ರಾಂಟ್ಜೆನ್, ವಿಲ್ಹೆಲ್ಮ್ ಕೊನ್ರಾರ್ಡ್ (1845-1923) 1901
Rontgen , Wilheim Konarad
ಜರ್ಮನಿ-ಪ್ರಯೋಗಶೀಲ ಭೌತಶಾಸ್ತ್ರ; ಕ್ಷ- ಕಿರಣಗಳನ್ನು ಅನಾವರಣಗೊಳಿಸಿದಾತ.
ರಾಂಟ್ಜೆನ್, ಜೂರಿಕ್ ಪಾಲಿಟೆಕ್ನಿಕ್ನಲ್ಲಿ ಇಂಜಿನಿಯರಿಂಗ್ ಪದವಿಗೆ ಸೇರಿದನು. ಭೌತಶಾಸ್ತ್ರದ ಆಕರ್ಷಣೆಗೊಳಗಾಗಿ, ಇಂಜಿನಿಯರಿಂಗ್ನ್ನು ಮೊಟಕುಗೊಳಿಸಿ ವಿಜ್ಞಾನದ ಪದವೀಧರನಾದನು. ಮುಂದೆ ಜರ್ಮನಿಯ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಬೋಧಿಸಿದನು,. 1895ರಲ್ಲಿ ವುರ್ಜಬರ್ಗ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿದ್ದಾಗ ಕ್ಷ- ಕಿರಣಗಳನ್ನು ಅನಾವರಣಗೊಳಿಸಿದನು. ಅಲ್ಪ ಒತ್ತಡದಲ್ಲಿರುವ ಅನಿಲದ ನಳಿಕೆಯ ಮೂಲಕ ವಿದ್ಯುತ್ ಹಾಯಿಸಿದಾಗ, ಕೊಣೆಯ ಒಂದು ಕತ್ತಲ ಮೂಲೆಯಲ್ಲಿದ್ದ ಪ್ಲಾಟಿನೋಸೈನೈಡ್ ರಾಸಾಯನಿಕ ಲೇಪಿತಗೊಂಡ ಹಲಗೆ ಬೆಳಗುವುದನ್ನು ರಾಂಟ್ಜೆನ್ ಗುರುತಿಸಿದನು. ಸ್ವಲ್ಪ ಕಾಲದ ಪರಿಶೀಲನೆಯ ನಂತರ ನಳಿಕೆಯಲ್ಲಿ ವಿದ್ಯುತ್ ಹಾಯಿಸಿದಾಗ ಹೊರಹೊಮ್ಮುವ ವಿಕಿರಣದಿಂದಾಗಿ,ಹಲಗೆ ಬೆಳಗುವುದು ಖಚಿತವಾಯಿತು. ಈ ವಿಕಿರಣಗಳನ್ನು ರಾಂಟ್ಜೆನ್ ಕ್ಷ-ಕಿರಣಗಳೆಂದು ಕರೆದನು. ಇವು ಕ್ಯಾಥೋಡ್ ಕಿರಣಗಳಿಗಿಂತಲೂ, ಪ್ರಬಲವಾಗಿದ್ದು, ಸರಳ ರೇಖೆಯಲ್ಲಿ ಸಾಗಿ, ಕಾಂತ ಅಥವಾ ವೈದ್ಯುತ್ ಕ್ಷೇತ್ರಗಳಿಂದ ಪಲ್ಲಟಗೊಳ್ಳುವುದಿಲ್ಲವೆಂದು ರಾಂಟಜೆನ್ ತಿಳಿದನು. ಕ್ಷ ಕಿರಣಗಳು ಲೋಹದ ಫಲಕಗಳ ಮೂಲಕ, ದೇಹದ ಮೂಲಕ ಹಾದು ಹೋಗುವ ಸಾಮಥ್ರ್ಯ ಹೊಂದಿದ್ದು, ಛಾಯಾಗ್ರಹಣದ ರೀತಿಯಲ್ಲಿ ಹಾಳೆಯ ಮೇಲೆ ತಾವು ತೂರಿ ಹೋದ ವಸ್ತುವಿನ ಚಿತ್ರಗಳನ್ನು ಮೂಡಿಸುತ್ತಿದ್ದವು. ರಾಂಟ್ಜೆನ್ ಇವು ಬೆಳಕಿನಂತಹ ಆದರೆ ಅದಕ್ಕಿಂತಲೂ ಹ್ರಸ್ವ ತರಂಗಾಂತರದ ವೈದ್ಯುತ್ ಕಾಂತೀಯ ವಿಕಿರಣಗಳೆಂದು ವಿವರಿಸಿದನು. 1912ರಲ್ಲಿ ವಾನ್, ಲೆನಾರ್ಡ್ ಸಾಕ್ಷಿ ಒದಗಿಸಿದನು. 1901ರಲ್ಲಿ ಭೌತಶಾಸ್ತ್ರದ ಪ್ರಥಮ ನೊಬೆಲ್ ಪ್ರಶಸ್ತಿ ಗಳಿಸಿದ ರಾಂಟ್ಜೆನ್, ಗೌರವಾರ್ಥವಾಗಿ ಕ್ಷ-ಕಿರಣಗಳನ್ನು ರಾಂಟ್ಜೆನ್ ಕಿರಣಗಳೆಂದು ಹಾಗೂ ಕ್ಷ-ಕಿರಣ ಗುಟ್ಟಿಯ (Dose) ಏಕಮಾನಕ್ಕೆ ರಾಂಟ್ಜೆನ್ ಎಂದು ಹೆಸರಿಸಲಾಗಿದೆ. ಕ್ಷ-ಕಿರಣ ಭೌತಶಾಸ್ತ್ರ, ವೈದ್ಯಕೀಯ ಅಧ್ಯಯನಗಳಲ್ಲಿ ಕ್ರಾಂತಿ ತಂದು ದೈನಂದಿನ ಜನಜೀವನದಲ್ಲಿ ಹಾಸು ಹೊಕ್ಕಾಯಿತು. 1912ರಲ್ಲಿ ಬ್ರಾಗ್ ಕ್ಷ-ಕಿರಣಗಳನ್ನು ಬಳಸಿ ಸ್ಪಟಿಕಗಳ ಅಣು ರಚನೆ ನಿರ್ಧರಿಸಿದನು. ರಾಂಟ್ಜೆನ್ ತನ್ನ ಯಾವ ಸಂಶೋಧನೆಗಳಿಗೂ ಏಕಸ್ವಾಮ್ಯ ಪಡೆಯಲಿಲ್ಲ. ಅಷ್ಟೇ ಅಲ್ಲದೆ ಬವೇರಿಯಾದ ರಾಜ ನೀಡಿದ ವಾನ್ ಬಿರುದು ತಿರಸ್ಕರಿಸಿ, ಜನಪರ ನಿಲುವನ್ನು ತಳೆದನು. 1920ರಲ್ಲಿ ಪ್ರಾರಂಭವಾದ ಹಣದುಬ್ಬರಕ್ಕೆ ನಲುಗಿದ ರಾಂಟಜೆನ್ ಬಡತನದಲ್ಲಿಯೇ ಮರಣ ಹೊಂದಿದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಲೊಹ್ರೆಂಟ್ಸ್, ಹೆಂಡ್ರಿಕ್ ಅ್ಯಂಟನ್ (1903-1971) 1902
Lorentz , Hendrick Antoon
ಡೆನ್ಮಾರ್ಕ್-ಸೈದ್ಧಾಂತಿಕ ಭೌತಶಾಸ್ತ್ರ- ಎಲೆಕ್ಟ್ರಾನ್ ಹಾಗೂ ವೈದ್ಯುತ್ ಕಾಂತೀಯ ಶಾಸ್ತ್ರಗಳ ಸಿದ್ಧಾಂತಗಳಿಗೆ ಗಣನೀಯ ಕೊಡುಗೆ ನೀಡಿದಾತ.
ಲೊಹ್ರೆಂಟ್ಸ್, ಅರ್ನ್ಹೆಮ್ ಹಾಗೂ ಲೀಡೆನ್ಗಳಲ್ಲಿ ಅಧ್ಯಯನ ಪೂರೈಸಿದನು. ಇಪ್ಪತ್ತನಾಲ್ಕನೇ ವಯಸ್ಸಿನಲ್ಲಿ ಬೆಳಕಿನ ಪ್ರತಿಫಲನ ಕುರಿತು ಈತ ಪ್ರಕಟಿಸಿದ ಲೇಖನದಿಂದಾಗಿ ಅವನು ಲೀಡೆನ್ನ ಭೌತಶಾಸ್ತ್ರ ವಿಭಾಗದ ಪೀಠ ಅಲಂಕರಿಸಿದನು. 1912 ಟೆಯ್ಲರ್ ಇನ್ಸ್ಟಿಟಿಟ್ಯೂಟ್ನ ನಿರ್ದೇಶಕನಾದನು. ಲೊಹ್ರೆಂಟ್ಸ್ ಸಂಪ್ರಬಂಧ ಎರಡು ಮಾಧ್ಯಮಗಳಿರುವಾಗ ಮ್ಯಾಕ್ಸ್ವೆಲ್ನ ತರಂಗದ ಸಮೀಕರಣಗಳನ್ನು ಹೇಗೆ ಪರಿಹರಿಸಬೇಕೆಂದು ತೋರಿಸಿತು. ಚಲಿಸುತ್ತಿರುವ ಮಾಧ್ಯಮದಲ್ಲಿ ಬೆಳಕಿನ ಸ್ವಭಾವ ಕುರಿತು ಫ್ರೆನೆಲ್ ಸೂತ್ರವನ್ನು ಲೊಹ್ರೆಂಟ್ಸ್ ವಿಶ್ಲೇಷಿಸಿದನು,. 1892ರಲ್ಲಿ ಎಲೆಕ್ಟ್ರಾನ್ ಸಿದ್ಧಾಂತ ಪ್ರಕಟಿಸಿ, ಎಲೆಕ್ಟ್ರಾನ್ಗಳು ಈಥರ್ನಲ್ಲಿ ಹುದುಗಿರುವುವೆಂದೂ, ಅವು ಮ್ಯಾಕ್ಸ್’ವೆಲ್ನ ವೈದ್ಯುತ ಕಾಂತೀಯ ತರಂಗಗಳನ್ನು ವರ್ಗಾಯಿಸಿ, ತಮ್ಮದೇ ಆದ ಕ್ಷೇತ್ರ ಬಲವನ್ನು ಹೊಂದಿವೆಯೆಂದು ಲೊಹ್ರೆಂಟ್ಸ್ ಬಲವಾಗಿ ವಾದಿಸಿದನು. 1889ರಲ್ಲಿ ಹೀವಿಸೈಡ್ ಸ್ವತಂತ್ರವಾಗಿ ಇದೇ ಬಗೆಯ ಬಲಗಳನ್ನು ಸೂಚಿಸಿದ್ದನು. ಲೊಹ್ರೆಂಟ್ಸ್ ಸೂಕ್ಷ್ಮ ಮಟ್ಟದಲ್ಲಿ ಕ್ರಿಯಾಶೀಲನಾಗಿರುವ ಎಲೆಕ್ಟ್ರಾನ್ಗಳು ಹೇಗೆ ಸ್ಥೂಲ ರೂಪದಲ್ಲಿ ಎದ್ದು ಕಾಣುವ ಪರಿಣಾಮಗಳಿಗೆ ಕಾರಣವೆಂದು ವಿವರಿಸಿದನು. 1899ರಲ್ಲಿ ಈತ ಎಲೆಕ್ಟ್ರಾನ್ ಎಂಬ ಪದ ಟಂಕಿಸಿದನು. ಎಲೆಕ್ಟ್ರಾನ್ಗಳನ್ನು ಕ್ಯಾಥೋಡ್ ಕಿರಣಗಳಿಗೆ ಸಂಬಂಧಿಸಿದನು. ಎಲೆಕ್ಟ್ರಾನ್ಗಳು ಕಂಪಿಸಿದಾಗ,. ಮ್ಯಾಕ್ಸ್ವೆಲ್ ಸೂಚಿಸಿದ ವೈದ್ಯುತ್ ಕಾಂತೀಯ ಅಲೆಗಳು ಉದಿಸುತ್ತವೆಯೆಂದು ಲೊಹ್ರೆಂಟ್ಸ್ ಪ್ರತಿಪಾದಿಸಿದನು. ಝೀಮನ್ ಬೆಳಕಿನ ರೋಹಿತದ ಸಾಲುಗಳು ಕಾಂತಕ್ಷೇತ್ರದ ಪ್ರಭಾವದಲ್ಲಿ ಸೀಳಲ್ಪಡುವ ಝೀಮನ್ ಪರಿಣಾಮ ಗುರುತಿಸಿದನು. ಝೀಮನ್ ಹಾಗೂ ಲೊಹ್ರೆಂಟ್ಸ್ 1902ರ ನೊಬೆಲ್ ಪ್ರಶಸ್ತಿ ಪಡೆದರು. ಭೌತಶಾಸ್ತ್ರದಲ್ಲಿ ಎಲೆಕ್ಟ್ರಾನ್ ಸಿದ್ಧಾಂತ ಅತ್ಯಂತ ಯಶಸ್ವಿಯಾಯಿತಲ್ಲದೆ, ಅದು ದ್ಯುತಿ ವೈದ್ಯುತ್ ಪರಿಣಾಮ (Photoelectric Effect) ವಿವರಿಸಲು ಸೋತಾಗ ಅದನ್ನು ಪರಿಷ್ಕರಿಸಲು ಹೊಸದಾದ ಕ್ವಾಂಟಂ ಸಿದ್ಧಾಂತ ಸೃಜಿಸಲಾಯಿತು. ಲೊಹ್ರೆಂಟ್ಸ್ , ಮೈಕೆಲ್ಸನ್ ಮತ್ತು ಮಾರ್ಲೆ ಪ್ರಯೋಗವನ್ನು ವಿಶ್ಲೇಷಿಸಿ, ಚಲಿಸುತ್ತಿರುವ ಕಾಯಗಳು ಅವು ಚಲಿಸುತ್ತಿರುವ ದಿಕ್ಕಿನಲ್ಲಿ ಸ್ವಲ್ಪ ಸಂಕೋಚನಗೊಳ್ಳುತ್ತಿದೆಯೆಂದು ಸಾಧಿಸಿದನು. ಫಿûಟ್ಜೆರಾಲ್ಡ್ ಸ್ವತಂತ್ರವಾಗಿ ಇಂತಹುದೇ ತೀರ್ಮಾನಗಳಿಗೆ ಬಂದಿದ್ದನು. ಅದಕ್ಕಾಗಿ ಇದನ್ನು ಫಿಟ್ಜೆರಾಲ್ಡ್-ಲೊಹ್ರೆಂಟ್ಸ್ ಸಂಕುಚನವೆಂದು ಕರೆಯುತ್ತಾರೆ. 1904ರಲ್ಲಿ ಲೊಹ್ರೆಂಟ್ಸ್ ಇದಕ್ಕೆ ಗಣಿತೀಯ ವಿವರಣೆ ಅಭಿವೃದ್ದಿಗೊಳಿಸಿದನು. 1905ರಲ್ಲಿ ಐನ್ಸ್ಟೀನ್ರ ವಿಶೇಷ ಸಾಪೇಕ್ಷತಾ ಸಿದ್ಧಾಂತದಲ್ಲಿ ಇದು ತನ್ನ ಪರಿಪೂರ್ಣ ಅರ್ಥ ಕಂಡಿತು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಝೀಮನ್, ಪೀಟರ್ (1865-1943) 1902
Ziemann , Pieter
ಡೆನ್ಮಾರ್ಕ್-ಭೌತಶಾಸ್ತ್ರ- ಕಾಂತಕ್ಷೇತ್ರಗಳಲ್ಲಿ ರೋಹಿತದ ಸಾಲುಗಳು ಸೀಳುವುದನ್ನು ಅನಾವರಣಗೊಳಿಸಿದಾತ.
ಝೀಮನ್ ತಂದೆ ಕ್ಯಾರರಿನಸ್ ಝೀಮನ್ ಝಾನ್ನೆಮೈರ್ ಎಂಬ ಹಳ್ಳಿಯಲ್ಲಿ ಪಾದ್ರಿಯಾಗಿದ್ದನು. ಪೀಟರ್ 25 ಮೇ 1865 ರಂದು ಈ ಹಳ್ಳಿಯಲ್ಲೇ ಜನಿಸಿದನು. ಪೀಟರ್ ಝೀರಿಕ್ಝಿ ಪಟ್ಟಣದಲ್ಲಿ ಪ್ರೌಢಾಶಾಲಾ ವ್ಯಾಸಂಗ ಮುಗಿಸಿ ಅಭಿಜಾತ ಭಾಷೆಗಳ ಅಧ್ಯಯನಕ್ಕೆಂದು ಡೆಲ್ಫ್ಟ್ಗೆ ಹೋದನು. ಆ ಕಾಲದಲ್ಲಿ ಗ್ರೀಕ್, ಲ್ಯಾಟಿನ್ನಂತಹ ಭಾಷಾ ಪ್ರೌಢಿಮೆ ವಿಶ್ವವಿದ್ಯಾಲಯದ ಪ್ರವೇಶಕ್ಕೆ ಅತ್ಯವಶ್ಯಕವಾಗಿದ್ದವು. ಇಲ್ಲಿರುವಾಗ ಸಾರ್ವಜನಿಕ ನಿರ್ಮಾಣದ ವಿಭಾಗದ ಇಂಜಿನಿಯರ್ ಆಗಿದ್ದ ಡಾ. ಸಿ.ಲೆಲಿಯ ಮನೆಯಲ್ಲಿದ್ದನು. ಇದರಿಂದ ಪೀಟರ್’ಗೆ ತಾಂತ್ರಿಕ ಹಾಗೂ ವ್ಶೆಜ್ಞಾನಿಕ ವಿಷಯಗಳಲ್ಲಿ ಅಭಿರುಚಿ ಬೆಳೆಯಿತು. ಇಲ್ಲಿರುವಾಗಲೇ ಕ್ಯಾಮೆರ್ಲಿಂಗ್ ಒನ್ನೆಸ್ನ ಸಂಪರ್ಕ ಝೀಮನ್ಗೆ ಒದಗಿತು. ಮುಂದೆ 1913ರಲ್ಲಿ ಕ್ಯಾಮರ್ಲಿಂಗ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಕ್ಯಾಮರ್ಲಿಂಗ್, ಝೀಮನ್ಗಿಂತ ಹನ್ನೆರಡು ವರ್ಷ ದೊಡ್ಡವನಾಗಿದ್ದರೂ ಅವರಿಬ್ಬರ ಮಧ್ಯದ ಸಮಾನ ಮನಸ್ಕತೆಗೇನೂ ಕೊರತೆಯಿರಲಿಲ್ಲ. ಝೀಮನ್ ಶಾಖ, ವೈದ್ಯುತ್ ಭೌತಶಾಸ್ತ್ರಗಳಲ್ಲಿ ಹೊಂದಿದ್ದ ಪಾಂಡಿತ್ಯ, ಪ್ರಯೋಗಗಳನ್ನು ನಡೆಸುವಾಗ ತೋರುತ್ತಿದ್ದ ಕೌಶಲ್ಯ ಕ್ಯಾಮರ್ಲಿಂಗ್ನ ಮನ ಗೆದ್ದಿದ್ದಿತು. 1815ರಲ್ಲಿ ಝೀಮನ್ ಲೈಡ್ನ ವಿಶ್ವವಿದ್ಯಾಲಯ ಸೇರಿದನು. ಇಲ್ಲಿ ಕ್ಯಾಮರ್ಲಿಂಗ್ ಒನ್ನೆಸ್ ಹಾಗೋ ಲೊಹ್ರೆಂಟ್ಸ್ನ ಮಾರ್ಗದರ್ಶನ ದಕ್ಕಿತು. 1890ರಲ್ಲಿ ಪೀಟರ್, ಲೊಹ್ರೆಂಟ್ಸ್ನ ಸಹಾಯಕನಾಗಿ ನೇಮಕಗೊಂಡನು. ಇದರಿಂದ ಕೆರ್ ಪರಿಣಾಮವನ್ನು ವಿಸ್ತೃತವಾಗಿ ಅಧ್ಯಯನ ಮಾಡುವುದು ಸಾಧ್ಯವಾಯಿತು. 1893ರಲ್ಲಿ ಡಾಕ್ಟರೇಟ್ ಪದವಿಗಳಿಸಿ, ಸ್ಟ್ರಾಸ್ಬರ್ಗ್ನ ಕೊಹ್ಲ್’ರಾಷ್ ಸಂಸ್ಥೆ ಸೇರಿದನು. ಇಲ್ಲಿ ಕೊಹೆನ್ನ ಕೈಕೆಳಗೆ ಆರು ತಿಂಗಳಕಾಲ ಕೆಲಸ ಮಾಡಿದನು. 1894ರಲ್ಲಿ ಲೈಡೆನ್ಗೆ ಮರಳಿ 1895ರಿಂದ 1897ರವರೆಗೆ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದನು. ಇಲ್ಲಿ ಸೋಡಿಯಂ ಹಾಗೂ ಲಿಥಿಯಂ ಧಾತುವಿನ ರೋಹಿತದ ಸಾಲುಗಳು, ಕಾಂತಕ್ಷೇತ್ರದ ಪ್ರಭಾವದಲ್ಲಿ ಅಗಲಗೊಳ್ಳುವುದನ್ನು ಝೀಮನ್ ಗುರುತಿಸಿದನು. ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ರೋಹಿತದ ಸಾಲುಗಳು ಎರಡು ಮುರು ಸಾಲುಗಳಾಗಿ ಸೀಳಿ ಹೋಗುವುದು ಖಚಿತವಾಯಿತು. ಲೊಹ್ರೆಂಟ್ಸ್ ಪರಮಾಣುವಿನಲ್ಲಿ ಕಂಪಿಸುತ್ತಿರುವ ಎಲೆಕ್ಟಾನ್ಗಳೇ ಇದಕ್ಕೆ ಕಾರಣವೆಂದು ಹೇಳಿದ್ದನು. ಝೀಮನ್ ಪ್ರಯೋಗಗಳು ಇದಕ್ಕೆ ಸಾಕ್ಷಿಯೊದಗಿಸಿದವು. ಬೆಳಕಿನ ಪಥಕ್ಕೆ ಸಮಾಂತರದಲ್ಲಿ ಪ್ರಬಲ ಕಾಂತಕ್ಷೇತ್ರ ನಿರ್ಮಿಸಿದಾಗ ರೋಹಿತದ ಸಾಲುಗಳು ಎರಡಾಗಿಯೂ, ಲಂಬ ದಿಕ್ಕಿನಲ್ಲಿ ಕಾಂತಕ್ಷೇತ್ರವಿದ್ದಾಗ ಮೂರಾಗಿಯೂ ಸೀಳುತ್ತವೆ. ಬೊಹ್ರ್ನ ಪರಮಾಣು ಮಾದರಿ ಈ ವಿದ್ಯಾಮಾನವನ್ನು ವಿವರಿಸಬಲ್ಲದು. ಆದರೆ ಝೀಮನ್ ಪರಿಣಾಮದಲ್ಲಿ ಇವು ಹಲವಾಗಿ ಸೀಳುತ್ತಿದ್ದವು. ಇದಕ್ಕೆ ವಿವರಣೆ ನೀಡಲು ಪೂರ್ಣ ಪ್ರಮಾಣದ ಕ್ವಾಂಟಮ್ ಸಿದ್ಧಾಂತ ರೂಪು ತಳೆಯಬೇಕಾಯಿತು. ಪೂರ್ಣ ಪ್ರಮಾಣದ ಕ್ವಾಂಟಂ ಸಿದ್ಧಾಂತದಲ್ಲಿ ಎಲೆಕ್ಟ್ರಾನ್ಗಳು ಗಿರಕಿಯನ್ನು ಸಹ ಪರಿಗಣಿಸಲಾಯಿತು. ಇದಕ್ಕಾಗಿ ಉಹ್ಲೆನ್ಬೆಕ್, ಗೌಡ್ಸ್ಮಿತ್ 1926ರ ನೊಬೆಲ್ ಪ್ರಶಸ್ತಿ ಪಡೆದರು. 1902ರಲ್ಲಿ ಝೀಮನ್ ಹಾಗೂ ಲೊಹ್ರೆಂಟ್ಸ್, ಪರಮಾಣುಗಳ ಕಾಂತೀಯ ದೃಕ್ ಪರಿಣಾಮ ಹೊರಗೆಡವಿಟ್ಟಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದರು. 1908ರಲ್ಲಿ ಹ್ಯಾಲೆ ,ಝೀಮನ್ ಪರಿಣಾಮ ಬಳಸಿ ಸೂರ್ಯನ ಕಾಂತಕ್ಷೇತ್ರ ನಿರ್ಧರಿಸಿದನು. ಝೀಮನ್ ಪರಿಣಾಮದ ಅಧ್ಯಯನದ ಪಲವಾಗಿ ವೈದ್ಯುತ್ ಕಾಂತೀಯತೆ ಹಾಗೂ ಬೆಳಕಿನ ಐಕ್ಯತಾ ಸಿದ್ಧಾಂತ ಮೂಡಿತು. ಝೀಮನ್ನ ಈ ಸಂಶೋಧನೆ ಏಕಕಾಲಕ್ಕೆ ಲೊಹ್ರೆಂಟ್ಸ್ನ ಸೈದ್ಧಾಂತಿಕ ನಿರ್ಧಾರಗಳಿಗೆ ಸಾಧನೆ ಒದಗಿಸಿ, ಎಲ್ಲಾ ಬಗೆಯ ಬೆಳಕುಗಳ ಧೃವೀಕರಣ ಸಾಬೀತಾಗಿ, ಋಣಾತ್ಮಕ ಕಣಗಳ ಅಸ್ತಿತ್ವವನ್ನು ಸಾರಿತು. ಇದಾದ ಕೇವಲ ಒಂದೇ ವರ್ಷದಲ್ಲಿ ಜೆ.ಜೆ.ಥಾಮ್ಸನ್ ಮುಕ್ತ ಎಲೆಕ್ಟ್ರಾನ್ಗಳ ಅಸ್ತಿತ್ವ ಸಾರಿದನು. ಇದು ಝೀಮನ್ ಮಂಡಿಸಿದ ಬೆಳಕು ಕಾಂತತ್ವ ಹಾಗೂ ವೈದ್ಯುತ್ ಕ್ಷೇತ್ರಗಳ ಸಂಬಂಧವನ್ನು ಸ್ಪುಟಗೊಳಿಸಿತು. ಝೀಮನ್, ಸೂರ್ಯನ ಪ್ರಬಲ ಕಾಂತಕ್ಷೇತ್ರ, ದೂರದಿಂದ ಬರುವ ಆಕಾಶ ಕಾಯಗಳ ರೋಹಿತದ ಮೇಲೂ ಪ್ರಭಾವ ಬೀರಬಹುದೆಂದು ಸೂಚಿಸಿದನು. 1908ರಲ್ಲಿ ಮೌಂಟ್ ವಿಲ್ಸನ್ ವೀಕ್ಷಣಾಲಯದ ಖಗೋಳಶಾಸ್ತ್ರಜ್ಞ. ಜೆ.ಇಹೇಲ್ ತಾನು ಪಡೆದ ತಾರೆಗಳ ಛಾಯಾಬಿಂಬಗಳಿಂದ ಇದು ಸರಿಯೆಂದು ತೋರಿಸಿದನು. ಝೀಮನ್ ಜೆ.ಡೆ ಗೀರ್ನೊಂದಿಗೆ 38ಎಅರ್,64 ಎನ್ಸಿ ಎಂಬ ಎರಡು ಹೊಸ ಸಮಸ್ಥಾನಿಗಳನ್ನು ಪತ್ತೆ ಹಚ್ಚಿದನು. ಆ್ಯಮಸ್ಟರ್ ವಿಶ್ವವಿದ್ಯಾಲಯದಿಂದ ಝೀಮನ್ಗೆ ಪ್ರಾಧ್ಯಾಪಕನಾಗುವ ಆಹ್ವಾನ ದಕ್ಕಿತು. 1900ರಲ್ಲಿ ಇಲ್ಲಿಯೇ ವಿಶಿಷ್ಟ ಪ್ರಾಧ್ಯಾಪಕನಾಗಿ ಬಡ್ತಿ ಹೊಂದಿದನು. 1908ರಲ್ಲಿ ವ್ಯಾಂಡರ್ ವಾಲ್ನಿವೃತ್ತನಾದನು. ಇದರಿಂದ ತೆರವಾದ ಭೌತಶಾಸ್ತ್ರ ಪ್ರಯೋಗಾಲಯದ ನಿರ್ದೇಶಕ ಸ್ಥಾನ ಝೀಮನ್ಗೆ ದಕ್ಕಿತು. 1923ರಲ್ಲಿ ಝೀಮನ್ ಪ್ರಯೋಗಗಳಿಗಾಗಿಯೇ ಹೊಸದಾದ ಭೌತಶಾಸ್ತ್ರ ಪ್ರಯೋಗಾಲಯ ನಿರ್ಮಾಣಗೊಂಡಿತು. ಕಂಪನ ರಹಿತ ತಳಹದಿ ಒದಗಿಸಲು ಇಲ್ಲಿ ಝೀಮನ್ನ ಅಗತ್ಯಕ್ಕೆ ತಕ್ಕಂತಹ 250 ಟನ್ ತೂಕದ ಕಾಂಕ್ರಿಟ್ ಪೀಠವನ್ನು ಛಾವಣಿಯಿಂದ ನೇತುಹಾಕಲಾಯಿತು. ಇಲ್ಲಿ ಝೀಮನ್ ಹಲವಾರು ಪ್ರಯೋಗಗಳನ್ನು ಕೈಗೊಂಡನು. ಈಗ ಇದು ಆ್ಯಮಸ್ಟಾರ್ ಡ್ಯಾಂ ವಿಶ್ವವಿದ್ಯಾಲಯದ ಪೀಟರ್ ಝೀಮನ್ ಪ್ರಯೋಗಾಲಯವೆಂದು ಖ್ಯಾತವಾಗಿದೆ. ಜಗತ್ತಿನ ಹಲವಾರು ವಿಖ್ಯಾತ ವಿಜ್ಞಾನಿಗಳು ಇಲ್ಲಿ ಭೇಟಿ ನೀಡಿದ, ಪ್ರಯೋಗ ನಡೆಸಿದ ಕೀರ್ತಿ ಈ ಪ್ರಯೋಗಾಲಯಕ್ಕಿದೆ. ಝೀಮನ್ಗೆ ಹಲವಾರು ಬಾರಿ ವಿದೇಶಗಳಿಂದ ಅತ್ಯುನ್ನತ ಹುದ್ದೆಗಳು ಅರಸಿ ಬಂದರೂ ಅವನ್ನು ತಿರಸ್ಕರಿಸಿ, ಈ ಪ್ರಯೋಗಾಲಯದಲ್ಲೇ ಉಳಿದನು. 1935ರಲ್ಲಿ ನಿವೃತ್ತನಾದನು. ಪೀಟರ್ನ ಖ್ಯಾತ ಶಿಷ್ಯರಲ್ಲಿ ಸಿ.ಜೆ. ಬಕ್ಕರ್, ಗೌಡ್ಸ್ಮಿತ್ ಉಹ್ಲೆನ್ಬೆಕ್ ಪ್ರಮುಖರು. 1892ರಲ್ಲಿ ಪೀಟರ್ ಬರೆದ ವೈಜ್ಞಾನಿಕ ಲೇಖನವೊಂದಕ್ಕೆ ಹಾರ್ಲೇಮನ್ಲ್ಲಿರುವ ಡ್ಯಾನಿಷ ವೈಜ್ಞಾನಿಕ ಸಮಾಜದಿಂದ ಬಂಗಾರದ ಪದಕ ದಕ್ಕಿದ್ದಿತು. ಝೀಮನ್ ಸ್ಟ್ರಾಸ್ಬರ್ಗ್ನಲ್ಲಿರುವಾಗ ದ್ರವಗಳಲ್ಲಿ ಹಾದು ಹೋಗುವ ವೈದ್ಯುತ್ ಅಲೆಗಳ ಹೀರಿಕೆ ಅಧ್ಯಯನ ನಡೆಸಿದ್ದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಬೆಕುರೆ, (ಆ್ಯಂಟೊನಿ) ಹೆನ್ರಿ (1852-1908) - 1903
Becquerel , Antoine Henri
ಫ್ರಾನ್ಸ್- ಭೌತಶಾಸ್ತ್ರ- ವಿಕಿರಣಪಟುತ್ವವನ್ನು (Radioactivity) ಅನಾವರಣಗೊಳಿಸಿದಾತ
ಬೆಕುರೆ ತಾತ ಹಾಗೂ ತಂದೆ ಭೌತಶಾಸ್ತ್ರಜ್ಞರಾಗಿದ್ದರು. ಅವರ ನೆರಳಿನಲ್ಲೇ ಬೆಕುರೆ ಭೌತಶಾಸ್ತ್ರ ಅಭ್ಯಸಿಸಿದನು.ಅವರ ಪ್ರಭಾವಕ್ಕೊಳಗಾಗಿ ವರ್ಣಪ್ರದೀಪ್ತಿಯ (Fluoroscence) ಬಗ್ಗೆ ಆಸಕ್ತಿ ತಳೆದಿದ್ದನಲ್ಲದೆ, ಎಕೊಲೆ ಪಾಲಿಟೆಕ್ನಿಕ್ ನಲ್ಲಿ ತನ್ನ ತಂದೆಯ ಸ್ಥಾನವನ್ನು ಅಲಂಕರಿಸುವಲ್ಲಿ ಯಶಸ್ವಿಯಾದನು. 1895ರಲ್ಲಿ ಪ್ರಾಧ್ಯಾಪಕನಾದನು. ಆಕಸ್ಮಿಕವಾಗಿ ಯುರೇನಿಯಂ ಲವಣದ ಬದಿಗಿಟ್ಟಿದ್ದ. ಛಾಯಾಗ್ರಹಣ ¥sóÀಲಕ ಕಪ್ಪಾಗಿರುವುದನ್ನು ಗವiನಿಸಿದನು ಇದು ಕಪ್ಪಾಗಲು ಅವನ್ನು ಯಾವುದೇ ಬೆಳಕಿಗೆ ಒಡ್ಡಲಾಗಿಲ್ಲವೆಂದು ಖಚಿತಪಡಿಸಿಕೊಂಡನು. ಇದರಿಂದ ಅವನಿಗೆ ಯುರೇನಿಯಂ ಲವಣದ ಯಾವುದೋ ಪ್ರಭಾವದಿಂದ ಇವು ಕಪ್ಪಾಗುವುದು ನಿಶ್ಚಿತವೆನಿಸಿತು. ಬೆಳಕಿನಂತೆ ಪ್ರತಿಫಲನಗೊಳ್ಳದ ಯುರೇನಿಯಂನ ವಿಕಿರಣಶೀಲತೆಯೇ ಇದಕ್ಕೆ ಕಾರಣವೆಂದೂ ಇಂತಹ ವಿಕಿರಣಶೀಲತೆ ಗಾಳಿಯನ್ನು ಅಯಾನೀಕರಣಗೊಳಿಸುವುದೆಂದೂ ಕಂಡು ಹಿಡಿದನು. 1895ರಲ್ಲಿ ರಾಂಟ್ಜೆನ್ ಅನಾವರಣಗೊಳಿಸಿದ ಕ್ಷ-ಕಿರಣಕ್ಕೆ ಇಂತಹುದೇ ಸ್ವಭಾವಗಳಿದ್ದರೂ, ಅದು ವಿಕಿರಣಶೀಲತೆಗಿಂತ ಭಿನ್ನವಾದುದು. 1903ರಲ್ಲಿ ಬೆಕುರೆ, ಕ್ಯೂರಿ ಜೊತೆ ಸೇರಿ ನೊಬೆಲ್ ಪ್ರಶಸ್ತಿ ಪಡೆದನು. ಬೆಕುರೆ ಕಾಂತೀಯ ಪರಿಣಾಮ, ಸ್ಪಟಿಕಗಳಿಂದ ಬೆಳಕಿನ ಹೀರಿಕೆಗಳ ಬಗ್ಗೆ ಸಾಕಷ್ಟು ಕೆಲಸ ಮಾಡಿದನಾದರೂ, ವಿಕಿರಣಶೀಲತೆಯ ಅನಾವರಣಕಾರನೆಂತಲೇ ಖ್ಯಾತನಾಗಿದ್ದಾನೆ. ತನ್ನ ಬಳಿಯಿದ್ದ ರೇಡಿಯಂ , ಚರ್ಮವನ್ನು ಸುಡುವುದೆಂದು ಬೆಕುರೆ ಅರಿತನು. ಮುಂದೆ ಇದೇ ತಳಹದಿಯ ಮೇಲೆ ಕ್ಯಾನ್ಸರ್ ರೋಗ ಚಿಕಿತ್ಸೆಗೆ ವಿಕಿರಣ ಚಿಕೆತ್ಸೆ ರೂಪುಗೊಂಡಿತು. ಯಾವುದೇ ವಿಕಿರಣಶೀಲ ಧಾತು, ಪ್ರತಿ ಸೆಕೆಂಡಿಗೆ ಹೊರಸೂಸುವ ವಿಕಿರಣವನ್ನು ಸೂಚಿಸಲು ಬಳಸುವ ಮಾನಕವನ್ನು ಗೌರವಾರ್ಥವಾಗಿ ಬೆಕುರೆ ಎಂದು ಕರೆಯಲಾಗಿದೆ. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಕ್ಯೂರಿ, ಪೀರೆ (1859-1906 ) 1903
Curie , Pierre
ಫ್ರಾನ್ಸ್-ಭೌತಶಾಸ್ತ್ರ - ಪೀಝೋ-ವೈದ್ಯುತ್ ಪರಿಣಾಮವನ್ನು ಕಂಡು ಹಿಡಿದಾತ.ವಿಕಿರಣಶೀಲ ಅಧ್ಯಯನಾಸಕ್ತ
ಸೊರೆಬೊನ್ನೆಯ ವೈದ್ಯನ ಮಗನಾಗಿದ್ದ, ಪೀರೆ ಅಲ್ಲಿಯೇ ಪದವಿ ಗಳಿಸಿ, 1878ರಲ್ಲಿ ಸಹಾಯಕ ಬೋಧಕನಾದನು. 1882ರಲಿ ‘ಸ್ಕೂಲ್ ಆಫ ಇಂಡಸ್ಟ್ರೀಯಲ್ ಫಿನಿಕ್ಸ್ ಅಂಡ್ ಕೆಮಿಸ್ಟ್ರಿ’ ಪ್ರಯೋಗಾಲಯದ ಮುಖ್ಯಸ್ಥನಾಗಿ ನೇಮಕಗೊಂಡನಲ್ಲದೆ , 1904ರಲ್ಲಿ ಸೊರೆಬೊನ್ನೆಯಲ್ಲಿ ಸ್ಥಾಪಿತವಾಗಿದ್ದ ಭೌತಶಾಸ್ತ್ರದ ಪೀಠಕ್ಕೆ ನೇಮಕಗೊಂಡನು. ಪೀರೆ ಹಾಗೂ ಅವನ ಸೋದರ ಜಾಕ್ವೆಸ್ ಮೊದಲ ಬಾರಿಗೆ ಒಂದು ನಿರ್ದಿಷ್ಟ ವಿದ್ಯಾಮಾನವನ್ನು ಗುರುತಿಸಿ ಅದನ್ನು ‘ಪೀಝೊ-ಪರಿಣಾಮ’ವೆಂದು ಕರೆದರು. ಪೀಝೋ-ವೈದ್ಯುತ್ ಪರಿಣಾಮದಲ್ಲಿ ಕ್ವಾರ್ಟ್ಸ್ನಂತಹ ಸ್ಪಟಿಕಗಳು ವಿರೂಪಗೊಂಡಾಗ , ಅವುಗಳ ಎರಡು ವಿರುದ್ದ ಮುಖಗಳಲ್ಲಿ ವಿರುದ್ದವಾದ ವೈದ್ಯುತಾವಿಷ್ಟವಿರುತ್ತದೆ. ಅಥವಾ ಇದಕ್ಕೆ ಪ್ರತಿಯಾಗಿ,ಈ ಸ್ಪಟಿಕಗಳ ವಿರುದ್ದ ಮುಖಗಳನ್ನು ವೈದ್ಯುತಾವಿಷ್ಟಗೊಳಿಸಿದರೆ ಅವು ವಿರೂಪಗೊಳ್ಳುತ್ತವೆ. ತೀವ್ರವಾಗಿ ಬದಲಾಗುವ ವಿದ್ಯುತ್ ಪ್ರವಾಹದಿಂದ, ಈ ಹರಳುಗಳು ಅದೇ ತೀವ್ರತೆಯಲ್ಲಿ ವಿರೂಪಗೊಂಡು ಕಂಪಿಸುತ್ತವೆ. ಈ ಪರಿಣಾಮವನ್ನು ಶ್ರವಣಾತೀತ ಶಬ್ಧದ ಉತ್ಪಾದನೆಗೆ ಬಳಸಬಹುದು. ಪೀಝೋ ವೈದ್ಯುತ್ ಪರಿಣಾಮಕ್ಕೆ ಒಳಗಾಗುವ ಸ್ಪಟಿಕಗಳನ್ನು ಮೈಕ್ರೋಫೋನ್, ಒತ್ತಡ ಮಾಪಕ, ಕ್ವಾರ್ಟ್ಸ್ ಕಂಪಕ ಹಾಗೂ ಕ್ವಾರ್ಟ್ಸ್ ಕೈಗಡಿಯಾರಗಳಲ್ಲಿ ಬಳಸಲಾಗುತ್ತಿದೆ. ಜಾಕ್ವೆಸ್ ಹಾಗೂ ಪೀರೆ ಈ ಪರಿಣಾಮವನ್ನು ಬಳಸಿ ಅತ್ಯಲ್ಪ ವಿದ್ಯುತ್ ಪ್ರವಾಹಗಳನ್ನು ಅಳೆಯುವ ಮಾಪಕಗಳನ್ನು ರೂಪಿಸಿದರು. ಮುಂದೆ ಮಿಕಿರಣಶೀಲತೆಯನ್ನು ಅಳೆಯಲು ಪೀರೆಯು ಪತ್ನಿ ಮೇರಿ, ಇದೇ ಉಪಕರಣವನ್ನು ಬಳಸಿದಳು. ಪೀರೆ ಫೆರೋ ಕಾಂತೀಯತೆ ಮೇಲೆ ಶಾಖದ ಪರಿಣಾಮವನ್ನು ಕುರಿತಾಗಿ ಅಧ್ಯಯನ ಪ್ರಾರಂಭಿಸಿದನು. ಇದರ ಫಲಿತಾಂಶವಾಗಿ, ಫೆರೋಕಾಂತೀಯ ವಸ್ತುಗಳು, ವಸ್ತು ನಿರ್ದಿಷ್ಟವಾಗಿ , ಒಂದು ನಿರ್ದಿಷ್ಟ ತಾಪಮಾನವನ್ನು ತಲುಪಿದನಂತರ, ಫೆರೋಕಾಂತೀಯ ಗುಣಗಳನ್ನು ಕಳೆದುಕೊಂಡು ಅನುಕಾಂತೀಯವಾಗುತ್ತದೆಯೆಂದು (Paramagnetic) ತಿಳಿದು ಬಂದಿತು. ಈ ನಿರ್ದಿಷ್ಟ ತಾಪಮಾನವನ್ನು ಕ್ಯೂರಿ ಬಿಂದು ಎಂದು ಗುರುತಿಸಲಾಗಿದೆ. ಪಾರಕಾಂತೀಯ (Diamagnetic) ಸಾಮಗ್ರಿಗಳ ಕಾಂತೀಯ ಅಂಗೀಕಾರ (Succeptibility) ತಾಪಮಾನದಿಂದ ಸ್ವತಂತ್ರವಾಗಿದ್ದು, ಅನುಕಾಂತೀಯ ಸಾಮಾಗ್ರಿಗಳಿಗೆ ನಿರಪೇಕ್ಷ ತಾಪಕ್ಕೆ ಅನುಲೋಮವಾಗಿರುವುದೆಂಬ ‘ಕ್ಯೂರಿ ನಿಯಮ’ವನ್ನು ಸಹ ಪೀರೆ ನೀಡಿದ್ದಾನೆ. ಮೇರಿಯನ್ನು ಮದುವೆಯಾದ ನಂತರ, ಪೀರೆ, ಅವಳ ಸಂಶೋಧನೆಗೆ ನೆರವಾಗಲು ತನ್ನ ಸಂಶೋಧನೆಗಳನ್ನು ನಿಲ್ಲಿಸಿದನು. ಮೇರಿಯೊಂದಿಗೆ ಸೇರಿ, ವಿಕಿರಣಶೀಲತೆಯ ಅರಿವಿಗಾಗಿ ಶ್ರಮಿಸಿದ್ದರಿಂದ, 1903ರ ನೊಬೆಲ್ ಪ್ರಶಸ್ತಿಯನ್ನು ಪತ್ನಿ ಮೇರಿ ಹಾಗೂ ಬೆಕೂರೆ ಜೊತೆ ಪಡೆದನು. ಪೀರೆ ಒಂದು ಗ್ರಾಂ ರೇಡಿಯಂ ಗಂಟೆಗೆ 500 ಜೌಲ್ನಷ್ಟು ಚೈತನ್ಯ ಬಿಡುಗಡೆಗೊಳಿಸುವುದನ್ನು ತೋರಿಸಿ, ಅಣ್ವಯಿಕ ಚೈತನ್ಯದ ಅಂದಾಜನ್ನು ನೀಡಿದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಕ್ಯೂರಿ, ಮೇರಿ (1867-1934) 1903 &1911
Curie, Marie
ಪೋಲೆಂಡ್-ಫ್ರಾನ್ಸ್- ಭೌತಶಾಸ್ತ್ರ ವಿಕಿರಣಪಟು ಧಾತುಗಳಾದ (Radioactive Elements) ಪೊಲೇನಿಯಂ ಹಾಗೂ ರೇಡಿಯಂಗಳನ್ನು ಅನಾವರಣಗೊಳಿಸಿದಾಕೆ -–ಎರಡು ಬಾರಿ ನೊಬೆಲ್ ಪ್ರಶಸ್ತಿ ಪಡೆದಾಕೆ.
ಮೇರಿ ಕ್ಯೂರಿಯ ಮೂಲ ಹೆಸರು ಮಾನ್ಯ ಸ್ಲ್ಕೊಡೋವಸ್ಕಾ. ಮೇರಿ. ರಷ್ಯನ್ ಪ್ರಾಬಲ್ಯದ ಪೆÇೀಲೆಂಡ್ನಲ್ಲಿ ಕಡು ಬ ಡವ ಕುಟುಂಬದಲ್ಲಿ ಹುಟ್ಟಿ ಬೆಳೆದಳು. ತೀವ್ರ ದೇಶಾಭಿಮಾನಿಗಳಾಗಿದ್ದ ಮೇರಿಯ ತಂದೆ, ತಾಯಿಗಳು , ಪೋಲಿಷ್ ಭಾಷೆ ಹಾಗೂ ಸಂಸ್ಕೃತಿಗಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟಿದ್ದರು. ಮೇರಿಯ ತಂದೆ ಗಣಿತ ಹಾಗೂ ಭೌತಶಾಸ್ತ್ರದ ಬೋಧಕನಾಗಿದ್ದು, ತಾಯಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಳಾಗಿದ್ದಳು. ಮೇರಿ ಬಾಲ್ಯದಿಂದಲೇ ಭೌತಶಾಸ್ತ್ರದತ್ತ ಆಕರ್ಷಿತಳಾಗಿದ್ದಳಾದರೂ , ಕಡು ಬಡತನದ ಕೌಟುಂಬಿಕ ಹಿನ್ನೆಲೆಯಲ್ಲಿ ಅವಳಿಗೆ ಉನ್ನತ ವ್ಯಾಸಂಗ ಮಾಡುವುದೇ ಆಸಾಧ್ಯವೆಂಬ ಸ್ಥಿತಿ ಬಂದೊದಗಿತು. ಅದಲ್ಲದೆ ಪೋಲೆಂಡ್ನಲ್ಲಿ ಆ ಕಾಲಕ್ಕೆ ಮಹಿಳೆಯರು ಉನ್ನತ ವಿಧ್ಯಾಭ್ಯಾಸ ಮಾಡುವ ಅವಕಾಶಗಳು, ಹಾಗೂ ಸಾಮಾಜಿಕ ಒಪ್ಪಿಗೆಯೂ ಇರಲಿಲ್ಲ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮೇರಿಯ ಸೋದರಿ ಬ್ರೊನ್ಯಾ ಅವಳ ನೆರವಿಗೆ ನಿಂತಳು. ಹೇಗಾದರೂ ಮಾಡಿ ಮೇರಿ ಉನ್ನತ ವಿದ್ಯಾಭ್ಯಾಸ ಮಾಡಲು ಬ್ರೊನ್ಯಾ ನೆರವೀಯಬೇಕೆಂದೂ, ಅದಕ್ಕೆ ಪ್ರತಿಯಾಗಿ ಮೇರಿಯೂ ಬ್ರಾನ್ಯಾಳಿಗೆ ನೆರವಾಗಬೇಕೆಂದೂ ಸೋದರಿಯರಲ್ಲಿ ಒಪ್ಪಂದವೊಂದಾಯಿತು. ಇದಕ್ಕಾಗಿ ಬ್ರೊನ್ಯಾ ಚರ್ಚ್ನ ಗವರ್ನೆಸ್ ಕೆಲಸಕ್ಕೆ ಸೇರಿದಳು. 1891ರಲ್ಲಿ ಮೇರಿ, ಭೌತಶಾಸ್ತ್ರದ ಅಧ್ಯಯನಕ್ಕಾಗಿ ಪ್ಯಾರಿಸ್ಗೆ ಬಂದು ನೆಲೆಸಿದಳು. ಪರಿಪೂರ್ಣತೆಯತ್ತ ಸದಾ ನೋಟವಿಟ್ಟಿದ್ದ ಮೇರಿ ಅಷ್ಟೇ ಸ್ವತಂತ್ರ ಮನೋಭಾವದವಳೂ, ಶ್ರಮ ಸಾಹಸಿಯೂ ಆಗಿದ್ದಳು. 1893ರಲ್ಲಿ ಸೊರಬೊನ್ನೆ ವಿಶ್ವ ವಿಧ್ಯಾಲಯದಲ್ಲಿ ಪ್ರಥಮ ಸ್ಥಾನ ಗಳಿಸಿ, ಪದವಿ ಸಂಪಾದಿಸಿದಳು. ಮುಂದಿನ ವರ್ಷ ಪೋಲೆಂಡ್ನಿಂದ ದೊರೆತ ಶಿಷ್ಯವೇತನದಲ್ಲಿ ಗಣಿತದ ಅಧ್ಯಯನ ಮಾಡಿ, ವಿಶ್ವವಿದ್ಯಾಲಯಕ್ಕೆ ದ್ವಿತೀಯ ಸ್ಥಾನ ಗಳಿಸಿದಳು. ಈ ಅವಧಿಯಲ್ಲಿ ಮೇರಿ, ಪೀರೆ ಕ್ಯೂರಿಯನ್ನು ಬೇಟಿಯಾದಳು. ಆಗ್ಗೆ 35 ವಯಸ್ಸಾಗಿದ್ದ ಪೀರೆ ಸ್ಕೂಲ್ ಆಫ್ ಇಂಡಸ್ಟ್ರೀಯಲ್ ಫಿನಿಕ್ಸ್ ಅಂಡ್ ಕೆಮೆಸ್ಟ್ರಿ ಸಂಸ್ಥೆಯಲ್ಲಿ ಪೀಝೋ ವೈದ್ಯುತ ಶಾಸ್ತ್ರದ ಮೇಲೆ ಕೆಲಸ ಮಾಡುತ್ತಿದ್ದನು. ವಿದ್ಯಾಭ್ಯಾಸದ ನಚಿತರ ಪೋಲೆಂಡಿಗೆ ಮರಳಿ ಉಪನ್ಯಾಸಕಳಾಗಬೇಕೆಂದಿದ್ದ ಮೇರಿ ಪೀರೆಯ ಪರಿಚಯವಾದ ನಂತರ ತನ್ನ ನಿರ್ಧಾರ ಬದಲಿಸಿ, 1895ರಲ್ಲಿ ಅವನನ್ನು ಮದುವೆಯಾದುದಲ್ಲದೆ ಮೇರಿ ಕ್ಯೂರಿಯೆಂದು ಗುರುತಿಸಲ್ಪಟ್ಟಳು.
1892ರಲ್ಲಿ ಬೆಕೂರೆ, ಯುರೇನಿಯಂ ಲವಣಗಳಲ್ಲಿನ ವಿಕಿರಣಶೀಲತೆಯನ್ನು ಕಂಡು ಹಿಡಿದನು. ಡಾಕ್ಟರೇಟ್ ಪದವಿ ಸಂಶೋಧನಾ ವಿಷಯದ ಹುಡುಕಾಟದಲ್ಲಿದ್ದ ಮೇರಿಗೆ ಬೆಕೂರೆ ಗುರುತಿಸಿದ ಹೊಸ ವಿದ್ಯಾಮಾನ ಗಮನ ಸೆಳೆಯಿತು. ತನ್ನ ಗಂಡನ ಪ್ರಯೋಗಾಲಯದಲ್ಲೇ ಕೆಲಸ ಮಾಡುತ್ತಾ ಮೇರಿ , ವಿಕಿರಣಶೀಲತೆ ಯುರೇನಿಯಂನ ಅಣ್ವಯಿಕ ಗುಣವೆಂತಲೂ, ಯುರೇನಿಯಂನಂತೆ ಥೋರಿಯಂ ಸಹ ವಿಕಿರಣಶೀಲವೆಂತಲೂ, ತೋರಿಸಿದಳು. 1897ರಲ್ಲಿ ಮೇರಿ ಐರೇನ್ಗೆ ಜನ್ಮ ನೀಡಿದಳು. ಮುಂದೆ ಐರೇನ್ ಕೂಡ ನೊಬೆಲ್ ಪ್ರಶಸ್ತಿ ಪುರಸ್ಕೃತಳಾದಳು. ಹಲವಾರು ನೈಸರ್ಗಿಕ ಖನಿಜಗಳನ್ನು ವಿಕಿರಣಶೀಲ ಅಧ್ಯಯನಕ್ಕೆ ಆರಿಸಿಕೊಂಡ ಮೇರಿ ಪಿಚ್ಬ್ಲೆಂಡ್ ಹಾಗೂ ಚಾರ್ಕೋಲೈಟ್ ಅದಿರುಗಳಿಂದ ಹೊಮ್ಮುವ ವಿಕಿರಣಶೀಲತೆ , ಯುರೇನಿಯಂ ಹಾಗೂ ಥೋರಿಯಂಗಿಂತ ಪ್ರಬಲವಾಗಿರುವುದು ತಿಳಿಯಿತು. ಇದರಿಂದ ಮೇರಿ ಈ ಅದಿರುಗಳಲ್ಲಿ ಯುರೇನಿಯಂಗಿಂತ ಹೆಚ್ಚು ಪ್ರಬಲವಾದ ವಿಕಿರಣಶೀಲ ಸರಕಿರುವುದಾಗಿ ಅನುಮಾನಿಸಿದಳು. ಪಿಚ್ಬ್ಲೆಂಡನಿಂದ ಈ ಹೊಸ ಧಾತುವನ್ನು ಪ್ರತ್ಯೀಕಿಸಲು ಮೇರಿ ಪ್ರಾರಂಭಿಸಿದಳು. ಇದಕ್ಕಾಗಿ ಅವಳು ಆಯ್ದುಕೊಂಡಿದ್ದ ಅಂಶಿಕ ಸ್ಪಟಿಕೀಕರಣ (Partial Crystallisation) ಬಹು ಪ್ರಯಾಸಕರ ಮಾರ್ಗವಾಗಿದ್ದಿತು. ಹೆಂಡತಿಗೆ ನೆರವಾಗಲೋಸುಗ ಪೀರೆ ಕ್ಯೂರಿ ತನ್ನ ಸ್ವಂತ ಸಂಶೋಧನೆಗೆ ರಾಜೀನಾಮೆ ನೀಡಿದನು. ಆಗಿನ ಕಾಲಕ್ಕೆ ವಿಕಿರಣಶೀಲತೆಯಿಂದ ಮಾನವರ ಮೇಲಾಗುವ ಅಪಾಯಗಳ ಅರಿವಿರದ ಕ್ಯೂರಿ ದಂಪತಿಗಳು ಯಾವುದೇ ಸುರಕ್ಷ ಕ್ರಮ ಕೈಗೊಳ್ಳದೆ ಸಂಶೋಧನೆ ಮುಂದುವರೆಸಿದರು. ಕ್ಯೂರಿಗಳು ಸಿದ್ದಪಡಿಸಿದ ಟಿಪ್ಪಣಿಗಳಲ್ಲಿ ಕೊನೆ,ಕೊನೆಗೆ ಅತ್ಯಂತ ಪ್ರಬಲ ವಿಕಿರಣಶೀಲತೆಯ ಅಪಾಯದ ಎಚ್ಚರಿಕೆಗಳು ದಾಖಲಾಗಿವೆ. 1898ರ ಜುಲೈನಲ್ಲಿ ಕ್ಯೂರಿ ದಂಪತಿಗಳು ಎರಡು ಹೊಸ ವಿಕಿರಣಶೀಲ ಧಾತುಗಳ ಅಸ್ತಿತ್ವವನ್ನು ಜಗತ್ತಿಗೆ ಸಾರಿದರು. ತನ್ನ ತಾಯ್ನಾಡಿನ ಗೌರವರ್ಥವಾಗಿ ಮೇರಿ ಅದರಲ್ಲಿ ಒಂದನ್ನು ಪೊಲೋನಿಯಂ ಎಂದು ಹೆಸರಿಸಿದಳು. ಇದೇ ವರ್ಷದ ಡಿಸೆಂಬರನಲ್ಲಿ ಪೊಲೋನಿಯಂಗಿಂತ ಪ್ರಬಲ ವಿಕಿರಣಶೀಲ ಯುರೇನಿಯಂನ್ನು ಪ್ರತ್ಯೇಕಿಸಿದರು. ಬೊಹಿಮಿಯಾದ ತ್ಯಾಜ್ಯ ಗಣಿಗಳಿಂದ ಪಡೆದ ಕಚ್ಚಾ ಅದಿರಿನಿಂದ , ಯುರೇನಿಯಂನ್ನು ಪ್ರತ್ಯೇಕಿಸಲು ಮನೆಯ ಹಿತ್ತಲಿನಲ್ಲಿದ್ದ ಷೆಡ್ನಲ್ಲಿ ಅವಿರತ ಶ್ರಮಪಟ್ಟರು. ಹಲವು ಹಂತದ, ಹಲವು ವರ್ಷಗಳ ಶ್ರಮದ ಫಲವಾಗಿ 1902ರಲ್ಲಿ ಅವರು 100 ಮಿ.ಲಿಗ್ರಾಂ ಯುರೇನಿಯಂನ್ನು ಶುದ್ದ ರೂಪದಲ್ಲಿ ಪಡೆಯುವಲ್ಲಿ ಸಾರ್ಥಕತೆ ಕಂಡರು. ಈ ಧಾತು ಎಷ್ಟು ಪ್ರಬಲವಾಗಿತ್ತೆಂದರೆ, ಸುತ್ತಲಿನ ಗಾಳಿಯನ್ನು ಅಯೋನೀಕರಿಸುತ್ತಿತ್ತಲ್ಲದೆ, ನೀರನ್ನು ವಿಯೋಜಿಸಿ ಶಾಖ ಬಿಡುಗಡೆ ಮಾಡುತ್ತಿದ್ದು ಕತ್ತಲಲ್ಲೂ ಹೊಳೆಯುತ್ತಿದ್ದಿತು.
1903ರಲ್ಲಿ ಮೇರಿ ಕ್ಯೂರಿ , ಡಾಕ್ಟರೇಟ್ ಗಾಗಿ ಸಂಪ್ರಬಂಧ ಮಂಡಿಸಿ, ಫ್ರಾನ್ಸ್ನಲ್ಲಿ ಆ ಕೀರ್ತಿಗೆ ಪಾತ್ರಳಾದ ಮೊದಲ ಮಹಿಳೆ ಎನಿಸಿದಳು. 1903ರಲ್ಲಿ ಕ್ಯೂರಿ ದಂಪತಿಗಳಿಗೆ, ಬೆಕೂರೆ ಜೊತೆ ಸೇರಿದಂತೆ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ದಕ್ಕಿತು. 1904ರಲ್ಲಿ ಕ್ಯೂರಿ ದಂಪತಿಗಳಿಗೆ ಎರಡನೇ ಹೆಣ್ಣು ಮಗು ಈವ್ ಜನಿಸಿದಳು. ಆದರೆ ಅದಿರಿನಿಂದ, ಯುರೇನಿಯಂನ್ನು ಪ್ರತ್ಯೇಕಿಸುವಾಗ ದೀರ್ಘಾವಧಿ ವಿಕಿರಣಶೀಲತೆಗೆ ತುತ್ತಾಗಿದ್ದ ಪೀರೆಯ ಆರೋಗ್ಯ ಹದಗೆಡುತ್ತಾ ಬಂದಿತು. 1904ರಲ್ಲಿ ಪೀರೆಯನ್ನು ಸೊರೆಬೊನ್ನೆಯ ಭೌತಶಾಸ್ತ್ರದ ಪ್ರಾಧ್ಯಾಪಕನಾಗಿ ನೇಮಿಸಲಾಯಿತಲ್ಲದೆ, ಮೇರಿಯನ್ನು ಪೀರೆಗಾಗಿ ನಿರ್ಮಿಸಲು ಪ್ರಾಯೋಜಿತಗೊಂಡಿದ್ದ ಪ್ರಯೋಗಾಲಯದ ಉಸ್ತುವಾರಿ ಮುಖ್ಯಸ್ಥೆಯನ್ನಾಗಿಸಲಾಯಿತು. ಈ ಪ್ರಯೋಗಾಲಯ 1915ರಲ್ಲಿ ಪ್ರಾರಂಭವಾಯಿತು. ಆದರೆ ಅದನ್ನು ನೋಡುವ ಭಾಗ್ಯ ಪೀರೆಗಿರಲಿಲ್ಲ. ಏಕೆಂದರೆ 1906ರಲ್ಲಿ ರಸ್ತೆ ಅಪಘಾತದಲ್ಲಿ ಪೀರೆ ಅಸು ನೀಗಿದನು. ಪೀರೆಯ ಮರಣದ ನಂತರ , ಅವನ ಸ್ಥಾನವನ್ನು ಅಲಂಕರಿಸುವಂತೆ ಮೇರಿಯನ್ನು ಅಹ್ವಾನಿಸಲಾಯಿತು.ಮೇರಿ , ಸೊರೆಬೊನ್ನೆಯ ಮೊದಲ ಮಹಿಳಾ ಪ್ರಾಧ್ಯಾಪಕಳಾದಳು. ಗಂಡನ ಮರಣದ ನಂತರ ಮಾನಸಿಕವಾಗಿ ಜರ್ಝರಿತಳಾಗಿದ್ದ ಮೇರಿ, ಪೊಲೇನಿಯಂನ್ನು ಶುದ್ದ ರೂಪದಲ್ಲಿ ಪಡೆಯಲು ಯತ್ನಿಸಿದಳು. ಮಕ್ಕಳ ಪಾಲನೆ ಹಾಗೂ ಉಳಿದವರ ಸಂಶೋದನೆಯ ಮೇಲ್ವಿಚಾರಣೆಯಲ್ಲಿಯೇ ಮೇರಿಯ ಉಳಿದ ಜೀವನ ಕಳೆಯಿತು. 1910ರಲ್ಲಿ ಮೇರಿಗೆ ಲೆಜಿಯನ್ ಡಿ ಹಾನರ್ ಗೌರವ ನೀಡಬೇಕೆಂಬ ಪ್ರಸ್ತಾವನೆಯೊಂದು ಸರ್ಕಾರದ ಮುಂದೆ ಬಂದಿತು. ಹಿಂದೆ ಇದೇ ಗೌರವವನ್ನು ಪೀರೆ ತಿರಸ್ಕರಿಸಿದ್ದರಿಂದ, ಮೇರಿಯೂ ಸಹ ಗಂಡನ ಹಾದಿಯನ್ನೇ ತುಳಿದು ಅದನ್ನು ನಿರಾಕರಿಸಿದಳು. ಇದೇ ವೇಳೆಗೆ ಪ್ಯಾರಿಸ್ನ ‘ಅಕಾಡೆಮಿಕ್ ಡೆ ಸೈನ್ಸ್’ನ ಚುನಾವಣೆಗೆ ಸ್ಪರ್ದಿಸಿದಳಾದರೂ, ಚುನಾಯಿತಳಾಗಲಿಲ್ಲ. ಮೇರಿ ಚುನಾಯಿತಳಾಗಿದ್ದರೆ, ಪ್ರಥಮ ಮಹಿಳಾ ಸದಸ್ಯೆಯೆಂಬ ಗೌರವಕ್ಕೆ ಪಾತ್ರಳಾಗುತ್ತಿದ್ದಳು. 1911ರಲ್ಲಿ ಪೊಲೇನಿಯಂ ಹಾಗೂ ರೇಡಿಯಂ ಸಂಶೋಧನೆಗಾಗಿ ಮೇರಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಎರಡನೇ ಬಾರಿ ಪಡೆದಳು. ವಿಕಿರಣಶೀಲತೆಯ ಅಳತೆಯ ಮೂಲವನ್ನು ಕ್ಯೂರಿ ಎಂದು ಕರೆದು, ಕ್ಯೂರಿ ದಂಪತಿಗಳನ್ನು ಗೌರವಿಸಲಾಗಿದೆ. ಈಗಿನ ವ್ಯಾಖ್ಯೆಯಂತೆ ಸೆಕೆಂಡಿಗೆ 3.7x10 ಶೈಥಿಲ್ಯಗಳು ಒಂದು ಕ್ಯೂರಿ. ಮೇರಿ ತನ್ನ 67ನೇ ವಯಸ್ಸಿನಲ್ಲಿ , ವಿಕಿರಣಶೀಲತೆಗೆ ಒಡ್ಡಿಕೊಂಡ ಪರಿಣಾಮವಾಗಿ ಬಿಳಿರಕ್ತಕಣ ದೋಷವುಂಟಾಗಿ ಕೊನೆಯುಸಿರೆಳೆದಳು. ಮೇರಿ ಸಿದ್ದಾಂತಿಯಾಗಿರಲಿಲ್ಲವಾದರೂ ನಿಪುಣ ವಿಕಿರಣ ರಸಾಯನಶಾಸ್ತ್ರಜ್ಞೆಯಾಗಿದ್ದಳು. ಅವಳ ಕಾರ್ಯಗಳಿಂದ ವಿಕಿರಣಶೀಲ ಕ್ಷೇತ್ರದಲ್ಲಿ ಸಂಶೋಧನೆಯ ಅಗತ್ಯವಿದೆಯೆಂದು ಮನದಟ್ಟಾಯಿತು. ಮೇರಿ ಅಂತರಾಷ್ಟ್ರೀಯ ಮಟ್ಟದ ಹಾಗೂ ಖ್ಯಾತಿಯ ಮೊದಲ ಮಹಿಳೆ. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ರೇಲಿ, ಜಾನ್ ವಿಲಿಯಂ ಸ್ಟ್ರಟ್, ಬ್ಯಾರೋನ್ (1842-1919) 1904
Rayleigh , John William Strutt Baron
ಬ್ರಿಟನ್-ಭೌತಶಾಸ್ತ್ರ- ಬೆಳಕು, ಶಬ್ದ, ವಿದ್ಯುತ್ ಕುರಿತಾಗಿ ಸಂಶೋಧಿಸಿದಾತ.
ರೇಲಿ, ಪ್ರತಿಭಾವಂತ ಗಣಿತಜ್ಞನಾಗಿದ್ದು, ಭೌತಶಾಸ್ತ್ರದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಗಣಿತವನ್ನು ಅಳವಡಿಸಿಕೊಳ್ಳುವಲ್ಲಿ ನಿಷ್ಣಾಂತನೆನಿಸಿದ್ದನು. ಇದು ರೇಲಿ ಭೌತಶಾಸ್ತ್ರ, ಅದರ ಪ್ರಯೋಗಗಳತ್ತ ಹೊರಳುವಂತೆ ಮಾಡಿತು. 1873ರಲ್ಲಿ ರೇಲಿಗೆ ಪಿತ್ರಾರ್ಜಿತವಾದ ಆಸ್ತಿ ದಕ್ಕಿತು. ಇದರ ನಂತರ ಎಸೆಕ್ಸ್ನ ಟೆನ್ರಿಂಗ್ ಪ್ಲೇಸ್ನಲ್ಲಿದ್ದ ತನ್ನ ಮನೆಯಲ್ಲಿಯೇ ಪ್ರಯೋಗಾಲಯ ಸ್ಥಾಪಿಸಿದನು. ನಂತರ 1865ರಲ್ಲಿ ಕೇಂಬ್ರಿಜ್ನಿಂದ ಗಣಿತದಲ್ಲಿ ಪದವಿ ಪಡೆದನು. ಈತನ ತಂದೆಗೆ ಲಾರ್ಡ್ ಪದವಿ ದಕ್ಕಿದ್ದಿತು. ಇದೇ ಪದವಿಯನ್ನು ರೇಲಿ 1873ರಲ್ಲಿ ಪಡೆದು ಲಾರ್ಡ್ ರೇಲಿಯೆಂದು ಹೆಸರಾದನು. ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದ ಕಾಲದಲ್ಲಿ ಭೌತಶಾಸ್ತ್ರ ಒಂದು ಪೂರ್ಣ ಪ್ರಮಾಣದ ಅಧ್ಯಯನ ವಿಷಯವಾಗಿರಲಿಲ್ಲ. ಹೆನ್ರಿ ಕ್ಯಾವೆಂಡಿಷ್ ವಂಶದವರು ಕೇಂಬ್ರಿಜ್ಗೆ ದೇಣಿಗೆ ನೀಡಿ ಭೌತಶಾಸ್ತ್ರದ ಶಾಖೆ ತೆರೆದಿದ್ದರು. ಇದರ ಪ್ರಯೋಗಾಲಯದ ಪ್ರಥಮ ಪ್ರಾಧ್ಯಾಪಕನಾಗಿ ಕ್ಲಾರ್ಕ್ ಮ್ಯಾಕ್ಸ್ವೆಲ್ ನಿಯೋಜಿತನಾದನು. ಮ್ಯಾಕ್ಸ್ವೆಲ್ ತೆರವುಗೊಳಿಸಿದ ಸ್ಥಾನ ಅಲಂಕರಿಸಿದ ರೇಲಿ ಅಲ್ಲಿ ಐದುವರ್ಷಗಳ ಕಾಲ ಸೇವೆ ಸಲ್ಲಿಸಿದನು. ಈ ಅವಧಿಯಲ್ಲಿ ಭೌತಶಾಸ್ತ್ರದ ವಿದ್ಯಾರ್ಥಿಗಳ ಸಂಖ್ಯೆ ಹತ್ತರಷ್ಟಾಯಿತು. ರೇಲಿ ಶಬ್ಧ ಹಾಗೂ ಬೆಳಕಿನ ತರಂಗಗಳ ಮೇಲೆ ತನ್ನ ಆರಂಭಿಕ ಸಂಶೋಧನೆಗಳನ್ನು ಕೇಂದ್ರೀಕರಿಸಿದ್ದನು. ಬೆಳಕಿನ ಚದುರಿಕೆ ಅದರ ತರಂಗಾಂತರಕ್ಕೆ ವಿಲೋಮವಾಗಿರುವುದೆಂದು (Inverse) ವಿವರಿಸಿದನು. ಇದರಿಂದ ನೀಲಿ ಬೆಳಕು ಕೆಂಪು ಬೆಳಕಿಗಿಂತ ಹತ್ತರಷ್ಟು ಅಧಿಕವಾಗಿ ಚದುರುವುದೆಂದು, ಈ ಕಾರಣದಿಂದಾಗಿ ಬಿಳಿ ಬೆಳಕು ಬೆಳಗು ಬೈಗಿನಲ್ಲಿ ಕೆಂಪು ಎದ್ದು ಕಾಣುವಂತೆ ಚದುರಿದರೆ, ಆಗಸ ನೀಲಿಯಂತೆ ಗೋಚರಿಸುವುದೆಂದು ಬೆಳಕಿನ ಈ ಚದುರಿಕೆಗೆ ವಾತಾವರಣದಲ್ಲಿನ ಕಣಗಳು ಕಾರಣವೆಂದು ಹೇಳಿದನು. ಆದರೆ ಆಗಸ ಹಾಗೂ ಸಾಗರ ನೀಲಿಯಾಗಿ ಕಾಣುವಂತೆ ಬೆಳಕು ಚದುರಲು ಬೇರೆಯದೇ ಆದ ಸೂಕ್ತ ವಿವರಣೆಯನ್ನು ಸಿ.ವಿ.ರಾಮನ್ ನೀಡಿದನು. ನೈಲ್ ನದಿಯ ದೋಣಿ ಮನೆಯಲ್ಲಿ ರೇಲಿ ಬರೆದ ದಿ ಥಿಯರಿ ಆಫ್ ಸೌಂಡ್ ಅಭಿಜಾತ ಶಾಸ್ತ್ರದಲ್ಲಿನ ಪ್ರಸಿದ್ಧ ಕೃತಿಗಳಲ್ಲಿ ಒಂದೆನಿಸಿತು. ಉತ್ತಮ ಪ್ರಯೋಗಪಟುವಾಗಿದ್ದ ಈತ, ಕೇಂಬ್ರಿಜ್ನಲ್ಲಿ ವೈದ್ಯುತ್ ರೋಧತ್ವ ಹಾಗೂ ಪ್ರವಾಹಗಳ ಅಳತೆ ಮಾಡಿದನು. ಪ್ರೌಟ್, ಅನಿಲಗಳ ಸಾಂದ್ರತೆ ಕುರಿತಾಗಿ, ವಾದಗಳನ್ನು ಮಂಡಿಸಿದ್ದನು. ರ್ಯಾಮ್ಸೆ ಆರ್ಗಾನ್ ಅನಿಲವನ್ನು ಪತ್ತೆ ಹಚ್ಚಿದ್ದನು. ಇವುಗಳಿಂದ ರೇಲಿ, ಪ್ರಭಾವಿತನಾಗಿದ್ದನು. ವಿಕಿರಣ ಹಾಗೂ ರೋಹಿತಗಳ ಬಗೆಗೆ ಆಸಕ್ತನಾಗಿದ್ದ, ಈತ ಕಪ್ಪು ಕಾಯದ ವಿಕಿರಣತೆಯ ಅಧ್ಯಯನ ಮಾಡಿ ರೇಲಿ ಜೀನ್ಸ್ ಸೂತ್ರ ನೀಡಿದನು. ಈ ಸೂತ್ರ ದೀರ್ಘ ತರಂಗಗಳಿಗೆ ಸೂಕ್ತ ವಿವರಣೆ ನೀಡಿದರೆ, ಹ್ರಸ್ವ ತರಂಗಗಳನ್ನು ಅರಿತುಕೊಳ್ಳಲು ವಿಫಲವಾಯಿತು. ಪ್ಲಾಂಕ್, ಕ್ವಾಂಟಂ ಬಲವಿಜ್ಞಾನ ಪ್ರಾರಂಭಿಸಿ, ಇದಕ್ಕೆ ಪರಿಹಾರ ಒದಗಿಸಿದನು. ಪ್ಲಾಂಕ್ನ ಕ್ವಾಂಟಂ ಬಲಶಾಸ್ತ್ರದಲ್ಲಿ ಚೈತನ್ಯ ಪೊಟ್ಟಣಗಳಲ್ಲಿ (ಕ್ವಾಂಟಾ) ಹೊರ ಹೊಮ್ಮುತ್ತದೆ. ರೇಲಿ ಪ್ಲಾಂಕ್ನ ಈ ಪರಿಕಲ್ಪನೆಯನ್ನು ಕೊನೆಯವರೆಗೂ ಪೂರ್ಣವಾಗಿ ಒಪ್ಪಲಿಲ್ಲ. 1904ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದ ರೇಲಿ ಬ್ರಿಟನ್ನ ಬುದ್ದಿ ಜೀವಿ ಪ್ರಧಾನ ಮಂತ್ರಿಯೆಂದು ಖ್ಯಾತನಾಗಿದ್ದ ಎ.ಜೆ.ಬೌಲ್’ಫ್ಲೋರ್ ಸೋದರಿಯನ್ನು ವಿವಾಹವಾಗಿದ್ದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಲೆನಾರ್ಡ್, ಫಿಲೆಫ್ಎಡುಯಾರ್ಡ್ ಆ್ಯಂಟನ್ –(1862-1947) 1905
Lenard , Phillipp Eduard Anton
ಜರ್ಮನಿ-ಭೌತಶಾಸ್ತ್ರ- ಕ್ಯಾಥೊಡ್ ಕಿರಣ ಹಾಗೂ ದ್ಯುತಿ ವೈದ್ಯುತ್ ಪರಿಣಾಮಗಳ (Photo Electric Effect) ಬಗೆಗೆ ಸಂಶೋಧಿಸಿದಾತ.
ವ್ಯಾಪಾರಿಯ ಮಗನಾಗಿದ್ದ ಲೆನಾರ್ಡ್, ಬುಡಾಪೆಸ್ಟ್ನಲ್ಲಿ ವಿದ್ಯಾಭ್ಯಾಸ ಮಾಡಿ, 1907ರಲ್ಲಿ ಜರ್ಮನಿಯ ಹೈಡೆಲ್ ಬರ್ಗ್ನಲ್ಲಿ ಪ್ರಾಧ್ಯಾಪಕನಾದನು.. 1914ರ ವೇಳೆಗೆ ಲೆನಾರ್ಡ್ ಭೌತಶಾಸ್ತ್ರದ ಮೂಲ ಸಂಶೋಧನೆಗಳನ್ನು ಮಾಡಿದ್ದನು. ಕೆಲವು ಲೋಹಗಳ ಮೇಲೆ ಅತಿನೇರಳೆ ಕಿರಣಗಳನ್ನು ಹಾಯಿಸಿದಾಗ ಎಲೆಕ್ಟ್ರಾನ್ಗಳು ಉತ್ಸರ್ಜನೆಗೊಳ್ಳುವುವೆಂದು ತಿಳಿದಿದ್ದನು. ಲೆನಾರ್ಡ್ನ ಪ್ರಯೋಗಗಳಿಂದ ಇಂತಹ ಉತ್ಸರ್ಜನೆ ನಿರ್ದಿಷ್ಟ ತರಂಗಾಂತರಗಳಿದ್ದ ಅತಿ ನೇರಳೆ ಕಿರಣಗಳಿಂದ ಮಾತ್ರ ಸಾಧ್ಯವಿರುವುದು ತಿಳಿಯಿತು. ಈ ತರಂಗಾಂತರ ಕುಗ್ಗಿದಂತೆ ಉತ್ಸರ್ಜಿತ ಎಲೆಕ್ಟ್ರಾನ್ನ ವೇಗವು ಹೆಚ್ಚುವುದು. ನಿರ್ದಿಷ್ಟ ತರಂಗಾಂತರದಲ್ಲಿ, ಕಿರಣಗಳ ತೀವ್ರತೆ ಹೆಚ್ಚಿದಂತೆ ಉತ್ಸರ್ಜಿತಗೊಳ್ಳುವ ಎಲೆಕ್ಟ್ರಾನ್ಗಳ ಸಂಖ್ಯೆಯೂ ಹೆಚ್ಚುವುದು ಗೊತ್ತಾಯಿತು. ಇದನ್ನು ದ್ಯುತಿ ವೈದ್ಯುತ್ ಪರಿಣಾಮವೆಂದು ಗುರುತಿಸಲಾಗಿದೆ. ಐನ್ಸ್ಟೀನ್ ದ್ಯುತಿ ವೈದ್ಯುತ್ ಪರಿಣಾಮಕ್ಕೆ 1905ರಲ್ಲಿ ವಿವರಣೆ ನೀಡಿದನು. ಮ್ಯಾಕ್ಸ್ ಪ್ಲಾಂಕ್ ಇದನ್ನು ನಿರ್ದಿಷ್ಟ ಕ್ವಾಂಟಂಗಳಲ್ಲಿ (ಶಕಲ=ಗಂತಿ=ಗಂಟು)ವಿವರಿಸಿ, ಕ್ವಾಂಟಂ ಬಲವಿಜ್ಞಾನ ಉಗಮಕ್ಕೆ ಕಾರಣನಾದನು. ಲೆನಾರ್ಡ್, ಕ್ಯಾಥೋಡ್ ಕಿರಣಗಳನ್ನು ಎಲೆಕ್ಟ್ರಾನ್ ದೂಲಗಳೆಂದು (Beam) ತೋರಿಸಿದನು. ಕ್ಯಾಥೋಡ್ ಕಿರಣಗಳು ಗಾಳಿ, ಹಾಗೂ ತೆಳು ದೇಹದ ಫಲಕಗಳನ್ನು ಹಾದು ಹೋಗುತ್ತವೆ. ಇದರಿಂದ ಪರಮಾಣು ಋಣ, ಧನ ಆವಿಷ್ಟಗಳೆರಡರ ಸಂಗಮವೆಂದೂ, ಪರಮಾಣುವಿನ ಮಧ್ಯದಲ್ಲಿ ಕ್ಯಾಥೊಡ್ ಕಿರಣಗಳು ಹಾದು ಹೋಗಲು ಖಾಲಿ ಜಾಗವಿರುವುದೆಂದು ತರ್ಕಿಸಿದನು. 1911ರಲ್ಲಿ ರುದರ್’ಫೋರ್ಡ್ , ಮಂಡಿಸಿದ ಪರಮಣು ಸಿದ್ಧಾಂತ ಲೇನಾರ್ಡ್ನ ತರ್ಕವನ್ನು ಬೆಂಬಲಿಸಿತು. ಕ್ಷ-ಕಿರಣಗಳನ್ನು ಯಾರು ಅನಾವರಣಗೊಳಿಸಿದರೆಂಬ ಬಗ್ಗೆ ರಾಂಟ್ಜೆನ್, ಜೆ.ಜೆ.ಥಾಮ್ಸನ್ ಹಾಗೂ ಲೆನಾರ್ಡ್ ಮಧ್ಯೆ ವಿವಾದಗಳೆದ್ದವು. ಲೆನಾರ್ಡ್ ಸ್ವಲ್ಪದರಲ್ಲಿಯೆೀ ಕ್ಷ-ಕಿರಣಗಳನ್ನು ಗುರುತಿಸುವಲ್ಲಿ ವಿಫಲಗೊಂಡಿದ್ದನೆಂದು ನಂಬಲಾಗಿದೆ,. 1934ರಲ್ಲಿ ಲೆನಾರ್ಡ್ ಗ್ರೇಟ್ ಮೆನ್ ಆಫ್ ಸೈನ್ಸ್ ಪುಸ್ತಕ ಪ್ರಕಟಿಸಿದನು. ಇದರಲ್ಲಿ ರಾಂಟ್ಜೆನ್ ಹಾಗೂ ಜೆ.ಜೆ.ಥಾಮ್ಸನ್ರ ಉಲ್ಲೇಖವಿಲ್ಲ. ಮೊದಲ ಜಾಗತಿಕ ಯುದ್ದದಲ್ಲಿ ಜರ್ಮನಿಯ ಸೋಲು, ಏರಿದ ಹಣದುಬ್ಬರ, ಕಿಶೋರಾವಸ್ಥೆಯಲ್ಲಿ ತೀರಿಕೊಂಡ ಮಗನ ನೆನಪಿನಲ್ಲಿ ಲೆನಾರ್ಡ್ ಜರ್ಝರಿತನಾಗಿದ್ದನು. ಐನ್ಸ್ಟೀನ್ ಹಾಗೂ ಇತರರು ಭೌತಶಾಸ್ತ್ರವನ್ನು ಅತಿಯಾಗಿ ಗಣಿತೀಕರಣಗೊಳಿಸಿ, ಅಗ್ರಾಹ್ಯಗೊಳಿಸಿರುವರೆಂದು ಲೆನಾರ್ಡ್ ಬಲವಾಗಿ ನಂಬಿದ್ದನು. 1919ರಲ್ಲಿ ಲೆನಾರ್ಡ್ ಜರ್ಮನ್ ಭೌತಶಾಸ್ತ್ರವನ್ನು ರೂಪಿಸಬೇಕೆಂದೂ, ಇದು ಯಹೂದಿಗಳಿಂದ ಮುಕ್ತವಾಗಿರಬೇಕೆಂದು ಸಾರಿದನು. ಐನ್ಸ್ಟೀನ್ ಅತಿರೇಕದ ಸೈದ್ಧಾಂತಿಕ ನಿಲುವಿನವನೆಂದು ಟೀಕಿಸಿದನು, ಲೆನಾರ್ಡ್, ನಾಝಿ ಆಡಳಿತ ಬೆಂಬಲಿಸಿದ ಮುಖ್ಯವಾಹಿನಿಯ ಏಕೈಕ ವಿಜ್ಞಾನಿಯೆಂದು ಚರಿತ್ರೆಯಲ್ಲಿ ದಾಖಲಾಗಿದ್ದಾನೆ. 1930ರ ವೇಳೆಗೆ ಜರ್ಮನಿಯಿಂದ ಪ್ರತಿಭಾವಂತ ವಿಜ್ಞಾನಿಗಳ ದಂಡು ಹೊರದೇಶಗಳಿಗೆ ವಲಸೆ ಹೋಗಿ, ಅಲ್ಲಿನ ಭೌತಶಾಸ್ತ್ರ ಪ್ರತಿಭೆಗೆ ಮಂಕು ಕವಿಯತೊಡಗಿತು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಥಾಮ್ಸನ್, ಜೋಸೆಫ್’ ಜಾನ್ (ಜೆ.ಜೆ.ಥಾಮ್ಸನ್) (1856-1940) 1906
Thomson , Sir Joseph John
ಬ್ರಿಟನ್-ಭೌತಶಾಸ್ತ್ರ- ಎಲೆಕ್ಟ್ರಾನ್ ಅನಾವರಣಗೊಳಿಸಿದಾತ.
ಥಾಮ್ಸನ್ನ ತಂದೆ ಪುಸ್ತಕದ ವ್ಯಾಪಾರಿಯಾಗಿದ್ದನು. ಈಗ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯವೆಂದು ಹೆಸರಾಗಿರುವ ಆಗಿನ ಓವೆನ್ಸ್ ಕಾಲೇಜಿನಲ್ಲಿ ಥಾಮ್ಸನ್ ಇಂಜಿನಿಯರಿಂಗ್ ಪದವಿಗೆ ಸೇರಿದನು. 1872ರಲ್ಲಿ ತಂದೆಯ ಸಾವಿನಿಂದಾಗಿ ಆರ್ಥಿಕ ಸಂಕಷ್ಟಕ್ಕೊಳಗಾಗಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಬಿಟ್ಟು ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರದ ಅಧ್ಯಯನ ಆರಿಸಿಕೊಳ್ಳಲು ಯತ್ನಿಸಿದನು. ಇದು ಸಾಧ್ಯವಾಗದೇ ಹೋದಾಗ ಇಂಜಿನಿಯರಿಂಗ್ ಸಹಾಯಕನ ತರಬೇತಿ ಪಡೆದುಕೊಂಡನು. ಇಲ್ಲಿ ಉತ್ತಮ ಅಂಕಗಳಿಸಿ, ಕೇಂಬ್ರಿಜ್ನ ಟ್ರಿನಿಟಿ ಕಾಲೇಜಿನಲ್ಲಿ ಓದಲು ವಿದ್ಯಾರ್ಥಿ ವೇತನ ಗಳಿಸಿದನು. 1880ರಲ್ಲಿ ಎರಡನೇ ರ್ಯಾಂಗ್ಲರ್, ಗೌರವದೊಂದಿಗೆ ಹೊರ ಬಂದನು. ರ್ಯಾಲೆಯ ಮರಣದ ನಂತರ ಥಾಮ್ಸನ್ ಕ್ಯಾವೆಂಡಿಷ್ ಪ್ರಾಧ್ಯಾಪಕ ಹಾಗೂ ಟ್ರಿನಿಟಿ ಕಾಲೇಜಿನ ಫೆಲೋ ಆಗಿ ಆಯ್ಕೆಗೊಂಡನು. ಥಾಮ್ಸನ್ ಅತ್ಯುತ್ತಮ ಪ್ರಯೋಗ ಪಟುವಲ್ಲವಾದರೂ ತನ್ನ ವಿದ್ಯಾರ್ಥಿಗಳಿಂದ ತನಗೆ ಬೇಕಾದ ರೀತಿಯಲ್ಲಿ ನಿಖರವಾದ ಪ್ರಯೋಗಗಳನ್ನು ಮಾಡಿಸುವುದರಲ್ಲಿ ಖ್ಯಾತನಾಗಿದ್ದನು. 1883ರಲ್ಲಿ ಸುಳಿ ಉಂಗುರಗಳ ಗಣಿತೀಯ ವಿಶ್ಲೇಷಣೆ ಮಂಡಿಸಿದ ಥಾಮ್ಸನ್, ಕಲ್ಪಿತ ವೈದ್ಯುತ್ ಕಾಂತೀಯ ಕ್ಷೇತ್ರದ ಸುಳಿಗಳಲ್ಲಿನ ಉಂಗುರಗಳೇ ಪರಮಾಣುಗಳೆಂದು ಭಾವಿಸಿದ್ದನು. ಇದರ ಅಧ್ಯಯನಕ್ಕಾಗಿ, ಅಲ್ಪ ಒತ್ತಡದಲ್ಲಿರುವ ಅನಿಲಗಳಲ್ಲಿ, ಅಧಿಕ ವೈದ್ಯುತ್ ಕ್ಷೇತ್ರ ಪ್ರೇರೇಪಿಸಿ, ಕ್ಯಾಥೋಡ್ ಕಿರಣಗಳನ್ನು ಪಡೆದನು. ಹಲವಾರು ಜರ್ಮನ್ ವಿಜ್ಞಾನಿಗಳು ಕ್ಯಾಥೋಡ್ ಕಿರಣಗಳನ್ನು ತರಂಗಗಳೆಂದು ಭಾವಿಸಿದ್ದರು. ಹಟ್ರ್ಸ್, ಕಾಂತಕ್ಷೇತ್ರದಲ್ಲಿ ಇವು ಪಲ್ಲಟಗೊಳ್ಳದ ಕಾರಣ ಇವು ಕಣಗಳಾಗಿರಲಾರವೆಂದು ತೋರಿಸಲು ಯತ್ನಿಸಿದ್ದನು. ಥಾಮ್ಸನ್ ಹಟ್ರ್ಸ್ ರೀತಿಯ ಪ್ರಯೋಗಗಳನ್ನು ಸುಧಾರಿತ, ಬಾಹ್ಯ ಪ್ರಭಾವವಿಲ್ಲದ ಪರಿಸರಗಳಲ್ಲಿ ನಡೆಸಿದನು. 1897ರಲ್ಲಿ ನಿರ್ದಿಷ್ಟ ಪ್ರಯೋಗಗಳಿಂದ ಕ್ಯಾಥೋಡ್ ಕಿರಣಗಳು ಕಾಂತಕ್ಷೇತ್ರದಿಂದ ಪಲ್ಲಟಗೊಳ್ಳುವುದು ಸ್ಪಷ್ಟವಾಯಿತು. ಇದರಿಂದ ಕ್ಯಾಥೋಡ್ ಕಿರಣಗಳನ್ನು ಋಣಾತ್ಮಕವಾಗಿ ಆವಿಷ್ಟಗೊಂಡ ಕಣಗಳೆಂದು ಥಾಮ್ಸನ್ ಸಂಶಯಾತೀತವಾಗಿ ತೋರಿಸಿದನು. ಇವು ಕಾಂತ ಹಾಗೂ ವೈದ್ಯುತ್ ಕ್ಷೇತ್ರಗಳೆರಡರಲ್ಲಿ ಪಲ್ಲಟಗೊಳ್ಳುವುದು ತಿಳಿಯಿತು. ಬೇರೆ ಬೇರೆ ಮೂಲದಿಂದ ಪಡೆದ ಈ ಕಣಗಳ ಆವಿಷ್ಟ ಹಾಗೂ ದ್ರವ್ಯ ರಾಶಿಗಳು ಒಂದೇ ಆಗಿದ್ದವು. 1896ರಲ್ಲಿ ಥಾಮ್ಸನ್ ಅಸಂಸಂದ ಪ್ರಿನ್ಸ್’ಟನ್ ವಿಶ್ವವಿದ್ಯಾಲಯದಲ್ಲಿ ನಾಲ್ಕು ಉಪನ್ಯಾಸಗಳನ್ನು ನೀಡಿ ಅನಿಲಗಳ ಮೂಲಕ ವಿದ್ಯುದ್ವಿಸರ್ಜನೆಯ ಕ್ರಿಯೆ ವಿವರಿಸಿದನು. 1897ರಲ್ಲಿ ಥಾಮ್ಸನ್ ಹೊಸ ಕಣದ ಅಸ್ತಿತ್ವವನ್ನು ಪ್ರಕಟಿಸಿದನು. ಥಾಮ್ಸನ್, ಮುಂದುವರೆದ ಪ್ರಯೋಗಗಳಿಂದ ಈ ಹೊಸ ಕಣಗಳ ಆವಿಷ್ಟ ಜಲಜನಕದ ಪರಮಾಣುವಿಗೆ ಸಮನಾಗಿದೆಯೆಂದು ತಿಳಿಯಿತು. ಆದರೆ, ಈ ಕಣದ ದ್ರವ್ಯ ತೂಕ ಮಾತ್ರ ಜಲಜನಕದ ಸಾವಿರದಲ್ಲಿ ಒಂದರಷ್ಟಿದ್ದಿತು. ಥಾಮ್ಸನ್ ಗುರುತಿಸಿದ ಹೊಸ ಕಣಗಳನ್ನು 20 ವರ್ಷಗಳ ನಂತರ ಸ್ಟೋನಿ ಎಲೆಕ್ಟ್ರಾನ್ ಎಂದು ಹೆಸರಿಸಿದನು. ಥಾಮ್ಸನ್ ನಂತರ ಕ್ಯಾವೆಂಡಿಷ್ ಪ್ರಾಧ್ಯಾಪಕ ಹುದ್ದೆ ಅಲಂಕರಿಸಿದ ರುದರ್ಫೋರ್ಡ್ ಪರಮಾಣು ರಾಚನಿಕ ಸ್ವರೂಪದ ಮೇಲೆ ಹೊಸ ಬೆಳಕು ಚೆಲ್ಲಿದನು. ಥಾಮ್ಸನ್ ತನ್ನ ಪ್ರಯೋಗಗಳಿಗೆ ರೂಪಿಸಿಕೊಂಡಿದ್ದ ಕ್ಯಾಥೋಡ್ ನಳಿಕೆ ಎಲೆಕ್ಟ್ರಾನ್ ಪ್ರಯೋಗಗಳ, ದೂರ ದರ್ಶಕಗಳ ಮೂಲ ಅಂಗವಾಯಿತು. ಗೋಲ್ಡ್ಸ್ಟೀನ್, ಧನ ಕಿರಣಗಳನ್ನು ಪಡೆದಿದ್ದನು. ಇವು ಕ್ಯಾಥೋಡ್ ಕಿರಣಗಳಂತೆ, ವಿಭಿನ್ನ ಅನಿಲಗಳಿಗೆ ಒಂದೇ ಆಗಿರದೆ ಬೇರೆಯಾಗಿದ್ದಿತು. ಈ ಧನ ಕಿರಣಗಳನ್ನು ಬಳಸಿ, ವಿವಿಧ ಧಾತುಗಳ ಪರಮಾಣು ತೂಕವನ್ನು ಹೇಗೆ ನಿರ್ಧರಿಸಬಹುದೆಂದು 1912ರಲ್ಲಿ ಥಾಮ್ಸನ್ ತೋರಿಸಿದನು. ಇದರ ಮುಂದುವರೆದ ಪ್ರಯೋಗಗಳಿಂದ ನಿಯಾನ್ ಅನಿಲ ನಿಯಾನ್-20 ಹಾಗೂ ನಿಯಾನ್-22 ಎಂಬ ಎರಡು ಸಮಸ್ಥಾನಿಗಳನ್ನು (Isotopes) ಹೊಂದಿರುವುದು ತಿಳಿಯಿತು. ಋಣಾವೇಶಗೊಳಿಸಿದ ಸತುವಿನ ಫಲಕವನ್ನು ಅತಿನೇರಳೆ ವಿಕಿರಣಗಳಿಗೆ ಒಡ್ಡಿದಾಗಲೂ ಎಲೆಕ್ಟ್ರಾನ್ಗಳೂ ಉತ್ಸರ್ಜನೆಗೊಳ್ಳುವುವೆಂದು ಥಾಮ್ಸನ್ ತೋರಿಸಿದನು. 1906ರಲ್ಲಿ ಥಾಮ್ಸನ್ಗೆ ನೊಬೆಲ್ ಪ್ರಶಸ್ತಿ ದಕ್ಕಿತು. ಥಾಮ್ಸನ್ ಕ್ಯಾವೆಂಡಿಷ್ ಪ್ರಯೋಗಾಲಯವನ್ನು ಜಗತ್ತಿನ ಪ್ರಯೋಗಶೀಲ ಭೌತಶಾಸ್ತ್ರದ ಕೇಂದ್ರವಾಗುವಂತೆ ಬೆಳೆಸಿದನು. ಇಲ್ಲಿಂದ ಮುಂದೆ ಹಲವಾರು ನೊಬೆಲ್ ಪುರಸ್ಕೃತರು ಹೊರಬಂದರು. ಥಾಮ್ಸನ್ ಮಗ ಜಾರ್ಜ್ ಪಗೆಟ್ ಥಾಮ್ಸನ್ (ಜೆ.ಪಿ.ಥಾಮ್ಸನ್) ಎಲೆಕ್ಟ್ರಾನ್ ಕಣ ಹಾಗೂ ತರಂಗ ಎರಡರಂತೆಯೂ ವರ್ತಿಸುವುದೆಂದು ತೋರಿಸಿ, ನೊಬೆಲ್ ಪ್ರಶಸ್ತಿ ಗಳಿಸಿದನು. 30 ಆಗಸ್ಟ್ 1940 ರಂದು ಥಾಮ್ಸನ್ ನಿಧನನಾದನು. ವೆಸ್ಟ್ ಮಿನ್ಸ್ಟರ್ ಅಬ್ಬೆಯಲ್ಲಿ ನ್ಯೂಟನ್ನ ಸಮಾಧಿಯ ಪಕ್ಕ ಈತನನ್ನು ಹೂಳಲಾಯಿತು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಮೈಖೆಲ್ಸನ್, ಆಲ್ಬರ್ಟ್ ಅಬ್ರಾಹಂ (1852-1931) 1907
Michelson , Albert Abraham
ಅಸಂಸಂ-ಭೌತಶಾಸ್ತ್ರ- ಈಥರ್ ಮಾಧ್ಯಮದ ಅಸ್ತಿತ್ವ ಹುಡುಕಿದಾತ
ಪೋಲೆಂಡ್ನ ಸ್ಟ್ರೆನ್ಲೋನಲ್ಲಿ ಹುಟ್ಟಿದ ಮೈಖೇಲ್ಸನ್. ನಾಲ್ಕು, ವರ್ಷದವನಿರುವಾಗ ಅವನ ತಂದೆ ತಾಯಿಗಳು ಅಸಂಸಂಗಳಿಗೆ ವಲಸೆ ಹೋದರು. ಮೈಖೆಲ್ಸನ್ ಹದಿನೇಳನೇ ವಯಸ್ಸಿನಲ್ಲಿ ಅನ್ನ ಪೋಲಿಸ್ ನೇವಲ್ ಅಕಾಡೆಮಿ ಸೇರಿದನು. ಇಲ್ಲಿಂದ ಪದವಿ ಗಳಿಸಿ, ಭೌತ ಹಾಗೂ ರಸಾಯನಶಾಸ್ತ್ರದ ಬೋಧಕನಾದನು. ಪಾಠ ಮಾಡುವಾಗ ಬೆಳಕಿನ ವೇಗವನ್ನು ಹೇಗೆ ಅಳೆಯಬಹುದೆಂದು ವಿವರಿಸುತ್ತಿದ್ದ ಮೈಖೇಲ್ಸನ್ ಹಿದಕ್ಕಾಗಿ ಮಾಪನೆಯ ಉಪಕರಣಗಳನ್ನು ಉತ್ತಮಗೊಳಿಸತೊಡಗಿದನು. 1880ರಲ್ಲಿ ಎರಡು ವರ್ಷಗಳ ಅವಧಿಗೆ ಯುರೋಪಿಗೆ ಭೇಟಿಯಿತ್ತ ಮೈಖೇಲ್ಸನ್ ಹೆಲ್ಮ್ ಹೋಲ್ಟ್ಸ್ ಪ್ರಯೋಗಾಲಯದಲ್ಲಿ ಮೊದಲ ವ್ಯತಿಕರಣ ಮಾಪಕವನ್ನು (Interferometer) ನಿರ್ಮಿಸಿದನು. ಇದರ ವೆಚ್ಚವನ್ನು ಅಲೆಕ್ಸಾಂಡರ್ ಗ್ರಹಾಂ ಬೆಲ್ ಭರಿಸಿದನು. ಬೆಳಕು,. ಈಥರ್ ಎಂದು ಕರೆಯಲಾಗುವ, ವಿಶ್ವವನ್ನು ವ್ಯಾಪಿಸಿರುವ ಮಾಧ್ಯಮದ ಮೂಲಕ ಹರಿಯುತ್ತಿದೆಯೆಂದು ಆ ಕಾಲದಲ್ಲಿ ಪರಿಗಣಿಸಲಾಗಿದ್ದಿತು,. ಇದರ ಪತ್ತೆಗಾಗಿ ಮೈಖೇಲ್ಸನ್, ವ್ಯತಿಕರಣಮಾಪಕ ಬಳಸಿ ನಡೆಸಿದ ಪ್ರಯೋಗಗಳು ಅಂತಹ ಮಾಧ್ಯಮ ಇಲ್ಲವೆಂದು ಸೂಚಿಸಿದವು. 1881ರಲ್ಲಿ ನೇವಿ ತೊರೆದು ಮೈಖೇಲ್ಸನ್ ಓಹಿಯಾದ ಕ್ಲೀವ್ ಲ್ಯಾಂಡ್ನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. ಇಲ್ಲಿ ಮಾರ್ಲೆ ಜೊತೆಗೂಡಿ ಮತ್ತೊಮ್ಮೆ ಈಥರ್ನ ಪತ್ತೆಗೆ ಪಯೋಗ ಹಮ್ಮಿಕೊಂಡನು. ಇದರಿಂದಲೂ ಈಥರ್ ಅಸ್ತಿತ್ವ ಸಾಬೀತಾಗಲಿಲ್ಲ. 1905ರಲ್ಲಿ ಐನ್ಸ್ಟೀನ್ ಸಾಪೇಕ್ಷತಾವಾದ ಮಂಡಿಸಿ, ವೈದ್ಯುತ್ ಕಾಂತೀಯ ಅಲೆಪ್ರಸರಣಕ್ಕೆ ಮಾಧ್ಯಮದ ಅಗತ್ಯವಿಲ್ಲವೆಂದು ತೋರಿಸಿದನು. ದೂರವನ್ನು ತರಂಗಾಂತರದಲ್ಲಿ ಹೇಳಿದ ಮೈಖೇಲ್ಸನ್, ತಾರೆಗಳ ಕೋನೀಯ ವ್ಯಾಸ ಅಳೆದ ಮೊದಲಿಗ. ಚಂದ್ರನಿಂದ, ಭೂಮಿಯ ಘನದ ಮೇಲಾಗುವ ಪರಿಣಾಮ ಅಳೆದನು. 1907ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದ ಮೊದಲ ಅಮೆರಿಕಾದವನಾಗಿ ಮೈಖೇಲ್ಸನ್ ಚರಿತ್ರೆಯ ಪ್ಯಟಗಳಲ್ಲಿ ಸೇರಿದ್ದಾನೆ. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಗೇಬ್ರಿಯಲ್, ಲಿಪ್ಮನ್ (1845-1921) 1908
Gabriel , Lippmann
ಫ್ರಾನ್ದ್-ಭೌತಶಾಸ್ತ್ರ- ದ್ಯುತೀಕರಣದಿಂದ ಬಣ್ಣದ ಛಾಯಾಬಿಂಬ ಪಡೆಯುವ ವಿಧಾನ ರೂಪಿಸಿದಾತ.
ಲಿಪ್ಮನ್ನ ತಂದೆ, ತಾಯಿ ಲುಕ್ವೆಂಟರ್ನ ಹೊಲೆರಿಕ್ನಲ್ಲಿ ನೆಲೆಸಿದ್ದ ಫ್ರೆಂಚ್ ಮೂಲದವನಾಗಿದ್ದರು. 16 ಆಗಸ್ಟ್ 1845ರಂದು ಈ ಪಟ್ಟಣದಲ್ಲಿಯೇ ಲಿಪ್ಮನ್ ಜನಿಸಿದನು. ಅಲ್ಪ ಕಾಲದಲ್ಲೇ ಲಿಪ್ಮನ್ ಕುಟುಂಬ ಪ್ಯಾರಿಸ್ಗೆ ಹೋಯಿತು. ಲಿಪ್ಮನ್, ತನ್ನ ಪ್ರಾಥಮಿಕ ಶಿಕ್ಷಣವನ್ನು ಮನೆಯಲ್ಲಿಯೇ ಪಡೆದನು. 1858ರಲ್ಲಿ ಲೈಸೀ ನೆಪೋಲಿಯನ್ ಪ್ರೌಢಶಾಲೆಗೆ ಸೇರಿದನು. ಇದಾದ ಹತ್ತು ವರ್ಷಗಳ ನಂತರ ಎಕೊಲೆ ನಾರ್ಮಲೆಗೆ ಸೇರಿದನು. ತನಗೆ ಅಭಿರುಚಿಯಿದ್ದ ವಿಷಯಗಳನ್ನು ಹೊರತು ಪಡಿಸಿ, ಬೇರೆಯವುಗಳತ್ತ ಕಣ್ಣೆತ್ತಿಯೂ ನೋಡದಿದ್ದರಿಂದ, ಲಿಪ್ಮನ್ ಉಪಾಧ್ಯಾಯ ವೃತ್ತಿಗೆ ಅಗತ್ಯವಾದ ಪದವಿ ಪಡೆಯುವಲ್ಲಿ ವಿಫಲನಾದನು. 1873ರಲ್ಲಿ ಫ್ರೆಂಚ್ ಸರ್ಕಾರ, ಜರ್ಮನಿಯಲ್ಲಿ ವಿಜ್ಞಾನದ ಶಿಕ್ಷಣ ವಿಧಾನದ ಅಧ್ಯಯನಕ್ಕೆ ಸಮಿತಿಯೊಂದನ್ನು ನಿಯೋಜಿಸಿತು. ಲಿಪ್ಮನ್ ಇದರ ಸದಸ್ಯನಾದನು. ಇದರಿಂದಾಗಿ ಕುಹ್ನ್ ಹಾಗೂ ಕಿರ್ಕ್ಹಾಫ್ರೊಂದಿಗೆ ಹೈಡೆಲ್ಬರ್ಗ್ನಲಿ ಹೆಲ್ಮ್ ಹೋಲ್ಟ್ಸ್ನೊಂದಿಗೆ ಬರ್ಲಿನ್ನಲ್ಲಿ ಕೆಲಸ ಮಾಡುವ ಅವಕಾಶ ದಕ್ಕಿತು. 1878ರಲ್ಲಿ ಲಿಪ್ಮನ್ ಪ್ಯಾರಿಸ್ನಲ್ಲಿ ಬೋಧಕ ಸಿಬ್ಬಂದಿಯಾದನು. 1885ರಲ್ಲಿ ಗಣಿತೀಯ ಭೌತಶಾಸ್ತ್ರದ ಪ್ರಾಧ್ಯಾಪಕನಾಗಿ ನೇಮಕಗೊಂಡನು. ಇದಾದ
ಮೂರು ವರ್ಷಗಳ ನಂತರ, ಪ್ರಯೋಗಶೀಲ ಭೌತಶಾಸ್ತ್ರದ ಮುಖ್ಯಸ್ಥನಾಗಿದ್ದ ಔಮಿನ್ ನಿವೃತ್ತನಾದನು. ಲಿಪ್ಮನ್ ಈತನಿಂದ ತೆರವಾದ ಸ್ಥಾನ ತುಂಬಿದನು. ಮುಂದೆ ಸಂಶೋಧನಾ ಪ್ರಯೋಗಾಲಯದ ನಿರ್ದೇಶಕನಾದನು. ಕೆಲಕಾಲ ಪ್ಯಾರಿಸ್ನಲ್ಲಿದ್ದ ನಂತರ ಸೊರ್ಬೊನ್ನೆಗೆ ವರ್ಗಾವಣೆಗೊಂಡನು. ಲಿಪ್ಮನ್ ಸ್ವತಂತ್ರ ವಿಚಾರಧಾರೆಯ, ಮುಕ್ತ ಮನಸ್ಸಿನವನಾಗಿದ್ದನು. ವಿದ್ಯುತ್, ಔಷ್ಣೀಯ ಗತಿಶಾಸ್ತ್ರ, ದೃಕ್ ಶಾಸ್ತ್ರ, ದ್ಯುತಿರಸಾಯನಶಾಸ್ತ್ರದಲ್ಲಿ ವಿಶೇಷ ಪರಿಣಿತಿ ಹೊಂದಿದ್ದನು. ಹೈಡೆಲ್ಬರ್ಗ್ನಲ್ಲಿರುವಾಗ ರೋಮನಾಳ ವಿದ್ಯಾಮನ (Capillary Phenomenon) ಹಾಗೂ ವೈದ್ಯುತ್ ಕ್ಷೇತ್ರದ ಮಧ್ಯದ ಸಂಬಂಧ ಕುರಿತು ಹಲವಾರು ಪ್ರಯೋಗಗಳನ್ನು ಕೈಗೊಂಡಿದ್ದನು. ಇದರ ಅಂಗವಾಗಿ ಅತಿ ಸೂಕ್ಷ್ಮ ಸುಕ್ಲಿಷ್ಟ ಸಲಕರಣೆಗಳನ್ನು ನಿರ್ಮಿಸಿದನು. 1886ರಲ್ಲಿ ಬಣ್ಣಗಳನ್ನು ದ್ಯುತಿ ಕ್ರಿಯೆಯ ಮೂಲಕ ಸೆರೆಹಿಡಿಯುವ ವಿಧಾನ ರೂಪಿಸಿದನು. ಆದರೆ ಇದನ್ನು ದೈನಂದಿನ ವ್ಯವಹಾರ ಸಾಧ್ಯತೆಯಾಗಿಸಲು ಹಲವಾರು ಆಡಚಣೆಗಳಿದ್ದವು. ಲಿಪ್ಮನ್ನ ಹಲವಾರು ವರ್ಷಗಳ ಸತತ ಪರಿಶ್ರಮ, ತಾಳ್ಮೆಯ ಪ್ರಯತ್ನಗಳಿಂದ 1891ರಲ್ಲಿ ಇದು ಸಾಧ್ಯವಾಯಿತು. ಆದರೆ ಲಿಪ್ಮನ್ ಬಳಸಿದ ವ್ಯತ್ತಸ್ಥ ಸಂವೇದನೆ ಹೊಂದಿದ ಫಿಲ್ಮ್’ಗಳಿಂದ, ಛಾಯಾಚಿತ್ರಗಳಲ್ಲಿ ಅಲ್ಪಸ್ವಲ್ಪ ದೋಷಗಳು ಉಳಿದಿರುತ್ತಿದ್ದವು. 1893ರಲ್ಲಿ ಇವೆಲ್ಲವನ್ನು ಸರಿಪಡಿಸಿ, ಆಕ್ಯಾಡೆಮಿ ಆಫ್ ಸೈನ್ಸ್ಗೆ ತನ್ನ ಪರಿಪೂರ್ಣ ಛಾಯಾಚಿತ್ರಗಳನ್ನು ಒದಗಿಸಿದನು. 1894ರಲ್ಲಿ ದ್ಯುತಿ ಪ್ರಕ್ರಿಯೆ ಆಧಾರಿತವಾದ ಬಣ್ಣಗಳನ್ನು ಬೇಕಾದಂತೆ ಪಡೆಯಬಲ್ಲ ಸಿದ್ಧಾಂತವನ್ನು ಲಿಪ್ಮನ್ ಮಂಡಿಸಿದನು. 1895ರಲ್ಲಿ ಕಾಲವನ್ನು ಕರಾರುವಕ್ಕಾಗಿ ಅಳೆಯುವ ವಿಧಾನಗಳಲ್ಲಿದ್ದ ಮಾನವನ ಹಸ್ತಕ್ಷೇಪಗಳನ್ನು ನಿವಾರಿಸಿದನು. ವಿಶಿಷ್ಟವಾದ ಛಾಯಾಗ್ರಾಹಕ ತಯಾರಿಸಿದ ಲಿಪ್ಮನ್ ಅದರಿಂದ ತಾರೆಗಳ ಸುಸ್ಪಷ್ಟ ಬಿಂಬಗಳನ್ನು ಪಡೆದನು. ಇವೆಲ್ಲವು ಭೌತಶಾಸ್ತ್ರದ ವಿವಿಧ ಸಂಶೋಧನೆಗಳಿಗೆ ಅಪಾರ ನೆರವಿತ್ತವು. ದ್ಯುತೀಕರಣದಿಂದ ಬಣ್ಣದ ಛಾಯಾಬಿಂಬ ಪಡೆಯುವ ವಿಧಾನ ನೀಡಿದ್ದಕ್ಕಾಗಿ ಲಿಪ್ಮನ್ 1908ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಪ್ಯಾರಿಸ್ನ ಅಕಾಡೆಮಿ ಆಫ್ ಸೈನ್ಸ್ನ ಸದಸ್ಯನಾದ ಲಿಪ್ಮನ್ 1912ರಲ್ಲಿ ಅದರ ಅಧ್ಯಕ್ಷ್ಯನಾದನು. ಲಂದನ್ನ ರಾಯಲ್ ಸೊಸೈಟಿಯ ಸದಸ್ಯನೂ ಆಗಿದ್ದನು. 1921ರಲ್ಲಿ ಸರ್ಕಾರದ ಯೋಜನೆಯ ಅಂಗವಾಗಿ, ಅಸಂಸಂಗಳಿಗೆ ಭೇಟಿ ನೀಡಿದ್ದ ಲಿಪ್ಮನ್ ಅಲ್ಲಿಂದ ಹಿಂದಿರುಗುವಾಗ, ಮಾರ್ಗ ಮಧ್ಯದಲ್ಲಿ ಸಮುದ್ರಯಾನದಲ್ಲಿ ಮರಣ ಹೊಂದಿದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಮಾರ್ಕೊನಿ, ಗೂಗ್ಲಿಯೆಲ್ಮೋ, ಮಾರ್ಕ್ವೆಸ್ (1874-1937) 1909
Marconi , Guglielmo Marquese
ಇಟಲಿ-ಭೌತಶಾಸ್ತ್ರ- ಇಂಜಿನಿಯರ್ ರೇಡಿಯೋ ಟೆಲೆಗ್ರಾಫಿûಯ ಮುಂಚೂಣಿಗ.
ಪ್ರಾಥಮಿಕ ಶಿಕ್ಷಣವನ್ನು ಖಾಸಗಿಯಾಗಿ ಗಳಿಸಿದ ಮಾರ್ಕೊನಿ, ಲಿವೊರ್ನೋ ತಾಂತ್ರಿಕ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಗಳಿಸಿದನು. ಇಪ್ಪತ್ತೊಂದನೇ ವಯಸ್ಸಿನಲ್ಲಿ ಹಟ್ರ್ಸ್ನ ವೈದ್ಯುತ್ಕಾಂತೀಯ ತರಂಗಗಳ ಬಗೆಗೆ ಕೇಳಿ ರೋಮಾಂಚಿತನಾಗಿದ್ದನು. ಮಾರ್ಕೋನಿ, ಒಂದು ಕಿ. ಮೀ ದೂರಕ್ಕೆ ರೇಡಿಯೋ ತರಂಗಗಳನ್ನು ಕಳಿಸುವ ಪ್ರೇಷಕ, ಹಾಗೂ ಗ್ರಾಹಿಗಳನ್ನು ನಿರ್ಮಿಸಿದನು. 1896ರಲ್ಲಿ, ಬ್ರಿಟಿಷ್ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾದ ಮಾರ್ಕೋನಿ, ಮೂರು ವರ್ಷಗಳ ನಂತರ ಮೋರ್ಸ್ ಸಂಕೇತಗಳನ್ನು ಇಂಗ್ಲೀಷ ಕಡಲ್ಗಾಲುವೆಯಾಚೆಗೆ ರವಾನಿಸುವಲ್ಲಿ ಯಶಸ್ವಿಯಾದನು. ಇದು ನೌಕಾದಳವನ್ನು ಸೇರಿದಂತೆ ಬಹು ಜನರ ಗಮನ ಸೆಳೆಯಿತು. ರಾಯಲ್ ನೇವಿಯ ಹಡಗುಗಳಲ್ಲಿ ಮಾರ್ಕೋನಿ ಸಾಧನಗಳು ತಳವೂರಿದವು. 1901ರಲ್ಲಿ ಕಾರ್ನ್ವೇಲ್ನಿಂದ ಕಳಿಸಿದ ಸಂದೇಶಗಳನ್ನು , ಅಟ್ಲಾಂಟಿಕ್ ಸಾಗರದಾಚೆಗಿನ ನ್ಯೂ ಫೌಂಡ್ಲ್ಯಾಂಡ್ನಲ್ಲಿ, ಗಾಳಿಪಟದಿಂದ ಮೇಲೇರಿಸಿದ ಅ್ಯಂಟೇನಾದಿಂದ ಸ್ವೀಕರಿಸಲಾಯಿತು, ಇದರಿಂದಾಗಿ 27ನೇ ವಯಸ್ಸಿನಲ್ಲೇ ಮಾರ್ಕೋನಿ ಮನೆ ಮಾತಾದನು. 1909ರಲ್ಲಿ ನೊಬೆಲ್ ಪ್ರಶಸ್ತಿ ವೀಜೇತನಾದನು. ಮಾರ್ಕೊನಿ, ರೇಡಿಯೋ ತರಂಗಗಳನ್ನು ಅನಾವರಣಗೊಳಿಸಲಿಲ್ಲವಾದರೂ, ಅವುಗಳನ್ನು ಕಳಿಸುವ, ಸ್ವೀಕರಿಸುವ ವ್ಯಾವಹಾರಿಕ ಬಳಕೆಗೆ ತರುವ ಮಾರ್ಗಗಳನ್ನು ಸುಗಮಗೊಳಿಸಿದನು. ಮೊದಲ ಜಾಗತಿಕ ಯುದ್ದದಲಿ, ಬಹು ದೂರಕ್ಕೆ ಕಳಿಸಬಹುದಾದ ಲಘು ತರಂಗದ ರೇಡಿಯೋ ಸಲಕರಣೆ ಸಿದ್ದಗೊಳಿಸಿದನು. 1927ರಲ್ಲಿ ಜಾಗತಿಕ ಯುದ್ದದಲ್ಲಿ, ಬಹು ದೂರಕ್ಕೆ ಕಳಿಸಬಹುದಾದ ಲಘು ತರಂಗಾಂತರದ ರೇಡಿಯೋ ಸಲಕರಣೆ ಸಿದ್ದಗೊಳಿಸಿದನು. 1927ರಲ್ಲಿ ಜಾಗತಿಕ ಮಟ್ಟದ ಟೆಲಿಗ್ರಾಫ್ ಜಾಲ ಹರಡಿದನು. ಮಾರ್ಕೊನಿ ಕೊನೆಯವರೆಗೂ ರೇಡಿಯೋ ತರಂಗಗಳ ಸಂಶೋಧನೆಯಲ್ಲಿದ್ದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ವಾಲ್ಸ್, ಜೊಹಾನ್ನೆಸ್ ಡಿಡರಿಕ್ ವ್ಯಾಂಡರ್ (1837-1923) 1910
Waals , Johannes Diderik Van der
ಡೆನ್ಮಾರ್ಕ್-ಭೌತಶಾಸ್ತ್ರ- ಅನಿಲಗಳ ಸ್ಥಿತಿ ವಿವರಣೆಯ ಸಮೀಕರಣ ನೀಡಿದಾತ.
ವ್ಯಾಂಡರ್ವಾಲ್ಸ್ ತಂದೆ ಬಡಗಿಯಾಗಿದ್ದನು. ವಿದ್ಯಾಭ್ಯಾಸ ಮುಗಿಸಿದಮೇಲೆ ವಾಲ್ಸ್ ಹೇಗ್ನಲ್ಲಿ ಶಾಲಾ ಶಿಕ್ಷಕನಾಗಿ, ನಂತರ ಮುಖ್ಯೋಪಾಧ್ಯಾಯನಾದನು. ನಂತರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಾಠ ಮಾಡುವ ತರಬೇತಿ ಹೊಂದಿದ ವಾಲ್ಸ್, ಲೀಡೆನ್ನಲ್ಲಿ ಭೌತಶಾಸ್ತ್ರದ ಪದವಿ ಪಡೆದನು. 1873ರಲ್ಲಿ ಡಾಕ್ಟರೇಟ್ಗಾಗಿ ಅನಿಲಗಳ ಸ್ಥಿತಿ ಕುರಿತ ಸಂಪ್ರಂಬಂಧ ಮಂಡಿಸಿದನು. ಟಿ.ಆ್ಯಂಡ್ರೂಸ್ ಹಾಗೂ ಇತರರು ನೈಜ ಅನಿಲಗಳು ಆದರ್ಶ ಅನಿಲಗಳ ಸೂತ್ರಗಳಿಗನುಗುಣವಾಗಿ ವರ್ತಿಸುವುದಿಲ್ಲವೆಂದು ಹೇಳಿದ್ದರು. ಆದರ್ಶ ಅನಿಲಗಳ ಸಿದ್ಧಾಂತದಲ್ಲಿ, ಅನಿಲದ ಪರಮಾಣುಗಳಿಗೆ ಗಾತ್ರ ಅಥವಾ ಪರಸ್ಪರ ಆಕರ್ಷಣೆ ಇರುವುದಿಲ್ಲ. ಆ್ಯಂಡ್ರೂಸ್ ನೈಜ ಅನಿಲಗಳಿಗೆ ಒಂದು ನಿರ್ದಿಷ್ಟ ತಾಪಮಾನವಿದ್ದು, ಈ ತಾಪಮಾನದಿಂದ ಕೆಳಗೆ, ಒತ್ತಡ ಮಾತ್ರದಿಂದ ದ್ರವೀಕರಿಸಬಹುದೆಂದು ತೋರಿಸಿದ್ದನು. ವಾಲ್ಸ್, ನೈಜ ಅನಿಲಗಳಿಗೆ ಸಮರ್ಪಕವಾದ ಹೊಸ ಸೂತ್ರ ನೀಡಿದನು. ಇದರಲ್ಲಿ ಅನಿಲದ ಎರಡು ಅನಿಲಗಳ ಮಧ್ಯದ ಪರಸ್ಪರ ಆಕರ್ಷಣೆ ಹಾಗೂ ಪರಮಾಣುಗಳು ಪರಿಗಣಿತವಾಗಿದ್ದವು. ವಾಲ್ಸ್ ನೀಡಿದ ಸೂತ್ರದಲ್ಲಿ ಸ್ಥಿರಗಳನ್ನು ಸರಿಯಾಗಿ ನಿರ್ದರಿಸಿದ್ದೇ ಆದರೆ ನೈಜ ಅನಿಲಗಳ, ವೀಕ್ಷಿತ ಪರಿಣಾಮಗಳು ಸಮರ್ಪಕವಾಗಿರುತ್ತಿದ್ದವು. 1877ರಲ್ಲಿ ವ್ಯಾಂಡರ್ ವಾಲ್ಸ್ ಅ್ಯಮಡಸ್ಟರ್ಡ್ಯಾಂನಲ್ಲಿ ಪ್ರಾಧ್ಯಾಪಕನಾದನು. 1910ರಲ್ಲಿ ವಾಲ್ಸ್ಗೆ ನೊಬೆಲ್ ಪ್ರಶಸ್ತಿ ದಕ್ಕಿತು -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
Rontgen , Wilheim Konarad
ಜರ್ಮನಿ-ಪ್ರಯೋಗಶೀಲ ಭೌತಶಾಸ್ತ್ರ; ಕ್ಷ- ಕಿರಣಗಳನ್ನು ಅನಾವರಣಗೊಳಿಸಿದಾತ.
ರಾಂಟ್ಜೆನ್, ಜೂರಿಕ್ ಪಾಲಿಟೆಕ್ನಿಕ್ನಲ್ಲಿ ಇಂಜಿನಿಯರಿಂಗ್ ಪದವಿಗೆ ಸೇರಿದನು. ಭೌತಶಾಸ್ತ್ರದ ಆಕರ್ಷಣೆಗೊಳಗಾಗಿ, ಇಂಜಿನಿಯರಿಂಗ್ನ್ನು ಮೊಟಕುಗೊಳಿಸಿ ವಿಜ್ಞಾನದ ಪದವೀಧರನಾದನು. ಮುಂದೆ ಜರ್ಮನಿಯ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಬೋಧಿಸಿದನು,. 1895ರಲ್ಲಿ ವುರ್ಜಬರ್ಗ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿದ್ದಾಗ ಕ್ಷ- ಕಿರಣಗಳನ್ನು ಅನಾವರಣಗೊಳಿಸಿದನು. ಅಲ್ಪ ಒತ್ತಡದಲ್ಲಿರುವ ಅನಿಲದ ನಳಿಕೆಯ ಮೂಲಕ ವಿದ್ಯುತ್ ಹಾಯಿಸಿದಾಗ, ಕೊಣೆಯ ಒಂದು ಕತ್ತಲ ಮೂಲೆಯಲ್ಲಿದ್ದ ಪ್ಲಾಟಿನೋಸೈನೈಡ್ ರಾಸಾಯನಿಕ ಲೇಪಿತಗೊಂಡ ಹಲಗೆ ಬೆಳಗುವುದನ್ನು ರಾಂಟ್ಜೆನ್ ಗುರುತಿಸಿದನು. ಸ್ವಲ್ಪ ಕಾಲದ ಪರಿಶೀಲನೆಯ ನಂತರ ನಳಿಕೆಯಲ್ಲಿ ವಿದ್ಯುತ್ ಹಾಯಿಸಿದಾಗ ಹೊರಹೊಮ್ಮುವ ವಿಕಿರಣದಿಂದಾಗಿ,ಹಲಗೆ ಬೆಳಗುವುದು ಖಚಿತವಾಯಿತು. ಈ ವಿಕಿರಣಗಳನ್ನು ರಾಂಟ್ಜೆನ್ ಕ್ಷ-ಕಿರಣಗಳೆಂದು ಕರೆದನು. ಇವು ಕ್ಯಾಥೋಡ್ ಕಿರಣಗಳಿಗಿಂತಲೂ, ಪ್ರಬಲವಾಗಿದ್ದು, ಸರಳ ರೇಖೆಯಲ್ಲಿ ಸಾಗಿ, ಕಾಂತ ಅಥವಾ ವೈದ್ಯುತ್ ಕ್ಷೇತ್ರಗಳಿಂದ ಪಲ್ಲಟಗೊಳ್ಳುವುದಿಲ್ಲವೆಂದು ರಾಂಟಜೆನ್ ತಿಳಿದನು. ಕ್ಷ ಕಿರಣಗಳು ಲೋಹದ ಫಲಕಗಳ ಮೂಲಕ, ದೇಹದ ಮೂಲಕ ಹಾದು ಹೋಗುವ ಸಾಮಥ್ರ್ಯ ಹೊಂದಿದ್ದು, ಛಾಯಾಗ್ರಹಣದ ರೀತಿಯಲ್ಲಿ ಹಾಳೆಯ ಮೇಲೆ ತಾವು ತೂರಿ ಹೋದ ವಸ್ತುವಿನ ಚಿತ್ರಗಳನ್ನು ಮೂಡಿಸುತ್ತಿದ್ದವು. ರಾಂಟ್ಜೆನ್ ಇವು ಬೆಳಕಿನಂತಹ ಆದರೆ ಅದಕ್ಕಿಂತಲೂ ಹ್ರಸ್ವ ತರಂಗಾಂತರದ ವೈದ್ಯುತ್ ಕಾಂತೀಯ ವಿಕಿರಣಗಳೆಂದು ವಿವರಿಸಿದನು. 1912ರಲ್ಲಿ ವಾನ್, ಲೆನಾರ್ಡ್ ಸಾಕ್ಷಿ ಒದಗಿಸಿದನು. 1901ರಲ್ಲಿ ಭೌತಶಾಸ್ತ್ರದ ಪ್ರಥಮ ನೊಬೆಲ್ ಪ್ರಶಸ್ತಿ ಗಳಿಸಿದ ರಾಂಟ್ಜೆನ್, ಗೌರವಾರ್ಥವಾಗಿ ಕ್ಷ-ಕಿರಣಗಳನ್ನು ರಾಂಟ್ಜೆನ್ ಕಿರಣಗಳೆಂದು ಹಾಗೂ ಕ್ಷ-ಕಿರಣ ಗುಟ್ಟಿಯ (Dose) ಏಕಮಾನಕ್ಕೆ ರಾಂಟ್ಜೆನ್ ಎಂದು ಹೆಸರಿಸಲಾಗಿದೆ. ಕ್ಷ-ಕಿರಣ ಭೌತಶಾಸ್ತ್ರ, ವೈದ್ಯಕೀಯ ಅಧ್ಯಯನಗಳಲ್ಲಿ ಕ್ರಾಂತಿ ತಂದು ದೈನಂದಿನ ಜನಜೀವನದಲ್ಲಿ ಹಾಸು ಹೊಕ್ಕಾಯಿತು. 1912ರಲ್ಲಿ ಬ್ರಾಗ್ ಕ್ಷ-ಕಿರಣಗಳನ್ನು ಬಳಸಿ ಸ್ಪಟಿಕಗಳ ಅಣು ರಚನೆ ನಿರ್ಧರಿಸಿದನು. ರಾಂಟ್ಜೆನ್ ತನ್ನ ಯಾವ ಸಂಶೋಧನೆಗಳಿಗೂ ಏಕಸ್ವಾಮ್ಯ ಪಡೆಯಲಿಲ್ಲ. ಅಷ್ಟೇ ಅಲ್ಲದೆ ಬವೇರಿಯಾದ ರಾಜ ನೀಡಿದ ವಾನ್ ಬಿರುದು ತಿರಸ್ಕರಿಸಿ, ಜನಪರ ನಿಲುವನ್ನು ತಳೆದನು. 1920ರಲ್ಲಿ ಪ್ರಾರಂಭವಾದ ಹಣದುಬ್ಬರಕ್ಕೆ ನಲುಗಿದ ರಾಂಟಜೆನ್ ಬಡತನದಲ್ಲಿಯೇ ಮರಣ ಹೊಂದಿದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಲೊಹ್ರೆಂಟ್ಸ್, ಹೆಂಡ್ರಿಕ್ ಅ್ಯಂಟನ್ (1903-1971) 1902
Lorentz , Hendrick Antoon
ಡೆನ್ಮಾರ್ಕ್-ಸೈದ್ಧಾಂತಿಕ ಭೌತಶಾಸ್ತ್ರ- ಎಲೆಕ್ಟ್ರಾನ್ ಹಾಗೂ ವೈದ್ಯುತ್ ಕಾಂತೀಯ ಶಾಸ್ತ್ರಗಳ ಸಿದ್ಧಾಂತಗಳಿಗೆ ಗಣನೀಯ ಕೊಡುಗೆ ನೀಡಿದಾತ.
ಲೊಹ್ರೆಂಟ್ಸ್, ಅರ್ನ್ಹೆಮ್ ಹಾಗೂ ಲೀಡೆನ್ಗಳಲ್ಲಿ ಅಧ್ಯಯನ ಪೂರೈಸಿದನು. ಇಪ್ಪತ್ತನಾಲ್ಕನೇ ವಯಸ್ಸಿನಲ್ಲಿ ಬೆಳಕಿನ ಪ್ರತಿಫಲನ ಕುರಿತು ಈತ ಪ್ರಕಟಿಸಿದ ಲೇಖನದಿಂದಾಗಿ ಅವನು ಲೀಡೆನ್ನ ಭೌತಶಾಸ್ತ್ರ ವಿಭಾಗದ ಪೀಠ ಅಲಂಕರಿಸಿದನು. 1912 ಟೆಯ್ಲರ್ ಇನ್ಸ್ಟಿಟಿಟ್ಯೂಟ್ನ ನಿರ್ದೇಶಕನಾದನು. ಲೊಹ್ರೆಂಟ್ಸ್ ಸಂಪ್ರಬಂಧ ಎರಡು ಮಾಧ್ಯಮಗಳಿರುವಾಗ ಮ್ಯಾಕ್ಸ್ವೆಲ್ನ ತರಂಗದ ಸಮೀಕರಣಗಳನ್ನು ಹೇಗೆ ಪರಿಹರಿಸಬೇಕೆಂದು ತೋರಿಸಿತು. ಚಲಿಸುತ್ತಿರುವ ಮಾಧ್ಯಮದಲ್ಲಿ ಬೆಳಕಿನ ಸ್ವಭಾವ ಕುರಿತು ಫ್ರೆನೆಲ್ ಸೂತ್ರವನ್ನು ಲೊಹ್ರೆಂಟ್ಸ್ ವಿಶ್ಲೇಷಿಸಿದನು,. 1892ರಲ್ಲಿ ಎಲೆಕ್ಟ್ರಾನ್ ಸಿದ್ಧಾಂತ ಪ್ರಕಟಿಸಿ, ಎಲೆಕ್ಟ್ರಾನ್ಗಳು ಈಥರ್ನಲ್ಲಿ ಹುದುಗಿರುವುವೆಂದೂ, ಅವು ಮ್ಯಾಕ್ಸ್’ವೆಲ್ನ ವೈದ್ಯುತ ಕಾಂತೀಯ ತರಂಗಗಳನ್ನು ವರ್ಗಾಯಿಸಿ, ತಮ್ಮದೇ ಆದ ಕ್ಷೇತ್ರ ಬಲವನ್ನು ಹೊಂದಿವೆಯೆಂದು ಲೊಹ್ರೆಂಟ್ಸ್ ಬಲವಾಗಿ ವಾದಿಸಿದನು. 1889ರಲ್ಲಿ ಹೀವಿಸೈಡ್ ಸ್ವತಂತ್ರವಾಗಿ ಇದೇ ಬಗೆಯ ಬಲಗಳನ್ನು ಸೂಚಿಸಿದ್ದನು. ಲೊಹ್ರೆಂಟ್ಸ್ ಸೂಕ್ಷ್ಮ ಮಟ್ಟದಲ್ಲಿ ಕ್ರಿಯಾಶೀಲನಾಗಿರುವ ಎಲೆಕ್ಟ್ರಾನ್ಗಳು ಹೇಗೆ ಸ್ಥೂಲ ರೂಪದಲ್ಲಿ ಎದ್ದು ಕಾಣುವ ಪರಿಣಾಮಗಳಿಗೆ ಕಾರಣವೆಂದು ವಿವರಿಸಿದನು. 1899ರಲ್ಲಿ ಈತ ಎಲೆಕ್ಟ್ರಾನ್ ಎಂಬ ಪದ ಟಂಕಿಸಿದನು. ಎಲೆಕ್ಟ್ರಾನ್ಗಳನ್ನು ಕ್ಯಾಥೋಡ್ ಕಿರಣಗಳಿಗೆ ಸಂಬಂಧಿಸಿದನು. ಎಲೆಕ್ಟ್ರಾನ್ಗಳು ಕಂಪಿಸಿದಾಗ,. ಮ್ಯಾಕ್ಸ್ವೆಲ್ ಸೂಚಿಸಿದ ವೈದ್ಯುತ್ ಕಾಂತೀಯ ಅಲೆಗಳು ಉದಿಸುತ್ತವೆಯೆಂದು ಲೊಹ್ರೆಂಟ್ಸ್ ಪ್ರತಿಪಾದಿಸಿದನು. ಝೀಮನ್ ಬೆಳಕಿನ ರೋಹಿತದ ಸಾಲುಗಳು ಕಾಂತಕ್ಷೇತ್ರದ ಪ್ರಭಾವದಲ್ಲಿ ಸೀಳಲ್ಪಡುವ ಝೀಮನ್ ಪರಿಣಾಮ ಗುರುತಿಸಿದನು. ಝೀಮನ್ ಹಾಗೂ ಲೊಹ್ರೆಂಟ್ಸ್ 1902ರ ನೊಬೆಲ್ ಪ್ರಶಸ್ತಿ ಪಡೆದರು. ಭೌತಶಾಸ್ತ್ರದಲ್ಲಿ ಎಲೆಕ್ಟ್ರಾನ್ ಸಿದ್ಧಾಂತ ಅತ್ಯಂತ ಯಶಸ್ವಿಯಾಯಿತಲ್ಲದೆ, ಅದು ದ್ಯುತಿ ವೈದ್ಯುತ್ ಪರಿಣಾಮ (Photoelectric Effect) ವಿವರಿಸಲು ಸೋತಾಗ ಅದನ್ನು ಪರಿಷ್ಕರಿಸಲು ಹೊಸದಾದ ಕ್ವಾಂಟಂ ಸಿದ್ಧಾಂತ ಸೃಜಿಸಲಾಯಿತು. ಲೊಹ್ರೆಂಟ್ಸ್ , ಮೈಕೆಲ್ಸನ್ ಮತ್ತು ಮಾರ್ಲೆ ಪ್ರಯೋಗವನ್ನು ವಿಶ್ಲೇಷಿಸಿ, ಚಲಿಸುತ್ತಿರುವ ಕಾಯಗಳು ಅವು ಚಲಿಸುತ್ತಿರುವ ದಿಕ್ಕಿನಲ್ಲಿ ಸ್ವಲ್ಪ ಸಂಕೋಚನಗೊಳ್ಳುತ್ತಿದೆಯೆಂದು ಸಾಧಿಸಿದನು. ಫಿûಟ್ಜೆರಾಲ್ಡ್ ಸ್ವತಂತ್ರವಾಗಿ ಇಂತಹುದೇ ತೀರ್ಮಾನಗಳಿಗೆ ಬಂದಿದ್ದನು. ಅದಕ್ಕಾಗಿ ಇದನ್ನು ಫಿಟ್ಜೆರಾಲ್ಡ್-ಲೊಹ್ರೆಂಟ್ಸ್ ಸಂಕುಚನವೆಂದು ಕರೆಯುತ್ತಾರೆ. 1904ರಲ್ಲಿ ಲೊಹ್ರೆಂಟ್ಸ್ ಇದಕ್ಕೆ ಗಣಿತೀಯ ವಿವರಣೆ ಅಭಿವೃದ್ದಿಗೊಳಿಸಿದನು. 1905ರಲ್ಲಿ ಐನ್ಸ್ಟೀನ್ರ ವಿಶೇಷ ಸಾಪೇಕ್ಷತಾ ಸಿದ್ಧಾಂತದಲ್ಲಿ ಇದು ತನ್ನ ಪರಿಪೂರ್ಣ ಅರ್ಥ ಕಂಡಿತು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಝೀಮನ್, ಪೀಟರ್ (1865-1943) 1902
Ziemann , Pieter
ಡೆನ್ಮಾರ್ಕ್-ಭೌತಶಾಸ್ತ್ರ- ಕಾಂತಕ್ಷೇತ್ರಗಳಲ್ಲಿ ರೋಹಿತದ ಸಾಲುಗಳು ಸೀಳುವುದನ್ನು ಅನಾವರಣಗೊಳಿಸಿದಾತ.
ಝೀಮನ್ ತಂದೆ ಕ್ಯಾರರಿನಸ್ ಝೀಮನ್ ಝಾನ್ನೆಮೈರ್ ಎಂಬ ಹಳ್ಳಿಯಲ್ಲಿ ಪಾದ್ರಿಯಾಗಿದ್ದನು. ಪೀಟರ್ 25 ಮೇ 1865 ರಂದು ಈ ಹಳ್ಳಿಯಲ್ಲೇ ಜನಿಸಿದನು. ಪೀಟರ್ ಝೀರಿಕ್ಝಿ ಪಟ್ಟಣದಲ್ಲಿ ಪ್ರೌಢಾಶಾಲಾ ವ್ಯಾಸಂಗ ಮುಗಿಸಿ ಅಭಿಜಾತ ಭಾಷೆಗಳ ಅಧ್ಯಯನಕ್ಕೆಂದು ಡೆಲ್ಫ್ಟ್ಗೆ ಹೋದನು. ಆ ಕಾಲದಲ್ಲಿ ಗ್ರೀಕ್, ಲ್ಯಾಟಿನ್ನಂತಹ ಭಾಷಾ ಪ್ರೌಢಿಮೆ ವಿಶ್ವವಿದ್ಯಾಲಯದ ಪ್ರವೇಶಕ್ಕೆ ಅತ್ಯವಶ್ಯಕವಾಗಿದ್ದವು. ಇಲ್ಲಿರುವಾಗ ಸಾರ್ವಜನಿಕ ನಿರ್ಮಾಣದ ವಿಭಾಗದ ಇಂಜಿನಿಯರ್ ಆಗಿದ್ದ ಡಾ. ಸಿ.ಲೆಲಿಯ ಮನೆಯಲ್ಲಿದ್ದನು. ಇದರಿಂದ ಪೀಟರ್’ಗೆ ತಾಂತ್ರಿಕ ಹಾಗೂ ವ್ಶೆಜ್ಞಾನಿಕ ವಿಷಯಗಳಲ್ಲಿ ಅಭಿರುಚಿ ಬೆಳೆಯಿತು. ಇಲ್ಲಿರುವಾಗಲೇ ಕ್ಯಾಮೆರ್ಲಿಂಗ್ ಒನ್ನೆಸ್ನ ಸಂಪರ್ಕ ಝೀಮನ್ಗೆ ಒದಗಿತು. ಮುಂದೆ 1913ರಲ್ಲಿ ಕ್ಯಾಮರ್ಲಿಂಗ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಕ್ಯಾಮರ್ಲಿಂಗ್, ಝೀಮನ್ಗಿಂತ ಹನ್ನೆರಡು ವರ್ಷ ದೊಡ್ಡವನಾಗಿದ್ದರೂ ಅವರಿಬ್ಬರ ಮಧ್ಯದ ಸಮಾನ ಮನಸ್ಕತೆಗೇನೂ ಕೊರತೆಯಿರಲಿಲ್ಲ. ಝೀಮನ್ ಶಾಖ, ವೈದ್ಯುತ್ ಭೌತಶಾಸ್ತ್ರಗಳಲ್ಲಿ ಹೊಂದಿದ್ದ ಪಾಂಡಿತ್ಯ, ಪ್ರಯೋಗಗಳನ್ನು ನಡೆಸುವಾಗ ತೋರುತ್ತಿದ್ದ ಕೌಶಲ್ಯ ಕ್ಯಾಮರ್ಲಿಂಗ್ನ ಮನ ಗೆದ್ದಿದ್ದಿತು. 1815ರಲ್ಲಿ ಝೀಮನ್ ಲೈಡ್ನ ವಿಶ್ವವಿದ್ಯಾಲಯ ಸೇರಿದನು. ಇಲ್ಲಿ ಕ್ಯಾಮರ್ಲಿಂಗ್ ಒನ್ನೆಸ್ ಹಾಗೋ ಲೊಹ್ರೆಂಟ್ಸ್ನ ಮಾರ್ಗದರ್ಶನ ದಕ್ಕಿತು. 1890ರಲ್ಲಿ ಪೀಟರ್, ಲೊಹ್ರೆಂಟ್ಸ್ನ ಸಹಾಯಕನಾಗಿ ನೇಮಕಗೊಂಡನು. ಇದರಿಂದ ಕೆರ್ ಪರಿಣಾಮವನ್ನು ವಿಸ್ತೃತವಾಗಿ ಅಧ್ಯಯನ ಮಾಡುವುದು ಸಾಧ್ಯವಾಯಿತು. 1893ರಲ್ಲಿ ಡಾಕ್ಟರೇಟ್ ಪದವಿಗಳಿಸಿ, ಸ್ಟ್ರಾಸ್ಬರ್ಗ್ನ ಕೊಹ್ಲ್’ರಾಷ್ ಸಂಸ್ಥೆ ಸೇರಿದನು. ಇಲ್ಲಿ ಕೊಹೆನ್ನ ಕೈಕೆಳಗೆ ಆರು ತಿಂಗಳಕಾಲ ಕೆಲಸ ಮಾಡಿದನು. 1894ರಲ್ಲಿ ಲೈಡೆನ್ಗೆ ಮರಳಿ 1895ರಿಂದ 1897ರವರೆಗೆ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದನು. ಇಲ್ಲಿ ಸೋಡಿಯಂ ಹಾಗೂ ಲಿಥಿಯಂ ಧಾತುವಿನ ರೋಹಿತದ ಸಾಲುಗಳು, ಕಾಂತಕ್ಷೇತ್ರದ ಪ್ರಭಾವದಲ್ಲಿ ಅಗಲಗೊಳ್ಳುವುದನ್ನು ಝೀಮನ್ ಗುರುತಿಸಿದನು. ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ರೋಹಿತದ ಸಾಲುಗಳು ಎರಡು ಮುರು ಸಾಲುಗಳಾಗಿ ಸೀಳಿ ಹೋಗುವುದು ಖಚಿತವಾಯಿತು. ಲೊಹ್ರೆಂಟ್ಸ್ ಪರಮಾಣುವಿನಲ್ಲಿ ಕಂಪಿಸುತ್ತಿರುವ ಎಲೆಕ್ಟಾನ್ಗಳೇ ಇದಕ್ಕೆ ಕಾರಣವೆಂದು ಹೇಳಿದ್ದನು. ಝೀಮನ್ ಪ್ರಯೋಗಗಳು ಇದಕ್ಕೆ ಸಾಕ್ಷಿಯೊದಗಿಸಿದವು. ಬೆಳಕಿನ ಪಥಕ್ಕೆ ಸಮಾಂತರದಲ್ಲಿ ಪ್ರಬಲ ಕಾಂತಕ್ಷೇತ್ರ ನಿರ್ಮಿಸಿದಾಗ ರೋಹಿತದ ಸಾಲುಗಳು ಎರಡಾಗಿಯೂ, ಲಂಬ ದಿಕ್ಕಿನಲ್ಲಿ ಕಾಂತಕ್ಷೇತ್ರವಿದ್ದಾಗ ಮೂರಾಗಿಯೂ ಸೀಳುತ್ತವೆ. ಬೊಹ್ರ್ನ ಪರಮಾಣು ಮಾದರಿ ಈ ವಿದ್ಯಾಮಾನವನ್ನು ವಿವರಿಸಬಲ್ಲದು. ಆದರೆ ಝೀಮನ್ ಪರಿಣಾಮದಲ್ಲಿ ಇವು ಹಲವಾಗಿ ಸೀಳುತ್ತಿದ್ದವು. ಇದಕ್ಕೆ ವಿವರಣೆ ನೀಡಲು ಪೂರ್ಣ ಪ್ರಮಾಣದ ಕ್ವಾಂಟಮ್ ಸಿದ್ಧಾಂತ ರೂಪು ತಳೆಯಬೇಕಾಯಿತು. ಪೂರ್ಣ ಪ್ರಮಾಣದ ಕ್ವಾಂಟಂ ಸಿದ್ಧಾಂತದಲ್ಲಿ ಎಲೆಕ್ಟ್ರಾನ್ಗಳು ಗಿರಕಿಯನ್ನು ಸಹ ಪರಿಗಣಿಸಲಾಯಿತು. ಇದಕ್ಕಾಗಿ ಉಹ್ಲೆನ್ಬೆಕ್, ಗೌಡ್ಸ್ಮಿತ್ 1926ರ ನೊಬೆಲ್ ಪ್ರಶಸ್ತಿ ಪಡೆದರು. 1902ರಲ್ಲಿ ಝೀಮನ್ ಹಾಗೂ ಲೊಹ್ರೆಂಟ್ಸ್, ಪರಮಾಣುಗಳ ಕಾಂತೀಯ ದೃಕ್ ಪರಿಣಾಮ ಹೊರಗೆಡವಿಟ್ಟಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದರು. 1908ರಲ್ಲಿ ಹ್ಯಾಲೆ ,ಝೀಮನ್ ಪರಿಣಾಮ ಬಳಸಿ ಸೂರ್ಯನ ಕಾಂತಕ್ಷೇತ್ರ ನಿರ್ಧರಿಸಿದನು. ಝೀಮನ್ ಪರಿಣಾಮದ ಅಧ್ಯಯನದ ಪಲವಾಗಿ ವೈದ್ಯುತ್ ಕಾಂತೀಯತೆ ಹಾಗೂ ಬೆಳಕಿನ ಐಕ್ಯತಾ ಸಿದ್ಧಾಂತ ಮೂಡಿತು. ಝೀಮನ್ನ ಈ ಸಂಶೋಧನೆ ಏಕಕಾಲಕ್ಕೆ ಲೊಹ್ರೆಂಟ್ಸ್ನ ಸೈದ್ಧಾಂತಿಕ ನಿರ್ಧಾರಗಳಿಗೆ ಸಾಧನೆ ಒದಗಿಸಿ, ಎಲ್ಲಾ ಬಗೆಯ ಬೆಳಕುಗಳ ಧೃವೀಕರಣ ಸಾಬೀತಾಗಿ, ಋಣಾತ್ಮಕ ಕಣಗಳ ಅಸ್ತಿತ್ವವನ್ನು ಸಾರಿತು. ಇದಾದ ಕೇವಲ ಒಂದೇ ವರ್ಷದಲ್ಲಿ ಜೆ.ಜೆ.ಥಾಮ್ಸನ್ ಮುಕ್ತ ಎಲೆಕ್ಟ್ರಾನ್ಗಳ ಅಸ್ತಿತ್ವ ಸಾರಿದನು. ಇದು ಝೀಮನ್ ಮಂಡಿಸಿದ ಬೆಳಕು ಕಾಂತತ್ವ ಹಾಗೂ ವೈದ್ಯುತ್ ಕ್ಷೇತ್ರಗಳ ಸಂಬಂಧವನ್ನು ಸ್ಪುಟಗೊಳಿಸಿತು. ಝೀಮನ್, ಸೂರ್ಯನ ಪ್ರಬಲ ಕಾಂತಕ್ಷೇತ್ರ, ದೂರದಿಂದ ಬರುವ ಆಕಾಶ ಕಾಯಗಳ ರೋಹಿತದ ಮೇಲೂ ಪ್ರಭಾವ ಬೀರಬಹುದೆಂದು ಸೂಚಿಸಿದನು. 1908ರಲ್ಲಿ ಮೌಂಟ್ ವಿಲ್ಸನ್ ವೀಕ್ಷಣಾಲಯದ ಖಗೋಳಶಾಸ್ತ್ರಜ್ಞ. ಜೆ.ಇಹೇಲ್ ತಾನು ಪಡೆದ ತಾರೆಗಳ ಛಾಯಾಬಿಂಬಗಳಿಂದ ಇದು ಸರಿಯೆಂದು ತೋರಿಸಿದನು. ಝೀಮನ್ ಜೆ.ಡೆ ಗೀರ್ನೊಂದಿಗೆ 38ಎಅರ್,64 ಎನ್ಸಿ ಎಂಬ ಎರಡು ಹೊಸ ಸಮಸ್ಥಾನಿಗಳನ್ನು ಪತ್ತೆ ಹಚ್ಚಿದನು. ಆ್ಯಮಸ್ಟರ್ ವಿಶ್ವವಿದ್ಯಾಲಯದಿಂದ ಝೀಮನ್ಗೆ ಪ್ರಾಧ್ಯಾಪಕನಾಗುವ ಆಹ್ವಾನ ದಕ್ಕಿತು. 1900ರಲ್ಲಿ ಇಲ್ಲಿಯೇ ವಿಶಿಷ್ಟ ಪ್ರಾಧ್ಯಾಪಕನಾಗಿ ಬಡ್ತಿ ಹೊಂದಿದನು. 1908ರಲ್ಲಿ ವ್ಯಾಂಡರ್ ವಾಲ್ನಿವೃತ್ತನಾದನು. ಇದರಿಂದ ತೆರವಾದ ಭೌತಶಾಸ್ತ್ರ ಪ್ರಯೋಗಾಲಯದ ನಿರ್ದೇಶಕ ಸ್ಥಾನ ಝೀಮನ್ಗೆ ದಕ್ಕಿತು. 1923ರಲ್ಲಿ ಝೀಮನ್ ಪ್ರಯೋಗಗಳಿಗಾಗಿಯೇ ಹೊಸದಾದ ಭೌತಶಾಸ್ತ್ರ ಪ್ರಯೋಗಾಲಯ ನಿರ್ಮಾಣಗೊಂಡಿತು. ಕಂಪನ ರಹಿತ ತಳಹದಿ ಒದಗಿಸಲು ಇಲ್ಲಿ ಝೀಮನ್ನ ಅಗತ್ಯಕ್ಕೆ ತಕ್ಕಂತಹ 250 ಟನ್ ತೂಕದ ಕಾಂಕ್ರಿಟ್ ಪೀಠವನ್ನು ಛಾವಣಿಯಿಂದ ನೇತುಹಾಕಲಾಯಿತು. ಇಲ್ಲಿ ಝೀಮನ್ ಹಲವಾರು ಪ್ರಯೋಗಗಳನ್ನು ಕೈಗೊಂಡನು. ಈಗ ಇದು ಆ್ಯಮಸ್ಟಾರ್ ಡ್ಯಾಂ ವಿಶ್ವವಿದ್ಯಾಲಯದ ಪೀಟರ್ ಝೀಮನ್ ಪ್ರಯೋಗಾಲಯವೆಂದು ಖ್ಯಾತವಾಗಿದೆ. ಜಗತ್ತಿನ ಹಲವಾರು ವಿಖ್ಯಾತ ವಿಜ್ಞಾನಿಗಳು ಇಲ್ಲಿ ಭೇಟಿ ನೀಡಿದ, ಪ್ರಯೋಗ ನಡೆಸಿದ ಕೀರ್ತಿ ಈ ಪ್ರಯೋಗಾಲಯಕ್ಕಿದೆ. ಝೀಮನ್ಗೆ ಹಲವಾರು ಬಾರಿ ವಿದೇಶಗಳಿಂದ ಅತ್ಯುನ್ನತ ಹುದ್ದೆಗಳು ಅರಸಿ ಬಂದರೂ ಅವನ್ನು ತಿರಸ್ಕರಿಸಿ, ಈ ಪ್ರಯೋಗಾಲಯದಲ್ಲೇ ಉಳಿದನು. 1935ರಲ್ಲಿ ನಿವೃತ್ತನಾದನು. ಪೀಟರ್ನ ಖ್ಯಾತ ಶಿಷ್ಯರಲ್ಲಿ ಸಿ.ಜೆ. ಬಕ್ಕರ್, ಗೌಡ್ಸ್ಮಿತ್ ಉಹ್ಲೆನ್ಬೆಕ್ ಪ್ರಮುಖರು. 1892ರಲ್ಲಿ ಪೀಟರ್ ಬರೆದ ವೈಜ್ಞಾನಿಕ ಲೇಖನವೊಂದಕ್ಕೆ ಹಾರ್ಲೇಮನ್ಲ್ಲಿರುವ ಡ್ಯಾನಿಷ ವೈಜ್ಞಾನಿಕ ಸಮಾಜದಿಂದ ಬಂಗಾರದ ಪದಕ ದಕ್ಕಿದ್ದಿತು. ಝೀಮನ್ ಸ್ಟ್ರಾಸ್ಬರ್ಗ್ನಲ್ಲಿರುವಾಗ ದ್ರವಗಳಲ್ಲಿ ಹಾದು ಹೋಗುವ ವೈದ್ಯುತ್ ಅಲೆಗಳ ಹೀರಿಕೆ ಅಧ್ಯಯನ ನಡೆಸಿದ್ದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಬೆಕುರೆ, (ಆ್ಯಂಟೊನಿ) ಹೆನ್ರಿ (1852-1908) - 1903
Becquerel , Antoine Henri
ಫ್ರಾನ್ಸ್- ಭೌತಶಾಸ್ತ್ರ- ವಿಕಿರಣಪಟುತ್ವವನ್ನು (Radioactivity) ಅನಾವರಣಗೊಳಿಸಿದಾತ
ಬೆಕುರೆ ತಾತ ಹಾಗೂ ತಂದೆ ಭೌತಶಾಸ್ತ್ರಜ್ಞರಾಗಿದ್ದರು. ಅವರ ನೆರಳಿನಲ್ಲೇ ಬೆಕುರೆ ಭೌತಶಾಸ್ತ್ರ ಅಭ್ಯಸಿಸಿದನು.ಅವರ ಪ್ರಭಾವಕ್ಕೊಳಗಾಗಿ ವರ್ಣಪ್ರದೀಪ್ತಿಯ (Fluoroscence) ಬಗ್ಗೆ ಆಸಕ್ತಿ ತಳೆದಿದ್ದನಲ್ಲದೆ, ಎಕೊಲೆ ಪಾಲಿಟೆಕ್ನಿಕ್ ನಲ್ಲಿ ತನ್ನ ತಂದೆಯ ಸ್ಥಾನವನ್ನು ಅಲಂಕರಿಸುವಲ್ಲಿ ಯಶಸ್ವಿಯಾದನು. 1895ರಲ್ಲಿ ಪ್ರಾಧ್ಯಾಪಕನಾದನು. ಆಕಸ್ಮಿಕವಾಗಿ ಯುರೇನಿಯಂ ಲವಣದ ಬದಿಗಿಟ್ಟಿದ್ದ. ಛಾಯಾಗ್ರಹಣ ¥sóÀಲಕ ಕಪ್ಪಾಗಿರುವುದನ್ನು ಗವiನಿಸಿದನು ಇದು ಕಪ್ಪಾಗಲು ಅವನ್ನು ಯಾವುದೇ ಬೆಳಕಿಗೆ ಒಡ್ಡಲಾಗಿಲ್ಲವೆಂದು ಖಚಿತಪಡಿಸಿಕೊಂಡನು. ಇದರಿಂದ ಅವನಿಗೆ ಯುರೇನಿಯಂ ಲವಣದ ಯಾವುದೋ ಪ್ರಭಾವದಿಂದ ಇವು ಕಪ್ಪಾಗುವುದು ನಿಶ್ಚಿತವೆನಿಸಿತು. ಬೆಳಕಿನಂತೆ ಪ್ರತಿಫಲನಗೊಳ್ಳದ ಯುರೇನಿಯಂನ ವಿಕಿರಣಶೀಲತೆಯೇ ಇದಕ್ಕೆ ಕಾರಣವೆಂದೂ ಇಂತಹ ವಿಕಿರಣಶೀಲತೆ ಗಾಳಿಯನ್ನು ಅಯಾನೀಕರಣಗೊಳಿಸುವುದೆಂದೂ ಕಂಡು ಹಿಡಿದನು. 1895ರಲ್ಲಿ ರಾಂಟ್ಜೆನ್ ಅನಾವರಣಗೊಳಿಸಿದ ಕ್ಷ-ಕಿರಣಕ್ಕೆ ಇಂತಹುದೇ ಸ್ವಭಾವಗಳಿದ್ದರೂ, ಅದು ವಿಕಿರಣಶೀಲತೆಗಿಂತ ಭಿನ್ನವಾದುದು. 1903ರಲ್ಲಿ ಬೆಕುರೆ, ಕ್ಯೂರಿ ಜೊತೆ ಸೇರಿ ನೊಬೆಲ್ ಪ್ರಶಸ್ತಿ ಪಡೆದನು. ಬೆಕುರೆ ಕಾಂತೀಯ ಪರಿಣಾಮ, ಸ್ಪಟಿಕಗಳಿಂದ ಬೆಳಕಿನ ಹೀರಿಕೆಗಳ ಬಗ್ಗೆ ಸಾಕಷ್ಟು ಕೆಲಸ ಮಾಡಿದನಾದರೂ, ವಿಕಿರಣಶೀಲತೆಯ ಅನಾವರಣಕಾರನೆಂತಲೇ ಖ್ಯಾತನಾಗಿದ್ದಾನೆ. ತನ್ನ ಬಳಿಯಿದ್ದ ರೇಡಿಯಂ , ಚರ್ಮವನ್ನು ಸುಡುವುದೆಂದು ಬೆಕುರೆ ಅರಿತನು. ಮುಂದೆ ಇದೇ ತಳಹದಿಯ ಮೇಲೆ ಕ್ಯಾನ್ಸರ್ ರೋಗ ಚಿಕಿತ್ಸೆಗೆ ವಿಕಿರಣ ಚಿಕೆತ್ಸೆ ರೂಪುಗೊಂಡಿತು. ಯಾವುದೇ ವಿಕಿರಣಶೀಲ ಧಾತು, ಪ್ರತಿ ಸೆಕೆಂಡಿಗೆ ಹೊರಸೂಸುವ ವಿಕಿರಣವನ್ನು ಸೂಚಿಸಲು ಬಳಸುವ ಮಾನಕವನ್ನು ಗೌರವಾರ್ಥವಾಗಿ ಬೆಕುರೆ ಎಂದು ಕರೆಯಲಾಗಿದೆ. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಕ್ಯೂರಿ, ಪೀರೆ (1859-1906 ) 1903
Curie , Pierre
ಫ್ರಾನ್ಸ್-ಭೌತಶಾಸ್ತ್ರ - ಪೀಝೋ-ವೈದ್ಯುತ್ ಪರಿಣಾಮವನ್ನು ಕಂಡು ಹಿಡಿದಾತ.ವಿಕಿರಣಶೀಲ ಅಧ್ಯಯನಾಸಕ್ತ
ಸೊರೆಬೊನ್ನೆಯ ವೈದ್ಯನ ಮಗನಾಗಿದ್ದ, ಪೀರೆ ಅಲ್ಲಿಯೇ ಪದವಿ ಗಳಿಸಿ, 1878ರಲ್ಲಿ ಸಹಾಯಕ ಬೋಧಕನಾದನು. 1882ರಲಿ ‘ಸ್ಕೂಲ್ ಆಫ ಇಂಡಸ್ಟ್ರೀಯಲ್ ಫಿನಿಕ್ಸ್ ಅಂಡ್ ಕೆಮಿಸ್ಟ್ರಿ’ ಪ್ರಯೋಗಾಲಯದ ಮುಖ್ಯಸ್ಥನಾಗಿ ನೇಮಕಗೊಂಡನಲ್ಲದೆ , 1904ರಲ್ಲಿ ಸೊರೆಬೊನ್ನೆಯಲ್ಲಿ ಸ್ಥಾಪಿತವಾಗಿದ್ದ ಭೌತಶಾಸ್ತ್ರದ ಪೀಠಕ್ಕೆ ನೇಮಕಗೊಂಡನು. ಪೀರೆ ಹಾಗೂ ಅವನ ಸೋದರ ಜಾಕ್ವೆಸ್ ಮೊದಲ ಬಾರಿಗೆ ಒಂದು ನಿರ್ದಿಷ್ಟ ವಿದ್ಯಾಮಾನವನ್ನು ಗುರುತಿಸಿ ಅದನ್ನು ‘ಪೀಝೊ-ಪರಿಣಾಮ’ವೆಂದು ಕರೆದರು. ಪೀಝೋ-ವೈದ್ಯುತ್ ಪರಿಣಾಮದಲ್ಲಿ ಕ್ವಾರ್ಟ್ಸ್ನಂತಹ ಸ್ಪಟಿಕಗಳು ವಿರೂಪಗೊಂಡಾಗ , ಅವುಗಳ ಎರಡು ವಿರುದ್ದ ಮುಖಗಳಲ್ಲಿ ವಿರುದ್ದವಾದ ವೈದ್ಯುತಾವಿಷ್ಟವಿರುತ್ತದೆ. ಅಥವಾ ಇದಕ್ಕೆ ಪ್ರತಿಯಾಗಿ,ಈ ಸ್ಪಟಿಕಗಳ ವಿರುದ್ದ ಮುಖಗಳನ್ನು ವೈದ್ಯುತಾವಿಷ್ಟಗೊಳಿಸಿದರೆ ಅವು ವಿರೂಪಗೊಳ್ಳುತ್ತವೆ. ತೀವ್ರವಾಗಿ ಬದಲಾಗುವ ವಿದ್ಯುತ್ ಪ್ರವಾಹದಿಂದ, ಈ ಹರಳುಗಳು ಅದೇ ತೀವ್ರತೆಯಲ್ಲಿ ವಿರೂಪಗೊಂಡು ಕಂಪಿಸುತ್ತವೆ. ಈ ಪರಿಣಾಮವನ್ನು ಶ್ರವಣಾತೀತ ಶಬ್ಧದ ಉತ್ಪಾದನೆಗೆ ಬಳಸಬಹುದು. ಪೀಝೋ ವೈದ್ಯುತ್ ಪರಿಣಾಮಕ್ಕೆ ಒಳಗಾಗುವ ಸ್ಪಟಿಕಗಳನ್ನು ಮೈಕ್ರೋಫೋನ್, ಒತ್ತಡ ಮಾಪಕ, ಕ್ವಾರ್ಟ್ಸ್ ಕಂಪಕ ಹಾಗೂ ಕ್ವಾರ್ಟ್ಸ್ ಕೈಗಡಿಯಾರಗಳಲ್ಲಿ ಬಳಸಲಾಗುತ್ತಿದೆ. ಜಾಕ್ವೆಸ್ ಹಾಗೂ ಪೀರೆ ಈ ಪರಿಣಾಮವನ್ನು ಬಳಸಿ ಅತ್ಯಲ್ಪ ವಿದ್ಯುತ್ ಪ್ರವಾಹಗಳನ್ನು ಅಳೆಯುವ ಮಾಪಕಗಳನ್ನು ರೂಪಿಸಿದರು. ಮುಂದೆ ಮಿಕಿರಣಶೀಲತೆಯನ್ನು ಅಳೆಯಲು ಪೀರೆಯು ಪತ್ನಿ ಮೇರಿ, ಇದೇ ಉಪಕರಣವನ್ನು ಬಳಸಿದಳು. ಪೀರೆ ಫೆರೋ ಕಾಂತೀಯತೆ ಮೇಲೆ ಶಾಖದ ಪರಿಣಾಮವನ್ನು ಕುರಿತಾಗಿ ಅಧ್ಯಯನ ಪ್ರಾರಂಭಿಸಿದನು. ಇದರ ಫಲಿತಾಂಶವಾಗಿ, ಫೆರೋಕಾಂತೀಯ ವಸ್ತುಗಳು, ವಸ್ತು ನಿರ್ದಿಷ್ಟವಾಗಿ , ಒಂದು ನಿರ್ದಿಷ್ಟ ತಾಪಮಾನವನ್ನು ತಲುಪಿದನಂತರ, ಫೆರೋಕಾಂತೀಯ ಗುಣಗಳನ್ನು ಕಳೆದುಕೊಂಡು ಅನುಕಾಂತೀಯವಾಗುತ್ತದೆಯೆಂದು (Paramagnetic) ತಿಳಿದು ಬಂದಿತು. ಈ ನಿರ್ದಿಷ್ಟ ತಾಪಮಾನವನ್ನು ಕ್ಯೂರಿ ಬಿಂದು ಎಂದು ಗುರುತಿಸಲಾಗಿದೆ. ಪಾರಕಾಂತೀಯ (Diamagnetic) ಸಾಮಗ್ರಿಗಳ ಕಾಂತೀಯ ಅಂಗೀಕಾರ (Succeptibility) ತಾಪಮಾನದಿಂದ ಸ್ವತಂತ್ರವಾಗಿದ್ದು, ಅನುಕಾಂತೀಯ ಸಾಮಾಗ್ರಿಗಳಿಗೆ ನಿರಪೇಕ್ಷ ತಾಪಕ್ಕೆ ಅನುಲೋಮವಾಗಿರುವುದೆಂಬ ‘ಕ್ಯೂರಿ ನಿಯಮ’ವನ್ನು ಸಹ ಪೀರೆ ನೀಡಿದ್ದಾನೆ. ಮೇರಿಯನ್ನು ಮದುವೆಯಾದ ನಂತರ, ಪೀರೆ, ಅವಳ ಸಂಶೋಧನೆಗೆ ನೆರವಾಗಲು ತನ್ನ ಸಂಶೋಧನೆಗಳನ್ನು ನಿಲ್ಲಿಸಿದನು. ಮೇರಿಯೊಂದಿಗೆ ಸೇರಿ, ವಿಕಿರಣಶೀಲತೆಯ ಅರಿವಿಗಾಗಿ ಶ್ರಮಿಸಿದ್ದರಿಂದ, 1903ರ ನೊಬೆಲ್ ಪ್ರಶಸ್ತಿಯನ್ನು ಪತ್ನಿ ಮೇರಿ ಹಾಗೂ ಬೆಕೂರೆ ಜೊತೆ ಪಡೆದನು. ಪೀರೆ ಒಂದು ಗ್ರಾಂ ರೇಡಿಯಂ ಗಂಟೆಗೆ 500 ಜೌಲ್ನಷ್ಟು ಚೈತನ್ಯ ಬಿಡುಗಡೆಗೊಳಿಸುವುದನ್ನು ತೋರಿಸಿ, ಅಣ್ವಯಿಕ ಚೈತನ್ಯದ ಅಂದಾಜನ್ನು ನೀಡಿದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಕ್ಯೂರಿ, ಮೇರಿ (1867-1934) 1903 &1911
Curie, Marie
ಪೋಲೆಂಡ್-ಫ್ರಾನ್ಸ್- ಭೌತಶಾಸ್ತ್ರ ವಿಕಿರಣಪಟು ಧಾತುಗಳಾದ (Radioactive Elements) ಪೊಲೇನಿಯಂ ಹಾಗೂ ರೇಡಿಯಂಗಳನ್ನು ಅನಾವರಣಗೊಳಿಸಿದಾಕೆ -–ಎರಡು ಬಾರಿ ನೊಬೆಲ್ ಪ್ರಶಸ್ತಿ ಪಡೆದಾಕೆ.
ಮೇರಿ ಕ್ಯೂರಿಯ ಮೂಲ ಹೆಸರು ಮಾನ್ಯ ಸ್ಲ್ಕೊಡೋವಸ್ಕಾ. ಮೇರಿ. ರಷ್ಯನ್ ಪ್ರಾಬಲ್ಯದ ಪೆÇೀಲೆಂಡ್ನಲ್ಲಿ ಕಡು ಬ ಡವ ಕುಟುಂಬದಲ್ಲಿ ಹುಟ್ಟಿ ಬೆಳೆದಳು. ತೀವ್ರ ದೇಶಾಭಿಮಾನಿಗಳಾಗಿದ್ದ ಮೇರಿಯ ತಂದೆ, ತಾಯಿಗಳು , ಪೋಲಿಷ್ ಭಾಷೆ ಹಾಗೂ ಸಂಸ್ಕೃತಿಗಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟಿದ್ದರು. ಮೇರಿಯ ತಂದೆ ಗಣಿತ ಹಾಗೂ ಭೌತಶಾಸ್ತ್ರದ ಬೋಧಕನಾಗಿದ್ದು, ತಾಯಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಳಾಗಿದ್ದಳು. ಮೇರಿ ಬಾಲ್ಯದಿಂದಲೇ ಭೌತಶಾಸ್ತ್ರದತ್ತ ಆಕರ್ಷಿತಳಾಗಿದ್ದಳಾದರೂ , ಕಡು ಬಡತನದ ಕೌಟುಂಬಿಕ ಹಿನ್ನೆಲೆಯಲ್ಲಿ ಅವಳಿಗೆ ಉನ್ನತ ವ್ಯಾಸಂಗ ಮಾಡುವುದೇ ಆಸಾಧ್ಯವೆಂಬ ಸ್ಥಿತಿ ಬಂದೊದಗಿತು. ಅದಲ್ಲದೆ ಪೋಲೆಂಡ್ನಲ್ಲಿ ಆ ಕಾಲಕ್ಕೆ ಮಹಿಳೆಯರು ಉನ್ನತ ವಿಧ್ಯಾಭ್ಯಾಸ ಮಾಡುವ ಅವಕಾಶಗಳು, ಹಾಗೂ ಸಾಮಾಜಿಕ ಒಪ್ಪಿಗೆಯೂ ಇರಲಿಲ್ಲ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮೇರಿಯ ಸೋದರಿ ಬ್ರೊನ್ಯಾ ಅವಳ ನೆರವಿಗೆ ನಿಂತಳು. ಹೇಗಾದರೂ ಮಾಡಿ ಮೇರಿ ಉನ್ನತ ವಿದ್ಯಾಭ್ಯಾಸ ಮಾಡಲು ಬ್ರೊನ್ಯಾ ನೆರವೀಯಬೇಕೆಂದೂ, ಅದಕ್ಕೆ ಪ್ರತಿಯಾಗಿ ಮೇರಿಯೂ ಬ್ರಾನ್ಯಾಳಿಗೆ ನೆರವಾಗಬೇಕೆಂದೂ ಸೋದರಿಯರಲ್ಲಿ ಒಪ್ಪಂದವೊಂದಾಯಿತು. ಇದಕ್ಕಾಗಿ ಬ್ರೊನ್ಯಾ ಚರ್ಚ್ನ ಗವರ್ನೆಸ್ ಕೆಲಸಕ್ಕೆ ಸೇರಿದಳು. 1891ರಲ್ಲಿ ಮೇರಿ, ಭೌತಶಾಸ್ತ್ರದ ಅಧ್ಯಯನಕ್ಕಾಗಿ ಪ್ಯಾರಿಸ್ಗೆ ಬಂದು ನೆಲೆಸಿದಳು. ಪರಿಪೂರ್ಣತೆಯತ್ತ ಸದಾ ನೋಟವಿಟ್ಟಿದ್ದ ಮೇರಿ ಅಷ್ಟೇ ಸ್ವತಂತ್ರ ಮನೋಭಾವದವಳೂ, ಶ್ರಮ ಸಾಹಸಿಯೂ ಆಗಿದ್ದಳು. 1893ರಲ್ಲಿ ಸೊರಬೊನ್ನೆ ವಿಶ್ವ ವಿಧ್ಯಾಲಯದಲ್ಲಿ ಪ್ರಥಮ ಸ್ಥಾನ ಗಳಿಸಿ, ಪದವಿ ಸಂಪಾದಿಸಿದಳು. ಮುಂದಿನ ವರ್ಷ ಪೋಲೆಂಡ್ನಿಂದ ದೊರೆತ ಶಿಷ್ಯವೇತನದಲ್ಲಿ ಗಣಿತದ ಅಧ್ಯಯನ ಮಾಡಿ, ವಿಶ್ವವಿದ್ಯಾಲಯಕ್ಕೆ ದ್ವಿತೀಯ ಸ್ಥಾನ ಗಳಿಸಿದಳು. ಈ ಅವಧಿಯಲ್ಲಿ ಮೇರಿ, ಪೀರೆ ಕ್ಯೂರಿಯನ್ನು ಬೇಟಿಯಾದಳು. ಆಗ್ಗೆ 35 ವಯಸ್ಸಾಗಿದ್ದ ಪೀರೆ ಸ್ಕೂಲ್ ಆಫ್ ಇಂಡಸ್ಟ್ರೀಯಲ್ ಫಿನಿಕ್ಸ್ ಅಂಡ್ ಕೆಮೆಸ್ಟ್ರಿ ಸಂಸ್ಥೆಯಲ್ಲಿ ಪೀಝೋ ವೈದ್ಯುತ ಶಾಸ್ತ್ರದ ಮೇಲೆ ಕೆಲಸ ಮಾಡುತ್ತಿದ್ದನು. ವಿದ್ಯಾಭ್ಯಾಸದ ನಚಿತರ ಪೋಲೆಂಡಿಗೆ ಮರಳಿ ಉಪನ್ಯಾಸಕಳಾಗಬೇಕೆಂದಿದ್ದ ಮೇರಿ ಪೀರೆಯ ಪರಿಚಯವಾದ ನಂತರ ತನ್ನ ನಿರ್ಧಾರ ಬದಲಿಸಿ, 1895ರಲ್ಲಿ ಅವನನ್ನು ಮದುವೆಯಾದುದಲ್ಲದೆ ಮೇರಿ ಕ್ಯೂರಿಯೆಂದು ಗುರುತಿಸಲ್ಪಟ್ಟಳು.
1892ರಲ್ಲಿ ಬೆಕೂರೆ, ಯುರೇನಿಯಂ ಲವಣಗಳಲ್ಲಿನ ವಿಕಿರಣಶೀಲತೆಯನ್ನು ಕಂಡು ಹಿಡಿದನು. ಡಾಕ್ಟರೇಟ್ ಪದವಿ ಸಂಶೋಧನಾ ವಿಷಯದ ಹುಡುಕಾಟದಲ್ಲಿದ್ದ ಮೇರಿಗೆ ಬೆಕೂರೆ ಗುರುತಿಸಿದ ಹೊಸ ವಿದ್ಯಾಮಾನ ಗಮನ ಸೆಳೆಯಿತು. ತನ್ನ ಗಂಡನ ಪ್ರಯೋಗಾಲಯದಲ್ಲೇ ಕೆಲಸ ಮಾಡುತ್ತಾ ಮೇರಿ , ವಿಕಿರಣಶೀಲತೆ ಯುರೇನಿಯಂನ ಅಣ್ವಯಿಕ ಗುಣವೆಂತಲೂ, ಯುರೇನಿಯಂನಂತೆ ಥೋರಿಯಂ ಸಹ ವಿಕಿರಣಶೀಲವೆಂತಲೂ, ತೋರಿಸಿದಳು. 1897ರಲ್ಲಿ ಮೇರಿ ಐರೇನ್ಗೆ ಜನ್ಮ ನೀಡಿದಳು. ಮುಂದೆ ಐರೇನ್ ಕೂಡ ನೊಬೆಲ್ ಪ್ರಶಸ್ತಿ ಪುರಸ್ಕೃತಳಾದಳು. ಹಲವಾರು ನೈಸರ್ಗಿಕ ಖನಿಜಗಳನ್ನು ವಿಕಿರಣಶೀಲ ಅಧ್ಯಯನಕ್ಕೆ ಆರಿಸಿಕೊಂಡ ಮೇರಿ ಪಿಚ್ಬ್ಲೆಂಡ್ ಹಾಗೂ ಚಾರ್ಕೋಲೈಟ್ ಅದಿರುಗಳಿಂದ ಹೊಮ್ಮುವ ವಿಕಿರಣಶೀಲತೆ , ಯುರೇನಿಯಂ ಹಾಗೂ ಥೋರಿಯಂಗಿಂತ ಪ್ರಬಲವಾಗಿರುವುದು ತಿಳಿಯಿತು. ಇದರಿಂದ ಮೇರಿ ಈ ಅದಿರುಗಳಲ್ಲಿ ಯುರೇನಿಯಂಗಿಂತ ಹೆಚ್ಚು ಪ್ರಬಲವಾದ ವಿಕಿರಣಶೀಲ ಸರಕಿರುವುದಾಗಿ ಅನುಮಾನಿಸಿದಳು. ಪಿಚ್ಬ್ಲೆಂಡನಿಂದ ಈ ಹೊಸ ಧಾತುವನ್ನು ಪ್ರತ್ಯೀಕಿಸಲು ಮೇರಿ ಪ್ರಾರಂಭಿಸಿದಳು. ಇದಕ್ಕಾಗಿ ಅವಳು ಆಯ್ದುಕೊಂಡಿದ್ದ ಅಂಶಿಕ ಸ್ಪಟಿಕೀಕರಣ (Partial Crystallisation) ಬಹು ಪ್ರಯಾಸಕರ ಮಾರ್ಗವಾಗಿದ್ದಿತು. ಹೆಂಡತಿಗೆ ನೆರವಾಗಲೋಸುಗ ಪೀರೆ ಕ್ಯೂರಿ ತನ್ನ ಸ್ವಂತ ಸಂಶೋಧನೆಗೆ ರಾಜೀನಾಮೆ ನೀಡಿದನು. ಆಗಿನ ಕಾಲಕ್ಕೆ ವಿಕಿರಣಶೀಲತೆಯಿಂದ ಮಾನವರ ಮೇಲಾಗುವ ಅಪಾಯಗಳ ಅರಿವಿರದ ಕ್ಯೂರಿ ದಂಪತಿಗಳು ಯಾವುದೇ ಸುರಕ್ಷ ಕ್ರಮ ಕೈಗೊಳ್ಳದೆ ಸಂಶೋಧನೆ ಮುಂದುವರೆಸಿದರು. ಕ್ಯೂರಿಗಳು ಸಿದ್ದಪಡಿಸಿದ ಟಿಪ್ಪಣಿಗಳಲ್ಲಿ ಕೊನೆ,ಕೊನೆಗೆ ಅತ್ಯಂತ ಪ್ರಬಲ ವಿಕಿರಣಶೀಲತೆಯ ಅಪಾಯದ ಎಚ್ಚರಿಕೆಗಳು ದಾಖಲಾಗಿವೆ. 1898ರ ಜುಲೈನಲ್ಲಿ ಕ್ಯೂರಿ ದಂಪತಿಗಳು ಎರಡು ಹೊಸ ವಿಕಿರಣಶೀಲ ಧಾತುಗಳ ಅಸ್ತಿತ್ವವನ್ನು ಜಗತ್ತಿಗೆ ಸಾರಿದರು. ತನ್ನ ತಾಯ್ನಾಡಿನ ಗೌರವರ್ಥವಾಗಿ ಮೇರಿ ಅದರಲ್ಲಿ ಒಂದನ್ನು ಪೊಲೋನಿಯಂ ಎಂದು ಹೆಸರಿಸಿದಳು. ಇದೇ ವರ್ಷದ ಡಿಸೆಂಬರನಲ್ಲಿ ಪೊಲೋನಿಯಂಗಿಂತ ಪ್ರಬಲ ವಿಕಿರಣಶೀಲ ಯುರೇನಿಯಂನ್ನು ಪ್ರತ್ಯೇಕಿಸಿದರು. ಬೊಹಿಮಿಯಾದ ತ್ಯಾಜ್ಯ ಗಣಿಗಳಿಂದ ಪಡೆದ ಕಚ್ಚಾ ಅದಿರಿನಿಂದ , ಯುರೇನಿಯಂನ್ನು ಪ್ರತ್ಯೇಕಿಸಲು ಮನೆಯ ಹಿತ್ತಲಿನಲ್ಲಿದ್ದ ಷೆಡ್ನಲ್ಲಿ ಅವಿರತ ಶ್ರಮಪಟ್ಟರು. ಹಲವು ಹಂತದ, ಹಲವು ವರ್ಷಗಳ ಶ್ರಮದ ಫಲವಾಗಿ 1902ರಲ್ಲಿ ಅವರು 100 ಮಿ.ಲಿಗ್ರಾಂ ಯುರೇನಿಯಂನ್ನು ಶುದ್ದ ರೂಪದಲ್ಲಿ ಪಡೆಯುವಲ್ಲಿ ಸಾರ್ಥಕತೆ ಕಂಡರು. ಈ ಧಾತು ಎಷ್ಟು ಪ್ರಬಲವಾಗಿತ್ತೆಂದರೆ, ಸುತ್ತಲಿನ ಗಾಳಿಯನ್ನು ಅಯೋನೀಕರಿಸುತ್ತಿತ್ತಲ್ಲದೆ, ನೀರನ್ನು ವಿಯೋಜಿಸಿ ಶಾಖ ಬಿಡುಗಡೆ ಮಾಡುತ್ತಿದ್ದು ಕತ್ತಲಲ್ಲೂ ಹೊಳೆಯುತ್ತಿದ್ದಿತು.
1903ರಲ್ಲಿ ಮೇರಿ ಕ್ಯೂರಿ , ಡಾಕ್ಟರೇಟ್ ಗಾಗಿ ಸಂಪ್ರಬಂಧ ಮಂಡಿಸಿ, ಫ್ರಾನ್ಸ್ನಲ್ಲಿ ಆ ಕೀರ್ತಿಗೆ ಪಾತ್ರಳಾದ ಮೊದಲ ಮಹಿಳೆ ಎನಿಸಿದಳು. 1903ರಲ್ಲಿ ಕ್ಯೂರಿ ದಂಪತಿಗಳಿಗೆ, ಬೆಕೂರೆ ಜೊತೆ ಸೇರಿದಂತೆ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ದಕ್ಕಿತು. 1904ರಲ್ಲಿ ಕ್ಯೂರಿ ದಂಪತಿಗಳಿಗೆ ಎರಡನೇ ಹೆಣ್ಣು ಮಗು ಈವ್ ಜನಿಸಿದಳು. ಆದರೆ ಅದಿರಿನಿಂದ, ಯುರೇನಿಯಂನ್ನು ಪ್ರತ್ಯೇಕಿಸುವಾಗ ದೀರ್ಘಾವಧಿ ವಿಕಿರಣಶೀಲತೆಗೆ ತುತ್ತಾಗಿದ್ದ ಪೀರೆಯ ಆರೋಗ್ಯ ಹದಗೆಡುತ್ತಾ ಬಂದಿತು. 1904ರಲ್ಲಿ ಪೀರೆಯನ್ನು ಸೊರೆಬೊನ್ನೆಯ ಭೌತಶಾಸ್ತ್ರದ ಪ್ರಾಧ್ಯಾಪಕನಾಗಿ ನೇಮಿಸಲಾಯಿತಲ್ಲದೆ, ಮೇರಿಯನ್ನು ಪೀರೆಗಾಗಿ ನಿರ್ಮಿಸಲು ಪ್ರಾಯೋಜಿತಗೊಂಡಿದ್ದ ಪ್ರಯೋಗಾಲಯದ ಉಸ್ತುವಾರಿ ಮುಖ್ಯಸ್ಥೆಯನ್ನಾಗಿಸಲಾಯಿತು. ಈ ಪ್ರಯೋಗಾಲಯ 1915ರಲ್ಲಿ ಪ್ರಾರಂಭವಾಯಿತು. ಆದರೆ ಅದನ್ನು ನೋಡುವ ಭಾಗ್ಯ ಪೀರೆಗಿರಲಿಲ್ಲ. ಏಕೆಂದರೆ 1906ರಲ್ಲಿ ರಸ್ತೆ ಅಪಘಾತದಲ್ಲಿ ಪೀರೆ ಅಸು ನೀಗಿದನು. ಪೀರೆಯ ಮರಣದ ನಂತರ , ಅವನ ಸ್ಥಾನವನ್ನು ಅಲಂಕರಿಸುವಂತೆ ಮೇರಿಯನ್ನು ಅಹ್ವಾನಿಸಲಾಯಿತು.ಮೇರಿ , ಸೊರೆಬೊನ್ನೆಯ ಮೊದಲ ಮಹಿಳಾ ಪ್ರಾಧ್ಯಾಪಕಳಾದಳು. ಗಂಡನ ಮರಣದ ನಂತರ ಮಾನಸಿಕವಾಗಿ ಜರ್ಝರಿತಳಾಗಿದ್ದ ಮೇರಿ, ಪೊಲೇನಿಯಂನ್ನು ಶುದ್ದ ರೂಪದಲ್ಲಿ ಪಡೆಯಲು ಯತ್ನಿಸಿದಳು. ಮಕ್ಕಳ ಪಾಲನೆ ಹಾಗೂ ಉಳಿದವರ ಸಂಶೋದನೆಯ ಮೇಲ್ವಿಚಾರಣೆಯಲ್ಲಿಯೇ ಮೇರಿಯ ಉಳಿದ ಜೀವನ ಕಳೆಯಿತು. 1910ರಲ್ಲಿ ಮೇರಿಗೆ ಲೆಜಿಯನ್ ಡಿ ಹಾನರ್ ಗೌರವ ನೀಡಬೇಕೆಂಬ ಪ್ರಸ್ತಾವನೆಯೊಂದು ಸರ್ಕಾರದ ಮುಂದೆ ಬಂದಿತು. ಹಿಂದೆ ಇದೇ ಗೌರವವನ್ನು ಪೀರೆ ತಿರಸ್ಕರಿಸಿದ್ದರಿಂದ, ಮೇರಿಯೂ ಸಹ ಗಂಡನ ಹಾದಿಯನ್ನೇ ತುಳಿದು ಅದನ್ನು ನಿರಾಕರಿಸಿದಳು. ಇದೇ ವೇಳೆಗೆ ಪ್ಯಾರಿಸ್ನ ‘ಅಕಾಡೆಮಿಕ್ ಡೆ ಸೈನ್ಸ್’ನ ಚುನಾವಣೆಗೆ ಸ್ಪರ್ದಿಸಿದಳಾದರೂ, ಚುನಾಯಿತಳಾಗಲಿಲ್ಲ. ಮೇರಿ ಚುನಾಯಿತಳಾಗಿದ್ದರೆ, ಪ್ರಥಮ ಮಹಿಳಾ ಸದಸ್ಯೆಯೆಂಬ ಗೌರವಕ್ಕೆ ಪಾತ್ರಳಾಗುತ್ತಿದ್ದಳು. 1911ರಲ್ಲಿ ಪೊಲೇನಿಯಂ ಹಾಗೂ ರೇಡಿಯಂ ಸಂಶೋಧನೆಗಾಗಿ ಮೇರಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಎರಡನೇ ಬಾರಿ ಪಡೆದಳು. ವಿಕಿರಣಶೀಲತೆಯ ಅಳತೆಯ ಮೂಲವನ್ನು ಕ್ಯೂರಿ ಎಂದು ಕರೆದು, ಕ್ಯೂರಿ ದಂಪತಿಗಳನ್ನು ಗೌರವಿಸಲಾಗಿದೆ. ಈಗಿನ ವ್ಯಾಖ್ಯೆಯಂತೆ ಸೆಕೆಂಡಿಗೆ 3.7x10 ಶೈಥಿಲ್ಯಗಳು ಒಂದು ಕ್ಯೂರಿ. ಮೇರಿ ತನ್ನ 67ನೇ ವಯಸ್ಸಿನಲ್ಲಿ , ವಿಕಿರಣಶೀಲತೆಗೆ ಒಡ್ಡಿಕೊಂಡ ಪರಿಣಾಮವಾಗಿ ಬಿಳಿರಕ್ತಕಣ ದೋಷವುಂಟಾಗಿ ಕೊನೆಯುಸಿರೆಳೆದಳು. ಮೇರಿ ಸಿದ್ದಾಂತಿಯಾಗಿರಲಿಲ್ಲವಾದರೂ ನಿಪುಣ ವಿಕಿರಣ ರಸಾಯನಶಾಸ್ತ್ರಜ್ಞೆಯಾಗಿದ್ದಳು. ಅವಳ ಕಾರ್ಯಗಳಿಂದ ವಿಕಿರಣಶೀಲ ಕ್ಷೇತ್ರದಲ್ಲಿ ಸಂಶೋಧನೆಯ ಅಗತ್ಯವಿದೆಯೆಂದು ಮನದಟ್ಟಾಯಿತು. ಮೇರಿ ಅಂತರಾಷ್ಟ್ರೀಯ ಮಟ್ಟದ ಹಾಗೂ ಖ್ಯಾತಿಯ ಮೊದಲ ಮಹಿಳೆ. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ರೇಲಿ, ಜಾನ್ ವಿಲಿಯಂ ಸ್ಟ್ರಟ್, ಬ್ಯಾರೋನ್ (1842-1919) 1904
Rayleigh , John William Strutt Baron
ಬ್ರಿಟನ್-ಭೌತಶಾಸ್ತ್ರ- ಬೆಳಕು, ಶಬ್ದ, ವಿದ್ಯುತ್ ಕುರಿತಾಗಿ ಸಂಶೋಧಿಸಿದಾತ.
ರೇಲಿ, ಪ್ರತಿಭಾವಂತ ಗಣಿತಜ್ಞನಾಗಿದ್ದು, ಭೌತಶಾಸ್ತ್ರದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಗಣಿತವನ್ನು ಅಳವಡಿಸಿಕೊಳ್ಳುವಲ್ಲಿ ನಿಷ್ಣಾಂತನೆನಿಸಿದ್ದನು. ಇದು ರೇಲಿ ಭೌತಶಾಸ್ತ್ರ, ಅದರ ಪ್ರಯೋಗಗಳತ್ತ ಹೊರಳುವಂತೆ ಮಾಡಿತು. 1873ರಲ್ಲಿ ರೇಲಿಗೆ ಪಿತ್ರಾರ್ಜಿತವಾದ ಆಸ್ತಿ ದಕ್ಕಿತು. ಇದರ ನಂತರ ಎಸೆಕ್ಸ್ನ ಟೆನ್ರಿಂಗ್ ಪ್ಲೇಸ್ನಲ್ಲಿದ್ದ ತನ್ನ ಮನೆಯಲ್ಲಿಯೇ ಪ್ರಯೋಗಾಲಯ ಸ್ಥಾಪಿಸಿದನು. ನಂತರ 1865ರಲ್ಲಿ ಕೇಂಬ್ರಿಜ್ನಿಂದ ಗಣಿತದಲ್ಲಿ ಪದವಿ ಪಡೆದನು. ಈತನ ತಂದೆಗೆ ಲಾರ್ಡ್ ಪದವಿ ದಕ್ಕಿದ್ದಿತು. ಇದೇ ಪದವಿಯನ್ನು ರೇಲಿ 1873ರಲ್ಲಿ ಪಡೆದು ಲಾರ್ಡ್ ರೇಲಿಯೆಂದು ಹೆಸರಾದನು. ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದ ಕಾಲದಲ್ಲಿ ಭೌತಶಾಸ್ತ್ರ ಒಂದು ಪೂರ್ಣ ಪ್ರಮಾಣದ ಅಧ್ಯಯನ ವಿಷಯವಾಗಿರಲಿಲ್ಲ. ಹೆನ್ರಿ ಕ್ಯಾವೆಂಡಿಷ್ ವಂಶದವರು ಕೇಂಬ್ರಿಜ್ಗೆ ದೇಣಿಗೆ ನೀಡಿ ಭೌತಶಾಸ್ತ್ರದ ಶಾಖೆ ತೆರೆದಿದ್ದರು. ಇದರ ಪ್ರಯೋಗಾಲಯದ ಪ್ರಥಮ ಪ್ರಾಧ್ಯಾಪಕನಾಗಿ ಕ್ಲಾರ್ಕ್ ಮ್ಯಾಕ್ಸ್ವೆಲ್ ನಿಯೋಜಿತನಾದನು. ಮ್ಯಾಕ್ಸ್ವೆಲ್ ತೆರವುಗೊಳಿಸಿದ ಸ್ಥಾನ ಅಲಂಕರಿಸಿದ ರೇಲಿ ಅಲ್ಲಿ ಐದುವರ್ಷಗಳ ಕಾಲ ಸೇವೆ ಸಲ್ಲಿಸಿದನು. ಈ ಅವಧಿಯಲ್ಲಿ ಭೌತಶಾಸ್ತ್ರದ ವಿದ್ಯಾರ್ಥಿಗಳ ಸಂಖ್ಯೆ ಹತ್ತರಷ್ಟಾಯಿತು. ರೇಲಿ ಶಬ್ಧ ಹಾಗೂ ಬೆಳಕಿನ ತರಂಗಗಳ ಮೇಲೆ ತನ್ನ ಆರಂಭಿಕ ಸಂಶೋಧನೆಗಳನ್ನು ಕೇಂದ್ರೀಕರಿಸಿದ್ದನು. ಬೆಳಕಿನ ಚದುರಿಕೆ ಅದರ ತರಂಗಾಂತರಕ್ಕೆ ವಿಲೋಮವಾಗಿರುವುದೆಂದು (Inverse) ವಿವರಿಸಿದನು. ಇದರಿಂದ ನೀಲಿ ಬೆಳಕು ಕೆಂಪು ಬೆಳಕಿಗಿಂತ ಹತ್ತರಷ್ಟು ಅಧಿಕವಾಗಿ ಚದುರುವುದೆಂದು, ಈ ಕಾರಣದಿಂದಾಗಿ ಬಿಳಿ ಬೆಳಕು ಬೆಳಗು ಬೈಗಿನಲ್ಲಿ ಕೆಂಪು ಎದ್ದು ಕಾಣುವಂತೆ ಚದುರಿದರೆ, ಆಗಸ ನೀಲಿಯಂತೆ ಗೋಚರಿಸುವುದೆಂದು ಬೆಳಕಿನ ಈ ಚದುರಿಕೆಗೆ ವಾತಾವರಣದಲ್ಲಿನ ಕಣಗಳು ಕಾರಣವೆಂದು ಹೇಳಿದನು. ಆದರೆ ಆಗಸ ಹಾಗೂ ಸಾಗರ ನೀಲಿಯಾಗಿ ಕಾಣುವಂತೆ ಬೆಳಕು ಚದುರಲು ಬೇರೆಯದೇ ಆದ ಸೂಕ್ತ ವಿವರಣೆಯನ್ನು ಸಿ.ವಿ.ರಾಮನ್ ನೀಡಿದನು. ನೈಲ್ ನದಿಯ ದೋಣಿ ಮನೆಯಲ್ಲಿ ರೇಲಿ ಬರೆದ ದಿ ಥಿಯರಿ ಆಫ್ ಸೌಂಡ್ ಅಭಿಜಾತ ಶಾಸ್ತ್ರದಲ್ಲಿನ ಪ್ರಸಿದ್ಧ ಕೃತಿಗಳಲ್ಲಿ ಒಂದೆನಿಸಿತು. ಉತ್ತಮ ಪ್ರಯೋಗಪಟುವಾಗಿದ್ದ ಈತ, ಕೇಂಬ್ರಿಜ್ನಲ್ಲಿ ವೈದ್ಯುತ್ ರೋಧತ್ವ ಹಾಗೂ ಪ್ರವಾಹಗಳ ಅಳತೆ ಮಾಡಿದನು. ಪ್ರೌಟ್, ಅನಿಲಗಳ ಸಾಂದ್ರತೆ ಕುರಿತಾಗಿ, ವಾದಗಳನ್ನು ಮಂಡಿಸಿದ್ದನು. ರ್ಯಾಮ್ಸೆ ಆರ್ಗಾನ್ ಅನಿಲವನ್ನು ಪತ್ತೆ ಹಚ್ಚಿದ್ದನು. ಇವುಗಳಿಂದ ರೇಲಿ, ಪ್ರಭಾವಿತನಾಗಿದ್ದನು. ವಿಕಿರಣ ಹಾಗೂ ರೋಹಿತಗಳ ಬಗೆಗೆ ಆಸಕ್ತನಾಗಿದ್ದ, ಈತ ಕಪ್ಪು ಕಾಯದ ವಿಕಿರಣತೆಯ ಅಧ್ಯಯನ ಮಾಡಿ ರೇಲಿ ಜೀನ್ಸ್ ಸೂತ್ರ ನೀಡಿದನು. ಈ ಸೂತ್ರ ದೀರ್ಘ ತರಂಗಗಳಿಗೆ ಸೂಕ್ತ ವಿವರಣೆ ನೀಡಿದರೆ, ಹ್ರಸ್ವ ತರಂಗಗಳನ್ನು ಅರಿತುಕೊಳ್ಳಲು ವಿಫಲವಾಯಿತು. ಪ್ಲಾಂಕ್, ಕ್ವಾಂಟಂ ಬಲವಿಜ್ಞಾನ ಪ್ರಾರಂಭಿಸಿ, ಇದಕ್ಕೆ ಪರಿಹಾರ ಒದಗಿಸಿದನು. ಪ್ಲಾಂಕ್ನ ಕ್ವಾಂಟಂ ಬಲಶಾಸ್ತ್ರದಲ್ಲಿ ಚೈತನ್ಯ ಪೊಟ್ಟಣಗಳಲ್ಲಿ (ಕ್ವಾಂಟಾ) ಹೊರ ಹೊಮ್ಮುತ್ತದೆ. ರೇಲಿ ಪ್ಲಾಂಕ್ನ ಈ ಪರಿಕಲ್ಪನೆಯನ್ನು ಕೊನೆಯವರೆಗೂ ಪೂರ್ಣವಾಗಿ ಒಪ್ಪಲಿಲ್ಲ. 1904ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದ ರೇಲಿ ಬ್ರಿಟನ್ನ ಬುದ್ದಿ ಜೀವಿ ಪ್ರಧಾನ ಮಂತ್ರಿಯೆಂದು ಖ್ಯಾತನಾಗಿದ್ದ ಎ.ಜೆ.ಬೌಲ್’ಫ್ಲೋರ್ ಸೋದರಿಯನ್ನು ವಿವಾಹವಾಗಿದ್ದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಲೆನಾರ್ಡ್, ಫಿಲೆಫ್ಎಡುಯಾರ್ಡ್ ಆ್ಯಂಟನ್ –(1862-1947) 1905
Lenard , Phillipp Eduard Anton
ಜರ್ಮನಿ-ಭೌತಶಾಸ್ತ್ರ- ಕ್ಯಾಥೊಡ್ ಕಿರಣ ಹಾಗೂ ದ್ಯುತಿ ವೈದ್ಯುತ್ ಪರಿಣಾಮಗಳ (Photo Electric Effect) ಬಗೆಗೆ ಸಂಶೋಧಿಸಿದಾತ.
ವ್ಯಾಪಾರಿಯ ಮಗನಾಗಿದ್ದ ಲೆನಾರ್ಡ್, ಬುಡಾಪೆಸ್ಟ್ನಲ್ಲಿ ವಿದ್ಯಾಭ್ಯಾಸ ಮಾಡಿ, 1907ರಲ್ಲಿ ಜರ್ಮನಿಯ ಹೈಡೆಲ್ ಬರ್ಗ್ನಲ್ಲಿ ಪ್ರಾಧ್ಯಾಪಕನಾದನು.. 1914ರ ವೇಳೆಗೆ ಲೆನಾರ್ಡ್ ಭೌತಶಾಸ್ತ್ರದ ಮೂಲ ಸಂಶೋಧನೆಗಳನ್ನು ಮಾಡಿದ್ದನು. ಕೆಲವು ಲೋಹಗಳ ಮೇಲೆ ಅತಿನೇರಳೆ ಕಿರಣಗಳನ್ನು ಹಾಯಿಸಿದಾಗ ಎಲೆಕ್ಟ್ರಾನ್ಗಳು ಉತ್ಸರ್ಜನೆಗೊಳ್ಳುವುವೆಂದು ತಿಳಿದಿದ್ದನು. ಲೆನಾರ್ಡ್ನ ಪ್ರಯೋಗಗಳಿಂದ ಇಂತಹ ಉತ್ಸರ್ಜನೆ ನಿರ್ದಿಷ್ಟ ತರಂಗಾಂತರಗಳಿದ್ದ ಅತಿ ನೇರಳೆ ಕಿರಣಗಳಿಂದ ಮಾತ್ರ ಸಾಧ್ಯವಿರುವುದು ತಿಳಿಯಿತು. ಈ ತರಂಗಾಂತರ ಕುಗ್ಗಿದಂತೆ ಉತ್ಸರ್ಜಿತ ಎಲೆಕ್ಟ್ರಾನ್ನ ವೇಗವು ಹೆಚ್ಚುವುದು. ನಿರ್ದಿಷ್ಟ ತರಂಗಾಂತರದಲ್ಲಿ, ಕಿರಣಗಳ ತೀವ್ರತೆ ಹೆಚ್ಚಿದಂತೆ ಉತ್ಸರ್ಜಿತಗೊಳ್ಳುವ ಎಲೆಕ್ಟ್ರಾನ್ಗಳ ಸಂಖ್ಯೆಯೂ ಹೆಚ್ಚುವುದು ಗೊತ್ತಾಯಿತು. ಇದನ್ನು ದ್ಯುತಿ ವೈದ್ಯುತ್ ಪರಿಣಾಮವೆಂದು ಗುರುತಿಸಲಾಗಿದೆ. ಐನ್ಸ್ಟೀನ್ ದ್ಯುತಿ ವೈದ್ಯುತ್ ಪರಿಣಾಮಕ್ಕೆ 1905ರಲ್ಲಿ ವಿವರಣೆ ನೀಡಿದನು. ಮ್ಯಾಕ್ಸ್ ಪ್ಲಾಂಕ್ ಇದನ್ನು ನಿರ್ದಿಷ್ಟ ಕ್ವಾಂಟಂಗಳಲ್ಲಿ (ಶಕಲ=ಗಂತಿ=ಗಂಟು)ವಿವರಿಸಿ, ಕ್ವಾಂಟಂ ಬಲವಿಜ್ಞಾನ ಉಗಮಕ್ಕೆ ಕಾರಣನಾದನು. ಲೆನಾರ್ಡ್, ಕ್ಯಾಥೋಡ್ ಕಿರಣಗಳನ್ನು ಎಲೆಕ್ಟ್ರಾನ್ ದೂಲಗಳೆಂದು (Beam) ತೋರಿಸಿದನು. ಕ್ಯಾಥೋಡ್ ಕಿರಣಗಳು ಗಾಳಿ, ಹಾಗೂ ತೆಳು ದೇಹದ ಫಲಕಗಳನ್ನು ಹಾದು ಹೋಗುತ್ತವೆ. ಇದರಿಂದ ಪರಮಾಣು ಋಣ, ಧನ ಆವಿಷ್ಟಗಳೆರಡರ ಸಂಗಮವೆಂದೂ, ಪರಮಾಣುವಿನ ಮಧ್ಯದಲ್ಲಿ ಕ್ಯಾಥೊಡ್ ಕಿರಣಗಳು ಹಾದು ಹೋಗಲು ಖಾಲಿ ಜಾಗವಿರುವುದೆಂದು ತರ್ಕಿಸಿದನು. 1911ರಲ್ಲಿ ರುದರ್’ಫೋರ್ಡ್ , ಮಂಡಿಸಿದ ಪರಮಣು ಸಿದ್ಧಾಂತ ಲೇನಾರ್ಡ್ನ ತರ್ಕವನ್ನು ಬೆಂಬಲಿಸಿತು. ಕ್ಷ-ಕಿರಣಗಳನ್ನು ಯಾರು ಅನಾವರಣಗೊಳಿಸಿದರೆಂಬ ಬಗ್ಗೆ ರಾಂಟ್ಜೆನ್, ಜೆ.ಜೆ.ಥಾಮ್ಸನ್ ಹಾಗೂ ಲೆನಾರ್ಡ್ ಮಧ್ಯೆ ವಿವಾದಗಳೆದ್ದವು. ಲೆನಾರ್ಡ್ ಸ್ವಲ್ಪದರಲ್ಲಿಯೆೀ ಕ್ಷ-ಕಿರಣಗಳನ್ನು ಗುರುತಿಸುವಲ್ಲಿ ವಿಫಲಗೊಂಡಿದ್ದನೆಂದು ನಂಬಲಾಗಿದೆ,. 1934ರಲ್ಲಿ ಲೆನಾರ್ಡ್ ಗ್ರೇಟ್ ಮೆನ್ ಆಫ್ ಸೈನ್ಸ್ ಪುಸ್ತಕ ಪ್ರಕಟಿಸಿದನು. ಇದರಲ್ಲಿ ರಾಂಟ್ಜೆನ್ ಹಾಗೂ ಜೆ.ಜೆ.ಥಾಮ್ಸನ್ರ ಉಲ್ಲೇಖವಿಲ್ಲ. ಮೊದಲ ಜಾಗತಿಕ ಯುದ್ದದಲ್ಲಿ ಜರ್ಮನಿಯ ಸೋಲು, ಏರಿದ ಹಣದುಬ್ಬರ, ಕಿಶೋರಾವಸ್ಥೆಯಲ್ಲಿ ತೀರಿಕೊಂಡ ಮಗನ ನೆನಪಿನಲ್ಲಿ ಲೆನಾರ್ಡ್ ಜರ್ಝರಿತನಾಗಿದ್ದನು. ಐನ್ಸ್ಟೀನ್ ಹಾಗೂ ಇತರರು ಭೌತಶಾಸ್ತ್ರವನ್ನು ಅತಿಯಾಗಿ ಗಣಿತೀಕರಣಗೊಳಿಸಿ, ಅಗ್ರಾಹ್ಯಗೊಳಿಸಿರುವರೆಂದು ಲೆನಾರ್ಡ್ ಬಲವಾಗಿ ನಂಬಿದ್ದನು. 1919ರಲ್ಲಿ ಲೆನಾರ್ಡ್ ಜರ್ಮನ್ ಭೌತಶಾಸ್ತ್ರವನ್ನು ರೂಪಿಸಬೇಕೆಂದೂ, ಇದು ಯಹೂದಿಗಳಿಂದ ಮುಕ್ತವಾಗಿರಬೇಕೆಂದು ಸಾರಿದನು. ಐನ್ಸ್ಟೀನ್ ಅತಿರೇಕದ ಸೈದ್ಧಾಂತಿಕ ನಿಲುವಿನವನೆಂದು ಟೀಕಿಸಿದನು, ಲೆನಾರ್ಡ್, ನಾಝಿ ಆಡಳಿತ ಬೆಂಬಲಿಸಿದ ಮುಖ್ಯವಾಹಿನಿಯ ಏಕೈಕ ವಿಜ್ಞಾನಿಯೆಂದು ಚರಿತ್ರೆಯಲ್ಲಿ ದಾಖಲಾಗಿದ್ದಾನೆ. 1930ರ ವೇಳೆಗೆ ಜರ್ಮನಿಯಿಂದ ಪ್ರತಿಭಾವಂತ ವಿಜ್ಞಾನಿಗಳ ದಂಡು ಹೊರದೇಶಗಳಿಗೆ ವಲಸೆ ಹೋಗಿ, ಅಲ್ಲಿನ ಭೌತಶಾಸ್ತ್ರ ಪ್ರತಿಭೆಗೆ ಮಂಕು ಕವಿಯತೊಡಗಿತು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಥಾಮ್ಸನ್, ಜೋಸೆಫ್’ ಜಾನ್ (ಜೆ.ಜೆ.ಥಾಮ್ಸನ್) (1856-1940) 1906
Thomson , Sir Joseph John
ಬ್ರಿಟನ್-ಭೌತಶಾಸ್ತ್ರ- ಎಲೆಕ್ಟ್ರಾನ್ ಅನಾವರಣಗೊಳಿಸಿದಾತ.
ಥಾಮ್ಸನ್ನ ತಂದೆ ಪುಸ್ತಕದ ವ್ಯಾಪಾರಿಯಾಗಿದ್ದನು. ಈಗ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯವೆಂದು ಹೆಸರಾಗಿರುವ ಆಗಿನ ಓವೆನ್ಸ್ ಕಾಲೇಜಿನಲ್ಲಿ ಥಾಮ್ಸನ್ ಇಂಜಿನಿಯರಿಂಗ್ ಪದವಿಗೆ ಸೇರಿದನು. 1872ರಲ್ಲಿ ತಂದೆಯ ಸಾವಿನಿಂದಾಗಿ ಆರ್ಥಿಕ ಸಂಕಷ್ಟಕ್ಕೊಳಗಾಗಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಬಿಟ್ಟು ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರದ ಅಧ್ಯಯನ ಆರಿಸಿಕೊಳ್ಳಲು ಯತ್ನಿಸಿದನು. ಇದು ಸಾಧ್ಯವಾಗದೇ ಹೋದಾಗ ಇಂಜಿನಿಯರಿಂಗ್ ಸಹಾಯಕನ ತರಬೇತಿ ಪಡೆದುಕೊಂಡನು. ಇಲ್ಲಿ ಉತ್ತಮ ಅಂಕಗಳಿಸಿ, ಕೇಂಬ್ರಿಜ್ನ ಟ್ರಿನಿಟಿ ಕಾಲೇಜಿನಲ್ಲಿ ಓದಲು ವಿದ್ಯಾರ್ಥಿ ವೇತನ ಗಳಿಸಿದನು. 1880ರಲ್ಲಿ ಎರಡನೇ ರ್ಯಾಂಗ್ಲರ್, ಗೌರವದೊಂದಿಗೆ ಹೊರ ಬಂದನು. ರ್ಯಾಲೆಯ ಮರಣದ ನಂತರ ಥಾಮ್ಸನ್ ಕ್ಯಾವೆಂಡಿಷ್ ಪ್ರಾಧ್ಯಾಪಕ ಹಾಗೂ ಟ್ರಿನಿಟಿ ಕಾಲೇಜಿನ ಫೆಲೋ ಆಗಿ ಆಯ್ಕೆಗೊಂಡನು. ಥಾಮ್ಸನ್ ಅತ್ಯುತ್ತಮ ಪ್ರಯೋಗ ಪಟುವಲ್ಲವಾದರೂ ತನ್ನ ವಿದ್ಯಾರ್ಥಿಗಳಿಂದ ತನಗೆ ಬೇಕಾದ ರೀತಿಯಲ್ಲಿ ನಿಖರವಾದ ಪ್ರಯೋಗಗಳನ್ನು ಮಾಡಿಸುವುದರಲ್ಲಿ ಖ್ಯಾತನಾಗಿದ್ದನು. 1883ರಲ್ಲಿ ಸುಳಿ ಉಂಗುರಗಳ ಗಣಿತೀಯ ವಿಶ್ಲೇಷಣೆ ಮಂಡಿಸಿದ ಥಾಮ್ಸನ್, ಕಲ್ಪಿತ ವೈದ್ಯುತ್ ಕಾಂತೀಯ ಕ್ಷೇತ್ರದ ಸುಳಿಗಳಲ್ಲಿನ ಉಂಗುರಗಳೇ ಪರಮಾಣುಗಳೆಂದು ಭಾವಿಸಿದ್ದನು. ಇದರ ಅಧ್ಯಯನಕ್ಕಾಗಿ, ಅಲ್ಪ ಒತ್ತಡದಲ್ಲಿರುವ ಅನಿಲಗಳಲ್ಲಿ, ಅಧಿಕ ವೈದ್ಯುತ್ ಕ್ಷೇತ್ರ ಪ್ರೇರೇಪಿಸಿ, ಕ್ಯಾಥೋಡ್ ಕಿರಣಗಳನ್ನು ಪಡೆದನು. ಹಲವಾರು ಜರ್ಮನ್ ವಿಜ್ಞಾನಿಗಳು ಕ್ಯಾಥೋಡ್ ಕಿರಣಗಳನ್ನು ತರಂಗಗಳೆಂದು ಭಾವಿಸಿದ್ದರು. ಹಟ್ರ್ಸ್, ಕಾಂತಕ್ಷೇತ್ರದಲ್ಲಿ ಇವು ಪಲ್ಲಟಗೊಳ್ಳದ ಕಾರಣ ಇವು ಕಣಗಳಾಗಿರಲಾರವೆಂದು ತೋರಿಸಲು ಯತ್ನಿಸಿದ್ದನು. ಥಾಮ್ಸನ್ ಹಟ್ರ್ಸ್ ರೀತಿಯ ಪ್ರಯೋಗಗಳನ್ನು ಸುಧಾರಿತ, ಬಾಹ್ಯ ಪ್ರಭಾವವಿಲ್ಲದ ಪರಿಸರಗಳಲ್ಲಿ ನಡೆಸಿದನು. 1897ರಲ್ಲಿ ನಿರ್ದಿಷ್ಟ ಪ್ರಯೋಗಗಳಿಂದ ಕ್ಯಾಥೋಡ್ ಕಿರಣಗಳು ಕಾಂತಕ್ಷೇತ್ರದಿಂದ ಪಲ್ಲಟಗೊಳ್ಳುವುದು ಸ್ಪಷ್ಟವಾಯಿತು. ಇದರಿಂದ ಕ್ಯಾಥೋಡ್ ಕಿರಣಗಳನ್ನು ಋಣಾತ್ಮಕವಾಗಿ ಆವಿಷ್ಟಗೊಂಡ ಕಣಗಳೆಂದು ಥಾಮ್ಸನ್ ಸಂಶಯಾತೀತವಾಗಿ ತೋರಿಸಿದನು. ಇವು ಕಾಂತ ಹಾಗೂ ವೈದ್ಯುತ್ ಕ್ಷೇತ್ರಗಳೆರಡರಲ್ಲಿ ಪಲ್ಲಟಗೊಳ್ಳುವುದು ತಿಳಿಯಿತು. ಬೇರೆ ಬೇರೆ ಮೂಲದಿಂದ ಪಡೆದ ಈ ಕಣಗಳ ಆವಿಷ್ಟ ಹಾಗೂ ದ್ರವ್ಯ ರಾಶಿಗಳು ಒಂದೇ ಆಗಿದ್ದವು. 1896ರಲ್ಲಿ ಥಾಮ್ಸನ್ ಅಸಂಸಂದ ಪ್ರಿನ್ಸ್’ಟನ್ ವಿಶ್ವವಿದ್ಯಾಲಯದಲ್ಲಿ ನಾಲ್ಕು ಉಪನ್ಯಾಸಗಳನ್ನು ನೀಡಿ ಅನಿಲಗಳ ಮೂಲಕ ವಿದ್ಯುದ್ವಿಸರ್ಜನೆಯ ಕ್ರಿಯೆ ವಿವರಿಸಿದನು. 1897ರಲ್ಲಿ ಥಾಮ್ಸನ್ ಹೊಸ ಕಣದ ಅಸ್ತಿತ್ವವನ್ನು ಪ್ರಕಟಿಸಿದನು. ಥಾಮ್ಸನ್, ಮುಂದುವರೆದ ಪ್ರಯೋಗಗಳಿಂದ ಈ ಹೊಸ ಕಣಗಳ ಆವಿಷ್ಟ ಜಲಜನಕದ ಪರಮಾಣುವಿಗೆ ಸಮನಾಗಿದೆಯೆಂದು ತಿಳಿಯಿತು. ಆದರೆ, ಈ ಕಣದ ದ್ರವ್ಯ ತೂಕ ಮಾತ್ರ ಜಲಜನಕದ ಸಾವಿರದಲ್ಲಿ ಒಂದರಷ್ಟಿದ್ದಿತು. ಥಾಮ್ಸನ್ ಗುರುತಿಸಿದ ಹೊಸ ಕಣಗಳನ್ನು 20 ವರ್ಷಗಳ ನಂತರ ಸ್ಟೋನಿ ಎಲೆಕ್ಟ್ರಾನ್ ಎಂದು ಹೆಸರಿಸಿದನು. ಥಾಮ್ಸನ್ ನಂತರ ಕ್ಯಾವೆಂಡಿಷ್ ಪ್ರಾಧ್ಯಾಪಕ ಹುದ್ದೆ ಅಲಂಕರಿಸಿದ ರುದರ್ಫೋರ್ಡ್ ಪರಮಾಣು ರಾಚನಿಕ ಸ್ವರೂಪದ ಮೇಲೆ ಹೊಸ ಬೆಳಕು ಚೆಲ್ಲಿದನು. ಥಾಮ್ಸನ್ ತನ್ನ ಪ್ರಯೋಗಗಳಿಗೆ ರೂಪಿಸಿಕೊಂಡಿದ್ದ ಕ್ಯಾಥೋಡ್ ನಳಿಕೆ ಎಲೆಕ್ಟ್ರಾನ್ ಪ್ರಯೋಗಗಳ, ದೂರ ದರ್ಶಕಗಳ ಮೂಲ ಅಂಗವಾಯಿತು. ಗೋಲ್ಡ್ಸ್ಟೀನ್, ಧನ ಕಿರಣಗಳನ್ನು ಪಡೆದಿದ್ದನು. ಇವು ಕ್ಯಾಥೋಡ್ ಕಿರಣಗಳಂತೆ, ವಿಭಿನ್ನ ಅನಿಲಗಳಿಗೆ ಒಂದೇ ಆಗಿರದೆ ಬೇರೆಯಾಗಿದ್ದಿತು. ಈ ಧನ ಕಿರಣಗಳನ್ನು ಬಳಸಿ, ವಿವಿಧ ಧಾತುಗಳ ಪರಮಾಣು ತೂಕವನ್ನು ಹೇಗೆ ನಿರ್ಧರಿಸಬಹುದೆಂದು 1912ರಲ್ಲಿ ಥಾಮ್ಸನ್ ತೋರಿಸಿದನು. ಇದರ ಮುಂದುವರೆದ ಪ್ರಯೋಗಗಳಿಂದ ನಿಯಾನ್ ಅನಿಲ ನಿಯಾನ್-20 ಹಾಗೂ ನಿಯಾನ್-22 ಎಂಬ ಎರಡು ಸಮಸ್ಥಾನಿಗಳನ್ನು (Isotopes) ಹೊಂದಿರುವುದು ತಿಳಿಯಿತು. ಋಣಾವೇಶಗೊಳಿಸಿದ ಸತುವಿನ ಫಲಕವನ್ನು ಅತಿನೇರಳೆ ವಿಕಿರಣಗಳಿಗೆ ಒಡ್ಡಿದಾಗಲೂ ಎಲೆಕ್ಟ್ರಾನ್ಗಳೂ ಉತ್ಸರ್ಜನೆಗೊಳ್ಳುವುವೆಂದು ಥಾಮ್ಸನ್ ತೋರಿಸಿದನು. 1906ರಲ್ಲಿ ಥಾಮ್ಸನ್ಗೆ ನೊಬೆಲ್ ಪ್ರಶಸ್ತಿ ದಕ್ಕಿತು. ಥಾಮ್ಸನ್ ಕ್ಯಾವೆಂಡಿಷ್ ಪ್ರಯೋಗಾಲಯವನ್ನು ಜಗತ್ತಿನ ಪ್ರಯೋಗಶೀಲ ಭೌತಶಾಸ್ತ್ರದ ಕೇಂದ್ರವಾಗುವಂತೆ ಬೆಳೆಸಿದನು. ಇಲ್ಲಿಂದ ಮುಂದೆ ಹಲವಾರು ನೊಬೆಲ್ ಪುರಸ್ಕೃತರು ಹೊರಬಂದರು. ಥಾಮ್ಸನ್ ಮಗ ಜಾರ್ಜ್ ಪಗೆಟ್ ಥಾಮ್ಸನ್ (ಜೆ.ಪಿ.ಥಾಮ್ಸನ್) ಎಲೆಕ್ಟ್ರಾನ್ ಕಣ ಹಾಗೂ ತರಂಗ ಎರಡರಂತೆಯೂ ವರ್ತಿಸುವುದೆಂದು ತೋರಿಸಿ, ನೊಬೆಲ್ ಪ್ರಶಸ್ತಿ ಗಳಿಸಿದನು. 30 ಆಗಸ್ಟ್ 1940 ರಂದು ಥಾಮ್ಸನ್ ನಿಧನನಾದನು. ವೆಸ್ಟ್ ಮಿನ್ಸ್ಟರ್ ಅಬ್ಬೆಯಲ್ಲಿ ನ್ಯೂಟನ್ನ ಸಮಾಧಿಯ ಪಕ್ಕ ಈತನನ್ನು ಹೂಳಲಾಯಿತು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಮೈಖೆಲ್ಸನ್, ಆಲ್ಬರ್ಟ್ ಅಬ್ರಾಹಂ (1852-1931) 1907
Michelson , Albert Abraham
ಅಸಂಸಂ-ಭೌತಶಾಸ್ತ್ರ- ಈಥರ್ ಮಾಧ್ಯಮದ ಅಸ್ತಿತ್ವ ಹುಡುಕಿದಾತ
ಪೋಲೆಂಡ್ನ ಸ್ಟ್ರೆನ್ಲೋನಲ್ಲಿ ಹುಟ್ಟಿದ ಮೈಖೇಲ್ಸನ್. ನಾಲ್ಕು, ವರ್ಷದವನಿರುವಾಗ ಅವನ ತಂದೆ ತಾಯಿಗಳು ಅಸಂಸಂಗಳಿಗೆ ವಲಸೆ ಹೋದರು. ಮೈಖೆಲ್ಸನ್ ಹದಿನೇಳನೇ ವಯಸ್ಸಿನಲ್ಲಿ ಅನ್ನ ಪೋಲಿಸ್ ನೇವಲ್ ಅಕಾಡೆಮಿ ಸೇರಿದನು. ಇಲ್ಲಿಂದ ಪದವಿ ಗಳಿಸಿ, ಭೌತ ಹಾಗೂ ರಸಾಯನಶಾಸ್ತ್ರದ ಬೋಧಕನಾದನು. ಪಾಠ ಮಾಡುವಾಗ ಬೆಳಕಿನ ವೇಗವನ್ನು ಹೇಗೆ ಅಳೆಯಬಹುದೆಂದು ವಿವರಿಸುತ್ತಿದ್ದ ಮೈಖೇಲ್ಸನ್ ಹಿದಕ್ಕಾಗಿ ಮಾಪನೆಯ ಉಪಕರಣಗಳನ್ನು ಉತ್ತಮಗೊಳಿಸತೊಡಗಿದನು. 1880ರಲ್ಲಿ ಎರಡು ವರ್ಷಗಳ ಅವಧಿಗೆ ಯುರೋಪಿಗೆ ಭೇಟಿಯಿತ್ತ ಮೈಖೇಲ್ಸನ್ ಹೆಲ್ಮ್ ಹೋಲ್ಟ್ಸ್ ಪ್ರಯೋಗಾಲಯದಲ್ಲಿ ಮೊದಲ ವ್ಯತಿಕರಣ ಮಾಪಕವನ್ನು (Interferometer) ನಿರ್ಮಿಸಿದನು. ಇದರ ವೆಚ್ಚವನ್ನು ಅಲೆಕ್ಸಾಂಡರ್ ಗ್ರಹಾಂ ಬೆಲ್ ಭರಿಸಿದನು. ಬೆಳಕು,. ಈಥರ್ ಎಂದು ಕರೆಯಲಾಗುವ, ವಿಶ್ವವನ್ನು ವ್ಯಾಪಿಸಿರುವ ಮಾಧ್ಯಮದ ಮೂಲಕ ಹರಿಯುತ್ತಿದೆಯೆಂದು ಆ ಕಾಲದಲ್ಲಿ ಪರಿಗಣಿಸಲಾಗಿದ್ದಿತು,. ಇದರ ಪತ್ತೆಗಾಗಿ ಮೈಖೇಲ್ಸನ್, ವ್ಯತಿಕರಣಮಾಪಕ ಬಳಸಿ ನಡೆಸಿದ ಪ್ರಯೋಗಗಳು ಅಂತಹ ಮಾಧ್ಯಮ ಇಲ್ಲವೆಂದು ಸೂಚಿಸಿದವು. 1881ರಲ್ಲಿ ನೇವಿ ತೊರೆದು ಮೈಖೇಲ್ಸನ್ ಓಹಿಯಾದ ಕ್ಲೀವ್ ಲ್ಯಾಂಡ್ನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. ಇಲ್ಲಿ ಮಾರ್ಲೆ ಜೊತೆಗೂಡಿ ಮತ್ತೊಮ್ಮೆ ಈಥರ್ನ ಪತ್ತೆಗೆ ಪಯೋಗ ಹಮ್ಮಿಕೊಂಡನು. ಇದರಿಂದಲೂ ಈಥರ್ ಅಸ್ತಿತ್ವ ಸಾಬೀತಾಗಲಿಲ್ಲ. 1905ರಲ್ಲಿ ಐನ್ಸ್ಟೀನ್ ಸಾಪೇಕ್ಷತಾವಾದ ಮಂಡಿಸಿ, ವೈದ್ಯುತ್ ಕಾಂತೀಯ ಅಲೆಪ್ರಸರಣಕ್ಕೆ ಮಾಧ್ಯಮದ ಅಗತ್ಯವಿಲ್ಲವೆಂದು ತೋರಿಸಿದನು. ದೂರವನ್ನು ತರಂಗಾಂತರದಲ್ಲಿ ಹೇಳಿದ ಮೈಖೇಲ್ಸನ್, ತಾರೆಗಳ ಕೋನೀಯ ವ್ಯಾಸ ಅಳೆದ ಮೊದಲಿಗ. ಚಂದ್ರನಿಂದ, ಭೂಮಿಯ ಘನದ ಮೇಲಾಗುವ ಪರಿಣಾಮ ಅಳೆದನು. 1907ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದ ಮೊದಲ ಅಮೆರಿಕಾದವನಾಗಿ ಮೈಖೇಲ್ಸನ್ ಚರಿತ್ರೆಯ ಪ್ಯಟಗಳಲ್ಲಿ ಸೇರಿದ್ದಾನೆ. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಗೇಬ್ರಿಯಲ್, ಲಿಪ್ಮನ್ (1845-1921) 1908
Gabriel , Lippmann
ಫ್ರಾನ್ದ್-ಭೌತಶಾಸ್ತ್ರ- ದ್ಯುತೀಕರಣದಿಂದ ಬಣ್ಣದ ಛಾಯಾಬಿಂಬ ಪಡೆಯುವ ವಿಧಾನ ರೂಪಿಸಿದಾತ.
ಲಿಪ್ಮನ್ನ ತಂದೆ, ತಾಯಿ ಲುಕ್ವೆಂಟರ್ನ ಹೊಲೆರಿಕ್ನಲ್ಲಿ ನೆಲೆಸಿದ್ದ ಫ್ರೆಂಚ್ ಮೂಲದವನಾಗಿದ್ದರು. 16 ಆಗಸ್ಟ್ 1845ರಂದು ಈ ಪಟ್ಟಣದಲ್ಲಿಯೇ ಲಿಪ್ಮನ್ ಜನಿಸಿದನು. ಅಲ್ಪ ಕಾಲದಲ್ಲೇ ಲಿಪ್ಮನ್ ಕುಟುಂಬ ಪ್ಯಾರಿಸ್ಗೆ ಹೋಯಿತು. ಲಿಪ್ಮನ್, ತನ್ನ ಪ್ರಾಥಮಿಕ ಶಿಕ್ಷಣವನ್ನು ಮನೆಯಲ್ಲಿಯೇ ಪಡೆದನು. 1858ರಲ್ಲಿ ಲೈಸೀ ನೆಪೋಲಿಯನ್ ಪ್ರೌಢಶಾಲೆಗೆ ಸೇರಿದನು. ಇದಾದ ಹತ್ತು ವರ್ಷಗಳ ನಂತರ ಎಕೊಲೆ ನಾರ್ಮಲೆಗೆ ಸೇರಿದನು. ತನಗೆ ಅಭಿರುಚಿಯಿದ್ದ ವಿಷಯಗಳನ್ನು ಹೊರತು ಪಡಿಸಿ, ಬೇರೆಯವುಗಳತ್ತ ಕಣ್ಣೆತ್ತಿಯೂ ನೋಡದಿದ್ದರಿಂದ, ಲಿಪ್ಮನ್ ಉಪಾಧ್ಯಾಯ ವೃತ್ತಿಗೆ ಅಗತ್ಯವಾದ ಪದವಿ ಪಡೆಯುವಲ್ಲಿ ವಿಫಲನಾದನು. 1873ರಲ್ಲಿ ಫ್ರೆಂಚ್ ಸರ್ಕಾರ, ಜರ್ಮನಿಯಲ್ಲಿ ವಿಜ್ಞಾನದ ಶಿಕ್ಷಣ ವಿಧಾನದ ಅಧ್ಯಯನಕ್ಕೆ ಸಮಿತಿಯೊಂದನ್ನು ನಿಯೋಜಿಸಿತು. ಲಿಪ್ಮನ್ ಇದರ ಸದಸ್ಯನಾದನು. ಇದರಿಂದಾಗಿ ಕುಹ್ನ್ ಹಾಗೂ ಕಿರ್ಕ್ಹಾಫ್ರೊಂದಿಗೆ ಹೈಡೆಲ್ಬರ್ಗ್ನಲಿ ಹೆಲ್ಮ್ ಹೋಲ್ಟ್ಸ್ನೊಂದಿಗೆ ಬರ್ಲಿನ್ನಲ್ಲಿ ಕೆಲಸ ಮಾಡುವ ಅವಕಾಶ ದಕ್ಕಿತು. 1878ರಲ್ಲಿ ಲಿಪ್ಮನ್ ಪ್ಯಾರಿಸ್ನಲ್ಲಿ ಬೋಧಕ ಸಿಬ್ಬಂದಿಯಾದನು. 1885ರಲ್ಲಿ ಗಣಿತೀಯ ಭೌತಶಾಸ್ತ್ರದ ಪ್ರಾಧ್ಯಾಪಕನಾಗಿ ನೇಮಕಗೊಂಡನು. ಇದಾದ
ಮೂರು ವರ್ಷಗಳ ನಂತರ, ಪ್ರಯೋಗಶೀಲ ಭೌತಶಾಸ್ತ್ರದ ಮುಖ್ಯಸ್ಥನಾಗಿದ್ದ ಔಮಿನ್ ನಿವೃತ್ತನಾದನು. ಲಿಪ್ಮನ್ ಈತನಿಂದ ತೆರವಾದ ಸ್ಥಾನ ತುಂಬಿದನು. ಮುಂದೆ ಸಂಶೋಧನಾ ಪ್ರಯೋಗಾಲಯದ ನಿರ್ದೇಶಕನಾದನು. ಕೆಲಕಾಲ ಪ್ಯಾರಿಸ್ನಲ್ಲಿದ್ದ ನಂತರ ಸೊರ್ಬೊನ್ನೆಗೆ ವರ್ಗಾವಣೆಗೊಂಡನು. ಲಿಪ್ಮನ್ ಸ್ವತಂತ್ರ ವಿಚಾರಧಾರೆಯ, ಮುಕ್ತ ಮನಸ್ಸಿನವನಾಗಿದ್ದನು. ವಿದ್ಯುತ್, ಔಷ್ಣೀಯ ಗತಿಶಾಸ್ತ್ರ, ದೃಕ್ ಶಾಸ್ತ್ರ, ದ್ಯುತಿರಸಾಯನಶಾಸ್ತ್ರದಲ್ಲಿ ವಿಶೇಷ ಪರಿಣಿತಿ ಹೊಂದಿದ್ದನು. ಹೈಡೆಲ್ಬರ್ಗ್ನಲ್ಲಿರುವಾಗ ರೋಮನಾಳ ವಿದ್ಯಾಮನ (Capillary Phenomenon) ಹಾಗೂ ವೈದ್ಯುತ್ ಕ್ಷೇತ್ರದ ಮಧ್ಯದ ಸಂಬಂಧ ಕುರಿತು ಹಲವಾರು ಪ್ರಯೋಗಗಳನ್ನು ಕೈಗೊಂಡಿದ್ದನು. ಇದರ ಅಂಗವಾಗಿ ಅತಿ ಸೂಕ್ಷ್ಮ ಸುಕ್ಲಿಷ್ಟ ಸಲಕರಣೆಗಳನ್ನು ನಿರ್ಮಿಸಿದನು. 1886ರಲ್ಲಿ ಬಣ್ಣಗಳನ್ನು ದ್ಯುತಿ ಕ್ರಿಯೆಯ ಮೂಲಕ ಸೆರೆಹಿಡಿಯುವ ವಿಧಾನ ರೂಪಿಸಿದನು. ಆದರೆ ಇದನ್ನು ದೈನಂದಿನ ವ್ಯವಹಾರ ಸಾಧ್ಯತೆಯಾಗಿಸಲು ಹಲವಾರು ಆಡಚಣೆಗಳಿದ್ದವು. ಲಿಪ್ಮನ್ನ ಹಲವಾರು ವರ್ಷಗಳ ಸತತ ಪರಿಶ್ರಮ, ತಾಳ್ಮೆಯ ಪ್ರಯತ್ನಗಳಿಂದ 1891ರಲ್ಲಿ ಇದು ಸಾಧ್ಯವಾಯಿತು. ಆದರೆ ಲಿಪ್ಮನ್ ಬಳಸಿದ ವ್ಯತ್ತಸ್ಥ ಸಂವೇದನೆ ಹೊಂದಿದ ಫಿಲ್ಮ್’ಗಳಿಂದ, ಛಾಯಾಚಿತ್ರಗಳಲ್ಲಿ ಅಲ್ಪಸ್ವಲ್ಪ ದೋಷಗಳು ಉಳಿದಿರುತ್ತಿದ್ದವು. 1893ರಲ್ಲಿ ಇವೆಲ್ಲವನ್ನು ಸರಿಪಡಿಸಿ, ಆಕ್ಯಾಡೆಮಿ ಆಫ್ ಸೈನ್ಸ್ಗೆ ತನ್ನ ಪರಿಪೂರ್ಣ ಛಾಯಾಚಿತ್ರಗಳನ್ನು ಒದಗಿಸಿದನು. 1894ರಲ್ಲಿ ದ್ಯುತಿ ಪ್ರಕ್ರಿಯೆ ಆಧಾರಿತವಾದ ಬಣ್ಣಗಳನ್ನು ಬೇಕಾದಂತೆ ಪಡೆಯಬಲ್ಲ ಸಿದ್ಧಾಂತವನ್ನು ಲಿಪ್ಮನ್ ಮಂಡಿಸಿದನು. 1895ರಲ್ಲಿ ಕಾಲವನ್ನು ಕರಾರುವಕ್ಕಾಗಿ ಅಳೆಯುವ ವಿಧಾನಗಳಲ್ಲಿದ್ದ ಮಾನವನ ಹಸ್ತಕ್ಷೇಪಗಳನ್ನು ನಿವಾರಿಸಿದನು. ವಿಶಿಷ್ಟವಾದ ಛಾಯಾಗ್ರಾಹಕ ತಯಾರಿಸಿದ ಲಿಪ್ಮನ್ ಅದರಿಂದ ತಾರೆಗಳ ಸುಸ್ಪಷ್ಟ ಬಿಂಬಗಳನ್ನು ಪಡೆದನು. ಇವೆಲ್ಲವು ಭೌತಶಾಸ್ತ್ರದ ವಿವಿಧ ಸಂಶೋಧನೆಗಳಿಗೆ ಅಪಾರ ನೆರವಿತ್ತವು. ದ್ಯುತೀಕರಣದಿಂದ ಬಣ್ಣದ ಛಾಯಾಬಿಂಬ ಪಡೆಯುವ ವಿಧಾನ ನೀಡಿದ್ದಕ್ಕಾಗಿ ಲಿಪ್ಮನ್ 1908ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಪ್ಯಾರಿಸ್ನ ಅಕಾಡೆಮಿ ಆಫ್ ಸೈನ್ಸ್ನ ಸದಸ್ಯನಾದ ಲಿಪ್ಮನ್ 1912ರಲ್ಲಿ ಅದರ ಅಧ್ಯಕ್ಷ್ಯನಾದನು. ಲಂದನ್ನ ರಾಯಲ್ ಸೊಸೈಟಿಯ ಸದಸ್ಯನೂ ಆಗಿದ್ದನು. 1921ರಲ್ಲಿ ಸರ್ಕಾರದ ಯೋಜನೆಯ ಅಂಗವಾಗಿ, ಅಸಂಸಂಗಳಿಗೆ ಭೇಟಿ ನೀಡಿದ್ದ ಲಿಪ್ಮನ್ ಅಲ್ಲಿಂದ ಹಿಂದಿರುಗುವಾಗ, ಮಾರ್ಗ ಮಧ್ಯದಲ್ಲಿ ಸಮುದ್ರಯಾನದಲ್ಲಿ ಮರಣ ಹೊಂದಿದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಮಾರ್ಕೊನಿ, ಗೂಗ್ಲಿಯೆಲ್ಮೋ, ಮಾರ್ಕ್ವೆಸ್ (1874-1937) 1909
Marconi , Guglielmo Marquese
ಇಟಲಿ-ಭೌತಶಾಸ್ತ್ರ- ಇಂಜಿನಿಯರ್ ರೇಡಿಯೋ ಟೆಲೆಗ್ರಾಫಿûಯ ಮುಂಚೂಣಿಗ.
ಪ್ರಾಥಮಿಕ ಶಿಕ್ಷಣವನ್ನು ಖಾಸಗಿಯಾಗಿ ಗಳಿಸಿದ ಮಾರ್ಕೊನಿ, ಲಿವೊರ್ನೋ ತಾಂತ್ರಿಕ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಗಳಿಸಿದನು. ಇಪ್ಪತ್ತೊಂದನೇ ವಯಸ್ಸಿನಲ್ಲಿ ಹಟ್ರ್ಸ್ನ ವೈದ್ಯುತ್ಕಾಂತೀಯ ತರಂಗಗಳ ಬಗೆಗೆ ಕೇಳಿ ರೋಮಾಂಚಿತನಾಗಿದ್ದನು. ಮಾರ್ಕೋನಿ, ಒಂದು ಕಿ. ಮೀ ದೂರಕ್ಕೆ ರೇಡಿಯೋ ತರಂಗಗಳನ್ನು ಕಳಿಸುವ ಪ್ರೇಷಕ, ಹಾಗೂ ಗ್ರಾಹಿಗಳನ್ನು ನಿರ್ಮಿಸಿದನು. 1896ರಲ್ಲಿ, ಬ್ರಿಟಿಷ್ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾದ ಮಾರ್ಕೋನಿ, ಮೂರು ವರ್ಷಗಳ ನಂತರ ಮೋರ್ಸ್ ಸಂಕೇತಗಳನ್ನು ಇಂಗ್ಲೀಷ ಕಡಲ್ಗಾಲುವೆಯಾಚೆಗೆ ರವಾನಿಸುವಲ್ಲಿ ಯಶಸ್ವಿಯಾದನು. ಇದು ನೌಕಾದಳವನ್ನು ಸೇರಿದಂತೆ ಬಹು ಜನರ ಗಮನ ಸೆಳೆಯಿತು. ರಾಯಲ್ ನೇವಿಯ ಹಡಗುಗಳಲ್ಲಿ ಮಾರ್ಕೋನಿ ಸಾಧನಗಳು ತಳವೂರಿದವು. 1901ರಲ್ಲಿ ಕಾರ್ನ್ವೇಲ್ನಿಂದ ಕಳಿಸಿದ ಸಂದೇಶಗಳನ್ನು , ಅಟ್ಲಾಂಟಿಕ್ ಸಾಗರದಾಚೆಗಿನ ನ್ಯೂ ಫೌಂಡ್ಲ್ಯಾಂಡ್ನಲ್ಲಿ, ಗಾಳಿಪಟದಿಂದ ಮೇಲೇರಿಸಿದ ಅ್ಯಂಟೇನಾದಿಂದ ಸ್ವೀಕರಿಸಲಾಯಿತು, ಇದರಿಂದಾಗಿ 27ನೇ ವಯಸ್ಸಿನಲ್ಲೇ ಮಾರ್ಕೋನಿ ಮನೆ ಮಾತಾದನು. 1909ರಲ್ಲಿ ನೊಬೆಲ್ ಪ್ರಶಸ್ತಿ ವೀಜೇತನಾದನು. ಮಾರ್ಕೊನಿ, ರೇಡಿಯೋ ತರಂಗಗಳನ್ನು ಅನಾವರಣಗೊಳಿಸಲಿಲ್ಲವಾದರೂ, ಅವುಗಳನ್ನು ಕಳಿಸುವ, ಸ್ವೀಕರಿಸುವ ವ್ಯಾವಹಾರಿಕ ಬಳಕೆಗೆ ತರುವ ಮಾರ್ಗಗಳನ್ನು ಸುಗಮಗೊಳಿಸಿದನು. ಮೊದಲ ಜಾಗತಿಕ ಯುದ್ದದಲಿ, ಬಹು ದೂರಕ್ಕೆ ಕಳಿಸಬಹುದಾದ ಲಘು ತರಂಗದ ರೇಡಿಯೋ ಸಲಕರಣೆ ಸಿದ್ದಗೊಳಿಸಿದನು. 1927ರಲ್ಲಿ ಜಾಗತಿಕ ಯುದ್ದದಲ್ಲಿ, ಬಹು ದೂರಕ್ಕೆ ಕಳಿಸಬಹುದಾದ ಲಘು ತರಂಗಾಂತರದ ರೇಡಿಯೋ ಸಲಕರಣೆ ಸಿದ್ದಗೊಳಿಸಿದನು. 1927ರಲ್ಲಿ ಜಾಗತಿಕ ಮಟ್ಟದ ಟೆಲಿಗ್ರಾಫ್ ಜಾಲ ಹರಡಿದನು. ಮಾರ್ಕೊನಿ ಕೊನೆಯವರೆಗೂ ರೇಡಿಯೋ ತರಂಗಗಳ ಸಂಶೋಧನೆಯಲ್ಲಿದ್ದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ವಾಲ್ಸ್, ಜೊಹಾನ್ನೆಸ್ ಡಿಡರಿಕ್ ವ್ಯಾಂಡರ್ (1837-1923) 1910
Waals , Johannes Diderik Van der
ಡೆನ್ಮಾರ್ಕ್-ಭೌತಶಾಸ್ತ್ರ- ಅನಿಲಗಳ ಸ್ಥಿತಿ ವಿವರಣೆಯ ಸಮೀಕರಣ ನೀಡಿದಾತ.
ವ್ಯಾಂಡರ್ವಾಲ್ಸ್ ತಂದೆ ಬಡಗಿಯಾಗಿದ್ದನು. ವಿದ್ಯಾಭ್ಯಾಸ ಮುಗಿಸಿದಮೇಲೆ ವಾಲ್ಸ್ ಹೇಗ್ನಲ್ಲಿ ಶಾಲಾ ಶಿಕ್ಷಕನಾಗಿ, ನಂತರ ಮುಖ್ಯೋಪಾಧ್ಯಾಯನಾದನು. ನಂತರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಾಠ ಮಾಡುವ ತರಬೇತಿ ಹೊಂದಿದ ವಾಲ್ಸ್, ಲೀಡೆನ್ನಲ್ಲಿ ಭೌತಶಾಸ್ತ್ರದ ಪದವಿ ಪಡೆದನು. 1873ರಲ್ಲಿ ಡಾಕ್ಟರೇಟ್ಗಾಗಿ ಅನಿಲಗಳ ಸ್ಥಿತಿ ಕುರಿತ ಸಂಪ್ರಂಬಂಧ ಮಂಡಿಸಿದನು. ಟಿ.ಆ್ಯಂಡ್ರೂಸ್ ಹಾಗೂ ಇತರರು ನೈಜ ಅನಿಲಗಳು ಆದರ್ಶ ಅನಿಲಗಳ ಸೂತ್ರಗಳಿಗನುಗುಣವಾಗಿ ವರ್ತಿಸುವುದಿಲ್ಲವೆಂದು ಹೇಳಿದ್ದರು. ಆದರ್ಶ ಅನಿಲಗಳ ಸಿದ್ಧಾಂತದಲ್ಲಿ, ಅನಿಲದ ಪರಮಾಣುಗಳಿಗೆ ಗಾತ್ರ ಅಥವಾ ಪರಸ್ಪರ ಆಕರ್ಷಣೆ ಇರುವುದಿಲ್ಲ. ಆ್ಯಂಡ್ರೂಸ್ ನೈಜ ಅನಿಲಗಳಿಗೆ ಒಂದು ನಿರ್ದಿಷ್ಟ ತಾಪಮಾನವಿದ್ದು, ಈ ತಾಪಮಾನದಿಂದ ಕೆಳಗೆ, ಒತ್ತಡ ಮಾತ್ರದಿಂದ ದ್ರವೀಕರಿಸಬಹುದೆಂದು ತೋರಿಸಿದ್ದನು. ವಾಲ್ಸ್, ನೈಜ ಅನಿಲಗಳಿಗೆ ಸಮರ್ಪಕವಾದ ಹೊಸ ಸೂತ್ರ ನೀಡಿದನು. ಇದರಲ್ಲಿ ಅನಿಲದ ಎರಡು ಅನಿಲಗಳ ಮಧ್ಯದ ಪರಸ್ಪರ ಆಕರ್ಷಣೆ ಹಾಗೂ ಪರಮಾಣುಗಳು ಪರಿಗಣಿತವಾಗಿದ್ದವು. ವಾಲ್ಸ್ ನೀಡಿದ ಸೂತ್ರದಲ್ಲಿ ಸ್ಥಿರಗಳನ್ನು ಸರಿಯಾಗಿ ನಿರ್ದರಿಸಿದ್ದೇ ಆದರೆ ನೈಜ ಅನಿಲಗಳ, ವೀಕ್ಷಿತ ಪರಿಣಾಮಗಳು ಸಮರ್ಪಕವಾಗಿರುತ್ತಿದ್ದವು. 1877ರಲ್ಲಿ ವ್ಯಾಂಡರ್ ವಾಲ್ಸ್ ಅ್ಯಮಡಸ್ಟರ್ಡ್ಯಾಂನಲ್ಲಿ ಪ್ರಾಧ್ಯಾಪಕನಾದನು. 1910ರಲ್ಲಿ ವಾಲ್ಸ್ಗೆ ನೊಬೆಲ್ ಪ್ರಶಸ್ತಿ ದಕ್ಕಿತು -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು