ವೀನ್, ವಿಲ್ಹೆಲ್ಮ್ –(1864-1928) 1911
Wein , Wilhelm
ಜರ್ಮನಿ-ಭೌತಶಾಸ್ತ್ರ- ಕಪ್ಪು ಕಾಯಗಳ ವಿಕಿರಣ ಶೀಲತೆಯ ಚೈತನ್ಯ ವಿವರಣೆ ಸೂತ್ರ ನೀಡಿದಾತ.
ರೈತ ಕುಟುಂಬದಲ್ಲಿ ಜನಿಸಿದ ವೀನ್, ರೈತನಾಗಬೇಕೆಂದು ಬಯಸಿದ್ದನು. ಕೆಲಕಾಲ ಗಟ್ಟಿಂಜೆನ್ನಲ್ಲಿ ವ್ಯಾಸಂಗ ಮಾಡಿದ ವೀನ್ 1884ರಲ್ಲಿ ಬರ್ಲಿನ್ನಲ್ಲಿ ಪದವಿ ಗಳಿಸಲು ಕಾಲೇಜಿಗೆ ಸೇರಿದನು. 1886ರಲ್ಲಿ ಬೆಳಕಿನ ವಕ್ರೀಭವನ, ಬೆಳಕಿನ ಹೀರಿಕೆಯನ್ನು ಕುರಿತಾಗಿ ಸಂಪ್ರಬಂಧ ಮಂಡಿಸಿ ಡಾಕ್ಟರೇಟ್ ಗಳಿಸಿದನು. ತಕ್ಷಣ ಹುಟ್ಟೂರಿಗೆ ಹೋಗಿ ಕೃಷಿಯಲ್ಲಿ ನಿರತನಾದನು. ನಾಲ್ಕು ವರ್ಷಗಳ ಸತತ ಬರಗಾಲದಿಂದ ತತ್ತರಿಸಿದ ವೀನ್ ತನ್ನ ಹೊಲಗಳನ್ನು ಮಾರಿ, ಬರ್ಲಿನ್ಗೆ ಹೋಗಿ ಹೆಲ್ಮ್’ಹೋಲ್ಟ್ಸ್’ನ ಸಹಾಯಕನಾದನು. 1900ರಲ್ಲಿ ವುರ್ಜ್ಬರ್ಗ್ನಲ್ಲಿ ಪ್ರಾಧ್ಯಾಪಕನಾಗಿ ನೇಮಕಗೊಂಡನು. 20 ವರ್ಷಗಳ ನಂತರ, ಮ್ಯೂನಿಕ್ನಲ್ಲಿ ರಾಂಟ್ಜೆನ್ ನಿಂದ ತೆರವಾದ ಸ್ಥಾನ ಅಲಂಕರಿಸಿದನು.
1892ರಲ್ಲಿ ವೀನ್ ಕಪ್ಪುಕಾಯಗಳ ವಿಕಿರಣದ ಬಗ್ಗೆ ಸಂಶೋಧನೆ ಪ್ರಾರಂಭಿಸಿದನು. ಈ ಸಂಶೋಧನೆ ಅಭಿಜಾತ ಭೌತಶಾಸ್ತ್ರ, ಕ್ವಾಂಟಂ ಬಲವಿಜ್ಞಾನದತ್ತ ತಿರುಗುವಂತೆ ಮಾಡಿತು. ವೀನ್ ಕಪ್ಪು ಕಾಯ ನಿರ್ದಿಷ್ಟ ತಾಪಮಾನದಲ್ಲಿ ಸೂಸುವ ವಿಕಿರಣಗಳ ಚೈತನ್ಯ ನಿರ್ಧರಿಸುವ ಸೂತ್ರ ನೀಡಿದನು. ಈ ಸೂತ್ರದಲ್ಲಿನ ಸ್ಥಿರಾಂಕವನ್ನು ಲುಮ್ಮೆರ್ ಹಾಗೂ ಇ. ಪ್ರಿಂಗ್ಷಿಮ್ ಅಳೆದರು. ಇದು ವೀನ್ ಪಲ್ಲಟ ನಿಯಮವೆಂದು ಖ್ಯಾತವಾಯಿತು. ಇದರ ಪ್ರಕಾರ ಕೆಂಪೇರಿದ ತಾಪಮಾನದಲ್ಲಿರುವ ಕಪ್ಪು ಕಾಯವನ್ನು ಇನ್ನೂ ಹೆಚ್ಚು ಕಾಯಿಸಿದಾಗ, ಕಿರು ತರಂಗಾಂತರದ ವಿಕಿರಣವನ್ನು ಹೊರ ಸೂಸಿ ಬಿಳಿ ವರ್ಣ ತಾಳುತ್ತದೆ. ಈಗ ಗರಿಷ್ಟ ವಿಕಿರಣದ ತಾಪಮಾನ ದೀರ್ಘ ತರಂಗಾಂತರಗಳಿಂದ ದೃಗ್ಗೋಚರ ವಿಕಿರಣದ ಕೇಂದ್ರದತ್ತ ಸರಿಯುತ್ತದೆ. 1896ರಲ್ಲಿ ಈ ಸೂತ್ರದ ನೆರವಿನಿಂದ ವೀನ್, ವಿಕಿರಣದ ರೋಹಿತದಲ್ಲಿನ ಚೈತನ್ಯ, ಅದರ ತರಂಗಾಂತರ ಹಾಗೂ ತಾಪಮಾನಗಳಿಗೆ ಅನುಲೋಮವಾಗಿರುವುದೆಂದು ವಿವರಿಸಿದನು. ವೀನ್ ಸೂತ್ರ ಹ್ರಸ್ವ ತರಂಗಾಂತರಗಳಿಗೆ ಸಮರ್ಪಕವಾಗಿದ್ದರೆ, ದೀರ್ಘ ತರಂಗಾಂತರಗಳಿಗೆ ತಪ್ಪಾಗಿರುತ್ತದೆ. ರ್ಯಾಲೆ, ದೀರ್ಘ ತರಂಗಾಂತರಗಳಿಗೆ ಸಮರ್ಪಕವಾದ ಆದರೆ ಹ್ರಸ್ವ ತರಂಗಾಂತರಗಳಿಗೆ ಅನ್ವಯವಾಗದ ಕಪ್ಪು ಕಾಯ ವಿಕಿರಣ ಸೂತ್ರ ನೀಡಿದನು. ಇಂತಹ ವ್ಯತ್ಯಾಸಕ್ಕೆ ಕಾರಣ ಹುಡುಕ ಹೊರಟ ಪ್ಲಾಂಕ್ ಚೈತನ್ಯ ಪೆÇಟ್ಟಣಗಳ ರೂಪದಲ್ಲಿ ಹೊರ ಹೊಮ್ಮುವುದೆಂದು ಭಾವಿಸಿದರೆ, ಹ್ರಸ್ವ ಹಾಗೂ ದೀರ್ಘ ತರಂಗಾಂತರಗಳೆರಡಕ್ಕೂ ಸರಿ ಹೊಂದುವ ವಿವರಣೆ ನೀಡಬಹುದೆಂದು ತಿಳಿಸಿದನು. ಅಭಿಜಾತಶಾಸ್ತ್ರದಲ್ಲಿ ಇಂತಹ ಪೊಟ್ಟಣ ರೂಪದ ಚೈತನ್ಯಗಳ ಪರಿಕಲ್ಪನೆಗೆ ಅವಕಾಶಗಳಿರಲಿಲ್ಲ. 1900ರಲ್ಲಿ ಪ್ಲಾಂಕ್ ತನ್ನ ಕ್ವಾಂಟಂ ಸಿದ್ಧಾಂತ ಮಂಡಿಸಿದನು. ಇದು ಭೌತಶಾಸ್ತ್ರದಲ್ಲಿ ಕ್ರಾಂತಿ ತಂದಿತು. 1911 ರಲ್ಲಿ ವೀನ್ ನೊಬೆಲ್ ಪ್ರಶಸ್ತಿ ಪಡೆದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ನೀಲ್ಸ್ ,ಗುಸ್ತಾವ್– ಡ್ಯಾಲೆನ್ (1869-1937) 1912
Niels , Gustav Dalen
ಸ್ವೀಡನ್-ಇಂಜಿನಿಯರ್-ರಸಾಯನಶಾಸ್ತ-ಅಸಿಟಿಲಿನ್ ತಂತ್ರಜ್ಞಾನದ ಮುಂಚೂಣಿಗ.
ಗುಸ್ತಾವ್, ಸ್ಕಾರ್ಬೋರ್ಗ್ ಪ್ರಾಂತದ ಸ್ಟೆನ್ಸ್ಟಾರ್ಪ್ ಹಳ್ಳಿಯ ರೈತ ಕುಟುಂಬದಲ್ಲಿ 30 ನವೆಂಬರ್ 1869ರಲ್ಲಿ ರಂದು ಜನಿಸಿದನು. ಪ್ರೌಢ ಶಿಕ್ಷಣ ಪೂರೈಸಿದ ಗುಸ್ತಾವ್, ಕೃಷಿ ಶಿಕ್ಷಣ ಪಡೆಯಲು ಕಾಲೇಜಿಗೆ ಸೇರಿದನು. ಇಲ್ಲಿ ಲವಲ್ ಎಂಬ ಉಪಾಧ್ಯಾಯ ಈತನಿಗೆ ತಾಂತ್ರಿಕ ಶಿಕ್ಷಣ ಹೊಂದುವಂತೆ ಸಲಹೆ ಮಾಡಿದನು. ಇದರಿಂದ ಉತ್ತೇಜಿತನಾದ ಗುಸ್ತಾವ್, ಗೊಥೆನ್ಬರ್ಗ್ನಲ್ಲಿದ್ದ ಷಾಲ್ಮರ್ಸ್ ತಾಂತ್ರಿಕ ಕಾಲೇಜಿನ ಪ್ರವೇಶ ಪರೀಕ್ಷೆ ಬರೆದು, 1892ರಲ್ಲಿ ಇಂಜಿನಿಯರಿಂಗ್ ಪದವಿಗೆ ಸೇರಿದನು. 1896ರಲ್ಲಿ ಇಂಜಿನಿಯರಿಂಗ್ ಪದವಿಯೊಂದಿಗೆ ಹೊರಬಂದು ಸ್ವಿಟ್ಸಲ್ರ್ಯಾಂಡ್ಗೆ ಹೋಗಿ ಅಲ್ಲಿ ಐಗಿನೋಸಿಷೆಸ್ ಪಾಲಿಟೆಕ್ನಿಕ್ನಲ್ಲಿ ಸ್ಟೊಡೋಲಾ ಕೈ ಕೆಳಗೆ ಕೆಲಸ ಮಾಡಿದನು. ಇಲ್ಲಿ ಒಂದು ವರ್ಷವಿದ್ದು ಸ್ವೀಡನ್ಗೆ ಹಿಂದಿರುಗಿದನು. ಇಲ್ಲಿ ಸಮಾಲೋಚಕ ಇಂಜಿನಿಯರ್ ಆಗಿ ಖಾಸಗಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದನು. ಕೆಲಕಾಲದ ನಂತರ 1901ರಲ್ಲಿ ಸ್ವೀಡನ್ ಕಾರ್ಬೈಡ್ ಹಾಗೂ ಆಸಿಟಿನ್ ಲಿ, ಕಂಪನಿಯ ತಾಂತ್ರಿಕ ವಿಭಾಗದ ಮುಖ್ಯಸ್ಥನಾದನು. ಇದನ್ನು ತೊರೆದು ಗ್ಯಾಸ್ ಅಕ್ಯುಮುಲೇಟರ್ ಕಂಪನಿ ಸೇರಿ 1906ರಲ್ಲಿ ಅದರ ಮುಖ್ಯ ಇಂಜಿನಿಯರ್ ಹುದ್ದೆಗೇರಿದನು. 1909ರಲ್ಲಿ ಇದು ಸ್ವೀಡಿಷ್ ಗ್ಯಾಸ್ ಅಕ್ಯುಮುಲೇಟರ್ ಕಂಪನಿ ಹೆಸರಿನಲ್ಲಿ ಪುನರ್ಸಂಘಟನೆಗೊಂಡಿತು. ಇದಕ್ಕೆ ಗುಸ್ತಾಫ್ ನಿರ್ವಾಹಕ ನಿರ್ದೇಶಕನಾದನು. ಗುಸ್ತಾಫ್ಪ್ರೌಢಶಾಲೆಯಲ್ಲಿದ್ದಾಗಲೇ ಹುಲ್ಲು ಕತ್ತರಿಸುವ ಯಂತ್ರ ನಿರ್ಮಿಸಿದ್ದನು. ಹಾಲಿನಲ್ಲಿರುವ ಕೊಬ್ಬಿನ ಅಂಶ ನಿರ್ಧರಿಸುವ ಉಪಕರಣ, ಹಾಲು ಕರೆಯುವ ಯಂತ್ರ, ಹಾಲು ಪಾಸ್ತರೀಕರಿಸುವ ಯಂತ್ರಗಳನ್ನು ತಯಾರಿಸಿದ್ದನು. ಗುಸ್ತಾವ್ಗೆ ಹೊಸದಾಗಿ ಚಿಂತಿಸುವುದು, ಉಪಕರಣ, ಸಲಕರಣೆ ತಯಾರಿಸುವುದು ರಕ್ತಗತವಾಗಿದ್ದಿತು. 1901ರಲ್ಲಿ ಗುಸ್ತಾಫ್ ಸಾಯಂಕಾಲ ತಾನಾಗಿಯೇ ಹತ್ತಿ ಬೆಳಗಿನ ಜಾವ ಆರಿ ಹೋಗುವ ದೀಪಸ್ತಂಭ, ಸ್ವಯಂಚಾಲಿತ ದೀಪಗಳನ್ನು ಉಪಜ್ಞಿಸಿದನು. ಅಸಿಟಿಲಿನ್ನ್ನು ಸುರಕ್ಷಿತವಾಗಿರಿಸುವುದು ಆ ಕಾಲಕ್ಕೆ ಬಹು ಕಠಿಣ ಕಾರ್ಯವಾಗಿದ್ದಿತು. ಸಂರಂಧ್ರಿತ ಅ್ಯಸ್ಬೆಸ್ಟಾಸ್ ಹಾಗೂ ಡಯಟೋಮೇಷಿಯಸ್ ಪೂರಿತ ಮಣ್ಣಲೇಪಿತ ಸಿಲಿಂಡರ್ನಲ್ಲಿ ಸಂರಕ್ಷಿತವಾಗಿ ಅಸಿಟಿಲೀನ್ ಸಂಗ್ರಹಿಸುವ ವಿಧಾನವನ್ನು ಬಳಕೆಗೆ ತಂದನು. 1912ರಲ್ಲಿ ಅಸಿಟಿಲಿನ್ ಸಿಲಿಂಡರ್ಗಳಿಗೆ ಒದಗಿಸುವ ಸುರಕ್ಷ ಕವಾಟಗಳ ಪರೀಕ್ಷೆಯಲ್ಲಿರುವಾಗ ಘಟಿಸಿದ ಸ್ಪೋಟದಿಂದಾಗಿ ಗುಸ್ತಾವ್, ಕಣ್ಣಿನ ದೃಷ್ಟಿ ದೋಷಕ್ಕೊಳಗಾದನು. ಆದರೆ ಇದು ಅವನ ಉತ್ಸಾಹಕ್ಕೆ ಭಂಗ ತರಲಿಲ್ಲ. ಈ ಸ್ಥಿತಿಯಲ್ಲೇ ಆತ ಪನಾಮ ಕಾಲುವೆಗೆ ದೀಪ ವ್ಯವಸ್ಥೆ ಒದಗಿಸುವ ಗುತ್ತಿಗೆ ಪಡೆದು ಯಶಸ್ವಿಯಾಗಿ ಪೂರ್ಣಗೊಳಿಸಿದನು. ಗುಸ್ತಾವ್, 1913ರಲ್ಲಿ ಸ್ವೀಡನ್ ರಾಯಲ್ ಅಕಾಡೆಮಿಯ, 1918ರಲ್ಲಿ ಅಕಾಡೆಮಿ ಆಫ್ ಸೈನ್ಸ್ನ ಅಂಡ್ ಇಂಜಿನಿಯರಿಂಗ್ ಸದಸ್ಯನಾದನು. 1918ರಲ್ಲಿ ಲುಂಡ್ ವಿಶ್ವವಿದ್ಯಾಲಯದ ಗೌರವ ಪ್ರಾಧ್ಯಾಪಕನಾದನು. ಅಂತಾರಾಷ್ಟ್ರೀಯ ಅಸಿಟಿಲೀನ್ ಅನೋಸಿಯೇಷನ್ನಿಂದ ಬಂಗಾರದ ಪದಕ ಪಡೆದನು. 1912ರಲ್ಲಿ ಅಸಿಟಿಲಿನ್ ಕುರಿತಾದ ಸಂಶೋಧನೆಗಳಿಗಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಕ್ಯಾಮೆರ್ಲಿಂಗ್-ಅವ್ನೆಸ್, ಹೀಕ್ (1853-1926) 1913
Kammerlingh-Onnes , Haike
ಡೆನ್ಮಾರ್ಕ್-ಭೌತಶಾಸ್ತ್ರ- ಹೀಲಿಯಂ ಅನಿಲವನ್ನು ದ್ರವೀಕರಿಸಿದಾತ.- ಅತಿವಾಹಕತೆಯನ್ನು ಗುರುತಿಸಿದ ಮೊದಲಿಗ.
ಗ್ರೊನಿನ್ಜೆನ್ನಲ್ಲಿ ಭೌತಶಾಸ್ತ್ರ ಅಭ್ಯಸಿಸಿದ ಕ್ಯಾಮೆರ್ಲಿಂಗ್,ಮುಂದೆ ಎರಡು ವರ್ಷಗಳ ಕಾಲ ಹೈಡೆನ್ಬರ್ಗ್ನಲ್ಲಿ ಬುನ್ಸೆನ್ ಮತ್ತು ಕಿರ್ಕ್ಹಾಫ್ ಕೈಕೆಳಗೆ ದುಡಿದನು. ಭೂಮಿ ಆವರ್ತಿಸುತ್ತಿರುವುದಕ್ಕೆ ಹೇಗೆ ಸಾಕ್ಷ್ಯ ಒದಗಿಸಬಹುದೆಂದು ಕ್ಯಾಮರ್’ಲಿಂಗ್ ಚಿಂತಿಸುತ್ತಿದ್ದನು. ಆದರೆ 1882ರಲ್ಲಿ ಲೀಡೆನ್ನಲ್ಲಿ ಪ್ರಾಧ್ಯಾಪಕನಾದ ನಂತರ ನಿಮ್ನ ತಾಪಮಾನಗಳಲ್ಲಿ ದ್ರವ್ಯದ ಸ್ವಭಾವ ಹೇಗಿರಬಹುದೆಂದು ವಿಚಾರಿಸತೊಡಗಿದನು. ಡೆವೆರ್ ಸಾರಜನಕವನ್ನು ದ್ರವೀಕರಿಸಿದ್ದನು ಜೌಲ್-ಥಾಮ್ಸನ್ ಪರಿಣಾಮ ಬಳಸಿ ಡೆವೆರ್ ದ್ರವ ಜಲಜನಕವನ್ನು ಪಡೆದಿದ್ದನು. ಕ್ಯಾಮರ್ಲಿಂಗ್ ,ಡೆವೆರ್ನ್ ವಿಧಾನವನ್ನು ಸುಧಾರಿಸಿದನು. 1908ರಲ್ಲಿ ದ್ರವ ಜಲಜನಕದ ನೆರವಿನಿಂದ ಹೀಲಿಯಂ ದ್ರವೀಕರಿಸಿದನು. ಹೀಲಿಯಂ 4.25 ಕೆಲ್ವಿನ್ನಲ್ಲಿ ಅನಿಲ ರೂಪ ತಾಳುವುದು ಇದರಿಂದ ತಿಳಿಯಿತು. ಇದರ ತಾಪಮಾನವನ್ನು 1೦K ಗೆ (ಕೆಲ್ವಿನ್) ಇಳಿಸಿದಾಗಲೂ ಹೀಲಿಯಂ ಘನರೂಪ ತಾಳಲಿಲ್ಲ. 1911ರಲ್ಲಿ ಕ್ಯಾಮೆರ್’ಲಿಂಗ್ ಪಾದರಸ, ರಾಗಿ, ಸೀಸದಂತಹ ಲೋಹಗಳು ಅತ್ಯಲ್ಪ ತಾಪಮಾನಗಳಲ್ಲೂ ಅತಿವಾಹಕಗಳಾಗುವುವೆಂದೂ, ಈ ಸ್ಥಿತಿಯಲ್ಲಿ ವಿದ್ಯುತ್ ಪ್ರವಾಹದ ಹರಿವಿಗೆ ಯಾವುದೇ ವಿರೋಧ ತೋರಿಸುವುದಿಲ್ಲವೆಂದೂ ಪತ್ತೆ ಹಚ್ಚಿದನು. ಇದಕ್ಕಾಗಿ 1913ರ ನೊಬೆಲ್ ಪ್ರಶಸ್ತಿ ಕ್ಯಾಮರ್ಲಿಂಗ್ಗೆ ಲಭಿಸಿತು. 1957ರಲ್ಲಿ ಅತಿವಾಹಕತೆಗೆ, ಬಿಸಿಎಸ್ ಸಿದ್ಧಾಂತದ ಮೂಲಕ ವಿವರಣೆ ದಕ್ಕಿತು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಲೌ, ಮ್ಯಾಕ್ಸ್ (ಥಿಯೋಡರ್ ಫೆಲಿಕ್ಸ್) –(1879-1960) 1914
Laue , Max ( Theodor Relix )
ಜರ್ಮನಿ-ಭೌತಶಾಸ್ತ್ರ-ಸ್ಪಟಿಕಗಳಲ್ಲಿ ಅಣುಗಳಿಂದ ಕ್ಷ-ಕಿರಣಗಳು ವಕ್ರಿಭವನಗೊಳ್ಳುವುದನ್ನು (Refraction) ಪರೀಕ್ಷಿಸುವ ಪ್ರಯೋಗ ಸೂಚಿಸಿದಾತ.
ಲೌ, ಭೌತಶಾಸ್ತ್ರವನ್ನು ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿದನು. ಎರಡು ವರ್ಷಗಳ ಕಾಲ ಕಲಾ ವಿಭಾಗದ ವಿದ್ಯಾರ್ಥಿಯಾಗಿದ್ದನು. ಭೌತಶಾಸ್ತ್ರದ ಉಪನ್ಯಾಸಕನಾಗಿ ವೃತ್ತಿ ಜೀವನ ಪ್ರಾರಂಭಿಸಿ, 1919ರಲ್ಲಿ ಬರ್ಲಿನ್ನಲ್ಲಿ ನೆಲೆಸಿದನು. 1943ರವರೆಗೆ ಇಲ್ಲಿಯೆೀ ಸೈದ್ಧಾಂತಿಕ ಭೌತಶಾಸ್ತ್ರದ ಪ್ರಾದ್ಯಾಪಕನಾಗಿದ್ದನು, ನ್ಯಾಷನಲ್ ಸೋಷಿಯಾಲಿಸ್ಟ್ ಪಕ್ಷದ (ನಾಝಿ ಪಕ್ಷ ) ಜನಾಂಗೀಯ ತಾರತಮ್ಯ ತಾಳಲಾರದೆ ಕೆಲಸಕ್ಕೆ ರಾಜಿನಾಮೆ ನೀಡಿದನು,. 1946ರಿಂದ ಜರ್ಮನಿಯ ವಿಜ್ಞಾನದ ಪುನರುಜ್ಜೀವನಕ್ಕೆ ಶ್ರಮಿಸಿದನು. ಲೌನ ಆರಂಭಿಕ ಕಾರ್ಯಗಳು ಐನ್ಸ್ಟೀನ್ರ ಸಾಪೇಕ್ಷ ಸಿದ್ಧಾಂತಕ್ಕೆ ಬೆಂಬಲ ನೀಡಿದವು. ಇಪ್ಪತ್ತನೇ ಶತಮಾನದ ಆದಿಯಲ್ಲಿ ಕ್ಷ-ಕಿರಣಗಳನ್ನು ಅಲ್ಪ-ತರಂಗಾಂತರದ, ಬೆಳಕಿನಂತಹ ವೈದ್ಯುತ್ ಕಾಂತೀಯ ತರಂಗಗಳೆಂದು ಭಾವಿಸಲಾಗಿದ್ದಿತು. ಆದರೆ ಕೆಲ ವಿಜ್ಞಾನಿಗಳು ಇದನ್ನು ಸಂಪೂರ್ಣವಾಗಿ ಒಪ್ಪಿರಲಿಲ್ಲ. ಬಾಹ್ಯ ರಚನೆಗೆ ತಕ್ಕಂತೆ, ಸ್ಪಟಿಕಗಳಲ್ಲಿ ಅಣುಗಳು ನಿರ್ದಿಷ್ಟ ಜೋಡಣೆಯಲ್ಲಿರುತ್ತವೆ. ಎಂದು ನಂಬಲಾಗಿದ್ದಿತು, ಇವೆರಡೂ ಅಭಿಪ್ರಾಯಗಳನ್ನು ತುಲನಾತ್ಮಕ ದೃಷ್ಟಿಯಲ್ಲಿ ನೋಡಿದ ಲೌ, ಇವು ನಿಜವೇ ಆಗಿದ್ದಲ್ಲಿ, ಸ್ಪಟಿಕಗಳ ಅಣುಗಳ ಮಧ್ಯದ ಅಂತರ 10-10 ಮೀಟರ್ ನಷ್ಟಿದ್ದು, ಸ್ಪಟಿಕದ ಮೂಲಕ ಸಾಗುವ ಕ್ಷ-ಕಿರಣಗಳನ್ನು ವಕ್ರೀಭವನಗೊಳಿಸಬೇಕೆಂದು ಸೂಚಿಸಿದನು. 1912ರಲ್ಲಿ ಇದನ್ನು ಪ್ರಯೋಗಗಳಿಂದ ಸರಿಯೆಂದು ತೋರಿಸಲಾಯಿತು. ಲೌ ಸಹಾಯಕನಾಗಿದ್ದ ಡಬ್ಲ್ಯೂ .ಫ್ರೀಡರಿಕ್ ಮತ್ತು ವಿದ್ಯಾರ್ಥಿಯಾಗಿದ್ದ ಪಿ.ಕ್ನಿಪ್ಪಿಂಗ್ ಸ್ಪಟಿಕವೊಂದರ ಮೂಲಕ ಕ್ಷ-ಕಿರಣ ಹಾಯಿಸಿ, ವಕ್ರೀಭವನದ ಮಚ್ಚೆಗಳ ಛಾಯಾ ಬಿಂಬ ಪಡೆದನು. ಇದರಿಂದ ಕ್ಷ-ಕಿರಣ ತರಂಗ ರೂಪಿಯೆಂದು ಖಚಿತವಾಯಿತು. ಇದರ ಆಧಾರದ ಮೇಲೆ ಬ್ರಾಗ್ಸ್, ಕ್ಷ-ಕಿರಣ ಸ್ಪಟಿಕಾಲೇಖದ (Crystallography) ಅಧ್ಯಯನ ಪ್ರಾರಂಭಿಸಿದನು. 1914ರಲ್ಲಿ ಲೌ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಬ್ರಾಗ್ , ಸರ್ ವಿಲಿಯಂ (ಹೆನ್ರಿ) (1862-1942) -1915
Bragg , Sir William (Henry)
ಬ್ರಿಟನ್-ಭೌತಶಾಸ್ತ್ರ- ಕ್ಷ-ಕಿರಣಗಳ ಲಾಕ್ಷಣಿಕ ರೋಹಿತ ಅನಾವರಣಗೊಳಿಸಿದಾತ. ತನ್ನ ಮಗನಾದ ಬ್ರಾಗ್ ಸರ್ ಲಾರೆಸ್ಸ್ ಜೊತೆ ಕ್ಷ-ಕಿರಣ ಸ್ಫಟಿಕಾಲೇಖ ವಿಧಾನಗಳನ್ನು ಅಭಿವೃದ್ದಿಗೊಳಿಸಿದಾತ.
ನಲವತ್ತು ವಯಸ್ಸಿನ ನಂತರ ಸಂಶೋಧನೆಗಳಿಂದ ಕೈ ಬೆರಳೆಣಿಕೆಯ ಸಂಶೋಧಕರ ಪಟ್ಟಿಗೆ ವಿಲಿಯಂ ಬ್ರಾಗ್ ಸೇರುತ್ತಾನೆ. 1912ರ ನಂತರ ವಿಲಿಯಂ ತನ್ನ ಮಗ ಲಾರೆನ್ಸ್ನನ್ನು ಸಹ ಸಂಶೋಧಕವಾಗಿಸಿಕೊಂಡನು. ಕೇಂಬ್ರಿಜ್ನಲ್ಲಿ ಓದಿದ ವಿಲಿಯಂ 1886ರಲ್ಲಿ ಅಡಿಲೇಡ್ನಲ್ಲಿ ಗಣಿತದ ಪ್ರಾಧ್ಯಾಪಕನಾದನು 1904ಎಂದ ವಿಕಿರಣಶೀಲತೆಯ ಬಗೆಗೆ ತೀವ್ರ ಸಂಶೋಧನೆ ಕೈಗೊಂಡ ವಿಲಿಯಂ, 1909ರಲ್ಲಿ ಲೀಡ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾದ ನಂತರ ವಾನ್ ಲಾಯೆ ನಡೆಸಿದ ಸಂಶೋಧನೆಗಳಿಂದ ಪ್ರೇರಿತನಾಗಿ ಕ್ಷ-ಕಿರಣಗಳ ಅಧ್ಯಯನದಲ್ಲಿ ತೊಡಗಿದನು. 1913ರಲ್ಲಿ ವಿಲಿಯಂ, ಅಧಿಕ ಚೈತನ್ಯದ ಎಲೆಕ್ಟ್ರಾನ್ಗಳನ್ನು ಪ್ಲಾಟಿನಂ ಫಲಕಕ್ಕೆ ತಾಡಿಸಿದಾಗ ದೊರಕುವ ಕ್ಷ-ಕಿರಣಗಳ ರೋಹಿತದಲ್ಲಿ ಪ್ಲಾಟಿನಂ ಧಾತುವಿನ ಲಕ್ಷಣಗಳಿರುವ ಹಲವಾರು ಸಾಲುಗಳನ್ನು ವಿಲಿಯಂ ಗಮನಿಸಿದನು, ಮೋಸ್ಲೆ, ಇದೇ ಕಾಲಕ್ಕೆ , ಕ್ಷ-ಕಿರಣಗಳ ರೋಹಿತವನ್ನು , ಬೇರೆಯ ಸಂಶೋಧನೆಗಳ ಬಳಸಿಕೊಳ್ಳುವ ಹುನ್ನಾರದಲ್ಲಿದ್ದನು. ವಿಲಿಯಂ ಮಗ ಲಾರೆನ್ಸ್ ಜೊತೆಗೂಡಿ ಪ್ಲಾಟಿನಂಗೆ ಬದಲಾಗಿ, ಹಲವಾರು ಸ್ಪಟಿಕಗಳನ್ನು ಬಳ¸ ಕ್ಷ-ಕಿರಣಗಳ ರೋಹಿತಗಳನ್ನು ಪಡೆದು. ಸ್ಫಟಿಕಾಲೇಖ ವಿಧಾನಕ್ಕೆ ನಾಂದಿ ಹಾಡಿತು. ವಿಲಿಯಂ 1915ರಲ್ಲಿ ಲಂಡನ್ ವಿಶ್ವವಿದ್ಯಾಲಯದ ಕಾಲೇಜಿನ ಪ್ರಾಧ್ಯಾಪಕನಾಗಿ, ಜಾಗತಿಕ ಯುದ್ದದ ಸಮಯದಲ್ಲಿ, ಜಲಾಂತರ್ಗಾಮಿಗಳನ್ನು ಗುರುತಿಸುವ ವಿಧಾನ ಹಾಗೂ ಉಪಕರಣಗಳನ್ನು ನಿರ್ಮಿಸಲು ಯತ್ನಿಸಿದನು. 1923ರಲ್ಲಿ ವಿಲಿಯಂ ರಾಯಲ್ ಇನ್ಸ್ಟಿಟ್ಯೂಷನ್ ನಿರ್ದೇಶಕನಾದನು. ಇಡೀ ನೊಬೆಲ್ ಚರಿತ್ರೆಯಲ್ಲಿ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡ ಏಕೈಕ ತಂದೆ-ಮಗರ ಜೋಡಿ0iÉುಂದರೆ ವಿಲಿಯಂ ಹಾಗೂ ಲಾರೆನ್ಸ್ ಮಾತ್ರ. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಬ್ರಾಗ್ ಸರ್ (ವಿಲಿಯಂ) ಲಾರೆನ್ಸ್ (1890-1971 ) - 1915
Bragg, Sir (William) Lawrence
ಬ್ರಿಟನ್-ಭೌತಶಾಸ್ತ್ರ - ಡಬ್ಲು.ಎಚ್.ಬ್ರಾಗ್ ಜೊತೆ ಸೇರಿ ಕ್ಷ-ಕಿರಣ ಸ್ಪಟಿಕಾಲೇಖ ( X-Ray Crystallography) ಸ್ಥಾಪಿಸಿದಾತ.
ಅಡಿಲೇಡ್ನನಲ್ಲಿ ಜನಿಸಿದ ಲಾರೆನ್ಸ್ ಗಣಿತ ಪದವಿ ಗಳಿಸಿ, 1910ರಲ್ಲಿ ಕೇಂಬ್ರಿಜ್ಗೆ ಹೋಗಿ ನೆಲೆಸಿದ ನಂತರ ಭೌತಶಾಸ್ತ್ರದಲ್ಲಿ ಆಸಕ್ತಿ ತಳೆದನು. ಬ್ರಾಗ್ನ ತಂದೆಯೂ ಸಹ ಭೌತಶಾಸ್ತ್ರದ ಒಲವು ತಳೆದಿದ್ದವನಾಗಿದ್ದನು. ಲಾಯೆ ಸ್ಪಟಿಕಗಳಿಂದ, ಕ್ಷ – ಕಿರಣಗಳನ್ನು ವಿವರ್ತನಗೊಳಿಸಬಹುದೆಂದು (Diffraction) ಹೇಳಿದ್ದನು ಈ ಬಗ್ಗೆ ಕಾರ್ಯ ನಿರತರಾದ ಬ್ರಾಗ್ ನಿರ್ದಿಷ್ಟ ಅಣು ದೂರದಲ್ಲಿ ಜಾಲಕ ಸಮತಲಗಳನ್ನು (Lattice Plane) ಹೊಂದಿರುವ , ಸ್ಪಟಿಕದ ಮೂಲಕ ನಿರ್ದಿಷ್ಟ ಸಂಪಾತ ಕೋನದಲ್ಲಿ , ಗೊತ್ತಿರುವ ತರಂಗಾತರದ ಕ್ಷ-ಕಿರಣವನ್ನು ಹಾಯಿಸಿದಾಗ ಆಗುವ ವಿವರ್ತನವನ್ನು ಲಾರೆನ್ಸ್ ಲೆಕ್ಕಾಚಾರ ಹಾಕಿದನು. ಇದು ಬ್ರಾಗ್ ನಿಯಮವೆಂದು ಖ್ಯಾತ. ಸ್ಪಟಿಕದ ಅಣು ಪದರುಗಳ ಮೂಲಕ ಕ್ಷ – ಕಿರಣ ಸಾಗಿದಾಗ ಹಲವು ಪದರಗಳಿಂದ ಪ್ರತಿಫಲನದ ಮೂಲಕ ವ್ಯತಿಕರಣಗೊಂಡು (Interference) ಬ್ರಾಗ್ ನಿರೂಪಿಸಿದ ನಿಯಮದಂತೆ ವರ್ತಿಸುತ್ತದೆ. ಲಾರೆನ್ಸ್ ತನ್ನ ತಂದೆ ನಿರ್ಮಿಸಿದ್ದ ಕ್ಷ-ಕಿರಣದ ಗೋನಿಯೋ ಮೀಟರ್ ಬಳಸಿ ತನ್ನ ತಂದೆಯೊಂದಿಗೆ ಸಂಶೋಧನೆ ಮುಂದುವರೆಸಿದನು. ಗೊತ್ತಿರುವ ತರಂಗಾಂತರದ ಕ್ಷ-ಕಿರಣಗಳನ್ನು ಬಳಸಿ, ಅವರು ವಜ್ರ, ತಾಮ್ರ, ಗಂಧಕ ಹಾಗೂ ಹಲವಾರು ಲವಣಗಳ ಅಣು ಪದರುಗಳ ಮದ್ಯದ ದೂರವನ್ನು ನಿರ್ಧರಿಸುವಲ್ಲಿ ಸಫಲರಾದನು. ಬ್ರಾಗ್ ಈ ಬಗೆಯ ಅಧ್ಯಯನಕ್ಕೆ ತೊಡಗುವ ಮೊದಲು ಸ್ಪಟಿಕಗಳ ಅಧ್ಯಯನ ಅವುಗಳ ಬಾಹ್ಯ ರಚನೆ ಹಾಗೂ ಸ್ವರೂಪಗಳನ್ನು ಅರಿಯುವಲ್ಲಿಗೆ ಸೀಮಿತಗೊಂಡಿದ್ದಿತು. ಬ್ರಾಗ್ ಬಳಕೆಗೆ ತಂದ ಕ್ಷ-ಕಿರಣ ಸ್ಪಟಿಕಾಲೇಖ ಅವುಗಳ ಅಣ್ವಯಿಕ ಆಂತರ್ಯವನ್ನು ಅರಿಯುವಲ್ಲಿ ರಾಜಮಾರ್ಗವಾಯಿತು.ಬ್ರಾಗ್ 1915ರಲ್ಲಿ ತನ್ನ ತಂದೆಯೊಂದಿಗೆ ನೊಬೆಲ್ ಪುರಸ್ಕೃತನಾದಾಗ ಅವನ ವಯಸ್ಸು ಕೇವಲ 25. ಈತ ನೊಬೆಲ್ ಚರಿತ್ರೆಯಲ್ಲೇ ಅತಿ ಕಿರಿಯ. 1919ರಲ್ಲಿ ಬ್ರಾಗ್ ಮ್ಯಾಂಚೆಸ್ಟರ್’ನಲ್ಲಿ 1958ರಲ್ಲಿ ಕೇಂಬ್ರಿಜ್ನಲ್ಲಿ ಪ್ರಾಧ್ಯಾಪಕನಾದನು.ಛಾಯಾ ಪತ್ರದ ಮೇಲೆ (Photographic Film) ಕ್ಷ-ಕಿರಣಗಳಿಂದ ಸ್ಪಟಿಕದಿಂದಾಗುವ ವಿವರ್ತನವನ್ನು ಬೆಳಕಿನ ಚುಕ್ಕೆಗಳಾಗಿ ಪಡೆಯುವ ವಿಧಾನವನ್ನು ಬ್ರಾಗ್ ಬಳಕೆಗೆ ತಂದನು. ಇದರಿಂದಾಗಿ, ಯಾವುದೇ ಸ್ಫಟಿಕದ ಅಣು ಸಾಂದ್ರತೆಯನ್ನು ನಿರ್ದರಿಸುವುದು ಸಾಧ್ಯವಾಯಿತು. ಆಧುನಿಕ ಲೋಹಶಾಸ್ತ್ರ, ಸ್ಪಟಿಕಶಾಸ್ತ್ರ, ಹಾಗೂ ಅಣ್ವಯಿಕ ಜೀಮಶಾಸ್ತ್ರ ಬ್ರಾಗ್ ಹಾಗೂ ಅವನ ಸಂಗಡಿಗರು ಕೇಂಬ್ರಿಜ್ನಲ್ಲಿ ರೂಪಿಸಿದ ಈ ವಿಧಾನದ ಮೆಲೆ ಬಹು ಅವಲಂಬಿತವಾಗಿವೆ. ಬ್ರಾಗ್ನ ಜೀವನದುದ್ದಕ್ಕೂ, ಅವನಿಗಿಂತ ಮುಂದೆ ಮೊದಲ ಹೆಜ್ಜೆಗಳನ್ನು ಹಾಕಿದಾತ ಅವನ ತಂದೆ, 1954ರಲ್ಲಿ ರಾಯಲ್ ಇನ್ಸ್ಟಿಟ್ಯೂಟನ್ ನಿರ್ದೇಶಕರಾದ ಬ್ರಾಗ್ ವಿಜ್ಞಾನವನ್ನು ಜನಪ್ರಿಯಗೊಳಿಸಲು ಬಹುವಾಗಿ ಶ್ರಮಿಸಿದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಚಾರ್ಲ್ಸ್, ಗ್ಲೋವರ್ ಬಕ್ರ್ಲಾ –(1877-1944) 1917
Charles , Glover Barkla
ಇಂಗ್ಲೆಂಡ್-ಭೌತಶಾಸ್ತ್ರ-ದ್ವಿತೀಯಕ ವಿಕಿರಣಶೀಲತೆಯಲ್ಲಿ ಮುಂಚೂಣಿಗ.
ಚಾರ್ಲ್ಸ್ 7 ಜೂನ್ 1877ರಂದು ಲಂಕಾಷೈರ್’ನ ವಿಡ್ನೆಸ್ನಲ್ಲಿ ಜನಿಸಿದನು. ಇಲ್ಲಿ ಆತನ ತಂದೆ ಅಟ್ಲಾಸ್ ರಾಸಾಯನಿಕ ಕಂಪನಿಯಲ್ಲಿ ಕಾರ್ಯದರ್ಶಿಯಾಗಿದ್ದನು. ಚಾರ್ಲ್ಸ್. ಲಿವರ್ಪೂಲ್ ಇನ್ಸ್ಟಿಟ್ಯೂಟ್ನಲ್ಲಿ ಆರಂಭಿಕ ಶಿಕ್ಷಣ ಪಡೆದು, ಮುಂದೆ 1894ರಲ್ಲಿ ಲಿವರ್ಪೂಲ್ “ವಿಶ್ವವಿದ್ಯಾಲಯ ಸೇರಿ ಗಣಿತ ಹಾಗೂ ಭೌತಶಾಸ್ತ್ರದಲ್ಲಿ ವ್ಯಾಸಂಗ ಮಾಡಿದನು. ಇಲ್ಲಿರುವಾಗ ಕೆಲಕಾಲ ಆಲಿವರ್ ಲಾಡ್ಜ್ನ ಮಾರ್ಗದರ್ಶನ ದಕ್ಕಿತು. 1898ರಲ್ಲಿ ಪದವಿ ಪೂರ್ಣ ಗೊಳಿಸಿ, ಮುಂದಿನ ಒಂದೇ ವರ್ಷದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಸಹ ಪೂರೈಸಿದನು. 1851ರಲ್ಲಿ ರಾಯಲ್ ಕಮಿಷನರ್ಸ್ನಿಂದ, ಸಂಶೋಧನೆಗೆ ಸಹಾಯಧನ ಪಡೆದನು. ನಂತರ ಕೇಂಬ್ರಿಜ್ನ ಟ್ರಿನಿಟಿ ಕಾಲೇಜ್ ಸೇರಿ, ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿ ಜೆ.ಜೆ ಥಾಮ್ಸನ್ನ ಸಹಾಯಕನಾದನು. 1900ರಲ್ಲಿ ಕಿಂಗ್ಸ್ ಕಾಲೇಜಿಗೆ ಸೇರಿ, 1902ರಲ್ಲಿ ಫೆಲೋಷಿಪ್ ಗಳಿಸಿ ಲಿವರ್ಪೂಲ್ಗೆ ಮತ್ತೊಮ್ಮೆ ಬಂದನು. 1905ರಿಂದ 1909ರವರೆಗೆ ಪ್ರಯೋಗಾಲಯದ ವಿಶೇಷ ಪ್ರಾಧ್ಯಾಪಕ ಹಾಗೂ ಪ್ರದರ್ಶಕನಾಗಿ ನೇಮಕಗೊಂಡನು. 1909ರಲ್ಲಿ ಎಚ್.ವಿ ವಿಲ್ಸನ್ನಿಂದ ತೆರವಾದ ಪ್ರಾಧ್ಯಾಪಕ ಸ್ಥಾನ ತುಂಬಿದನು. 1913ರಲ್ಲಿ ಎಡಿನ್ಬರೋ ವಿಶ್ವವಿದ್ಯಾಲಯದ ನೈಸರ್ಗಿಕ ತತ್ತ್ವಶಾಸ್ತ್ರದ ಪೀಠ ಅಲಂಕರಿಸಿದನು. ಚಾಲ್ರ್ಸ್ನ ಆರಂಭಿಕ ಸಂಶೋಧನೆಗಳು, ವಾಹಕಗಳಲ್ಲಿನ ವಿದ್ಯುತ್ ಪ್ರವಾಹ ವೇಗವನ್ನು ಕುರಿತಾಗಿದ್ದವು. ಆದರೆ 1902ರಿಂದ ಕ್ಷ ಕಿರಣಗಳ ಬಗೆಗೆ ಆಸಕ್ತನಾದನು. ಪ್ರತಿ ಧಾತುವಿಗೂ, ಅದರದೇ ವಿಶಿಷ್ಟವಾದ ಕ್ಷ ಕಿರಣ ರೋಹಿತವಿರುತ್ತದೆಯೆಂದು ಚಾರ್ಲ್ಸ್ ತೋರಿಸಿದನು. ದ್ವಿತೀಯಕ ವಿಕಿರಣಶೀಲತೆ ಎರಡು ಬಗೆಯದಾಗಿರುವುದೆಂದು ಹೇಳಿದ ಮೊದಲಿಗ ಚಾರ್ಲ್ಸ್. ಇದರಲ್ಲಿ ಮೊದಲನೆಯದರಲ್ಲಿ ಕ್ಷ-ಕಿರಣಗಳಿದ್ದು ಚದುರಿದ್ದರೂ ಬದಲಾಗದ ಸ್ವರೂಪದಲ್ಲಿರುತ್ತದೆ ಎರಡನೆಯವು ಪ್ರದೀಪ್ತ ವಿಕಿರಣಗಳಾಗಿದ್ದು ಪ್ರತಿ ಧಾತುವಿಗೂ ವಿಶಿಷ್ಟವಾಗಿರುತ್ತವೆ. ಕ್ಷ ಕಿರಣಗಳು ಧೃವೀಕರಣಗೊಳ್ಳುವುವೆಂದು ಚಾರ್ಲ್ಸ್ ಪ್ರಯೋಗಗಳಿಂದ ಸ್ಪಷ್ಟವಾಯಿತು. ಕ್ಷ ಕಿರಣಗಳ ಹೀರಿಕೆ, ದ್ಯುತಿಕ್ರಿಯಾಶೀಲತೆಯನ್ನು ಚಾರ್ಲ್ಸ್ ವಿವರಿಸಿದನು. ಈತ ಕ್ವಾಂಟಂ ಸಿದ್ಧಾಂತ ಕ್ಷ ಕಿರಣಗಳ ಸ್ವರೂಪ ಅರಿಯುವಾಗ ಎಲ್ಲಿ ನೆರವಾಗುತ್ತದೆ, ಎಲ್ಲಿ ಮಿತಿಗೊಳಗಾಗುತ್ತದೆಯೆಂದು ನಿರ್ಧರಿಸಿದನು. ರಾಯಲ್ ಸೊಸೈಟಿಯ ಫೆಲೋ ಆಗಿದ್ದ ಚಾರ್ಲ್ಸ್ ಹಲವಾರು ಗೌರವ ಪದವಿಗಳನ್ನು ಹೊಂದಿದ್ದನು. ರಾಯಲ್ ಸೊಸೈಟಿಯ ಬಕೇರಿಯನ್ ಉಪಾಧ್ಯಾಯನಾಗಿ ನೇಮಕಗೊಂಡನು. 1917ರಲ್ಲಿ ಹ್ಯೂಗ್ಸ್ ಪದಕ ಗಳಿಸಿದನು. ಚಾರ್ಲ್ಸ್, ಅತ್ಯುತ್ತಮ ಗಾಯಕನಾಗಿದ್ದನು. ಚಾರ್ಲ್ಸ್ ಕ್ಷ-ಕಿರಣ ಕುರಿತಾದಂತೆ ನಡೆಸಿದ ಸಂಶೋಧನೆಗಳಿಗಾಗಿ 1917ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಪ್ಲಾಂಕ್, ಮ್ಯಾಕ್ಸ್ (ಕಾರ್ಲ್ ಅರ್ನಸ್ಟ್ ಲುಡ್ವಿಗ್) (1858-1947) 1918
Planck , Max (Karl Ernst Ludwig)
ಜರ್ಮನಿ-ಭೌತಶಾಸ್ತ್ರ- ಕ್ವಾಂಟಂ ಸಿದ್ಧಾಂತ ಮಂಡಿಸಿ, ಅಭಿಜಾತ ಭೌತಶಾಸ್ತ್ರ, ಆಧುನಿಕವಾಗಲು ಕಾರಣನಾದಾತ.
ನಾಗರಿಕ ಕಾನೂನಿನ ಪ್ರಾಧ್ಯಾಪಕನ ಮಗನಾಗಿದ್ದ ಪ್ಲಾಂಕ್ ಬರ್ಲಿನ್ ಹಾಗೂ ಮ್ಯೂನಿಕ್ಗಳಲ್ಲಿ ವ್ಯಾಸಂಗ ಮಾಡಿ, 1880ರಲ್ಲಿ ಡಾಕ್ಟರೇಟ್ ಪಡೆದನು. ಕೀಲ್ಗೆ ಹೋದ ಪ್ಲಾಂಕ್, ಅಲ್ಲಿ 1885ರಲ್ಲಿ ಪ್ರಾಧ್ಯಾಪಕನಾದನು. ಇಲ್ಲಿ ಮೂರು ವರ್ಷವಿದ್ದ ಪ್ಲಾಂಕ್ ನಂತರ ಬರ್ಲಿನ್ನಲ್ಲಿ ನೆಲೆಸಿದನು. 1930ರಲ್ಲಿ ಕೈಸರ್ ವಿಲ್ಹೆಲ್ಮ್ ಸಂಸ್ಥೆಯ ನಿರ್ದೇಶಕನಾದನು. ನಾಝಿಗಳ ಯಹೂದಿ ವಿರೋಧಿ ತತ್ತ್ವ ವಿರೋಧಿಸಿ, 1937ರಲ್ಲಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದನು. ಎರಡನೇ ಜಾಗತಿಕ ಯುದ್ದದ ನಂತರ ಈ ಸಂಸ್ಥೆಯನ್ನು ಗಟ್ಟಿಂಜೆನ್ಗೆ ಸ್ಥಳಾಂತರಿಸಿ, ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟಿಟ್ಯೂಟ್ ಎಂದು ಮರುನಾಮಕರಣ ಮಾಡಲಾಯಿತು. ಪ್ಲಾಂಕ್ ಇದರ ಅಧ್ಯಕ್ಷನಾದನು. ಕಿರ್ಕ್ಹಾಫ್, ಸ್ಟೀಫನ್, ವೀನ್ ಹಾಗೂ ಗ್ಯಾಲೆ, ಕಪ್ಪು ಕಾಯದಿಂದ ಉತ್ಸರ್ಜಿತಗೊಂಡ ವಿಕಿರಣದ ವಿತರಣೆಯ ಬಗೆಗೆ ಅಧ್ಯಯನ ನಡೆಸಿ, ಅದು ಅದರ ತಾಪಮಾನ ಹಾಗೂ ಆವರ್ತನೆಯ (Frequency) ಮೇಲೆ ಅವಲಂಬಿತವಾಗಿರುವುದೆಂದು ತಿಳಿಸಿದ್ದರು. ವೀನ್, ಅಲ್ಪ ತಾಪಮಾನದಲ್ಲಿನ ರ್ಯಾಲೆ ಹಾಗೂ ಜೀನ್ಸ್ ಅಧಿಕ ತಾಪಮಾನದಲ್ಲಿರುವ ಕಪ್ಪು ಕಾಯದ ಉತ್ಸರ್ಜನೆಯನ್ನು ವಿವರಿಸಿದ್ದರು. ಪ್ಲಾಂಕ್ ಇವರ ಇತಿಮಿತಿಗಳನ್ನು ಅರಿತು ಎಲ್ಲಾ ತಾಪಮಾನಗಳಿಗೆ ಸಮರ್ಪಕವಾದ ಹೊಸ ವಿವರಣೆ ನೀಡಿದನು. ಇದಕ್ಕಾಗಿ, ಚೈತನ್ಯ ನಿರ್ದಿಷ್ಟ ಪೊಟ್ಟಣಗಳಲ್ಲಿ (ಕ್ವಾಂಟಾ=ಶಕಲಗಳಲ್ಲಿ) ಬಿಡುಗಡೆ ಅಥವಾ ಹೀರಿಕೆಯಾಗುವುದೆಂದು ಪರಿಗಣಿಸಿದನು. ಇದು ಅಭಿಜಾತ ಭೌತಶಾಸ್ತ್ರದ ಎಲ್ಲೆಯನ್ನು ಮೀರಿದುದಾಗಿತ್ತು. ಇದು ಭೌತಶಾಸ್ತ್ರವನ್ನು ಆಧುನಿಕತೆಯತ್ತ ಒಯ್ದಿತು. ಅಲ್ಪ ಕಾಲದಲ್ಲೇ ಇತರ ವಿಜ್ಞಾನಿಗಳು ಹಲವಾರು ವಿದ್ಯಾಮನಗಳನ್ನು ಶಕಲ ಬಲದ (ಕ್ವಾಂಟಂ ಮೆಕಾನಿಕ್ಸ್) ದೃಷ್ಟಿಯಲ್ಲಿ ಹೆಚ್ಚು ಸ್ಪುಟವಾಗಿ ಅರಿಯಬಹುದೆಂದು ಕಂಡುಕೊಂಡರು. ಇದು ಕ್ವಾಂಟಂ ಬಲ ವಿಜ್ಞಾನ ಶಾಖೆಗೆ ನಾಂದಿಯಾಯಿತು. 1900ರಲ್ಲಿ ಪ್ಲಾಂಕ್ನ ಕ್ವಾಂಟಂ ಬಲವಿಜ್ಞಾನದ ಮೊದಲ ಲೇಖನ ಪ್ರಕಟಣೆಗೊಂಡರೆ, 1905ರಲ್ಲಿ ಇದಕ್ಕೆ ಬೆಂಬಲ ಒದಗಿಸುವಂತಹ ಲೇಖನವೊಂದನ್ನು ಆಲ್ಬರ್ಟ ಐನ್ಸ್ಟೀನ್ ಪ್ರಕಟಿಸಿದನು. ಪ್ಲಾಂಕ್ ತಾನು ನೀಡಿದ ಹೊಸ ದೃಷ್ಟಿ ಎಂತಹ ಕ್ರಾಂತಿಕಾರಕ ಬದಲಾವಣೆಗಳನ್ನು ತರಬಹುದೆಂದು ಶೀಘ್ರದಲ್ಲೇ ತಿಳಿದನು. ಪ್ಲಾಂಕ್ನಿಂದ ಅಭಿಜಾತ ಭೌತಶಾಸ್ತ್ರ, ಯುಗಾಂತವನ್ನು ಕಂಡಿತು. ಐನ್ಸ್ಟೀನ್ ಮಂಡಿಸಿದ ದ್ಯುತಿವೈದ್ಯುತ್ ಪರಿಣಾಮ (Photoelectric Effect), ಬೊಹ್ರ್ 1913ರಲ್ಲಿ ನೀಡಿದ ಪರಮಾಣುವಿನ ರಾಚನಿಕ ಸ್ವರೂಪಗಳು, ಪ್ಲಾಂಕ್ನ ಕ್ವಾಂಟಂ ಬಲವಿಜ್ಞಾನವನ್ನು ಆಚಾರ್ಯ ಸ್ಥಾನದಲ್ಲಿರಿಸಿದವು. 1920ರಲ್ಲಿ ಪ್ಲಾಂಕ್ ಹಾಗೂ ಇತರರು ಬಹುತೇಕ ಎಲ್ಲಾ ಬಗೆಯ ವೀಕ್ಷಿತ ವಿದ್ಯಾಮಾನಗಳಿಗೂ ಸಮರ್ಪಕ ವಿವರಣೆ ನೀಡಬಲ್ಲ ಕ್ವಾಂಟಂ ಬಲವಿಜ್ಞಾನದ ಶಾಖೆಯನ್ನು ಅಭಿವೃದ್ಧಿಗೊಳಿಸುವಲ್ಲಿ ಯಶಸ್ಸನ್ನು ಕಂಡರು. 1919ರಲ್ಲಿ ಪ್ಲಾಂಕ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಪ್ಲಾಂಕನ ವೈಯಕ್ತಿಕ ಜೀವನ ದು:ಖ ಹಾಗೂ ದುರಂತಗಳ ಸರಮಾಲೆಯಾಗಿದ್ದಿತು. ಆತನ ಅವಳಿ ಹೆಣ್ಣು ಮಕ್ಕಳು ಬಾಲ್ಯದಲ್ಲೇ ಅಸು ನೀಗಿದರು. ಮೊದಲನೆ ಜಾಗತಿಕ ಯುದ್ದದಲ್ಲಿ ಎರಡನೇ ಮಗ ಹತನಾದರೆ, ಜುಲೈ 1944ರಲಿ ಹಿಟ್ಲರ್ ಹತ್ಯೆ ರೂಪಿಸಿದ ಸಂಚಿನ ಅಪರಾಧಕ್ಕಾಗಿ ಅವನ ಮೊದಲ ಮಗ ಇರ್ವಿನ್ ಮರಣ ದಂಡನೆಗೊಳಗಾದನು. ಪ್ಲಾಂಕ್ ನಾಝಿ ತತ್ತ್ವಗಳ ಪರಮ ವಿರೋಧಿಯಾಗಿದ್ದನು. ಆದರೆ ಪ್ಲಾಂಕನ ಸ್ನೇಹಿತನಾಗಿದ್ದ ಐನ್ಸ್ಟೀನ್ ಅತ ನಾಝಿಗಳಿಗೆ ಪ್ರಬಲ ವಿರೋಧ ತೋರಿಸಲಿಲ್ಲವೆಂದು ಅತನ ಬಗೆಗೆ ಅಸಹನೆ ತಳೆದಿದ್ದನು. 1952ರಲ್ಲಿ ಡಾಯಿಷ್ ಮಾರ್ಕ್ ನಾಣ್ಯದ ಮೇಲೆ ಪ್ಲಾಂಕ್ನ ಚಿತ್ರ ಅಚ್ಚಾಯಿತು. ಈ ಗೌರವಕ್ಕೆ ಪಾತ್ರರಾದ ಬೆರಳೆಣಿಕೆಯ ಜರ್ಮನ್ರಲ್ಲಿ ಪ್ಲಾಂಕ್ ಒಬ್ಬನಾದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಸ್ಟಾಹ್ಕ್, ಜೊಹಾನ್ನಸ್ (1874-1957) 1919
Stark , Johannes
ಜರ್ಮನಿ-ಭೌತಶಾಸ್ತ್ರ-
ಸ್ಟಾಹ್ಕ್ನಂತಹ ವೈವಿಧ್ಯಮಯ ಜೀವನ ಸಾಗಿಸಿದ ವಿಜ್ಞಾನಿಗಳು ಅತಿ ವಿರಳ. ಸ್ಟಾಹ್ಕ್, ಭೌತಶಾಸ್ತ್ರದಲ್ಲಿನ ತನ್ನ ನಿಲುವುಗಳನ್ನು ಹಲವಾರು ಬಾರಿ ಬದಲಿಸಿದನು. ಸಹೋದ್ಯೋಗಿಗಳೊಂದಿಗೆ ಸೆಣಸಿದನು. ಜನಾಂಗೀಯ ಬೇಧ ನೀತಿಯನ್ನು ಬೆಂಬಲಿಸಿ ರಾಜಕೀಯಕ್ಕಿಳಿದನು. ಕಾರಾಗೃಹವಾಸ ಅನುಭವಿಸಿದನು. ವಿದ್ಯಾರ್ಥಿ ಜೀವನವನ್ನು ಸಾಧಾರಣವಾಗಿಯೇ ಕಳೆದ ಸ್ಟಾಹ್ಕ್ 1900ರಲ್ಲಿ ಗಟ್ಟಿಂಜೆನ್ನಲ್ಲಿ ಉಪನ್ಯಾಸಕನಾದನು. ನಂತರ ನಾಲ್ಕು ಜರ್ಮನ್ ವಿಶ್ವವಿದ್ಯಾಲಯಗಳಲ್ಲಿ ಪೀಠವನ್ನಲಂಕರಿಸಿದನು. 1902ರಲ್ಲಿ ಸ್ಟಾಹ್ಕ್, ಉತ್ಸರ್ಜನ ಕೊಳವೆಯಲ್ಲಿ ಶೀಘ್ರ ಚಲನೆಯಲ್ಲಿರುವ ಅಯಾನುಗಳು ತರಂಗಾಂತರ ಬದಲಾವಣೆಯ ಡಾಪ್ಲರ್ ಪರಿಣಾಮ ಹೊಂದಿರಬೇಕೆಂದು ಹೇಳಿದನು. 1905ರಲ್ಲಿ ಬಹು ಸುಕ್ಲಿಷ್ಟ ಪ್ರಯೋಗಗಳ ಮೂಲಕ ಈ ಪರಿಣಾಮ ಜಲಜನಕದ ಪರಮಾಣುಗಳಿಗೆ ನಿಜವೆಂದು ತೋರಿಸಿದನು. ಭೂಮಿಯಲ್ಲಿನ ಬೆಳಕಿನ ಆಕರಕ್ಕೆ ಡಾಪ್ಲರ್ ಪರಿಣಾಮ ಪತ್ತೆಯಾದ ಮೊದಲ ವಿದ್ಯಾಮಾನವಿದು. ಕಾಂತ ಕ್ಷೇತ್ರದಲ್ಲಿ ರೋಹಿತದ ಸಾಲುಗಳು ಸೀಳುವ ಝೀಮನ್ ಪರಿಣಾಮಕ್ಕೆ ಸಂವಾದಿಯಾದ ವಿದ್ಯಾಮಾನವನ್ನು ಸ್ಟಾಹ್ಕ್ 1913ರಲ್ಲಿ ಪ್ರಯೋಗಗಳಿಂದ ಪಡೆದನು. ಇದು ಈಗ ಸ್ಟಾಹ್ಕ್ ಪರಿಣಾಮವೆಂದು ಹೆಸರಾಗಿದೆ. ಸ್ಟಾಹ್ಕ್ 1919ರ ನೊಬೆಲ್ ಪ್ರಶಸ್ತಿ ಪಡೆದನು. ಈ ಕಾಲದಲ್ಲೇ ತನ್ನ ಸಿದ್ಧಾಂತಗಳ ಬಗೆಗೆ ತಾನೇ ಬೇರೊಂದು ಬಗೆಯ ನಿಲುವು ತಳೆಯುತ್ತ, ಜೊತೆಯ ವಿಜ್ಞಾನಿಗಳೊಂದಿಗೆ ವಾದ ವಿವಾದಗಳಿಗಿಳಿಯುತ್ತಿದ್ದನು. ಸ್ಟಾಹ್ಕ್ ಪ್ರಯೋಗ ಹಾಗೂ ಅದರ ಫಲಿತಾಂಶಗಳು ಸಾಪೇಕ್ಷತಾ ಸಿದ್ಧಾಂತ , ಬೊಹ್ರ್ ಪರಮಾಣು ಸಿದ್ಧಾಂತಗಳಿಗೆ ಸಾಕ್ಷ್ಯ ಒದಗಿಸಿದರೆ ಸ್ಟಾಹ್ಕ್ ಇವರ ಮೇಲೆಯೇ ವಾಗ್ದಾಳಿ ನಡೆಸಿದನು. 1920ರಲ್ಲಿ ವುರ್ಜ್ಬರ್ಗ್ ಪೀಠ ತ್ಯಜಿಸಿ, ನೊಬೆಲ್ ಪ್ರಶಸ್ತಿಯ ಹಣದಿಂದ, ಪಿಂಗಾಣಿ ತಯಾರಿಕೆಯ ಕಾರ್ಖಾನೆ ಪ್ರಾರಂಭಿಸಿದನು. ಇದರಲ್ಲಿ ವಿಫಲನಾಗಿ ಮತ್ತೊಮ್ಮೆ ಸಂಶೋಧನೆಗೆ ಬರಲು ಯತ್ನಿಸಿದನು. ಬಹುತೇಕ ಎಲ್ಲ ಸಂಗಡಿಗ ವಿಜ್ಞಾನಿಗಳನ್ನು ಸ್ಟಾಹ್ಕ್ ಎದುರು ಹಾಕಿಕೊಂಡಿದ್ದನು. 1934ರ ನಂತರ ಆಧುನಿಕ ಭೌತಶಾಸ್ತ್ರದ ಸಿದ್ದಾಂತಗಳೆಲ್ಲವನ್ನು ಹೀಗೆಳೆದನು. ಯಹೂದಿಗಳದು ವಿಜ್ಞಾನವೇ ಅಲ್ಲವೆಂದು ವಾದಿಸಿದನು. ಲೆನಾರ್ಡ್ನೊಂದಿಗೆ ನಾಝಿ ಆಡಳಿತವನ್ನು ಪ್ರಶಂಸಿಸಿದನು. ಜರ್ಮನಿಯ ವಿಜ್ಞಾನ ರಂಗವನ್ನೇ ತನ್ನ ಹತೋಟಿಯಲ್ಲಿರಿಸಿಕೊಳ್ಳಲು ಯತ್ನಿಸಿದನು. ಕಾಲಾನುಕ್ರಮದಲ್ಲೇ ನಾಝಿ ಪಕ್ಷದ ಬೆಂಬಲ ಕಳೆದುಕೊಂಡನು. ಇದಾದ ನಂತರ ನಿವೃತ್ತಿ ಹೊಂದಿ 1939ರಲ್ಲಿ ಬವೇರಿಯಾದಲ್ಲಿ ನೆಲೆಸಿದನು. 1947ರಲ್ಲಿ ಜರ್ಮನಿಯ ಮಾನವನ ಹಕ್ಕುಗಳ ನ್ಯಾಯಾಲಯ ಸ್ಟಾಹ್ಕ್’ಗೆ ನಾಲ್ಕು ವರ್ಷಗಳ ಕಠಿಣ ಸಜೆ ವಿಧಿಸಿತು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಚಾರ್ಲ್ಸ್, ಎಡ್ಯೂಯಾರ್ಡ್ ಗಿಲಾಮೆ (1861-1938) 1920
Charles , Eduard Guillaume
ಸ್ವಿಟ್ಸಲ್ರ್ಯಾಂಡ್ - ಭೌತಶಾಸ್ತ್ರ- ನಿಖರ ಮಾಪನೆಯ ತಂತ್ರಗಳನ್ನು ಪರಿಚಯಿಸಿದಾತ.
ಚಾರ್ಲ್ಸ್ ಸ್ವಿಸ್'ಜೂರಾ ಪ್ರಾಂತದ ಫ್ಲೂರಿನ್;ನಲ್ಲಿ 15 ಫೆಬ್ರವರಿ 1861 ರಂದು ಜನಿಸಿದನು. ಕ್ರಾಂತಿಯ ದಿನಗಳಲ್ಲಿ ಚಾರ್ಲ್ಸ್ತಾತ ಫ್ರಾನ್ಸ್ ತೊರೆದು, ಲಂಡನ್ಗೆ ಬಂದು ಅಲ್ಲಿ ಕೈಗಡಿಯಾರ ವ್ಯಾಪಾರ ಸ್ಥಾಪಿಸಿದ್ದನು. ಈತನ ನಾಲ್ಕು ಮಕ್ಕಳಲ್ಲಿ ಮೂವರು ಇದೇ ವೃತ್ತಿಯಲ್ಲಿ ಮುಂದುವರೆದರೆ, ಚಾರ್ಲ್ಸ್ತಂದೆ ಫ್ಲೂರಿನ್ಗೆ ಮರಳಿದ್ದನು. ಚಾರ್ಲ್ಸ್ ಪ್ರಾಥಮಿಕ ಶಿಕ್ಷಣವನ್ನು ನ್ಯೂಷೆಟೆಲ್ನಲ್ಲಿ ಮುಗಿಸಿ, ಮುಂದೆ ಝೂರಿಕ್ ಪಾಲಿಟೆಕ್ನಿಕ್ನಿಂದ ಡಾಕ್ಟರೇಟ್ ಗಳಿಸಿದನು. ಕೆಲಕಾಲ ಫಿರಂಗಿದಳದಲ್ಲಿ ಕೆಲಸ ಮಾಡಿದ ಚಾರ್ಲ್ಸ್ ನಂತರ ಅಂತರಾಷ್ಟ್ರೀಯ ತೂಕ ಹಾಗೂ ಅಳತೆಯ ಸಂಸ್ಥೆಗೆ ಸಹಾಯಕನಾಗಿ ಸೇರಿದನು. 1902ರಲ್ಲಿ ಇದರ ಸಹಾಯಕ ನಿರ್ದೇಶಕನಾದನು. 1915ರಲ್ಲಿ ನಿವೃತ್ತನಾಗುವವರೆಗೆ ಇದೇ ಹುದ್ದೆಯಲ್ಲಿದ್ದನು. 1936ರಲ್ಲಿ ಮರಣ ಹೊಂದುವವರೆಗೆ ಗೌರವ ನಿರ್ದೇಶಕನಾಗಿ ಮುಂದುವರೆದನು. ಅಲ್ಪ ಕಾಲದಲ್ಲಿ ಫಿರಂಗಿದಳದಲ್ಲಿದ್ದಾಗ, ಚಾರ್ಲ್ಸ್ ಬಲವಿಜ್ಞಾನ ಅಧ್ಯಯನ ಮಾಡಿದನು. ತಾಪಮಾನ ಅಳೆಯುವ ಉಪಕರಣಗಳನ್ನು ಪರಿಷ್ಕರಿಸಿದನು. ಇದನ್ನು ತೂಕ ಹಾಗೂ ಅಳತೆಯ ಇಲಾಖೆಯಲ್ಲಿದ್ದಾಗ ಬಳಕೆಗೆ ತಂದನು. ಮೀಟರ್, ಕೆ.ಜಿ.ಗಳನ್ನು ಸರಿಯಾಗಿ ಅವುಗಳ ಪರಿಮಾಣವನ್ನು ನಿರ್ಧರಿಸಿದನು. ತಾಪಮಾನಗಳು ವಿಸ್ತೃತ ಬದಲಾವಣೆಗಳಾದಗಲೂ, ಅತ್ಯಲ್ಪ ಹಿಗ್ಗುವ, ಕುಗ್ಗುವ ಮಿಶ್ರಲೋಹವನ್ನು ಅಳತೆಯ ಮಾಪಕವಾಗಿ ರೂಪಿಸಲು ಚಾರ್ಲ್ಸ್ ಯತ್ನಿಸಿದನು. ಇದಕ್ಕಾಗಿ ಹಲವಾರು ಕಬ್ಬಿಣ ನಿಕ್ಕಲ್ಗಳ ಮಿಶ್ರ ಲೋಹಗಳನ್ನು ಬಳಸಲು ಯತ್ನಿಸಿ ಇನ್ವರ್ ಮಿಶ್ರ ಲೋಹ ಪಡೆಯುವಲ್ಲಿ ಯಶಸ್ವಿಯಾದನು. ಇದು ತಾಪಮಾನಗಳ ವ್ಯತ್ಯಸ್ತದಲ್ಲಿ ಅತ್ಯಲ್ಪ ಬದಲಾಗುವ ಲೋಹವಾಗಿದೆ. ಈಗ ಅತ್ಯಂತ ಖಚಿತವಾಗಿ ಅಳೆಯಬೇಕಾದ ಉಪಕರಣಗಳಲ್ಲಿ ಇದು ಬಳಕೆಯಾಗುತ್ತದೆ. ಚಾರ್ಲ್ಸ್ ಅಳತೆ, ತೂಕ ಅವುಗಳ ನಿಖರ, ಮಾಪನ ಅವುಗಳಿಗೆ ಅನುಸರಿಸಬೇಕಾದ ವಿಧಾನ, ಬಳಸಬೇಕಾದ ಸಾಮಾಗ್ರಿಗಳನ್ನು ಕುರಿತಾಗಿ ಹಲವು ಹತ್ತಾರು ಪಾಂಡಿತ್ಯ ಪೂರ್ಣ ಲೇಖನಗಳನ್ನು ಪ್ರಕಟಿಸಿದನು. ಚಾರ್ಲ್ಸ್ ಜಿನೀವಾ, ಪ್ಯಾರಿಸ್ ನ್ಯಾಷನಲ್ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಗಳಿಂದ ಗೌರವಿತನಾದನು. ಚಾಲ್ರ್ಸ್ನ ಈ ತನ್ನ ಸಾಧನೆಗಳಿಗಾಗಿ 1920ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
Wein , Wilhelm
ಜರ್ಮನಿ-ಭೌತಶಾಸ್ತ್ರ- ಕಪ್ಪು ಕಾಯಗಳ ವಿಕಿರಣ ಶೀಲತೆಯ ಚೈತನ್ಯ ವಿವರಣೆ ಸೂತ್ರ ನೀಡಿದಾತ.
ರೈತ ಕುಟುಂಬದಲ್ಲಿ ಜನಿಸಿದ ವೀನ್, ರೈತನಾಗಬೇಕೆಂದು ಬಯಸಿದ್ದನು. ಕೆಲಕಾಲ ಗಟ್ಟಿಂಜೆನ್ನಲ್ಲಿ ವ್ಯಾಸಂಗ ಮಾಡಿದ ವೀನ್ 1884ರಲ್ಲಿ ಬರ್ಲಿನ್ನಲ್ಲಿ ಪದವಿ ಗಳಿಸಲು ಕಾಲೇಜಿಗೆ ಸೇರಿದನು. 1886ರಲ್ಲಿ ಬೆಳಕಿನ ವಕ್ರೀಭವನ, ಬೆಳಕಿನ ಹೀರಿಕೆಯನ್ನು ಕುರಿತಾಗಿ ಸಂಪ್ರಬಂಧ ಮಂಡಿಸಿ ಡಾಕ್ಟರೇಟ್ ಗಳಿಸಿದನು. ತಕ್ಷಣ ಹುಟ್ಟೂರಿಗೆ ಹೋಗಿ ಕೃಷಿಯಲ್ಲಿ ನಿರತನಾದನು. ನಾಲ್ಕು ವರ್ಷಗಳ ಸತತ ಬರಗಾಲದಿಂದ ತತ್ತರಿಸಿದ ವೀನ್ ತನ್ನ ಹೊಲಗಳನ್ನು ಮಾರಿ, ಬರ್ಲಿನ್ಗೆ ಹೋಗಿ ಹೆಲ್ಮ್’ಹೋಲ್ಟ್ಸ್’ನ ಸಹಾಯಕನಾದನು. 1900ರಲ್ಲಿ ವುರ್ಜ್ಬರ್ಗ್ನಲ್ಲಿ ಪ್ರಾಧ್ಯಾಪಕನಾಗಿ ನೇಮಕಗೊಂಡನು. 20 ವರ್ಷಗಳ ನಂತರ, ಮ್ಯೂನಿಕ್ನಲ್ಲಿ ರಾಂಟ್ಜೆನ್ ನಿಂದ ತೆರವಾದ ಸ್ಥಾನ ಅಲಂಕರಿಸಿದನು.
1892ರಲ್ಲಿ ವೀನ್ ಕಪ್ಪುಕಾಯಗಳ ವಿಕಿರಣದ ಬಗ್ಗೆ ಸಂಶೋಧನೆ ಪ್ರಾರಂಭಿಸಿದನು. ಈ ಸಂಶೋಧನೆ ಅಭಿಜಾತ ಭೌತಶಾಸ್ತ್ರ, ಕ್ವಾಂಟಂ ಬಲವಿಜ್ಞಾನದತ್ತ ತಿರುಗುವಂತೆ ಮಾಡಿತು. ವೀನ್ ಕಪ್ಪು ಕಾಯ ನಿರ್ದಿಷ್ಟ ತಾಪಮಾನದಲ್ಲಿ ಸೂಸುವ ವಿಕಿರಣಗಳ ಚೈತನ್ಯ ನಿರ್ಧರಿಸುವ ಸೂತ್ರ ನೀಡಿದನು. ಈ ಸೂತ್ರದಲ್ಲಿನ ಸ್ಥಿರಾಂಕವನ್ನು ಲುಮ್ಮೆರ್ ಹಾಗೂ ಇ. ಪ್ರಿಂಗ್ಷಿಮ್ ಅಳೆದರು. ಇದು ವೀನ್ ಪಲ್ಲಟ ನಿಯಮವೆಂದು ಖ್ಯಾತವಾಯಿತು. ಇದರ ಪ್ರಕಾರ ಕೆಂಪೇರಿದ ತಾಪಮಾನದಲ್ಲಿರುವ ಕಪ್ಪು ಕಾಯವನ್ನು ಇನ್ನೂ ಹೆಚ್ಚು ಕಾಯಿಸಿದಾಗ, ಕಿರು ತರಂಗಾಂತರದ ವಿಕಿರಣವನ್ನು ಹೊರ ಸೂಸಿ ಬಿಳಿ ವರ್ಣ ತಾಳುತ್ತದೆ. ಈಗ ಗರಿಷ್ಟ ವಿಕಿರಣದ ತಾಪಮಾನ ದೀರ್ಘ ತರಂಗಾಂತರಗಳಿಂದ ದೃಗ್ಗೋಚರ ವಿಕಿರಣದ ಕೇಂದ್ರದತ್ತ ಸರಿಯುತ್ತದೆ. 1896ರಲ್ಲಿ ಈ ಸೂತ್ರದ ನೆರವಿನಿಂದ ವೀನ್, ವಿಕಿರಣದ ರೋಹಿತದಲ್ಲಿನ ಚೈತನ್ಯ, ಅದರ ತರಂಗಾಂತರ ಹಾಗೂ ತಾಪಮಾನಗಳಿಗೆ ಅನುಲೋಮವಾಗಿರುವುದೆಂದು ವಿವರಿಸಿದನು. ವೀನ್ ಸೂತ್ರ ಹ್ರಸ್ವ ತರಂಗಾಂತರಗಳಿಗೆ ಸಮರ್ಪಕವಾಗಿದ್ದರೆ, ದೀರ್ಘ ತರಂಗಾಂತರಗಳಿಗೆ ತಪ್ಪಾಗಿರುತ್ತದೆ. ರ್ಯಾಲೆ, ದೀರ್ಘ ತರಂಗಾಂತರಗಳಿಗೆ ಸಮರ್ಪಕವಾದ ಆದರೆ ಹ್ರಸ್ವ ತರಂಗಾಂತರಗಳಿಗೆ ಅನ್ವಯವಾಗದ ಕಪ್ಪು ಕಾಯ ವಿಕಿರಣ ಸೂತ್ರ ನೀಡಿದನು. ಇಂತಹ ವ್ಯತ್ಯಾಸಕ್ಕೆ ಕಾರಣ ಹುಡುಕ ಹೊರಟ ಪ್ಲಾಂಕ್ ಚೈತನ್ಯ ಪೆÇಟ್ಟಣಗಳ ರೂಪದಲ್ಲಿ ಹೊರ ಹೊಮ್ಮುವುದೆಂದು ಭಾವಿಸಿದರೆ, ಹ್ರಸ್ವ ಹಾಗೂ ದೀರ್ಘ ತರಂಗಾಂತರಗಳೆರಡಕ್ಕೂ ಸರಿ ಹೊಂದುವ ವಿವರಣೆ ನೀಡಬಹುದೆಂದು ತಿಳಿಸಿದನು. ಅಭಿಜಾತಶಾಸ್ತ್ರದಲ್ಲಿ ಇಂತಹ ಪೊಟ್ಟಣ ರೂಪದ ಚೈತನ್ಯಗಳ ಪರಿಕಲ್ಪನೆಗೆ ಅವಕಾಶಗಳಿರಲಿಲ್ಲ. 1900ರಲ್ಲಿ ಪ್ಲಾಂಕ್ ತನ್ನ ಕ್ವಾಂಟಂ ಸಿದ್ಧಾಂತ ಮಂಡಿಸಿದನು. ಇದು ಭೌತಶಾಸ್ತ್ರದಲ್ಲಿ ಕ್ರಾಂತಿ ತಂದಿತು. 1911 ರಲ್ಲಿ ವೀನ್ ನೊಬೆಲ್ ಪ್ರಶಸ್ತಿ ಪಡೆದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ನೀಲ್ಸ್ ,ಗುಸ್ತಾವ್– ಡ್ಯಾಲೆನ್ (1869-1937) 1912
Niels , Gustav Dalen
ಸ್ವೀಡನ್-ಇಂಜಿನಿಯರ್-ರಸಾಯನಶಾಸ್ತ-ಅಸಿಟಿಲಿನ್ ತಂತ್ರಜ್ಞಾನದ ಮುಂಚೂಣಿಗ.
ಗುಸ್ತಾವ್, ಸ್ಕಾರ್ಬೋರ್ಗ್ ಪ್ರಾಂತದ ಸ್ಟೆನ್ಸ್ಟಾರ್ಪ್ ಹಳ್ಳಿಯ ರೈತ ಕುಟುಂಬದಲ್ಲಿ 30 ನವೆಂಬರ್ 1869ರಲ್ಲಿ ರಂದು ಜನಿಸಿದನು. ಪ್ರೌಢ ಶಿಕ್ಷಣ ಪೂರೈಸಿದ ಗುಸ್ತಾವ್, ಕೃಷಿ ಶಿಕ್ಷಣ ಪಡೆಯಲು ಕಾಲೇಜಿಗೆ ಸೇರಿದನು. ಇಲ್ಲಿ ಲವಲ್ ಎಂಬ ಉಪಾಧ್ಯಾಯ ಈತನಿಗೆ ತಾಂತ್ರಿಕ ಶಿಕ್ಷಣ ಹೊಂದುವಂತೆ ಸಲಹೆ ಮಾಡಿದನು. ಇದರಿಂದ ಉತ್ತೇಜಿತನಾದ ಗುಸ್ತಾವ್, ಗೊಥೆನ್ಬರ್ಗ್ನಲ್ಲಿದ್ದ ಷಾಲ್ಮರ್ಸ್ ತಾಂತ್ರಿಕ ಕಾಲೇಜಿನ ಪ್ರವೇಶ ಪರೀಕ್ಷೆ ಬರೆದು, 1892ರಲ್ಲಿ ಇಂಜಿನಿಯರಿಂಗ್ ಪದವಿಗೆ ಸೇರಿದನು. 1896ರಲ್ಲಿ ಇಂಜಿನಿಯರಿಂಗ್ ಪದವಿಯೊಂದಿಗೆ ಹೊರಬಂದು ಸ್ವಿಟ್ಸಲ್ರ್ಯಾಂಡ್ಗೆ ಹೋಗಿ ಅಲ್ಲಿ ಐಗಿನೋಸಿಷೆಸ್ ಪಾಲಿಟೆಕ್ನಿಕ್ನಲ್ಲಿ ಸ್ಟೊಡೋಲಾ ಕೈ ಕೆಳಗೆ ಕೆಲಸ ಮಾಡಿದನು. ಇಲ್ಲಿ ಒಂದು ವರ್ಷವಿದ್ದು ಸ್ವೀಡನ್ಗೆ ಹಿಂದಿರುಗಿದನು. ಇಲ್ಲಿ ಸಮಾಲೋಚಕ ಇಂಜಿನಿಯರ್ ಆಗಿ ಖಾಸಗಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದನು. ಕೆಲಕಾಲದ ನಂತರ 1901ರಲ್ಲಿ ಸ್ವೀಡನ್ ಕಾರ್ಬೈಡ್ ಹಾಗೂ ಆಸಿಟಿನ್ ಲಿ, ಕಂಪನಿಯ ತಾಂತ್ರಿಕ ವಿಭಾಗದ ಮುಖ್ಯಸ್ಥನಾದನು. ಇದನ್ನು ತೊರೆದು ಗ್ಯಾಸ್ ಅಕ್ಯುಮುಲೇಟರ್ ಕಂಪನಿ ಸೇರಿ 1906ರಲ್ಲಿ ಅದರ ಮುಖ್ಯ ಇಂಜಿನಿಯರ್ ಹುದ್ದೆಗೇರಿದನು. 1909ರಲ್ಲಿ ಇದು ಸ್ವೀಡಿಷ್ ಗ್ಯಾಸ್ ಅಕ್ಯುಮುಲೇಟರ್ ಕಂಪನಿ ಹೆಸರಿನಲ್ಲಿ ಪುನರ್ಸಂಘಟನೆಗೊಂಡಿತು. ಇದಕ್ಕೆ ಗುಸ್ತಾಫ್ ನಿರ್ವಾಹಕ ನಿರ್ದೇಶಕನಾದನು. ಗುಸ್ತಾಫ್ಪ್ರೌಢಶಾಲೆಯಲ್ಲಿದ್ದಾಗಲೇ ಹುಲ್ಲು ಕತ್ತರಿಸುವ ಯಂತ್ರ ನಿರ್ಮಿಸಿದ್ದನು. ಹಾಲಿನಲ್ಲಿರುವ ಕೊಬ್ಬಿನ ಅಂಶ ನಿರ್ಧರಿಸುವ ಉಪಕರಣ, ಹಾಲು ಕರೆಯುವ ಯಂತ್ರ, ಹಾಲು ಪಾಸ್ತರೀಕರಿಸುವ ಯಂತ್ರಗಳನ್ನು ತಯಾರಿಸಿದ್ದನು. ಗುಸ್ತಾವ್ಗೆ ಹೊಸದಾಗಿ ಚಿಂತಿಸುವುದು, ಉಪಕರಣ, ಸಲಕರಣೆ ತಯಾರಿಸುವುದು ರಕ್ತಗತವಾಗಿದ್ದಿತು. 1901ರಲ್ಲಿ ಗುಸ್ತಾಫ್ ಸಾಯಂಕಾಲ ತಾನಾಗಿಯೇ ಹತ್ತಿ ಬೆಳಗಿನ ಜಾವ ಆರಿ ಹೋಗುವ ದೀಪಸ್ತಂಭ, ಸ್ವಯಂಚಾಲಿತ ದೀಪಗಳನ್ನು ಉಪಜ್ಞಿಸಿದನು. ಅಸಿಟಿಲಿನ್ನ್ನು ಸುರಕ್ಷಿತವಾಗಿರಿಸುವುದು ಆ ಕಾಲಕ್ಕೆ ಬಹು ಕಠಿಣ ಕಾರ್ಯವಾಗಿದ್ದಿತು. ಸಂರಂಧ್ರಿತ ಅ್ಯಸ್ಬೆಸ್ಟಾಸ್ ಹಾಗೂ ಡಯಟೋಮೇಷಿಯಸ್ ಪೂರಿತ ಮಣ್ಣಲೇಪಿತ ಸಿಲಿಂಡರ್ನಲ್ಲಿ ಸಂರಕ್ಷಿತವಾಗಿ ಅಸಿಟಿಲೀನ್ ಸಂಗ್ರಹಿಸುವ ವಿಧಾನವನ್ನು ಬಳಕೆಗೆ ತಂದನು. 1912ರಲ್ಲಿ ಅಸಿಟಿಲಿನ್ ಸಿಲಿಂಡರ್ಗಳಿಗೆ ಒದಗಿಸುವ ಸುರಕ್ಷ ಕವಾಟಗಳ ಪರೀಕ್ಷೆಯಲ್ಲಿರುವಾಗ ಘಟಿಸಿದ ಸ್ಪೋಟದಿಂದಾಗಿ ಗುಸ್ತಾವ್, ಕಣ್ಣಿನ ದೃಷ್ಟಿ ದೋಷಕ್ಕೊಳಗಾದನು. ಆದರೆ ಇದು ಅವನ ಉತ್ಸಾಹಕ್ಕೆ ಭಂಗ ತರಲಿಲ್ಲ. ಈ ಸ್ಥಿತಿಯಲ್ಲೇ ಆತ ಪನಾಮ ಕಾಲುವೆಗೆ ದೀಪ ವ್ಯವಸ್ಥೆ ಒದಗಿಸುವ ಗುತ್ತಿಗೆ ಪಡೆದು ಯಶಸ್ವಿಯಾಗಿ ಪೂರ್ಣಗೊಳಿಸಿದನು. ಗುಸ್ತಾವ್, 1913ರಲ್ಲಿ ಸ್ವೀಡನ್ ರಾಯಲ್ ಅಕಾಡೆಮಿಯ, 1918ರಲ್ಲಿ ಅಕಾಡೆಮಿ ಆಫ್ ಸೈನ್ಸ್ನ ಅಂಡ್ ಇಂಜಿನಿಯರಿಂಗ್ ಸದಸ್ಯನಾದನು. 1918ರಲ್ಲಿ ಲುಂಡ್ ವಿಶ್ವವಿದ್ಯಾಲಯದ ಗೌರವ ಪ್ರಾಧ್ಯಾಪಕನಾದನು. ಅಂತಾರಾಷ್ಟ್ರೀಯ ಅಸಿಟಿಲೀನ್ ಅನೋಸಿಯೇಷನ್ನಿಂದ ಬಂಗಾರದ ಪದಕ ಪಡೆದನು. 1912ರಲ್ಲಿ ಅಸಿಟಿಲಿನ್ ಕುರಿತಾದ ಸಂಶೋಧನೆಗಳಿಗಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಕ್ಯಾಮೆರ್ಲಿಂಗ್-ಅವ್ನೆಸ್, ಹೀಕ್ (1853-1926) 1913
Kammerlingh-Onnes , Haike
ಡೆನ್ಮಾರ್ಕ್-ಭೌತಶಾಸ್ತ್ರ- ಹೀಲಿಯಂ ಅನಿಲವನ್ನು ದ್ರವೀಕರಿಸಿದಾತ.- ಅತಿವಾಹಕತೆಯನ್ನು ಗುರುತಿಸಿದ ಮೊದಲಿಗ.
ಗ್ರೊನಿನ್ಜೆನ್ನಲ್ಲಿ ಭೌತಶಾಸ್ತ್ರ ಅಭ್ಯಸಿಸಿದ ಕ್ಯಾಮೆರ್ಲಿಂಗ್,ಮುಂದೆ ಎರಡು ವರ್ಷಗಳ ಕಾಲ ಹೈಡೆನ್ಬರ್ಗ್ನಲ್ಲಿ ಬುನ್ಸೆನ್ ಮತ್ತು ಕಿರ್ಕ್ಹಾಫ್ ಕೈಕೆಳಗೆ ದುಡಿದನು. ಭೂಮಿ ಆವರ್ತಿಸುತ್ತಿರುವುದಕ್ಕೆ ಹೇಗೆ ಸಾಕ್ಷ್ಯ ಒದಗಿಸಬಹುದೆಂದು ಕ್ಯಾಮರ್’ಲಿಂಗ್ ಚಿಂತಿಸುತ್ತಿದ್ದನು. ಆದರೆ 1882ರಲ್ಲಿ ಲೀಡೆನ್ನಲ್ಲಿ ಪ್ರಾಧ್ಯಾಪಕನಾದ ನಂತರ ನಿಮ್ನ ತಾಪಮಾನಗಳಲ್ಲಿ ದ್ರವ್ಯದ ಸ್ವಭಾವ ಹೇಗಿರಬಹುದೆಂದು ವಿಚಾರಿಸತೊಡಗಿದನು. ಡೆವೆರ್ ಸಾರಜನಕವನ್ನು ದ್ರವೀಕರಿಸಿದ್ದನು ಜೌಲ್-ಥಾಮ್ಸನ್ ಪರಿಣಾಮ ಬಳಸಿ ಡೆವೆರ್ ದ್ರವ ಜಲಜನಕವನ್ನು ಪಡೆದಿದ್ದನು. ಕ್ಯಾಮರ್ಲಿಂಗ್ ,ಡೆವೆರ್ನ್ ವಿಧಾನವನ್ನು ಸುಧಾರಿಸಿದನು. 1908ರಲ್ಲಿ ದ್ರವ ಜಲಜನಕದ ನೆರವಿನಿಂದ ಹೀಲಿಯಂ ದ್ರವೀಕರಿಸಿದನು. ಹೀಲಿಯಂ 4.25 ಕೆಲ್ವಿನ್ನಲ್ಲಿ ಅನಿಲ ರೂಪ ತಾಳುವುದು ಇದರಿಂದ ತಿಳಿಯಿತು. ಇದರ ತಾಪಮಾನವನ್ನು 1೦K ಗೆ (ಕೆಲ್ವಿನ್) ಇಳಿಸಿದಾಗಲೂ ಹೀಲಿಯಂ ಘನರೂಪ ತಾಳಲಿಲ್ಲ. 1911ರಲ್ಲಿ ಕ್ಯಾಮೆರ್’ಲಿಂಗ್ ಪಾದರಸ, ರಾಗಿ, ಸೀಸದಂತಹ ಲೋಹಗಳು ಅತ್ಯಲ್ಪ ತಾಪಮಾನಗಳಲ್ಲೂ ಅತಿವಾಹಕಗಳಾಗುವುವೆಂದೂ, ಈ ಸ್ಥಿತಿಯಲ್ಲಿ ವಿದ್ಯುತ್ ಪ್ರವಾಹದ ಹರಿವಿಗೆ ಯಾವುದೇ ವಿರೋಧ ತೋರಿಸುವುದಿಲ್ಲವೆಂದೂ ಪತ್ತೆ ಹಚ್ಚಿದನು. ಇದಕ್ಕಾಗಿ 1913ರ ನೊಬೆಲ್ ಪ್ರಶಸ್ತಿ ಕ್ಯಾಮರ್ಲಿಂಗ್ಗೆ ಲಭಿಸಿತು. 1957ರಲ್ಲಿ ಅತಿವಾಹಕತೆಗೆ, ಬಿಸಿಎಸ್ ಸಿದ್ಧಾಂತದ ಮೂಲಕ ವಿವರಣೆ ದಕ್ಕಿತು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಲೌ, ಮ್ಯಾಕ್ಸ್ (ಥಿಯೋಡರ್ ಫೆಲಿಕ್ಸ್) –(1879-1960) 1914
Laue , Max ( Theodor Relix )
ಜರ್ಮನಿ-ಭೌತಶಾಸ್ತ್ರ-ಸ್ಪಟಿಕಗಳಲ್ಲಿ ಅಣುಗಳಿಂದ ಕ್ಷ-ಕಿರಣಗಳು ವಕ್ರಿಭವನಗೊಳ್ಳುವುದನ್ನು (Refraction) ಪರೀಕ್ಷಿಸುವ ಪ್ರಯೋಗ ಸೂಚಿಸಿದಾತ.
ಲೌ, ಭೌತಶಾಸ್ತ್ರವನ್ನು ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿದನು. ಎರಡು ವರ್ಷಗಳ ಕಾಲ ಕಲಾ ವಿಭಾಗದ ವಿದ್ಯಾರ್ಥಿಯಾಗಿದ್ದನು. ಭೌತಶಾಸ್ತ್ರದ ಉಪನ್ಯಾಸಕನಾಗಿ ವೃತ್ತಿ ಜೀವನ ಪ್ರಾರಂಭಿಸಿ, 1919ರಲ್ಲಿ ಬರ್ಲಿನ್ನಲ್ಲಿ ನೆಲೆಸಿದನು. 1943ರವರೆಗೆ ಇಲ್ಲಿಯೆೀ ಸೈದ್ಧಾಂತಿಕ ಭೌತಶಾಸ್ತ್ರದ ಪ್ರಾದ್ಯಾಪಕನಾಗಿದ್ದನು, ನ್ಯಾಷನಲ್ ಸೋಷಿಯಾಲಿಸ್ಟ್ ಪಕ್ಷದ (ನಾಝಿ ಪಕ್ಷ ) ಜನಾಂಗೀಯ ತಾರತಮ್ಯ ತಾಳಲಾರದೆ ಕೆಲಸಕ್ಕೆ ರಾಜಿನಾಮೆ ನೀಡಿದನು,. 1946ರಿಂದ ಜರ್ಮನಿಯ ವಿಜ್ಞಾನದ ಪುನರುಜ್ಜೀವನಕ್ಕೆ ಶ್ರಮಿಸಿದನು. ಲೌನ ಆರಂಭಿಕ ಕಾರ್ಯಗಳು ಐನ್ಸ್ಟೀನ್ರ ಸಾಪೇಕ್ಷ ಸಿದ್ಧಾಂತಕ್ಕೆ ಬೆಂಬಲ ನೀಡಿದವು. ಇಪ್ಪತ್ತನೇ ಶತಮಾನದ ಆದಿಯಲ್ಲಿ ಕ್ಷ-ಕಿರಣಗಳನ್ನು ಅಲ್ಪ-ತರಂಗಾಂತರದ, ಬೆಳಕಿನಂತಹ ವೈದ್ಯುತ್ ಕಾಂತೀಯ ತರಂಗಗಳೆಂದು ಭಾವಿಸಲಾಗಿದ್ದಿತು. ಆದರೆ ಕೆಲ ವಿಜ್ಞಾನಿಗಳು ಇದನ್ನು ಸಂಪೂರ್ಣವಾಗಿ ಒಪ್ಪಿರಲಿಲ್ಲ. ಬಾಹ್ಯ ರಚನೆಗೆ ತಕ್ಕಂತೆ, ಸ್ಪಟಿಕಗಳಲ್ಲಿ ಅಣುಗಳು ನಿರ್ದಿಷ್ಟ ಜೋಡಣೆಯಲ್ಲಿರುತ್ತವೆ. ಎಂದು ನಂಬಲಾಗಿದ್ದಿತು, ಇವೆರಡೂ ಅಭಿಪ್ರಾಯಗಳನ್ನು ತುಲನಾತ್ಮಕ ದೃಷ್ಟಿಯಲ್ಲಿ ನೋಡಿದ ಲೌ, ಇವು ನಿಜವೇ ಆಗಿದ್ದಲ್ಲಿ, ಸ್ಪಟಿಕಗಳ ಅಣುಗಳ ಮಧ್ಯದ ಅಂತರ 10-10 ಮೀಟರ್ ನಷ್ಟಿದ್ದು, ಸ್ಪಟಿಕದ ಮೂಲಕ ಸಾಗುವ ಕ್ಷ-ಕಿರಣಗಳನ್ನು ವಕ್ರೀಭವನಗೊಳಿಸಬೇಕೆಂದು ಸೂಚಿಸಿದನು. 1912ರಲ್ಲಿ ಇದನ್ನು ಪ್ರಯೋಗಗಳಿಂದ ಸರಿಯೆಂದು ತೋರಿಸಲಾಯಿತು. ಲೌ ಸಹಾಯಕನಾಗಿದ್ದ ಡಬ್ಲ್ಯೂ .ಫ್ರೀಡರಿಕ್ ಮತ್ತು ವಿದ್ಯಾರ್ಥಿಯಾಗಿದ್ದ ಪಿ.ಕ್ನಿಪ್ಪಿಂಗ್ ಸ್ಪಟಿಕವೊಂದರ ಮೂಲಕ ಕ್ಷ-ಕಿರಣ ಹಾಯಿಸಿ, ವಕ್ರೀಭವನದ ಮಚ್ಚೆಗಳ ಛಾಯಾ ಬಿಂಬ ಪಡೆದನು. ಇದರಿಂದ ಕ್ಷ-ಕಿರಣ ತರಂಗ ರೂಪಿಯೆಂದು ಖಚಿತವಾಯಿತು. ಇದರ ಆಧಾರದ ಮೇಲೆ ಬ್ರಾಗ್ಸ್, ಕ್ಷ-ಕಿರಣ ಸ್ಪಟಿಕಾಲೇಖದ (Crystallography) ಅಧ್ಯಯನ ಪ್ರಾರಂಭಿಸಿದನು. 1914ರಲ್ಲಿ ಲೌ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಬ್ರಾಗ್ , ಸರ್ ವಿಲಿಯಂ (ಹೆನ್ರಿ) (1862-1942) -1915
Bragg , Sir William (Henry)
ಬ್ರಿಟನ್-ಭೌತಶಾಸ್ತ್ರ- ಕ್ಷ-ಕಿರಣಗಳ ಲಾಕ್ಷಣಿಕ ರೋಹಿತ ಅನಾವರಣಗೊಳಿಸಿದಾತ. ತನ್ನ ಮಗನಾದ ಬ್ರಾಗ್ ಸರ್ ಲಾರೆಸ್ಸ್ ಜೊತೆ ಕ್ಷ-ಕಿರಣ ಸ್ಫಟಿಕಾಲೇಖ ವಿಧಾನಗಳನ್ನು ಅಭಿವೃದ್ದಿಗೊಳಿಸಿದಾತ.
ನಲವತ್ತು ವಯಸ್ಸಿನ ನಂತರ ಸಂಶೋಧನೆಗಳಿಂದ ಕೈ ಬೆರಳೆಣಿಕೆಯ ಸಂಶೋಧಕರ ಪಟ್ಟಿಗೆ ವಿಲಿಯಂ ಬ್ರಾಗ್ ಸೇರುತ್ತಾನೆ. 1912ರ ನಂತರ ವಿಲಿಯಂ ತನ್ನ ಮಗ ಲಾರೆನ್ಸ್ನನ್ನು ಸಹ ಸಂಶೋಧಕವಾಗಿಸಿಕೊಂಡನು. ಕೇಂಬ್ರಿಜ್ನಲ್ಲಿ ಓದಿದ ವಿಲಿಯಂ 1886ರಲ್ಲಿ ಅಡಿಲೇಡ್ನಲ್ಲಿ ಗಣಿತದ ಪ್ರಾಧ್ಯಾಪಕನಾದನು 1904ಎಂದ ವಿಕಿರಣಶೀಲತೆಯ ಬಗೆಗೆ ತೀವ್ರ ಸಂಶೋಧನೆ ಕೈಗೊಂಡ ವಿಲಿಯಂ, 1909ರಲ್ಲಿ ಲೀಡ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾದ ನಂತರ ವಾನ್ ಲಾಯೆ ನಡೆಸಿದ ಸಂಶೋಧನೆಗಳಿಂದ ಪ್ರೇರಿತನಾಗಿ ಕ್ಷ-ಕಿರಣಗಳ ಅಧ್ಯಯನದಲ್ಲಿ ತೊಡಗಿದನು. 1913ರಲ್ಲಿ ವಿಲಿಯಂ, ಅಧಿಕ ಚೈತನ್ಯದ ಎಲೆಕ್ಟ್ರಾನ್ಗಳನ್ನು ಪ್ಲಾಟಿನಂ ಫಲಕಕ್ಕೆ ತಾಡಿಸಿದಾಗ ದೊರಕುವ ಕ್ಷ-ಕಿರಣಗಳ ರೋಹಿತದಲ್ಲಿ ಪ್ಲಾಟಿನಂ ಧಾತುವಿನ ಲಕ್ಷಣಗಳಿರುವ ಹಲವಾರು ಸಾಲುಗಳನ್ನು ವಿಲಿಯಂ ಗಮನಿಸಿದನು, ಮೋಸ್ಲೆ, ಇದೇ ಕಾಲಕ್ಕೆ , ಕ್ಷ-ಕಿರಣಗಳ ರೋಹಿತವನ್ನು , ಬೇರೆಯ ಸಂಶೋಧನೆಗಳ ಬಳಸಿಕೊಳ್ಳುವ ಹುನ್ನಾರದಲ್ಲಿದ್ದನು. ವಿಲಿಯಂ ಮಗ ಲಾರೆನ್ಸ್ ಜೊತೆಗೂಡಿ ಪ್ಲಾಟಿನಂಗೆ ಬದಲಾಗಿ, ಹಲವಾರು ಸ್ಪಟಿಕಗಳನ್ನು ಬಳ¸ ಕ್ಷ-ಕಿರಣಗಳ ರೋಹಿತಗಳನ್ನು ಪಡೆದು. ಸ್ಫಟಿಕಾಲೇಖ ವಿಧಾನಕ್ಕೆ ನಾಂದಿ ಹಾಡಿತು. ವಿಲಿಯಂ 1915ರಲ್ಲಿ ಲಂಡನ್ ವಿಶ್ವವಿದ್ಯಾಲಯದ ಕಾಲೇಜಿನ ಪ್ರಾಧ್ಯಾಪಕನಾಗಿ, ಜಾಗತಿಕ ಯುದ್ದದ ಸಮಯದಲ್ಲಿ, ಜಲಾಂತರ್ಗಾಮಿಗಳನ್ನು ಗುರುತಿಸುವ ವಿಧಾನ ಹಾಗೂ ಉಪಕರಣಗಳನ್ನು ನಿರ್ಮಿಸಲು ಯತ್ನಿಸಿದನು. 1923ರಲ್ಲಿ ವಿಲಿಯಂ ರಾಯಲ್ ಇನ್ಸ್ಟಿಟ್ಯೂಷನ್ ನಿರ್ದೇಶಕನಾದನು. ಇಡೀ ನೊಬೆಲ್ ಚರಿತ್ರೆಯಲ್ಲಿ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡ ಏಕೈಕ ತಂದೆ-ಮಗರ ಜೋಡಿ0iÉುಂದರೆ ವಿಲಿಯಂ ಹಾಗೂ ಲಾರೆನ್ಸ್ ಮಾತ್ರ. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಬ್ರಾಗ್ ಸರ್ (ವಿಲಿಯಂ) ಲಾರೆನ್ಸ್ (1890-1971 ) - 1915
Bragg, Sir (William) Lawrence
ಬ್ರಿಟನ್-ಭೌತಶಾಸ್ತ್ರ - ಡಬ್ಲು.ಎಚ್.ಬ್ರಾಗ್ ಜೊತೆ ಸೇರಿ ಕ್ಷ-ಕಿರಣ ಸ್ಪಟಿಕಾಲೇಖ ( X-Ray Crystallography) ಸ್ಥಾಪಿಸಿದಾತ.
ಅಡಿಲೇಡ್ನನಲ್ಲಿ ಜನಿಸಿದ ಲಾರೆನ್ಸ್ ಗಣಿತ ಪದವಿ ಗಳಿಸಿ, 1910ರಲ್ಲಿ ಕೇಂಬ್ರಿಜ್ಗೆ ಹೋಗಿ ನೆಲೆಸಿದ ನಂತರ ಭೌತಶಾಸ್ತ್ರದಲ್ಲಿ ಆಸಕ್ತಿ ತಳೆದನು. ಬ್ರಾಗ್ನ ತಂದೆಯೂ ಸಹ ಭೌತಶಾಸ್ತ್ರದ ಒಲವು ತಳೆದಿದ್ದವನಾಗಿದ್ದನು. ಲಾಯೆ ಸ್ಪಟಿಕಗಳಿಂದ, ಕ್ಷ – ಕಿರಣಗಳನ್ನು ವಿವರ್ತನಗೊಳಿಸಬಹುದೆಂದು (Diffraction) ಹೇಳಿದ್ದನು ಈ ಬಗ್ಗೆ ಕಾರ್ಯ ನಿರತರಾದ ಬ್ರಾಗ್ ನಿರ್ದಿಷ್ಟ ಅಣು ದೂರದಲ್ಲಿ ಜಾಲಕ ಸಮತಲಗಳನ್ನು (Lattice Plane) ಹೊಂದಿರುವ , ಸ್ಪಟಿಕದ ಮೂಲಕ ನಿರ್ದಿಷ್ಟ ಸಂಪಾತ ಕೋನದಲ್ಲಿ , ಗೊತ್ತಿರುವ ತರಂಗಾತರದ ಕ್ಷ-ಕಿರಣವನ್ನು ಹಾಯಿಸಿದಾಗ ಆಗುವ ವಿವರ್ತನವನ್ನು ಲಾರೆನ್ಸ್ ಲೆಕ್ಕಾಚಾರ ಹಾಕಿದನು. ಇದು ಬ್ರಾಗ್ ನಿಯಮವೆಂದು ಖ್ಯಾತ. ಸ್ಪಟಿಕದ ಅಣು ಪದರುಗಳ ಮೂಲಕ ಕ್ಷ – ಕಿರಣ ಸಾಗಿದಾಗ ಹಲವು ಪದರಗಳಿಂದ ಪ್ರತಿಫಲನದ ಮೂಲಕ ವ್ಯತಿಕರಣಗೊಂಡು (Interference) ಬ್ರಾಗ್ ನಿರೂಪಿಸಿದ ನಿಯಮದಂತೆ ವರ್ತಿಸುತ್ತದೆ. ಲಾರೆನ್ಸ್ ತನ್ನ ತಂದೆ ನಿರ್ಮಿಸಿದ್ದ ಕ್ಷ-ಕಿರಣದ ಗೋನಿಯೋ ಮೀಟರ್ ಬಳಸಿ ತನ್ನ ತಂದೆಯೊಂದಿಗೆ ಸಂಶೋಧನೆ ಮುಂದುವರೆಸಿದನು. ಗೊತ್ತಿರುವ ತರಂಗಾಂತರದ ಕ್ಷ-ಕಿರಣಗಳನ್ನು ಬಳಸಿ, ಅವರು ವಜ್ರ, ತಾಮ್ರ, ಗಂಧಕ ಹಾಗೂ ಹಲವಾರು ಲವಣಗಳ ಅಣು ಪದರುಗಳ ಮದ್ಯದ ದೂರವನ್ನು ನಿರ್ಧರಿಸುವಲ್ಲಿ ಸಫಲರಾದನು. ಬ್ರಾಗ್ ಈ ಬಗೆಯ ಅಧ್ಯಯನಕ್ಕೆ ತೊಡಗುವ ಮೊದಲು ಸ್ಪಟಿಕಗಳ ಅಧ್ಯಯನ ಅವುಗಳ ಬಾಹ್ಯ ರಚನೆ ಹಾಗೂ ಸ್ವರೂಪಗಳನ್ನು ಅರಿಯುವಲ್ಲಿಗೆ ಸೀಮಿತಗೊಂಡಿದ್ದಿತು. ಬ್ರಾಗ್ ಬಳಕೆಗೆ ತಂದ ಕ್ಷ-ಕಿರಣ ಸ್ಪಟಿಕಾಲೇಖ ಅವುಗಳ ಅಣ್ವಯಿಕ ಆಂತರ್ಯವನ್ನು ಅರಿಯುವಲ್ಲಿ ರಾಜಮಾರ್ಗವಾಯಿತು.ಬ್ರಾಗ್ 1915ರಲ್ಲಿ ತನ್ನ ತಂದೆಯೊಂದಿಗೆ ನೊಬೆಲ್ ಪುರಸ್ಕೃತನಾದಾಗ ಅವನ ವಯಸ್ಸು ಕೇವಲ 25. ಈತ ನೊಬೆಲ್ ಚರಿತ್ರೆಯಲ್ಲೇ ಅತಿ ಕಿರಿಯ. 1919ರಲ್ಲಿ ಬ್ರಾಗ್ ಮ್ಯಾಂಚೆಸ್ಟರ್’ನಲ್ಲಿ 1958ರಲ್ಲಿ ಕೇಂಬ್ರಿಜ್ನಲ್ಲಿ ಪ್ರಾಧ್ಯಾಪಕನಾದನು.ಛಾಯಾ ಪತ್ರದ ಮೇಲೆ (Photographic Film) ಕ್ಷ-ಕಿರಣಗಳಿಂದ ಸ್ಪಟಿಕದಿಂದಾಗುವ ವಿವರ್ತನವನ್ನು ಬೆಳಕಿನ ಚುಕ್ಕೆಗಳಾಗಿ ಪಡೆಯುವ ವಿಧಾನವನ್ನು ಬ್ರಾಗ್ ಬಳಕೆಗೆ ತಂದನು. ಇದರಿಂದಾಗಿ, ಯಾವುದೇ ಸ್ಫಟಿಕದ ಅಣು ಸಾಂದ್ರತೆಯನ್ನು ನಿರ್ದರಿಸುವುದು ಸಾಧ್ಯವಾಯಿತು. ಆಧುನಿಕ ಲೋಹಶಾಸ್ತ್ರ, ಸ್ಪಟಿಕಶಾಸ್ತ್ರ, ಹಾಗೂ ಅಣ್ವಯಿಕ ಜೀಮಶಾಸ್ತ್ರ ಬ್ರಾಗ್ ಹಾಗೂ ಅವನ ಸಂಗಡಿಗರು ಕೇಂಬ್ರಿಜ್ನಲ್ಲಿ ರೂಪಿಸಿದ ಈ ವಿಧಾನದ ಮೆಲೆ ಬಹು ಅವಲಂಬಿತವಾಗಿವೆ. ಬ್ರಾಗ್ನ ಜೀವನದುದ್ದಕ್ಕೂ, ಅವನಿಗಿಂತ ಮುಂದೆ ಮೊದಲ ಹೆಜ್ಜೆಗಳನ್ನು ಹಾಕಿದಾತ ಅವನ ತಂದೆ, 1954ರಲ್ಲಿ ರಾಯಲ್ ಇನ್ಸ್ಟಿಟ್ಯೂಟನ್ ನಿರ್ದೇಶಕರಾದ ಬ್ರಾಗ್ ವಿಜ್ಞಾನವನ್ನು ಜನಪ್ರಿಯಗೊಳಿಸಲು ಬಹುವಾಗಿ ಶ್ರಮಿಸಿದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಚಾರ್ಲ್ಸ್, ಗ್ಲೋವರ್ ಬಕ್ರ್ಲಾ –(1877-1944) 1917
Charles , Glover Barkla
ಇಂಗ್ಲೆಂಡ್-ಭೌತಶಾಸ್ತ್ರ-ದ್ವಿತೀಯಕ ವಿಕಿರಣಶೀಲತೆಯಲ್ಲಿ ಮುಂಚೂಣಿಗ.
ಚಾರ್ಲ್ಸ್ 7 ಜೂನ್ 1877ರಂದು ಲಂಕಾಷೈರ್’ನ ವಿಡ್ನೆಸ್ನಲ್ಲಿ ಜನಿಸಿದನು. ಇಲ್ಲಿ ಆತನ ತಂದೆ ಅಟ್ಲಾಸ್ ರಾಸಾಯನಿಕ ಕಂಪನಿಯಲ್ಲಿ ಕಾರ್ಯದರ್ಶಿಯಾಗಿದ್ದನು. ಚಾರ್ಲ್ಸ್. ಲಿವರ್ಪೂಲ್ ಇನ್ಸ್ಟಿಟ್ಯೂಟ್ನಲ್ಲಿ ಆರಂಭಿಕ ಶಿಕ್ಷಣ ಪಡೆದು, ಮುಂದೆ 1894ರಲ್ಲಿ ಲಿವರ್ಪೂಲ್ “ವಿಶ್ವವಿದ್ಯಾಲಯ ಸೇರಿ ಗಣಿತ ಹಾಗೂ ಭೌತಶಾಸ್ತ್ರದಲ್ಲಿ ವ್ಯಾಸಂಗ ಮಾಡಿದನು. ಇಲ್ಲಿರುವಾಗ ಕೆಲಕಾಲ ಆಲಿವರ್ ಲಾಡ್ಜ್ನ ಮಾರ್ಗದರ್ಶನ ದಕ್ಕಿತು. 1898ರಲ್ಲಿ ಪದವಿ ಪೂರ್ಣ ಗೊಳಿಸಿ, ಮುಂದಿನ ಒಂದೇ ವರ್ಷದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಸಹ ಪೂರೈಸಿದನು. 1851ರಲ್ಲಿ ರಾಯಲ್ ಕಮಿಷನರ್ಸ್ನಿಂದ, ಸಂಶೋಧನೆಗೆ ಸಹಾಯಧನ ಪಡೆದನು. ನಂತರ ಕೇಂಬ್ರಿಜ್ನ ಟ್ರಿನಿಟಿ ಕಾಲೇಜ್ ಸೇರಿ, ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿ ಜೆ.ಜೆ ಥಾಮ್ಸನ್ನ ಸಹಾಯಕನಾದನು. 1900ರಲ್ಲಿ ಕಿಂಗ್ಸ್ ಕಾಲೇಜಿಗೆ ಸೇರಿ, 1902ರಲ್ಲಿ ಫೆಲೋಷಿಪ್ ಗಳಿಸಿ ಲಿವರ್ಪೂಲ್ಗೆ ಮತ್ತೊಮ್ಮೆ ಬಂದನು. 1905ರಿಂದ 1909ರವರೆಗೆ ಪ್ರಯೋಗಾಲಯದ ವಿಶೇಷ ಪ್ರಾಧ್ಯಾಪಕ ಹಾಗೂ ಪ್ರದರ್ಶಕನಾಗಿ ನೇಮಕಗೊಂಡನು. 1909ರಲ್ಲಿ ಎಚ್.ವಿ ವಿಲ್ಸನ್ನಿಂದ ತೆರವಾದ ಪ್ರಾಧ್ಯಾಪಕ ಸ್ಥಾನ ತುಂಬಿದನು. 1913ರಲ್ಲಿ ಎಡಿನ್ಬರೋ ವಿಶ್ವವಿದ್ಯಾಲಯದ ನೈಸರ್ಗಿಕ ತತ್ತ್ವಶಾಸ್ತ್ರದ ಪೀಠ ಅಲಂಕರಿಸಿದನು. ಚಾಲ್ರ್ಸ್ನ ಆರಂಭಿಕ ಸಂಶೋಧನೆಗಳು, ವಾಹಕಗಳಲ್ಲಿನ ವಿದ್ಯುತ್ ಪ್ರವಾಹ ವೇಗವನ್ನು ಕುರಿತಾಗಿದ್ದವು. ಆದರೆ 1902ರಿಂದ ಕ್ಷ ಕಿರಣಗಳ ಬಗೆಗೆ ಆಸಕ್ತನಾದನು. ಪ್ರತಿ ಧಾತುವಿಗೂ, ಅದರದೇ ವಿಶಿಷ್ಟವಾದ ಕ್ಷ ಕಿರಣ ರೋಹಿತವಿರುತ್ತದೆಯೆಂದು ಚಾರ್ಲ್ಸ್ ತೋರಿಸಿದನು. ದ್ವಿತೀಯಕ ವಿಕಿರಣಶೀಲತೆ ಎರಡು ಬಗೆಯದಾಗಿರುವುದೆಂದು ಹೇಳಿದ ಮೊದಲಿಗ ಚಾರ್ಲ್ಸ್. ಇದರಲ್ಲಿ ಮೊದಲನೆಯದರಲ್ಲಿ ಕ್ಷ-ಕಿರಣಗಳಿದ್ದು ಚದುರಿದ್ದರೂ ಬದಲಾಗದ ಸ್ವರೂಪದಲ್ಲಿರುತ್ತದೆ ಎರಡನೆಯವು ಪ್ರದೀಪ್ತ ವಿಕಿರಣಗಳಾಗಿದ್ದು ಪ್ರತಿ ಧಾತುವಿಗೂ ವಿಶಿಷ್ಟವಾಗಿರುತ್ತವೆ. ಕ್ಷ ಕಿರಣಗಳು ಧೃವೀಕರಣಗೊಳ್ಳುವುವೆಂದು ಚಾರ್ಲ್ಸ್ ಪ್ರಯೋಗಗಳಿಂದ ಸ್ಪಷ್ಟವಾಯಿತು. ಕ್ಷ ಕಿರಣಗಳ ಹೀರಿಕೆ, ದ್ಯುತಿಕ್ರಿಯಾಶೀಲತೆಯನ್ನು ಚಾರ್ಲ್ಸ್ ವಿವರಿಸಿದನು. ಈತ ಕ್ವಾಂಟಂ ಸಿದ್ಧಾಂತ ಕ್ಷ ಕಿರಣಗಳ ಸ್ವರೂಪ ಅರಿಯುವಾಗ ಎಲ್ಲಿ ನೆರವಾಗುತ್ತದೆ, ಎಲ್ಲಿ ಮಿತಿಗೊಳಗಾಗುತ್ತದೆಯೆಂದು ನಿರ್ಧರಿಸಿದನು. ರಾಯಲ್ ಸೊಸೈಟಿಯ ಫೆಲೋ ಆಗಿದ್ದ ಚಾರ್ಲ್ಸ್ ಹಲವಾರು ಗೌರವ ಪದವಿಗಳನ್ನು ಹೊಂದಿದ್ದನು. ರಾಯಲ್ ಸೊಸೈಟಿಯ ಬಕೇರಿಯನ್ ಉಪಾಧ್ಯಾಯನಾಗಿ ನೇಮಕಗೊಂಡನು. 1917ರಲ್ಲಿ ಹ್ಯೂಗ್ಸ್ ಪದಕ ಗಳಿಸಿದನು. ಚಾರ್ಲ್ಸ್, ಅತ್ಯುತ್ತಮ ಗಾಯಕನಾಗಿದ್ದನು. ಚಾರ್ಲ್ಸ್ ಕ್ಷ-ಕಿರಣ ಕುರಿತಾದಂತೆ ನಡೆಸಿದ ಸಂಶೋಧನೆಗಳಿಗಾಗಿ 1917ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಪ್ಲಾಂಕ್, ಮ್ಯಾಕ್ಸ್ (ಕಾರ್ಲ್ ಅರ್ನಸ್ಟ್ ಲುಡ್ವಿಗ್) (1858-1947) 1918
Planck , Max (Karl Ernst Ludwig)
ಜರ್ಮನಿ-ಭೌತಶಾಸ್ತ್ರ- ಕ್ವಾಂಟಂ ಸಿದ್ಧಾಂತ ಮಂಡಿಸಿ, ಅಭಿಜಾತ ಭೌತಶಾಸ್ತ್ರ, ಆಧುನಿಕವಾಗಲು ಕಾರಣನಾದಾತ.
ನಾಗರಿಕ ಕಾನೂನಿನ ಪ್ರಾಧ್ಯಾಪಕನ ಮಗನಾಗಿದ್ದ ಪ್ಲಾಂಕ್ ಬರ್ಲಿನ್ ಹಾಗೂ ಮ್ಯೂನಿಕ್ಗಳಲ್ಲಿ ವ್ಯಾಸಂಗ ಮಾಡಿ, 1880ರಲ್ಲಿ ಡಾಕ್ಟರೇಟ್ ಪಡೆದನು. ಕೀಲ್ಗೆ ಹೋದ ಪ್ಲಾಂಕ್, ಅಲ್ಲಿ 1885ರಲ್ಲಿ ಪ್ರಾಧ್ಯಾಪಕನಾದನು. ಇಲ್ಲಿ ಮೂರು ವರ್ಷವಿದ್ದ ಪ್ಲಾಂಕ್ ನಂತರ ಬರ್ಲಿನ್ನಲ್ಲಿ ನೆಲೆಸಿದನು. 1930ರಲ್ಲಿ ಕೈಸರ್ ವಿಲ್ಹೆಲ್ಮ್ ಸಂಸ್ಥೆಯ ನಿರ್ದೇಶಕನಾದನು. ನಾಝಿಗಳ ಯಹೂದಿ ವಿರೋಧಿ ತತ್ತ್ವ ವಿರೋಧಿಸಿ, 1937ರಲ್ಲಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದನು. ಎರಡನೇ ಜಾಗತಿಕ ಯುದ್ದದ ನಂತರ ಈ ಸಂಸ್ಥೆಯನ್ನು ಗಟ್ಟಿಂಜೆನ್ಗೆ ಸ್ಥಳಾಂತರಿಸಿ, ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟಿಟ್ಯೂಟ್ ಎಂದು ಮರುನಾಮಕರಣ ಮಾಡಲಾಯಿತು. ಪ್ಲಾಂಕ್ ಇದರ ಅಧ್ಯಕ್ಷನಾದನು. ಕಿರ್ಕ್ಹಾಫ್, ಸ್ಟೀಫನ್, ವೀನ್ ಹಾಗೂ ಗ್ಯಾಲೆ, ಕಪ್ಪು ಕಾಯದಿಂದ ಉತ್ಸರ್ಜಿತಗೊಂಡ ವಿಕಿರಣದ ವಿತರಣೆಯ ಬಗೆಗೆ ಅಧ್ಯಯನ ನಡೆಸಿ, ಅದು ಅದರ ತಾಪಮಾನ ಹಾಗೂ ಆವರ್ತನೆಯ (Frequency) ಮೇಲೆ ಅವಲಂಬಿತವಾಗಿರುವುದೆಂದು ತಿಳಿಸಿದ್ದರು. ವೀನ್, ಅಲ್ಪ ತಾಪಮಾನದಲ್ಲಿನ ರ್ಯಾಲೆ ಹಾಗೂ ಜೀನ್ಸ್ ಅಧಿಕ ತಾಪಮಾನದಲ್ಲಿರುವ ಕಪ್ಪು ಕಾಯದ ಉತ್ಸರ್ಜನೆಯನ್ನು ವಿವರಿಸಿದ್ದರು. ಪ್ಲಾಂಕ್ ಇವರ ಇತಿಮಿತಿಗಳನ್ನು ಅರಿತು ಎಲ್ಲಾ ತಾಪಮಾನಗಳಿಗೆ ಸಮರ್ಪಕವಾದ ಹೊಸ ವಿವರಣೆ ನೀಡಿದನು. ಇದಕ್ಕಾಗಿ, ಚೈತನ್ಯ ನಿರ್ದಿಷ್ಟ ಪೊಟ್ಟಣಗಳಲ್ಲಿ (ಕ್ವಾಂಟಾ=ಶಕಲಗಳಲ್ಲಿ) ಬಿಡುಗಡೆ ಅಥವಾ ಹೀರಿಕೆಯಾಗುವುದೆಂದು ಪರಿಗಣಿಸಿದನು. ಇದು ಅಭಿಜಾತ ಭೌತಶಾಸ್ತ್ರದ ಎಲ್ಲೆಯನ್ನು ಮೀರಿದುದಾಗಿತ್ತು. ಇದು ಭೌತಶಾಸ್ತ್ರವನ್ನು ಆಧುನಿಕತೆಯತ್ತ ಒಯ್ದಿತು. ಅಲ್ಪ ಕಾಲದಲ್ಲೇ ಇತರ ವಿಜ್ಞಾನಿಗಳು ಹಲವಾರು ವಿದ್ಯಾಮನಗಳನ್ನು ಶಕಲ ಬಲದ (ಕ್ವಾಂಟಂ ಮೆಕಾನಿಕ್ಸ್) ದೃಷ್ಟಿಯಲ್ಲಿ ಹೆಚ್ಚು ಸ್ಪುಟವಾಗಿ ಅರಿಯಬಹುದೆಂದು ಕಂಡುಕೊಂಡರು. ಇದು ಕ್ವಾಂಟಂ ಬಲ ವಿಜ್ಞಾನ ಶಾಖೆಗೆ ನಾಂದಿಯಾಯಿತು. 1900ರಲ್ಲಿ ಪ್ಲಾಂಕ್ನ ಕ್ವಾಂಟಂ ಬಲವಿಜ್ಞಾನದ ಮೊದಲ ಲೇಖನ ಪ್ರಕಟಣೆಗೊಂಡರೆ, 1905ರಲ್ಲಿ ಇದಕ್ಕೆ ಬೆಂಬಲ ಒದಗಿಸುವಂತಹ ಲೇಖನವೊಂದನ್ನು ಆಲ್ಬರ್ಟ ಐನ್ಸ್ಟೀನ್ ಪ್ರಕಟಿಸಿದನು. ಪ್ಲಾಂಕ್ ತಾನು ನೀಡಿದ ಹೊಸ ದೃಷ್ಟಿ ಎಂತಹ ಕ್ರಾಂತಿಕಾರಕ ಬದಲಾವಣೆಗಳನ್ನು ತರಬಹುದೆಂದು ಶೀಘ್ರದಲ್ಲೇ ತಿಳಿದನು. ಪ್ಲಾಂಕ್ನಿಂದ ಅಭಿಜಾತ ಭೌತಶಾಸ್ತ್ರ, ಯುಗಾಂತವನ್ನು ಕಂಡಿತು. ಐನ್ಸ್ಟೀನ್ ಮಂಡಿಸಿದ ದ್ಯುತಿವೈದ್ಯುತ್ ಪರಿಣಾಮ (Photoelectric Effect), ಬೊಹ್ರ್ 1913ರಲ್ಲಿ ನೀಡಿದ ಪರಮಾಣುವಿನ ರಾಚನಿಕ ಸ್ವರೂಪಗಳು, ಪ್ಲಾಂಕ್ನ ಕ್ವಾಂಟಂ ಬಲವಿಜ್ಞಾನವನ್ನು ಆಚಾರ್ಯ ಸ್ಥಾನದಲ್ಲಿರಿಸಿದವು. 1920ರಲ್ಲಿ ಪ್ಲಾಂಕ್ ಹಾಗೂ ಇತರರು ಬಹುತೇಕ ಎಲ್ಲಾ ಬಗೆಯ ವೀಕ್ಷಿತ ವಿದ್ಯಾಮಾನಗಳಿಗೂ ಸಮರ್ಪಕ ವಿವರಣೆ ನೀಡಬಲ್ಲ ಕ್ವಾಂಟಂ ಬಲವಿಜ್ಞಾನದ ಶಾಖೆಯನ್ನು ಅಭಿವೃದ್ಧಿಗೊಳಿಸುವಲ್ಲಿ ಯಶಸ್ಸನ್ನು ಕಂಡರು. 1919ರಲ್ಲಿ ಪ್ಲಾಂಕ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಪ್ಲಾಂಕನ ವೈಯಕ್ತಿಕ ಜೀವನ ದು:ಖ ಹಾಗೂ ದುರಂತಗಳ ಸರಮಾಲೆಯಾಗಿದ್ದಿತು. ಆತನ ಅವಳಿ ಹೆಣ್ಣು ಮಕ್ಕಳು ಬಾಲ್ಯದಲ್ಲೇ ಅಸು ನೀಗಿದರು. ಮೊದಲನೆ ಜಾಗತಿಕ ಯುದ್ದದಲ್ಲಿ ಎರಡನೇ ಮಗ ಹತನಾದರೆ, ಜುಲೈ 1944ರಲಿ ಹಿಟ್ಲರ್ ಹತ್ಯೆ ರೂಪಿಸಿದ ಸಂಚಿನ ಅಪರಾಧಕ್ಕಾಗಿ ಅವನ ಮೊದಲ ಮಗ ಇರ್ವಿನ್ ಮರಣ ದಂಡನೆಗೊಳಗಾದನು. ಪ್ಲಾಂಕ್ ನಾಝಿ ತತ್ತ್ವಗಳ ಪರಮ ವಿರೋಧಿಯಾಗಿದ್ದನು. ಆದರೆ ಪ್ಲಾಂಕನ ಸ್ನೇಹಿತನಾಗಿದ್ದ ಐನ್ಸ್ಟೀನ್ ಅತ ನಾಝಿಗಳಿಗೆ ಪ್ರಬಲ ವಿರೋಧ ತೋರಿಸಲಿಲ್ಲವೆಂದು ಅತನ ಬಗೆಗೆ ಅಸಹನೆ ತಳೆದಿದ್ದನು. 1952ರಲ್ಲಿ ಡಾಯಿಷ್ ಮಾರ್ಕ್ ನಾಣ್ಯದ ಮೇಲೆ ಪ್ಲಾಂಕ್ನ ಚಿತ್ರ ಅಚ್ಚಾಯಿತು. ಈ ಗೌರವಕ್ಕೆ ಪಾತ್ರರಾದ ಬೆರಳೆಣಿಕೆಯ ಜರ್ಮನ್ರಲ್ಲಿ ಪ್ಲಾಂಕ್ ಒಬ್ಬನಾದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಸ್ಟಾಹ್ಕ್, ಜೊಹಾನ್ನಸ್ (1874-1957) 1919
Stark , Johannes
ಜರ್ಮನಿ-ಭೌತಶಾಸ್ತ್ರ-
ಸ್ಟಾಹ್ಕ್ನಂತಹ ವೈವಿಧ್ಯಮಯ ಜೀವನ ಸಾಗಿಸಿದ ವಿಜ್ಞಾನಿಗಳು ಅತಿ ವಿರಳ. ಸ್ಟಾಹ್ಕ್, ಭೌತಶಾಸ್ತ್ರದಲ್ಲಿನ ತನ್ನ ನಿಲುವುಗಳನ್ನು ಹಲವಾರು ಬಾರಿ ಬದಲಿಸಿದನು. ಸಹೋದ್ಯೋಗಿಗಳೊಂದಿಗೆ ಸೆಣಸಿದನು. ಜನಾಂಗೀಯ ಬೇಧ ನೀತಿಯನ್ನು ಬೆಂಬಲಿಸಿ ರಾಜಕೀಯಕ್ಕಿಳಿದನು. ಕಾರಾಗೃಹವಾಸ ಅನುಭವಿಸಿದನು. ವಿದ್ಯಾರ್ಥಿ ಜೀವನವನ್ನು ಸಾಧಾರಣವಾಗಿಯೇ ಕಳೆದ ಸ್ಟಾಹ್ಕ್ 1900ರಲ್ಲಿ ಗಟ್ಟಿಂಜೆನ್ನಲ್ಲಿ ಉಪನ್ಯಾಸಕನಾದನು. ನಂತರ ನಾಲ್ಕು ಜರ್ಮನ್ ವಿಶ್ವವಿದ್ಯಾಲಯಗಳಲ್ಲಿ ಪೀಠವನ್ನಲಂಕರಿಸಿದನು. 1902ರಲ್ಲಿ ಸ್ಟಾಹ್ಕ್, ಉತ್ಸರ್ಜನ ಕೊಳವೆಯಲ್ಲಿ ಶೀಘ್ರ ಚಲನೆಯಲ್ಲಿರುವ ಅಯಾನುಗಳು ತರಂಗಾಂತರ ಬದಲಾವಣೆಯ ಡಾಪ್ಲರ್ ಪರಿಣಾಮ ಹೊಂದಿರಬೇಕೆಂದು ಹೇಳಿದನು. 1905ರಲ್ಲಿ ಬಹು ಸುಕ್ಲಿಷ್ಟ ಪ್ರಯೋಗಗಳ ಮೂಲಕ ಈ ಪರಿಣಾಮ ಜಲಜನಕದ ಪರಮಾಣುಗಳಿಗೆ ನಿಜವೆಂದು ತೋರಿಸಿದನು. ಭೂಮಿಯಲ್ಲಿನ ಬೆಳಕಿನ ಆಕರಕ್ಕೆ ಡಾಪ್ಲರ್ ಪರಿಣಾಮ ಪತ್ತೆಯಾದ ಮೊದಲ ವಿದ್ಯಾಮಾನವಿದು. ಕಾಂತ ಕ್ಷೇತ್ರದಲ್ಲಿ ರೋಹಿತದ ಸಾಲುಗಳು ಸೀಳುವ ಝೀಮನ್ ಪರಿಣಾಮಕ್ಕೆ ಸಂವಾದಿಯಾದ ವಿದ್ಯಾಮಾನವನ್ನು ಸ್ಟಾಹ್ಕ್ 1913ರಲ್ಲಿ ಪ್ರಯೋಗಗಳಿಂದ ಪಡೆದನು. ಇದು ಈಗ ಸ್ಟಾಹ್ಕ್ ಪರಿಣಾಮವೆಂದು ಹೆಸರಾಗಿದೆ. ಸ್ಟಾಹ್ಕ್ 1919ರ ನೊಬೆಲ್ ಪ್ರಶಸ್ತಿ ಪಡೆದನು. ಈ ಕಾಲದಲ್ಲೇ ತನ್ನ ಸಿದ್ಧಾಂತಗಳ ಬಗೆಗೆ ತಾನೇ ಬೇರೊಂದು ಬಗೆಯ ನಿಲುವು ತಳೆಯುತ್ತ, ಜೊತೆಯ ವಿಜ್ಞಾನಿಗಳೊಂದಿಗೆ ವಾದ ವಿವಾದಗಳಿಗಿಳಿಯುತ್ತಿದ್ದನು. ಸ್ಟಾಹ್ಕ್ ಪ್ರಯೋಗ ಹಾಗೂ ಅದರ ಫಲಿತಾಂಶಗಳು ಸಾಪೇಕ್ಷತಾ ಸಿದ್ಧಾಂತ , ಬೊಹ್ರ್ ಪರಮಾಣು ಸಿದ್ಧಾಂತಗಳಿಗೆ ಸಾಕ್ಷ್ಯ ಒದಗಿಸಿದರೆ ಸ್ಟಾಹ್ಕ್ ಇವರ ಮೇಲೆಯೇ ವಾಗ್ದಾಳಿ ನಡೆಸಿದನು. 1920ರಲ್ಲಿ ವುರ್ಜ್ಬರ್ಗ್ ಪೀಠ ತ್ಯಜಿಸಿ, ನೊಬೆಲ್ ಪ್ರಶಸ್ತಿಯ ಹಣದಿಂದ, ಪಿಂಗಾಣಿ ತಯಾರಿಕೆಯ ಕಾರ್ಖಾನೆ ಪ್ರಾರಂಭಿಸಿದನು. ಇದರಲ್ಲಿ ವಿಫಲನಾಗಿ ಮತ್ತೊಮ್ಮೆ ಸಂಶೋಧನೆಗೆ ಬರಲು ಯತ್ನಿಸಿದನು. ಬಹುತೇಕ ಎಲ್ಲ ಸಂಗಡಿಗ ವಿಜ್ಞಾನಿಗಳನ್ನು ಸ್ಟಾಹ್ಕ್ ಎದುರು ಹಾಕಿಕೊಂಡಿದ್ದನು. 1934ರ ನಂತರ ಆಧುನಿಕ ಭೌತಶಾಸ್ತ್ರದ ಸಿದ್ದಾಂತಗಳೆಲ್ಲವನ್ನು ಹೀಗೆಳೆದನು. ಯಹೂದಿಗಳದು ವಿಜ್ಞಾನವೇ ಅಲ್ಲವೆಂದು ವಾದಿಸಿದನು. ಲೆನಾರ್ಡ್ನೊಂದಿಗೆ ನಾಝಿ ಆಡಳಿತವನ್ನು ಪ್ರಶಂಸಿಸಿದನು. ಜರ್ಮನಿಯ ವಿಜ್ಞಾನ ರಂಗವನ್ನೇ ತನ್ನ ಹತೋಟಿಯಲ್ಲಿರಿಸಿಕೊಳ್ಳಲು ಯತ್ನಿಸಿದನು. ಕಾಲಾನುಕ್ರಮದಲ್ಲೇ ನಾಝಿ ಪಕ್ಷದ ಬೆಂಬಲ ಕಳೆದುಕೊಂಡನು. ಇದಾದ ನಂತರ ನಿವೃತ್ತಿ ಹೊಂದಿ 1939ರಲ್ಲಿ ಬವೇರಿಯಾದಲ್ಲಿ ನೆಲೆಸಿದನು. 1947ರಲ್ಲಿ ಜರ್ಮನಿಯ ಮಾನವನ ಹಕ್ಕುಗಳ ನ್ಯಾಯಾಲಯ ಸ್ಟಾಹ್ಕ್’ಗೆ ನಾಲ್ಕು ವರ್ಷಗಳ ಕಠಿಣ ಸಜೆ ವಿಧಿಸಿತು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಚಾರ್ಲ್ಸ್, ಎಡ್ಯೂಯಾರ್ಡ್ ಗಿಲಾಮೆ (1861-1938) 1920
Charles , Eduard Guillaume
ಸ್ವಿಟ್ಸಲ್ರ್ಯಾಂಡ್ - ಭೌತಶಾಸ್ತ್ರ- ನಿಖರ ಮಾಪನೆಯ ತಂತ್ರಗಳನ್ನು ಪರಿಚಯಿಸಿದಾತ.
ಚಾರ್ಲ್ಸ್ ಸ್ವಿಸ್'ಜೂರಾ ಪ್ರಾಂತದ ಫ್ಲೂರಿನ್;ನಲ್ಲಿ 15 ಫೆಬ್ರವರಿ 1861 ರಂದು ಜನಿಸಿದನು. ಕ್ರಾಂತಿಯ ದಿನಗಳಲ್ಲಿ ಚಾರ್ಲ್ಸ್ತಾತ ಫ್ರಾನ್ಸ್ ತೊರೆದು, ಲಂಡನ್ಗೆ ಬಂದು ಅಲ್ಲಿ ಕೈಗಡಿಯಾರ ವ್ಯಾಪಾರ ಸ್ಥಾಪಿಸಿದ್ದನು. ಈತನ ನಾಲ್ಕು ಮಕ್ಕಳಲ್ಲಿ ಮೂವರು ಇದೇ ವೃತ್ತಿಯಲ್ಲಿ ಮುಂದುವರೆದರೆ, ಚಾರ್ಲ್ಸ್ತಂದೆ ಫ್ಲೂರಿನ್ಗೆ ಮರಳಿದ್ದನು. ಚಾರ್ಲ್ಸ್ ಪ್ರಾಥಮಿಕ ಶಿಕ್ಷಣವನ್ನು ನ್ಯೂಷೆಟೆಲ್ನಲ್ಲಿ ಮುಗಿಸಿ, ಮುಂದೆ ಝೂರಿಕ್ ಪಾಲಿಟೆಕ್ನಿಕ್ನಿಂದ ಡಾಕ್ಟರೇಟ್ ಗಳಿಸಿದನು. ಕೆಲಕಾಲ ಫಿರಂಗಿದಳದಲ್ಲಿ ಕೆಲಸ ಮಾಡಿದ ಚಾರ್ಲ್ಸ್ ನಂತರ ಅಂತರಾಷ್ಟ್ರೀಯ ತೂಕ ಹಾಗೂ ಅಳತೆಯ ಸಂಸ್ಥೆಗೆ ಸಹಾಯಕನಾಗಿ ಸೇರಿದನು. 1902ರಲ್ಲಿ ಇದರ ಸಹಾಯಕ ನಿರ್ದೇಶಕನಾದನು. 1915ರಲ್ಲಿ ನಿವೃತ್ತನಾಗುವವರೆಗೆ ಇದೇ ಹುದ್ದೆಯಲ್ಲಿದ್ದನು. 1936ರಲ್ಲಿ ಮರಣ ಹೊಂದುವವರೆಗೆ ಗೌರವ ನಿರ್ದೇಶಕನಾಗಿ ಮುಂದುವರೆದನು. ಅಲ್ಪ ಕಾಲದಲ್ಲಿ ಫಿರಂಗಿದಳದಲ್ಲಿದ್ದಾಗ, ಚಾರ್ಲ್ಸ್ ಬಲವಿಜ್ಞಾನ ಅಧ್ಯಯನ ಮಾಡಿದನು. ತಾಪಮಾನ ಅಳೆಯುವ ಉಪಕರಣಗಳನ್ನು ಪರಿಷ್ಕರಿಸಿದನು. ಇದನ್ನು ತೂಕ ಹಾಗೂ ಅಳತೆಯ ಇಲಾಖೆಯಲ್ಲಿದ್ದಾಗ ಬಳಕೆಗೆ ತಂದನು. ಮೀಟರ್, ಕೆ.ಜಿ.ಗಳನ್ನು ಸರಿಯಾಗಿ ಅವುಗಳ ಪರಿಮಾಣವನ್ನು ನಿರ್ಧರಿಸಿದನು. ತಾಪಮಾನಗಳು ವಿಸ್ತೃತ ಬದಲಾವಣೆಗಳಾದಗಲೂ, ಅತ್ಯಲ್ಪ ಹಿಗ್ಗುವ, ಕುಗ್ಗುವ ಮಿಶ್ರಲೋಹವನ್ನು ಅಳತೆಯ ಮಾಪಕವಾಗಿ ರೂಪಿಸಲು ಚಾರ್ಲ್ಸ್ ಯತ್ನಿಸಿದನು. ಇದಕ್ಕಾಗಿ ಹಲವಾರು ಕಬ್ಬಿಣ ನಿಕ್ಕಲ್ಗಳ ಮಿಶ್ರ ಲೋಹಗಳನ್ನು ಬಳಸಲು ಯತ್ನಿಸಿ ಇನ್ವರ್ ಮಿಶ್ರ ಲೋಹ ಪಡೆಯುವಲ್ಲಿ ಯಶಸ್ವಿಯಾದನು. ಇದು ತಾಪಮಾನಗಳ ವ್ಯತ್ಯಸ್ತದಲ್ಲಿ ಅತ್ಯಲ್ಪ ಬದಲಾಗುವ ಲೋಹವಾಗಿದೆ. ಈಗ ಅತ್ಯಂತ ಖಚಿತವಾಗಿ ಅಳೆಯಬೇಕಾದ ಉಪಕರಣಗಳಲ್ಲಿ ಇದು ಬಳಕೆಯಾಗುತ್ತದೆ. ಚಾರ್ಲ್ಸ್ ಅಳತೆ, ತೂಕ ಅವುಗಳ ನಿಖರ, ಮಾಪನ ಅವುಗಳಿಗೆ ಅನುಸರಿಸಬೇಕಾದ ವಿಧಾನ, ಬಳಸಬೇಕಾದ ಸಾಮಾಗ್ರಿಗಳನ್ನು ಕುರಿತಾಗಿ ಹಲವು ಹತ್ತಾರು ಪಾಂಡಿತ್ಯ ಪೂರ್ಣ ಲೇಖನಗಳನ್ನು ಪ್ರಕಟಿಸಿದನು. ಚಾರ್ಲ್ಸ್ ಜಿನೀವಾ, ಪ್ಯಾರಿಸ್ ನ್ಯಾಷನಲ್ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಗಳಿಂದ ಗೌರವಿತನಾದನು. ಚಾಲ್ರ್ಸ್ನ ಈ ತನ್ನ ಸಾಧನೆಗಳಿಗಾಗಿ 1920ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು