ಹೈಸೆನ್ಬರ್ಗ್, ವೆರ್ನರ್ ಕಾರ್ಲ್ (1901-1976) 1932
Heisenberg , Werner Karl
ಜರ್ಮನಿ-ಭೌತಶಾಸ್ತ್ರಜ್ಞ-ಕ್ವಾಂಟಂ ಬಲವಿಜ್ಞಾನ ಅನಾವರಣಗೊಳಿಸಿದಾತ. ಅನಿಶ್ಚಿತ ಸಿದ್ದಾಂತ ತತ್ತ್ವ ನೀಡಿದಾತ.
ಹೈಸೆನ್ಬರ್ಗ್ ತಂದೆ ಮ್ಯೂನಿಕ್ನಲ್ಲಿ ಗ್ರೀಕ್ ಭಾಷೆಯ ಪ್ರಾಧ್ಯಾಪಕನಾಗಿದ್ದನು. ಹೈಸೆನ್ಬರ್ಗ್ ಮ್ಯೂನಿಕ್ ಮತ್ತು ಗಟ್ಟಿಂಜೆನ್ನಲ್ಲಿ ಶಿಕ್ಷಣ ಪಡೆದನು. ಗಟ್ಟಿಂಜೆನ್ನಲ್ಲಿ ಬಾರ್ನ್ ಮತ್ತು ಕೊಪೆನ್ಹೇಗ್ನಲ್ಲಿ ನೀಲ್ಸ್ ಬೊಹ್ರ್ ಜೊತೆ ಹೈಸೆನ್ಬರ್ಗ್ ಕೆಲಸ ಮಾಡಿದನು. 1927ರಲ್ಲಿ ಲೀಪ್ಝಿಗ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದನು. ಹೈಸೆನ್ಬರ್ಗ್ ಭೌತಶಾಸ್ತ್ರಕ್ಕೆ ಮಹತ್ತರ ತಿರುವು ನೀಡಿ, ಕ್ರಾಂತಿ ತಂದವನೆಂದು ಪರಿಗಣಿತನಾಗಿದ್ದಾನೆ. 24 ವಯಸ್ಸಿನ ಯುವಕನಾಗಿರುವಾಗಲೇ ಹೈಸೆನ್ಬರ್ಗ್ ಕ್ವಾಂಟಂ ಬಲವಿಜ್ಞಾನ ಸಿದ್ಧಾಂತ ರೂಪಿಸಿದನು. ಈ ಸಿದ್ಧಾಂತ ಸಾಪೇಕ್ಷ ಸಿದ್ದಾಂತದಿಂದ ಬೇರೆಯಾಗಿದ್ದಿತು. ಇದಕ್ಕಾಗಿ ಹೈಸೆನ್ಬರ್ಗ್ ಮ್ಯಾಟ್ರಿಕ್ಸ್ ಬಲವಿಜ್ಞಾನವನ್ನು ಬಳಕೆಗೆ ತಂದನು. ಇದಕ್ಕೆ ಸರಿ ಸಮಾನವಾದ ತರಂಗ ಬಲವಿಜ್ಞಾನ ಸಿದ್ದಾಂತವನ್ನು ಷ್ರೋಡಿಂಜರ್ 1925ರಲ್ಲಿ ಬಳಕೆಗೆ ತಂದನು. ಹೈಸೆನ್ಬರ್ಗ್ ತನ್ನ ಈ ಸಾಧನೆಗಾಗಿ 1932ರ ನೊಬೆಲ್ ಪ್ರಶಸ್ತಿ ಪಡೆದನು. ಹೈಸೆನ್ಬರ್ಗ್ ಕ್ವಾಂಟಂ ಸಿದ್ಧಾಂತ ಮಂಡಿಸುವ ಮೊದಲು ಎಲೆಕ್ಟ್ರಾನ್ ಅಲೆ ಸ್ವರೂಪದ್ದೇ ಅಥವಾ ಕಣ ಸ್ವರೂಪದ್ದೇ ಎನ್ನುವ ವಿವಾದಗಳು ಹಾಗೂ ಅದನ್ನು ಯಾವಾಗ ಹೇಗೆ ಪರಿಗಣಿಸಬೇಕೆಂಬ ಸಮಸ್ಯೆಗಳು ತಲೆದೋರಿದ್ದವು. ಹೈಸೆನ್ಬರ್ಗ್ ಅಲೆ, ಕಣ ಎನ್ನುವಂತಹ ತೋರಿಕೆಗಳನ್ನು ತೊರೆದು ಅಣುವಿನ, ಎಲೆಕ್ಟ್ರಾನ್ನ ಮಟ್ಟದಲ್ಲಿ ಅಳೆಯಬಹುದಾದ ವೀಕ್ಷಿಸಬಹುದಾದ ಅಂಶಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಿದನು. ಎಲೆಕ್ಟ್ರಾನ್ ಬಗೆಗೆ ತಿಳಿಯಬೇಕೆಂದರೆ ಅದರ ಮೇಲೆ ನಾನಾ ಪ್ರಯೋಗಗಳನ್ನು ನಡೆಸಬೇಕು. ಹೈಸೆನ್ಬರ್ಗ್ ಇವೆರಡೂ ವ್ಯವಸ್ಥೆಗಳನ್ನು ಬೇರ್ಪಡಿಸಿದನು. ತಿಳಿಯಬೇಕಾದುದು ಮತ್ತು ತಿಳಿಯಲು ಬಳಸುವ ವ್ಯವಸ್ಥೆಗಳನ್ನು ಪ್ರತ್ಯೇಕಿಸುವ ಅನಿವಾರ್ಯತೆಯನ್ನು ತೋರಿಸಿದನು. ಗಣಿತೀಯವಾಗಿ ಇವೆರಡನ್ನು ಸ್ವತಂತ್ರವಾಗಿ ಕಂಡನು. ಹೈಸೆನ್ಬರ್ಗ್ ಈ ಮಾರ್ಗದಿಂದ ರೋಹಿತದಲ್ಲಿ ವೀಕ್ಷಿಸಲ್ಪಟ್ಟ ಪಟ್ಟಿಗಳ ತರಂಗಾಂತರಗಳನ್ನು ಖಚಿತವಾಗಿ ನಿರ್ಧರಿಸುವುದು ಸಾಧ್ಯವಾಯಿತು. ಆಲ್ಬರ್ಟ್ ಐನ್ಸ್ಟೀನ್ನ ಸಾಪೇಕ್ಷ ಸಿದ್ಧಾಂತದಂತೆ ವಿಶ್ವದ ಆಗು ಹೋಗುಗಳು ಖಚಿತವಾಗಿದ್ದವು, ಇದನ್ನು 18ನೇ ಶತಮಾನದಲ್ಲಿದ್ದ ಫ್ರೆಂಚ್ ಗಣಿತಜ್ಞ, ಭೌತಶಾಸ್ತ್ರಜ್ಞ, ಲಾಪ್ಲಾಸ್ ಪ್ರತಿಪಾದಿಸಿದ್ದನು. ಇವರ ನಿಲುವಿನಲ್ಲಿ ವ್ಯವಸ್ಥೆಯೊಂದರ ಆರಂಭಿಕ ಸ್ಥಿತಿಯ ಪ್ರಾಚಲಗಳು (Parameters) ಸಂಪೂರ್ಣವಾಗಿ ದಕ್ಕಿದ್ದೇ ಆದರೆ, ಅವುಗಳ ಆಧಾರಧ ಮೇಲೆ ಅದು ಹೇಗೆ ವರ್ತಿಸಬಲ್ಲುವೆಂದು ನಿರ್ಧರಿಸುವುದು ಸಾಧ್ಯ . ಹೈಸೆನ್ಬರ್ಗ್ 1927ರಲ್ಲಿ ಕ್ವಾಂಟಂ ಬಲವಿಜ್ಞಾನದಲ್ಲಿ ಅನಿಶ್ಚತೆತೆಯ ತತ್ತ್ವ ಮಂಡಿಸಿ, ಈ ಸಾಂಪ್ರಾದಾಯಿಕ ದೃಷ್ಟಿಗೆ ಆಘಾತ ನೀಡಿದನು. ಹೈಸೆನ್ಬರ್ಗ್ನ ಈ ತತ್ತ್ವದಂತೆ ಯಾವುದೇ ಕಣದ ಸ್ಥಾನ ಹಾಗೂ ಆವಿಷ್ಟವನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಸ್ಥಾನದ ನಿಖರತೆ ಹೆಚ್ಚಿದಂತೆ, ಅದರ ಆವಿಷ್ಟತೆಯ ನಿರ್ಧಾರವೂ, ಆವಿಷ್ಟತೆಯ ನಿಖರತೆ ಹೆಚ್ಚಿದಂತೆ ಸ್ಥಾನದ ನಿರ್ಥಾರವೂ ಖಚಿತತೆಯಿಂದ ದೂರ ಸರಿಯುತ್ತವೆ. ಆದುದರಿಂದ ಸ್ಥಾನ ಮತ್ತು ಆವಿಷ್ಟಗಳೆರಡನ್ನು ಸಂಭವನೀಯ ಅಳತೆಗಳಲ್ಲಿ ಹೇಳಲು ಮಾತ್ರ ಸಾಧ್ಯ. ಎಲೆಕ್ಟ್ರಾನ್ ಸ್ಥಾನವನ್ನು ನಿರ್ಧರಿಸಲು ನಾವು ಯತ್ನಿಸಿದಂತೆ ಭಾವಿಸೋಣ. ಅದಕ್ಕಾಗಿ ನಾವು ಎಲೆಕ್ಟ್ರಾನ್ನನ್ನು ನೋಡುವಂತಹ ಕ್ರಿಯೆಯೆಸಗಬೇಕು. ಅಂತಹ ನೋಡುವ ಕ್ರಿಯೆಯಿಂದಾಗಿ ಎಲೆಕ್ಟ್ರಾನ್ ಆವಿಷ್ಟ ವ್ಯತ್ಯಾಸಗೊಳ್ಳುತ್ತದೆ. ಅಂತಹ ಸ್ಥಿತಿಯಲ್ಲಿ ನಾವು ಪಡೆದ ಆವಿಷ್ಟ ಎಲೆಕ್ಟ್ರಾನ್ ಸಹಜ ಸ್ಥಿತಿಯದಾಗಿರುವುದಿಲ್ಲವೆಂದು ಹೈಸೆನ್ಬರ್ಗ್ ಹೇಳಿದನು. 1932ರಲ್ಲಿ ಚಾಡ್ವಿಕ್ ನ್ಯೂಟ್ರಾನ್ ಅಸ್ತಿತ್ವವನ್ನು ಸಾರಿದನು. ಈ ಹಿನ್ನೆಲೆಯಲ್ಲಿ ಹೈಸೆನ್ಬರ್ಗ್ ಪ್ರೋಟಾನ್ ಎಲೆಕ್ಟ್ರಾನ್ ಮಾದರಿಯ ಅಣುವಿಗಿಂತಲೂ, ಪ್ರೋಟಾನ್, ನ್ಯೂಟ್ರಾನ್ ಮಾದರಿಯ ಅಣು, ನೈಜತೆಗೆ ಸನಿಹದಲ್ಲಿರುತ್ತದೆಯೆಂದು ಪ್ರತಿಪಾದಿಸಿದನು. ಇನ್ನು ಮುಂದುವರೆದು ಹೈಸೆನ್ಬರ್ಗ್ ಪ್ರೋಟಾನ್, ನ್ಯೂಟ್ರಾನ್ಗಳು ಬೈಜಿಕ ಮಟ್ಟದಲ್ಲಿನ ಪರಸ್ಪರ ಬಲಗಳಿಂದ ಬಂಧಿತವಾಗಿರಬೇಕೆಂದು ಸೂಚಿಸಿದನು. ಜಪಾನಿನ ಭೌತಶಾಸ್ತ್ರಜ್ಞ ಯುಕಾವ ಸಿದ್ಧಾಂತ ಹೈಸೆನ್ಬರ್ಗ್ನ ಈ ಸೂಚನೆ ಸರಿಯೆಂದು ಸಾಧಿಸಿತು. 1966ರಲ್ಲಿ ಐಕ್ಯಗೊಳಿಸಿದ ಕಣ ಸಿದ್ದಾಂತವನ್ನು ಹೈಸೆನ್ಬರ್ಗ್ ನೀಡಿದನಾದರೂ ಅದು ಹೆಚ್ಚಿನ ಮಟ್ಟದಲ್ಲಿ ವಿಜ್ಞಾನಿಗಳ ಗಮನ ಸೆಳೆಯಲಿಲ್ಲ. ಎರಡನೇ ಜಾಗತಿಕ ಯುದ್ದದಲ್ಲಿ ಜರ್ಮನಿಯ ವಿಜ್ಞಾನಿಗಳು ನಾಝಿ ಪರ ಹಾಗೂ ವಿರುದ್ಧದ ಬಣಗಳಾಗಿ ಒಡೆದು ಹೋದರು. ಹೈಸೆನ್ಬರ್ಗ್ ನಾಝಿ ಪರದವನಾಗಿದ್ದರೂ, ಜರ್ಮನಿಯ ವಿಜ್ಞಾನಿಗಳು ಎಂಬ ಹೆಮ್ಮೆ ತಳೆದಿದ್ದನು. ಯಹೂದಿಯಾಗಿದ್ದ ಐನ್ಸ್ಟೀನ್ನ ಸಿದ್ದಾಂತಗಳನ್ನು ತಿರಸ್ಕರಿಸುವಂತೆ ನಾಝಿ ಪರ ವಾದಿಗಳು ಹೈಸೆನ್ಬರ್ಗ್ ಮೇಲೆ ಒತ್ತಡ ತಂದರು. ಹೈಸೆನ್ಬರ್ಗ್ ಇದನ್ನು ಸಾರಸಗಟಾಗಿ ತಿರಸ್ಕರಿಸುವುದರ ಮೂಲಕ ನಾಝಿ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾದನು. ಇದರ ಫಲವಾಗಿ ಝೋಮರ್ಫೆಲ್ಟ್ನ ನಂತರ ಹೈಸೆನ್ಬರ್ಗ್ಗೆ ದಕ್ಕಬೇಕಾಗಿದ್ದ ಮ್ಯೂನಿಕ್ನ ಪ್ರಾಧ್ಯಾಪಕ ಸ್ಥಾನವನ್ನು ನಿರಾಕರಿಸಲಾಯಿತು. ಜಾಗತಿಕ ಯುದ್ದಕ್ಕೆ ಬೇಕಾದ ಶಸ್ತ್ರಾಸ್ತ್ರ ತಯಾರಿಕೆಯ ಯೋಜನೆಯಡಿಯಲ್ಲಿ ಅಣುಶಕ್ತಿ ಅಭಿವೃದ್ದಿಗೆ ಹೈಸೆನ್ಬರ್ಗ್ನನ್ನು ನೇಮಿಸಿ 1941ರಲ್ಲಿ ಕೈಸರ್ ವಿಲ್ಹೆಲ್ಮ್ ಸಂಸ್ಥೆಯ ನಿರ್ದೇಶಕನನ್ನಾಗಿಸಲಾಯಿತು. ಯುದ್ದದ ನಂತರ ಹೈಸೆನ್ಬರ್ಗ್ ಗಟ್ಟಿಂಜೆನ್ನಲ್ಲಿ ಮ್ಯಾಕ್ಸ್ ಪ್ಲಾಂಕ್ ಸಂಸ್ಥೆಯ ಸ್ಥಾಪನೆಗೆ ನೆರವಾದನು. 1955ರಲಿ ಈ ಸಂಸ್ಥೆಯನ್ನು ಮ್ಯೂನಿಕ್ಗೆ ಸ್ಥಳಾಂತರಿಸಿದಾಗ ಅದರ ನಿರ್ದೇಶಕನಾದನು. 1941ರಲ್ಲಿ ಬೊಹ್ರ್ ಜೊತೆಗಿನ ಮಾತುಕತೆಯಲ್ಲಿ ಹೈಸೆನ್ಬರ್ಗ್ ಹಿಟ್ಲರ್ ಎಂದೂ ಅಣ್ವಸ್ತ್ರ ಪಡೆಯದಂತೆ ತನ್ನ ಸ್ಥಾನ ಖ್ಯಾತಿ ಅಧಿಕಾರದಿಂದ ತಡೆಹಿಡಿಯುತ್ತಿದೆನೆಂದು ತಿಳಿಸಿದನು. ಇದು ತೀವ್ರ ವಿವಾದಕ್ಕೆ ಗುರಿಯಾಯಿತು. ಹಿಟ್ಲರ್ ಅಣ್ವಸ್ತ್ರದ ಕಡೆ ಗಮನ ಹರಿಸದೆ, ವಿಮಾನ, ಕ್ಷಿಪಣಿಗಳತ್ತ ಆಸ್ಥೆ ತಾಳಿದ್ದರಿಂದ ಅಣ್ವಸ್ತ್ರ ದಕ್ಕಲಿಲ್ಲವೇ ಹೊರತು ಹೈಸೆನ್ಬರ್ಗ್ನ ಯಾವುದೇ ಯತ್ನದಿಂದಲ್ಲವೆಂದು ಈಗ ಹೇಳಲಾಗುತ್ತಿದೆ. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಡಿರಾಕ್ ಪೌಲ್ ಅಡ್ರಿಯನ್ ಮೌರಿಸ್ (1902-1984) 1933
Dirac , Paul Adrien Maurice
ಬ್ರಿಟನ್-ಭೌತಶಾಸ್ತ್ರ-ಕ್ವಾಂಟಂ ಬಲಶಾಸ್ತ್ರಕ್ಕೆ ಮಹತ್ತರ ಕೊಡುಗೆ ನೀಡಿದಾತ -ಪಾಸಿಟ್ರಾನ್ ಹಾಗೂ ಇತರ ಪ್ರತಿ ಕಣಗಳ ಅಸ್ತಿತ್ವವನ್ನು ಮುನ್ನುಡಿದಾತ.
ಸ್ವಿಸ್ ತಂದೆ, ಇಂಗ್ಲೀಷ್ ತಾಯಿಯ ಮಗನಾದ ಡಿರಾಕ್ ಬ್ರಿಸ್ಟಲ್ ಹಾಗೂ ಕೇಂಬ್ರಿಜ್ನಲ್ಲಿ ವೈದ್ಯುತ್ ಇಂಜನಿಯರಿಂಗ್ ಹಾಗೂ ಗಣಿತಶಾಸ್ತ್ರದ ವ್ಯಾಸಂಗ ಮಾಡಿದನು. ಬಾಲ್ಯದಿಂದಲೇ ಡಿರಾಕ್ಗೆ ಶುದ್ಧಗಣಿತದ ಕಡೆಗೆ ತುಡಿತವಿದ್ದಿತು. ಆದರೆ ಶುದ್ಧಗಣಿತದ ಅಧ್ಯಯನದಿಂದ ಜೀವನ ನಿರ್ವಹಣೆ ಅಸಾಧ್ಯವೆಂದು ಭಾವಿಸಿದ್ದ ಡಿರಾಕ್ ವೈದ್ಯುತ್ ಇಂಜಿನಿಯರಿಂಗ್ ಪದವಿ ಪಡೆದನು. ಇಂಜಿನಿಯರಿಂಗ್ ಸಮಸ್ಯೆಗಳ ಪರಿಹಾರಕ್ಕೆ ಬಳಸುವ ಗಣಿತದಲ್ಲಿನ ಸೌಂದರ್ಯಕ್ಕೆ ಡಿರಾಕ್ ಮನಸೋತಿದ್ದನು. ಇಂಜಿನಿಯರಿಂಗ್ ಪದವಿ ಪಡೆದ ನಂತರವೂ ತಕ್ಷಣ ಉದ್ಯೋಗ ದೊರೆಯಲಿಲ್ಲ. ಆದರೆ ಡಿರಾಕ್ನ ಗಣಿತಾಸಕ್ತಿ ತಿಳಿದಿದ್ದ ಬ್ರಿಸ್ಟಲ್ ವಿಶ್ವವಿದ್ಯಾಲಯದ ಆಡಳಿತವರ್ಗ ಈತನನ್ನು ತನ್ನಲ್ಲಿಗೆ ಆಹ್ವಾನಿಸಿ, ಶುಲ್ಕ ರಹಿತ ವ್ಯಾಸಂಗಕ್ಕೆ ಅನುವು ಮಾಡಿತು. ಇದು ಡಿರಾಕ್ ಇಂಜಿನಿಯರಿಂಗ್ನ್ನು ಸಂಪೂರ್ಣವಾಗಿ ತೊರೆದು ಗಣಿತ ಹಾಗೂ ಭೌತಶಾಸ್ತ್ರದತ್ತ ಮುಖ ಮಾಡುವಂತೆ ಮಾಡಿತು. ಅಸಂಸಂಗಳಲ್ಲಿ ಕೆಲಕಾಲ ಬೋಧಕನಾಗಿ, ಜಪಾನ್ ಹಾಗೂ ಸೈಬೀರಿಯಾಗಳಿಗೆ ಭೇಟಿ ಇತ್ತನು. 1932ರಲ್ಲಿ ಕೇಂಬ್ರಿಜ್ನ ಲುಕೇಷಿಯನ್ ಪೀಠದ ಗಣಿತ ಪ್ರಾಧ್ಯಾಪಕನಾಗಿ ಡಿರಾಕ್ ನೇಮಕಗೊಂಡನು. 1969ರಲ್ಲಿ ನಿವೃತ್ತಿಯಾಗುವವರೆಗೆ ಡಿರಾಕ್ ಅದೇ ಸ್ಥಾನದಲ್ಲಿ ಅಲ್ಲೇ ಉಳಿದನು. ಇದಾದ ನಂತರ ಅಸಂಸಂಗಳ ಹಲವಾರು ವಿಶ್ವ ವಿದ್ಯಾಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸತೊಡಗಿದ ಡಿರಾಕ್ 1971ರಲ್ಲಿ ಫ್ಲೋರಿಡಾ ರಾಜ್ಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾದನು. ಭೌತಶಾಸ್ತ್ರದ ಅಪೂರ್ವ ಸೈದ್ಧಾಂತಿಕ ಸೈನ್ಯದಲ್ಲಿ ಒಬ್ಬನಾಗಿದ್ದ ಡಿರಾಕ್, ಅಂಬೆಗಾಲಿಡುತ್ತಿದ್ದ ‘ಕ್ವಾಂಟಂ’ ಮೆಕಾನಿಕ್ಸ್ ದೌಡಾಯಿಸುವಂತೆ ಮಾಡಿದನು. ಬಾರ್ನ್ ಹಾಗೂ ಜೋರ್ಡಾನ್ರ ನಂತರ 1926ರಲ್ಲಿ ಕ್ವಾಂಟಂ ಬಲವಿಜ್ಞಾನದ ಸಾರ್ವತ್ರಿಕ ರಾಚನಿಕ ಸ್ವರೂಪವನ್ನು ನೀಡಿದ ಕೀರ್ತಿ ಡಿರಾಕ್ಗೆ ಸಲ್ಲುತ್ತದೆ. 1925ರಲ್ಲಿ ಉಹ್ಲೆನ್ಬೆಕ್ ಎಲೆಕ್ಟ್ರಾನಿಕ್ಸ್ ಗಿರಕಿಗಳನ್ನು ಕಂಡು ಹಿಡಿದಿದ್ದನು. ಕ್ವಾಂಟಂ ಬಲವಿಜ್ಞಾನ ಕುರಿತಾದಂತೆ ಆಗ ಷ್ರೌಡಿಂಜರ್ ಮಂಡಿಸಿದ್ದ ಸಿದ್ಧಾಂತಕ್ಕೆ ಸಾಪೇಕ್ಷಿತ ತತ್ತ್ವ ಬಳಸಿ ಎಲೆಕ್ಟ್ರಾನ್ಗಳ ಗಿರಕಿಯನ್ನು ವಿವರಿಸಿದನು. 1930ರಲ್ಲಿ ಡಿರಾಕ್ ಎಲೆಕ್ಟ್ರಾನ್ ಸ್ಥಿತಿಗಳ ಅಸ್ತಿತ್ವಕ್ಕೆ ಸಂಭವನೀಯ ಋಣಾತ್ಮಕ ಚೈತನ್ಯದ ಪರಿಹಾರಗಳನ್ನು ಒದಗಿಸಿದನು. ಅಲ್ಲದೆ ಎಲೆಕ್ಟ್ರಾನ್ನ ಈ ಸ್ಥಿತಿಗಳು, ಋಣಾತ್ಮಕ ಕಣಗಳಿಂದ ತುಂಬಲ್ಪಟ್ಟಿದ್ದು ಬೇರೆಯ ಎಲೆಕ್ಟ್ರಾನ್ ಒಳ ಪ್ರವೇಶಿಸದಂತೆ ತಡೆಯೊಡ್ಡುತ್ತಿರುವವೆಂದು ನಿರೂಪಿಸಿದನು. ಇನ್ನು ಮುಂದುವರೆದ ಡಿರಾಕ್ ಸಾಕಷ್ಟು ಪ್ರಬಲ ಪ್ರೋಟಾನ್ನಿಂದ , ಎಲೆಕ್ಟ್ರಾನ್ ಋಣಾತ್ಮಕ ಸ್ಥಿತಿಯನ್ನು ತಾಡಿಸಿದರೆ, ಅದರಿಂದ ಎಲೆಕ್ಟ್ರಾನ್ಗಳು ಹೊರದಬ್ಬಲ್ಪಟ್ಟು, ಎಲೆಕ್ಟ್ರಾನ್-ಪಾಸಿಟ್ರಾನ್ ಜೋಡಿ ದಕ್ಕುವುದೆಂದು ಅನುಮಾನಿಸಿದನು. ಹೀಗೆ ಅಸ್ತಿತ್ವಕ್ಕೆ ಬಂದ, ಧನಾವಿಷ್ಟ ಕಣ, ಎಲೆಕ್ಟಾನ್ನ ಪ್ರತಿಕಣವಾಗಿದ್ದು ಅದನ್ನು ಪಾಸಿಟ್ರಾನ್ ಎಂದು ಹೆಸರಿಸಿದನು. ಒಂದು ಎಲೆಕ್ಟ್ರಾನ್ ಮತ್ತೊಂದು ಪಾಸಿಟ್ರಾನ್ ಸನಿಹಕ್ಕೆ ಬಂದಾಗ ಅವೆರಡೂ ಪರಸ್ಪರ ವಿನಾಶಕ್ಕೊಳಗಾಗಿ, ಪ್ರೋಟಾನ್ (ಬೆಳಕಿನ ಕಣ) ಬಿಡುಗಡೆಗೊಳ್ಳುತ್ತದೆ. ಡಿರಾಕ್ನ ಈ ಎಲ್ಲಾ ಊಹೆಗಳನ್ನು 1932ರಲ್ಲಿ ಸಿ.ಡಿ. ಅ್ಯಂಡರ್ಸನ್ ಪ್ರಯೋಗಗಳಿಂದ ದೃಢಪಡಿಸಿದನಲ್ಲದೆ, ಎಲೆಕ್ಟ್ರಾನ್ ಮಾತ್ರವಲ್ಲ. ಪ್ರತಿಯೊಂದು ಕಣವೂ ತನ್ನದೇ ಆದ ಪ್ರತಿಕಣವನ್ನು ಹೊಂದಿರುವುದೆಂದು ಸಾಧಿಸಿದನು. 1930ರಲ್ಲಿ ಡಿರಾಕ್ ಪ್ರಿನ್ಸಿಪಲ್ಸ್ ಆಫ್ ಕ್ವಾಂಟಂ ಮೆಕ್ಯಾನಿಕ್ಸ್ ಪ್ರಕಟಿಸಿದನು, ಹಲವಾರು ಸಮಕಾಲೀನ ಭೌತಶಾಸ್ತ್ರಜ್ಞರು ಅವನನ್ನು ನ್ಯೂಟನ್ ಪ್ರತಿಭೆಗೆ ಸಮನಾದವನೆಂದು ಗೌರವಿಸಿದ್ದಾರೆ. 1933ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಫ್ರೆಡರಿಕ್ ಹಾಗೂ ಡಿರಾಕ್ ಜಂಟಿಯಾಗಿ ಪಡೆದರು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಷ್ರೋಡಿಂಗರ್, ಎರ್ವಿನ್ (1887-1961) 1933
Schrodinger , Erwin
ಆಸ್ಟ್ರೀಯಾ-ಭೌತಶಾಸ್ತ್ರ- ತರಂಗ ಬಲವಿಜ್ಞಾನದ (Wave Mechanics) ಸ್ಥಾಪಕ.
ಷ್ರೋಡಿಂಗರ್ ಶ್ರೀಮಂತ ಬಟ್ಟೆ ವ್ಯಾಪಾರಿಯ ಮಗ. ಖಾಸಗಿ ಶಿಕ್ಷಕನಿಂದ ,ತಂದೆಯಿಂದ ಪ್ರಾಥಮಿಕ ವಿದ್ಯಾಭ್ಯಾಸ ಗಳಿಸಿದ ಷ್ರೋಡಿಂಗರ್, ವಿಯೆನ್ನಾ ವಿಶ್ವವಿದ್ಯಾಲಯದಿಂದ 1910ರಲ್ಲಿ ಡಾಕ್ಟರೇಟ್ ಗಳಿಸಿ, ಅಲ್ಲಿಯೇ ಬೋಧಕ ಸಿಬ್ಬಂದಿಯಾದನು. ಮೊದಲ ಜಾಗತಿಕ ಯುದ್ದದಲ್ಲಿ ಷ್ರೋಡಿಂಗರ್ ಸೇನೆಗೆ ಸೇರಿದನು. ಆಗ ಆತನನ್ನು ನಿರ್ಜನ ದ್ವೀಪದ ಕಾವಲಿಗಿದ್ದ ಫಿûರಂಗಿ ದಳದೊಂದಿಗೆ ಸೇನೆಗೆ ನಿಯೋಜಿಸಲಾಯಿತು. ಇಲ್ಲಿಯೇ ಷ್ರೋಡಿಂಗರ್ ಭೌತಶಾಸ್ತ್ರದ ಮೂಲ ತತ್ತ್ವಗಳನ್ನು ಗ್ರಹಿಸಿದನು. 1920ರಿಂದ ತರಂಗ ಬಲವಿಜ್ಞಾನಕ್ಕೆ ತಳಹದಿಯಾದ ಹಲವಾರು ಲೇಖನಗಳನ್ನು ಪ್ರಕಟಿಸಿದನು. ಇದರಿಂದಾಗಿ 1927ರಲ್ಲಿ ಮಾಕ್ಸ್ ಪ್ಲಾಂಕ್ನಿಂದ ತೆರವಾದ ಸೈದ್ಧಾಂತಿಕ ಭೌತಶಾಸ್ತ್ರ ಪ್ರಾಧ್ಯಾಪಕ ಹುದ್ದೆ ಅಲಂಕರಿಸಿ ಬರ್ಲಿನ್ನಲ್ಲಿ ನೆಲೆಸಿದನು. 1937ರಲ್ಲಿ ಹಿಟ್ಲರ್ ಅಧಿಕಾರಕ್ಕೆ ಬಂದಾಗ, ತಕ್ಷಣವೇ ಈ ಹುದ್ದೆಗೆ ರಾಜಿನಾಮೆಯಿತ್ತನು. ಇಲ್ಲಿಂದ ಆಕ್ಸ್ಫರ್ಡ್ಗೆ ಹೋದನಾದರೂ, ತಾಯ್ನಾಡಿನ ಸೆಳೆತದಿಂದ ಪಾರಾಗಲಾರದೆ, 1936ರಲ್ಲಿ ಗ್ರಾಝ್ಗೆ ಮರಳಿದನು. 1938ರಲ್ಲಿ ಆಸ್ಟ್ರಿಯಾ, ಹಿಟ್ಲರ್ನ ವಶವಾಯಿತು. ಆಗ ಜೀವ ಉಳಿಸಿಕೊಳ್ಳಲು ಷ್ರೋಡಿಂಗರ್ ಡಬ್ಲಿನ್ಗೆ ಹೋದನು. ಐರ್ಲೆಂಡಿನ ಪ್ರಧಾನಮಂತ್ರಿ ಡೆ ವರೇರಾ, ಗಣಿತ ಪ್ರೇಮಿಯಾಗಿದ್ದು ಷ್ರೋಡಿಂಗರ್ಗಾಗಿಯೇ ಸ್ಥಾಪಿಸಿದ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ನಲ್ಲಿ ಕೆಲಸ ಪ್ರಾರಂಭಿಸಿದನು. ಇಲ್ಲಿ ಹದಿನೇಳು ವರ್ಷಗಳ ಕಾಲ ಫಲಪ್ರದ ಸಂಶೋಧನೆ ಮಾಡಿದನು. ಸೋವಿಯತ್ ರಷ್ಯಾ ವಿಯೆನ್ನಾದಿಂದ ಹೊರಹೋದ ಮೇಲೆಯೇ ಸ್ವದೇಶಕ್ಕೆ ಹಿಂದುರುಗಿದ ಷ್ರೋಡಿಂಗರ್ ಅಲ್ಪ ಕಾಲದಲ್ಲೇ ಅನಾರೋಗ್ಯದಿಂದ ಮರಣ ಹೊಂದಿದನು. 1924ರಲ್ಲಿ ಬ್ರೊಗ್ಲಿ ಮಂಡಿಸಿದಫಲಿತಾಂಶಗಳ ಬಗೆಗೆ ವಿಚಾರಿಸತೊಡಗಿದನು. ಇದರ ಫಲವಾಗಿ ಷ್ರೋಡಿಂಗರ್ ಯಾವುದೇ ಕಣದೊಂದಿಗೂ ಒಂದು ತರಂಗ ಇರುವುದೆಂದೂ, ಆದ್ದರಿಂದ ಅದರ ಲಕ್ಷಣಗಳು ಕಣ ಹಾಗೂ ತರಂಗಗಳೆರಡಕ್ಕೂ ಹೋಲುವುದೆಂದು ತಿಳಿಸಿದನು ಷ್ರೋಡಿಂಗರ್ ಮತ್ತು ಬ್ರೊಗ್ಲಿ ಇದಕ್ಕಾಗಿ ಹೊಸ ಬಗೆಯ ಸಮೀಕರಣ ರೂಪಿಸಿದರು. ಇದು ಕಣ ಸಿದ್ಧಾಂತ ಅನುಸರಿಸಿದ ಬೊಹ್ರ್ ಸಿದ್ಧಾಂತದಲ್ಲಿನ ಹಲವಾರು ಕೊರತೆಗಳನ್ನು ಸರಿ ಪಡಿಸಿತು. ಷ್ರೋಡಿಂಗರ್ ಹ್ಯಾಮಿಲ್ಟನ್ ವಿಧಾನದಲ್ಲಿ ಕಣದ ಚಲನೆಯನ್ನು ನೀಡಿ, ಅದನ್ನು ತರಂಗ ರೂಪದಲ್ಲಿ ಬರೆದನು. ಇದು ಷ್ರೋಡಿಂಗರ್ ಸಮೀಕರಣವೆಂದೂ ಹೆಸರಾಗಿದೆ. ಇದು ಪ್ರಯೋಗ ವೀಕ್ಷಿತಫಲಿತಾಂಶಗಳಿಗೆ ತಾಳೆಯಾಗುತ್ತದೆ. ಬೊಹ್ರ್ ಆಭಿಗೃಹೀತಗಳಿಲ್ಲದೆ (Assumptions)ಷ್ರೋಡಿಂಗರ್ ಸಮೀಕರಣ, ಪರಮಾಣುವಿನಲ್ಲಿರುವ ಎಲೆಕ್ಟ್ರಾನ್ನ ಚೈತನ್ಯದ ಅಳತೆಗಳನ್ನು ಸರಿಯಾಗಿ ನೀಡುತ್ತಿದ್ದಿತು. ಇದಕ್ಕಾಗಿ ಷ್ರೋಡಿಂಗರ್ ಡಿರಾಕ್ ಜೊತೆಗೆ 1933ರ ನೊಬೆಲ್ ಪ್ರಶಸ್ತಿ ಪಡೆದನು. 1926ರ ವೇಳೆ ಷ್ರೋಡಿಂಗರ್ ಸಿದ್ಧಾಂತ ,ತರಂಗ ಬಲವಿಜ್ಞಾನ ಎಂದು ಹೆಸರಾಯಿತು. ಇದು, ಈ ಮೊದಲೇ ಬಾರ್ನ್, ಜೋರ್ಡಾನ್ ಹಾಗೂ ಹೈಸೆನ್ಬರ್ಗ್ ನೀಡಿದ ಮಾತೃಕೆ ಗಣಿತಕ್ಕೆ ಸಮನಾದುದೆಂದು ಡಿರಾಕ್ ತೋರಿಸಿದನು. ಇವೆರಡು ಸಿದ್ಧಾಂತಗಳು, ಪೌಲಿ ಬಹಿಷ್ಕರಣ ತತ್ತ್ವದೊಂದಿಗೆ, ಸೇರಿಸಿ ಡಿರಾಕ್ ಕ್ವಾಂಟಂ ಬಲವಿಜ್ಞಾನವನ್ನು ಪೂರ್ಣಗೊಳಿಸಿದನು. ಕ್ವಾಂಟಂ ಬಲವಿಜ್ಞಾನದಿಂದ ನೂರಾರು ವೀಕ್ಷಿತ, ಪ್ರಯೋಗ ಲಭ್ಯ ವಿದ್ಯಾಮಾನಗಳಿಗೆ ಸಮರ್ಪಕ ವಿವರಣೆ ದಕ್ಕಿ ಆವರೆಗೆ ಅಜ್ಞಾತವಾಗಿದ್ದ ಎಷ್ಟೋ ಸಂಗತಿಗಳಿಗೆ ಮುನ್ಸೂಚನೆ ನೀಡಿತು. ಇಷ್ಟೆಲ್ಲ, ಆದರೂ ಷ್ರೋಡಿಂಗರ್ಗೆ ಕಣವನ್ನು ಅಲೆಯಂತೆ ಕಾಣುವುದು ಒಂದು ಬಗೆಯ ವೈರುಧ್ಯವೆನಿಸಿದ್ದಿತು. ಇದನ್ನು ಬಾರ್ನ್ ಪರಿಹರಿಸಿದನು. ಷ್ರೋಡಿಂಗರ್ ಸಮೀಕರಣದಲ್ಲಿನ ತರಂಗದ ಪಾರ (Amplitude) ಕಣದ ಸ್ಥಾನ ಸೂಚಿಯೆಂದು ತಿಳಿಸಿದನು. ಇದರಿಂದಾಗಿ ಎಲೆಕ್ಟ್ರಾನ್ನ ಸ್ಥಾನ ಹಾಗೂ ಆವಿಷ್ಟ ನಿರ್ದಿಷ್ಟ ಮೌಲ್ಯಗಳಾಗಿರದೆ, ಯಾವುದೇ ಸಮಯದಲ್ಲಿನ ಸಂಭಾವ್ಯತೆಗಳಾದವು. ಷ್ರೋಡಿಂಗರ್, ಬ್ರೊಗ್ಲಿ ಹಾಗೂ ಐನ್ಸ್ಟೀನ್ , ಬಾರ್ನ್ನ ಈ ಪರಿಕಲ್ಪನೆಯನ್ನು ತೀವ್ರವಾಗಿ ವಿರೋಧಿಸಿದರು. ಬಾರ್ನ್ ಪರಿಕಲ್ಪನೆ ಇಡೀ ಭೌತ ಜಗತ್ತನ್ನು ಕಾರ್ಯ ಕಾರಣ ಸಂಬಂಧಗಳಿಂದ ಹೊರಗೆಳೆದು ಸಂಭಾವ್ಯತೆಯ ಅನುಮಾನಕ್ಕಿಳಿಸಿದೆಯೆಂದು ಇವರ ವಾದವಾಗಿದ್ದಿತು. ಷ್ರೋಡಿಂಗರ್ ಯಾವಾಗಲೂ ಪಾದರಕ್ಷೆ ಧರಿಸಿ, ಹೆಗಲಿಗೆ ಚೀಲವೇರಿಸಿಕೊಂಡಿರುತ್ತಿದ್ದನು. ಇದರಿಂದ ನೊಬೆಲ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೋದಾಗ, ಸಭಾಂಗಣದೊಳಕ್ಕೆ ಹೋಗಲು ತೊಂದರೆ ಎದುರಿಸಬೇಕಾಯಿತು. ಷ್ರೋಡಿಂಗರ್ ಸದಾ ಹಸನ್ಮುಖಿಯೂ , ವಿದ್ಯಾರ್ಥಿಗಳ ನೆಚ್ಚಿನ ಗುರುವೂ ಆಗಿದ್ದನು. ಈತನಿಗೆ ವ್ಯಾಕರಣ ಹಾಗೂ ಜರ್ಮನ್ ಕಾವ್ಯ ಅಚ್ಚು ಮೆಚ್ಚಿನಗಳಾಗಿದ್ದವು. ವಾಟ್ ಈಸ್ ಲೈಫ್ಕೃತಿಯನ್ನು ಸಹ ಷ್ರೋಡಿಂಗರ್ ರಚಿಸಿದ್ದಾನೆ. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಚಾಡ್ವಿಕ್ , ಸರ್ ಜೇಮ್ಸ್ (1891-1974 ) 1935
Chadwick, Sir James
ಬ್ರಿಟಿನ್-ಭೌತಶಾಸ್ತ್ರ-ನ್ಯೂಟ್ರಾನ್ ಕಣವನ್ನು ಕಂಡು ಹಿಡಿದಾತ.
1911ರಲ್ಲಿ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಿಂದ ಚಾಡ್ವಿಕ್ ಭೌತಶಾಸ್ತ್ರದ ಪದವಿ ಗಳಿಸಿ ಅಲ್ಲೇ ರುದರ್’ಫೋರ್ಡ್ನ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ಮುಂದುವರಿಸಿದನು. 1913ರಲ್ಲಿ ಸಂಶೋಧನ ವೇತನ ಪಡೆಯುವುದರ ಮೂಲಕ ಬರ್ಲಿನ್ನಲ್ಲಿ ಗೈಗರ್ ಹ್ಯಾನ್ಸ್ ಜೊತೆ ಕೆಲಸ ಮಾಡುವ ಅವಕಾಶ ಚಾಡ್ವಿಕ್ಗೆ ಲಭ್ಯವಾಯಿತು. 1914ರಲ್ಲಿ ಜಾಗತಿಕ ಯುದ್ದ ಪ್ರಾರಂಭವಾಗಿ, ಚಾಡ್ವಿಕ್ನ ವೇತನ ನಿಂತು ಹೋಗಿ ಮುಂದೆ ನಾಲ್ಕು ವರ್ಷಗಳ ಕಾಲ ಕುದುರೆಯ ಲಾಯಕ್ಕೆ ಲಗತ್ತಾದ ಕೋಣೆಯೊಂದರಲ್ಲಿ ದುರ್ದೆಸೆಯಲ್ಲಿ ಕಾಲ ಕಳೆಯುವಂತಾಯಿತು. ಇಂತಹ ಸ್ಥಿತಿಯಲ್ಲೂ, ಚಾಡ್ವಿಕ್ ನೆರ್ನ್ಸ್ಟ್ ಹಾಗೂ ಇನ್ನಿತರ ಬೆಂಬಲದಿಂದಾಗಿ ಸಂಶೋಧನೆ ವiುಂದುವರೆಸಿದನು. 1915ರ ವೇಳೆಗೆ ರುದರ್’ಫೋರ್ಡ್ ಕೇಂಬ್ರಿಜ್ಗೆ ಹೋಗಿದ್ದನು. ಚಾಡ್ವಿಕ್ ಮತ್ತೊಮ್ಮೆ ರುದರಫೋರ್ಡ್ ಮಾರ್ಗದರ್ಶನದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದನು. ಮುಂದಿನ 16 ವರ್ಷಗಳ ಕಾಲ ಚಾಡ್ವಿಕ್, ರುದರ್’ಫೋರ್ಡ್’ನ ಪ್ರಧಾನ ಸಂಶೋಧಕ ಸಂಗಡಿಗನಾಗಿ ಬೆಳೆದನು. ಚಾಡ್ವಿಕ್ ಹಾಗೂ ರುದರ್’ಫೋರ್ಡ್ ಜೋಡಿ ಆಲ್ಫಾ ಕಣಗಳನ್ನು ತಾಡಿಸಿ ಧಾತುಗಳನ್ನು ಪಾರವಿಕಲ್ಪಗೊಳಿಸುವ (Transmutation) ಅಧ್ಯಯನ ಪ್ರಾರಂಭಿಸಿದರು. ಚಾಡ್ವಿಕ್ , ರುದರ್’ಫೋರ್ಡ್ ಜೊತೆ ಸೇರಿ ಹೀಲಿಯಂ ಧಾತುವಿನ ಬೀಜದ ಬಗೆಗೆ ವಿಶೇಷ ಅಧ್ಯಯನ ನಡೆಸಿದನು. ಹೀಲಿಯಂನ ಬೀಜ ಆಲ್ಫಾ ಕಣವೆಂದು ವೈಜ್ಞಾನಿಕ ರಂಗದಲ್ಲಿ ಪ್ರಚಲಿತ. ಇತರ ಧಾತುವಿನ ಭಾರದ ಬೀಜಗಳಿಂದಾಗಿ, ಆಲ್ಫಾ ಕಣಗಳನ್ನು ಚದುರಿಸುವ ವಿಧಾನ ಅಭ್ಯಸಿಸಿದ ಚಾಡ್ವಿಕ್, ಆಲ್ಫಾ ಕಣದ ಧನಾವೇಶ ಮೌಲ್ಯವನ್ನು ನಿರ್ಧರಿಸಿದನು. ಹಗುರವಾದ ಧಾತುಗಳನ್ನು ಆಲ್ಫಾ ಕಣಗಳಿಂದ ತಾಡಿಸಿ, ಅವು ಕೃತಕವಾಗಿ ಶಿಥಿಲಗೊಳ್ಳುವಂತೆ ಮಾಡಿ ಚಾಡ್ವಿಕ್ ನಾನಾ ಪ್ರಯೋಗಗಳನ್ನು ಅಭ್ಯಸಿಸಿದನು. 1932ರಲ್ಲಿ ಚಾಡ್ವಿಕ್ ಪರಮಾಣುವಿನ ಬೀಜದಲ್ಲಿ ಧನ ಕಣವಾದ ಪ್ರೋಟಾನ್ ಜೊತೆಗೆ, ವಿದ್ಯುದಾವಿಷ್ಟತೆಯಿಲ್ಲದ ಆದರೆ ಅದರಷ್ಟೇ ದ್ರವ್ಯರಾಶಿಯಯ ಮತ್ತೊಂದು ಕಣವಿರುವುದೆಂದೂ, ಮುನ್ನುಡಿದು ಅದನ್ನು ನ್ಯೂಟ್ರಾನ್ ಎಂದು ಹೆಸರಿಸಿದನು. 1920ರಲ್ಲಿ ರುದರ್’ಫೋರ್ಡ್ ಸಹ ಈ ನಿಟ್ಟಿನಲ್ಲಿ ಸಂಶಯಿಸಿದ್ದನು. ತನ್ನ ಅನುಮಾನವನ್ನು ಖಚಿತಪಡಿಸಿಕೊಳ್ಳಲು, ಚಾಡ್ವಿಕ್ ತನ್ನವೇ ಆದ ಪ್ರಯೋಗಗಳನ್ನು ಯೋಜಿಸಿದನು,. ಪ್ರಯೋಗಗಳ ಫಲಿತಾಂಶ ಚಾಡ್ವಿಕ್ನ ಊಹೆಗಳು ನಿಜವೆಂದು ಸ್ಪಷ್ಟಗೊಳಿಸಿದವು. ನ್ಯೂಟ್ರಾನ್ ಅನಾವರಣ, ಪರಮಾಣು, ಬೈಜಿಕ ಅಧ್ಯಯನದಲ್ಲಿ ಮಹತ್ವದ ಮೈಲಿಗಲ್ಲಾಯಿತು. 1935ರಲ್ಲಿ ನ್ಯೂಟ್ರಾನ್ ಅನಾವರಣಗೊಳಿಸಿದ್ದಕ್ಕಾಗಿ ಚಾಡ್ವಿಕ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು, ಇದಾದ ಕೆಲ ಕಾಲದಲ್ಲೇ ಸ್ಲೈಕ್ಲೋಟ್ರಾನ್ ನಿರ್ಮಾಣ ಕುರುತಾದಂತೆ ಚಾಡ್ವಿಕ್ ಹಾಗೂ ರುದರ್’ಫೋರ್ಡ್ ಮಧ್ಯೆ ಸೈದ್ಧಾಂತಿಕ ಘರ್ಷಣೆ ಉಂಟಾಯಿತು. ಸ್ಲೈಕ್ಲೋಟ್ರಾನ್ ಪರ ಗುಂಪನ್ನು ಚಾಡ್ವಿಕ್ ಪ್ರತಿನಿಧಿಸಿದರೆ, ರುದರ್ಫೋರ್ಡ್ ಅದನ್ನು ನಖಶಿಖಾಂತ ವಿರೋಧಿಸಿದನು. ಇದರಿಂದಾಗಿ ಚಾಡ್ವಿಕ್ ಲಿವರ್ಪೂಲ್ಗೆ ತೆರಳಿ ಬ್ರಿಟನ್ನ ಮೊದಲ ಸೈಕ್ಲೋಟ್ರಾನ್ನ ನಿರ್ಮಾಣದ ನೇತೃತ್ವ ವಹಿಸಿದನು . ಜಾಗತಿಕ ಯುದ್ದ ಪ್ರಾರಂಭವಾದಾಗ ಪ್ರತಿ ಸ್ಪರ್ಧಿಯಾದ ಜರ್ಮನಿ ಬೈಜಿಕಾಸ್ತ್ರ (Nuclear Weapon) ತಯಾರಿಸುವ ಮೊದಲೇ ಬ್ರಿಟನ್ ತಯಾರಿಸುವಂತೆ ಮಾಡುವ ಹೊಣೆ ಚಾಡ್ವಿಕ್ ಹೆಗಲ ಮೇಲೆ ಬಿದ್ದಿತು. ಇಂಗ್ಲೆಂಡ್, ಜರ್ಮನಿಯ ಸನಿಹದಲ್ಲಿರುವುದಎಂದ, ಇಂತಹ ಯೋಜನೆ ಸದಾ ಭಯದ ನೆರಳಿನಲ್ಲೇ ಜರುಗಬೇಕಾಗಿರುವುರಿಂದ ಬೈಜಿಕಾಸ್ತ್ರ ತಯಾರಿಕೆಯನ್ನು ಅಸಂಸಂಗಳಲ್ಲಿ ಕೈಗೊಳ್ಳುವಂತೆ ನಿರ್ಧರಿಸಲಾಯಿತು,. ಅಸಂಸಂದಲ್ಲಿ ಚಾಡ್ವಿಕ್ ಪರಮಾಣು ಅಸ್ತ್ರ ತಯಾರಿಕೆಗೆ ಭಾರಿ ಯಶಸ್ವಿಯಾದ ಚಾಲನೆ ನೀಡಿ ಅದು ಕಾರ್ಯಗತವಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದನು. ಜಾಗತಿಕ ಯುದ್ದದ ನಂತರ ತಾಯ್ನಾಡಿಗೆ ಮರಳಿದ ಚಾಡ್ವಿಕ್, ಪರಮಾಣು ನೀತಿ ಕುರಿತಂತೆ ಬ್ರಿಟಿಷ್ ಸರ್ಕಾರಕ್ಕೆ ಸಲಹೆಗಾರನಾಗಿದ್ದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಅ್ಯಂಡರ್ಸನ್ ಕಾರ್ಲ್ ಡೇವಿಡ್ (1905-91) - 1936
Anderson ,Philip Warren (PHY.)
ಅಸಂಸಂ-ಭೌತಶಾಸ್ತ್ರ- ಪಾಸಿಟ್ರಾನ್ ಹಾಗೂ ಮ್ಯೂಯಾನ್ ಮೂಲ ಕಣಗಳನ್ನು ಕಂಡುಹಿಡಿದಾತ.
ಆ್ಯಂಡರ್ಸನ್ ಅಸಂಸಂಗೆ ವಲಸೆ ಬಂದ ಸ್ವೀಡಿಷ್ ದಂಪತಿಗಳ ಏಕೈಕ ಮಗ. ಲಾಸ್ಏಂಜೆಲ್ಸ್ನಲ್ಲಿ ಶಿಕ್ಷಣ ಪಡೆದು ಕ್ಯಾಲಿಪೆÇೀರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೊನೆಯ ತನಕ ಕಾರ್ಯನಿರ್ವಹಿಸಿದಾತ. ಡಿರಾಕ್ 1928ರಲ್ಲಿ ಭವಿಷ್ಯನುಡಿದಿದ್ದ ಪಾಸಿಟ್ರಾನ್ ಕಣವನ್ನು 1932ರಲ್ಲಿ ಆ್ಯಂಡರ್ಸನ್ ಆಕಸ್ಮಿಕವಾಗಿ ಆವಿಷ್ಕರಿಸಿದನು. ಇದರ ಪರಿಣಾಮವಾಗಿ ಡಿರಾಕ್ನ ಸಾಪೇಕ್ಷ ಕ್ವಾಂಟಂ ಬಲವಿಜ್ಞಾನ ಸಾರ್ವತ್ರಿಕ ಮನ್ನಣೆ ಪಡೆಯಿತಲ್ಲದೆ ಅವನ ಎಲೆಕ್ಟ್ರಾನ್ ಸಿದ್ಧಾಂತ ಪುರಸ್ಕೃತಗೊಂಡಿತು. ಡಿರಾಕ್ ಮುನ್ನುಡಿದಂತೆ ಪ್ರತಿಕಣಗಳ ಅಸ್ತಿತ್ವ ನಿಜವೆಂದು ಒಪ್ಪಲಾಯಿತು. ವಿ.ಎಫ್.ಹೆಸ್ ಜೊತೆಗೆ ಹಂಚಿಕೊಂಡಂತೆ ಆ್ಯಂಡರ್ಸನ್ 1936ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. ವಿಶ್ವ ಕಿರಣಗಳ ಅಧ್ಯಯನ ಮಾಡುತ್ತಿದ್ದ ,ಆ್ಯಂಡರ್ಸನ್ ಪ್ರಯೋಗಗಳಲ್ಲಿ ದೊರೆತ ವಿಲಕ್ಷಣ ಫಲಿತಾಂಶಗಳನ್ನು ವಿಶ್ಲೇಷಿಸಿ , ದ್ರವ್ಯದಲ್ಲಿ ಎಲೆಕ್ಟ್ರಾನ್ಗೆ ಸಮನಾದ ಆದರೆ ಧನ ಆವಿಷ್ಟದ ಕಣಗಳನ್ನು ಗುರುತಿಸಿದನು. ಇವೇ ಪಾಸಿಟ್ರಾನ್ಗಳು, ಅ್ಯಂಡರ್ ಸನ್ ಈ ಅನಾವರಣವನ್ನು ಒಂದೇ ವರ್ಷದ ನಂತರ ಬ್ಲಾಕೆಟ್ ಹಾಗೂ ಓಖಿಯಾಲಿನಿ ಖಚಿತಗೊಳಿಸಿದರು.
1932ರಲ್ಲಿ ಆ್ಯಂಡರ್ಸನ್ ,ವಿಶ್ವ ಕಿರಣಗಳನ್ನು ಅಧ್ಯಯನ ಮಾಡುವಾಗಲೇ ಎಲೆಕ್ಟ್ರಾನ್ನ 130ರಷ್ಟು ಭಾರವಾದ, ಎಲೆಕ್ಟ್ರಾನ್ನಷ್ಟು I್ಮಣ ಮೌಲ್ಯವುಳ್ಳ ಪೈ ಮೆಸಾನ್ ಅಥವಾ ಪೈಯಾನ್ ಎನ್ನುವ ಮೂಲ ಕಣವನ್ನು ಗುರುತಿಸಿದನು. ಇದರಿಂದ ಯುಕೋವನ ಪ್ರಬಲ ಬೈಜಿಕ ಬಲ (Sಣಡಿoಟಿg ಓuಛಿಟeಚಿಡಿ ಈoಡಿಛಿe) ಸಂವಹನೆಯ ಸಿದ್ಧಾಂತಕ್ಕೆ ಪುರಾವೆ ಒದಗಿಸಿದಂತಾಯಿತು. ಆ್ಯಂಡರಸನ್ನ ಮುಂದುವರೆದ ಪ್ರಯೋಗಗಳಿಂದ ಅವನು ಗುರುತಿಸಿದ್ದು ಪೈ ಮೆಸಾನ್ ಅಲ್ಲವೆಂತಲೂ ಅದು ಮತ್ತೊಂದು ಕಣ ಮ್ಯು ಮೆಸಾನ್ ಎಂತಲೂ ಸಿದ್ಧವಾಯಿತು. ನಿಜವಾದ ಪೈ-ಮೆಸಾನ್ನನ್ನು 1947ರಲ್ಲಿ ಪೆÇವೆಲ್ ಮೊದಲ ಬಾರಿಗೆ ಪತ್ತೆ ಹಚ್ಚಿದನು. ಎಲೆಕ್ಟ್ರಾನ್ ಹಾಗೂ ಪಾಸಿಟ್ರಾನ್ ಸಮಾನ ಸಾಮರ್ಥ್ಯದ ಪ್ರತಿಕಣಗಳಾಗಿರುವುದರಿಂದ , ಒಂದನ್ನೊಂದು ತಾಗಿದ ತಕ್ಷಣ ವಿನಾಶಗೊಂಡು ಚೈತ್ಯ ಬಿಡುಗಡೆಯಾಗುತ್ತದೆ. ಆದ್ದಎಂದ ಪಾಸಿಟ್ರಾನ್ ಅಪರೂಪಿ ಹಾಗೂ ಮುಕ್ತ ಎಲೆಕ್ಟ್ರಾನ್ ಈ ವಿಶ್ವದಲ್ಲಿ ಅಸ್ಥಿರವೆಂದು ಈಗ ಭಾವಿಸಲಾಗಿದೆ. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಡೇವಿಸನ್, ಕ್ಲಿಂಟನ್ ಜೋಸೆಫ್ (1881-1958 ) 1937
Davisson , Clinton Joseph (PHY.)
ಅಸಂಸಂ -ಭೌತಶಾಸ್ತ್ರ- ಪ್ರಯೋಗಗಳಿಂದ ಸ್ಪಟಿಕಗಳಿಂದಾಗುವ ಎಲೆಕ್ಟ್ರಾನ್ ವಿವರ್ತನ (Diffraction)ಕಂಡು ಹಿಡಿದಾತ.
ಚಿಕಾಗೋದಿಂದ ಪದವಿ ಪಡೆದ ಡೇವಿಸನ್ ಪ್ರಿನ್ಸ್ಟನ್ನಿಂದ ಪಿ.ಎಚ್.ಡಿ. ಗಳಿಸಿದನು. 1911ರಿಂದ 1917ರವರೆಗೆ ಡೇವಿಸನ್ ಕಾರ್ನೆಗಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೆಲಸ ಮಾಡಿದನು. ಮುಂದೆ ಕಾರ್ನೆಗಿಯನ್ನು ತೊರೆದು ಯುದ್ದಕಾಲದ ನೇಮಕಾತಿಗಾಗಿ, ಆಗ ವೆಸ್ಟರ್ನ್ ಎಲೆಕ್ಟ್ರಾನಿಕ್ ಕಂಪನಿ ಲ್ಯಾಬೋರೇಟರಿ ಎಂದು ಹೆಸರಾಗಿದ್ದ ಈಗಿನ ಬೆಲ್ ಟೆಲಿಫೋನ್ ಲ್ಯಾಬೋರೇಟರಿಯನ್ನು ಸೇರಿ, 1945ರವರೆಗೆ ಅಲ್ಲಿಯೇ ಉಳಿದನು. ಡೇವಿಸನ್ ಹಾಗೂ ಜರ್ಮರ್ ಪ್ರಯೋಗಗಳಿಂದ , ಬ್ರೊಗಿಲಿಯ ವಾದದಂತೆ ಬೆಳಕಿನ ಕಣಗಳು ಅಲೆಗಳಂತೆಯೂ ವರ್ತಿಸುವುದು ಖಚಿತಗೊಂಡಿದ್ದಿತು. ಈ ಆಧಾರದ ಮೇಲೆ ಡಿರಾಕ್ ಹಾಗೂ ಷ್ರೌಡಿಂಜರ್ ಎಲೆಕ್ಟ್ರಾನ್ಗಳಿಗೂ ಕಣ ಹಾಗೂ ಅಲೆಗಳ ದ್ವೈತ ಗುಣಗಳಿರುವುದೆಂದು ಸೂಚಿಸಿದ್ದರು. ಡೇವಿಸ್ನ ಹಾಗೂ ಜರ್ಮರ್ ಇದಕ್ಕೆ ಪ್ರಾಯೋಗಿಕ ಸಾಕ್ಷ್ಯ ಒದಗಿಸಿದರು. ಇದು ಆಧುನಿಕ ಭೌತಶಾಸ್ತ್ರದ ದೃಷ್ಟಿಗೆ ಕ್ರಾಂತಿಕಾರಕ ಬದಲಾವಣೆ ನೀಡಿತು. ಡೇವಿಸನ್ ಹಾಗೂ ಜರ್ಮರ್ ರ ಈ ಸಂಶೋಧನೆ ಭಾಗಶ: ಆಕಸ್ಮಿಕವಾಗಿ ಹಾಗೂ ಭಾಗಶ: ಸನ್ನದು ವಿವಾದದ ಅಂಗವಾಗಿ ಹೊರಬಂದಿತು. ವೆಸ್ಟರ್ನ್ ಎಲೆಕ್ಟ್ರಿಕ್ ಕಂಪನಿಯ ಪರವಾಗಿ ಡೆ ಫಾರೆಸ್ಟ್ ರೂಪಿಸಿದ್ದ, ಆಕ್ಸೈಡ್ ಲೇಪಿತ ತಂತು ಹೊಂದಿದ್ದ ಮೂರು ತಂತುಗಳ ನಿರ್ವಾತ ಕವಾಟಕ್ಕೆ ಸನ್ನದು ಲಭಿಸಿದ್ದಿತು. ಆದರೆ ಇದೇ ಸಮಯಕ್ಕೆ ಜನರಲ್ ಎಲೆಕ್ಟ್ರಿಕ್ ಕಂಪನಿಯ ಲ್ಯಾಂಗ್ಮ್ಯೂಯಿರ್, ಟಂಗಸ್ಟನ್ ತಂತು ಬಳಸಿ, ಇದೇ ಬಗೆಯ ಸಾಧನ ನಿರ್ಮಿಸಿದ್ದನು. ಈ ಎರಡು ಕಂಪೆನಿಗಳ ಮಧ್ಯೆ ಈ ಸಾಧನವನ್ನು ರೂಪಿಸಿದ, ಸನ್ನದು ಯಾರಿಗೆ ದಕ್ಕಬೇಕೆನ್ನುವ ವಿಚಾರದಲ್ಲಿ ವಿವಾದ ತಲೆದೋರಿ ನ್ಯಾಯಾಲಯದ ಕಟ್ಟೆ ಹತ್ತಿ, ಒಂದು ದಶಕಕ್ಕೂ ಹೆಚ್ಚು ಕಾಲ ವ್ಯಾಜ್ಯ ಜರುಗಿತು. ಈ ವ್ಯಾಜ್ಯವನ್ನು ಒಂದು ಅಂತಿಮ ಘಟ್ಟಕ್ಕೆ ತರಬೇಕೆನ್ನುವ ದೃಷ್ಟಿಯಲ್ಲಿ ಡೇವಿಸನ್ ಹಾಗೂ ಜರ್ಮರ್ ಆಕ್ಸೈಡ್ ಲೇಪಿತ ಪ್ಲಾಟಿನಂ ಫಲಕವನ್ನು ಅಯಾನ್’ಗಳಿಂದ ತಾಡಿಸಿ ಉತ್ಸರ್ಜನೆಯನ್ನು ಅಳೆದರು. ನಳಿಕೆಯಲ್ಲಿರುವ ಆಮ್ಲಜನಕದ ಉಪಸ್ಥಿತಿಯಿಂದಾಗಿ ಎಲೆಕ್ಟ್ರಾನ್ ಉತ್ಸರ್ಜನೆಯ ಮೇಲೆ ಯಾವುದೇ ಪರಿಣಾಮಗಳಾಗುವುದಿಲ್ಲ ಎನ್ನುವುದನ್ನು ತೋರಿಸುವುದರ ಮೂಲಕ ಲ್ಯಾಂಗ್ಮೂಯಿರ್ನ ನಳಿಕೆ ತಮ್ಮ ಕಂಪನಿಯ ನಳಿಕೆಗಿಂತ ಭಿನ್ನವಲ್ಲ ಎನ್ನುವುದನ್ನು ತೋರಿಸುವುದೇ ಅವರ ಉದ್ದೇಶವಾಗಿದ್ದಿತು. ಡೇವಿಸನ್ ಹಾಗೂ ಜರ್ಮರ್ರ ಈ ಪ್ರಯೋಗಗಳ ಫಲಿತಾಂಶದಿಂದಾಗಿ, ಸರ್ವೋಚ್ಛ ನ್ಯಾಯಾಲಯ ವೆಸ್ಟರ್ನ್ ಎಲೆಕ್ಟ್ರಿಕ್ ಕಂಪನಿಯ ಪರವಾಗಿ ತೀರ್ಪು ಜಾರಿಗೊಳಿಸಿತು. ಇದೇ ಸಮಯದಲ್ಲಿ ಡೇವಿಸನ್ ಹಾಗೂ ಸಿ.ಎಚ್.ಕುನ್ಸ್ಮನ್, ಎಲೆಕ್ಟ್ರಾನ್ ತಾಡನದಡಿಯಲ್ಲಿ, ಎಲೆಕ್ಟ್ರಾನ್ ಉತ್ಸರ್ಜನೆಯ ಹಾಗೂ ನಮನದ ಅಧ್ಯಯನಕ್ಕೆ ಪ್ರಾರಂಭಿಸಿದರು. ಈ ಅಧ್ಯಯನದಲ್ಲಿ ಕೆಲವು ಎಲೆಕ್ಟ್ರಾನಗಳು ಸಂಪಾತ (Incident) ಬಿಂದುವಿನ ಬದಿಗೆ ವಿಮುಖಗೊಳ್ಳುವುದು ತಿಳಿಯಿತು. 1925ರಲ್ಲಿ ದ್ರವ ವಾಯುವಿನ ಶೀಷೆಯೊಂದು ಸಿಡಿದು ಡೇವಿಸನ್ ಪ್ರಯೋಗಕ್ಕೆ ಬಳಸುತ್ತಿದ್ದ ನಿಕ್ಕಲ್ ಮೇಲೈಯನ್ನು ಉತ್ಕರ್ಷಿಸಿತು (Oxidised). ಇದನ್ನು ಬಿಸಿಮಾಡಿ ಡೇವಿಸನ್ ಸ್ವಚ್ಛಗೊಳಿಸಿದಾಗ ಅಚ್ಚರಿಯೊಂದು ಕಾದಿತ್ತು. ಕೆಲವು ನಮನ ಹೊಂದಿ ವಿಶಿಷ್ಟ ರೀತಿಯಲ್ಲಿ ಚದುರುತ್ತಿರುವವೆಂದು ವಿವರಿಸಿದರು. ಕೆಲವು ಕೋನಗಳಲ್ಲಿ ಈ ನಿಕ್ಕಲ್ ಫಲಕ ಎಲೆಕ್ಟ್ರಾನ್ಗಳ ಗರಿಷ್ಟ ಚದುರಿಕೆಯನ್ನು ದಾಖಲಿಸಿದ್ದಿತು. 1926ರಲ್ಲಿ ಆಕ್ಸ್ಫರ್ಡ್ಗೆ ಭೇಟಿ ನೀಡಿದ ಡೇವಿಸನ್ಗೆ ತಾನು ಬೆಳಕು ಅಲೆಯಂತೆಯೂ ವರ್ತಿಸುವುದೆಂಬ ಬ್ರೊಗ್ಲಿಲಿಯ ವಾದ ತಿಳಿಯಿತು. ತತಕ್ಷಣವೇ ಡೇವಿಸನ್ಗೆ , ತಾನು ಎಲೆಕ್ಟ್ರಾನ್ನ ಗರಿಷ್ಟ ವಿವರ್ತನ ವೀಕ್ಷಿಸಿದ್ದು ಅರಿವಾಯಿತು. 1927ರಲ್ಲಿ ಜರ್ಮರ್ರ ಜೊತೆ ಸೇರಿ ಡೇವಿಸನ್ ಪ್ರಯೋಗಗಳ ಮೂಲಕ ಬೆಳಕು ಅಲೆಯಂತೆ ವರ್ತಿಸುವುದನ್ನು ಖಚಿತಪಡಿಸಿದನು. ಇದರಿಂದ ಲೋಹ ಸ್ಪಟಿಕಗಳಲ್ಲಿನ ಪರಮಾಣು ಜೋಡಣೆಯಿಂದ ಎಲೆಕ್ಟ್ರಾನ್ಗಳು ಪ್ರತಿಫಲನಗೊಂಡು ವಿವರ್ತನೆಗೊಂಡಿರುವುದು ಸಾಬೀತಾಯಿತು. ಇದಕ್ಕಾಗಿ 1937ರಲ್ಲಿ, ಇದೇ ಬಗೆಯ ವಿದ್ಯಾಮಾನವನ್ನು ಹೊರಗೆಡಹಿದ್ದ ಜೆ.ಪಿ. ಥಾಮ್ಸನ್ ಜೊತೆ ಡೇವಿಸನ್ ನೊಬೆಲ್ ಪ್ರಶಸ್ತಿ ಪಡೆದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಥಾಮ್ಸನ್, ಸರ್ ಜಾರ್ಜ್ ಪಗೆಟ್ (ಜೆ.ಪಿ.ಥಾಮ್ಸನ್) (1892-1975) 1937
Thomson , Sir George Paget
ಬ್ರಿಟನ್-ಭೌತಶಾಸ್ತ್ರ-ಸ್ಪಟಿಕಗಳಲ್ಲಿ ಪರಮಾಣುಗಳಿಂದ ಎಲೆಕ್ಟ್ರಾನ್ಗಳು ವ್ಯತಿಕರಣಗೊಳ್ಳುವುದನ್ನು ಪ್ರಯೋಗಗಳಿಂದ ಅನಾವರಣಗೊಳಿಸಿದಾತ.
ಜೆ.ಪಿ.ಥಾಮ್ಸನ್ ಖ್ಯಾತ ವಿಜ್ಞಾನಿ ಜೆ.ಜೆ. ಥಾಮ್ಸನ್ನ ಏಕೈಕ ಪುತ್ರ. ಮೊದಲನೆ ಜಾಗತಿಕ ಯುದ್ದದಲ್ಲಿ ಭಾಗವಹಿಸಿದ ಥಾಮ್ಸನ್ ಭೂ ಪಡೆಯಲ್ಲಿದ್ದು ಅಲ್ಪದರಲ್ಲೇ ಪ್ರಾಣಾಪಾಯದಿಂದ ತಪ್ಪಿಸಿಕೊಂಡನು. 1915ರಲ್ಲಿ ರಾಯಲ್ ಫೆ್ಲೈಯಿಂಗ್ ಕಾಪ್ರ್ಸ್ಗೆ ಸೇರಿ, ವಿಮಾನಗಳ ಸ್ಥಿರತೆಯ ಅಧ್ಯಯನದ ತಂಡದಲ್ಲಿದ್ದನು. 1919ರಲ್ಲಿ ಕೇಂಬ್ರಿಜ್ಗೆ ಹಿಂದಿರುಗಿ ತನ್ನ ತಂದೆಯ ಪ್ರಯೋಗಾಲಯದಲ್ಲಿ ವಿಕಿರಣಗಳ ಬಗ್ಗೆ ಅಧ್ಯಯನ ನಡೆಸಿದನು. ನಂತರ ಅಬೆರ್ಡ್ನ್ ವಿಶ್ವವಿದ್ಯಾಲಯಕ್ಕೆ ಸೇರಿ, ಮೂವತ್ತನೇ ವಯಸ್ಸಿನಲ್ಲಿ ಪ್ರಾಧ್ಯಾಪಕನಾದನು. 1927ರಲ್ಲಿ ತನ್ನ ವಿದ್ಯಾರ್ಥಿಯಾಗಿದ್ದ ಅಲೆಕ್ಸ್ ರೀಡ್ನೊಂದಿಗೆ ತೆಳುವಾದ ಲೋಹದ ರೇಕುಗಳ (Foil) ಮೂಲಕ ಹಾದು ಹೋಗುವ ಎಲೆಕ್ಟ್ರಾನ್ಗಳು ವ್ಯತಿಕರಣ (Interference) ಹೊಂದುವುದನ್ನು ಗುರುತಿಸಿದನು. ಇದು ಬ್ರೊಗ್ಲಿ ಈ ಮೊದಲೇ ಹೇಳಿದಂತೆ ಎಲೆಕ್ಟ್ರಾನ್ನ ಕಣ ಹಾಗೂ ತರಂಗದ ಸ್ವಭಾವವನ್ನು ಖಚಿತಪಡಿಸುತ್ತಿದ್ದಿತು. ಡೇವಿಸನ್ ಸ್ವತಂತ್ರವಾಗಿ, ಲೋಹದ ರೇಕುಗಳ ಬದಲಿಗೆ ನಿಕಲ್ ಸ್ಪಟಿಕ ಬಳಸಿ, ಇದೇ ಫಲಿತಾಂಶಗಳನ್ನು ಪಡೆದಿದ್ದನು. 1937ರಲ್ಲಿ ಥಾಮ್ಸನ್ ಹಾಗೂ ಡೇವಿಸನ್ ನೊಬೆಲ್ ಪ್ರಶಸ್ತಿ ಪಡೆದರು. 1930ರಲ್ಲಿ ಥಾಮ್ಸನ್ ಲಂಡನ್ನ ಇಂಪೀರಿಯಲ್ ಕಾಲೇಜನ್ನು ಸೇರಿದನು. ಲೀಥಿಯಂ ಧಾತುವಿಗೆ ಎರಡು ಸಮಸ್ಥಾನಿಗಳಿವೆಯೆಂದು (Isotopes) ಅನಾವರಣಗೊಳಿಸಿದನು. ಥಾಮ್ಸನ್ 1939ರಲ್ಲಿ ಜರ್ಮನಿ ಯುರೇನಿಯಂ ಪರಮಾಣು ಅಸ್ತ್ರ ತಯಾರಿಸುವ ಸಾಧ್ಯತೆಯನ್ನು ಮನಗಂಡನು. ಥಾಮ್ಸನ್ ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಬ್ರಿಟನ್ ಸರ್ಕಾರಕ್ಕೆ ಪರಮಾಣು ಅಸ್ತ್ರಗಳ ಬಗ್ಗೆ ಸಲಹೆ ನೀಡಲು ನಿಯೋಜಿತಗೊಂಡ ಮೌಡ್ ಸಮಿತಿಯ ಮುಖ್ಯಸ್ಥನಾದನು. ಜುಲೈ 1941ರಲ್ಲಿ ಈ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿ, ಪ್ರತ್ಯೇಕಿಸಿದ ಯುರೇನಿಯಂ-235 ಬಳಸಿ ಪರಮಾಣು ಅಸ್ತ್ರ ತಯಾರಿಸಬೇಕೆಂದು ಶಿಫಾರಸ್ಸು ಮಾಡಿತು. ಇದರ ಕಾರ್ಯ ಸಮನ್ವತೆಯ ಹೊಣೆಯನ್ನು ಚಾಡ್ವಿಕ್ಗೆ ವಹಿಸಲಾಯಿತು. ಮುಂದೆ ಥಾಮ್ಸನ್ ಕೆನಡಾ ದೇಶದ ವೈಜ್ಞಾನಿಕ ಸಲಹೆಗಾರನಾದನು. ನಂತರ 1943ರಲ್ಲಿ ಬ್ರಿಟನ್ನ ವಾಯುಯಾನ ಸಚಿವಾಲಯಕ್ಕೆ ಸಲಹೆಗಾರನಾಗಿದ್ದನು. ಯುದ್ದದ ನಂತರ 1952ರಲ್ಲಿ ಕೇಂಬ್ರಿಜ್ಗೆ ಮರಳಿದನು. ವೈಜ್ಞಾನಿಕ ವೃಂದದಲ್ಲಿ ಥಾಮ್ಸನ್ ಜಿ.ಪಿ ಎಂದೇ ಹೆಸರಾಗಿದ್ದನು. ಉತ್ತಮರ ಸ್ನೇಹಕ್ಕೆ ಸದಾ ಹಾತೊರೆಯುತ್ತಿದ್ದ ಥಾಮ್ಸನ್ ದೋಣಿ ವಿಹಾರ, ದೋಣಿಗಳ ಮಾದರಿ ತಯಾರಿಕೆಯಲ್ಲಿ ಆಸಕ್ತನಾಗಿದ್ದನು. ಜಲಾಂತರ್ಗಾಮಿ ಹಡಗುಗಳ ಮಾದರಿ ತಯಾರಿಸಿ, ಆನಂದಿಸುತ್ತಿದ್ದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಫರ್ಮಿ , ಎನ್ರಿಕೋ (1901-1954) 1938
Fermi , Enrico (PHY.)
ಇಟಲಿ-ಅಸಂಸಂ-ಬೈಜಿಕ ಭೌತಶಾಸ್ತ್ರ-ಪ್ರಥಮ ಪರಮಾಣು ಪ್ರತಿಕ್ರಿಯಾಕಾರಕ (Nuclear Reactor) ನಿರ್ಮಿಸಿದಾತ.
ಸೈದ್ಧಾಂತಿಕ, ಪ್ರಾಯೋಗಿಕ ಭೌತಶಾಸ್ತ್ರ ವಲಯದಲಿ ಜಗತ್ತಿಗೆ ಇಟಲಿ ನೀಡಿದ ಅದ್ಭುತ ಕೊಡುಗೆ ಎನ್ರಿಕೋ ಫರ್ಮಿ. ರೈಲ್ವೇ ಉದ್ಯೋಗಿಯ ಮಗನಾಗಿದ್ದ ಫರ್ಮಿ ಬಾಲ್ಯದಿಂದಲೇ ಪ್ರತಿಭಾವಂತ. ಕ್ಷ-ಕಿರಣಗಳ ಸಂಶೋಧನೆ ನಡೆಸಿ ಪೀಸಾದಿಂದ ಫರ್ಮಿ ಡಾಕ್ಟರೇಟ್ ಗಳಿಸಿದನು. ಲೀಡೆನ್ನಲ್ಲಿ ಪಿ. ಎಹ್ರೆನ್ಫೆಸ್ಟ್, ಮತ್ತು ಗಟ್ಟಿಂಜೆನ್ನಲ್ಲಿ ಬಾರ್ನ್ ಸಂಗಡ ಕೆಲಸ ಮಾಡಿದನು. 1927ರಲ್ಲಿ ರೋಮ್ಗೆ ತೆರಳಿ ಪ್ರಾಧ್ಯಾಪಕನಾದನು. ಈ ವೇಳೆಗಾಗಲೇ ಪ್ರಸಿದ್ದ ವೈಜ್ಞಾನಿಕ ಪತ್ರಿಕೆಗಳಲ್ಲಿ, ಫರ್ಮಿ-ಡಿರಾಕ್ ಸಂಖ್ಯಾಕಲನ ಶಾಸ್ತ್ರ ಸೇರಿದಂತೆ ಸುಮಾರು 30 ಲೇಖನಗಳು ಪ್ರಕಟನೆಗೊಂಡಿದ್ದವು. ರೋಮನಲ್ಲಿ ಕೆಲಕಾಲ ಇದ್ದ ಫರ್ಮಿ ಅಲ್ಲಿ ರಾಮನ್ ಪರಿಣಾಮ ಕುರಿತು ಸಂಶೋಧಿಸಿದನು. ಇಟಲಿಯಲ್ಲಿದ್ದಾಗ, ಉಜ್ವಲ ವಿಜ್ಞಾನಿಗಳ ತಂಡವೊಂದನ್ನು ಕಟ್ಟಲು ಫರ್ಮಿ ಯತ್ನಿಸಿದನಾದರೂ ಆಗಿದ್ದ ಕಲುಷಿತ ರಾಜಕೀಯ ವಾತಾವರಣದಿಂದಲೂ, ಅವನು ಯಹೂದಿಯಾಗಿದ್ದನೆಂಬ ಕಾರಣದಿಂದಲೂ ಸಾಧ್ಯವಾಗಲಿಲ್ಲ. ಇದಎಂದ ಭ್ರಮ ನಿರಸನಗೊಂಡು 1938ರಲ್ಲಿ ಇಟಲಿ ತೊರೆದು, ಅಸಂಸಂದ ನ್ಯೂಯಾರ್ಕ್ನಲ್ಲಿ ನೆಲೆಸಿ ಕೊಲಂಬಿಯಾ ವಿಶ್ವವಿದ್ಯಾಲಯ ಸೇರಿದನು. 1933ರಲ್ಲಿ ವಿಕಿರಣಶೀಲ ಬೀಟಾ ಶೈಥಿಲ್ಯ ಸಿದ್ಧಾಂತ (Beta Decay Theory) ನೀಡಿದನು. ಈ ಸಿದ್ಧಾಂತದಂತೆ ನ್ಯೂಟ್ರಾನ್ ಒಂದು ಎಲೆಕ್ಟ್ರಾನ್ನ್ನು (ಬೀಟಾ-ಕಣ) ಮತ್ತು ಪ್ರತಿ ನ್ಯೂಟ್ರಿನೋ (Antineutrino) ಹೊಮ್ಮಿಸಿ ಪ್ರೋಟಾನ್ ಆಗಿ ರೂಪುಗೊಳ್ಳುತ್ತದೆ. ಜೊಲಿಯಟ್ ಹಾಗೂ ಐರೀನ್ ಕ್ಯೂರಿ ಬೈಜಿಕ ವಿಕಲ್ಪಗಳನ್ನು (Nuclear Mutations) ತರಲು ಹೀಲಿಯಂ ಅನಿಲದ ಬೀಜವನ್ನು ಬಳಸಿದ್ದರು. ಇದಕ್ಕೆ ಬದಲಾಗಿ ನ್ಯೂಟ್ರಾನ್ ಬಳಸುವುದರಿಂದ ಹೆಚ್ಚಿನ ಅನುಕೂಲವೆಂದು ಫರ್ಮಿ ತೋರಿಸಿದನು. ಇದರ ಪರಿಣಾಮವಾಗಿ ಹೊಸ 40 ಬಗೆಯ ವಿಕಿರಣಶೀಲ ಸಮಸ್ಥಾನಿಗಳು (Radio Isotopes) ಅನಾವರಣಗೊಂಡವು. ಪ್ರಯೋಗಗಳಲ್ಲಿದ್ದಾಗ, ಆಕಸ್ಮಿಕವಾಗಿ ಪ್ಯಾರಾಫಿûನ್ ಮೇಣ ಬಳಸಿ ನ್ಯೂಟ್ರಾನ್ಗಳನ್ನು ನಿಧಾನಗೊಳಿಸಬಹುದೆಂದು ಫರ್ಮಿ ಕಂಡುಕೊಂಡನು. ಫರ್ಮಿಯ ಇವೆಲ್ಲ ಸಾಧನೆಗಾಗಿ 1938ರ ನೊಬೆಲ್ ಪ್ರಶಸ್ತಿ ನೀಡಲಾಯಿತು. ಫರ್ಮಿ ನ್ಯೂಟ್ರಾನ್ಗಳಿಂದ ಯುರೇನಿಯಂ ವಿಕಲ್ಪ ಹೊಂದುವುದನ್ನು ತಪ್ಪಾಗಿ ಅರ್ಥೈಸಿದ್ದನು. 1938ರಲ್ಲಿ ಫ್ರಿಷ್ಕ್ ಮತ್ತು ಲಿಸಾ ಮೀಟನರ್ ಇದನ್ನು ಸರಿಪಡಿಸಿ ಯುರೇನಿಯಂ ಬೀಜಕ್ಕೆ ಹೆಚ್ಚಿನ ನ್ಯೂಟ್ರಾನ್ಗಳನ್ನು ಸೇರಿಸಿದಾಗ ಯುರೇನಿಯಂ ವಿದಳನಗೊಳ್ಳುವುದೆಂದು (Fission) ಪ್ರಯೋಗಗಳ ಫಲಿತಾಂಶಗಳ ವಿಶ್ಲೇಷಣೆಯಿಂದ ತಿಳಿಸಿದರು. ಇದೇ ವೇಳೆಗೆ ಜರ್ಮನಿಯ, ಬರ್ಲಿನ್ನಲ್ಲಿದ್ದ ಹಾನ್ ಮತ್ತು ಎಫ್.ಸ್ಟ್ರಾಸ್ಮನ್ ಸರಿಸಮಾನ ಫಲಿತಾಂಶ ಪಡೆದು, ಅದೇ ಬಗೆಯ ನಿರ್ಧಾರಗಳಿಗೆ ಬಂದಿದ್ದರು. ಯುರೇನಿಯಂ ಪರಮಾಣುವನ್ನು ವಿದಳನಗೊಳಿಸುವುದರಿಂದ ಅಪಾರ ಪ್ರಮಾಣದ ಚೈತನ್ಯವನ್ನು ಪಡೆಯಬಹುದೆಂದು, ಇವರೆಲ್ಲರಿಗೂ ಖಚಿತವಾಗಿದ್ದಿತು. ಅದು ಎರಡನೇ ಜಾಗತಿಕ ಯುದ್ದದ ಬಿರುಸಿನ ಕಾಲ. ಹಿಟ್ಲರ್ಗೆ ಈ ಸಾಧ್ಯತೆ ಅರಿವಾದರೆ ಜಗತ್ತಿನಲ್ಲಿ ಅವನಿಗೆ ಸರಿಸಮಾನಾದ, ಎದುರಿಗೆ ನಿಲ್ಲಬಲ್ಲ ದೇಶ ಇರಲಾರದೆಂದು ಭಾವಿಸಿದ ಫರ್ಮಿ, ಐನ್ಸ್ಟೀನ್ ,ಝಿಲಾರ್ಡ್ ಹಾಗೂ ಅಮೆರಿಕಾದ ಅಧ್ಯಕ್ಷ ರೂಸವೆಲ್ಟ್ನನ್ನು ಭೇಟಿಯಾಗಿ ಜರ್ಮನಿಗಿಂತಲೂ ಮೊದಲೇ ಬೈಜಿಕಾಸ್ತ್ರ (Nuclear Weapon) ತಯಾರಿಸಬೇಕೆಂದು ಒತ್ತಾಯಿಸಿದರು. ಇದರ ಫಲವಾಗಿ 2 ಬಿಲಿಯನ್ ಡಾಲರ್ ವೆಚ್ಚದ ಮ್ಯಾನ್ಹಟನ್ ಪರಿಯೋಜನೆ ಮೈದಳೆಯಿತು. ಡಿಸೆಂಬರ್ 2, 1942ರಂದು, ಚಿಕಾಗೋದ ಸ್ಟ್ಯಾಗ್’ಫೀಲ್ಡ್ ಸ್ಟೇಡಿಯಂನಲ್ಲಿ ಎನ್ರಿಕೋ ಫರ್ಮಿ ಹಾಗೂ ಸಂಗಡಿಗರು ಮೊಟ್ಟ ಮೊದಲ ನಿಯಂತ್ರಣಗೊಳಿಸಬಹುದಾದ ಬೈಜಿಕ ಕ್ರಿಯಾಸರಣಿಯನ್ನು ಪಡೆದರು. ಎನ್ರಿಕೋ ಫರ್ಮಿ ಬೈಜಿಕ ವಿದಳನದಿಂದ, ಅಣ್ವಸ್ತ್ರ ತಯಾರಿಸುವ ಯೋಜನೆಯಲ್ಲಿದ್ದು, ಮೆಕ್ಸಿಕೋದ ಮರುಭೂಮಿಯಲ್ಲಿ ಅದರ ಮೊದಲ ಸ್ಪೋಟ ಪ್ರಯೋಗ ನಡೆದಾಗ ಉಪಸ್ಥಿತನಿದ್ದನು. ಎನ್ರಿಕೋ ಫರ್ಮಿ ಹಾಗೂ ಓಪೆನ್ಹೀಮರ್ ಈ ಹೊಸ ಅಸ್ತ್ರವನ್ನು ಜಪಾನಿನ ವಿರುದ್ದ ಬಳಸಲು ಬೆಂಬಲಿಸಿದರು. ಬೈಜಿಕ ಸದಳನದಿಂದ (Fussion) ರೂಪುಗೊಂಡ ಜಲಜನಕ ಬಾಂಬ್ ಅಭಿವೃದ್ದಿಯನ್ನುಫರ್ಮಿ ವಿರೋಧಿಸಿದನು. ಎರಡನೇ ಜಾಗತಿಕ ಯುದ್ದದ ನಂತರ ಚಿಕಾಗೋದಲ್ಲಿ ಪ್ರಾಧ್ಯಾಪಕನಾಗಿ ಉಳಿದ ಫರ್ಮಿಯ ಗೌರವಾರ್ಥ ಹೊಸದಾಗಿ ಬೆಳಕಿಗೆ ಬಂದ 100ನೇ ಧಾತುವಿಗೆ ಫರ್ಮಿಯಾನ್ ಎಂದು ಹೆಸರಿಸಲಾಗಿದೆ. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಲಾರೆನ್ಸ್, ಎರ್ನೆಸ್ಟ್ ಓರ್ಲ್ಯಾಂಡೋ (1901-1958) 1939
Lawrence , Ernest Orlando
ಅಸಂಸಂ-ಭೌತಶಾಸ್ತ್ರ- ಸೈಕ್ಲೋಟ್ರಾನ್ ಉಪಜ್ಞೆಕಾರ- ಹೊಸ ವಿಕಿರಣಪಟು ಧಾತುಗಳನ್ನು (Radioactive Element)ಪಡೆದಾತ.
ಲಾರೆನ್ಸ್ನ ತಂದೆ ಶಿಕ್ಷಕರ ತರಬೇತಿ ಕಾಲೇಜಿನ ಮುಖ್ಯಸ್ಥನಾಗಿದ್ದನು. ತಾಯಿಯಿಂದ ಲಾರೆನ್ಸ್ ಗಣಿತ ಕಲಿತನು. ದಕ್ಷಿಣ ಡಕೋಟಾದಲ್ಲಿ ಬಾಲ್ಯ ಕಳೆದ ಲಾರೆನ್ಸ್ , ಚುರುಕು ಬಾಲಕನೂ. ಉತ್ತಮ ಕ್ರೀಡಾಪಟುವೂ ಭೌತಶಾಸ್ತ್ರದಲ್ಲಿ ಆಸಕ್ತನೂ ಆಗಿದ್ದನು. ದಕ್ಷಿಣಾ ಡಕೋಟಾ, ಮಿನ್ನೆಸೊಟಾ, ಯೆೀಲ್ನಲ್ಲಿ ಶಿಕ್ಷಣ ಪಡೆದು, 1928ರಲ್ಲಿ ಬರ್ಕ್ಲೆಯಲ್ಲಿನ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯ ಸೇರಿದನು. 1936ರಲ್ಲಿ ಇಲ್ಲಿನ ವಿಕಿರಣಪಟುತ್ವ ಪ್ರಯೋಗಾಲಯದ ನಿರ್ದೇಶಕನಾದನು. 1929ರಿಂದ ಲಾರೆನ್ಸ್ ಬೈಜಿಕ ಪ್ರತಿಕ್ರಿಯೆಯಿಂದಾಗುವ ಅಧಿಕ ಚೈತನ್ಯದ ಕಣಗಳ ಬಗೆಗೆ ಕೆಲಸ ಮಾಡಿದನು. ಖ್ಯಾತ ಖಗೋಳ ಶಾಸ್ತ್ರಜ್ಞನಾಗಿದ್ದ ಎಡಿಂಗ್ಟನ್, ತಾರೆಗಳು ಬೈಜಿಕ ಪ್ರತಿಕ್ರಿಯೆಯಿಂದ ಚೈತನ್ಯ ಬಿಡುಗಡೆಗೊಳಿಸುತ್ತಿರಬಹುದೆಂದು ಸೂಚಿಸಿದ್ದನು. ಈ ಕಾಲಕ್ಕೆ ಅಧಿಕ ಚೈತನ್ಯದ ಕಣಗಳನ್ನು ಪಡೆಯುವುದು ಬಹು ಪರಿಶ್ರಮದ ಕೆಲಸವಾಗಿದ್ದಿತು. ಲಾರೆನ್ಸ್ 1931ರಲ್ಲಿ ಇದನ್ನು ಪರಿಷ್ಕರಿಸಿ ಕಾಂತ ಕ್ಷೇತ್ರದಲ್ಲಿ ಸರ್ಪಿಲ ಜಾಡಿನಲ್ಲಿ ವೇಗೋತ್ಕರ್ಷಗೊಂಡು , ಅಧಿಕ ಚೈತನ್ಯ ಹೊಂದಿರುವ ಕಣ ಪಡೆಯುವ ಸಾಧನ ನಿರ್ಮಿಸಿದನು. ಇದು ಸ್ಲೈಕ್ಲೊಟ್ರಾನ್ ಎಂದು ಹೆಸರಾಯಿತು. ಮುಂದೆ ಇನ್ನೂ ಪ್ರಬಲ ಸೈಕ್ಲೋಟ್ರಾನ್ಗಳು ಚಾಲ್ತಿಗೆ ಬಂದವು. ಇವುಗಳಿಂದ ಲಿಥಿಯಂ ಬೀಜವನ್ನು ಹೀಲಿಯಂ ಬೀಜವಾಗಿ ರೂಪಾಂತರಿಸುವುದು ಸಾಧ್ಯವಾಯಿತು. ಇದನ್ನು ಕಾಕ್ಕ್ರಾಫ್ಟ್ ಮತ್ತು ವಾಲ್ಟನ್ ಪ್ರಯೋಗಗಳಲ್ಲಿ ಸಾಧಿಸಿದರು. ಇದರಿಂದಾಗಿ ಕೆಲವೇ ಸಮಯದಲ್ಲಿ ನೂರಾರು ವಿಕಿರಣಪಟು ಸಮಸ್ಥಾನಿಗಳು (Isotopes) ದಕ್ಕಿದವು. ಲಾರೆನ್ಸ್, ಇದನ್ನು ವೈದ್ಯಕೀಯ ರಂಗಗಳಲ್ಲಿ ಬಳಸಲು ಯತ್ನಿಸಿದನು. ಸೈಕ್ಲೋಟ್ರಾನ್ನಿಂದ ಮೆಸಾನ್ಗಳು, ಪ್ರತಿಕಣಗಳನ್ನು ಪಡೆಯಲಾಯಿತು. ಇದರಿಂದಾಗಿ ಮೂಲ ಕಣಗಳ ಅಧ್ಯಯನ ಬಹುವಾಗಿ ವಿಸ್ತರಿಸಿತು. ಲಾರೆನ್ಸ್ ಗೌರವಾರ್ಥವಾಗಿ 103ನೇಧಾತುವನ್ನು ಲಾರೆನ್ಸಿಯಂ ಎಂದು ಹೆಸರಿಸಲಾಗಿದೆ. 1940ರಲ್ಲಿ ಲಾರೆನ್ಸ್ ತಂಡ ಪ್ಲುಟೋನಿಯಂ ಹಾಗೂ ನೆಪ್ಚೂನಿಯಂಗಳನ್ನು ಪ್ರತ್ಯೇಕಿಸಿತು. ಲಾರೆನ್ಸ್ ಅಣ್ವಸ್ತ್ರ ತಯಾರಿಕೆಯಲ್ಲಿ ಗಣನೀಯ ಪಾತ್ರ ವಹಿಸಿದ್ದನು. ಲಾರೆನ್ಸ್ 1939ರ ನೊಬೆಲ್ ಪ್ರಶಸ್ತಿಯಿಂದ ಪುರಸ್ಕೃತನಾಗಿದ್ದಾನೆ. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
Heisenberg , Werner Karl
ಜರ್ಮನಿ-ಭೌತಶಾಸ್ತ್ರಜ್ಞ-ಕ್ವಾಂಟಂ ಬಲವಿಜ್ಞಾನ ಅನಾವರಣಗೊಳಿಸಿದಾತ. ಅನಿಶ್ಚಿತ ಸಿದ್ದಾಂತ ತತ್ತ್ವ ನೀಡಿದಾತ.
ಹೈಸೆನ್ಬರ್ಗ್ ತಂದೆ ಮ್ಯೂನಿಕ್ನಲ್ಲಿ ಗ್ರೀಕ್ ಭಾಷೆಯ ಪ್ರಾಧ್ಯಾಪಕನಾಗಿದ್ದನು. ಹೈಸೆನ್ಬರ್ಗ್ ಮ್ಯೂನಿಕ್ ಮತ್ತು ಗಟ್ಟಿಂಜೆನ್ನಲ್ಲಿ ಶಿಕ್ಷಣ ಪಡೆದನು. ಗಟ್ಟಿಂಜೆನ್ನಲ್ಲಿ ಬಾರ್ನ್ ಮತ್ತು ಕೊಪೆನ್ಹೇಗ್ನಲ್ಲಿ ನೀಲ್ಸ್ ಬೊಹ್ರ್ ಜೊತೆ ಹೈಸೆನ್ಬರ್ಗ್ ಕೆಲಸ ಮಾಡಿದನು. 1927ರಲ್ಲಿ ಲೀಪ್ಝಿಗ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದನು. ಹೈಸೆನ್ಬರ್ಗ್ ಭೌತಶಾಸ್ತ್ರಕ್ಕೆ ಮಹತ್ತರ ತಿರುವು ನೀಡಿ, ಕ್ರಾಂತಿ ತಂದವನೆಂದು ಪರಿಗಣಿತನಾಗಿದ್ದಾನೆ. 24 ವಯಸ್ಸಿನ ಯುವಕನಾಗಿರುವಾಗಲೇ ಹೈಸೆನ್ಬರ್ಗ್ ಕ್ವಾಂಟಂ ಬಲವಿಜ್ಞಾನ ಸಿದ್ಧಾಂತ ರೂಪಿಸಿದನು. ಈ ಸಿದ್ಧಾಂತ ಸಾಪೇಕ್ಷ ಸಿದ್ದಾಂತದಿಂದ ಬೇರೆಯಾಗಿದ್ದಿತು. ಇದಕ್ಕಾಗಿ ಹೈಸೆನ್ಬರ್ಗ್ ಮ್ಯಾಟ್ರಿಕ್ಸ್ ಬಲವಿಜ್ಞಾನವನ್ನು ಬಳಕೆಗೆ ತಂದನು. ಇದಕ್ಕೆ ಸರಿ ಸಮಾನವಾದ ತರಂಗ ಬಲವಿಜ್ಞಾನ ಸಿದ್ದಾಂತವನ್ನು ಷ್ರೋಡಿಂಜರ್ 1925ರಲ್ಲಿ ಬಳಕೆಗೆ ತಂದನು. ಹೈಸೆನ್ಬರ್ಗ್ ತನ್ನ ಈ ಸಾಧನೆಗಾಗಿ 1932ರ ನೊಬೆಲ್ ಪ್ರಶಸ್ತಿ ಪಡೆದನು. ಹೈಸೆನ್ಬರ್ಗ್ ಕ್ವಾಂಟಂ ಸಿದ್ಧಾಂತ ಮಂಡಿಸುವ ಮೊದಲು ಎಲೆಕ್ಟ್ರಾನ್ ಅಲೆ ಸ್ವರೂಪದ್ದೇ ಅಥವಾ ಕಣ ಸ್ವರೂಪದ್ದೇ ಎನ್ನುವ ವಿವಾದಗಳು ಹಾಗೂ ಅದನ್ನು ಯಾವಾಗ ಹೇಗೆ ಪರಿಗಣಿಸಬೇಕೆಂಬ ಸಮಸ್ಯೆಗಳು ತಲೆದೋರಿದ್ದವು. ಹೈಸೆನ್ಬರ್ಗ್ ಅಲೆ, ಕಣ ಎನ್ನುವಂತಹ ತೋರಿಕೆಗಳನ್ನು ತೊರೆದು ಅಣುವಿನ, ಎಲೆಕ್ಟ್ರಾನ್ನ ಮಟ್ಟದಲ್ಲಿ ಅಳೆಯಬಹುದಾದ ವೀಕ್ಷಿಸಬಹುದಾದ ಅಂಶಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಿದನು. ಎಲೆಕ್ಟ್ರಾನ್ ಬಗೆಗೆ ತಿಳಿಯಬೇಕೆಂದರೆ ಅದರ ಮೇಲೆ ನಾನಾ ಪ್ರಯೋಗಗಳನ್ನು ನಡೆಸಬೇಕು. ಹೈಸೆನ್ಬರ್ಗ್ ಇವೆರಡೂ ವ್ಯವಸ್ಥೆಗಳನ್ನು ಬೇರ್ಪಡಿಸಿದನು. ತಿಳಿಯಬೇಕಾದುದು ಮತ್ತು ತಿಳಿಯಲು ಬಳಸುವ ವ್ಯವಸ್ಥೆಗಳನ್ನು ಪ್ರತ್ಯೇಕಿಸುವ ಅನಿವಾರ್ಯತೆಯನ್ನು ತೋರಿಸಿದನು. ಗಣಿತೀಯವಾಗಿ ಇವೆರಡನ್ನು ಸ್ವತಂತ್ರವಾಗಿ ಕಂಡನು. ಹೈಸೆನ್ಬರ್ಗ್ ಈ ಮಾರ್ಗದಿಂದ ರೋಹಿತದಲ್ಲಿ ವೀಕ್ಷಿಸಲ್ಪಟ್ಟ ಪಟ್ಟಿಗಳ ತರಂಗಾಂತರಗಳನ್ನು ಖಚಿತವಾಗಿ ನಿರ್ಧರಿಸುವುದು ಸಾಧ್ಯವಾಯಿತು. ಆಲ್ಬರ್ಟ್ ಐನ್ಸ್ಟೀನ್ನ ಸಾಪೇಕ್ಷ ಸಿದ್ಧಾಂತದಂತೆ ವಿಶ್ವದ ಆಗು ಹೋಗುಗಳು ಖಚಿತವಾಗಿದ್ದವು, ಇದನ್ನು 18ನೇ ಶತಮಾನದಲ್ಲಿದ್ದ ಫ್ರೆಂಚ್ ಗಣಿತಜ್ಞ, ಭೌತಶಾಸ್ತ್ರಜ್ಞ, ಲಾಪ್ಲಾಸ್ ಪ್ರತಿಪಾದಿಸಿದ್ದನು. ಇವರ ನಿಲುವಿನಲ್ಲಿ ವ್ಯವಸ್ಥೆಯೊಂದರ ಆರಂಭಿಕ ಸ್ಥಿತಿಯ ಪ್ರಾಚಲಗಳು (Parameters) ಸಂಪೂರ್ಣವಾಗಿ ದಕ್ಕಿದ್ದೇ ಆದರೆ, ಅವುಗಳ ಆಧಾರಧ ಮೇಲೆ ಅದು ಹೇಗೆ ವರ್ತಿಸಬಲ್ಲುವೆಂದು ನಿರ್ಧರಿಸುವುದು ಸಾಧ್ಯ . ಹೈಸೆನ್ಬರ್ಗ್ 1927ರಲ್ಲಿ ಕ್ವಾಂಟಂ ಬಲವಿಜ್ಞಾನದಲ್ಲಿ ಅನಿಶ್ಚತೆತೆಯ ತತ್ತ್ವ ಮಂಡಿಸಿ, ಈ ಸಾಂಪ್ರಾದಾಯಿಕ ದೃಷ್ಟಿಗೆ ಆಘಾತ ನೀಡಿದನು. ಹೈಸೆನ್ಬರ್ಗ್ನ ಈ ತತ್ತ್ವದಂತೆ ಯಾವುದೇ ಕಣದ ಸ್ಥಾನ ಹಾಗೂ ಆವಿಷ್ಟವನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಸ್ಥಾನದ ನಿಖರತೆ ಹೆಚ್ಚಿದಂತೆ, ಅದರ ಆವಿಷ್ಟತೆಯ ನಿರ್ಧಾರವೂ, ಆವಿಷ್ಟತೆಯ ನಿಖರತೆ ಹೆಚ್ಚಿದಂತೆ ಸ್ಥಾನದ ನಿರ್ಥಾರವೂ ಖಚಿತತೆಯಿಂದ ದೂರ ಸರಿಯುತ್ತವೆ. ಆದುದರಿಂದ ಸ್ಥಾನ ಮತ್ತು ಆವಿಷ್ಟಗಳೆರಡನ್ನು ಸಂಭವನೀಯ ಅಳತೆಗಳಲ್ಲಿ ಹೇಳಲು ಮಾತ್ರ ಸಾಧ್ಯ. ಎಲೆಕ್ಟ್ರಾನ್ ಸ್ಥಾನವನ್ನು ನಿರ್ಧರಿಸಲು ನಾವು ಯತ್ನಿಸಿದಂತೆ ಭಾವಿಸೋಣ. ಅದಕ್ಕಾಗಿ ನಾವು ಎಲೆಕ್ಟ್ರಾನ್ನನ್ನು ನೋಡುವಂತಹ ಕ್ರಿಯೆಯೆಸಗಬೇಕು. ಅಂತಹ ನೋಡುವ ಕ್ರಿಯೆಯಿಂದಾಗಿ ಎಲೆಕ್ಟ್ರಾನ್ ಆವಿಷ್ಟ ವ್ಯತ್ಯಾಸಗೊಳ್ಳುತ್ತದೆ. ಅಂತಹ ಸ್ಥಿತಿಯಲ್ಲಿ ನಾವು ಪಡೆದ ಆವಿಷ್ಟ ಎಲೆಕ್ಟ್ರಾನ್ ಸಹಜ ಸ್ಥಿತಿಯದಾಗಿರುವುದಿಲ್ಲವೆಂದು ಹೈಸೆನ್ಬರ್ಗ್ ಹೇಳಿದನು. 1932ರಲ್ಲಿ ಚಾಡ್ವಿಕ್ ನ್ಯೂಟ್ರಾನ್ ಅಸ್ತಿತ್ವವನ್ನು ಸಾರಿದನು. ಈ ಹಿನ್ನೆಲೆಯಲ್ಲಿ ಹೈಸೆನ್ಬರ್ಗ್ ಪ್ರೋಟಾನ್ ಎಲೆಕ್ಟ್ರಾನ್ ಮಾದರಿಯ ಅಣುವಿಗಿಂತಲೂ, ಪ್ರೋಟಾನ್, ನ್ಯೂಟ್ರಾನ್ ಮಾದರಿಯ ಅಣು, ನೈಜತೆಗೆ ಸನಿಹದಲ್ಲಿರುತ್ತದೆಯೆಂದು ಪ್ರತಿಪಾದಿಸಿದನು. ಇನ್ನು ಮುಂದುವರೆದು ಹೈಸೆನ್ಬರ್ಗ್ ಪ್ರೋಟಾನ್, ನ್ಯೂಟ್ರಾನ್ಗಳು ಬೈಜಿಕ ಮಟ್ಟದಲ್ಲಿನ ಪರಸ್ಪರ ಬಲಗಳಿಂದ ಬಂಧಿತವಾಗಿರಬೇಕೆಂದು ಸೂಚಿಸಿದನು. ಜಪಾನಿನ ಭೌತಶಾಸ್ತ್ರಜ್ಞ ಯುಕಾವ ಸಿದ್ಧಾಂತ ಹೈಸೆನ್ಬರ್ಗ್ನ ಈ ಸೂಚನೆ ಸರಿಯೆಂದು ಸಾಧಿಸಿತು. 1966ರಲ್ಲಿ ಐಕ್ಯಗೊಳಿಸಿದ ಕಣ ಸಿದ್ದಾಂತವನ್ನು ಹೈಸೆನ್ಬರ್ಗ್ ನೀಡಿದನಾದರೂ ಅದು ಹೆಚ್ಚಿನ ಮಟ್ಟದಲ್ಲಿ ವಿಜ್ಞಾನಿಗಳ ಗಮನ ಸೆಳೆಯಲಿಲ್ಲ. ಎರಡನೇ ಜಾಗತಿಕ ಯುದ್ದದಲ್ಲಿ ಜರ್ಮನಿಯ ವಿಜ್ಞಾನಿಗಳು ನಾಝಿ ಪರ ಹಾಗೂ ವಿರುದ್ಧದ ಬಣಗಳಾಗಿ ಒಡೆದು ಹೋದರು. ಹೈಸೆನ್ಬರ್ಗ್ ನಾಝಿ ಪರದವನಾಗಿದ್ದರೂ, ಜರ್ಮನಿಯ ವಿಜ್ಞಾನಿಗಳು ಎಂಬ ಹೆಮ್ಮೆ ತಳೆದಿದ್ದನು. ಯಹೂದಿಯಾಗಿದ್ದ ಐನ್ಸ್ಟೀನ್ನ ಸಿದ್ದಾಂತಗಳನ್ನು ತಿರಸ್ಕರಿಸುವಂತೆ ನಾಝಿ ಪರ ವಾದಿಗಳು ಹೈಸೆನ್ಬರ್ಗ್ ಮೇಲೆ ಒತ್ತಡ ತಂದರು. ಹೈಸೆನ್ಬರ್ಗ್ ಇದನ್ನು ಸಾರಸಗಟಾಗಿ ತಿರಸ್ಕರಿಸುವುದರ ಮೂಲಕ ನಾಝಿ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾದನು. ಇದರ ಫಲವಾಗಿ ಝೋಮರ್ಫೆಲ್ಟ್ನ ನಂತರ ಹೈಸೆನ್ಬರ್ಗ್ಗೆ ದಕ್ಕಬೇಕಾಗಿದ್ದ ಮ್ಯೂನಿಕ್ನ ಪ್ರಾಧ್ಯಾಪಕ ಸ್ಥಾನವನ್ನು ನಿರಾಕರಿಸಲಾಯಿತು. ಜಾಗತಿಕ ಯುದ್ದಕ್ಕೆ ಬೇಕಾದ ಶಸ್ತ್ರಾಸ್ತ್ರ ತಯಾರಿಕೆಯ ಯೋಜನೆಯಡಿಯಲ್ಲಿ ಅಣುಶಕ್ತಿ ಅಭಿವೃದ್ದಿಗೆ ಹೈಸೆನ್ಬರ್ಗ್ನನ್ನು ನೇಮಿಸಿ 1941ರಲ್ಲಿ ಕೈಸರ್ ವಿಲ್ಹೆಲ್ಮ್ ಸಂಸ್ಥೆಯ ನಿರ್ದೇಶಕನನ್ನಾಗಿಸಲಾಯಿತು. ಯುದ್ದದ ನಂತರ ಹೈಸೆನ್ಬರ್ಗ್ ಗಟ್ಟಿಂಜೆನ್ನಲ್ಲಿ ಮ್ಯಾಕ್ಸ್ ಪ್ಲಾಂಕ್ ಸಂಸ್ಥೆಯ ಸ್ಥಾಪನೆಗೆ ನೆರವಾದನು. 1955ರಲಿ ಈ ಸಂಸ್ಥೆಯನ್ನು ಮ್ಯೂನಿಕ್ಗೆ ಸ್ಥಳಾಂತರಿಸಿದಾಗ ಅದರ ನಿರ್ದೇಶಕನಾದನು. 1941ರಲ್ಲಿ ಬೊಹ್ರ್ ಜೊತೆಗಿನ ಮಾತುಕತೆಯಲ್ಲಿ ಹೈಸೆನ್ಬರ್ಗ್ ಹಿಟ್ಲರ್ ಎಂದೂ ಅಣ್ವಸ್ತ್ರ ಪಡೆಯದಂತೆ ತನ್ನ ಸ್ಥಾನ ಖ್ಯಾತಿ ಅಧಿಕಾರದಿಂದ ತಡೆಹಿಡಿಯುತ್ತಿದೆನೆಂದು ತಿಳಿಸಿದನು. ಇದು ತೀವ್ರ ವಿವಾದಕ್ಕೆ ಗುರಿಯಾಯಿತು. ಹಿಟ್ಲರ್ ಅಣ್ವಸ್ತ್ರದ ಕಡೆ ಗಮನ ಹರಿಸದೆ, ವಿಮಾನ, ಕ್ಷಿಪಣಿಗಳತ್ತ ಆಸ್ಥೆ ತಾಳಿದ್ದರಿಂದ ಅಣ್ವಸ್ತ್ರ ದಕ್ಕಲಿಲ್ಲವೇ ಹೊರತು ಹೈಸೆನ್ಬರ್ಗ್ನ ಯಾವುದೇ ಯತ್ನದಿಂದಲ್ಲವೆಂದು ಈಗ ಹೇಳಲಾಗುತ್ತಿದೆ. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಡಿರಾಕ್ ಪೌಲ್ ಅಡ್ರಿಯನ್ ಮೌರಿಸ್ (1902-1984) 1933
Dirac , Paul Adrien Maurice
ಬ್ರಿಟನ್-ಭೌತಶಾಸ್ತ್ರ-ಕ್ವಾಂಟಂ ಬಲಶಾಸ್ತ್ರಕ್ಕೆ ಮಹತ್ತರ ಕೊಡುಗೆ ನೀಡಿದಾತ -ಪಾಸಿಟ್ರಾನ್ ಹಾಗೂ ಇತರ ಪ್ರತಿ ಕಣಗಳ ಅಸ್ತಿತ್ವವನ್ನು ಮುನ್ನುಡಿದಾತ.
ಸ್ವಿಸ್ ತಂದೆ, ಇಂಗ್ಲೀಷ್ ತಾಯಿಯ ಮಗನಾದ ಡಿರಾಕ್ ಬ್ರಿಸ್ಟಲ್ ಹಾಗೂ ಕೇಂಬ್ರಿಜ್ನಲ್ಲಿ ವೈದ್ಯುತ್ ಇಂಜನಿಯರಿಂಗ್ ಹಾಗೂ ಗಣಿತಶಾಸ್ತ್ರದ ವ್ಯಾಸಂಗ ಮಾಡಿದನು. ಬಾಲ್ಯದಿಂದಲೇ ಡಿರಾಕ್ಗೆ ಶುದ್ಧಗಣಿತದ ಕಡೆಗೆ ತುಡಿತವಿದ್ದಿತು. ಆದರೆ ಶುದ್ಧಗಣಿತದ ಅಧ್ಯಯನದಿಂದ ಜೀವನ ನಿರ್ವಹಣೆ ಅಸಾಧ್ಯವೆಂದು ಭಾವಿಸಿದ್ದ ಡಿರಾಕ್ ವೈದ್ಯುತ್ ಇಂಜಿನಿಯರಿಂಗ್ ಪದವಿ ಪಡೆದನು. ಇಂಜಿನಿಯರಿಂಗ್ ಸಮಸ್ಯೆಗಳ ಪರಿಹಾರಕ್ಕೆ ಬಳಸುವ ಗಣಿತದಲ್ಲಿನ ಸೌಂದರ್ಯಕ್ಕೆ ಡಿರಾಕ್ ಮನಸೋತಿದ್ದನು. ಇಂಜಿನಿಯರಿಂಗ್ ಪದವಿ ಪಡೆದ ನಂತರವೂ ತಕ್ಷಣ ಉದ್ಯೋಗ ದೊರೆಯಲಿಲ್ಲ. ಆದರೆ ಡಿರಾಕ್ನ ಗಣಿತಾಸಕ್ತಿ ತಿಳಿದಿದ್ದ ಬ್ರಿಸ್ಟಲ್ ವಿಶ್ವವಿದ್ಯಾಲಯದ ಆಡಳಿತವರ್ಗ ಈತನನ್ನು ತನ್ನಲ್ಲಿಗೆ ಆಹ್ವಾನಿಸಿ, ಶುಲ್ಕ ರಹಿತ ವ್ಯಾಸಂಗಕ್ಕೆ ಅನುವು ಮಾಡಿತು. ಇದು ಡಿರಾಕ್ ಇಂಜಿನಿಯರಿಂಗ್ನ್ನು ಸಂಪೂರ್ಣವಾಗಿ ತೊರೆದು ಗಣಿತ ಹಾಗೂ ಭೌತಶಾಸ್ತ್ರದತ್ತ ಮುಖ ಮಾಡುವಂತೆ ಮಾಡಿತು. ಅಸಂಸಂಗಳಲ್ಲಿ ಕೆಲಕಾಲ ಬೋಧಕನಾಗಿ, ಜಪಾನ್ ಹಾಗೂ ಸೈಬೀರಿಯಾಗಳಿಗೆ ಭೇಟಿ ಇತ್ತನು. 1932ರಲ್ಲಿ ಕೇಂಬ್ರಿಜ್ನ ಲುಕೇಷಿಯನ್ ಪೀಠದ ಗಣಿತ ಪ್ರಾಧ್ಯಾಪಕನಾಗಿ ಡಿರಾಕ್ ನೇಮಕಗೊಂಡನು. 1969ರಲ್ಲಿ ನಿವೃತ್ತಿಯಾಗುವವರೆಗೆ ಡಿರಾಕ್ ಅದೇ ಸ್ಥಾನದಲ್ಲಿ ಅಲ್ಲೇ ಉಳಿದನು. ಇದಾದ ನಂತರ ಅಸಂಸಂಗಳ ಹಲವಾರು ವಿಶ್ವ ವಿದ್ಯಾಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸತೊಡಗಿದ ಡಿರಾಕ್ 1971ರಲ್ಲಿ ಫ್ಲೋರಿಡಾ ರಾಜ್ಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾದನು. ಭೌತಶಾಸ್ತ್ರದ ಅಪೂರ್ವ ಸೈದ್ಧಾಂತಿಕ ಸೈನ್ಯದಲ್ಲಿ ಒಬ್ಬನಾಗಿದ್ದ ಡಿರಾಕ್, ಅಂಬೆಗಾಲಿಡುತ್ತಿದ್ದ ‘ಕ್ವಾಂಟಂ’ ಮೆಕಾನಿಕ್ಸ್ ದೌಡಾಯಿಸುವಂತೆ ಮಾಡಿದನು. ಬಾರ್ನ್ ಹಾಗೂ ಜೋರ್ಡಾನ್ರ ನಂತರ 1926ರಲ್ಲಿ ಕ್ವಾಂಟಂ ಬಲವಿಜ್ಞಾನದ ಸಾರ್ವತ್ರಿಕ ರಾಚನಿಕ ಸ್ವರೂಪವನ್ನು ನೀಡಿದ ಕೀರ್ತಿ ಡಿರಾಕ್ಗೆ ಸಲ್ಲುತ್ತದೆ. 1925ರಲ್ಲಿ ಉಹ್ಲೆನ್ಬೆಕ್ ಎಲೆಕ್ಟ್ರಾನಿಕ್ಸ್ ಗಿರಕಿಗಳನ್ನು ಕಂಡು ಹಿಡಿದಿದ್ದನು. ಕ್ವಾಂಟಂ ಬಲವಿಜ್ಞಾನ ಕುರಿತಾದಂತೆ ಆಗ ಷ್ರೌಡಿಂಜರ್ ಮಂಡಿಸಿದ್ದ ಸಿದ್ಧಾಂತಕ್ಕೆ ಸಾಪೇಕ್ಷಿತ ತತ್ತ್ವ ಬಳಸಿ ಎಲೆಕ್ಟ್ರಾನ್ಗಳ ಗಿರಕಿಯನ್ನು ವಿವರಿಸಿದನು. 1930ರಲ್ಲಿ ಡಿರಾಕ್ ಎಲೆಕ್ಟ್ರಾನ್ ಸ್ಥಿತಿಗಳ ಅಸ್ತಿತ್ವಕ್ಕೆ ಸಂಭವನೀಯ ಋಣಾತ್ಮಕ ಚೈತನ್ಯದ ಪರಿಹಾರಗಳನ್ನು ಒದಗಿಸಿದನು. ಅಲ್ಲದೆ ಎಲೆಕ್ಟ್ರಾನ್ನ ಈ ಸ್ಥಿತಿಗಳು, ಋಣಾತ್ಮಕ ಕಣಗಳಿಂದ ತುಂಬಲ್ಪಟ್ಟಿದ್ದು ಬೇರೆಯ ಎಲೆಕ್ಟ್ರಾನ್ ಒಳ ಪ್ರವೇಶಿಸದಂತೆ ತಡೆಯೊಡ್ಡುತ್ತಿರುವವೆಂದು ನಿರೂಪಿಸಿದನು. ಇನ್ನು ಮುಂದುವರೆದ ಡಿರಾಕ್ ಸಾಕಷ್ಟು ಪ್ರಬಲ ಪ್ರೋಟಾನ್ನಿಂದ , ಎಲೆಕ್ಟ್ರಾನ್ ಋಣಾತ್ಮಕ ಸ್ಥಿತಿಯನ್ನು ತಾಡಿಸಿದರೆ, ಅದರಿಂದ ಎಲೆಕ್ಟ್ರಾನ್ಗಳು ಹೊರದಬ್ಬಲ್ಪಟ್ಟು, ಎಲೆಕ್ಟ್ರಾನ್-ಪಾಸಿಟ್ರಾನ್ ಜೋಡಿ ದಕ್ಕುವುದೆಂದು ಅನುಮಾನಿಸಿದನು. ಹೀಗೆ ಅಸ್ತಿತ್ವಕ್ಕೆ ಬಂದ, ಧನಾವಿಷ್ಟ ಕಣ, ಎಲೆಕ್ಟಾನ್ನ ಪ್ರತಿಕಣವಾಗಿದ್ದು ಅದನ್ನು ಪಾಸಿಟ್ರಾನ್ ಎಂದು ಹೆಸರಿಸಿದನು. ಒಂದು ಎಲೆಕ್ಟ್ರಾನ್ ಮತ್ತೊಂದು ಪಾಸಿಟ್ರಾನ್ ಸನಿಹಕ್ಕೆ ಬಂದಾಗ ಅವೆರಡೂ ಪರಸ್ಪರ ವಿನಾಶಕ್ಕೊಳಗಾಗಿ, ಪ್ರೋಟಾನ್ (ಬೆಳಕಿನ ಕಣ) ಬಿಡುಗಡೆಗೊಳ್ಳುತ್ತದೆ. ಡಿರಾಕ್ನ ಈ ಎಲ್ಲಾ ಊಹೆಗಳನ್ನು 1932ರಲ್ಲಿ ಸಿ.ಡಿ. ಅ್ಯಂಡರ್ಸನ್ ಪ್ರಯೋಗಗಳಿಂದ ದೃಢಪಡಿಸಿದನಲ್ಲದೆ, ಎಲೆಕ್ಟ್ರಾನ್ ಮಾತ್ರವಲ್ಲ. ಪ್ರತಿಯೊಂದು ಕಣವೂ ತನ್ನದೇ ಆದ ಪ್ರತಿಕಣವನ್ನು ಹೊಂದಿರುವುದೆಂದು ಸಾಧಿಸಿದನು. 1930ರಲ್ಲಿ ಡಿರಾಕ್ ಪ್ರಿನ್ಸಿಪಲ್ಸ್ ಆಫ್ ಕ್ವಾಂಟಂ ಮೆಕ್ಯಾನಿಕ್ಸ್ ಪ್ರಕಟಿಸಿದನು, ಹಲವಾರು ಸಮಕಾಲೀನ ಭೌತಶಾಸ್ತ್ರಜ್ಞರು ಅವನನ್ನು ನ್ಯೂಟನ್ ಪ್ರತಿಭೆಗೆ ಸಮನಾದವನೆಂದು ಗೌರವಿಸಿದ್ದಾರೆ. 1933ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಫ್ರೆಡರಿಕ್ ಹಾಗೂ ಡಿರಾಕ್ ಜಂಟಿಯಾಗಿ ಪಡೆದರು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಷ್ರೋಡಿಂಗರ್, ಎರ್ವಿನ್ (1887-1961) 1933
Schrodinger , Erwin
ಆಸ್ಟ್ರೀಯಾ-ಭೌತಶಾಸ್ತ್ರ- ತರಂಗ ಬಲವಿಜ್ಞಾನದ (Wave Mechanics) ಸ್ಥಾಪಕ.
ಷ್ರೋಡಿಂಗರ್ ಶ್ರೀಮಂತ ಬಟ್ಟೆ ವ್ಯಾಪಾರಿಯ ಮಗ. ಖಾಸಗಿ ಶಿಕ್ಷಕನಿಂದ ,ತಂದೆಯಿಂದ ಪ್ರಾಥಮಿಕ ವಿದ್ಯಾಭ್ಯಾಸ ಗಳಿಸಿದ ಷ್ರೋಡಿಂಗರ್, ವಿಯೆನ್ನಾ ವಿಶ್ವವಿದ್ಯಾಲಯದಿಂದ 1910ರಲ್ಲಿ ಡಾಕ್ಟರೇಟ್ ಗಳಿಸಿ, ಅಲ್ಲಿಯೇ ಬೋಧಕ ಸಿಬ್ಬಂದಿಯಾದನು. ಮೊದಲ ಜಾಗತಿಕ ಯುದ್ದದಲ್ಲಿ ಷ್ರೋಡಿಂಗರ್ ಸೇನೆಗೆ ಸೇರಿದನು. ಆಗ ಆತನನ್ನು ನಿರ್ಜನ ದ್ವೀಪದ ಕಾವಲಿಗಿದ್ದ ಫಿûರಂಗಿ ದಳದೊಂದಿಗೆ ಸೇನೆಗೆ ನಿಯೋಜಿಸಲಾಯಿತು. ಇಲ್ಲಿಯೇ ಷ್ರೋಡಿಂಗರ್ ಭೌತಶಾಸ್ತ್ರದ ಮೂಲ ತತ್ತ್ವಗಳನ್ನು ಗ್ರಹಿಸಿದನು. 1920ರಿಂದ ತರಂಗ ಬಲವಿಜ್ಞಾನಕ್ಕೆ ತಳಹದಿಯಾದ ಹಲವಾರು ಲೇಖನಗಳನ್ನು ಪ್ರಕಟಿಸಿದನು. ಇದರಿಂದಾಗಿ 1927ರಲ್ಲಿ ಮಾಕ್ಸ್ ಪ್ಲಾಂಕ್ನಿಂದ ತೆರವಾದ ಸೈದ್ಧಾಂತಿಕ ಭೌತಶಾಸ್ತ್ರ ಪ್ರಾಧ್ಯಾಪಕ ಹುದ್ದೆ ಅಲಂಕರಿಸಿ ಬರ್ಲಿನ್ನಲ್ಲಿ ನೆಲೆಸಿದನು. 1937ರಲ್ಲಿ ಹಿಟ್ಲರ್ ಅಧಿಕಾರಕ್ಕೆ ಬಂದಾಗ, ತಕ್ಷಣವೇ ಈ ಹುದ್ದೆಗೆ ರಾಜಿನಾಮೆಯಿತ್ತನು. ಇಲ್ಲಿಂದ ಆಕ್ಸ್ಫರ್ಡ್ಗೆ ಹೋದನಾದರೂ, ತಾಯ್ನಾಡಿನ ಸೆಳೆತದಿಂದ ಪಾರಾಗಲಾರದೆ, 1936ರಲ್ಲಿ ಗ್ರಾಝ್ಗೆ ಮರಳಿದನು. 1938ರಲ್ಲಿ ಆಸ್ಟ್ರಿಯಾ, ಹಿಟ್ಲರ್ನ ವಶವಾಯಿತು. ಆಗ ಜೀವ ಉಳಿಸಿಕೊಳ್ಳಲು ಷ್ರೋಡಿಂಗರ್ ಡಬ್ಲಿನ್ಗೆ ಹೋದನು. ಐರ್ಲೆಂಡಿನ ಪ್ರಧಾನಮಂತ್ರಿ ಡೆ ವರೇರಾ, ಗಣಿತ ಪ್ರೇಮಿಯಾಗಿದ್ದು ಷ್ರೋಡಿಂಗರ್ಗಾಗಿಯೇ ಸ್ಥಾಪಿಸಿದ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ನಲ್ಲಿ ಕೆಲಸ ಪ್ರಾರಂಭಿಸಿದನು. ಇಲ್ಲಿ ಹದಿನೇಳು ವರ್ಷಗಳ ಕಾಲ ಫಲಪ್ರದ ಸಂಶೋಧನೆ ಮಾಡಿದನು. ಸೋವಿಯತ್ ರಷ್ಯಾ ವಿಯೆನ್ನಾದಿಂದ ಹೊರಹೋದ ಮೇಲೆಯೇ ಸ್ವದೇಶಕ್ಕೆ ಹಿಂದುರುಗಿದ ಷ್ರೋಡಿಂಗರ್ ಅಲ್ಪ ಕಾಲದಲ್ಲೇ ಅನಾರೋಗ್ಯದಿಂದ ಮರಣ ಹೊಂದಿದನು. 1924ರಲ್ಲಿ ಬ್ರೊಗ್ಲಿ ಮಂಡಿಸಿದಫಲಿತಾಂಶಗಳ ಬಗೆಗೆ ವಿಚಾರಿಸತೊಡಗಿದನು. ಇದರ ಫಲವಾಗಿ ಷ್ರೋಡಿಂಗರ್ ಯಾವುದೇ ಕಣದೊಂದಿಗೂ ಒಂದು ತರಂಗ ಇರುವುದೆಂದೂ, ಆದ್ದರಿಂದ ಅದರ ಲಕ್ಷಣಗಳು ಕಣ ಹಾಗೂ ತರಂಗಗಳೆರಡಕ್ಕೂ ಹೋಲುವುದೆಂದು ತಿಳಿಸಿದನು ಷ್ರೋಡಿಂಗರ್ ಮತ್ತು ಬ್ರೊಗ್ಲಿ ಇದಕ್ಕಾಗಿ ಹೊಸ ಬಗೆಯ ಸಮೀಕರಣ ರೂಪಿಸಿದರು. ಇದು ಕಣ ಸಿದ್ಧಾಂತ ಅನುಸರಿಸಿದ ಬೊಹ್ರ್ ಸಿದ್ಧಾಂತದಲ್ಲಿನ ಹಲವಾರು ಕೊರತೆಗಳನ್ನು ಸರಿ ಪಡಿಸಿತು. ಷ್ರೋಡಿಂಗರ್ ಹ್ಯಾಮಿಲ್ಟನ್ ವಿಧಾನದಲ್ಲಿ ಕಣದ ಚಲನೆಯನ್ನು ನೀಡಿ, ಅದನ್ನು ತರಂಗ ರೂಪದಲ್ಲಿ ಬರೆದನು. ಇದು ಷ್ರೋಡಿಂಗರ್ ಸಮೀಕರಣವೆಂದೂ ಹೆಸರಾಗಿದೆ. ಇದು ಪ್ರಯೋಗ ವೀಕ್ಷಿತಫಲಿತಾಂಶಗಳಿಗೆ ತಾಳೆಯಾಗುತ್ತದೆ. ಬೊಹ್ರ್ ಆಭಿಗೃಹೀತಗಳಿಲ್ಲದೆ (Assumptions)ಷ್ರೋಡಿಂಗರ್ ಸಮೀಕರಣ, ಪರಮಾಣುವಿನಲ್ಲಿರುವ ಎಲೆಕ್ಟ್ರಾನ್ನ ಚೈತನ್ಯದ ಅಳತೆಗಳನ್ನು ಸರಿಯಾಗಿ ನೀಡುತ್ತಿದ್ದಿತು. ಇದಕ್ಕಾಗಿ ಷ್ರೋಡಿಂಗರ್ ಡಿರಾಕ್ ಜೊತೆಗೆ 1933ರ ನೊಬೆಲ್ ಪ್ರಶಸ್ತಿ ಪಡೆದನು. 1926ರ ವೇಳೆ ಷ್ರೋಡಿಂಗರ್ ಸಿದ್ಧಾಂತ ,ತರಂಗ ಬಲವಿಜ್ಞಾನ ಎಂದು ಹೆಸರಾಯಿತು. ಇದು, ಈ ಮೊದಲೇ ಬಾರ್ನ್, ಜೋರ್ಡಾನ್ ಹಾಗೂ ಹೈಸೆನ್ಬರ್ಗ್ ನೀಡಿದ ಮಾತೃಕೆ ಗಣಿತಕ್ಕೆ ಸಮನಾದುದೆಂದು ಡಿರಾಕ್ ತೋರಿಸಿದನು. ಇವೆರಡು ಸಿದ್ಧಾಂತಗಳು, ಪೌಲಿ ಬಹಿಷ್ಕರಣ ತತ್ತ್ವದೊಂದಿಗೆ, ಸೇರಿಸಿ ಡಿರಾಕ್ ಕ್ವಾಂಟಂ ಬಲವಿಜ್ಞಾನವನ್ನು ಪೂರ್ಣಗೊಳಿಸಿದನು. ಕ್ವಾಂಟಂ ಬಲವಿಜ್ಞಾನದಿಂದ ನೂರಾರು ವೀಕ್ಷಿತ, ಪ್ರಯೋಗ ಲಭ್ಯ ವಿದ್ಯಾಮಾನಗಳಿಗೆ ಸಮರ್ಪಕ ವಿವರಣೆ ದಕ್ಕಿ ಆವರೆಗೆ ಅಜ್ಞಾತವಾಗಿದ್ದ ಎಷ್ಟೋ ಸಂಗತಿಗಳಿಗೆ ಮುನ್ಸೂಚನೆ ನೀಡಿತು. ಇಷ್ಟೆಲ್ಲ, ಆದರೂ ಷ್ರೋಡಿಂಗರ್ಗೆ ಕಣವನ್ನು ಅಲೆಯಂತೆ ಕಾಣುವುದು ಒಂದು ಬಗೆಯ ವೈರುಧ್ಯವೆನಿಸಿದ್ದಿತು. ಇದನ್ನು ಬಾರ್ನ್ ಪರಿಹರಿಸಿದನು. ಷ್ರೋಡಿಂಗರ್ ಸಮೀಕರಣದಲ್ಲಿನ ತರಂಗದ ಪಾರ (Amplitude) ಕಣದ ಸ್ಥಾನ ಸೂಚಿಯೆಂದು ತಿಳಿಸಿದನು. ಇದರಿಂದಾಗಿ ಎಲೆಕ್ಟ್ರಾನ್ನ ಸ್ಥಾನ ಹಾಗೂ ಆವಿಷ್ಟ ನಿರ್ದಿಷ್ಟ ಮೌಲ್ಯಗಳಾಗಿರದೆ, ಯಾವುದೇ ಸಮಯದಲ್ಲಿನ ಸಂಭಾವ್ಯತೆಗಳಾದವು. ಷ್ರೋಡಿಂಗರ್, ಬ್ರೊಗ್ಲಿ ಹಾಗೂ ಐನ್ಸ್ಟೀನ್ , ಬಾರ್ನ್ನ ಈ ಪರಿಕಲ್ಪನೆಯನ್ನು ತೀವ್ರವಾಗಿ ವಿರೋಧಿಸಿದರು. ಬಾರ್ನ್ ಪರಿಕಲ್ಪನೆ ಇಡೀ ಭೌತ ಜಗತ್ತನ್ನು ಕಾರ್ಯ ಕಾರಣ ಸಂಬಂಧಗಳಿಂದ ಹೊರಗೆಳೆದು ಸಂಭಾವ್ಯತೆಯ ಅನುಮಾನಕ್ಕಿಳಿಸಿದೆಯೆಂದು ಇವರ ವಾದವಾಗಿದ್ದಿತು. ಷ್ರೋಡಿಂಗರ್ ಯಾವಾಗಲೂ ಪಾದರಕ್ಷೆ ಧರಿಸಿ, ಹೆಗಲಿಗೆ ಚೀಲವೇರಿಸಿಕೊಂಡಿರುತ್ತಿದ್ದನು. ಇದರಿಂದ ನೊಬೆಲ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೋದಾಗ, ಸಭಾಂಗಣದೊಳಕ್ಕೆ ಹೋಗಲು ತೊಂದರೆ ಎದುರಿಸಬೇಕಾಯಿತು. ಷ್ರೋಡಿಂಗರ್ ಸದಾ ಹಸನ್ಮುಖಿಯೂ , ವಿದ್ಯಾರ್ಥಿಗಳ ನೆಚ್ಚಿನ ಗುರುವೂ ಆಗಿದ್ದನು. ಈತನಿಗೆ ವ್ಯಾಕರಣ ಹಾಗೂ ಜರ್ಮನ್ ಕಾವ್ಯ ಅಚ್ಚು ಮೆಚ್ಚಿನಗಳಾಗಿದ್ದವು. ವಾಟ್ ಈಸ್ ಲೈಫ್ಕೃತಿಯನ್ನು ಸಹ ಷ್ರೋಡಿಂಗರ್ ರಚಿಸಿದ್ದಾನೆ. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಚಾಡ್ವಿಕ್ , ಸರ್ ಜೇಮ್ಸ್ (1891-1974 ) 1935
Chadwick, Sir James
ಬ್ರಿಟಿನ್-ಭೌತಶಾಸ್ತ್ರ-ನ್ಯೂಟ್ರಾನ್ ಕಣವನ್ನು ಕಂಡು ಹಿಡಿದಾತ.
1911ರಲ್ಲಿ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಿಂದ ಚಾಡ್ವಿಕ್ ಭೌತಶಾಸ್ತ್ರದ ಪದವಿ ಗಳಿಸಿ ಅಲ್ಲೇ ರುದರ್’ಫೋರ್ಡ್ನ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ಮುಂದುವರಿಸಿದನು. 1913ರಲ್ಲಿ ಸಂಶೋಧನ ವೇತನ ಪಡೆಯುವುದರ ಮೂಲಕ ಬರ್ಲಿನ್ನಲ್ಲಿ ಗೈಗರ್ ಹ್ಯಾನ್ಸ್ ಜೊತೆ ಕೆಲಸ ಮಾಡುವ ಅವಕಾಶ ಚಾಡ್ವಿಕ್ಗೆ ಲಭ್ಯವಾಯಿತು. 1914ರಲ್ಲಿ ಜಾಗತಿಕ ಯುದ್ದ ಪ್ರಾರಂಭವಾಗಿ, ಚಾಡ್ವಿಕ್ನ ವೇತನ ನಿಂತು ಹೋಗಿ ಮುಂದೆ ನಾಲ್ಕು ವರ್ಷಗಳ ಕಾಲ ಕುದುರೆಯ ಲಾಯಕ್ಕೆ ಲಗತ್ತಾದ ಕೋಣೆಯೊಂದರಲ್ಲಿ ದುರ್ದೆಸೆಯಲ್ಲಿ ಕಾಲ ಕಳೆಯುವಂತಾಯಿತು. ಇಂತಹ ಸ್ಥಿತಿಯಲ್ಲೂ, ಚಾಡ್ವಿಕ್ ನೆರ್ನ್ಸ್ಟ್ ಹಾಗೂ ಇನ್ನಿತರ ಬೆಂಬಲದಿಂದಾಗಿ ಸಂಶೋಧನೆ ವiುಂದುವರೆಸಿದನು. 1915ರ ವೇಳೆಗೆ ರುದರ್’ಫೋರ್ಡ್ ಕೇಂಬ್ರಿಜ್ಗೆ ಹೋಗಿದ್ದನು. ಚಾಡ್ವಿಕ್ ಮತ್ತೊಮ್ಮೆ ರುದರಫೋರ್ಡ್ ಮಾರ್ಗದರ್ಶನದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದನು. ಮುಂದಿನ 16 ವರ್ಷಗಳ ಕಾಲ ಚಾಡ್ವಿಕ್, ರುದರ್’ಫೋರ್ಡ್’ನ ಪ್ರಧಾನ ಸಂಶೋಧಕ ಸಂಗಡಿಗನಾಗಿ ಬೆಳೆದನು. ಚಾಡ್ವಿಕ್ ಹಾಗೂ ರುದರ್’ಫೋರ್ಡ್ ಜೋಡಿ ಆಲ್ಫಾ ಕಣಗಳನ್ನು ತಾಡಿಸಿ ಧಾತುಗಳನ್ನು ಪಾರವಿಕಲ್ಪಗೊಳಿಸುವ (Transmutation) ಅಧ್ಯಯನ ಪ್ರಾರಂಭಿಸಿದರು. ಚಾಡ್ವಿಕ್ , ರುದರ್’ಫೋರ್ಡ್ ಜೊತೆ ಸೇರಿ ಹೀಲಿಯಂ ಧಾತುವಿನ ಬೀಜದ ಬಗೆಗೆ ವಿಶೇಷ ಅಧ್ಯಯನ ನಡೆಸಿದನು. ಹೀಲಿಯಂನ ಬೀಜ ಆಲ್ಫಾ ಕಣವೆಂದು ವೈಜ್ಞಾನಿಕ ರಂಗದಲ್ಲಿ ಪ್ರಚಲಿತ. ಇತರ ಧಾತುವಿನ ಭಾರದ ಬೀಜಗಳಿಂದಾಗಿ, ಆಲ್ಫಾ ಕಣಗಳನ್ನು ಚದುರಿಸುವ ವಿಧಾನ ಅಭ್ಯಸಿಸಿದ ಚಾಡ್ವಿಕ್, ಆಲ್ಫಾ ಕಣದ ಧನಾವೇಶ ಮೌಲ್ಯವನ್ನು ನಿರ್ಧರಿಸಿದನು. ಹಗುರವಾದ ಧಾತುಗಳನ್ನು ಆಲ್ಫಾ ಕಣಗಳಿಂದ ತಾಡಿಸಿ, ಅವು ಕೃತಕವಾಗಿ ಶಿಥಿಲಗೊಳ್ಳುವಂತೆ ಮಾಡಿ ಚಾಡ್ವಿಕ್ ನಾನಾ ಪ್ರಯೋಗಗಳನ್ನು ಅಭ್ಯಸಿಸಿದನು. 1932ರಲ್ಲಿ ಚಾಡ್ವಿಕ್ ಪರಮಾಣುವಿನ ಬೀಜದಲ್ಲಿ ಧನ ಕಣವಾದ ಪ್ರೋಟಾನ್ ಜೊತೆಗೆ, ವಿದ್ಯುದಾವಿಷ್ಟತೆಯಿಲ್ಲದ ಆದರೆ ಅದರಷ್ಟೇ ದ್ರವ್ಯರಾಶಿಯಯ ಮತ್ತೊಂದು ಕಣವಿರುವುದೆಂದೂ, ಮುನ್ನುಡಿದು ಅದನ್ನು ನ್ಯೂಟ್ರಾನ್ ಎಂದು ಹೆಸರಿಸಿದನು. 1920ರಲ್ಲಿ ರುದರ್’ಫೋರ್ಡ್ ಸಹ ಈ ನಿಟ್ಟಿನಲ್ಲಿ ಸಂಶಯಿಸಿದ್ದನು. ತನ್ನ ಅನುಮಾನವನ್ನು ಖಚಿತಪಡಿಸಿಕೊಳ್ಳಲು, ಚಾಡ್ವಿಕ್ ತನ್ನವೇ ಆದ ಪ್ರಯೋಗಗಳನ್ನು ಯೋಜಿಸಿದನು,. ಪ್ರಯೋಗಗಳ ಫಲಿತಾಂಶ ಚಾಡ್ವಿಕ್ನ ಊಹೆಗಳು ನಿಜವೆಂದು ಸ್ಪಷ್ಟಗೊಳಿಸಿದವು. ನ್ಯೂಟ್ರಾನ್ ಅನಾವರಣ, ಪರಮಾಣು, ಬೈಜಿಕ ಅಧ್ಯಯನದಲ್ಲಿ ಮಹತ್ವದ ಮೈಲಿಗಲ್ಲಾಯಿತು. 1935ರಲ್ಲಿ ನ್ಯೂಟ್ರಾನ್ ಅನಾವರಣಗೊಳಿಸಿದ್ದಕ್ಕಾಗಿ ಚಾಡ್ವಿಕ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು, ಇದಾದ ಕೆಲ ಕಾಲದಲ್ಲೇ ಸ್ಲೈಕ್ಲೋಟ್ರಾನ್ ನಿರ್ಮಾಣ ಕುರುತಾದಂತೆ ಚಾಡ್ವಿಕ್ ಹಾಗೂ ರುದರ್’ಫೋರ್ಡ್ ಮಧ್ಯೆ ಸೈದ್ಧಾಂತಿಕ ಘರ್ಷಣೆ ಉಂಟಾಯಿತು. ಸ್ಲೈಕ್ಲೋಟ್ರಾನ್ ಪರ ಗುಂಪನ್ನು ಚಾಡ್ವಿಕ್ ಪ್ರತಿನಿಧಿಸಿದರೆ, ರುದರ್ಫೋರ್ಡ್ ಅದನ್ನು ನಖಶಿಖಾಂತ ವಿರೋಧಿಸಿದನು. ಇದರಿಂದಾಗಿ ಚಾಡ್ವಿಕ್ ಲಿವರ್ಪೂಲ್ಗೆ ತೆರಳಿ ಬ್ರಿಟನ್ನ ಮೊದಲ ಸೈಕ್ಲೋಟ್ರಾನ್ನ ನಿರ್ಮಾಣದ ನೇತೃತ್ವ ವಹಿಸಿದನು . ಜಾಗತಿಕ ಯುದ್ದ ಪ್ರಾರಂಭವಾದಾಗ ಪ್ರತಿ ಸ್ಪರ್ಧಿಯಾದ ಜರ್ಮನಿ ಬೈಜಿಕಾಸ್ತ್ರ (Nuclear Weapon) ತಯಾರಿಸುವ ಮೊದಲೇ ಬ್ರಿಟನ್ ತಯಾರಿಸುವಂತೆ ಮಾಡುವ ಹೊಣೆ ಚಾಡ್ವಿಕ್ ಹೆಗಲ ಮೇಲೆ ಬಿದ್ದಿತು. ಇಂಗ್ಲೆಂಡ್, ಜರ್ಮನಿಯ ಸನಿಹದಲ್ಲಿರುವುದಎಂದ, ಇಂತಹ ಯೋಜನೆ ಸದಾ ಭಯದ ನೆರಳಿನಲ್ಲೇ ಜರುಗಬೇಕಾಗಿರುವುರಿಂದ ಬೈಜಿಕಾಸ್ತ್ರ ತಯಾರಿಕೆಯನ್ನು ಅಸಂಸಂಗಳಲ್ಲಿ ಕೈಗೊಳ್ಳುವಂತೆ ನಿರ್ಧರಿಸಲಾಯಿತು,. ಅಸಂಸಂದಲ್ಲಿ ಚಾಡ್ವಿಕ್ ಪರಮಾಣು ಅಸ್ತ್ರ ತಯಾರಿಕೆಗೆ ಭಾರಿ ಯಶಸ್ವಿಯಾದ ಚಾಲನೆ ನೀಡಿ ಅದು ಕಾರ್ಯಗತವಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದನು. ಜಾಗತಿಕ ಯುದ್ದದ ನಂತರ ತಾಯ್ನಾಡಿಗೆ ಮರಳಿದ ಚಾಡ್ವಿಕ್, ಪರಮಾಣು ನೀತಿ ಕುರಿತಂತೆ ಬ್ರಿಟಿಷ್ ಸರ್ಕಾರಕ್ಕೆ ಸಲಹೆಗಾರನಾಗಿದ್ದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಅ್ಯಂಡರ್ಸನ್ ಕಾರ್ಲ್ ಡೇವಿಡ್ (1905-91) - 1936
Anderson ,Philip Warren (PHY.)
ಅಸಂಸಂ-ಭೌತಶಾಸ್ತ್ರ- ಪಾಸಿಟ್ರಾನ್ ಹಾಗೂ ಮ್ಯೂಯಾನ್ ಮೂಲ ಕಣಗಳನ್ನು ಕಂಡುಹಿಡಿದಾತ.
ಆ್ಯಂಡರ್ಸನ್ ಅಸಂಸಂಗೆ ವಲಸೆ ಬಂದ ಸ್ವೀಡಿಷ್ ದಂಪತಿಗಳ ಏಕೈಕ ಮಗ. ಲಾಸ್ಏಂಜೆಲ್ಸ್ನಲ್ಲಿ ಶಿಕ್ಷಣ ಪಡೆದು ಕ್ಯಾಲಿಪೆÇೀರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೊನೆಯ ತನಕ ಕಾರ್ಯನಿರ್ವಹಿಸಿದಾತ. ಡಿರಾಕ್ 1928ರಲ್ಲಿ ಭವಿಷ್ಯನುಡಿದಿದ್ದ ಪಾಸಿಟ್ರಾನ್ ಕಣವನ್ನು 1932ರಲ್ಲಿ ಆ್ಯಂಡರ್ಸನ್ ಆಕಸ್ಮಿಕವಾಗಿ ಆವಿಷ್ಕರಿಸಿದನು. ಇದರ ಪರಿಣಾಮವಾಗಿ ಡಿರಾಕ್ನ ಸಾಪೇಕ್ಷ ಕ್ವಾಂಟಂ ಬಲವಿಜ್ಞಾನ ಸಾರ್ವತ್ರಿಕ ಮನ್ನಣೆ ಪಡೆಯಿತಲ್ಲದೆ ಅವನ ಎಲೆಕ್ಟ್ರಾನ್ ಸಿದ್ಧಾಂತ ಪುರಸ್ಕೃತಗೊಂಡಿತು. ಡಿರಾಕ್ ಮುನ್ನುಡಿದಂತೆ ಪ್ರತಿಕಣಗಳ ಅಸ್ತಿತ್ವ ನಿಜವೆಂದು ಒಪ್ಪಲಾಯಿತು. ವಿ.ಎಫ್.ಹೆಸ್ ಜೊತೆಗೆ ಹಂಚಿಕೊಂಡಂತೆ ಆ್ಯಂಡರ್ಸನ್ 1936ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. ವಿಶ್ವ ಕಿರಣಗಳ ಅಧ್ಯಯನ ಮಾಡುತ್ತಿದ್ದ ,ಆ್ಯಂಡರ್ಸನ್ ಪ್ರಯೋಗಗಳಲ್ಲಿ ದೊರೆತ ವಿಲಕ್ಷಣ ಫಲಿತಾಂಶಗಳನ್ನು ವಿಶ್ಲೇಷಿಸಿ , ದ್ರವ್ಯದಲ್ಲಿ ಎಲೆಕ್ಟ್ರಾನ್ಗೆ ಸಮನಾದ ಆದರೆ ಧನ ಆವಿಷ್ಟದ ಕಣಗಳನ್ನು ಗುರುತಿಸಿದನು. ಇವೇ ಪಾಸಿಟ್ರಾನ್ಗಳು, ಅ್ಯಂಡರ್ ಸನ್ ಈ ಅನಾವರಣವನ್ನು ಒಂದೇ ವರ್ಷದ ನಂತರ ಬ್ಲಾಕೆಟ್ ಹಾಗೂ ಓಖಿಯಾಲಿನಿ ಖಚಿತಗೊಳಿಸಿದರು.
1932ರಲ್ಲಿ ಆ್ಯಂಡರ್ಸನ್ ,ವಿಶ್ವ ಕಿರಣಗಳನ್ನು ಅಧ್ಯಯನ ಮಾಡುವಾಗಲೇ ಎಲೆಕ್ಟ್ರಾನ್ನ 130ರಷ್ಟು ಭಾರವಾದ, ಎಲೆಕ್ಟ್ರಾನ್ನಷ್ಟು I್ಮಣ ಮೌಲ್ಯವುಳ್ಳ ಪೈ ಮೆಸಾನ್ ಅಥವಾ ಪೈಯಾನ್ ಎನ್ನುವ ಮೂಲ ಕಣವನ್ನು ಗುರುತಿಸಿದನು. ಇದರಿಂದ ಯುಕೋವನ ಪ್ರಬಲ ಬೈಜಿಕ ಬಲ (Sಣಡಿoಟಿg ಓuಛಿಟeಚಿಡಿ ಈoಡಿಛಿe) ಸಂವಹನೆಯ ಸಿದ್ಧಾಂತಕ್ಕೆ ಪುರಾವೆ ಒದಗಿಸಿದಂತಾಯಿತು. ಆ್ಯಂಡರಸನ್ನ ಮುಂದುವರೆದ ಪ್ರಯೋಗಗಳಿಂದ ಅವನು ಗುರುತಿಸಿದ್ದು ಪೈ ಮೆಸಾನ್ ಅಲ್ಲವೆಂತಲೂ ಅದು ಮತ್ತೊಂದು ಕಣ ಮ್ಯು ಮೆಸಾನ್ ಎಂತಲೂ ಸಿದ್ಧವಾಯಿತು. ನಿಜವಾದ ಪೈ-ಮೆಸಾನ್ನನ್ನು 1947ರಲ್ಲಿ ಪೆÇವೆಲ್ ಮೊದಲ ಬಾರಿಗೆ ಪತ್ತೆ ಹಚ್ಚಿದನು. ಎಲೆಕ್ಟ್ರಾನ್ ಹಾಗೂ ಪಾಸಿಟ್ರಾನ್ ಸಮಾನ ಸಾಮರ್ಥ್ಯದ ಪ್ರತಿಕಣಗಳಾಗಿರುವುದರಿಂದ , ಒಂದನ್ನೊಂದು ತಾಗಿದ ತಕ್ಷಣ ವಿನಾಶಗೊಂಡು ಚೈತ್ಯ ಬಿಡುಗಡೆಯಾಗುತ್ತದೆ. ಆದ್ದಎಂದ ಪಾಸಿಟ್ರಾನ್ ಅಪರೂಪಿ ಹಾಗೂ ಮುಕ್ತ ಎಲೆಕ್ಟ್ರಾನ್ ಈ ವಿಶ್ವದಲ್ಲಿ ಅಸ್ಥಿರವೆಂದು ಈಗ ಭಾವಿಸಲಾಗಿದೆ. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಡೇವಿಸನ್, ಕ್ಲಿಂಟನ್ ಜೋಸೆಫ್ (1881-1958 ) 1937
Davisson , Clinton Joseph (PHY.)
ಅಸಂಸಂ -ಭೌತಶಾಸ್ತ್ರ- ಪ್ರಯೋಗಗಳಿಂದ ಸ್ಪಟಿಕಗಳಿಂದಾಗುವ ಎಲೆಕ್ಟ್ರಾನ್ ವಿವರ್ತನ (Diffraction)ಕಂಡು ಹಿಡಿದಾತ.
ಚಿಕಾಗೋದಿಂದ ಪದವಿ ಪಡೆದ ಡೇವಿಸನ್ ಪ್ರಿನ್ಸ್ಟನ್ನಿಂದ ಪಿ.ಎಚ್.ಡಿ. ಗಳಿಸಿದನು. 1911ರಿಂದ 1917ರವರೆಗೆ ಡೇವಿಸನ್ ಕಾರ್ನೆಗಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೆಲಸ ಮಾಡಿದನು. ಮುಂದೆ ಕಾರ್ನೆಗಿಯನ್ನು ತೊರೆದು ಯುದ್ದಕಾಲದ ನೇಮಕಾತಿಗಾಗಿ, ಆಗ ವೆಸ್ಟರ್ನ್ ಎಲೆಕ್ಟ್ರಾನಿಕ್ ಕಂಪನಿ ಲ್ಯಾಬೋರೇಟರಿ ಎಂದು ಹೆಸರಾಗಿದ್ದ ಈಗಿನ ಬೆಲ್ ಟೆಲಿಫೋನ್ ಲ್ಯಾಬೋರೇಟರಿಯನ್ನು ಸೇರಿ, 1945ರವರೆಗೆ ಅಲ್ಲಿಯೇ ಉಳಿದನು. ಡೇವಿಸನ್ ಹಾಗೂ ಜರ್ಮರ್ ಪ್ರಯೋಗಗಳಿಂದ , ಬ್ರೊಗಿಲಿಯ ವಾದದಂತೆ ಬೆಳಕಿನ ಕಣಗಳು ಅಲೆಗಳಂತೆಯೂ ವರ್ತಿಸುವುದು ಖಚಿತಗೊಂಡಿದ್ದಿತು. ಈ ಆಧಾರದ ಮೇಲೆ ಡಿರಾಕ್ ಹಾಗೂ ಷ್ರೌಡಿಂಜರ್ ಎಲೆಕ್ಟ್ರಾನ್ಗಳಿಗೂ ಕಣ ಹಾಗೂ ಅಲೆಗಳ ದ್ವೈತ ಗುಣಗಳಿರುವುದೆಂದು ಸೂಚಿಸಿದ್ದರು. ಡೇವಿಸ್ನ ಹಾಗೂ ಜರ್ಮರ್ ಇದಕ್ಕೆ ಪ್ರಾಯೋಗಿಕ ಸಾಕ್ಷ್ಯ ಒದಗಿಸಿದರು. ಇದು ಆಧುನಿಕ ಭೌತಶಾಸ್ತ್ರದ ದೃಷ್ಟಿಗೆ ಕ್ರಾಂತಿಕಾರಕ ಬದಲಾವಣೆ ನೀಡಿತು. ಡೇವಿಸನ್ ಹಾಗೂ ಜರ್ಮರ್ ರ ಈ ಸಂಶೋಧನೆ ಭಾಗಶ: ಆಕಸ್ಮಿಕವಾಗಿ ಹಾಗೂ ಭಾಗಶ: ಸನ್ನದು ವಿವಾದದ ಅಂಗವಾಗಿ ಹೊರಬಂದಿತು. ವೆಸ್ಟರ್ನ್ ಎಲೆಕ್ಟ್ರಿಕ್ ಕಂಪನಿಯ ಪರವಾಗಿ ಡೆ ಫಾರೆಸ್ಟ್ ರೂಪಿಸಿದ್ದ, ಆಕ್ಸೈಡ್ ಲೇಪಿತ ತಂತು ಹೊಂದಿದ್ದ ಮೂರು ತಂತುಗಳ ನಿರ್ವಾತ ಕವಾಟಕ್ಕೆ ಸನ್ನದು ಲಭಿಸಿದ್ದಿತು. ಆದರೆ ಇದೇ ಸಮಯಕ್ಕೆ ಜನರಲ್ ಎಲೆಕ್ಟ್ರಿಕ್ ಕಂಪನಿಯ ಲ್ಯಾಂಗ್ಮ್ಯೂಯಿರ್, ಟಂಗಸ್ಟನ್ ತಂತು ಬಳಸಿ, ಇದೇ ಬಗೆಯ ಸಾಧನ ನಿರ್ಮಿಸಿದ್ದನು. ಈ ಎರಡು ಕಂಪೆನಿಗಳ ಮಧ್ಯೆ ಈ ಸಾಧನವನ್ನು ರೂಪಿಸಿದ, ಸನ್ನದು ಯಾರಿಗೆ ದಕ್ಕಬೇಕೆನ್ನುವ ವಿಚಾರದಲ್ಲಿ ವಿವಾದ ತಲೆದೋರಿ ನ್ಯಾಯಾಲಯದ ಕಟ್ಟೆ ಹತ್ತಿ, ಒಂದು ದಶಕಕ್ಕೂ ಹೆಚ್ಚು ಕಾಲ ವ್ಯಾಜ್ಯ ಜರುಗಿತು. ಈ ವ್ಯಾಜ್ಯವನ್ನು ಒಂದು ಅಂತಿಮ ಘಟ್ಟಕ್ಕೆ ತರಬೇಕೆನ್ನುವ ದೃಷ್ಟಿಯಲ್ಲಿ ಡೇವಿಸನ್ ಹಾಗೂ ಜರ್ಮರ್ ಆಕ್ಸೈಡ್ ಲೇಪಿತ ಪ್ಲಾಟಿನಂ ಫಲಕವನ್ನು ಅಯಾನ್’ಗಳಿಂದ ತಾಡಿಸಿ ಉತ್ಸರ್ಜನೆಯನ್ನು ಅಳೆದರು. ನಳಿಕೆಯಲ್ಲಿರುವ ಆಮ್ಲಜನಕದ ಉಪಸ್ಥಿತಿಯಿಂದಾಗಿ ಎಲೆಕ್ಟ್ರಾನ್ ಉತ್ಸರ್ಜನೆಯ ಮೇಲೆ ಯಾವುದೇ ಪರಿಣಾಮಗಳಾಗುವುದಿಲ್ಲ ಎನ್ನುವುದನ್ನು ತೋರಿಸುವುದರ ಮೂಲಕ ಲ್ಯಾಂಗ್ಮೂಯಿರ್ನ ನಳಿಕೆ ತಮ್ಮ ಕಂಪನಿಯ ನಳಿಕೆಗಿಂತ ಭಿನ್ನವಲ್ಲ ಎನ್ನುವುದನ್ನು ತೋರಿಸುವುದೇ ಅವರ ಉದ್ದೇಶವಾಗಿದ್ದಿತು. ಡೇವಿಸನ್ ಹಾಗೂ ಜರ್ಮರ್ರ ಈ ಪ್ರಯೋಗಗಳ ಫಲಿತಾಂಶದಿಂದಾಗಿ, ಸರ್ವೋಚ್ಛ ನ್ಯಾಯಾಲಯ ವೆಸ್ಟರ್ನ್ ಎಲೆಕ್ಟ್ರಿಕ್ ಕಂಪನಿಯ ಪರವಾಗಿ ತೀರ್ಪು ಜಾರಿಗೊಳಿಸಿತು. ಇದೇ ಸಮಯದಲ್ಲಿ ಡೇವಿಸನ್ ಹಾಗೂ ಸಿ.ಎಚ್.ಕುನ್ಸ್ಮನ್, ಎಲೆಕ್ಟ್ರಾನ್ ತಾಡನದಡಿಯಲ್ಲಿ, ಎಲೆಕ್ಟ್ರಾನ್ ಉತ್ಸರ್ಜನೆಯ ಹಾಗೂ ನಮನದ ಅಧ್ಯಯನಕ್ಕೆ ಪ್ರಾರಂಭಿಸಿದರು. ಈ ಅಧ್ಯಯನದಲ್ಲಿ ಕೆಲವು ಎಲೆಕ್ಟ್ರಾನಗಳು ಸಂಪಾತ (Incident) ಬಿಂದುವಿನ ಬದಿಗೆ ವಿಮುಖಗೊಳ್ಳುವುದು ತಿಳಿಯಿತು. 1925ರಲ್ಲಿ ದ್ರವ ವಾಯುವಿನ ಶೀಷೆಯೊಂದು ಸಿಡಿದು ಡೇವಿಸನ್ ಪ್ರಯೋಗಕ್ಕೆ ಬಳಸುತ್ತಿದ್ದ ನಿಕ್ಕಲ್ ಮೇಲೈಯನ್ನು ಉತ್ಕರ್ಷಿಸಿತು (Oxidised). ಇದನ್ನು ಬಿಸಿಮಾಡಿ ಡೇವಿಸನ್ ಸ್ವಚ್ಛಗೊಳಿಸಿದಾಗ ಅಚ್ಚರಿಯೊಂದು ಕಾದಿತ್ತು. ಕೆಲವು ನಮನ ಹೊಂದಿ ವಿಶಿಷ್ಟ ರೀತಿಯಲ್ಲಿ ಚದುರುತ್ತಿರುವವೆಂದು ವಿವರಿಸಿದರು. ಕೆಲವು ಕೋನಗಳಲ್ಲಿ ಈ ನಿಕ್ಕಲ್ ಫಲಕ ಎಲೆಕ್ಟ್ರಾನ್ಗಳ ಗರಿಷ್ಟ ಚದುರಿಕೆಯನ್ನು ದಾಖಲಿಸಿದ್ದಿತು. 1926ರಲ್ಲಿ ಆಕ್ಸ್ಫರ್ಡ್ಗೆ ಭೇಟಿ ನೀಡಿದ ಡೇವಿಸನ್ಗೆ ತಾನು ಬೆಳಕು ಅಲೆಯಂತೆಯೂ ವರ್ತಿಸುವುದೆಂಬ ಬ್ರೊಗ್ಲಿಲಿಯ ವಾದ ತಿಳಿಯಿತು. ತತಕ್ಷಣವೇ ಡೇವಿಸನ್ಗೆ , ತಾನು ಎಲೆಕ್ಟ್ರಾನ್ನ ಗರಿಷ್ಟ ವಿವರ್ತನ ವೀಕ್ಷಿಸಿದ್ದು ಅರಿವಾಯಿತು. 1927ರಲ್ಲಿ ಜರ್ಮರ್ರ ಜೊತೆ ಸೇರಿ ಡೇವಿಸನ್ ಪ್ರಯೋಗಗಳ ಮೂಲಕ ಬೆಳಕು ಅಲೆಯಂತೆ ವರ್ತಿಸುವುದನ್ನು ಖಚಿತಪಡಿಸಿದನು. ಇದರಿಂದ ಲೋಹ ಸ್ಪಟಿಕಗಳಲ್ಲಿನ ಪರಮಾಣು ಜೋಡಣೆಯಿಂದ ಎಲೆಕ್ಟ್ರಾನ್ಗಳು ಪ್ರತಿಫಲನಗೊಂಡು ವಿವರ್ತನೆಗೊಂಡಿರುವುದು ಸಾಬೀತಾಯಿತು. ಇದಕ್ಕಾಗಿ 1937ರಲ್ಲಿ, ಇದೇ ಬಗೆಯ ವಿದ್ಯಾಮಾನವನ್ನು ಹೊರಗೆಡಹಿದ್ದ ಜೆ.ಪಿ. ಥಾಮ್ಸನ್ ಜೊತೆ ಡೇವಿಸನ್ ನೊಬೆಲ್ ಪ್ರಶಸ್ತಿ ಪಡೆದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಥಾಮ್ಸನ್, ಸರ್ ಜಾರ್ಜ್ ಪಗೆಟ್ (ಜೆ.ಪಿ.ಥಾಮ್ಸನ್) (1892-1975) 1937
Thomson , Sir George Paget
ಬ್ರಿಟನ್-ಭೌತಶಾಸ್ತ್ರ-ಸ್ಪಟಿಕಗಳಲ್ಲಿ ಪರಮಾಣುಗಳಿಂದ ಎಲೆಕ್ಟ್ರಾನ್ಗಳು ವ್ಯತಿಕರಣಗೊಳ್ಳುವುದನ್ನು ಪ್ರಯೋಗಗಳಿಂದ ಅನಾವರಣಗೊಳಿಸಿದಾತ.
ಜೆ.ಪಿ.ಥಾಮ್ಸನ್ ಖ್ಯಾತ ವಿಜ್ಞಾನಿ ಜೆ.ಜೆ. ಥಾಮ್ಸನ್ನ ಏಕೈಕ ಪುತ್ರ. ಮೊದಲನೆ ಜಾಗತಿಕ ಯುದ್ದದಲ್ಲಿ ಭಾಗವಹಿಸಿದ ಥಾಮ್ಸನ್ ಭೂ ಪಡೆಯಲ್ಲಿದ್ದು ಅಲ್ಪದರಲ್ಲೇ ಪ್ರಾಣಾಪಾಯದಿಂದ ತಪ್ಪಿಸಿಕೊಂಡನು. 1915ರಲ್ಲಿ ರಾಯಲ್ ಫೆ್ಲೈಯಿಂಗ್ ಕಾಪ್ರ್ಸ್ಗೆ ಸೇರಿ, ವಿಮಾನಗಳ ಸ್ಥಿರತೆಯ ಅಧ್ಯಯನದ ತಂಡದಲ್ಲಿದ್ದನು. 1919ರಲ್ಲಿ ಕೇಂಬ್ರಿಜ್ಗೆ ಹಿಂದಿರುಗಿ ತನ್ನ ತಂದೆಯ ಪ್ರಯೋಗಾಲಯದಲ್ಲಿ ವಿಕಿರಣಗಳ ಬಗ್ಗೆ ಅಧ್ಯಯನ ನಡೆಸಿದನು. ನಂತರ ಅಬೆರ್ಡ್ನ್ ವಿಶ್ವವಿದ್ಯಾಲಯಕ್ಕೆ ಸೇರಿ, ಮೂವತ್ತನೇ ವಯಸ್ಸಿನಲ್ಲಿ ಪ್ರಾಧ್ಯಾಪಕನಾದನು. 1927ರಲ್ಲಿ ತನ್ನ ವಿದ್ಯಾರ್ಥಿಯಾಗಿದ್ದ ಅಲೆಕ್ಸ್ ರೀಡ್ನೊಂದಿಗೆ ತೆಳುವಾದ ಲೋಹದ ರೇಕುಗಳ (Foil) ಮೂಲಕ ಹಾದು ಹೋಗುವ ಎಲೆಕ್ಟ್ರಾನ್ಗಳು ವ್ಯತಿಕರಣ (Interference) ಹೊಂದುವುದನ್ನು ಗುರುತಿಸಿದನು. ಇದು ಬ್ರೊಗ್ಲಿ ಈ ಮೊದಲೇ ಹೇಳಿದಂತೆ ಎಲೆಕ್ಟ್ರಾನ್ನ ಕಣ ಹಾಗೂ ತರಂಗದ ಸ್ವಭಾವವನ್ನು ಖಚಿತಪಡಿಸುತ್ತಿದ್ದಿತು. ಡೇವಿಸನ್ ಸ್ವತಂತ್ರವಾಗಿ, ಲೋಹದ ರೇಕುಗಳ ಬದಲಿಗೆ ನಿಕಲ್ ಸ್ಪಟಿಕ ಬಳಸಿ, ಇದೇ ಫಲಿತಾಂಶಗಳನ್ನು ಪಡೆದಿದ್ದನು. 1937ರಲ್ಲಿ ಥಾಮ್ಸನ್ ಹಾಗೂ ಡೇವಿಸನ್ ನೊಬೆಲ್ ಪ್ರಶಸ್ತಿ ಪಡೆದರು. 1930ರಲ್ಲಿ ಥಾಮ್ಸನ್ ಲಂಡನ್ನ ಇಂಪೀರಿಯಲ್ ಕಾಲೇಜನ್ನು ಸೇರಿದನು. ಲೀಥಿಯಂ ಧಾತುವಿಗೆ ಎರಡು ಸಮಸ್ಥಾನಿಗಳಿವೆಯೆಂದು (Isotopes) ಅನಾವರಣಗೊಳಿಸಿದನು. ಥಾಮ್ಸನ್ 1939ರಲ್ಲಿ ಜರ್ಮನಿ ಯುರೇನಿಯಂ ಪರಮಾಣು ಅಸ್ತ್ರ ತಯಾರಿಸುವ ಸಾಧ್ಯತೆಯನ್ನು ಮನಗಂಡನು. ಥಾಮ್ಸನ್ ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಬ್ರಿಟನ್ ಸರ್ಕಾರಕ್ಕೆ ಪರಮಾಣು ಅಸ್ತ್ರಗಳ ಬಗ್ಗೆ ಸಲಹೆ ನೀಡಲು ನಿಯೋಜಿತಗೊಂಡ ಮೌಡ್ ಸಮಿತಿಯ ಮುಖ್ಯಸ್ಥನಾದನು. ಜುಲೈ 1941ರಲ್ಲಿ ಈ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿ, ಪ್ರತ್ಯೇಕಿಸಿದ ಯುರೇನಿಯಂ-235 ಬಳಸಿ ಪರಮಾಣು ಅಸ್ತ್ರ ತಯಾರಿಸಬೇಕೆಂದು ಶಿಫಾರಸ್ಸು ಮಾಡಿತು. ಇದರ ಕಾರ್ಯ ಸಮನ್ವತೆಯ ಹೊಣೆಯನ್ನು ಚಾಡ್ವಿಕ್ಗೆ ವಹಿಸಲಾಯಿತು. ಮುಂದೆ ಥಾಮ್ಸನ್ ಕೆನಡಾ ದೇಶದ ವೈಜ್ಞಾನಿಕ ಸಲಹೆಗಾರನಾದನು. ನಂತರ 1943ರಲ್ಲಿ ಬ್ರಿಟನ್ನ ವಾಯುಯಾನ ಸಚಿವಾಲಯಕ್ಕೆ ಸಲಹೆಗಾರನಾಗಿದ್ದನು. ಯುದ್ದದ ನಂತರ 1952ರಲ್ಲಿ ಕೇಂಬ್ರಿಜ್ಗೆ ಮರಳಿದನು. ವೈಜ್ಞಾನಿಕ ವೃಂದದಲ್ಲಿ ಥಾಮ್ಸನ್ ಜಿ.ಪಿ ಎಂದೇ ಹೆಸರಾಗಿದ್ದನು. ಉತ್ತಮರ ಸ್ನೇಹಕ್ಕೆ ಸದಾ ಹಾತೊರೆಯುತ್ತಿದ್ದ ಥಾಮ್ಸನ್ ದೋಣಿ ವಿಹಾರ, ದೋಣಿಗಳ ಮಾದರಿ ತಯಾರಿಕೆಯಲ್ಲಿ ಆಸಕ್ತನಾಗಿದ್ದನು. ಜಲಾಂತರ್ಗಾಮಿ ಹಡಗುಗಳ ಮಾದರಿ ತಯಾರಿಸಿ, ಆನಂದಿಸುತ್ತಿದ್ದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಫರ್ಮಿ , ಎನ್ರಿಕೋ (1901-1954) 1938
Fermi , Enrico (PHY.)
ಇಟಲಿ-ಅಸಂಸಂ-ಬೈಜಿಕ ಭೌತಶಾಸ್ತ್ರ-ಪ್ರಥಮ ಪರಮಾಣು ಪ್ರತಿಕ್ರಿಯಾಕಾರಕ (Nuclear Reactor) ನಿರ್ಮಿಸಿದಾತ.
ಸೈದ್ಧಾಂತಿಕ, ಪ್ರಾಯೋಗಿಕ ಭೌತಶಾಸ್ತ್ರ ವಲಯದಲಿ ಜಗತ್ತಿಗೆ ಇಟಲಿ ನೀಡಿದ ಅದ್ಭುತ ಕೊಡುಗೆ ಎನ್ರಿಕೋ ಫರ್ಮಿ. ರೈಲ್ವೇ ಉದ್ಯೋಗಿಯ ಮಗನಾಗಿದ್ದ ಫರ್ಮಿ ಬಾಲ್ಯದಿಂದಲೇ ಪ್ರತಿಭಾವಂತ. ಕ್ಷ-ಕಿರಣಗಳ ಸಂಶೋಧನೆ ನಡೆಸಿ ಪೀಸಾದಿಂದ ಫರ್ಮಿ ಡಾಕ್ಟರೇಟ್ ಗಳಿಸಿದನು. ಲೀಡೆನ್ನಲ್ಲಿ ಪಿ. ಎಹ್ರೆನ್ಫೆಸ್ಟ್, ಮತ್ತು ಗಟ್ಟಿಂಜೆನ್ನಲ್ಲಿ ಬಾರ್ನ್ ಸಂಗಡ ಕೆಲಸ ಮಾಡಿದನು. 1927ರಲ್ಲಿ ರೋಮ್ಗೆ ತೆರಳಿ ಪ್ರಾಧ್ಯಾಪಕನಾದನು. ಈ ವೇಳೆಗಾಗಲೇ ಪ್ರಸಿದ್ದ ವೈಜ್ಞಾನಿಕ ಪತ್ರಿಕೆಗಳಲ್ಲಿ, ಫರ್ಮಿ-ಡಿರಾಕ್ ಸಂಖ್ಯಾಕಲನ ಶಾಸ್ತ್ರ ಸೇರಿದಂತೆ ಸುಮಾರು 30 ಲೇಖನಗಳು ಪ್ರಕಟನೆಗೊಂಡಿದ್ದವು. ರೋಮನಲ್ಲಿ ಕೆಲಕಾಲ ಇದ್ದ ಫರ್ಮಿ ಅಲ್ಲಿ ರಾಮನ್ ಪರಿಣಾಮ ಕುರಿತು ಸಂಶೋಧಿಸಿದನು. ಇಟಲಿಯಲ್ಲಿದ್ದಾಗ, ಉಜ್ವಲ ವಿಜ್ಞಾನಿಗಳ ತಂಡವೊಂದನ್ನು ಕಟ್ಟಲು ಫರ್ಮಿ ಯತ್ನಿಸಿದನಾದರೂ ಆಗಿದ್ದ ಕಲುಷಿತ ರಾಜಕೀಯ ವಾತಾವರಣದಿಂದಲೂ, ಅವನು ಯಹೂದಿಯಾಗಿದ್ದನೆಂಬ ಕಾರಣದಿಂದಲೂ ಸಾಧ್ಯವಾಗಲಿಲ್ಲ. ಇದಎಂದ ಭ್ರಮ ನಿರಸನಗೊಂಡು 1938ರಲ್ಲಿ ಇಟಲಿ ತೊರೆದು, ಅಸಂಸಂದ ನ್ಯೂಯಾರ್ಕ್ನಲ್ಲಿ ನೆಲೆಸಿ ಕೊಲಂಬಿಯಾ ವಿಶ್ವವಿದ್ಯಾಲಯ ಸೇರಿದನು. 1933ರಲ್ಲಿ ವಿಕಿರಣಶೀಲ ಬೀಟಾ ಶೈಥಿಲ್ಯ ಸಿದ್ಧಾಂತ (Beta Decay Theory) ನೀಡಿದನು. ಈ ಸಿದ್ಧಾಂತದಂತೆ ನ್ಯೂಟ್ರಾನ್ ಒಂದು ಎಲೆಕ್ಟ್ರಾನ್ನ್ನು (ಬೀಟಾ-ಕಣ) ಮತ್ತು ಪ್ರತಿ ನ್ಯೂಟ್ರಿನೋ (Antineutrino) ಹೊಮ್ಮಿಸಿ ಪ್ರೋಟಾನ್ ಆಗಿ ರೂಪುಗೊಳ್ಳುತ್ತದೆ. ಜೊಲಿಯಟ್ ಹಾಗೂ ಐರೀನ್ ಕ್ಯೂರಿ ಬೈಜಿಕ ವಿಕಲ್ಪಗಳನ್ನು (Nuclear Mutations) ತರಲು ಹೀಲಿಯಂ ಅನಿಲದ ಬೀಜವನ್ನು ಬಳಸಿದ್ದರು. ಇದಕ್ಕೆ ಬದಲಾಗಿ ನ್ಯೂಟ್ರಾನ್ ಬಳಸುವುದರಿಂದ ಹೆಚ್ಚಿನ ಅನುಕೂಲವೆಂದು ಫರ್ಮಿ ತೋರಿಸಿದನು. ಇದರ ಪರಿಣಾಮವಾಗಿ ಹೊಸ 40 ಬಗೆಯ ವಿಕಿರಣಶೀಲ ಸಮಸ್ಥಾನಿಗಳು (Radio Isotopes) ಅನಾವರಣಗೊಂಡವು. ಪ್ರಯೋಗಗಳಲ್ಲಿದ್ದಾಗ, ಆಕಸ್ಮಿಕವಾಗಿ ಪ್ಯಾರಾಫಿûನ್ ಮೇಣ ಬಳಸಿ ನ್ಯೂಟ್ರಾನ್ಗಳನ್ನು ನಿಧಾನಗೊಳಿಸಬಹುದೆಂದು ಫರ್ಮಿ ಕಂಡುಕೊಂಡನು. ಫರ್ಮಿಯ ಇವೆಲ್ಲ ಸಾಧನೆಗಾಗಿ 1938ರ ನೊಬೆಲ್ ಪ್ರಶಸ್ತಿ ನೀಡಲಾಯಿತು. ಫರ್ಮಿ ನ್ಯೂಟ್ರಾನ್ಗಳಿಂದ ಯುರೇನಿಯಂ ವಿಕಲ್ಪ ಹೊಂದುವುದನ್ನು ತಪ್ಪಾಗಿ ಅರ್ಥೈಸಿದ್ದನು. 1938ರಲ್ಲಿ ಫ್ರಿಷ್ಕ್ ಮತ್ತು ಲಿಸಾ ಮೀಟನರ್ ಇದನ್ನು ಸರಿಪಡಿಸಿ ಯುರೇನಿಯಂ ಬೀಜಕ್ಕೆ ಹೆಚ್ಚಿನ ನ್ಯೂಟ್ರಾನ್ಗಳನ್ನು ಸೇರಿಸಿದಾಗ ಯುರೇನಿಯಂ ವಿದಳನಗೊಳ್ಳುವುದೆಂದು (Fission) ಪ್ರಯೋಗಗಳ ಫಲಿತಾಂಶಗಳ ವಿಶ್ಲೇಷಣೆಯಿಂದ ತಿಳಿಸಿದರು. ಇದೇ ವೇಳೆಗೆ ಜರ್ಮನಿಯ, ಬರ್ಲಿನ್ನಲ್ಲಿದ್ದ ಹಾನ್ ಮತ್ತು ಎಫ್.ಸ್ಟ್ರಾಸ್ಮನ್ ಸರಿಸಮಾನ ಫಲಿತಾಂಶ ಪಡೆದು, ಅದೇ ಬಗೆಯ ನಿರ್ಧಾರಗಳಿಗೆ ಬಂದಿದ್ದರು. ಯುರೇನಿಯಂ ಪರಮಾಣುವನ್ನು ವಿದಳನಗೊಳಿಸುವುದರಿಂದ ಅಪಾರ ಪ್ರಮಾಣದ ಚೈತನ್ಯವನ್ನು ಪಡೆಯಬಹುದೆಂದು, ಇವರೆಲ್ಲರಿಗೂ ಖಚಿತವಾಗಿದ್ದಿತು. ಅದು ಎರಡನೇ ಜಾಗತಿಕ ಯುದ್ದದ ಬಿರುಸಿನ ಕಾಲ. ಹಿಟ್ಲರ್ಗೆ ಈ ಸಾಧ್ಯತೆ ಅರಿವಾದರೆ ಜಗತ್ತಿನಲ್ಲಿ ಅವನಿಗೆ ಸರಿಸಮಾನಾದ, ಎದುರಿಗೆ ನಿಲ್ಲಬಲ್ಲ ದೇಶ ಇರಲಾರದೆಂದು ಭಾವಿಸಿದ ಫರ್ಮಿ, ಐನ್ಸ್ಟೀನ್ ,ಝಿಲಾರ್ಡ್ ಹಾಗೂ ಅಮೆರಿಕಾದ ಅಧ್ಯಕ್ಷ ರೂಸವೆಲ್ಟ್ನನ್ನು ಭೇಟಿಯಾಗಿ ಜರ್ಮನಿಗಿಂತಲೂ ಮೊದಲೇ ಬೈಜಿಕಾಸ್ತ್ರ (Nuclear Weapon) ತಯಾರಿಸಬೇಕೆಂದು ಒತ್ತಾಯಿಸಿದರು. ಇದರ ಫಲವಾಗಿ 2 ಬಿಲಿಯನ್ ಡಾಲರ್ ವೆಚ್ಚದ ಮ್ಯಾನ್ಹಟನ್ ಪರಿಯೋಜನೆ ಮೈದಳೆಯಿತು. ಡಿಸೆಂಬರ್ 2, 1942ರಂದು, ಚಿಕಾಗೋದ ಸ್ಟ್ಯಾಗ್’ಫೀಲ್ಡ್ ಸ್ಟೇಡಿಯಂನಲ್ಲಿ ಎನ್ರಿಕೋ ಫರ್ಮಿ ಹಾಗೂ ಸಂಗಡಿಗರು ಮೊಟ್ಟ ಮೊದಲ ನಿಯಂತ್ರಣಗೊಳಿಸಬಹುದಾದ ಬೈಜಿಕ ಕ್ರಿಯಾಸರಣಿಯನ್ನು ಪಡೆದರು. ಎನ್ರಿಕೋ ಫರ್ಮಿ ಬೈಜಿಕ ವಿದಳನದಿಂದ, ಅಣ್ವಸ್ತ್ರ ತಯಾರಿಸುವ ಯೋಜನೆಯಲ್ಲಿದ್ದು, ಮೆಕ್ಸಿಕೋದ ಮರುಭೂಮಿಯಲ್ಲಿ ಅದರ ಮೊದಲ ಸ್ಪೋಟ ಪ್ರಯೋಗ ನಡೆದಾಗ ಉಪಸ್ಥಿತನಿದ್ದನು. ಎನ್ರಿಕೋ ಫರ್ಮಿ ಹಾಗೂ ಓಪೆನ್ಹೀಮರ್ ಈ ಹೊಸ ಅಸ್ತ್ರವನ್ನು ಜಪಾನಿನ ವಿರುದ್ದ ಬಳಸಲು ಬೆಂಬಲಿಸಿದರು. ಬೈಜಿಕ ಸದಳನದಿಂದ (Fussion) ರೂಪುಗೊಂಡ ಜಲಜನಕ ಬಾಂಬ್ ಅಭಿವೃದ್ದಿಯನ್ನುಫರ್ಮಿ ವಿರೋಧಿಸಿದನು. ಎರಡನೇ ಜಾಗತಿಕ ಯುದ್ದದ ನಂತರ ಚಿಕಾಗೋದಲ್ಲಿ ಪ್ರಾಧ್ಯಾಪಕನಾಗಿ ಉಳಿದ ಫರ್ಮಿಯ ಗೌರವಾರ್ಥ ಹೊಸದಾಗಿ ಬೆಳಕಿಗೆ ಬಂದ 100ನೇ ಧಾತುವಿಗೆ ಫರ್ಮಿಯಾನ್ ಎಂದು ಹೆಸರಿಸಲಾಗಿದೆ. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಲಾರೆನ್ಸ್, ಎರ್ನೆಸ್ಟ್ ಓರ್ಲ್ಯಾಂಡೋ (1901-1958) 1939
Lawrence , Ernest Orlando
ಅಸಂಸಂ-ಭೌತಶಾಸ್ತ್ರ- ಸೈಕ್ಲೋಟ್ರಾನ್ ಉಪಜ್ಞೆಕಾರ- ಹೊಸ ವಿಕಿರಣಪಟು ಧಾತುಗಳನ್ನು (Radioactive Element)ಪಡೆದಾತ.
ಲಾರೆನ್ಸ್ನ ತಂದೆ ಶಿಕ್ಷಕರ ತರಬೇತಿ ಕಾಲೇಜಿನ ಮುಖ್ಯಸ್ಥನಾಗಿದ್ದನು. ತಾಯಿಯಿಂದ ಲಾರೆನ್ಸ್ ಗಣಿತ ಕಲಿತನು. ದಕ್ಷಿಣ ಡಕೋಟಾದಲ್ಲಿ ಬಾಲ್ಯ ಕಳೆದ ಲಾರೆನ್ಸ್ , ಚುರುಕು ಬಾಲಕನೂ. ಉತ್ತಮ ಕ್ರೀಡಾಪಟುವೂ ಭೌತಶಾಸ್ತ್ರದಲ್ಲಿ ಆಸಕ್ತನೂ ಆಗಿದ್ದನು. ದಕ್ಷಿಣಾ ಡಕೋಟಾ, ಮಿನ್ನೆಸೊಟಾ, ಯೆೀಲ್ನಲ್ಲಿ ಶಿಕ್ಷಣ ಪಡೆದು, 1928ರಲ್ಲಿ ಬರ್ಕ್ಲೆಯಲ್ಲಿನ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯ ಸೇರಿದನು. 1936ರಲ್ಲಿ ಇಲ್ಲಿನ ವಿಕಿರಣಪಟುತ್ವ ಪ್ರಯೋಗಾಲಯದ ನಿರ್ದೇಶಕನಾದನು. 1929ರಿಂದ ಲಾರೆನ್ಸ್ ಬೈಜಿಕ ಪ್ರತಿಕ್ರಿಯೆಯಿಂದಾಗುವ ಅಧಿಕ ಚೈತನ್ಯದ ಕಣಗಳ ಬಗೆಗೆ ಕೆಲಸ ಮಾಡಿದನು. ಖ್ಯಾತ ಖಗೋಳ ಶಾಸ್ತ್ರಜ್ಞನಾಗಿದ್ದ ಎಡಿಂಗ್ಟನ್, ತಾರೆಗಳು ಬೈಜಿಕ ಪ್ರತಿಕ್ರಿಯೆಯಿಂದ ಚೈತನ್ಯ ಬಿಡುಗಡೆಗೊಳಿಸುತ್ತಿರಬಹುದೆಂದು ಸೂಚಿಸಿದ್ದನು. ಈ ಕಾಲಕ್ಕೆ ಅಧಿಕ ಚೈತನ್ಯದ ಕಣಗಳನ್ನು ಪಡೆಯುವುದು ಬಹು ಪರಿಶ್ರಮದ ಕೆಲಸವಾಗಿದ್ದಿತು. ಲಾರೆನ್ಸ್ 1931ರಲ್ಲಿ ಇದನ್ನು ಪರಿಷ್ಕರಿಸಿ ಕಾಂತ ಕ್ಷೇತ್ರದಲ್ಲಿ ಸರ್ಪಿಲ ಜಾಡಿನಲ್ಲಿ ವೇಗೋತ್ಕರ್ಷಗೊಂಡು , ಅಧಿಕ ಚೈತನ್ಯ ಹೊಂದಿರುವ ಕಣ ಪಡೆಯುವ ಸಾಧನ ನಿರ್ಮಿಸಿದನು. ಇದು ಸ್ಲೈಕ್ಲೊಟ್ರಾನ್ ಎಂದು ಹೆಸರಾಯಿತು. ಮುಂದೆ ಇನ್ನೂ ಪ್ರಬಲ ಸೈಕ್ಲೋಟ್ರಾನ್ಗಳು ಚಾಲ್ತಿಗೆ ಬಂದವು. ಇವುಗಳಿಂದ ಲಿಥಿಯಂ ಬೀಜವನ್ನು ಹೀಲಿಯಂ ಬೀಜವಾಗಿ ರೂಪಾಂತರಿಸುವುದು ಸಾಧ್ಯವಾಯಿತು. ಇದನ್ನು ಕಾಕ್ಕ್ರಾಫ್ಟ್ ಮತ್ತು ವಾಲ್ಟನ್ ಪ್ರಯೋಗಗಳಲ್ಲಿ ಸಾಧಿಸಿದರು. ಇದರಿಂದಾಗಿ ಕೆಲವೇ ಸಮಯದಲ್ಲಿ ನೂರಾರು ವಿಕಿರಣಪಟು ಸಮಸ್ಥಾನಿಗಳು (Isotopes) ದಕ್ಕಿದವು. ಲಾರೆನ್ಸ್, ಇದನ್ನು ವೈದ್ಯಕೀಯ ರಂಗಗಳಲ್ಲಿ ಬಳಸಲು ಯತ್ನಿಸಿದನು. ಸೈಕ್ಲೋಟ್ರಾನ್ನಿಂದ ಮೆಸಾನ್ಗಳು, ಪ್ರತಿಕಣಗಳನ್ನು ಪಡೆಯಲಾಯಿತು. ಇದರಿಂದಾಗಿ ಮೂಲ ಕಣಗಳ ಅಧ್ಯಯನ ಬಹುವಾಗಿ ವಿಸ್ತರಿಸಿತು. ಲಾರೆನ್ಸ್ ಗೌರವಾರ್ಥವಾಗಿ 103ನೇಧಾತುವನ್ನು ಲಾರೆನ್ಸಿಯಂ ಎಂದು ಹೆಸರಿಸಲಾಗಿದೆ. 1940ರಲ್ಲಿ ಲಾರೆನ್ಸ್ ತಂಡ ಪ್ಲುಟೋನಿಯಂ ಹಾಗೂ ನೆಪ್ಚೂನಿಯಂಗಳನ್ನು ಪ್ರತ್ಯೇಕಿಸಿತು. ಲಾರೆನ್ಸ್ ಅಣ್ವಸ್ತ್ರ ತಯಾರಿಕೆಯಲ್ಲಿ ಗಣನೀಯ ಪಾತ್ರ ವಹಿಸಿದ್ದನು. ಲಾರೆನ್ಸ್ 1939ರ ನೊಬೆಲ್ ಪ್ರಶಸ್ತಿಯಿಂದ ಪುರಸ್ಕೃತನಾಗಿದ್ದಾನೆ. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು