ಹಾಫ್’ಸ್ಟ್ಯಾಡ್ಟರ್, ರಾಬರ್ಟ್ (1915-1990) 1961
Hofstadter , Robert
ಅಸಂಸಂ-ಭೌತಶಾಸ್ತ್ರಜ್ಞ-ಬೈಜಿಕ ರಚನೆಂಯ ಅಧ್ಯಯನಕ್ಕೆ ಎಲೆಕ್ಟ್ರಾನ್ ಚದುರಿಕೆ ವಿದ್ಯಾಮಾನ ಪರಿಚಯಿಸಿದಾತ.
ನ್ಯೂಯಾರ್ಕ್ ಮತ್ತು ಪಿನ್ಸ್ಟನ್ನಿಂದ ಪದವಿ ಪಡೆದ ಹಾಫ್’ಸ್ಟ್ಯಾಡ್ಟರ್ ನಾರ್ಡನ್ ಲ್ಯಾಬ್ ಕಾರ್ಪೋರೇಷನ್ನಲ್ಲಿ ಕೆಲಸಕ್ಕೆ ಸೇರಿದನು. 1954ರಲ್ಲಿ ಸ್ಟ್ಯಾನ್’ಫೋರ್ಡ್ನಲ್ಲಿ ಪ್ರಾಧ್ಯಾಪಕನಾದನು. 1967 ರಿಂದ 1974ರವರೆಗೆ ಸ್ಟ್ಯಾನ್’ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಅಧಿಕ ಚೈತನ್ಯ ಪ್ರಯೋಗಾಲಯದ ನಿರ್ದೇಶಕನಾದನು. 1948ರಲ್ಲಿ ಹಾಫ್ಸ್ಟೆಟರ್ ಥ್ಯಾಲಿಯಂನಿಂದ ಕ್ರಿಯಾಶೀಲಗೊಳಿಸಲ್ಪಟ್ಟ ಸೋಡಿಯಂ ಅಯೋಡೈಡ್ ಬಳಸಿ ,ಮಿನುಗುವ ಗಣನಾಯಂತ್ರ ನಿರ್ಮಿಸಿದನು. ಹಾಫ್’ಸ್ಟ್ಯಾಡ್ಟರ್ ನಡೆಸಿದ ಪ್ರಯೋಗಗಳಿಂದ ಪ್ರೋಟಾನ್ ಮತ್ತು ನ್ಯೂಟ್ರಾನ್ ಬಿಂದು ಮಾತ್ರ ಕಣಗಳಾಗಿರದೆ ಅವುಗಳಿಗೆ ಗಾತ್ರ ಮತ್ತು ಆಕಾರ ಇದೆಯೆಂದು ತಿಳಿದು ಬಂದಿತು. ಇನ್ನು ಮುಂದುವರೆದು ಪರಸ್ಪರ ಆವಿಷ್ಟ ನಿರಸನಗೊಳ್ಳುವ ಮೆಸಾನ್ಗಳಿಂದ ಇವು ನಿರ್ಮಿಸಲಟ್ಟಿವೆಯೆಂದು ಒಪ್ಪಲಾಯಿತು. ಹಾಫ್ಸ್ಟೆಟರ್ ಮುನ್ನುಡಿದಂತೆ, ರೋ-ಮೆಸಾನ್ ಹಾಗೂ ಒಮೆಗಾ ಮೆಸಾನ್ಗಳು ಬೇರೆಯವರ ಪ್ರಯೋಗಗಳಲ್ಲಿ ಪತ್ತೆಯಾದವು. 1961ರ ನೊಬೆಲ್ ಪ್ರಶಸ್ತಿಯನ್ನು ಹಾಫ್’ಸ್ಟ್ಯಾಡ್ಟರ್ ಪಡೆದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಮೋಸ್ಬೌವರ್, ರುಡಾಲ್ಫ್ ಲುಡ್ವಿಗ್ (1929--) 1961
Mossabaur , Rudolph Ludwig
ಜರ್ಮನಿ-ಭೌತಶಾಸ್ತ್ರ- ಮೋಸ್ಬೌವರ್ ಪರಿಣಾಮ ಅನಾವರಣಗೊಳಿಸಿ ಅದನ್ನು ಸಾಪೇಕ್ಷ ಸಿದ್ಧಾಂತದ ಪರಿಶೀಲನೆಗೆ ಬಳಸಿದಾತ.
1955ರಲ್ಲಿ ಹೈಡೆಲ್ಬರ್ಗ್ನ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್ ಅಫ್ಮೆಡಿಕಲ್ ರಿಸರ್ಚ್ನಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗ ಮೋಸ್ಬೌವರ್ ಈಗ ಆತನ ಹೆಸರಿನಲ್ಲಿ ಕರೆಯಲಾಗುತ್ತಿರುವ ಪರಿಣಾಮವನ್ನು ಅನಾವರಣಗೊಳಿಸಿದನು. ಯಾವುದೇ ಪರಮಾಣುವಿನ ಬೀಜದಿಂದ ಉತ್ಸರ್ಜಿತವಾದ (Emitted) ಗಾಮಾ ಕಿರಣಗಳ ಚೈತನ್ಯ ಸ್ವಲ್ಪ ಚದುರಿರುತ್ತದೆ. ಹೈಸೆನ್ಬರ್ಗ್ನ ಅನಿಶ್ಚಿತತೆಯ ಸಿದ್ಧಾಂತದಂತೆ ಯಾವುದೇ ಕಣದ ಚೈತನ್ಯವನ್ನು ಖಚಿತವಾಗಿ ನಿರ್ಧರಿಸಲು ಸಾಧ್ಯವಿಲ್ಲ ಎನ್ನುವುದು ಇದರ ಮೊದಲ ಕಾರಣ .ಇದರೊಂದಿಗೆ ಎಲ್ಲಾ ಪರಮಾಣುಗಳು ಶಾಖದಿಂದ ಕಂಪನ ಸ್ಥಿತಿಯಲ್ಲಿರುತ್ತವೆ. ಹೀಗಾಗಿ ಗಾಮಾ ಕಿರಣಗಳನ್ನು ಉತ್ಸರ್ಜಿಸುವ ಪರಮಾಣು ಬೀಜ ಮತ್ತು ಅದನ್ನು ಹೀರಿಕೊಳ್ಳುವ ಸಾಧನದ ಮಧ್ಯೆ ಅನಿರ್ದಿಷ್ಟ ಹಾಗೂ ವ್ಯತ್ಯಸ್ತ ಚಲನೆಯಿರುತ್ತದೆ. ಇದರಿಂದಲೂ ಗಾಮಾ ಕಿರಣಗಳು ಚದುರುತ್ತವೆ. ಇದು ಡಾಪ್ಲರ್ ಚದುರಿಕೆ. ಈ ಚದುರಿಕೆಯ ನಿವಾರಣೆ ಸಾಧ್ಯ. ಇದಕ್ಕಾಗಿ ಮೋಸ್ಬೌವರ್ ಗಾಮಾಕಿರಣದ ಆಕರ ಮತ್ತುಅದನ್ನು ಹೀರಿಕೊಳ್ಳುವ ಸಾಧನವನ್ನು ಶೀತಲೀಕರಿಸಿ, ಚದುರಿಕೆಯನ್ನು ಕನಿಷ್ಟಗೊಳಿಸಲು ಯತ್ನಿಸಿದನು. ಆದರೆ ಪ್ರಯೋಗಗಳಿಂದ ಇದಕ್ಕೆ ತದ್ವಿರುದ್ದವಾದ ಫಲಿತಾಂಶಗಳು ದಕ್ಕಿ, ಮೊದಲಿಗಿಂತಲೂ ಶೀತಲೀಕರಿಸಿದ ಸ್ಥಿತಿಯಲ್ಲಿನ ಚದುರಿಕೆ ಹೆಚ್ಚಾಗಿದ್ದಿತು. ಇದೇ ಮೋಸ್ಬೌವರ್ ಪರಿಣಾಮ. 42 ಧಾತುಗಳ 72 ಸಮಸ್ಥಾನಿಗಳ ,88 ಗಾಮಾ ಉತ್ಸರ್ಜನೆಯಲ್ಲಿ ಈ ಪರಿಣಾಮವನ್ನು ಗುರುತಿಸಲಾಗಿದೆ. ಈ ಆಧಾರದ ಮೇಲೆ ಪರಮಾಣುವಿನ ಸುತ್ತಲಿರುವ ವಿಭಿನ್ನ ಎಲೆಕ್ಟ್ರಾನಿಕ್ ಪರಿಸರಗಳನ್ನು ಮೋಸ್ಬೌವರ್ ರೋಹಿತದಿಂದ ನಿರ್ಧರಿಸಬಹುದು. Fe304 ಕಬ್ಬಿಣದ ಅದಿರಿನಲ್ಲಿ Fe2 ಹಾಗೂ Fe3 ಬೀಜಗಳನ್ನು ಪ್ರತ್ಯೇಕವಾಗಿ ಗುರುತಿಸುವುದೂ ಮೋಸ್ಬೌವರ್ ಪರಿಣಾಮದಿಂದ ಸಾಧ್ಯ. ಗಾಮಾ ಕಿರಣಗಳು ಒಂದು ಗುರುತ್ವ ವಿಭವದಿಂದ (Potential) ಮತ್ತೊಂದು ಗುರುತ್ವ ವಿಭವಕ್ಕೆ ಸಾಗುವಾಗ ಅವುಗಳ ತರಂಗಾಂತರ ಬದಲಾಗುತ್ತದೆ. ಇದನ್ನು ಅಳೆದು ಐನ್ಸ್ಟೀನ್ನ ಸಾಪೇಕ್ಷತಾ ಸಿದ್ಧಾಂತ ಪರಿಶೀಲಿಸಲಾಗಿದೆ. ಮೋಸ್ಬೌವೆರ್ 1961ರ ನೊಬೆಲ್ ಪ್ರಶಸ್ತಿ ಪಡೆದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಲ್ಯಾಂಡೋ, ಲೆವ್, ಡೆವಿಡೋವಿಟ್ಚ್ (1908-1968) 1962
Landau , Lev Davidovich
ರಷ್ಯಾ-ಸೈದ್ಧಾಂತಿಕ ಭೌತಶಾಸ್ತ್ರ- ಹೀಲಿಯಂ ವಿಶಿಷ್ಟ ಗುಣಗಳನ್ನು ವಿವರಿಸಿದಾತ.
ಲ್ಯಾಂಡೋ, ಪೆಟ್ರೋಲಿಯಂ ಇಂಜಿನಿಯರ್ನ ಮಗ. ಬಾಕು, ಲೆನಿನ್ಗ್ರಾಡ್ಗಳಲ್ಲಿ ವಿದ್ಯಾಭ್ಯಾಸ ಮಾಡಿದನು. 1929ರಲ್ಲಿ ಕೊಪೆನ್ಹೇಗ್ನಲ್ಲಿ ಬೊಹ್ರ್ನ ಭೇಟಿ ಮಾಡಿದನು, ಮುಂದೆ ಇದು ಬಹು ಫಲಪ್ರದವಾದ ಸ್ನೇಹವಾಗಿ ಮಾರ್ಪಟ್ಟಿತು. 1932ರಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾಗಿ ಕಾರ್ಖೋವ್ಗೆ ಹೋದ ಲ್ಯಾಂಡೋ, 1935ರಲ್ಲಿ ಅಲ್ಲಿ ಪ್ರಾಧ್ಯಾಪಕನಾದನು. ಕಬ್ಬಿಣವನ್ನು ಹೋಲುವ ಕೆಲವು ಪದಾರ್ಥಗಳಲ್ಲಿ, ಕೆಲವು ನಿರ್ದಿಷ್ಟ ವಲಯಗಳಲ್ಲಿ ಪರಮಾಣು ಮಟ್ಟದಲ್ಲಿ ಕಾಂತತ್ವ ನೆಲೆಗೊಂಡಿರುತ್ತದೆ. ಇದು ಫೆರೋಕಾಂತೀಯತೆ (Ferromagnetism) ಇವುಗಳ ಗಣಿತೀಯ ಅಧ್ಯಯನವನ್ನು ಲ್ಯಾಂಡ್ಲೊ ನಡೆಸಿದನು. 1937ರಲ್ಲಿ ಮಾಸ್ಕೋದಲ್ಲಿ ಸ್ಥಾಪನೆಗೊಂಡಿದ್ದ ಇನ್ಸ್ಟಿಟ್ಯೂಟ್ ಆಫ್ ಫಿಸಿಕಲ್ ಪ್ರಾಬ್ಲಮ್ಸ್ ಸಂಸ್ಥೆಗೆ ಕಪಿಟ್ಸಾ ನಿರ್ದೇಶಕನಾಗಿದ್ದನು. ಈತ ಲ್ಯಾಂಡೋನನ್ನು ಅನ್ವಯಿಕ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥನಾಗಿ ಬರುವಂತೆ ಅಹ್ವಾನವಿತ್ತನು. ಇಲ್ಲಿ ಲ್ಯಾಂಡೋ, ಸೈದ್ಧಾಂತಿಕ ಭೌತಶಾಸ್ತ್ರ, ಕ್ವಾಂಟಂ ಬಲವಿಜ್ಞಾನ ,ಕಣ ಭೌತಶಾಸ್ತ್ರ, ಕ್ವಾಂಟಂ ಮೈದ್ಯುತ್ ಗತಿಶಾಸ್ತ್ರಗಳಿಗೆ ಭದ್ರ ಬುನಾದಿ ಹಾಕಲು ಶ್ರಮಿಸಿದನು, ಇ.ಎಂ. ಲಿಫ್ಷಿಟ್ಜ್ ಜೊತೆಗೂಡಿ, 1938ರಿಂದ ಲ್ಯಾಂಡೋ ಜಗತ್ಪ್ರಸಿದ್ದ ಪಠ್ಯ ಪುಸ್ತಕಗಳ ಸರಣಿಯನ್ನು ಪ್ರಕಟಿಸಿದನು, ಲ್ಯಾಂಡೋ, 2.19 ಕೆಲ್ವಿನ್ಗಿಂತ ಕೆಳಗಿನ ತಾಪಮಾನದಲ್ಲಿ ಸ್ನಿಗ್ದತೆ (Viscosity) ಇಲ್ಲವಾಗುವುದರ ಕಾರಣ ನೀಡಿದನು. ಹೀಲಿಯಂ 2 ರ ಅತಿವಾಹಕತ್ವದ ಗುಣಗಳನ್ನು ವಿವರಿಸಿದನು. ಲ್ಯಾಂಡೋನನ್ನು ಜರ್ಮನಿಯ ಗೂಢಚಾರನೆಂಬ ಸಂಶಯದ ಮೇಲೆ ಬಂಧಿಸಲಾಯಿತು. ಕಪಿಲ್ಸಾ ಇದನ್ನು ಬಲವಾಗಿ ವಿರೋಧಿಸಿದನು. ಲ್ಯಾಂಡೋ 1962ರ ನೊಬೆಲ್ ಪ್ರಶಸ್ತಿ ಪಡೆದನು. 1962ರಲ್ಲಿ ಮೋಟರ್ ಸೈಕಲ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡನು. ಈತನ ಹನ್ನೊಂದು ಮೂಳೆಗಳು ಮುರಿದು ಬುರಡೆ ಸೀಳಿತು. ಲ್ಯಾಂಡೋ ಇದಾದ ನಂತರ ಚೇತರಿಸಿಕೊಳ್ಳಲಾಗದೆ ಆರು ವರ್ಷಗಳ ಕಾಲ ನೋವನ್ನು ಅನುಭವಿಸಿ ಮರಣ ಹೊಂದಿದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಗೋಪೆರ್ಟ್,ಮೇಯರ್, ಮಾರಿಯಾ (1906-1972) 1963
Goeppert , Maria Meyer
ಜರ್ಮನಿ-ಅಸಂಸಂ-ಗಣಿತೀಯ ಭೌತಶಾಸ್ತ್ರಜ್ಞೆ.
ಮಾರಿಯಾ ಗಟ್ಟಿಂಜೆನ್ನಲ್ಲಿ ಹುಟ್ಟಿದಳು. ಅವಳ ಕುಟುಂಬ ಸ್ನೇಹಿತನಾಗಿದ್ದ ಹಿಲ್ಬರ್ಟ್ನ ಪ್ರಭಾವದಿಂದಾಗಿ ಮಾರಿಯಾ ಗಣಿತದಲ್ಲಿ ಪದವಿ ಪಡೆದಳು. 1927ರಲ್ಲಿ ಬಾರ್ನ್ ನೀಡಿದ ಉಪನ್ಯಾಸಗಳಿಗೆ ಮಾರು ಹೋದ ಮಾರಿಯಾ ಭೌತಶಾಸ್ತ್ರದಲ್ಲಿ ಆಸಕ್ತಿ ತಳೆದಳು. 1930ರಲ್ಲಿ ಎಲೆಕ್ಟ್ರಾನ್ ರೋಹಿತದ ಬಗ್ಗೆ ಅಧ್ಯಯನ ನಡೆಸಲು, ಪ್ರಾರಂಭಿಸಿದ ಮಾರಿಯಾಗೆ, ಅಮೇರಿಕಾದ ಔಷಧಶಾಸ್ತ್ರಜ್ಞ ಜೊಸೆಫ್ಮೇಯರ್ನ ಪರಿಚಯವಾಯಿತು. ಮಾರಿಯಾ, ಮೇಯರ್ನನ್ನು ವಿವಾಹವಾದಳು. ವಿವಾಹದ ನಂತರ, ದಂಪತಿಗಳು ಜಾನ್ಸ್ಹಾಫ್ಕಿನ್ಸ್ ಸಂಸ್ಥೆ ಸೇರಿದರು. ಇಲ್ಲಿ ಮೇಯರ್ ಸೇರಿದಂತೆ ಇಬ್ಬರೇ ಇಬ್ಬರು ನೌಕರರಿದ್ದರು. ಸ್ತ್ರೀಯರೊಂದಿಗೆ ಕೆಲಸ ಮಾಡಲು ಯಾವುದೇ ಇನ್ನೊಬ್ಬ ಪುರುಷ ಉದ್ಯೋಗಿ ಒಪ್ಪಲಿಲ್ಲ. ಲಿಂಗ ತಾರತಮ್ಯದಿಂದಾಗಿ ಮಾರಿಯಾಳಿಗೆ ಬಹು ಕೆಳದರ್ಜೆಯ, ಅತ್ಯಲ್ಪ ವೇತನದ ಕೆಲಸವನ್ನು ಈ ಸಂಸ್ಥೆಯಲ್ಲಿ ನೀಡಲಾಯಿತು. ಮಾರಿಯಾ ಕ್ವಾಂಟಂ ವಿಧಾನಗಳಿಂದ ಅಣ್ವಕ ರೋಹಿತಗಳ (Molecular Spectrum) ಮೇಲೆ ನಡೆಸಿದ ಪ್ರಯೋಗಗಳು ಯುಕೆ ಮತ್ತು ಎನ್ರಿಕೊಫರ್ಮಿಯವರ ಗಮನಕ್ಕೆ ಬಂದವು. ಈ ಇಬ್ಬರೂ ಖ್ಯಾತರಿಗೆ ಮಾರಿಯಾಳ ಕೆಲಸದ ಮೇಲೆ ಅಪಾರ ಗೌರವ ,ಮೆಚ್ಚುಗೆ ಮೂಡಿ ಅವಳ ಪ್ರತಿಭೆಗೆ ತಕ್ಕ ಕೆಲಸ ಕೊಡಿಸುವಂತಹ ಪ್ರಯತ್ನಕ್ಕೆ ಕೈ ಹಾಕುವಂತೆ ಮಾಡಿತು. ದಂಪತಿಗಳಿಬ್ಬರನ್ನುಫರ್ಮಿ ಹಾಗೂ ಯುಕೆ, ಕೊಲಂಬಿಯಾಕ್ಕೆ ಕರೆಸಿಕೊಂಡು, ಉತ್ತಮ ನೌಕರಿಗೆ ಸೇರಿಸುವ ಪ್ರಯತ್ನದಲ್ಲಿ ಯಶಸ್ಸನ್ನು ಕಾಣಲಿಲ್ಲ. ಆದರೆ ಇವರಿಬ್ಬರ ಭೇಟಿ ಮಾರಿಯಾಳಲ್ಲಿ ಹೆಚ್ಚಿನ ಉತ್ಸಾಹ, ಉಮೇದಿಕೆಯನ್ನು ತುಂಬಿದವು. ಮಾರಿಯಾ ಹೊಸದಾಗಿ ಆವಿಷ್ಕರಿಸಲ್ಪಟ್ಟಿದ್ದ, ಯುರೇನಿಯಂಗಿಂತಲೂ ಭಾರವಾದ ಧಾತುಗಳ ಬಗೆಗಿನ ಸಂಶೋಧನೆಗಳನ್ನು ಮುಂದುವರಿಸಿದಳು. ಈ ವೇಳೆಗೆ ಎರಡನೇ ಜಾಗತಿಕ ಯುದ್ದ ಪ್ರಾರಂಭವಾಯಿತು. ಎನ್ರಿಕೋ ಫರ್ಮಿ ನೇತೃತ್ವದಲ್ಲಿ ಅಣ್ವಸ್ತ್ರ ತಯಾರಿಸುವ ಮ್ಯಾನ್ ಹಟ್ಟನ್ ಯೋಜನೆ ಪ್ರಾರಂಭವಾಯಿತು. ಇದ್ದಕ್ಕಿದ್ದಂತೆ, ಯುರೇನಿಯಂಗಿಂತಲೂ ಹೆಚ್ಚು ತೂಕದ ಧಾತುಗಳ ಬಗೆಗೆ ಅಧಿಕಾರಯುತವಾಗಿ ಬಲ್ಲ ಮಾರಿಯಾಳಿಗೆ ಬೇಡಿಕೆ ಹೆಚ್ಚತೊಡಗಿತು. ಮಾರಿಯಾ 15 ಜನ ವಿಜ್ಞಾನಿಗಳ ಮುಂದಾಳುವಾಗಿ ಮ್ಯಾನ್ಹಟನ್ ಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದಳು. ಮಾರಿಯಾ ಈಗಲೇ UP6 ಧಾತುವಿನ , ವಿದಳನ ಎಸೋಟೋಪ್ ಯುರೇನಿಯಂ -235ರ ಗುಣಗಳನ್ನು ನಿರ್ಧರಿಸಿದಳು. ಎರಡನೇ ಜಾಗತಿಕ ಯುದ್ದದ ನಂತರ, ಮಾರಿಯಾ ಮತ್ತು ಮೇಯರ್ ಚಿಕಾಗೋ ನಗರದಲ್ಲಿ ನೆಲೆಸಿದರು. ಇಲ್ಲಿರುವಾಗಲೇ ಮಾರಿಯಾ 2,8,20,28,50,82 ಅಥವಾ 126 ನ್ಯೂಟ್ರಾನ್ ಅಥವಾ ಪ್ರೋಟಾನ್, ಇರುವ ಧಾತುಗಳು ಸ್ಥಿರ ಸ್ಥಿತಿಯಲ್ಲಿರುವವೆಂದು ಪತ್ತೆ ಹಚ್ಚಿದಳು. ಇವುಗಳಿಗೆ ಅಪವಾದವಾಗಿ ಆಮ್ಲಜನಕ , ಕ್ಯಾಲ್ಸಿಯಂ, ಹೀಲಿಯಂನಲ್ಲಿ ಸ್ಥಿರತೆಗಾಗಿ ಏಳು ನ್ಯೂಟ್ರಾನ್ ಅಥವಾ ಪ್ರೋಟಾನ್ ಇರುವುದು ತಿಳಿದು ಬಂದಿತು. ಮಾರಿಯಾಗೆ ಇದಕ್ಕೆ ಕಾರಣ ನೀಡುವುದು ಮೊದಲಿಗೆ ಸಾಧ್ಯವಾಗಲಿಲ್ಲ. ಎಲೆಕ್ಟ್ರಾನ್ ಕಕ್ಷೆಯ ರಚನೆಯಲ್ಲಿರುವ ಕಾರಣಗಳೇ ಇಲ್ಲೂ ಇರಬಹುದೆಂದು ಮಾರಿಯಾ ಊಹಿಸಿದಳು. ಆದರೆ ಫರ್ಮಿಯಿಂದ ಅವಳಿಗೆ ದೊರೆತ ಕುರುಹಿನಿಂದಾಗಿ ಅವಳು ಪರಮಾಣುವಿನ ಬೈಜಿಕ ಸ್ಥಿತಿಗೆ ಕಕ್ಷಾ ಮಾದರಿಯನ್ನು ಬಳಸಿದಳು. ಇದರಲಿ ಸ್ಥಿರತೆಗಾಗಿ ಬೇಕಾಗಿರುವ ಪ್ರೋಟಾನ್ ಅಥವಾ ನ್ಯೂಟ್ರಾನ್ ಸಂಖ್ಯೆಗಳು ಖಚಿತವಾದವು. ಮಾರಿಯಾಳ ಈ ಸಾಧನೆಗಾಗಿ 1963ರ ನೊಬೆಲ್ ಪ್ರಶಸ್ತಿಯನ್ನು ಹೈಡೆಲ್ಬರ್ಗ್ನಲ್ಲಿದ್ದ ಜೆ.ಎಚ್.ಡಿ ಜೆನ್ಸೆನ್ನೊಂದಿಗೆ ಹಂಚಲಾಯಿತು. ಹೈಡೆನ್ಬರ್ಗ್ನಲ್ಲಿದ್ದ ಸ್ವತಂತ್ರ ಸಂಶೋಧನೆ ನಡೆಸಿದ್ದ ಜೆನ್ಸೆನ್ನ ಪರಮಾಣು ಮಾದರಿಗಳು ಮಾರಿಯಾ ರೂಪಿಸಿದವುಗಳಂತೆಯೇ ಇದ್ದುದು ಗಮನಾರ್ಹ. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಹ್ಯಾನ್ಸ್ , (ಡೇನಿಯಲ್) ಜೆನ್ಸನ್ (ಜೊಹಾನೆಸ್) (1907--)1963
Hans , (Daniel) Jensen (Johannes)
ನೆದರ್’ಲ್ಯಾಂಡ್-ಭೌತಶಾಸ್ತ್ರ-ಪ್ರಾವಸ್ಥಾ ವೈದೃಶ್ಯ ಸೂಕ್ಷ್ಮದರ್ಶಕ
ಹ್ಯಾನ್ಸ್ನ ತಂದೆ, ತೋಟದ ಉಸ್ತುವಾರಿಗಾರನಾಗಿದ್ದನು. 25 ಜೂನ್ 1907ರಂದು ಹ್ಯಾನ್ಸ್ನ ಜನನವಾಯಿತು. ಹ್ಯಾಂಬರ್ಗ್, ಫ್ರೀಬರ್ಗ್ಗಳಲ್ಲಿ ಕಾಲೇಜು ಶಿಕ್ಷಣ ಪೂರೈಸಿದ ಹ್ಯಾನ್ಸ್ 1932ರಲ್ಲಿ ಡಾಕ್ಟರೇಟ್ ಗಳಿಸಿದನು. ಹ್ಯಾಂಬರ್ಗ್ ವಿಶ್ವವಿದ್ಯಾಲಯದ ಸೈದ್ಧಾಂತಿಕ ಭೌತಶಾಸ್ತ್ರ ಸಂಸ್ಥೆ ಸೇರಿ, ಅಲ್ಲಿ ವೈಜ್ಞಾನಿಕ ಸಹಾಯಕನಾದನು. 1936 ರಲ್ಲಿ ಹ್ಯಾಂಬರ್ಗ್ನಿಂದ ಹ್ಯಾಬಿಲ್ ಕೈಕೆಳಗೆ ಸಂಶೋಧನೆ ಕೈಗೊಂಡು, ಸಂಪ್ರಬಂಧ ಮಂಡಿಸಿ, ಡಾಕ್ಟರೇಟ್ ಗಳಿಸಿದನು. 1937 ರಿಂದ ವೃತ್ತಿ ಜೀವನ ಪ್ರಾರಂಭಿಸಿ, 1941ರಲ್ಲಿ ಹ್ಯಾನೋವರ್ ಟೆಕ್ನಿಷ್ಹಾಕ್ಷುಲೆಯಲ್ಲಿ ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ಪ್ರಾದ್ಯಾಪಕನಾದನು. 1949ರಲ್ಲಿ ಹೈಡೆಲ್ಬರ್ಗ್ನಲ್ಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧಾಪಕನಾಗಿ ನೇಮಕಗೊಂಡನು. 1947ರಲ್ಲಿ ಹ್ಯಾಂಬರ್ಗ್ನಲ್ಲಿ ಪ್ರಾಧ್ಯಾಪಕ ಸ್ಥಾನ ದಕ್ಕಿತು. 1969ರಲ್ಲಿ ಫ್ಲೋರಿಡಾದ ಫೋರ್ಟ್ ಲೆಡರ್ ಡೇಲ್ನ ಗೌರವ ನಾಗರಿಕನಾಗಿ ಆಯ್ಕೆಗೊಂಡನು. 1947ರಿಂದ ಹ್ಯಾನ್ಸ್ ಹೈಡೆಲ್ ಅಕಾಡೆಮಿ ಆಫ್ ಸೈನ್ಸ್ನ ಸದಸ್ಯನಾಗಿದ್ದಾನೆ. 1960 ರಿಂದ ವಿಸ್ಕಾನ್ಸಿನ್, 1952 ರಿಂದ ಪ್ರಿನ್ಸ್’ಟನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿ, ಬಕ್ರ್ಲೆಯ ಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕನಾದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ವಿಗ್ನೆರ್, ಯುಜೆನ್ ಪೌಲ್ (1902-1995) 1963
Wigner , Eugene Paul
ಹಂಗರಿ-ಅಸಂಸಂ-ಭೌತಶಾಸ್ತ್ರ- ಕ್ವಾಂಟಂ ಬಲವಿಜ್ಞಾದಲ್ಲಿ ಸಮೂಹ ಸಿದ್ಧಾಂತದ ಬಳಕೆ ತಂದಾತ. ಬೈಜಿಕ ಪ್ರತಿಕ್ರಿಯೆಗಳಲ್ಲಿ ಸಾಮ್ಯತೆಯ ಸಂರಕ್ಷಣೆ ಅನಾವರಣಗೊಳಿಸಿದಾತ.
ವಿಗ್ನೆರ್, ವ್ಯಾಪಾರಿಯ ಮಗನಾಗಿದ್ದನು. 1925ರಲ್ಲಿ ಬರ್ಲಿನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಇಂಜಿನಿಯರಿಂಗ್ನಲ್ಲಿ ಡಾಕ್ಟರೇಟ್ ಪಡೆದನು. 1930ರಲ್ಲಿ ಪ್ರಿನ್ಸ್ಟನ್ಗೆ ಹೋದ ವಿಗ್ನೆರ್ , 1938ರಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾಗಿ 1971ರಲ್ಲಿ ನಿವೃತ್ತಿಯಾಗುವವರೆಗೂ ಅಲ್ಲಿದ್ದನು. ವಿಗ್ನೆರ್ ಡಿರಾಕ್ನ ಭಾವ ಮೈದುನನಾಗಿದ್ದನು. ವಿಗ್ನೆರ್, ಕ್ವಾಂಟಂ ಸಿದ್ಧಾಂತ ಹಾಗೂ ಬೈಜಿಕ ಭೌತಶಾಸ್ತ್ರದಲ್ಲಿ ಮಹತ್ತರ ಕೊಡುಗೆ ನೀಡಿದನು. ಭೌತಶಾಸ್ತ್ರದಲ್ಲಿ ಸಮಾಂಗೀಯತೆ ತತ್ತ್ವಗಳಿಗೆ ಸಮೂಹ ಸಿದ್ಧಾಂತ ಬಳಸಿದನು. 1927ರಲ್ಲಿ ವಿಗ್ನೆರ್ ಬೈಜಿಕ ಪ್ರತಿಕ್ರಿಯೆಗಳಲ್ಲಿ ಸಾಮ್ಯತೆಯ ಸಂರಕ್ಷಣೆಯಾಗುವುದೆಂದು ತೋರಿಸಿದನು. ಇದರ ಅರ್ಥವೆಂದರೆ ಭೌತಶಾಸ್ತ್ರದಲ್ಲಿ ಎಡ-ಬಲ, ಋಣ- ಧನ ಎನ್ನುವ ವೈವಿಧ್ಯತೆಗಳು ಭೌತಿಕ ಕ್ರಿಯೆಗಳ ಮೇಲೆ ಯಾವುದೇ ಪ್ರಭಾವ ಬೀರಲಾರವು. ಅದರೆ 1958ರಲ್ಲಿ ಲೀ ಹಾಗೂ ಟಿಂಗ್ ಸಾಮ್ಯತೆಗೆ ಬಹು ಅಪರೂಪದ ಅಪವಾದಗಳನ್ನು ಗುರುತಿಸಿದರು. ಬೀಟಾ ಶೈಥಿಲ್ಯಗೊಂಡು (Decay) ಬೀಜದಿಂದ ಎಲೆಕ್ಟ್ರಾನ್ ಹೊಮ್ಮಿದಾಗ ಕ್ರಿಯಾಸಾಮ್ಯತೆ ನಷ್ಟವಾಗುವುದೆಂದು ತೋರಿಸಿದರು. 1930ರ ಅವಧಿಯಲ್ಲಿ ವಿಗ್ನೆರ್ ನ್ಯೂಟ್ರಾನ್ಗಳ ಬಗೆಗೆ ಸಂಶೋಧಿಸಿ, ನ್ಯೂಟ್ರಾನ್ ಹಾಗೂ ಪ್ರೋಟಾನ್ಗಳನ್ನು ಬಂಧಿಸಿರುವ ಪ್ರಬಲ ಬಲದ ಸ್ವರೂಪ ಅರಿಯಲು ಯತ್ನಿಸಿದನು. ಪ್ರಬಲ ಬಲ 10-15 ಮೀ ದೂರಕ್ಕೆ ಮಾತ್ರ ಸೀಮಿತವಾಗಿದ್ದು ಯಾವುದೇ ವೈದ್ಯುತ್ ಆವಿಷ್ಟವನ್ನು ಹೊಂದಿರುವುದಿಲ್ಲವೆಂದು ತೋರಿಸಿದನು. ಚಲಿಸುತ್ತಿರುವ ನ್ಯೂಟ್ರಾನ್ ನಿಶ್ಚಲ ಬೀಜದೊಂದಿಗೆ ಹೇಗೆ ಅಂತರ್ಕ್ರಿಯೆ ಹೊಂದಿರುವುದೆಂದು ಬ್ರೆಯಿಟ್ ವಿವರಿಸಿದನು. 1942ರಲ್ಲಿ ವಿಗ್ನೆರ್, ಸುಸ್ಥಿರ ಬೈಜಿಕ ಕ್ರಿಯಾ ಸರಣಿ ಸಾಧಿಸುವ ಮೊದಲ ಸ್ಥಾವರ ನಿರ್ಮಿಸುವಲ್ಲಿಫರ್ಮಿಗೆ ನೆರವಾದನು. ವಿಗ್ನೆರ್, 1963ರಲ್ಲಿ ಹ್ಯಾನ್ಸ್ ಜೆನ್ಸನ್ ಮತ್ತು ಮಾರಿಯಾ ಗೊಪೆರ್ಟ್ ಮೇಯರ್ರೊಂದಿಗೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
అಲೆಕ್ಸಾಂಡರ್, ಮಿಖಾಯಿಲೋವಿಖ್ ಪ್ರೊಖೊರೊವ್ (1916-2002) -1964
Alexander , Mikhailovich Prokhorov (PHY.) 1964
ರಷ್ಯಾ-ಭೌತಶಾಸ್ತ್ರ-ಮೇಸರ್ ಹಾಗೂ ಲೇಸರ್ ತತ್ವ ವಿವರಿಸಿದಾತ.
ಅಲೆಕ್ಸಾಂಡರ್ 11 ಜುಲೈ 1916ರಲ್ಲಿ ಆಸ್ಟ್ರೇಲಿಯಾದಲ್ಲಿ ಜನಿಸಿದನು. ರಷ್ಯಾದ ಅಕ್ಟೋಬರ್ ಮಹಾಕ್ರಾಂತಿಯ ನಂತರ 1923ರಲ್ಲಿ ಆತನ ತಂದೆ ತಾಯಿಗಳು ರಷ್ಯಾಕ್ಕೆ ಹೋಗಿ ನೆಲೆಸಿದರು. 1934ರಲ್ಲಿ ಅಲೆಕ್ಸಾಂಡರ್ ಲೆನಿನ್ ಗ್ರಾಡ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗ ಸೇರಿ ತನ್ನ ಪದವಿ ಶಿಕ್ಷಣ ಆರಂಭಿಸಿದನು. ಇಲ್ಲಿ ಖ್ಯಾತನಾಮರಾದ ವಿಜ್ಞಾನಿಗಳು ಉಪನ್ಯಾಸ ನೀಡುತ್ತಿದ್ದರು. ವಿ.ಎ ಫಾಕ್ಸ್ ಕ್ವಾಂಟಂ ಬಲವಿಜ್ಞಾನ, ಸಾಪೇಕ್ಷ ಸಿದ್ಧಾಂತ, ಫಿû್ರ¥sóï ಸಾಮಾನ್ಯ ಭೌತಶಾಸ್ತ್ರ ರೋಹಿತಶಾಸ್ತ್ರ ಹಾಗೂ ಇ.ಕೆ ಗ್ರಾಸ್ ಅಣ್ವಯಿಕ ಭೌತಶಾಸ್ತ್ರದ (Molecular Physics) ಬೋಧನೆ ಮಾಡುತ್ತಿದ್ದರು. ಇವರ ಉಪನ್ಯಾಸಗಳು ಅಲೆಕ್ಸಾಂಡರ್ ಭೌತಶಾಸ್ತ್ರದ ಮೂಲ ತತ್ತ್ವಗಳನ್ನು ಅರಿಯಲು ನೆರವಾದವು. 1939ರಲ್ಲಿ ಪದವಿ ಗಳಿಸಿದ ಅಲೆಕ್ಸಾಂಡರ್ ಮಾಸ್ಕೋದ ಫಿûಸಿಕಲ್ ಇನ್ಸಿಟ್ಯೂಟ್ನಲ್ಲಿ ಲೆಬೆಡೆವ್ ಮಾರ್ಗದರ್ಶನದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದನು. ಈ ಅವಧಿಯಲ್ಲಿ ಅಂದೋಳನ ಪ್ರಯೋಗಾಲಯದಲ್ಲಿ ಪಾಪಲೆಕ್ಸಿಯ ಮಾರ್ಗದರ್ಶನ ಲಭ್ಯವಾಯಿತು. ಇದರ ನಂತರ ರೇಡಿಯೋ ಅಲೆಗಳ ಪ್ರಸರಣ ಕುರಿತಾದಂತೆ ಅಲೆಕ್ಸಾಂಡರ್ ಅಧ್ಯಯನ ಪ್ರಾರಂಭಿಸಿದನು. 1941ರಲಿ ಎರಡನೇ ಜಾಗತಿಕ ಯುದ್ದದ ಕರಿನೆರಳು ಚಾಚಿ, ಕೆಂಪು ಸೇನೆಗೆ ನಿಯೋಜಿತನಾದನು. ಯುದ್ದದಲ್ಲಿ ಭಾಗಿಯಾಗಿ ಎರಡು ಬಾರಿ ಗಾಯಗೊಂಡನು. 1944ರಲ್ಲಿ ಎರಡನೇ ಬಾರಿ ಗಾಯಗೊಂಡಾಗ, ಆತನನ್ನು ಸೇನೆಯಿಂದ ಬಿಡುಗಡೆಗೊಳಿಸಿ ಆಂದೋಳನ ಪ್ರಯೋಗಾಲಯಕ್ಕೆ ಹೆಚ್ಚಿನ ಸಂಶೋಧನೆಗಾಗಿ ಕಳಿಸಲಾಯಿತು. ಇಲ್ಲಿ ಎಸ್.ಎಂ.ರೈಟೋನ್ ಕೈ ಕೆಳಗೆ ಅರೇಖೀಯ ಆಂದೋಳನಗಳ (Nonlinear Asscilator) ಅಧ್ಯಯನ ಪ್ರಾರಂಭಿಸಿದನು. 1947ರಲ್ಲಿ ವಿ.ಐ. ವೆಕ್ಸ್ಲರ್, ಸೆಂಟಿಮೀಟರ್ ತರಂಗಾಂತರದ(Wave Length) ವ್ಯಾಪ್ತಿಯಲ್ಲಿನ ಸಂಲಗ್ನಗೊಂಡ (Coherent) ಎಲೆಕ್ಟ್ರಾನ್ ವಿಕಿರಣಗಳನ್ನು ಕುರಿತಾಗಿ ಹೆಚ್ಚಿನ ಸಂಶೋಧನೆ ನಡೆಸುವಂತೆ ಅಲೆಗ್ಸಾಂಡರ್ಗೆ ಸೂಚಿಸಿದನು. ಇದರ ಫಲವಾಗಿ 1951ರಲ್ಲಿ ಅಲೆಕ್ಸಾಂಡರ್ ಸಂಲಗ್ನಗೊಂಡ ವಿಕಿರಣಗಳನ್ನು ವಿವರಿಸುವ ಪಾಂಡಿತ್ಯಪೂರ್ಣ ಲೇಖನ ಪ್ರಕಟಿಸಿದನು. 1946ರಲ್ಲಿ ಪಾಪಲೆಕ್ಸಿ ಮರಣ ಹೊಂದಿದಾಗ, ಅಂದೋಳನ ಪ್ರಯೋಗಾಲಯದ ನೇತೃತ್ವದ ಹೊಣೆ ಲೆಯಾನ್ ಟೋವಿಕ್ ಹೆಗಲಿಗೇರಿತು.
1950ರಿಂದ ಈತನಿಗೆ ಸಹಾಯಕನಾಗಿ ಅಲೆಕ್ಸಾಂಡರ್ ಶ್ರಮಿಸತೊಡಗಿದನು. ಇಲ್ಲಿ ಅಲೆಗ್ಸಾಂಡರ್ ರೇಡಿಯೋ ರೋಹಿತಶಾಸ್ತ್ರ, ಕ್ವಾಂಟಂ ಎಲೆಕ್ಟ್ರಾನಿಕ್ಸ್ಗಳಲ್ಲಿ ಸಂಶೋಧನೆ ಕೈಗೊಂಡಾಗ ತನ್ನ ಶಿಷ್ಯರು ಅದನ್ನು ಮುಂದುವರಿಸಿಕೊಂಡು ಹೋಗುವಂತೆ ಮಾಡಿದನು. ಅಲೆಗ್ಸಾಂಡರ್ ಬಸೋವ್ನೊಂದಿಗೆ ಸೂಕ್ಷ್ಮ ತರಂಗ ರೋಹಿತಶಾಸ್ತ್ರದಲ್ಲಿ ನಡೆಸಿದ ಪ್ರಯೋಗಗಳಿಂದ ಅಣ್ವಯಿಕ ಆಂದೋಳನಕಾರಿಗಳ (Molecular Ascilators) ಪರಿಕಲ್ಪನೆ ಮೂಡಿತು. ಇದನ್ನು ಇವರಿಬ್ಬರೂ ಸೈದ್ಧಾಂತಿಕ ರೂಪದಲ್ಲಿ ವಿವರಿಸಿದರು. ಅಂತಿಮವಾಗಿ ಅಲೆಕ್ಸಾಂಡರ್ ಹಾಗೂ ಬಸೋವ್ ಅಮೋನಿಯಾದ ಮೇಲೆ ಕ್ರಿಯಾಶೀಲವಾಗಿರುವ ಅಣ್ವಯಿಕ ಆಂದೋಳನಕಾರಕವನ್ನು ನಿರ್ಮಿಸಿದರು. ಇವರಿಬ್ಬರೂ ಸೇರಿ 1955ರಲ್ಲಿ ಋಣಾತ್ಮಕ ಹೀರಿಕೆಯನ್ನು ಪಡೆಯುವ ವಿಧಾನದ ಪ್ರಸ್ತಾವನೆ ನೀಡಿದರು. 1950ರಿಂದ 1955 ರವರೆಗೆ ಅಲೆಕ್ಸಾಂಡರ್ ಹಾಗೂ ಸಂಗಡಿಗರು ಸೂಕ್ಷ್ಮತರಂಗ ರೋಹಿತಶಾಸ್ತ್ರದ ಆಧಾರದ ಮೇಲೆ ಅಣ್ವಯಿಕ ಸ್ವರೂಪ ನಿರ್ಧರಿಸಿದರು. 1955ರಿಂದ ಅಲೆಕ್ಸಾಂಡರ್ ಎಲೆಕ್ಟ್ರಾನಿಕ್ ಅಣು ಕಾಂತೀಯ ಅನುರಣನ (Molecular Magnetic Resonance) ಸಂಶೋಧನೆಯನ್ನು ಅಭಿವೃದ್ಧಿಗೊಳಿಸತೊಡಗಿದನು. ಹಲವಾರು ಸ್ಪಟಿಕಗಳಲ್ಲಿನ ಈ ಅನುರಣನದ ವಿಶ್ರಾಂತ ಕಾಲಾವಧಿ ನಿರ್ಧರಿಸಿದನು. ಇದೇ ಕಾಲದಲ್ಲಿ ಅಲೆಕ್ಸಾಂಡರ್, ಎ.ಎ. ಮೆನೆನ್ಕೂವ್ ಜೊತೆಗೂಡಿ ಎಲೆಕ್ಟ್ರಾನಿಕ್ ಅನುಕಾಂತೀಯ ಅನುರಣನ ಹಿನ್ನೆಲೆಯಲ್ಲಿ ರೂಬಿ ಸ್ಪಟಿಕವನ್ನು ಲೇಸರ್ ಉತ್ಪಾದಿಸಲು ಬಳಸಬಹುದೆಂದು 1957ರಲ್ಲಿ ಸೂಚಿಸಿದನು. ಅಲೆಕ್ಸಾಂಡಾರ್ ಹಾಗೂ ಮೆನೆನ್ಕೊವ್ ವಿಭಿನ್ನ ಸ್ಪಟಿಕಗಳನ್ನು ಬಳಸಿ ಮೇಸರ್ ಉತ್ಪಾದಿಸಿದರು. ಮಾಸ್ಕೊ ವಿಶ್ವವಿದ್ಯಾಲಯದ ಬೈಜಿಕ ಭೌತಶಾಸ್ತ್ರ ವಿಭಾಗದ ಮೂಲಕ ಇವರು ನಿರ್ಮಿಸಿದ ಮೇಸರ್ ಉತ್ಪಾದಕವನ್ನು ಪುಷನೋದಲ್ಲಿರುವ ರೇಡಿಯೋ ಖಗೋಳಶಾಸ್ತ್ರ ಸಂಸ್ಥೆಯಲ್ಲಿ 1957ರಲ್ಲಿ ಅಳವಡಿಸಲಾಯಿತು. 1958ರಲ್ಲಿ ಅಲೆಕ್ಸಾಂಡರ್ ಲೇಸರ್ ಉತ್ಪಾದನೆಗೆ ಹಲವಾರು ಕ್ರಾಂತಿಕಾರಕ ಮಾರ್ಗಗಳನ್ನು ಸೂಚಿಸಿದನು. 1963ರಲ್ಲಿ ಅಲೆಕ್ಸಾಂಡರ್ ಎ.ಎಸ್ ಸೆಲಿವೆನೆಂಕೋ ಜೊತೆಗೂಡಿ ದ್ವಿ-ಕ್ವಾಂಟಂ ಸ್ಥಿತ್ಯಂತರಗಳನ್ನು (ಃi-ಕಿuಚಿಟಿಣum ಖಿಡಿಚಿಟಿsiಣioಟಿs) ಬಳಸಿ ಲೇಸರ್ ಪಡೆಯುವ ಸಾಧ್ಯತೆಯನ್ನು ತಿಳಿಸಿದನು. ಇದಕ್ಕಾಗಿ ಮೇಸರ್ ಹಾಗೂ ಲೇಸರ್ಗಳ ಸಾಧನೆಗಾಗಿ, 1964ರಲ್ಲಿ ಅಲೆಕ್ಸಾಂಡರ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಬಸೊವ್,ನಿಕೊಲಾಯ್ (ಗೆನ್ನೆಡಿಯೆವಿಚ್) (1922--) -1964
Basov, Nikolai (Gennadiyevich) (PHY.) 1964
ರಷ್ಯಾ- ಭೌತಶಾಸ್ತ್ರ-ಲೇಸರ್ ಹಾಗೂ ಮೇಸರ್ ಉಪಜ್ಞೆಕಾರ.
ಎರಡನೇ ಜಾಗತಿಕ ಯುದ್ದದಲ್ಲಿ ಕೆಂಪು ಸೇನೆಯಲ್ಲಿ ಸೇವೆ ಸಲ್ಲಿಸಿದ ಬಸೊವ್ ನಂತರ ಮಾಸ್ಕೋದಲ್ಲಿ 1956ರಲ್ಲಿ ಡಾಕ್ಟೋರೇಟ್ ಗಳಿಸಿದನು. ನಂತರ 1962ರಲ್ಲಿ ಅದೇ ವಿಶ್ವ ವಿದ್ಯಾಲಯದ, ವಿಭಾಗ ಮುಖ್ಯಸ್ಥನಾದನು. 1952ಎಂದ ಬಸೊವ್, ಉದ್ರೇಕಿತ ಪರಮಾಣುಗಳನ್ನು ವಿಶ್ರಾಂತಿಗೊಳಿಸಿ ಅವುಗಳು ವಿಕಿರಣ ಸೂಸುವಂತೆ ಮಾಡುವುದರ ಮೂಲಕ ವೈದ್ಯುತ್ ಕಾಂತೀಯ ವಿಕಿರಣವನ್ನು ವರ್ಧನೆಗೊಳಿಸುವ ಸಾಧ್ಯತೆಯ ಬೆನ್ನು ಹತ್ತಿದನು. ಬಸೋವ್ನ ಸಹೋದ್ಯೋಗಿಯಾಗಿದ್ದ ಎ.ಎಂ. ಪೆÇ್ರಖೊರೋವ್ ಅನಿಲಗಳು ಹೊರಸೂಸುವ ಸೂಕ್ಷ್ಮ ತರಂಗಗಳ ಕರಾರುವಕ್ಕಾದ ಆವರ್ತನೆ ನಿರ್ಧರಿಸುವಲ್ಲಿ ನಿರತನಾಗಿದ್ದನು. 1955ರಲ್ಲಿ ಇವರಿಬ್ಬರೂ ಸೇರಿ ವೈದ್ಯುತ್ ಕಾಂತೀಯ ವಿಕಿರಣವನ್ನು ವರ್ಧನೆಗೊಳಿಸುವ,ಉದ್ರೇಕಿತ ಅಣುಗಳ ದೂಲಗಳನ್ನು ಪಡೆದರು. ಹಾಗೂ ಅದರ ತಯಾರಿಕೆಗೆ ಬಳಸಿದ ಉಪಯೋಗಿಸಿದ ಸಲಕರಣೆಗಳನ್ನು ಮೆಸರ್ ಎಂದು ಕರೆದರು. (MASER- Microwave Amplication by Stimulated Emission of Radiation ) ಬಸೊವ್, ಪ್ರೊಖೊರೋವ್ ಹಾಗೂ ಅಸಂಸಂಗಳಲ್ಲಿ ಸ್ವತಂತ್ರವಾಗಿ ಇದೇ ಬಗೆಯ ಅಧ್ಯಯನದಲ್ಲಿ ನಿರತವಾಗಿದ್ದ ಟೌನೆಸ್ 1964ರಲ್ಲಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದರು. ಬಸೊವ್ ಹಾಗೂ ಪ್ರೊಖೊರೊವ್ ಇನ್ನು ಮುಂದುವರೆದು, 1958ರಲ್ಲಿ ಲೇಸರ್ (LASER- Light Amplication by Stimulated Emission of Radiation ) ಉಪಜ್ಞೆಗೊಳಿಸಿದರು. ಅರೆವಾಹಕಗಳಲ್ಲಿ ಲೇಸರ್ ಪರಿಣಾಮ ಸಾಧ್ಯವೆಂದು ತೋರಿಸಿದರು.ಬಸೊವ್ ಹಾಗೂ ಫ್ರೊಖರೊವ್, ಮಿಡಿತದ ಲೇಸರ್, ಬೆಳಕಿನೊಂದಿಗೆ ದ್ರವ್ಯದ ಅಂತಕ್ರಿಯೆಯ ಬಗೆಗೂ ಕುರಿತಾದಂತೆಯೂ ಗಮನಾರ್ಹ ಸಂಶೋಧನೆ ನಡೆಸಿದ್ದಾರೆ. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಟೌನೆಸ್, ಚಾಲ್ರ್ಸ್ ಹಾರ್ಡ್ (1915--) 1964
Townes, Charles Hard
ಅಸಂಸಂ-ಭೌತಶಾಸ್ತ್ರ- ಮೇಸರ್ ಸಿದ್ಧಾಂತ ನೀಡಿದಾತ.
ಟೌನೆಸ್, ವಕೀಲನ ಮಗನಾಗಿದ್ದನು. ಫರ್ಮನ್ , ಡ್ಯೂಕ್ ವಿಶ್ವವಿದ್ಯಾಲಯ ಕ್ಯಾಲ್ಟೆಕ್ಗಳಿಂದ ಶಿಕ್ಷಣ ಪೂರೈಸಿದನು. ಬೆಲ್ ಟೆಲಿಫ್ಲೋನ್ ಲ್ಯಾಬೋರೇಟಎಯಲ್ಲಿ ನೌಕರಿ ಪ್ರಾರಂಭಿಸಿದ ಟೌನೆಸ್, ಎರಡನೇ ಜಾಗತಿಕ ಯುದ್ದದಲ್ಲಿ ರಡಾರ್ ವಲಯದಲ್ಲಿ ಕೆಲಸ ಮಾಡಿದನು. ರಡಾರ್ಗಳು ರೇಡಿಯೋ ಹಾಗೂ ಅವಗೆಂಪು ಕಿರಣ ತರಂಗ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಟೌನೆಸ್, 1947ರಲ್ಲಿ ಕೊಲಂಬಿಯಾದ ಭೌತಶಾಸ್ತ್ರ ವಿಭಾಗಕ್ಕೆ ಸೇರಿದನು. 1961ರಿಂದ 1967ರವರೆಗೆ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿದ್ದು ನಂತರ ಕ್ಯಾಲೊಪೋರ್ನಿಯಾದಲ್ಲಿ ಪ್ರಾಧ್ಯಾಪಕನಾದನು. 1945ರ ವೇಳೆಗೆ ಟೌನೆಸ್, ಪರಮಾಣು ಒಂದು ವಿನ್ಯಾಸದಿಂದ ಇನ್ನೊಂದು ವಿನ್ಯಾಸಕ್ಕೆ ಬದಲಾದಾಗ, ಫ್ಲೋಟಾನ್ಗಳನ್ನು ಉತ್ಸರ್ಜಿಸುವ ಅಥಾವ ಹೀರುವ ವಿದ್ಯಾಮಾನದ ಅಧ್ಯಯನ ನಡೆಸಿದ್ದನು. ಈ ಕ್ರಿಯೆಯಲ್ಲಿ ಫ್ಲೋಟಾನ್ಗಳು ನಿರ್ದಿಷ್ಟ ಅವಸ್ಥೆಗಳಲ್ಲಿರುತ್ತವೆ. ಉದಾಹರಣೆಗೆ ಹೇಳುವುದಾದರೆ ಕೊಡೆಯನ್ನು ಹೊರ ಬಿಚ್ಚುವ ಅಥಾವಾ ಒಳಗೆಳೆಯುವ ಕಾರ್ಯದ ಹೋಲಿಕೆಯಲ್ಲಿ ಅಮೋನಿಯಾ ಪರಮಾಣುಗಳು ಎರಡು ಸ್ಥಿತಿಗಳಲ್ಲಿರಬಲ್ಲವು. ಇಂತಹ ಸ್ಥಿತಿ ಜರುಗಿದಾಗಲೆಲ್ಲ ಈ ಪರಮಾಣುಗಳು 1.25 ಸೆಂ.ಮೀ ತರಂಗಾಂತರದ ಸೂಕ್ಷ್ಮ ತರಂಗದ ಹೀರಿಕೆಯಲ್ಲಿರುತ್ತವೆ. ಇಂತಹ ಕ್ರಿಯೆಯನ್ನು ವರ್ಧಿಸಿ ವೀಕ್ಷಿಸಲು ಸಾಧ್ಯವೆಂದು ಐನ್ಸ್ಟೀನ್ ಹೇಳಿದ್ದನು. ಟೌನೆಸ್, ಇಂತಹ ವರ್ಧಕವನ್ನು 1954ರಲ್ಲಿ ನಿರ್ಮಿಸಿ ಮೇಸರ್ ಎಂದು ಕರೆದನು. (MASER-Microwave AmpliCAtion by Sïtimulated Emmusion of Radiation= ಪ್ರೇರಿತ ವಿಕಿರಣ ಉತ್ಸರ್ಜನೆಯಿಂದ ಸೂಕ್ಷ್ಮ ತರಂಗ ವರ್ಧನೆ) ಟೌನೆಸ್ ಅನುಸರಿಸಿದಂತಹ ತಂತ್ರಗಳನ್ನು ರಷ್ಯದಲ್ಲಿ ಪ್ರೊಖೊರೊವ್ ಹಾಗೂ ಬಸೋವ್ ವಿವರಿಸಿದ್ದರು. ಮೇಸರ್ ಅಲ್ಪ ಕಾಲದಲ್ಲೇ ಪರಮಾಣು ಗಡಿಯಾರ, ರೇಡಿಯೋ ದೂರದರ್ಶಕ ಹಾಗೂ ವ್ಯೋಮಾಂತರಿಕ್ಷ ಸಂಪರ್ಕಗಳಲ್ಲಿ ಅಳವಡಿಸಲ್ಪಟ್ಟಿತು. ಟೌನೆಸ್ ಹಾಗೂ ಷ್ವಾಲೋ , ಸೂಕ್ಷ್ಮ ತರಂಗಗಳಂತೆ ಬೆಳಕನ್ನು ಸಹ ವರ್ಧಿಸಿ ಲೇಸರ್ ಪಡೆಯಲು ಸಾಧ್ಯವೆಂದು ಹೇಳಿದರು. ಪ್ರೇರಿತ ವಿಕಿರಣ ಉತ್ಸರ್ಜನೆಯಿಂದ ಬೆಳಕಿನ ವರ್ಧನೆ 1960ರಲ್ಲಿ ವ್ಯಾವಹಾರಿಕ ಬಳಕೆಗೆ ನೆರವಾಗಬಲ್ಲ ಲೇಸರ್ಗಳು “ಮೈಮಾನ್ನಿಂದ ನಿರ್ಮಾಣಗೊಂಡವು. 1964ರಲ್ಲಿ ಟೌನೆಸ್, ಬಸೋವ್ ಹಾಗೂ ಪ್ರೊಖೊರೊವ್ ನೊಬೆಲ್ ಪ್ರಶಸ್ತಿಗೆ ಪಾತ್ರರಾದರು. ಇದು ಕ್ವಾಂಟಂ ಎಲೆಕ್ಟ್ರಾನಿಕ್ಸ್ಗೆ ನಾಂದಿಯಾಯಿತು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಫೆಯ್ನ್’ಮನ್, ರಿಚರ್ಡ್ ಫಿಲಿಪ್ಸ್ (1918-1988 ) 1965
Feynmann , Richard Philips
ಅಸಂಸಂ-ಸೈದ್ಧಾಂತಿಕ ಭೌತಶಾಸ್ತ್ರ-ಕಣ ಭೌತಶಾಸ್ತ್ರದ ಗಣಿತೀಯ ಸಿದ್ಧಾಂತ ಅಭಿವೃದ್ದಿಗೊಳಿಸಿದಾತ.
ಫೆಯ್ನ್ಮನ್ನ ತಂದೆ ಸಮವಸ್ತ್ರ ತಯಾರಕನಾಗಿದ್ದನಲ್ಲದೆ, ಬಾಲಕನ ವೈಜ್ಞಾನಿಕ ಆಸಕ್ತಿ, ವೀಕ್ಷಣೆಗಳಿಗೆ ಬೆಂಬಲವಿತ್ತನು. ಮೆಸಾಚುಸೆಟ್ಸ್ ಮತ್ತು ಪ್ರಿನ್ಸ್’ಟನ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ ಫೆಯ್ನಮನ್ ಮೊದಲ ಅಣ್ವಸ್ತ್ರ ತಯಾರಿಕೆ ಯೋಜನೆ ಮ್ಯಾನ್ಹಟನ್ ಪ್ರಾಜೆಕ್ಟ್ನಲ್ಲಿ ದುಡಿದನು. ಇದಾದ ನಂತರ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬೋಧಕ ಸಿಬ್ಬಂದಿಯಾದನು. 1940ರಲ್ಲಿ ಫೆಯ್ನ್ಮನ್ ಕ್ವಾಂಟಂ ಸಿದ್ಧಾಂತದ ನೆರಳಿನಡಿಯಲ್ಲಿಯೇ ವೈದ್ಯುತ್ ಕಾಂತೀಯ ಅಂತ:ಕ್ರಿಯೆಗಳನ್ನು ವಿವರಿಸುವ ಗಣಿತೀಯ ತಂತ್ರಗಳನ್ನು ನೀಡಿದನು. ಇದು ಕ್ವಾಂಟಂ ವೈದ್ಯುತ್-ಗತಿಶಾಸ್ತ್ರಕ್ಕೆ Quantun Electrodynamics)ಅಪಾರ ವೈಶ್ಲೇಷಿಕ ಸಾಮರ್ಥ್ಯ ನೀಡಿತು. ಇದು ಪ್ರಯೋಗದ ಫಲಿತಾಂಶ ಮತ್ತು ಸೈದ್ಧಾಂತಿಕ ಲೆಕ್ಕಾಚಾರಗಳನ್ನು ಪರಸ್ಪರ ಹತ್ತಿರ ತಂದಿತು. ಪರಮಾಣುಗಳ ಕಣಗಳ ಮಧ್ಯದ ಅಂತಕ್ರಿಯೆಯನ್ನು ಅರಿಯುವ , ವಿವರಿಸುವ ವಿಶಿಷ್ಟ ಗಣಿತ ಮತ್ತು ನಕ್ಷೆಗಳನ್ನು ಫೆಯ್ನ್’ಮನ್ ಪರಿಚಯಿಸಿದನು. ಕ್ವಾಂಟಂ ವೈದ್ಯುತ್ ಗತಿಶಾಸ್ತ್ರಕ್ಕೆ ನೀಡಿದ ಕೊಡುಗೆಗಾಗಿ ಫೆಯ್ನ್’ಮನ್ 1965ರ ನೊಬೆಲ್ ಪ್ರಶಸ್ತಿ ಪಡೆದನು. ಫೆಯ್ನ್’ಮನ್ ವಿದ್ಯಾರ್ಥಿಗಳಲ್ಲಿ ಬಹು ಪ್ರಿಯನಾಗಿದ್ದನು. ಅವನ ಆಕರ್ಷಕ ಉಪನ್ಯಾಸಗಳು ನಗೆ ಚಟಾಕಿಗಳು, ವೈವಿಧ್ಯಮಯ ಶೈಕ್ಷಣೇತರ ಚಟುವಟಿಕೆಗಳು ಅವನನ್ನು ಇತರ ವಿಜ್ಞಾನಿಗಳಿಗಿಂತ ಬೇರೆಯಾಗಿ ಕಾಣುವಂತೆ ಮಾಡಿದ್ದವು. ತಮಟೆ ಬಾರಿಸುವುದು, ಮಾಯಾ ನಾಗರಿಕತೆಯ ಲಿಪಿಗಳ ಅಧ್ಯಯನ , ಜೀವಶಾಸ್ತ್ರದಲ್ಲಿ ಪ್ರಯೋಗ , ಗಣಕಗಳ ಬಳಕೆ ಫೆಯ್ನ್’ಮನ್ ನೆಚ್ಚಿನ ಹವ್ಯಾಸಗಳಾಗಿದ್ದವು. ಪಸಾಡೆನಾದಲ್ಲಿನ , ಮೇಲುಡೆಗೆಯಿಲ್ಲದ ತರುಣಿಯರನ್ನು ನೇಮಿಸಿಕೊಂಡಿದ್ದ ಹೋಟೆಲ್ ಮುಚ್ಚುವಂತೆ ಸ್ಥಳೀಯ ಆಡಳಿತ ಸೂಚನೆ ನೀಡಿದಾಗ , ಅದರ ಪರವಾಗಿ ತಡೆಯಾಜ್ಞೆ ತರಲು ಫೆಯ್ನ್’ಮನ್ ಯತ್ನಿಸಿದ್ದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಜೂಲಿಯನ್, ಷೈಂಜರ್ (1918-1994) 1965
Julian , Schwinger
ಅಸಂಸಂ-
ಜೂಲಿಯನ್ 12 ಫೆಬ್ರವರಿ1918ರಂದು ನ್ಯೂಯಾರ್ಕ್ನಲ್ಲಿ ಜನಿಸಿದನು. ಬಾಲ್ಯದಿಂದಲೂ ಜೂಲಿಯನ್ಗೆ ಭೌತಶಾಸ್ತ್ರದತ್ತ ಭಾರಿ ಒಲವಿದ್ದಿತು. ಉಳಿದ ವಿಷಯಗಳನ್ನು ನಿರ್ಲಕ್ಷಿಸಿ, ಜೂಲಿಯನ್ ಭೌತಶಾಸ್ತ್ರವನ್ನು ಮಾತ್ರ ಪರಿಗಣಿಸುತ್ತಿದ್ದನು. ಹದಿನಾರನೇ ವಯಸ್ಸಿಗೆ ಭೌತಶಾಸ್ತ್ರಜ್ಞನೆಂದು ಪರಿಗಣಿತನಾದನು. ನ್ಯೂಯಾರ್ಕ್ ನಗರದ ಸಾರ್ವಜನಿಕ ಶಾಲೆಗಳು, ಜೂಲಿಯನ್ ಶೀಘ್ರವಾಗಿ ಮೇಲಿನ ತರಗತಿಗಳಿಗೆ ಹೋಗುವ ನೆರವು ನೀಡಿದವು. ಐ.ಐ ರಬಿಯ ನೆರವಿನೊಂದಿಗೆ ಜೂಲಿಯನ್ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ವರ್ಗಾವಣೆಗೊಂಡನು. 1936ರಲ್ಲಿ ಜೂಲಿಯನ್ ತನ್ನ ಸಂಪ್ರಬಂಧ ಮಂಡಿಸಿದನಾದರೂ ಆತನಿಗೆ ಮೂರು ವರ್ಷಗಳ ನಂತರವಷ್ಟೇ 1939ರಲ್ಲಿ ಡಾಕ್ಟರೇಟ್ ದಕ್ಕಿತು. ಮುಂದಿನ ಎರಡು ವರ್ಷಗಳ ಕಾಲ ಬರ್ಕ್ಲೆಯ ಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯದ ರಾಷ್ಟ್ರೀಯ ಸಂಶೋಧನಾ ಫೆಲೋ ಆದನು. ನಂತರ ಜೆ.ಆರ್.ಒಪೆನ್ಹೀಮರ್ನ ಸಹಾಯಕನಾದನು. ಫೆಸಿಫಕ್ ಯುದ್ದ ಪ್ರಾರಂಭವಾದಾಗ ಜೂಲಿಯನ್ ಪಡ್ರ್ಯೂ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರದ ಬೋಧಕನಾದನು. ಈ ಕಾಲದಲ್ಲೇ ಕೇಂಬ್ರಿಜ್ನ ಎಂಐಟಿಯ ವಿಕಿರಣ ಪ್ರಯೋಗಾಲಯದಲ್ಲಿ ಸೇವೆ ಸಲ್ಲಿಸಿದನು. ಈ ಪ್ರಯೋಗಾಲಯದಲ್ಲಿ ಸಹ ಸಂಶೋಧಕರಿಲ್ಲದೆ, ಒಂಟಿಯಾಗಿ ರಾತ್ರಿಯ ವೇಳೆ ಕಾರ್ಯನಿರತನಾಗಿರುತ್ತಿದ್ದನು. ಜೂಲಿಯನ್ನ ಆರಂಭಿಕ ಸಂಶೋಧನೆಗಳು ರಡಾರ್ಗೆ ಸಂಬಂಧಿಸಿದ ಸಮಸ್ಯೆಗಳನ್ನು ವೈದ್ಯುತ್ ಕಾಂತೀಯ ದೃಷ್ಟಿಯಲ್ಲಿ ಪರಿಹರಿಸುವ ನಿಟ್ಟಿನಲ್ಲಿದ್ದವು,. ಆದರೆ ಅಲ್ಪಾವಧಿಯಲ್ಲೇ ಇವನ್ನು ವೈದ್ಯುತ್ ಕ್ಷೇತ್ರ ದೃಷ್ಟಿಯಿಂದ ವಿಚಾರಿಸತೊಡಗಿದನು. ಇದು ಬೈಜಿಕ ಚದುರಿಕೆ (Nuclear Scattering) ಅರ್ಥೈಸಿಕೊಳ್ಳಲು ನೆರವಾಯಿತು. ಮುಂದೆ ಕಾಲಾನುಕ್ರಮದಲ್ಲಿ ಜೂಲಿಯನ್ ಕಾಂತೀಯ ಕ್ಷೇತ್ರದಲ್ಲಿನ ಎಲೆಕ್ಟ್ರಾನ್ಗಳ ವಿಕಿರಣತೆಯನ್ನು ಕುರಿತಾಗಿ ಅಧ್ಯಯನ ಪ್ರಾರಂಭಿಸಿದನು. ಎಲೆಕ್ಟ್ರಾನ್ಗಳ ಕ್ಷೇತ್ರದಲ್ಲಿನ ಪ್ರತಿಕ್ರಿಯೆ ಅದರ ದ್ರವ್ಯ ರಾಶಿ ಸೇರಿದಂತೆ ಇತರ ಗುಣಗಳಲ್ಲೂ ಬದಲಾವಣೆ ತರುವುದೆಂಬ ಅಭಿಜಾತ ದೃಷ್ಟಿ ಆತನ ಗಮನ ಸೆಳೆಯಿತು. ಇದು ಕ್ವಾಂಟಂ ಎಲೆಕ್ಟ್ರೋಗತಿಶಾಸ್ತ್ರದ ಅಭಿವೃದ್ದಿಯಲ್ಲಿ ಪ್ರಮುಖ ಅಂಶವಾಯಿತು. ಯುದ್ದ ಕೊನೆಗೊಂಡ ನಂತರ ಜೂಲಿಯನ್ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾದನು. ಎರಡು ವರ್ಷಗಳ ನಂತರ ಪ್ರಾಧ್ಯಾಪಕನಾದನು. ಜೂಲಿಯನ್ ಭೌತಶಾಸ್ತ್ರದಲ್ಲಿ ಆವರೆಗೆ ಪರಿಹಾರ ಕಾಣದಿದ್ದ, ಸವಾಲಾಗಿದ್ದ ಹಲವಾರು ಸಮಸ್ಯೆಗಳನ್ನು ವ್ಯಾಪಕ ಹಾಗೂ ಆಳವಾಗಿ ಚಿಂತಿಸುತ್ತಿದ್ದನು. ಇದರ ಫಲವಾಗಿ 1957ರಲ್ಲಿ ಎಲೆಕ್ಟ್ರಾನ್ ಹಾಗೂ ಮ್ಯುಯಾನ್ಗೆ ಸಂಬಂಧಿಸಿದಂತೆ, ಎರಡು ವಿಶಿಷ್ಟ ಮ್ಯುಯಾನ್ಗೆಗಳಿರುವುವೆಂದು ಹೇಳಿದನು. ಇದು ಮುಂದೆ ಪ್ರಯೋಗಗಳಿಂದ ಖಚಿತಗೊಂಡಿತು. ಇದಲ್ಲದೆ ಜೂಲಿಯನ್ ಎಲ್ಲಾ ಕ್ಷೀಣ ಬೈಜಿಕ ಅಂತಕ್ರಿಯೆಗಳೂ, ಭಾರವಾದ, ಆವೇಶಗೊಂಡ ಏಕ-ಗಿರಕಿಯ ಕಣಗಳಿಂದ ವರ್ಗಾವಣೆಗೊಳ್ಳುವುವೆಂದು ಸೂಚಿಸಿದ್ದಾನೆ. ಆದರೆ ಇದನ್ನು ಪ್ರಯೋಗಗಳಿಂದ ಸಾಬೀತಾಗಿಲ್ಲ. ಜೂಲಿಯನ್ ಆಕರ ಸಿದ್ಧಾಂತ ಮಂಡಿಸಿ ಪ್ರಬಲ ಅಂತಕ್ರಿಯೆಯನ್ನು ಅರಿಯಲು ಯತ್ನಿಸಿದ್ದಾನೆ. ಇದು ಜೂಲಿಯನ್ ಪ್ರಕಟಿಸಿದ ಪಾರ್ಟಿಕಲ್ಸ್ ಸೋರ್ಸಸ್ ಅಂಡ್ ಫೆಲ್ಡ್ಸ್ ಕೃತಿಯಲ್ಲಿ ಚರ್ಚೆಗೊಂಡಿದೆ. ಜೂಲಿಯನ್ 1951ರಲ್ಲಿ ಐನ್ಸ್ಟೀನ್ ಪ್ರಶಸ್ತಿ, 1964ರಲ್ಲಿ ಯು ಎಸ್ ನ್ಯಾಷನಲ್ ಮೆಡಲ್ ಫಾರ್ ಸೈನ್ಸ್ ,1961ರಲ್ಲಿ ಪರ್ಡ್ಯೂ ವಿಶ್ವವಿದ್ಯಾಲಯದಿಂದ , 1962ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ಗಳಿಂದ ಸನ್ಮಾನಿತನಾಗಿದ್ದಾನೆ. 1965ರಲ್ಲಿ ಜೂಲಿಯನ್ ತನ್ನ ಸಾಧನೆಗಳಿಗಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಟೊಮೊನಾಗ, ಸಿನ್-ಇಟಿರೋ (1906-1979) 1965
Tomonaga , Sin Itiro
ಜಪಾನ್-ಸೈದ್ಧಾಂತಿಕ ಭೌತಶಾಸ್ತ್ರ- ಕ್ವಾಂಟಂ ವೈದ್ಯುತ್ ಗತಿಶಾಸ್ತ್ರದ ಸ್ಥಾಪಕ.
ಟೊಮೊನಾಗ, ಕ್ಯೋಟೋ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಪದವಿ ಗಳಿಸಿ, ಲೀಪ್ಜಿಗ್ನಲ್ಲಿ ಹೈಸೆನ್ಬರ್ಗ್ ಜೊತೆ ಉನ್ನತ ವಿದ್ಯಾಭ್ಯಾಸ ಮಾಡಿ, 1941ರಲ್ಲಿ ಟೋಕಿಯೋದಲ್ಲಿ ಪ್ರಾಧ್ಯಾಪಕನಾದನು. 1956ರಲ್ಲಿ ಟೊಕಿಯೋ ವಿಶ್ವವಿದ್ಯಾಲಯದ ಅಧ್ಯಕ್ಷನಾದನು. ಫ್ಲೋಟಾನ್ ಜೊತೆ ಅಂತರ್ಕ್ರಿಯೆ ಹೊಂದಿದ ಎಲೆಕ್ಟ್ರಾನ್ನ್ನು ಸಾಪೆಕ್ಷ ಸಿದ್ಧಾಂತದ ದೃಷ್ತಿಯಲ್ಲಿ ವಿವರಿಸಲು ಟೊಮೊನಾಗ ಯತ್ನಿಸಿದನು. ಫೆಯ್ನಮನ್, ಷ್ಟಿಂಜರ್ ಸಹ ಇದೇ ಮಾರ್ಗದ ಅನ್ವೇಷಣೆಯಲ್ಲಿದ್ದನು. ಆದರೆ ಯಾರಿಗೂ ಮತ್ತೊಬ್ಬರು ಈ ಕಾರ್ಯದಲ್ಲಿ ಮಗ್ನರಾಗಿದ್ದಾರೆಂದು ತಿಳಿದಿರಲಿಲ್ಲ. 1947ರಲ್ಲಿ ಡೈಸನ್ ಈ ಮೂವರೂ ಒಂದೇ ನಿರ್ಧಾರ ಹಾಗೂ ಫಲಿತಾಂಶಗಳಿಗೆ ಬಂದಿದ್ದಾರೆಂದು ತಿಳಿಸಿದನು. ಆಧಿಕ ಚೈತನ್ಯ ಹೊಂದಿದ ಕಣಗಳ ಸೈದ್ಧಾಂತಿಕ ವಿವರಣೆಯ ಪ್ರಾಮುಖ್ಯತೆಯ ಅರಿವಿದ್ದ ಟೊಮೊನಾಗ ಎರಡ ುಕಣಗಳು ಮಿಥ್ಯಾ ಕಣವೊಂದನ್ನು ಪರಸ್ಪರ ವರ್ಗಾಯಿಸಿಕೊಂಡು ಅಂತರ್ಕ್ರಿಯೆ ಹೊಂದುತ್ತವೆಯೆಂದು ಹೇಳಿದನು. ಕಾಲ್ಚೆಂಡಿನಲ್ಲಿ ಒಬ್ಬ ಆಟಗಾರನ ತನ್ನ ಆವೇಶವನ್ನು ಚೆಂಡಿನ ಮೂಲಕ ಇನ್ನೊಬ್ಬನಿಗೆ ವರ್ಗಾವಣೆ ಮಾಡುವುದನ್ನು ಈ ಕ್ರಿಯೆ ಸ್ಥೂಲವಾಗಿ ಹೋಲುತ್ತದೆ. ಈಗ ಇದನ್ನು ಕ್ವಾಂಟಂ ವೈದ್ಯುತ್ ಗತಿಶಾಸ್ತ್ರ ಸಿದ್ಧಾಂತ ಎಂದು ಕರೆಯಲಾಗುತ್ತದೆ. 1965ರಲ್ಲಿ ಟೊಮೋನಾಗ, ಫೆಯ್ನಮನ್ ಮತ್ತು ಷ್ವಿಂಜರ್ ನೊಬೆಲ್ ಪ್ರಶಸ್ತಿ ಪಡೆದರು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಆಲ್ಫ್ರೆಡ್, ಕ್ಯಾಸ್'ಟ್ಲರ್ (1902--) 1966
Alfred , Kastler (PHY.) 1966
ಭೌತಶಾಸ್ತ್ರ- ದೃಗ್ ಅನುರಣನ ಹಾಗೂ ಕಾಂತೀಯ ಅನುರಣನಗಳ ಸಂಗಮ ವಿಧಾನ ಪರಿಚಯಿಸಿದಾತ.
ಆಲ್ಫ್ರೆಡ್ 3 ಮೇ 1902ರಂದು ಅಲ್ಲಾಸೆಸ್ ಪ್ರಾಂತದ ಮ್ಯಾಬವೆಲರ್ನಲ್ಲಿ ಜನಿಸಿದನು. 1921ರಲ್ಲಿ ಎಕೊಲೆ ನಾರ್ಮಲೆ ಸುಪೀರಿಯರ್ ಸೇರಿದ ಆಲ್ಫ್ರೆಡ್ 1926ರಲ್ಲಿ ಉಪನ್ಯಾಸಕನಾU ಲೈಸಿಗೆ ಮರಳಿದನು. ವಿದ್ಯಾರ್ಥಿಯಾಗಿದ್ದಾಗ ತನ್ನ ಉಪನ್ಯಾಸಕನಿಂದ ಝೋಮರ್¥sóÉಲ್ಟ್ ಅಣು ರಚನೆ ಹಾಗೂ ರೋಹಿತದ ಸಾಲುಗಳ ಬಗೆಗೆ ಬರೆದಿದ್ದ ಪುಸ್ತಕದ ಪರಿಚಯವಾಯಿತು. ಇದು ಮುಂದೆ ಆಲ್ಫ್ರೆಡ್ನ ಸಂಶೋಧನೆಗಳಿಗೆ ಕಾರಣವಾಯಿತು. ಉದ್ರೇಕಿತ ಸ್ಥಿತಿಯಲ್ಲಿದ್ದ ಪರಮಾಣುಗಳ ಅಧ್ಯಯನಕ್ಕಾಗಿ, ಆಲ್ಫ್ರೆಡ್ ದ್ವಿಗುಣ ಅನುರಣನ (ಆoubಟe ಖesoಟಿಚಿಟಿಛಿe) ವಿಧಾನ ಪರಿಚಯಿಸಿದನು. ಇದು ದೃಗ್ ಅನುರಣನ ಹಾಗೂ ಕಾಂತೀಯ ಅನುರಣನ ವಿಧಾನಗಳ ಸಂಗಮವಾಗಿದ್ದಿತು. ಈ ಸಾಧನೆಗಾಗಿ 1966ರಲ್ಲಿ ಆಲ್ಫ್ರೆಡ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಹ್ಯಾನ್ಸ್, ಆಲ್ಬ್ರೆಕ್ಟ್ ಬೆಥೆ (1906-2005) 1967
Hans , Albrecht Bethe
ಜರ್ಮನಿ-ಭೌತಶಾಸ್ತ್ರ-ತಾರೆಗಳಲ್ಲಿನ ಬೈಜಿಕ ಕ್ರಿಯೆಗಳನ್ನು ವಿವರಿಸಿದಾತ.
ಹ್ಯಾನ್ಸ್ 2 ಜುಲೈ 1906 ರಂದು ಸ್ಟ್ರಾಸ್ಬರ್ಗ್ ಪ್ರಾಂತದ ಆಲ್ಸೆಸ್ ಲೊರಾಯಿನ್ ಪಟ್ಟಣದಲ್ಲಿ ಜನಿಸಿದನು. 1915ರಿಂದ 1924ರವರೆಗೆ ಫ್ರಾಂಕ್ಫರ್ಟ್ನ ಜೆಮ್ನಾಷಿಯಂನಲ್ಲಿ ಓದಿದನು. ಕಾಲೇಜು ಶಿಕ್ಷಣವನ್ನು ಎರಡು ವರ್ಷ ಫ್ರಾಂಕ್ಫರ್ಟ್ ಹಾಗೂ ಇನ್ನೆರಡು ವರ್ಷ ಮ್ಯೂನಿಕ್ಗಳಲ್ಲಿ ಮುಂದುವರಿಸಿದನು. ಅರ್ನಾಲ್ಡ್ ಝೋಮರ್ಫೆಲ್ಟ್ ಮಾರ್ಗದರ್ಶನದಲ್ಲಿ ಸಂಪ್ರಬಂಧ ಮಂಡಿಸಿ 1928ರಲ್ಲಿ ಡಾಕ್ಟರೇಟ್ ಪದವಿ ಗಳಿಸಿದನು. ನಂತರ ಆರು ತಿಂಗಳ ಕಾಲಫ್ರಾಂ’ಫರ್ಟ್ ಹಾಗೂ ಇನ್ನೂ ಆರು ತಿಂಗಳ ಕಾಲ ಸ್ಟುಟ್ಗರ್ಟ್ನಲ್ಲಿ ಭೌತಶಾಸ್ತ್ರದ ತರಬೇತುದಾರನಾಗಿದ್ದನು. 1929ರಿಂದ 1933ರ ಅವಧಿಯಲ್ಲಿ ಮ್ಯೂನಿಕ್ ವಿಶ್ವವಿದ್ಯಾಲಯದಲ್ಲಿದ್ದನು. 1930ರಲ್ಲಿ ಅಂತರಾಷ್ಟ್ರೀಯ ಶಿಕ್ಷಣ ಮಂಡಳಿಯಿಂದ ಸಂಶೋಧಕ ವೇತನ ಪಡೆದು, ಇಂಗ್ಲೆಂಡ್ಗೆ ಹೋಗಿ, ಕೇಂಬ್ರಿಜ್ನಲ್ಲಿ ಉಳಿದನು. ಇದೇ ಕಾರ್ಯಕ್ರಮದಡಿಯಲ್ಲಿ 1932ರಿಂದ 1933 ರವರೆಗೆ ರೋಮ್ನಲ್ಲಿದ್ದನು. ಇದೇ ಅವಧಿಯಲ್ಲಿ ಟುಬಿನ್ಜೆನ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾದನು. ಇದು ನಾಝಿಗಳ ಆಡಳಿತ ವಶವಾದಾಗ ಹ್ಯಾನ್ಸ್ ತನ್ನ ಈ ಹುದ್ದೆಯನ್ನು ಕಳೆದುಕೊಳ್ಳಬೇಕಾಯಿತು. 1933ರಲ್ಲಿ ಇಂಗ್ಲೆಂಡ್ಗೆ ವಲಸೆ ಹೋಗಿ, ಒಂದು ವರ್ಷದಕಾಲ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕ ಉಪನ್ಯಾಸಕನಾದನು. 1934ರಲ್ಲಿ ಬ್ರಿಸ್ಟಲ್ನ ಫೆಲೋಷಿಪ್ ದೊರಕಿತು. 1935ರಲ್ಲಿ ಅಸಂಸಂ ಇಥಾಕಾದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ನೇಮಕಗೊಂಡನು. ಮುಂದಿನ ಎರಡೇ ವರ್ಷಗಳ ಪ್ರಾಧ್ಯಾಪಕನಾಗಿ ಬಡ್ತಿ ದೊರೆಯಿತು. ಎರಡನೇ ಜಾಗತಿಕ ಯುದ್ದದ ಕಾಲದಲ್ಲಿ ಎಂಐಟಿಯ ರೇಡಿಯೇಷನ್ ಲ್ಯಾಬೋರೇಟರಿಯಲ್ಲಿ ಸೂಕ್ಷ್ಮತರಂಗದ ರಡಾರ್ ಸಂಶೋಧನೆಗೆ ನಿಯೋಜಿಸಲ್ಪಟ್ಟನು. ಇದರ ನಂತರ ಪ್ರಥವi ಬೈಜಿಕಾಸ್ತ್ರ ಜೋಡಣೆಗೊಳಿಸಿದ ಲಾಸ್ ಅಲ್ಮೋಸ್ ಪ್ರಯೋಗಾಲಯಕ್ಕೆ ವರ್ಗಾಯಿಸಲ್ಪಟ್ಟನು. 1952ರಲ್ಲಿ ಆರು ತಿಂಗಳ ಕಾಲ ಈ ಪ್ರಯೋಗಾಲಯದಲ್ಲಿ ಕೆಲಸ ಮಾಡಿದನು. ಹ್ಯಾನ್ಸ್ , ಪೀಲ್ರ್ಸ್ ಸಂಗಡ ಪರಮಾಣು ಬೀಜದ ಸಿದ್ಧಾಂತ ಮಂಡಿಸಿದನು. 1934ರಲ್ಲಿ ಡ್ಯುಟೆರಾನ್ ಸಿದ್ಧಾಂತ ರೂಪಿಸಿ 1949ರಲ್ಲಿ ಅದನ್ನು ವಿಸ್ತರಿಸಿದನು. ಬೈಜಿಕ ದ್ರವ್ಯ ಮಾಪಕದಲ್ಲಿದ್ದ ಕೆಲವು ಅಸಂಗತಗಳನ್ನು ಪರಿಹರಿಸಿದನು. 1935 ರಿಂದ 1938 ರವರೆಗೆ ಬೈಜಿಕ ಪ್ರತಿಕ್ರಿಯೆಗಳ ಅಧ್ಯಯನ ನಡೆಸಿದ ಹ್ಯಾನ್ಸ್, ಬೊಹ್ರ್ ಸಂಯುಕ್ತ ಬೀಜಗಳ ಸಿದ್ಧಾಂತ ನೀಡಿದನು. ಹ್ಯಾನ್ಸ್ ಬೈಜಿಕ ಕ್ರಿಯೆಗಳನ್ನು ಕುರಿತಾಗಿ ನಡೆಸಿದ ಅಧ್ಯಯನಗಳು, ತಾರೆಗಳು ಸತತ ಚೈತನ್ಯ ನೀಡುವ ಹಿನ್ನೆಲೆ ಹಾಗೂ ಆಕರಗಳನ್ನು ವಿವರಿಸುವಲ್ಲಿ ಯಶಸ್ವಿಯಾದವು. ಅತ್ಯಂತ ಉಜ್ವಲ ತಾರೆಗಳಲ್ಲಿ ಇಂಗಾಲ ಸಾರಜನಕ ಚಕ್ರವಿರುವುದೆಂದು ತಿಳಿಸಿದನು. ಸೂರ್ಯನಂತಹ ಮಂಕು ತಾರೆಗಳಲ್ಲಿ ಪ್ರೋಟಾನ್-ಪ್ರೋಟಾನ್ ಚಕ್ರದಿಂದ ಚೈತನ್ಯ ಲಭ್ಯವಾಗುವುದೆಂದು ವಿವರಿಸಿದ ಖ್ಯಾತಿ ಹ್ಯಾನ್ಸ್ಗಿದೆ. ಇದಕ್ಕಾಗಿ ಹ್ಯಾನ್ಸ್ 1967ರ ನೊಬೆಲ್ ಪ್ರಶಸ್ತಿಗೆ ಭಾಜನನಾದನು. 1955ರಿಂದ ನ್ಯೂಕ್ಲಿಯಾನ್ಗಳ ಮಧ್ಯದ ಅಂತಕ್ರಿಯೆಯ ಆಧಾರದ ಮೇಲೆ ಪರಮಾಣು ಬೀಜದ ಸ್ವರೂಪದ ವಿವರಣೆಯ ಯತ್ನದಲ್ಲಿದ್ದ ಹ್ಯಾನ್ಸ್ ನಿರತನಾಗಿದ್ದಾನೆ. ಕಣಗಳ ಸಂಘಟನಾ ಸಿದ್ಧಾಂತಕ್ಕೂ ಹ್ಯಾನ್ಸ್ ಕಾಣಿಕೆಯಿತ್ತಿದ್ದಾನೆ. ವೇಗಗಾಮಿ ಕಣ ಹಾಗೂ ಪರಮಾಣುಗಳ ಸ್ಥಿತಿಸ್ಥಾಪಕ ರಹಿತ ಸಂಘಟನೆಯನ್ನು ವಿವೇಚಿಸಿ, ಅಧಿಕ ಆವೇಶಿತ ಕಣಗಳನ್ನು ನಿಲ್ಲಿಸಬಲ್ಲ ದ್ರವ್ಯ ನಿರ್ಧಾರ ಮಾಡಿ, ಬೈಜಿಕ ಪ್ರಯೋಗಗಳಿಗೆ ನೆರವಾಗಿದ್ದಾನೆ. ಪರಮಾಮಾಣುವೊಂದನ್ನು ಸ್ಪಟಿಕವೊಂದಕ್ಕೆ ಸೇರಿಸಿದಾಗ ಪರಮಾಣುವಿನ ಚೈತನ್ಯದ ಮಟ್ಟದಲ್ಲಾಗುವ ವಿಭಜನೆಯನ್ನು ಹೀಟ್ಲರ್ನೊಂದಿಗೆ ವಿವರಿಸಿದ್ದಾನೆ. 1947ರಲ್ಲಿ ಜಲಜನಕದ ರೋಹಿತದಲ್ಲಿನ ಲ್ಯಾಂಬ್ ಪಲ್ಲಟಕ್ಕೆ ಕಾರಣ ನೀಡಿ ಆಧುನಿಕ ಕ್ವಾಂಟಂ ವೈದ್ಯುತ್ಗತಿಶಾಸ್ತ್ರಕ್ಕೆ ನಾಂದಿ ಹಾಡಿದನು. ಪೈ-ಮೆಸಾನ್ಗಳ ಚದುರಿಕೆ, ವೈದ್ಯುತ್ ಕಾಂತೀಯ ವಿಕಿರಣದಿಂದ ಅವುಗಳ ಉತ್ಪಾದನೆ ಕುರಿತಾಗಿಯೂ ಹ್ಯಾನ್ಸ್ ಸಾಧನೆಗಳು ಗಮನಾರ್ಹ. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಅಲ್ಪರೆಝ್ ಲೂಯಿ, ವಾಲ್ಟರ್ (1911-1988) -1968
Luis , Walter Alvarez (PHY.) 1968
ಅಸಂಸಂ-ಭೌತಶಾಸ್ತ್ರ-ಬೈಜಿಕ ಕಣಗಳ ಅಧ್ಯಯನದ ಮುಂದಾಳು.
