕ್ಯಾಗ್ ಎಂಬ ಸಣ್ಣ ಪಟ್ಟಣದಲ್ಲಿ 31 ಡಿಸೆಂಬರ್ 1937ರಂದು ಹೆರ್ಷ್ಕೋ ಜನನವಾಯಿತು. ಹೆರ್ಷ್ಕೊ ತಂದೆ ಪ್ರಾಥಮಿಕ ಶಾಲೆಯ ಉಪಾಧ್ಯಾಯಯನಾಗಿದ್ದನು. ಎರಡನೇ ಜಾಗತಿಕ ಯುದ್ದ ಪ್ರಾರಂಭವಾಗಿ ಹಂಗರಿ, ಜರ್ಮನಿಂiÀi ಹಿಟ್ಲರ್ನೊಂದಿಗೆ ಸೇರಿತು. ಹೆರ್ಷ್ಕೋ ತಂದೆ ಯಹೂದಿಯಾದುದರಿಂದ ಜೀತದಾಳಾಗಿ ಸೆರೆಹಿಡಿಯಲ್ಪಟ್ಟು ರಷ್ಯಾದ ಕದನ ಭೂಮಿಗೆ ವರ್ಗಾಯಿಸಲ್ಪಟ್ಟನು. ಇಲ್ಲಿ ರಷ್ಯಾದ ಸೆರೆಯಾಳಾದನು. 1944ರ ಅಂತ್ಯದ ವೇಳೆಗೆ ಹಿಟ್ಲರ್ ಒಂದೊಂದೇ ಯುದ್ದ ಸೋಲುತ್ತಾ ಹೋದಂತೆ ಹಂಗರಿಯ ಸರ್ವಾಧಿಕಾರ ಹೊರ್ತಿ, ಹಿಟ್ಲರ್ನಿಂದ ದೂರ ಸರಿಯಲು ಯತ್ನಿಸಿದನು. ಇದನ್ನು ಮೊದಲೇ ಆರಿತ ಹಿಟ್ಲರ್ ಹಂಗರಿಯನ್ನು ಆಕ್ರಮಿಸಿ ಯಹೂದಿಗಳನ್ನು ಯಾತನಾ ಶಿಬಿರಗಳಾದ ಘೆಟ್ಟೋಗಳಿಗೆ ತಳ್ಳಿದನು. ಆಗ ಹೆರ್ಷ್ಕೋ ಕುಟುಂಬ ಕೂಡ ಸೆರೆಯಾಗಿ ಆಸ್ಟ್ರಿಯಾದ ಹಳ್ಳಿಯೊಂದರಲ್ಲಿ ಜೀತದಾಳುಗಳಾಗಿ ಬದುಕಿ ನಂತರ ಜರ್ಮನಿಗೆ ಬಂದು ನೆಲೆಸಿತು. ಈ ಸಮಯದಲ್ಲಿ ಹಂಗರಿಯಲ್ಲಿ ಮೂರುವರೆ ಲಕ್ಷಕ್ಕೂ ಅಧಿಕ ಯಹೂದಿಗಳನ್ನು ಸೆರೆಹಿಡಿದು ಹತ್ಯೆ ಮಾಡಲಾಯಿತು 1945ರಲ್ಲಿ ರಷ್ಯಾ ಸೇನೆ ಹಂಗರಿಯನ್ನು ವಿಮೋಚನೆಗೊಳಿಸಿತು. ಯುದ್ದದಲ್ಲಿ ಕಣ್ಮರೆಯಾಗಿದ್ದ ಹೆರ್ಷ್ಕೋ ತಂದೆ, 1946ರಲ್ಲಿ ಮರಳಿ ಕುಟುಂಬ ಸೇರಿದನು. ಇವರು 1950ರಲ್ಲಿ ಹೊಸದಾU ನಿರ್ಮಾಣಗೊಂಡಿದ್ದ ಇಸ್ರೇಲ್ನ ಜೆರುಸಲೇಮ್ನಲ್ಲಿ ನೆಲೆಸಿದರು. ಇಲ್ಲಿ ಹೊಸದಾಗಿ ಹೀಬ್ರೂ ಭಾಷೆ ಕಲಿಯುವ ಅನಿವಾರ್ಯತೆ ಬಂದೊದಗಿತು. ಹೆರ್ಷ್ಕೋ ತಂದೆ, ಮತ್ತೊಮ್ಮೆ ಶಾಲಾ ಶಿಕ್ಷಕನಾಗಿ ಸೇರಿ ಮಕ್ಕಳನ್ನು ಕಡು ಕಷ್ಟದಿಂದ ಸಾಕಿ ತನ್ನೆಲ್ಲಾ ಗಳಿಕೆಯನ್ನು ಅವರಿಗೆ ಅತ್ಯುತ್ತಮ ವಿದ್ಯಾಭ್ಯಾಸ ಒದಗಿಸಲು ವಿನಿಯೋಗಿಸಿದನು. ಪ್ರೌಢಶಾಲೆ ಮುಗಿಸುವ ವೇಳೆಗೆ ಹೆರ್ಷ್ಕೋ ಹಲವಾರು ವಿಷಯಗಳಲ್ಲಿ ಆಸಕ್ತನಾಗಿದ್ದು, ಯಾವುದರಲ್ಲಿ ವಿದ್ಯಾಭ್ಯಾಸ ಮುಂದುವರೆಸಬೇಕೆಂಬ ಗೊಂದಲಕ್ಕೊಳಗಾದನು. 1956ರಲ್ಲಿ ಹೀಬ್ರೂ ವಿಶ್ವವಿದ್ಯಾಲಯದ ಹರಾಸಾ ವೈದ್ಯಕೀಯ ಕಾಲೇಜನ್ನು ಸೇರಿದನು. 1960ರಲ್ಲಿ ಪದವಿ ಗಳಿಸಿದ ನಂತರ ಮ್ಯಾಗರ್ ಮಾರ್ಗದರ್ಶನದಲ್ಲಿ ಜೀವ ರಸಾಯನಶಾಸ್ತ್ರದಲ್ಲಿ ಸಂಶೋಧನೆ ಪ್ರಾರಂಭಿಸಿದನು. 1969ರಿಂದ 1971 ರವರೆಗೆ ಸ್ಯಾನ್ಫ್ರಾನ್ಸಿಸ್ಕೋದ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯದ ಜೀವಭೌತ ಹಾಗೂ ಜೀವ ರಸಾಯನಶಾಸ್ತ್ರ ವಿಭಾಗದಲ್ಲಿ ಗೋರ್ಡನ್ ಟಾಮ್ಕಿನ್ಸ್ನೊಂದಿಗೆ ಅಧ್ಯಯನ ಮುಂದುವರೆಸಿದನು. 1971ರಲ್ಲಿ ಜೆರುಸಲೇಮ್ಂಗೆ ಹಿಂದುರುಗಿ ಹೈ¥sóÁದಲ್ಲಿ ಹೊಸದಾಗಿ ಪ್ರಾರಂಭವಾಗಿದ್ದ ವೈದ್ಯಕೀಯ ಕಾಲೇಜಿನಲ್ಲಿ ಜೀವರಸಾಯನಶಾಸ್ತ್ರ ವಿಭಾಗದ ಕಾರ್ಯದರ್ಶಿಯಾದನು. ಇಲ್ಲಿ ಆ್ಯರನ್ ಸಿಕ್ನೊವೆರ್ನೊಂದಿಗೆ ಪ್ರೊಟೀನ್ಗಳು ಯುಬಿಕ್ವಿಟಿನ್ನ ಮಧ್ಯಸ್ಥಿಕೆಯಿಂದ ಅಪಶ್ರೇಣಿಕರಣಗೊಳ್ಳುವುದನ್ನು (Degradation) ಅನಾವರಣಗೊಳಿಸಿದನು. ಇದಕ್ಕಾಗಿ 2004ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಇರ್ವಿನ್, ರೋಸ್ –(1939--) 2004
Irwin , Rose (CHE.) 2004
ಅಸಂಸಂ-ರಸಾಯನಶಾಸ್ತ್ರ - ಪ್ರೊಟೀನ್ ಅಪಶ್ರೇಣೀಕರಣವನ್ನು (Degradation) ಅನಾವರಣಗೊಳಿಸಿದಾತ.
ಇರ್ವಿನ್ 1939ರಲ್ಲಿ ನ್ಯೂಯಾರ್ಕ್ನಲ್ಲಿ ಜನಿಸಿದನು. ಇರ್ವಿನ್ ತಾಯಿ ಹಂಗರಿ ತಂದೆ ರಷ್ಯಾ ಮೂಲದವರಾಗಿದ್ದರು. ಪ್ರೌಢಶಾಲೆಯಲ್ಲಿರುವಾಗ ಮೆದುಳಿನ ಕ್ರಿಯಾಶೀಲತೆ ಕುರಿತಾಗಿ ಸಂಶೋಧನೆ ನಡೆಸಬೇಕೆಂದು ಆಸೆ ಇರ್ವಿನ್ ಮನದಲ್ಲಿದ್ದಿತು. ಬಿ-12 ವಿಟಮಿನ್ ಹೆಚ್ಚಳದಿಂದ ಇಲಿಗಳ ಅಂಗಾಂಶದಲ್ಲಿನ ಡಿಎನ್ಎ ಪ್ರಮಾಣದಲ್ಲಿ ಹೆಚ್ಚಳವಾಗುವುದರ ಅಧ್ಯಯನ ನಡೆಸಿ ಇರ್ವಿನ್ , 1948ರಲ್ಲಿ ಪದವಿಯನ್ನು 1952ರಲ್ಲಿ ಜೀವ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದನು. ಇರ್ವಿನ್ ಯುಬಿಕ್ವೇಷನ್ ಮಧ್ಯವರ್ತಿತ ಪ್ರೊಟೀನ್ ಅಪಶ್ರೇಣೀಕರಣವನ್ನು ಅನಾವರಣಗೊಳಿಸಿದನು. ಇದಕ್ಕಾಗಿ ಇರ್ವಿನ್ 2004ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ರಿಚರ್ಡ್ , ಆರ್ ಷ್ರಾಕ್ (1945--) 2005
Richard , R.Schrock
ಅಸಂಸಂ-ರಸಾಯನಶಾಸ್ತ್ರ- ಒಲೆಫಿûನ್ ಮೆಟಾಥಿಸಿಸ್ ಕ್ರಿಯೆಯ ಸಂಪೂರ್ಣ ವಿವರ ನೀಡಿದಾತ.
ಷ್ರಾಕ್ ಇಂಡಿಯಾನ ರಾಜ್ಯದ ಬರ್ನ್ನಲ್ಲಿ 4 ಜನವರಿ 1945ರಂದು ಜನಿಸಿದನು. ಕ್ಯಾಲಿ¥sóÉÇೀರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ಪ್ರೌಢ ಶಿಕ್ಷಣ ಮುಗಿಸಿದ ಷ್ರಾಗ್, 1976ರಲ್ಲಿಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯದಿಂದ 1967ರಲ್ಲಿ ರಸಾಯನಶಾಸ್ತ್ರದ ಪದವಿ ಪಡೆದನು. 1971ರಲ್ಲಿ ಹಾರ್ವರ್ಡ್ ವಿಶ್ವ ವಿದ್ಯಾಲಯದಿಂದ ಜೆ.ಎ ಓಸ್ಬೊರ್ನ್ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಗಳಿಸಿದನು. ನಂತರ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಜಾಕ್ ಲೆವಿಸ್ ಸಾಂಗತ್ಯದಲ್ಲಿ ಸಂಶೋಧನೆಗಳನ್ನು ಮುಂದುವರೆಸಿದನು. 1972ರಲ್ಲಿ ಇ.ಐ. ಡುಪಾಂಟ್ ಡೆ ನೆವತಾರ್ಸ್ ಹಾಗೂ ಕಂಪನಿ ಸೇರಿ ಜಾರ್ಜ್ ಪಾರ್ಷಲ್ ತಂಡದ ಪ್ರಯೋಗಾಲಯದಲ್ಲಿ ನಿಯೋಜಿತನಾದನು. 1975ರಲ್ಲಿ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದ ಷ್ರಾಕ್ 1980ರಲ್ಲಿ ಇಲ್ಲಿ ಪೂರ್ಣಾವಧಿ ಪ್ರಾಧ್ಯಾಪಕನಾದನು. ಷ್ರಾಕ್ ಒಲೆಫಿಸ್ ಮ್ಯಾಥಸಿಸ್ ಹೆಸರಿನ ವಿಶಿಷ್ಟ ಸಾವಯವ ಸಂಶ್ಲೇಷಣಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾನೆ. ಒಲೆಫಿûನ್ಸ್ ಮೆಟಾಥೀಸಿಸ್, ರಾಸಾಯನಿಕ ಕ್ರಿಯೆಗಳಲ್ಲಿ ಟ್ಯಾಂಟಲಮ್ ಆಲ್ಕಿಲಿಡೆನೆಸ್ಗಳ ಸಂಶ್ಲೇಷಣೆ ಬಹು ಮುಖ್ಯ ಸ್ಥಿತಿ. ಒಲೆಫಿûನ್ ವ್ಮೆಟಾಥಿಸಿಸ್ನ ಸಂಪೂರ್ಣ ರಾಸಾಯನಿಕ ಚಕ್ರದಲ್ಲಿ ಆಲ್ಕಲಿಡೈನೆಸ್ಗಳು ಕ್ರಿಯಾಪ್ರೇರಕ ಸಂಥಿಸ್ಥ ಸ್ಥಿತಿಯಲ್ಲಿರುತ್ತವೆ (Catalytic Critical State). ಷ್ರಾಕ್ ಸಂಶೋಧನೆಗಳಿಂದ ಒಲೆಫಿûನ್ ಮೆಟಾಥೀಸಿಸ್ ಕ್ರಿಯೆಯಲ್ಲಿ ಮೆಟಲೋಸೈಕ್ಲೋಬ್ಯುಟೇನ್ ಬಹು ಪ್ರಮುಖವಾದ ಮಧ್ಯವರ್ತಿಯೆಂದು ಖಚಿತವಾಯಿತು. ಷ್ರಾಕ್ನಿಂದ ಒಲೆಫಿûನ್ ಮೆಟಾಥೀಸಿಸ್ ಕ್ರಿಯೆಗೆ ಬೇಕಾಗುವ ಕ್ರಿಯಾಪ್ರೇರಕಗಳು (Catalyst) ಲಭ್ಯವಾದವು. ಒಲೆಫಿûನ್ ಮೆಟಾಥಿಸಿಸ್ ಕ್ರಿಯೆಯ ಸಂಪೂರ್ಣ ಅರಿವಿನಿಂದ ಜೀವಿಗಳಲ್ಲಿನ ಸಾರಜನಕಾಧಾರಿತ ಕಿಣ್ವಗಳ ಸ್ವರೂಪ ಸುಸ್ಪಷ್ಟಗೊಂಡಿತು. ಈ ಸಾಧನೆಗಾಗಿ ಷ್ರಾಕ್ 2005ರ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಸುಂದರವಾದ ಮರದ ಪೆಟ್ಟಿಗೆಗಳನ್ನು ತಯಾರಿಸುವುದರಲ್ಲಿ ನಿಪುಣವಾಗಿರುವ ಷ್ರಾಕ್ಗೆ ಅದು ಅತ್ಯಂತ ನೆಚ್ಚಿನ ಹವ್ಯಾಸವೂ ಆಗಿದೆ.
ರಾಬರ್ಟ್, ಎಚ್ ಗ್ರಬ್ಸ್ (1942--) 2005
Robert , H.Grubbs
ಅಸಂಸಂ-ರಸಾಯನಶಾಸ್ತ್ರ - ಒಲೆಫಿûನ್ ಮೆಟಾಥೀಸಿಸ್ ಹಾಗೂ ವಿಶಿಷ್ಟ ಬಹ್ವಂಗೀಕರಣದ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ನಡೆಸಿದಾತ.
ಗ್ರಬ್ಸ್ 27ಫೆಬ್ರವರಿ 1942ರಂದು ಕೆಂಟುಕಿ ಪ್ರಾಂತದ ಪೆÇಸವ್ಯಾಟ್ರಲ್ ಪಟ್ಟಣದಲ್ಲಿ ಜನಿಸಿದನು. ಬಾಲ್ಯವನ್ನು ಮಾರ್ಷೆಲ್ ಕೌಂಟಿಯಲ್ಲಿ ಕಳೆದ ಗ್ರಬ್ಸ್ , ಫ್ಲೊರಿಡಾ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಪದವಿ ಹಾಗೂ ಸ್ನಾತಕ ಪದವಿ ಗಳಿಸಿದನು. ಕೊಲಂಬಿಯಾ ವಿಶ್ವವಿದ್ಯಾಲಯದ ರೊನಾಲ್ಡ್ ಬ್ರೆಸ್ಲೋ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ 1968ರಲ್ಲಿ ಡಾಕ್ಟರೇಟ್ ಗಳಿಸಿದನು. ಮುಂದಿನ ದಿನಗಳಲ್ಲಿ ಕೆಲಕಾ¯ ಸ್ಟ್ಯಾನ್’ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಜೇಮ್ಸ್ ಕೋಲ್ಮನ್ ಸಾಂಗತ್ಯದಲ್ಲಿ ಪರಿಶ್ರಮಿಸಿದನು. ಮಿಷಿಗನ್ ವಿಶ್ವವಿದ್ಯಾಲಯ ಸೇರಿ ಬೊಧಕ ಸಿಬ್ಬಂದಿಯಾದನು. 1978 ರಲ್ಲಿ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ಟೆಕ್ನಾಲಜಿಯಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕನಾದನು. ಇಲ್ಲಿ ತನ್ನ ವಿದ್ಯಾರ್ಥಿಗಳೊಂದಿಗೆ ಸ್ಥಿತ್ಯಂತರ ಲೋಹಗಳನ್ನು (Transition Metals) ಒಳಗೊಂಡಂತಹ ಹೊಸ ಬಗೆಯ ರಾಸಾಯನಿಕ ಸಂಶ್ಲೇಷಣೆಗಳನ್ನು ರೂಪಿಸಿದನು. ಇದರ ಫಲವಾಗಿ ಎಸ್ಟರ್ಗಳನ್ನು ವಿನೈಲ್ ಈಥರ್ಗಳಾಗಿ ಪರಿವರ್ತಿಸುವ ಸಾಮಾನ್ಯ ತಂತ್ರ ದಕ್ಕಿತು. ಇದಕ್ಕಾಗಿ ಗ್ರಬ್ಸ್ ಹಾಗೂ ಸಂಗಡಿಗರು ವಿಶಿಷ್ಟ ಕ್ರಿಯಾಪ್ರೇರಕಗಳನ್ನು (Catalysts) ಪರಿಚಯಿಸಿದರು. ಗ್ರಬ್ಸ್ ಒಲೆಫಿûನ್ ಮೆಟಾಥೀಸಿಸ್ ಕ್ರಿಯಾಚಕ್ರದಲ್ಲಿ ಆಸಕ್ತನಾಗಿ ಹೊಸ ಬಗೆಯ ಬಹೃಂಗೀಕರಣದ (Polymerisation) ಸಾಧ್ಯತೆಯನ್ನು ಅನಾವರಣಗೊಳಿಸಿದನು. ಇಂತಹ ಬಹ್ವಂಗಿಗಳು ಹೊಸ ಸಾಮಾಗ್ರಿಗಳಿಗೆ ಕಾರಣವಾಗಿ ವೈವಿಧ್ಯಮಯ ವೈಜ್ಞಾನಿಕ ಹಾಗೂ ವ್ಯಾಹಾರಿಕ ಕ್ಷೇತ್ರಗಳಲ್ಲಿ ಬಳಕೆಯಾಗತೊಡಗಿದವು. ದ್ಯುತಿ ಹೊಂದಾಣಿಕೆಯಾಗಬಲ್ಲ ಅಕ್ಷಿಪಟಲಾಂತರ್ಗತ ಮಸೂರಗಳು ಇದರಿಂದ ಬಳಕೆಗೆ ಬಂದವು. ಹೊಸ ಸಂಶೋಧನೆಗಳು ದೈನಂದಿನ ವ್ಯಾವಹಾರಿಕ ಬಳಕೆಗೆ ಬದಲು ಅಧಿಕ ಪ್ರಮಾಣದ ಬಂಡವಾಳ ಹೂಡಿಕೆ ಮತ್ತು ಬೃಹತ್ ಕಂಪನಿಗಳ ನೆರವು ಬೇಕು. ಈ ಕಂಪನಿಗಳು ಲಾಭ ನಷ್ಟ, ನಿರ್ವಹಣೆಗಳನ್ನು ಅಳೆದು ಸುರಿದು ತೂಗಿ ನೀಡಿದ ಮೇಲೆಯೆ ಉತ್ಪಾದನೆಗೆ ಪ್ರಾರಂಭಿಸುತ್ತವೆ. ಇದನ್ನು ತಪ್ಪಿಸಲು ಗ್ರಬ್ಸ್ ಸ್ನೇಹಿತವಾದ ಮೈಕ್ ಗಿಯಾರ್ಡೆಲ್ಲೋ ವ್ಮೆಟೀರಿಯಲ್ ಇನ್ಕ್ ಸಂಸ್ಥೆ ಸ್ಥಾಪಿಸಿದನು. ಗ್ರಬ್ಸ್ ಇದಕ್ಕೆ ನೆರವಾದನು. ಒಲೆಫಿûನ್ ಮೆಟಾಥೀಸಿಸ್ ಹಾಗೂ ವಿಶಿಷ್ಟ ಬಹ್ವಂಗೀಕರಣದ ಕ್ಷೇತ್ರದಲ್ಲಿನ ಗಮನಾರ್ಹ ಕೊಡುಗೆಗಳಾಗಿ ಗ್ರಬ್ಸ್ 2005ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ರಿಚರ್ಡ್ , ಆರ್ ಷ್ರಾಕ್ (1945--) 2005
Richard , R.Schrock
ಅಸಂಸಂ-ರಸಾಯನಶಾಸ್ತ್ರ- ಒಲೆಫಿûನ್ ಮೆಟಾಥಿಸಿಸ್ ಕ್ರಿಯೆಯ ಸಂಪೂರ್ಣ ವಿವರ ನೀಡಿದಾತ.
ಷ್ರಾಕ್ ಇಂಡಿಯಾನ ರಾಜ್ಯದ ಬರ್ನ್ನಲ್ಲಿ 4 ಜನವರಿ 1945ರಂದು ಜನಿಸಿದನು. ಕ್ಯಾಲಿ¥sóÉÇೀರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ಪ್ರೌಢ ಶಿಕ್ಷಣ ಮುಗಿಸಿದ ಷ್ರಾಗ್, 1976ರಲ್ಲಿಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯದಿಂದ 1967ರಲ್ಲಿ ರಸಾಯನಶಾಸ್ತ್ರದ ಪದವಿ ಪಡೆದನು. 1971ರಲ್ಲಿ ಹಾರ್ವರ್ಡ್ ವಿಶ್ವ ವಿದ್ಯಾಲಯದಿಂದ ಜೆ.ಎ ಓಸ್ಬೊರ್ನ್ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಗಳಿಸಿದನು. ನಂತರ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಜಾಕ್ ಲೆವಿಸ್ ಸಾಂಗತ್ಯದಲ್ಲಿ ಸಂಶೋಧನೆಗಳನ್ನು ಮುಂದುವರೆಸಿದನು. 1972ರಲ್ಲಿ ಇ.ಐ. ಡುಪಾಂಟ್ ಡೆ ನೆವತಾರ್ಸ್ ಹಾಗೂ ಕಂಪನಿ ಸೇರಿ ಜಾರ್ಜ್ ಪಾರ್ಷಲ್ ತಂಡದ ಪ್ರಯೋಗಾಲಯದಲ್ಲಿ ನಿಯೋಜಿತನಾದನು. 1975ರಲ್ಲಿ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದ ಷ್ರಾಕ್ 1980ರಲ್ಲಿ ಇಲ್ಲಿ ಪೂರ್ಣಾವಧಿ ಪ್ರಾಧ್ಯಾಪಕನಾದನು. ಷ್ರಾಕ್ ಒಲೆಫಿಸ್ ಮ್ಯಾಥಸಿಸ್ ಹೆಸರಿನ ವಿಶಿಷ್ಟ ಸಾವಯವ ಸಂಶ್ಲೇಷಣಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾನೆ. ಒಲೆಫಿûನ್ಸ್ ಮೆಟಾಥೀಸಿಸ್, ರಾಸಾಯನಿಕ ಕ್ರಿಯೆಗಳಲ್ಲಿ ಟ್ಯಾಂಟಲಮ್ ಆಲ್ಕಿಲಿಡೆನೆಸ್ಗಳ ಸಂಶ್ಲೇಷಣೆ ಬಹು ಮುಖ್ಯ ಸ್ಥಿತಿ. ಒಲೆಫಿûನ್ ವ್ಮೆಟಾಥಿಸಿಸ್ನ ಸಂಪೂರ್ಣ ರಾಸಾಯನಿಕ ಚಕ್ರದಲ್ಲಿ ಆಲ್ಕಲಿಡೈನೆಸ್ಗಳು ಕ್ರಿಯಾಪ್ರೇರಕ ಸಂಥಿಸ್ಥ ಸ್ಥಿತಿಯಲ್ಲಿರುತ್ತವೆ (Catalytic Critical State). ಷ್ರಾಕ್ ಸಂಶೋಧನೆಗಳಿಂದ ಒಲೆಫಿûನ್ ಮೆಟಾಥೀಸಿಸ್ ಕ್ರಿಯೆಯಲ್ಲಿ ಮೆಟಲೋಸೈಕ್ಲೋಬ್ಯುಟೇನ್ ಬಹು ಪ್ರಮುಖವಾದ ಮಧ್ಯವರ್ತಿಯೆಂದು ಖಚಿತವಾಯಿತು. ಷ್ರಾಕ್ನಿಂದ ಒಲೆಫಿûನ್ ಮೆಟಾಥೀಸಿಸ್ ಕ್ರಿಯೆಗೆ ಬೇಕಾಗುವ ಕ್ರಿಯಾಪ್ರೇರಕಗಳು (Catalyst) ಲಭ್ಯವಾದವು. ಒಲೆಫಿûನ್ ಮೆಟಾಥಿಸಿಸ್ ಕ್ರಿಯೆಯ ಸಂಪೂರ್ಣ ಅರಿವಿನಿಂದ ಜೀವಿಗಳಲ್ಲಿನ ಸಾರಜನಕಾಧಾರಿತ ಕಿಣ್ವಗಳ ಸ್ವರೂಪ ಸುಸ್ಪಷ್ಟಗೊಂಡಿತು. ಈ ಸಾಧನೆಗಾಗಿ ಷ್ರಾಕ್ 2005ರ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಸುಂದರವಾದ ಮರದ ಪೆಟ್ಟಿಗೆಗಳನ್ನು ತಯಾರಿಸುವುದರಲ್ಲಿ ನಿಪುಣವಾಗಿರುವ ಷ್ರಾಕ್ಗೆ ಅದು ಅತ್ಯಂತ ನೆಚ್ಚಿನ ಹವ್ಯಾಸವೂ ಆಗಿದೆ.
ವೈವೆಸ್, ಷಾವಿನ್ (1930--) 2005
Yves Chauvin
ಬೆಲ್ಜಿಯಂ-ರಸಾಯನಶಾಸ್ತ್ರ-ಪೆಟ್ರೊಲ್ ಇಂಧನಗಳ ಉತ್ತಮಿಕೆಯ ತಂತ್ರ ರೂಪಿಸಿದಾತ.
ವೈವೆಸ್, ಬೆಲ್ಜಿಯಂ ಹಾಗೂ ಫ್ರಾನ್ಸ್’ನ್ನುs ಪ್ರತ್ಯೇಕಿಸುವ ಲೈಸ್ ನದಿಯ ಗಡಿ ಪಟ್ಟಣದಲ್ಲಿ 10 ಅಕ್ಟೋಬರ್ 1930ರಂದು ಜನಿಸಿದನು. ಈತನ ಪೂರ್ವಿಕರು ಫ್ರೆಂಚ್ ಮೂಲದವರಾಗಿದ್ದು ಸಣ್ಣ ಕೃಷಿ ಹಿಡುವಳಿದಾರರಾಗಿದ್ದರು. ಈತನ ತಂದೆ ವೈದ್ಯುತ್ ಇಂಜಿನಿಯರಾಗಿದ್ದು ಎರಡೂ ಜಾಗತಿಕ ಯುದ್ದಗಳಲ್ಲಿ ಭಾಗವಹಿಸಿದ್ದನು. ಕೆಲಕಾಲ ಯುದ್ದ ಸೆರೆಯಾಳಾಗಿ ಕಾರಾಗೃಹದಲ್ಲಿದ್ದನು. ವೈವೆಸ್ ಎಂದಿಗೂ ಪ್ರತಿಭಾವಂತ ವಿದ್ಯಾರ್ಥಿಯೆನಿಸಿರಲಿಲ್ಲ. ಈತ ಸನ್ನಿವೇಶಗಳಿಗೆ ತಕ್ಕಂತೆ ವರ್ತಿಸಿ ರಸಾಯನಶಾಸ್ತ್ರವನ್ನು ಅಧ್ಯಯನ ಮಾಡಿದನು. ಒಮ್ಮೆ ಒಂದು ಕೆಲಸವನ್ನು ಒಪ್ಪಿದ ಮೇಲೆ ಅದನ್ನು ಏಕಾಗ್ರ ನಿಷ್ಟೆಯಿಂದ ಮಾಡಬೇಕೆನ್ನುವುದು ವೈವೆಸ್ ನಿಲುವು. ಪದವಿ ಗಳಿಸಿದ ನಂತರ ಕಾರ್ಖಾನೆಯೊಂದಕ್ಕೆ ಸೇರಿದ ವೈವೆಸ್ ಅಲ್ಪ ಕಾಲದಲ್ಲೇ ಅದರ ಏಕತಾನತೆಯಿಂದ ಬೇಸತ್ತು ರಾಜಿನಾಮೆ ನೀಡಿದನು. ಈ ಹಿಂದೆ ಮಾಡಿದ್ದನ್ನೇ ಅನುಸರಿಸು ಏಕೆಂದರೆ ಅದು ಈಗಾಗಲೇ ನಡೆಯುತ್ತಿದೆ ಎಂಬ ಕೆಲಸದ ಧೋರಣೆಯನ್ನು ವೈವೆಸ್ ತೀವ್ರವಾಗಿ ವಿರೋಧಿಸುತ್ತಿದ್ದನು. ಯಾವುದೇ ಹೊಸದರ ಉಗಮವೆಂದರೆ ಈ ಹಿಂದೆ ಸಮರ್ಪಕವೆಂದು ಒಪ್ಪಿದುದನ್ನು ಸರಿಯಾದ ಸಂದರ್ಭದಲ್ಲಿ ತೊರೆದು ಸ್ವಂತ ಮಾರ್ಗದಲ್ಲಿ ಸಾಗುವುದೇ ನಿಜವಾದ ಜ್ಞಾನವೆಂಬುದು ವೈವೆಸ್ ನಿಲುವು. 1960ರಲಿ ವೈವೆಸ್ ಫ್ರಾನ್ಸ್’ನ ಪೆಟ್ರೋಲ್ ಸಂಸ್ಥೆ ಸೇರಿದನು. ಯಾವುದೇ ತೈಲ ದಕ್ಷವೆನಿಸಬೇಕಾದರೆ (Efficient) ಅದರ ಆಕ್ಟೇನ್ ಸಂಖ್ಯೆ ಅಧಿಕವಿರಬೇಕು. ಇಂತಹ ವೃದ್ಧಿ ತರುವ ರಾಸಾಯನಿಕಗಳನ್ನು ಪೆಟ್ರೋಲ್ನೊಂದಿಗೆ ಬೆರೆಸಿದಾಗ ಇಂಧನದ ಕಾರ್ಯಕ್ಷಮತೆಯಲ್ಲಿ ಮಹತ್ತರ ಬದಲಾವಣೆಗಳಾಗುತ್ತವೆ. ಪ್ರೊಪೆಲಿನ್ನ್ನು ಐಸೋ ಹೆಕ್ಸಿನ್ಗಳಾಗಿಸಿ ಇಂಧನ ಸಂಕಲಕ (Additive) ಪಡೆಯುವ ವಿಧಾನ ಹಾಗೂ ತಂತ್ರ ರೂಪಿಸಲು ವೈವೆಸ್ ಯತ್ನಿಸಿ ಯಶಸ್ಸನ್ನು ಕಂಡನು. ಐಸೋಕ್ಟೇನ್ಸ್ನ್ ಪಾಲಿ ಇಥಿಲಿನ್ ತಯಾರಿಕೆಯ ಆರಂಭಿಕ ಕಚ್ಛಾ ಸಾಮಗ್ರಿಯಾಗಿ ಪರಿಚರಿಸಿದ ಮೊದಲಿಗ ವೈವೆಸ್. ಇದಕ್ಕಾಗಿ ವೈವೆಸ್ ಸಾವಯವ ಲೌಹಿಕ ರಸಾಯನಶಾಸ್ತ್ರದಲ್ಲಿ ಪರಿಶ್ರಮಿಸಿದನು. ವೈವೆಸ್ನ ಈ ಪರಿಶ್ರಮ ಸಂಪೂರ್ಣ ಫಲಪ್ರದ ತಂತ್ರಜ್ಞಾನದ ಉಗಮಕ್ಕೆ ಕಾರಣವಾಯಿತು. ಇದಕ್ಕಾಗಿ ವೈವೆಸ್ 2005ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. ಡಾಕ್ಟರೇಟ್ ಗಳಿಸದೆ, ಅನ್ವಯಿಕ, ಕೈಗಾರಿಕಾ ವಲಯದಲ್ಲಿದ್ದು ನೊಬೆಲ್ ಪ್ರಶಸ್ತಿಯಂತಹ ಶೈಕ್ಷಣಿಕ ಪರಿಶ್ರಮ ಬೇಡುವ ಪುರಸ್ಕಾರ ಹೊಂದಿರುವುದು ವೈವೆಸ್ ಹೆಗ್ಗಳಿಕೆ.
ಕೊರ್ನ್ಬರ್ಗ್ , ರೋಜೆರ್ ಡಿ 2006
Kornberg , D.Roger
ಅಸಂಸಂ-ರಸಾಯನಶಾಸ್ತ್ರ-ಪಜೀವಕೋಶದಲ್ಲಿ ಪ್ರೊಟೀನ್ ಉತ್ಪಾದನೆ ನಿಯಂತ್ರಣ ಕುರುತಾಗಿ ಸಂಶೋಧಿಸಿದಾತ.
ಪ್ರಾಣಿಗಳ ಮೂಲ ಘಟಕ ಜೀವಕೋಶ. ಜೀವಕೋಶಗಳ ಕ್ರಮಬದ್ಧ ಕಾರ್ಯ ನಿರ್ವಹಣೆಯಿಂದಲೇ ಜೀವಿ ಅಸ್ತಿತ್ವದಲ್ಲಿರಲು ಸಾಧ್ಯವಾಗಿದೆ. ಜೀವಕೋಶಗಳ ಕೇಂದ್ರದಲ್ಲಿ ನ್ಯೂಕ್ಲಿಯಸ್ ಅಥವಾ ಕೋಶಬೀಜವಿದೆ. ಇದನ್ನು ಕೋಶದ್ರವ್ಯ (Cytoplasm) ಆವರಿಸಿದೆ. ಜೀವಕೋಶಕ್ಕೆ ಬೇಕಾದ ಪೋಷಣೆ ಮತ್ತು ಶಕ್ತಿ ಉತ್ಪಾದನೆಗಾಗಿ ಕೋಶ ದ್ರವ್ಯದಲ್ಲಿ ಪ್ರೊಟೀನ್ ಉತ್ಪಾದನೆಯಾಗಬೇಕು. ಈ ಶಕ್ತಿ ಉತ್ಪಾದನೆಗಾಗಿ ಕೋಶ ದ್ರವ್ಯದಲ್ಲಿ ಪ್ರೊಟೀನ್ ಉತ್ಪಾದಕ ಘಟಕಗಳಿವೆ. ಇವು ಅಗತ್ಯಕ್ಕೆ ಬೇಕಾದಷ್ಟು ಪ್ರೊಟೀನ್ ಉತ್ಪಾದಿಸಲು ಜೀವಕೋಶದ ಬೀಜದಲ್ಲಿರುವ ಡಿ.ಎನ್.ಎಯಿಂದ ಮಾಹಿತಿ ರವಾನೆಯಾಗಬೇಕು. ಡಿ.ಎನ್.ಎ ಯಿಂದ ಇಂತಹ ಆದೇಶ ಮಾಹಿತಿ ಬರದೆ ಪ್ರೊಟೀನ್ ಉತ್ಪಾದನೆ ಸಾಧ್ಯವಿಲ್ಲ. ಇಂತಹ ಮಾಹಿತಿ ರವಾನೆಯ ವಿನ್ಯಾಸ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಆಲ್ಲದೆ ಈ ಆದೇಶ ಮಾಹಿತಿ ದೂತ ಆರ್ಎನ್ಎ (m-RNA=Messenger RNA) ಮೂಲಕ ಬರುತ್ತದೆ. ಜೀವದ ಅಸ್ತಿತ್ವಕ್ಕೆ ಇದು ನಿರಂತರವಾಗಿ ನಡೆಯಬೇಕಾದ ಕ್ರಿಯೆ. ಈ ಕ್ರಿಯೆಯನ್ನು ಪಾರಲಿಖಿತತೆ (Transcription)ಎನ್ನುತ್ತಾರೆ. ನಾನಾ ದೋಷ, ಹಾಗೂ ಕೊರತೆಗಳಿಂದಾಗಿ ಪಾರಲಿಖಿತ ಕ್ರಿಯೆಗೆ ಅಡ್ಡಿಯುಂಟಾಗಿ, ಪೆÇ್ರೀಟೀನ್ಗಳ ಉತ್ಪಾದನೆ ಕುಂಠಿತ ಅಥವಾ ಸ್ಥಗಿತವಾಗುತ್ತದೆ. ಆಗ ಪೋಷಕ ಅಂಶಗಳಿಲ್ಲದೆ ಜೀವಕೋಶಗಳು ಸಾಯುತ್ತವೆ. ಇದು ದೇಹದ ಅಂಗಾಂಶಗಳು ವೈಫಲ್ಯಕ್ಕೆ ಕಾರಣವಾಗುತ್ತದೆ. ಈ ಕಾರಣದಿಂದ ಮೂತ್ರಪಿಂಡ, ಕ್ಯಾನ್ಸರ್, ಹೃದಯ ರೋಗಗಳು ಬಾಧಿಸುತ್ತವೆಯೆಂದು ರೋಜರ್ ತೋರಿಸಿದ್ದಾನೆ. ಇದಕ್ಕಾಗಿ 2006ರ ನೊಬೆಲ್ ಪ್ರಶಸ್ತಿಯಿಂದ ಪುರಸ್ಕೃತನಾಗಿದ್ದನೆ. ಕಾರ್ನ್ಬರ್ಗ್ ತಂದೆ ಆರ್ಥರ್ ಕೊರ್ನ್ಬರ್ಗ್ 1959ರಲ್ಲಿ ಜೀವರಸಾಯನಿಕ ಕ್ರಿಯೆಗಳ ಸಂಶೋಧನೆಗಾಗಿ ನೊಬೆಲ್ ಪ್ರಶಸ್ತಿ ಪಡೆದಿದ್ದುದು ಗಮನಾರ್ಹ.
Barry , Sharpless.K
ಅಸಂಸಂ-ರಸಾಯನಶಾಸ್ತ್ರ-ರಾಸಾಯನಿಕ ಕ್ರಿಯೆಗಳಲ್ಲಿ ಅಸಮಾಂಗೀಯ ಉತ್ಕರ್ಷಣಾ ತಂತ್ರ ಪರಿಚಯಿಸಿದಾತ.
ಷಾಪ್ರ್ಲೆ 28 ಏಪ್ರಿಲ್ 1941ರಂದು ಪೆನ್ಸಿಲ್ವೇನಿಯಾದ ಫಿûಲೆಡೆಲ್ಫಿಯಾದಲ್ಲಿ ಜನಿಸಿದನು. ಷಾಪ್ರ್ಲೆ 1968ರಲ್ಲಿ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಿಂದ ಜೀವ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದನು. 1970ರಲ್ಲಿ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆ¥sóï ಟೆಕ್ನಾಲಜಿ ಸೇರಿದನು. 1990ರಲ್ಲಿ ಕ್ಯಾಲಿಫೊರ್ನಿಯಾದ ಲಾ ಜೊಲ್ಲದಲ್ಲಿರುವ ಸ್ಕ್ರಿಪ್ಸ್ ರಿಸರ್ಚ ಇನ್ಸ್ಟಿಟ್ಯೂಟ್ ಸೇರಿದನು. ಹಲವಾರು ಜೈವಿಕ ಅಣುಗಳು ಪರಸ್ಪರ ಅಧ್ಯಾರೋಪಣಗೊಳಿಸಲಾಗದ (Non-Superimposable) ಕನ್ನಡಿ ಬಿಂಬಗಳಂತೆ ಎರಡು ಬಗೆಯ ರಾಚನಿಕ ಸ್ವರೂಪದಲ್ಲಿ ಅಸ್ತಿತ್ವದಲ್ಲಿವೆ. ಇಂತಹ ರಾಚನಿಕ ಸ್ವರೂಪಗಳನ್ನು ಎನ್ಯಾಂಟಿಯರ್ಸ್ಗಳೆನ್ನುತ್ತಾರೆ. ಇಂತಹ ಜೈವಿಕ ಅಣುಗಳಿಂದಾದ ಕಿಣ್ವಗಳು, ರಾಸಾಯನಿಕಗಳು ವರಣಾತ್ಮಕವಾಗಿದ್ದು (Selective) ನಿರ್ದಿಷ್ಟ ರಾಚನಿಕ ಸ್ವರೂಪದ ಅಣುಗಳೊಂದಿಗೆ ಮಾತ್ರ ರಾಸಾಯನಿಕ ಕ್ರಿಯೆಗೊಳಗಾಗುತ್ತವೆ. ರೋಗ ನಿವಾರಣೆಗಾಗಿ ಹ¯ವಾರು ಬಗೆಯ ಜೈವಿಕ ಔಷಧಿಗಳು ಎನ್ಯಾಂಟಿಮರ್ಸಗಳ ಮಿಶ್ರಣಗಳಾಗಿರುತ್ತವೆ. ರೋಗ ನಿವಾರಣೆಗೆ ಕೆಲ ಎನ್ಯಾಂಟಿಮರ್ಸ್ ನೆರವಾದರೆ, ಇವುಗಳೊಂದಿಗಿರುವ ಬೇರೆಯವು ದೇಹದ ಮೇಲೆ ಪಾಶ್ರ್ವ ಪರಿಣಾಮ ಬೀರುತ್ತವೆ. ಥ್ಯಾಲಿಡೋಮೈಡ್ನಂತಹ ಔಷಧಿಗಳಲ್ಲಿ ಪಾಶ್ರ್ವ ಪರಿಣಾಮ ಬಹು ಪ್ರಭಾವಶಾಲಿಯಾಗಿರುತ್ತದೆ. ರೋಗ ಸ್ಥಿತಿಯ ನಿವಾರಣೆಗಾಗಿ ಬೇಕಾದ ಬಗೆಯ ಎಲ್ಯಾಂಟೊಮರ್ ಮಾತ್ರ ರಾಸಾಯನಿಕ ಕ್ರಿಯೆಗೊಳಗಾಗಬೇಕು. ಷಾಪ್ರ್ಲೆಯ ಸಂಶೋಧನೆಗಳು ಇಂತಹ ನಿರ್ದಿಷ್ಟ ರಾಸಾಯನಿಕ ಕ್ರಿಯೆಗಳ ಪ್ರತಿಬಿಂಬರೂಪಿ ಉತ್ಕರ್ಷಣೆಯಲ್ಲಿ (Oxidation) ಕೇಂದ್ರೀಕೃತವಾಗಿವೆ. 1980ರಿಂದ ಷಾಪ್ರ್ಲೆ ನಡೆಸಿದ ಸಂಶೋಧನೆಗಳ ಫಲವಾಗಿ ಎಪೊಕ್ಸೈಡ್ ಸಂಯುಕ್ತಗಳನ್ನು ಪಡೆಯಲು ರೂಪಿಸಿದ ಅಸಮಾಂಗೀಯ ಉತ್ಕರ್ಷಣಾ (Assymetric Oxidation) ತಂತ್ರ ವ್ಯಾವಹಾರಿಕವಾಗಿ ಔಷಧಿ ತಯಾರಿಕೆಗೆ ನೆರವಾಯಿತು. ಈ ಸಾಧನೆಗಾಗಿ ಷಾಪ್ರ್ಲೆ 2001ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತವಾದನು.
ರಯೋಜಿ , ನೊಯೊರ್ (1938--) 2001
Ryoji , Noyor
ಜಪಾನ್-ವೈದ್ಯಕೀಯ-ಜೈವಿಕ ರಾಸಾಯನಿಕಗಳ ಉತ್ಪಾದನೆಗೆ ಸಾವಯವ ಲೌಹಿಕ ರಸಾಯನಶಾಸ್ತ್ರ (Organic Metallic Chemistry) ಅಭಿವೃದ್ಧಿಪಡಿಸಿದಾತ
ರಯೊಜಿ 3 ಸೆಪ್ಟೆಂಬರ್ 1938ರಂದು ಕೋಬೆ ನಗರದಲ್ಲಿ ಜನಿಸಿದನು. ರಯೊಜಿ ತಂದೆ ಖಾಸಗಿ ರಾಸಾಯನಿಕ ಕಂಪನಿಯೊಂದರಲ್ಲಿ ಸಂಶೋಧಕನಾಗಿದ್ದನು. ಈತ ಮನೆಗೆ ಹಲವಾರು ವೈಜ್ಞಾನಿಕ ನಿಯತಕಾಲಿಕ ಪತ್ರಿಕೆಗಳನ್ನು ತರಿಸುತ್ತಿದ್ದನು. ಆಗ ತಾನೆ ಹೊಸದಾಗಿ ಉಪಜ್ಞೆಗೊಂಡಿದ್ದ ನೈಲಾನ್ ಎಳೆಗಳ ಬಗೆಗೆ ಓದಿ ಪುಳಕಿತನಾಗಿದ್ದ ರಯೊಜಿ ರಸಾಯನಶಾಸ್ತ್ರವನ್ನು ವಿಸ್ಮಯ ಗೌರವ ಬೆರೆತ ದೃಷ್ಟಿಯಿಂದ ನೋಡುತ್ತಿದ್ದನು. ಹನ್ನೆರಡು ವರ್ಷದ ಬಾಲಕನಾಗಿದ್ದ ರಯೊಜಿಗೆ ತಾನು ಉತ್ತಮ ರಸಾಯನಶಾಸ್ತ್ರಜ್ಞನಾಗಿ ಜಪಾನ್ನ್ನು ಬಡತನದಿಂದ ಹೊರ ತರುವ ಕಾರ್ಯದಲ್ಲಿ ಅಳಿಲು ಸೇವೆ ಸಲ್ಲಿಸಬೇಕೆಂದು ಆಶಿಸಿದನು. 1957ರಲ್ಲಿ ಹದಿನೆಂಟನೇ ವಯಸ್ಸಿನಲ್ಲಿ ರಯೊಜಿ ಕ್ಯೋಟೋ ವಿಶ್ವವಿದ್ಯಾಲಯ ಸೇರಿದನು. ಇದೇ ವರ್ಷ ಸೋವಿಯೆತ್ ರಷ್ಯಾ ತನ್ನ ಮೊದಲ ಉಪಗ್ರಹ ಸ್ಪುತ್ನಿಕ್ ಹಾರಿಸಿತು. ಸೋವಿಯತ್ನ ಈ ಸಾಧನೆ ಹಾಗೂ ವಿಜ್ಞಾನದ ಸಾಮಥ್ರ್ಯಗಳನ್ನು ಜನ ಸಾಮಾನ್ಯರಂತೆ ಜಪಾನಿನ ವೈಜ್ಞಾನಿಕ ರಂಗವೇ ಬೆರಗಿನಿಂದ ನೋಡಿ ಆನಂದಿಸಿ ಮೆಚ್ಚಿತು. ಇದು ರಯೊಜಿಯ ಮೇಲೆ ಆಳ ಪ್ರಭಾವ ಬೀರಿತು. 1961ರಲ್ಲಿ ಪದವಿ ಹಾಗೂ 1963ರಲ್ಲಿ ಡಾಕ್ಟರ್ ಗಳಿಸಿದ ರಯೊಜಿ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ಹಿಟೊಸಿ ನೊಝೊಕಿಯ ಮಾರ್ಗದರ್ಶನದಲ್ಲಿ ಸಂಶೋಧನೆ ಪ್ರಾರಂಭಿಸಿದನು. ಈ ಸಂದರ್ಭದಲ್ಲಿ ಕ್ರಮಬದ್ದವಾದ ಸಾವಯವ ಲೌಹಿಕ ಸಂಯುಕ್ತಗಳ (Organic Metallic Compounds) ಪ್ರತಿಕ್ರಿಯೆಯಲ್ಲಿ ಅಸಮಾಂಗೀಯ (Unsymmetric) ನಡವಳಿಕೆಯನ್ನು ರಯೊಜಿ ಮೊದಲ ಬಾರಿಗೆ ಗುರುತಿಸಿದನು. ಇವುಗಳ ಅಧ್ಯಯನ ರಯೊಜಿಯ ಜೀವನದುದ್ದಕ್ಕೂ ಸಾಗಿತು. 1967ರ ನಂತರ ನಗೊಯಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನ ಆಹ್ವಾನ ಬಂದಾಗ ರಯೊಜಿಗೆ 29ರ ಪ್ರಾಯ. ಇಲ್ಲಿ ರಯೊಜಿ ಸಾವಯವ ಲೌಹಿಕ ಸಂಯುಕ್ತಗಳ ಸಂಶೋಧನೆಗೆ ಕಟಿಬದ್ದವಾದ ಯುವ ವಿಜ್ಞಾನಿಗಳ ತಂಡವನ್ನು ಕಟ್ಟತೊಡಗಿದನು. 1969ರಲ್ಲಿ ಅಸಂಸಂದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಇ.ಜೆ.ಕೊರಿ ಮಾರ್ಗದರ್ಶನದಲ್ಲಿ ಸಂಶೋಧಿಸಲು ತೆರಳಿದನು. ಇಲ್ಲಿದ್ದ ಕೊನಾರ್ಡ್ ಬ್ಲಾಕ್ನ ಕೆಳಗೆ ಕೆ. ಬ್ಯಾರಿ ಷಾಪ್ಲೆ ಕೆಲಸ ಮಾಡುತ್ತಿದ್ದನು. ಈ ಇಬ್ಬರಲ್ಲೂ ಅತ್ಯುತ್ತಮ ಸ್ನೇಹ, ಸಹಕಾರಗಳ ಮೂಡಿದವು. 1970ರಲ್ಲಿ ಜಪಾನ್ಗೆ ಮರಳಿ ನಗೋಮಾ ವಿಶ್ವವಿದ್ಯಾಲಂiÀiದಲ್ಲಿ ಪ್ರಾಧ್ಯಾಪಕನಾದ ರಯೊಜಿ ಅಸಮಾಂಗೀಯ ಜಲಕರಣ (Hydrogenation) ಕುರಿತಾಗಿ ವ್ಯಾಪಕ ಸಂಶೋಧನೆ ನಡೆಸಿದನು. ಇದರ ಫಲಿತಾಂಶವಾಗಿ ಟರ್ಪಿನ್ , ವಿಟಮಿನ್, ಬೀಟಾ-ಅಲ್ಯಾಕ್ಟಂ ಪ್ರತಿ ಜೈವಿಕಗಳು, ಆಲ್ಫಾ, ಬೀಟಾ, ಅಮೈನೋ ಆಮ್ಲ, ಆಲ್ಕಲಾಯಿಡ್ಸ್, ಪ್ರೊಸ್ಟ್ಗ್ಲಾಂಡಿನ್ಸ್ ಹೋಲುವ ನೂರಾರು ಜೈವಿಕ ಸಾಮಾಗ್ರಿಗಳನ್ನು ಸಂಶ್ಲೇಷಿಸುವ ತಂತ್ರಗಳು ಅಭಿವೃದ್ಧಿಗೊಂಡವು. ರಯೊಜಿ ತಂಡದ ನೆರವಿನಿಂದ ಟಕಸಾಗೋ ಇಂಟರ್ನ್ಯಾಷನಲ್ ಕಂಪನಿ ಕಾರ್ಬಪೆನೆಮ್ ಹಾಗೂ ಲೆವೊಪೆÇ್ಲಕ್ಯಾಸಿನ್ನಂತಹ ಪ್ರತಿಬೈವಿಕಗಳನ್ನು ಭೂರಿ ಪ್ರಮಾಣದಲ್ಲಿ (Mass Production) ಉತ್ಪಾದಿಸತೊಡಗಿತು. ಸಾವಯವ ಲೌಹಿಕ ರಸಾಯನಶಾಸ್ತ್ರದಿಂದ ಔಷಧಿಗಳು ಲಭ್ಯವಾಗತೊಡಗಿ ಸಾಮಾಜಿಕ ಲಾಭಗಳು ದಕ್ಕತೊಡಗಿದವು. ಈ ರಾಸಾಯನಿಕಗಳ ಕ್ರಿಯೆ, ಜಲಕರಣ ತಂತ್ರಗಳನ್ನು ರೂಪಿಸಿದ್ದಕ್ಕಾಗಿ ರಯೊಜಿ 2001ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ವಿಲಿಯಂ , ಎಸ್ ನೊಲೆಸ್ (1917--) 2001
William , S. Knowles
ಅಸಂಸಂ-ರಸಾಯನಶಾಸ್ತ್ರ- ಜೀವರಸಾಯನಗಳ ವಿಶ್ಲೇಷಣೆಗೆ ಅಸಮಾಂಗೀಯ ಜಲಜನಕೀಕರಣದ (Unsymmetrical Hydrogenation) ತಂತ್ರವನ್ನು ಪರಿಚಯಿಸಿದಾತ.
ಅಸಂಸಂಗಳ ಮೆಸಾಚುಸೆಟ್ಸ್ ಪ್ರಾಂತ್ಯದ ಟಾನ್ಟನ್ನಲ್ಲಿ 1 ಜೂನ್ 1917ರಂದು ನೊಲೆಸ್ ಜನಿಸಿದನು. ಈತನ ಕುಟುಂಬದಲ್ಲಿ ವ್ಯಾಪಾರ ಪ್ರಾಶಸ್ತ್ಯ ಹೊಂದಿ ಶಿಕ್ಷಣಕ್ಕೆ ಅಂತಹ ಆದ್ಯತೆಯಿರಲಿಲ್ಲ. ಆದರೆ ನೊಲೆಸ್ನ ತಾಯಿ ಮಗ ದೊಡ್ಡ ವೈದ್ಯನಾಗಬೇಕೆಂದು ಆಶಿಸಿದ್ದಳು. ಪದವಿಪೂರ್ವ ಶಿಕ್ಷಣ ಮುಗಿಸಿದ ನಂತರ ಇಂಜಿನ್ ರಹಿತವಾದ ನೌಕೆಯಲ್ಲಿ ನಾರ್ವೆಗೆ ಯಾನ ಸಜ್ಜುಗೊಂಡಿದ್ದಿತು. ನೊಲೆಸ್ ಈ ಯಾನದಲ್ಲಿ ಭಾಗಿಯಾಗಿದ್ದನು. ಈ ನೌಕೆ ಬಾಲ್ವಿಕ್ ಸಮುದ್ರ ಹಾದು ಸ್ಟಾಕ್ಹೋಂ ತಲುಪಿದ್ದಿತು. 1939ರಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಗಳಿಸಿದ ನೊಲೆಸ್ ಕೆಲಕಾಲ ಕೊಲಂಬಿಯಾದಲ್ಲಿ ಕೆಲಸ ಮಾಡಿದನು. 1942ರಲ್ಲಿ ಓಹಿಯೋ ರಾಜ್ಯದ ಡೇಟನ್ನ ಥಾಮಸ್ ಅಂಡ್ ಹಾಕ್ವಾಲ್ಟ್ ಸಂಸ್ಥೆ ಸೇರಿದನು. 1944ರಲ್ಲಿ ಯುದ್ದದ ಸಮಯದಲ್ಲಿ ಸೈನಿಕ ಉಡುಗೆಗಳನ್ನು ಚಿಗಟ ದೂರವಿರುವಂತೆ ಮಾಡುವ ರಾಸಾಯನಿಕಗಳ ಸಂಶೋಧನೆಯಲ್ಲಿದ್ದನು. ಈ ವೇಳೆಗೆ ಕಾರ್ಟಿಸೋನ್ನ್ನು ಪ್ರತ್ಯೇಕಿಸಲಾಗಿದ್ದಿತು. ಮೊನ್ಸಾಂಟೋ ಕಂಪನಿ ಇದನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಿ, ಚೈಕಿತ್ಸಕವಾಗಿ ಬಳಸುವ ಯೋಜನೆ ಹಮ್ಮಿಕೊಂಡಿತು. ಈ ಯೋಜನೆಯಲ್ಲಿ ನೊಲೆಸ್ ಭಾಗಿಯಾದನು. ಇಲ್ಲಿರುವಾಗ ಅಸಮಾಂಗೀಯ ಜಲಜನಕೀಕರಣದ ತಂತ್ರವನ್ನು ನೊಲೆಸ್ ರೂಪಿಸಿದನು. ಇದು ಜೀವರಸಾಯನಗಳ ವಿಶ್ಲೇಷಣೆಗೆ , ರಾಚನಿಕ ಸ್ವರೂಪ ನಿರ್ಧಾರಕ್ಕೆ ಅಪಾರ ನೆರವಿತ್ತಿತು. ಈ ಸಾಧನೆಗಾಗಿ ನೊಲೆಸ್ 2001ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಜಾನ್ , ಬಿ. ಫೆನ್ (1917--) 2002
John , B.Fenn
ಅಸಂಸಂ_ ರಸಾಯನಶಾಸ್ತ್ರ -ನೋದಕಾರಿಗಳನ್ನು ಕುರಿತಾದ ಸಂಶೋಧನೆಗಳ ಮುಂದಾಳು.
ಫೆನ್ ತಂದೆ ವೈದ್ಯುತ್ ಇಂಜಿನಿಯರಿಂಗ್ನಲ್ಲಿ ಪದವಿ ಗಳಿಸಿದ್ದನು. ನಂತರ ಬಟ್ಟೆ ತಯಾರಿಕಾ ಕಂಪನಿಯಲ್ಲಿ ಕೆಲಸಕ್ಕೆ ಸೇರಿದನು. ನಂತರ ತಬೇತಿ ಪಡೆದು ಧರ್ಮ ಪ್ರಚಾರ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿದನು. ಜಾನ್ ತಾಯಿ ಈತನ ಸಹೋದ್ಯೋಗಿಯಾಗಿದ್ದಳು. 1917ರಲ್ಲಿ ನ್ಯೂಜೆರ್ಸಿಯಲ್ಲಿ ಜಾನ್ನ ಜನನವಾಯಿತು. ಬಟ್ಟೆ ತಯಾರಿಕಾ ಕಂಪನಿಯ ಮಾಲಿಕತ್ವ ಬದಲಾಗಿ ಜಾನ್ನ ತಂದೆ ಕೆಲಸ ಕಳೆದುಕೊಂಡನು. ಆಗ ಅಸಂಸಂದಲ್ಲಿ ಆರ್ಥಿಕ ಖಿನ್ನತೆಯ ಕಾಲ. ಈ ಸಂಕಷ್ಟದ ದಿನಗಳಲ್ಲಿ ಕಡುಕಷ್ಟದಿಂದ ಕುಟುಂಬವನ್ನು ಸಲಹಿದನು. ಈ ಕಾಲದಲ್ಲಿ ಅರ್ಹ ಬಡ ವಿದ್ಯಾರ್ಥಿಗಳ ನೆರವಿಗಾಗಿ ಸ್ಥಾಪಿಸಿದ್ದ ಶಾಲೆಯಲ್ಲಿ ಜಾನ್ ವಿದ್ಯಾಭ್ಯಾಸ ಸಾಗಿತು. ರಸಾಯನಶಾಸ್ತ್ರದ ಅಧ್ಯಯನಕ್ಕಾಗಿ ಜಾನ್ ಯೇಲ್ ವಿಶ್ವವಿದ್ಯಾಲಯ ಸೇರಿದನು. ಇಲ್ಲಿ ಮುಂದೆ ನೊಬೆಲ್ ಪ್ರಶಸ್ತಿ ಪಡೆದ ಲಾರ್ಸ್ ಆನ್ಸೇಜರ್ಫೆನ್ನ ಸಹಪಾಠಿಯಾಗಿದ್ದನು. ರಸಾಯನಶಾಸ್ತ್ರದಲ್ಲಿ ಪದವಿ ಮುಗಿಸಿದ ನಂತರಫೆನ್ ವ್ರೆನ್ಸ್ ಮೊನ್ಸಾಂಟೋ ಕೆಮಿಕಲ್ ಕಂಪನಿಯ ¥sóÁಸ್ಪೇಟ್ ವಿಭಾಗದಲ್ಲಿ ಕೆಲಸಕ್ಕೆ ಸೇರಿದನು. ಈ ಕಂಪನಿ ಸ್ಟಾನ್ ಕಂಪೆನಿಯನ್ನು ಖರೀದಿಸಿತು. ಹೊಸದಾಗಿ ಸೇರ್ಪಡೆಗೊಂಡ ಈ ಘಟಕದಲ್ಲಿ ಕ್ಲೋರಿನ್ನಿಂದ ಸಂಪನ್ನಗೊಳಿಸಿದ ಬೈಫಿûನೈಲ್ಗಳನ್ನು ಆರೋಕ್ಲೋರ್ ರಾಸಾಯನಿಕ ಸಂಯುಕ್ತಗಳನ್ನು ತಯಾರಿಸಲಾಗುತ್ತಿದ್ದಿತು. ಈ ಸಂಯುಕ್ತಗಳಿಗೆ ಅತ್ಯುತ್ತಮ ಶಾಖ ವರ್ಗಾಂತರ ಗುಣಗಳಿದ್ದು ವಿದ್ಯುತ್ ಪರಿವರ್ತಕಗಳಲ್ಲಿ (Transformers) ಶಾಖ ವಿಸರಣ ಮಾಧ್ಯಮಗಳಂತೆ ಬಳಕೆಯಾಗುತ್ತವೆ.ಫೆನ್ ಈ ಕಂಪನಿಯಲ್ಲಿ ಒಂದು ವರ್ಷವಿದ್ದನು. ನಂತರ ಮಿಷಿಗನ್ನಲ್ಲಿದ್ದ ಷಾಪ್ಲೆಸ್ ಕೆಮಿಕಲ್ ಕಂಪನಿ ಸೇರಿದನು. ಮೊನ್ಸಾಂಟೋ ಕಂಪನಿಯಲ್ಲಿದ್ದ ಜೇಮ್ಸ್ ಡಬ್ಲ್ಯೂ ಮುಲ್ಲೆನ್ ತಮ್ಮದೇ ಆದ ಒಂದು ಸಂಶೋಧನಾ ಪ್ರಯೋಗಾಲಯವನ್ನು ತೆರೆಯುವ ಹೊಂಗನಸನ್ನುಫೆನ್ ಮನದಲ್ಲಿ ಬಿತ್ತಿದ್ದನು. 1945ರಲ್ಲಿ ಎಕ್ಸಪೆರಿಮೆಂಟ್ ಇನ್ಕ್ ಸ್ಥಾಪನೆಯೊಂದಿಗೆ ಇದು ನನಸಾಯಿತು. ಇಲ್ಲಿ ಗುತ್ತಿಗೆ ಆಧಾರದ ಮೇಲೆ ಸರ್ಕಾರದ ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದಿತು. ಇಲ್ಲಿ ಏಳು ವರ್ಷಗಳ ಕಾಲವಿದ್ದಫೆನ್, ಅಪಾರ ಜ್ಞಾನ ಹಾಗೂ ವೃತ್ತಿ ನೈಪುಣ್ಯ ಗಳಿಸಿದನು. ಇಲ್ಲಿರುವಾಗ ಶಬ್ಥಾತೀತ ವೇಗದ ವಿಮಾನಗಳಲ್ಲಿ ಬಳಸುವ ರಾಸಾಯನಿಕ ನೋದಕಾರಿಗಳ (Propellent) ಬಗೆಗೆ ವಿಸ್ತೃತವಾಗಿ ಅರಿತನು. ಇದರ ಫಲವಾಗಿ ಪ್ರಿನ್ಸ್ಟನ್ ವಿಶ್ವ ವಿದ್ಯಾಲಯ ಜೆಟ್ ನೋದಕೀಕರಣ ಕುರಿತಾದ ಸಂಶೋಧನೆಗಾಗಿ ಪ್ರಾರಂಭಿಸಿದ್ದ ಯೋಜನೆಯ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುವ ಆಹ್ವಾನ ನೀಡಿತು. ರಾಕೆಟ್ನ ಇಂಧನವಾಗಿ ಬಳಸುವ ಹೈಡ್ರೊಝೈನ್ ಕುರಿತಾದ ಸಂಶೋಧನೆಗಳನ್ನು ಫೆನ್ ನಿರ್ವಹಿಸಿದನು. ಇದರ ಅಂಗವಾಗಿ ಬ್ರಿಟನ್ನ ವಿಜ್ಞಾನಿಗಳೊಂದಿಗೆ ಕೆಲಸ ಮಾಡುವ ಅವಕಾಶ ದಕ್ಕಿತು.
ರಾಕೆಟ್ ಹಾಗೂ ವಿಮಾನಗಳ ಇಂಧನಗಳ ಅಧ್ಯಯನದಲ್ಲಿ ಉರಿಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಇಂಧನಗಳು ಹೊತ್ತು ಉರಿಯುವ ತಾಪಮಾನ, ರಾಸಾಯನಿಕ ಸಂಯೋಜನೆ ಬಹು ಸಂಕೀರ್ಣ ವಿದ್ಯಾಮಾನಗಳಾಗಿದ್ದು ಇವುಫೆನ್ನ ಗಮನ ಸೆಳೆದಿದ್ದವು. ಅಲ್ಪ ಕಾಲದಲ್ಲೇ ಉರಿಗಳು ಸಹ ಒಂದು ಬಗೆಯ ಜೀವಿಗಳಂತೆಫೆನ್ಗೆ ಭಾಸವಾಗತೊಡಗಿತು. ಉರಿಗಳು ಜೀವಿಗಳಂತೆ ಉಗಮಗೊಂಡು, ಅಸ್ತಿತ್ವಕ್ಕಾಗಿ ಇಂಧನ ಅವಲಂಬಿಸಿ , ಆರೋಗ್ಯಕರ ಕಾರ್ಯ ನಿರ್ವಹಣೆಗೆ ಆಮ್ಲಾಕಾರಕಗಳನ್ನು ಬೇಡುತ್ತಿದ್ದು ಅವು ಕ್ರಮೇಣ ವ್ಯಾಪಿಸಿ ಹಲವಾಗಿ, ನಿಧಾನ ಗತಿಯಲ್ಲಿ ನಂದಿ ಹೋಗುವುದು ಜೀವಿಯ ಜೀವನ ಕ್ರಮಕ್ಕಿಂತ ಬೇರೆಯಲ್ಲ ಎನಿಸಿತು. ಉರಿಯ ಒಳ ತಿರುಳು ಹೊರ ತಿರುಳಿಗಿಂತಲೂ ವಿಭಿನ್ನವಾಗಿರುತ್ತದೆ. ಇದೇ ನಿಜವಾದ ಉರಿಯ ಆತ್ಮ. ಇದರ ಅಧ್ಯಯನ ಬಹು ಕ್ಲಿಷ್ಟಕರ. ಏಕೆಂದರೆ ಇದರ ವ್ಯಾಪ್ತಿ ಅತ್ಯಲ್ಪ ಇದರ ತಾಪಮಾನ ವ್ಯತ್ಯಾಸ ತೀವ್ರ ಹಾಗೂ ಸಂಯೋಜನೆ ಸಂಕೀರ್ಣ ಇಂತಹ ಉರಿಯ ಮೇಲೆ ಪ್ರಯೋಗಗಳನ್ನು ಅರಿಯಲು , ಭೌತಶಾಸ್ತ್ರಜ್ಞರು ಕಣ ದೂಲಗಳನ್ನು ಬಳಸುವಂತೆ ಉರಿಯನ್ನು ಅರಿಯಲು ಅದೇ ಬಗೆಯ ತಂತ್ರಗಳಿಂದೇಕೆ ಸಾಧ್ಯವಾಗುವುದಿಲ್ಲ ಎಂಬ ಪ್ರಶ್ನೆಫೆನ್ನ್ನು ಕಾಡತೊಡಗಿತು. ಮೆಸಾಚುಸೆಟ್ಸ್ ಇನ್ಟಿಟಿಟ್ಯೂಟ್ ಆಫ್ಟೆಕ್ನಾಲಜಿಯ ಅಮೆಡರ್ ಹಾಗೂ ಫ್ರೆಡರಿಕ್ ಕೆಯೆಸ್, ಅನಿಗಳ ವರ್ಗಾವಣೆ ಗುಣ ಲಕ್ಷಣ ಅಳೆಯಲು ವಿಶಿಷ್ಟ ತಂತ್ರಗಳನ್ನು ರೂಪಿಸಿದ್ದರು. ಆದರೆ ಉರಿಗಳ ಅಧ್ಯಯನಕ್ಕೆ ಇವು ಅಷ್ಟೊಂದು ಸಮರ್ಪಕವಾಗಿರಲಿಲ್ಲ. ಇ.ಡಬ್ಲ್ಯೂ ಬೇಕರ್ ಮತ್ತು ಕೆ. ಬೀರ್ ಸಹ ಈ ನಿಟ್ಟಿನಲ್ಲಿ ವಿಭಿನ್ನ ಯೋಜನೆಯೊಂದನ್ನು ವಿವರಿಸಿದ್ದರು. 1929ರಲ್ಲಿ ಇವರಿಗಿಂತ ಇಪ್ಪತ್ತೈದು ವರ್ಷ ಮುಂಚೆಯೇ ಯೇಲ್ ವಿಶ್ವ ವಿದ್ಯಾಲಯದಲ್ಲಿದ್ದ ಟಿ.ಎಚ್.ಜಾನ್ಸನ್ ಪಾದರಸ ಪರಮಾಣುಗಳನ್ನು ಬಳಸಿ ಇವರಿಗಿಂತಲೂ ಉತ್ತಮ ತಂತ್ರವನ್ನು ವಿವರಿಸಿದ್ದನು. ಆದರೆ ಇದನ್ನು ಗಂಭೀರವಾಗಿ ಯಾರೂ ಪರಿಗಣಿಸಿರಲಿಲ್ಲ. ಈ ಅಧ್ಯಯನದ ಮುಂದುವರೆದ ಭಾಗವಾಗಿ ಫ್ರಾಂಕ್ಲಿನ್ ಇನ್ಸ್ಟಿಟ್ಯೂಟ್ನಲ್ಲಿರುವಾಗ ಜಾನ್ಸನ್ ರಾಸಾಯನಿಕ ಕ್ರಿಯೆಯಲ್ಲಿರುವ ಜಲಜನಕ್ಕಿಂತ ಭಾರವಾದ ಪರಮಾಣುಗಳ ವಿವರ್ತನ ವಿದ್ಯಾಮಾನವನ್ನು ಸಹ ಗುರುತಿಸಿದ್ದನು. ಆದರೆ ಇದನ್ನು ಪ್ರಕಟಿಸಿರಲಿಲ್ಲ. ಇದೇ ಸಮಯದಲ್ಲಿ ಗಟ್ಟಿಂಜೆನ್ನಲ್ಲಿದ್ದ ಫ್ರಿಷ್ಕ್ , ಎಸ್ಟರ್ಮನ್ ಮತ್ತು ಸ್ಟರ್ನ್ ಇದೇ ಫಲಿತಾಂಶ ಪಡೆದು, ಜಾನ್ಸನ್ಗಿಂತ ಎಂಟು ವಾರ ಮೊದಲೇ ಪ್ರಕಟಿಸಿದರು. ಇದಕ್ಕಾಗಿ ಸ್ಟರ್ನ್ಗೆ ನೊಬೆಲ್ ಪ್ರಶಸ್ತಿ ದಕ್ಕಿತು. ಸಂಶೋಧನೆಯಲ್ಲಿ ಬೇರೆಯವರಿಗಿಂತ 25 ವರ್ಷ ಮೊದಲಿದ್ದರೂ, ಪ್ರಕಟಣೆಯಲ್ಲಿ ಎಂಟು ವಾರ ಜಾನ್ಸನ್ ಹಿಂದಿದ್ದನು. ಹೀಗಾಗಿ ವಿಜ್ಞಾನದ ಮಹಾ ಆವಿಷ್ಕಾರವನ್ನು ನಡೆಸಿಯೂ ಅದರ ಕೀರ್ತಿ ದಕ್ಕದ ದುರ್ದೈವಿಯಾಗಿ ಜಾನ್ಸನ್ ಪರಿಗಣಿತನಾಗಿದ್ದಾನೆ. ಈ ಎಲ್ಲಾ ಹಿನ್ನೆಲೆಗಳನ್ನು ಪರಿಗಣಿಸಿಫೆನ್ ಹಾಗೂ ತಂಡ ರಾಕೆಟ್ನ ಇಂಧನ , ಅದು ಹೊತ್ತಿ ಉರಿಯುವ ಕ್ರಿಯೆ, ವಿಸರ್ಜನಾ ನಳಿಕೆಯ ಮೂಲಕ ಹೊರ ಬರುವ ವಿದ್ಯಾಮನದ ಸಂಪೂರ್ಣ ಅರಿವಿಗೆ ಯತ್ನಿಸಿ ಅದರಲ್ಲಿ ಸಾಫಲ್ಯ ಕಂಡರು. 1960ರ ವೇಳೆಗೆ ರಾಕೆಟ್ನಂತಹ ಅತ್ಯಧಿಕ ವೇಗ ಕಾಯಗಳ ಇಂಧನ ಹೊತ್ತಿ ಉರಿಯುವ ಸ್ವರೂಪ ಸುಸ್ಪಷ್ಟವಾಯಿತು. ಇದಕ್ಕಾಗಿ ಫೆನ್ 2002ರಲ್ಲಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದನು.
ಕೊಯಿಚಿ , ತನಾಕ (1959--) 2002
Koichi , Tanaka
ಜಪಾನ್-ರಸಾಯನಶಾಸ್ತ್ರ-ಜೈವಿಕ ದ್ರವ್ಯರೋಹಿತ ಮಾಪಕದ ( Bio Mass Spectrometer) ನಿರ್ಮಾಣದ ಯಶಸ್ಸನ್ನು ಸಾಧಿಸಿದಾತ.
ಕೊಯಿಚಿ 3 ಆಗಸ್ಟ್ 1959ರಂದು ಜನಿಸಿದನು. ತಾಯ್ತನದ ವಯಸ್ಸು ಮೀರುವ ಸಮಯದಲ್ಲಿ ಮಗನನ್ನು ಪಡೆದಿದ್ದ ಈತನ ತಾಯಿ ಕೊಯಿಚಿ ಜನಿಸಿದ ಒಂದೇ ತಿಂಗಳಲ್ಲಿ ಮೃತಳಾದಳು. ಹೀಗಾಗಿ ಕೊಯಿಚಿ ಚಿಕ್ಕಪ್ಪನ ಆಸರೆಯಲ್ಲಿ ಬೆಳೆದನು. ಹದಿನೆಂಟನೇ ವರ್ಷದವರೆಗೆ ಇದು ಕೊಯಿಚಿಗೆ ತಿಳಿದಿರಲಿಲ್ಲ. ಆದ್ದರಿಂದ ಸಾಕಿದವರನ್ನೇ ತನ್ನ ಹೆತ್ತವರೆಂದು ಭಾವಿಸಿದ್ದನು. ನಿಜ ತಿಳಿದ ನಂತರವೂ ಅವರನ್ನು ತಂದೆ ತಾಯಿಗಳೆಂದು ಕೊಯಿಚಿ ಪರಿಗಣಿಸುತ್ತಿದ್ದಾನೆ. ಇವರಿಂದ ಕೊಯಿಚಿ ಕಾಯಕದ ಮಹತ್ವವನ್ನು ಅರಿತನು. 1966ರಲ್ಲಿ ಟೊಯಾಮ ನಗರದಲ್ಲಿ ಪ್ರಾಥಮಿಕ ಶಾಲೆಗೆ ಕೊಯಿಚಿ ಸೇರಿದನು. ಶಾಲಾ ಬಾಲಕನಾಗಿ ಈತ ಸಾಧಾರಣ ವಿದ್ಯಾರ್ಥಿಯಾಗಿದ್ದನು. 1970ರಲ್ಲಿ ಒಸಾಕಾದಲ್ಲಿ ಜರುಗಿದ ವಿಶ್ವ ಮೇಳಕ್ಕೆ ಬಾಲಕ ಕೊಯಿಚಿ ಹೋಗಿದ್ದನು. ಇಲ್ಲಿ ವಿಜ್ಞಾನದ ಬಗ್ಗೆ ಕೊಯಿಚಿಯ ಮನದಲ್ಲಿ ಒಂದು ಅಧ್ಬುತ ಚಿತ್ರಣ ಮೂಡಿತು. ಹಿgಯ ಪ್ರಾಥಮಿಕ ಶಾಲೆಯಲ್ಲಿ ಕೊಯಿಚಿಯ ಗುರುವಾಗಿದ್ದ ಕಯೊಚಿ ಸವೆಗಾಕಿ ಯಾವುದನ್ನೂ ಕಂಠಪಾಠ ಮಾಡಬಾರದೆಂದೂ, ವಿಚಾರಿಸುವುದು ಹಾಗೂ ವಿಶ್ಲೇಷಿಸುವುದು ಮಾತ್ರವೇ ವಿಜ್ಞಾನವೆಂದು ಮನದಟ್ಟು ಮಾಡಿದನು. ಪ್ರವೇಶ ಪರೀಕ್ಷೆ ಬರೆದು ಕೊಯಿಚಿ ವಿಶ್ವವಿದ್ಯಾಲಯದ ಪದವಿ ಅಧ್ಯಯನಕ್ಕೆ ಪ್ರವೇಶ ಪಡೆದನು. ಜಪಾನಿನಲ್ಲಿ ಪದವಿಗೆ ಸೇರುವ ಮುನ್ನ ಎಲ್ಲಾ ಕೌಟುಂಬಿಕ ದಾಖಲೆಗಳನ್ನು ಒದಗಿಸಬೇಕು. ಆಗ ಕೊಯಿಚಿಯ ಚಿಕ್ಕಪ್ಪ ಒಲ್ಲದ ಮನಸ್ಸಿನಿಂದ ಸಲ್ಲಿಸಿದ ವಿವರಗಳಿಂದ ಕೊಯಿಚಿಗೆ ತಾನು ಅವರ ನಿಜವಾದ ಮಗನಲ್ಲವೆಂದು ತಿಳಿದು ಬಂದಿತು. 1978ರಲ್ಲಿ ಟೊಹುಕು ವಿಶ್ವವಿದ್ಯಾಲಯದಲ್ಲಿ ವೈದ್ಯುತ್ ಇಂಜಿನಿಯರಿಂಗ್ ಪದವಿ ಪ್ರವೇಶ ಕೊಯಿಚಿಗೆ ದಕ್ಕಿತು. ಪದವಿಯ ಎರಡನೇ ವರ್ಷದಲ್ಲಿ ಜರ್ಮನಿ ಭಾಷೆಯಲ್ಲಿ ಅಲ್ಪ ಅಂಕ ಗಳಿಸಿ, ಮತ್ತೊಮ್ಮೆ ಅದೇ ತರಗತಿಯಲ್ಲಿ ಮುಂದುವರೆಯುವ ಸ್ಥಿತಿ ಕೊಯಿಚಿಗೆ ಬಂದೊದಗಿತು. ಲೌಹಿಕ ಶಾಸ್ತ್ರದಲ್ಲಿ ವಿಖ್ಯಾತನಾಗಿದ್ದ ಕೊಟೊರೊ ಹೊಂಡ , ಯಾಗಿ ಅ್ಯಂಟೆನ್ ಸ್ವಾಮ್ಯ ಪಡೆದ ಹಿಡೆಟ್ ಸುಗು ಯಾಗಿ ಅರೆವಾಹಕಗಳಲ್ಲಿ ಅಧಿಕೃತವಾಣಿಯಾಗಿದ್ದ ಜುನ್ ಇಚಿಷಿಜಾತ ಟೊಹೊಕು ವಿಶ್ವವಿದ್ಯಾಲಯದ ಸಿಬ್ಬಂದಿಯಾಗಿದ್ದರು. ಇದು ವಿದ್ಯಾರ್ಥಿಗಳಲ್ಲಿ ಸಾಧನೆಯ ಪ್ರೇರಣೆಯನ್ನೊದಗಿಸಿದ್ದಿತು. ಪದವಿ ಮುಗಿದ ನಂತರ ಕೊಯಿಚಿ ಗೃಹೋಪಕರಣ ತಯಾರಿಸುವ ವೈದ್ಯುತ್ ಕಂಪನಿ ಸೇರಿದನು. ಇಲ್ಲಿ ಕೊಯಿಚಿ ಅಂತಹ ಯಶಸ್ಸನ್ನು ಕಾಣಲಿಲ್ಲ. ಅಲ್ಲದೆ ವೈದ್ಯುತ್ ಇಂಜಿನಿಯರಿಂಗ್ನಲ್ಲಿ ತನಗಿರುವ ಜ್ಞಾನ ಅಲ್ಪವೆಂದು ಭಾಸವಾಯಿತು. ಇದಕ್ಕೆ ಪರಿಹಾರವಾಗಿ, ವೈದ್ಯಕೀಯ ಉಪಕರಣ ತಯಾgಸುವ ಷಿಮಡ್ಜು ಕಂಪನಿಗೆ ಸೇರಲು ಶಿಫಾರಸ್ಸು ಮಾಡಬೇಕೆಂದು ತನ್ನ ಗುರುವಾದ ಅಡಚಿಯನ್ನು ಕೋರಿದನು. ಇದರ ಫಲವಾಗಿ ಕೊಯಿಚಿಗೆ ಕೆಲಸ ದಕ್ಕಿತಾದರೂ, ಆತನನ್ನು ಆತ ಬಯಸಿದ ಉಪಕರಣ ತಯಾರಿಕಾ ಘಟಕಕ್ಕೆ ಹಾಕದೆ ವೈಶ್ಲೇಷಿಕ ಉಪಕರಣ ವಿಭಾಗದಲ್ಲಿ ನಿಯೋಜಿಸಲಾಯಿತು. ಇದು ಮುಂದೆ ಕೊಯಿಚಿಗೆ ವರ ಪ್ರದಾನವೆಸಿತು. ಷುಮಡ್ಜುವಿನ ಮುಖ್ಯ Œಕಛೇರಿ ಕ್ಯೋಟೋ ನಗರದಲ್ಲಿದ್ದಿತು. ಜಪಾನಿನ ಒಂಬತ್ತು ಜನ ನೊಬೆಲ್ ಪ್ರಶಸ್ತಿ ವಿಜೇತರಲ್ಲಿ ಆರು ಜನ ಈ ನಗರದವರು ಎಂಬುದೊಂದು ವಿಶೇಷ. ಹಿಡೆಕಿ ಯುಕಾವ (1949) , ಷಿನಿಚಿರೋ ಟೊಮೊನಾಗ (1965) , ಕೆನಿಚಿ ಫುಕುಯಿ (1981) ,ರಯೊಜಿ ನೊಯೊರಿ (2001) ಕೊಯಿಚಿ ತನಾಕ (1932) ನೊಬೆಲ್ ಪ್ರಶಸ್ತಿ ಪಡೆದ ಕ್ಯೋಟೋ ನಗರವಾಸಿಗಳು. ಷಿಮಡ್ಜು ಕಂಪನಿ ಅರೆವಾಹಕ ಹಾಗೂ ಲೋಹಗಳ ಮೇಲ್ಮೈ ಸ್ವರೂಪವನ್ನು ಲೇಸರ್ ಕಿರಣದಿಂದ ಓದಿ ನಕಾಶೆಗೊಳಿಸುವ ಉಪಕರಣ ನಿರ್ಮಾಣದ ಯೋಜನೆ ಹಮ್ಮಿಕೊಂಡಿದ್ದಿತು. ಈ ಕಂಪನಿಗೆ ಪ್ರತಿಸ್ಪರ್ಥಿಯಾಗಿದ್ದ ಜರ್ಮನಿಯ ಕಂಪನಿ ಇವರಿಗಿಂತಲೂ ಉತ್ತಮವಾದ ಇಂತಹುದೇ ಉಪಕರಣ ನಿರ್ಮಿಸಿದ್ದಿತು. ಆದ್ದರಿಂದ ಇದಕ್ಕೆ ಪರ್ಯಾಯವಾಗಿ ಜೈವಿಕ ಪದಾರ್ಥಗಳ ಲಕ್ಷಣ ಹರಿಯುವ ಯತ್ನ ನಡೆಸಲಾಯಿತು. ಇದಕ್ಕಾಗಿ ಲೇಸರ್ ಚೈತನ್ಯವನ್ನು ಹೀರಿಕೊಂಡು, ವಿನಾಶಗೊಳ್ಳದಂತೆ ಬೃಹತ್ ಅಣುಗಳನ್ನು ಅಯಾನಿಕರಣಗೊಳಿಸುವ ಮಾಧ್ಯಮದ ಹುಡುಕಾಟಕ್ಕೆ ಕೊಯಿಚಿಯನ್ನು ನಿಯೋಜಿಸಲಾಂ¬ತು. ತಾನು ಹಿಂದೆಂದೂ ಅಭ್ಯಾಸ ಮಾಡದ ರಾಸಾಯನಿಕಶಾಸ್ತ್ರದ ಪರಿಧಿಗೆ ಧುಮುಕುವ ಅನಿವಾರ್ಯತ ಕೊಯಿಚಿಗೆ ಬಂದೊದಗಿತು. ಈ ಸಂಶೋಧನೆಯ ಅಂಗವಾಗಿ ಕೊಯಿಚಿ ನೂರಾರು ಮಾಧ್ಯಮಗಳನ್ನು ತನ್ನ ಪರೀಕ್ಷೆಗೆ ಒಡ್ಡಿದನು. 1985ರಫೆಬ್ರವರಿಯಲ್ಲಿ ಪ್ರಯೋಗಕ್ಕಾಗಿ ಸಿದ್ದಪಡಿಸಿದ್ದ ಶುದ್ಧ ಕೊಬಾಲ್ಟ್ನ ಅತಿಸೂಕ್ಷ್ಮ ಪುಡಿ ಗ್ಲಿಸೆರಿನ್ನಿಂದ ಕಲುಷಿತಗೊಂಡಿತು. ಇದನ್ನು ಸಂಶೋಧನಾ ತ್ಯಾಜ್ಯವೆಂದು ಕೊಯಿಚಿ ಪರಿಗಣಿಸಿದ್ದನು. ಆದರೆ ಬಾಲ್ಯದಲ್ಲಿ ಆತನ ಅಜ್ಜಿ ಯಾವುದನ್ನೇ ಆಗಲಿ ನಿರರ್ಥಕವೆಂದು ಬಿಸುಡಬಾರದೆಂದು ಮೇಲಿಂದ ಮೇಲೆ ಹೇಳುತ್ತಿದ್ದಳು. ಇದು ಕೊಯಿಚಿಯ ಮನದಾಳದಿಂದ ಮೇಲೆದ್ದಿತು. ಹೀಗಾಗಿ ಕಲುಷಿತ ಪ್ರತಿಚಯದ (Specimen) ಮೇಲೆ ಕೊಯಿಚಿ ಕೆಲ ಪ್ರಯೋಗಗಳನ್ನು ನಡೆಸಿದನು. ಆಶ್ಚರ್ಯವೆಂಬಂತೆ ಕೊಯಿಚಿ ಯಾವ ಮಾಧ್ಯಮಕ್ಕಾಗಿ ತಡಕಾಡುತ್ತಿದ್ದನೋ ಅದು ತಾನಾಗಿಯೇ ಕಾಲಿಗೆ ತಾಗಿ ಸಿಕ್ಕಿದಂತಾಯಿತು. ಷಿಮಡ್ಜು ಕಂಪನಿ ಈ ದಿಶೆಯಲ್ಲಿ ಇನ್ನು ಹೆಚ್ಚಿನ ಸಂಶೋಧನೆ ನಡೆಸುವಚಿತೆ ಕೊಯಿಚಿಗೆ ಪೂರ್ಣ ಬೆಂಬಲ ನೀಡಿತು. ಇದರ ಫಲಿತಾಂಶವಾಗಿ ಜೈವಿಕ ವಸ್ತುಗಳ ದ್ರವ್ಯ ರೋಹಿತಮಾಪಕ (Mass Spectrometer)1987ರ ವೇಳೆಗೆ ನಿರ್ಮಾಣಗೊಂಡಿತು. ಇದು ಜಪಾನಿ ಭಾಷೆಯಲ್ಲಿ ಪ್ರಕಟಗೊಂಡಿದ್ದರಿಂದ ಬಾಹ್ಯ ಜಗತ್ತಿಗೆ ಅಜ್ಞಾತವಾಗಿಯೇ ಉಳಿಯಿತು. 1987ರಲ್ಲಿ ಕೊಯಿಚಿ ಮೊಟ್ಟ ಮೊದಲ ಬಾರಿಗೆ ಇಂಗ್ಲೀಷ್ನಲ್ಲಿ ತನ್ನ ಲೇಖನ ಪ್ರಕಟಿಸಿದಾಗ ಜಗತ್ತಿನಾದ್ಯಂತ ಇದಕ್ಕೆ ಮನ್ನಣೆ ದಕ್ಕಿತು. ಮುಂದೆ ಷಿಯುಡ್ಜು ಕಂಪನಿ ಹಲವಾರು ಜೈವಿಕ ದ್ರವ್ಯ ರೋಹಿತ ದರ್ಶಕಗಳನ್ನು ನಿರ್ಮಿಸಿ ಮಾರಿತು. ಸಂಶೋಧನಾಲಯಗಳಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆಗಳು ಬಂದವು. ಜೈವಿಕ ದ್ರವ್ಯ ರೋಹಿತದರ್ಶಕ ತಂತ್ರಗಳ ಅಭಿವೃದ್ಧಿಗಾಗಿ ಕೊಯಿಚಿ 2002ರಲಿ ನೊಬೆಲ್ ಪ್ರಶಸ್ತಿ ಪಡೆದನು.
ಕುರ್ಟ್, ವುಥ್ರಿಕ್ (1938--) 2002
Kurt , Wüthrich
ಸ್ವಿಟ್ಸರ್’ಲ್ಯಾಂಡ್-ರಸಾಯನಶಾಸ್ತ್ರ –ಜೈವಿಕ ಸಾಮಗ್ರಿಗಳ ಅಧ್ಯಯನದಲ್ಲಿ ಕಾಂತೀಯ ಅನುರಣನ ತಂತ್ರದ (Magnetic Resonanace Technique) ಬಳಕೆ ಪರಿಚಯಿಸಿದಾತ.
ಕುರ್ಟ್ 4 ಅಕ್ಟೋಬರ್ 1938 ರಂದು ಆರ್ಬರ್ಗ್ನಲ್ಲಿ ಜನಿಸಿದನು. ಈತನ ಕುಟುಂ¨ ಕೃಷಿ ಹಿನ್ನೆಲೆಯದು. ಕುರ್ಟ್ನ ಬಾಲ್ಯದ ನೆನಪುಗಳೆಲ್ಲವೂ ದಟ್ಟ ಗ್ರಾಮೀಣ ಪರಿಸರದವಾಗಿವೆ.ಫೆ್ರಂಚ್ ಪ್ರಾಮುಖ್ಯತೆ ಗಳಿಸಿದ್ದ ದ್ವಿ ಭಾಷಾ ಶಾಲೆಯಲ್ಲಿ ಓದಿದ ಕುರ್ಟ್ಫೆ್ರಂಚ್ ಸಾಹಿತ್ಯ ಸಂಸ್ಕೃತಿ, ಸಿನಿಮಾಗಳಲ್ಲಿ ಆಸಕ್ತಿ ತಳೆದನು. ರಸಾಯನಶಾಸ್ತ್ರದಲ್ಲಿ ಪದವಿ ಪಡೆದ ಕುರ್ಟ್, ರಾಸಾಯನಿಕ ಶಾಸ್ತ್ರದಲ್ಲಿ ಅನ್ವಯಿಸುವಂತೆ ಬೈಜಿಕ ಕಾಂತೀಯ ಅನುರಣನ ವಿಧಾನದ ಅಧ್ಯಯನ ನಡೆಸಿದನು. 1967ರಲ್ಲಿ ಈ ವಿಧಾನ ಬಳಸಿ ಜೈವಿಕ ಬೃಹತ್ ಅಣುಗಳ ಬಗೆಗೆ ಸಂಶೋಧನೆ ನಡೆಸಿದನು. 1965ರಲ್ಲಿ ಅಸಂಸಂಗಳಿಗೆ ಹೋಗಿ ಕ್ಯಾಲಿ¥sóÉರ್Çರ್ನಿಯಾ ವಿಶ್ವ ವಿದ್ಯಾಲಯದಲ್ಲಿ ವೃತ್ತಿ ಜೀವನ ಪ್ರಾರಂಭಿಸಿದನು. 1967ರಲ್ಲಿ ನ್ಯೂಜೆರ್ಸಿಯಾ ಮುರ್ರೆಹಲ್ನಲ್ಲಿರುವ ಬೆಲ್ ಪ್ರಯೋಗಾಲಯ ಸೇರಿದನು. ಇಲ್ಲಿ ಅತಿವಾಹಕ ಅಧಿಕ ವಿಯೋಜನೆಯ (High Resolution) ಬೈಜಿಕ ಕಾಂತೀಯ ಅನುರಣನ ದರ್ಶಕದ ( Nuclear Magnetic Resonance) ಪರಿಪಾಲನೆಯ ಹಾಗೂ ಸಂಶೋಧನೆಯ ಹೊಣೆ ಹೊತ್ತನು. 1969ರಲ್ಲಿ ಸ್ವಿಟ್ಸಲ್ರ್ಯಾಂಡ್ಗೆ ಹಿಂದಿರುಗಿ ಜೂರಿಕ್ನಲ್ಲಿದ್ದ ಎಟಿಎಚ್ ಸಂಸ್ಥೆ ಸೇರಿದನು. ಮುಂದೆ 32 ವರ್ಷಗಳ ಕಾಲ ಇಲ್ಲಿಯೇ ಉಳಿದನು. ಇಲ್ಲಿ ಕುರ್ಟ್ ಹಿಮೊಪೆÇ್ರೀಟೀನ್ಗಳ ರಾಚನಿಕ ಸ್ವರೂಪ ನಿರ್ಧರಿಸಲು ಯತ್ನಿಸಿದನು. 1976ರ ನಂತರ ಬೈಜಿಕ ಕಾಂತೀಯ ಅನುರಣನ ವಿಧಾನದಲ್ಲಿದ್ದ ಹೊಸ ತಂತ್ರಗಳನ್ನು ಬಳಸಿ ಬೈಜಿಕ ಅಣುಗಳ ತ್ರಿದಿಶಾ ಚಿತ್ರ ಪಡೆದನು. ಕುರ್ಟ್ ತನ್ನ ವೃತ್ತಿ ಜೀವನದಲ್ಲಿ ಹಲವಾರು ಸಂಕೀರ್ಣ ಬೈಜಿಕ ವಸ್ತುಗಳ ರಾಚನಿಕ ಸ್ವರೂಪ ನಿರ್ಧರಿಸಿದನು. ಇದಕ್ಕಾಗಿ ಕುರ್ಟ್ 2002ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಪೀಟರ್, ಅಗ್ರೆ (1949--) 2003
Peter Agre
ಅಸಂಸಂ-ರಸಾಯನಶಾಸ್ತ್ರ-ಕೋಶಪೆÇರೆಗಳಲ್ಲಿನ ಪ್ರೋಟಿನ್ಗಳ ಅಧ್ಯಯನದ ಮುಂದಾಳು.
1862ರಲ್ಲಿ ಅಬ್ರಹಂ ಲಿಂಕನ್ ಹೋಮ್ಸೈಡ್ ಮಸೂದೆಗೆ ಸಹಿ ಹಾಕುವ ಮೂಲಕ ಅಸಂಸಂದ ಪಶ್ಚಿಮ ಗಡಿಯಲ್ಲಿ ಜನಕ್ಕೆ ವ್ಯವಸಾಯಕ್ಕೆ ಭೂಮಿ ಹಂಚಿಕೆಯಾಗಿ, ಐದು ವರ್ಷಗಳ ನಂತರ ಅವರಿಗೆ ಮಾಲಿಕತ್ವ ಲಭ್ಯವಾಗುವ ಸದಾವಕಾಶ ದಕ್ಕಿತು. ಇದರಿಂದ ಆಕರ್ಷಿತರಾಗಿ ಹೊರದೇಶಗಳಿಂದ ಜನ ಬಂದು ಅಸಂಸಂಗಳಲ್ಲಿ ನೆಲೆಸತೊಡಗಿದರು. ಇಂತಹವರಲ್ಲಿ ನಾರ್ವೆ ಮೂಲದಿಂದ ಬಂದ ಪೀಟರ್ ತಾತನೂ ಸೇರಿದ್ದನು. ಪೀಟರ್ ತಂದೆ ಮಿನ್ನೆಸೊಟಾ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿ, ಎರಡನೇ ಜಾಗತಿಕ ಯುದ್ದದಲ್ಲಿ 3 ಎಂ ಕಂಪನಿ ಸೇರಿ ಸರ್ಕಾರದ ಪರವಾಗಿ ಪಾಲಿಮರ್ ಸಂಶೋಧನೆಯಲ್ಲಿ ಭಾಗಿಯಾಗಿದ್ದನು. 30 ಜನವರಿ 1949ರಂದು ಪೀಟರ್ ಜನನವಾಯಿತು. 1954ರಲ್ಲಿ ರಸಾಯನಶಾಸ್ತ್ರ ಹಾಗೂ 1962ರಲ್ಲಿ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ಪೌಲಿಂಗ್ ಲಿನಸ್ ಕಾರ್ಲ್ ಪೀಟರ್ನ ತಂದೆಯ ಸ್ನೇಹಿತನಾಗಿದ್ದನು. ಈತ ಹಲವಾರು ಪೀಟರ್ ಮನೆಯಲ್ಲಿದ್ದನು. ಇದು ಪೀಟರ್ನ ಮೇಲೆ ಅಗಾಧ ಪ್ರಭಾವ ಬೀರಿದ್ದಿತು. 1970ರಲ್ಲಿ ವೈದ್ಯಕೀಯ ವ್ಯಾಸಂಗಕ್ಕೆ ಕಾಲೇಜು ಸೇರುವ ಮುನ್ನ ಪೀಟರ್ ಇಡೀ ಏಷ್ಯಾದ ಪರ್ಯಟನೆ ನಡೆಸಿದನು. ಇದರಲ್ಲಿ ಗಣನೀಯ ದೂರವನ್ನು ಬೈಕ್ನಲ್ಲಿ ಒಬ್ಬಂಟಿಯಾಗಿ ಕ್ರಮಿಸಿದ ಸಾಹಿಸಿ ಈತ. ಇದೇ ವರ್ಷ ಜಾನ್ ಹಾ¥sóïಕಿನ್ಸನಲ್ಲಿ ವೈದ್ಯಕೀಯ ವ್ಯಾಸಂಗ ಪ್ರಾರಂಭಿಸಿದನು. 1975ರ ವೇಳೆಗೆ ಡಾಕ್ಟರೇಟ್ ಗಳಿಸಿದ ಪೀಟರ್ ನಾರ್ತ್ ಕೆರೋಲಿನಾದ ವೆಲ್ಕಮ್ ಲ್ಯಾಬೋರೇಟರಿ ಸೇರಿ ಸಂಶೋಧನೆ ಪ್ರಾರಂಭಿಸಿದನು. ಇಲ್ಲಿ ಪೀಟರ್ನ ಸಹೋದ್ಯೋಗಿಯಾಗಿದ್ದ ವಾನ್ ಕೆಂಪು ರಕ್ತ ಕಣದ ಪೆÇರೆಗಳ ರಾಚನಿಕ ಪ್ರೋಟಿನ್ಗಳಾದ ಸೈಕ್ಟ್ರಿನ್ಗಳನ್ನು ಕುರಿತಾದ ಸಂಶೋಧನೆ ನಡೆಸಿದ್ದನು. ಈತನೊಂದಿಗಿದ್ದ ಕ್ಯಾಂಪ್ಬೆಲ್ ಮೆಕ್ಮಿಲನ್ ಅನುವಂಶಿಕವಾದ ಸ್ಪೆರೋಸೈಟೋಸಿಸ್ ಲಕ್ಷಣ ಹೊಂದಿದ ಇಬ್ಬರು ಸಹೋದರಿಯರನ್ನು ಗುರುತಿಸಿದ್ದನು. ರಕ್ತಕೋಶಗಳು ಭಾರಿ ನವಿರಾಗಿ, ನಮ್ಯವಾಗುವಂತಾಗುವ (Flexible) ಅನಾರೋಗ್ಯವೇ ಸ್ಪೆರೋಸೈಟಿಸ್. ಇದು ಉಂಟಾದಾಗ ರಕ್ತ ಕೋಶದ ಆಕಾರದಲ್ಲಿ ವಿಕೃತಿಗಳಾಗುತ್ತವೆ. ವಾನ್ ಹಾಗೂ ಪೀಟರ್ ಈ ಕೋಶಗಳನ್ನು ಸಮೂಲಾಗ್ರವಾಗಿ ಅಭ್ಯಸಿಸಿ, ಇವುಗಳಲ್ಲಿ ಸ್ಪೆಕ್ಟಿನ್ ಕೊರತೆ ಇರುವುದನ್ನು ಖಚಿತಗೊಳಿಸಿದರು. ಸ್ಪೆರೋಸ್ಪೈಟೋಸಿಸ್ ಅಲ್ಪ ರಕ್ತ ಹೀನತೆಗೂ ಕಾರಣವಾಗುವುದನ್ನು ಗುರುತಿಸಿದರು. ಇದರ ನಂತರ ಪೀಟರ್ ರಕ್ತದ ಜೀವಭೌತಿಕ ಸ್ವರೂಪ ಅರಿಯುವಲ್ಲಿ ತನ್ನ ಗಮನ ಹರಿಸಿದನು. ರಕ್ತದಲ್ಲಿರುವ ಅರ್ಎಚ್ ಅಂಶ ಹಾಗೂ ಅದರ ಪ್ರಾಮುಖ್ಯತೆ ಎಲ್ಲರಿಗೂ ತಿಳಿದಿತ್ತಾದರೂ, ಇದರ ಅಣ್ವಯಿಕ ಸ್ವರೂಪ ಅಜ್ಞಾತವಾಗಿಯೇ ಉಳಿದಿದ್ದಿತು. ಆರ್ಎಚ್ ಪ್ರತಿಜನಕದಲ್ಲಿರುವ (Antigen) ಪಾಲಿಪೆಪ್ಟೈಡ್ನ್ನು ಪ್ರತ್ಯೇಕಿಸುವ ಯೋಜನೆಯನ್ನು ಪೀಟರ್ ಹಮ್ಮಿಕೊಂಡನು. ಇದು ಮುಂದೆ ರಕ್ತಕೋಶಗಳ ಪದರದ ಪ್ರೋಟಿನ್'ಗಳನ್ನು ಪ್ರತ್ಯೇಕಿಸುವಲ್ಲಿ ಅಂತ್ಯಗೊಂಡಿತು. ಈ ಕೋಶಗಳು ನೀರು ಸಾಗಾಣಿಕೆಯ ಕಾಲುವೆಗಳಂತೆ ಕಾರ್ಯ ನಿರ್ವಹಿಸುವುದು ಖಚಿತಗೊಂಡಿತು. ಉಳಿದ ವಿಜ್ಞಾನಿಗಳು ಕ್ಷ-ಕಿರಣ ಸ್ಪಟಿಕಾಲೇಖದೊಂದಿಗೆ ಈ ಪ್ರೋಟೀನ್ಗಳ ಸೂಕ್ಷ್ಮ ರಚನೆಯನ್ನು ವಿವರಿಸಿದರು. ಕೋಶ ಪೊರೆಗಳಲ್ಲಿನ ಪ್ರೋಟಿನ್ಗಳ ಅಧ್ಯಯನದಲ್ಲಿನ ಪರಿಶ್ರಮಕ್ಕಾಗಿ ಪೀಟರ್ 2003ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ರೊಡೆರಿಕ್, ಮೆಕ್ಕಿನೆನ್ (1956--) 2003
Roderick , MacKinnon
ಅಸಂಸಂ-ರಸಾಯನಶಾಸ್ತ್ರ- ಪ್ರೋಟಿನ್ಗಳು ದ್ರವ ಸಾಗಿಸುವ ಕಾಲುವೆಗಳಚಿತೆ ವರ್ತಿಸುವುವೆಂದು ತೋರಿಸಿದಾತ.
ರೊಡೆರಿಕ್ 19ಫೆಬ್ರವರಿ 1956 ರಂದು ಜನಿಸಿದನು. ಈತನ ತಂದೆ ಅಂಚೆ ಇಲಾಖೆಯಲ್ಲಿ ಕಾರ್ಮಿಕನಾಗಿದ್ದನು. ಸದಾ ಕುತೂಹಲಿಯಾಗಿದ್ದ ರೊಡೆರಿಕ್ ಬಾಲ್ಯದಲ್ಲಿ ಏಕೆ ? ಏನು ? ಹೇಗೆ? ಎಂಬ ಪ್ರಶ್ನೆಗಳಿಂದ ಸದಾ ಸಿದ್ದನಾಗಿರುತ್ತಿದ್ದನು. ನಾನಾ ಬಗೆಯ ಕಲ್ಲು ಕೀಟ, ಪತಂಗ, ಹಾವು, ಆಮೆಗಳ ಸಂಗ್ರಹ ರೊಡೆರಿಕ್ನ ಬಾಲ್ಯದ ಪ್ರಮುಖ ಹವ್ಯಾಸವಾಗಿದ್ದಿತು. ಬೋಸ್ಟನ್ನ ಮೆಸಾಚುಸೆಟ್ಸ್ನ ವಿಶ್ವವಿದ್ಯಾಲಯದಲ್ಲಿ ಜೀವ ರಸಾಯನಶಾಸ್ತ್ರದ ಅಧ್ಯಯನವನ್ನು ರೊಡೆರಿಕ್ ಆರಿಸಿಕೊಂಡನು. ಆದರೆ ಇದೇ ಮಾರ್ಗದಲ್ಲಿ ಮುಂದುವರೆಯದೆ ವೈದ್ಯಕೀಯ ವ್ಯಾಸಂಗಕ್ಕೆ ಟಫ್ಟ್ಸ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಸೇರಿದನು. ವೈದ್ಯಕೀಯದಲ್ಲಿ ವಿಶ್ಲೇಷಣೆಗಿಂತಲೂ ಜ್ಞಾಪಕಕ್ಕೆ ಹೆಚ್ಚಿನ ಪ್ರಾಶಸ್ತ್ಯವಿರುವುದು ರೊಡೆರಿಕ್ನಲ್ಲಿ ನಿರಾಶೆ ತಂದಿತು. ತಾನು ವೈದ್ಯಕೀಯಕ್ಕೆ ಸೇರಿ ತಪ್ಪು ಮಾಡಿರುವೆನೇನೋ ಎಂಬ ಸಂದೇಹವೂ ತಲೆದೋರಿತು. ಇದನ್ನು ಮರೆಯಲು ಗಣಿತದ ಅಭ್ಯಾಸವನ್ನು ಸಹ ಮುಂದುವರಿಸಿದನು. ಪದವಿ ಮುಗಿಸಿದ ನಂತರ ಹಾರ್ವರ್ಡ್ನಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ ರೊಡೆರಿಕ್ ಅಲ್ಪ ಕಾಲದಲ್ಲೇ ಕ್ಷ-ಕಿರಣ ಸ್ಪಟಿಕಶಾಸ್ತ್ರದಲ್ಲಿ (X-Ray Crystallography) ಪರಿಣಿತಿ ಗಳಿಸಿ ಪೆÇರೆ ಪ್ರೊಟೀನ್ ಜೀವ ರಸಾಯನ ಶಾಸ್ತ್ರದಲ್ಲಿ ತಲ್ಲೀನನಾದನು. ಟಾರ್ಸ್ಟೆನ್ ವೀಸೆಲ್ನ ಸಲಹೆಯ ಮೇರೆಗೆ ರೊಡೆರಿಕ್ ರಾಕ್ ಫೆಲರ್ ವಿಶ್ವವಿದ್ಯಾಲಯಕ್ಕೆ ಸೇರಿದನು. ಇಲ್ಲಿ ಪೆÇ್ರೀಟೀನ್ಗಳು ದ್ರವ ಸಾಗಿಸುವ ಕಾಲುವೆಗಳಂತೆ ವರ್ತಿಸುವ ಅಮೂಲಾಗ್ರ ಚಿತ್ರಣ ರೊಡೆರಿಕ್ ತಂಡದಿಂದ ಅನಾವರಣಗೊಂಡಿತು. ಈ ಸಾಧನೆಯನ್ನು ಗುರುತಿಸಿ 2003ರಲ್ಲಿ ನೊಬೆಲ್ ಪ್ರಶಸ್ತಿ ಪ್ರದಾನಿಸಲಾಯಿತು.
ಆ್ಯರನ್ , ಸಿಕ್ನೊವೆರ್ (1947--) 2004
Aaron , Clechanover (CHE.) 2004
ಇಸ್ರೇಲ್-ವೈದ್ಯಕೀಯ-ಸಾಮಾನ್ಯ ಪ್ರೊಟೀನ್ಗಳ ಶ್ರೇಣೀಕರಣದ ಕ್ರಿಯಾವಿನ್ಯಾಸ ವಿವರಿಸಿದಾತ.
ಆ್ಯರನ್ ಇಸ್ರೇಲ್ನ ಹೈಫ್ ಪಟ್ಟಣದಲ್ಲಿ ಜನಿಸಿದನು. ಈತ ಜನಿಸುವ ಒಂದು ತಿಂಗಳು ಮೊದಲು ವಿಶ್ವ ಸಂಸ್ಥೆ ಇಸ್ರೇಲ್ನ್ನು ಸ್ವತಂತ್ರ ದೇಶವೆಂದು ಪುರಸ್ಕರಿಸಿದ್ದಿತು. ಆದರೆ ಇಸ್ರೇಲ್ನ್ನು ಸುತ್ತುವರಿದಿದ್ದ ಅರಬ್ ರಾಷ್ಟ್ರಗಳು ಇದನ್ನು ಒಪ್ಪಲಿಲ್ಲ. ಇದರ ಫಲವಾಗಿ ಇಸ್ರೇಲ್ ಹಾಗೂ ಇತರ ಅರಬ್ ರಾಷ್ಟ್ರಗಳೊಂದಿಗೆ ಸುಮಾರು ಒಂದು ವರ್ಷಗಳ ಕಾಲ ತೀವ್ರ ಕದನ ಜರುಗಿತು. ಇದು ಆಗ ಹಸುಳೆಯಾಗಿದ್ದ ಆ್ಯರನ್ ಜೀವನದ ಮೇಲೂ ಪ್ರಭಾವ ಬೀರಿತು. ಮೂಲತ: ಪೆÇೀಲೆಂಡ್ನವರಾಗಿದ್ದ ಅ್ಯರನ್ ತಂದೆ ತಾಯಿ 1917ರಲ್ಲಿ ಯಹೂದಿ ಚಳುವಳಿಗೆ ಓಗೊಟ್ಟು, ಬ್ರಿಟಿಷ್ ಅಧೀನನಲ್ಲಿದ್ದ ಇಸ್ರೇಲ್ಗೆ ಬಂದು ನೆಲೆಸಿದ್ದರು. ಬಾಲ್ಯದಿಂದಲೂ ಆ್ಯರನ್ಗೆ ಸಸ್ಯ ಹಾಗೂ ಜೀವಿಗಳ ಬಗೆಗೆ ಅತೀವ ಆಸಕ್ತಿಯಿದ್ದಿತು. 1965ರಲ್ಲಿ ಇಸ್ರೇಲ್ ವಿಶ್ವವಿದ್ಯಾಲಯದ ಏಕೈಕ ವೈದ್ಯಕೀಯ ಕಾಲೇಜನ್ನು ಸೇರಿದ ಆ್ಯರನ್ 1969ರಲ್ಲಿ ಪದವಿ ಗಳಿಸಿದನು. ವೃತ್ತಿ ಜೀವನ ಪ್ರಾರಂಭಿಸಿದ ಅಲ್ಪ ಕಾಲದಲ್ಲೇ ಆ್ಯರನ್ಗೆ ರೋಗಗಳ ಬಗ್ಗೆ ಅದರ ಕಾರಣ ಹಿನ್ನೆಲೆಯ ಅರಿವಿನ ಬಗ್ಗೆ ಅತೃಪ್ತಿ ಮೂಡಿತು. ದೈನಂದಿನ ವೈದ್ಯಕೀಯ ವೃತ್ತಿಯಲ್ಲಿ ರೋಗ ಕಾರಣವನ್ನು ಅರಿಯುವುದಕ್ಕಿಂತಲೂ, ಅದರ ಪ್ರಮುಖ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡುವುದು ಜ್ಞಾನಾರ್ಜನೆಗೆ ನೆರವಾಗದೆಂದು ಭಾಸವಾಯಿತು. ಆದ್ದರಿಂದ ಆ್ಯರನ್ ಜೀವರಸಾಯನಶಾಸ್ತ್ರದಲ್ಲಿ ಹೆಚ್ಚಿನ ಅಧ್ಯಯನ ಕೈಗೆತ್ತಿಕೊಂಡನು.
ಸ್ಯಾನ್’ಫ್ರಾನ್ಸಿಸ್ಕೊದಕ್ಯಾಲಿಫೊರ್ನಿಯಾವಿಶ್ವವಿದ್ಯಾಲಯದಲ್ಲಿದ್ದ ಅವ್ರಮ್ ಹೆರ್ಷಕೋ ಹೈ¥sóÁದಲ್ಲಿ ಹೊಸದಾಗಿ ಮುಖ್ಯಸ್ಥನಾಗಿ ಪ್ರಾರಂಭವಾಗಿದ್ದ ವೈದ್ಯಕೀಯ ನೇಮಕಗೊಂಡನು. ಈತನ ಕೈಕೆಳಗೆ ಆ್ಯರನ್ ಸಂಶೋಧನೆಗೆ ಸೇರಿದನು. ಡಾಕ್ಟರೇಟ್ ಗಳಿಸಿದ ನಂತರ ರಾಷ್ಟ್ರೀಯ ನೀತಿಗನುಗುಣವಾಗಿ 1973ರಿಂದ 1976 ರವರೆಗೆ ಕಡ್ಡಾಯ ಮಿಲಿಟರಿ ತರಭೇತಿ ಪಡೆದನು. ಕೋಶಗಳೊಳಗೆ ಸಾಮಾನ್ಯ ಪ್ರೊಟೀನ್ಗಳ ಶ್ರೇಣೀಕರಣದ (Gradation) ಕ್ರಿಯಾವಿನ್ಯಾಸ (Mechanism) ಹಾಗೂ ಕಾರಣಗಳನ್ನು ಕುರಿತಾಗಿ ಆ್ಯರನ್ ಪರಿಶೀಲನೆ ನಡೆಸತೊಡಗಿದನು. ಇದರ ಫಲವಾಗಿ ಯುಬಿಕ್ವಿಟಿನ್ ಮಧ್ಯವರ್ತಿ ಕ್ರಿಯೆಯಿಂದ ಜರುಗುವ ಅಪಶ್ರೇಣೀಕರಣದ (Degradation)ವಿವರವನ್ನು ಬಹಿರಂಗಗೊಳಿಸಿದನು. ಇದಕ್ಕಾಗಿ 2004ರಲ್ಲಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಗಳಿಸಿದನು.
ಆವ್ರ್ಯಾಮ್ , ಹೆರ್ಷ್ಕೊ (1937--) -2004
Avram Hershko
ಹಂಗರಿ -ವೈದ್ಯಕೀಯ-ಪ್ರೊಟೀನ್ಗಳು ಯುಬಿಕ್ವಿಟಿನ್ನ ಮಧ್ಯಸ್ಥಿಕೆಯಿಂದ ಅಪಶ್ರೇಣಿಕರಣಗೊಳ್ಳುವುದನ್ನು ಅನಾವರಣಗೊಳಿಸಿದನು.
ಬುಡಾಪೆಸ್ಟ್ನಿಂದ 150 ಕಿ.ಮೀ ದೂರದ ಕ್ಯಾರ್ಕ್ಯಾಗ್ ಎಂಬ ಸಣ್ಣ ಪಟ್ಟಣದಲ್ಲಿ 31 ಡಿಸೆಂಬರ್ 1937ರಂದು ಹೆರ್ಷ್ಕೋ ಜನನವಾಯಿತು. ಹೆರ್ಷ್ಕೊ ತಂದೆ ಪ್ರಾಥಮಿಕ ಶಾಲೆಯ ಉಪಾಧ್ಯಾಯಯನಾಗಿದ್ದನು. ಎರಡನೇ ಜಾಗತಿಕ ಯುದ್ದ ಪ್ರಾರಂಭವಾಗಿ ಹಂಗರಿ, ಜರ್ಮನಿಂiÀi ಹಿಟ್ಲರ್ನೊಂದಿಗೆ ಸೇರಿತು. ಹೆರ್ಷ್ಕೋ ತಂದೆ ಯಹೂದಿಯಾದುದರಿಂದ ಜೀತದಾಳಾಗಿ ಸೆರೆಹಿಡಿಯಲ್ಪಟ್ಟು ರಷ್ಯಾದ ಕದನ ಭೂಮಿಗೆ ವರ್ಗಾಯಿಸಲ್ಪಟ್ಟನು. ಇಲ್ಲಿ ರಷ್ಯಾದ ಸೆರೆಯಾಳಾದನು. 1944ರ ಅಂತ್ಯದ ವೇಳೆಗೆ ಹಿಟ್ಲರ್ ಒಂದೊಂದೇ ಯುದ್ದ ಸೋಲುತ್ತಾ ಹೋದಂತೆ ಹಂಗರಿಯ ಸರ್ವಾಧಿಕಾರ ಹೊರ್ತಿ, ಹಿಟ್ಲರ್ನಿಂದ ದೂರ ಸರಿಯಲು ಯತ್ನಿಸಿದನು. ಇದನ್ನು ಮೊದಲೇ ಆರಿತ ಹಿಟ್ಲರ್ ಹಂಗರಿಯನ್ನು ಆಕ್ರಮಿಸಿ ಯಹೂದಿಗಳನ್ನು ಯಾತನಾ ಶಿಬಿರಗಳಾದ ಘೆಟ್ಟೋಗಳಿಗೆ ತಳ್ಳಿದನು. ಆಗ ಹೆರ್ಷ್ಕೋ ಕುಟುಂಬ ಕೂಡ ಸೆರೆಯಾಗಿ ಆಸ್ಟ್ರಿಯಾದ ಹಳ್ಳಿಯೊಂದರಲ್ಲಿ ಜೀತದಾಳುಗಳಾಗಿ ಬದುಕಿ ನಂತರ ಜರ್ಮನಿಗೆ ಬಂದು ನೆಲೆಸಿತು. ಈ ಸಮಯದಲ್ಲಿ ಹಂಗರಿಯಲ್ಲಿ ಮೂರುವರೆ ಲಕ್ಷಕ್ಕೂ ಅಧಿಕ ಯಹೂದಿಗಳನ್ನು ಸೆರೆಹಿಡಿದು ಹತ್ಯೆ ಮಾಡಲಾಯಿತು 1945ರಲ್ಲಿ ರಷ್ಯಾ ಸೇನೆ ಹಂಗರಿಯನ್ನು ವಿಮೋಚನೆಗೊಳಿಸಿತು. ಯುದ್ದದಲ್ಲಿ ಕಣ್ಮರೆಯಾಗಿದ್ದ ಹೆರ್ಷ್ಕೋ ತಂದೆ, 1946ರಲ್ಲಿ ಮರಳಿ ಕುಟುಂಬ ಸೇರಿದನು. ಇವರು 1950ರಲ್ಲಿ ಹೊಸದಾU ನಿರ್ಮಾಣಗೊಂಡಿದ್ದ ಇಸ್ರೇಲ್ನ ಜೆರುಸಲೇಮ್ನಲ್ಲಿ ನೆಲೆಸಿದರು. ಇಲ್ಲಿ ಹೊಸದಾಗಿ ಹೀಬ್ರೂ ಭಾಷೆ ಕಲಿಯುವ ಅನಿವಾರ್ಯತೆ ಬಂದೊದಗಿತು. ಹೆರ್ಷ್ಕೋ ತಂದೆ, ಮತ್ತೊಮ್ಮೆ ಶಾಲಾ ಶಿಕ್ಷಕನಾಗಿ ಸೇರಿ ಮಕ್ಕಳನ್ನು ಕಡು ಕಷ್ಟದಿಂದ ಸಾಕಿ ತನ್ನೆಲ್ಲಾ ಗಳಿಕೆಯನ್ನು ಅವರಿಗೆ ಅತ್ಯುತ್ತಮ ವಿದ್ಯಾಭ್ಯಾಸ ಒದಗಿಸಲು ವಿನಿಯೋಗಿಸಿದನು. ಪ್ರೌಢಶಾಲೆ ಮುಗಿಸುವ ವೇಳೆಗೆ ಹೆರ್ಷ್ಕೋ ಹಲವಾರು ವಿಷಯಗಳಲ್ಲಿ ಆಸಕ್ತನಾಗಿದ್ದು, ಯಾವುದರಲ್ಲಿ ವಿದ್ಯಾಭ್ಯಾಸ ಮುಂದುವರೆಸಬೇಕೆಂಬ ಗೊಂದಲಕ್ಕೊಳಗಾದನು. 1956ರಲ್ಲಿ ಹೀಬ್ರೂ ವಿಶ್ವವಿದ್ಯಾಲಯದ ಹರಾಸಾ ವೈದ್ಯಕೀಯ ಕಾಲೇಜನ್ನು ಸೇರಿದನು. 1960ರಲ್ಲಿ ಪದವಿ ಗಳಿಸಿದ ನಂತರ ಮ್ಯಾಗರ್ ಮಾರ್ಗದರ್ಶನದಲ್ಲಿ ಜೀವ ರಸಾಯನಶಾಸ್ತ್ರದಲ್ಲಿ ಸಂಶೋಧನೆ ಪ್ರಾರಂಭಿಸಿದನು. 1969ರಿಂದ 1971 ರವರೆಗೆ ಸ್ಯಾನ್ಫ್ರಾನ್ಸಿಸ್ಕೋದ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯದ ಜೀವಭೌತ ಹಾಗೂ ಜೀವ ರಸಾಯನಶಾಸ್ತ್ರ ವಿಭಾಗದಲ್ಲಿ ಗೋರ್ಡನ್ ಟಾಮ್ಕಿನ್ಸ್ನೊಂದಿಗೆ ಅಧ್ಯಯನ ಮುಂದುವರೆಸಿದನು. 1971ರಲ್ಲಿ ಜೆರುಸಲೇಮ್ಂಗೆ ಹಿಂದುರುಗಿ ಹೈ¥sóÁದಲ್ಲಿ ಹೊಸದಾಗಿ ಪ್ರಾರಂಭವಾಗಿದ್ದ ವೈದ್ಯಕೀಯ ಕಾಲೇಜಿನಲ್ಲಿ ಜೀವರಸಾಯನಶಾಸ್ತ್ರ ವಿಭಾಗದ ಕಾರ್ಯದರ್ಶಿಯಾದನು. ಇಲ್ಲಿ ಆ್ಯರನ್ ಸಿಕ್ನೊವೆರ್ನೊಂದಿಗೆ ಪ್ರೊಟೀನ್ಗಳು ಯುಬಿಕ್ವಿಟಿನ್ನ ಮಧ್ಯಸ್ಥಿಕೆಯಿಂದ ಅಪಶ್ರೇಣಿಕರಣಗೊಳ್ಳುವುದನ್ನು (Degradation) ಅನಾವರಣಗೊಳಿಸಿದನು. ಇದಕ್ಕಾಗಿ 2004ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಇರ್ವಿನ್, ರೋಸ್ –(1939--) 2004
Irwin , Rose (CHE.) 2004
ಅಸಂಸಂ-ರಸಾಯನಶಾಸ್ತ್ರ - ಪ್ರೊಟೀನ್ ಅಪಶ್ರೇಣೀಕರಣವನ್ನು (Degradation) ಅನಾವರಣಗೊಳಿಸಿದಾತ.
ಇರ್ವಿನ್ 1939ರಲ್ಲಿ ನ್ಯೂಯಾರ್ಕ್ನಲ್ಲಿ ಜನಿಸಿದನು. ಇರ್ವಿನ್ ತಾಯಿ ಹಂಗರಿ ತಂದೆ ರಷ್ಯಾ ಮೂಲದವರಾಗಿದ್ದರು. ಪ್ರೌಢಶಾಲೆಯಲ್ಲಿರುವಾಗ ಮೆದುಳಿನ ಕ್ರಿಯಾಶೀಲತೆ ಕುರಿತಾಗಿ ಸಂಶೋಧನೆ ನಡೆಸಬೇಕೆಂದು ಆಸೆ ಇರ್ವಿನ್ ಮನದಲ್ಲಿದ್ದಿತು. ಬಿ-12 ವಿಟಮಿನ್ ಹೆಚ್ಚಳದಿಂದ ಇಲಿಗಳ ಅಂಗಾಂಶದಲ್ಲಿನ ಡಿಎನ್ಎ ಪ್ರಮಾಣದಲ್ಲಿ ಹೆಚ್ಚಳವಾಗುವುದರ ಅಧ್ಯಯನ ನಡೆಸಿ ಇರ್ವಿನ್ , 1948ರಲ್ಲಿ ಪದವಿಯನ್ನು 1952ರಲ್ಲಿ ಜೀವ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದನು. ಇರ್ವಿನ್ ಯುಬಿಕ್ವೇಷನ್ ಮಧ್ಯವರ್ತಿತ ಪ್ರೊಟೀನ್ ಅಪಶ್ರೇಣೀಕರಣವನ್ನು ಅನಾವರಣಗೊಳಿಸಿದನು. ಇದಕ್ಕಾಗಿ ಇರ್ವಿನ್ 2004ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ರಿಚರ್ಡ್ , ಆರ್ ಷ್ರಾಕ್ (1945--) 2005
Richard , R.Schrock
ಅಸಂಸಂ-ರಸಾಯನಶಾಸ್ತ್ರ- ಒಲೆಫಿûನ್ ಮೆಟಾಥಿಸಿಸ್ ಕ್ರಿಯೆಯ ಸಂಪೂರ್ಣ ವಿವರ ನೀಡಿದಾತ.
ಷ್ರಾಕ್ ಇಂಡಿಯಾನ ರಾಜ್ಯದ ಬರ್ನ್ನಲ್ಲಿ 4 ಜನವರಿ 1945ರಂದು ಜನಿಸಿದನು. ಕ್ಯಾಲಿ¥sóÉÇೀರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ಪ್ರೌಢ ಶಿಕ್ಷಣ ಮುಗಿಸಿದ ಷ್ರಾಗ್, 1976ರಲ್ಲಿಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯದಿಂದ 1967ರಲ್ಲಿ ರಸಾಯನಶಾಸ್ತ್ರದ ಪದವಿ ಪಡೆದನು. 1971ರಲ್ಲಿ ಹಾರ್ವರ್ಡ್ ವಿಶ್ವ ವಿದ್ಯಾಲಯದಿಂದ ಜೆ.ಎ ಓಸ್ಬೊರ್ನ್ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಗಳಿಸಿದನು. ನಂತರ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಜಾಕ್ ಲೆವಿಸ್ ಸಾಂಗತ್ಯದಲ್ಲಿ ಸಂಶೋಧನೆಗಳನ್ನು ಮುಂದುವರೆಸಿದನು. 1972ರಲ್ಲಿ ಇ.ಐ. ಡುಪಾಂಟ್ ಡೆ ನೆವತಾರ್ಸ್ ಹಾಗೂ ಕಂಪನಿ ಸೇರಿ ಜಾರ್ಜ್ ಪಾರ್ಷಲ್ ತಂಡದ ಪ್ರಯೋಗಾಲಯದಲ್ಲಿ ನಿಯೋಜಿತನಾದನು. 1975ರಲ್ಲಿ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದ ಷ್ರಾಕ್ 1980ರಲ್ಲಿ ಇಲ್ಲಿ ಪೂರ್ಣಾವಧಿ ಪ್ರಾಧ್ಯಾಪಕನಾದನು. ಷ್ರಾಕ್ ಒಲೆಫಿಸ್ ಮ್ಯಾಥಸಿಸ್ ಹೆಸರಿನ ವಿಶಿಷ್ಟ ಸಾವಯವ ಸಂಶ್ಲೇಷಣಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾನೆ. ಒಲೆಫಿûನ್ಸ್ ಮೆಟಾಥೀಸಿಸ್, ರಾಸಾಯನಿಕ ಕ್ರಿಯೆಗಳಲ್ಲಿ ಟ್ಯಾಂಟಲಮ್ ಆಲ್ಕಿಲಿಡೆನೆಸ್ಗಳ ಸಂಶ್ಲೇಷಣೆ ಬಹು ಮುಖ್ಯ ಸ್ಥಿತಿ. ಒಲೆಫಿûನ್ ವ್ಮೆಟಾಥಿಸಿಸ್ನ ಸಂಪೂರ್ಣ ರಾಸಾಯನಿಕ ಚಕ್ರದಲ್ಲಿ ಆಲ್ಕಲಿಡೈನೆಸ್ಗಳು ಕ್ರಿಯಾಪ್ರೇರಕ ಸಂಥಿಸ್ಥ ಸ್ಥಿತಿಯಲ್ಲಿರುತ್ತವೆ (Catalytic Critical State). ಷ್ರಾಕ್ ಸಂಶೋಧನೆಗಳಿಂದ ಒಲೆಫಿûನ್ ಮೆಟಾಥೀಸಿಸ್ ಕ್ರಿಯೆಯಲ್ಲಿ ಮೆಟಲೋಸೈಕ್ಲೋಬ್ಯುಟೇನ್ ಬಹು ಪ್ರಮುಖವಾದ ಮಧ್ಯವರ್ತಿಯೆಂದು ಖಚಿತವಾಯಿತು. ಷ್ರಾಕ್ನಿಂದ ಒಲೆಫಿûನ್ ಮೆಟಾಥೀಸಿಸ್ ಕ್ರಿಯೆಗೆ ಬೇಕಾಗುವ ಕ್ರಿಯಾಪ್ರೇರಕಗಳು (Catalyst) ಲಭ್ಯವಾದವು. ಒಲೆಫಿûನ್ ಮೆಟಾಥಿಸಿಸ್ ಕ್ರಿಯೆಯ ಸಂಪೂರ್ಣ ಅರಿವಿನಿಂದ ಜೀವಿಗಳಲ್ಲಿನ ಸಾರಜನಕಾಧಾರಿತ ಕಿಣ್ವಗಳ ಸ್ವರೂಪ ಸುಸ್ಪಷ್ಟಗೊಂಡಿತು. ಈ ಸಾಧನೆಗಾಗಿ ಷ್ರಾಕ್ 2005ರ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಸುಂದರವಾದ ಮರದ ಪೆಟ್ಟಿಗೆಗಳನ್ನು ತಯಾರಿಸುವುದರಲ್ಲಿ ನಿಪುಣವಾಗಿರುವ ಷ್ರಾಕ್ಗೆ ಅದು ಅತ್ಯಂತ ನೆಚ್ಚಿನ ಹವ್ಯಾಸವೂ ಆಗಿದೆ.
ರಾಬರ್ಟ್, ಎಚ್ ಗ್ರಬ್ಸ್ (1942--) 2005
Robert , H.Grubbs
ಅಸಂಸಂ-ರಸಾಯನಶಾಸ್ತ್ರ - ಒಲೆಫಿûನ್ ಮೆಟಾಥೀಸಿಸ್ ಹಾಗೂ ವಿಶಿಷ್ಟ ಬಹ್ವಂಗೀಕರಣದ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ನಡೆಸಿದಾತ.
ಗ್ರಬ್ಸ್ 27ಫೆಬ್ರವರಿ 1942ರಂದು ಕೆಂಟುಕಿ ಪ್ರಾಂತದ ಪೆÇಸವ್ಯಾಟ್ರಲ್ ಪಟ್ಟಣದಲ್ಲಿ ಜನಿಸಿದನು. ಬಾಲ್ಯವನ್ನು ಮಾರ್ಷೆಲ್ ಕೌಂಟಿಯಲ್ಲಿ ಕಳೆದ ಗ್ರಬ್ಸ್ , ಫ್ಲೊರಿಡಾ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಪದವಿ ಹಾಗೂ ಸ್ನಾತಕ ಪದವಿ ಗಳಿಸಿದನು. ಕೊಲಂಬಿಯಾ ವಿಶ್ವವಿದ್ಯಾಲಯದ ರೊನಾಲ್ಡ್ ಬ್ರೆಸ್ಲೋ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ 1968ರಲ್ಲಿ ಡಾಕ್ಟರೇಟ್ ಗಳಿಸಿದನು. ಮುಂದಿನ ದಿನಗಳಲ್ಲಿ ಕೆಲಕಾ¯ ಸ್ಟ್ಯಾನ್’ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಜೇಮ್ಸ್ ಕೋಲ್ಮನ್ ಸಾಂಗತ್ಯದಲ್ಲಿ ಪರಿಶ್ರಮಿಸಿದನು. ಮಿಷಿಗನ್ ವಿಶ್ವವಿದ್ಯಾಲಯ ಸೇರಿ ಬೊಧಕ ಸಿಬ್ಬಂದಿಯಾದನು. 1978 ರಲ್ಲಿ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ಟೆಕ್ನಾಲಜಿಯಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕನಾದನು. ಇಲ್ಲಿ ತನ್ನ ವಿದ್ಯಾರ್ಥಿಗಳೊಂದಿಗೆ ಸ್ಥಿತ್ಯಂತರ ಲೋಹಗಳನ್ನು (Transition Metals) ಒಳಗೊಂಡಂತಹ ಹೊಸ ಬಗೆಯ ರಾಸಾಯನಿಕ ಸಂಶ್ಲೇಷಣೆಗಳನ್ನು ರೂಪಿಸಿದನು. ಇದರ ಫಲವಾಗಿ ಎಸ್ಟರ್ಗಳನ್ನು ವಿನೈಲ್ ಈಥರ್ಗಳಾಗಿ ಪರಿವರ್ತಿಸುವ ಸಾಮಾನ್ಯ ತಂತ್ರ ದಕ್ಕಿತು. ಇದಕ್ಕಾಗಿ ಗ್ರಬ್ಸ್ ಹಾಗೂ ಸಂಗಡಿಗರು ವಿಶಿಷ್ಟ ಕ್ರಿಯಾಪ್ರೇರಕಗಳನ್ನು (Catalysts) ಪರಿಚಯಿಸಿದರು. ಗ್ರಬ್ಸ್ ಒಲೆಫಿûನ್ ಮೆಟಾಥೀಸಿಸ್ ಕ್ರಿಯಾಚಕ್ರದಲ್ಲಿ ಆಸಕ್ತನಾಗಿ ಹೊಸ ಬಗೆಯ ಬಹೃಂಗೀಕರಣದ (Polymerisation) ಸಾಧ್ಯತೆಯನ್ನು ಅನಾವರಣಗೊಳಿಸಿದನು. ಇಂತಹ ಬಹ್ವಂಗಿಗಳು ಹೊಸ ಸಾಮಾಗ್ರಿಗಳಿಗೆ ಕಾರಣವಾಗಿ ವೈವಿಧ್ಯಮಯ ವೈಜ್ಞಾನಿಕ ಹಾಗೂ ವ್ಯಾಹಾರಿಕ ಕ್ಷೇತ್ರಗಳಲ್ಲಿ ಬಳಕೆಯಾಗತೊಡಗಿದವು. ದ್ಯುತಿ ಹೊಂದಾಣಿಕೆಯಾಗಬಲ್ಲ ಅಕ್ಷಿಪಟಲಾಂತರ್ಗತ ಮಸೂರಗಳು ಇದರಿಂದ ಬಳಕೆಗೆ ಬಂದವು. ಹೊಸ ಸಂಶೋಧನೆಗಳು ದೈನಂದಿನ ವ್ಯಾವಹಾರಿಕ ಬಳಕೆಗೆ ಬದಲು ಅಧಿಕ ಪ್ರಮಾಣದ ಬಂಡವಾಳ ಹೂಡಿಕೆ ಮತ್ತು ಬೃಹತ್ ಕಂಪನಿಗಳ ನೆರವು ಬೇಕು. ಈ ಕಂಪನಿಗಳು ಲಾಭ ನಷ್ಟ, ನಿರ್ವಹಣೆಗಳನ್ನು ಅಳೆದು ಸುರಿದು ತೂಗಿ ನೀಡಿದ ಮೇಲೆಯೆ ಉತ್ಪಾದನೆಗೆ ಪ್ರಾರಂಭಿಸುತ್ತವೆ. ಇದನ್ನು ತಪ್ಪಿಸಲು ಗ್ರಬ್ಸ್ ಸ್ನೇಹಿತವಾದ ಮೈಕ್ ಗಿಯಾರ್ಡೆಲ್ಲೋ ವ್ಮೆಟೀರಿಯಲ್ ಇನ್ಕ್ ಸಂಸ್ಥೆ ಸ್ಥಾಪಿಸಿದನು. ಗ್ರಬ್ಸ್ ಇದಕ್ಕೆ ನೆರವಾದನು. ಒಲೆಫಿûನ್ ಮೆಟಾಥೀಸಿಸ್ ಹಾಗೂ ವಿಶಿಷ್ಟ ಬಹ್ವಂಗೀಕರಣದ ಕ್ಷೇತ್ರದಲ್ಲಿನ ಗಮನಾರ್ಹ ಕೊಡುಗೆಗಳಾಗಿ ಗ್ರಬ್ಸ್ 2005ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ರಿಚರ್ಡ್ , ಆರ್ ಷ್ರಾಕ್ (1945--) 2005
Richard , R.Schrock
ಅಸಂಸಂ-ರಸಾಯನಶಾಸ್ತ್ರ- ಒಲೆಫಿûನ್ ಮೆಟಾಥಿಸಿಸ್ ಕ್ರಿಯೆಯ ಸಂಪೂರ್ಣ ವಿವರ ನೀಡಿದಾತ.
ಷ್ರಾಕ್ ಇಂಡಿಯಾನ ರಾಜ್ಯದ ಬರ್ನ್ನಲ್ಲಿ 4 ಜನವರಿ 1945ರಂದು ಜನಿಸಿದನು. ಕ್ಯಾಲಿ¥sóÉÇೀರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ಪ್ರೌಢ ಶಿಕ್ಷಣ ಮುಗಿಸಿದ ಷ್ರಾಗ್, 1976ರಲ್ಲಿಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯದಿಂದ 1967ರಲ್ಲಿ ರಸಾಯನಶಾಸ್ತ್ರದ ಪದವಿ ಪಡೆದನು. 1971ರಲ್ಲಿ ಹಾರ್ವರ್ಡ್ ವಿಶ್ವ ವಿದ್ಯಾಲಯದಿಂದ ಜೆ.ಎ ಓಸ್ಬೊರ್ನ್ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಗಳಿಸಿದನು. ನಂತರ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಜಾಕ್ ಲೆವಿಸ್ ಸಾಂಗತ್ಯದಲ್ಲಿ ಸಂಶೋಧನೆಗಳನ್ನು ಮುಂದುವರೆಸಿದನು. 1972ರಲ್ಲಿ ಇ.ಐ. ಡುಪಾಂಟ್ ಡೆ ನೆವತಾರ್ಸ್ ಹಾಗೂ ಕಂಪನಿ ಸೇರಿ ಜಾರ್ಜ್ ಪಾರ್ಷಲ್ ತಂಡದ ಪ್ರಯೋಗಾಲಯದಲ್ಲಿ ನಿಯೋಜಿತನಾದನು. 1975ರಲ್ಲಿ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದ ಷ್ರಾಕ್ 1980ರಲ್ಲಿ ಇಲ್ಲಿ ಪೂರ್ಣಾವಧಿ ಪ್ರಾಧ್ಯಾಪಕನಾದನು. ಷ್ರಾಕ್ ಒಲೆಫಿಸ್ ಮ್ಯಾಥಸಿಸ್ ಹೆಸರಿನ ವಿಶಿಷ್ಟ ಸಾವಯವ ಸಂಶ್ಲೇಷಣಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾನೆ. ಒಲೆಫಿûನ್ಸ್ ಮೆಟಾಥೀಸಿಸ್, ರಾಸಾಯನಿಕ ಕ್ರಿಯೆಗಳಲ್ಲಿ ಟ್ಯಾಂಟಲಮ್ ಆಲ್ಕಿಲಿಡೆನೆಸ್ಗಳ ಸಂಶ್ಲೇಷಣೆ ಬಹು ಮುಖ್ಯ ಸ್ಥಿತಿ. ಒಲೆಫಿûನ್ ವ್ಮೆಟಾಥಿಸಿಸ್ನ ಸಂಪೂರ್ಣ ರಾಸಾಯನಿಕ ಚಕ್ರದಲ್ಲಿ ಆಲ್ಕಲಿಡೈನೆಸ್ಗಳು ಕ್ರಿಯಾಪ್ರೇರಕ ಸಂಥಿಸ್ಥ ಸ್ಥಿತಿಯಲ್ಲಿರುತ್ತವೆ (Catalytic Critical State). ಷ್ರಾಕ್ ಸಂಶೋಧನೆಗಳಿಂದ ಒಲೆಫಿûನ್ ಮೆಟಾಥೀಸಿಸ್ ಕ್ರಿಯೆಯಲ್ಲಿ ಮೆಟಲೋಸೈಕ್ಲೋಬ್ಯುಟೇನ್ ಬಹು ಪ್ರಮುಖವಾದ ಮಧ್ಯವರ್ತಿಯೆಂದು ಖಚಿತವಾಯಿತು. ಷ್ರಾಕ್ನಿಂದ ಒಲೆಫಿûನ್ ಮೆಟಾಥೀಸಿಸ್ ಕ್ರಿಯೆಗೆ ಬೇಕಾಗುವ ಕ್ರಿಯಾಪ್ರೇರಕಗಳು (Catalyst) ಲಭ್ಯವಾದವು. ಒಲೆಫಿûನ್ ಮೆಟಾಥಿಸಿಸ್ ಕ್ರಿಯೆಯ ಸಂಪೂರ್ಣ ಅರಿವಿನಿಂದ ಜೀವಿಗಳಲ್ಲಿನ ಸಾರಜನಕಾಧಾರಿತ ಕಿಣ್ವಗಳ ಸ್ವರೂಪ ಸುಸ್ಪಷ್ಟಗೊಂಡಿತು. ಈ ಸಾಧನೆಗಾಗಿ ಷ್ರಾಕ್ 2005ರ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಸುಂದರವಾದ ಮರದ ಪೆಟ್ಟಿಗೆಗಳನ್ನು ತಯಾರಿಸುವುದರಲ್ಲಿ ನಿಪುಣವಾಗಿರುವ ಷ್ರಾಕ್ಗೆ ಅದು ಅತ್ಯಂತ ನೆಚ್ಚಿನ ಹವ್ಯಾಸವೂ ಆಗಿದೆ.
ವೈವೆಸ್, ಷಾವಿನ್ (1930--) 2005
Yves Chauvin
ಬೆಲ್ಜಿಯಂ-ರಸಾಯನಶಾಸ್ತ್ರ-ಪೆಟ್ರೊಲ್ ಇಂಧನಗಳ ಉತ್ತಮಿಕೆಯ ತಂತ್ರ ರೂಪಿಸಿದಾತ.
ವೈವೆಸ್, ಬೆಲ್ಜಿಯಂ ಹಾಗೂ ಫ್ರಾನ್ಸ್’ನ್ನುs ಪ್ರತ್ಯೇಕಿಸುವ ಲೈಸ್ ನದಿಯ ಗಡಿ ಪಟ್ಟಣದಲ್ಲಿ 10 ಅಕ್ಟೋಬರ್ 1930ರಂದು ಜನಿಸಿದನು. ಈತನ ಪೂರ್ವಿಕರು ಫ್ರೆಂಚ್ ಮೂಲದವರಾಗಿದ್ದು ಸಣ್ಣ ಕೃಷಿ ಹಿಡುವಳಿದಾರರಾಗಿದ್ದರು. ಈತನ ತಂದೆ ವೈದ್ಯುತ್ ಇಂಜಿನಿಯರಾಗಿದ್ದು ಎರಡೂ ಜಾಗತಿಕ ಯುದ್ದಗಳಲ್ಲಿ ಭಾಗವಹಿಸಿದ್ದನು. ಕೆಲಕಾಲ ಯುದ್ದ ಸೆರೆಯಾಳಾಗಿ ಕಾರಾಗೃಹದಲ್ಲಿದ್ದನು. ವೈವೆಸ್ ಎಂದಿಗೂ ಪ್ರತಿಭಾವಂತ ವಿದ್ಯಾರ್ಥಿಯೆನಿಸಿರಲಿಲ್ಲ. ಈತ ಸನ್ನಿವೇಶಗಳಿಗೆ ತಕ್ಕಂತೆ ವರ್ತಿಸಿ ರಸಾಯನಶಾಸ್ತ್ರವನ್ನು ಅಧ್ಯಯನ ಮಾಡಿದನು. ಒಮ್ಮೆ ಒಂದು ಕೆಲಸವನ್ನು ಒಪ್ಪಿದ ಮೇಲೆ ಅದನ್ನು ಏಕಾಗ್ರ ನಿಷ್ಟೆಯಿಂದ ಮಾಡಬೇಕೆನ್ನುವುದು ವೈವೆಸ್ ನಿಲುವು. ಪದವಿ ಗಳಿಸಿದ ನಂತರ ಕಾರ್ಖಾನೆಯೊಂದಕ್ಕೆ ಸೇರಿದ ವೈವೆಸ್ ಅಲ್ಪ ಕಾಲದಲ್ಲೇ ಅದರ ಏಕತಾನತೆಯಿಂದ ಬೇಸತ್ತು ರಾಜಿನಾಮೆ ನೀಡಿದನು. ಈ ಹಿಂದೆ ಮಾಡಿದ್ದನ್ನೇ ಅನುಸರಿಸು ಏಕೆಂದರೆ ಅದು ಈಗಾಗಲೇ ನಡೆಯುತ್ತಿದೆ ಎಂಬ ಕೆಲಸದ ಧೋರಣೆಯನ್ನು ವೈವೆಸ್ ತೀವ್ರವಾಗಿ ವಿರೋಧಿಸುತ್ತಿದ್ದನು. ಯಾವುದೇ ಹೊಸದರ ಉಗಮವೆಂದರೆ ಈ ಹಿಂದೆ ಸಮರ್ಪಕವೆಂದು ಒಪ್ಪಿದುದನ್ನು ಸರಿಯಾದ ಸಂದರ್ಭದಲ್ಲಿ ತೊರೆದು ಸ್ವಂತ ಮಾರ್ಗದಲ್ಲಿ ಸಾಗುವುದೇ ನಿಜವಾದ ಜ್ಞಾನವೆಂಬುದು ವೈವೆಸ್ ನಿಲುವು. 1960ರಲಿ ವೈವೆಸ್ ಫ್ರಾನ್ಸ್’ನ ಪೆಟ್ರೋಲ್ ಸಂಸ್ಥೆ ಸೇರಿದನು. ಯಾವುದೇ ತೈಲ ದಕ್ಷವೆನಿಸಬೇಕಾದರೆ (Efficient) ಅದರ ಆಕ್ಟೇನ್ ಸಂಖ್ಯೆ ಅಧಿಕವಿರಬೇಕು. ಇಂತಹ ವೃದ್ಧಿ ತರುವ ರಾಸಾಯನಿಕಗಳನ್ನು ಪೆಟ್ರೋಲ್ನೊಂದಿಗೆ ಬೆರೆಸಿದಾಗ ಇಂಧನದ ಕಾರ್ಯಕ್ಷಮತೆಯಲ್ಲಿ ಮಹತ್ತರ ಬದಲಾವಣೆಗಳಾಗುತ್ತವೆ. ಪ್ರೊಪೆಲಿನ್ನ್ನು ಐಸೋ ಹೆಕ್ಸಿನ್ಗಳಾಗಿಸಿ ಇಂಧನ ಸಂಕಲಕ (Additive) ಪಡೆಯುವ ವಿಧಾನ ಹಾಗೂ ತಂತ್ರ ರೂಪಿಸಲು ವೈವೆಸ್ ಯತ್ನಿಸಿ ಯಶಸ್ಸನ್ನು ಕಂಡನು. ಐಸೋಕ್ಟೇನ್ಸ್ನ್ ಪಾಲಿ ಇಥಿಲಿನ್ ತಯಾರಿಕೆಯ ಆರಂಭಿಕ ಕಚ್ಛಾ ಸಾಮಗ್ರಿಯಾಗಿ ಪರಿಚರಿಸಿದ ಮೊದಲಿಗ ವೈವೆಸ್. ಇದಕ್ಕಾಗಿ ವೈವೆಸ್ ಸಾವಯವ ಲೌಹಿಕ ರಸಾಯನಶಾಸ್ತ್ರದಲ್ಲಿ ಪರಿಶ್ರಮಿಸಿದನು. ವೈವೆಸ್ನ ಈ ಪರಿಶ್ರಮ ಸಂಪೂರ್ಣ ಫಲಪ್ರದ ತಂತ್ರಜ್ಞಾನದ ಉಗಮಕ್ಕೆ ಕಾರಣವಾಯಿತು. ಇದಕ್ಕಾಗಿ ವೈವೆಸ್ 2005ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. ಡಾಕ್ಟರೇಟ್ ಗಳಿಸದೆ, ಅನ್ವಯಿಕ, ಕೈಗಾರಿಕಾ ವಲಯದಲ್ಲಿದ್ದು ನೊಬೆಲ್ ಪ್ರಶಸ್ತಿಯಂತಹ ಶೈಕ್ಷಣಿಕ ಪರಿಶ್ರಮ ಬೇಡುವ ಪುರಸ್ಕಾರ ಹೊಂದಿರುವುದು ವೈವೆಸ್ ಹೆಗ್ಗಳಿಕೆ.
ಕೊರ್ನ್ಬರ್ಗ್ , ರೋಜೆರ್ ಡಿ 2006
Kornberg , D.Roger
ಅಸಂಸಂ-ರಸಾಯನಶಾಸ್ತ್ರ-ಪಜೀವಕೋಶದಲ್ಲಿ ಪ್ರೊಟೀನ್ ಉತ್ಪಾದನೆ ನಿಯಂತ್ರಣ ಕುರುತಾಗಿ ಸಂಶೋಧಿಸಿದಾತ.
ಪ್ರಾಣಿಗಳ ಮೂಲ ಘಟಕ ಜೀವಕೋಶ. ಜೀವಕೋಶಗಳ ಕ್ರಮಬದ್ಧ ಕಾರ್ಯ ನಿರ್ವಹಣೆಯಿಂದಲೇ ಜೀವಿ ಅಸ್ತಿತ್ವದಲ್ಲಿರಲು ಸಾಧ್ಯವಾಗಿದೆ. ಜೀವಕೋಶಗಳ ಕೇಂದ್ರದಲ್ಲಿ ನ್ಯೂಕ್ಲಿಯಸ್ ಅಥವಾ ಕೋಶಬೀಜವಿದೆ. ಇದನ್ನು ಕೋಶದ್ರವ್ಯ (Cytoplasm) ಆವರಿಸಿದೆ. ಜೀವಕೋಶಕ್ಕೆ ಬೇಕಾದ ಪೋಷಣೆ ಮತ್ತು ಶಕ್ತಿ ಉತ್ಪಾದನೆಗಾಗಿ ಕೋಶ ದ್ರವ್ಯದಲ್ಲಿ ಪ್ರೊಟೀನ್ ಉತ್ಪಾದನೆಯಾಗಬೇಕು. ಈ ಶಕ್ತಿ ಉತ್ಪಾದನೆಗಾಗಿ ಕೋಶ ದ್ರವ್ಯದಲ್ಲಿ ಪ್ರೊಟೀನ್ ಉತ್ಪಾದಕ ಘಟಕಗಳಿವೆ. ಇವು ಅಗತ್ಯಕ್ಕೆ ಬೇಕಾದಷ್ಟು ಪ್ರೊಟೀನ್ ಉತ್ಪಾದಿಸಲು ಜೀವಕೋಶದ ಬೀಜದಲ್ಲಿರುವ ಡಿ.ಎನ್.ಎಯಿಂದ ಮಾಹಿತಿ ರವಾನೆಯಾಗಬೇಕು. ಡಿ.ಎನ್.ಎ ಯಿಂದ ಇಂತಹ ಆದೇಶ ಮಾಹಿತಿ ಬರದೆ ಪ್ರೊಟೀನ್ ಉತ್ಪಾದನೆ ಸಾಧ್ಯವಿಲ್ಲ. ಇಂತಹ ಮಾಹಿತಿ ರವಾನೆಯ ವಿನ್ಯಾಸ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಆಲ್ಲದೆ ಈ ಆದೇಶ ಮಾಹಿತಿ ದೂತ ಆರ್ಎನ್ಎ (m-RNA=Messenger RNA) ಮೂಲಕ ಬರುತ್ತದೆ. ಜೀವದ ಅಸ್ತಿತ್ವಕ್ಕೆ ಇದು ನಿರಂತರವಾಗಿ ನಡೆಯಬೇಕಾದ ಕ್ರಿಯೆ. ಈ ಕ್ರಿಯೆಯನ್ನು ಪಾರಲಿಖಿತತೆ (Transcription)ಎನ್ನುತ್ತಾರೆ. ನಾನಾ ದೋಷ, ಹಾಗೂ ಕೊರತೆಗಳಿಂದಾಗಿ ಪಾರಲಿಖಿತ ಕ್ರಿಯೆಗೆ ಅಡ್ಡಿಯುಂಟಾಗಿ, ಪೆÇ್ರೀಟೀನ್ಗಳ ಉತ್ಪಾದನೆ ಕುಂಠಿತ ಅಥವಾ ಸ್ಥಗಿತವಾಗುತ್ತದೆ. ಆಗ ಪೋಷಕ ಅಂಶಗಳಿಲ್ಲದೆ ಜೀವಕೋಶಗಳು ಸಾಯುತ್ತವೆ. ಇದು ದೇಹದ ಅಂಗಾಂಶಗಳು ವೈಫಲ್ಯಕ್ಕೆ ಕಾರಣವಾಗುತ್ತದೆ. ಈ ಕಾರಣದಿಂದ ಮೂತ್ರಪಿಂಡ, ಕ್ಯಾನ್ಸರ್, ಹೃದಯ ರೋಗಗಳು ಬಾಧಿಸುತ್ತವೆಯೆಂದು ರೋಜರ್ ತೋರಿಸಿದ್ದಾನೆ. ಇದಕ್ಕಾಗಿ 2006ರ ನೊಬೆಲ್ ಪ್ರಶಸ್ತಿಯಿಂದ ಪುರಸ್ಕೃತನಾಗಿದ್ದನೆ. ಕಾರ್ನ್ಬರ್ಗ್ ತಂದೆ ಆರ್ಥರ್ ಕೊರ್ನ್ಬರ್ಗ್ 1959ರಲ್ಲಿ ಜೀವರಸಾಯನಿಕ ಕ್ರಿಯೆಗಳ ಸಂಶೋಧನೆಗಾಗಿ ನೊಬೆಲ್ ಪ್ರಶಸ್ತಿ ಪಡೆದಿದ್ದುದು ಗಮನಾರ್ಹ.