ಅಂಡ್ರೇ , ಫ್ರೆಡರಿಕ್ –ಕುರ್ನಾನ್ (1895--) 1956
Andre , Frederic Cournand
ಫ್ರಾನ್ಸ್-ಅಸಂಸಂ-ಹೃದಯ ರೋಗ ನಿರ್ಧಾರದ ವಿಧಾನ ರೂಪಿಸಿದಾತ.
1895ರಲ್ಲಿ ಪ್ಯಾರೀಸ್ನಲ್ಲಿ ಜನಿಸಿದ , ಕುರ್ನಾನ್, ಅಲ್ಲಿನ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯದಲ್ಲಿ ಪದವಿ ಗಳಿಸಿದನು. ಹೃದಯ ರೋಗಗಳ ಬಗೆಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಸಂಸಂಗಳ ಹೋಗಿ, ಅಲ್ಲಿ ಡಿಕಿನ್ಸನ್, ಡಬ್ಲ್ಯೂ ರಿಚರ್ಡ್ರೊಂದಿಗೆ, ಸುಮಾರು 35 ವರ್ಷಗಳ ಕಾಲ ಹೃದಯ ಸಂಬಂಧಿ ರೋಗಗಳ ಅಧ್ಯಯನ ಹಾಗೂ ಸಂಶೋಧನೆಯಲ್ಲಿ ನಿರತನಾಗಿದ್ದನು. ಇಲ್ಲಿ ಹೃದಯ ಹಾಗೂ ಶ್ವಾಸಕೋಶಗಳು ಕೆಲಸ ಮಡುವುದನ್ನು ಸ್ಪಷ್ಟವಾಗಿ ಅರಿತುಕೊಳ್ಳಲು ಹೊಸ ಮಾರ್ಗಗಳನ್ನು ಅನ್ವೇಷಿಸತೊಡಗಿದನು. 1929ರಲ್ಲಿ ವೆರ್ನರ್ ವ್ರೀಸ್ಮನ್ ರಬ್ಬರ್ ಕೊಳವೆಯೊಂದನ್ನು ತನ್ನ ಮುಂಗೈ ತೋಳಿನ ಅಪಧಮನಿಯ ಮೂಲಕ ಹೃದಯಕ್ಕೆ ಸಾಗಿಸುವ, ವಿಧಾನವನ್ನು ಜಾರಿಗೆ ತಂದಿದ್ದನು. ಕುರ್ನಾನ್ ಇದನ್ನು ಪರಿಷ್ಕರಿಸಿ, ಹೃದಯದ ಸ್ಥಿತಿಯನ್ನು ತಿಳಿಯಲು ಇದನ್ನು ಪರಿಷ್ಕರಿಸಿದನು. ಇಂತಹ ಹೃದ್ರೋಗ ನಿರ್ಧಾರ ಕುರ್ನಾನ್ ಪ್ರಯೋಗವೆಂದು ಖ್ಯಾತವಾಯಿತು. ಈಗಲೂ ಈ ವಿಧಾನ ವ್ಯಾಪಕವಾಗಿ ಬಳಕೆಯಲ್ಲಿದೆ. 1956ರಲ್ಲಿ ಕುರ್ನಾನ್, ವ್ರೀಸ್’ಮನ್ ಜೊತೆಗೆ ನೊಬೆಲ್ ಪ್ರಶಸ್ತಿ ಪಡೆದನು.
ಬೊವೆಟ್, ಡೇನಿಯಲ್ (1907-92) 1957
Bovet , Daniel
ಸ್ವಿಟ್ಸರ್ಲ್ಯಾಂಡ್ -ಫ್ರಾನ್ಸ್-ಇಟೆಲಿ - ಔಷಧಿಶಾಸ್ತ್ರ- ಶಸ್ತ್ರಚಿಕಿತ್ಸೆಗಾಗಿ ಸ್ನಾಯು ವಿಶ್ರಾಂತಕಗಳನ್ನು (Muscle Relaxant )¥ಪರಿಚಯಿಸಿದಾತ
ಬೊವೆಲ್ 23 ಮಾರ್ಚ್ 1907ರಂದು ನ್ಯೂಕಾಟೆಲ್ನಲ್ಲಿ, ಜನಿಸಿದನು. ಈತನ ತಂದೆ ಜಿನೇವಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿದ್ದನು. 1927ರಲ್ಲಿ ಜಿನೇವಾ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿಗಳಿಸಿ, ಪ್ರಾಣಿಗಳ ಅಂಗರಚನೆಯ ತೌಲನಿಕ ಅಧ್ಯಯನ ನಡೆಸಿ, 1929ರಲ್ಲಿ ಡಾಕ್ಟರೇಟ್ ಗಳಿಸಿದನು. 1929 ರಿಂದ 1947ರವರೆಗೆ ¥sóÁ್ರನ್ಸ್ನ ಪಾಸ್ತರ್ ಸಂಸ್ಥೆಯಲ್ಲಿ ಇ.ಕಾಕ್ಸ್ನ ಕೆಳಗೆ ಕೆಲಸಕ್ಕೆ ಸೇರಿ, ಮುಂದೆ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥನಾದನು. 1947ರಲ್ಲಿ ಇಟಲಿಯ ರೋಂನಲ್ಲಿರುವ ಇನ್ಸಿಟಿಟ್ಯ್ಯೂಟ್ ಸುಪೀರಿಯರ್ ಸಾನಿಟಾದ ನಿರ್ದೇಶಕನಾಗಿದ್ದ ಡೋಮಿನಿಕಾ ಮೊರೆಟ್ಟೋನ ಆಹ್ವಾನದ ಮೇರೆಗೆ ಸಂಶೋಧಕ ನಿರ್ದೇಶಕನಾದನು. ಪ್ಯಾರಿಸ್ನಲ್ಲಿರುವಾಗ ಬೊವೆಟ್ ಸಂಶೋಧನಾ ತಂಡವೊಂದರ ಸದಸ್ಯನಾಗಿದ್ದನು. ಈ ತಂಡ ಸ್ಟ್ರೆಪೆಲೊಕೊಕ್ಕಿ ಬ್ಯಾಕ್ಟೀರಿಯಾಗಳ ನಂಜು ನಿವಾರಣೆಗೆ ಫ್ರೆಂಟೋಸಿಲ್ ಮದ್ದನ್ನು ಪರಿಚಯಿಸಿತು. ಈ ಮದ್ದು ದೇಹದಲ್ಲಿ ಸಲ್ಫಾನಿಲಮೈಡ್ ಆಗಿ ಪರಿವರ್ತನೆಗೊಂಡು ಪ್ರಭಾವಶಾಲಿಯಾಗಿದ್ದಿತು. ಸಲ್ಫಾನಿಲಮೈಡ್ ಮದ್ದುಗಳು ಅಗ್ಗವಾಗಿದ್ದು ವ್ಯಾಪಕ ಬಳಕೆ ಕಂಡವು. ಬಾಹ್ಯ ಪರಿಸರದ ಕೆಲವು ಪದಾರ್ಥಗಳು ದೇಹ ತೀವ್ರ ಪ್ರತಿಕ್ರಿಯೆಗೊಳ್ಳುವಂತೆ ಮಾಡುತ್ತವೆ. ಇಂತಹ ಸ್ಥಿತಿಯನ್ನು ಒಗ್ಗದಿಕೆ (Allergy) ಎನ್ನುತ್ತಾರೆ. ಇದಕ್ಕೆ ದೇಹದಲ್ಲಿ ಬಿಡುಗಡೆಯಾಗುವ ಹಿಸ್ಟಮಿನ್ ಎಂಬ ರಾಸಾಯನಿಕವೇ ಕಾರಣ. ಹಿಸ್ಟಮಿನ್ ನಿಯಂತ್ರಣದ ಮೂಲಕ ಒಗ್ಗದಿಕೆಗೆ ಪರಿಹಾರ ಒದಗಿಸುವಲ್ಲಿ ಬೊವೆಟ್ ಶ್ರಮಿಸಿದನು. ಬೊವೆಟ್ ಬ್ರೆಝಿಲ್ಗೆ ಭೇಟಿ ನೀಡಿದಾಗ ಕ್ಯುರಾರೆ ಹೆಸರಿನ ನರ ವಿಷದ ಬಗೆಗೆ ಅರಿತನು. ಇದನ್ನು ಕುರಿತಾಗಿ ನಡೆಸಿದ ಮುಂದುವರೆದ ಸಂಶೋಧನೆಗಳಿಂದ ಬೊವೆಟ್ ಕ್ಯುರಾರೆಯನ್ನು ಹೋಲುವ ಹಲವಾರು ರಾಸಾಯನಿಕಗಳನ್ನು ಪರಿಚಯಿಸಿದನು. ಇವು ಶಸ್ತ್ರಚಿಕೆತ್ಸೆಯ ಸಮಯದಲ್ಲಿ ಸ್ನಾಯುಗಳಲ್ಲಿ ವಿಶ್ರಾಂತತೆಯನ್ನು ತರಬಲ್ಲವು. ಪ್ರತಿಹಿಸ್ಟಮೈನ್ಗಳ ಸಂಶ್ಲೇಷಣೆ ,ಚೋದನಿಕೆಗಳ (Hormone) ಸಂತುಲಿತ ಸ್ಥಿತಿ, ಪಾರ್ಕಿನ್ಸೋನಿಸಂ ರೋಗ ಚಿಕಿತ್ಸೆ ಕೇಂದ್ರ ನರಮಂಡಲ ಔಷಧಿಗಳಿಗೆ ತೋರುವ ಪ್ರತಿಕ್ರಿಯೆ ಕುರಿತಾಗಿ ಗಮನಾರ್ಹ ಸಂಶೋಧನೆ ನಡೆಸಿದನು. ದೇಹದ ಅಂಗ ಹಾಗೂ ರಾಸಾಯನಿಕಗಳ ಸಂಶ್ಲೇಷಿತ ರಾಸಾಯನಿಕಗಳ ಪ್ರಭಾವ ಅವುಗಳು ರಕ್ತನಾಳ ಹಾಗೂ ಅಸ್ತಿ ಪಂಜರದ ಸ್ನಾಯುಗಳ ಮೇಲೆ ಬೀರುವ ಪರಿಣಾಮು ಕುರಿತು ನಡೆಸಿದ ಸಂಶೋಧನೆಗಳಿಗಾಗಿ 1957ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಬೀಡ್ಲ್ , ಜಾರ್ಜ್ ವೆಲ್ಸ್ (1903-89) 1958
Beadle , George Wells
ಅಸಂಸಂ-ತಳಿಶಾಸ್ತ್ರ- ಜೀವ ರಾಸಾಯನಿಕ ತಳಿಶಾಸ್ತ್ರದ ಆದ್ಯರೊಲ್ಲೊಬ್ಬ
ವಾಹೂ ಪ್ರಾಂತದಲ್ಲಿ ಜನಿಸಿದ ಬೀಡ್ಲ್, ಪದವಿ ಗಳಿಸಿದ ನಂತರ ಊರಿಗೆ ಮರಳಬೇಕೆಂದು ನಿರ್ಧರಿಸಿದ್ದನಾದರೂ ತಳಿಶಾಸ್ತ್ರದಲಿದ್ದ ಅಪಾರ ಆಸಕ್ತಿಯಿಂದಾಗಿ , ಮೆಕ್ಕೆ ಜೋಳದ ತಳಿಶಾಸ್ತ್ರದ ಬಗ್ಗೆ ಅಧ್ಯಯನ ನಡೆಸಿ ತನ್ಮೂಲಕ ಡಾಕ್ಟರೇಟ್ ಗಳಿಸಲು ಕಾರ್ನೆಲ್ ವಿಶ್ವವಿದ್ಯಾಲಯ ಸೇರಿದನು. 1935ರಲ್ಲಿ ಪ್ಯಾರಿಸ್ಸಿನಲ್ಲಿ ಎಫ್ರೆಸಿಯೊಡನೆ ,ಡ್ರೊಸೊಫಿಲಿಯಾ ಕೀಟದ ಕಣ್ಣಿನ ಬಣ್ಣದ ಬಗ್ಗೆ ಸಂಶೋಧನೆ ನಡೆಸಿದನು. ಇದರ ಫಲಿತಾಂಶವಾಗಿ ಡ್ರೊಸೊಫಿಯಾ ಡಿಂಬದ (Larva) ಹಂತದಲ್ಲಿರುವಾಗ, ಅದರ ಕಣ್ಣಿನ ಕಂದುಗಳನ್ನು, ಬಾಹ್ಯದಿಂದ ಕಸಿ ಮಾಡಿ, ಪ್ರಯೋಗ ನಡೆಸಿ, ವಂಶವಾಹಕಗಳು ಕಣ್ಣಿನ ಬೆಳವಣಿಗೆಯಲ್ಲಿ ವಹಿಸುವ ಪಾತ್ರದ ಬಗ್ಗೆ ಸಂಶೋಧನೆ ನಡೆಸಿದನು. ನಂತರ ಪ್ಯಾರಿಸ್ನಿಂದ. ಅಸಂಸಂಗಳಿಗೆ ಹಿಂದುರುಗಿದ ಬೀಡ್ಲ್ ಸ್ಟ್ಯಾನ್’ಫೋರ್ಡ್’ನಲ್ಲಿ ಕೆಲಸಕ್ಕೆ ಸೇರಿ ಅಲ್ಲಿನ ಖ್ಯಾತ ಸೂಕ್ಷ್ಮಜೀವಶಾಸ್ತ್ರಜ್ಞನಾದ ಇ.ಎಲ್.ಟಾಟಮೆ ಜೊತೆ ತಳಿಶಾಸ್ತ್ರದ ಹಲವು ಮಗ್ಗುಲುಗಳನ್ನು ಕೆದುಕುವಲ್ಲಿ ನಿರತನಾದನು. ಇದರ ಫಲವಾಗಿ 1940ರಲ್ಲಿ ಕಂದು ಬ್ರೆಡ್ಗೆ ತಾಗುವ ಶಿಲೀಂಧ್ರ ಬಳಸಿ ಜೀವ ರಾಸಾಯನಿಕವಾಗಿ ತಳಿಗಳ ಮೇಲಾಗುವ ಪ್ರಭಾವವನ್ನು ಕುರಿತು ಅಧ್ಯಯನಕ್ಕೆ ತೊಡಗಿದನು. ಈ ಶಿಲೀಂಧ್ರಕ್ಕೆ, ವಯಸ್ಕ ಹಂತದಲ್ಲಿ ಒಂದೇ ವರ್ಣಕಾಯವಿದ್ದು, ಶೀಘ್ರವಾಗಿ ಬೆಳೆದು ಸಂಶೋಧನೆಗೆ ಅನುಕೂಲಕರವಾಗಿದ್ದಿತು. ಉನ್ನತ ಜೀವಿಗಳಲ್ಲಿ ಪ್ರತಿ ಗುಣಕ್ಕೂ ಎರಡು ವರ್ಣಕಾಯಗಳಿದ್ದು, ಪ್ರಬಲ ವಂಶವಾಹಕಗಳು ಸುಪ್ತವಾದ ಜೀವವಾಹಿನಿಗಳನ್ನು ಹಿಂದೂಡಿ, ಹಲವಾರು ಎದ್ದು ಕಾಣುವ ಗುಣಗಳಿಗೆ ಕಾರಣವಾಗುತ್ತವೆ. ಇದರಿಂದ ವಂಶವಾಹಕಗಳಲ್ಲಿ ಪ್ರಬಲ ಹಾಗೂ ಸುಪ್ತ ಯಾವುದು, ಯಾವ ಗುಣಕ್ಕೆ ಹೇಗೆ ಕಾರಣ ಎಂದು ಗುರುತಿಸುವುದು ಕಠಿಣ. ಆದರೆ ಈ ಜಟಿಲತೆ ಬೀಡ್ಲ್ ಆರಿಸಿಕೊಂಡ ಶಿಲೀಂಧ್ರಕ್ಕೆ ಇಲ್ಲ. ಬೀಡ್ಲ್ ಹಾಗೂ ಟಾಟಮೆ ಈ ಶಿಲೀಂಧ್ರವನ್ನೂ ಕ್ಷ-ಕಿರಣಗಳಿಗೆ ಒಡ್ಡಿ ಅವುಗಳನ್ನು ವಿಕಲ್ಪಗೊಳಿಸಿದರು. ಈ ವಿಕಲ್ಪಿತ ಕರೆಗಳಿಗೆ (Mutated Stains) ತಮ್ಮ ಬೆಳವಣಿಗೆಗೆ ಬೇಕಾದ ಪೌಷ್ಟಿಕಾಂಶವನ್ನು ತಾವೇ ಸಂಶ್ಲೇಷಿಸುವ ಸಾಮರ್ಥ್ಯ ಹೊಂದಿವೆ0iÉುೀ ಇಲ್ಲವೇ ಎಂದು ಪರಿಶೀಲಿಸಿದನು. ವಿಸ್ತ್ರತವಾದ ಈ ಬಗೆಯ ಪ್ರಯೋಗಗಳಿಂದ ಈ ಶಿಲೀಂಧ್ರದಲ್ಲಿನ ವಂಶವಾಹಕಗಳು, ಹಲವಾರು ಕಿಣ್ವಗಳ ಉತ್ಪಾದನೆಯನ್ನು ನಿಯಂತ್ರಿಸುತ್ತವೆಯೆಂದು ಅರಿತರು. ಇವರಿಗಿಂತ 30 ವರ್ಷ ಮೊದಲೇ ಗೆರಾಡ್ ಮಾನವನ ಚಯಾಪಚಯ (Metabolism) ಸಂಬಂದ ಕೋಶಗಳ ಬಗ್ಗೆ ಅಧ್ಯಯನ ನಡೆಸಿ ‘ಒಂದು ವಂಶವಾಹಿನಿ-ಒಂದು ಕಿಣ್ವ’ ಎಂದು ನೀಡಿದ್ದ ಹೇಳಿಕೆ ತಳಿಯೊಂದರ ಅರಿವು ಬೀಡ್ಲ್ ಹಾಗೂ ಟಾಟಮೆಗೆ ತಿಳಿದಿರಲಿಲ್ಲ . ಬೀಡ್ಲ್ ಹಾಗೂ ಟಾಟಮೆ ಪ್ರಯೋಗಾಧಾರಿತ ಸಂಶೋಧನೆ ಜೀವರಸಾಯನಶಾಸ್ತ್ರದ ಅಧಾರ ಸ್ತಂಭವಾಗಿ ಉಳಿದಿದೆ. ಈಗ ಸಾಬೀತಾಗಿರುವಂತೆ ಡಿಎನ್ಎ ಒಂದು ಕಾರ್ಯಶೀಲ ಘಟಕ ಒಂದು ಪೆಪ್ಟೈಡ್ ಸರಣಿಯನ್ನು ನಿಯಂತ್ರಿಸುತ್ತದೆ. 1958ರಲ್ಲಿ ಬೀಡ್ಲ್ ಟಾಟಂ ಹಾಗೂ ಲೆಡೆರ್ಬರ್ಗ್ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡು ಪುರಸ್ಕೃತರಾದರು.
ಬರ್ನೆಟ್ ಸರ್ (ಫ್ರಾಂಕ್) ಮ್ಯೂಕಫೆಯೇನ್ (1899-1985 ) 1960
Burnet, Sir (Frank) Macfarlane
ಆಸ್ಟ್ರೇಲಿಯಾ- ವೈದ್ಯಕೀಯ ವಿಜ್ಞಾನ- ವೈರಸ್ ಹಾಗೂ ಪ್ರತಿರೋಧ ವ್ಯವಸ್ಥೆಯನ್ನು ಕುರಿತು ಸಂಶೋಧಿಸಿದಾತ.
ಮೆಲ್ಬೋರ್ನ್ನಲ್ಲಿ ವೈದ್ಯಕೀಯ ಪದವಿ ಪಡೆದು 2 ವರ್ಷಗಳ ಕಾಲ ಲಂಡನ್ನಲ್ಲಿ ಬ್ಯಾಕ್ಟೀರಿಯಾಶಾಸ್ತ್ರ ಅಭ್ಯಸಿಸಿದ ನಂತರ ಬರ್ನೆಟ್, ಹುಟ್ಟೂರಾದ ಮೆಲ್ಬೋರ್ನ್ನಲ್ಲಿ ನೆಲೆಸಿದನು. 1930ರಲ್ಲಿ ಬ್ಯಾಕ್ಟೀರಿಯಾಗಳ ಮೇಲೆ ದಾಳಿ ಎಸಗುವ ವೈರಸ್ಗಳನ್ನು (ಬ್ಯಾಕ್ಟೀರಿಯಾಫೇಜ್) ಕಂಡುಹಿಡಿದ ಬರ್ನೆಟ್, ಕೋಳಿಯ ಭ್ರೂಣದಲ್ಲಿ ಅವುಗಳ ಕೃಷಿ ಪಡೆಯುವಲ್ಲಿ ಯಶಸ್ವಿಯಾದನು. ಇದರ ಫಲವಾಗಿ ಜೀವಿಯೊಂದರಲ್ಲಿ ವಿಷಕ್ಕೆ ವಿಷರೋಧಕ ಉತ್ಪಾದಿಸುವ ಸಾಮರ್ಥ್ಯ ಅದರ ಹುಟ್ಟಿನಿಂದ ಬರದೆ, ಅದರ ಭ್ರೂಣಾವಧಿಯಲ್ಲಿ ಅಭಿವೃದ್ದಿಗೊಳ್ಳುವುದೆಂದು ತೋರಿಸಿದನು. ಇದನ್ನು ಮುಂದೆ ಮೆಡಾನರ್ ಖಚಿತಗೊಳಿಸಿದನು. ಬರ್ನೆಲ್ ವಿಷಮಶೀತ ಜ್ವರದ ವೈರಸ್, ಕಾಲರಾ ವೈಬ್ರಿಯೋ, ಪೊಲಿಯೋ, ಹಾಗೂ ದ್ವಿ ಜ್ವರಗಳ ಸಾಂಕ್ರಾಮಿಕತೆಯ ಬಗೆಗೆ ಕೂಡ ಕೆಲಕಾಲ ಕೆಲಸ ಮಾಡಿದನು. 1951ರಲ್ಲಿ ಬರ್ನೆಲ್ ಮಂಡಿಸಿದ ತಾದ್ರೂಪಿಕ (Clonal) ಆಯ್ಕೆ ಸಿದ್ಧಾಂತ, ಪ್ರತಿರೋಧ ವ್ಯವಸ್ಥೆ ಹೇಗೆ ತನ್ನನ್ನು ಪರರಿಂದ ಗುರುತಿಸುವ ಸಾಮರ್ಥ್ಯಗಳಿಸುತ್ತದೆ0iÉುಂದು ವಿವರಿಸುತ್ತದೆ. ಇದು ಹಲವಾರು ಸಂಶೋಧಕದಿಂದ ಅಸಮ್ಮತಿ ಹಾಗೂ ಮುಂದಿನ ಕೆಲಸಗಳಿಗೆ ಪ್ರೇರಣೆ ಒದಗಿಸಿತು. 1960ರಲ್ಲಿ ಬರ್ನೆಲ್, ಮೆಡಾವರ್ ಜೊತೆ ನೊಬೆಲ್ ಪ್ರಶಸ್ತಿ ಹಂಚಿಕೊಂಡನು.
Andre , Frederic Cournand
ಫ್ರಾನ್ಸ್-ಅಸಂಸಂ-ಹೃದಯ ರೋಗ ನಿರ್ಧಾರದ ವಿಧಾನ ರೂಪಿಸಿದಾತ.
1895ರಲ್ಲಿ ಪ್ಯಾರೀಸ್ನಲ್ಲಿ ಜನಿಸಿದ , ಕುರ್ನಾನ್, ಅಲ್ಲಿನ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯದಲ್ಲಿ ಪದವಿ ಗಳಿಸಿದನು. ಹೃದಯ ರೋಗಗಳ ಬಗೆಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಸಂಸಂಗಳ ಹೋಗಿ, ಅಲ್ಲಿ ಡಿಕಿನ್ಸನ್, ಡಬ್ಲ್ಯೂ ರಿಚರ್ಡ್ರೊಂದಿಗೆ, ಸುಮಾರು 35 ವರ್ಷಗಳ ಕಾಲ ಹೃದಯ ಸಂಬಂಧಿ ರೋಗಗಳ ಅಧ್ಯಯನ ಹಾಗೂ ಸಂಶೋಧನೆಯಲ್ಲಿ ನಿರತನಾಗಿದ್ದನು. ಇಲ್ಲಿ ಹೃದಯ ಹಾಗೂ ಶ್ವಾಸಕೋಶಗಳು ಕೆಲಸ ಮಡುವುದನ್ನು ಸ್ಪಷ್ಟವಾಗಿ ಅರಿತುಕೊಳ್ಳಲು ಹೊಸ ಮಾರ್ಗಗಳನ್ನು ಅನ್ವೇಷಿಸತೊಡಗಿದನು. 1929ರಲ್ಲಿ ವೆರ್ನರ್ ವ್ರೀಸ್ಮನ್ ರಬ್ಬರ್ ಕೊಳವೆಯೊಂದನ್ನು ತನ್ನ ಮುಂಗೈ ತೋಳಿನ ಅಪಧಮನಿಯ ಮೂಲಕ ಹೃದಯಕ್ಕೆ ಸಾಗಿಸುವ, ವಿಧಾನವನ್ನು ಜಾರಿಗೆ ತಂದಿದ್ದನು. ಕುರ್ನಾನ್ ಇದನ್ನು ಪರಿಷ್ಕರಿಸಿ, ಹೃದಯದ ಸ್ಥಿತಿಯನ್ನು ತಿಳಿಯಲು ಇದನ್ನು ಪರಿಷ್ಕರಿಸಿದನು. ಇಂತಹ ಹೃದ್ರೋಗ ನಿರ್ಧಾರ ಕುರ್ನಾನ್ ಪ್ರಯೋಗವೆಂದು ಖ್ಯಾತವಾಯಿತು. ಈಗಲೂ ಈ ವಿಧಾನ ವ್ಯಾಪಕವಾಗಿ ಬಳಕೆಯಲ್ಲಿದೆ. 1956ರಲ್ಲಿ ಕುರ್ನಾನ್, ವ್ರೀಸ್’ಮನ್ ಜೊತೆಗೆ ನೊಬೆಲ್ ಪ್ರಶಸ್ತಿ ಪಡೆದನು.
ಬೊವೆಟ್, ಡೇನಿಯಲ್ (1907-92) 1957
Bovet , Daniel
ಸ್ವಿಟ್ಸರ್ಲ್ಯಾಂಡ್ -ಫ್ರಾನ್ಸ್-ಇಟೆಲಿ - ಔಷಧಿಶಾಸ್ತ್ರ- ಶಸ್ತ್ರಚಿಕಿತ್ಸೆಗಾಗಿ ಸ್ನಾಯು ವಿಶ್ರಾಂತಕಗಳನ್ನು (Muscle Relaxant )¥ಪರಿಚಯಿಸಿದಾತ
ಬೊವೆಲ್ 23 ಮಾರ್ಚ್ 1907ರಂದು ನ್ಯೂಕಾಟೆಲ್ನಲ್ಲಿ, ಜನಿಸಿದನು. ಈತನ ತಂದೆ ಜಿನೇವಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿದ್ದನು. 1927ರಲ್ಲಿ ಜಿನೇವಾ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿಗಳಿಸಿ, ಪ್ರಾಣಿಗಳ ಅಂಗರಚನೆಯ ತೌಲನಿಕ ಅಧ್ಯಯನ ನಡೆಸಿ, 1929ರಲ್ಲಿ ಡಾಕ್ಟರೇಟ್ ಗಳಿಸಿದನು. 1929 ರಿಂದ 1947ರವರೆಗೆ ¥sóÁ್ರನ್ಸ್ನ ಪಾಸ್ತರ್ ಸಂಸ್ಥೆಯಲ್ಲಿ ಇ.ಕಾಕ್ಸ್ನ ಕೆಳಗೆ ಕೆಲಸಕ್ಕೆ ಸೇರಿ, ಮುಂದೆ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥನಾದನು. 1947ರಲ್ಲಿ ಇಟಲಿಯ ರೋಂನಲ್ಲಿರುವ ಇನ್ಸಿಟಿಟ್ಯ್ಯೂಟ್ ಸುಪೀರಿಯರ್ ಸಾನಿಟಾದ ನಿರ್ದೇಶಕನಾಗಿದ್ದ ಡೋಮಿನಿಕಾ ಮೊರೆಟ್ಟೋನ ಆಹ್ವಾನದ ಮೇರೆಗೆ ಸಂಶೋಧಕ ನಿರ್ದೇಶಕನಾದನು. ಪ್ಯಾರಿಸ್ನಲ್ಲಿರುವಾಗ ಬೊವೆಟ್ ಸಂಶೋಧನಾ ತಂಡವೊಂದರ ಸದಸ್ಯನಾಗಿದ್ದನು. ಈ ತಂಡ ಸ್ಟ್ರೆಪೆಲೊಕೊಕ್ಕಿ ಬ್ಯಾಕ್ಟೀರಿಯಾಗಳ ನಂಜು ನಿವಾರಣೆಗೆ ಫ್ರೆಂಟೋಸಿಲ್ ಮದ್ದನ್ನು ಪರಿಚಯಿಸಿತು. ಈ ಮದ್ದು ದೇಹದಲ್ಲಿ ಸಲ್ಫಾನಿಲಮೈಡ್ ಆಗಿ ಪರಿವರ್ತನೆಗೊಂಡು ಪ್ರಭಾವಶಾಲಿಯಾಗಿದ್ದಿತು. ಸಲ್ಫಾನಿಲಮೈಡ್ ಮದ್ದುಗಳು ಅಗ್ಗವಾಗಿದ್ದು ವ್ಯಾಪಕ ಬಳಕೆ ಕಂಡವು. ಬಾಹ್ಯ ಪರಿಸರದ ಕೆಲವು ಪದಾರ್ಥಗಳು ದೇಹ ತೀವ್ರ ಪ್ರತಿಕ್ರಿಯೆಗೊಳ್ಳುವಂತೆ ಮಾಡುತ್ತವೆ. ಇಂತಹ ಸ್ಥಿತಿಯನ್ನು ಒಗ್ಗದಿಕೆ (Allergy) ಎನ್ನುತ್ತಾರೆ. ಇದಕ್ಕೆ ದೇಹದಲ್ಲಿ ಬಿಡುಗಡೆಯಾಗುವ ಹಿಸ್ಟಮಿನ್ ಎಂಬ ರಾಸಾಯನಿಕವೇ ಕಾರಣ. ಹಿಸ್ಟಮಿನ್ ನಿಯಂತ್ರಣದ ಮೂಲಕ ಒಗ್ಗದಿಕೆಗೆ ಪರಿಹಾರ ಒದಗಿಸುವಲ್ಲಿ ಬೊವೆಟ್ ಶ್ರಮಿಸಿದನು. ಬೊವೆಟ್ ಬ್ರೆಝಿಲ್ಗೆ ಭೇಟಿ ನೀಡಿದಾಗ ಕ್ಯುರಾರೆ ಹೆಸರಿನ ನರ ವಿಷದ ಬಗೆಗೆ ಅರಿತನು. ಇದನ್ನು ಕುರಿತಾಗಿ ನಡೆಸಿದ ಮುಂದುವರೆದ ಸಂಶೋಧನೆಗಳಿಂದ ಬೊವೆಟ್ ಕ್ಯುರಾರೆಯನ್ನು ಹೋಲುವ ಹಲವಾರು ರಾಸಾಯನಿಕಗಳನ್ನು ಪರಿಚಯಿಸಿದನು. ಇವು ಶಸ್ತ್ರಚಿಕೆತ್ಸೆಯ ಸಮಯದಲ್ಲಿ ಸ್ನಾಯುಗಳಲ್ಲಿ ವಿಶ್ರಾಂತತೆಯನ್ನು ತರಬಲ್ಲವು. ಪ್ರತಿಹಿಸ್ಟಮೈನ್ಗಳ ಸಂಶ್ಲೇಷಣೆ ,ಚೋದನಿಕೆಗಳ (Hormone) ಸಂತುಲಿತ ಸ್ಥಿತಿ, ಪಾರ್ಕಿನ್ಸೋನಿಸಂ ರೋಗ ಚಿಕಿತ್ಸೆ ಕೇಂದ್ರ ನರಮಂಡಲ ಔಷಧಿಗಳಿಗೆ ತೋರುವ ಪ್ರತಿಕ್ರಿಯೆ ಕುರಿತಾಗಿ ಗಮನಾರ್ಹ ಸಂಶೋಧನೆ ನಡೆಸಿದನು. ದೇಹದ ಅಂಗ ಹಾಗೂ ರಾಸಾಯನಿಕಗಳ ಸಂಶ್ಲೇಷಿತ ರಾಸಾಯನಿಕಗಳ ಪ್ರಭಾವ ಅವುಗಳು ರಕ್ತನಾಳ ಹಾಗೂ ಅಸ್ತಿ ಪಂಜರದ ಸ್ನಾಯುಗಳ ಮೇಲೆ ಬೀರುವ ಪರಿಣಾಮು ಕುರಿತು ನಡೆಸಿದ ಸಂಶೋಧನೆಗಳಿಗಾಗಿ 1957ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಬೀಡ್ಲ್ , ಜಾರ್ಜ್ ವೆಲ್ಸ್ (1903-89) 1958
Beadle , George Wells
ಅಸಂಸಂ-ತಳಿಶಾಸ್ತ್ರ- ಜೀವ ರಾಸಾಯನಿಕ ತಳಿಶಾಸ್ತ್ರದ ಆದ್ಯರೊಲ್ಲೊಬ್ಬ
ವಾಹೂ ಪ್ರಾಂತದಲ್ಲಿ ಜನಿಸಿದ ಬೀಡ್ಲ್, ಪದವಿ ಗಳಿಸಿದ ನಂತರ ಊರಿಗೆ ಮರಳಬೇಕೆಂದು ನಿರ್ಧರಿಸಿದ್ದನಾದರೂ ತಳಿಶಾಸ್ತ್ರದಲಿದ್ದ ಅಪಾರ ಆಸಕ್ತಿಯಿಂದಾಗಿ , ಮೆಕ್ಕೆ ಜೋಳದ ತಳಿಶಾಸ್ತ್ರದ ಬಗ್ಗೆ ಅಧ್ಯಯನ ನಡೆಸಿ ತನ್ಮೂಲಕ ಡಾಕ್ಟರೇಟ್ ಗಳಿಸಲು ಕಾರ್ನೆಲ್ ವಿಶ್ವವಿದ್ಯಾಲಯ ಸೇರಿದನು. 1935ರಲ್ಲಿ ಪ್ಯಾರಿಸ್ಸಿನಲ್ಲಿ ಎಫ್ರೆಸಿಯೊಡನೆ ,ಡ್ರೊಸೊಫಿಲಿಯಾ ಕೀಟದ ಕಣ್ಣಿನ ಬಣ್ಣದ ಬಗ್ಗೆ ಸಂಶೋಧನೆ ನಡೆಸಿದನು. ಇದರ ಫಲಿತಾಂಶವಾಗಿ ಡ್ರೊಸೊಫಿಯಾ ಡಿಂಬದ (Larva) ಹಂತದಲ್ಲಿರುವಾಗ, ಅದರ ಕಣ್ಣಿನ ಕಂದುಗಳನ್ನು, ಬಾಹ್ಯದಿಂದ ಕಸಿ ಮಾಡಿ, ಪ್ರಯೋಗ ನಡೆಸಿ, ವಂಶವಾಹಕಗಳು ಕಣ್ಣಿನ ಬೆಳವಣಿಗೆಯಲ್ಲಿ ವಹಿಸುವ ಪಾತ್ರದ ಬಗ್ಗೆ ಸಂಶೋಧನೆ ನಡೆಸಿದನು. ನಂತರ ಪ್ಯಾರಿಸ್ನಿಂದ. ಅಸಂಸಂಗಳಿಗೆ ಹಿಂದುರುಗಿದ ಬೀಡ್ಲ್ ಸ್ಟ್ಯಾನ್’ಫೋರ್ಡ್’ನಲ್ಲಿ ಕೆಲಸಕ್ಕೆ ಸೇರಿ ಅಲ್ಲಿನ ಖ್ಯಾತ ಸೂಕ್ಷ್ಮಜೀವಶಾಸ್ತ್ರಜ್ಞನಾದ ಇ.ಎಲ್.ಟಾಟಮೆ ಜೊತೆ ತಳಿಶಾಸ್ತ್ರದ ಹಲವು ಮಗ್ಗುಲುಗಳನ್ನು ಕೆದುಕುವಲ್ಲಿ ನಿರತನಾದನು. ಇದರ ಫಲವಾಗಿ 1940ರಲ್ಲಿ ಕಂದು ಬ್ರೆಡ್ಗೆ ತಾಗುವ ಶಿಲೀಂಧ್ರ ಬಳಸಿ ಜೀವ ರಾಸಾಯನಿಕವಾಗಿ ತಳಿಗಳ ಮೇಲಾಗುವ ಪ್ರಭಾವವನ್ನು ಕುರಿತು ಅಧ್ಯಯನಕ್ಕೆ ತೊಡಗಿದನು. ಈ ಶಿಲೀಂಧ್ರಕ್ಕೆ, ವಯಸ್ಕ ಹಂತದಲ್ಲಿ ಒಂದೇ ವರ್ಣಕಾಯವಿದ್ದು, ಶೀಘ್ರವಾಗಿ ಬೆಳೆದು ಸಂಶೋಧನೆಗೆ ಅನುಕೂಲಕರವಾಗಿದ್ದಿತು. ಉನ್ನತ ಜೀವಿಗಳಲ್ಲಿ ಪ್ರತಿ ಗುಣಕ್ಕೂ ಎರಡು ವರ್ಣಕಾಯಗಳಿದ್ದು, ಪ್ರಬಲ ವಂಶವಾಹಕಗಳು ಸುಪ್ತವಾದ ಜೀವವಾಹಿನಿಗಳನ್ನು ಹಿಂದೂಡಿ, ಹಲವಾರು ಎದ್ದು ಕಾಣುವ ಗುಣಗಳಿಗೆ ಕಾರಣವಾಗುತ್ತವೆ. ಇದರಿಂದ ವಂಶವಾಹಕಗಳಲ್ಲಿ ಪ್ರಬಲ ಹಾಗೂ ಸುಪ್ತ ಯಾವುದು, ಯಾವ ಗುಣಕ್ಕೆ ಹೇಗೆ ಕಾರಣ ಎಂದು ಗುರುತಿಸುವುದು ಕಠಿಣ. ಆದರೆ ಈ ಜಟಿಲತೆ ಬೀಡ್ಲ್ ಆರಿಸಿಕೊಂಡ ಶಿಲೀಂಧ್ರಕ್ಕೆ ಇಲ್ಲ. ಬೀಡ್ಲ್ ಹಾಗೂ ಟಾಟಮೆ ಈ ಶಿಲೀಂಧ್ರವನ್ನೂ ಕ್ಷ-ಕಿರಣಗಳಿಗೆ ಒಡ್ಡಿ ಅವುಗಳನ್ನು ವಿಕಲ್ಪಗೊಳಿಸಿದರು. ಈ ವಿಕಲ್ಪಿತ ಕರೆಗಳಿಗೆ (Mutated Stains) ತಮ್ಮ ಬೆಳವಣಿಗೆಗೆ ಬೇಕಾದ ಪೌಷ್ಟಿಕಾಂಶವನ್ನು ತಾವೇ ಸಂಶ್ಲೇಷಿಸುವ ಸಾಮರ್ಥ್ಯ ಹೊಂದಿವೆ0iÉುೀ ಇಲ್ಲವೇ ಎಂದು ಪರಿಶೀಲಿಸಿದನು. ವಿಸ್ತ್ರತವಾದ ಈ ಬಗೆಯ ಪ್ರಯೋಗಗಳಿಂದ ಈ ಶಿಲೀಂಧ್ರದಲ್ಲಿನ ವಂಶವಾಹಕಗಳು, ಹಲವಾರು ಕಿಣ್ವಗಳ ಉತ್ಪಾದನೆಯನ್ನು ನಿಯಂತ್ರಿಸುತ್ತವೆಯೆಂದು ಅರಿತರು. ಇವರಿಗಿಂತ 30 ವರ್ಷ ಮೊದಲೇ ಗೆರಾಡ್ ಮಾನವನ ಚಯಾಪಚಯ (Metabolism) ಸಂಬಂದ ಕೋಶಗಳ ಬಗ್ಗೆ ಅಧ್ಯಯನ ನಡೆಸಿ ‘ಒಂದು ವಂಶವಾಹಿನಿ-ಒಂದು ಕಿಣ್ವ’ ಎಂದು ನೀಡಿದ್ದ ಹೇಳಿಕೆ ತಳಿಯೊಂದರ ಅರಿವು ಬೀಡ್ಲ್ ಹಾಗೂ ಟಾಟಮೆಗೆ ತಿಳಿದಿರಲಿಲ್ಲ . ಬೀಡ್ಲ್ ಹಾಗೂ ಟಾಟಮೆ ಪ್ರಯೋಗಾಧಾರಿತ ಸಂಶೋಧನೆ ಜೀವರಸಾಯನಶಾಸ್ತ್ರದ ಅಧಾರ ಸ್ತಂಭವಾಗಿ ಉಳಿದಿದೆ. ಈಗ ಸಾಬೀತಾಗಿರುವಂತೆ ಡಿಎನ್ಎ ಒಂದು ಕಾರ್ಯಶೀಲ ಘಟಕ ಒಂದು ಪೆಪ್ಟೈಡ್ ಸರಣಿಯನ್ನು ನಿಯಂತ್ರಿಸುತ್ತದೆ. 1958ರಲ್ಲಿ ಬೀಡ್ಲ್ ಟಾಟಂ ಹಾಗೂ ಲೆಡೆರ್ಬರ್ಗ್ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡು ಪುರಸ್ಕೃತರಾದರು.
ಬರ್ನೆಟ್ ಸರ್ (ಫ್ರಾಂಕ್) ಮ್ಯೂಕಫೆಯೇನ್ (1899-1985 ) 1960
Burnet, Sir (Frank) Macfarlane
ಆಸ್ಟ್ರೇಲಿಯಾ- ವೈದ್ಯಕೀಯ ವಿಜ್ಞಾನ- ವೈರಸ್ ಹಾಗೂ ಪ್ರತಿರೋಧ ವ್ಯವಸ್ಥೆಯನ್ನು ಕುರಿತು ಸಂಶೋಧಿಸಿದಾತ.
ಮೆಲ್ಬೋರ್ನ್ನಲ್ಲಿ ವೈದ್ಯಕೀಯ ಪದವಿ ಪಡೆದು 2 ವರ್ಷಗಳ ಕಾಲ ಲಂಡನ್ನಲ್ಲಿ ಬ್ಯಾಕ್ಟೀರಿಯಾಶಾಸ್ತ್ರ ಅಭ್ಯಸಿಸಿದ ನಂತರ ಬರ್ನೆಟ್, ಹುಟ್ಟೂರಾದ ಮೆಲ್ಬೋರ್ನ್ನಲ್ಲಿ ನೆಲೆಸಿದನು. 1930ರಲ್ಲಿ ಬ್ಯಾಕ್ಟೀರಿಯಾಗಳ ಮೇಲೆ ದಾಳಿ ಎಸಗುವ ವೈರಸ್ಗಳನ್ನು (ಬ್ಯಾಕ್ಟೀರಿಯಾಫೇಜ್) ಕಂಡುಹಿಡಿದ ಬರ್ನೆಟ್, ಕೋಳಿಯ ಭ್ರೂಣದಲ್ಲಿ ಅವುಗಳ ಕೃಷಿ ಪಡೆಯುವಲ್ಲಿ ಯಶಸ್ವಿಯಾದನು. ಇದರ ಫಲವಾಗಿ ಜೀವಿಯೊಂದರಲ್ಲಿ ವಿಷಕ್ಕೆ ವಿಷರೋಧಕ ಉತ್ಪಾದಿಸುವ ಸಾಮರ್ಥ್ಯ ಅದರ ಹುಟ್ಟಿನಿಂದ ಬರದೆ, ಅದರ ಭ್ರೂಣಾವಧಿಯಲ್ಲಿ ಅಭಿವೃದ್ದಿಗೊಳ್ಳುವುದೆಂದು ತೋರಿಸಿದನು. ಇದನ್ನು ಮುಂದೆ ಮೆಡಾನರ್ ಖಚಿತಗೊಳಿಸಿದನು. ಬರ್ನೆಲ್ ವಿಷಮಶೀತ ಜ್ವರದ ವೈರಸ್, ಕಾಲರಾ ವೈಬ್ರಿಯೋ, ಪೊಲಿಯೋ, ಹಾಗೂ ದ್ವಿ ಜ್ವರಗಳ ಸಾಂಕ್ರಾಮಿಕತೆಯ ಬಗೆಗೆ ಕೂಡ ಕೆಲಕಾಲ ಕೆಲಸ ಮಾಡಿದನು. 1951ರಲ್ಲಿ ಬರ್ನೆಲ್ ಮಂಡಿಸಿದ ತಾದ್ರೂಪಿಕ (Clonal) ಆಯ್ಕೆ ಸಿದ್ಧಾಂತ, ಪ್ರತಿರೋಧ ವ್ಯವಸ್ಥೆ ಹೇಗೆ ತನ್ನನ್ನು ಪರರಿಂದ ಗುರುತಿಸುವ ಸಾಮರ್ಥ್ಯಗಳಿಸುತ್ತದೆ0iÉುಂದು ವಿವರಿಸುತ್ತದೆ. ಇದು ಹಲವಾರು ಸಂಶೋಧಕದಿಂದ ಅಸಮ್ಮತಿ ಹಾಗೂ ಮುಂದಿನ ಕೆಲಸಗಳಿಗೆ ಪ್ರೇರಣೆ ಒದಗಿಸಿತು. 1960ರಲ್ಲಿ ಬರ್ನೆಲ್, ಮೆಡಾವರ್ ಜೊತೆ ನೊಬೆಲ್ ಪ್ರಶಸ್ತಿ ಹಂಚಿಕೊಂಡನು.