ಲೂಯಿ ಕ್ಯಾಲಿಫೊರ್ನಿಯಾದ ಚಿಕಾಗೋ ವಿಶ್ವವಿದ್ಯಾಲಯದಿಂದ ವಿಜ್ಞಾನದ ಪದವಿಯನ್ನು 1934ರಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದನು. 1936ರಲ್ಲಿ ಡಾಕ್ಟರೇಟ್ ಗಳಿಸಿ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯದ ರೇಡಿಯೇಷನ್ ಲ್ಯಾಬೋರೇಟರಿ ಸೇರಿ ವೃತ್ತಿ ಜೀವನ ಪ್ರಾರಂಭಿಸಿದನು. ಕಾಂಪ್ಟನ್ನ ಶಿಷ್ಯನಾಗಿದ್ದ ಅಲ್ವಾರೆಝ್ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯದಲ್ಲಿ ಲಾರೆನ್ಸ್ನೊಂದಿಗೆ ಸೇರಿದನು. ಅಲ್ಲೇ ಉಳಿದ ಈತ 1945ರಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. ಭೌತಶಾಸ್ತ್ರದ ವಿಭಿನ್ನ ಶಾಖೆಗಳಲ್ಲಿ ಸಮಾನ ಆಸಕ್ತಿ ಹೊಂದಿದ್ದ ಅತಿ ವಿಶಿಷ್ಟ ವಿಜ್ಞಾನಿ ಅಲ್ವಾರೆಝ್. 1940ರಿಂದ 1943 ರವರೆಗೆ ಎಂಐಟಿಯಲ್ಲಿದ್ದನು. ನಂತರ ಮೂರು ವರ್ಷ ಚಿಕಾಗೋ”ವಿಶ್ವವಿದ್ಯಾಲಯದ ಲೋಹ ತಂತ್ರಜ್ಞಾನ ಪ್ರಯೋಗಾಲಯದಲ್ಲಿದ್ದು 1944 ರಿಂದ 1945 ರವರೆಗೆ ಮ್ಯಾನಹಟನ್ನ ಲಾಸ್ ಆಲ್ಮೋಸ್ ಪ್ರಯೋಗಾಲಯದಲ್ಲಿದ್ದನು. ಲೂಯಿ ವೃತ್ತಿ ಜೀವನದ ಆರಂಭದಲ್ಲಿ ದೃಕ್ ಶಾಸ್ತ್ರ ಹಾಗೂ ವಿಶ್ವ ಕಿರಣಗಳಲ್ಲಿ ಆಸಕ್ತಿ ಹೊಂದಿದ್ದನು. ವಿಶ್ವ ಕಿರಣಗಳ ಪೂರ್ವ ಪಶ್ಚಿಮ ಪರಿಣಾಮವನ್ನು ಆವಿಷ್ಕರಿಸಿದನು. ಅಲ್ವರೆಝ್ ಕಕ್ಷೀಯ ಎಲೆಕ್ಟ್ರಾನ್ (Orbital Electron) ಸೆರೆ ಹಿಡಿತದ ವಿದ್ಯಾಮಾನವನ್ನು ಅನಾವರಣಗೊಳಿಸಿದನು. ಈ ವಿದ್ಯಾಮಾನದಂತೆ ಪರಮಾಣುವಿನ ಬೀಜ, ಕಕ್ಷೆಯಲ್ಲಿ ಸುತ್ತುತ್ತಿರುವ ಎಲೆಕ್ಟ್ರಾನ್ನನ್ನು ಸೆರೆಹಿಡಿದು, ಕಡಿಮೆ ಪೆÇೀಟಾನ್ ಸಂಖ್ಯೆಯ ಬೀಜಕ್ಕೆ ಕಾರಣವಾಗುತ್ತದೆ. ಲೂಯಿ ,ಹಲವಾರು ವರ್ಷಗಳ ಕಾಲ ಬೈಜಿಕ ಭೌತಶಾಸ್ತ್ರದಲ್ಲಿ ಕಾರ್ಯ ನಿರತನಾಗಿದ್ದನು. 1937ರಲ್ಲಿ ಪರಮಾಣುಮಿನ ಬೀಜ ಕೆ ಎಲೆಕ್ಟ್ರಾನ್ನ್ನು ಮೊದಲ ಬಾರಿಗೆ ಪ್ರಯೋಗಗಳಿಂದ ತೋರಿಸಿದನು. ಅತಿ ನಿಧಾನಗತಿಯ ನ್ಯೂಟ್ರಾನ್ ದೂಲಗಳನ್ನು (Neutron Beams) ಪಡೆಯುವ ವಿಧಾನವನ್ನು ಲೂಯಿ ರೂಪಿಸಿದನು. ಇದು ಮುಂದೆ ಆರ್ಥೋ ಹಾಗೂ ಪ್ಯಾರಾ ಜಲಜನಕದಲ್ಲಿ ನ್ಯೂಟ್ರಾನ್ ಚದುರಿಕೆಯ ತಪಾಸಣೆಗೆ ನೆರವಾಯಿತು. ಬ್ಲಾಕ್ ಜೊತೆ ಗೂಡಿ, ನ್ಯೂಟ್ರಾನ್ ಕಾಂತೀಯ ಭ್ರಾಮ್ಯತೆಯನ್ನು (magnetic Moment) ಲೂಯಿ ಅಳೆದನು. ಲೂಯಿ ಹಾಗೂ ವೀನ್ಸ್ ಸೇರಿ 198 ಪಾದರಸ ದೀಪ ತಯಾರಿಸಿದರು. ಇದನ್ನು ಪರಿಷ್ಕರಿಸಿದ ಬ್ಯೂರೋ ಆಫ್ ಸ್ಟ್ಯಾಂಡರ್ಡ್ರ್ಸ್ ನವರು ಉದ್ದದ ಅಳತೆಯನ್ನು ವ್ಯಾಖ್ಯಾನಿಸಲು ಬಳಸಿದರು.
ಜಾಗತಿಕ ಯುದ್ದಕ್ಕಿಂತ ಸ್ವಲ್ಪ ಮೊದಲೇ ಲೂಯಿ ಹಾಗೂ ಕಾರ್ನೊಗೆ ಟ್ರೈಷಿಯಂನ ವಿಕಿರಣಶೀಲತೆಯನ್ನು ಪತ್ತೆ ಹಚ್ಚಿ ಇದು, ಸಾಮಾನ್ಯ ಹೀಲಿಯಂನ ಸ್ಥಿರ ಘಟಕವೆಂದು ತೋರಿಸಿದರು. ಟ್ರೈಟಿಯಂ, ಮುಂದೆ ಅತ್ಯುತ್ತಮ ಔಷ್ಣೀಯ ಬೈಜಿಕ ಚೈತನ್ಯದ ಆಕರವೆಂದು (Thermo-Nuclear Energy) ಸಾಬೀತಾಗಿ, ಹೀಲಿಯಂ ನಿಮ್ನ ತಾಪಮಾನಗಳ ಸಂಶೋಧನೆಯಲ್ಲಿ ಬಳಕೆ ಕಂಡಿತು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಎಂಐಟಿಯಲ್ಲಿ ಸೂಕ್ಷ್ಮ ತರಂಗ ಶೀಘ್ರ ಎಚ್ಚರಿಕೆ ವ್ಯವಸ್ಥೆ, ಅತ್ಯುನ್ನತ ಎತ್ತರದಿಂದ ಅಸ್ತ್ರವೆಸಗುವ ವ್ಯವಸ್ಥೆ ಭೂ ನಿಯಂತ್ರಿತ ವಿಮಾನ ಇಳಿಕೆ ವ್ಯವಸ್ಥೆಗಳನ್ನು ಕುರಿತಾಗಿ ಸಂಶೋಧನೆಗೆ ನಿಯೋಜಿಸಲ್ಪಟ್ಟನು. ಅಲ್ಮೋಸ್ ಪ್ರಯೋಗಾಲಯಗಳಲ್ಲಿ ಪ್ಲುಟೋನಿಯಂ ಅಣ್ವಸ್ತ್ರಗಳನ್ನು ಸಿಡಿಸುವ ಸಲಕರಣೆಗಳನ್ನು ಅಭಿವೃದ್ಧಿಗೊಳಿಸಿದನು. ಅಲ್ಮಗೋರ್ಡ್ನಲ್ಲಿ ನಡೆದ ಪ್ರಯೋಗಾತ್ಮಕ ಪರಮಾಣು ಅಸ್ತ್ರ ಸ್ಪೋಟ ಹಾಗೂ ಹಿರೋಷಿಮಾಗಳ ಮೇಲೆ ನಡೆಸಿದ ಪರಮಾಣು ಅಸ್ತ್ರ ದಾಳಿಯ ಪರಿಣಾಮಗಳ ವೈಜ್ಞಾನಿಕ ವೀಕ್ಷಕನಾಗಿ ಲೂಯಿ ನಿಯೋಜಿತನಾಗಿದ್ದನು. 1947ರಲ್ಲಿ ಬಕ್ರ್ಲೆಯಲ್ಲಿ ಪೂರ್ಣಗೊಂಡ 12 ಮೀ ವ್ಯಾಸದ ಪ್ರೊಟಾನ್ ಸರೇಖೀಯ ವೇಗೋತ್ಕರ್ಷಕದ (Accelarator) ವಿನ್ಯಾಸ ಹಾಗೂ ನಿರ್ಮಾಣ ನಿರ್ವಹಣೆಯನ್ನು ಲೂಯಿ ಯಶಸ್ವಿಯಾಗಿ ಮುಗಿಸಿದನು. 1951ರಲ್ಲಿ ಆವಿಷ್ಟ ವರ್ಗಾಂತರಿತ ವೇಗೋತ್ಕರ್ಷವನ್ನು ವಿವರಿಸಿದರು. ಇದಾದ ನಂತರ ಕ್ಯಾಲಿ¥sóÉÇೀರ್ನಿಯಾದ ರೇಡಿಯೇಷನ್ ಲ್ಯಾಬೋರೇಟರಿಯಲ್ಲಿ 600 ಕೋಟಿ ಎಲೆಕ್ಟ್ರಾನ್ ವೋಲ್ಟ್ ಬಳಸುವ ಬೆವೆಟ್ರಾನ್ನಲ್ಲಿ ಅಧಿಕ ಚೈತನ್ಯದ ಕಣಗಳನ್ನು ಕುರಿತಾಗಿ ಅಧ್ಯಯನ ನಡೆಸಿದನು. ಬೃಹತ್ ಗಾತ್ರದ ಬುದ್ಭುದ ಕೋಠಿಗಳನ್ನು(Buble Chamber) ಅವುಗಳಲ್ಲಿ ಪಡೆಯಲಾಗುವ ಲಕ್ಷಾಂತರ ಛಾಯಾಚಿತ್ರಗಳನ್ನು ವಿಶ್ಲೇಷಿಸುವ ಸಾಧನಗಳನ್ನು ನಿರ್ಮಿಸಲು ಲೂಯಿ ಯತ್ನಿಸಿದನು. ಇದರ ಫಲವಾಗಿ ಲೂಯಿ ಹಾಗೂ ಸಂಗಡಿಗರು, ಅಜ್ಞಾತವಾಗಿದ್ದ ಹಲವಾರು ಮೂಲ ಕಣಗಳನ್ನು ಪತ್ತೆ ಹಚ್ಚಿದರು.
1967ರ ನಂತರ ಲೂಯಿ ಬಲೂನ್ಗಳನ್ನು ಬಳಸಿ ವಿಶ್ವ ಕಿರಣಗಳ ಅಧ್ಯಯನ ನಿರತನಾದನು. ಲೂ¬ ನಿರಂತರ ಸಾಧನೆಗಳಿಗಾಗಿ 1968ರಲ್ಲಿ ನೊಬೆಲ್ ಪ್ರಶಸ್ತಿ ದಕ್ಕಿತು. ಲೂಯಿಸ್ ನ್ಯಾಷನಲ್ ಅಡಾಡೆಮಿ ಆಫ್ ಸೈನ್ಸ್ ಅಮೆರಿಕನ್ ಫಿûಲಾಸಫಿûಕಸಿಕಲ್ ಸೊಸೈಟಿ, ಅಮೆರಿಕನ್ ಫಿಸಿಕಲ್ ಸೊಸೈಟಿ ಅಮೆರಿಕನ್ ಅಕಾಡೆಮಿ ಆಫ್ ಸೈನ್ಸ್ ಅಂಡ್ ಆಟ್ರ್ಸ್ ಹಾಗೂ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್ನ ಸದಸ್ಯನಾಗಿದ್ದನು. ವಿಮಾನಗಳ ಭೂ ನಿಯಂತ್ರಿತ ಇಳಿಕೆ ವ್ಯವಸ್ಥೆ ಕುರಿತಾಗಿ ನಡೆಸಿದ ಸಂಶೋಧನೆಗಳಿಗಾಗಿ 1946ರಲ್ಲಿ ನ್ಯಾಷನಲ್ ಏರೋನಾಟಿಕಲ್ ಅಸೋಸಿಯೇಷನ್ನಿಂದ ಕೊಲಿಯರ್ ಟ್ರೋಫಿ ಹಾಗೂ ಫಿಲೆಡೆಲ್ಪಿಯಾ ನಗರದ ವತಿಯಿಂದ ಮೆಡಲ್ಯಾಂಡ್ ಪ್ರಶಸ್ತಿಯಿಂದ ಸನ್ಮಾನಿತನಾದನು. ಕ್ಯಾಲಿಫೊರ್ನಿಯಾದಿಂದ 1960ರಲ್ಲಿ ವರ್ಷದ ವಿಜ್ಞಾನಿಯೆಂದು ಗೌರವಿತನಾದನು. 1961ರಲ್ಲಿ ಐನ್ಸ್ಟೀನ್ ಪ್ರಶಸ್ತಿ 1963ರಲ್ಲಿ ಪಯೋನಿಯರ್ ಪ್ರಶಸ್ತಿ 1964ರಲ್ಲಿ ವಿಜ್ಞಾನದ ರಾಷ್ಟ್ರೀಯ ಪದಕ ಹಾಗೂ 1965ರಲ್ಲಿ ಮೈಖೇಲ್ಸನ್ ಪ್ರಶಸ್ತಿಗಳು ಲೂಯಿನನ್ನು ಅರಸಿ ಬಂದವು. ಅಲ್ಪಾರೆಝ್ ಭೌತಶಾಸ್ತ್ರವನ್ನು ಅನ್ವಯಗೊಳಿಸುವಲ್ಲಿ ಅನನ್ಯ ಪ್ರತಿಭೆ ನೈಸರ್ಗಿಕ ವಿಶ್ವ ವಿಕಿರಣದಲ್ಲಿನ ಕ್ಷ-ಕಿರಣದ ಘಟಕ ಬಳಸಿ, ವಿಶ್ವ ವಿಖ್ಯಾತವಾದ ಈಜಿಪ್ತಿನ ಷೆಫ್ರೆನ್ ಪಿರಮಿಡ್ನಲ್ಲಿ ಯಾವುದೇ ಗುಪ್ತ ಕೊಠಡಿ ಇಲ್ಲವೆಂದು ತೋರಿಸಿದನು. ಭೌತಶಾಸ್ತ್ರದ ನೆರವಿನೊಂದಿಗೆ ಜಾನ್ ಎಫ್ ಕೆನಡಿಯ ಹಂತಕ ಒಬ್ಬನೇ ಎಂದು ನಿರೂಪಿಸಿದನು. ಮಗನಾದ ವಾಲ್ಟರ್ ಜೊತೆ ಸೇರಿ , ಆರೂವರೆ ಕೋಟಿ ವರ್ಷಗಳ ಹಿಂದೆ ಡೈನೋಸರಾಸ್ ಸಂತತಿ ಅಳಿಯಲು, ಕಾರಣವಾದ, ನೈಸರ್ಗಿಕ ಉತ್ಪಾತವನ್ನು ಕುರಿತಾಗಿ ಸಂಶೋಧನೆ ನಡೆಸಿದನು. ಈ ಸಂಶೋಧನೆಯಿಂದ ಭೂಮಿಗೆ ಅಪ್ಪಳಿಸಿದ ಉಲ್ಕೆಯಿಂದ ಉದ್ಭವಿಸಿದ ಬೆಂಕಿ, ಅಥವಾ ಕವಿದ ಧೂಳಿನಿಂದ ಡೈನೋಸಾರಸ್ ಸಂತತಿ ಕೊನೆಗೊಂಡಿರಬಹುದೆಂದು, ವಾದಿಸಿದನು. ಕನ್ನಡಕಧಾರಿಯಾಗಿದ್ದ ಅವನಿಗೆ ದ್ವಿನಾಭಿ ಮಸೂರಗಳು (Bifocal Lenses) ಆರಾಮದಾಯಕವಲ್ಲವೆನಿಸಿ ಎರಡು ದೃಗೋಪಕರಣ ಕಂಪನಿಗಳನ್ನು ಸ್ಥಾಪಿಸಿದನು. ಒಂದು ಕಂಪನಿ ವ್ಯತಸ್ತನಾಭಿ (Variable Focus) ಮಸೂರ ಮಾಡಿದರೆ, ಮತ್ತೊಂದು ದೃಗ್ ಸ್ಥಿರಕಾರಕ ನಿರ್ಮಾಣದಲ್ಲಿ ನಿರತವಾಯಿತು. ಈ ಸ್ಥಿರಕಾರಕ ಸಿನಿಮಾ ಕ್ಯಾಮೆರಾ ಹಾಗೂ ದುರ್ಬೀನುಗಳಲ್ಲಿನ ಅಲುಗಾಟವನ್ನು ನಿವಾರಿಸುತ್ತದೆ. ಬೇರೆ ವಿಜ್ಞಾನಿಗಳಿಗೆ ಹೋಲಿಸಿದಂತೆ ಆಲ್ಪಾರೆಝಜದು ಬಹು ವಿಭಿನ್ನ ವ್ಯಕ್ತಿ. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಗೆಲ್ಮನ್,ಮುರ್ರೆ (1929--)1969
Gell-Mann , Murray
ಅಸಂಸಂ-ಸೈದ್ಧಾಂತಿಕ ಭೌತಶಾಸ್ತ್ರ- ಮೂಲ ಕಣಗಳ ಸ್ವರೂಪ, ಲಕ್ಷಣ ತಿಳಿಯಲು ಸಮೂಹ ಸಿದ್ಧಾಂತ ಬಳಸಿದಾತ.
ಗೆಲ್ಮನ್ ಮೆಸಾಚುಸೆಟ್ಸ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು, 22ನೇ ವರ್ಷಕ್ಕೆ ಡಾಕ್ಟರೇಟ್ ಗಳಿಸಿದನು. ಎನ್ರಿಕೊ ಫರ್ಮಿಯ ಮಾರ್ಗದರ್ಶನದಲ್ಲಿ ದುಡಿದ ಗೆಲ್ ಮಾನ್ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜೆ ಸೇರಿ,1967ರಲ್ಲಿ ಅಲ್ಲಿಯೆೀ ಸೈದ್ಧಾಂತಿಕ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. ಗೆಲ್ಮನ್, 24ನೇ ವಯಸ್ಸಿನಲ್ಲಿರುವಾಗ, ಮೂಲಕಣಗಳ ಸೈದ್ಧಾಂತಿಕ ಅಧ್ಯಯನಕ್ಕೆ ಮಹತ್ತರವಾದ ಹೊಸ ದೃಷ್ಟಿ ನೀಡಿದನು. ಗೆಲ್ಮನ್ ಯಾವುದೇ ಪ್ರಬಲ ಬೈಜಿಕ ಅಂತಕ್ರಿಯೆ (Nuclear Interaction), ನಡೆದಾಗಲೂ , ಉಳಿಸಲೇ ಕೊಳ್ಳಬೇಕಾದ ಕ್ವಾಂಟಂ ಸಂಖ್ಯೆಯೊಂದನ್ನು ಪರಿಚಯಿಸಿದನು. ಇದನ್ನು ಸೈದ್ಧಾಂತಿಕವಾಗಿ ‘ಸ್ಟ್ರೇಂಜ್ನೆಸ್’ ಎಂದು ಕರೆಯಲಾಗುತ್ತದೆ. ಗೆಲ್ಮನ್ ಮತ್ತು ಸ್ವತಂತ್ರವಾಗಿ ನೀಮನ್ ‘ಸ್ಟ್ರೆಂಜ್ನೆಸ್’ ತತ್ತ್ವ ಬಳಸಿ ಮೂಲ ಕಣಗಳನ್ನು 1,8,10 ಅಥವಾ 27ರ ಗುಣಿಕೆಯ ಗುಂಪುಗಳಾಗಿ ವರ್ಗೀಕರಿಸಿದರು. ಪ್ರತಿಯೊಂದು ಈ ಬಗೆಯ ವರ್ಗವೂ, ಸಮಾಂಗೀಯತೆಯ ಅಭಿಕರ್ಮದಿಂದ (Symmetrical Operator), ಸಂಬಂಧಗೊಳಿಸಲ್ಪಟ್ಟಿದ್ದಿತು. ಗೆಲ್ಮನ್ ಸಿದ್ಧಾಂತ ಮತ್ತು ಲೆಕ್ಕಚಾರಗಳು ಒಮೆಗಾ-ಮೈನಸ್ ಎನ್ನುವ ಮೂಲಕಣ ಅಸ್ತಿತ್ವದಲ್ಲಿದೆಯೆಂದು ಮುನ್ನಡಿದವು. 1964ರಲ್ಲಿ ಪ್ರಯೋಗಾಲಯದಲ್ಲಿ ಮೊದಲ ಬಾರಿಗೆ ಈ ಕಣಗಳನ್ನು ಗುರುತಿಸಲಾಯಿತು. ಇದೇ ವರ್ಷ ಗೆಲ್ಮನ್ ಜಿ. ಝ್ವೀಗ್ ಜೊತೆ ಸೇರಿ, ಕ್ವಾರ್ಕ್ಗಳ ಪರಿಕಲ್ಪನೆ ನೀಡಿದರು. ಕ್ವಾರ್ಕ್ಗಳಿಗೆ 1/3,2/3 ವಿದ್ಯುದಾವೇಶವಿದ್ದು, ಇವುಗಳಿಂದ ಬೇರೆಯ ಹ್ಯಾಡ್ರನ್ಸ್ ನಂತಹ ಬೈಜಿಕ ಕಣಗಳನ್ನು ಪಡೆಯುವುದು ಸಾಧ್ಯ. ಈಗ ಒಟ್ಟು ಆರು ಬಗೆಯ ಕ್ವಾರ್ಕ್ಗಳನ್ನು ಒಪ್ಪಲಾಗಿದ್ದು, ಇವುಗಳಲ್ಲಿ ಐದನ್ನು 1964ರಲ್ಲೇ ಪತ್ತೆ ಹಚ್ಚಲಾಯಿತಾದರೂ, ಆರನೆಯದು 1995ರವರೆಗೆ ಸಿಕ್ಕಿರಲಿಲ್ಲ. ಕ್ಷೀಣ ಬೈಜಿಕ ಬಲಗಳ (Weak Nuclear Forces)ಬಗೆಗೆ ಫೆಯ್ನ್ಮನ್ ಜೊತೆ ಸೇರಿ ಗೆಲ್ಮನ್ ಗಮನಾರ್ಹ ಕೊಡುಗೆಯನ್ನು ನೀಡಿದ್ದಾನೆ. ಗೆಲ್ಮನ್ 1969ರ ನೊಬೆಲ್ ಪ್ರಶಸ್ತಿಯಿಂದ ಗೌರವಿತನಾಗಿದ್ದಾನೆ. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಆಲ್ಫ್’ವೆಯ್ನ್, ಹ್ಯಾನ್ನೀಸ್ ಒಲೋಫ್ ಗೋಸ್ಟ (1908-95) -1970
Alfven, Hannes Olof Gosta (Alfvayn) (PHY.) 1970
ಸ್ವೀಡನ್-ಸೈದ್ಧಾಂತಿಕ ಭೌತಶಾಸ್ತ್ರ - ಪ್ಲಾಸ್ಲಾ ಭೌತಶಾಸ್ತ್ರದ ಮುಂಚೂಣಿಗ
ಉಪ್ಸಾಲಾ ನಗರದಲ್ಲಿ ಶಿಕ್ಷಣ ಪಡೆದ ಆಲ್ಫ್’ವೆಯ್ನ್ 1967ರವರೆಗೆ ಸ್ವೀಡನ್ನಲ್ಲಿದ್ದು ನಂತರ ಕ್ಯಾಲಿಫೋರ್ನಿಯಾಕ್ಕೆ ಸಾಗಿದನು. ಈತನ ಸಂಶೋಧನೆಗಳು ಕಾಂತೀಯ ಹಾಗೂ ವೈದ್ಯುತ್ ಪ್ರಭಾವದಡಿಯಲ್ಲಿ ಪ್ಲಾಸ್ಲಾ ವರ್ತಿಸುವ ಬಗೆಗೆ ಮೀಸಲಾಗಿದ್ದವು. 1942ರಲ್ಲಿ ಅಲ್ಫ್’ವೆಯ್ನ್ ಪ್ಲಾಸ್ಮಾದಲ್ಲಿ ಕಾಂತೋ-ಜಲಗತಿಶೀಲ ಅಲೆಗಳು (Magneto-Hydrodynamic) ಇರುವುದರ ಮುನ್ಸೂಚನೆ ನೀಡಿದನು. ನಂತರ ಅವುಗಳ ಅಸ್ತಿತ್ವ ಖಚಿತಗೊಂಡು ಆಲ್ಫ್ವೆಯ್ನ್ ತರಂಗಗಳೆಂದು ಹೆಸರಾದವು. ಆಲ್ಫ್ವೆಯ್ನ್ ಪರಿಕಲ್ಪನೆಗಳನ್ನು ತಾರಾ ಪ್ಲಾಸ್ಮಾಗಳಿಗೂ ಹಾಗೂ ಪ್ರಯೋಗಾರ್ಥದ ಬೈಜಿಕ ಸದಳನ ಪ್ರತಿಕ್ರಿಯಾಕಾರಗಳಿಗೂ (Nuclear Fusion Reactor ) ಅನ್ವಯಗೊಂಡವು. ಕಾಂತೋ ಜಲಗತಿಶೀಲ ಕ್ಷೇತ್ರದಲ್ಲಿನ ಸಂಶೋಧನೆಗಳಿಗಾಗಿ 1970 ನೊಬೆಲ್ ಪ್ರಶಸ್ತಿಯನ್ನು ಲೂಯಿ ಯೂಜಿನ್ ಫೆಲಿಕ್ಸ್ ವೀಲ್'ನೊಂದಿಗೆ ಹಂಚಿಕೊಂಡನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ನೆಯಲ್,ಲೂಯಿಸ್ (ಯೂಜಿನ್, ಫೆಲಿಕ್ಸ್) –(1904--) 1970
Neel , Louis (Eugene Felix)
ಫ್ರಾನ್ದ್-ಭೌತಶಾಸ್ತ್ರ- ಪ್ರತಿ ಫೆರೋಕಾಂತೀಯತೆ (Anti Ferromagnetism)ಅನಾವರಣಕಾರ.
ಎಕೊಲೆ ನಾರ್ಮಲ್ ಸುಪೀರಿಯರ್ನಿಂದ ಪದವಿಗಳಿಸಿದ ನೆಯಲ್, ಪಿ.ವೀಸ್ನ ಕೆಳಗೆ ಸ್ಟ್ರಾಸ್ಬೋರ್ಗ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿದನು. 1940ರಲ್ಲಿ ಗ್ರೆನೋ ಬಿಲ್ಗೆ ಹೋಗಿ ಅದನ್ನು ಫ್ರಾನ್ಸಿನ ಅತ್ಯುತ್ತಮ ವೈಜ್ಞಾನಿಕ ಕೇಂದ್ರವಾಗುವಂತೆ ಶ್ರಮಿಸಿದನು. 1956ರಲ್ಲಿ ಬೈಜಿಕ ಅಧ್ಯಯನ ಕೇಂದ್ರದ ನಿರ್ದೇಶಕನಾದನು. ನೇಯಲ್, ಘನಗಳಲ್ಲಿನ ಕಾಂತತ್ವದ ಬಗೆಗೆ ಸಂಶೋಧಿಸಿದನು. 1936ರಲ್ಲಿ ವಿಶಿಷ್ಟ ಬಗೆಯದಾದ ಕಬ್ಬಿಣ ವಿರೋಧಿ ಕಾಂತತ್ವ ಅಸ್ತಿತ್ವದಲ್ಲಿರುವ ಮುನ್ಸೂಚನೆ ನೀಡಿದನು. ಕಬ್ಬಿಣದ ಕಾಂತಗಳಲ್ಲಿ ಎಲೆಕ್ಟ್ರಾನ್ನ ಗಿರಕಿ ಒಂದೇ ದಿಶೆಯಲ್ಲಿ ಪಂಜ್ತೀಕರಣಗೊಂಡಿದ್ದರೆ (Alignment) , ಕಬ್ಬಿಣ ವಿರೋದಿ ಸಾಮಾಗ್ರಿಗಳಲ್ಲಿ ಇವು ಪರಸ್ಪರ ವಿರುದ್ದ ದಿಕ್ಕಿನಲ್ಲಿ ಮೇಲೆ, ಕೆಳಗೆ ಪಂಜ್ತೀಕರಣಗೊಂಡಿರುತ್ತವೆ. ಒಂದು ನಿರ್ದಿಷ್ಟ ತಾಪಮಾನ ತಲುಪಿದ ನಂತರ ಇವು ಅನುಕಾಂತತೆಯತ್ತ ಹೊರಳುತ್ತವೆ. 1938ರಲ್ಲಿ ನೇಯಲ್ನ ಮುನ್ಸೂಚನೆ ಸರಿಯೆಂದು ಪ್ರಯೋಗಗಳಿಂದ ಸಾಬೀತಾದರೆ, 1940ರಲ್ಲಿ ನ್ಯೂಟ್ರಾನ್ ವಕ್ರೀಭವನದಿಂದ (Refraction)ಇದು ಖಚಿತಗೊಂಡಿತು ಇದು ಎಲೆಕ್ಟ್ರಾನಿಕ್ಸ್ನಲ್ಲಿ ¨ಹು ಉಪಯೋಗಿ ವಿದ್ಯಾಮಾನವಾಗಿ ಪರಿಗಣಿತವಾಗಿದೆ. 1970ರಲ್ಲಿ ನೇಯಲ್ ನೊಬೆಲ್ ಪ್ರಶಸ್ತಿ ಪಡೆದನು. ಭೂ ಕಾಂತತ್ವ ಚರಿತ್ರೆಯ ನಿರ್ಧಾರದಲ್ಲಿ ನೇಯಲ್ ಶ್ರಮಿಸಿದ್ದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
Hofstadter , Robert
ಅಸಂಸಂ-ಭೌತಶಾಸ್ತ್ರಜ್ಞ-ಬೈಜಿಕ ರಚನೆಂಯ ಅಧ್ಯಯನಕ್ಕೆ ಎಲೆಕ್ಟ್ರಾನ್ ಚದುರಿಕೆ ವಿದ್ಯಾಮಾನ ಪರಿಚಯಿಸಿದಾತ.
ನ್ಯೂಯಾರ್ಕ್ ಮತ್ತು ಪಿನ್ಸ್ಟನ್ನಿಂದ ಪದವಿ ಪಡೆದ ಹಾಫ್’ಸ್ಟ್ಯಾಡ್ಟರ್ ನಾರ್ಡನ್ ಲ್ಯಾಬ್ ಕಾರ್ಪೋರೇಷನ್ನಲ್ಲಿ ಕೆಲಸಕ್ಕೆ ಸೇರಿದನು. 1954ರಲ್ಲಿ ಸ್ಟ್ಯಾನ್’ಫೋರ್ಡ್ನಲ್ಲಿ ಪ್ರಾಧ್ಯಾಪಕನಾದನು. 1967 ರಿಂದ 1974ರವರೆಗೆ ಸ್ಟ್ಯಾನ್’ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಅಧಿಕ ಚೈತನ್ಯ ಪ್ರಯೋಗಾಲಯದ ನಿರ್ದೇಶಕನಾದನು. 1948ರಲ್ಲಿ ಹಾಫ್ಸ್ಟೆಟರ್ ಥ್ಯಾಲಿಯಂನಿಂದ ಕ್ರಿಯಾಶೀಲಗೊಳಿಸಲ್ಪಟ್ಟ ಸೋಡಿಯಂ ಅಯೋಡೈಡ್ ಬಳಸಿ ,ಮಿನುಗುವ ಗಣನಾಯಂತ್ರ ನಿರ್ಮಿಸಿದನು. ಹಾಫ್’ಸ್ಟ್ಯಾಡ್ಟರ್ ನಡೆಸಿದ ಪ್ರಯೋಗಗಳಿಂದ ಪ್ರೋಟಾನ್ ಮತ್ತು ನ್ಯೂಟ್ರಾನ್ ಬಿಂದು ಮಾತ್ರ ಕಣಗಳಾಗಿರದೆ ಅವುಗಳಿಗೆ ಗಾತ್ರ ಮತ್ತು ಆಕಾರ ಇದೆಯೆಂದು ತಿಳಿದು ಬಂದಿತು. ಇನ್ನು ಮುಂದುವರೆದು ಪರಸ್ಪರ ಆವಿಷ್ಟ ನಿರಸನಗೊಳ್ಳುವ ಮೆಸಾನ್ಗಳಿಂದ ಇವು ನಿರ್ಮಿಸಲಟ್ಟಿವೆಯೆಂದು ಒಪ್ಪಲಾಯಿತು. ಹಾಫ್ಸ್ಟೆಟರ್ ಮುನ್ನುಡಿದಂತೆ, ರೋ-ಮೆಸಾನ್ ಹಾಗೂ ಒಮೆಗಾ ಮೆಸಾನ್ಗಳು ಬೇರೆಯವರ ಪ್ರಯೋಗಗಳಲ್ಲಿ ಪತ್ತೆಯಾದವು. 1961ರ ನೊಬೆಲ್ ಪ್ರಶಸ್ತಿಯನ್ನು ಹಾಫ್’ಸ್ಟ್ಯಾಡ್ಟರ್ ಪಡೆದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಮೋಸ್ಬೌವರ್, ರುಡಾಲ್ಫ್ ಲುಡ್ವಿಗ್ (1929--) 1961
Mossabaur , Rudolph Ludwig
ಜರ್ಮನಿ-ಭೌತಶಾಸ್ತ್ರ- ಮೋಸ್ಬೌವರ್ ಪರಿಣಾಮ ಅನಾವರಣಗೊಳಿಸಿ ಅದನ್ನು ಸಾಪೇಕ್ಷ ಸಿದ್ಧಾಂತದ ಪರಿಶೀಲನೆಗೆ ಬಳಸಿದಾತ.
1955ರಲ್ಲಿ ಹೈಡೆಲ್ಬರ್ಗ್ನ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್ ಅಫ್ಮೆಡಿಕಲ್ ರಿಸರ್ಚ್ನಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗ ಮೋಸ್ಬೌವರ್ ಈಗ ಆತನ ಹೆಸರಿನಲ್ಲಿ ಕರೆಯಲಾಗುತ್ತಿರುವ ಪರಿಣಾಮವನ್ನು ಅನಾವರಣಗೊಳಿಸಿದನು. ಯಾವುದೇ ಪರಮಾಣುವಿನ ಬೀಜದಿಂದ ಉತ್ಸರ್ಜಿತವಾದ (Emitted) ಗಾಮಾ ಕಿರಣಗಳ ಚೈತನ್ಯ ಸ್ವಲ್ಪ ಚದುರಿರುತ್ತದೆ. ಹೈಸೆನ್ಬರ್ಗ್ನ ಅನಿಶ್ಚಿತತೆಯ ಸಿದ್ಧಾಂತದಂತೆ ಯಾವುದೇ ಕಣದ ಚೈತನ್ಯವನ್ನು ಖಚಿತವಾಗಿ ನಿರ್ಧರಿಸಲು ಸಾಧ್ಯವಿಲ್ಲ ಎನ್ನುವುದು ಇದರ ಮೊದಲ ಕಾರಣ .ಇದರೊಂದಿಗೆ ಎಲ್ಲಾ ಪರಮಾಣುಗಳು ಶಾಖದಿಂದ ಕಂಪನ ಸ್ಥಿತಿಯಲ್ಲಿರುತ್ತವೆ. ಹೀಗಾಗಿ ಗಾಮಾ ಕಿರಣಗಳನ್ನು ಉತ್ಸರ್ಜಿಸುವ ಪರಮಾಣು ಬೀಜ ಮತ್ತು ಅದನ್ನು ಹೀರಿಕೊಳ್ಳುವ ಸಾಧನದ ಮಧ್ಯೆ ಅನಿರ್ದಿಷ್ಟ ಹಾಗೂ ವ್ಯತ್ಯಸ್ತ ಚಲನೆಯಿರುತ್ತದೆ. ಇದರಿಂದಲೂ ಗಾಮಾ ಕಿರಣಗಳು ಚದುರುತ್ತವೆ. ಇದು ಡಾಪ್ಲರ್ ಚದುರಿಕೆ. ಈ ಚದುರಿಕೆಯ ನಿವಾರಣೆ ಸಾಧ್ಯ. ಇದಕ್ಕಾಗಿ ಮೋಸ್ಬೌವರ್ ಗಾಮಾಕಿರಣದ ಆಕರ ಮತ್ತುಅದನ್ನು ಹೀರಿಕೊಳ್ಳುವ ಸಾಧನವನ್ನು ಶೀತಲೀಕರಿಸಿ, ಚದುರಿಕೆಯನ್ನು ಕನಿಷ್ಟಗೊಳಿಸಲು ಯತ್ನಿಸಿದನು. ಆದರೆ ಪ್ರಯೋಗಗಳಿಂದ ಇದಕ್ಕೆ ತದ್ವಿರುದ್ದವಾದ ಫಲಿತಾಂಶಗಳು ದಕ್ಕಿ, ಮೊದಲಿಗಿಂತಲೂ ಶೀತಲೀಕರಿಸಿದ ಸ್ಥಿತಿಯಲ್ಲಿನ ಚದುರಿಕೆ ಹೆಚ್ಚಾಗಿದ್ದಿತು. ಇದೇ ಮೋಸ್ಬೌವರ್ ಪರಿಣಾಮ. 42 ಧಾತುಗಳ 72 ಸಮಸ್ಥಾನಿಗಳ ,88 ಗಾಮಾ ಉತ್ಸರ್ಜನೆಯಲ್ಲಿ ಈ ಪರಿಣಾಮವನ್ನು ಗುರುತಿಸಲಾಗಿದೆ. ಈ ಆಧಾರದ ಮೇಲೆ ಪರಮಾಣುವಿನ ಸುತ್ತಲಿರುವ ವಿಭಿನ್ನ ಎಲೆಕ್ಟ್ರಾನಿಕ್ ಪರಿಸರಗಳನ್ನು ಮೋಸ್ಬೌವರ್ ರೋಹಿತದಿಂದ ನಿರ್ಧರಿಸಬಹುದು. Fe304 ಕಬ್ಬಿಣದ ಅದಿರಿನಲ್ಲಿ Fe2 ಹಾಗೂ Fe3 ಬೀಜಗಳನ್ನು ಪ್ರತ್ಯೇಕವಾಗಿ ಗುರುತಿಸುವುದೂ ಮೋಸ್ಬೌವರ್ ಪರಿಣಾಮದಿಂದ ಸಾಧ್ಯ. ಗಾಮಾ ಕಿರಣಗಳು ಒಂದು ಗುರುತ್ವ ವಿಭವದಿಂದ (Potential) ಮತ್ತೊಂದು ಗುರುತ್ವ ವಿಭವಕ್ಕೆ ಸಾಗುವಾಗ ಅವುಗಳ ತರಂಗಾಂತರ ಬದಲಾಗುತ್ತದೆ. ಇದನ್ನು ಅಳೆದು ಐನ್ಸ್ಟೀನ್ನ ಸಾಪೇಕ್ಷತಾ ಸಿದ್ಧಾಂತ ಪರಿಶೀಲಿಸಲಾಗಿದೆ. ಮೋಸ್ಬೌವೆರ್ 1961ರ ನೊಬೆಲ್ ಪ್ರಶಸ್ತಿ ಪಡೆದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಲ್ಯಾಂಡೋ, ಲೆವ್, ಡೆವಿಡೋವಿಟ್ಚ್ (1908-1968) 1962
Landau , Lev Davidovich
ರಷ್ಯಾ-ಸೈದ್ಧಾಂತಿಕ ಭೌತಶಾಸ್ತ್ರ- ಹೀಲಿಯಂ ವಿಶಿಷ್ಟ ಗುಣಗಳನ್ನು ವಿವರಿಸಿದಾತ.
ಲ್ಯಾಂಡೋ, ಪೆಟ್ರೋಲಿಯಂ ಇಂಜಿನಿಯರ್ನ ಮಗ. ಬಾಕು, ಲೆನಿನ್ಗ್ರಾಡ್ಗಳಲ್ಲಿ ವಿದ್ಯಾಭ್ಯಾಸ ಮಾಡಿದನು. 1929ರಲ್ಲಿ ಕೊಪೆನ್ಹೇಗ್ನಲ್ಲಿ ಬೊಹ್ರ್ನ ಭೇಟಿ ಮಾಡಿದನು, ಮುಂದೆ ಇದು ಬಹು ಫಲಪ್ರದವಾದ ಸ್ನೇಹವಾಗಿ ಮಾರ್ಪಟ್ಟಿತು. 1932ರಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾಗಿ ಕಾರ್ಖೋವ್ಗೆ ಹೋದ ಲ್ಯಾಂಡೋ, 1935ರಲ್ಲಿ ಅಲ್ಲಿ ಪ್ರಾಧ್ಯಾಪಕನಾದನು. ಕಬ್ಬಿಣವನ್ನು ಹೋಲುವ ಕೆಲವು ಪದಾರ್ಥಗಳಲ್ಲಿ, ಕೆಲವು ನಿರ್ದಿಷ್ಟ ವಲಯಗಳಲ್ಲಿ ಪರಮಾಣು ಮಟ್ಟದಲ್ಲಿ ಕಾಂತತ್ವ ನೆಲೆಗೊಂಡಿರುತ್ತದೆ. ಇದು ಫೆರೋಕಾಂತೀಯತೆ (Ferromagnetism) ಇವುಗಳ ಗಣಿತೀಯ ಅಧ್ಯಯನವನ್ನು ಲ್ಯಾಂಡ್ಲೊ ನಡೆಸಿದನು. 1937ರಲ್ಲಿ ಮಾಸ್ಕೋದಲ್ಲಿ ಸ್ಥಾಪನೆಗೊಂಡಿದ್ದ ಇನ್ಸ್ಟಿಟ್ಯೂಟ್ ಆಫ್ ಫಿಸಿಕಲ್ ಪ್ರಾಬ್ಲಮ್ಸ್ ಸಂಸ್ಥೆಗೆ ಕಪಿಟ್ಸಾ ನಿರ್ದೇಶಕನಾಗಿದ್ದನು. ಈತ ಲ್ಯಾಂಡೋನನ್ನು ಅನ್ವಯಿಕ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥನಾಗಿ ಬರುವಂತೆ ಅಹ್ವಾನವಿತ್ತನು. ಇಲ್ಲಿ ಲ್ಯಾಂಡೋ, ಸೈದ್ಧಾಂತಿಕ ಭೌತಶಾಸ್ತ್ರ, ಕ್ವಾಂಟಂ ಬಲವಿಜ್ಞಾನ ,ಕಣ ಭೌತಶಾಸ್ತ್ರ, ಕ್ವಾಂಟಂ ಮೈದ್ಯುತ್ ಗತಿಶಾಸ್ತ್ರಗಳಿಗೆ ಭದ್ರ ಬುನಾದಿ ಹಾಕಲು ಶ್ರಮಿಸಿದನು, ಇ.ಎಂ. ಲಿಫ್ಷಿಟ್ಜ್ ಜೊತೆಗೂಡಿ, 1938ರಿಂದ ಲ್ಯಾಂಡೋ ಜಗತ್ಪ್ರಸಿದ್ದ ಪಠ್ಯ ಪುಸ್ತಕಗಳ ಸರಣಿಯನ್ನು ಪ್ರಕಟಿಸಿದನು, ಲ್ಯಾಂಡೋ, 2.19 ಕೆಲ್ವಿನ್ಗಿಂತ ಕೆಳಗಿನ ತಾಪಮಾನದಲ್ಲಿ ಸ್ನಿಗ್ದತೆ (Viscosity) ಇಲ್ಲವಾಗುವುದರ ಕಾರಣ ನೀಡಿದನು. ಹೀಲಿಯಂ 2 ರ ಅತಿವಾಹಕತ್ವದ ಗುಣಗಳನ್ನು ವಿವರಿಸಿದನು. ಲ್ಯಾಂಡೋನನ್ನು ಜರ್ಮನಿಯ ಗೂಢಚಾರನೆಂಬ ಸಂಶಯದ ಮೇಲೆ ಬಂಧಿಸಲಾಯಿತು. ಕಪಿಲ್ಸಾ ಇದನ್ನು ಬಲವಾಗಿ ವಿರೋಧಿಸಿದನು. ಲ್ಯಾಂಡೋ 1962ರ ನೊಬೆಲ್ ಪ್ರಶಸ್ತಿ ಪಡೆದನು. 1962ರಲ್ಲಿ ಮೋಟರ್ ಸೈಕಲ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡನು. ಈತನ ಹನ್ನೊಂದು ಮೂಳೆಗಳು ಮುರಿದು ಬುರಡೆ ಸೀಳಿತು. ಲ್ಯಾಂಡೋ ಇದಾದ ನಂತರ ಚೇತರಿಸಿಕೊಳ್ಳಲಾಗದೆ ಆರು ವರ್ಷಗಳ ಕಾಲ ನೋವನ್ನು ಅನುಭವಿಸಿ ಮರಣ ಹೊಂದಿದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಗೋಪೆರ್ಟ್,ಮೇಯರ್, ಮಾರಿಯಾ (1906-1972) 1963
Goeppert , Maria Meyer
ಜರ್ಮನಿ-ಅಸಂಸಂ-ಗಣಿತೀಯ ಭೌತಶಾಸ್ತ್ರಜ್ಞೆ.
ಮಾರಿಯಾ ಗಟ್ಟಿಂಜೆನ್ನಲ್ಲಿ ಹುಟ್ಟಿದಳು. ಅವಳ ಕುಟುಂಬ ಸ್ನೇಹಿತನಾಗಿದ್ದ ಹಿಲ್ಬರ್ಟ್ನ ಪ್ರಭಾವದಿಂದಾಗಿ ಮಾರಿಯಾ ಗಣಿತದಲ್ಲಿ ಪದವಿ ಪಡೆದಳು. 1927ರಲ್ಲಿ ಬಾರ್ನ್ ನೀಡಿದ ಉಪನ್ಯಾಸಗಳಿಗೆ ಮಾರು ಹೋದ ಮಾರಿಯಾ ಭೌತಶಾಸ್ತ್ರದಲ್ಲಿ ಆಸಕ್ತಿ ತಳೆದಳು. 1930ರಲ್ಲಿ ಎಲೆಕ್ಟ್ರಾನ್ ರೋಹಿತದ ಬಗ್ಗೆ ಅಧ್ಯಯನ ನಡೆಸಲು, ಪ್ರಾರಂಭಿಸಿದ ಮಾರಿಯಾಗೆ, ಅಮೇರಿಕಾದ ಔಷಧಶಾಸ್ತ್ರಜ್ಞ ಜೊಸೆಫ್ಮೇಯರ್ನ ಪರಿಚಯವಾಯಿತು. ಮಾರಿಯಾ, ಮೇಯರ್ನನ್ನು ವಿವಾಹವಾದಳು. ವಿವಾಹದ ನಂತರ, ದಂಪತಿಗಳು ಜಾನ್ಸ್ಹಾಫ್ಕಿನ್ಸ್ ಸಂಸ್ಥೆ ಸೇರಿದರು. ಇಲ್ಲಿ ಮೇಯರ್ ಸೇರಿದಂತೆ ಇಬ್ಬರೇ ಇಬ್ಬರು ನೌಕರರಿದ್ದರು. ಸ್ತ್ರೀಯರೊಂದಿಗೆ ಕೆಲಸ ಮಾಡಲು ಯಾವುದೇ ಇನ್ನೊಬ್ಬ ಪುರುಷ ಉದ್ಯೋಗಿ ಒಪ್ಪಲಿಲ್ಲ. ಲಿಂಗ ತಾರತಮ್ಯದಿಂದಾಗಿ ಮಾರಿಯಾಳಿಗೆ ಬಹು ಕೆಳದರ್ಜೆಯ, ಅತ್ಯಲ್ಪ ವೇತನದ ಕೆಲಸವನ್ನು ಈ ಸಂಸ್ಥೆಯಲ್ಲಿ ನೀಡಲಾಯಿತು. ಮಾರಿಯಾ ಕ್ವಾಂಟಂ ವಿಧಾನಗಳಿಂದ ಅಣ್ವಕ ರೋಹಿತಗಳ (Molecular Spectrum) ಮೇಲೆ ನಡೆಸಿದ ಪ್ರಯೋಗಗಳು ಯುಕೆ ಮತ್ತು ಎನ್ರಿಕೊಫರ್ಮಿಯವರ ಗಮನಕ್ಕೆ ಬಂದವು. ಈ ಇಬ್ಬರೂ ಖ್ಯಾತರಿಗೆ ಮಾರಿಯಾಳ ಕೆಲಸದ ಮೇಲೆ ಅಪಾರ ಗೌರವ ,ಮೆಚ್ಚುಗೆ ಮೂಡಿ ಅವಳ ಪ್ರತಿಭೆಗೆ ತಕ್ಕ ಕೆಲಸ ಕೊಡಿಸುವಂತಹ ಪ್ರಯತ್ನಕ್ಕೆ ಕೈ ಹಾಕುವಂತೆ ಮಾಡಿತು. ದಂಪತಿಗಳಿಬ್ಬರನ್ನುಫರ್ಮಿ ಹಾಗೂ ಯುಕೆ, ಕೊಲಂಬಿಯಾಕ್ಕೆ ಕರೆಸಿಕೊಂಡು, ಉತ್ತಮ ನೌಕರಿಗೆ ಸೇರಿಸುವ ಪ್ರಯತ್ನದಲ್ಲಿ ಯಶಸ್ಸನ್ನು ಕಾಣಲಿಲ್ಲ. ಆದರೆ ಇವರಿಬ್ಬರ ಭೇಟಿ ಮಾರಿಯಾಳಲ್ಲಿ ಹೆಚ್ಚಿನ ಉತ್ಸಾಹ, ಉಮೇದಿಕೆಯನ್ನು ತುಂಬಿದವು. ಮಾರಿಯಾ ಹೊಸದಾಗಿ ಆವಿಷ್ಕರಿಸಲ್ಪಟ್ಟಿದ್ದ, ಯುರೇನಿಯಂಗಿಂತಲೂ ಭಾರವಾದ ಧಾತುಗಳ ಬಗೆಗಿನ ಸಂಶೋಧನೆಗಳನ್ನು ಮುಂದುವರಿಸಿದಳು. ಈ ವೇಳೆಗೆ ಎರಡನೇ ಜಾಗತಿಕ ಯುದ್ದ ಪ್ರಾರಂಭವಾಯಿತು. ಎನ್ರಿಕೋ ಫರ್ಮಿ ನೇತೃತ್ವದಲ್ಲಿ ಅಣ್ವಸ್ತ್ರ ತಯಾರಿಸುವ ಮ್ಯಾನ್ ಹಟ್ಟನ್ ಯೋಜನೆ ಪ್ರಾರಂಭವಾಯಿತು. ಇದ್ದಕ್ಕಿದ್ದಂತೆ, ಯುರೇನಿಯಂಗಿಂತಲೂ ಹೆಚ್ಚು ತೂಕದ ಧಾತುಗಳ ಬಗೆಗೆ ಅಧಿಕಾರಯುತವಾಗಿ ಬಲ್ಲ ಮಾರಿಯಾಳಿಗೆ ಬೇಡಿಕೆ ಹೆಚ್ಚತೊಡಗಿತು. ಮಾರಿಯಾ 15 ಜನ ವಿಜ್ಞಾನಿಗಳ ಮುಂದಾಳುವಾಗಿ ಮ್ಯಾನ್ಹಟನ್ ಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದಳು. ಮಾರಿಯಾ ಈಗಲೇ UP6 ಧಾತುವಿನ , ವಿದಳನ ಎಸೋಟೋಪ್ ಯುರೇನಿಯಂ -235ರ ಗುಣಗಳನ್ನು ನಿರ್ಧರಿಸಿದಳು. ಎರಡನೇ ಜಾಗತಿಕ ಯುದ್ದದ ನಂತರ, ಮಾರಿಯಾ ಮತ್ತು ಮೇಯರ್ ಚಿಕಾಗೋ ನಗರದಲ್ಲಿ ನೆಲೆಸಿದರು. ಇಲ್ಲಿರುವಾಗಲೇ ಮಾರಿಯಾ 2,8,20,28,50,82 ಅಥವಾ 126 ನ್ಯೂಟ್ರಾನ್ ಅಥವಾ ಪ್ರೋಟಾನ್, ಇರುವ ಧಾತುಗಳು ಸ್ಥಿರ ಸ್ಥಿತಿಯಲ್ಲಿರುವವೆಂದು ಪತ್ತೆ ಹಚ್ಚಿದಳು. ಇವುಗಳಿಗೆ ಅಪವಾದವಾಗಿ ಆಮ್ಲಜನಕ , ಕ್ಯಾಲ್ಸಿಯಂ, ಹೀಲಿಯಂನಲ್ಲಿ ಸ್ಥಿರತೆಗಾಗಿ ಏಳು ನ್ಯೂಟ್ರಾನ್ ಅಥವಾ ಪ್ರೋಟಾನ್ ಇರುವುದು ತಿಳಿದು ಬಂದಿತು. ಮಾರಿಯಾಗೆ ಇದಕ್ಕೆ ಕಾರಣ ನೀಡುವುದು ಮೊದಲಿಗೆ ಸಾಧ್ಯವಾಗಲಿಲ್ಲ. ಎಲೆಕ್ಟ್ರಾನ್ ಕಕ್ಷೆಯ ರಚನೆಯಲ್ಲಿರುವ ಕಾರಣಗಳೇ ಇಲ್ಲೂ ಇರಬಹುದೆಂದು ಮಾರಿಯಾ ಊಹಿಸಿದಳು. ಆದರೆ ಫರ್ಮಿಯಿಂದ ಅವಳಿಗೆ ದೊರೆತ ಕುರುಹಿನಿಂದಾಗಿ ಅವಳು ಪರಮಾಣುವಿನ ಬೈಜಿಕ ಸ್ಥಿತಿಗೆ ಕಕ್ಷಾ ಮಾದರಿಯನ್ನು ಬಳಸಿದಳು. ಇದರಲಿ ಸ್ಥಿರತೆಗಾಗಿ ಬೇಕಾಗಿರುವ ಪ್ರೋಟಾನ್ ಅಥವಾ ನ್ಯೂಟ್ರಾನ್ ಸಂಖ್ಯೆಗಳು ಖಚಿತವಾದವು. ಮಾರಿಯಾಳ ಈ ಸಾಧನೆಗಾಗಿ 1963ರ ನೊಬೆಲ್ ಪ್ರಶಸ್ತಿಯನ್ನು ಹೈಡೆಲ್ಬರ್ಗ್ನಲ್ಲಿದ್ದ ಜೆ.ಎಚ್.ಡಿ ಜೆನ್ಸೆನ್ನೊಂದಿಗೆ ಹಂಚಲಾಯಿತು. ಹೈಡೆನ್ಬರ್ಗ್ನಲ್ಲಿದ್ದ ಸ್ವತಂತ್ರ ಸಂಶೋಧನೆ ನಡೆಸಿದ್ದ ಜೆನ್ಸೆನ್ನ ಪರಮಾಣು ಮಾದರಿಗಳು ಮಾರಿಯಾ ರೂಪಿಸಿದವುಗಳಂತೆಯೇ ಇದ್ದುದು ಗಮನಾರ್ಹ. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಹ್ಯಾನ್ಸ್ , (ಡೇನಿಯಲ್) ಜೆನ್ಸನ್ (ಜೊಹಾನೆಸ್) (1907--)1963
Hans , (Daniel) Jensen (Johannes)
ನೆದರ್’ಲ್ಯಾಂಡ್-ಭೌತಶಾಸ್ತ್ರ-ಪ್ರಾವಸ್ಥಾ ವೈದೃಶ್ಯ ಸೂಕ್ಷ್ಮದರ್ಶಕ
ಹ್ಯಾನ್ಸ್ನ ತಂದೆ, ತೋಟದ ಉಸ್ತುವಾರಿಗಾರನಾಗಿದ್ದನು. 25 ಜೂನ್ 1907ರಂದು ಹ್ಯಾನ್ಸ್ನ ಜನನವಾಯಿತು. ಹ್ಯಾಂಬರ್ಗ್, ಫ್ರೀಬರ್ಗ್ಗಳಲ್ಲಿ ಕಾಲೇಜು ಶಿಕ್ಷಣ ಪೂರೈಸಿದ ಹ್ಯಾನ್ಸ್ 1932ರಲ್ಲಿ ಡಾಕ್ಟರೇಟ್ ಗಳಿಸಿದನು. ಹ್ಯಾಂಬರ್ಗ್ ವಿಶ್ವವಿದ್ಯಾಲಯದ ಸೈದ್ಧಾಂತಿಕ ಭೌತಶಾಸ್ತ್ರ ಸಂಸ್ಥೆ ಸೇರಿ, ಅಲ್ಲಿ ವೈಜ್ಞಾನಿಕ ಸಹಾಯಕನಾದನು. 1936 ರಲ್ಲಿ ಹ್ಯಾಂಬರ್ಗ್ನಿಂದ ಹ್ಯಾಬಿಲ್ ಕೈಕೆಳಗೆ ಸಂಶೋಧನೆ ಕೈಗೊಂಡು, ಸಂಪ್ರಬಂಧ ಮಂಡಿಸಿ, ಡಾಕ್ಟರೇಟ್ ಗಳಿಸಿದನು. 1937 ರಿಂದ ವೃತ್ತಿ ಜೀವನ ಪ್ರಾರಂಭಿಸಿ, 1941ರಲ್ಲಿ ಹ್ಯಾನೋವರ್ ಟೆಕ್ನಿಷ್ಹಾಕ್ಷುಲೆಯಲ್ಲಿ ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ಪ್ರಾದ್ಯಾಪಕನಾದನು. 1949ರಲ್ಲಿ ಹೈಡೆಲ್ಬರ್ಗ್ನಲ್ಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧಾಪಕನಾಗಿ ನೇಮಕಗೊಂಡನು. 1947ರಲ್ಲಿ ಹ್ಯಾಂಬರ್ಗ್ನಲ್ಲಿ ಪ್ರಾಧ್ಯಾಪಕ ಸ್ಥಾನ ದಕ್ಕಿತು. 1969ರಲ್ಲಿ ಫ್ಲೋರಿಡಾದ ಫೋರ್ಟ್ ಲೆಡರ್ ಡೇಲ್ನ ಗೌರವ ನಾಗರಿಕನಾಗಿ ಆಯ್ಕೆಗೊಂಡನು. 1947ರಿಂದ ಹ್ಯಾನ್ಸ್ ಹೈಡೆಲ್ ಅಕಾಡೆಮಿ ಆಫ್ ಸೈನ್ಸ್ನ ಸದಸ್ಯನಾಗಿದ್ದಾನೆ. 1960 ರಿಂದ ವಿಸ್ಕಾನ್ಸಿನ್, 1952 ರಿಂದ ಪ್ರಿನ್ಸ್’ಟನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿ, ಬಕ್ರ್ಲೆಯ ಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕನಾದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ವಿಗ್ನೆರ್, ಯುಜೆನ್ ಪೌಲ್ (1902-1995) 1963
Wigner , Eugene Paul
ಹಂಗರಿ-ಅಸಂಸಂ-ಭೌತಶಾಸ್ತ್ರ- ಕ್ವಾಂಟಂ ಬಲವಿಜ್ಞಾದಲ್ಲಿ ಸಮೂಹ ಸಿದ್ಧಾಂತದ ಬಳಕೆ ತಂದಾತ. ಬೈಜಿಕ ಪ್ರತಿಕ್ರಿಯೆಗಳಲ್ಲಿ ಸಾಮ್ಯತೆಯ ಸಂರಕ್ಷಣೆ ಅನಾವರಣಗೊಳಿಸಿದಾತ.
ವಿಗ್ನೆರ್, ವ್ಯಾಪಾರಿಯ ಮಗನಾಗಿದ್ದನು. 1925ರಲ್ಲಿ ಬರ್ಲಿನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಇಂಜಿನಿಯರಿಂಗ್ನಲ್ಲಿ ಡಾಕ್ಟರೇಟ್ ಪಡೆದನು. 1930ರಲ್ಲಿ ಪ್ರಿನ್ಸ್ಟನ್ಗೆ ಹೋದ ವಿಗ್ನೆರ್ , 1938ರಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾಗಿ 1971ರಲ್ಲಿ ನಿವೃತ್ತಿಯಾಗುವವರೆಗೂ ಅಲ್ಲಿದ್ದನು. ವಿಗ್ನೆರ್ ಡಿರಾಕ್ನ ಭಾವ ಮೈದುನನಾಗಿದ್ದನು. ವಿಗ್ನೆರ್, ಕ್ವಾಂಟಂ ಸಿದ್ಧಾಂತ ಹಾಗೂ ಬೈಜಿಕ ಭೌತಶಾಸ್ತ್ರದಲ್ಲಿ ಮಹತ್ತರ ಕೊಡುಗೆ ನೀಡಿದನು. ಭೌತಶಾಸ್ತ್ರದಲ್ಲಿ ಸಮಾಂಗೀಯತೆ ತತ್ತ್ವಗಳಿಗೆ ಸಮೂಹ ಸಿದ್ಧಾಂತ ಬಳಸಿದನು. 1927ರಲ್ಲಿ ವಿಗ್ನೆರ್ ಬೈಜಿಕ ಪ್ರತಿಕ್ರಿಯೆಗಳಲ್ಲಿ ಸಾಮ್ಯತೆಯ ಸಂರಕ್ಷಣೆಯಾಗುವುದೆಂದು ತೋರಿಸಿದನು. ಇದರ ಅರ್ಥವೆಂದರೆ ಭೌತಶಾಸ್ತ್ರದಲ್ಲಿ ಎಡ-ಬಲ, ಋಣ- ಧನ ಎನ್ನುವ ವೈವಿಧ್ಯತೆಗಳು ಭೌತಿಕ ಕ್ರಿಯೆಗಳ ಮೇಲೆ ಯಾವುದೇ ಪ್ರಭಾವ ಬೀರಲಾರವು. ಅದರೆ 1958ರಲ್ಲಿ ಲೀ ಹಾಗೂ ಟಿಂಗ್ ಸಾಮ್ಯತೆಗೆ ಬಹು ಅಪರೂಪದ ಅಪವಾದಗಳನ್ನು ಗುರುತಿಸಿದರು. ಬೀಟಾ ಶೈಥಿಲ್ಯಗೊಂಡು (Decay) ಬೀಜದಿಂದ ಎಲೆಕ್ಟ್ರಾನ್ ಹೊಮ್ಮಿದಾಗ ಕ್ರಿಯಾಸಾಮ್ಯತೆ ನಷ್ಟವಾಗುವುದೆಂದು ತೋರಿಸಿದರು. 1930ರ ಅವಧಿಯಲ್ಲಿ ವಿಗ್ನೆರ್ ನ್ಯೂಟ್ರಾನ್ಗಳ ಬಗೆಗೆ ಸಂಶೋಧಿಸಿ, ನ್ಯೂಟ್ರಾನ್ ಹಾಗೂ ಪ್ರೋಟಾನ್ಗಳನ್ನು ಬಂಧಿಸಿರುವ ಪ್ರಬಲ ಬಲದ ಸ್ವರೂಪ ಅರಿಯಲು ಯತ್ನಿಸಿದನು. ಪ್ರಬಲ ಬಲ 10-15 ಮೀ ದೂರಕ್ಕೆ ಮಾತ್ರ ಸೀಮಿತವಾಗಿದ್ದು ಯಾವುದೇ ವೈದ್ಯುತ್ ಆವಿಷ್ಟವನ್ನು ಹೊಂದಿರುವುದಿಲ್ಲವೆಂದು ತೋರಿಸಿದನು. ಚಲಿಸುತ್ತಿರುವ ನ್ಯೂಟ್ರಾನ್ ನಿಶ್ಚಲ ಬೀಜದೊಂದಿಗೆ ಹೇಗೆ ಅಂತರ್ಕ್ರಿಯೆ ಹೊಂದಿರುವುದೆಂದು ಬ್ರೆಯಿಟ್ ವಿವರಿಸಿದನು. 1942ರಲ್ಲಿ ವಿಗ್ನೆರ್, ಸುಸ್ಥಿರ ಬೈಜಿಕ ಕ್ರಿಯಾ ಸರಣಿ ಸಾಧಿಸುವ ಮೊದಲ ಸ್ಥಾವರ ನಿರ್ಮಿಸುವಲ್ಲಿಫರ್ಮಿಗೆ ನೆರವಾದನು. ವಿಗ್ನೆರ್, 1963ರಲ್ಲಿ ಹ್ಯಾನ್ಸ್ ಜೆನ್ಸನ್ ಮತ್ತು ಮಾರಿಯಾ ಗೊಪೆರ್ಟ್ ಮೇಯರ್ರೊಂದಿಗೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
అಲೆಕ್ಸಾಂಡರ್, ಮಿಖಾಯಿಲೋವಿಖ್ ಪ್ರೊಖೊರೊವ್ (1916-2002) -1964
Alexander , Mikhailovich Prokhorov (PHY.) 1964
ರಷ್ಯಾ-ಭೌತಶಾಸ್ತ್ರ-ಮೇಸರ್ ಹಾಗೂ ಲೇಸರ್ ತತ್ವ ವಿವರಿಸಿದಾತ.
ಅಲೆಕ್ಸಾಂಡರ್ 11 ಜುಲೈ 1916ರಲ್ಲಿ ಆಸ್ಟ್ರೇಲಿಯಾದಲ್ಲಿ ಜನಿಸಿದನು. ರಷ್ಯಾದ ಅಕ್ಟೋಬರ್ ಮಹಾಕ್ರಾಂತಿಯ ನಂತರ 1923ರಲ್ಲಿ ಆತನ ತಂದೆ ತಾಯಿಗಳು ರಷ್ಯಾಕ್ಕೆ ಹೋಗಿ ನೆಲೆಸಿದರು. 1934ರಲ್ಲಿ ಅಲೆಕ್ಸಾಂಡರ್ ಲೆನಿನ್ ಗ್ರಾಡ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗ ಸೇರಿ ತನ್ನ ಪದವಿ ಶಿಕ್ಷಣ ಆರಂಭಿಸಿದನು. ಇಲ್ಲಿ ಖ್ಯಾತನಾಮರಾದ ವಿಜ್ಞಾನಿಗಳು ಉಪನ್ಯಾಸ ನೀಡುತ್ತಿದ್ದರು. ವಿ.ಎ ಫಾಕ್ಸ್ ಕ್ವಾಂಟಂ ಬಲವಿಜ್ಞಾನ, ಸಾಪೇಕ್ಷ ಸಿದ್ಧಾಂತ, ಫಿû್ರ¥sóï ಸಾಮಾನ್ಯ ಭೌತಶಾಸ್ತ್ರ ರೋಹಿತಶಾಸ್ತ್ರ ಹಾಗೂ ಇ.ಕೆ ಗ್ರಾಸ್ ಅಣ್ವಯಿಕ ಭೌತಶಾಸ್ತ್ರದ (Molecular Physics) ಬೋಧನೆ ಮಾಡುತ್ತಿದ್ದರು. ಇವರ ಉಪನ್ಯಾಸಗಳು ಅಲೆಕ್ಸಾಂಡರ್ ಭೌತಶಾಸ್ತ್ರದ ಮೂಲ ತತ್ತ್ವಗಳನ್ನು ಅರಿಯಲು ನೆರವಾದವು. 1939ರಲ್ಲಿ ಪದವಿ ಗಳಿಸಿದ ಅಲೆಕ್ಸಾಂಡರ್ ಮಾಸ್ಕೋದ ಫಿûಸಿಕಲ್ ಇನ್ಸಿಟ್ಯೂಟ್ನಲ್ಲಿ ಲೆಬೆಡೆವ್ ಮಾರ್ಗದರ್ಶನದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದನು. ಈ ಅವಧಿಯಲ್ಲಿ ಅಂದೋಳನ ಪ್ರಯೋಗಾಲಯದಲ್ಲಿ ಪಾಪಲೆಕ್ಸಿಯ ಮಾರ್ಗದರ್ಶನ ಲಭ್ಯವಾಯಿತು. ಇದರ ನಂತರ ರೇಡಿಯೋ ಅಲೆಗಳ ಪ್ರಸರಣ ಕುರಿತಾದಂತೆ ಅಲೆಕ್ಸಾಂಡರ್ ಅಧ್ಯಯನ ಪ್ರಾರಂಭಿಸಿದನು. 1941ರಲಿ ಎರಡನೇ ಜಾಗತಿಕ ಯುದ್ದದ ಕರಿನೆರಳು ಚಾಚಿ, ಕೆಂಪು ಸೇನೆಗೆ ನಿಯೋಜಿತನಾದನು. ಯುದ್ದದಲ್ಲಿ ಭಾಗಿಯಾಗಿ ಎರಡು ಬಾರಿ ಗಾಯಗೊಂಡನು. 1944ರಲ್ಲಿ ಎರಡನೇ ಬಾರಿ ಗಾಯಗೊಂಡಾಗ, ಆತನನ್ನು ಸೇನೆಯಿಂದ ಬಿಡುಗಡೆಗೊಳಿಸಿ ಆಂದೋಳನ ಪ್ರಯೋಗಾಲಯಕ್ಕೆ ಹೆಚ್ಚಿನ ಸಂಶೋಧನೆಗಾಗಿ ಕಳಿಸಲಾಯಿತು. ಇಲ್ಲಿ ಎಸ್.ಎಂ.ರೈಟೋನ್ ಕೈ ಕೆಳಗೆ ಅರೇಖೀಯ ಆಂದೋಳನಗಳ (Nonlinear Asscilator) ಅಧ್ಯಯನ ಪ್ರಾರಂಭಿಸಿದನು. 1947ರಲ್ಲಿ ವಿ.ಐ. ವೆಕ್ಸ್ಲರ್, ಸೆಂಟಿಮೀಟರ್ ತರಂಗಾಂತರದ(Wave Length) ವ್ಯಾಪ್ತಿಯಲ್ಲಿನ ಸಂಲಗ್ನಗೊಂಡ (Coherent) ಎಲೆಕ್ಟ್ರಾನ್ ವಿಕಿರಣಗಳನ್ನು ಕುರಿತಾಗಿ ಹೆಚ್ಚಿನ ಸಂಶೋಧನೆ ನಡೆಸುವಂತೆ ಅಲೆಗ್ಸಾಂಡರ್ಗೆ ಸೂಚಿಸಿದನು. ಇದರ ಫಲವಾಗಿ 1951ರಲ್ಲಿ ಅಲೆಕ್ಸಾಂಡರ್ ಸಂಲಗ್ನಗೊಂಡ ವಿಕಿರಣಗಳನ್ನು ವಿವರಿಸುವ ಪಾಂಡಿತ್ಯಪೂರ್ಣ ಲೇಖನ ಪ್ರಕಟಿಸಿದನು. 1946ರಲ್ಲಿ ಪಾಪಲೆಕ್ಸಿ ಮರಣ ಹೊಂದಿದಾಗ, ಅಂದೋಳನ ಪ್ರಯೋಗಾಲಯದ ನೇತೃತ್ವದ ಹೊಣೆ ಲೆಯಾನ್ ಟೋವಿಕ್ ಹೆಗಲಿಗೇರಿತು.
1950ರಿಂದ ಈತನಿಗೆ ಸಹಾಯಕನಾಗಿ ಅಲೆಕ್ಸಾಂಡರ್ ಶ್ರಮಿಸತೊಡಗಿದನು. ಇಲ್ಲಿ ಅಲೆಗ್ಸಾಂಡರ್ ರೇಡಿಯೋ ರೋಹಿತಶಾಸ್ತ್ರ, ಕ್ವಾಂಟಂ ಎಲೆಕ್ಟ್ರಾನಿಕ್ಸ್ಗಳಲ್ಲಿ ಸಂಶೋಧನೆ ಕೈಗೊಂಡಾಗ ತನ್ನ ಶಿಷ್ಯರು ಅದನ್ನು ಮುಂದುವರಿಸಿಕೊಂಡು ಹೋಗುವಂತೆ ಮಾಡಿದನು. ಅಲೆಗ್ಸಾಂಡರ್ ಬಸೋವ್ನೊಂದಿಗೆ ಸೂಕ್ಷ್ಮ ತರಂಗ ರೋಹಿತಶಾಸ್ತ್ರದಲ್ಲಿ ನಡೆಸಿದ ಪ್ರಯೋಗಗಳಿಂದ ಅಣ್ವಯಿಕ ಆಂದೋಳನಕಾರಿಗಳ (Molecular Ascilators) ಪರಿಕಲ್ಪನೆ ಮೂಡಿತು. ಇದನ್ನು ಇವರಿಬ್ಬರೂ ಸೈದ್ಧಾಂತಿಕ ರೂಪದಲ್ಲಿ ವಿವರಿಸಿದರು. ಅಂತಿಮವಾಗಿ ಅಲೆಕ್ಸಾಂಡರ್ ಹಾಗೂ ಬಸೋವ್ ಅಮೋನಿಯಾದ ಮೇಲೆ ಕ್ರಿಯಾಶೀಲವಾಗಿರುವ ಅಣ್ವಯಿಕ ಆಂದೋಳನಕಾರಕವನ್ನು ನಿರ್ಮಿಸಿದರು. ಇವರಿಬ್ಬರೂ ಸೇರಿ 1955ರಲ್ಲಿ ಋಣಾತ್ಮಕ ಹೀರಿಕೆಯನ್ನು ಪಡೆಯುವ ವಿಧಾನದ ಪ್ರಸ್ತಾವನೆ ನೀಡಿದರು. 1950ರಿಂದ 1955 ರವರೆಗೆ ಅಲೆಕ್ಸಾಂಡರ್ ಹಾಗೂ ಸಂಗಡಿಗರು ಸೂಕ್ಷ್ಮತರಂಗ ರೋಹಿತಶಾಸ್ತ್ರದ ಆಧಾರದ ಮೇಲೆ ಅಣ್ವಯಿಕ ಸ್ವರೂಪ ನಿರ್ಧರಿಸಿದರು. 1955ರಿಂದ ಅಲೆಕ್ಸಾಂಡರ್ ಎಲೆಕ್ಟ್ರಾನಿಕ್ ಅಣು ಕಾಂತೀಯ ಅನುರಣನ (Molecular Magnetic Resonance) ಸಂಶೋಧನೆಯನ್ನು ಅಭಿವೃದ್ಧಿಗೊಳಿಸತೊಡಗಿದನು. ಹಲವಾರು ಸ್ಪಟಿಕಗಳಲ್ಲಿನ ಈ ಅನುರಣನದ ವಿಶ್ರಾಂತ ಕಾಲಾವಧಿ ನಿರ್ಧರಿಸಿದನು. ಇದೇ ಕಾಲದಲ್ಲಿ ಅಲೆಕ್ಸಾಂಡರ್, ಎ.ಎ. ಮೆನೆನ್ಕೂವ್ ಜೊತೆಗೂಡಿ ಎಲೆಕ್ಟ್ರಾನಿಕ್ ಅನುಕಾಂತೀಯ ಅನುರಣನ ಹಿನ್ನೆಲೆಯಲ್ಲಿ ರೂಬಿ ಸ್ಪಟಿಕವನ್ನು ಲೇಸರ್ ಉತ್ಪಾದಿಸಲು ಬಳಸಬಹುದೆಂದು 1957ರಲ್ಲಿ ಸೂಚಿಸಿದನು. ಅಲೆಕ್ಸಾಂಡಾರ್ ಹಾಗೂ ಮೆನೆನ್ಕೊವ್ ವಿಭಿನ್ನ ಸ್ಪಟಿಕಗಳನ್ನು ಬಳಸಿ ಮೇಸರ್ ಉತ್ಪಾದಿಸಿದರು. ಮಾಸ್ಕೊ ವಿಶ್ವವಿದ್ಯಾಲಯದ ಬೈಜಿಕ ಭೌತಶಾಸ್ತ್ರ ವಿಭಾಗದ ಮೂಲಕ ಇವರು ನಿರ್ಮಿಸಿದ ಮೇಸರ್ ಉತ್ಪಾದಕವನ್ನು ಪುಷನೋದಲ್ಲಿರುವ ರೇಡಿಯೋ ಖಗೋಳಶಾಸ್ತ್ರ ಸಂಸ್ಥೆಯಲ್ಲಿ 1957ರಲ್ಲಿ ಅಳವಡಿಸಲಾಯಿತು. 1958ರಲ್ಲಿ ಅಲೆಕ್ಸಾಂಡರ್ ಲೇಸರ್ ಉತ್ಪಾದನೆಗೆ ಹಲವಾರು ಕ್ರಾಂತಿಕಾರಕ ಮಾರ್ಗಗಳನ್ನು ಸೂಚಿಸಿದನು. 1963ರಲ್ಲಿ ಅಲೆಕ್ಸಾಂಡರ್ ಎ.ಎಸ್ ಸೆಲಿವೆನೆಂಕೋ ಜೊತೆಗೂಡಿ ದ್ವಿ-ಕ್ವಾಂಟಂ ಸ್ಥಿತ್ಯಂತರಗಳನ್ನು (ಃi-ಕಿuಚಿಟಿಣum ಖಿಡಿಚಿಟಿsiಣioಟಿs) ಬಳಸಿ ಲೇಸರ್ ಪಡೆಯುವ ಸಾಧ್ಯತೆಯನ್ನು ತಿಳಿಸಿದನು. ಇದಕ್ಕಾಗಿ ಮೇಸರ್ ಹಾಗೂ ಲೇಸರ್ಗಳ ಸಾಧನೆಗಾಗಿ, 1964ರಲ್ಲಿ ಅಲೆಕ್ಸಾಂಡರ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಬಸೊವ್,ನಿಕೊಲಾಯ್ (ಗೆನ್ನೆಡಿಯೆವಿಚ್) (1922--) -1964
Basov, Nikolai (Gennadiyevich) (PHY.) 1964
ರಷ್ಯಾ- ಭೌತಶಾಸ್ತ್ರ-ಲೇಸರ್ ಹಾಗೂ ಮೇಸರ್ ಉಪಜ್ಞೆಕಾರ.
ಎರಡನೇ ಜಾಗತಿಕ ಯುದ್ದದಲ್ಲಿ ಕೆಂಪು ಸೇನೆಯಲ್ಲಿ ಸೇವೆ ಸಲ್ಲಿಸಿದ ಬಸೊವ್ ನಂತರ ಮಾಸ್ಕೋದಲ್ಲಿ 1956ರಲ್ಲಿ ಡಾಕ್ಟೋರೇಟ್ ಗಳಿಸಿದನು. ನಂತರ 1962ರಲ್ಲಿ ಅದೇ ವಿಶ್ವ ವಿದ್ಯಾಲಯದ, ವಿಭಾಗ ಮುಖ್ಯಸ್ಥನಾದನು. 1952ಎಂದ ಬಸೊವ್, ಉದ್ರೇಕಿತ ಪರಮಾಣುಗಳನ್ನು ವಿಶ್ರಾಂತಿಗೊಳಿಸಿ ಅವುಗಳು ವಿಕಿರಣ ಸೂಸುವಂತೆ ಮಾಡುವುದರ ಮೂಲಕ ವೈದ್ಯುತ್ ಕಾಂತೀಯ ವಿಕಿರಣವನ್ನು ವರ್ಧನೆಗೊಳಿಸುವ ಸಾಧ್ಯತೆಯ ಬೆನ್ನು ಹತ್ತಿದನು. ಬಸೋವ್ನ ಸಹೋದ್ಯೋಗಿಯಾಗಿದ್ದ ಎ.ಎಂ. ಪೆÇ್ರಖೊರೋವ್ ಅನಿಲಗಳು ಹೊರಸೂಸುವ ಸೂಕ್ಷ್ಮ ತರಂಗಗಳ ಕರಾರುವಕ್ಕಾದ ಆವರ್ತನೆ ನಿರ್ಧರಿಸುವಲ್ಲಿ ನಿರತನಾಗಿದ್ದನು. 1955ರಲ್ಲಿ ಇವರಿಬ್ಬರೂ ಸೇರಿ ವೈದ್ಯುತ್ ಕಾಂತೀಯ ವಿಕಿರಣವನ್ನು ವರ್ಧನೆಗೊಳಿಸುವ,ಉದ್ರೇಕಿತ ಅಣುಗಳ ದೂಲಗಳನ್ನು ಪಡೆದರು. ಹಾಗೂ ಅದರ ತಯಾರಿಕೆಗೆ ಬಳಸಿದ ಉಪಯೋಗಿಸಿದ ಸಲಕರಣೆಗಳನ್ನು ಮೆಸರ್ ಎಂದು ಕರೆದರು. (MASER- Microwave Amplication by Stimulated Emission of Radiation ) ಬಸೊವ್, ಪ್ರೊಖೊರೋವ್ ಹಾಗೂ ಅಸಂಸಂಗಳಲ್ಲಿ ಸ್ವತಂತ್ರವಾಗಿ ಇದೇ ಬಗೆಯ ಅಧ್ಯಯನದಲ್ಲಿ ನಿರತವಾಗಿದ್ದ ಟೌನೆಸ್ 1964ರಲ್ಲಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದರು. ಬಸೊವ್ ಹಾಗೂ ಪ್ರೊಖೊರೊವ್ ಇನ್ನು ಮುಂದುವರೆದು, 1958ರಲ್ಲಿ ಲೇಸರ್ (LASER- Light Amplication by Stimulated Emission of Radiation ) ಉಪಜ್ಞೆಗೊಳಿಸಿದರು. ಅರೆವಾಹಕಗಳಲ್ಲಿ ಲೇಸರ್ ಪರಿಣಾಮ ಸಾಧ್ಯವೆಂದು ತೋರಿಸಿದರು.ಬಸೊವ್ ಹಾಗೂ ಫ್ರೊಖರೊವ್, ಮಿಡಿತದ ಲೇಸರ್, ಬೆಳಕಿನೊಂದಿಗೆ ದ್ರವ್ಯದ ಅಂತಕ್ರಿಯೆಯ ಬಗೆಗೂ ಕುರಿತಾದಂತೆಯೂ ಗಮನಾರ್ಹ ಸಂಶೋಧನೆ ನಡೆಸಿದ್ದಾರೆ. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಟೌನೆಸ್, ಚಾಲ್ರ್ಸ್ ಹಾರ್ಡ್ (1915--) 1964
Townes, Charles Hard
ಅಸಂಸಂ-ಭೌತಶಾಸ್ತ್ರ- ಮೇಸರ್ ಸಿದ್ಧಾಂತ ನೀಡಿದಾತ.
ಟೌನೆಸ್, ವಕೀಲನ ಮಗನಾಗಿದ್ದನು. ಫರ್ಮನ್ , ಡ್ಯೂಕ್ ವಿಶ್ವವಿದ್ಯಾಲಯ ಕ್ಯಾಲ್ಟೆಕ್ಗಳಿಂದ ಶಿಕ್ಷಣ ಪೂರೈಸಿದನು. ಬೆಲ್ ಟೆಲಿಫ್ಲೋನ್ ಲ್ಯಾಬೋರೇಟಎಯಲ್ಲಿ ನೌಕರಿ ಪ್ರಾರಂಭಿಸಿದ ಟೌನೆಸ್, ಎರಡನೇ ಜಾಗತಿಕ ಯುದ್ದದಲ್ಲಿ ರಡಾರ್ ವಲಯದಲ್ಲಿ ಕೆಲಸ ಮಾಡಿದನು. ರಡಾರ್ಗಳು ರೇಡಿಯೋ ಹಾಗೂ ಅವಗೆಂಪು ಕಿರಣ ತರಂಗ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಟೌನೆಸ್, 1947ರಲ್ಲಿ ಕೊಲಂಬಿಯಾದ ಭೌತಶಾಸ್ತ್ರ ವಿಭಾಗಕ್ಕೆ ಸೇರಿದನು. 1961ರಿಂದ 1967ರವರೆಗೆ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿದ್ದು ನಂತರ ಕ್ಯಾಲೊಪೋರ್ನಿಯಾದಲ್ಲಿ ಪ್ರಾಧ್ಯಾಪಕನಾದನು. 1945ರ ವೇಳೆಗೆ ಟೌನೆಸ್, ಪರಮಾಣು ಒಂದು ವಿನ್ಯಾಸದಿಂದ ಇನ್ನೊಂದು ವಿನ್ಯಾಸಕ್ಕೆ ಬದಲಾದಾಗ, ಫ್ಲೋಟಾನ್ಗಳನ್ನು ಉತ್ಸರ್ಜಿಸುವ ಅಥಾವ ಹೀರುವ ವಿದ್ಯಾಮಾನದ ಅಧ್ಯಯನ ನಡೆಸಿದ್ದನು. ಈ ಕ್ರಿಯೆಯಲ್ಲಿ ಫ್ಲೋಟಾನ್ಗಳು ನಿರ್ದಿಷ್ಟ ಅವಸ್ಥೆಗಳಲ್ಲಿರುತ್ತವೆ. ಉದಾಹರಣೆಗೆ ಹೇಳುವುದಾದರೆ ಕೊಡೆಯನ್ನು ಹೊರ ಬಿಚ್ಚುವ ಅಥಾವಾ ಒಳಗೆಳೆಯುವ ಕಾರ್ಯದ ಹೋಲಿಕೆಯಲ್ಲಿ ಅಮೋನಿಯಾ ಪರಮಾಣುಗಳು ಎರಡು ಸ್ಥಿತಿಗಳಲ್ಲಿರಬಲ್ಲವು. ಇಂತಹ ಸ್ಥಿತಿ ಜರುಗಿದಾಗಲೆಲ್ಲ ಈ ಪರಮಾಣುಗಳು 1.25 ಸೆಂ.ಮೀ ತರಂಗಾಂತರದ ಸೂಕ್ಷ್ಮ ತರಂಗದ ಹೀರಿಕೆಯಲ್ಲಿರುತ್ತವೆ. ಇಂತಹ ಕ್ರಿಯೆಯನ್ನು ವರ್ಧಿಸಿ ವೀಕ್ಷಿಸಲು ಸಾಧ್ಯವೆಂದು ಐನ್ಸ್ಟೀನ್ ಹೇಳಿದ್ದನು. ಟೌನೆಸ್, ಇಂತಹ ವರ್ಧಕವನ್ನು 1954ರಲ್ಲಿ ನಿರ್ಮಿಸಿ ಮೇಸರ್ ಎಂದು ಕರೆದನು. (MASER-Microwave AmpliCAtion by Sïtimulated Emmusion of Radiation= ಪ್ರೇರಿತ ವಿಕಿರಣ ಉತ್ಸರ್ಜನೆಯಿಂದ ಸೂಕ್ಷ್ಮ ತರಂಗ ವರ್ಧನೆ) ಟೌನೆಸ್ ಅನುಸರಿಸಿದಂತಹ ತಂತ್ರಗಳನ್ನು ರಷ್ಯದಲ್ಲಿ ಪ್ರೊಖೊರೊವ್ ಹಾಗೂ ಬಸೋವ್ ವಿವರಿಸಿದ್ದರು. ಮೇಸರ್ ಅಲ್ಪ ಕಾಲದಲ್ಲೇ ಪರಮಾಣು ಗಡಿಯಾರ, ರೇಡಿಯೋ ದೂರದರ್ಶಕ ಹಾಗೂ ವ್ಯೋಮಾಂತರಿಕ್ಷ ಸಂಪರ್ಕಗಳಲ್ಲಿ ಅಳವಡಿಸಲ್ಪಟ್ಟಿತು. ಟೌನೆಸ್ ಹಾಗೂ ಷ್ವಾಲೋ , ಸೂಕ್ಷ್ಮ ತರಂಗಗಳಂತೆ ಬೆಳಕನ್ನು ಸಹ ವರ್ಧಿಸಿ ಲೇಸರ್ ಪಡೆಯಲು ಸಾಧ್ಯವೆಂದು ಹೇಳಿದರು. ಪ್ರೇರಿತ ವಿಕಿರಣ ಉತ್ಸರ್ಜನೆಯಿಂದ ಬೆಳಕಿನ ವರ್ಧನೆ 1960ರಲ್ಲಿ ವ್ಯಾವಹಾರಿಕ ಬಳಕೆಗೆ ನೆರವಾಗಬಲ್ಲ ಲೇಸರ್ಗಳು “ಮೈಮಾನ್ನಿಂದ ನಿರ್ಮಾಣಗೊಂಡವು. 1964ರಲ್ಲಿ ಟೌನೆಸ್, ಬಸೋವ್ ಹಾಗೂ ಪ್ರೊಖೊರೊವ್ ನೊಬೆಲ್ ಪ್ರಶಸ್ತಿಗೆ ಪಾತ್ರರಾದರು. ಇದು ಕ್ವಾಂಟಂ ಎಲೆಕ್ಟ್ರಾನಿಕ್ಸ್ಗೆ ನಾಂದಿಯಾಯಿತು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಫೆಯ್ನ್’ಮನ್, ರಿಚರ್ಡ್ ಫಿಲಿಪ್ಸ್ (1918-1988 ) 1965
Feynmann , Richard Philips
ಅಸಂಸಂ-ಸೈದ್ಧಾಂತಿಕ ಭೌತಶಾಸ್ತ್ರ-ಕಣ ಭೌತಶಾಸ್ತ್ರದ ಗಣಿತೀಯ ಸಿದ್ಧಾಂತ ಅಭಿವೃದ್ದಿಗೊಳಿಸಿದಾತ.
ಫೆಯ್ನ್ಮನ್ನ ತಂದೆ ಸಮವಸ್ತ್ರ ತಯಾರಕನಾಗಿದ್ದನಲ್ಲದೆ, ಬಾಲಕನ ವೈಜ್ಞಾನಿಕ ಆಸಕ್ತಿ, ವೀಕ್ಷಣೆಗಳಿಗೆ ಬೆಂಬಲವಿತ್ತನು. ಮೆಸಾಚುಸೆಟ್ಸ್ ಮತ್ತು ಪ್ರಿನ್ಸ್’ಟನ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ ಫೆಯ್ನಮನ್ ಮೊದಲ ಅಣ್ವಸ್ತ್ರ ತಯಾರಿಕೆ ಯೋಜನೆ ಮ್ಯಾನ್ಹಟನ್ ಪ್ರಾಜೆಕ್ಟ್ನಲ್ಲಿ ದುಡಿದನು. ಇದಾದ ನಂತರ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬೋಧಕ ಸಿಬ್ಬಂದಿಯಾದನು. 1940ರಲ್ಲಿ ಫೆಯ್ನ್ಮನ್ ಕ್ವಾಂಟಂ ಸಿದ್ಧಾಂತದ ನೆರಳಿನಡಿಯಲ್ಲಿಯೇ ವೈದ್ಯುತ್ ಕಾಂತೀಯ ಅಂತ:ಕ್ರಿಯೆಗಳನ್ನು ವಿವರಿಸುವ ಗಣಿತೀಯ ತಂತ್ರಗಳನ್ನು ನೀಡಿದನು. ಇದು ಕ್ವಾಂಟಂ ವೈದ್ಯುತ್-ಗತಿಶಾಸ್ತ್ರಕ್ಕೆ Quantun Electrodynamics)ಅಪಾರ ವೈಶ್ಲೇಷಿಕ ಸಾಮರ್ಥ್ಯ ನೀಡಿತು. ಇದು ಪ್ರಯೋಗದ ಫಲಿತಾಂಶ ಮತ್ತು ಸೈದ್ಧಾಂತಿಕ ಲೆಕ್ಕಾಚಾರಗಳನ್ನು ಪರಸ್ಪರ ಹತ್ತಿರ ತಂದಿತು. ಪರಮಾಣುಗಳ ಕಣಗಳ ಮಧ್ಯದ ಅಂತಕ್ರಿಯೆಯನ್ನು ಅರಿಯುವ , ವಿವರಿಸುವ ವಿಶಿಷ್ಟ ಗಣಿತ ಮತ್ತು ನಕ್ಷೆಗಳನ್ನು ಫೆಯ್ನ್’ಮನ್ ಪರಿಚಯಿಸಿದನು. ಕ್ವಾಂಟಂ ವೈದ್ಯುತ್ ಗತಿಶಾಸ್ತ್ರಕ್ಕೆ ನೀಡಿದ ಕೊಡುಗೆಗಾಗಿ ಫೆಯ್ನ್’ಮನ್ 1965ರ ನೊಬೆಲ್ ಪ್ರಶಸ್ತಿ ಪಡೆದನು. ಫೆಯ್ನ್’ಮನ್ ವಿದ್ಯಾರ್ಥಿಗಳಲ್ಲಿ ಬಹು ಪ್ರಿಯನಾಗಿದ್ದನು. ಅವನ ಆಕರ್ಷಕ ಉಪನ್ಯಾಸಗಳು ನಗೆ ಚಟಾಕಿಗಳು, ವೈವಿಧ್ಯಮಯ ಶೈಕ್ಷಣೇತರ ಚಟುವಟಿಕೆಗಳು ಅವನನ್ನು ಇತರ ವಿಜ್ಞಾನಿಗಳಿಗಿಂತ ಬೇರೆಯಾಗಿ ಕಾಣುವಂತೆ ಮಾಡಿದ್ದವು. ತಮಟೆ ಬಾರಿಸುವುದು, ಮಾಯಾ ನಾಗರಿಕತೆಯ ಲಿಪಿಗಳ ಅಧ್ಯಯನ , ಜೀವಶಾಸ್ತ್ರದಲ್ಲಿ ಪ್ರಯೋಗ , ಗಣಕಗಳ ಬಳಕೆ ಫೆಯ್ನ್’ಮನ್ ನೆಚ್ಚಿನ ಹವ್ಯಾಸಗಳಾಗಿದ್ದವು. ಪಸಾಡೆನಾದಲ್ಲಿನ , ಮೇಲುಡೆಗೆಯಿಲ್ಲದ ತರುಣಿಯರನ್ನು ನೇಮಿಸಿಕೊಂಡಿದ್ದ ಹೋಟೆಲ್ ಮುಚ್ಚುವಂತೆ ಸ್ಥಳೀಯ ಆಡಳಿತ ಸೂಚನೆ ನೀಡಿದಾಗ , ಅದರ ಪರವಾಗಿ ತಡೆಯಾಜ್ಞೆ ತರಲು ಫೆಯ್ನ್’ಮನ್ ಯತ್ನಿಸಿದ್ದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಜೂಲಿಯನ್, ಷೈಂಜರ್ (1918-1994) 1965
Julian , Schwinger
ಅಸಂಸಂ-
ಜೂಲಿಯನ್ 12 ಫೆಬ್ರವರಿ1918ರಂದು ನ್ಯೂಯಾರ್ಕ್ನಲ್ಲಿ ಜನಿಸಿದನು. ಬಾಲ್ಯದಿಂದಲೂ ಜೂಲಿಯನ್ಗೆ ಭೌತಶಾಸ್ತ್ರದತ್ತ ಭಾರಿ ಒಲವಿದ್ದಿತು. ಉಳಿದ ವಿಷಯಗಳನ್ನು ನಿರ್ಲಕ್ಷಿಸಿ, ಜೂಲಿಯನ್ ಭೌತಶಾಸ್ತ್ರವನ್ನು ಮಾತ್ರ ಪರಿಗಣಿಸುತ್ತಿದ್ದನು. ಹದಿನಾರನೇ ವಯಸ್ಸಿಗೆ ಭೌತಶಾಸ್ತ್ರಜ್ಞನೆಂದು ಪರಿಗಣಿತನಾದನು. ನ್ಯೂಯಾರ್ಕ್ ನಗರದ ಸಾರ್ವಜನಿಕ ಶಾಲೆಗಳು, ಜೂಲಿಯನ್ ಶೀಘ್ರವಾಗಿ ಮೇಲಿನ ತರಗತಿಗಳಿಗೆ ಹೋಗುವ ನೆರವು ನೀಡಿದವು. ಐ.ಐ ರಬಿಯ ನೆರವಿನೊಂದಿಗೆ ಜೂಲಿಯನ್ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ವರ್ಗಾವಣೆಗೊಂಡನು. 1936ರಲ್ಲಿ ಜೂಲಿಯನ್ ತನ್ನ ಸಂಪ್ರಬಂಧ ಮಂಡಿಸಿದನಾದರೂ ಆತನಿಗೆ ಮೂರು ವರ್ಷಗಳ ನಂತರವಷ್ಟೇ 1939ರಲ್ಲಿ ಡಾಕ್ಟರೇಟ್ ದಕ್ಕಿತು. ಮುಂದಿನ ಎರಡು ವರ್ಷಗಳ ಕಾಲ ಬರ್ಕ್ಲೆಯ ಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯದ ರಾಷ್ಟ್ರೀಯ ಸಂಶೋಧನಾ ಫೆಲೋ ಆದನು. ನಂತರ ಜೆ.ಆರ್.ಒಪೆನ್ಹೀಮರ್ನ ಸಹಾಯಕನಾದನು. ಫೆಸಿಫಕ್ ಯುದ್ದ ಪ್ರಾರಂಭವಾದಾಗ ಜೂಲಿಯನ್ ಪಡ್ರ್ಯೂ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರದ ಬೋಧಕನಾದನು. ಈ ಕಾಲದಲ್ಲೇ ಕೇಂಬ್ರಿಜ್ನ ಎಂಐಟಿಯ ವಿಕಿರಣ ಪ್ರಯೋಗಾಲಯದಲ್ಲಿ ಸೇವೆ ಸಲ್ಲಿಸಿದನು. ಈ ಪ್ರಯೋಗಾಲಯದಲ್ಲಿ ಸಹ ಸಂಶೋಧಕರಿಲ್ಲದೆ, ಒಂಟಿಯಾಗಿ ರಾತ್ರಿಯ ವೇಳೆ ಕಾರ್ಯನಿರತನಾಗಿರುತ್ತಿದ್ದನು. ಜೂಲಿಯನ್ನ ಆರಂಭಿಕ ಸಂಶೋಧನೆಗಳು ರಡಾರ್ಗೆ ಸಂಬಂಧಿಸಿದ ಸಮಸ್ಯೆಗಳನ್ನು ವೈದ್ಯುತ್ ಕಾಂತೀಯ ದೃಷ್ಟಿಯಲ್ಲಿ ಪರಿಹರಿಸುವ ನಿಟ್ಟಿನಲ್ಲಿದ್ದವು,. ಆದರೆ ಅಲ್ಪಾವಧಿಯಲ್ಲೇ ಇವನ್ನು ವೈದ್ಯುತ್ ಕ್ಷೇತ್ರ ದೃಷ್ಟಿಯಿಂದ ವಿಚಾರಿಸತೊಡಗಿದನು. ಇದು ಬೈಜಿಕ ಚದುರಿಕೆ (Nuclear Scattering) ಅರ್ಥೈಸಿಕೊಳ್ಳಲು ನೆರವಾಯಿತು. ಮುಂದೆ ಕಾಲಾನುಕ್ರಮದಲ್ಲಿ ಜೂಲಿಯನ್ ಕಾಂತೀಯ ಕ್ಷೇತ್ರದಲ್ಲಿನ ಎಲೆಕ್ಟ್ರಾನ್ಗಳ ವಿಕಿರಣತೆಯನ್ನು ಕುರಿತಾಗಿ ಅಧ್ಯಯನ ಪ್ರಾರಂಭಿಸಿದನು. ಎಲೆಕ್ಟ್ರಾನ್ಗಳ ಕ್ಷೇತ್ರದಲ್ಲಿನ ಪ್ರತಿಕ್ರಿಯೆ ಅದರ ದ್ರವ್ಯ ರಾಶಿ ಸೇರಿದಂತೆ ಇತರ ಗುಣಗಳಲ್ಲೂ ಬದಲಾವಣೆ ತರುವುದೆಂಬ ಅಭಿಜಾತ ದೃಷ್ಟಿ ಆತನ ಗಮನ ಸೆಳೆಯಿತು. ಇದು ಕ್ವಾಂಟಂ ಎಲೆಕ್ಟ್ರೋಗತಿಶಾಸ್ತ್ರದ ಅಭಿವೃದ್ದಿಯಲ್ಲಿ ಪ್ರಮುಖ ಅಂಶವಾಯಿತು. ಯುದ್ದ ಕೊನೆಗೊಂಡ ನಂತರ ಜೂಲಿಯನ್ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾದನು. ಎರಡು ವರ್ಷಗಳ ನಂತರ ಪ್ರಾಧ್ಯಾಪಕನಾದನು. ಜೂಲಿಯನ್ ಭೌತಶಾಸ್ತ್ರದಲ್ಲಿ ಆವರೆಗೆ ಪರಿಹಾರ ಕಾಣದಿದ್ದ, ಸವಾಲಾಗಿದ್ದ ಹಲವಾರು ಸಮಸ್ಯೆಗಳನ್ನು ವ್ಯಾಪಕ ಹಾಗೂ ಆಳವಾಗಿ ಚಿಂತಿಸುತ್ತಿದ್ದನು. ಇದರ ಫಲವಾಗಿ 1957ರಲ್ಲಿ ಎಲೆಕ್ಟ್ರಾನ್ ಹಾಗೂ ಮ್ಯುಯಾನ್ಗೆ ಸಂಬಂಧಿಸಿದಂತೆ, ಎರಡು ವಿಶಿಷ್ಟ ಮ್ಯುಯಾನ್ಗೆಗಳಿರುವುವೆಂದು ಹೇಳಿದನು. ಇದು ಮುಂದೆ ಪ್ರಯೋಗಗಳಿಂದ ಖಚಿತಗೊಂಡಿತು. ಇದಲ್ಲದೆ ಜೂಲಿಯನ್ ಎಲ್ಲಾ ಕ್ಷೀಣ ಬೈಜಿಕ ಅಂತಕ್ರಿಯೆಗಳೂ, ಭಾರವಾದ, ಆವೇಶಗೊಂಡ ಏಕ-ಗಿರಕಿಯ ಕಣಗಳಿಂದ ವರ್ಗಾವಣೆಗೊಳ್ಳುವುವೆಂದು ಸೂಚಿಸಿದ್ದಾನೆ. ಆದರೆ ಇದನ್ನು ಪ್ರಯೋಗಗಳಿಂದ ಸಾಬೀತಾಗಿಲ್ಲ. ಜೂಲಿಯನ್ ಆಕರ ಸಿದ್ಧಾಂತ ಮಂಡಿಸಿ ಪ್ರಬಲ ಅಂತಕ್ರಿಯೆಯನ್ನು ಅರಿಯಲು ಯತ್ನಿಸಿದ್ದಾನೆ. ಇದು ಜೂಲಿಯನ್ ಪ್ರಕಟಿಸಿದ ಪಾರ್ಟಿಕಲ್ಸ್ ಸೋರ್ಸಸ್ ಅಂಡ್ ಫೆಲ್ಡ್ಸ್ ಕೃತಿಯಲ್ಲಿ ಚರ್ಚೆಗೊಂಡಿದೆ. ಜೂಲಿಯನ್ 1951ರಲ್ಲಿ ಐನ್ಸ್ಟೀನ್ ಪ್ರಶಸ್ತಿ, 1964ರಲ್ಲಿ ಯು ಎಸ್ ನ್ಯಾಷನಲ್ ಮೆಡಲ್ ಫಾರ್ ಸೈನ್ಸ್ ,1961ರಲ್ಲಿ ಪರ್ಡ್ಯೂ ವಿಶ್ವವಿದ್ಯಾಲಯದಿಂದ , 1962ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ಗಳಿಂದ ಸನ್ಮಾನಿತನಾಗಿದ್ದಾನೆ. 1965ರಲ್ಲಿ ಜೂಲಿಯನ್ ತನ್ನ ಸಾಧನೆಗಳಿಗಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಟೊಮೊನಾಗ, ಸಿನ್-ಇಟಿರೋ (1906-1979) 1965
Tomonaga , Sin Itiro
ಜಪಾನ್-ಸೈದ್ಧಾಂತಿಕ ಭೌತಶಾಸ್ತ್ರ- ಕ್ವಾಂಟಂ ವೈದ್ಯುತ್ ಗತಿಶಾಸ್ತ್ರದ ಸ್ಥಾಪಕ.
ಟೊಮೊನಾಗ, ಕ್ಯೋಟೋ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಪದವಿ ಗಳಿಸಿ, ಲೀಪ್ಜಿಗ್ನಲ್ಲಿ ಹೈಸೆನ್ಬರ್ಗ್ ಜೊತೆ ಉನ್ನತ ವಿದ್ಯಾಭ್ಯಾಸ ಮಾಡಿ, 1941ರಲ್ಲಿ ಟೋಕಿಯೋದಲ್ಲಿ ಪ್ರಾಧ್ಯಾಪಕನಾದನು. 1956ರಲ್ಲಿ ಟೊಕಿಯೋ ವಿಶ್ವವಿದ್ಯಾಲಯದ ಅಧ್ಯಕ್ಷನಾದನು. ಫ್ಲೋಟಾನ್ ಜೊತೆ ಅಂತರ್ಕ್ರಿಯೆ ಹೊಂದಿದ ಎಲೆಕ್ಟ್ರಾನ್ನ್ನು ಸಾಪೆಕ್ಷ ಸಿದ್ಧಾಂತದ ದೃಷ್ತಿಯಲ್ಲಿ ವಿವರಿಸಲು ಟೊಮೊನಾಗ ಯತ್ನಿಸಿದನು. ಫೆಯ್ನಮನ್, ಷ್ಟಿಂಜರ್ ಸಹ ಇದೇ ಮಾರ್ಗದ ಅನ್ವೇಷಣೆಯಲ್ಲಿದ್ದನು. ಆದರೆ ಯಾರಿಗೂ ಮತ್ತೊಬ್ಬರು ಈ ಕಾರ್ಯದಲ್ಲಿ ಮಗ್ನರಾಗಿದ್ದಾರೆಂದು ತಿಳಿದಿರಲಿಲ್ಲ. 1947ರಲ್ಲಿ ಡೈಸನ್ ಈ ಮೂವರೂ ಒಂದೇ ನಿರ್ಧಾರ ಹಾಗೂ ಫಲಿತಾಂಶಗಳಿಗೆ ಬಂದಿದ್ದಾರೆಂದು ತಿಳಿಸಿದನು. ಆಧಿಕ ಚೈತನ್ಯ ಹೊಂದಿದ ಕಣಗಳ ಸೈದ್ಧಾಂತಿಕ ವಿವರಣೆಯ ಪ್ರಾಮುಖ್ಯತೆಯ ಅರಿವಿದ್ದ ಟೊಮೊನಾಗ ಎರಡ ುಕಣಗಳು ಮಿಥ್ಯಾ ಕಣವೊಂದನ್ನು ಪರಸ್ಪರ ವರ್ಗಾಯಿಸಿಕೊಂಡು ಅಂತರ್ಕ್ರಿಯೆ ಹೊಂದುತ್ತವೆಯೆಂದು ಹೇಳಿದನು. ಕಾಲ್ಚೆಂಡಿನಲ್ಲಿ ಒಬ್ಬ ಆಟಗಾರನ ತನ್ನ ಆವೇಶವನ್ನು ಚೆಂಡಿನ ಮೂಲಕ ಇನ್ನೊಬ್ಬನಿಗೆ ವರ್ಗಾವಣೆ ಮಾಡುವುದನ್ನು ಈ ಕ್ರಿಯೆ ಸ್ಥೂಲವಾಗಿ ಹೋಲುತ್ತದೆ. ಈಗ ಇದನ್ನು ಕ್ವಾಂಟಂ ವೈದ್ಯುತ್ ಗತಿಶಾಸ್ತ್ರ ಸಿದ್ಧಾಂತ ಎಂದು ಕರೆಯಲಾಗುತ್ತದೆ. 1965ರಲ್ಲಿ ಟೊಮೋನಾಗ, ಫೆಯ್ನಮನ್ ಮತ್ತು ಷ್ವಿಂಜರ್ ನೊಬೆಲ್ ಪ್ರಶಸ್ತಿ ಪಡೆದರು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಆಲ್ಫ್ರೆಡ್, ಕ್ಯಾಸ್'ಟ್ಲರ್ (1902--) 1966
Alfred , Kastler (PHY.) 1966
ಭೌತಶಾಸ್ತ್ರ- ದೃಗ್ ಅನುರಣನ ಹಾಗೂ ಕಾಂತೀಯ ಅನುರಣನಗಳ ಸಂಗಮ ವಿಧಾನ ಪರಿಚಯಿಸಿದಾತ.
ಆಲ್ಫ್ರೆಡ್ 3 ಮೇ 1902ರಂದು ಅಲ್ಲಾಸೆಸ್ ಪ್ರಾಂತದ ಮ್ಯಾಬವೆಲರ್ನಲ್ಲಿ ಜನಿಸಿದನು. 1921ರಲ್ಲಿ ಎಕೊಲೆ ನಾರ್ಮಲೆ ಸುಪೀರಿಯರ್ ಸೇರಿದ ಆಲ್ಫ್ರೆಡ್ 1926ರಲ್ಲಿ ಉಪನ್ಯಾಸಕನಾU ಲೈಸಿಗೆ ಮರಳಿದನು. ವಿದ್ಯಾರ್ಥಿಯಾಗಿದ್ದಾಗ ತನ್ನ ಉಪನ್ಯಾಸಕನಿಂದ ಝೋಮರ್¥sóÉಲ್ಟ್ ಅಣು ರಚನೆ ಹಾಗೂ ರೋಹಿತದ ಸಾಲುಗಳ ಬಗೆಗೆ ಬರೆದಿದ್ದ ಪುಸ್ತಕದ ಪರಿಚಯವಾಯಿತು. ಇದು ಮುಂದೆ ಆಲ್ಫ್ರೆಡ್ನ ಸಂಶೋಧನೆಗಳಿಗೆ ಕಾರಣವಾಯಿತು. ಉದ್ರೇಕಿತ ಸ್ಥಿತಿಯಲ್ಲಿದ್ದ ಪರಮಾಣುಗಳ ಅಧ್ಯಯನಕ್ಕಾಗಿ, ಆಲ್ಫ್ರೆಡ್ ದ್ವಿಗುಣ ಅನುರಣನ (ಆoubಟe ಖesoಟಿಚಿಟಿಛಿe) ವಿಧಾನ ಪರಿಚಯಿಸಿದನು. ಇದು ದೃಗ್ ಅನುರಣನ ಹಾಗೂ ಕಾಂತೀಯ ಅನುರಣನ ವಿಧಾನಗಳ ಸಂಗಮವಾಗಿದ್ದಿತು. ಈ ಸಾಧನೆಗಾಗಿ 1966ರಲ್ಲಿ ಆಲ್ಫ್ರೆಡ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಹ್ಯಾನ್ಸ್, ಆಲ್ಬ್ರೆಕ್ಟ್ ಬೆಥೆ (1906-2005) 1967
Hans , Albrecht Bethe
ಜರ್ಮನಿ-ಭೌತಶಾಸ್ತ್ರ-ತಾರೆಗಳಲ್ಲಿನ ಬೈಜಿಕ ಕ್ರಿಯೆಗಳನ್ನು ವಿವರಿಸಿದಾತ.
ಹ್ಯಾನ್ಸ್ 2 ಜುಲೈ 1906 ರಂದು ಸ್ಟ್ರಾಸ್ಬರ್ಗ್ ಪ್ರಾಂತದ ಆಲ್ಸೆಸ್ ಲೊರಾಯಿನ್ ಪಟ್ಟಣದಲ್ಲಿ ಜನಿಸಿದನು. 1915ರಿಂದ 1924ರವರೆಗೆ ಫ್ರಾಂಕ್ಫರ್ಟ್ನ ಜೆಮ್ನಾಷಿಯಂನಲ್ಲಿ ಓದಿದನು. ಕಾಲೇಜು ಶಿಕ್ಷಣವನ್ನು ಎರಡು ವರ್ಷ ಫ್ರಾಂಕ್ಫರ್ಟ್ ಹಾಗೂ ಇನ್ನೆರಡು ವರ್ಷ ಮ್ಯೂನಿಕ್ಗಳಲ್ಲಿ ಮುಂದುವರಿಸಿದನು. ಅರ್ನಾಲ್ಡ್ ಝೋಮರ್ಫೆಲ್ಟ್ ಮಾರ್ಗದರ್ಶನದಲ್ಲಿ ಸಂಪ್ರಬಂಧ ಮಂಡಿಸಿ 1928ರಲ್ಲಿ ಡಾಕ್ಟರೇಟ್ ಪದವಿ ಗಳಿಸಿದನು. ನಂತರ ಆರು ತಿಂಗಳ ಕಾಲಫ್ರಾಂ’ಫರ್ಟ್ ಹಾಗೂ ಇನ್ನೂ ಆರು ತಿಂಗಳ ಕಾಲ ಸ್ಟುಟ್ಗರ್ಟ್ನಲ್ಲಿ ಭೌತಶಾಸ್ತ್ರದ ತರಬೇತುದಾರನಾಗಿದ್ದನು. 1929ರಿಂದ 1933ರ ಅವಧಿಯಲ್ಲಿ ಮ್ಯೂನಿಕ್ ವಿಶ್ವವಿದ್ಯಾಲಯದಲ್ಲಿದ್ದನು. 1930ರಲ್ಲಿ ಅಂತರಾಷ್ಟ್ರೀಯ ಶಿಕ್ಷಣ ಮಂಡಳಿಯಿಂದ ಸಂಶೋಧಕ ವೇತನ ಪಡೆದು, ಇಂಗ್ಲೆಂಡ್ಗೆ ಹೋಗಿ, ಕೇಂಬ್ರಿಜ್ನಲ್ಲಿ ಉಳಿದನು. ಇದೇ ಕಾರ್ಯಕ್ರಮದಡಿಯಲ್ಲಿ 1932ರಿಂದ 1933 ರವರೆಗೆ ರೋಮ್ನಲ್ಲಿದ್ದನು. ಇದೇ ಅವಧಿಯಲ್ಲಿ ಟುಬಿನ್ಜೆನ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾದನು. ಇದು ನಾಝಿಗಳ ಆಡಳಿತ ವಶವಾದಾಗ ಹ್ಯಾನ್ಸ್ ತನ್ನ ಈ ಹುದ್ದೆಯನ್ನು ಕಳೆದುಕೊಳ್ಳಬೇಕಾಯಿತು. 1933ರಲ್ಲಿ ಇಂಗ್ಲೆಂಡ್ಗೆ ವಲಸೆ ಹೋಗಿ, ಒಂದು ವರ್ಷದಕಾಲ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕ ಉಪನ್ಯಾಸಕನಾದನು. 1934ರಲ್ಲಿ ಬ್ರಿಸ್ಟಲ್ನ ಫೆಲೋಷಿಪ್ ದೊರಕಿತು. 1935ರಲ್ಲಿ ಅಸಂಸಂ ಇಥಾಕಾದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ನೇಮಕಗೊಂಡನು. ಮುಂದಿನ ಎರಡೇ ವರ್ಷಗಳ ಪ್ರಾಧ್ಯಾಪಕನಾಗಿ ಬಡ್ತಿ ದೊರೆಯಿತು. ಎರಡನೇ ಜಾಗತಿಕ ಯುದ್ದದ ಕಾಲದಲ್ಲಿ ಎಂಐಟಿಯ ರೇಡಿಯೇಷನ್ ಲ್ಯಾಬೋರೇಟರಿಯಲ್ಲಿ ಸೂಕ್ಷ್ಮತರಂಗದ ರಡಾರ್ ಸಂಶೋಧನೆಗೆ ನಿಯೋಜಿಸಲ್ಪಟ್ಟನು. ಇದರ ನಂತರ ಪ್ರಥವi ಬೈಜಿಕಾಸ್ತ್ರ ಜೋಡಣೆಗೊಳಿಸಿದ ಲಾಸ್ ಅಲ್ಮೋಸ್ ಪ್ರಯೋಗಾಲಯಕ್ಕೆ ವರ್ಗಾಯಿಸಲ್ಪಟ್ಟನು. 1952ರಲ್ಲಿ ಆರು ತಿಂಗಳ ಕಾಲ ಈ ಪ್ರಯೋಗಾಲಯದಲ್ಲಿ ಕೆಲಸ ಮಾಡಿದನು. ಹ್ಯಾನ್ಸ್ , ಪೀಲ್ರ್ಸ್ ಸಂಗಡ ಪರಮಾಣು ಬೀಜದ ಸಿದ್ಧಾಂತ ಮಂಡಿಸಿದನು. 1934ರಲ್ಲಿ ಡ್ಯುಟೆರಾನ್ ಸಿದ್ಧಾಂತ ರೂಪಿಸಿ 1949ರಲ್ಲಿ ಅದನ್ನು ವಿಸ್ತರಿಸಿದನು. ಬೈಜಿಕ ದ್ರವ್ಯ ಮಾಪಕದಲ್ಲಿದ್ದ ಕೆಲವು ಅಸಂಗತಗಳನ್ನು ಪರಿಹರಿಸಿದನು. 1935 ರಿಂದ 1938 ರವರೆಗೆ ಬೈಜಿಕ ಪ್ರತಿಕ್ರಿಯೆಗಳ ಅಧ್ಯಯನ ನಡೆಸಿದ ಹ್ಯಾನ್ಸ್, ಬೊಹ್ರ್ ಸಂಯುಕ್ತ ಬೀಜಗಳ ಸಿದ್ಧಾಂತ ನೀಡಿದನು. ಹ್ಯಾನ್ಸ್ ಬೈಜಿಕ ಕ್ರಿಯೆಗಳನ್ನು ಕುರಿತಾಗಿ ನಡೆಸಿದ ಅಧ್ಯಯನಗಳು, ತಾರೆಗಳು ಸತತ ಚೈತನ್ಯ ನೀಡುವ ಹಿನ್ನೆಲೆ ಹಾಗೂ ಆಕರಗಳನ್ನು ವಿವರಿಸುವಲ್ಲಿ ಯಶಸ್ವಿಯಾದವು. ಅತ್ಯಂತ ಉಜ್ವಲ ತಾರೆಗಳಲ್ಲಿ ಇಂಗಾಲ ಸಾರಜನಕ ಚಕ್ರವಿರುವುದೆಂದು ತಿಳಿಸಿದನು. ಸೂರ್ಯನಂತಹ ಮಂಕು ತಾರೆಗಳಲ್ಲಿ ಪ್ರೋಟಾನ್-ಪ್ರೋಟಾನ್ ಚಕ್ರದಿಂದ ಚೈತನ್ಯ ಲಭ್ಯವಾಗುವುದೆಂದು ವಿವರಿಸಿದ ಖ್ಯಾತಿ ಹ್ಯಾನ್ಸ್ಗಿದೆ. ಇದಕ್ಕಾಗಿ ಹ್ಯಾನ್ಸ್ 1967ರ ನೊಬೆಲ್ ಪ್ರಶಸ್ತಿಗೆ ಭಾಜನನಾದನು. 1955ರಿಂದ ನ್ಯೂಕ್ಲಿಯಾನ್ಗಳ ಮಧ್ಯದ ಅಂತಕ್ರಿಯೆಯ ಆಧಾರದ ಮೇಲೆ ಪರಮಾಣು ಬೀಜದ ಸ್ವರೂಪದ ವಿವರಣೆಯ ಯತ್ನದಲ್ಲಿದ್ದ ಹ್ಯಾನ್ಸ್ ನಿರತನಾಗಿದ್ದಾನೆ. ಕಣಗಳ ಸಂಘಟನಾ ಸಿದ್ಧಾಂತಕ್ಕೂ ಹ್ಯಾನ್ಸ್ ಕಾಣಿಕೆಯಿತ್ತಿದ್ದಾನೆ. ವೇಗಗಾಮಿ ಕಣ ಹಾಗೂ ಪರಮಾಣುಗಳ ಸ್ಥಿತಿಸ್ಥಾಪಕ ರಹಿತ ಸಂಘಟನೆಯನ್ನು ವಿವೇಚಿಸಿ, ಅಧಿಕ ಆವೇಶಿತ ಕಣಗಳನ್ನು ನಿಲ್ಲಿಸಬಲ್ಲ ದ್ರವ್ಯ ನಿರ್ಧಾರ ಮಾಡಿ, ಬೈಜಿಕ ಪ್ರಯೋಗಗಳಿಗೆ ನೆರವಾಗಿದ್ದಾನೆ. ಪರಮಾಮಾಣುವೊಂದನ್ನು ಸ್ಪಟಿಕವೊಂದಕ್ಕೆ ಸೇರಿಸಿದಾಗ ಪರಮಾಣುವಿನ ಚೈತನ್ಯದ ಮಟ್ಟದಲ್ಲಾಗುವ ವಿಭಜನೆಯನ್ನು ಹೀಟ್ಲರ್ನೊಂದಿಗೆ ವಿವರಿಸಿದ್ದಾನೆ. 1947ರಲ್ಲಿ ಜಲಜನಕದ ರೋಹಿತದಲ್ಲಿನ ಲ್ಯಾಂಬ್ ಪಲ್ಲಟಕ್ಕೆ ಕಾರಣ ನೀಡಿ ಆಧುನಿಕ ಕ್ವಾಂಟಂ ವೈದ್ಯುತ್ಗತಿಶಾಸ್ತ್ರಕ್ಕೆ ನಾಂದಿ ಹಾಡಿದನು. ಪೈ-ಮೆಸಾನ್ಗಳ ಚದುರಿಕೆ, ವೈದ್ಯುತ್ ಕಾಂತೀಯ ವಿಕಿರಣದಿಂದ ಅವುಗಳ ಉತ್ಪಾದನೆ ಕುರಿತಾಗಿಯೂ ಹ್ಯಾನ್ಸ್ ಸಾಧನೆಗಳು ಗಮನಾರ್ಹ. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಅಲ್ಪರೆಝ್ ಲೂಯಿ, ವಾಲ್ಟರ್ (1911-1988) -1968
Luis , Walter Alvarez (PHY.) 1968
ಅಸಂಸಂ-ಭೌತಶಾಸ್ತ್ರ-ಬೈಜಿಕ ಕಣಗಳ ಅಧ್ಯಯನದ ಮುಂದಾಳು.
ಲೂಯಿ ಕ್ಯಾಲಿಫೊರ್ನಿಯಾದ ಚಿಕಾಗೋ ವಿಶ್ವವಿದ್ಯಾಲಯದಿಂದ ವಿಜ್ಞಾನದ ಪದವಿಯನ್ನು 1934ರಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದನು. 1936ರಲ್ಲಿ ಡಾಕ್ಟರೇಟ್ ಗಳಿಸಿ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯದ ರೇಡಿಯೇಷನ್ ಲ್ಯಾಬೋರೇಟರಿ ಸೇರಿ ವೃತ್ತಿ ಜೀವನ ಪ್ರಾರಂಭಿಸಿದನು. ಕಾಂಪ್ಟನ್ನ ಶಿಷ್ಯನಾಗಿದ್ದ ಅಲ್ವಾರೆಝ್ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯದಲ್ಲಿ ಲಾರೆನ್ಸ್ನೊಂದಿಗೆ ಸೇರಿದನು. ಅಲ್ಲೇ ಉಳಿದ ಈತ 1945ರಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. ಭೌತಶಾಸ್ತ್ರದ ವಿಭಿನ್ನ ಶಾಖೆಗಳಲ್ಲಿ ಸಮಾನ ಆಸಕ್ತಿ ಹೊಂದಿದ್ದ ಅತಿ ವಿಶಿಷ್ಟ ವಿಜ್ಞಾನಿ ಅಲ್ವಾರೆಝ್. 1940ರಿಂದ 1943 ರವರೆಗೆ ಎಂಐಟಿಯಲ್ಲಿದ್ದನು. ನಂತರ ಮೂರು ವರ್ಷ ಚಿಕಾಗೋ”ವಿಶ್ವವಿದ್ಯಾಲಯದ ಲೋಹ ತಂತ್ರಜ್ಞಾನ ಪ್ರಯೋಗಾಲಯದಲ್ಲಿದ್ದು 1944 ರಿಂದ 1945 ರವರೆಗೆ ಮ್ಯಾನಹಟನ್ನ ಲಾಸ್ ಆಲ್ಮೋಸ್ ಪ್ರಯೋಗಾಲಯದಲ್ಲಿದ್ದನು. ಲೂಯಿ ವೃತ್ತಿ ಜೀವನದ ಆರಂಭದಲ್ಲಿ ದೃಕ್ ಶಾಸ್ತ್ರ ಹಾಗೂ ವಿಶ್ವ ಕಿರಣಗಳಲ್ಲಿ ಆಸಕ್ತಿ ಹೊಂದಿದ್ದನು. ವಿಶ್ವ ಕಿರಣಗಳ ಪೂರ್ವ ಪಶ್ಚಿಮ ಪರಿಣಾಮವನ್ನು ಆವಿಷ್ಕರಿಸಿದನು. ಅಲ್ವರೆಝ್ ಕಕ್ಷೀಯ ಎಲೆಕ್ಟ್ರಾನ್ (Orbital Electron) ಸೆರೆ ಹಿಡಿತದ ವಿದ್ಯಾಮಾನವನ್ನು ಅನಾವರಣಗೊಳಿಸಿದನು. ಈ ವಿದ್ಯಾಮಾನದಂತೆ ಪರಮಾಣುವಿನ ಬೀಜ, ಕಕ್ಷೆಯಲ್ಲಿ ಸುತ್ತುತ್ತಿರುವ ಎಲೆಕ್ಟ್ರಾನ್ನನ್ನು ಸೆರೆಹಿಡಿದು, ಕಡಿಮೆ ಪೆÇೀಟಾನ್ ಸಂಖ್ಯೆಯ ಬೀಜಕ್ಕೆ ಕಾರಣವಾಗುತ್ತದೆ. ಲೂಯಿ ,ಹಲವಾರು ವರ್ಷಗಳ ಕಾಲ ಬೈಜಿಕ ಭೌತಶಾಸ್ತ್ರದಲ್ಲಿ ಕಾರ್ಯ ನಿರತನಾಗಿದ್ದನು. 1937ರಲ್ಲಿ ಪರಮಾಣುಮಿನ ಬೀಜ ಕೆ ಎಲೆಕ್ಟ್ರಾನ್ನ್ನು ಮೊದಲ ಬಾರಿಗೆ ಪ್ರಯೋಗಗಳಿಂದ ತೋರಿಸಿದನು. ಅತಿ ನಿಧಾನಗತಿಯ ನ್ಯೂಟ್ರಾನ್ ದೂಲಗಳನ್ನು (Neutron Beams) ಪಡೆಯುವ ವಿಧಾನವನ್ನು ಲೂಯಿ ರೂಪಿಸಿದನು. ಇದು ಮುಂದೆ ಆರ್ಥೋ ಹಾಗೂ ಪ್ಯಾರಾ ಜಲಜನಕದಲ್ಲಿ ನ್ಯೂಟ್ರಾನ್ ಚದುರಿಕೆಯ ತಪಾಸಣೆಗೆ ನೆರವಾಯಿತು. ಬ್ಲಾಕ್ ಜೊತೆ ಗೂಡಿ, ನ್ಯೂಟ್ರಾನ್ ಕಾಂತೀಯ ಭ್ರಾಮ್ಯತೆಯನ್ನು (magnetic Moment) ಲೂಯಿ ಅಳೆದನು. ಲೂಯಿ ಹಾಗೂ ವೀನ್ಸ್ ಸೇರಿ 198 ಪಾದರಸ ದೀಪ ತಯಾರಿಸಿದರು. ಇದನ್ನು ಪರಿಷ್ಕರಿಸಿದ ಬ್ಯೂರೋ ಆಫ್ ಸ್ಟ್ಯಾಂಡರ್ಡ್ರ್ಸ್ ನವರು ಉದ್ದದ ಅಳತೆಯನ್ನು ವ್ಯಾಖ್ಯಾನಿಸಲು ಬಳಸಿದರು.
ಜಾಗತಿಕ ಯುದ್ದಕ್ಕಿಂತ ಸ್ವಲ್ಪ ಮೊದಲೇ ಲೂಯಿ ಹಾಗೂ ಕಾರ್ನೊಗೆ ಟ್ರೈಷಿಯಂನ ವಿಕಿರಣಶೀಲತೆಯನ್ನು ಪತ್ತೆ ಹಚ್ಚಿ ಇದು, ಸಾಮಾನ್ಯ ಹೀಲಿಯಂನ ಸ್ಥಿರ ಘಟಕವೆಂದು ತೋರಿಸಿದರು. ಟ್ರೈಟಿಯಂ, ಮುಂದೆ ಅತ್ಯುತ್ತಮ ಔಷ್ಣೀಯ ಬೈಜಿಕ ಚೈತನ್ಯದ ಆಕರವೆಂದು (Thermo-Nuclear Energy) ಸಾಬೀತಾಗಿ, ಹೀಲಿಯಂ ನಿಮ್ನ ತಾಪಮಾನಗಳ ಸಂಶೋಧನೆಯಲ್ಲಿ ಬಳಕೆ ಕಂಡಿತು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಎಂಐಟಿಯಲ್ಲಿ ಸೂಕ್ಷ್ಮ ತರಂಗ ಶೀಘ್ರ ಎಚ್ಚರಿಕೆ ವ್ಯವಸ್ಥೆ, ಅತ್ಯುನ್ನತ ಎತ್ತರದಿಂದ ಅಸ್ತ್ರವೆಸಗುವ ವ್ಯವಸ್ಥೆ ಭೂ ನಿಯಂತ್ರಿತ ವಿಮಾನ ಇಳಿಕೆ ವ್ಯವಸ್ಥೆಗಳನ್ನು ಕುರಿತಾಗಿ ಸಂಶೋಧನೆಗೆ ನಿಯೋಜಿಸಲ್ಪಟ್ಟನು. ಅಲ್ಮೋಸ್ ಪ್ರಯೋಗಾಲಯಗಳಲ್ಲಿ ಪ್ಲುಟೋನಿಯಂ ಅಣ್ವಸ್ತ್ರಗಳನ್ನು ಸಿಡಿಸುವ ಸಲಕರಣೆಗಳನ್ನು ಅಭಿವೃದ್ಧಿಗೊಳಿಸಿದನು. ಅಲ್ಮಗೋರ್ಡ್ನಲ್ಲಿ ನಡೆದ ಪ್ರಯೋಗಾತ್ಮಕ ಪರಮಾಣು ಅಸ್ತ್ರ ಸ್ಪೋಟ ಹಾಗೂ ಹಿರೋಷಿಮಾಗಳ ಮೇಲೆ ನಡೆಸಿದ ಪರಮಾಣು ಅಸ್ತ್ರ ದಾಳಿಯ ಪರಿಣಾಮಗಳ ವೈಜ್ಞಾನಿಕ ವೀಕ್ಷಕನಾಗಿ ಲೂಯಿ ನಿಯೋಜಿತನಾಗಿದ್ದನು. 1947ರಲ್ಲಿ ಬಕ್ರ್ಲೆಯಲ್ಲಿ ಪೂರ್ಣಗೊಂಡ 12 ಮೀ ವ್ಯಾಸದ ಪ್ರೊಟಾನ್ ಸರೇಖೀಯ ವೇಗೋತ್ಕರ್ಷಕದ (Accelarator) ವಿನ್ಯಾಸ ಹಾಗೂ ನಿರ್ಮಾಣ ನಿರ್ವಹಣೆಯನ್ನು ಲೂಯಿ ಯಶಸ್ವಿಯಾಗಿ ಮುಗಿಸಿದನು. 1951ರಲ್ಲಿ ಆವಿಷ್ಟ ವರ್ಗಾಂತರಿತ ವೇಗೋತ್ಕರ್ಷವನ್ನು ವಿವರಿಸಿದರು. ಇದಾದ ನಂತರ ಕ್ಯಾಲಿ¥sóÉÇೀರ್ನಿಯಾದ ರೇಡಿಯೇಷನ್ ಲ್ಯಾಬೋರೇಟರಿಯಲ್ಲಿ 600 ಕೋಟಿ ಎಲೆಕ್ಟ್ರಾನ್ ವೋಲ್ಟ್ ಬಳಸುವ ಬೆವೆಟ್ರಾನ್ನಲ್ಲಿ ಅಧಿಕ ಚೈತನ್ಯದ ಕಣಗಳನ್ನು ಕುರಿತಾಗಿ ಅಧ್ಯಯನ ನಡೆಸಿದನು. ಬೃಹತ್ ಗಾತ್ರದ ಬುದ್ಭುದ ಕೋಠಿಗಳನ್ನು(Buble Chamber) ಅವುಗಳಲ್ಲಿ ಪಡೆಯಲಾಗುವ ಲಕ್ಷಾಂತರ ಛಾಯಾಚಿತ್ರಗಳನ್ನು ವಿಶ್ಲೇಷಿಸುವ ಸಾಧನಗಳನ್ನು ನಿರ್ಮಿಸಲು ಲೂಯಿ ಯತ್ನಿಸಿದನು. ಇದರ ಫಲವಾಗಿ ಲೂಯಿ ಹಾಗೂ ಸಂಗಡಿಗರು, ಅಜ್ಞಾತವಾಗಿದ್ದ ಹಲವಾರು ಮೂಲ ಕಣಗಳನ್ನು ಪತ್ತೆ ಹಚ್ಚಿದರು.
1967ರ ನಂತರ ಲೂಯಿ ಬಲೂನ್ಗಳನ್ನು ಬಳಸಿ ವಿಶ್ವ ಕಿರಣಗಳ ಅಧ್ಯಯನ ನಿರತನಾದನು. ಲೂ¬ ನಿರಂತರ ಸಾಧನೆಗಳಿಗಾಗಿ 1968ರಲ್ಲಿ ನೊಬೆಲ್ ಪ್ರಶಸ್ತಿ ದಕ್ಕಿತು. ಲೂಯಿಸ್ ನ್ಯಾಷನಲ್ ಅಡಾಡೆಮಿ ಆಫ್ ಸೈನ್ಸ್ ಅಮೆರಿಕನ್ ಫಿûಲಾಸಫಿûಕಸಿಕಲ್ ಸೊಸೈಟಿ, ಅಮೆರಿಕನ್ ಫಿಸಿಕಲ್ ಸೊಸೈಟಿ ಅಮೆರಿಕನ್ ಅಕಾಡೆಮಿ ಆಫ್ ಸೈನ್ಸ್ ಅಂಡ್ ಆಟ್ರ್ಸ್ ಹಾಗೂ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್ನ ಸದಸ್ಯನಾಗಿದ್ದನು. ವಿಮಾನಗಳ ಭೂ ನಿಯಂತ್ರಿತ ಇಳಿಕೆ ವ್ಯವಸ್ಥೆ ಕುರಿತಾಗಿ ನಡೆಸಿದ ಸಂಶೋಧನೆಗಳಿಗಾಗಿ 1946ರಲ್ಲಿ ನ್ಯಾಷನಲ್ ಏರೋನಾಟಿಕಲ್ ಅಸೋಸಿಯೇಷನ್ನಿಂದ ಕೊಲಿಯರ್ ಟ್ರೋಫಿ ಹಾಗೂ ಫಿಲೆಡೆಲ್ಪಿಯಾ ನಗರದ ವತಿಯಿಂದ ಮೆಡಲ್ಯಾಂಡ್ ಪ್ರಶಸ್ತಿಯಿಂದ ಸನ್ಮಾನಿತನಾದನು. ಕ್ಯಾಲಿಫೊರ್ನಿಯಾದಿಂದ 1960ರಲ್ಲಿ ವರ್ಷದ ವಿಜ್ಞಾನಿಯೆಂದು ಗೌರವಿತನಾದನು. 1961ರಲ್ಲಿ ಐನ್ಸ್ಟೀನ್ ಪ್ರಶಸ್ತಿ 1963ರಲ್ಲಿ ಪಯೋನಿಯರ್ ಪ್ರಶಸ್ತಿ 1964ರಲ್ಲಿ ವಿಜ್ಞಾನದ ರಾಷ್ಟ್ರೀಯ ಪದಕ ಹಾಗೂ 1965ರಲ್ಲಿ ಮೈಖೇಲ್ಸನ್ ಪ್ರಶಸ್ತಿಗಳು ಲೂಯಿನನ್ನು ಅರಸಿ ಬಂದವು. ಅಲ್ಪಾರೆಝ್ ಭೌತಶಾಸ್ತ್ರವನ್ನು ಅನ್ವಯಗೊಳಿಸುವಲ್ಲಿ ಅನನ್ಯ ಪ್ರತಿಭೆ ನೈಸರ್ಗಿಕ ವಿಶ್ವ ವಿಕಿರಣದಲ್ಲಿನ ಕ್ಷ-ಕಿರಣದ ಘಟಕ ಬಳಸಿ, ವಿಶ್ವ ವಿಖ್ಯಾತವಾದ ಈಜಿಪ್ತಿನ ಷೆಫ್ರೆನ್ ಪಿರಮಿಡ್ನಲ್ಲಿ ಯಾವುದೇ ಗುಪ್ತ ಕೊಠಡಿ ಇಲ್ಲವೆಂದು ತೋರಿಸಿದನು. ಭೌತಶಾಸ್ತ್ರದ ನೆರವಿನೊಂದಿಗೆ ಜಾನ್ ಎಫ್ ಕೆನಡಿಯ ಹಂತಕ ಒಬ್ಬನೇ ಎಂದು ನಿರೂಪಿಸಿದನು. ಮಗನಾದ ವಾಲ್ಟರ್ ಜೊತೆ ಸೇರಿ , ಆರೂವರೆ ಕೋಟಿ ವರ್ಷಗಳ ಹಿಂದೆ ಡೈನೋಸರಾಸ್ ಸಂತತಿ ಅಳಿಯಲು, ಕಾರಣವಾದ, ನೈಸರ್ಗಿಕ ಉತ್ಪಾತವನ್ನು ಕುರಿತಾಗಿ ಸಂಶೋಧನೆ ನಡೆಸಿದನು. ಈ ಸಂಶೋಧನೆಯಿಂದ ಭೂಮಿಗೆ ಅಪ್ಪಳಿಸಿದ ಉಲ್ಕೆಯಿಂದ ಉದ್ಭವಿಸಿದ ಬೆಂಕಿ, ಅಥವಾ ಕವಿದ ಧೂಳಿನಿಂದ ಡೈನೋಸಾರಸ್ ಸಂತತಿ ಕೊನೆಗೊಂಡಿರಬಹುದೆಂದು, ವಾದಿಸಿದನು. ಕನ್ನಡಕಧಾರಿಯಾಗಿದ್ದ ಅವನಿಗೆ ದ್ವಿನಾಭಿ ಮಸೂರಗಳು (Bifocal Lenses) ಆರಾಮದಾಯಕವಲ್ಲವೆನಿಸಿ ಎರಡು ದೃಗೋಪಕರಣ ಕಂಪನಿಗಳನ್ನು ಸ್ಥಾಪಿಸಿದನು. ಒಂದು ಕಂಪನಿ ವ್ಯತಸ್ತನಾಭಿ (Variable Focus) ಮಸೂರ ಮಾಡಿದರೆ, ಮತ್ತೊಂದು ದೃಗ್ ಸ್ಥಿರಕಾರಕ ನಿರ್ಮಾಣದಲ್ಲಿ ನಿರತವಾಯಿತು. ಈ ಸ್ಥಿರಕಾರಕ ಸಿನಿಮಾ ಕ್ಯಾಮೆರಾ ಹಾಗೂ ದುರ್ಬೀನುಗಳಲ್ಲಿನ ಅಲುಗಾಟವನ್ನು ನಿವಾರಿಸುತ್ತದೆ. ಬೇರೆ ವಿಜ್ಞಾನಿಗಳಿಗೆ ಹೋಲಿಸಿದಂತೆ ಆಲ್ಪಾರೆಝಜದು ಬಹು ವಿಭಿನ್ನ ವ್ಯಕ್ತಿ. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಗೆಲ್ಮನ್,ಮುರ್ರೆ (1929--)1969
Gell-Mann , Murray
ಅಸಂಸಂ-ಸೈದ್ಧಾಂತಿಕ ಭೌತಶಾಸ್ತ್ರ- ಮೂಲ ಕಣಗಳ ಸ್ವರೂಪ, ಲಕ್ಷಣ ತಿಳಿಯಲು ಸಮೂಹ ಸಿದ್ಧಾಂತ ಬಳಸಿದಾತ.
ಗೆಲ್ಮನ್ ಮೆಸಾಚುಸೆಟ್ಸ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು, 22ನೇ ವರ್ಷಕ್ಕೆ ಡಾಕ್ಟರೇಟ್ ಗಳಿಸಿದನು. ಎನ್ರಿಕೊ ಫರ್ಮಿಯ ಮಾರ್ಗದರ್ಶನದಲ್ಲಿ ದುಡಿದ ಗೆಲ್ ಮಾನ್ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜೆ ಸೇರಿ,1967ರಲ್ಲಿ ಅಲ್ಲಿಯೆೀ ಸೈದ್ಧಾಂತಿಕ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. ಗೆಲ್ಮನ್, 24ನೇ ವಯಸ್ಸಿನಲ್ಲಿರುವಾಗ, ಮೂಲಕಣಗಳ ಸೈದ್ಧಾಂತಿಕ ಅಧ್ಯಯನಕ್ಕೆ ಮಹತ್ತರವಾದ ಹೊಸ ದೃಷ್ಟಿ ನೀಡಿದನು. ಗೆಲ್ಮನ್ ಯಾವುದೇ ಪ್ರಬಲ ಬೈಜಿಕ ಅಂತಕ್ರಿಯೆ (Nuclear Interaction), ನಡೆದಾಗಲೂ , ಉಳಿಸಲೇ ಕೊಳ್ಳಬೇಕಾದ ಕ್ವಾಂಟಂ ಸಂಖ್ಯೆಯೊಂದನ್ನು ಪರಿಚಯಿಸಿದನು. ಇದನ್ನು ಸೈದ್ಧಾಂತಿಕವಾಗಿ ‘ಸ್ಟ್ರೇಂಜ್ನೆಸ್’ ಎಂದು ಕರೆಯಲಾಗುತ್ತದೆ. ಗೆಲ್ಮನ್ ಮತ್ತು ಸ್ವತಂತ್ರವಾಗಿ ನೀಮನ್ ‘ಸ್ಟ್ರೆಂಜ್ನೆಸ್’ ತತ್ತ್ವ ಬಳಸಿ ಮೂಲ ಕಣಗಳನ್ನು 1,8,10 ಅಥವಾ 27ರ ಗುಣಿಕೆಯ ಗುಂಪುಗಳಾಗಿ ವರ್ಗೀಕರಿಸಿದರು. ಪ್ರತಿಯೊಂದು ಈ ಬಗೆಯ ವರ್ಗವೂ, ಸಮಾಂಗೀಯತೆಯ ಅಭಿಕರ್ಮದಿಂದ (Symmetrical Operator), ಸಂಬಂಧಗೊಳಿಸಲ್ಪಟ್ಟಿದ್ದಿತು. ಗೆಲ್ಮನ್ ಸಿದ್ಧಾಂತ ಮತ್ತು ಲೆಕ್ಕಚಾರಗಳು ಒಮೆಗಾ-ಮೈನಸ್ ಎನ್ನುವ ಮೂಲಕಣ ಅಸ್ತಿತ್ವದಲ್ಲಿದೆಯೆಂದು ಮುನ್ನಡಿದವು. 1964ರಲ್ಲಿ ಪ್ರಯೋಗಾಲಯದಲ್ಲಿ ಮೊದಲ ಬಾರಿಗೆ ಈ ಕಣಗಳನ್ನು ಗುರುತಿಸಲಾಯಿತು. ಇದೇ ವರ್ಷ ಗೆಲ್ಮನ್ ಜಿ. ಝ್ವೀಗ್ ಜೊತೆ ಸೇರಿ, ಕ್ವಾರ್ಕ್ಗಳ ಪರಿಕಲ್ಪನೆ ನೀಡಿದರು. ಕ್ವಾರ್ಕ್ಗಳಿಗೆ 1/3,2/3 ವಿದ್ಯುದಾವೇಶವಿದ್ದು, ಇವುಗಳಿಂದ ಬೇರೆಯ ಹ್ಯಾಡ್ರನ್ಸ್ ನಂತಹ ಬೈಜಿಕ ಕಣಗಳನ್ನು ಪಡೆಯುವುದು ಸಾಧ್ಯ. ಈಗ ಒಟ್ಟು ಆರು ಬಗೆಯ ಕ್ವಾರ್ಕ್ಗಳನ್ನು ಒಪ್ಪಲಾಗಿದ್ದು, ಇವುಗಳಲ್ಲಿ ಐದನ್ನು 1964ರಲ್ಲೇ ಪತ್ತೆ ಹಚ್ಚಲಾಯಿತಾದರೂ, ಆರನೆಯದು 1995ರವರೆಗೆ ಸಿಕ್ಕಿರಲಿಲ್ಲ. ಕ್ಷೀಣ ಬೈಜಿಕ ಬಲಗಳ (Weak Nuclear Forces)ಬಗೆಗೆ ಫೆಯ್ನ್ಮನ್ ಜೊತೆ ಸೇರಿ ಗೆಲ್ಮನ್ ಗಮನಾರ್ಹ ಕೊಡುಗೆಯನ್ನು ನೀಡಿದ್ದಾನೆ. ಗೆಲ್ಮನ್ 1969ರ ನೊಬೆಲ್ ಪ್ರಶಸ್ತಿಯಿಂದ ಗೌರವಿತನಾಗಿದ್ದಾನೆ. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಆಲ್ಫ್’ವೆಯ್ನ್, ಹ್ಯಾನ್ನೀಸ್ ಒಲೋಫ್ ಗೋಸ್ಟ (1908-95) -1970
Alfven, Hannes Olof Gosta (Alfvayn) (PHY.) 1970
ಸ್ವೀಡನ್-ಸೈದ್ಧಾಂತಿಕ ಭೌತಶಾಸ್ತ್ರ - ಪ್ಲಾಸ್ಲಾ ಭೌತಶಾಸ್ತ್ರದ ಮುಂಚೂಣಿಗ
ಉಪ್ಸಾಲಾ ನಗರದಲ್ಲಿ ಶಿಕ್ಷಣ ಪಡೆದ ಆಲ್ಫ್’ವೆಯ್ನ್ 1967ರವರೆಗೆ ಸ್ವೀಡನ್ನಲ್ಲಿದ್ದು ನಂತರ ಕ್ಯಾಲಿಫೋರ್ನಿಯಾಕ್ಕೆ ಸಾಗಿದನು. ಈತನ ಸಂಶೋಧನೆಗಳು ಕಾಂತೀಯ ಹಾಗೂ ವೈದ್ಯುತ್ ಪ್ರಭಾವದಡಿಯಲ್ಲಿ ಪ್ಲಾಸ್ಲಾ ವರ್ತಿಸುವ ಬಗೆಗೆ ಮೀಸಲಾಗಿದ್ದವು. 1942ರಲ್ಲಿ ಅಲ್ಫ್’ವೆಯ್ನ್ ಪ್ಲಾಸ್ಮಾದಲ್ಲಿ ಕಾಂತೋ-ಜಲಗತಿಶೀಲ ಅಲೆಗಳು (Magneto-Hydrodynamic) ಇರುವುದರ ಮುನ್ಸೂಚನೆ ನೀಡಿದನು. ನಂತರ ಅವುಗಳ ಅಸ್ತಿತ್ವ ಖಚಿತಗೊಂಡು ಆಲ್ಫ್ವೆಯ್ನ್ ತರಂಗಗಳೆಂದು ಹೆಸರಾದವು. ಆಲ್ಫ್ವೆಯ್ನ್ ಪರಿಕಲ್ಪನೆಗಳನ್ನು ತಾರಾ ಪ್ಲಾಸ್ಮಾಗಳಿಗೂ ಹಾಗೂ ಪ್ರಯೋಗಾರ್ಥದ ಬೈಜಿಕ ಸದಳನ ಪ್ರತಿಕ್ರಿಯಾಕಾರಗಳಿಗೂ (Nuclear Fusion Reactor ) ಅನ್ವಯಗೊಂಡವು. ಕಾಂತೋ ಜಲಗತಿಶೀಲ ಕ್ಷೇತ್ರದಲ್ಲಿನ ಸಂಶೋಧನೆಗಳಿಗಾಗಿ 1970 ನೊಬೆಲ್ ಪ್ರಶಸ್ತಿಯನ್ನು ಲೂಯಿ ಯೂಜಿನ್ ಫೆಲಿಕ್ಸ್ ವೀಲ್'ನೊಂದಿಗೆ ಹಂಚಿಕೊಂಡನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ನೆಯಲ್,ಲೂಯಿಸ್ (ಯೂಜಿನ್, ಫೆಲಿಕ್ಸ್) –(1904--) 1970
Neel , Louis (Eugene Felix)
ಫ್ರಾನ್ದ್-ಭೌತಶಾಸ್ತ್ರ- ಪ್ರತಿ ಫೆರೋಕಾಂತೀಯತೆ (Anti Ferromagnetism)ಅನಾವರಣಕಾರ.
ಎಕೊಲೆ ನಾರ್ಮಲ್ ಸುಪೀರಿಯರ್ನಿಂದ ಪದವಿಗಳಿಸಿದ ನೆಯಲ್, ಪಿ.ವೀಸ್ನ ಕೆಳಗೆ ಸ್ಟ್ರಾಸ್ಬೋರ್ಗ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿದನು. 1940ರಲ್ಲಿ ಗ್ರೆನೋ ಬಿಲ್ಗೆ ಹೋಗಿ ಅದನ್ನು ಫ್ರಾನ್ಸಿನ ಅತ್ಯುತ್ತಮ ವೈಜ್ಞಾನಿಕ ಕೇಂದ್ರವಾಗುವಂತೆ ಶ್ರಮಿಸಿದನು. 1956ರಲ್ಲಿ ಬೈಜಿಕ ಅಧ್ಯಯನ ಕೇಂದ್ರದ ನಿರ್ದೇಶಕನಾದನು. ನೇಯಲ್, ಘನಗಳಲ್ಲಿನ ಕಾಂತತ್ವದ ಬಗೆಗೆ ಸಂಶೋಧಿಸಿದನು. 1936ರಲ್ಲಿ ವಿಶಿಷ್ಟ ಬಗೆಯದಾದ ಕಬ್ಬಿಣ ವಿರೋಧಿ ಕಾಂತತ್ವ ಅಸ್ತಿತ್ವದಲ್ಲಿರುವ ಮುನ್ಸೂಚನೆ ನೀಡಿದನು. ಕಬ್ಬಿಣದ ಕಾಂತಗಳಲ್ಲಿ ಎಲೆಕ್ಟ್ರಾನ್ನ ಗಿರಕಿ ಒಂದೇ ದಿಶೆಯಲ್ಲಿ ಪಂಜ್ತೀಕರಣಗೊಂಡಿದ್ದರೆ (Alignment) , ಕಬ್ಬಿಣ ವಿರೋದಿ ಸಾಮಾಗ್ರಿಗಳಲ್ಲಿ ಇವು ಪರಸ್ಪರ ವಿರುದ್ದ ದಿಕ್ಕಿನಲ್ಲಿ ಮೇಲೆ, ಕೆಳಗೆ ಪಂಜ್ತೀಕರಣಗೊಂಡಿರುತ್ತವೆ. ಒಂದು ನಿರ್ದಿಷ್ಟ ತಾಪಮಾನ ತಲುಪಿದ ನಂತರ ಇವು ಅನುಕಾಂತತೆಯತ್ತ ಹೊರಳುತ್ತವೆ. 1938ರಲ್ಲಿ ನೇಯಲ್ನ ಮುನ್ಸೂಚನೆ ಸರಿಯೆಂದು ಪ್ರಯೋಗಗಳಿಂದ ಸಾಬೀತಾದರೆ, 1940ರಲ್ಲಿ ನ್ಯೂಟ್ರಾನ್ ವಕ್ರೀಭವನದಿಂದ (Refraction)ಇದು ಖಚಿತಗೊಂಡಿತು ಇದು ಎಲೆಕ್ಟ್ರಾನಿಕ್ಸ್ನಲ್ಲಿ ¨ಹು ಉಪಯೋಗಿ ವಿದ್ಯಾಮಾನವಾಗಿ ಪರಿಗಣಿತವಾಗಿದೆ. 1970ರಲ್ಲಿ ನೇಯಲ್ ನೊಬೆಲ್ ಪ್ರಶಸ್ತಿ ಪಡೆದನು. ಭೂ ಕಾಂತತ್ವ ಚರಿತ್ರೆಯ ನಿರ್ಧಾರದಲ್ಲಿ ನೇಯಲ್ ಶ್ರಮಿಸಿದ್ದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು