ರಿಚರ್ಡ್ ಆರ್.ಎರ್ನ್ಸ್ಟ್ (1933--) 1991
Richard , Ernst
ಸ್ವಿಟ್ಸಲ್ರ್ಯಾಂಡ್-ರಸಾಯನಶಾಸ್ತ್ರ-ಬೈಜಿಕ ಕಾಂತೀಯ ಅನುರಣನದಲ್ಲಿ ಫೂರೆ ರೂಪಾಂತರ ವಿಧಾನಗಳನ್ನು ( Fourier Transformation Methods) ಪರಿಚಯಿಸಿದಾತ.
ರಿಚರ್ಡ್ನ ತಂದೆ ವಿಂಟರ್ಥರ್ ಪಟ್ಟಣದಲ್ಲಿ ವಾಸ್ತುಶಿಲ್ಪಿಯಾಗಿದ್ದನು. ಈ ಪಟ್ಟಣ ಕೈಗಾರಿಕೆ ಹಾಗೂ ಕಲೆಗಳ ಅಪೂರ್ವ ಸಂಗಮವಾಗಿದ್ದಿತು. ಇಲ್ಲಿನ ಸಂಗೀತ ಗೋಷ್ಟಿಗಳ ಕೀರ್ತಿ ಯುರೋಪಿನ ಎಲ್ಲೆ ಮೀರಿ ಹಬ್ಬಿದ್ದಿತು. ಇಲ್ಲಿ ತಯಾರಾಗುತ್ತಿದ್ದ ಡೀಸೆಲ್ ಮೋಟಾರ್ ಹಾಗೂ ರೈಲ್ವೇ ಇಂಜಿನ್ಗಳಿಗೆ ಉತ್ತಮ ಮಾರುಕಟ್ಟೆಯಿದ್ದಿತು. ಈ ಪರಿಸರದಿಂದಾಗಿ ರಿಚರ್ಡ್ ಕಲಾಪ್ರೇಮಿಯೂ , ತಾಂತ್ರಿಕ ಆಸಕ್ತನೂ ಆಗಿ ಬೆಳೆದನು. ರಿಚರ್ಡ್ನ ಚಿಕ್ಕಪ್ಪ ಲೋಹಶಾಸ್ತ್ರದಲ್ಲಿ ಇಂಜಿನಿಯರ್ ಆಗಿದ್ದನು. ಈತ ಉಳಿಸಿದ್ದ ಕೆಲ ರಾಸಾಯನಿಕಗಳು ರಿಚರ್ಡ್ಗೆ ದಕ್ಕಿ, ಅದರಲ್ಲಿ ಆತನಿಗೆ ಅಪಾರ ಆಸಕ್ತಿ ಮೂಡಿತು. ಇವುಗಳನ್ನು ಬಳಸಿ ನಡೆಸಿದ ಹಲವು ಪ್ರಯೋಗಗಳಿಂದ ಹಲವಾರು ಬಾರಿ ಸ್ಪೋಟಗಳು ಸಂಭವಿಸಿ ವಿಷಾನಿಲಗಳು ತುಂಬಿದವು. ಇದರಿಂದ ರಿಚರ್ಡ್ನ ತಂದೆ ಈತನ ಪ್ರಯೋಗಗಳನ್ನು ನಿಗ್ರಹಿಸಿದನು. ಹಲವಾರು ಪುಸ್ತಕಗಳನ್ನು ಸಂಗ್ರಹಿಸಿ, ರಸಾಯನಶಾಸ್ತ್ರವನ್ನು ಆಳವಾಗಿ ಅರಿಯಲು ಯತ್ನಿಸಿದನು. ಪ್ರೌಢ ಶಿಕ್ಷಣ ಮುಗಿಸಿದ ಮೇಲೆ ರಸಾಯನಶಾಸ್ತ್ರದ ಕಲಿಕೆಗಾಗಿ ಝೂರಿಕ್ನಲ್ಲಿರುವ ಸ್ವಿಸ್ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದನು. ಆ ಕಾಲಕ್ಕೆ ಇಲ್ಲಿ ರಸಾಯನ ಶಾಸ್ತ್ರದ ಸೂತ್ರಗಳನ್ನು, ಪ್ರತಿಕ್ರಿಯೆಯ ಸಮೀಕರಣಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಅಪಾರ ಆದ್ಯತೆ ನೀಡಲಾಗುತ್ತಿತ್ತು. ಇದು ರಿಚರ್ಡ್ಗೆ ಭಾರಿ ನಿರಾಸೆಯುಂಟುಮಾಡಿತು. ಇದರ ಪರಿಹಾರಕ್ಕಾಗಿ ರಿಚರ್ಡ್ ತಾನೇ ಸ್ವಂತ , ಕೈಗೆಟುಕುವ ಪುಸ್ತಕಗಳನ್ನು ಓದತೊಡಗಿದನು. ಇದರಿಂದಾಗಿ ಕ್ವಾಂಟಂ ಬಲವಿಜ್ಞಾನ ರೋಹಿತಶಾಸ್ತ್ರ, ಔಷ್ಣೀಯ ಗತಿಶಾಸ್ತ್ರದಲ್ಲಿನ ಮೂಲ ತತ್ತ್ವಗಳು ಮನದಟ್ಟಾದವು. ಗುಂಟ್ ಹಾರ್ಡ್ನ ಮಾರ್ಗದರ್ಶನದಲ್ಲಿ ಡಾಕ್ಟರೇಟ್ಗಾಗಿ ಪ್ರಯೋಗಗಳನ್ನು ರಿಚರ್ಡ್ ಪ್ರಾರಂಭಿಸಿದನು. ಈ ಕಾಲದಲ್ಲಿ ಬೈಜಿಕ ಕಾಂತೀಯ ಅನುರಣನ ವಿಧಾನಗಳು ಶೈಶಾವಸ್ಥೆಯಲ್ಲಿದ್ದವು. ಇದಕ್ಕೆ ಬೇಕಾದ ನಿಖರವಾದ ನಿಷ್ಕಷ್ಟ ರೋಹಿತದರ್ಶಕ, ಹಾಗೂ ಸಹಸಾಧನಗಳನ್ನು ನಿರ್ಮಿಸಲು ರಿಚರ್ಡ್ ಶ್ರಮಿಸಿದನು. ಇದರೊಂದಿಗೆ ಪ್ರಯೋಗಗಳಲ್ಲಿ ದೊರೆತ ಫಲಿತಾಂಶಗಳಿಗೆ ಸೈದ್ಧಾಂತಿಕ ವಿವರಣೆ ನೀಡುವ ಅನಿವಾರ್ಯತೆಯೂ ಬಂದೊದಗಿತು. ಈ ದಿಶೆಯಲ್ಲಿ ರಿಚರ್ಡ್ಗೆ ಹ್ಯಾನ್ಸ್ ಪ್ರೈಮಾಸ್ನಂತಹ ಪ್ರತಿಭಾವಂತ ವಿಜ್ಞಾನಿಯ ನೆರವು ದಕ್ಕಿತು. ರಿಚರ್ಡ್ ಹಾಗೂ ಹ್ಯಾನ್ಸ್ನಿಂದ ನಿರ್ದೇಶಿಸಲ್ಪಟ್ಟ ರೀತಿಯಲ್ಲಿ ಬೈಜಿಕ ಕಾಂತೀಯ ಅನುರಣನ ವಿಧಾನಕ್ಕೆ ಬೇಕಾದ ರೋಹಿತ ದರ್ಶಕಗಳನ್ನು ಸ್ವಿಟ್ಸಲ್ರ್ಯಾಂಡಿನ ಟ್ರಬ್, ಟೌನೆಕ್ ಕಂಪನಿ ತಯಾರಿಸಿ, ಮಾರತೊಡಗಿತು. ರಿಚರ್ಡ್ನ ಬಹುತೇಕ ಪರಿಶ್ರಮ ಅತ್ಯಧಿಕ ಸಂವೇದನೆ ಹೊಂದಿದ ರೇಡಿಯೋ ಆವರ್ತನೆಯ ಪೂರ್ವವರ್ಧಕಗಳನ್ನು. (Radio Frequency PreAmplifiess) ತಯಾರಿಸುವಲ್ಲಿ ವಿನಿಯೋಗವಾಯಿತು. 1962ರಲ್ಲಿ ಡಾಕ್ಟರೇಟ್ ಗಳಿಸಿದ ರಿಚರ್ಡ್, ಶೈಕ್ಷಣಿಕ ವಲಯ ತೊರೆದು ಕೈಗಾರಿಕಾ ವಲಯಕ್ಕೆ ಹೋಗಲು ಬಯಸಿದನು. ಇದಕ್ಕಾಗಿ ಅಸಂಸಂದಲ್ಲಿನ ಪಾಲೋ ಆಲ್ಟೋದಲ್ಲಿರುವ ವೇರಿಯನ್ ಅಸೋಸಿಯೇಟ್ಸ್ ಕಂಪನಿ ಸೇರಿದನು. ಇಲ್ಲಿ ಹಲವಾರು ಖ್ಯಾತ ವಿಜ್ಞಾನಿಗಳು ನಿರ್ದಿಷ್ಟ ವೈಜ್ಞಾನಿಕ ಸಂಶೋಧನೆಯನ್ನು ವಾಣಿಜ್ಯೀಕರಣಗೊಳಿಸುವ ಗುರಿಯಿರಿಸಿಕೊಂಡು ಕೆಲಸ ಮಾಡುತ್ತಿದ್ದರು,. ಇಲ್ಲಿ ಲೆಸ್ಟನ್ ಎ ಅ್ಯಂಡರ್ಸ್ನ್ನ ನೇತೃತ್ವದಲ್ಲಿ ರಿಚರ್ಡ್ ಹಾಗೂ ಸಂಗಡಿಗರು ಹಲವಾರು ಆವರ್ತನೆಗಳನ್ನು ಸಮಾಂತರದಲ್ಲಿ ಪತ್ತೆ ಹಚ್ಚಿ ಓದಿ ದಾಖಲಿಸಬಲ್ಲ ಬೈಜಿಕ ಕಾಂತೀಯ ಅನುರಣನ (NMR-Nuclear Magnetic Resonance) ಸಾಧನವನ್ನು ¥sóÀÇರೇ ರೂಪಾಂತರ ವಿಧಾನದಲ್ಲಿ ನಿರ್ಮಿಸಲು ಯತ್ನಿಸಿದರು. ಇವರ ಶ್ರಮಕ್ಕೆ ಪ್ರತಿಫಲ ದಕ್ಕಿತಾದರೂ ವಿಜ್ಞಾನಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು ¥sóÀÇರೇ ವಿಧಾನದಲ್ಲಿ ನಿರ್ಮಿಸಿದ ಬೈಜಿಕ ಕಾಂತೀಯ ಅನುರಣನ ತಂತ್ರವನ್ನು ವಿವರಿಸಿ ಇವರು ಬರೆದ ಲೇಖನ ಎರಡು ಬಾರಿ ಜರ್ನಲ್ ಆಫ್ಕೆಮಿಕಲ್ ಫಿûಸಿಕ್ಸ್ನಿಂದ ತಿರಸ್ಕೃತಗೊಂಡು ಅಂತಿಮವಾಗಿ ರಿವ್ಯೂ ಆಫ್ಕೆಮಿಕಲ್ ಇನ್ಸ್ಟ್ರುಮೆಂಟ್ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ರಿಚರ್ಡ್ ಹಾಗೂ ಸಂಗಡಿಗರ ಹೊಸ ಸಾಧನವನ್ನು ಪೂರ್ಣ ಪ್ರಮಾಣದಲ್ಲಿ ರೋಹಿತದರ್ಶಕದೊಂದಿಗೆ ತಯಾರಿಸಲು ವೇರಿಯನ್ ಕಂಪನಿ ನಿರಾಕರಿಸಿತು. ಇದಾದ ಏಳು ವರ್ಷಗಳ ನಂತರ ವೇರಿಯನ್ ಕಂಪನಿಯ ಪ್ರತಿಸ್ಪರ್ಧಿಯಾದ ಬ್ರುಕಲ್ ಅನ್ಯಾಲಿಟಿಷ ಮೆಸ್ ಟೆಕ್ನಿಕ್ ಕಂಪನಿ ಟೋನಿ ಕೆಲ್ಲರ್ ಮುಂದಾಳತ್ವದಲ್ಲಿ ಇಂತಹುದೇ ಸಾಧನ ತಯಾರಿಸಿ ಮಾರಿತಲ್ಲದೆ ವೇರಿಯನ್ ಕಂಪನಿಗಿಂತಲೂ ಮೊದಲೇ ಅದು ಈ ತಂತ್ರಜ್ಞಾನಕ್ಕೆ ಏಕಸ್ವಾಮ್ಯ ಹೊಂದಿರುವುದು ನಂತರ ಬೆಳಕಿಗೆ ಬಂದಿತು. 1968ರಲ್ಲಿ ಸ್ವಿಟ್ಸಲ್ರ್ಯಾಂಡಿಗೆ ಮರಳಿದ ರಿಚರ್ಡ್ ಬೈಜಿಕ ಕಾಂತೀಯ ಅನುರಣನ ತಂತ್ರಗಳಲಿ ಸುಧಾರಣೆಗೆ ತರಲು ಯತ್ನಿಸಿದನು. ಪೌಲ್ ಲೌಟೆರ್ಬರ್ ದ್ವಿ ಆಯಾಮದ ರೋಹಿತದರ್ಶಕದ ತತ್ತ್ವಗಳನ್ನು ಎನ್ಎಂಆರ್ ಬಿಂಬಗಳಿಗೂ ಅನ್ವಯಿಸಬಹುದೆಂದು ಸೂಚಿಸಿದ್ದನು. ಈ ಮಾರ್ಗದಲ್ಲಿನ ಮೊದಲ ಪ್ರಯೋಗಗಳನ್ನು ರಿಚರ್ಡ್, ಡೈಟಿಕ್ ವೆಲ್ಟ್ ಹಾಗೂ ಅನಿಲ್ ಕುಮಾರ್ ನಡೆಸಿದರು. ಮುಂದೆ ಇದು ಹಲವು ಅಯಾಮದ ರೋಹಿತಶಾಸ್ತ್ರಕ್ಕೆ ಅಡಿಗಲ್ಲಾಯಿತು. ಜೀವ ರಸಾಯನಶಾಸ್ತ್ರದಲ್ಲಿ ಅಣ್ವಯಿಕ ರಾಚನಿಕ ಸ್ವರೂಪ ಅರಿಯಲು ನೆರವಾಯಿತು. ಬೈಜಿಕ ಕಾಂತೀಯ ಅನುರಣನದಲ್ಲಿ ಫೂರೆ ರೂಪಾಂತರ ವಿಧಾನಗಳನ್ನು ಪರಿಚಯಿಸಿದುದ್ದಕ್ಕಾಗಿ ರಿಚರ್ಡ್ 1991ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ರುಡಾಲ್ಫ್ ,ಎ. ಮಾರ್ಕಸ್ (1933--) 1992
Rudolph , Marcus
ಕೆನಡಾ-ರಸಾಯನಶಾಸ್ತ್ರ- ರಾಸಾಯನಿಕ ಪ್ರತಿಕ್ರಿಯಾ ಗತಿಶೀಲಶಾಸ್ತ್ರದ (Reaction Dynamics) ಮುಂಚೂಣಿಗ
ಮಾರ್ಕಸ್ ಕುಟುಂಬ ನಾರ್ವೆ ಮೂಲದ್ದಾಗಿದ್ದು ಕೆನಡಾದಲ್ಲಿ ವಲಸೆ ಬಂದು ನೆಲೆಸಿದ್ದಿತು. ಈತನ ತಂದೆ ತಾಯಿಗಳು ಹೆಚ್ಚಿನ ಶಿಕ್ಷಣ ಪಡೆದವರಾಗಿರಲಿಲ್ಲ. ಆದರೆ ಮಾರ್ಕಸ್ ಸೋದರ ಮಾವ ಹಾಗೂ ತಂದೆಯ ಸೋದರರು ಸ್ವೀಡನ್ನಲ್ಲಿದ್ದು ಅದರಲ್ಲೊಬ್ಬ 1915ರಲ್ಲಿ ಉಪ್ಸಾಲ ವಿಶ್ವವಿದ್ಯಾಲಯದ ಗೌರವಕ್ಕೆ ಪಾತ್ರವಾಗಿದ್ದನು. ಈತನಿಗೆ ಹದಿಮೂರು ಭಾಷೆಗಳಲ್ಲಿ ಪ್ರಭುತ್ವವಿದ್ದಿತು. ಇದೇ ಪ್ರೇರಣೆಯಿಂದ ಮಾರ್ಕಸ್ ಮುಂದೆ 9 ಭಾಷೆಗಳನ್ನು ಕಲಿತನು ಮೆಕ್ಗಿಲ್ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದ ಅಧ್ಯಯನಕ್ಕೆ ಮಾರ್ಕಸ್ ಸೇರಿದನು. ಇಲ್ಲಿ ರಾಸಾಯನಿಕ ಕ್ರಿಯೆಗಳ ವೇಗದಲ್ಲಿನ ಸಂಶೋಧನೆಗಳಿಗೆ ಮುಂದೆ ನೊಬೆಲ್ ಪ್ರಶಸ್ತಿ ಗಳಿಸಿದ ಸಿರಿಲ್ ಹಿನ್ಷೆಲ್ವುಡ್, ಉಪಾಧ್ಯಾಯನಾಗಿದ್ದನು. 1946ರಲ್ಲಿ ಡಾಕ್ಟರೇಟ್ ಗಳಿಸಿದ ಮಾರ್ಕಸ್ ಓಟ್ಟಾವದಲ್ಲಿರುವ ನ್ಯಾಷನಲ್ ರಿಸರ್ಚ್ ಕೌನ್ಸಿಲ್ ಸೇರಿದನು. 1948ರಲ್ಲಿ ನಾರ್ಥ್ಕೆರೋಲಿನ್ ವಿಶ್ವ ವಿದ್ಯಾಲಯದಲ್ಲಿ ಆಸ್ಟರ್ ಕೆ ರೈಸೆನ್ ಕೈ ಕೆಳಗೆ ಸೈದ್ಧಾಂತಿಕ ಭೌತಶಾಸ್ತ್ರದ ವಿಭಾಗಕ್ಕೆ ರುಡಾಲ್ಫ್ ಸೇರಿದನು. 1920ರಲ್ಲಿ ರೈಸ್ ರ್ಯಾಮ್ಸ್ಪರ್ಜರ್ ಕ್ಯಾಸೆಲ್ ಅರ್.ಅರ್.ಅರ್.ಸಿದ್ಧಾಂತವನ್ನು 1920ರಲ್ಲಿ ಮಂಡಿಸಿ ರಾಸಾಯನಿಕ ಕ್ರಿಯೆಗಳ ಸ್ಥಿತ್ಯಂತರವನ್ನು ವಿವರಿಸಿದ್ದರು. ಇದಕ್ಕೆ ಸಂಖ್ಯಾ ಕಲನಶಾಸ್ತ್ರದ ತತ್ತ್ವಗಳನ್ನು ಅಳವಡಿಸಿದ ಮಾರ್ಕಸ್ ತನ್ನ ಹೆಸರು ಸೇರಿದಂತಹ ಅರ್.ಅರ್.ಕೆ.ಎಮ್ ಸಿದ್ಧಾಂತವನ್ನು ನೀಡಿದನು. 1951ರಲ್ಲಿ ಈ ಸಿದ್ಧಾಂತ ಪ್ರಕಟಗೊಂಡಿತು. ಇದೇ ವರ್ಷ ಬ್ರೂಕ್ಲಿನ್ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಟ್ ಸೇರಿದ ಮಾರ್ಕಸ್ ಎಲೆಕ್ಟ್ರಾನ್ ವರ್ಗಾವಣೆಯನ್ನು ಕುರಿತಾಗಿ ಸಂಶೋಧನೆ ನಡೆಸಿದನು. ರಾಸಾಯನಿಕ ಪ್ರತಿಕ್ರಿಯಾ ಗತಿಶೀಲಶಾಸ್ತ್ರದಲ್ಲಿ ಮಾರ್ಕಸ್ ತೊಡಗಿಸಿಕೊಂಡನು. ಇದರಲ್ಲಿನ ಗಮನಾರ್ಹ ಸಾಧನೆಗಳಿಗಾಗಿ 1992ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೈಖೆಲ್ , ಸ್ಮಿತ್ (1932--) 1993
Michael , Smith
ಇಂಗ್ಲೆಂಡ್-ರಸಾಯನಶಾಸ್ತ್ರ-ನ್ಯೂಕ್ಲಿಯಿಕ್ ಆಮ್ಲಗಳ ಸಂಶ್ಲೇಷಣೆಯ ಮುಂಚೂಣಿಗ.
ಮೈಖೇಲ್ 26 ಏಪ್ರಿಲ್ 1932ರಂದು ಇಂಗ್ಲೆಂಡ್ನ ಬ್ಲಾಕ್ವೂಲ್ನಲ್ಲಿ ಜನಿಸಿದನು. ಇಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿದನು. ಲ್ಯಾಟಿನ್ ಭಾಷೆಯಲ್ಲಿ ಹಿಡಿತ ಹೊಂದಿರದ ಕಾರಣ ಮೈಖೇಲ್ಗೆ ಆಕ್ಸ್’ಫರ್ಡ್ ಮತ್ತು ಕೇಂಬ್ರಿಜ್ನಲ್ಲಿ ಪ್ರವೇಶ ದಕ್ಕಲಿಲ್ಲ. ಆದ್ದರಿಂದ 1950ರಲ್ಲಿ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದ ಪದವಿಗೆ ಸೇರಿದನು. 1953ರ ಪದವಿ ಮುಗಿಸಿ, 1956ರಲ್ಲಿ ಡಾಕ್ಟರೇಟ್ ಗಳಿಸಿದನು. ಮೈಖೇಲ್ ಅಸಂಸಂದಲ್ಲಿ ಹಲವಾರು ಖ್ಯಾತ ರಸಾಯನಶಾಸ್ತ್ರಜ್ಞರನ್ನು , ವಿಶ್ವವಿದ್ಯಾಲಯಗಳನ್ನು ಸಂಪರ್ಕಿಸಿ ಹೆಚ್ಚಿನ ಸಂಶೋಧನೆ, ವೃತ್ತಿ ಜೀವನದ ಅವಕಾಶಗಳನ್ನು ಅರಸಿದನು. ಆದರೆ ಇವು ಯಾವುವೂ ಯಶಸ್ವಿಯಾಗಲಿಲ್ಲ. ಆದರೆ ಭಾರತೀಯ ಮೂಲದ, ಕೆನಡಾದ ವ್ಯಾಂಕೋವರ್ನಲ್ಲಿದ್ದ ಸಮವಯಸ್ಕನಾಗಿದ್ದ ಹರಗೋವಿಂದ ಖೊರಾನ ಜೈವಿಕ ಪ್ರಾಮುಖ್ಯತೆ ಹೊಂದಿರುವ ಸಾವಯವ ¥sóÁಸ್ಫೇಟ್ಗಳ ಮೇಲೆ ತನ್ನೊಂದಿಗೆ ಸಂಶೋಧನೆ ನಡೆಸುವ ಆಹ್ವಾನ ನೀಡಿದನು. ಇಲ್ಲಿ ಹರಗೋವಿಂದ ಖೊರಾನಾ ಸಹಯೋಗದಲ್ಲಿ ಮೈಖೇಲ್ ನ್ಯೂಕ್ಲಿಯೋಸೈಡ್-5 ಟೈಫಾಸ್ಫೆಟ್’ಗಳನ್ನು ಸಂಶ್ಲೇಷಿಸಿದನು. ಇದು ಜೀವ ರಸಾಯನಶಾಸ್ತ್ರದಲ್ಲಿನ ಹಲವಾರು ಸಂಶ್ಲೇಷಣೆಗೆ ಮಾರ್ಗವನ್ನೊದಗಿಸಿತು. 1960ರಲ್ಲಿ ಖುರಾನಾ, ಮೈಖೇಲ್ ಹಾಗೂ ತಂಡ ಅಸಂಸಂದ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದ ಕಿಣ್ವ ಸಂಶೋಧನಾ ಕೇಂದ್ರಕ್ಕೆ ತಮ್ಮ ಕಾರ್ಯತಾಣವನ್ನು ಬದಲಾಯಿಸಿತು. ಇಲ್ಲಿ ನ್ಯೂಕ್ಲಿಯಿಕ್ ಆಮ್ಲಗಳ ರಸಾಯನಶಾಸ್ತ್ರದಲ್ಲೇ ಸವಾಲೆಂದು ಪರಿಗಣಿತವಾಗಿದ್ದ ರೈಬೋ-ಓಲಿಗೋ ನ್ಯೂಕ್ಲಿಯೋಟೈಡ್ಸ್ನ್ನು ಸಂಶ್ಲೇಷಿಸಿದನು. 1961ರಲ್ಲಿ ಕೆನಡಾಗೆ ಮರಳಿದ ಮೈಖೇಲ್, ಕೆನಡಾದ ವೈದ್ಯಕೀಯ ಸಂಶೋಧನಾ ಸಮಿತಿಯ ಸಂಶೋಧಕ ಸಹಚರನಾದನು. 1981ರಲ್ಲಿ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿದ್ದ ಆರ್ಲ್ ಡೇವಿಯೊಂದಿಗೆ ಮೈಖೇಲ್, ಝೈರೋಸ್ ಎಂಬ ಜೈವಿಕ ತಂತ್ರಜ್ಞಾನದ ಕಂಪನಿ ಸ್ಥಾಪಿಸಿದನು. ಇದಕ್ಕೆ ಸೀಟ್ಲ್ನಲ್ಲಿರುವ ಸಾಹಸಿ ಬಂಡವಾಳಗಾರರಾದ ಕೇಬಲ್ ಹಾಗೂ ಹಾ¥sóï ಕಂಪನಿಗಳು ಬಂಡವಾಳ ಒದಗಿಸಿದವು. ಡೆನ್ಮಾರ್ಕ್ನ ಔಷಧಿ ತಯಾರಿಕಾ ಕಂಪನಿಯ ನೋವೋ ಅಗತ್ಯಕ್ಕನುಗುಣವಾಗಿ ಝೈರೋಸ್ ಕಂಪನಿ ಯೀಸ್ಟ್ ಬಳಸಿ ಮಾನವ ಇನ್ಸುಲಿನ್ ತಯಾರಿಸಿತು. ಈ ಕಂಪನಿ 1988ರಲ್ಲಿ ಝೈರೋಸ್ನ್ನು ಖರೀದಿಸಿ ಝೈರೋ ಜೆನೆಟಿಕ್ಸ್ ಎಂಬ ಹೊಸ ಹೆಸರಿನಲ್ಲಿ ವ್ಯವಹಾರ ಮುಂದುವರೆಸಿತು. ನ್ಯೂಕ್ಲಿಯಿಕ್ ಆಮ್ಲಗಳ ಸಂಶ್ಲೇಷಣೆಯಲ್ಲಿನ ಕೊಡುಗೆಗಳಿಗಾಗಿ ಮೈಖೇಲ್ 1993ರಲ್ಲಿ ನೊಬೆಲ್ ಪ್ರಶಸ್ತಿಗೆ ಪಾತ್ರನಾದನು.
ಮುಲ್ಲಿಸ್,ಕ್ಯಾರಿ (ಬ್ಯಾಂಕ್ಸ್)( 1944--) 1993
Mullis ,Kary ( Banks )
ಅಸಂಸಂ-ಜೀವ ರಸಾಯನಶಾಸ್ತ್ರ- ಡಿಎನ್ಎ ಕುರುಹುಗಳ ಪತ್ತೆಗೆ ಪಾಲಿಮರೇಸ್ ಸರಣಿ ಪ್ರತಿಕ್ರಿಯಾ ವಿಧಾನ ಬಳಕೆಗೆ ತಂದಾತ.
ಮುಲ್ಲಿಸ್ ಜಾರ್ಜಿಯಾ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿಯಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಗಳಿಸಿ, ಕ್ಯಾಲ್ಟೆಕ್ನಲ್ಲಿ ಜೀವ ರಸಾಯನ ಶಾಸ್ತ್ರದ ಸ್ನಾತಕೋತ್ತರ ಪದವಿ ಪಡೆದು ಜೀವ ತಾಂತ್ರಿಕ ಕಂಪನಿ ಸೆಟಸ್ನಲ್ಲಿ ವೃತ್ತಿಗೆ ಸೇರಿದನು. ಡಿಎನ್ಎ ತುಣುಕು ಅಥವಾ ವಂಶವಾಹಕಗಳನ್ನು ಅತ್ಯಂತ ಕಡಿಮೆ ಪ್ರತಿಚಯವಿರುವಾಗ ಹೇಗೆ ಗುರುತಿಸಬಹುದೆಂಬ ವಿಚಾರದಲ್ಲಿ ಮುಲ್ಲಿಸ್ ತಲ್ಲೀನನಾದನು. 1983ರಲ್ಲಿ ರಾತ್ರಿ ಹೊತ್ತು ಪ್ರಯಾಣ ಮಾಡುತ್ತಿದ್ದಾಗ ಅವನಿಗೆ ಪರಿಹಾರ ಮಾರ್ಗ ಗೋಚರಿಸಿತು. ಈ ವಿಧಾನದಲ್ಲಿ ಡಿಎನ್ಎಯನ್ನು ನಿರ್ದಿಷ್ಟ ಸ್ಥಾನದಲ್ಲಿ ಒಡೆದು, ಓಲಿಗೋ ನ್ಯೂಕ್ಲಿಯೋಟೈಡ್ಸ್ ಪಡೆಯಲಾಗುವುದು. ಇವು ನಿರ್ದಿಷ್ಟ ಸರಣಿಯಲ್ಲಿ ವಂಶವಾಹಕಗಳನ್ನು ಹೊಂದಿರುತ್ತವೆ. ರಾಸಾಯನಿಕ ವಿಧಾನಗಳಿಂದ ಇವುಗಳನ್ನು ಹಲವಾರು ಬಾರಿ ನಕಲುಗೊಳಿಸಿ ಯಥೇಚ್ಛಗೊಳಿಸಬಹುದು. ಇದರಿಂದ ಒಂದೆರಡು ನಿಮಿಷಗಳ ಅವಧಿಯಲ್ಲೇ ಹತ್ತರಿಂದ, ಇಪ್ಪತ್ತು ಕೋಟಿ ಓಲಿಗೋ ನ್ಯೂಕ್ಲಿಯೋಟೈಡ್ಸ್ಗಳು ದಕ್ಕುತ್ತವೆ. ಮುಲ್ಲಿಸ್ನಿಂದ ಪರಿಷ್ಕರಿಸಲ್ಪಟ್ಟ ಈ ವಿಧಾನಈಗ ಎಲ್ಲೆಡೆ ಪ್ರಚಲಿತವಿದೆ. ಇದಕ್ಕಾಗಿ ಮೈಖೇಲ್ ಸ್ಮಿತ್ನೊಂದಿಗೆ ಮುಲ್ಲಿಸ್ 1993ರ ನೊಬೆಲ್ ಪ್ರಶಸ್ತಿ ಹಂಚಿಕೊಂಡನು. ಮುಲ್ಲಿಸ್ನ ವಿಧಾನದಿಂದ ಅಪರಾಧ ಪತ್ತೆ, ಅಳಿದ ಜೀವಿಗಳ ಪಳೆಯುಳಿಕೆಗಳಿಂದ ಡಿಎನ್ಎ ಕುರುಹು ಪಡೆಯುವುದು ಸಾಧ್ಯ. ಹಲವು ಹತ್ತಾರು ವೈವಿಧ್ಯ ರಂಗದಲ್ಲಿ ಆಸಕ್ತನಾಗಿರುವ ಮುಲ್ಲಿಸ್ ಈಗ ಸ್ಟಾರ್ ಜೀನ್ ಕಂಪನಿ ಪ್ರಾರಂಭಿಸಿದ್ದಾನೆ. ಸಿನಿಮಾ ತಾರೆಗಳ ವರ್ಧಿತ ಡಿಎನ್ಎ ಯನ್ನು ಕೊರಳ ಪದಕಗಳಲ್ಲಿರಿಸಿ, ಕೈಬಳೆಗಳಲ್ಲಿರಿಸಿ ಮಾರಾಟ ಮಾಡುತ್ತಿದ್ದಾನೆ.. ನೊಬೆಲ್ ಪ್ರಶಸ್ತಿಯನ್ನು ರಾಜ ಸೇವಕರಿಂದ ಮನೆಗೆ ತಲುಪಿಸಬೇಕೆಂದು ಪ್ರತಿಪಾದಿಸುತ್ತಿದ್ದಾನೆ.
ಜಾರ್ಜ್, ಎ. ಓಲಾ (1927--) 1994
George , A.Olah
ಹಂಗರಿ-ಅಸಂಸಂ-ರಸಾಯನಶಾಸ್ತ್ರ-ಮಹಾಆಮ್ಲಗಳ (Superacids) ಅಧ್ಯಯನ ಖ್ಯಾತ.
ಜಾರ್ಜ್, 22 ಮೇ 1927ರಂದು ಬುಡಾಪೆಸ್ಟ್’ನಲ್ಲಿ ಜನಿಸಿದನು. ಈತನ ತಂದೆ ವಕೀಲನಾಗಿದ್ದು, ಅವರ ವಂಶದಲ್ಲಿ ಯಾರೂ ಯಾವುದೇ ವಿಜ್ಞಾನದಲ್ಲಿ ಆಸಕ್ತಿ ಹೊಂದಿರಲಿಲ್ಲ. ಬುಡಾಪೆಸ್ಟ್ನಲ್ಲಿರುವ ಜಿಮ್ನಾಷಿಯಂನಲ್ಲಿ ಎಂಟು ವರ್ಷಗಳ ಕಾಲ ಲ್ಯಾಟೀನ್, ಜರ್ಮನ್, ಫ್ರೆಂಚ್, ಹಾಗೂ ಇನ್ನಿತರ ಭಾಷೆಗಳನ್ನು ಕಲಿತನು. ಸಾಹಿತ್ಯ, ಚರಿತ್ರೆ ಜಾರ್ಜ್ಗೆ ಅತಿ ಪ್ರಿಯವಾಗಿದ್ದವು. ವಿಜ್ಞಾನ ಎಂದಿಗೂ ಆತನನ್ನು ಆಕರ್ಷಿಸಿರಲಿಲ್ಲ. ಎರಡು ಜಾಗತಿಕ ಯುದ್ದಗಳಿಂದ ಜರ್ಜರಿತವಾಗಿದ್ದ ಹಂಗರಿಯಲ್ಲಿ ಜೀವನ ಸಾಗಿಸುವುದು ಕಠಿಣವಾಗಿದ್ದಿತು. ಜಾರ್ಜ್ ಬುಡಾಪೆಸ್ಟ್’ನ ತಾಂತ್ರಿಕ ವಿಶ್ವವಿದ್ಯಾಲಯ ಸೇರಿ ರಸಾಯನಶಾಸ್ತ್ರ ವಿಭಾಗ ಸೇರಿದನು. ಇಲ್ಲಿ ಮೂಲ ಸೌಕರ್ಯಗಳ ಕೊರತೆ ಅಗಾಧವಾಗಿದ್ದಿತು. ಮೌಖಿಕ ಪರೀಕ್ಷೆ ಬಹು ಕಠಿಣವಾಗಿದ್ದು ಅದರಲ್ಲಿ ಅನುತ್ತೀರ್ಣರಾದರೆ ಪದವಿಯನ್ನು ತೊರೆದು ಹೋಗುವಂತಹ ನಿಯಮಗಳು ಜಾರಿಯಲ್ಲಿದ್ದವು. ಇಲ್ಲಿ ಜಾರ್ಜ್ಗೆ ಪ್ರಾಧ್ಯಾಪಕನಾಗಿದ್ದ ಜೆಝ.ಝೆಂಪ್ಲೆನ್ನ ಮಾರ್ಗದರ್ಶನ ದಕ್ಕಿತು. ಜೆಝ್ , ಬರ್ಲಿನ್ನಲ್ಲಿ ಖ್ಯಾತ ರಸಾಯನಶಾಸ್ತ್ರಜ್ಞ ಎಮಿಲ್ ಫಿûಷರ್ ಕೈಕೆಳಗೆ ಸಾವಯವ ರಸಾಯನಶಾಸ್ತ್ರ ಅಭ್ಯಸಿಸಿದ್ದನು. ಈತನ ಮಾರ್ಗದರ್ಶನದಲ್ಲಿ ಜಾರ್ಜ್, ಫ್ಲೋರಿನ್ ಹೊಂದಿದ ಕಾರ್ಬೋಹೈಡ್ರೇಟ್ಗಳ ಅಧ್ಯಯನ ಪ್ರಾರಂಭಿಸಿದನು. ಆ ಕಾಲದಲ್ಲಿ ಹಂಗರಿಯಲ್ಲಿ ಪ್ರಯೋಗಗಳಿಗೆ ಮೂಲ ರಾಸಾಯನಿಕಗಳು ಲಭ್ಯವಿರಲಿಲ್ಲ. ಇತರ ಸಂಗಡಿಗರ ನೆರವಿನಿಂದ ಜಾರ್ಜ್ ಪ್ರಯೋಗಗಳಿಗೆ ಬೇಕಾದ ಸೌಕರ್ಯಗಳನ್ನು ತಾನೇ ನಿರ್ಮಿಸಿಕೊಂಡನು. 1950ರ ಸುಮಾರಿಗೆ ಹಂಗರಿಯ ಕೆಮಿಕಾ ಅ್ಯಸ್ಟ ಪತ್ರಿಕೆಯ ವಿದೇಶಿ ಆವೃತ್ತಿಗಳಲ್ಲಿನ ಜಾರ್ಜ್ ಬರೆದ ಲೇಖನಗಳನ್ನು ಓದಿದ ಜರ್ಮನಿಯ ರಸಾಯನಶಾಸ್ತ್ರಜ್ಞ ಹ್ಯಾನ್ಸ್ನ ಬೆಂಬಲ ದಕ್ಕಿ ಪ್ರಯೋಗಗಳಿಗೆ ಬೋರಾನ್ ಟ್ರೈ ಫ್ಲೋರೈಡ್ ಲಭ್ಯವಾಯಿತು. ಹಂಗರಿಗೆ ಕಮ್ಯುನಿಸ್ಟ್ ಆಡಳಿತ ಬಂದು ರಷ್ಯಾದ ಮಾದರಿಯಲ್ಲೇ ಸಂಶೋಧನೆಗಾಗಿ ಸಂಸ್ಥೆಗಳು ಸ್ಥಾಪನೆಗೊಳ್ಳತೊಡಗಿದವು. 1954ರಲ್ಲಿ ಹಂಗರಿ ಆಕಾಡೆಮಿ ಆಫ್ ಸೈನ್ಸ್ನ ಸೆಂಟ್ರಲ್ ಕೆಮಿಕಲ್ ರಿಸರ್ಚ್ ಸೆಂಟರ್ಗೆ ಸೇರುವ ಆಹ್ವಾನ ಜಾರ್ಜ್ಗೆ ಬಂದಿತು. 1956ರಲ್ಲಿ ಹಂಗರಿಯಲ್ಲಿ ರಷ್ಯಾದ ಕಮ್ಯುನಿಸ್ಟ್ ಆಡಳಿತದ ವಿರುದ್ದ ದಂಗೆಯೆದ್ದಿತು. ವಜ್ರಮುಷ್ಟಿಯಿಂದ, ಅಪಾರ ಪ್ರಾಣಹಾನಿ ಸಹಿತವಾಗಿ ಇದನ್ನು ರಷ್ಯ ಹತ್ತಿಕ್ಕಿತು. ಇದರಿಂದ ಹಂಗರಿಯ ಭವಿಷ್ಯದಲ್ಲಿ ಕಾರ್ಮೋಡ ಮುಸುಕಿತು. ಎರಡು ಲಕ್ಷಕ್ಕೂ ಅಧಿಕ ಜನ ದೇಶದಿಂದ ಪಲಾಯನಗೈದರು. ಇವರೊಂದಿಗೆ ಜಾರ್ಜ್ ಕುಟುಂಬ ಸಹ ಸೇರಿತು. ಕೆಲಕಾಲ ಲಂಡನ್ನಲ್ಲಿದ್ದ ಜಾರ್ಜ್ 1957ರಲ್ಲಿ ಕೆನಡಾದ ಮಾಂಟ್ರಿಯೇಲ್ಗೆ ಹೋಗಿ ನೆಲೆಸಿದನು. ಡೆ ಕೆಮಿಕಲ್ ಕಂಪನಿಯ ಸರ್ನಿಯಾದಲ್ಲಿ ಹೊಸದಾಗಿ ಪ್ರಾರಂಭವಾಗಿದ್ದ ಪ್ರಯೋಗಾಲಯವನ್ನು ಜಾರ್ಜ್ ಸೇರಿದನು. ಡೆ ಕೆಮಿಕಲ್ ಕಂಪನಿ ಸ್ಟೈರೀನ್ ಉತ್ಪಾದನೆಗಾಗಿ ಈಥೈಲ್ ಬೆಂಜೀನ್ ತಯಾರಿಸುತ್ತಿದ್ದಿತು. 1965ರಲ್ಲಿ ಕ್ಲೀವ್ ಲ್ಯಾಂಡ್ನಲ್ಲಿನ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾಲಯ ಸೇರಿ, ರಸಾಯನಶಾಸ್ತ್ರದ ಪ್ರಾಧ್ಯಾಪಕನಾದನು. ಇಲ್ಲಿ ಮಹಾ ಆಮ್ಲಗಳನ್ನು ಬಳಸಿ ಧನಾತ್ಮಕ ಆವಿಷ್ಟಿತ ಇಂಗಾಲದ ಸಂಯುಕ್ತ ಕಾರ್ಬೋಕೆಟಯಾನ್ಗಳನ್ನು ಕುರಿತು ಅಧ್ಯಯನ ನಡೆಸಿದನು. ಜಾರ್ಜ್ ಪಡೆದ ಮಹಾಆಮ್ಲಗಳು ಪ್ರಬಲ ಆಮ್ಲಗಳೆಂದು ಕರೆಯಲಾಗುತ್ತಿರುವ ಗಂಧಕದ ಆಮ್ಲಗಳಿಗಿಂತ ಹಲವು ಸಹಸ್ರ ಕೋಟಿ ಪಟ್ಟು ಪ್ರಬಲವಾಗಿದ್ದವು. ಜಾರ್ಜ್ನಿಂದ ಮಹಾಆಮ್ಲ ರಸಾಯನಶಾಸ್ತ್ರದ ಶಾಖೆ ಚಿಗುರೊಡೆಯತೊಡಗಿತು. ಜಗತ್ತಿನಲ್ಲಿ ಕುಗ್ಗುತ್ತಿರುವ ಪಳೆಯುಳಿಕೆ ಮೂಲದ ಇಂಧನ, ಹೆಚ್ಚುತ್ತಿರುವ ಜನಸಂಖ್ಯೆ , ಹದಗೆಡುತ್ತಿರುವ ಪರಿಸರದ ಸಮಸ್ಯೆಗಳಿಗೆ ಪರಿಹಾರವಾಗಿ ಜಾರ್ಜ್ ತಂಡ, ಕ್ಯಾಲ್ಟೆಕ್ನ ಜೆಟ್ ಪ್ರೊಪೆಲ್ಫನ್ ಪ್ರಯೋಗಾಲಯದಲ್ಲಿ ಮೆಥಾನಾಲ್ನ್ನು ಬಳಸಿ ಕೃತಕವಾಗಿ ಎಲ್ಲಾ ಬಗೆಯ ಹೈಡ್ರೋಕಾರ್ಬನ್ ಇಂಧನಗಳನ್ನು, ಸಂಶ್ಲೇಷಿತ ಸಾಮಗ್ರಿ, ರಬ್ಬರ್, ಪ್ಲಾಸ್ಟಿಕ್ಗಳನ್ನು ಉತ್ಪಾದಿಸಲು ಯತ್ನಿಸಿತು. ಜಗತ್ತಿನಾದ್ಯಂತವಿರುವ ಸಹಾಸ್ರಾರು ಕಾರ್ಖಾನೆಗಳಿಂದ ಹೊರ ಹೊಮ್ಮುತ್ತಿರುವ ಇಂಗಾಲದ ಡೈ ಆಕ್ಸೈಡ್ನ್ನು ಮೆಥನಾಲ್ ತಯಾರಿಕೆಗೆ ಬಳಸಬಹುದಾದ ಮಾರ್ಗಗಳನ್ನು ಸಹ ಜಾರ್ಜ್ ವಿವರಿಸಿದ್ದಾನೆ. ಮಹಾ ಆಮ್ಲಗಳು, ಮೆಥನಾಲ್ ಇಂಧನ ಕುರಿತಾದಂತೆ ಜಾರ್ಜ್ನೊಂದಿಗೆ ಕನ್ನಡಿಗ ರಸಾಯನಶಾಸ್ತ್ರಜ್ಞ ಸೂರ್ಯಪ್ರಕಾಶ್ ಗಮನಾರ್ಹ ಕೆಲಸ ಮಾಡಿದ್ದಾನೆ.
ಮಾರಿಯೋ ,ಮೊಲಿನಾ –(1943--) 1995
Mario , Molina
ಮೆಕ್ಸಿಕೋ-ರಾಸಾಯನಿಕ ಇಂಜಿನಿಯರಿಂಗ್-ಓಝೋನ್ ಕ್ಷೀಣವಾಗುತ್ತಿರುವುದನ್ನು ತೋರಿಸಿದಾತ.
ಮಾರಿಯೋ ತಂದೆ ವಕೀಲನಾಗಿದ್ದು ಮೆಕ್ಸಿಕೋದ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಬೋಧಕನಾಗಿದ್ದನು. ಮುಂದಿನ ವರ್ಷಗಳಲ್ಲಿ ಈತ ಇಥಿಯೋಪಿಯಾ, ಆಸ್ಟ್ರೇಲಿಯಾ ಹಾಗೂ ಫಿಲಿಫೈನ್ಸ್’ಗಳಿಗೆ ರಾಯಭಾರಿಯಾಗಿದ್ದನು. 19 ಮಾರ್ಚ್ 1943ರಲ್ಲಿ ಮಾರಿಯೋ ಜನನವಾಂುತು. ಬಾಲಕನಾಗಿರುವಾಗ ಸೂಕ್ಷ್ಮದರ್ಶಕದ ಮೂಲಕ ಅಮಿಬಾ, ಪ್ಯಾರಾಮೀಸಿಯಂಗಳನ್ನು ನೋಡಿ ಮಾರಿಯೋ ರೋಮಾಂಚಿತನಾಗಿದ್ದನು. 1960ರಲ್ಲಿ ಮೆಕ್ಸಿಕೋ ವಿಶ್ವವಿದ್ಯಾಲಯದಲ್ಲಿ ರಾಸಾಯನಿಕ ಇಂಜಿನಿಯರಿಂಗ್ ವ್ಯಾಸಂಗಕ್ಕೆ ಸೇರಿದನು. ಪದವಿ ಪೂರ್ಣವಾದ ನಂತರ ಜರ್ಮನಿಯ ಫ್ರೀಬರ್ಗ್ ವಿಶ್ವವಿದ್ಯಾಲಯದಲ್ಲಿ ಬಹ್ವಂಗೀಕರಣದ (Polymerisation) ಗತಿಶೀಲತೆಯ ಅಧ್ಯಯನ ಕೈಗೊಂಡನು. 1968ರಲ್ಲಿ ಅಸಂಸಂ ಬಕ್ರ್ಲೆಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಭೌತ ರಸಾಯನಶಾಸ್ತ್ರದಲ್ಲಿನ ಹೆಚ್ಚಿನ ಶಿಕ್ಷಣಕ್ಕಾಗಿ ನೊಂದಾಯಿಸಿಕೊಂಡನು. ಇಲ್ಲಿ ಜಾರ್ಜ್ ಸಿ. ಪೆಮೆಂಟಲ್ ನೇತೃತ್ವದಲ್ಲಿ ರಾಸಾಯನಿಕ ಲೇಸರ್ ಬಳಸಿ ಅಣ್ವಯಿಕ ಗತಿಶೀಲತೆಯನ್ನು ಕುರಿತಾದ ಸಂಶೋಧಕ ತಂಡದಲ್ಲಿದ್ದನು. ರಾಸಾಯನಿಕ ಹಾಗೂ ದ್ಯುತಿರಾಸಾಯನಿಕ (Photochemistry) ಕ್ರಿಯೆಗಳಲ್ಲಿನ ಚೈತನ್ಯದ ಅಧ್ಯಯನ ನಡೆಸಿ 1972ರಲ್ಲಿ ಡಾಕ್ಟರೇಟ್ ಗಳಿಸಿದನು. ಇದಾದ ನಂತರ ಷೆರ್ವುಡ್ ರೌಲ್ಯಾಂಡ್ನ ಮಾರ್ಗದರ್ಶನದಲ್ಲಿ ವಿಕಿರಣ ಕ್ರಿಯೆಗಳಲ್ಲಿರುವ ಸ್ಥಿತ್ಯಂತರ ಚೈತನ್ಯದ ಯೋಜನೆಯಲ್ಲಿ ಪಾಲ್ಗೊಂಡನು. ಮಾನವ ಉತ್ಪಾದಿತ ಕ್ಲೋರೋಫ್ಲೂರೋ ಕಾರ್ಬನ್ಗಳ ವಾತಾವರಣದಲ್ಲಿ ಹೊಂದುವ ಸ್ಥಿತ್ಯಂತರದ ಅಧ್ಯಯನ ನಡೆಸಿದನು. ಕ್ಲೋರೋಫ್ಲುರೋ ಕಾರ್ಬನ್ಗಳು ವಾತಾವರಣದಲ್ಲಿ ಅಲ್ಪ ಔನ್ನತ್ಯದಲ್ಲಿರುವಾಗ ಜಡ ರಾಸಾಯನಿಕಗಳಂತೆ ಇರುತ್ತವೆ. ಆದರೆ ಸಾಕಷ್ಟು ಔನ್ಯತ್ಯಕ್ಕೇರಿದ ನಂತರ ಸೂರ್ಯನ ವಿಕಿರಣಗಳಿಗೆ ತುತ್ತಾಗಿ, ಶ್ಶೆಥಿಲ್ಯ (Decay) ಹೊಂದಿ ಕ್ಲೋರಿನ್ ಪರಮಾಣುಗಳಾಗಿ ಒಡೆಯುತ್ತವೆ. ಈ ಕ್ಲೋರಿನ್ ಪರಮಾಣುಗಳು ವಾತಾವರಣದ ಮೇಲ್ಪದರದಲ್ಲಿರುವ ಓಝೋನ್ನೊಂದಿಗೆ ವರ್ತಿಸುತ್ತವೆ. ಇದರ ಪರಿಣಾಮವಾಗಿ ಓಝೋನ್ ಪದರ ಕ್ರಮೇಣ ನಶಿಸತೊಡಗುತ್ತದೆ. ಅಂತರಿಕ್ಷದಿಂದ ಭೂಮಿಗೆ ಬರುವ ವಿಕಿರಣಗಳ ತಡೆಯುವಲ್ಲಿ ಓಝೋನ್ ಬಹು ಮುಖ್ಯ ಪಾತ್ರ ವಹಿಸುತ್ತದೆ. ಓಝೋನ್ ಪದರದ ನಾಶದಿಂದ, ಭೂಮಿಯಲ್ಲಿ ಜೀವಿಗಳ ಭವಿಷ್ಯಕ್ಕೆ ಮಾರಕ ಪರಿಣಾಮಗಳಾಗಲಿವೆಯೆಂದು, 28 ಜೂನ್ 1974ರಲ್ಲಿ ನೇಚರ್ ಪತ್ರಿಕೆಯಲ್ಲಿ ಲೇಖನವೊಂದನ್ನು ಬರೆದು ಷೆರ್ವುಡ್ ರೌಲ್ಯಾಂಡ್ ಹಾಗೂ ಮಾರಿಯಾ ಜಗತ್ತಿನ ಗಮನ ಸೆಳೆದರು. ಇದು ಇಡೀ ಜಗತ್ತಿನ ಪ್ರಜ್ಞಾವಂತರಲ್ಲಿ ಸಂಚಲನವನ್ನುಂಟು ಮೂಡಿತು. ಓಝೋನ್ ಪದರ ಕುಸಿತಾದ ಕಾರಣ ಗುರುತಿಸಿದ್ದುದಕ್ಕಾಗಿ ಮಾರಿಯಾ 1995ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಪೌಲ್, ಜೆ.ಕ್ರಟ್ಜೆನ್ (1933--) 1995
Paul , Crutzen
ಡೆನ್ಮಾರ್ಕ್-ರಸಾಯನಶಾಸ್ತ್ರ-ವಾಯುಗೋಳದ ಮೇಲ್ಪದರ, ಒಜೋನ್ ಕುರಿತಾದ ಅಧ್ಯಯನ ನಡೆಸಿದಾತ.
ಪೌಲ್ 3 ಡಿಸೆಂಬರ್ 1933ರಂದು ಆ್ಯಮಸ್ಟರ್ಡ್ಯಾಂನಲ್ಲಿ ಜನಿಸಿದನು. ಇವನದು ಪೋಲೀಷ್ ಹಾಗೂ ಜರ್ಮನ್ ಮಿಶ್ರ ಜನಾಂಗವಾಗಿದ್ದಿತು. ಈತನ ತಂದೆ ಕಾವಲುಗಾರನಾಗಿದ್ದರೆ, ತಾಯಿ ಆಸ್ಪತ್ರೆಯಲ್ಲಿ ಅಡುಗೆ ಮನೆಯಲ್ಲಿ ಕೆಲಸಕ್ಕಿದ್ದಳು. 1940ರಲ್ಲಿ ಡೆನ್ಮಾರ್ಕ್ ಜರ್ಮನಿ ವಶದಲ್ಲಿದ್ದಿತು. ಇದೇ ವರ್ಷ ಪೌಲ್ ಪ್ರಾಥಮಿಕ ಶಾಲೆಗೆ ಸೇರಿದನು. ನಾಝಿ ಆಡಳಿತ ಪೌಲ್ ಅಭ್ಯಸಿಸುತ್ತಿದ್ದ ಶಾಲೆಯನ್ನು ವಶಪಡಿಸಿಕೊಂಡಿದ್ದರಿಂದ ಅದರ ನೆಲೆಯನ್ನು ಹಲವಾರು ಬಾರಿ ಬದಲಾಯಿಸಲಾಯಿತು. 1944,1945ರಲ್ಲಿ ಚಳಿ ಬರಗಾಲ ಬಂದು ಜನ ಜೀವನ ದುರ್ಭರವಾಯಿತು. ನೀರು, ಆಹಾರ ಧಾನ್ಯ, ಗೃಹೋಪಯೋಗಿ ವಸ್ತುಗಳು ಪಡಿತರ ರೂಪದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಸರಬರಾಜಾಗುತ್ತಿದ್ದವು. ಪೌಲ್ನ ಶಾಲಾ ಸ್ನೇಹಿತದಲ್ಲಿ ಹಲವಾರು ಜನ ಹಸಿವೆ, ರೋಗ ರುಜಿನಗಳಿಂದ ಸಾವನ್ನಪ್ಪಿದರು. 1945ರಲ್ಲಿ ಸ್ವೀಡನ್ನ ವಿಮೋಚನಾ ಕೆಂಪು ಸೇನೆ ಆಗಸದಿಂದ ಆಹಾರ ಪೊಟ್ಟಣಗಳನ್ನು ಒದಗಿಸಿತೊಡಗಿದಾಗಿನಿಂದ ಜನರ ಸ್ಥಿತಿ ಸ್ವಲ್ಪ ಸುಧಾರಿಸತೊಡಗಿತು. ಇದಾದ ನಂತರ ಸಾಮಾನ್ಯ ಶಿಕ್ಷಣ ಸಾಧ್ಯವಾಯಿತು. ಪ್ರೌಢಶಾಲೆಯಲ್ಲಿಫೆ್ರಂಚ್, ಜರ್ಮನ್ ಇಂಗ್ಲೀಷ್ ಭಾಷೆಗಳೊಂದಿಗೆ ಗಣಿತ, ವಿಜ್ಞಾನಗಳನ್ನು ಪೌಲ್ ಅಭ್ಯಸಿಸಿದನು. ಪೌಲ್, ತಾಂತ್ರಿಕ ಶಾಲೆ ಸೇರಿ ಸಿವಿಲ್ ಇಂಜಿನಿಯರಿಂಗ್ ಪದವಿ ಗಳಿಸಿದನು. ಆ ಕಾಲದಲ್ಲಿ ಸಿವಿಲ್ ಇಂಜಿನಿಯರ್ಗಳಿಗೆ ಮಿಲಿಟರಿ ಸೇವೆ ಕಡ್ಡಾಯವಾಗಿದ್ದಿತು. ಆದ್ದರಿಂದ 1954ರಿಂದ 1958ರವರೆಗೆ, ಅ್ಯಮ್ಸ್ಟರ್ಡ್ಯಾಂನಲ್ಲಿ ಸರ್ಕಾರದ ಸೇತುವೆ ನಿರ್ಮಾಣ ನಿಗಮದಲ್ಲಿ ಸೇವೆ ಸಲ್ಲಿಸಿದನು. 1958ರಲ್ಲಿ ಸ್ಟಾಕ್ಹೋಂ ವಿಶ್ವವಿದ್ಯಾಲಯದ ಹವಾಮಾನ ಇಲಾಖೆ ಗಣಕ ಅಭಿಕರ್ಮಿಯ (Operator) ಹುದ್ದೆಗೆ ಪತ್ರಿಕೆಯಲ್ಲಿ ಜಾಹಿರಾತು ನೀಡಿತು. ಗಣಕದ ಬಗೆಗೆ ಏನೂ ತಿಳುವಳಿಕೆಯಿಲ್ಲದಿದ್ದರೂ, ತಾಂತ್ರಿಕ ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ಪೌಲ್ಗೆ ಕೆಲಸ ಸಿಕ್ಕಿತು. ಈ ಕಾಲದಲ್ಲಿ ಸ್ಟಾಕ್ಹೋಂ ವಿಶ್ವವಿದ್ಯಾಲಯದಲ್ಲಿ ಜಗತ್ತಿನ ಅತ್ಯಂತ ಶೀಘ್ರ ಹಾಗೂ ಮುಂದುವರೆದ ಗಣಕಗಳು ಸ್ಥಾಪನೆಗೊಂಡಿದ್ದವು. ಜಾರ್ಜ್ ವಿಲ್ನೊಂದಿಗೆ ನಾಕ್ಟಿಲೂಸೆಂಟ್ ಮೋಡಗಳ ಗುಣಲಕ್ಷಣಗಳನ್ನು ಅಳೆಯುವ ಯೋಜನೆಯಲ್ಲಿ ಪೌಲ್ ಪಾಲ್ಗೊಂಡನು. ಇವು 85 ಕಿ.ಮೀ.ಔನ್ನತ್ಯದಲ್ಲಿರುವ ತೀವ್ರ ತಂಪಾದ ಮೋಡಗಳು. ಹವಾಮಾನ ಮುನ್ಸೂಚನೆ ನೀಡುವ ಜಗತ್ತಿನ ಮೊಟ್ಟ ಮೊದಲ ಗಣಕ ಕ್ರಮವಿಧಿಗಳನ್ನು ಬರೆಯುವಲ್ಲಿ ಪೌಲ್ ಪಾಲ್ಗೊಂಡನು. ಆ ಕಾಲದಲ್ಲಿ ಆಲ್ಗಾಲ್, ಫೋರ್ಟ್ರಾನ್ನಂತಹ ಉನ್ನತ ಗಣಕ ಭಾಷೆಗಳು ಅಭಿವೃದ್ಧಿಗೊಂಡಿರಲಿಲ್ಲ. ಹಾಗಾಗಿ ಎಲ್ಲಾ ಕ್ರಮವಿಧಿಗಳನ್ನು ಯಂತ್ರ ಸಂಕೇತಗಳಲ್ಲಿ, ಬರೆಯಲಾಯಿತು. 1963ರಲ್ಲಿ ಗಣಿತ, ಸಂಖ್ಯಾಕಲನಶಾಸ್ತ್ರ (Statistics) , ಪವನಶಾಸ್ತ್ರಗಳ ವಿಷಯಗಳೊಂದಿಗೆ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಗೆ ಸೇರುವ ಅವಕಾಶ ಪೌಲ್ಗೆ ಬಂದೊದಗಿತು. 1965ರಲ್ಲಿ ಅಸಂಸಂ ವಿಜ್ಞಾನಿಯೊಬ್ಬನಿಗೆ ಸ್ತರಗೋಳ, ಮಧ್ಯಗೋಳ ಹಾಗೂ ನಿಮ್ನ ವಾಯುಗೋಳಗಳಲ್ಲಿನ ಆಮ್ಲಜನಕದ ಬಹುರೂಪಿಯ ಪ್ರಮಾಣ ವಿತರಣೆ ಅಧ್ಯಯನದ ಕ್ರಮವಿಧಿ ತಯಾರಿಸುವ ಹೊಣೆ ಪೌಲ್ ಹೆಗಲೇರಿತು. ಈ ಕಾರ್ಯಕ್ರಮದ ಅಧ್ಯಯನದಿಂದ ವಾತಾವರಣದಲ್ಲಿನ ಓಜೋನ್ ದ್ಯುತಿ ರಾಸಾಯನಿಕ ಗುಣಗಳನ್ನು ಅರಿಯುವ ಸಂದರ್ಭ ಬಂದೊದಗಿತು. ಸ್ತರಗೋಳದ (Stratosphere) ರಾಸಾಯನಿಕ ಲಕ್ಷಣಗಳ ಅಧ್ಯಯನ ಪೌಲ್ನ ಗುರಿಗಳಾದವು. ಮೋಡಗಳ ಭೌತ ಸ್ವರೂಪ, ಇಂಗಾಲದ ಚಕ್ರ, ಮಳೆ ನೀರಿನ ರಾಸಾಯನಿಕ ಸಂಯೋಜನೆಗಳು ಪರಿಶೀಲನೆಗೊಳಗಾಗಿ, ಇಲ್ಲಿ ಮೊದಲ ಬಾರಿಗೆ ಆಮ್ಲ ಮಳೆಯನ್ನು ಗುರುತಿಸಲಾಯಿತು. 1972ರಲ್ಲಿ ಸ್ಟಾಕ್ಹೋಂನಲ್ಲಿ ಜರುಗಿದ ವಿಶ್ವಸಂಸ್ಥೆಯ ಪರಿಸರ ಸಮ್ಮೇಳನದಲ್ಲಿ ವಿಶ್ವದ ಬಲಿಷ್ಟ ರಾಷ್ಟ್ರಗಳು ಪರಿಸರ ಸಂರಕ್ಷಣೆಯನ್ನು ಗಮನ ಸೆಳೆಯುವಂತಹ ಯತ್ನಗಳು ಪೌಲ್ ಸಂಗಡಿಗದಿಂದಾದವು. ವಾಯುಗೋಳದ ಮೇಲ್ಪದರ, ಓಜೋನ್ ಸಂಶೋಧನೆಗಳಿಗಾಗಿ ಪೌಲ್ 1995ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಷೆರ್’ವುಡ್, ರೌಲ್ಯಾಂಡ್ (1927--) 1995
Sherwood , Rowland
ಅಸಂಸಂ-ಭೌತರಸಾಯನಶಾಸ್ತ್ರ- ಓಝೋನ್ ಕ್ಷೀಣಿಸಿಕೆಯನ್ನು ಗುರುತಿಸಿದಾತ.
ಷೆರ್’ವುಡ್ ತಂದೆ ಓಹಿಯೋ ರಾಜ್ಯದ, ಓಹಿಯೋ ವೆಸ್ಲೆಯೆನ್ ವಿಶ್ವವಿದ್ಯಾಲಯದಲ್ಲಿ ಗಣಿತ ವಿಭಾಗದ ಪ್ರಾಧ್ಯಾಪಕನಾಗಿದ್ದನು. 28 ಜೂನ್ 1927ರಂದು ಷೆರ್’ವುಡ್ ಜನನವಾಯಿತು. ಡೆಲಾವೆರ್ ಪಟ್ಟಣದ ಸಾರ್ವಜನಿಕ ಶಾಲೆಗಳಲ್ಲಿ ಈತನ ವಿದ್ಯಾಭ್ಯಾಸ ಸಾಗಿತು. ಹದಿನಾರನೇ ವರ್ಷದವನಿರುವಾಗ ಶಿಕ್ಷಕನ ಉತ್ತೇಜನದಿಂದ ರಜಾಕಾಲದಲ್ಲಿ ಪವನಶಾಸ್ತ್ರ ಇಲಾಖೆಯಲ್ಲಿ ತಾಪಮಾನ, ಮಳೆಗಳ ದಾಖಲೆಯಿಡುವ ಕೆಲಸ ಒಪ್ಪಿಕೊಂಡನು. 1943ರಲ್ಲಿ ಪ್ರೌಢಾಶಾಲಾ ಶಿಕ್ಷಣ ಮುಗಿಸಿದನು. ಈತನ ಸ್ನೇಹಿತರೆಲ್ಲರೂ ಕಡ್ಡಾಯ ಮಿಲಿಟರಿ ತರಬೇತಿಗೆ ಹೋದರು. ಆದರೆ ಷೆರ್’ವುಡ್ಗೆ ಹದಿನೆಂಟು ವರ್ಷ ತುಂಬಿರದ ಕಾರಣ ಓಹಿಯೋ ವೆಸ್ಲೆಯೆನ್ ವಿಶ್ವವಿದ್ಯಾಲಯ ಸೇರಿದನು. 1945ರಲ್ಲಿ ಮಿಲಿಟರಿಯಲ್ಲಿ ರಡಾರ್ ಬಳಕೆ ತರಬೇತಿಗಾಗಿ ಸೇರಿದನು. ಇಲ್ಲಿ ಉತ್ತಮ ಕ್ರೀಡಾಪಟುವೆಂದು ಹೆಸರಾದನು. 1948ರಲ್ಲಿ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ರಸಾಯನ ಶಾಸ್ತ್ರದ ಅಧ್ಯಯನಕ್ಕೆ ಸೇರಿದನು. ಇಲ್ಲಿ 1940ರಲ್ಲಿ ಇಂಗಾಲದ ತೇದಿಕರಣಕ್ಕಾಗಿ (Dating) ನೊಬೆಲ್ ಪ್ರಶಸ್ತಿ ಗಳಿಸಿದ್ದ ಖ್ಯಾತ ವಿಜ್ಞಾನಿ ವಿಲ್ಲರ್ಡ್ ಎ¥sóï ಲಿಬ್ಬಿಯ ಕೆಳಗೆ ಷೆರ್ವುಡ್ ವ್ಯಾಸಂಗ ಸಾಗಿಸಿದನು. ಮ್ಯಾನ್ಹಟನ್ ಬೈಜಿಕಾಸ್ತ್ರ (Nuclear Weapon) ತಯಾರಿಕೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಖ್ಯಾತ ವಿಜ್ಞಾನಿಗಳು ಯುದ್ದದ ನಂತರ ಚಿಕಾಗೋ ವಿಶ್ವವಿದ್ಯಾಲಯ ಸೇರಿದ್ದರು. ಇದರಿಂದ ಭೌತರಸಾಯನಶಾಸ್ತ್ರ ವಿಭಾಗದಲ್ಲಿ ಹಬ್ಬದ ವಾತಾವರಣ ನೆಲೆಸಿದ್ದಿತು. ಯುರೆ , ಫರ್ಮಿ , ಮಾರಿಯಾ ಗೊಯೆಪರ್ಟ್, ಎಡ್ವರ್ಡ್ ಟೆಲ್ಲರ್’ರಂತಹ ಹಲವಾರು ವಿಶ್ವವಿಖ್ಯಾತರ ಉಪನ್ಯಾಸಗಳಿಂದ ಷೆರ್’ವುಡ್ನ ಸಂಶೋಧಕ ವ್ಯಕ್ತಿತ್ವ ರೂಪುಗೊಂಡಿತು. ಸೈಕ್ಲೋಟ್ರಾನ್ನಲ್ಲಿ ಉತ್ಪನ್ನವಾದ ವಿಕಿರಣಶೀಲ ಬ್ರೋವೈಟ್ ಪರಮಾಣುಗಳನ್ನು ಕುರಿತಾಗಿ ಸಂಪ್ರಬಂಧ ಮಂಡಿಸಿದನು. ಇದರಲ್ಲಿ ವಿಕಿರಣಶೀಲ ಪರಮಾಣುವಿನ ಸೃಷ್ಟಿಯೊಂದಿಗೆ, ಅದ`ಕ್ಕಿರುವ ಎಲ್ಲಾ ರಾಸಾಯನಿಕ ಬಂಧಗಳೂ ಕಳಚುವುದೆಂದು ವಿವರಿಸಿದನು. 1952ರಲ್ಲಿ ಡಾಕ್ಟರೇಟ್ ಗಳಿಸಿದ ಷೆರ್’ವುಡ್ ಪ್ರಿನ್ಸ್ಟನ್ ವಿಶ್ವವಿದ್ಯಾಲಯ ಸೇರಿದನು. ಗ್ಲುಕೋಸ್ ಹಾಗೂ ಲಿಥಿಯಂ ಕಾರ್ಬೋನೇಟ್ನ ಹರಳುರೂಪದ ಮಿಶ್ರಣವನ್ನು ನ್ಯೂಟ್ರಾನ್ ಅಭಿವಾಹದಲ್ಲಿರಿಸಿ (Flux), ಒಂದೇ ಹೆಜ್ಜೆಯಲ್ಲಿ ಟ್ರೈಷಿಯಂ ಗುರುತಿಕೆಯಿಂದ (Labeling) ಗ್ಲುಕೋಸ್ ಸಂಶ್ಲೇಷಣೆಯ ವಿಧಾನ ರೂಪಿಸಿದನು. ಇದು ಹೊಸ ಅಧ್ಯಯನಗಳಿಗೆ ಮುಂದೆ ಕಾರಣವಾಯಿತು. 1956ರಲ್ಲಿ ಕ್ಯಾನ್ಸಾಸ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಅಲ್ಲಿ ವಿಕಿರಣಶೀಲ ರಸಾಯನಶಾಸ್ತ್ರದ ವಿಭಾಗವನ್ನು ಅಭಿವೃದ್ಧಿಗೊಳಿಸಿದನು. 1964ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಆರಂಭವಾದ ರಸಾಯನಶಾಸ್ತ್ರ ವಿಭಾಗದ ಕಾರ್ಯದರ್ಶಿಯಾದನು. 1970ರಲ್ಲಿ ಹುದ್ದೆಗೆ ರಾಜಿನಾಮೆ ನೀಡಿ, ಸಂಶೋಧನೆಗೆ ಇಳಿದನು. ವಾಯುಗೋಳದ ರಸಾಯನಶಾಸ್ತ್ರದಲ್ಲಿ ಷೆರ್’ವುಡ್ಗೆ ಅತ್ಯಾಸಕ್ತಿಯಿದ್ದಿತು. 1972ರಲ್ಲಿ ಫ್ಲೊರಿಡಾದ ಫೋಟ್ ಲೌಡೆರ್’ಡೇಲ್’ನಲ್ಲಿ ಸಮ್ಮೇಳನವೊಂದು ಜರುಗಿತು. ಇದರಲ್ಲಿ ಇಂಗ್ಲಿಷ್ ವಿಜ್ಞಾನಿ ಜಿಮ್ ಲವ್ಲಾಕ್ ಮಾನವ ಕಾರಣವಾದ ಕ್ಲೋರೋ ಫ್ಲೂರೋಕಾರ್ಬನ್ ಅಂಶ ವಿಶ್ವದಾದ್ಯಂತ ಹರಡಿರುವುದನ್ನು ವಿವರಿಸಿದನು. ಕ್ಲೋರೋಫ್ಲೂರ್ಫ್ ಕಾರ್ಬನ್ ಜಡ ರಾಸಾಯನಿಕವಾಗಿದ್ದು ಇದರ ಕುರುಹಿನಿಂದ ವಾಯುವಿನ ಭೂರಿ ಸಂಚಲನೆಯನ್ನು (Mass Movement) ನಿರ್ಧರಿಸುವುದು ಸಾಧ್ಯವೆಂದು ಹೇಳಿದನು. ರಾಸಾಯನಿಕ ಚಲನಶಾಸ್ತ್ರ ಮತ್ತು ದ್ಯುತಿರಸಾಯನಶಾಸ್ತ್ರದ (Photochemistry) ಆಳ ಅರಿವಿದ್ದ ಷೆರ್’ವುಡ್ ಯಾವುದೇ ರಾಸಾಯನಿಕ ವಾತಾವರಣದಲ್ಲಿ ಬಹು ದೀರ್ಘ ಕಾಲ ಕ್ರಿಯಾರಹಿತವಾಗಿರಲು ಸಾಧ್ಯವಿಲ್ಲವೆಂದು ಅರಿತನು. ಭೂಮಿಯ ಅಧಿಕ ಔನ್ನತ್ಯಗಳಲ್ಲಿ ಸೂರ್ಯರಶ್ಮಿಯಿಂದ ಕ್ಲೋರೋಫ್ಲೂರೋ ಕಾರ್ಬನ್ ಒಡೆದು ಘಟಕಗಳಾಗುವುದು ಷೆರ್’ವುಡ್ಗೆ ಮನದಟ್ಟಾಯಿತು. ನಂತರ ಮಾರಿಯೊ ಮೊಲಿನಾನೊಂದಿಗೆ ಮುಂದುವರಿದ ಸಂಶೋಧನೆಗಳಿಂದ ಕ್ಲೊರೋಫ್ಲೂರೋ ಕಾರ್ಬನ್ನಿಂದ ವಾತಾವರಣದಲ್ಲಿನ ಓಝೋನ್ ಪದರಕ್ಕೆ ಧಕ್ಕೆಯಾಗುತ್ತಿರುವುದು ತಿಳಿದು ಬಂದಿತು. ಇದರ ಪರಿಣಾಮವಾಗಿ ಭೂಮಿ ಬಿಸಿಯಾಗುತ್ತಿದ್ದು, ವಿಶ್ವ ಕಿರಣಗಳ ತೀವ್ರತೆಯನ್ನು ಕಡಿಮೆ ಮಾಡುತ್ತಿದ್ದ ಓಝೋನ್ ಪದರವಿಲ್ಲದೆ ಜೀವ ಜಗತ್ತಿಗೆ ಮುಂದೆ ಅಪಾಯ ಎದುರಾಗುವ ವಿಷಯ ತಿಳಿದು ಬಂದಿತು. ಇದು ಜಗತ್ತಿನಾದ್ಯಂತ ಹೊಸ ಸಂಚಲನವನ್ನುಂಟು ಮಾಡಿತು. ಕ್ಲೋರೋಫ್ಲೂರೋ ಕಾರ್ಬನ್ ಹಾಗೂ ಓಝೋನ್ ಕ್ಷೀಣಿಸಿಕೆಯ ಸಂಶೋಧನೆಗಾಗಿ ಷೆರ್ವುಡ್ 1995ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಹೆರಾಲ್ಡ್ , ಡಬ್ಲ್ಯೂ ಕ್ರೋಟೋ ಸರ್ (1937--)
Harold , W.Kroto Sir (CHE.) 1996
ಬ್ರಿಟನ್-ರಸಾಯನಶಾಸ್ತ್ರ-
ಬರ್ಲಿನ್ ಮೂಲದವನಾಗಿದ್ದ ಹೆರಾಲ್ಡ್ ತಂದೆ, ತಾಯಿ 193೦ ರ ಅವಧಿಯಲ್ಲಿ ನಿರ್ವಸಿತರಾಗಿ ಬ್ರಿಟನ್ಗೆ ಬಂದು ಬೊಲ್ಟನ್ ಪಟ್ಟಣದಲ್ಲಿ ನೆಲೆಸಿದ್ದರು. ಈ ಪಟ್ಟಣ ಕೈಗಾರಿಕಾ ಕ್ರಾಂತಿಯ ಅಂಗವಾಗಿ ಖ್ಯಾತವಾಗಿದ್ದಿತಲ್ಲದೆ , ಹತ್ತಿ ಹಾಗೂ ಬಟ್ಟೆ ಗಿರಣಿಗಳಿಂದ ಸದಾ ಕ್ರಿಯಾಶೀಲವಾಗಿರುತ್ತಿದ್ದಿತು. ಹೆರಾಲ್ಡ್ ತಂದೆ ಸಣ್ಣ ವ್ಯಾಪಾರಿ ಮಳಿಗೆ ಹೊಂದಿದ್ದನು. 7 ಅಕ್ಟೋಬರ್ 1939 ರಂದು ಹೆರಾಲ್ಡ್ ಜನನವಾಯಿತು. ಎರಡನೇ ಜಾಗತಿಕ ಯುದ್ದದಿಂದ ಹೆರಾಲ್ಡ್ ತಂದೆ ತನ್ನ ವೃತ್ತಿಯಲ್ಲಿ ಭಾರಿ ಏರುಪೇರುಗಳನ್ನು ಕಂಡು 1955ರಲ್ಲಿ ಒಂದು ಸಣ್ಣ ಬಲೂನ್ ಕಾರ್ಖಾನೆ ಪ್ರಾರಂಭಿಸುವಲ್ಲಿ ಯಶಸ್ವಿಯಾದನು. ಹೆರಾಲ್ಡ್ ತನ್ನ ತಂದೆಗೆ ಸಹಾಯಕನಾಗಿ ದುಡಿಯುತ್ತಿದ್ದನು. ಆದಾಂiÀi ಹೇಳಿಕೊಳ್ಳುವಂತಿರಲಿಲ್ಲವಾದರೂ, ಹೆರಾಲ್ಡ್’ನ ವಿದ್ಯಾಭ್ಯಾಸಕ್ಕೆ ಅಗತ್ಯವಾದುದನ್ನು ಒದUಸಲು ಆತನ ತಂದೆ ಶ್ರಮಿಸುತ್ತಿದ್ದನು. ರಸಾಯನಶಾಸ್ತ್ರದ ಅಧ್ಯಯನಕ್ಕಾಗಿ ಷೆಫಿಲ್ಡ್ ವಿಶ್ವವಿದ್ಯಾಲಯ ಸೇರಿದ ಹೆರಾಲ್ಡ್ ರೋಹಿತಶಾಸ್ತ್ರದಲ್ಲಿ ಸಂಶೋಧನೆ ನಡೆಸಿ ಡಾಕ್ಟರೇಟ್ ಗಳಿಸಿದನು. 1964ರಲ್ಲಿ ಬಂದ ಆಹ್ವಾನ ಒಪ್ಪಿ ಕೆನಡಾದ ಒಟ್ಟೋವಾದಲ್ಲಿನ ನ್ಯಾಷನಲ್ ರಿಸರ್ಚ್ ಕೌನ್ಸಿಲ್ಗೆ ಹೋದನು. ಇಲ್ಲಿ ಗೆರ್ಹಾಡ್ ಹೆಜ್ಬರ್ಗ್ ಜಗತ್ಪ್ರಸಿದ್ದವಾದ ರೋಹಿತಶಾಸ್ತ್ರ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿದ್ದನು. ಇಲ್ಲಿ ಮಿಂಚು ದ್ಯುತಿಕ್ರಿಯೆ ಹಾಗೂ ರೋಹಿತಗಳನ್ನು ಕುರಿತಾಗಿ ಹಲವಾರು ಅಧ್ಯಯನ ನಡೆಸಿದನು. 1966ರಲ್ಲಿ ಅಸಂಸಂಗಳಿಗೆ ತೆರಳಿ ಬೆಲ್ ಪ್ರಯೋಗಾಲಯದಲ್ಲಿ ಎಲೆಕ್ಟಾನ್ಗಳ ಸ್ಥಾನಾಂತರತೆ ಕುರಿತಾಗಿ ಅಧ್ಯಯನ ಸಾಗಿಸಿದನು. 1970ರಲ್ಲಿ ಸೂಕ್ಷ್ಮ ತರಂಗ ರೋಹಿತಶಾಸ್ತ್ರದಲ್ಲಿ ಶ್ರಮಿಸಿ ಹೀಲಿಯಂ-ನಿಯಾನ್ ಮತ್ತು ಆರ್ಗಾನ್-ಅಯಾನ್ ಲೇಸರ್ ಯಂತ್ರ ನಿರ್ಮಿಸಿ, ದ್ರವಗಳಲ್ಲಿ ಅಣುಗಳ ಅಂತಕ್ರಿಯೆಯನ್ನು ಅಭ್ಯಸಿಸಿ, ಸೈದ್ದಾಂತಿಕವಾಗಿ ಲೆಕ್ಕಾಚಾರ ಹಾಕಿದನು. ಮುಂದೆ ಇದೇ ಯಂತ್ರವನ್ನು ಸುಧಾರಿಸಿ ನಡೆಸಿದ ವಿಸ್ತೃತ ಪ್ರಯತ್ನಗಳಿಂದಾಗಿ ಊಅ5ಓ ಸಂಯುಕ್ತ ಸರಣಿಗಳ ಅಣುಗಳನ್ನು ಅರಿಯಲು ಸಾಧ್ಯವಾಯಿತು. ಇದರ ¥sóÀಲವಾಗಿ 1985ರಲ್ಲಿ ಇಂಗಾಲದ ಹೊಸ ರೂಪ ಅ5 ಅನಾವರಣಗೊಂಡಿತು. ಈ ಸಾಧನೆಗಾಗಿ ಹೆರಾಲ್ಡ್ 1996ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. 1995ರ ನಂತರ ಬಿಬಿಸಿ ವಾಹಿನಿಗೆ ಕಾರ್ಯಕ್ರಮ ತಯಾರಿಸುವ ಪ್ಯಾಟ್ರಿಕ್ ರೀಮ್ಸ್ನೊಂದಿಗೆ ವೆಗಾ ಸೈನ್ಸ್ ಟ್ರಸ್ಟ್ ಸ್ಥಾಪಿಸಿದನು. ಈ ಸಂಸ್ಥೆ ಈಗ ಅತ್ಯುತ್ತಮ ವೈಜ್ಞಾನಿಕ ಸಾಕ್ಷ್ಯ ಚಿತ್ರೀ ಹಾಗೂ ಸಿನಿಮಾಗಳನ್ನು ನಿರ್ಮಿಸುತ್ತದೆ. ನೊಬೆಲ್ ಪ್ರಶಸ್ತಿ ಸಮಿತಿ ತಮ್ಮೊಂದಿಗೆ ಶ್ರಮಿಸಿದ ಹಲವಾರು ಜನರನ್ನು ಸಾಧನೆಯನ್ನು ಪರಿಗಣಿಸಿಲ್ಲವೆಂದೂ, ಇದುಬೇರೆ ಶಾಖೆಗಳಲ್ಲೂ ನಿಜವೆಚಿದೂ ಅದು ಬದಲಾಗಬೇಕೆಂದು ಹೆರಾಲ್ಡ್ ಅಭಿಪ್ರಾಯ ಹೊಂದಿದ್ದಾನೆ. ವಿದ್ಯಾರ್ಥಿಗಳಿಗೆ, ಜನ ಸಾಮಾನ್ಯರಿಗೆ ವಿಜ್ಞಾನವನ್ನು ತಲುಪಿಸುವಲ್ಲಿ ತನಗೆ ಅಪಾರ ಆತ್ಮ ತೃಪ್ತಿ ದಕ್ಕಿದೆಯೆಂದು ಹೆರಾಲ್ಡ್ ಹೇಳಿದ್ದಾನೆ.
ರಿಚರ್ಡ್, ಸ್ಮಾಲಿ (1943--) 1996
Richard , Smalley
ಅಸಂಸಂ-ರಸಾಯನಶಾಸ್ತ್ರಜ್ಞ-ಇಂಗಾಲದ ಹೊಸ ಬಹುರೂಪಿಯನ್ನು (Allotropy) ಅನಾವರಣಗೊಳಿಸಿದಾತ.
1943 ಜೂನ್ 6 ರಂದು ರಿಚರ್ಡ್ ಜನಿಸಿದನು. 1965ರಲ್ಲಿ ಮಿಷಿಗನ್ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದ ಪದವಿ ಗಳಿಸಿ, 1973ರಲ್ಲಿ ಪ್ರಿನ್ಸ್’ಟನ್’ನಿಂದ ಡಾಕ್ಟರೇಟ್ ಸಂಪಾದಿಸಿದನು. 1976ರಿಂದ ರೈಸ್ ವಿಶ್ವವಿದ್ಯಾಲಯ ಸೇರಿ, 1990ರಲ್ಲಿ ಅಲ್ಲಿ ಪ್ರಾಧ್ಯಾಪಕನಾದನು. 1966ರಲ್ಲಿ ರೈಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ನ್ಯಾನೋಸ್ಕೇಲ್ ಸೈನ್ಸ್ ಅಂಡ್ ಟೆಕ್ನಾಲಜಿಯ ನಿರ್ದೇಶಕನಾದನು. ಈ ಸಂಸ್ಥೆಯಲ್ಲಿ ಅಣುಗಾತ್ರದ ಸೂಕ್ಷ್ಮಾತಿಸೂಕ್ಷ್ಮವಾದ ನ್ಯಾನೋ ನಳಿಕೆಗಳ ಮೇಲೆ ಸಂಶೋಧನೆ ನಡೆಸಿದನು. 1992ರಲ್ಲಿ ರಿಚರ್ಡ್ ಇ.ಓ ಲಾರೆನ್ಸ್ ಪ್ರಶಸ್ತಿ ಗಳಿಸಿದನು. ಕಾಲ್ಚೆಂಡಿನ ಆಕಾರದಲ್ಲಿ ಪರಮಾಣುಗಳು ಜೋಡಣೆಗೊಂಡಿರುವ ಇಂಗಾಲದ ಹೊಸ ಬಹುರೂಪಿಯನ್ನು ಅನಾವರಣಗೊಳಿಸಿದ್ದಕ್ಕಾಗಿ ರಿಚರ್ಡ್, ರಾಬರ್ಟ್ ಎಫ್ ಕಾರ್ಲ್ ಜೂ, ಸರ್ ಹೆರಾಲ್ಡ್ ಕ್ರೋಟೋರೊಂದಿಗೆ, 1996ರ ನೊಬೆಲ್ ಪ್ರಶಸ್ತಿ ಹಂಚಿಕೊಂಡನು. ಈಗ ಇಂಗಾಲದ ಈ ಹೊಸ ಬಹುರೂಪಿಯನ್ನು ಬಕ್ಮಿನ್ಸ್ಟರ್ ಪುಲ್ಲೆರೆನೆ ಎಂದು ಹೆಸರಿಸಿ, ಚಿಕ್ಕದಾಗಿ ಬಕಿಬಾಲ್ ಎಂದು ಕರೆಯಲಾಗುತ್ತಿದೆ.
ರಾಬರ್ಟ್, ಎಫ್ ಕರ್ಲ್ ಜೂ (1933--) 1996
Robert F. Curl Jr
ಅಸಂಸಂ-ರಸಾಯನಶಾಸ್ತ್ರ- ಇಂಗಾಲದ ಹೊಸ ಬಹುರೂಪಿಯನ್ನು (Allotropy) ಅನಾವರಣಗೊಳಿಸಿದಾತ.
ರಾಬರ್ಟ್, 1933 ಆಗಸ್ಟ್ 23ರಂದು ಟೆಕ್ಸಾಸ್ ಪ್ರಾಂತದ ಅಲೈಸ್ನಲ್ಲಿ ಜನಿಸಿದನು. ಈತನ ತಂದೆ, ಚರ್ಚ್ನಲ್ಲಿ ಮೆಥಾಡಿಸ್ಟ ಮಿನಿಸ್ಟರ್ನಾಗಿದ್ದನು. ದಕ್ಷಿಣ ಟೆಕ್ಸಾಸ್, ಅಲೈಸ್, ಬ್ರಾಡಿ, ಸ್ಯಾನ್ ಅ್ಯಂಟೋನಿಯೋ ಕಿಂಗ್ಸ್ ವಿಲ್ಲೆಯಂತಹ ಪಟ್ಟಣಗಳಲ್ಲಿ ಬಾಲ್ಯವನ್ನು ಕಳೆದ ರಾಬರ್ಟ್, ಒಂಬತ್ತು ವರ್ಷದವನಿರುವಾಗ ರಾಸಾಯನಿಕ ಉಪಕರಣಗಳನ್ನು ಉಡುಗೊರೆಯಾಗಿ ಪಡೆದನು. ಇವುಗಳೊಂದಿಗೆ ಒಂದು ವಾರ ಕಾಲ ಆಟವಾಡಿದ ರಾಬರ್ಟ್ ಮುಂದೆ ತಾನೊಬ್ಬ ದೊಡ್ಡ ರಸಾಯನಶಾಸ್ತ್ರಜ್ಞನಾಗಬೇಕೆಂದು ಕನಸು ಕಂಡನು. ಪ್ರೌಢಶಾಲೆಯ ವೇಳೆಗೆ ಈ ಕನಸನ್ನು ನನಸಾಗಿಸಲು ಯತ್ನಿಸಿದ ರಾಬರ್ಟ್ಗೆ ಉಪಧ್ಯಾಯಿನಿ ಲೊರೆನಾ ಡೇವಿಸ್ನಿಂದ ಭಾರಿ ಬೆಂಬಲ ದಕ್ಕಿತು. ರಾಬರ್ಟ್ನ ತಂದೆ ಉತ್ತಮ ಸ್ಥಾನದಲ್ಲಿದ್ದರೂ, ಆರ್ಥಿಕವಾಗಿ ಅಂತಹ ಸ್ಥಿತಿವಂತನಾಗಿರಲಿಲ್ಲ. ರಾಬರ್ಟ್ ಶಿಕ್ಷಣ ಶುಲ್ಕವಿಲ್ಲದ ರೈಸ್ ಸಂಸ್ಥೆ ಸೇರಿ ರಸಾಯನಶಾಸ್ತ್ರವನ್ನು ಆರಿಸಿಕೊಂಡನು. ಇಲ್ಲಿ ವಿದ್ಯಾಭ್ಯಾಸಮುಗಿಸಿ, ಫಿûಟ್ಜರ್ ಮಾರ್ಗದರ್ಶನದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಲು ಬಕ್ರ್ಲೆಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸೇರಿದನು. ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ, ಹಾರ್ವರ್ಡ್ನಲ್ಲಿ ಇ.ಬ್ರೈಟ್ನೊಂದಿಗೆ ವೃತ್ತಿ ಜೀವನ ಪ್ರಾರಂಭಿಸಿದನು. ನಂತರ ರೈಸ್ ವಿಶ್ವವಿದ್ಯಾಲಯದ ಆಹ್ವಾನಕ್ಕೆ ಓಗೊಟ್ಟು ಉಪ ಪ್ರಧ್ಯಾಪಕನಾದನು. ಇಲ್ಲಿ ವಿದ್ಯಾರ್ಥಿಯಾಗಿದ್ದ ಜಿಮ್ ಕಿನ್ಸ್ ಸಹಕಾರದಲ್ಲಿ ಸ್ಥಿರ ಮುಕ್ತಾಣು (radicle) ರೋಹಿತಗಳ (Spectrum) ಅಧ್ಯಯನ ನಡೆಸಿದನು. 1958ರಿಂದ ರೈಸ್ ಸಂಸ್ಥೆಯಲ್ಲಿರುವಾಗ ರಾಬರ್ಟ್ ಭೌತ ರಸಾಯನಶಾಸ್ತ್ರದಲ್ಲಿನ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸತೊಡಗಿದನು. ಕಾಲ್ಚೆಂಡಿನ ಆಕಾರದಲ್ಲಿ ಅಣುಗಳು ಜೋಡಣೆಗೊಂಡಿರುವ ಇಂಗಾಲದ ಹೊಸ ಬಗೆಯ ಬಹುರೂಪಿಯನ್ನು ಅನಾವರಣಗೊಳಿಸಿದ್ದಕ್ಕಾಗಿ ರಾಬರ್ಟ್, ರಿಚರ್ಡ್ ಸ್ಮಾಲಿ ಹಾಗೂ ಹ್ಯಾರಿ ಕ್ರೋಟೋರೊಂದಿಗೆ 1996ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಗಳಿಸಿದನು.
ಜಾನ್ , ಇ. ವಾಕರ್ –(1941--) 1997
John , E.Walker
ಇಂಗ್ಲೆಂಡ್-ರಸಾಯನಶಾಸ್ತ್ರ- ಅಡೆನೋಸೈನ್ ಟ್ರೈ ಫಾಸ್ಫೇಟ್ ಸಂಶ್ಲೇಷಣೆಯ ಹಿನ್ನೆಲೆಯ ಕಿಣ್ವದ ಕ್ರಿಯಾಸ್ವರೂಪ (Enzyme A Process) ಅನಾವರಣಗೊಳಿಸಿದಾತ.
ಜಾನ್ 7 ಜನವರಿ 1941ರಲ್ಲಿ ಯಾರ್ಕ್ಷೈರ್ನ ಹ್ಯಾಲಿಫ್ಯಾಕ್ಸ್,ನಲ್ಲಿ ಜನಿಸಿದನು. ಈತನ ತಂದೆ ಗಾರೆ ಕೆಲಸ ಮಾಡುತ್ತಿದ್ದನು. ಕಾಲ್ಚೆಂಡು, ಕ್ರಿಕೆಟ್ ಜಾನ್ನ ನೆಚ್ಚಿನ ಆಟಗಳಾಗಿದ್ದು ತಂಡದ ಮುಖಂಡನಾಗಿ ಹಲವಾರು ಪಂದ್ಯಗಳಲ್ಲಿ ಭಾಗವಹಿಸಿದ್ದನು. 1960ರಲ್ಲಿ ಆಕ್ಸ್’ಫರ್ಡ್’ನ ಸೇಂಟ್ ಕ್ಯಾಥರೀನ್ ಕಾಲೇಜನ್ನು ಸೇರಿ 1964ರಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಗಳಿಸಿದನು. 1965ರಲ್ಲಿ ಆಕ್ಸ್ಫರ್ಡ್’ನ ವಿಲಿಯಂ ಡನ್ ಸ್ಕೂಲ್ ಆಫ್ಪೆಥಾಲಜಿ ಸೇರಿ ಪೆಪ್ಟೈಡ್ ಪ್ರತಿಜೈವಿಕಗಳನ್ನು ಕುರಿತಾಗಿ ಸಂಶೋಧನೆ ನಡೆಸಿದನು. ಬಿಬಿಸಿ ದೂರದರ್ಶನ ಜಾನ್ ಕೆಂಡ್ರ್ಯೂ ಮಾರ್ಗದರ್ಶನದಲ್ಲಿ ನಿರ್ಮಿಸಿ ಬಿತ್ತರಿಸಿದ್ದ ದಿ ಥ್ರೆಡ್ ಆಫ್ ಲೈಫ್ ಹೆಸರಿನ ಕಾರ್ಯಕ್ರಮ ಜಾನ್ ಅಣ್ವಯಿಕ ಜೀವಶಾಸ್ತ್ರದಲ್ಲಿ (Molecular Biology) ಆಸಕ್ತಿ ತಳೆಯುವಂತೆ ಮೂಡಿತು. 1969-1971ರವರೆಗೆ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದ ಔಷಧಿಶಾಸ್ತ್ರ ಶಾಲೆಯಲ್ಲಿ ಕೆಲಸ ಮಾಡಿದನು. 1974ರಲ್ಲಿಫೆ್ರಂಡ್ ಸ್ಯಾಂಜರ್ನ ಆಹ್ವಾನದ ಮೇರೆಗೆ ವೈದ್ಯಕೀಯ ಸಂಶೋಧನಾ ಸಮಿತಿಯ, ಅಣ್ವಯಿಕ ಜೀವಶಾಸ್ತ್ರ ವಿಭಾಗದ ಪ್ರಯೋಗಾಲಯದ ಪ್ರೊಟೀನ್ ಹಾಗೂ ಜೈವಿಕ ಆಮ್ಲ ರಸಾಯನಶಾಸ್ತ್ರ ವಿಭಾಗ ಸೇರಿದನು. ಈ ಸಂಸ್ಥೆಯಲ್ಲಿ ಜೀವವಿಜ್ಞಾನದಲ್ಲಿ ಕ್ರಾಂತಿಯನ್ನೇ ತಂದ ನೂರಾರು ವಿಜ್ಞಾನಿಗಳು ಕಾರ್ಯನಿರತರಾಗಿದ್ದರು. ಸ್ಯಾಂಜರ್ ಡಿಎನ್ಎ ಸರಣಿ ನಿರ್ಧಾರಕ್ಕೆ ಹೊಸ ವಿಧಾನವನ್ನು ವಿವರಿಸಿದ್ದನು. ಇದನ್ನು ಬಳಸಿ ಜಾನ್ ಎಫ್.ಎಕ್ಸ್-174 ಹಾಗೂ ಜಿ-4 ಬ್ಯಾಕ್ಟಿರಿಯೋಫೇಜ್’ಗಳ ತಳಿನಕಾಶೆ (Genome) ಮತ್ತು ಮೈಥ್ರೋಕಾಂಡ್ರಿಯಾದ ತಳಿನಕಾಶೆ ಪಡೆದನು. ಜಾನ್ನ ಸಂಶೋಧನೆಗಳಿಂದ ಅಡೆನೋಸೈನ್ಟ್ರೈಫಾಸ್ಫೇಟ್’ನ (ಎ.ಟಿ.ಪಿ) ಸಂಶ್ಲೇಷಣೆಯ ಹಿನ್ನೆಲೆಯಲ್ಲಿ ಕ್ರಿಯಾಶೀಲವಾಗಿರುವ ಕಿಣ್ವ ಮೂಲದ ಕ್ರಿಯಾವಿನ್ಯಾಸ ಸ್ಪಷ್ಟಗೊಂಡಿತು. ಇದಕ್ಕಾಗಿ ಜಾನ್ 1997ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಪೌಲ್, ಡಿ. ಬಾಯರ್ (1918-) 1997
Paul D. Boyer
ಅಸಂಸಂ-ರಸಾಯನಶಾಸ್ತ್ರ- ಎಟಿಪಿ ಸಂಶ್ಲೇಷಣೆಯಲ್ಲಿನ ಮಧ್ಯಂತರ ಕಾರ್ಯ ನಿರ್ವಹಿಸುವ ಹೊಸ ಪ್ರೊಟೀನ್ ಅನಾವರಣಗೊಳಿಸಿದಾತ.
ಪೌಲ್ ಉತ್ಸಾಹ ಪ್ರಾಂತ್ಯದ ಪ್ರೋವೋ ಹಳ್ಳಿಯಲ್ಲಿ ಜನಿಸಿದನು. ಈ ಹಳ್ಳಿ ದೂರದರ್ಶನದಂತಹ ಆಧುನಿಕ ಸೌಲಭ್ಯಗಳಿಂದ ಬಹುಕಾಲ ದೂರವಿದ್ದಿತು. ಪೌಲ್ ತನ್ನ ಜೀವನದ ಮೊದಲ 21 ವರ್ಷಗಳನ್ನು ಇಲ್ಲಿಯೇ ಕಳೆದನು. ಪೌಲ್ನ ಪೂರ್ವಿಕರು ಮೂಲತ: ಜರ್ಮನಿಯವರು ಐದು ಮಕ್ಕಳ ಕುಟುಂಬದಲ್ಲಿ, ಕೊನೆಯನಾದ ಪೌಲ್, ಎಂಟು ವರ್ಷದವನಿರುವಾಗ ತಾಯಿಯನ್ನು ಕಳೆದುಕೊಂಡನು. 1930ರಲ್ಲಿ ಅಸಂಸಂಗಳು ಎದುರಿಸಿದ ಆರ್ಥಿಕ ಸಂಕಷ್ಟದ ಸುಳಿಗಾಳಿಗೆ ಪೌಲ್ ಕುಟುಂಬ ಸಿಲುಕಿತು. ಕ್ರಿಸ್ಮಸ್ ಉಡುಗೊರೆಯಾಗಿ ದೊರೆತ ಪುಸ್ತಕವೊಂದರಿಂದ ಪೌಲ್ಗೆ ರಸಾಯನಶಾಸ್ತ್ರದಲ್ಲಿ ಆರಂಭಿಕ ಆಸಕ್ತಿಗಳು ಮೂಡಿದವು. ಪ್ರೋವೋದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಪೌಲ್ ಉತ್ತಮ ದರ್ಜೆಂiÀiಲ್ಲಿ ಉತ್ತೀರ್ಣನಾಗಿ ¥sóÁರೆಲ್ ಜೂನಿಯರ್ ಹೈಸ್ಕೂಲ್ ಸೇರಿದನು. ಇಲ್ಲಿ ರೀಸ್ ಬೆಂಚ್ ಎನ್ನುವ ಉಪಾಧ್ಯಾಯನಿಂದ ರಸಾಯನ ಶಾಸ್ತ್ರದಲ್ಲಿ ಮುಂದುವರೆಯುವಂತೆ ಉತ್ತೇಜನ ದಕ್ಕಿತು. ಪೌಲ್, ಬ್ರಿಗ್ ಹ್ಯಾಂ ಯಂಗ್ ಯೂನಿವರ್ಸಿಟಿಯಲ್ಲಿ ಪದವಿ ಅಧ್ಯಯನಕ್ಕೆ ಸೇರಿದನು. ಇಲ್ಲಿ ಜಾನ್ವಿಂಗ್, ಜೊ ನಿಖೋಲಾಸ್ರವರ ಮಾರ್ಗದರ್ಶನ ದೊರೆತು, ನಿರವಯವ ಸಾವಯವ ರಸಾಯನಶಾಸ್ತ್ರದ ಮೂಲ ತತ್ತ್ವಗಳು ಮನದಟ್ಟಾದವು. ರಜಾ ದಿನಗಳಲ್ಲಿ ಹೋಟೆಲ್ ಮಾಣಿಯಾಗಿ ಅಲ್ಪ ಸ್ವಲ್ಪ ಹಣ ಗಳಿಸಿದ ಪೌಲ್, ಕ್ಯಾಲಿಫೋರ್ನಿಯಾದಲ್ಲಿ ಸೇನೆಯ ಶಿಬಿರದಲ್ಲೂ ಕೆಲ ದಿನ ತರಬೇತಿ ಹೊಂದಿದನು.ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ, ಮ್ಯಾಡಿಸನ್ನಲ್ಲಿರುವ, ವಿಸ್ಕಾನ್ಸಿನ್ ವಿಶ್ವವಿದ್ಯಾಲಯದ ಜೀವರಸಾಯನಶಾಸ್ತ್ರದ ವಿಭಾಗಕ್ಕೆ ಸೇರಿದನು. ಇಲ್ಲಿ ವಿಟಮಿನ್, ಪೌಷ್ಟಿಕತೆ, ಚಯಾಪಚಯಗಳ ¨ಗೆಗೆ ಹೊಸ ಸಂಶೋಧನೆಗಳು ಪ್ರಾರಂಭವಾಗಿ ವಿದ್ಯಾರ್ಥಿಗಳಿಗೆ ಹಲವಾರು ಅವಕಾಶದ ಬಾಗಿಲುಗಳು ತೆರೆದಿದ್ದವು. ಇದೇ ಕಾಲೇಜಿನಲ್ಲಿದ್ದ ಸ್ಟೀನ್ಬಾಕ್ ಹಾಲನ್ನು ವಿಟಮಿನ್ ಡಿ ಯಿಂದ ಸಮೃದ್ದಗೊಳಿಸುವ ವಿಧಾನಕ್ಕೆ ಏಕಸ್ವಾಮ್ಯ ಪಡೆದಿದ್ದರೆ, ಎಲ್ವೇಹೀಮ್ ನೇತೃತ್ವದ ತಂಡ, ಪೆಲ್ಲಾಗ್ರ ನಿವಾರಣೆಗೆ ನೆರವಾಗುವ ನಿಕೋಟಿಕ್ ಆಮ್ಲ ಪತ್ತೆ ಹಚ್ಚಿದ್ದಿತು. ಇಂತಹುದೇ ಹಲವು ಹತ್ತಾರು ಫಲಫ್ರ್ರದ, ಸಂಶೋಧನೆಗಳು ಹೊರ ಬಂದಿದ್ದವು. 1943ರಲ್ಲಿ ಪೌಲ್, ಡಾಕ್ಟರೇಟ್ ಗಳಿಸಿದಾಗ, ಎರಡನೇ ಜಾಗತಿಕ ಯುದ್ದ ಪ್ರಾರಂಭವಾಗಿದ್ದಿತು. ಯುದ್ದ ಕಾಲದಲ್ಲಿನ ಅಗತ್ಯಗಳಿಗಾಗಿ ಸ್ಥಾಪಿತವಾಗಿದ್ದ ವೈದ್ಯಕೀಯ ಸಂಶೋಧನಾ ಸಮಿತಿಯಿಂದ ರಕ್ತ ರಸಿಕೆಯ (Serum) ಪ್ರೋಟಿನ್ಗಳ ಬಗೆಗಿನ ಸಂಶೋಧನೆಗಳಲ್ಲಿ ಪೌಲ್ ಭಾಗವಹಿಸಿದನು. ಯುದ್ದ ಮುಗಿದ ನಂತರ ಮಿನ್ನೆಸೊಟಾ ವಿಶ್ವವಿದ್ಯಾಲಯದಲ್ಲಿ ಜೀವರಸಾಯನಶಾಸ್ತ್ರದ ಪ್ರಾಧ್ಯಾಪಕನಾದನು. 1955ರಲ್ಲಿ ಗುಗೆನ್ಹೀಮ್ಫೆಲೋಷಿ¥sóï ಗಳಿಸಿ, ಸ್ವೀಡನ್ಗೆ ತೆರಳಿದ ಪೌಲ್ ಅಲ್ಲಿ ಸ್ಟಾಕ್ ಹೋಂನ ವೆನ್ನರ್ ಗ್ರೀನ್ ಸಂಸ್ಥೆಯಲ್ಲಿ ಒಲೋವ್ ಲಿಂಡ್ಬರ್ಗ್ ಹಾಗೂ ನೊಬೆಲ್ ಮೆಡಿಕಲ್ ಇನ್ಸ್ಟಿಟ್ಯೂಟ್ನಲ್ಲಿ ಹ್ಯೂಗೋ ಥಿಯೋರೆಲ್ ಜೊತೆಗೂಡಿ ಕಿಣ್ವಗಳನ್ನು (Enzyme) ಕುರಿತಾದ ಆಳ ಅಧ್ಯಯನ ನಡೆಸಿದನು. 1955ರಲ್ಲಿ ಕಿಣ್ವಗಳ ಕುರಿತಾದ ಸಂಶೋಧನೆಗೆ ಅಮೆರಿಕನ್ ರಸಾಯನಶಾಸ್ತ್ರ ಸಂಸ್ಥೆಯ ಪ್ರಶಸ್ತಿ ಪಡೆದನು. ಎಟಿಪಿ ಸಂಶ್ಲೇಷಣೆಯಲ್ಲಿನ ಮಧ್ಯಂತರ ಕಾರ್ಯ ನಿರ್ವಹಿಸುವ ಹೊಸ ಪ್ರೊಟೀನ್ ಅನಾವರಣಗೊಳಿಸಿದ ತಂಡದ ನೇತೃತ್ವ ವಹಿಸಿದ್ದಕ್ಕೆ ಪೌಲ್ 1997 ನೊಬೆಲ್ ಪ್ರಶಸ್ತಿ ಗಳಿಸಿದನು.
ಜೆನ್ಸ್, ಸಿಸ್ಕೆ (1918--) 1997
Jens , C. Skou
ಡೆನ್ಮಾರ್ಕ್-ರಸಾಯನಶಾಸ್ತ್ರ-ಪೆÇಟ್ಯಾಷಿಯಂ ಲವಣಾಂಶಗಳ ವರ್ಗಾಂತರತೆ ಕುರಿತಾಗಿ ಸಂಶೋಧಿಸಿದಾತ.
ಜೆನ್ಸ್, 8 ಅಕ್ಟೋಬರ್ 1918ರಂದು ಡೆನ್ಮಾರ್ಕ್ನ, ಲೆಮ್ವಿಗ್ ನಗರದ ಶ್ರೀಮಂತ ಕುಟಂಬದಲ್ಲಿ ಜನಿಸಿದನು. ನಾಲ್ಕು ಮಕ್ಕಳಲ್ಲಿ ಹಿರಿಯವನಾಗಿದ್ದ ಜೆನ್ಸ್ ಹನ್ನೆರಡು ವರ್ಷದವನಿರುವಾಗ ಆತನ ತಂದೆ, ನ್ಯೂಮೋನಿಯಾದಿಂದ ತೀರಿಕೊಂಡನು. ತನ್ನ ನಾ¯ಲು ಮಕ್ಕಳಿಗೆ ಉತ್ತಮ ಜೀವನ ಒದಗಿಸುವ ಪ್ರಯತ್ನದಲ್ಲಿ ಜೆನ್ಸ್ ತಾಯಿಯ ಜೀವನ ಸಾಗಿತು. 1936ರಲ್ಲಿ ಕೊಪೆನ್ಹೇಗ್ ವಿಶ್ವವಿದ್ಯಾಲಯ ಸೇರಿ 1944ರಲ್ಲಿ ವೈದ್ಯಕೀಯ ಪದವಿಯೊಂದಿಗೆ ಜೆನ್ಸ್ ಹೊರಬಂದನು. ದೇಶದ ರಾಜಧಾನಿಯಾದ ಕೊಪೆನ್ಹೇಗ್ನಂತಹ ಮಹಾನ ನಗರದ ಜೀವನ ಜೆನ್ಸ್ಗೆ ಎಂದಿಗ್ ಆಪ್ತವಾಗಲಿಲ್ಲವಾದರೂ ಅಲ್ಲಿ ದಕ್ಕುತ್ತಿದ್ದ ಕಲೆ, ಸಾಹಿತ್ಯ, ಸಂಗೀತಗಳು ಮುದ ನೀಡಿದವು. ಮೊದಲ ಜಾಗತಿಕ ಯುದ್ದದಲ್ಲಿ ಡೆನ್ಮಾರ್ಕ್ ಭಾಗಿಯಾಗದಂತೆ ಎಚ್ಚರ ವಹಿಸಿದ್ದಿತು. 1940ರಲ್ಲಿ ಎರಡನೆ ಜಾಗತಿಕ ಯುದ್ದ ಪ್ರಾರಂಭವಾದಾಗ ಅದು ಹಿಟ್ಲರ್ನ ವಶವಾಯಿತಾದರೂ ಡೆನ್ಮಾರ್ಕನ ಆಡಳಿತವನ್ನು ಜರ್ಮನಿಯು ಕೈಗೆತ್ತಿಕೊಳ್ಳಲಿಲ್ಲ. ಜಾಗತಿಕ ಯುದ್ದ ಸಮಯದಲ್ಲಿ ಆಹಾರ ಸರಬರಾಜು ಕೇಂದ್ರವಾಗಿ ಡೆನ್ಮಾರ್ಕ್ನ್ನು ಬಳಸತೊಡಗಿತು. ಬೆಟ್ಟ ಗುಡ್ಡಗಳಾಗಲಿ, ಸುರಕ್ಷಿತ ನೈಸರ್ಗಿಕ ಅಡಗುತಾಣಗಳಾಗಲಿ ಇಲ್ಲದ ಡೆನ್ಮಾರ್ಕ್ನಲ್ಲಿ ಜರ್ಮನಿ ವಿರುದ್ದದ ಜನರಿಗಿದ್ದ ಆಕ್ರೋಶ ಜನಪರ ಹೋರಾಟವಾಗುವಲ್ಲಿ ಅಥವಾ ಪ್ರಭುತ್ವ ವಿರೋಧಿ ದಂಗೆಯಾಗುವಲ್ಲಿ ವಿಫಲಗೊಂಡಿತು. ಇವೆಲ್ಲ ಪರಿಣಾಮ ಶೈಕ್ಷಣಿಕ ರಂಗದ ಮೇಲೂ ಆಯಿತು. 1943ರಲಿ ಜರ್ಮನ್ ಆಕ್ರಮಣದ ವಿರುದ್ಧ ದೇಶಾದ್ಯಂತ ನಡೆದ ಹರತಾಳವನ್ನು ಯಶಸ್ವಿಯಾಗಿ ಹಿಟ್ಲರ್ ಹತ್ತಿಕ್ಕಿದನು. 1944ರಲ್ಲಿ ಜೆನ್ಸ್ ವೈದ್ಯನಾಗಿ ವೃತ್ತಿ ಜೀವನ ಆರಂಭಿಸಿದನು. ಆದರೆ ಇದೇ ವರ್ಷ, ಜರ್ಮನಿ ವಿರುದ್ದ ದಂಗೆಯೇಳುವಂತೆ ಪ್ರಚೋದಿಸಿ ಬ್ರಿಟನ್ ಡೆನ್ಮಾರ್ಕ್ನ ದೂರ ಪ್ರದೇಶಗಳಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡಿತು. ವೈದ್ಯನಾಗಿ ಮುಂದುವರೆಯುದಕ್ಕಿಂತಲೂ ಮೊದಲು ಜರ್ಮನಿಯ ವಿರುದ್ದ ಶಸ್ತ್ರಾಗಳನ್ನತ್ತಲು ಜೆನ್ಸ್ ನಿರ್ಧರಿಸಿದನಾದರೂ, ಅಂತಿಮವಾಗಿ ಅದರಲ್ಲಿ ಸಾಫಲ್ಯ ಕಾಣಲಿಲ್ಲ. 1945ರಲ್ಲಿ ಜರ್ಮನಿ ಡೆನ್ಮಾರ್ಕ್ಗೆ ಶರಣಾದ ನಂತರ ಜೆನ್ಸ್ ನೆಮ್ಮದಿಯ ನಿಟ್ಟುಸಿರಿಟ್ಟನು. 1947ರಲ್ಲಿ ಶಸ್ತ್ರ ಚಿಕಿತ್ಸಕ ವೃತ್ತಿಯನ್ನು ತೊರೆದ ಜೆನ್ಸ್ ವೈದ್ಯಕೀಯ ಸಂಶೋಧನೆಯತ್ತ ಗಮನ ಹರಿಸಿದನು. ಜೆನ್ಸ್ ಪೆÇರೆ ಕ್ರಿಯಾಶಾಸ್ತ್ರದಲ್ಲಿ ಆಸಕ್ತನಾಗಿದ್ದನು. ದೇಹದಲ್ಲಿ ಸೋಡಿಯಂ, ಪೊಟ್ಯಾಷಿಯಂ ಲವಣಾಂಶಗಳ ವರ್ಗಾಂತರತೆ ಕುರಿತಾಗಿ ಜೆನ್ಸ್ ನಡೆಸಿದ ಪ್ರಯೋಗಗಳು ಗಮನಾರ್ಹವಾದವು. ಇದಕ್ಕಾಗಿ ಜೆನ್ಸ್ 1997ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಜಾನ್, ಎ.ಪೆಪ್ಲ್ (1925--) 1998
John , A.Pople
ಇಂಗ್ಲೆಂಡ್-ಭೌತರಸಾಯನಶಾಸ್ತ್ರ- ಕ್ವಾಂಟಂ ರಸಾಯನಶಾಸ್ತ್ರದಲ್ಲಿ ಗಣಕಿಸುವ ವಿಧಾನಗಳನ್ನು ಅಭಿವೃದ್ಧಿಗೊಳಿಸಿದಾತ.
ಜಾನ್ನ ತಂದೆ ಸೊಮರ್ಸೆಟ್ ಪ್ರಾಂತದ ಪಶ್ಚಿಮ ಕರಾವಳಿಯ ಲರ್ನ್ಹ್ಯಾಂ ಎಂಬ ಸಣ್ಣ ಹಳ್ಳಿಯೊಂದರಲ್ಲಿ ನೆಲೆಸಿದ್ದನು. 31 ಡಿಸೆಂಬರ್ 1925ರಂದು ಜಾನ್ ಜನಿಸಿದನು. ಜಾನ್ನ ಪೂರ್ವಿಕರಲ್ಲಿ ಯಾರೊಬ್ಬರೂ ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತಿರಲಿಲ್ಲ. ಜಾನ್ನ ತಂದೆ ಉಡುಪುಗಳನ್ನು ಸಿದ್ದ ಪಡಿಸಿ ವಾಹನದಲ್ಲಿ ಊರಿಂದ ಊರಿಗೆ ಒಯ್ದು ಮಾರುತ್ತಿದ್ದನು. ತನ್ನಂತೆ ಮಕ್ಕಳು ಬಟ್ಟೆ ವ್ಯಾಪಾರಿಗಳಾಗದೆ, ಅಥವಾ ಹೆಂಡತಿಯ ಕಡೆಯವರಂತೆ ಕೃಷಿಯಲ್ಲಿ ನಿರತರಾಗದೆ ಇನ್ನೂ ಹೆಚ್ಚಿನ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಜಾನ್ನ ತಂದೆಯ ಆಶೆಯಾಗಿದ್ದಿತು. ಇದಕ್ಕಾಗಿ ಅವರು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕೆಂದು ಹೇಳುತ್ತಿದ್ದನು. ಹತ್ತನೇ ವರ್ಷದವನಿರುವಾಗ ಬ್ರಿಸ್ಟಲ್ ಗ್ರಾಮರ್ ಸ್ಕೂಲ್ಗೆ ಜಾನ್ ಸೇರಿದನು. ಇದು ಈತನ ಹಳ್ಳಿಯಿಂದ 48 ಕಿ.ಮೀ ದೂರವಿದ್ದು, ಪ್ರತಿದಿನ ಶಾಲೆಗೆ ಹೋಗಿ ಬರುವುದು ಬಾಲಕ ಜಾನ್ಗೆ ಬಹು ಕಷ್ಟವಾಯಿತು. ಗಣಿತದಲ್ಲಿ ಅತ್ಯಾಸಕ್ತಿ ಹೊಂದಿದ್ದ ಜಾನ್, ತಿರಸ್ಕೃತ ಗಣಿತದ ಪುಸ್ತಕವೊಂದನ್ನು ಪಡೆದು ಅದನ್ನು ಅಮೂಲಾಗ್ರವಾಗಿ ಅರಿತುಕೊಂಡನು. ಜಾನ್ನ ಗಣಿತ ಪ್ರತಿಭೆ ಆತನ ಮನೆಯವರಿಗಾಗಲಿ , ಸಹಪಾಠಿಗಳಿಗಾಗಲಿ ಅಥವಾ ಶಿಕ್ಷಕರಿಗಾಗಲಿ ತಿಳಿಯಲಿಲ್ಲ. ಪ್ರೌಢಶಾಲೆಯಲ್ಲಿರುವಾಗ ಗಣಿತ ಶಿಕ್ಷಕನಾಗಿದ್ದ ಲೈನೆಸ್ ಗಣಿತದ ಸಮಸ್ಯೆಯೊಂದನ್ನು ವಿದ್ಯಾರ್ಥಿಗಳಿಗೆ ನೀಡಿ ಅದನ್ನು ಬಿಡಿಸಲು ಹೇಳಿದನು. ಇದಕ್ಕೆ ಜಾನ್ ಹಲವಾರು ಪರಿಹಾರ ಸೂಚಿಸಿ ಉತ್ತಮವಾದ ಲೇಖನ ನೀಡಿದನು. ಇದು ಲೈನೆಸ್ನ ಗಮನಕ್ಕೆ ಬಂದಿತು. ಜಾನ್ನ ತಂದೆ ತಾಯಿಗಳನ್ನು ಕರೆದು ಕೇಂಬ್ರಿಜ್ “ವಿಶ್ವವಿದ್ಯಾಲಯಕ್ಕೆ ಗಣಿತದಲ್ಲಿ ಹೆಚ್ಚಿನ ಶಿಕ್ಷಣ ಗಳಿಸಲು ಕಳಿಸಬೇಕೆಂದು ಸೂಚಿಸಿದನು. 1942ರಲ್ಲಿ ಜಾನ್, ಪ್ರವೇಶ ಪರೀಕ್ಷೆ ಎದುರಿಸಿ, ಕೇಂಬ್ರಿಜ್ ಸೇರಿದನು. ಎರಡನೇ ಜಾಗತಿಕ ಯುದ್ಧದ ಸಮಯದಲ್ಲಿ ಜಾನ್ ಸೇನಾ ತರಬೇತಿಗೆ ದಾಖಲಾದನು. ಯುದ್ದ ಮುಗಿದ ನಂತರ ಬ್ರಿಸ್ಟಲ್ ಏರೋಪ್ಲೆನ್ ಕಂಪನಿಯಲ್ಲಿ ಔದ್ಯೋಗಿಕ ತರಬೇತಿಗೆ ಸೇರಿದನು. ಇಲ್ಲಿ ಹೆಚ್ಚಿನ ಕೆಲಸವಿರಲಿಲ್ಲ. ಅದರೆ ಆರ್ಥಿಕ ಸುಧಾರಣೆಗಾಗಿ ಬ್ರಿಟನ್ ಹಮ್ಮಿಕೊಂಡಿದ್ದ ನೀತಿಗನುಗುಣವಾಗಿ ನೌಕರರು ತಮ್ಮ ಕಂಪನಿಗಳನ್ನು ಬದಲಿಸಿ ಬೇರೆ ಕಡೆಗೆ ಹೋಗುವಂತಿರ¯ಲ್ಲ. ಕಾಲಾನುಕ್ರಮೇಣ ಜಾನ್ಗೆ ಗಣಿತದಲ್ಲಿನ ಆಸಕ್ತಿ ಕುಂದತೊಡಗಿತು. ಸರ್ಕಾರಕ್ಕೆ ಮನವಿ ಸಲ್ಲಿಸಿ 1947ರಲ್ಲಿ ಕೇಂಬ್ರಿಜ್ನಲ್ಲಿ ಪದವಿಗೆ ಸೇರಿದನು. 1948ರಲ್ಲಿ ಸರ್ ಜಾನ್ ಲೆನಾರ್ಡ್ ಜೋನ್ಸ್ ಕೆಳಗೆ ಸೈದ್ಧಾಂತಿಕ ರಸಾಯನಶಾಸ್ತ್ರದಲ್ಲಿ ಮುಂದುವರೆದನು. ಇಲ್ಲಿರುವಾಗ ಮುಂದೆ ನೊಬೆಲ್ ಪ್ರಶಸ್ತಿ ಗಳಿಸಿದ ಹಲವಾರು ಜನರೊಂದಿಗಿನ ಒಡನಾಟ ಜಾನ್ಗೆ ದಕ್ಕಿತು. ನೀರಿನ ಅಣುವಿನ ಬಂಧ ಹಾಗೂ ರಚನೆಯ ಬಗೆಗೆ ಸಂಶೋಧನೆ ನಡೆಸಿ ಜಾನ್ ಡಾಕ್ಟರೇಟ್ ಗಳಿಸಿದನು. ಭೌತ ರಸಾಯನಶಾಸ್ತ್ರದಲ್ಲಿ ಗಣಕಿಸುವ (Computing) ವಿಧಾನಗಳನ್ನು ಕುರಿತಾಗಿ ಜಾನ್ ಚಿಂತಿಸತೊಡಗಿದನು. 1961ರಲ್ಲಿ ಪಿಟ್ಸ್ಬರ್ಗ್ನ ಕಾರ್ನೆಗಿ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿಯಲ್ಲಿ ಅಣುಗಳ ಕ್ರಿಯೆ ಅರಿಯಲು ಹಾಗೂ ವಿವರಿಸಲು ಗಣಕಿಸುವ ವಿಧಾನಗಳನ್ನು ಸ್ಪಷ್ಟ ಗೊಳಿಸತೊಡಗಿದನು. ಈ ಕಾಲದಲ್ಲೇ ಕ್ಷಿಪ್ರ ಕಾರ್ಯಗತಿಯ ಗಣಕಗಳು ವಿಜ್ಞಾನಿಗಳ ಮನಗೆಲ್ಲತೊಡಗಿದ್ದವು. 1967ರಲ್ಲಿ ಕಾರ್ನೆಗಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾರ್ನೆಗಿ ಮೆಲ್ಲನ್ ವಿಶ್ವವಿದ್ಯಾಲಯವಾಗಿ ಪರಿವರ್ತನೆಗೊಂಡಾಗ ಅಲ್ಲಿ ಬೋಧಕ ಸಿಬ್ಬಂದಿಯಾದನು.ಇಲ್ಲಿರುವಾಗಲೇ ಕ್ವಾಂಟಂ ರಸಾಯನಶಾಸ್ತ್ರದಲ್ಲಿ ಗಣಕಿಸುವ ವಿಧಾನಗಳನ್ನು ಅಭಿವೃದ್ಧಿಗೊಳಿಸಿದನು. ಇದಕ್ಕಾಗಿ 1998ರಲ್ಲಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದನು.
ವಾಲ್ಟರ್, ಕೊಹ್ನ್ (1923---) 1998
Walter , Kohn
ಆಸ್ಟ್ರಿಯಾ- ರಸಾಯನಶಾಸ್ತ್ರ-ಘನಗಳ ಮೇಲ್ಮೈ ಮೇಲಿನ ವಾಹಕತ್ವ (Surface Conductivity) ಕುರಿತಾದಂತೆ ಸಾಂದ್ರತೆ ಕ್ರಿಯಾಶೀಲತಾ (Density Activation) ಸಿದ್ಧಾಂತ ರೂಪಿಸಿದಾತ.
ಹಲವಾರು ಜನ ನೊಬೆಲ್ ಪ್ರಶಸ್ತಿ ವಿಜೇತರ ಜೀವನ ಚರಿತ್ರೆಯನ್ನು ನಾನು ಓದಿದ್ದೇನೆ. ಅವರ ಬಾಲ್ಯ ಕುತೂಹಲ, ಗಣಿತ ಪ್ರತಿಭೆ, ಪುಸ್ತಕದ ಗೀಳು, ನಾನಾ ತರದ ಸೋಲು ಗೆಲವುಗಳಿಂದ ತುಂಬಿ ತುಳುಕುತ್ತಿದೆ. ನನ್ನ ಜೀವನದಲ್ಲಿ ಅಂತಹುದಾವುದೂ ಇಲ್ಲ. ನನ್ನಂತಹ ಕೈ ಬೆರಳೆಣಿಕೆಯ ಜನ ನೊಬೆಲ್ ಪ್ರಶಸ್ತಿ ಪಡೆದಿರುವುದನ್ನು ನಾನು ಬಲ್ಲೆ. ಆದರೆ ಒಟ್ಟಾರೆಯಾಗಿ ನೊಬೆಲ್ ಪ್ರಶಸ್ತಿ ಗಳಿಸುವಂತಹ ಸ್ಥಿತಿಗೆ ನನ್ನನು ಎಳೆತಂದ ಸನ್ನಿವೇಶಗಳನ್ನು ಸರಿಯಾಗಿ ನಾನರಿಯೆ ಎಂದು ಕೊಹ್ನ್ ತನ್ನ ಸಂಕ್ಷಿಪ್ತ ಜೀವನ ವಿವರದಲ್ಲಿ ಹೇಳಿದ್ದಾನೆ. 1957ರಲ್ಲಿ ಅಸಂಸಂಗಳ ಪ್ರಜೆಯಾದ ಕೊಹ್ನ್ ಬಾಲ್ಯದ ನೆನಪುಗಳೆಲ್ಲವೂ ಕಹಿ. ಕೊಹ್ನ್ ಜನಿಸಿದಾಗ ಆಸ್ಟ್ರಿಯ ಹಿಟ್ಲರ್ ಹಿಡಿತದಲ್ಲಿದ್ದಿತು. ನಾಝಿಗಳು ನಡೆಸಿದ ಸಾಮೂಹಿಕ ಯಹೂದಿ ಹತ್ಯೆಯಲ್ಲಿ ಈತನ ತಂದೆ ತಾಯಿಗಳಿಬ್ಬರೂ ಬಲಿಯಾದರು.. ಯುದ್ದಕ್ಕೆ ಶಾಂತಿಯೊಂದೇ ಶಮನಕಾರಿಯೆಂದು ಬಾಲ್ಯದಿಂದ ಕಂಡುಕೊಂಡಿದ್ದ ಕೊಹ್ನ್ ಅಸಂಸಂ ಮತ್ತು ರಷ್ಯಾಗಳ ಮಧ್ಯದ ಶೀತಲ ಸಮರ ಕೊನೆಗೊಳಿಸಲು ಹೆಣಗಿದ ಕೈ ಬೆರಳೆಣಿಕೆಯ ವಿಜ್ಞಾನಿಗಲ್ಲೊಬ್ಬನು. ಲಾಸ್ ಆಲ್ಮೋಸ್ ಮತ್ತು ಲಿವರ್’ಮೋರ್’ನಲ್ಲಿದ್ದ ನ್ಯೂಕ್ಲಿಯರ್ ವೆಪನ್ಸ್ ಲ್ಯಾಬೋರೋಟರಿಯ ನಿರ್ವಾಹಕನಾಗಿದ್ದಾಗ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಯುದ್ಧ ಸಂಬಂಧಿ ಸಂಶೋಧನೆಗಳಲ್ಲಿ ಭಾಗಿಯಾಗಬಾರದೆಂಬ ದೃಢ ನಿಲುವನ್ನು ಹೊಂದಿದ್ದನು. ಆದರೆ ಕೊಹ್ನ್ನ ಈ ತೀರ್ಮಾನಕ್ಕೆ ಅಂತಹ ಬೆಂಬಲ ದಕ್ಕಲಿಲ್ಲ. ಮನುಕುಲಕ್ಕೆ ಶಾಂತಿಯೊಂದೇ ಪರಮಗತಿಯೆಂದು ನಂಬಿರುವ ಕೊಹ್ನ್ ಈ ದಿಶೆಯಲ್ಲಿ ಜಾಗತಿಕ ಶಾಂತಿ ತರಲು ತನ್ನದೇ ಆದ ಪ್ರಯತ್ನಗಳಲ್ಲಿ ನಿರತನಾಗಿದ್ದಾನೆ. ಶಾಲಾ ಜೀವನದಲ್ಲಿ ಲ್ಯಾಟಿನ್ ಕೊಹ್ನ್ನ ನೆಚ್ಚಿನ ವಿಷಯವಾಗಿದ್ದಿತು. ಗಣಿತ ವಿಜ್ಞಾನಗಳಿಂದ ಈತ ದೂರವಾಗಿದ್ದನು. ಹಿಟ್ಲರ್ 1933ರಲ್ಲಿ ಆಸ್ಟ್ರಿಯಾ ವಶಪಡಿಸಿಕೊಂಡ ತಕ್ಷಣ ಯಹೂದಿ ವಿದ್ಯಾರ್ಥಿಗಳನ್ನು ಶಾಲೆಯಿಂದ ಉಚ್ಛಾಟಿಸಲಾಯಿತು. ಇದರಲ್ಲಿ ಕೊಹ್ನ್ ಸಹ ಒಬ್ಬನಾಗಿದ್ದನು. ಮುಂದಿನ ಶಿಕ್ಷಣಕ್ಕಾಗಿ ಸೌಕರ್ಯ ಕೊರತೆಯಿಂದ ಹಿಂದುಳಿದಿದ್ದ ಯಹೂದಿ ಶಾಲೆಗಳಲ್ಲಿ ಶಿಕ್ಷಣ ಮುಂದುವರೆಯಿತು. ಎರಡನೇ ಜಾಗತಿಕ ಯುದ್ದದಲ್ಲಿ ತಂದೆ ತಾಯಿಯಿಂದ ಬೇರ್ಪಟ್ಟ ಕೊಹ್ನ್ ಇಂಗ್ಲೆಂಡ್ನಲ್ಲಿದ್ದ ಸ್ನೇಹಿತರ ಮನೆಯಲ್ಲಿ ನೆಲೆ ಕಾಣಬೇಕಾಯಿತು. 1940ರಲ್ಲಿ ಚರ್ಚಿಲ್ ಬ್ರಿಟನ್ನಲ್ಲಿರುವ ಶತ್ರುಗಳನ್ನು ಬಂಧಿಸಬೇಕೆಂಬ ಆಜ್ಞೆ ನೀಡಿದನು. ಆಗ ಕೊಹ್ನ್ ಬ್ರಿಟಿಷ್ ಸೇನೆಗೆ ಸೆರೆಸಿಕ್ಕು ಎರಡು ತಿಂಗಳ ಕಾಲ ಕಾರಾಗೃಹದಲ್ಲಿದ್ದನು. ಇಲ್ಲಿರುವಾಗ ಬಂಧನದಲ್ಲಿರುವ ಜರ್ಮನಿ ಯುವಕರಿಗೆ ಡಾ ಫ್ರಿಟ್ಜ್’ರೋಥ್ ಬರ್ಜರ್ ನೀಡಿದ ಗಣಿತದ ಉಪನ್ಯಾಸಗಳಿಂದ ಕೊಹ್ನ್ನ ಜೀವನ ದೃಷ್ಟಿಯೇ ಬದಲಾಯಿತು. ಕೆಲಕಾಲದ ನಂತರ ಅನಾಥರಾದ ಯಹೂದಿ ಮಕ್ಕಳನ್ನು ಸಾಕುತ್ತಿದ್ದ ವೈದ್ಯ ದಂಪತಿಗಳ ಅನುಕಂಪಕ್ಕೆ ಪಾತ್ರನಾದ ಕೊಹ್ನ್ ಕೆನಡಾದ ಟೊರಂಟೋ ಸೇರುವಂತಾಯಿತು. ಇವರ ಒತ್ತಾಸೆಯಿಂದಲೇ ಕೊಹ್ನ್ ವಿಜ್ಞಾನದ ಪದವಿ ಗಳಿಸುವಂತಾಯಿತು. ಕಾಲೇಜಿನ ವಿದ್ಯಾರ್ಥಿ ಜೀವನದುದ್ದಕ್ಕೂ ಮರದ ದಿಮ್ಮಿಗಳನ್ನು ಕತ್ತರಿಸುವ, ಸಾಗಿಸುವ ಕಂಪನಿಯಲ್ಲಿ ಕೆಲಸಮಾಡುತ್ತಾ ವ್ಯಾಸಂಗ ನಡೆಸಿದನು. ಇದರಿಂದ ದೊರೆತ ಅಲ್ಪ ಸ್ವಲ್ಪ ಹಣ ಉಳಿಸಿ ಹಾರ್ಡಿ ರಚಿಸಿದ ಫೂರಿಯರ್ ಮ್ಯಾಥೆಮ್ಯಾಟಿಕ್ಸ್ ಮತ್ತು ಸ್ಲೇಟರ್ ರಚಿಸಿದ ಕೆಮಿಕಲ್ ಫಿಸಿಕ್ಸ್ ಪುಸ್ತಕಗಳನ್ನು ಖರೀದಿಸಿದನು. ಈ ಪುಸ್ತಕಗಳನ್ನು ಕೊಹ್ನ್ ಈಗಲೂ ಜತನದಿಂದ ಕಾಯ್ದಿರಿಸಿಕೊಂಡಿದ್ದಾನೆ. ಟೊರಂಟೋ ವಿಶ್ವವಿದ್ಯಾಲಯದಲ್ಲಿ ಮುಂದೆ ಜಗದ್ವಿಖ್ಯಾತನಾಗಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತನಾದ ಆರ್ಥರ್ ಷ್ವಾಲೋ ಕೊಹ್ನ್ನ ಸಹಪಾಠಿಯಾಗಿದ್ದನು. ಡಾಕ್ಟರೇಟ್ ಗಳಿಕೆಗಾಗಿ ಕೊಹ್ನ್ ಅಸಂಸಂಗಳ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಜೂಲಿಯಟ್ ಷ್ವಿಂಜರ್ ಮಾರ್ಗದರ್ಶನದಲ್ಲಿ ಸಂಶೋಧನೆ ಪ್ರಾರಂಭಿಸಿದನು. ಹಾರ್ವರ್ಡ್ ವಿಶ್ವವಿದ್ಯಾಲಯ ನೂರಾರು ಪ್ರತಿಭಾವಂತ ವಿಜ್ಞಾನಿಗಳ ಗಣಿಯಾಗಿದ್ದಿತು. ಇವರೊಂದಿಗೆ ತನ್ನನ್ನು ಹೋಲಿಸಿಕೊಂಡು ಕುಹ್ನ್ ಕೆಲಕಾಲ ಅಪ್ರತಿಭನಾಗಿದ್ದನು. ಆದರೆ ಜೆ.ಎಚ್.ವ್ಯಾನ್ವ್ಲೆಕ್ನ ನೈತಿಕ ಬೆಂಬಲ ಕೊಹ್ನ್ಗೆ ದಕ್ಕಿತು. ಪಿ,ಡಬ್ಲ್ಯೂ.ಆ್ಯಂಡರ್ಸನ್, ಎನ್.ಬ್ಲೂಮ್ಬರ್ಜೆನ್, ಬಿ.ಮಾಟೆಲ್ಸನ್ರ ಸ್ನೇಹ ಕೊಹ್ನ್ಗೆ ದಕ್ಕಿತು. ಜೂಲಿಯನ್ ಷ್ವಿಂಜರ್ ಮಾರ್ಗದರ್ಶನದಲ್ಲಿ ವೈದ್ಯುತ್ ಗತಿಶಾಸ್ತ್ರದ ಸಮಸ್ಯೆಗಳ ಪರಿಹಾರದಲ್ಲಿ ಕೊಹ್ನ್ ಶ್ರಮಿಸಿದನು. 1951 ರಿಂದ ಒಂದು ವರ್ಷ ಕಾಲ ಡೆನ್ಮಾರ್ಕ್ನ ಕೊಪೆನ್ಹೇಗ್ನ ಬೊಹ್ರ್ ಸಂಸ್ಥೆಯಲ್ಲಿ ಘನ ಸ್ಥಿತಿ ಭೌತಶಾಸ್ತ್ರದಲ್ಲಿ ಅತಿವಾಹಕತೆ (Superconductivity) ಮತ್ತು ಚದುರಿಕೆ ಸಿದ್ದಾಂತಗಳನ್ನು ಪರಿಷ್ಕರಿಸುವಲ್ಲಿ ಶ್ರಮಿಸಿದನು. 1953ರಲ್ಲಿ ಬೆಲ್ ಲ್ಯಾಬೋರೇಟರಿ ಸೇರಿ ಟ್ರಾನ್ಸಿಸ್ಟರ್ ಉಪಜ್ಞೆಕಾರ ಡಬ್ಲ್ಯು ಷಾಕ್ಲೆಯ ಸಹಾಯಕನಾಗಿ ಕೆಲಸ ಮಾಡಿದ ಕೊಹ್ನ್ ಇಲ್ಲಿ ಸಿಲಿಕಾನ್ ಮತ್ತು ಜರ್ಮೇನಿಯಂಗಳು ವಿಕಿರಣ ದಾಳಿಗೊಳಗಾಗುವುದರ ಅಧ್ಯಯನ ನಡೆಸಿದನು. 1966ರಲ್ಲಿ ಲುಟ್ಟಿಂಜರ್ ಸಾಂಗತ್ಯದಲ್ಲಿ ಕೊಹ್ನ್ ಶುದ್ಧ ವಿಕರ್ಷಕ ಅಂತಕ್ರಿಯೆಗಳಿದ್ದಾಗಲೂ ಅತಿವಾಹಕತೆಯಿರುವ ಸಾಧ್ಯತೆಯನ್ನು ತೋರಿಸಿದನು. ಕೊಹ್ನ್ ಘನಗಳ ಮೇಲ್ಮೈ ಮೇಲಿನ ವಾಹಕತ್ವ ಕುರಿತಾದಂತೆ ಸಾಂದ್ರತೆ ಕ್ರಿಯಾಶೀಲತಾ ಸಿದ್ಧಾಂತ ಮಂಡಿಸಿದ್ದಾನೆ. ಇದಕ್ಕಾಗಿ ಕೊಹ್ನ್ 1998ರ ನೊಬೆಲ್ ಪ್ರಶಸ್ತಿಯಿಂದ ಪುರಸ್ಕೃತನಾಗಿದ್ದಾನೆ.
ಅಹ್ಮದ್ , ಝವೇಲ್ –(1946--) 1999
Ahmed , H. Zewail
ಈಜಿಪ್ತ್-ಅಸಂಸಂ- ಅತಿವೇಗಿ ವಿವರ್ತನ ಹಾಗೂ ಸೂಕ್ಷ್ಮ ದರ್ಶಕ (Ultrafast Diffraction Microscope) ನಿರ್ಮಾಣದಲ್ಲಿ ಶ್ರಮಿಸಿದಾತ.
ಅಹ್ಮದ್ 26 ಫೆಬ್ರವರಿ 1946ರಂದು ಅಲೆಗ್ಸಾಂಡ್ರಿಯಾ ಸಮೀಪದ ಡಿಸೆಕ್ಟ್ ನಗರದಲ್ಲಿ ಜನಿಸಿದನು. ಬಾಲ್ಯದಿಂದಲೂ ಏಕೆ ? ಹೇಗೆ ? ಎಂಬ ಪ್ರಶ್ನೆಗಳ ಬೆನ್ನ ಹತ್ತಿ ಸಾಗುತ್ತಿದ್ದ ಅಹ್ಮದ್ಗೆ ವಿಜ್ಞಾನ ಬಹು ಪ್ರಿಯ ವಿಷಯವಾಗಿದ್ದಿತು. ಅಹ್ಮದ್ ವಿದೇಶಗಳಲ್ಲಿ ಅತ್ಯುನ್ನತ ಪದವಿ ಗಳಿಸಿ, ತಾಯ್ನಾಡಿನಲ್ಲಿ ಉನ್ನತ ಹುದ್ದೆ ಅಲಂಕರಿಸಬೇಕೆಂದು ಕುಟುಂಬದವರ ಅಸೆಯಾಗಿದ್ದಿತು. ಅಲೆಕ್ಸಾಂಡ್ರಿಯಾ ವಿಶ್ವವಿದ್ಯಾಲಯದಿಂದ ರಸಾಯನ ಶಾಸ್ತ್ರದಲ್ಲಿ ಪದವಿ ಗಳಿಸಿದ ಅಹ್ಮದ್ ಇಲ್ಲಿಯೇ ಬೋಧಕ ವೃತ್ತಿಯೊಂದಿಗೆ ಸಂಶೋಧನೆಗೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ನೊಂದಾಯಿತನಾದನು. ಅಹ್ಮದ್ ಹೆಚ್ಚಿನ ಸಂಶೋಧನೆಗಾಗಿ ಅಸಂಸಂಗಳಿಗೆ ಹೋಗಿ ನೆಲೆಸಿದನು. ಇಂಗ್ಲೀಷ ಭಾಷಾ ಜ್ಞಾನದ ಕೊರತೆ, ಸಾಂಸ್ಕೃತಿಕ ವೈದ್ಯಶ್ಯಗಳು ಆರಂಭದಲ್ಲಿ ಭಾರಿ ಅಡಚಣೆಗಳಾಗಿ ಗೋಚರಿಸಿದವು. 1973ರಲ್ಲಿ ಡಾಕ್ಟರೇಟ್ ಗಳಿಸಿ, 1974ರಲ್ಲಿ ಬಕ್ರ್ಲೆ ವಿಶ್ವವಿದ್ಯಾಲಯದಲ್ಲಿ ಬೋಧಕ ವೃತ್ತಿಗೆ ಸೇರಿ, ಅಲ್ಲಿನ ಪ್ರಾಧ್ಯಾಪಕನಾಗಿದ್ದ ಚಾಲ್ರ್ಸ್ ಹಾರ್ಸ್ನಿಂದ ವಿಜ್ಞಾನದ ಬಗೆಗೆ ಹೊಸ ದೃಷ್ಟಿ ಬೆಳೆಸಿಕೊಂಡನು. ಇಲ್ಲಿರುವಾಗ ಘನಗಳಲ್ಲಿ ಚೈತನ್ಯದ ವರ್ಗಾವಣೆ ಕುರಿತಾಗಿ ಸಂಶೋಧನಾ ಲೇಖನ ಪ್ರಕಟಿಸಿದನು. ಕ್ಯಾಲಿಫೊರ್ನಿಯಾ ಇನ್ಸ್ಟಿಟ್ಯೂಟ್ ಆ¥sóï ಟೆಕ್ನಾಲಜಿಯಲ್ಲಿ ರಸಾಯನ ವಿಭಾಗದ ಪ್ರಾಧ್ಯಾಪಕನಾದ ಅಹ್ಮದ್ ಗತಿಶೀಲ ರಸಾಯನಶಾಸ್ತ್ರ, ಜೀವಶಾಸ್ತ್ರದಲ್ಲಿನ ಸಮಸ್ಯೆಗಳ ಅಧ್ಯಯನ ಕೈಗೊಂಡನು. ನಾಲ್ಕೂ ಆಯಾಮದ ಅತಿ ಕ್ಷಿಪ್ರ ವಿವರ್ತನ ಹಾಗೂ ಸೂಕ್ಷ್ಮ ದರ್ಶಕ ಶಾಸ್ತ್ರದ ಅಭಿವೃದ್ಧಿಯಲ್ಲಿ ಶ್ರಮಿಸಿದನು. ಈ ವಿಧಾನದಿಂದ ಅಣ್ವಯಿಕ ಮಟ್ಟದಲ್ಲಿ ಸ್ಥಿತ್ಯಂತರದಲ್ಲಿರುವ ಅಣು ರಚನೆಗಳನ್ನು ಅರಿಯುವುದು ಸಾಧ್ಯವಾಯಿತು. ಇದಕ್ಕಾಗಿ 1999ರಲ್ಲಿ ಅಹ್ಮದ್ ರಸಾಯನಶಾಸ್ತ್ರದಲ್ಲಿನ ನೊಬೆಲ್ ಪ್ರಶಸ್ತಿಯಿಂದ ಪುರಸ್ಕೃತನಾದನು.
ಆ್ಯಲನ್, ಜಿ.ಮೆಕ್ಡಯಾರ್ಮಿಡ್ (1927--) -2000
Alan G. MacDiarmid
ನ್ಯೂಜಿಲ್ಯಾಂಡ್-ರಸಾಯನಶಾಸ್ತ್ರ-ವಾಹಕಶೀಲ ಪಾಲಿಮರ್ ಪಡೆದಾತ.
14 ಏಪ್ರಿಲ್ 1927ರಂದು ಮ್ಯಾಸ್ಟೆರ್ಟನ್ನಲ್ಲಿ ಆ್ಯಲನ್ ಜನನವಾಯಿತು. ಈತನ ತಂದೆ ಇಂಜಿನಿಯರಾಗಿದ್ದು, 1930ರ ಆರ್ಥಿಕ ಸಂಕಷ್ಟದ ದಿನಗಳಲ್ಲಿ ಬಹು ಕಷ್ಟದಿಂದ ಮಕ್ಕಳನ್ನು ಸಾಕಿ ವಿದ್ಯಾಭ್ಯಾಸ ಒದಗಿಸಿದನು. ಇಬ್ಬರು ಅಣ್ಣಂದಿರು, ಒಬ್ಬ ಅಕ್ಕನೊಂದಿಗೆ ಆ್ಯಲನ್ ಬರಿಗಾಲಿನಲ್ಲಿ ಶಾಲೆಗೆ ಹೋಗುತ್ತಿದ್ದನು. ಇದು ಆ ಕಾಲದಲ್ಲಿ ಬಡಮಕ್ಕಳಲ್ಲಿ ಇದು ಸರ್ವೇ ಸಾಮಾನ್ಯ ಸಂಗತಿಯಾಗಿದ್ದಿತು. ಬಡತನ ಆ್ಯಲನ್ನ್ನು ಸ್ವಾವಲಂಬಿಯಾಗುವಂತೆ ಹಣದ ಮೌಲ್ಯ ಅರಿಯುವಂತೆ ಮಾಡಿತು. ಎರಡು ಕೋಣೆಗಳ ಮಾಧ್ಯಮಿಕ ಶಾಲೆಯಲ್ಲಿ ಇನ್ನಿತರ ಬಡ ಹಿಂದುಳಿದ ಮಕ್ಕಳೊಂದಿಗೆ ಆ್ಯಲನ್ ಅನುಭವ ಪ್ರಪಂಚ ಸಮೃದ್ಧಗೊಂಡು ಹಿಗ್ಗಿತು. ಬೆಳಿಗ್ಗೆ ಹಾಲು ಮಾರುತ್ತಾ, ಬಿಡುವಿನ ವೇಳೆಯಲ್ಲಿ ತಾಯಿಗೆ ನೆರವೀಯುತ್ತಾ ಆ್ಯಲನ್ ಜೀವನ ಸಾಗಿತು. ಹತ್ತನೇ ವರ್ಷದಲ್ಲಿರುವಾಗ ತನ್ನ ತಂದೆ ಇಂಜಿನಿಯರಿಂಗ್ ಪದವಿಯಲ್ಲಿದ್ದಾಗ ಓದುತ್ತಿದ್ದ ರಸಾಯನಶಾಸ್ತ್ರದ ಪುಸ್ತಕ ಆ್ಯಲನ್ನ್ನು ಬಹುವಾಗಿ ಆಕರ್ಷಿಸಿತು. ಇದರಿಂದ ಸ್ಥಳೀಂiÀi ಗ್ರಂಥಾಲಯದಿಂದ ಬಾಯ್ ಕೆಮಿಸ್ಟ್ ಹೆಸರಿನ ಪುಸ್ತಕ ತಂದು ಓದತೊಡಗಿದನು. ಅದರಲ್ಲಿ ಆಸಕ್ತಿ ತೀವ್ರವಾಗತೊಡಗಿತು. ಆ ಪುಸ್ತಕವನ್ನು ಸತತವಾಗಿ ಒಂದು ವರ್ಷಗಳ ಕಾಲ ನವೀಕರಿಸಿ ಕೊಂಡನು. ಆ್ಯಲನ್ ಹದಿನಾರನೇ ವಯಸ್ಸಿನಲ್ಲಿರುವಾಗ, ಅತ್ಯಲ್ಪ ಸೌಲಭ್ಯಗಳೊಂದಿಗೆ ಆತನ ತಂದೆ ನಿವೃತ್ತನಾದನು. ಇದರಿಂದಾಗಿ ಆ್ಯಲನ್ ಶಾಲೆಯನ್ನು ತೊರೆದು ವಿಕ್ಟೋರಿಯಾ ವಿಶ್ವವಿದ್ಯಾಲಯದ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದಲ್ಲಿ ಅತ್ಯಲ್ಪ ಸಂಬಳಕ್ಕಾಗಿ ಸಹಾಯಕನಾಗಿ ಸೇರಿಕೊಂಡನು. ಈ ವಿಭಾಗದಲ್ಲಿ ಆಗ ಕೇವಲ ಇಬ್ಬರೇ ವಿಧ್ಯಾರ್ಥಿಗಳಿದ್ದರು. ಇಲ್ಲಿಯೇ ಅರೆಕಾಲಿಕ ವಿದ್ಯಾರ್ಥಿಯಾಗಿ ಸೇರಿದ ಆ್ಯಲನ್ ಸ್ನಾತಕೋತ್ತರ ಪದವಿಯನ್ನು ಗಳಿಸಿದನು. 1950ರಲ್ಲಿ ¥sóÀÅಲ್ಬ್ರೈಟ್ ವಿದ್ಯಾರ್ಥಿ ವೇತನ ಪಡೆದು ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾದನು. ಆ್ಯಲನ್, ಹೀಗರ್ನೊಂದಿಗೆ ವಾಹಕಶೀಲ ಪಾಲಿಮರ್ಗಳನ್ನು ತಯಾರಿಸಿ, ಅದರ ಅಧ್ಯಯನ ನಡೆಸಿದನು. 1975ರಲ್ಲಿ ಜಪಾನಿನ ಶಿರಾಕವಾನೊಂದಿಗೆ ಸಕಲುಷಿತಗೊಳಿಸಿದ (ಆoಠಿeಜ) ಪಾಲಿ ಅಸಿಟಿಲೇನ್ ವಾಹಕಶೀಲ ಸಾಮಾಗ್ರಿಯನ್ನು ತಯಾರಿಸಿದನು. ಇದಕ್ಕಾಗಿ 2000ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದನು
ಆ್ಯಲನ್ , ಹೀಗೆರ್ –(1936--)- 2000
Alan, J. Heeger
ಅಸಂಸಂ-ಭೌತಶಾಸ್ತ್ರ-ವಾಹಕ ಪಾಲಿಮರ್’ಗಳನ್ನು ಕುರಿತಾಗಿ ಸಂಶೋಧಿಸಿದಾತ.
ಆ್ಯಲನ್ ಅಯೋವಾ ರಾಜ್ಯದ ಸಿಯೋಕ್ಸ್ ನಗರದಲ್ಲಿ 22 ಜನವರಿ 1936 ರಂದು ಜನಿಸಿದನು. ಆ್ಯಲನ್ ತಾತ ರಷ್ಯದ ಯಹೂದಿಯಾಗಿದ್ದು 1904ರಲ್ಲಿ ಅಸಂಸಂಗಳಿಗೆ ವಲಸೆ ಬಂದಿದ್ದನು. ಆ್ಯಲನ್ 9 ವರ್ಷದವನಿರುವಾಗ ಆತನ ತಂದೆ ಹೃದಯಾಘಾತದಿಂದ ಮೃತನಾದನು. ನಂತರ ಆ್ಯಲನ್ ತಾಯಿ ತನ್ನ ಸೋದರಿಯ ಕುಟುಂದೊಂದಿಗೆ ಸೇರಿ ಒಂಟಿಯಾಗಿ ಮಕ್ಕಳನ್ನು ಸಾಕಿದಳು. ಬಾಲ್ಯದಿಂದಲೇ ಮಕ್ಕಳು ಉನ್ನತ ವಿಧ್ಯಾಭ್ಯಾಸ ಹೊಂದುವಂತೆ ಪ್ರೇರೇಪಿಸುತ್ತಿದ್ದಳು. ಆ್ಯಲನ್ ತಂದೆ ಹಾಗೂ ತಾಯಿಯ ಕಡೆಯಲ್ಲಿ ಯಾರೊಬ್ಬರು ಕಾಲೇಜಿನ ಮೆಟ್ಟಿಲು ಹತ್ತಿರಲಿಲ್ಲ. ನೆಬ್ರಾಸ್ಕ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಪದವಿಗೆ ಸೇರಿದ ಆ್ಯಲನ್ ನಂತರ ಭೌತಶಾಸ್ತ್ರಕ್ಕೆ ಬದಲಾಯಿಸಿಕೊಂಡನು. ನಂತರ ಕ್ಯಾಲಿಫೊರ್ನಿಯಾದ ಪಾಲೋ ಆಲ್ಟೋದಲ್ಲಿರುವ ಲಾರ್ಹೆಡ್ ಅಂತರಿಕ್ಷ ಹಾಗೂ ಕ್ಷಿಪಣಿ ವಿಭಾಗದಲ್ಲಿ ಕೆಲಸಮಾಡುತ್ತಲೇ ಅರೆಕಾಲಿಕ ಸಂಶೋಧಕ ವಿದ್ಯಾರ್ಥಿಯಾಗಿ ಆ್ಯಲನ್ ಶ್ರಮಿಸಿದನು. ಪೆನ್ಸೆಲ್ವೇನಿಯಾ “ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದಲ್ಲಿ ಸಾಂದ್ರೀಕೃತ ದ್ರವ್ಯದ ಪ್ರಯೋಗಗಳಲ್ಲಿ ಭಾಗಿಯಾದನು. ಲೋಹಗಳಲ್ಲಿನ ಕಾಂತೀಯ ಕಲುಷಿತಗಳು (ಒಚಿgಟಿeಣiಛಿ ಆoಠಿes) ಹಾಗೂ ಕೊಂಡೋ ಪರಿಣಾಮಗಳ ಕುರಿತಾಗಿ ಅಧ್ಯಯನ ನಡೆಸಿದ ಅ್ಯಲನ್ಗೆ ಅ್ಯಂಥೋನಿ ಗ್ಯಾರಿಟೋನಿಂದ ಟೆಟ್ರಾಸಯನೋಕ್ವಿನೋಡಿಮಿಥೇನ್ (ಟೆಸಿಎನ್ಕ್ಯು) ಸಂಯುಕ್ತದ ಪರಿಚಯವಾಯಿತು. 1970ರಿಂದ 1975ರವರೆಗೆ ಆ್ಯಂಥೋನಿಯೊಂದಿಗೆ, ಅಣ್ವಯಿಕ ಹರಳುಗಳ ಅಸ್ಥಿರತೆಯನ್ನು ಅರಿಯಲು ಯತ್ನಿಸಿದನು. 1975ರಲ್ಲಿ ಬಹು ವಿಶೇಷವಾದ ಸಲ್ಫರ್ ನೈಟ್ರೈಡ್ ಲೌಹಿಕ ಪಾಲಿಮರ್ (Metallic Polymer) ಬಗೆಗೆ ವಿಜ್ಞಾನಿಗಳು ಆಸಕ್ತಿ ತೋರತೊಡಗಿದರು. ಆ್ಯಲನ್, ಅ್ಯಲನ್ ಡಯಾರ್ಮಿಡ್ನೊಂದಿಗೆ ಈ ಹೊಸ ಪಾಲಿಮರ್ಗಳ ಸಂಶ್ಲೇಷಣೆ ಪ್ರಾರಂಭಿಸಿದನು. ಜಪಾನಿಗೆ ಭೇಟಿ ನೀಡಿದ ಮೆಕ್ಡಯಾರ್ಮಿಡ್ ವರ್ಣ ರಂಜಿತ ಸ್ಪಟಿಕ ಲೇಪನಗಳನ್ನು ಹಿಡೆಕಿ ಶಿರಾಕವಾನಿಗೆ ತೋರಿಸಿದನು. ಇಂತಹುದೇ ಪಾಲಿಅಸಿಟಲೀನ್ ಬಹ್ವಂಗಿಯನ್ನು (Polymer) ಹಿಡೆಕಿ ಸಹ ಪಡೆದಿದ್ದನು. ಅತ್ಯಲ್ಪ ಕಾಲದಲ್ಲೇ ಈ ಬಗೆಯ ಪಾಲಿಮರ್ಗಳು ಅವಾಹಕ ಹಾಗೂ ವಾಹಕಗಳ ಸ್ಥಿತ್ಯಂತರದಲ್ಲಿರುವುವೆಂದು ತಿಳಿದು ಬಂದಿತು. ವಾಹಕಶೀಲ ಪಾಲಿಮರ್ಗಳ ಅಭಿವೃದ್ಧಿಯಲ್ಲಿ ಆ್ಯಲನ್ ವಹಿಸಿದ ಗಮನಾರ್ಹ ಕಾರ್ಯಕ್ಕಾಗಿ 2000ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಲಭಿಸಿತು. 1990ರ ನಂತರ ರಿಚರ್ಡ್ ಫ್ರೆಂಡ್ ಪಾಲಿಮರ್ ಎಲ್ಇಡಿಗಳನ್ನು (LED-Light Emmitting Diode) ವಾಣಿಜ್ಯ ಬಳಕೆಗೆ ತಂದನು. ಇವು ದ್ಯುತಿಕೋಶ, ದ್ಯುತಿ ಪತ್ತೆಕಾರಕ ಸೇರಿದಂತೆ ಹಲವಾರು ಕಡೆ ಬಳಕೆಯಾಗುತ್ತಿವೆ.
ಹಿಡೆಕಿ, ಶಿರಾಕಾವ (1936--)
Hideki , Shirakawa 2000
ಜಪಾನ್-ರಸಾಯನಶಾಸ್ತ್ರ-ಪಾಲಿಟಿಸಿಟಿಲೇನ್ನ ವಾಹಕತೆ ಕಾರಣವಾದ ರಾಸಾಯನಿಕ ಕ್ರಿಯಾಶೀಲತೆ ವಿವರಿಸಿದಾತ.
ಹಿಡೆಕಿ 1936ರಲ್ಲಿ ಟೋಕಿಯೋದಲ್ಲಿ ಜನಿಸಿದನು. ಹಿಡೆಕಿ ಜಪಾನ್ನ ಹೊನ್ಷು ದ್ವೀಪದ ತಕಾಮಾಮ ಎಂಬ ಸಣ್ಣ ಪಟ್ಟಣದಲ್ಲಿ ಬೆಳೆದನು. ಇದು ಬೆಟ್ಟ, ಗುಡ್ಡ, ನದಿಗಳಿಂದ ಆವೃತ್ತನಾದ ಸುಂದರ ಪ್ರದೇಶವೆಂದು ಖ್ಯಾತಿವೆತ್ತಿದೆ. ಬಾಲಕನಾಗಿರುವಾಗ ಸಸ್ಯ, ಕೀಟಗಳ ಸಂಗ್ರಹಣೆ ಹಿಡೆಕಿಯ ನೆಚ್ಚಿನ ಹವ್ಯಾಸವಾಗಿದ್ದಿತು. 1957ರಲಿ ಟೋಕಿಯೋ ಇನ್ಸ್ಟಿಟ್ಯೂಟ್ ಆಫ್ಟೆಕ್ನಾಲಜಿ ಸೇರಿದ ಹಿಡೆಕಿ 1966ರಲ್ಲಿ ಪಾಲಿಮರ್ ತಂತ್ರಜ್ಞಾನದಲ್ಲಿ ಡಾಕ್ಟರೇಟ್ ಗಳಿಸಿದನು. ಪಾಲಿಅಸಿಟಿಲಿನ್ನ ಬಹ್ವಂಗೀಕರಣದ ಕ್ರಿಯಾ ವಿನ್ಯಾಸವನ್ನು ಝೀಗ್ಲರ್-ನಟ್ಟ ಕ್ರಿಯಾಪ್ರೇರಕ (Catalyst) ಬಳಸಿ ಅರಿಯಲು ಹಿಡೆಕಿ ಯತ್ನಿಸಿದನು. ಆದರೆ ಈ ಪ್ರಯೋಗ ನಿರೀಕ್ಷಿತ ಫಲಿತಾಂಶ ನೀಡುವಲ್ಲಿ ವಿಫಲವಾಯಿತು. ಪಾಲಿಅಸಿಟಿಲೇನ್ನ್ನು ಬೇರೆ ವಿಜ್ಞಾನಿಗಳು ಕಪ್ಪು ಪುಡಿಯ ರೂಪದಲ್ಲಿ ಪಡೆದಿದ್ದರು. ಆದರೆ ಹಿಡೆಕಿ ಪಡೆದಿದ್ದ ಪಾಲಿ ಅಸಿಟಿಲೇನ್ ವರ್ಣ ತಂತುಗಳಿಂದ ಕೂಡಿದ್ದಿತು. ಇದರ ಕಾರಣ ಹುಡುಕಲು ಹಿಡೆಕಿ ಯತ್ನಿಸಿದನು. ಅಗತ್ಯಕ್ಕಿಂತಲೂ ಸಹಸ್ರಪಟ್ಟು ಅಧಿಕ ಕ್ರಿಯಾಪ್ರೇರಕ ಬಳಸಿದ್ದೇ ಇದಕ್ಕೆ ಕಾರಣವೆಂದು ಇದರಿಂದ ಕ್ರಿಯಾವೇಗ ತೀವ್ರಗೊಂಡು, ರಾಸಾಯನಿಕ ಕ್ರಿಯೆಯಲ್ಲಿ ಬಿಡುಗಡೆಯಾಗುವ ಅನಿಲಗಳು ಬಹ್ವಂಗೀಕರಣಗೊಂಡಿವೆಯೆಂದು (Polymerisation) ತಿಳಿದು ಬಂದಿತು. ಇದರ ಫಲಿತಾಂಶವಾಗಿ ನಿಷ್ಕಾಸ ಅನಿಲ (Exhaust Gas) ಮಿಂಚುವ ತೆಳು ಪೆÇರೆಯಾಗಿ ಸಾಂದ್ರಗೊಂಡಿತು. ಇದು ಪಾಲಿ ಅಸಿಟಿಲಿನ್ನ್ನು ತೆಳುಪೆÇರೆಯಂತೆ ಪಡೆಯುವ ಹೊಸ ಸಾಧ್ಯತೆಯನ್ನು ತಂದಿತ್ತಿತು. ಅಸಂಸಂದಲ್ಲಿ ಅ್ಯಲನ್ ಮೆಕ್ ಡಿಯಾಮರ್ಡ್ ಸಹ ಇಂತಹುದೇ ವಿದ್ಯಾಮಾನ ವೀಕ್ಷಿಸಿದ್ದನು. ಹಿಡೆಕಿಯ ಈ ಪ್ರಯೋಗ ವೀಕ್ಷಿಸಿದ ಆ್ಯಲನ್ ಹಿಡೆಕಿಯನ್ನು ಅಸಂಸಂಗಳ ಪೆನ್ಸೆಲ್ವೇನಿಯಾ ವಿಶ್ವವಿದ್ಯಾಲಯಕ್ಕೆ ಬರುವಂತೆ 1976ರಲ್ಲಿ ಆಹ್ವಾನಿಸಿದರು. ಇಲ್ಲಿ ಹೀಗೆರ್ ಮಾರ್ಗದರ್ಶನದಲ್ಲಿ ಹಿಡೆಕಿ ರಾಸಾಯನಿಕ ಸಕಲುಷಿತಗೊಳಿಕೆಯಿಂದ (Doping) ವೈದ್ಯುತ್ ವಾಹಕತೆ ಪಾಲಿಅಸಿಟಿಲಿನ್ನಲ್ಲಿ ಕೋಟ್ಯಾಂತರ ಪಟ್ಟು ಅಧಿಕವಾಗುವುದನ್ನು ಗುರುತಿಸಿದರು. ಹಿಡೆಕಿಯ ಮುಂದುವರೆದ ಸಂಶೋಧನೆಗಳಿಂದ ಪಾಲಿಟಿಸಿಟಿಲೇನ್ನ ವಾಹಕತೆ ಕಾರಣವಾದ ರಾಸಾಯನಿಕ ಕ್ರಿಯಾಶೀಲತೆ ಸುಸ್ಪಷ್ಟಗೊಂಡಿತು. ಈ ಸಂಶೋಧನೆಗಳಿಗಾಗಿ ಹಿಡೆಕಿ 2000ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
Richard , Ernst
ಸ್ವಿಟ್ಸಲ್ರ್ಯಾಂಡ್-ರಸಾಯನಶಾಸ್ತ್ರ-ಬೈಜಿಕ ಕಾಂತೀಯ ಅನುರಣನದಲ್ಲಿ ಫೂರೆ ರೂಪಾಂತರ ವಿಧಾನಗಳನ್ನು ( Fourier Transformation Methods) ಪರಿಚಯಿಸಿದಾತ.
ರಿಚರ್ಡ್ನ ತಂದೆ ವಿಂಟರ್ಥರ್ ಪಟ್ಟಣದಲ್ಲಿ ವಾಸ್ತುಶಿಲ್ಪಿಯಾಗಿದ್ದನು. ಈ ಪಟ್ಟಣ ಕೈಗಾರಿಕೆ ಹಾಗೂ ಕಲೆಗಳ ಅಪೂರ್ವ ಸಂಗಮವಾಗಿದ್ದಿತು. ಇಲ್ಲಿನ ಸಂಗೀತ ಗೋಷ್ಟಿಗಳ ಕೀರ್ತಿ ಯುರೋಪಿನ ಎಲ್ಲೆ ಮೀರಿ ಹಬ್ಬಿದ್ದಿತು. ಇಲ್ಲಿ ತಯಾರಾಗುತ್ತಿದ್ದ ಡೀಸೆಲ್ ಮೋಟಾರ್ ಹಾಗೂ ರೈಲ್ವೇ ಇಂಜಿನ್ಗಳಿಗೆ ಉತ್ತಮ ಮಾರುಕಟ್ಟೆಯಿದ್ದಿತು. ಈ ಪರಿಸರದಿಂದಾಗಿ ರಿಚರ್ಡ್ ಕಲಾಪ್ರೇಮಿಯೂ , ತಾಂತ್ರಿಕ ಆಸಕ್ತನೂ ಆಗಿ ಬೆಳೆದನು. ರಿಚರ್ಡ್ನ ಚಿಕ್ಕಪ್ಪ ಲೋಹಶಾಸ್ತ್ರದಲ್ಲಿ ಇಂಜಿನಿಯರ್ ಆಗಿದ್ದನು. ಈತ ಉಳಿಸಿದ್ದ ಕೆಲ ರಾಸಾಯನಿಕಗಳು ರಿಚರ್ಡ್ಗೆ ದಕ್ಕಿ, ಅದರಲ್ಲಿ ಆತನಿಗೆ ಅಪಾರ ಆಸಕ್ತಿ ಮೂಡಿತು. ಇವುಗಳನ್ನು ಬಳಸಿ ನಡೆಸಿದ ಹಲವು ಪ್ರಯೋಗಗಳಿಂದ ಹಲವಾರು ಬಾರಿ ಸ್ಪೋಟಗಳು ಸಂಭವಿಸಿ ವಿಷಾನಿಲಗಳು ತುಂಬಿದವು. ಇದರಿಂದ ರಿಚರ್ಡ್ನ ತಂದೆ ಈತನ ಪ್ರಯೋಗಗಳನ್ನು ನಿಗ್ರಹಿಸಿದನು. ಹಲವಾರು ಪುಸ್ತಕಗಳನ್ನು ಸಂಗ್ರಹಿಸಿ, ರಸಾಯನಶಾಸ್ತ್ರವನ್ನು ಆಳವಾಗಿ ಅರಿಯಲು ಯತ್ನಿಸಿದನು. ಪ್ರೌಢ ಶಿಕ್ಷಣ ಮುಗಿಸಿದ ಮೇಲೆ ರಸಾಯನಶಾಸ್ತ್ರದ ಕಲಿಕೆಗಾಗಿ ಝೂರಿಕ್ನಲ್ಲಿರುವ ಸ್ವಿಸ್ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದನು. ಆ ಕಾಲಕ್ಕೆ ಇಲ್ಲಿ ರಸಾಯನ ಶಾಸ್ತ್ರದ ಸೂತ್ರಗಳನ್ನು, ಪ್ರತಿಕ್ರಿಯೆಯ ಸಮೀಕರಣಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಅಪಾರ ಆದ್ಯತೆ ನೀಡಲಾಗುತ್ತಿತ್ತು. ಇದು ರಿಚರ್ಡ್ಗೆ ಭಾರಿ ನಿರಾಸೆಯುಂಟುಮಾಡಿತು. ಇದರ ಪರಿಹಾರಕ್ಕಾಗಿ ರಿಚರ್ಡ್ ತಾನೇ ಸ್ವಂತ , ಕೈಗೆಟುಕುವ ಪುಸ್ತಕಗಳನ್ನು ಓದತೊಡಗಿದನು. ಇದರಿಂದಾಗಿ ಕ್ವಾಂಟಂ ಬಲವಿಜ್ಞಾನ ರೋಹಿತಶಾಸ್ತ್ರ, ಔಷ್ಣೀಯ ಗತಿಶಾಸ್ತ್ರದಲ್ಲಿನ ಮೂಲ ತತ್ತ್ವಗಳು ಮನದಟ್ಟಾದವು. ಗುಂಟ್ ಹಾರ್ಡ್ನ ಮಾರ್ಗದರ್ಶನದಲ್ಲಿ ಡಾಕ್ಟರೇಟ್ಗಾಗಿ ಪ್ರಯೋಗಗಳನ್ನು ರಿಚರ್ಡ್ ಪ್ರಾರಂಭಿಸಿದನು. ಈ ಕಾಲದಲ್ಲಿ ಬೈಜಿಕ ಕಾಂತೀಯ ಅನುರಣನ ವಿಧಾನಗಳು ಶೈಶಾವಸ್ಥೆಯಲ್ಲಿದ್ದವು. ಇದಕ್ಕೆ ಬೇಕಾದ ನಿಖರವಾದ ನಿಷ್ಕಷ್ಟ ರೋಹಿತದರ್ಶಕ, ಹಾಗೂ ಸಹಸಾಧನಗಳನ್ನು ನಿರ್ಮಿಸಲು ರಿಚರ್ಡ್ ಶ್ರಮಿಸಿದನು. ಇದರೊಂದಿಗೆ ಪ್ರಯೋಗಗಳಲ್ಲಿ ದೊರೆತ ಫಲಿತಾಂಶಗಳಿಗೆ ಸೈದ್ಧಾಂತಿಕ ವಿವರಣೆ ನೀಡುವ ಅನಿವಾರ್ಯತೆಯೂ ಬಂದೊದಗಿತು. ಈ ದಿಶೆಯಲ್ಲಿ ರಿಚರ್ಡ್ಗೆ ಹ್ಯಾನ್ಸ್ ಪ್ರೈಮಾಸ್ನಂತಹ ಪ್ರತಿಭಾವಂತ ವಿಜ್ಞಾನಿಯ ನೆರವು ದಕ್ಕಿತು. ರಿಚರ್ಡ್ ಹಾಗೂ ಹ್ಯಾನ್ಸ್ನಿಂದ ನಿರ್ದೇಶಿಸಲ್ಪಟ್ಟ ರೀತಿಯಲ್ಲಿ ಬೈಜಿಕ ಕಾಂತೀಯ ಅನುರಣನ ವಿಧಾನಕ್ಕೆ ಬೇಕಾದ ರೋಹಿತ ದರ್ಶಕಗಳನ್ನು ಸ್ವಿಟ್ಸಲ್ರ್ಯಾಂಡಿನ ಟ್ರಬ್, ಟೌನೆಕ್ ಕಂಪನಿ ತಯಾರಿಸಿ, ಮಾರತೊಡಗಿತು. ರಿಚರ್ಡ್ನ ಬಹುತೇಕ ಪರಿಶ್ರಮ ಅತ್ಯಧಿಕ ಸಂವೇದನೆ ಹೊಂದಿದ ರೇಡಿಯೋ ಆವರ್ತನೆಯ ಪೂರ್ವವರ್ಧಕಗಳನ್ನು. (Radio Frequency PreAmplifiess) ತಯಾರಿಸುವಲ್ಲಿ ವಿನಿಯೋಗವಾಯಿತು. 1962ರಲ್ಲಿ ಡಾಕ್ಟರೇಟ್ ಗಳಿಸಿದ ರಿಚರ್ಡ್, ಶೈಕ್ಷಣಿಕ ವಲಯ ತೊರೆದು ಕೈಗಾರಿಕಾ ವಲಯಕ್ಕೆ ಹೋಗಲು ಬಯಸಿದನು. ಇದಕ್ಕಾಗಿ ಅಸಂಸಂದಲ್ಲಿನ ಪಾಲೋ ಆಲ್ಟೋದಲ್ಲಿರುವ ವೇರಿಯನ್ ಅಸೋಸಿಯೇಟ್ಸ್ ಕಂಪನಿ ಸೇರಿದನು. ಇಲ್ಲಿ ಹಲವಾರು ಖ್ಯಾತ ವಿಜ್ಞಾನಿಗಳು ನಿರ್ದಿಷ್ಟ ವೈಜ್ಞಾನಿಕ ಸಂಶೋಧನೆಯನ್ನು ವಾಣಿಜ್ಯೀಕರಣಗೊಳಿಸುವ ಗುರಿಯಿರಿಸಿಕೊಂಡು ಕೆಲಸ ಮಾಡುತ್ತಿದ್ದರು,. ಇಲ್ಲಿ ಲೆಸ್ಟನ್ ಎ ಅ್ಯಂಡರ್ಸ್ನ್ನ ನೇತೃತ್ವದಲ್ಲಿ ರಿಚರ್ಡ್ ಹಾಗೂ ಸಂಗಡಿಗರು ಹಲವಾರು ಆವರ್ತನೆಗಳನ್ನು ಸಮಾಂತರದಲ್ಲಿ ಪತ್ತೆ ಹಚ್ಚಿ ಓದಿ ದಾಖಲಿಸಬಲ್ಲ ಬೈಜಿಕ ಕಾಂತೀಯ ಅನುರಣನ (NMR-Nuclear Magnetic Resonance) ಸಾಧನವನ್ನು ¥sóÀÇರೇ ರೂಪಾಂತರ ವಿಧಾನದಲ್ಲಿ ನಿರ್ಮಿಸಲು ಯತ್ನಿಸಿದರು. ಇವರ ಶ್ರಮಕ್ಕೆ ಪ್ರತಿಫಲ ದಕ್ಕಿತಾದರೂ ವಿಜ್ಞಾನಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು ¥sóÀÇರೇ ವಿಧಾನದಲ್ಲಿ ನಿರ್ಮಿಸಿದ ಬೈಜಿಕ ಕಾಂತೀಯ ಅನುರಣನ ತಂತ್ರವನ್ನು ವಿವರಿಸಿ ಇವರು ಬರೆದ ಲೇಖನ ಎರಡು ಬಾರಿ ಜರ್ನಲ್ ಆಫ್ಕೆಮಿಕಲ್ ಫಿûಸಿಕ್ಸ್ನಿಂದ ತಿರಸ್ಕೃತಗೊಂಡು ಅಂತಿಮವಾಗಿ ರಿವ್ಯೂ ಆಫ್ಕೆಮಿಕಲ್ ಇನ್ಸ್ಟ್ರುಮೆಂಟ್ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ರಿಚರ್ಡ್ ಹಾಗೂ ಸಂಗಡಿಗರ ಹೊಸ ಸಾಧನವನ್ನು ಪೂರ್ಣ ಪ್ರಮಾಣದಲ್ಲಿ ರೋಹಿತದರ್ಶಕದೊಂದಿಗೆ ತಯಾರಿಸಲು ವೇರಿಯನ್ ಕಂಪನಿ ನಿರಾಕರಿಸಿತು. ಇದಾದ ಏಳು ವರ್ಷಗಳ ನಂತರ ವೇರಿಯನ್ ಕಂಪನಿಯ ಪ್ರತಿಸ್ಪರ್ಧಿಯಾದ ಬ್ರುಕಲ್ ಅನ್ಯಾಲಿಟಿಷ ಮೆಸ್ ಟೆಕ್ನಿಕ್ ಕಂಪನಿ ಟೋನಿ ಕೆಲ್ಲರ್ ಮುಂದಾಳತ್ವದಲ್ಲಿ ಇಂತಹುದೇ ಸಾಧನ ತಯಾರಿಸಿ ಮಾರಿತಲ್ಲದೆ ವೇರಿಯನ್ ಕಂಪನಿಗಿಂತಲೂ ಮೊದಲೇ ಅದು ಈ ತಂತ್ರಜ್ಞಾನಕ್ಕೆ ಏಕಸ್ವಾಮ್ಯ ಹೊಂದಿರುವುದು ನಂತರ ಬೆಳಕಿಗೆ ಬಂದಿತು. 1968ರಲ್ಲಿ ಸ್ವಿಟ್ಸಲ್ರ್ಯಾಂಡಿಗೆ ಮರಳಿದ ರಿಚರ್ಡ್ ಬೈಜಿಕ ಕಾಂತೀಯ ಅನುರಣನ ತಂತ್ರಗಳಲಿ ಸುಧಾರಣೆಗೆ ತರಲು ಯತ್ನಿಸಿದನು. ಪೌಲ್ ಲೌಟೆರ್ಬರ್ ದ್ವಿ ಆಯಾಮದ ರೋಹಿತದರ್ಶಕದ ತತ್ತ್ವಗಳನ್ನು ಎನ್ಎಂಆರ್ ಬಿಂಬಗಳಿಗೂ ಅನ್ವಯಿಸಬಹುದೆಂದು ಸೂಚಿಸಿದ್ದನು. ಈ ಮಾರ್ಗದಲ್ಲಿನ ಮೊದಲ ಪ್ರಯೋಗಗಳನ್ನು ರಿಚರ್ಡ್, ಡೈಟಿಕ್ ವೆಲ್ಟ್ ಹಾಗೂ ಅನಿಲ್ ಕುಮಾರ್ ನಡೆಸಿದರು. ಮುಂದೆ ಇದು ಹಲವು ಅಯಾಮದ ರೋಹಿತಶಾಸ್ತ್ರಕ್ಕೆ ಅಡಿಗಲ್ಲಾಯಿತು. ಜೀವ ರಸಾಯನಶಾಸ್ತ್ರದಲ್ಲಿ ಅಣ್ವಯಿಕ ರಾಚನಿಕ ಸ್ವರೂಪ ಅರಿಯಲು ನೆರವಾಯಿತು. ಬೈಜಿಕ ಕಾಂತೀಯ ಅನುರಣನದಲ್ಲಿ ಫೂರೆ ರೂಪಾಂತರ ವಿಧಾನಗಳನ್ನು ಪರಿಚಯಿಸಿದುದ್ದಕ್ಕಾಗಿ ರಿಚರ್ಡ್ 1991ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ರುಡಾಲ್ಫ್ ,ಎ. ಮಾರ್ಕಸ್ (1933--) 1992
Rudolph , Marcus
ಕೆನಡಾ-ರಸಾಯನಶಾಸ್ತ್ರ- ರಾಸಾಯನಿಕ ಪ್ರತಿಕ್ರಿಯಾ ಗತಿಶೀಲಶಾಸ್ತ್ರದ (Reaction Dynamics) ಮುಂಚೂಣಿಗ
ಮಾರ್ಕಸ್ ಕುಟುಂಬ ನಾರ್ವೆ ಮೂಲದ್ದಾಗಿದ್ದು ಕೆನಡಾದಲ್ಲಿ ವಲಸೆ ಬಂದು ನೆಲೆಸಿದ್ದಿತು. ಈತನ ತಂದೆ ತಾಯಿಗಳು ಹೆಚ್ಚಿನ ಶಿಕ್ಷಣ ಪಡೆದವರಾಗಿರಲಿಲ್ಲ. ಆದರೆ ಮಾರ್ಕಸ್ ಸೋದರ ಮಾವ ಹಾಗೂ ತಂದೆಯ ಸೋದರರು ಸ್ವೀಡನ್ನಲ್ಲಿದ್ದು ಅದರಲ್ಲೊಬ್ಬ 1915ರಲ್ಲಿ ಉಪ್ಸಾಲ ವಿಶ್ವವಿದ್ಯಾಲಯದ ಗೌರವಕ್ಕೆ ಪಾತ್ರವಾಗಿದ್ದನು. ಈತನಿಗೆ ಹದಿಮೂರು ಭಾಷೆಗಳಲ್ಲಿ ಪ್ರಭುತ್ವವಿದ್ದಿತು. ಇದೇ ಪ್ರೇರಣೆಯಿಂದ ಮಾರ್ಕಸ್ ಮುಂದೆ 9 ಭಾಷೆಗಳನ್ನು ಕಲಿತನು ಮೆಕ್ಗಿಲ್ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದ ಅಧ್ಯಯನಕ್ಕೆ ಮಾರ್ಕಸ್ ಸೇರಿದನು. ಇಲ್ಲಿ ರಾಸಾಯನಿಕ ಕ್ರಿಯೆಗಳ ವೇಗದಲ್ಲಿನ ಸಂಶೋಧನೆಗಳಿಗೆ ಮುಂದೆ ನೊಬೆಲ್ ಪ್ರಶಸ್ತಿ ಗಳಿಸಿದ ಸಿರಿಲ್ ಹಿನ್ಷೆಲ್ವುಡ್, ಉಪಾಧ್ಯಾಯನಾಗಿದ್ದನು. 1946ರಲ್ಲಿ ಡಾಕ್ಟರೇಟ್ ಗಳಿಸಿದ ಮಾರ್ಕಸ್ ಓಟ್ಟಾವದಲ್ಲಿರುವ ನ್ಯಾಷನಲ್ ರಿಸರ್ಚ್ ಕೌನ್ಸಿಲ್ ಸೇರಿದನು. 1948ರಲ್ಲಿ ನಾರ್ಥ್ಕೆರೋಲಿನ್ ವಿಶ್ವ ವಿದ್ಯಾಲಯದಲ್ಲಿ ಆಸ್ಟರ್ ಕೆ ರೈಸೆನ್ ಕೈ ಕೆಳಗೆ ಸೈದ್ಧಾಂತಿಕ ಭೌತಶಾಸ್ತ್ರದ ವಿಭಾಗಕ್ಕೆ ರುಡಾಲ್ಫ್ ಸೇರಿದನು. 1920ರಲ್ಲಿ ರೈಸ್ ರ್ಯಾಮ್ಸ್ಪರ್ಜರ್ ಕ್ಯಾಸೆಲ್ ಅರ್.ಅರ್.ಅರ್.ಸಿದ್ಧಾಂತವನ್ನು 1920ರಲ್ಲಿ ಮಂಡಿಸಿ ರಾಸಾಯನಿಕ ಕ್ರಿಯೆಗಳ ಸ್ಥಿತ್ಯಂತರವನ್ನು ವಿವರಿಸಿದ್ದರು. ಇದಕ್ಕೆ ಸಂಖ್ಯಾ ಕಲನಶಾಸ್ತ್ರದ ತತ್ತ್ವಗಳನ್ನು ಅಳವಡಿಸಿದ ಮಾರ್ಕಸ್ ತನ್ನ ಹೆಸರು ಸೇರಿದಂತಹ ಅರ್.ಅರ್.ಕೆ.ಎಮ್ ಸಿದ್ಧಾಂತವನ್ನು ನೀಡಿದನು. 1951ರಲ್ಲಿ ಈ ಸಿದ್ಧಾಂತ ಪ್ರಕಟಗೊಂಡಿತು. ಇದೇ ವರ್ಷ ಬ್ರೂಕ್ಲಿನ್ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಟ್ ಸೇರಿದ ಮಾರ್ಕಸ್ ಎಲೆಕ್ಟ್ರಾನ್ ವರ್ಗಾವಣೆಯನ್ನು ಕುರಿತಾಗಿ ಸಂಶೋಧನೆ ನಡೆಸಿದನು. ರಾಸಾಯನಿಕ ಪ್ರತಿಕ್ರಿಯಾ ಗತಿಶೀಲಶಾಸ್ತ್ರದಲ್ಲಿ ಮಾರ್ಕಸ್ ತೊಡಗಿಸಿಕೊಂಡನು. ಇದರಲ್ಲಿನ ಗಮನಾರ್ಹ ಸಾಧನೆಗಳಿಗಾಗಿ 1992ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೈಖೆಲ್ , ಸ್ಮಿತ್ (1932--) 1993
Michael , Smith
ಇಂಗ್ಲೆಂಡ್-ರಸಾಯನಶಾಸ್ತ್ರ-ನ್ಯೂಕ್ಲಿಯಿಕ್ ಆಮ್ಲಗಳ ಸಂಶ್ಲೇಷಣೆಯ ಮುಂಚೂಣಿಗ.
ಮೈಖೇಲ್ 26 ಏಪ್ರಿಲ್ 1932ರಂದು ಇಂಗ್ಲೆಂಡ್ನ ಬ್ಲಾಕ್ವೂಲ್ನಲ್ಲಿ ಜನಿಸಿದನು. ಇಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿದನು. ಲ್ಯಾಟಿನ್ ಭಾಷೆಯಲ್ಲಿ ಹಿಡಿತ ಹೊಂದಿರದ ಕಾರಣ ಮೈಖೇಲ್ಗೆ ಆಕ್ಸ್’ಫರ್ಡ್ ಮತ್ತು ಕೇಂಬ್ರಿಜ್ನಲ್ಲಿ ಪ್ರವೇಶ ದಕ್ಕಲಿಲ್ಲ. ಆದ್ದರಿಂದ 1950ರಲ್ಲಿ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದ ಪದವಿಗೆ ಸೇರಿದನು. 1953ರ ಪದವಿ ಮುಗಿಸಿ, 1956ರಲ್ಲಿ ಡಾಕ್ಟರೇಟ್ ಗಳಿಸಿದನು. ಮೈಖೇಲ್ ಅಸಂಸಂದಲ್ಲಿ ಹಲವಾರು ಖ್ಯಾತ ರಸಾಯನಶಾಸ್ತ್ರಜ್ಞರನ್ನು , ವಿಶ್ವವಿದ್ಯಾಲಯಗಳನ್ನು ಸಂಪರ್ಕಿಸಿ ಹೆಚ್ಚಿನ ಸಂಶೋಧನೆ, ವೃತ್ತಿ ಜೀವನದ ಅವಕಾಶಗಳನ್ನು ಅರಸಿದನು. ಆದರೆ ಇವು ಯಾವುವೂ ಯಶಸ್ವಿಯಾಗಲಿಲ್ಲ. ಆದರೆ ಭಾರತೀಯ ಮೂಲದ, ಕೆನಡಾದ ವ್ಯಾಂಕೋವರ್ನಲ್ಲಿದ್ದ ಸಮವಯಸ್ಕನಾಗಿದ್ದ ಹರಗೋವಿಂದ ಖೊರಾನ ಜೈವಿಕ ಪ್ರಾಮುಖ್ಯತೆ ಹೊಂದಿರುವ ಸಾವಯವ ¥sóÁಸ್ಫೇಟ್ಗಳ ಮೇಲೆ ತನ್ನೊಂದಿಗೆ ಸಂಶೋಧನೆ ನಡೆಸುವ ಆಹ್ವಾನ ನೀಡಿದನು. ಇಲ್ಲಿ ಹರಗೋವಿಂದ ಖೊರಾನಾ ಸಹಯೋಗದಲ್ಲಿ ಮೈಖೇಲ್ ನ್ಯೂಕ್ಲಿಯೋಸೈಡ್-5 ಟೈಫಾಸ್ಫೆಟ್’ಗಳನ್ನು ಸಂಶ್ಲೇಷಿಸಿದನು. ಇದು ಜೀವ ರಸಾಯನಶಾಸ್ತ್ರದಲ್ಲಿನ ಹಲವಾರು ಸಂಶ್ಲೇಷಣೆಗೆ ಮಾರ್ಗವನ್ನೊದಗಿಸಿತು. 1960ರಲ್ಲಿ ಖುರಾನಾ, ಮೈಖೇಲ್ ಹಾಗೂ ತಂಡ ಅಸಂಸಂದ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದ ಕಿಣ್ವ ಸಂಶೋಧನಾ ಕೇಂದ್ರಕ್ಕೆ ತಮ್ಮ ಕಾರ್ಯತಾಣವನ್ನು ಬದಲಾಯಿಸಿತು. ಇಲ್ಲಿ ನ್ಯೂಕ್ಲಿಯಿಕ್ ಆಮ್ಲಗಳ ರಸಾಯನಶಾಸ್ತ್ರದಲ್ಲೇ ಸವಾಲೆಂದು ಪರಿಗಣಿತವಾಗಿದ್ದ ರೈಬೋ-ಓಲಿಗೋ ನ್ಯೂಕ್ಲಿಯೋಟೈಡ್ಸ್ನ್ನು ಸಂಶ್ಲೇಷಿಸಿದನು. 1961ರಲ್ಲಿ ಕೆನಡಾಗೆ ಮರಳಿದ ಮೈಖೇಲ್, ಕೆನಡಾದ ವೈದ್ಯಕೀಯ ಸಂಶೋಧನಾ ಸಮಿತಿಯ ಸಂಶೋಧಕ ಸಹಚರನಾದನು. 1981ರಲ್ಲಿ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿದ್ದ ಆರ್ಲ್ ಡೇವಿಯೊಂದಿಗೆ ಮೈಖೇಲ್, ಝೈರೋಸ್ ಎಂಬ ಜೈವಿಕ ತಂತ್ರಜ್ಞಾನದ ಕಂಪನಿ ಸ್ಥಾಪಿಸಿದನು. ಇದಕ್ಕೆ ಸೀಟ್ಲ್ನಲ್ಲಿರುವ ಸಾಹಸಿ ಬಂಡವಾಳಗಾರರಾದ ಕೇಬಲ್ ಹಾಗೂ ಹಾ¥sóï ಕಂಪನಿಗಳು ಬಂಡವಾಳ ಒದಗಿಸಿದವು. ಡೆನ್ಮಾರ್ಕ್ನ ಔಷಧಿ ತಯಾರಿಕಾ ಕಂಪನಿಯ ನೋವೋ ಅಗತ್ಯಕ್ಕನುಗುಣವಾಗಿ ಝೈರೋಸ್ ಕಂಪನಿ ಯೀಸ್ಟ್ ಬಳಸಿ ಮಾನವ ಇನ್ಸುಲಿನ್ ತಯಾರಿಸಿತು. ಈ ಕಂಪನಿ 1988ರಲ್ಲಿ ಝೈರೋಸ್ನ್ನು ಖರೀದಿಸಿ ಝೈರೋ ಜೆನೆಟಿಕ್ಸ್ ಎಂಬ ಹೊಸ ಹೆಸರಿನಲ್ಲಿ ವ್ಯವಹಾರ ಮುಂದುವರೆಸಿತು. ನ್ಯೂಕ್ಲಿಯಿಕ್ ಆಮ್ಲಗಳ ಸಂಶ್ಲೇಷಣೆಯಲ್ಲಿನ ಕೊಡುಗೆಗಳಿಗಾಗಿ ಮೈಖೇಲ್ 1993ರಲ್ಲಿ ನೊಬೆಲ್ ಪ್ರಶಸ್ತಿಗೆ ಪಾತ್ರನಾದನು.
ಮುಲ್ಲಿಸ್,ಕ್ಯಾರಿ (ಬ್ಯಾಂಕ್ಸ್)( 1944--) 1993
Mullis ,Kary ( Banks )
ಅಸಂಸಂ-ಜೀವ ರಸಾಯನಶಾಸ್ತ್ರ- ಡಿಎನ್ಎ ಕುರುಹುಗಳ ಪತ್ತೆಗೆ ಪಾಲಿಮರೇಸ್ ಸರಣಿ ಪ್ರತಿಕ್ರಿಯಾ ವಿಧಾನ ಬಳಕೆಗೆ ತಂದಾತ.
ಮುಲ್ಲಿಸ್ ಜಾರ್ಜಿಯಾ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿಯಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಗಳಿಸಿ, ಕ್ಯಾಲ್ಟೆಕ್ನಲ್ಲಿ ಜೀವ ರಸಾಯನ ಶಾಸ್ತ್ರದ ಸ್ನಾತಕೋತ್ತರ ಪದವಿ ಪಡೆದು ಜೀವ ತಾಂತ್ರಿಕ ಕಂಪನಿ ಸೆಟಸ್ನಲ್ಲಿ ವೃತ್ತಿಗೆ ಸೇರಿದನು. ಡಿಎನ್ಎ ತುಣುಕು ಅಥವಾ ವಂಶವಾಹಕಗಳನ್ನು ಅತ್ಯಂತ ಕಡಿಮೆ ಪ್ರತಿಚಯವಿರುವಾಗ ಹೇಗೆ ಗುರುತಿಸಬಹುದೆಂಬ ವಿಚಾರದಲ್ಲಿ ಮುಲ್ಲಿಸ್ ತಲ್ಲೀನನಾದನು. 1983ರಲ್ಲಿ ರಾತ್ರಿ ಹೊತ್ತು ಪ್ರಯಾಣ ಮಾಡುತ್ತಿದ್ದಾಗ ಅವನಿಗೆ ಪರಿಹಾರ ಮಾರ್ಗ ಗೋಚರಿಸಿತು. ಈ ವಿಧಾನದಲ್ಲಿ ಡಿಎನ್ಎಯನ್ನು ನಿರ್ದಿಷ್ಟ ಸ್ಥಾನದಲ್ಲಿ ಒಡೆದು, ಓಲಿಗೋ ನ್ಯೂಕ್ಲಿಯೋಟೈಡ್ಸ್ ಪಡೆಯಲಾಗುವುದು. ಇವು ನಿರ್ದಿಷ್ಟ ಸರಣಿಯಲ್ಲಿ ವಂಶವಾಹಕಗಳನ್ನು ಹೊಂದಿರುತ್ತವೆ. ರಾಸಾಯನಿಕ ವಿಧಾನಗಳಿಂದ ಇವುಗಳನ್ನು ಹಲವಾರು ಬಾರಿ ನಕಲುಗೊಳಿಸಿ ಯಥೇಚ್ಛಗೊಳಿಸಬಹುದು. ಇದರಿಂದ ಒಂದೆರಡು ನಿಮಿಷಗಳ ಅವಧಿಯಲ್ಲೇ ಹತ್ತರಿಂದ, ಇಪ್ಪತ್ತು ಕೋಟಿ ಓಲಿಗೋ ನ್ಯೂಕ್ಲಿಯೋಟೈಡ್ಸ್ಗಳು ದಕ್ಕುತ್ತವೆ. ಮುಲ್ಲಿಸ್ನಿಂದ ಪರಿಷ್ಕರಿಸಲ್ಪಟ್ಟ ಈ ವಿಧಾನಈಗ ಎಲ್ಲೆಡೆ ಪ್ರಚಲಿತವಿದೆ. ಇದಕ್ಕಾಗಿ ಮೈಖೇಲ್ ಸ್ಮಿತ್ನೊಂದಿಗೆ ಮುಲ್ಲಿಸ್ 1993ರ ನೊಬೆಲ್ ಪ್ರಶಸ್ತಿ ಹಂಚಿಕೊಂಡನು. ಮುಲ್ಲಿಸ್ನ ವಿಧಾನದಿಂದ ಅಪರಾಧ ಪತ್ತೆ, ಅಳಿದ ಜೀವಿಗಳ ಪಳೆಯುಳಿಕೆಗಳಿಂದ ಡಿಎನ್ಎ ಕುರುಹು ಪಡೆಯುವುದು ಸಾಧ್ಯ. ಹಲವು ಹತ್ತಾರು ವೈವಿಧ್ಯ ರಂಗದಲ್ಲಿ ಆಸಕ್ತನಾಗಿರುವ ಮುಲ್ಲಿಸ್ ಈಗ ಸ್ಟಾರ್ ಜೀನ್ ಕಂಪನಿ ಪ್ರಾರಂಭಿಸಿದ್ದಾನೆ. ಸಿನಿಮಾ ತಾರೆಗಳ ವರ್ಧಿತ ಡಿಎನ್ಎ ಯನ್ನು ಕೊರಳ ಪದಕಗಳಲ್ಲಿರಿಸಿ, ಕೈಬಳೆಗಳಲ್ಲಿರಿಸಿ ಮಾರಾಟ ಮಾಡುತ್ತಿದ್ದಾನೆ.. ನೊಬೆಲ್ ಪ್ರಶಸ್ತಿಯನ್ನು ರಾಜ ಸೇವಕರಿಂದ ಮನೆಗೆ ತಲುಪಿಸಬೇಕೆಂದು ಪ್ರತಿಪಾದಿಸುತ್ತಿದ್ದಾನೆ.
ಜಾರ್ಜ್, ಎ. ಓಲಾ (1927--) 1994
George , A.Olah
ಹಂಗರಿ-ಅಸಂಸಂ-ರಸಾಯನಶಾಸ್ತ್ರ-ಮಹಾಆಮ್ಲಗಳ (Superacids) ಅಧ್ಯಯನ ಖ್ಯಾತ.
ಜಾರ್ಜ್, 22 ಮೇ 1927ರಂದು ಬುಡಾಪೆಸ್ಟ್’ನಲ್ಲಿ ಜನಿಸಿದನು. ಈತನ ತಂದೆ ವಕೀಲನಾಗಿದ್ದು, ಅವರ ವಂಶದಲ್ಲಿ ಯಾರೂ ಯಾವುದೇ ವಿಜ್ಞಾನದಲ್ಲಿ ಆಸಕ್ತಿ ಹೊಂದಿರಲಿಲ್ಲ. ಬುಡಾಪೆಸ್ಟ್ನಲ್ಲಿರುವ ಜಿಮ್ನಾಷಿಯಂನಲ್ಲಿ ಎಂಟು ವರ್ಷಗಳ ಕಾಲ ಲ್ಯಾಟೀನ್, ಜರ್ಮನ್, ಫ್ರೆಂಚ್, ಹಾಗೂ ಇನ್ನಿತರ ಭಾಷೆಗಳನ್ನು ಕಲಿತನು. ಸಾಹಿತ್ಯ, ಚರಿತ್ರೆ ಜಾರ್ಜ್ಗೆ ಅತಿ ಪ್ರಿಯವಾಗಿದ್ದವು. ವಿಜ್ಞಾನ ಎಂದಿಗೂ ಆತನನ್ನು ಆಕರ್ಷಿಸಿರಲಿಲ್ಲ. ಎರಡು ಜಾಗತಿಕ ಯುದ್ದಗಳಿಂದ ಜರ್ಜರಿತವಾಗಿದ್ದ ಹಂಗರಿಯಲ್ಲಿ ಜೀವನ ಸಾಗಿಸುವುದು ಕಠಿಣವಾಗಿದ್ದಿತು. ಜಾರ್ಜ್ ಬುಡಾಪೆಸ್ಟ್’ನ ತಾಂತ್ರಿಕ ವಿಶ್ವವಿದ್ಯಾಲಯ ಸೇರಿ ರಸಾಯನಶಾಸ್ತ್ರ ವಿಭಾಗ ಸೇರಿದನು. ಇಲ್ಲಿ ಮೂಲ ಸೌಕರ್ಯಗಳ ಕೊರತೆ ಅಗಾಧವಾಗಿದ್ದಿತು. ಮೌಖಿಕ ಪರೀಕ್ಷೆ ಬಹು ಕಠಿಣವಾಗಿದ್ದು ಅದರಲ್ಲಿ ಅನುತ್ತೀರ್ಣರಾದರೆ ಪದವಿಯನ್ನು ತೊರೆದು ಹೋಗುವಂತಹ ನಿಯಮಗಳು ಜಾರಿಯಲ್ಲಿದ್ದವು. ಇಲ್ಲಿ ಜಾರ್ಜ್ಗೆ ಪ್ರಾಧ್ಯಾಪಕನಾಗಿದ್ದ ಜೆಝ.ಝೆಂಪ್ಲೆನ್ನ ಮಾರ್ಗದರ್ಶನ ದಕ್ಕಿತು. ಜೆಝ್ , ಬರ್ಲಿನ್ನಲ್ಲಿ ಖ್ಯಾತ ರಸಾಯನಶಾಸ್ತ್ರಜ್ಞ ಎಮಿಲ್ ಫಿûಷರ್ ಕೈಕೆಳಗೆ ಸಾವಯವ ರಸಾಯನಶಾಸ್ತ್ರ ಅಭ್ಯಸಿಸಿದ್ದನು. ಈತನ ಮಾರ್ಗದರ್ಶನದಲ್ಲಿ ಜಾರ್ಜ್, ಫ್ಲೋರಿನ್ ಹೊಂದಿದ ಕಾರ್ಬೋಹೈಡ್ರೇಟ್ಗಳ ಅಧ್ಯಯನ ಪ್ರಾರಂಭಿಸಿದನು. ಆ ಕಾಲದಲ್ಲಿ ಹಂಗರಿಯಲ್ಲಿ ಪ್ರಯೋಗಗಳಿಗೆ ಮೂಲ ರಾಸಾಯನಿಕಗಳು ಲಭ್ಯವಿರಲಿಲ್ಲ. ಇತರ ಸಂಗಡಿಗರ ನೆರವಿನಿಂದ ಜಾರ್ಜ್ ಪ್ರಯೋಗಗಳಿಗೆ ಬೇಕಾದ ಸೌಕರ್ಯಗಳನ್ನು ತಾನೇ ನಿರ್ಮಿಸಿಕೊಂಡನು. 1950ರ ಸುಮಾರಿಗೆ ಹಂಗರಿಯ ಕೆಮಿಕಾ ಅ್ಯಸ್ಟ ಪತ್ರಿಕೆಯ ವಿದೇಶಿ ಆವೃತ್ತಿಗಳಲ್ಲಿನ ಜಾರ್ಜ್ ಬರೆದ ಲೇಖನಗಳನ್ನು ಓದಿದ ಜರ್ಮನಿಯ ರಸಾಯನಶಾಸ್ತ್ರಜ್ಞ ಹ್ಯಾನ್ಸ್ನ ಬೆಂಬಲ ದಕ್ಕಿ ಪ್ರಯೋಗಗಳಿಗೆ ಬೋರಾನ್ ಟ್ರೈ ಫ್ಲೋರೈಡ್ ಲಭ್ಯವಾಯಿತು. ಹಂಗರಿಗೆ ಕಮ್ಯುನಿಸ್ಟ್ ಆಡಳಿತ ಬಂದು ರಷ್ಯಾದ ಮಾದರಿಯಲ್ಲೇ ಸಂಶೋಧನೆಗಾಗಿ ಸಂಸ್ಥೆಗಳು ಸ್ಥಾಪನೆಗೊಳ್ಳತೊಡಗಿದವು. 1954ರಲ್ಲಿ ಹಂಗರಿ ಆಕಾಡೆಮಿ ಆಫ್ ಸೈನ್ಸ್ನ ಸೆಂಟ್ರಲ್ ಕೆಮಿಕಲ್ ರಿಸರ್ಚ್ ಸೆಂಟರ್ಗೆ ಸೇರುವ ಆಹ್ವಾನ ಜಾರ್ಜ್ಗೆ ಬಂದಿತು. 1956ರಲ್ಲಿ ಹಂಗರಿಯಲ್ಲಿ ರಷ್ಯಾದ ಕಮ್ಯುನಿಸ್ಟ್ ಆಡಳಿತದ ವಿರುದ್ದ ದಂಗೆಯೆದ್ದಿತು. ವಜ್ರಮುಷ್ಟಿಯಿಂದ, ಅಪಾರ ಪ್ರಾಣಹಾನಿ ಸಹಿತವಾಗಿ ಇದನ್ನು ರಷ್ಯ ಹತ್ತಿಕ್ಕಿತು. ಇದರಿಂದ ಹಂಗರಿಯ ಭವಿಷ್ಯದಲ್ಲಿ ಕಾರ್ಮೋಡ ಮುಸುಕಿತು. ಎರಡು ಲಕ್ಷಕ್ಕೂ ಅಧಿಕ ಜನ ದೇಶದಿಂದ ಪಲಾಯನಗೈದರು. ಇವರೊಂದಿಗೆ ಜಾರ್ಜ್ ಕುಟುಂಬ ಸಹ ಸೇರಿತು. ಕೆಲಕಾಲ ಲಂಡನ್ನಲ್ಲಿದ್ದ ಜಾರ್ಜ್ 1957ರಲ್ಲಿ ಕೆನಡಾದ ಮಾಂಟ್ರಿಯೇಲ್ಗೆ ಹೋಗಿ ನೆಲೆಸಿದನು. ಡೆ ಕೆಮಿಕಲ್ ಕಂಪನಿಯ ಸರ್ನಿಯಾದಲ್ಲಿ ಹೊಸದಾಗಿ ಪ್ರಾರಂಭವಾಗಿದ್ದ ಪ್ರಯೋಗಾಲಯವನ್ನು ಜಾರ್ಜ್ ಸೇರಿದನು. ಡೆ ಕೆಮಿಕಲ್ ಕಂಪನಿ ಸ್ಟೈರೀನ್ ಉತ್ಪಾದನೆಗಾಗಿ ಈಥೈಲ್ ಬೆಂಜೀನ್ ತಯಾರಿಸುತ್ತಿದ್ದಿತು. 1965ರಲ್ಲಿ ಕ್ಲೀವ್ ಲ್ಯಾಂಡ್ನಲ್ಲಿನ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾಲಯ ಸೇರಿ, ರಸಾಯನಶಾಸ್ತ್ರದ ಪ್ರಾಧ್ಯಾಪಕನಾದನು. ಇಲ್ಲಿ ಮಹಾ ಆಮ್ಲಗಳನ್ನು ಬಳಸಿ ಧನಾತ್ಮಕ ಆವಿಷ್ಟಿತ ಇಂಗಾಲದ ಸಂಯುಕ್ತ ಕಾರ್ಬೋಕೆಟಯಾನ್ಗಳನ್ನು ಕುರಿತು ಅಧ್ಯಯನ ನಡೆಸಿದನು. ಜಾರ್ಜ್ ಪಡೆದ ಮಹಾಆಮ್ಲಗಳು ಪ್ರಬಲ ಆಮ್ಲಗಳೆಂದು ಕರೆಯಲಾಗುತ್ತಿರುವ ಗಂಧಕದ ಆಮ್ಲಗಳಿಗಿಂತ ಹಲವು ಸಹಸ್ರ ಕೋಟಿ ಪಟ್ಟು ಪ್ರಬಲವಾಗಿದ್ದವು. ಜಾರ್ಜ್ನಿಂದ ಮಹಾಆಮ್ಲ ರಸಾಯನಶಾಸ್ತ್ರದ ಶಾಖೆ ಚಿಗುರೊಡೆಯತೊಡಗಿತು. ಜಗತ್ತಿನಲ್ಲಿ ಕುಗ್ಗುತ್ತಿರುವ ಪಳೆಯುಳಿಕೆ ಮೂಲದ ಇಂಧನ, ಹೆಚ್ಚುತ್ತಿರುವ ಜನಸಂಖ್ಯೆ , ಹದಗೆಡುತ್ತಿರುವ ಪರಿಸರದ ಸಮಸ್ಯೆಗಳಿಗೆ ಪರಿಹಾರವಾಗಿ ಜಾರ್ಜ್ ತಂಡ, ಕ್ಯಾಲ್ಟೆಕ್ನ ಜೆಟ್ ಪ್ರೊಪೆಲ್ಫನ್ ಪ್ರಯೋಗಾಲಯದಲ್ಲಿ ಮೆಥಾನಾಲ್ನ್ನು ಬಳಸಿ ಕೃತಕವಾಗಿ ಎಲ್ಲಾ ಬಗೆಯ ಹೈಡ್ರೋಕಾರ್ಬನ್ ಇಂಧನಗಳನ್ನು, ಸಂಶ್ಲೇಷಿತ ಸಾಮಗ್ರಿ, ರಬ್ಬರ್, ಪ್ಲಾಸ್ಟಿಕ್ಗಳನ್ನು ಉತ್ಪಾದಿಸಲು ಯತ್ನಿಸಿತು. ಜಗತ್ತಿನಾದ್ಯಂತವಿರುವ ಸಹಾಸ್ರಾರು ಕಾರ್ಖಾನೆಗಳಿಂದ ಹೊರ ಹೊಮ್ಮುತ್ತಿರುವ ಇಂಗಾಲದ ಡೈ ಆಕ್ಸೈಡ್ನ್ನು ಮೆಥನಾಲ್ ತಯಾರಿಕೆಗೆ ಬಳಸಬಹುದಾದ ಮಾರ್ಗಗಳನ್ನು ಸಹ ಜಾರ್ಜ್ ವಿವರಿಸಿದ್ದಾನೆ. ಮಹಾ ಆಮ್ಲಗಳು, ಮೆಥನಾಲ್ ಇಂಧನ ಕುರಿತಾದಂತೆ ಜಾರ್ಜ್ನೊಂದಿಗೆ ಕನ್ನಡಿಗ ರಸಾಯನಶಾಸ್ತ್ರಜ್ಞ ಸೂರ್ಯಪ್ರಕಾಶ್ ಗಮನಾರ್ಹ ಕೆಲಸ ಮಾಡಿದ್ದಾನೆ.
ಮಾರಿಯೋ ,ಮೊಲಿನಾ –(1943--) 1995
Mario , Molina
ಮೆಕ್ಸಿಕೋ-ರಾಸಾಯನಿಕ ಇಂಜಿನಿಯರಿಂಗ್-ಓಝೋನ್ ಕ್ಷೀಣವಾಗುತ್ತಿರುವುದನ್ನು ತೋರಿಸಿದಾತ.
ಮಾರಿಯೋ ತಂದೆ ವಕೀಲನಾಗಿದ್ದು ಮೆಕ್ಸಿಕೋದ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಬೋಧಕನಾಗಿದ್ದನು. ಮುಂದಿನ ವರ್ಷಗಳಲ್ಲಿ ಈತ ಇಥಿಯೋಪಿಯಾ, ಆಸ್ಟ್ರೇಲಿಯಾ ಹಾಗೂ ಫಿಲಿಫೈನ್ಸ್’ಗಳಿಗೆ ರಾಯಭಾರಿಯಾಗಿದ್ದನು. 19 ಮಾರ್ಚ್ 1943ರಲ್ಲಿ ಮಾರಿಯೋ ಜನನವಾಂುತು. ಬಾಲಕನಾಗಿರುವಾಗ ಸೂಕ್ಷ್ಮದರ್ಶಕದ ಮೂಲಕ ಅಮಿಬಾ, ಪ್ಯಾರಾಮೀಸಿಯಂಗಳನ್ನು ನೋಡಿ ಮಾರಿಯೋ ರೋಮಾಂಚಿತನಾಗಿದ್ದನು. 1960ರಲ್ಲಿ ಮೆಕ್ಸಿಕೋ ವಿಶ್ವವಿದ್ಯಾಲಯದಲ್ಲಿ ರಾಸಾಯನಿಕ ಇಂಜಿನಿಯರಿಂಗ್ ವ್ಯಾಸಂಗಕ್ಕೆ ಸೇರಿದನು. ಪದವಿ ಪೂರ್ಣವಾದ ನಂತರ ಜರ್ಮನಿಯ ಫ್ರೀಬರ್ಗ್ ವಿಶ್ವವಿದ್ಯಾಲಯದಲ್ಲಿ ಬಹ್ವಂಗೀಕರಣದ (Polymerisation) ಗತಿಶೀಲತೆಯ ಅಧ್ಯಯನ ಕೈಗೊಂಡನು. 1968ರಲ್ಲಿ ಅಸಂಸಂ ಬಕ್ರ್ಲೆಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಭೌತ ರಸಾಯನಶಾಸ್ತ್ರದಲ್ಲಿನ ಹೆಚ್ಚಿನ ಶಿಕ್ಷಣಕ್ಕಾಗಿ ನೊಂದಾಯಿಸಿಕೊಂಡನು. ಇಲ್ಲಿ ಜಾರ್ಜ್ ಸಿ. ಪೆಮೆಂಟಲ್ ನೇತೃತ್ವದಲ್ಲಿ ರಾಸಾಯನಿಕ ಲೇಸರ್ ಬಳಸಿ ಅಣ್ವಯಿಕ ಗತಿಶೀಲತೆಯನ್ನು ಕುರಿತಾದ ಸಂಶೋಧಕ ತಂಡದಲ್ಲಿದ್ದನು. ರಾಸಾಯನಿಕ ಹಾಗೂ ದ್ಯುತಿರಾಸಾಯನಿಕ (Photochemistry) ಕ್ರಿಯೆಗಳಲ್ಲಿನ ಚೈತನ್ಯದ ಅಧ್ಯಯನ ನಡೆಸಿ 1972ರಲ್ಲಿ ಡಾಕ್ಟರೇಟ್ ಗಳಿಸಿದನು. ಇದಾದ ನಂತರ ಷೆರ್ವುಡ್ ರೌಲ್ಯಾಂಡ್ನ ಮಾರ್ಗದರ್ಶನದಲ್ಲಿ ವಿಕಿರಣ ಕ್ರಿಯೆಗಳಲ್ಲಿರುವ ಸ್ಥಿತ್ಯಂತರ ಚೈತನ್ಯದ ಯೋಜನೆಯಲ್ಲಿ ಪಾಲ್ಗೊಂಡನು. ಮಾನವ ಉತ್ಪಾದಿತ ಕ್ಲೋರೋಫ್ಲೂರೋ ಕಾರ್ಬನ್ಗಳ ವಾತಾವರಣದಲ್ಲಿ ಹೊಂದುವ ಸ್ಥಿತ್ಯಂತರದ ಅಧ್ಯಯನ ನಡೆಸಿದನು. ಕ್ಲೋರೋಫ್ಲುರೋ ಕಾರ್ಬನ್ಗಳು ವಾತಾವರಣದಲ್ಲಿ ಅಲ್ಪ ಔನ್ನತ್ಯದಲ್ಲಿರುವಾಗ ಜಡ ರಾಸಾಯನಿಕಗಳಂತೆ ಇರುತ್ತವೆ. ಆದರೆ ಸಾಕಷ್ಟು ಔನ್ಯತ್ಯಕ್ಕೇರಿದ ನಂತರ ಸೂರ್ಯನ ವಿಕಿರಣಗಳಿಗೆ ತುತ್ತಾಗಿ, ಶ್ಶೆಥಿಲ್ಯ (Decay) ಹೊಂದಿ ಕ್ಲೋರಿನ್ ಪರಮಾಣುಗಳಾಗಿ ಒಡೆಯುತ್ತವೆ. ಈ ಕ್ಲೋರಿನ್ ಪರಮಾಣುಗಳು ವಾತಾವರಣದ ಮೇಲ್ಪದರದಲ್ಲಿರುವ ಓಝೋನ್ನೊಂದಿಗೆ ವರ್ತಿಸುತ್ತವೆ. ಇದರ ಪರಿಣಾಮವಾಗಿ ಓಝೋನ್ ಪದರ ಕ್ರಮೇಣ ನಶಿಸತೊಡಗುತ್ತದೆ. ಅಂತರಿಕ್ಷದಿಂದ ಭೂಮಿಗೆ ಬರುವ ವಿಕಿರಣಗಳ ತಡೆಯುವಲ್ಲಿ ಓಝೋನ್ ಬಹು ಮುಖ್ಯ ಪಾತ್ರ ವಹಿಸುತ್ತದೆ. ಓಝೋನ್ ಪದರದ ನಾಶದಿಂದ, ಭೂಮಿಯಲ್ಲಿ ಜೀವಿಗಳ ಭವಿಷ್ಯಕ್ಕೆ ಮಾರಕ ಪರಿಣಾಮಗಳಾಗಲಿವೆಯೆಂದು, 28 ಜೂನ್ 1974ರಲ್ಲಿ ನೇಚರ್ ಪತ್ರಿಕೆಯಲ್ಲಿ ಲೇಖನವೊಂದನ್ನು ಬರೆದು ಷೆರ್ವುಡ್ ರೌಲ್ಯಾಂಡ್ ಹಾಗೂ ಮಾರಿಯಾ ಜಗತ್ತಿನ ಗಮನ ಸೆಳೆದರು. ಇದು ಇಡೀ ಜಗತ್ತಿನ ಪ್ರಜ್ಞಾವಂತರಲ್ಲಿ ಸಂಚಲನವನ್ನುಂಟು ಮೂಡಿತು. ಓಝೋನ್ ಪದರ ಕುಸಿತಾದ ಕಾರಣ ಗುರುತಿಸಿದ್ದುದಕ್ಕಾಗಿ ಮಾರಿಯಾ 1995ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಪೌಲ್, ಜೆ.ಕ್ರಟ್ಜೆನ್ (1933--) 1995
Paul , Crutzen
ಡೆನ್ಮಾರ್ಕ್-ರಸಾಯನಶಾಸ್ತ್ರ-ವಾಯುಗೋಳದ ಮೇಲ್ಪದರ, ಒಜೋನ್ ಕುರಿತಾದ ಅಧ್ಯಯನ ನಡೆಸಿದಾತ.
ಪೌಲ್ 3 ಡಿಸೆಂಬರ್ 1933ರಂದು ಆ್ಯಮಸ್ಟರ್ಡ್ಯಾಂನಲ್ಲಿ ಜನಿಸಿದನು. ಇವನದು ಪೋಲೀಷ್ ಹಾಗೂ ಜರ್ಮನ್ ಮಿಶ್ರ ಜನಾಂಗವಾಗಿದ್ದಿತು. ಈತನ ತಂದೆ ಕಾವಲುಗಾರನಾಗಿದ್ದರೆ, ತಾಯಿ ಆಸ್ಪತ್ರೆಯಲ್ಲಿ ಅಡುಗೆ ಮನೆಯಲ್ಲಿ ಕೆಲಸಕ್ಕಿದ್ದಳು. 1940ರಲ್ಲಿ ಡೆನ್ಮಾರ್ಕ್ ಜರ್ಮನಿ ವಶದಲ್ಲಿದ್ದಿತು. ಇದೇ ವರ್ಷ ಪೌಲ್ ಪ್ರಾಥಮಿಕ ಶಾಲೆಗೆ ಸೇರಿದನು. ನಾಝಿ ಆಡಳಿತ ಪೌಲ್ ಅಭ್ಯಸಿಸುತ್ತಿದ್ದ ಶಾಲೆಯನ್ನು ವಶಪಡಿಸಿಕೊಂಡಿದ್ದರಿಂದ ಅದರ ನೆಲೆಯನ್ನು ಹಲವಾರು ಬಾರಿ ಬದಲಾಯಿಸಲಾಯಿತು. 1944,1945ರಲ್ಲಿ ಚಳಿ ಬರಗಾಲ ಬಂದು ಜನ ಜೀವನ ದುರ್ಭರವಾಯಿತು. ನೀರು, ಆಹಾರ ಧಾನ್ಯ, ಗೃಹೋಪಯೋಗಿ ವಸ್ತುಗಳು ಪಡಿತರ ರೂಪದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಸರಬರಾಜಾಗುತ್ತಿದ್ದವು. ಪೌಲ್ನ ಶಾಲಾ ಸ್ನೇಹಿತದಲ್ಲಿ ಹಲವಾರು ಜನ ಹಸಿವೆ, ರೋಗ ರುಜಿನಗಳಿಂದ ಸಾವನ್ನಪ್ಪಿದರು. 1945ರಲ್ಲಿ ಸ್ವೀಡನ್ನ ವಿಮೋಚನಾ ಕೆಂಪು ಸೇನೆ ಆಗಸದಿಂದ ಆಹಾರ ಪೊಟ್ಟಣಗಳನ್ನು ಒದಗಿಸಿತೊಡಗಿದಾಗಿನಿಂದ ಜನರ ಸ್ಥಿತಿ ಸ್ವಲ್ಪ ಸುಧಾರಿಸತೊಡಗಿತು. ಇದಾದ ನಂತರ ಸಾಮಾನ್ಯ ಶಿಕ್ಷಣ ಸಾಧ್ಯವಾಯಿತು. ಪ್ರೌಢಶಾಲೆಯಲ್ಲಿಫೆ್ರಂಚ್, ಜರ್ಮನ್ ಇಂಗ್ಲೀಷ್ ಭಾಷೆಗಳೊಂದಿಗೆ ಗಣಿತ, ವಿಜ್ಞಾನಗಳನ್ನು ಪೌಲ್ ಅಭ್ಯಸಿಸಿದನು. ಪೌಲ್, ತಾಂತ್ರಿಕ ಶಾಲೆ ಸೇರಿ ಸಿವಿಲ್ ಇಂಜಿನಿಯರಿಂಗ್ ಪದವಿ ಗಳಿಸಿದನು. ಆ ಕಾಲದಲ್ಲಿ ಸಿವಿಲ್ ಇಂಜಿನಿಯರ್ಗಳಿಗೆ ಮಿಲಿಟರಿ ಸೇವೆ ಕಡ್ಡಾಯವಾಗಿದ್ದಿತು. ಆದ್ದರಿಂದ 1954ರಿಂದ 1958ರವರೆಗೆ, ಅ್ಯಮ್ಸ್ಟರ್ಡ್ಯಾಂನಲ್ಲಿ ಸರ್ಕಾರದ ಸೇತುವೆ ನಿರ್ಮಾಣ ನಿಗಮದಲ್ಲಿ ಸೇವೆ ಸಲ್ಲಿಸಿದನು. 1958ರಲ್ಲಿ ಸ್ಟಾಕ್ಹೋಂ ವಿಶ್ವವಿದ್ಯಾಲಯದ ಹವಾಮಾನ ಇಲಾಖೆ ಗಣಕ ಅಭಿಕರ್ಮಿಯ (Operator) ಹುದ್ದೆಗೆ ಪತ್ರಿಕೆಯಲ್ಲಿ ಜಾಹಿರಾತು ನೀಡಿತು. ಗಣಕದ ಬಗೆಗೆ ಏನೂ ತಿಳುವಳಿಕೆಯಿಲ್ಲದಿದ್ದರೂ, ತಾಂತ್ರಿಕ ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ಪೌಲ್ಗೆ ಕೆಲಸ ಸಿಕ್ಕಿತು. ಈ ಕಾಲದಲ್ಲಿ ಸ್ಟಾಕ್ಹೋಂ ವಿಶ್ವವಿದ್ಯಾಲಯದಲ್ಲಿ ಜಗತ್ತಿನ ಅತ್ಯಂತ ಶೀಘ್ರ ಹಾಗೂ ಮುಂದುವರೆದ ಗಣಕಗಳು ಸ್ಥಾಪನೆಗೊಂಡಿದ್ದವು. ಜಾರ್ಜ್ ವಿಲ್ನೊಂದಿಗೆ ನಾಕ್ಟಿಲೂಸೆಂಟ್ ಮೋಡಗಳ ಗುಣಲಕ್ಷಣಗಳನ್ನು ಅಳೆಯುವ ಯೋಜನೆಯಲ್ಲಿ ಪೌಲ್ ಪಾಲ್ಗೊಂಡನು. ಇವು 85 ಕಿ.ಮೀ.ಔನ್ನತ್ಯದಲ್ಲಿರುವ ತೀವ್ರ ತಂಪಾದ ಮೋಡಗಳು. ಹವಾಮಾನ ಮುನ್ಸೂಚನೆ ನೀಡುವ ಜಗತ್ತಿನ ಮೊಟ್ಟ ಮೊದಲ ಗಣಕ ಕ್ರಮವಿಧಿಗಳನ್ನು ಬರೆಯುವಲ್ಲಿ ಪೌಲ್ ಪಾಲ್ಗೊಂಡನು. ಆ ಕಾಲದಲ್ಲಿ ಆಲ್ಗಾಲ್, ಫೋರ್ಟ್ರಾನ್ನಂತಹ ಉನ್ನತ ಗಣಕ ಭಾಷೆಗಳು ಅಭಿವೃದ್ಧಿಗೊಂಡಿರಲಿಲ್ಲ. ಹಾಗಾಗಿ ಎಲ್ಲಾ ಕ್ರಮವಿಧಿಗಳನ್ನು ಯಂತ್ರ ಸಂಕೇತಗಳಲ್ಲಿ, ಬರೆಯಲಾಯಿತು. 1963ರಲ್ಲಿ ಗಣಿತ, ಸಂಖ್ಯಾಕಲನಶಾಸ್ತ್ರ (Statistics) , ಪವನಶಾಸ್ತ್ರಗಳ ವಿಷಯಗಳೊಂದಿಗೆ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಗೆ ಸೇರುವ ಅವಕಾಶ ಪೌಲ್ಗೆ ಬಂದೊದಗಿತು. 1965ರಲ್ಲಿ ಅಸಂಸಂ ವಿಜ್ಞಾನಿಯೊಬ್ಬನಿಗೆ ಸ್ತರಗೋಳ, ಮಧ್ಯಗೋಳ ಹಾಗೂ ನಿಮ್ನ ವಾಯುಗೋಳಗಳಲ್ಲಿನ ಆಮ್ಲಜನಕದ ಬಹುರೂಪಿಯ ಪ್ರಮಾಣ ವಿತರಣೆ ಅಧ್ಯಯನದ ಕ್ರಮವಿಧಿ ತಯಾರಿಸುವ ಹೊಣೆ ಪೌಲ್ ಹೆಗಲೇರಿತು. ಈ ಕಾರ್ಯಕ್ರಮದ ಅಧ್ಯಯನದಿಂದ ವಾತಾವರಣದಲ್ಲಿನ ಓಜೋನ್ ದ್ಯುತಿ ರಾಸಾಯನಿಕ ಗುಣಗಳನ್ನು ಅರಿಯುವ ಸಂದರ್ಭ ಬಂದೊದಗಿತು. ಸ್ತರಗೋಳದ (Stratosphere) ರಾಸಾಯನಿಕ ಲಕ್ಷಣಗಳ ಅಧ್ಯಯನ ಪೌಲ್ನ ಗುರಿಗಳಾದವು. ಮೋಡಗಳ ಭೌತ ಸ್ವರೂಪ, ಇಂಗಾಲದ ಚಕ್ರ, ಮಳೆ ನೀರಿನ ರಾಸಾಯನಿಕ ಸಂಯೋಜನೆಗಳು ಪರಿಶೀಲನೆಗೊಳಗಾಗಿ, ಇಲ್ಲಿ ಮೊದಲ ಬಾರಿಗೆ ಆಮ್ಲ ಮಳೆಯನ್ನು ಗುರುತಿಸಲಾಯಿತು. 1972ರಲ್ಲಿ ಸ್ಟಾಕ್ಹೋಂನಲ್ಲಿ ಜರುಗಿದ ವಿಶ್ವಸಂಸ್ಥೆಯ ಪರಿಸರ ಸಮ್ಮೇಳನದಲ್ಲಿ ವಿಶ್ವದ ಬಲಿಷ್ಟ ರಾಷ್ಟ್ರಗಳು ಪರಿಸರ ಸಂರಕ್ಷಣೆಯನ್ನು ಗಮನ ಸೆಳೆಯುವಂತಹ ಯತ್ನಗಳು ಪೌಲ್ ಸಂಗಡಿಗದಿಂದಾದವು. ವಾಯುಗೋಳದ ಮೇಲ್ಪದರ, ಓಜೋನ್ ಸಂಶೋಧನೆಗಳಿಗಾಗಿ ಪೌಲ್ 1995ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಷೆರ್’ವುಡ್, ರೌಲ್ಯಾಂಡ್ (1927--) 1995
Sherwood , Rowland
ಅಸಂಸಂ-ಭೌತರಸಾಯನಶಾಸ್ತ್ರ- ಓಝೋನ್ ಕ್ಷೀಣಿಸಿಕೆಯನ್ನು ಗುರುತಿಸಿದಾತ.
ಷೆರ್’ವುಡ್ ತಂದೆ ಓಹಿಯೋ ರಾಜ್ಯದ, ಓಹಿಯೋ ವೆಸ್ಲೆಯೆನ್ ವಿಶ್ವವಿದ್ಯಾಲಯದಲ್ಲಿ ಗಣಿತ ವಿಭಾಗದ ಪ್ರಾಧ್ಯಾಪಕನಾಗಿದ್ದನು. 28 ಜೂನ್ 1927ರಂದು ಷೆರ್’ವುಡ್ ಜನನವಾಯಿತು. ಡೆಲಾವೆರ್ ಪಟ್ಟಣದ ಸಾರ್ವಜನಿಕ ಶಾಲೆಗಳಲ್ಲಿ ಈತನ ವಿದ್ಯಾಭ್ಯಾಸ ಸಾಗಿತು. ಹದಿನಾರನೇ ವರ್ಷದವನಿರುವಾಗ ಶಿಕ್ಷಕನ ಉತ್ತೇಜನದಿಂದ ರಜಾಕಾಲದಲ್ಲಿ ಪವನಶಾಸ್ತ್ರ ಇಲಾಖೆಯಲ್ಲಿ ತಾಪಮಾನ, ಮಳೆಗಳ ದಾಖಲೆಯಿಡುವ ಕೆಲಸ ಒಪ್ಪಿಕೊಂಡನು. 1943ರಲ್ಲಿ ಪ್ರೌಢಾಶಾಲಾ ಶಿಕ್ಷಣ ಮುಗಿಸಿದನು. ಈತನ ಸ್ನೇಹಿತರೆಲ್ಲರೂ ಕಡ್ಡಾಯ ಮಿಲಿಟರಿ ತರಬೇತಿಗೆ ಹೋದರು. ಆದರೆ ಷೆರ್’ವುಡ್ಗೆ ಹದಿನೆಂಟು ವರ್ಷ ತುಂಬಿರದ ಕಾರಣ ಓಹಿಯೋ ವೆಸ್ಲೆಯೆನ್ ವಿಶ್ವವಿದ್ಯಾಲಯ ಸೇರಿದನು. 1945ರಲ್ಲಿ ಮಿಲಿಟರಿಯಲ್ಲಿ ರಡಾರ್ ಬಳಕೆ ತರಬೇತಿಗಾಗಿ ಸೇರಿದನು. ಇಲ್ಲಿ ಉತ್ತಮ ಕ್ರೀಡಾಪಟುವೆಂದು ಹೆಸರಾದನು. 1948ರಲ್ಲಿ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ರಸಾಯನ ಶಾಸ್ತ್ರದ ಅಧ್ಯಯನಕ್ಕೆ ಸೇರಿದನು. ಇಲ್ಲಿ 1940ರಲ್ಲಿ ಇಂಗಾಲದ ತೇದಿಕರಣಕ್ಕಾಗಿ (Dating) ನೊಬೆಲ್ ಪ್ರಶಸ್ತಿ ಗಳಿಸಿದ್ದ ಖ್ಯಾತ ವಿಜ್ಞಾನಿ ವಿಲ್ಲರ್ಡ್ ಎ¥sóï ಲಿಬ್ಬಿಯ ಕೆಳಗೆ ಷೆರ್ವುಡ್ ವ್ಯಾಸಂಗ ಸಾಗಿಸಿದನು. ಮ್ಯಾನ್ಹಟನ್ ಬೈಜಿಕಾಸ್ತ್ರ (Nuclear Weapon) ತಯಾರಿಕೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಖ್ಯಾತ ವಿಜ್ಞಾನಿಗಳು ಯುದ್ದದ ನಂತರ ಚಿಕಾಗೋ ವಿಶ್ವವಿದ್ಯಾಲಯ ಸೇರಿದ್ದರು. ಇದರಿಂದ ಭೌತರಸಾಯನಶಾಸ್ತ್ರ ವಿಭಾಗದಲ್ಲಿ ಹಬ್ಬದ ವಾತಾವರಣ ನೆಲೆಸಿದ್ದಿತು. ಯುರೆ , ಫರ್ಮಿ , ಮಾರಿಯಾ ಗೊಯೆಪರ್ಟ್, ಎಡ್ವರ್ಡ್ ಟೆಲ್ಲರ್’ರಂತಹ ಹಲವಾರು ವಿಶ್ವವಿಖ್ಯಾತರ ಉಪನ್ಯಾಸಗಳಿಂದ ಷೆರ್’ವುಡ್ನ ಸಂಶೋಧಕ ವ್ಯಕ್ತಿತ್ವ ರೂಪುಗೊಂಡಿತು. ಸೈಕ್ಲೋಟ್ರಾನ್ನಲ್ಲಿ ಉತ್ಪನ್ನವಾದ ವಿಕಿರಣಶೀಲ ಬ್ರೋವೈಟ್ ಪರಮಾಣುಗಳನ್ನು ಕುರಿತಾಗಿ ಸಂಪ್ರಬಂಧ ಮಂಡಿಸಿದನು. ಇದರಲ್ಲಿ ವಿಕಿರಣಶೀಲ ಪರಮಾಣುವಿನ ಸೃಷ್ಟಿಯೊಂದಿಗೆ, ಅದ`ಕ್ಕಿರುವ ಎಲ್ಲಾ ರಾಸಾಯನಿಕ ಬಂಧಗಳೂ ಕಳಚುವುದೆಂದು ವಿವರಿಸಿದನು. 1952ರಲ್ಲಿ ಡಾಕ್ಟರೇಟ್ ಗಳಿಸಿದ ಷೆರ್’ವುಡ್ ಪ್ರಿನ್ಸ್ಟನ್ ವಿಶ್ವವಿದ್ಯಾಲಯ ಸೇರಿದನು. ಗ್ಲುಕೋಸ್ ಹಾಗೂ ಲಿಥಿಯಂ ಕಾರ್ಬೋನೇಟ್ನ ಹರಳುರೂಪದ ಮಿಶ್ರಣವನ್ನು ನ್ಯೂಟ್ರಾನ್ ಅಭಿವಾಹದಲ್ಲಿರಿಸಿ (Flux), ಒಂದೇ ಹೆಜ್ಜೆಯಲ್ಲಿ ಟ್ರೈಷಿಯಂ ಗುರುತಿಕೆಯಿಂದ (Labeling) ಗ್ಲುಕೋಸ್ ಸಂಶ್ಲೇಷಣೆಯ ವಿಧಾನ ರೂಪಿಸಿದನು. ಇದು ಹೊಸ ಅಧ್ಯಯನಗಳಿಗೆ ಮುಂದೆ ಕಾರಣವಾಯಿತು. 1956ರಲ್ಲಿ ಕ್ಯಾನ್ಸಾಸ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಅಲ್ಲಿ ವಿಕಿರಣಶೀಲ ರಸಾಯನಶಾಸ್ತ್ರದ ವಿಭಾಗವನ್ನು ಅಭಿವೃದ್ಧಿಗೊಳಿಸಿದನು. 1964ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಆರಂಭವಾದ ರಸಾಯನಶಾಸ್ತ್ರ ವಿಭಾಗದ ಕಾರ್ಯದರ್ಶಿಯಾದನು. 1970ರಲ್ಲಿ ಹುದ್ದೆಗೆ ರಾಜಿನಾಮೆ ನೀಡಿ, ಸಂಶೋಧನೆಗೆ ಇಳಿದನು. ವಾಯುಗೋಳದ ರಸಾಯನಶಾಸ್ತ್ರದಲ್ಲಿ ಷೆರ್’ವುಡ್ಗೆ ಅತ್ಯಾಸಕ್ತಿಯಿದ್ದಿತು. 1972ರಲ್ಲಿ ಫ್ಲೊರಿಡಾದ ಫೋಟ್ ಲೌಡೆರ್’ಡೇಲ್’ನಲ್ಲಿ ಸಮ್ಮೇಳನವೊಂದು ಜರುಗಿತು. ಇದರಲ್ಲಿ ಇಂಗ್ಲಿಷ್ ವಿಜ್ಞಾನಿ ಜಿಮ್ ಲವ್ಲಾಕ್ ಮಾನವ ಕಾರಣವಾದ ಕ್ಲೋರೋ ಫ್ಲೂರೋಕಾರ್ಬನ್ ಅಂಶ ವಿಶ್ವದಾದ್ಯಂತ ಹರಡಿರುವುದನ್ನು ವಿವರಿಸಿದನು. ಕ್ಲೋರೋಫ್ಲೂರ್ಫ್ ಕಾರ್ಬನ್ ಜಡ ರಾಸಾಯನಿಕವಾಗಿದ್ದು ಇದರ ಕುರುಹಿನಿಂದ ವಾಯುವಿನ ಭೂರಿ ಸಂಚಲನೆಯನ್ನು (Mass Movement) ನಿರ್ಧರಿಸುವುದು ಸಾಧ್ಯವೆಂದು ಹೇಳಿದನು. ರಾಸಾಯನಿಕ ಚಲನಶಾಸ್ತ್ರ ಮತ್ತು ದ್ಯುತಿರಸಾಯನಶಾಸ್ತ್ರದ (Photochemistry) ಆಳ ಅರಿವಿದ್ದ ಷೆರ್’ವುಡ್ ಯಾವುದೇ ರಾಸಾಯನಿಕ ವಾತಾವರಣದಲ್ಲಿ ಬಹು ದೀರ್ಘ ಕಾಲ ಕ್ರಿಯಾರಹಿತವಾಗಿರಲು ಸಾಧ್ಯವಿಲ್ಲವೆಂದು ಅರಿತನು. ಭೂಮಿಯ ಅಧಿಕ ಔನ್ನತ್ಯಗಳಲ್ಲಿ ಸೂರ್ಯರಶ್ಮಿಯಿಂದ ಕ್ಲೋರೋಫ್ಲೂರೋ ಕಾರ್ಬನ್ ಒಡೆದು ಘಟಕಗಳಾಗುವುದು ಷೆರ್’ವುಡ್ಗೆ ಮನದಟ್ಟಾಯಿತು. ನಂತರ ಮಾರಿಯೊ ಮೊಲಿನಾನೊಂದಿಗೆ ಮುಂದುವರಿದ ಸಂಶೋಧನೆಗಳಿಂದ ಕ್ಲೊರೋಫ್ಲೂರೋ ಕಾರ್ಬನ್ನಿಂದ ವಾತಾವರಣದಲ್ಲಿನ ಓಝೋನ್ ಪದರಕ್ಕೆ ಧಕ್ಕೆಯಾಗುತ್ತಿರುವುದು ತಿಳಿದು ಬಂದಿತು. ಇದರ ಪರಿಣಾಮವಾಗಿ ಭೂಮಿ ಬಿಸಿಯಾಗುತ್ತಿದ್ದು, ವಿಶ್ವ ಕಿರಣಗಳ ತೀವ್ರತೆಯನ್ನು ಕಡಿಮೆ ಮಾಡುತ್ತಿದ್ದ ಓಝೋನ್ ಪದರವಿಲ್ಲದೆ ಜೀವ ಜಗತ್ತಿಗೆ ಮುಂದೆ ಅಪಾಯ ಎದುರಾಗುವ ವಿಷಯ ತಿಳಿದು ಬಂದಿತು. ಇದು ಜಗತ್ತಿನಾದ್ಯಂತ ಹೊಸ ಸಂಚಲನವನ್ನುಂಟು ಮಾಡಿತು. ಕ್ಲೋರೋಫ್ಲೂರೋ ಕಾರ್ಬನ್ ಹಾಗೂ ಓಝೋನ್ ಕ್ಷೀಣಿಸಿಕೆಯ ಸಂಶೋಧನೆಗಾಗಿ ಷೆರ್ವುಡ್ 1995ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಹೆರಾಲ್ಡ್ , ಡಬ್ಲ್ಯೂ ಕ್ರೋಟೋ ಸರ್ (1937--)
Harold , W.Kroto Sir (CHE.) 1996
ಬ್ರಿಟನ್-ರಸಾಯನಶಾಸ್ತ್ರ-
ಬರ್ಲಿನ್ ಮೂಲದವನಾಗಿದ್ದ ಹೆರಾಲ್ಡ್ ತಂದೆ, ತಾಯಿ 193೦ ರ ಅವಧಿಯಲ್ಲಿ ನಿರ್ವಸಿತರಾಗಿ ಬ್ರಿಟನ್ಗೆ ಬಂದು ಬೊಲ್ಟನ್ ಪಟ್ಟಣದಲ್ಲಿ ನೆಲೆಸಿದ್ದರು. ಈ ಪಟ್ಟಣ ಕೈಗಾರಿಕಾ ಕ್ರಾಂತಿಯ ಅಂಗವಾಗಿ ಖ್ಯಾತವಾಗಿದ್ದಿತಲ್ಲದೆ , ಹತ್ತಿ ಹಾಗೂ ಬಟ್ಟೆ ಗಿರಣಿಗಳಿಂದ ಸದಾ ಕ್ರಿಯಾಶೀಲವಾಗಿರುತ್ತಿದ್ದಿತು. ಹೆರಾಲ್ಡ್ ತಂದೆ ಸಣ್ಣ ವ್ಯಾಪಾರಿ ಮಳಿಗೆ ಹೊಂದಿದ್ದನು. 7 ಅಕ್ಟೋಬರ್ 1939 ರಂದು ಹೆರಾಲ್ಡ್ ಜನನವಾಯಿತು. ಎರಡನೇ ಜಾಗತಿಕ ಯುದ್ದದಿಂದ ಹೆರಾಲ್ಡ್ ತಂದೆ ತನ್ನ ವೃತ್ತಿಯಲ್ಲಿ ಭಾರಿ ಏರುಪೇರುಗಳನ್ನು ಕಂಡು 1955ರಲ್ಲಿ ಒಂದು ಸಣ್ಣ ಬಲೂನ್ ಕಾರ್ಖಾನೆ ಪ್ರಾರಂಭಿಸುವಲ್ಲಿ ಯಶಸ್ವಿಯಾದನು. ಹೆರಾಲ್ಡ್ ತನ್ನ ತಂದೆಗೆ ಸಹಾಯಕನಾಗಿ ದುಡಿಯುತ್ತಿದ್ದನು. ಆದಾಂiÀi ಹೇಳಿಕೊಳ್ಳುವಂತಿರಲಿಲ್ಲವಾದರೂ, ಹೆರಾಲ್ಡ್’ನ ವಿದ್ಯಾಭ್ಯಾಸಕ್ಕೆ ಅಗತ್ಯವಾದುದನ್ನು ಒದUಸಲು ಆತನ ತಂದೆ ಶ್ರಮಿಸುತ್ತಿದ್ದನು. ರಸಾಯನಶಾಸ್ತ್ರದ ಅಧ್ಯಯನಕ್ಕಾಗಿ ಷೆಫಿಲ್ಡ್ ವಿಶ್ವವಿದ್ಯಾಲಯ ಸೇರಿದ ಹೆರಾಲ್ಡ್ ರೋಹಿತಶಾಸ್ತ್ರದಲ್ಲಿ ಸಂಶೋಧನೆ ನಡೆಸಿ ಡಾಕ್ಟರೇಟ್ ಗಳಿಸಿದನು. 1964ರಲ್ಲಿ ಬಂದ ಆಹ್ವಾನ ಒಪ್ಪಿ ಕೆನಡಾದ ಒಟ್ಟೋವಾದಲ್ಲಿನ ನ್ಯಾಷನಲ್ ರಿಸರ್ಚ್ ಕೌನ್ಸಿಲ್ಗೆ ಹೋದನು. ಇಲ್ಲಿ ಗೆರ್ಹಾಡ್ ಹೆಜ್ಬರ್ಗ್ ಜಗತ್ಪ್ರಸಿದ್ದವಾದ ರೋಹಿತಶಾಸ್ತ್ರ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿದ್ದನು. ಇಲ್ಲಿ ಮಿಂಚು ದ್ಯುತಿಕ್ರಿಯೆ ಹಾಗೂ ರೋಹಿತಗಳನ್ನು ಕುರಿತಾಗಿ ಹಲವಾರು ಅಧ್ಯಯನ ನಡೆಸಿದನು. 1966ರಲ್ಲಿ ಅಸಂಸಂಗಳಿಗೆ ತೆರಳಿ ಬೆಲ್ ಪ್ರಯೋಗಾಲಯದಲ್ಲಿ ಎಲೆಕ್ಟಾನ್ಗಳ ಸ್ಥಾನಾಂತರತೆ ಕುರಿತಾಗಿ ಅಧ್ಯಯನ ಸಾಗಿಸಿದನು. 1970ರಲ್ಲಿ ಸೂಕ್ಷ್ಮ ತರಂಗ ರೋಹಿತಶಾಸ್ತ್ರದಲ್ಲಿ ಶ್ರಮಿಸಿ ಹೀಲಿಯಂ-ನಿಯಾನ್ ಮತ್ತು ಆರ್ಗಾನ್-ಅಯಾನ್ ಲೇಸರ್ ಯಂತ್ರ ನಿರ್ಮಿಸಿ, ದ್ರವಗಳಲ್ಲಿ ಅಣುಗಳ ಅಂತಕ್ರಿಯೆಯನ್ನು ಅಭ್ಯಸಿಸಿ, ಸೈದ್ದಾಂತಿಕವಾಗಿ ಲೆಕ್ಕಾಚಾರ ಹಾಕಿದನು. ಮುಂದೆ ಇದೇ ಯಂತ್ರವನ್ನು ಸುಧಾರಿಸಿ ನಡೆಸಿದ ವಿಸ್ತೃತ ಪ್ರಯತ್ನಗಳಿಂದಾಗಿ ಊಅ5ಓ ಸಂಯುಕ್ತ ಸರಣಿಗಳ ಅಣುಗಳನ್ನು ಅರಿಯಲು ಸಾಧ್ಯವಾಯಿತು. ಇದರ ¥sóÀಲವಾಗಿ 1985ರಲ್ಲಿ ಇಂಗಾಲದ ಹೊಸ ರೂಪ ಅ5 ಅನಾವರಣಗೊಂಡಿತು. ಈ ಸಾಧನೆಗಾಗಿ ಹೆರಾಲ್ಡ್ 1996ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. 1995ರ ನಂತರ ಬಿಬಿಸಿ ವಾಹಿನಿಗೆ ಕಾರ್ಯಕ್ರಮ ತಯಾರಿಸುವ ಪ್ಯಾಟ್ರಿಕ್ ರೀಮ್ಸ್ನೊಂದಿಗೆ ವೆಗಾ ಸೈನ್ಸ್ ಟ್ರಸ್ಟ್ ಸ್ಥಾಪಿಸಿದನು. ಈ ಸಂಸ್ಥೆ ಈಗ ಅತ್ಯುತ್ತಮ ವೈಜ್ಞಾನಿಕ ಸಾಕ್ಷ್ಯ ಚಿತ್ರೀ ಹಾಗೂ ಸಿನಿಮಾಗಳನ್ನು ನಿರ್ಮಿಸುತ್ತದೆ. ನೊಬೆಲ್ ಪ್ರಶಸ್ತಿ ಸಮಿತಿ ತಮ್ಮೊಂದಿಗೆ ಶ್ರಮಿಸಿದ ಹಲವಾರು ಜನರನ್ನು ಸಾಧನೆಯನ್ನು ಪರಿಗಣಿಸಿಲ್ಲವೆಂದೂ, ಇದುಬೇರೆ ಶಾಖೆಗಳಲ್ಲೂ ನಿಜವೆಚಿದೂ ಅದು ಬದಲಾಗಬೇಕೆಂದು ಹೆರಾಲ್ಡ್ ಅಭಿಪ್ರಾಯ ಹೊಂದಿದ್ದಾನೆ. ವಿದ್ಯಾರ್ಥಿಗಳಿಗೆ, ಜನ ಸಾಮಾನ್ಯರಿಗೆ ವಿಜ್ಞಾನವನ್ನು ತಲುಪಿಸುವಲ್ಲಿ ತನಗೆ ಅಪಾರ ಆತ್ಮ ತೃಪ್ತಿ ದಕ್ಕಿದೆಯೆಂದು ಹೆರಾಲ್ಡ್ ಹೇಳಿದ್ದಾನೆ.
ರಿಚರ್ಡ್, ಸ್ಮಾಲಿ (1943--) 1996
Richard , Smalley
ಅಸಂಸಂ-ರಸಾಯನಶಾಸ್ತ್ರಜ್ಞ-ಇಂಗಾಲದ ಹೊಸ ಬಹುರೂಪಿಯನ್ನು (Allotropy) ಅನಾವರಣಗೊಳಿಸಿದಾತ.
1943 ಜೂನ್ 6 ರಂದು ರಿಚರ್ಡ್ ಜನಿಸಿದನು. 1965ರಲ್ಲಿ ಮಿಷಿಗನ್ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದ ಪದವಿ ಗಳಿಸಿ, 1973ರಲ್ಲಿ ಪ್ರಿನ್ಸ್’ಟನ್’ನಿಂದ ಡಾಕ್ಟರೇಟ್ ಸಂಪಾದಿಸಿದನು. 1976ರಿಂದ ರೈಸ್ ವಿಶ್ವವಿದ್ಯಾಲಯ ಸೇರಿ, 1990ರಲ್ಲಿ ಅಲ್ಲಿ ಪ್ರಾಧ್ಯಾಪಕನಾದನು. 1966ರಲ್ಲಿ ರೈಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ನ್ಯಾನೋಸ್ಕೇಲ್ ಸೈನ್ಸ್ ಅಂಡ್ ಟೆಕ್ನಾಲಜಿಯ ನಿರ್ದೇಶಕನಾದನು. ಈ ಸಂಸ್ಥೆಯಲ್ಲಿ ಅಣುಗಾತ್ರದ ಸೂಕ್ಷ್ಮಾತಿಸೂಕ್ಷ್ಮವಾದ ನ್ಯಾನೋ ನಳಿಕೆಗಳ ಮೇಲೆ ಸಂಶೋಧನೆ ನಡೆಸಿದನು. 1992ರಲ್ಲಿ ರಿಚರ್ಡ್ ಇ.ಓ ಲಾರೆನ್ಸ್ ಪ್ರಶಸ್ತಿ ಗಳಿಸಿದನು. ಕಾಲ್ಚೆಂಡಿನ ಆಕಾರದಲ್ಲಿ ಪರಮಾಣುಗಳು ಜೋಡಣೆಗೊಂಡಿರುವ ಇಂಗಾಲದ ಹೊಸ ಬಹುರೂಪಿಯನ್ನು ಅನಾವರಣಗೊಳಿಸಿದ್ದಕ್ಕಾಗಿ ರಿಚರ್ಡ್, ರಾಬರ್ಟ್ ಎಫ್ ಕಾರ್ಲ್ ಜೂ, ಸರ್ ಹೆರಾಲ್ಡ್ ಕ್ರೋಟೋರೊಂದಿಗೆ, 1996ರ ನೊಬೆಲ್ ಪ್ರಶಸ್ತಿ ಹಂಚಿಕೊಂಡನು. ಈಗ ಇಂಗಾಲದ ಈ ಹೊಸ ಬಹುರೂಪಿಯನ್ನು ಬಕ್ಮಿನ್ಸ್ಟರ್ ಪುಲ್ಲೆರೆನೆ ಎಂದು ಹೆಸರಿಸಿ, ಚಿಕ್ಕದಾಗಿ ಬಕಿಬಾಲ್ ಎಂದು ಕರೆಯಲಾಗುತ್ತಿದೆ.
ರಾಬರ್ಟ್, ಎಫ್ ಕರ್ಲ್ ಜೂ (1933--) 1996
Robert F. Curl Jr
ಅಸಂಸಂ-ರಸಾಯನಶಾಸ್ತ್ರ- ಇಂಗಾಲದ ಹೊಸ ಬಹುರೂಪಿಯನ್ನು (Allotropy) ಅನಾವರಣಗೊಳಿಸಿದಾತ.
ರಾಬರ್ಟ್, 1933 ಆಗಸ್ಟ್ 23ರಂದು ಟೆಕ್ಸಾಸ್ ಪ್ರಾಂತದ ಅಲೈಸ್ನಲ್ಲಿ ಜನಿಸಿದನು. ಈತನ ತಂದೆ, ಚರ್ಚ್ನಲ್ಲಿ ಮೆಥಾಡಿಸ್ಟ ಮಿನಿಸ್ಟರ್ನಾಗಿದ್ದನು. ದಕ್ಷಿಣ ಟೆಕ್ಸಾಸ್, ಅಲೈಸ್, ಬ್ರಾಡಿ, ಸ್ಯಾನ್ ಅ್ಯಂಟೋನಿಯೋ ಕಿಂಗ್ಸ್ ವಿಲ್ಲೆಯಂತಹ ಪಟ್ಟಣಗಳಲ್ಲಿ ಬಾಲ್ಯವನ್ನು ಕಳೆದ ರಾಬರ್ಟ್, ಒಂಬತ್ತು ವರ್ಷದವನಿರುವಾಗ ರಾಸಾಯನಿಕ ಉಪಕರಣಗಳನ್ನು ಉಡುಗೊರೆಯಾಗಿ ಪಡೆದನು. ಇವುಗಳೊಂದಿಗೆ ಒಂದು ವಾರ ಕಾಲ ಆಟವಾಡಿದ ರಾಬರ್ಟ್ ಮುಂದೆ ತಾನೊಬ್ಬ ದೊಡ್ಡ ರಸಾಯನಶಾಸ್ತ್ರಜ್ಞನಾಗಬೇಕೆಂದು ಕನಸು ಕಂಡನು. ಪ್ರೌಢಶಾಲೆಯ ವೇಳೆಗೆ ಈ ಕನಸನ್ನು ನನಸಾಗಿಸಲು ಯತ್ನಿಸಿದ ರಾಬರ್ಟ್ಗೆ ಉಪಧ್ಯಾಯಿನಿ ಲೊರೆನಾ ಡೇವಿಸ್ನಿಂದ ಭಾರಿ ಬೆಂಬಲ ದಕ್ಕಿತು. ರಾಬರ್ಟ್ನ ತಂದೆ ಉತ್ತಮ ಸ್ಥಾನದಲ್ಲಿದ್ದರೂ, ಆರ್ಥಿಕವಾಗಿ ಅಂತಹ ಸ್ಥಿತಿವಂತನಾಗಿರಲಿಲ್ಲ. ರಾಬರ್ಟ್ ಶಿಕ್ಷಣ ಶುಲ್ಕವಿಲ್ಲದ ರೈಸ್ ಸಂಸ್ಥೆ ಸೇರಿ ರಸಾಯನಶಾಸ್ತ್ರವನ್ನು ಆರಿಸಿಕೊಂಡನು. ಇಲ್ಲಿ ವಿದ್ಯಾಭ್ಯಾಸಮುಗಿಸಿ, ಫಿûಟ್ಜರ್ ಮಾರ್ಗದರ್ಶನದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಲು ಬಕ್ರ್ಲೆಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸೇರಿದನು. ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ, ಹಾರ್ವರ್ಡ್ನಲ್ಲಿ ಇ.ಬ್ರೈಟ್ನೊಂದಿಗೆ ವೃತ್ತಿ ಜೀವನ ಪ್ರಾರಂಭಿಸಿದನು. ನಂತರ ರೈಸ್ ವಿಶ್ವವಿದ್ಯಾಲಯದ ಆಹ್ವಾನಕ್ಕೆ ಓಗೊಟ್ಟು ಉಪ ಪ್ರಧ್ಯಾಪಕನಾದನು. ಇಲ್ಲಿ ವಿದ್ಯಾರ್ಥಿಯಾಗಿದ್ದ ಜಿಮ್ ಕಿನ್ಸ್ ಸಹಕಾರದಲ್ಲಿ ಸ್ಥಿರ ಮುಕ್ತಾಣು (radicle) ರೋಹಿತಗಳ (Spectrum) ಅಧ್ಯಯನ ನಡೆಸಿದನು. 1958ರಿಂದ ರೈಸ್ ಸಂಸ್ಥೆಯಲ್ಲಿರುವಾಗ ರಾಬರ್ಟ್ ಭೌತ ರಸಾಯನಶಾಸ್ತ್ರದಲ್ಲಿನ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸತೊಡಗಿದನು. ಕಾಲ್ಚೆಂಡಿನ ಆಕಾರದಲ್ಲಿ ಅಣುಗಳು ಜೋಡಣೆಗೊಂಡಿರುವ ಇಂಗಾಲದ ಹೊಸ ಬಗೆಯ ಬಹುರೂಪಿಯನ್ನು ಅನಾವರಣಗೊಳಿಸಿದ್ದಕ್ಕಾಗಿ ರಾಬರ್ಟ್, ರಿಚರ್ಡ್ ಸ್ಮಾಲಿ ಹಾಗೂ ಹ್ಯಾರಿ ಕ್ರೋಟೋರೊಂದಿಗೆ 1996ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಗಳಿಸಿದನು.
ಜಾನ್ , ಇ. ವಾಕರ್ –(1941--) 1997
John , E.Walker
ಇಂಗ್ಲೆಂಡ್-ರಸಾಯನಶಾಸ್ತ್ರ- ಅಡೆನೋಸೈನ್ ಟ್ರೈ ಫಾಸ್ಫೇಟ್ ಸಂಶ್ಲೇಷಣೆಯ ಹಿನ್ನೆಲೆಯ ಕಿಣ್ವದ ಕ್ರಿಯಾಸ್ವರೂಪ (Enzyme A Process) ಅನಾವರಣಗೊಳಿಸಿದಾತ.
ಜಾನ್ 7 ಜನವರಿ 1941ರಲ್ಲಿ ಯಾರ್ಕ್ಷೈರ್ನ ಹ್ಯಾಲಿಫ್ಯಾಕ್ಸ್,ನಲ್ಲಿ ಜನಿಸಿದನು. ಈತನ ತಂದೆ ಗಾರೆ ಕೆಲಸ ಮಾಡುತ್ತಿದ್ದನು. ಕಾಲ್ಚೆಂಡು, ಕ್ರಿಕೆಟ್ ಜಾನ್ನ ನೆಚ್ಚಿನ ಆಟಗಳಾಗಿದ್ದು ತಂಡದ ಮುಖಂಡನಾಗಿ ಹಲವಾರು ಪಂದ್ಯಗಳಲ್ಲಿ ಭಾಗವಹಿಸಿದ್ದನು. 1960ರಲ್ಲಿ ಆಕ್ಸ್’ಫರ್ಡ್’ನ ಸೇಂಟ್ ಕ್ಯಾಥರೀನ್ ಕಾಲೇಜನ್ನು ಸೇರಿ 1964ರಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಗಳಿಸಿದನು. 1965ರಲ್ಲಿ ಆಕ್ಸ್ಫರ್ಡ್’ನ ವಿಲಿಯಂ ಡನ್ ಸ್ಕೂಲ್ ಆಫ್ಪೆಥಾಲಜಿ ಸೇರಿ ಪೆಪ್ಟೈಡ್ ಪ್ರತಿಜೈವಿಕಗಳನ್ನು ಕುರಿತಾಗಿ ಸಂಶೋಧನೆ ನಡೆಸಿದನು. ಬಿಬಿಸಿ ದೂರದರ್ಶನ ಜಾನ್ ಕೆಂಡ್ರ್ಯೂ ಮಾರ್ಗದರ್ಶನದಲ್ಲಿ ನಿರ್ಮಿಸಿ ಬಿತ್ತರಿಸಿದ್ದ ದಿ ಥ್ರೆಡ್ ಆಫ್ ಲೈಫ್ ಹೆಸರಿನ ಕಾರ್ಯಕ್ರಮ ಜಾನ್ ಅಣ್ವಯಿಕ ಜೀವಶಾಸ್ತ್ರದಲ್ಲಿ (Molecular Biology) ಆಸಕ್ತಿ ತಳೆಯುವಂತೆ ಮೂಡಿತು. 1969-1971ರವರೆಗೆ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದ ಔಷಧಿಶಾಸ್ತ್ರ ಶಾಲೆಯಲ್ಲಿ ಕೆಲಸ ಮಾಡಿದನು. 1974ರಲ್ಲಿಫೆ್ರಂಡ್ ಸ್ಯಾಂಜರ್ನ ಆಹ್ವಾನದ ಮೇರೆಗೆ ವೈದ್ಯಕೀಯ ಸಂಶೋಧನಾ ಸಮಿತಿಯ, ಅಣ್ವಯಿಕ ಜೀವಶಾಸ್ತ್ರ ವಿಭಾಗದ ಪ್ರಯೋಗಾಲಯದ ಪ್ರೊಟೀನ್ ಹಾಗೂ ಜೈವಿಕ ಆಮ್ಲ ರಸಾಯನಶಾಸ್ತ್ರ ವಿಭಾಗ ಸೇರಿದನು. ಈ ಸಂಸ್ಥೆಯಲ್ಲಿ ಜೀವವಿಜ್ಞಾನದಲ್ಲಿ ಕ್ರಾಂತಿಯನ್ನೇ ತಂದ ನೂರಾರು ವಿಜ್ಞಾನಿಗಳು ಕಾರ್ಯನಿರತರಾಗಿದ್ದರು. ಸ್ಯಾಂಜರ್ ಡಿಎನ್ಎ ಸರಣಿ ನಿರ್ಧಾರಕ್ಕೆ ಹೊಸ ವಿಧಾನವನ್ನು ವಿವರಿಸಿದ್ದನು. ಇದನ್ನು ಬಳಸಿ ಜಾನ್ ಎಫ್.ಎಕ್ಸ್-174 ಹಾಗೂ ಜಿ-4 ಬ್ಯಾಕ್ಟಿರಿಯೋಫೇಜ್’ಗಳ ತಳಿನಕಾಶೆ (Genome) ಮತ್ತು ಮೈಥ್ರೋಕಾಂಡ್ರಿಯಾದ ತಳಿನಕಾಶೆ ಪಡೆದನು. ಜಾನ್ನ ಸಂಶೋಧನೆಗಳಿಂದ ಅಡೆನೋಸೈನ್ಟ್ರೈಫಾಸ್ಫೇಟ್’ನ (ಎ.ಟಿ.ಪಿ) ಸಂಶ್ಲೇಷಣೆಯ ಹಿನ್ನೆಲೆಯಲ್ಲಿ ಕ್ರಿಯಾಶೀಲವಾಗಿರುವ ಕಿಣ್ವ ಮೂಲದ ಕ್ರಿಯಾವಿನ್ಯಾಸ ಸ್ಪಷ್ಟಗೊಂಡಿತು. ಇದಕ್ಕಾಗಿ ಜಾನ್ 1997ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಪೌಲ್, ಡಿ. ಬಾಯರ್ (1918-) 1997
Paul D. Boyer
ಅಸಂಸಂ-ರಸಾಯನಶಾಸ್ತ್ರ- ಎಟಿಪಿ ಸಂಶ್ಲೇಷಣೆಯಲ್ಲಿನ ಮಧ್ಯಂತರ ಕಾರ್ಯ ನಿರ್ವಹಿಸುವ ಹೊಸ ಪ್ರೊಟೀನ್ ಅನಾವರಣಗೊಳಿಸಿದಾತ.
ಪೌಲ್ ಉತ್ಸಾಹ ಪ್ರಾಂತ್ಯದ ಪ್ರೋವೋ ಹಳ್ಳಿಯಲ್ಲಿ ಜನಿಸಿದನು. ಈ ಹಳ್ಳಿ ದೂರದರ್ಶನದಂತಹ ಆಧುನಿಕ ಸೌಲಭ್ಯಗಳಿಂದ ಬಹುಕಾಲ ದೂರವಿದ್ದಿತು. ಪೌಲ್ ತನ್ನ ಜೀವನದ ಮೊದಲ 21 ವರ್ಷಗಳನ್ನು ಇಲ್ಲಿಯೇ ಕಳೆದನು. ಪೌಲ್ನ ಪೂರ್ವಿಕರು ಮೂಲತ: ಜರ್ಮನಿಯವರು ಐದು ಮಕ್ಕಳ ಕುಟುಂಬದಲ್ಲಿ, ಕೊನೆಯನಾದ ಪೌಲ್, ಎಂಟು ವರ್ಷದವನಿರುವಾಗ ತಾಯಿಯನ್ನು ಕಳೆದುಕೊಂಡನು. 1930ರಲ್ಲಿ ಅಸಂಸಂಗಳು ಎದುರಿಸಿದ ಆರ್ಥಿಕ ಸಂಕಷ್ಟದ ಸುಳಿಗಾಳಿಗೆ ಪೌಲ್ ಕುಟುಂಬ ಸಿಲುಕಿತು. ಕ್ರಿಸ್ಮಸ್ ಉಡುಗೊರೆಯಾಗಿ ದೊರೆತ ಪುಸ್ತಕವೊಂದರಿಂದ ಪೌಲ್ಗೆ ರಸಾಯನಶಾಸ್ತ್ರದಲ್ಲಿ ಆರಂಭಿಕ ಆಸಕ್ತಿಗಳು ಮೂಡಿದವು. ಪ್ರೋವೋದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಪೌಲ್ ಉತ್ತಮ ದರ್ಜೆಂiÀiಲ್ಲಿ ಉತ್ತೀರ್ಣನಾಗಿ ¥sóÁರೆಲ್ ಜೂನಿಯರ್ ಹೈಸ್ಕೂಲ್ ಸೇರಿದನು. ಇಲ್ಲಿ ರೀಸ್ ಬೆಂಚ್ ಎನ್ನುವ ಉಪಾಧ್ಯಾಯನಿಂದ ರಸಾಯನ ಶಾಸ್ತ್ರದಲ್ಲಿ ಮುಂದುವರೆಯುವಂತೆ ಉತ್ತೇಜನ ದಕ್ಕಿತು. ಪೌಲ್, ಬ್ರಿಗ್ ಹ್ಯಾಂ ಯಂಗ್ ಯೂನಿವರ್ಸಿಟಿಯಲ್ಲಿ ಪದವಿ ಅಧ್ಯಯನಕ್ಕೆ ಸೇರಿದನು. ಇಲ್ಲಿ ಜಾನ್ವಿಂಗ್, ಜೊ ನಿಖೋಲಾಸ್ರವರ ಮಾರ್ಗದರ್ಶನ ದೊರೆತು, ನಿರವಯವ ಸಾವಯವ ರಸಾಯನಶಾಸ್ತ್ರದ ಮೂಲ ತತ್ತ್ವಗಳು ಮನದಟ್ಟಾದವು. ರಜಾ ದಿನಗಳಲ್ಲಿ ಹೋಟೆಲ್ ಮಾಣಿಯಾಗಿ ಅಲ್ಪ ಸ್ವಲ್ಪ ಹಣ ಗಳಿಸಿದ ಪೌಲ್, ಕ್ಯಾಲಿಫೋರ್ನಿಯಾದಲ್ಲಿ ಸೇನೆಯ ಶಿಬಿರದಲ್ಲೂ ಕೆಲ ದಿನ ತರಬೇತಿ ಹೊಂದಿದನು.ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ, ಮ್ಯಾಡಿಸನ್ನಲ್ಲಿರುವ, ವಿಸ್ಕಾನ್ಸಿನ್ ವಿಶ್ವವಿದ್ಯಾಲಯದ ಜೀವರಸಾಯನಶಾಸ್ತ್ರದ ವಿಭಾಗಕ್ಕೆ ಸೇರಿದನು. ಇಲ್ಲಿ ವಿಟಮಿನ್, ಪೌಷ್ಟಿಕತೆ, ಚಯಾಪಚಯಗಳ ¨ಗೆಗೆ ಹೊಸ ಸಂಶೋಧನೆಗಳು ಪ್ರಾರಂಭವಾಗಿ ವಿದ್ಯಾರ್ಥಿಗಳಿಗೆ ಹಲವಾರು ಅವಕಾಶದ ಬಾಗಿಲುಗಳು ತೆರೆದಿದ್ದವು. ಇದೇ ಕಾಲೇಜಿನಲ್ಲಿದ್ದ ಸ್ಟೀನ್ಬಾಕ್ ಹಾಲನ್ನು ವಿಟಮಿನ್ ಡಿ ಯಿಂದ ಸಮೃದ್ದಗೊಳಿಸುವ ವಿಧಾನಕ್ಕೆ ಏಕಸ್ವಾಮ್ಯ ಪಡೆದಿದ್ದರೆ, ಎಲ್ವೇಹೀಮ್ ನೇತೃತ್ವದ ತಂಡ, ಪೆಲ್ಲಾಗ್ರ ನಿವಾರಣೆಗೆ ನೆರವಾಗುವ ನಿಕೋಟಿಕ್ ಆಮ್ಲ ಪತ್ತೆ ಹಚ್ಚಿದ್ದಿತು. ಇಂತಹುದೇ ಹಲವು ಹತ್ತಾರು ಫಲಫ್ರ್ರದ, ಸಂಶೋಧನೆಗಳು ಹೊರ ಬಂದಿದ್ದವು. 1943ರಲ್ಲಿ ಪೌಲ್, ಡಾಕ್ಟರೇಟ್ ಗಳಿಸಿದಾಗ, ಎರಡನೇ ಜಾಗತಿಕ ಯುದ್ದ ಪ್ರಾರಂಭವಾಗಿದ್ದಿತು. ಯುದ್ದ ಕಾಲದಲ್ಲಿನ ಅಗತ್ಯಗಳಿಗಾಗಿ ಸ್ಥಾಪಿತವಾಗಿದ್ದ ವೈದ್ಯಕೀಯ ಸಂಶೋಧನಾ ಸಮಿತಿಯಿಂದ ರಕ್ತ ರಸಿಕೆಯ (Serum) ಪ್ರೋಟಿನ್ಗಳ ಬಗೆಗಿನ ಸಂಶೋಧನೆಗಳಲ್ಲಿ ಪೌಲ್ ಭಾಗವಹಿಸಿದನು. ಯುದ್ದ ಮುಗಿದ ನಂತರ ಮಿನ್ನೆಸೊಟಾ ವಿಶ್ವವಿದ್ಯಾಲಯದಲ್ಲಿ ಜೀವರಸಾಯನಶಾಸ್ತ್ರದ ಪ್ರಾಧ್ಯಾಪಕನಾದನು. 1955ರಲ್ಲಿ ಗುಗೆನ್ಹೀಮ್ಫೆಲೋಷಿ¥sóï ಗಳಿಸಿ, ಸ್ವೀಡನ್ಗೆ ತೆರಳಿದ ಪೌಲ್ ಅಲ್ಲಿ ಸ್ಟಾಕ್ ಹೋಂನ ವೆನ್ನರ್ ಗ್ರೀನ್ ಸಂಸ್ಥೆಯಲ್ಲಿ ಒಲೋವ್ ಲಿಂಡ್ಬರ್ಗ್ ಹಾಗೂ ನೊಬೆಲ್ ಮೆಡಿಕಲ್ ಇನ್ಸ್ಟಿಟ್ಯೂಟ್ನಲ್ಲಿ ಹ್ಯೂಗೋ ಥಿಯೋರೆಲ್ ಜೊತೆಗೂಡಿ ಕಿಣ್ವಗಳನ್ನು (Enzyme) ಕುರಿತಾದ ಆಳ ಅಧ್ಯಯನ ನಡೆಸಿದನು. 1955ರಲ್ಲಿ ಕಿಣ್ವಗಳ ಕುರಿತಾದ ಸಂಶೋಧನೆಗೆ ಅಮೆರಿಕನ್ ರಸಾಯನಶಾಸ್ತ್ರ ಸಂಸ್ಥೆಯ ಪ್ರಶಸ್ತಿ ಪಡೆದನು. ಎಟಿಪಿ ಸಂಶ್ಲೇಷಣೆಯಲ್ಲಿನ ಮಧ್ಯಂತರ ಕಾರ್ಯ ನಿರ್ವಹಿಸುವ ಹೊಸ ಪ್ರೊಟೀನ್ ಅನಾವರಣಗೊಳಿಸಿದ ತಂಡದ ನೇತೃತ್ವ ವಹಿಸಿದ್ದಕ್ಕೆ ಪೌಲ್ 1997 ನೊಬೆಲ್ ಪ್ರಶಸ್ತಿ ಗಳಿಸಿದನು.
ಜೆನ್ಸ್, ಸಿಸ್ಕೆ (1918--) 1997
Jens , C. Skou
ಡೆನ್ಮಾರ್ಕ್-ರಸಾಯನಶಾಸ್ತ್ರ-ಪೆÇಟ್ಯಾಷಿಯಂ ಲವಣಾಂಶಗಳ ವರ್ಗಾಂತರತೆ ಕುರಿತಾಗಿ ಸಂಶೋಧಿಸಿದಾತ.
ಜೆನ್ಸ್, 8 ಅಕ್ಟೋಬರ್ 1918ರಂದು ಡೆನ್ಮಾರ್ಕ್ನ, ಲೆಮ್ವಿಗ್ ನಗರದ ಶ್ರೀಮಂತ ಕುಟಂಬದಲ್ಲಿ ಜನಿಸಿದನು. ನಾಲ್ಕು ಮಕ್ಕಳಲ್ಲಿ ಹಿರಿಯವನಾಗಿದ್ದ ಜೆನ್ಸ್ ಹನ್ನೆರಡು ವರ್ಷದವನಿರುವಾಗ ಆತನ ತಂದೆ, ನ್ಯೂಮೋನಿಯಾದಿಂದ ತೀರಿಕೊಂಡನು. ತನ್ನ ನಾ¯ಲು ಮಕ್ಕಳಿಗೆ ಉತ್ತಮ ಜೀವನ ಒದಗಿಸುವ ಪ್ರಯತ್ನದಲ್ಲಿ ಜೆನ್ಸ್ ತಾಯಿಯ ಜೀವನ ಸಾಗಿತು. 1936ರಲ್ಲಿ ಕೊಪೆನ್ಹೇಗ್ ವಿಶ್ವವಿದ್ಯಾಲಯ ಸೇರಿ 1944ರಲ್ಲಿ ವೈದ್ಯಕೀಯ ಪದವಿಯೊಂದಿಗೆ ಜೆನ್ಸ್ ಹೊರಬಂದನು. ದೇಶದ ರಾಜಧಾನಿಯಾದ ಕೊಪೆನ್ಹೇಗ್ನಂತಹ ಮಹಾನ ನಗರದ ಜೀವನ ಜೆನ್ಸ್ಗೆ ಎಂದಿಗ್ ಆಪ್ತವಾಗಲಿಲ್ಲವಾದರೂ ಅಲ್ಲಿ ದಕ್ಕುತ್ತಿದ್ದ ಕಲೆ, ಸಾಹಿತ್ಯ, ಸಂಗೀತಗಳು ಮುದ ನೀಡಿದವು. ಮೊದಲ ಜಾಗತಿಕ ಯುದ್ದದಲ್ಲಿ ಡೆನ್ಮಾರ್ಕ್ ಭಾಗಿಯಾಗದಂತೆ ಎಚ್ಚರ ವಹಿಸಿದ್ದಿತು. 1940ರಲ್ಲಿ ಎರಡನೆ ಜಾಗತಿಕ ಯುದ್ದ ಪ್ರಾರಂಭವಾದಾಗ ಅದು ಹಿಟ್ಲರ್ನ ವಶವಾಯಿತಾದರೂ ಡೆನ್ಮಾರ್ಕನ ಆಡಳಿತವನ್ನು ಜರ್ಮನಿಯು ಕೈಗೆತ್ತಿಕೊಳ್ಳಲಿಲ್ಲ. ಜಾಗತಿಕ ಯುದ್ದ ಸಮಯದಲ್ಲಿ ಆಹಾರ ಸರಬರಾಜು ಕೇಂದ್ರವಾಗಿ ಡೆನ್ಮಾರ್ಕ್ನ್ನು ಬಳಸತೊಡಗಿತು. ಬೆಟ್ಟ ಗುಡ್ಡಗಳಾಗಲಿ, ಸುರಕ್ಷಿತ ನೈಸರ್ಗಿಕ ಅಡಗುತಾಣಗಳಾಗಲಿ ಇಲ್ಲದ ಡೆನ್ಮಾರ್ಕ್ನಲ್ಲಿ ಜರ್ಮನಿ ವಿರುದ್ದದ ಜನರಿಗಿದ್ದ ಆಕ್ರೋಶ ಜನಪರ ಹೋರಾಟವಾಗುವಲ್ಲಿ ಅಥವಾ ಪ್ರಭುತ್ವ ವಿರೋಧಿ ದಂಗೆಯಾಗುವಲ್ಲಿ ವಿಫಲಗೊಂಡಿತು. ಇವೆಲ್ಲ ಪರಿಣಾಮ ಶೈಕ್ಷಣಿಕ ರಂಗದ ಮೇಲೂ ಆಯಿತು. 1943ರಲಿ ಜರ್ಮನ್ ಆಕ್ರಮಣದ ವಿರುದ್ಧ ದೇಶಾದ್ಯಂತ ನಡೆದ ಹರತಾಳವನ್ನು ಯಶಸ್ವಿಯಾಗಿ ಹಿಟ್ಲರ್ ಹತ್ತಿಕ್ಕಿದನು. 1944ರಲ್ಲಿ ಜೆನ್ಸ್ ವೈದ್ಯನಾಗಿ ವೃತ್ತಿ ಜೀವನ ಆರಂಭಿಸಿದನು. ಆದರೆ ಇದೇ ವರ್ಷ, ಜರ್ಮನಿ ವಿರುದ್ದ ದಂಗೆಯೇಳುವಂತೆ ಪ್ರಚೋದಿಸಿ ಬ್ರಿಟನ್ ಡೆನ್ಮಾರ್ಕ್ನ ದೂರ ಪ್ರದೇಶಗಳಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡಿತು. ವೈದ್ಯನಾಗಿ ಮುಂದುವರೆಯುದಕ್ಕಿಂತಲೂ ಮೊದಲು ಜರ್ಮನಿಯ ವಿರುದ್ದ ಶಸ್ತ್ರಾಗಳನ್ನತ್ತಲು ಜೆನ್ಸ್ ನಿರ್ಧರಿಸಿದನಾದರೂ, ಅಂತಿಮವಾಗಿ ಅದರಲ್ಲಿ ಸಾಫಲ್ಯ ಕಾಣಲಿಲ್ಲ. 1945ರಲ್ಲಿ ಜರ್ಮನಿ ಡೆನ್ಮಾರ್ಕ್ಗೆ ಶರಣಾದ ನಂತರ ಜೆನ್ಸ್ ನೆಮ್ಮದಿಯ ನಿಟ್ಟುಸಿರಿಟ್ಟನು. 1947ರಲ್ಲಿ ಶಸ್ತ್ರ ಚಿಕಿತ್ಸಕ ವೃತ್ತಿಯನ್ನು ತೊರೆದ ಜೆನ್ಸ್ ವೈದ್ಯಕೀಯ ಸಂಶೋಧನೆಯತ್ತ ಗಮನ ಹರಿಸಿದನು. ಜೆನ್ಸ್ ಪೆÇರೆ ಕ್ರಿಯಾಶಾಸ್ತ್ರದಲ್ಲಿ ಆಸಕ್ತನಾಗಿದ್ದನು. ದೇಹದಲ್ಲಿ ಸೋಡಿಯಂ, ಪೊಟ್ಯಾಷಿಯಂ ಲವಣಾಂಶಗಳ ವರ್ಗಾಂತರತೆ ಕುರಿತಾಗಿ ಜೆನ್ಸ್ ನಡೆಸಿದ ಪ್ರಯೋಗಗಳು ಗಮನಾರ್ಹವಾದವು. ಇದಕ್ಕಾಗಿ ಜೆನ್ಸ್ 1997ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಜಾನ್, ಎ.ಪೆಪ್ಲ್ (1925--) 1998
John , A.Pople
ಇಂಗ್ಲೆಂಡ್-ಭೌತರಸಾಯನಶಾಸ್ತ್ರ- ಕ್ವಾಂಟಂ ರಸಾಯನಶಾಸ್ತ್ರದಲ್ಲಿ ಗಣಕಿಸುವ ವಿಧಾನಗಳನ್ನು ಅಭಿವೃದ್ಧಿಗೊಳಿಸಿದಾತ.
ಜಾನ್ನ ತಂದೆ ಸೊಮರ್ಸೆಟ್ ಪ್ರಾಂತದ ಪಶ್ಚಿಮ ಕರಾವಳಿಯ ಲರ್ನ್ಹ್ಯಾಂ ಎಂಬ ಸಣ್ಣ ಹಳ್ಳಿಯೊಂದರಲ್ಲಿ ನೆಲೆಸಿದ್ದನು. 31 ಡಿಸೆಂಬರ್ 1925ರಂದು ಜಾನ್ ಜನಿಸಿದನು. ಜಾನ್ನ ಪೂರ್ವಿಕರಲ್ಲಿ ಯಾರೊಬ್ಬರೂ ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತಿರಲಿಲ್ಲ. ಜಾನ್ನ ತಂದೆ ಉಡುಪುಗಳನ್ನು ಸಿದ್ದ ಪಡಿಸಿ ವಾಹನದಲ್ಲಿ ಊರಿಂದ ಊರಿಗೆ ಒಯ್ದು ಮಾರುತ್ತಿದ್ದನು. ತನ್ನಂತೆ ಮಕ್ಕಳು ಬಟ್ಟೆ ವ್ಯಾಪಾರಿಗಳಾಗದೆ, ಅಥವಾ ಹೆಂಡತಿಯ ಕಡೆಯವರಂತೆ ಕೃಷಿಯಲ್ಲಿ ನಿರತರಾಗದೆ ಇನ್ನೂ ಹೆಚ್ಚಿನ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಜಾನ್ನ ತಂದೆಯ ಆಶೆಯಾಗಿದ್ದಿತು. ಇದಕ್ಕಾಗಿ ಅವರು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕೆಂದು ಹೇಳುತ್ತಿದ್ದನು. ಹತ್ತನೇ ವರ್ಷದವನಿರುವಾಗ ಬ್ರಿಸ್ಟಲ್ ಗ್ರಾಮರ್ ಸ್ಕೂಲ್ಗೆ ಜಾನ್ ಸೇರಿದನು. ಇದು ಈತನ ಹಳ್ಳಿಯಿಂದ 48 ಕಿ.ಮೀ ದೂರವಿದ್ದು, ಪ್ರತಿದಿನ ಶಾಲೆಗೆ ಹೋಗಿ ಬರುವುದು ಬಾಲಕ ಜಾನ್ಗೆ ಬಹು ಕಷ್ಟವಾಯಿತು. ಗಣಿತದಲ್ಲಿ ಅತ್ಯಾಸಕ್ತಿ ಹೊಂದಿದ್ದ ಜಾನ್, ತಿರಸ್ಕೃತ ಗಣಿತದ ಪುಸ್ತಕವೊಂದನ್ನು ಪಡೆದು ಅದನ್ನು ಅಮೂಲಾಗ್ರವಾಗಿ ಅರಿತುಕೊಂಡನು. ಜಾನ್ನ ಗಣಿತ ಪ್ರತಿಭೆ ಆತನ ಮನೆಯವರಿಗಾಗಲಿ , ಸಹಪಾಠಿಗಳಿಗಾಗಲಿ ಅಥವಾ ಶಿಕ್ಷಕರಿಗಾಗಲಿ ತಿಳಿಯಲಿಲ್ಲ. ಪ್ರೌಢಶಾಲೆಯಲ್ಲಿರುವಾಗ ಗಣಿತ ಶಿಕ್ಷಕನಾಗಿದ್ದ ಲೈನೆಸ್ ಗಣಿತದ ಸಮಸ್ಯೆಯೊಂದನ್ನು ವಿದ್ಯಾರ್ಥಿಗಳಿಗೆ ನೀಡಿ ಅದನ್ನು ಬಿಡಿಸಲು ಹೇಳಿದನು. ಇದಕ್ಕೆ ಜಾನ್ ಹಲವಾರು ಪರಿಹಾರ ಸೂಚಿಸಿ ಉತ್ತಮವಾದ ಲೇಖನ ನೀಡಿದನು. ಇದು ಲೈನೆಸ್ನ ಗಮನಕ್ಕೆ ಬಂದಿತು. ಜಾನ್ನ ತಂದೆ ತಾಯಿಗಳನ್ನು ಕರೆದು ಕೇಂಬ್ರಿಜ್ “ವಿಶ್ವವಿದ್ಯಾಲಯಕ್ಕೆ ಗಣಿತದಲ್ಲಿ ಹೆಚ್ಚಿನ ಶಿಕ್ಷಣ ಗಳಿಸಲು ಕಳಿಸಬೇಕೆಂದು ಸೂಚಿಸಿದನು. 1942ರಲ್ಲಿ ಜಾನ್, ಪ್ರವೇಶ ಪರೀಕ್ಷೆ ಎದುರಿಸಿ, ಕೇಂಬ್ರಿಜ್ ಸೇರಿದನು. ಎರಡನೇ ಜಾಗತಿಕ ಯುದ್ಧದ ಸಮಯದಲ್ಲಿ ಜಾನ್ ಸೇನಾ ತರಬೇತಿಗೆ ದಾಖಲಾದನು. ಯುದ್ದ ಮುಗಿದ ನಂತರ ಬ್ರಿಸ್ಟಲ್ ಏರೋಪ್ಲೆನ್ ಕಂಪನಿಯಲ್ಲಿ ಔದ್ಯೋಗಿಕ ತರಬೇತಿಗೆ ಸೇರಿದನು. ಇಲ್ಲಿ ಹೆಚ್ಚಿನ ಕೆಲಸವಿರಲಿಲ್ಲ. ಅದರೆ ಆರ್ಥಿಕ ಸುಧಾರಣೆಗಾಗಿ ಬ್ರಿಟನ್ ಹಮ್ಮಿಕೊಂಡಿದ್ದ ನೀತಿಗನುಗುಣವಾಗಿ ನೌಕರರು ತಮ್ಮ ಕಂಪನಿಗಳನ್ನು ಬದಲಿಸಿ ಬೇರೆ ಕಡೆಗೆ ಹೋಗುವಂತಿರ¯ಲ್ಲ. ಕಾಲಾನುಕ್ರಮೇಣ ಜಾನ್ಗೆ ಗಣಿತದಲ್ಲಿನ ಆಸಕ್ತಿ ಕುಂದತೊಡಗಿತು. ಸರ್ಕಾರಕ್ಕೆ ಮನವಿ ಸಲ್ಲಿಸಿ 1947ರಲ್ಲಿ ಕೇಂಬ್ರಿಜ್ನಲ್ಲಿ ಪದವಿಗೆ ಸೇರಿದನು. 1948ರಲ್ಲಿ ಸರ್ ಜಾನ್ ಲೆನಾರ್ಡ್ ಜೋನ್ಸ್ ಕೆಳಗೆ ಸೈದ್ಧಾಂತಿಕ ರಸಾಯನಶಾಸ್ತ್ರದಲ್ಲಿ ಮುಂದುವರೆದನು. ಇಲ್ಲಿರುವಾಗ ಮುಂದೆ ನೊಬೆಲ್ ಪ್ರಶಸ್ತಿ ಗಳಿಸಿದ ಹಲವಾರು ಜನರೊಂದಿಗಿನ ಒಡನಾಟ ಜಾನ್ಗೆ ದಕ್ಕಿತು. ನೀರಿನ ಅಣುವಿನ ಬಂಧ ಹಾಗೂ ರಚನೆಯ ಬಗೆಗೆ ಸಂಶೋಧನೆ ನಡೆಸಿ ಜಾನ್ ಡಾಕ್ಟರೇಟ್ ಗಳಿಸಿದನು. ಭೌತ ರಸಾಯನಶಾಸ್ತ್ರದಲ್ಲಿ ಗಣಕಿಸುವ (Computing) ವಿಧಾನಗಳನ್ನು ಕುರಿತಾಗಿ ಜಾನ್ ಚಿಂತಿಸತೊಡಗಿದನು. 1961ರಲ್ಲಿ ಪಿಟ್ಸ್ಬರ್ಗ್ನ ಕಾರ್ನೆಗಿ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿಯಲ್ಲಿ ಅಣುಗಳ ಕ್ರಿಯೆ ಅರಿಯಲು ಹಾಗೂ ವಿವರಿಸಲು ಗಣಕಿಸುವ ವಿಧಾನಗಳನ್ನು ಸ್ಪಷ್ಟ ಗೊಳಿಸತೊಡಗಿದನು. ಈ ಕಾಲದಲ್ಲೇ ಕ್ಷಿಪ್ರ ಕಾರ್ಯಗತಿಯ ಗಣಕಗಳು ವಿಜ್ಞಾನಿಗಳ ಮನಗೆಲ್ಲತೊಡಗಿದ್ದವು. 1967ರಲ್ಲಿ ಕಾರ್ನೆಗಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾರ್ನೆಗಿ ಮೆಲ್ಲನ್ ವಿಶ್ವವಿದ್ಯಾಲಯವಾಗಿ ಪರಿವರ್ತನೆಗೊಂಡಾಗ ಅಲ್ಲಿ ಬೋಧಕ ಸಿಬ್ಬಂದಿಯಾದನು.ಇಲ್ಲಿರುವಾಗಲೇ ಕ್ವಾಂಟಂ ರಸಾಯನಶಾಸ್ತ್ರದಲ್ಲಿ ಗಣಕಿಸುವ ವಿಧಾನಗಳನ್ನು ಅಭಿವೃದ್ಧಿಗೊಳಿಸಿದನು. ಇದಕ್ಕಾಗಿ 1998ರಲ್ಲಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದನು.
ವಾಲ್ಟರ್, ಕೊಹ್ನ್ (1923---) 1998
Walter , Kohn
ಆಸ್ಟ್ರಿಯಾ- ರಸಾಯನಶಾಸ್ತ್ರ-ಘನಗಳ ಮೇಲ್ಮೈ ಮೇಲಿನ ವಾಹಕತ್ವ (Surface Conductivity) ಕುರಿತಾದಂತೆ ಸಾಂದ್ರತೆ ಕ್ರಿಯಾಶೀಲತಾ (Density Activation) ಸಿದ್ಧಾಂತ ರೂಪಿಸಿದಾತ.
ಹಲವಾರು ಜನ ನೊಬೆಲ್ ಪ್ರಶಸ್ತಿ ವಿಜೇತರ ಜೀವನ ಚರಿತ್ರೆಯನ್ನು ನಾನು ಓದಿದ್ದೇನೆ. ಅವರ ಬಾಲ್ಯ ಕುತೂಹಲ, ಗಣಿತ ಪ್ರತಿಭೆ, ಪುಸ್ತಕದ ಗೀಳು, ನಾನಾ ತರದ ಸೋಲು ಗೆಲವುಗಳಿಂದ ತುಂಬಿ ತುಳುಕುತ್ತಿದೆ. ನನ್ನ ಜೀವನದಲ್ಲಿ ಅಂತಹುದಾವುದೂ ಇಲ್ಲ. ನನ್ನಂತಹ ಕೈ ಬೆರಳೆಣಿಕೆಯ ಜನ ನೊಬೆಲ್ ಪ್ರಶಸ್ತಿ ಪಡೆದಿರುವುದನ್ನು ನಾನು ಬಲ್ಲೆ. ಆದರೆ ಒಟ್ಟಾರೆಯಾಗಿ ನೊಬೆಲ್ ಪ್ರಶಸ್ತಿ ಗಳಿಸುವಂತಹ ಸ್ಥಿತಿಗೆ ನನ್ನನು ಎಳೆತಂದ ಸನ್ನಿವೇಶಗಳನ್ನು ಸರಿಯಾಗಿ ನಾನರಿಯೆ ಎಂದು ಕೊಹ್ನ್ ತನ್ನ ಸಂಕ್ಷಿಪ್ತ ಜೀವನ ವಿವರದಲ್ಲಿ ಹೇಳಿದ್ದಾನೆ. 1957ರಲ್ಲಿ ಅಸಂಸಂಗಳ ಪ್ರಜೆಯಾದ ಕೊಹ್ನ್ ಬಾಲ್ಯದ ನೆನಪುಗಳೆಲ್ಲವೂ ಕಹಿ. ಕೊಹ್ನ್ ಜನಿಸಿದಾಗ ಆಸ್ಟ್ರಿಯ ಹಿಟ್ಲರ್ ಹಿಡಿತದಲ್ಲಿದ್ದಿತು. ನಾಝಿಗಳು ನಡೆಸಿದ ಸಾಮೂಹಿಕ ಯಹೂದಿ ಹತ್ಯೆಯಲ್ಲಿ ಈತನ ತಂದೆ ತಾಯಿಗಳಿಬ್ಬರೂ ಬಲಿಯಾದರು.. ಯುದ್ದಕ್ಕೆ ಶಾಂತಿಯೊಂದೇ ಶಮನಕಾರಿಯೆಂದು ಬಾಲ್ಯದಿಂದ ಕಂಡುಕೊಂಡಿದ್ದ ಕೊಹ್ನ್ ಅಸಂಸಂ ಮತ್ತು ರಷ್ಯಾಗಳ ಮಧ್ಯದ ಶೀತಲ ಸಮರ ಕೊನೆಗೊಳಿಸಲು ಹೆಣಗಿದ ಕೈ ಬೆರಳೆಣಿಕೆಯ ವಿಜ್ಞಾನಿಗಲ್ಲೊಬ್ಬನು. ಲಾಸ್ ಆಲ್ಮೋಸ್ ಮತ್ತು ಲಿವರ್’ಮೋರ್’ನಲ್ಲಿದ್ದ ನ್ಯೂಕ್ಲಿಯರ್ ವೆಪನ್ಸ್ ಲ್ಯಾಬೋರೋಟರಿಯ ನಿರ್ವಾಹಕನಾಗಿದ್ದಾಗ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಯುದ್ಧ ಸಂಬಂಧಿ ಸಂಶೋಧನೆಗಳಲ್ಲಿ ಭಾಗಿಯಾಗಬಾರದೆಂಬ ದೃಢ ನಿಲುವನ್ನು ಹೊಂದಿದ್ದನು. ಆದರೆ ಕೊಹ್ನ್ನ ಈ ತೀರ್ಮಾನಕ್ಕೆ ಅಂತಹ ಬೆಂಬಲ ದಕ್ಕಲಿಲ್ಲ. ಮನುಕುಲಕ್ಕೆ ಶಾಂತಿಯೊಂದೇ ಪರಮಗತಿಯೆಂದು ನಂಬಿರುವ ಕೊಹ್ನ್ ಈ ದಿಶೆಯಲ್ಲಿ ಜಾಗತಿಕ ಶಾಂತಿ ತರಲು ತನ್ನದೇ ಆದ ಪ್ರಯತ್ನಗಳಲ್ಲಿ ನಿರತನಾಗಿದ್ದಾನೆ. ಶಾಲಾ ಜೀವನದಲ್ಲಿ ಲ್ಯಾಟಿನ್ ಕೊಹ್ನ್ನ ನೆಚ್ಚಿನ ವಿಷಯವಾಗಿದ್ದಿತು. ಗಣಿತ ವಿಜ್ಞಾನಗಳಿಂದ ಈತ ದೂರವಾಗಿದ್ದನು. ಹಿಟ್ಲರ್ 1933ರಲ್ಲಿ ಆಸ್ಟ್ರಿಯಾ ವಶಪಡಿಸಿಕೊಂಡ ತಕ್ಷಣ ಯಹೂದಿ ವಿದ್ಯಾರ್ಥಿಗಳನ್ನು ಶಾಲೆಯಿಂದ ಉಚ್ಛಾಟಿಸಲಾಯಿತು. ಇದರಲ್ಲಿ ಕೊಹ್ನ್ ಸಹ ಒಬ್ಬನಾಗಿದ್ದನು. ಮುಂದಿನ ಶಿಕ್ಷಣಕ್ಕಾಗಿ ಸೌಕರ್ಯ ಕೊರತೆಯಿಂದ ಹಿಂದುಳಿದಿದ್ದ ಯಹೂದಿ ಶಾಲೆಗಳಲ್ಲಿ ಶಿಕ್ಷಣ ಮುಂದುವರೆಯಿತು. ಎರಡನೇ ಜಾಗತಿಕ ಯುದ್ದದಲ್ಲಿ ತಂದೆ ತಾಯಿಯಿಂದ ಬೇರ್ಪಟ್ಟ ಕೊಹ್ನ್ ಇಂಗ್ಲೆಂಡ್ನಲ್ಲಿದ್ದ ಸ್ನೇಹಿತರ ಮನೆಯಲ್ಲಿ ನೆಲೆ ಕಾಣಬೇಕಾಯಿತು. 1940ರಲ್ಲಿ ಚರ್ಚಿಲ್ ಬ್ರಿಟನ್ನಲ್ಲಿರುವ ಶತ್ರುಗಳನ್ನು ಬಂಧಿಸಬೇಕೆಂಬ ಆಜ್ಞೆ ನೀಡಿದನು. ಆಗ ಕೊಹ್ನ್ ಬ್ರಿಟಿಷ್ ಸೇನೆಗೆ ಸೆರೆಸಿಕ್ಕು ಎರಡು ತಿಂಗಳ ಕಾಲ ಕಾರಾಗೃಹದಲ್ಲಿದ್ದನು. ಇಲ್ಲಿರುವಾಗ ಬಂಧನದಲ್ಲಿರುವ ಜರ್ಮನಿ ಯುವಕರಿಗೆ ಡಾ ಫ್ರಿಟ್ಜ್’ರೋಥ್ ಬರ್ಜರ್ ನೀಡಿದ ಗಣಿತದ ಉಪನ್ಯಾಸಗಳಿಂದ ಕೊಹ್ನ್ನ ಜೀವನ ದೃಷ್ಟಿಯೇ ಬದಲಾಯಿತು. ಕೆಲಕಾಲದ ನಂತರ ಅನಾಥರಾದ ಯಹೂದಿ ಮಕ್ಕಳನ್ನು ಸಾಕುತ್ತಿದ್ದ ವೈದ್ಯ ದಂಪತಿಗಳ ಅನುಕಂಪಕ್ಕೆ ಪಾತ್ರನಾದ ಕೊಹ್ನ್ ಕೆನಡಾದ ಟೊರಂಟೋ ಸೇರುವಂತಾಯಿತು. ಇವರ ಒತ್ತಾಸೆಯಿಂದಲೇ ಕೊಹ್ನ್ ವಿಜ್ಞಾನದ ಪದವಿ ಗಳಿಸುವಂತಾಯಿತು. ಕಾಲೇಜಿನ ವಿದ್ಯಾರ್ಥಿ ಜೀವನದುದ್ದಕ್ಕೂ ಮರದ ದಿಮ್ಮಿಗಳನ್ನು ಕತ್ತರಿಸುವ, ಸಾಗಿಸುವ ಕಂಪನಿಯಲ್ಲಿ ಕೆಲಸಮಾಡುತ್ತಾ ವ್ಯಾಸಂಗ ನಡೆಸಿದನು. ಇದರಿಂದ ದೊರೆತ ಅಲ್ಪ ಸ್ವಲ್ಪ ಹಣ ಉಳಿಸಿ ಹಾರ್ಡಿ ರಚಿಸಿದ ಫೂರಿಯರ್ ಮ್ಯಾಥೆಮ್ಯಾಟಿಕ್ಸ್ ಮತ್ತು ಸ್ಲೇಟರ್ ರಚಿಸಿದ ಕೆಮಿಕಲ್ ಫಿಸಿಕ್ಸ್ ಪುಸ್ತಕಗಳನ್ನು ಖರೀದಿಸಿದನು. ಈ ಪುಸ್ತಕಗಳನ್ನು ಕೊಹ್ನ್ ಈಗಲೂ ಜತನದಿಂದ ಕಾಯ್ದಿರಿಸಿಕೊಂಡಿದ್ದಾನೆ. ಟೊರಂಟೋ ವಿಶ್ವವಿದ್ಯಾಲಯದಲ್ಲಿ ಮುಂದೆ ಜಗದ್ವಿಖ್ಯಾತನಾಗಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತನಾದ ಆರ್ಥರ್ ಷ್ವಾಲೋ ಕೊಹ್ನ್ನ ಸಹಪಾಠಿಯಾಗಿದ್ದನು. ಡಾಕ್ಟರೇಟ್ ಗಳಿಕೆಗಾಗಿ ಕೊಹ್ನ್ ಅಸಂಸಂಗಳ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಜೂಲಿಯಟ್ ಷ್ವಿಂಜರ್ ಮಾರ್ಗದರ್ಶನದಲ್ಲಿ ಸಂಶೋಧನೆ ಪ್ರಾರಂಭಿಸಿದನು. ಹಾರ್ವರ್ಡ್ ವಿಶ್ವವಿದ್ಯಾಲಯ ನೂರಾರು ಪ್ರತಿಭಾವಂತ ವಿಜ್ಞಾನಿಗಳ ಗಣಿಯಾಗಿದ್ದಿತು. ಇವರೊಂದಿಗೆ ತನ್ನನ್ನು ಹೋಲಿಸಿಕೊಂಡು ಕುಹ್ನ್ ಕೆಲಕಾಲ ಅಪ್ರತಿಭನಾಗಿದ್ದನು. ಆದರೆ ಜೆ.ಎಚ್.ವ್ಯಾನ್ವ್ಲೆಕ್ನ ನೈತಿಕ ಬೆಂಬಲ ಕೊಹ್ನ್ಗೆ ದಕ್ಕಿತು. ಪಿ,ಡಬ್ಲ್ಯೂ.ಆ್ಯಂಡರ್ಸನ್, ಎನ್.ಬ್ಲೂಮ್ಬರ್ಜೆನ್, ಬಿ.ಮಾಟೆಲ್ಸನ್ರ ಸ್ನೇಹ ಕೊಹ್ನ್ಗೆ ದಕ್ಕಿತು. ಜೂಲಿಯನ್ ಷ್ವಿಂಜರ್ ಮಾರ್ಗದರ್ಶನದಲ್ಲಿ ವೈದ್ಯುತ್ ಗತಿಶಾಸ್ತ್ರದ ಸಮಸ್ಯೆಗಳ ಪರಿಹಾರದಲ್ಲಿ ಕೊಹ್ನ್ ಶ್ರಮಿಸಿದನು. 1951 ರಿಂದ ಒಂದು ವರ್ಷ ಕಾಲ ಡೆನ್ಮಾರ್ಕ್ನ ಕೊಪೆನ್ಹೇಗ್ನ ಬೊಹ್ರ್ ಸಂಸ್ಥೆಯಲ್ಲಿ ಘನ ಸ್ಥಿತಿ ಭೌತಶಾಸ್ತ್ರದಲ್ಲಿ ಅತಿವಾಹಕತೆ (Superconductivity) ಮತ್ತು ಚದುರಿಕೆ ಸಿದ್ದಾಂತಗಳನ್ನು ಪರಿಷ್ಕರಿಸುವಲ್ಲಿ ಶ್ರಮಿಸಿದನು. 1953ರಲ್ಲಿ ಬೆಲ್ ಲ್ಯಾಬೋರೇಟರಿ ಸೇರಿ ಟ್ರಾನ್ಸಿಸ್ಟರ್ ಉಪಜ್ಞೆಕಾರ ಡಬ್ಲ್ಯು ಷಾಕ್ಲೆಯ ಸಹಾಯಕನಾಗಿ ಕೆಲಸ ಮಾಡಿದ ಕೊಹ್ನ್ ಇಲ್ಲಿ ಸಿಲಿಕಾನ್ ಮತ್ತು ಜರ್ಮೇನಿಯಂಗಳು ವಿಕಿರಣ ದಾಳಿಗೊಳಗಾಗುವುದರ ಅಧ್ಯಯನ ನಡೆಸಿದನು. 1966ರಲ್ಲಿ ಲುಟ್ಟಿಂಜರ್ ಸಾಂಗತ್ಯದಲ್ಲಿ ಕೊಹ್ನ್ ಶುದ್ಧ ವಿಕರ್ಷಕ ಅಂತಕ್ರಿಯೆಗಳಿದ್ದಾಗಲೂ ಅತಿವಾಹಕತೆಯಿರುವ ಸಾಧ್ಯತೆಯನ್ನು ತೋರಿಸಿದನು. ಕೊಹ್ನ್ ಘನಗಳ ಮೇಲ್ಮೈ ಮೇಲಿನ ವಾಹಕತ್ವ ಕುರಿತಾದಂತೆ ಸಾಂದ್ರತೆ ಕ್ರಿಯಾಶೀಲತಾ ಸಿದ್ಧಾಂತ ಮಂಡಿಸಿದ್ದಾನೆ. ಇದಕ್ಕಾಗಿ ಕೊಹ್ನ್ 1998ರ ನೊಬೆಲ್ ಪ್ರಶಸ್ತಿಯಿಂದ ಪುರಸ್ಕೃತನಾಗಿದ್ದಾನೆ.
ಅಹ್ಮದ್ , ಝವೇಲ್ –(1946--) 1999
Ahmed , H. Zewail
ಈಜಿಪ್ತ್-ಅಸಂಸಂ- ಅತಿವೇಗಿ ವಿವರ್ತನ ಹಾಗೂ ಸೂಕ್ಷ್ಮ ದರ್ಶಕ (Ultrafast Diffraction Microscope) ನಿರ್ಮಾಣದಲ್ಲಿ ಶ್ರಮಿಸಿದಾತ.
ಅಹ್ಮದ್ 26 ಫೆಬ್ರವರಿ 1946ರಂದು ಅಲೆಗ್ಸಾಂಡ್ರಿಯಾ ಸಮೀಪದ ಡಿಸೆಕ್ಟ್ ನಗರದಲ್ಲಿ ಜನಿಸಿದನು. ಬಾಲ್ಯದಿಂದಲೂ ಏಕೆ ? ಹೇಗೆ ? ಎಂಬ ಪ್ರಶ್ನೆಗಳ ಬೆನ್ನ ಹತ್ತಿ ಸಾಗುತ್ತಿದ್ದ ಅಹ್ಮದ್ಗೆ ವಿಜ್ಞಾನ ಬಹು ಪ್ರಿಯ ವಿಷಯವಾಗಿದ್ದಿತು. ಅಹ್ಮದ್ ವಿದೇಶಗಳಲ್ಲಿ ಅತ್ಯುನ್ನತ ಪದವಿ ಗಳಿಸಿ, ತಾಯ್ನಾಡಿನಲ್ಲಿ ಉನ್ನತ ಹುದ್ದೆ ಅಲಂಕರಿಸಬೇಕೆಂದು ಕುಟುಂಬದವರ ಅಸೆಯಾಗಿದ್ದಿತು. ಅಲೆಕ್ಸಾಂಡ್ರಿಯಾ ವಿಶ್ವವಿದ್ಯಾಲಯದಿಂದ ರಸಾಯನ ಶಾಸ್ತ್ರದಲ್ಲಿ ಪದವಿ ಗಳಿಸಿದ ಅಹ್ಮದ್ ಇಲ್ಲಿಯೇ ಬೋಧಕ ವೃತ್ತಿಯೊಂದಿಗೆ ಸಂಶೋಧನೆಗೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ನೊಂದಾಯಿತನಾದನು. ಅಹ್ಮದ್ ಹೆಚ್ಚಿನ ಸಂಶೋಧನೆಗಾಗಿ ಅಸಂಸಂಗಳಿಗೆ ಹೋಗಿ ನೆಲೆಸಿದನು. ಇಂಗ್ಲೀಷ ಭಾಷಾ ಜ್ಞಾನದ ಕೊರತೆ, ಸಾಂಸ್ಕೃತಿಕ ವೈದ್ಯಶ್ಯಗಳು ಆರಂಭದಲ್ಲಿ ಭಾರಿ ಅಡಚಣೆಗಳಾಗಿ ಗೋಚರಿಸಿದವು. 1973ರಲ್ಲಿ ಡಾಕ್ಟರೇಟ್ ಗಳಿಸಿ, 1974ರಲ್ಲಿ ಬಕ್ರ್ಲೆ ವಿಶ್ವವಿದ್ಯಾಲಯದಲ್ಲಿ ಬೋಧಕ ವೃತ್ತಿಗೆ ಸೇರಿ, ಅಲ್ಲಿನ ಪ್ರಾಧ್ಯಾಪಕನಾಗಿದ್ದ ಚಾಲ್ರ್ಸ್ ಹಾರ್ಸ್ನಿಂದ ವಿಜ್ಞಾನದ ಬಗೆಗೆ ಹೊಸ ದೃಷ್ಟಿ ಬೆಳೆಸಿಕೊಂಡನು. ಇಲ್ಲಿರುವಾಗ ಘನಗಳಲ್ಲಿ ಚೈತನ್ಯದ ವರ್ಗಾವಣೆ ಕುರಿತಾಗಿ ಸಂಶೋಧನಾ ಲೇಖನ ಪ್ರಕಟಿಸಿದನು. ಕ್ಯಾಲಿಫೊರ್ನಿಯಾ ಇನ್ಸ್ಟಿಟ್ಯೂಟ್ ಆ¥sóï ಟೆಕ್ನಾಲಜಿಯಲ್ಲಿ ರಸಾಯನ ವಿಭಾಗದ ಪ್ರಾಧ್ಯಾಪಕನಾದ ಅಹ್ಮದ್ ಗತಿಶೀಲ ರಸಾಯನಶಾಸ್ತ್ರ, ಜೀವಶಾಸ್ತ್ರದಲ್ಲಿನ ಸಮಸ್ಯೆಗಳ ಅಧ್ಯಯನ ಕೈಗೊಂಡನು. ನಾಲ್ಕೂ ಆಯಾಮದ ಅತಿ ಕ್ಷಿಪ್ರ ವಿವರ್ತನ ಹಾಗೂ ಸೂಕ್ಷ್ಮ ದರ್ಶಕ ಶಾಸ್ತ್ರದ ಅಭಿವೃದ್ಧಿಯಲ್ಲಿ ಶ್ರಮಿಸಿದನು. ಈ ವಿಧಾನದಿಂದ ಅಣ್ವಯಿಕ ಮಟ್ಟದಲ್ಲಿ ಸ್ಥಿತ್ಯಂತರದಲ್ಲಿರುವ ಅಣು ರಚನೆಗಳನ್ನು ಅರಿಯುವುದು ಸಾಧ್ಯವಾಯಿತು. ಇದಕ್ಕಾಗಿ 1999ರಲ್ಲಿ ಅಹ್ಮದ್ ರಸಾಯನಶಾಸ್ತ್ರದಲ್ಲಿನ ನೊಬೆಲ್ ಪ್ರಶಸ್ತಿಯಿಂದ ಪುರಸ್ಕೃತನಾದನು.
ಆ್ಯಲನ್, ಜಿ.ಮೆಕ್ಡಯಾರ್ಮಿಡ್ (1927--) -2000
Alan G. MacDiarmid
ನ್ಯೂಜಿಲ್ಯಾಂಡ್-ರಸಾಯನಶಾಸ್ತ್ರ-ವಾಹಕಶೀಲ ಪಾಲಿಮರ್ ಪಡೆದಾತ.
14 ಏಪ್ರಿಲ್ 1927ರಂದು ಮ್ಯಾಸ್ಟೆರ್ಟನ್ನಲ್ಲಿ ಆ್ಯಲನ್ ಜನನವಾಯಿತು. ಈತನ ತಂದೆ ಇಂಜಿನಿಯರಾಗಿದ್ದು, 1930ರ ಆರ್ಥಿಕ ಸಂಕಷ್ಟದ ದಿನಗಳಲ್ಲಿ ಬಹು ಕಷ್ಟದಿಂದ ಮಕ್ಕಳನ್ನು ಸಾಕಿ ವಿದ್ಯಾಭ್ಯಾಸ ಒದಗಿಸಿದನು. ಇಬ್ಬರು ಅಣ್ಣಂದಿರು, ಒಬ್ಬ ಅಕ್ಕನೊಂದಿಗೆ ಆ್ಯಲನ್ ಬರಿಗಾಲಿನಲ್ಲಿ ಶಾಲೆಗೆ ಹೋಗುತ್ತಿದ್ದನು. ಇದು ಆ ಕಾಲದಲ್ಲಿ ಬಡಮಕ್ಕಳಲ್ಲಿ ಇದು ಸರ್ವೇ ಸಾಮಾನ್ಯ ಸಂಗತಿಯಾಗಿದ್ದಿತು. ಬಡತನ ಆ್ಯಲನ್ನ್ನು ಸ್ವಾವಲಂಬಿಯಾಗುವಂತೆ ಹಣದ ಮೌಲ್ಯ ಅರಿಯುವಂತೆ ಮಾಡಿತು. ಎರಡು ಕೋಣೆಗಳ ಮಾಧ್ಯಮಿಕ ಶಾಲೆಯಲ್ಲಿ ಇನ್ನಿತರ ಬಡ ಹಿಂದುಳಿದ ಮಕ್ಕಳೊಂದಿಗೆ ಆ್ಯಲನ್ ಅನುಭವ ಪ್ರಪಂಚ ಸಮೃದ್ಧಗೊಂಡು ಹಿಗ್ಗಿತು. ಬೆಳಿಗ್ಗೆ ಹಾಲು ಮಾರುತ್ತಾ, ಬಿಡುವಿನ ವೇಳೆಯಲ್ಲಿ ತಾಯಿಗೆ ನೆರವೀಯುತ್ತಾ ಆ್ಯಲನ್ ಜೀವನ ಸಾಗಿತು. ಹತ್ತನೇ ವರ್ಷದಲ್ಲಿರುವಾಗ ತನ್ನ ತಂದೆ ಇಂಜಿನಿಯರಿಂಗ್ ಪದವಿಯಲ್ಲಿದ್ದಾಗ ಓದುತ್ತಿದ್ದ ರಸಾಯನಶಾಸ್ತ್ರದ ಪುಸ್ತಕ ಆ್ಯಲನ್ನ್ನು ಬಹುವಾಗಿ ಆಕರ್ಷಿಸಿತು. ಇದರಿಂದ ಸ್ಥಳೀಂiÀi ಗ್ರಂಥಾಲಯದಿಂದ ಬಾಯ್ ಕೆಮಿಸ್ಟ್ ಹೆಸರಿನ ಪುಸ್ತಕ ತಂದು ಓದತೊಡಗಿದನು. ಅದರಲ್ಲಿ ಆಸಕ್ತಿ ತೀವ್ರವಾಗತೊಡಗಿತು. ಆ ಪುಸ್ತಕವನ್ನು ಸತತವಾಗಿ ಒಂದು ವರ್ಷಗಳ ಕಾಲ ನವೀಕರಿಸಿ ಕೊಂಡನು. ಆ್ಯಲನ್ ಹದಿನಾರನೇ ವಯಸ್ಸಿನಲ್ಲಿರುವಾಗ, ಅತ್ಯಲ್ಪ ಸೌಲಭ್ಯಗಳೊಂದಿಗೆ ಆತನ ತಂದೆ ನಿವೃತ್ತನಾದನು. ಇದರಿಂದಾಗಿ ಆ್ಯಲನ್ ಶಾಲೆಯನ್ನು ತೊರೆದು ವಿಕ್ಟೋರಿಯಾ ವಿಶ್ವವಿದ್ಯಾಲಯದ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದಲ್ಲಿ ಅತ್ಯಲ್ಪ ಸಂಬಳಕ್ಕಾಗಿ ಸಹಾಯಕನಾಗಿ ಸೇರಿಕೊಂಡನು. ಈ ವಿಭಾಗದಲ್ಲಿ ಆಗ ಕೇವಲ ಇಬ್ಬರೇ ವಿಧ್ಯಾರ್ಥಿಗಳಿದ್ದರು. ಇಲ್ಲಿಯೇ ಅರೆಕಾಲಿಕ ವಿದ್ಯಾರ್ಥಿಯಾಗಿ ಸೇರಿದ ಆ್ಯಲನ್ ಸ್ನಾತಕೋತ್ತರ ಪದವಿಯನ್ನು ಗಳಿಸಿದನು. 1950ರಲ್ಲಿ ¥sóÀÅಲ್ಬ್ರೈಟ್ ವಿದ್ಯಾರ್ಥಿ ವೇತನ ಪಡೆದು ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾದನು. ಆ್ಯಲನ್, ಹೀಗರ್ನೊಂದಿಗೆ ವಾಹಕಶೀಲ ಪಾಲಿಮರ್ಗಳನ್ನು ತಯಾರಿಸಿ, ಅದರ ಅಧ್ಯಯನ ನಡೆಸಿದನು. 1975ರಲ್ಲಿ ಜಪಾನಿನ ಶಿರಾಕವಾನೊಂದಿಗೆ ಸಕಲುಷಿತಗೊಳಿಸಿದ (ಆoಠಿeಜ) ಪಾಲಿ ಅಸಿಟಿಲೇನ್ ವಾಹಕಶೀಲ ಸಾಮಾಗ್ರಿಯನ್ನು ತಯಾರಿಸಿದನು. ಇದಕ್ಕಾಗಿ 2000ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದನು
ಆ್ಯಲನ್ , ಹೀಗೆರ್ –(1936--)- 2000
Alan, J. Heeger
ಅಸಂಸಂ-ಭೌತಶಾಸ್ತ್ರ-ವಾಹಕ ಪಾಲಿಮರ್’ಗಳನ್ನು ಕುರಿತಾಗಿ ಸಂಶೋಧಿಸಿದಾತ.
ಆ್ಯಲನ್ ಅಯೋವಾ ರಾಜ್ಯದ ಸಿಯೋಕ್ಸ್ ನಗರದಲ್ಲಿ 22 ಜನವರಿ 1936 ರಂದು ಜನಿಸಿದನು. ಆ್ಯಲನ್ ತಾತ ರಷ್ಯದ ಯಹೂದಿಯಾಗಿದ್ದು 1904ರಲ್ಲಿ ಅಸಂಸಂಗಳಿಗೆ ವಲಸೆ ಬಂದಿದ್ದನು. ಆ್ಯಲನ್ 9 ವರ್ಷದವನಿರುವಾಗ ಆತನ ತಂದೆ ಹೃದಯಾಘಾತದಿಂದ ಮೃತನಾದನು. ನಂತರ ಆ್ಯಲನ್ ತಾಯಿ ತನ್ನ ಸೋದರಿಯ ಕುಟುಂದೊಂದಿಗೆ ಸೇರಿ ಒಂಟಿಯಾಗಿ ಮಕ್ಕಳನ್ನು ಸಾಕಿದಳು. ಬಾಲ್ಯದಿಂದಲೇ ಮಕ್ಕಳು ಉನ್ನತ ವಿಧ್ಯಾಭ್ಯಾಸ ಹೊಂದುವಂತೆ ಪ್ರೇರೇಪಿಸುತ್ತಿದ್ದಳು. ಆ್ಯಲನ್ ತಂದೆ ಹಾಗೂ ತಾಯಿಯ ಕಡೆಯಲ್ಲಿ ಯಾರೊಬ್ಬರು ಕಾಲೇಜಿನ ಮೆಟ್ಟಿಲು ಹತ್ತಿರಲಿಲ್ಲ. ನೆಬ್ರಾಸ್ಕ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಪದವಿಗೆ ಸೇರಿದ ಆ್ಯಲನ್ ನಂತರ ಭೌತಶಾಸ್ತ್ರಕ್ಕೆ ಬದಲಾಯಿಸಿಕೊಂಡನು. ನಂತರ ಕ್ಯಾಲಿಫೊರ್ನಿಯಾದ ಪಾಲೋ ಆಲ್ಟೋದಲ್ಲಿರುವ ಲಾರ್ಹೆಡ್ ಅಂತರಿಕ್ಷ ಹಾಗೂ ಕ್ಷಿಪಣಿ ವಿಭಾಗದಲ್ಲಿ ಕೆಲಸಮಾಡುತ್ತಲೇ ಅರೆಕಾಲಿಕ ಸಂಶೋಧಕ ವಿದ್ಯಾರ್ಥಿಯಾಗಿ ಆ್ಯಲನ್ ಶ್ರಮಿಸಿದನು. ಪೆನ್ಸೆಲ್ವೇನಿಯಾ “ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದಲ್ಲಿ ಸಾಂದ್ರೀಕೃತ ದ್ರವ್ಯದ ಪ್ರಯೋಗಗಳಲ್ಲಿ ಭಾಗಿಯಾದನು. ಲೋಹಗಳಲ್ಲಿನ ಕಾಂತೀಯ ಕಲುಷಿತಗಳು (ಒಚಿgಟಿeಣiಛಿ ಆoಠಿes) ಹಾಗೂ ಕೊಂಡೋ ಪರಿಣಾಮಗಳ ಕುರಿತಾಗಿ ಅಧ್ಯಯನ ನಡೆಸಿದ ಅ್ಯಲನ್ಗೆ ಅ್ಯಂಥೋನಿ ಗ್ಯಾರಿಟೋನಿಂದ ಟೆಟ್ರಾಸಯನೋಕ್ವಿನೋಡಿಮಿಥೇನ್ (ಟೆಸಿಎನ್ಕ್ಯು) ಸಂಯುಕ್ತದ ಪರಿಚಯವಾಯಿತು. 1970ರಿಂದ 1975ರವರೆಗೆ ಆ್ಯಂಥೋನಿಯೊಂದಿಗೆ, ಅಣ್ವಯಿಕ ಹರಳುಗಳ ಅಸ್ಥಿರತೆಯನ್ನು ಅರಿಯಲು ಯತ್ನಿಸಿದನು. 1975ರಲ್ಲಿ ಬಹು ವಿಶೇಷವಾದ ಸಲ್ಫರ್ ನೈಟ್ರೈಡ್ ಲೌಹಿಕ ಪಾಲಿಮರ್ (Metallic Polymer) ಬಗೆಗೆ ವಿಜ್ಞಾನಿಗಳು ಆಸಕ್ತಿ ತೋರತೊಡಗಿದರು. ಆ್ಯಲನ್, ಅ್ಯಲನ್ ಡಯಾರ್ಮಿಡ್ನೊಂದಿಗೆ ಈ ಹೊಸ ಪಾಲಿಮರ್ಗಳ ಸಂಶ್ಲೇಷಣೆ ಪ್ರಾರಂಭಿಸಿದನು. ಜಪಾನಿಗೆ ಭೇಟಿ ನೀಡಿದ ಮೆಕ್ಡಯಾರ್ಮಿಡ್ ವರ್ಣ ರಂಜಿತ ಸ್ಪಟಿಕ ಲೇಪನಗಳನ್ನು ಹಿಡೆಕಿ ಶಿರಾಕವಾನಿಗೆ ತೋರಿಸಿದನು. ಇಂತಹುದೇ ಪಾಲಿಅಸಿಟಲೀನ್ ಬಹ್ವಂಗಿಯನ್ನು (Polymer) ಹಿಡೆಕಿ ಸಹ ಪಡೆದಿದ್ದನು. ಅತ್ಯಲ್ಪ ಕಾಲದಲ್ಲೇ ಈ ಬಗೆಯ ಪಾಲಿಮರ್ಗಳು ಅವಾಹಕ ಹಾಗೂ ವಾಹಕಗಳ ಸ್ಥಿತ್ಯಂತರದಲ್ಲಿರುವುವೆಂದು ತಿಳಿದು ಬಂದಿತು. ವಾಹಕಶೀಲ ಪಾಲಿಮರ್ಗಳ ಅಭಿವೃದ್ಧಿಯಲ್ಲಿ ಆ್ಯಲನ್ ವಹಿಸಿದ ಗಮನಾರ್ಹ ಕಾರ್ಯಕ್ಕಾಗಿ 2000ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಲಭಿಸಿತು. 1990ರ ನಂತರ ರಿಚರ್ಡ್ ಫ್ರೆಂಡ್ ಪಾಲಿಮರ್ ಎಲ್ಇಡಿಗಳನ್ನು (LED-Light Emmitting Diode) ವಾಣಿಜ್ಯ ಬಳಕೆಗೆ ತಂದನು. ಇವು ದ್ಯುತಿಕೋಶ, ದ್ಯುತಿ ಪತ್ತೆಕಾರಕ ಸೇರಿದಂತೆ ಹಲವಾರು ಕಡೆ ಬಳಕೆಯಾಗುತ್ತಿವೆ.
ಹಿಡೆಕಿ, ಶಿರಾಕಾವ (1936--)
Hideki , Shirakawa 2000
ಜಪಾನ್-ರಸಾಯನಶಾಸ್ತ್ರ-ಪಾಲಿಟಿಸಿಟಿಲೇನ್ನ ವಾಹಕತೆ ಕಾರಣವಾದ ರಾಸಾಯನಿಕ ಕ್ರಿಯಾಶೀಲತೆ ವಿವರಿಸಿದಾತ.
ಹಿಡೆಕಿ 1936ರಲ್ಲಿ ಟೋಕಿಯೋದಲ್ಲಿ ಜನಿಸಿದನು. ಹಿಡೆಕಿ ಜಪಾನ್ನ ಹೊನ್ಷು ದ್ವೀಪದ ತಕಾಮಾಮ ಎಂಬ ಸಣ್ಣ ಪಟ್ಟಣದಲ್ಲಿ ಬೆಳೆದನು. ಇದು ಬೆಟ್ಟ, ಗುಡ್ಡ, ನದಿಗಳಿಂದ ಆವೃತ್ತನಾದ ಸುಂದರ ಪ್ರದೇಶವೆಂದು ಖ್ಯಾತಿವೆತ್ತಿದೆ. ಬಾಲಕನಾಗಿರುವಾಗ ಸಸ್ಯ, ಕೀಟಗಳ ಸಂಗ್ರಹಣೆ ಹಿಡೆಕಿಯ ನೆಚ್ಚಿನ ಹವ್ಯಾಸವಾಗಿದ್ದಿತು. 1957ರಲಿ ಟೋಕಿಯೋ ಇನ್ಸ್ಟಿಟ್ಯೂಟ್ ಆಫ್ಟೆಕ್ನಾಲಜಿ ಸೇರಿದ ಹಿಡೆಕಿ 1966ರಲ್ಲಿ ಪಾಲಿಮರ್ ತಂತ್ರಜ್ಞಾನದಲ್ಲಿ ಡಾಕ್ಟರೇಟ್ ಗಳಿಸಿದನು. ಪಾಲಿಅಸಿಟಿಲಿನ್ನ ಬಹ್ವಂಗೀಕರಣದ ಕ್ರಿಯಾ ವಿನ್ಯಾಸವನ್ನು ಝೀಗ್ಲರ್-ನಟ್ಟ ಕ್ರಿಯಾಪ್ರೇರಕ (Catalyst) ಬಳಸಿ ಅರಿಯಲು ಹಿಡೆಕಿ ಯತ್ನಿಸಿದನು. ಆದರೆ ಈ ಪ್ರಯೋಗ ನಿರೀಕ್ಷಿತ ಫಲಿತಾಂಶ ನೀಡುವಲ್ಲಿ ವಿಫಲವಾಯಿತು. ಪಾಲಿಅಸಿಟಿಲೇನ್ನ್ನು ಬೇರೆ ವಿಜ್ಞಾನಿಗಳು ಕಪ್ಪು ಪುಡಿಯ ರೂಪದಲ್ಲಿ ಪಡೆದಿದ್ದರು. ಆದರೆ ಹಿಡೆಕಿ ಪಡೆದಿದ್ದ ಪಾಲಿ ಅಸಿಟಿಲೇನ್ ವರ್ಣ ತಂತುಗಳಿಂದ ಕೂಡಿದ್ದಿತು. ಇದರ ಕಾರಣ ಹುಡುಕಲು ಹಿಡೆಕಿ ಯತ್ನಿಸಿದನು. ಅಗತ್ಯಕ್ಕಿಂತಲೂ ಸಹಸ್ರಪಟ್ಟು ಅಧಿಕ ಕ್ರಿಯಾಪ್ರೇರಕ ಬಳಸಿದ್ದೇ ಇದಕ್ಕೆ ಕಾರಣವೆಂದು ಇದರಿಂದ ಕ್ರಿಯಾವೇಗ ತೀವ್ರಗೊಂಡು, ರಾಸಾಯನಿಕ ಕ್ರಿಯೆಯಲ್ಲಿ ಬಿಡುಗಡೆಯಾಗುವ ಅನಿಲಗಳು ಬಹ್ವಂಗೀಕರಣಗೊಂಡಿವೆಯೆಂದು (Polymerisation) ತಿಳಿದು ಬಂದಿತು. ಇದರ ಫಲಿತಾಂಶವಾಗಿ ನಿಷ್ಕಾಸ ಅನಿಲ (Exhaust Gas) ಮಿಂಚುವ ತೆಳು ಪೆÇರೆಯಾಗಿ ಸಾಂದ್ರಗೊಂಡಿತು. ಇದು ಪಾಲಿ ಅಸಿಟಿಲಿನ್ನ್ನು ತೆಳುಪೆÇರೆಯಂತೆ ಪಡೆಯುವ ಹೊಸ ಸಾಧ್ಯತೆಯನ್ನು ತಂದಿತ್ತಿತು. ಅಸಂಸಂದಲ್ಲಿ ಅ್ಯಲನ್ ಮೆಕ್ ಡಿಯಾಮರ್ಡ್ ಸಹ ಇಂತಹುದೇ ವಿದ್ಯಾಮಾನ ವೀಕ್ಷಿಸಿದ್ದನು. ಹಿಡೆಕಿಯ ಈ ಪ್ರಯೋಗ ವೀಕ್ಷಿಸಿದ ಆ್ಯಲನ್ ಹಿಡೆಕಿಯನ್ನು ಅಸಂಸಂಗಳ ಪೆನ್ಸೆಲ್ವೇನಿಯಾ ವಿಶ್ವವಿದ್ಯಾಲಯಕ್ಕೆ ಬರುವಂತೆ 1976ರಲ್ಲಿ ಆಹ್ವಾನಿಸಿದರು. ಇಲ್ಲಿ ಹೀಗೆರ್ ಮಾರ್ಗದರ್ಶನದಲ್ಲಿ ಹಿಡೆಕಿ ರಾಸಾಯನಿಕ ಸಕಲುಷಿತಗೊಳಿಕೆಯಿಂದ (Doping) ವೈದ್ಯುತ್ ವಾಹಕತೆ ಪಾಲಿಅಸಿಟಿಲಿನ್ನಲ್ಲಿ ಕೋಟ್ಯಾಂತರ ಪಟ್ಟು ಅಧಿಕವಾಗುವುದನ್ನು ಗುರುತಿಸಿದರು. ಹಿಡೆಕಿಯ ಮುಂದುವರೆದ ಸಂಶೋಧನೆಗಳಿಂದ ಪಾಲಿಟಿಸಿಟಿಲೇನ್ನ ವಾಹಕತೆ ಕಾರಣವಾದ ರಾಸಾಯನಿಕ ಕ್ರಿಯಾಶೀಲತೆ ಸುಸ್ಪಷ್ಟಗೊಂಡಿತು. ಈ ಸಂಶೋಧನೆಗಳಿಗಾಗಿ ಹಿಡೆಕಿ 2000ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.