ಐನ್ಸ್ಟೀನ್ ,ಆಲ್ಬರ್ಟ್ (1879—1955) 1921
Einstein , Albert
ಜರ್ಮನಿ-ಸ್ವಿಟ್ಸಲ್ರ್ಯಾಂಡ್-ಅಸಂಸಂ-ಸಾಪೇಕ್ಷ ಸಿದ್ಧಾಂತ ನೀಡಿದಾತ.
ಐನ್ಸ್ಟೀನ್ ತಂದೆ ವೈದ್ಯುತ್ ಇಂಜಿನಿಯರ್ ಆಗಿದ್ದು ವಿದ್ಯುತ್ ಉಪಕರಣಗಳನ್ನು ತಯಾರಿಸಿ ಮಾರುತ್ತಿದ್ದನು. ವ್ಯವಹಾರದಲ್ಲಿ ಏಳ್ಗೆ ಕಾಣದೆ, ಮೇಲಿಂದ ಮೇಲೆ ಈತ ಊರುಗಳನ್ನು ಬದಲಾಯಿಸುತ್ತಿದ್ದನು. ಉಲ್ಮ್ ಪಟ್ಟಣದಲ್ಲಿ ಐನ್ಸ್ಟೀನ್ನ ಜನನವಾಯಿತು. ಗಣಿತದಲ್ಲಿ ಉತ್ತಮ ಅಂಕ ಪಡೆಯದ ಕಾರಣ, ಬಹು ಪ್ರಯಾಸದಿಂದ 17ನೇ ವಯಸ್ಸಿನಲ್ಲಿ ಝೂರಿಕ್ನ ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದನು. ಇಲ್ಲಿಂದ ಪದವಿ ಗಳಿಸಿ ಸ್ವಿಟ್ಸರ್ಲ್ಯಾಂಡ್ ಪ್ರಜೆಯಾದನು. ಜೀವನೋಪಾಯಕ್ಕಾಗಿ ಶಾಲಾ ಶಿಕ್ಷಕ ಅಥವಾ ವಿಶ್ವವಿದ್ಯಾಲಯದಲ್ಲಿ ಯಾವುದಾದರೊಂದು ಕೆಲಸಕ್ಕೆ ಸೇರಲು ಯತ್ನಿಸಿ ವಿಫಲನಾದನು. ಅಂತಿಮವಾಗಿ ಹಿತೈಷಿಯೊಬ್ಬರ ನೆರವಿನಿಂದ ಬರ್ನ್ನಲ್ಲಿದ್ದ ಪೇಟೆಂಟ್ ಕಛೇರಿಯಲ್ಲಿ ಕೆಲಸಕ್ಕೆ ಸೇರಿದನು. ಇಲ್ಲಿ ಪೇಟೆಂಟ್ಗಾಗಿ ಸಲ್ಲಿಸಿದ ವಿವರಗಳನ್ನು ಪರಿಶೀಲಿಸುವ ಹೊಣೆ ಐನ್ಸ್ಟೀನ್ಗೆ ಬಿದ್ದಿತು. ಇದರಲ್ಲಿ ಸಾಕಷ್ಟು ಚುರುಕಾಗಿದ್ದ ಐನ್ಸ್ಟೀನ್ಗೆ ಸಾಕಷ್ಟು ಬಿಡುವಿನ ವೇಳೆ ದಕ್ಕಿ ಭೌತಶಾಸ್ತ್ರದಲ್ಲಿನ ತನ್ನ ಕೆಲಸಗಳನ್ನು ಮುಂದುವರೆಸಿದನು. 1903ರಲ್ಲಿ ಸಹಪಾಠಿಯಾಗಿದ್ದ ಮಿಲೆವಾ ಮಾರಿಕ್ಗಳನ್ನು ವಿವಾಹವಾದನು. ಇವರಿಗೆ ಒಬ್ಬ ಮಗಳು, ಇಬ್ಬರು ಗಂಡು ಮಕ್ಕಳು ಜನಿಸಿದರು. 1919ರಲ್ಲಿ ಈಕೆಯೊಂದಿಗೆ ವಿಚ್ಛೇದನ ಹೊಂದಿ, ಬಂಧುವಾಗಿದ್ದ ಎಲ್ಸಾಳನ್ನು ವಿವಾಹವಾದನು. ಈಕೆಗೆ ಹಿಂದಿನ ವಿವಾಹದಿಂದ ಇಬ್ಬರು ಹೆಣ್ಣುಮಕ್ಕಳಿದ್ದರು. 1905ರಲ್ಲಿ ಪೇಟೆಂಟ್ ಕಛೇರಿಯಲ್ಲಿರುವಾಗ ಐನ್ಸ್ಟೀನ್ ಪ್ರಕಟಿಸಿದ ಮೂರು ಲೇಖನಗಳು ಇಡೀ ಭೌತಶಾಸ್ತ್ರದ, ವಿಜ್ಞಾನದ, ಮಾನವನ ಚಿಂತನೆಯ ಗತಿಯನ್ನೇ ಬದಲಿಸಿದವು. 1909ರಲ್ಲಿ ಝೂರಿಕ್ ವಿಶ್ವವಿದ್ಯಾಲಯದಲ್ಲಿ ಕಿರಿಯ ಪ್ರಾಧ್ಯಾಪಕನಾದ ಐನ್ಸ್ಟೀನ್ 1910ರಲ್ಲಿ ಪ್ರಾಗ್ನಲ್ಲಿ ಪ್ರಾಧ್ಯಾಪಕನಾದನು. 1912ರಲ್ಲಿ ಝೂರಿಕ್ಗೆ ಮರಳಿದನು. 1913ರಲ್ಲಿ ಬರ್ಲಿನ್ನ ಕೈಸರ್ ವಿಲ್ಹೆಲ್ಮ್ ಸಂಸ್ಥೆಯ ನಿರ್ದೇಶಕನಾದನು. ಮೊದಲ ಜಾಗತಿಕ ಯುದ್ಧದ ಸಮಯದಲ್ಲಿ ಸಾಮಾನ್ಯ ಸಾಪೇಕ್ಷ ಸಿದ್ಧಾಂತ ರೂಪಿಸಿ 1915ರಲ್ಲಿ ಪ್ರಕಟಿಸಿದನು. 1921ರಲ್ಲಿ ನೊಬೆಲ್ ಪ್ರಶಸ್ತಿಗೆ ಪಾತ್ರನಾದನು. ಐನ್ಸ್ಟೀನ್ , ತನ್ನ ಹೊಸ ಸಿದ್ಧಾಂತ ಕುರಿತಾದಂತೆ ಉಪನ್ಯಾಸಗಳನ್ನು ನೀಡುತ್ತಾ ಸಂಚರಿಸತೊಡಗಿದನು. 1933ರಲ್ಲಿ ಹಿಟ್ಲರ್ ಅಧಿಕಾರಕ್ಕೆ ಬಂದಾಗ ಐನ್ಸ್ಟೀನ್ ಅಸಂಸಂಗಳ ಕ್ಯಾಲಿಫೋರ್ನಿಯಾದಲ್ಲಿದ್ದನು. ಇಲ್ಲಿಂದಲೇ ತನ್ನ ಕೆಲಸಕ್ಕೆ ರಾಜಿನಾಮೆ ನೀಡಿ, ಪ್ರಿನ್ಸ್ಟನ್ನ ವiುಂದುವರೆದ ಅಧ್ಯಯನ ಸಂಸ್ಥೆ ಸೇರಿದನು. ಐನ್ಸ್ಟೀನ್ನ ವೈಜ್ಞಾನಿಕ ಪ್ರಯತ್ನಗಳು ಗುರುತ್ವ , ವೈದ್ಯುತ್ ಕಾಂತೀಯ ಹಾಗೂ ಬೈಜಿಕ ಬಲಗಳನ್ನು ಒಂದೇ ಕ್ಷೇತ್ರದಲ್ಲಿ ಏಕ ಸೂತ್ರದ ಮೂಲಕ ಬಂಧಿಸುವಲ್ಲಿ ಕೇಂದ್ರಿಕೃತಗೊಂಡಿದ್ದವು. ಆದರೆ ಐನ್ಸ್ಟೀನ್ ಅಂತಿಮವಾಗಿ ಇದರಲ್ಲಿ ಯಶಸ್ಸನ್ನು ಕಾಣಲಿಲ್ಲ. ಹಿಟ್ಲರ್ ನೇತೃತ್ವದ ಜರ್ಮನಿ ಬೈಜಿಕಾಸ್ತ್ರ ತಯಾರಿಸುವ ಸಾಧ್ಯತೆಗಳನ್ನು ಅದರಿಂದ ಇಡೀ ವಿಶ್ವಕ್ಕೆ ಒದಗಬಹುದಾದ ಅಪಾಯವನ್ನು ವಿವರಿಸಿ, 1939ರಲ್ಲಿ ಅಸಂಸಂ ಅಧ್ಯಕ್ಷ ರೂಸ್ವೆಲ್ಟ್ಗೆ ಐನ್ಸ್ಟೀನ್ ಪತ್ರವೊಂದನ್ನು ಬರೆದನು. ಇದರಲ್ಲಿ ಅಸಂಸಂ ಬೈಜಿಕಾಸ್ತ್ರ ತಯಾರಿಕೆಗೆ ಮುಂದಾಗಬೇಕೆಂದು ಒತ್ತಾಯಿಸಿದ್ದನು. ಇದು ಹಾಗೂ ಇನ್ನಿತರ ವಿಜ್ಞಾನಿಗಳ ಒತ್ತಾಯದ ಮೇರೆಗೆ ರೂಸ್ವೆಲ್ಟ್ ಮ್ಯಾನ್ ಹಟನ್ ಯೋಜನೆಯ ಮೂಲಕ ಬೈಜಿಕಾಸ್ತ್ರ ತಯಾರಿಕೆಗೆ ಚಾಲನೆ ನೀಡಿದನು. ಎರಡನೇ ಜಾಗತಿಕ ಯುದ್ದದ ನಂತರ ಜನ್ಮ ತಳೆದ ಇಸ್ರೇಲ್ಗೆ ಅಧ್ಯಕ್ಷನಾಗುವ ಆಹ್ವಾನ ಐನ್ಸ್ಟೀನ್ಗೆ 1952ರಲ್ಲಿ ಬಂದಿತು. ಆದರೆ ಆತ ಇದನ್ನು ನಿರಾಕರಸಿದನು. ನಾಗಸಾಕಿ, ಹಿರೋಷಿಮಾಗಳ ಮೇಲೆ ಬೈಜಿಕಾಸ್ತ್ರ ದಾಳಿಯ ನಂತರದ ಪರಿಣಾಮಗಳನ್ನು ಕಂಡು ಪರಮಾಣು ನಿಶ್ಯಸ್ತ್ರೀಕರಣ ತರಲು ಯತ್ನಿಸಿದನು. ಸರಳ ಜೀವಿಯಾಗಿದ್ದ ಐನ್ಸ್ಟೀನ್ಗೆ ಸಂಗೀತ ಹಾಗೂ ಸಮುದ್ರಯಾನ ಬಿಡುವಿನ ಹವ್ಯಾಸಗಳಾಗಿದ್ದವು. 1828ರಲ್ಲಿ ರಾಬರ್ಟ್ ಬ್ರೌನ್, ನಿಶ್ಚಲ ನೀರಿನ ಮೇಲಿರುವ ಸೂಕ್ಷ್ಮವಾದ ಪರಾಗ ರೇಣುಗಳು ಯಾವುದೇ ಬಾಹ್ಯ ಪ್ರಚೋದನೆಯಿಲ್ಲದಿದ್ದರೂ, ತೀವ್ರ ಚಲನೆಯಲ್ಲಿರುವುದನ್ನು ವೀಕ್ಷಿಸಿ ದಾಖಲಿಸಿದ್ದನು. ಇದಕ್ಕೆ ಕಾರಣಗಳನ್ನು ನೀಡಲಾಗಿರಲಿಲ್ಲ.. ಆದರೆ ಐನ್ಸ್ಟೀನ್ ಗಣಿತದ ಲೆಕ್ಕಾಚಾರಗಳ ಮೂಲಕ ದ್ರವದ ಅಣುಗಳ ಚಲನೆಯೇ ಇದಕ್ಕೆ ಕಾರಣವೆಂದು ವಿವರಿಸಿದನು. ಇದು ಅಣುಗಳ ಅಸ್ತಿತ್ವಕ್ಕೆ ನೀಡಿದ ಮೊಟ್ಟ ಮೊದಲ ವಿವರಣೆಯಾಗಿದ್ದಿತು. 1908ರಲ್ಲಿ ಪೆರಿನ್ ತನ್ನ ವಿಶಿಷ್ಟ ಪ್ರಯೋಗಗಳ ಮೂಲಕ ಅಣುಗಳ ಅಸ್ತಿತ್ವವನ್ನು ಖಚಿತಗೊಳಿಸಿದನು. ಮ್ಯಾಕ್ಸ್ವೆಲ್ ಬೆಳಕು ತರಂಗರೂಪಿಯೆಂದು ವಿವರಿಸಿದ್ದನು. ಆವರೆಗಿನ ವೀಕ್ಷಣೆಗಳು ಇದಕ್ಕೆ ಬೆಂಬಲ ಒದಗಿಸಿದ್ದವು. ಆದರೆ ದ್ಯುತಿವೈದ್ಯುತ್ (Photoelectric) ಪರಿಣಾಮವನ್ನು ಮ್ಯಾಕ್ಸ್’ವೆಲ್ ಪರಿಗಣನೆಯಿಂದ ವಿವರಿಸಲು ಸಾಧ್ಯವಾಗಿರಲಿಲ್ಲ,. 1902ರಲ್ಲಿ ಲೆನಾರ್ಡ್ ದ್ಯುತಿ ವೈದ್ಯುತ್ ಪರಿಣಾವiದ ಮೇಲೆ ಹಲವಾರು ಪ್ರಯೋಗಗಳನ್ನು ನಡೆಸಿ, ಕೆಲವು ನಿರ್ದಿಷ್ಟ ಸಂಗತಿಗಳನ್ನು Sಚಿತಗೊಳಿಸಿದ್ದನು. ಇವುಗಳಿಂದ ಲೋಹದ ಫಲಕದಿಂದ ಉತ್ಸರ್ಜನೆಗೊಂಡ ಎಲೆಕ್ಟ್ರಾನ್ಗಳ ಚೈತನ್ಯ,ಫಲಕದ ಮೇಲೆ ಬಿದ್ದ ಬೆಳಕಿನ ತೀವ್ರತೆಯನ್ನು ಆಧರಿಸದೆ, ಆದರೆ ತರಂಗಾಂತರದ (Wave Length) ಮೇಲೆ ಅವಲಂಬಿತವಾಗಿರುವುದು ಖಚಿತವಾಗಿದ್ದಿತು. ಈ ತಿಳುವಳಿಕೆಯ ಹಿನ್ನೆಲೆಯಲ್ಲಿ ಐನ್ಸ್ಟೀನ್ , ಬೆಳಕು ಮ್ಯಾಕ್ಸ್ವೆಲ್ ಭಾವಿಸಿದಂತೆ ಅಲೆಯಾಗಿರದೆ, ಮ್ಯಾಕ್ಸ್ ಪ್ಲಾಂಕ್ ಮಾದರಿಯಲ್ಲಿ ನಿರ್ದಿಷ್ಟ ಚೈತನ್ಯ ಹೊಂದಿದ ಪೊಟ್ಟಣಗಳಲ್ಲಿ (ಕ್ವಾಂಟಂ) ಹೊಮ್ಮುವುದೆಂದು ಭಾವಿಸಿದಾಗ, ಲೆನಾರ್ಡ್ನ ವೀಕ್ಷಣೆಗಳನ್ನು ವಿವರಿಸಬಹುದೆಂದು ಗಣಿತೀಯವಾಗಿ ತೋರಿಸಿದನು. ಐನ್ಸ್ಟೀನ್ ಮೊದಲೆರಡು ಲೇಖನಗಳಲ್ಲಿ ಬ್ರೌನಿಯನ್ ಚಲನೆ, ದ್ಯುತಿ ವೈದ್ಯುತ್ ಪರಿಣಾಮಕ್ಕೆ ಪರಿಹಾರಗಳು ದಕ್ಕಿದವು. ತನ್ನ ಮೂರನೇ ಲೇಖನದಲ್ಲಿ ಸಮರೂಪದಲ್ಲಿ ಚಲಿಸುವ ಎರಡು ಕಾಯಗಳನ್ನು ಪರಿಗಣಿಸಿ ವಿಶೇಷ ಸಾಪೇಕ್ಷವಾದ (Special Theory of Relativity) ಮಂಡಿಸಿದನು. ಮ್ಯಾಕ್ಸ್’ವೆಲ್ ಬೆಳಕನ್ನು ಕುರಿತಾಗಿ ನೀಡಿದ್ದ ವೈದ್ಯುತ್ ಕಾಂತೀಯ ಸಿದ್ಧಾಂತ ಆವರೆಗಿನ ಅಭಿಜಾತ ಸಿದ್ಧಾಂತ ಹಲವಾರು ತತ್ತ್ವಗಳನ್ನು ಮುರಿದಿದ್ದಿತು. ಈ ಸಿದ್ಧಾಂತದಂತೆ ಬೆಳಕಿನ ವೇಗ , ಅದರ ಆಕರದ ವೇಗ ಅಥವಾ ಅದನ್ನು ವೀಕ್ಷಿಸುವವರ ವೇಗದಿಂದ ಸ್ವತಂತ್ರವಾಗಿ, ಯಾವಾಗಲೂ ಸ್ಥಿರವಾಗಿರುತ್ತದೆ. ಇದಕ್ಕೆ ಲೊಹ್ರೆಂಟ್ಸ್, ಫ್ರಿಟ್’ಜೆರಾಲ್ಡ್ ಮತ್ತು ಪ್ವಾನ್ಕ್ಯಾರೆ ವಿಶಿಷ್ಟ ಗಣಿತದಿಂದ ವಿವರಿಸಿದ್ದರು. ಇದರ ಮುಂದುವರಿಕೆಯಂತೆ ಐನ್ಸ್ಟೀನ್ ಬೆಳಕು ಎಲ್ಲಾ ಪರಾಮರ್ಶನ ಚೌಕಟ್ಟುಗಳಲ್ಲಿ ಒಂದೇ ವೇಗ ಹೊಂದಿರುವುದೆಂದು ಪ್ರತಿಪಾದಿಸಿದನು. ಈ ಮೊದಲೇ 1887 ರಲ್ಲಿ ಮೈಖೆಲ್ಸನ್ ಮತ್ತು ಮಾರ್ಲೆ ತಮ್ಮ ಪ್ರಯೋಗಗಳಿಂದ ಇದನ್ನು ಖಚಿತಗೊಳಿಸಿದ್ದರು. ಆದರೆ ಇದರ ಅರಿವು ಐನ್ಸ್ಟೀನ್ಗಿರಲಿಲ್ಲ. ಐನ್ಸ್ಟೀನ್ ಪರಿಕಲ್ಪನೆಗಳಿಂದ ಭೌತಿಕ ನಿಯಮಗಳು ಎಲ್ಲಾ ಚೌಕಟ್ಟುಗಳಲ್ಲೂ ಒಂದೇ ಆಗಿರುವುದೆಂದು ಸ್ಪಷ್ಟವಾಗಿ, ಮ್ಯಾಕ್ಸ್ವೆಲ್ ಸಿದ್ಧಾಂತ ಹಾಗೂ ಲೊಹ್ರೆಂಟ್ಸ್, ಫ್ರಿಟ್’ಜೆರಾಲ್ಡ್ , ಪ್ವಾನ್ಕ್ಯಾರೇ ವಿವರಣೆಗಳಿಗೂ ಹೊಂದಾಣಿಕೆಯಾಯಿತು. ಇದರ ಮುಂದುವರಿದ ವಿಶ್ಲೇಷಣೆಯಿಂದ ದ್ರವ್ಯ ಹಾಗೂ ಚೈತನ್ಯ E=mC2 (ಚೈತನ್ಯ = ದ್ರವ್ಯ x ಬೆಳಕಿನ ವೇಗ) ಸಂಬಂಧ ಹೊಂದಿರುವುದು ತಿಳಿದು ಬಂದಿತು. 1907ರಲ್ಲಿ ಸಾಮಾನ್ಯ ಸಾಪೇಕ್ಷವಾದದ (General Theory of Relativity)ಮೂಲಕ ಗುರುತ್ವದ ಪ್ರಭಾವದಿಂದ ಬೆಳಕಿನ ಕಿರಣಗಳು ಸಹ ಬಾಗುತ್ತವೆಯೆಂದು ಐನ್ಸ್ಟೀನ್ ಮುನ್ನುಡಿದನು. ದೂರದ ತಾರೆಯಿಂದ ಬರುವ ಬೆಳಕು ಸೂರ್ಯನ ಸನಿಹ ಹಾದುಬರುವಾಗ 1.7 ಸೆಕೆಂಡ್ಗಳಷ್ಟು ಕೋನದಲ್ಲಿ ಬಾಗುವುದೆಂದು ಲೆಕ್ಕಾಚಾರ ಹಾಕಿದನು. 1919ರಲ್ಲಿ ಪೂರ್ಣ ಸೂರ್ಯಗ್ರಹಣ ಜರುಗಿದಾಗ ಎಡಿಂಗ್ಟನ್ ನಡೆಸಿದ ಪ್ರಯೋಗಗಳು ಐನ್ಸ್ಟೀನ್ ಲೆಕ್ಕಾಚಾರಗಳು ಸರಿಯೆಂದು ಸಾರಿದವು. ಈ ಪ್ರಯೋಗದ ಫಲಿತಾಂಶಗಳು ಒಮ್ಮೆಲೇ ಐನ್ಸ್ಟೀನ್ನನ್ನು ಜಗದ್ವಿಖ್ಯಾತನನ್ನಾಗಿಸಿದವು. ರೀಮನ್ ರೇಖಾಗಣಿತ ಮಿಂಕೋವ್ಸ್ಕಿ ಪರಿಕಲ್ಪನೆ, ರಿಕ್ಕಿಯ ಸೂತ್ರಗಳನ್ನು ಬಳಸಿ, ಐನ್ಸ್ಟೀನ್ ಗುರುತ್ವಕ್ಕೆ 1915ರಲ್ಲಿ ಹೊಸ ವಿವರಣೆ ನೀಡಿದನು. ಈ ವ್ ಇವರಣೆಯಂತೆ ದ್ರವ್ಯದ ಸನಿಹದಲ್ಲಿರುವ ಆಕಾಶ, ದ್ರವ್ಯದ ಪರಿಣಾಮದಿಂದಾಗಿ ವಕ್ರಗೊಳ್ಳುತ್ತದೆ, ಈ ವಕ್ರತೆಯಲ್ಲಿ ಕಾಯಗಳು ಪರಸ್ಪರ ಬಂಧಿಸಲ್ಪಡುತ್ತವೆ. ಇದೇ ಗುರುತ್ವಬಲ ಎಂದು ಹೇಳಿದನು. ಇದರಿಂದಾಗಿ ಗುರುತ್ವ ಎನ್ನುವುದು ಆವರೆಗೆ ಭಾವಿಸಿದಂತೆ ಒಂದು ಬಲವಾಗಿರದೆ , ದ್ರವ್ಯ ಮತ್ತು ಆಕಾಶಗಳ ಮಧ್ಯದ ಅಂತಕ್ರಿಯೆಯಂದು ಸ್ಪಷ್ಟವಾಯಿತು. ಇದು ನ್ಯೂಟನ್ನ ಗುರುತ್ವ ನಿಯಮವನ್ನು ತನ್ನೊಳಗೆ ಹುದುಗಿಸಿಕೊಂಡಿದ್ದಿತು. ಅಲ್ಲದೆ ನ್ಯೂಟನ್ನ ಗುರುತ್ವ ನಿಯಮದಲ್ಲಿ ಅತ್ಯಲ್ಪ ತಿದ್ದುಪಡಿಯನ್ನು ಸೂಚಿಸಿತು. ಇದರ ಫಲವಾಗಿ ಶತಮಾನಗಳಿಗೊಮ್ಮೆ ಬುಧಗ್ರಹದ ಕಕ್ಷೆ 43 ಸೆಕೆಂಡ್ಗಳಷ್ಟು ವ್ಯತಸ್ತವಾಗಬೇಕು. ಇದನ್ನು ಮುಂದೆ ಇತರರು ಅಳೆದು ಸರಿಯೆಂದು ಸಾಧಿಸಿದರು. ಐನ್ಸ್ಟೀನ್ ಸಾಪೇಕ್ಷ ಸಿದ್ಧಾಂತದ ಉಪ ಉತ್ಪನ್ನವಾಗಿ, ಬೆಳಕು ಗುರುತ್ವದ ಒಂದು ಕ್ಷೇತ್ರದಿಂದ , ಇನ್ನೊಂದು ಕ್ಷೇತ್ರಕ್ಕೆ ಸಾಗುವಾಗ ಅದರ ತರಂಗಾಂತರ ಪಲ್ಲಟಗೊಳ್ಳಬೇಕು . 1925ರಲ್ಲಿ ಇದು ಅಂತರಿಕ್ಷದಿಂದ ಖಚಿತಗೊಂಡರೆ , 1959ರಲ್ಲಿ ಆರ್.ಪಾಂಡ್ ಹಾಗೂ ಜಿ.ರೆಬ್ಕಾ ಭೂಮಿಯ ಮೇಲೆ, 23 ಮೀ ಎತ್ತರದ ಗೋಪುರದ ಮೇಲೆ ಮೋಸ್ಬೌವೆರ್ ಪರಿಣಾಮದ ಮೂಲಕ ನಡೆಸಿದ ಪ್ರಯೋಗಗಳಿಂದ ಸರಿಯೆಂದು ತೋರಿಸಿದರು. ಐನ್ಸ್ಟೀನ್ ಸಿದ್ಧಾಂತಗಳಿಂದ ವಿಶ್ವ ಮಾದರಿಯೇ ಬದಲಾಯಿತು. ಸಾಪೇಕ್ಷ ಸಿದ್ಧಾಂತ ಬಳಸಿ, 1922ರಲ್ಲಿ ಫ್ರೀಡ್ಮನ್ ಹಿಗ್ಗುತ್ತಿರುವ ವಿಶ್ವದ ಸ್ವರೂಪ ನೀಡಿದನು. 1920ರಿಂದ 1930ರ ದಶಕದಲ್ಲಿ ಐನ್ಸ್ಟೀನ್ಗೆ ಬೌದ್ಧಿಕ ಅಘಾತಗಳು ಕಾದಿದ್ದವು. ಬಾರ್ನ್, ಕ್ವಾಂಟಂ ಬಲವಿಜ್ಞಾದಲ್ಲಿ ಸಂಭಾವ್ಯತಾ ಸಿದ್ಧಾಂತ ಸೇರಿಸಿ ಯಾವುದೇ ಘಟನೆ ನಿರ್ಧಾರಾತ್ಮಕವಲ್ಲವೆಂದೂ, ಅದು ಕೇವಲ ಸಂಭವನೀಯವೆಂದೂ, ದ್ರವ್ಯದ ಸ್ಥಿತಿಯೂ ಇದಕ್ಕೆ ಹೊರತಲ್ಲವೆಂದೂ ಸಾಧಿಸಿದನು. ಇದನ್ನು ಐನ್ಸ್ಟೀನ್ ತೀವ್ರವಾಗಿ ಆಲ್ಲಗಳೆದನು. ಆದರೆ ಕ್ವಾಂಟಂ ಸಿದ್ಧಾಂತ ಪ್ರಬಲವಾದಂತೆ, ಐನ್ಸ್ಟೀನ್ ನಿಲುವುಗಳು ಬದಲಾಗಲೇ ಬೇಕಾಯಿತು. ಇದರಿಂದಾಗಿ 1921ರಲ್ಲಿ ಮಹಾನ್ ಸಂಶೋಧನೆಗಳು ಹದಿಹರೆಯದ ಯುವಕರಿಗೆ ಹೊರತು ನನ್ನಂತಹವರಿಗಲ್ಲ ಎಂದು ಸಾರಿದನು. ಜಗತ್ತಿನ ಅರಿವಿನ ಸ್ವರೂಪ ಬದಲಿಸಿದ ಬೆರಳೆಣಿಕೆಯ ವಿಜ್ಞಾನಿಗಳಲ್ಲಿ ಐನ್ಸ್ಟೀನ್ ಸಹ ಒಬ್ಬನೆಂಬುದು ವಿವಾದಾತೀತ. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಬೊಹ್ರ್ ,ನೀಲ್ಸ್ (ಹೆನ್ರಿಕ್ ಡೇವಿಡ್) (1885-1962) -1922
ಡೆನ್ಮಾರ್ಕ್ -ಸೈದ್ಧಾಂತಿಕ ಭೌತಶಾಸ್ತ್ರ -ಪರಮಾಣುಗಳ ಎಲೆಕ್ಟ್ರಾನಿಕ್ ರಾಚನಿಕ ಸ್ವರೂಪ ತಿಳಿಸುವ ಕ್ವಾಂಟಂ ಸಿದ್ಧಾಂತ ಪ್ರತಿಪಾದಿಸಿದಾತ.
ಖ್ಯಾತ ಕೌಟುಂಬಿಕ ಹಿನ್ನೆಲೆಯಲ್ಲಿ ಹುಟ್ಟಿದ ನೀಲ್ಸ್ನ ತಂದೆ ಕೊಪೆನ್ಹೆಗ್ನಲ್ಲಿ ಅಂಗರಚನಾಶಾಸ್ತ್ರದ ಹೆಸರಾಂತ ಪ್ರಾಧ್ಯಾಪಕನಾಗಿದ್ದನು. ನೀಲ್ಸ್ ತಮ್ಮ ಹೆರಾಲ್ಡ್ ಪ್ರತಿಭಾವಂತ ಗಣಿತಜ್ಞ ನೀಲ್ಸ್ ಹಾಗೂ ಹೆರಾಲ್ಡ್ ಶ್ರೇಷ್ಟ ಮಧ್ಯದ ಕಾಲ್ಚೆಂಡಿನ ಆಟಗಾರರಾಗಿದ್ದರು. ನೀಲ್ಸ್ 1922ರಲ್ಲಿ ಭೌತಶಾಸ್ತ್ರದಲ್ಲಿನ ಸಾಧನೆಗಾಗಿ ನೊಬೆಲ್ ಪ್ರಶಸ್ತಿ ಪಡೆದರೆ, ಅದೇ ವರ್ಷ ಜನಿಸಿದ ಅವನ ಮಗ ಅಗೆ ಬೊಹ್ರ್ 1975ರಲ್ಲಿ ಭೌತಶಾಸ್ತ್ರದಲ್ಲಿನ ಸಾಧನೆಗಾಗಿ ನೊಬೆಲ್ ಪುರಸ್ಕೃತನಾದನು. 1911ರಲ್ಲಿ ಡಾಕ್ಟರೇಟ್ ಮುಗಿಸಿದ, ನೀಲ್ಸ್ ಮುಂದಿನ 8 ತಿಂಗಳ ಕಾಲ ಕೇಂಬ್ರಿಜ್ನಲ್ಲಿ ಜೆ.ಜೆ. ಥಾಮ್ಸನ್ ಜೊತೆ ಕೆಲಸ ಮಾಡಿದನು. ಪರಮಾಣು ರಚನೆಯನ್ನು ಕುರಿತಾದಂತೆ ನೀಲ್ಸ್ ನ ಪರಿಕಲ್ಪನೆಗಳು ಜೆ.ಜೆ. ಥಾಮನ್ಸ್ಗೆ ಒಪ್ಪಿಗೆಯಾಗಿರಲಿಲ್ಲ. ಇದರಿಂದಾಗಿ ನೀಲ್ಸ್ ಮ್ಯಾಂಚೆಸ್ಟರ್ಗೆ ತೆರಳಿ ರುದರ್’ಫೋರ್ಡ್ ದಿಗೆ ಸೇರಿ 4 ವರ್ಷಗಳ ಕಾಲ ಸಂಶೋಧನೆ ಮುಂದುವರೆಸಿದನು. ಈ ವೇಳೆಗೆ ರುದರ್’ಫೋರ್ಡ್ ಪರಮಾಣು ರಚನೆಯ ಸಿದ್ಧಾಂತವನ್ನು ಮಂಡಿಸಿದ್ದನು. ಈ ಸಿದ್ಧಾಂತದ ಮಾದರಿಯಲ್ಲಿ ಎಲೆಕ್ಟ್ರಾನ್ಗಳು ಕೇಂದ್ರ ಧನಾತ್ಮಕ ಬೀಜದ ಸುತ್ತ ಹರಡಿದ್ದವು. ಆದರೆ ಅಭಿಜಾತ ಭೌತಶಾಸ್ತ್ರಕ್ಕನುಗುಣವಾಗಿ , ಇಂತಹ ಮಾದರಿ ಸಮಸ್ಥಿತಿಯಲ್ಲಿದ್ದು, ಸ್ಥಿರವಾಗಿರಲು ಅಸಾಧ್ಯ. ಈ ಸೈದ್ಧಾಂತಿಕ ದೋಷದ ಬಗೆಗೆ ಆಳವಾಗಿ ಚಿಂತಿಸಿದ ನೀಲ್ಸ್, ಎಲೆಕ್ಟ್ರಾನ್ಗಳು ಒಂದು ನಿರ್ದಿಷ್ಟ ಕಕ್ಷೀಯ ಕೋನೀಯ ಆವೇಗ (Orbital Angular Momentum) ಹೊಂದಿದ್ದರೆ ಅವು ಸ್ಥಿರವಾಗಿ, ಸಮಸ್ಥಿತಿಯಲ್ಲಿರಬಹುದೆಂದು ಸೂಚಿಸಿದನು. ಇದಕ್ಕನುಗುಣವಾಗಿ ಪ್ರತಿ ಎಲೆಕ್ಟ್ರಾನ್ ಒಂದು ನಿರ್ದಿಷ್ಟ ಕಕ್ಷೆಯಲ್ಲಿ ಮಾತ್ರ ಸುತ್ತುತ್ತದೆ. ಹಾಗೆ ಸುತ್ತುವ ಎಲೆಕ್ಟ್ರಾನ್ ಚೈತನ್ಯಗಳಿಸಿ ಮೇಲಿನ ಕಕ್ಷೆಗಳಿಗೆ ಹಾರಬಹುದು ಅಥವಾ ಚೈತನ್ಯ ಕಳೆದುಕೊಂಡು ಕೆಳಗಿನ ಕಕ್ಷೆಗಳಿಗೆ ಕುಸಿಯಬಹುದೆಂದು, ನೀಲ್ಸ್ ವಾದಿಸಿದನು. ಇದರ ಪ್ರಕಾರ ವಿಕಿರಣ ಹೊರಹೊಮ್ಮುವ ಅಥವಾ ಒಳ ಹೀರಲ್ಫಡುವ ಕ್ರಿಯೆ ಎಲೆಕ್ಟ್ರಾನ್ ಗಳಿಸಿದ ಚೈತನ್ಯದ ಮೇಲೆ ಆಕ್ರಮಿಸಲಿರುವ ಕಕ್ಷೆಯ ಮೇಲೆ ಅವಲಂಬಿತವಾಗಿರುತ್ತದೆ. ನೀಲ್ಸ್ ತನ್ನ ಈ ಸಿದ್ಧಾಂತವನ್ನು ಜಲಜನಕದ ಎಲೆಕ್ಟ್ರಾನ್ ಚೈತನ್ಯ ಹೀರಿದಾಗ ಅಥವಾ ಬಿಡುಗಡೆಗೊಳಿಸಿದಾಗ ದಕ್ಕಬಹುದಾದ ರೋಹಿತದ ಸ್ವರೂಪವನ್ನು ನಿರ್ದರಿಸಲು ಬಳಸಿದನು.
1913ರಲ್ಲಿ ರಿಡ್ಬರ್ಗ್ ಹಾಗೂ ಬಾಮರ್ ಜಲಜನಕದ ಎಲೆಕ್ಟ್ರಾನ್ ಚೈತನ್ಯದ ರೋಹಿತವನ್ನು ಅಧ್ಯಯನ ನಡೆಸಿದಾಗ, ಅವು ನೀಲ್ಸ್ ಸಾದರಪಡಿಸಿದ ರೋಹಿತವನ್ನು ಚಾಚೂ ತಪ್ಪದಂತೆ ಹೋಲುತ್ತಿರುವುದು ಸ್ಪಷ್ಟವಾಯಿತು. 1916ರಲ್ಲಿ ನೀಲ್ಸ್ ಕೊಪೆನ್ಹೇಗ್ಗೆ ಮರಳಿ, ಎರಡು ವರ್ಷಗಳ ತರುವಾಯ, ಅಲ್ಲಿ ಸ್ಥಾಪನೆಗೊಂಡ ಸೈದ್ಧಾಂತಿಕ ಭೌತಶಾಸ್ತ್ರ ಸಂಸ್ಥೆಯ ಮೊದಲ ನಿರ್ದೇಶಕನಾದನು. ನೀಲ್ಸ್ ನಿರ್ದೇಶಕನಾಗಿದ್ದ ದೀರ್ಘ ಕಾಲದುದ್ದಕ್ಕೂ ಅವನ ಸಂಸ್ಥೆ ಜಗತ್ತಿನಾದ್ಯಂತ ಸೈದ್ಧಾಂತಿಕ ಭೌತಶಾಸ್ತ್ರದ ಕ್ವಾಂಟಂ ಸಿದ್ಧಾಂತದ ಕ್ಷೇತ್ರದಲ್ಲಿ ಜರುಗುತ್ತಿದ್ದ ಸಂಶೋಧನೆಗಳನ್ನು ಸಮನ್ವಯಗೊಳಿಸುವ ಕೇಂದ್ರವಾಗಿದ್ದಿತು. 1927ರಲ್ಲಿ ನೀಲ್ಸ್ ಪರಿಪೂರಕ ತತ್ತ್ವ (Complimentary Principle) ಮಂಡಿಸಿದನು. ಈ ತತ್ತ್ವದಂತೆ ಪರಮಾಣ್ವಕ ವಸ್ತುಗಳಿಗೂ (Atomic Objects) ಹಾಗೂ ಅವುಗಳನ್ನು ಅಳೆಯುತ್ತಿರುವ ಸಲಕರಣೆಗಳ, ಮಧ್ಯದ ಅಂತಕ್ರಿ0iÉು ಗುರುತಿಸುವಂತಹ ಯಾವ ವಿಭಿನ್ನತೆಯೂ ಇಲ್ಲ. ಈ ತತ್ತ್ವ ಬ್ರೊಗಿಲಿ ಭಾವಿಸಿದಂತೆ ದ್ರವ್ಯದ ಕಣ ಹಾಗೂ ಅಲೆ ಸ್ವರೂಪಗಳೆರಡಕ್ಕೂ ಸಮಾನ ಸ್ಥಾನ ನೀಡುವುದಲ್ಲದೆ, ಹೀಸೆನ್ಬರ್ಗ್ನ ಅನಿಶ್ಚಿತ ತತ್ತ್ವ ಹಾಗೂ ಬಾರ್ನ್ ದ್ರವ್ಯದ ಅಲೆಗಳನ್ನು ವಿವರಿಸಲು, ಬಳಸಿದ ಸಂಭಾವ್ಯತಾ ಮಾದರಿಗೂ ಸಲ್ಲುತ್ತದೆ. ನೀಲ್ಸ್ ಪರಿಪೂರಕ ತತ್ತ್ವಕ್ಕೆ ಜೋಡಿಯೆಂಬಂತೆ ಅನುಸಂವಾದಿ ತತ್ತ್ವವನ್ನು (Correspondence Principle) ಮಂಡಿಸಿದ್ದಾನೆ. ಈ ತತ್ತ್ವದ ಪ್ರಕಾರ ಸೂಕ್ಷ್ಮ ಮಟ್ಟದಲ್ಲಿ ಅಣು ಹಂತದಲ್ಲಿ ಅನ್ವಯಗೊಳ್ಳುವ ಕ್ವಾಂಟಂ ಸಿದ್ಧಾಂತ , ಸ್ಥೂಲ ಜಗತ್ತಿಗೂ , ಅಭಿಜಾತ ಭೌತಶಾಸ್ತ್ರಕ್ಕೆ ಅನ್ವಯವಾಗುತ್ತದೆ. 1930ರವೇಳೆಗೆ ರುದರ್’ಫೋರ್ಡ್ ನಡೆಸಿದ ಚಟುವಟಿಕೆಗಳು ಅಣ್ವಯಿಕ ಭೌತಶಾಸ್ತ್ರಕ್ಕೆ ಕಾರಣವಾಗಿದ್ದವು. ಈ ಜ್ಞಾನವನ್ನು ಬಳಸಿಕೊಂಡು ನೀಲ್, ತನ್ನ ಸಿದ್ಧಾಂತವನ್ನು ಪರಮಾಣು ಬೀಜಕ್ಕೂ ಅನ್ವಯಿಸಿದನು. ಈ ಅನ್ವಯ ಹಾಗೂ ಸಿದ್ಧಾಂತ ಮುಂದುವರಿಕೆಯಾಗಿ ಹೊಸ ಸಂಗತಿಗಳು ಬೆಳಕಿಗೆ ಬಂದವು. 1936ರಲ್ಲಿ ನೀಲ್ಸ್ ಪರಮಾಣು ಬೀಜದಲ್ಲಿ ಪ್ರೋಟಾನ್ ಹಾಗೂ ನ್ಯೂಟ್ರಾನ್ಗಳು ಪರಸ್ಪರ ಪ್ರಬಲ ಶಕ್ತಿಯಿಂದ ಬಂಧಿಸಲ್ಪಟ್ಟಿವೆ ಎಂದು ಸಾರಿದನು. 1939ರಲ್ ಜೆ. ಎ. ವೀಲರ್ ಜೊತೆ ಸೇರಿ, ನೀಲ್ಸ್ ಬೈಜಿಕ ಸದಳನ ಸಾಧ್ಯತೆಯನ್ನು, ಅದನ್ನು ವಿವರಿಸುವ ಸಿದ್ಧಾಂತವನ್ನು ಮಂಡಿಸಿದನಲ್ಲದೆ, ಯುರೇನಿಯಂ 235ರ ಸಮಸ್ಥಾನಿ (Isotope), ಯುರೇನಿಯಂ 238ಕ್ಕಿಂತಲು ಇಂತಹ ಸದಳನಕ್ಕೆ ಬಹು ಸಮರ್ಪಕವಾದುದೆಂದು ಸೂಚಿಸಿದನು. ಇದೇ ಸಂಗತಿಯನ್ನು ಆಲ್ಬರ್ಟ್ ಐನ್ಸ್ಟೀನ್ ತಿಳಿಸಿದ್ದನಲ್ಲದೆ, ಬೈಜಿಕಾಸ್ತ್ರ (Nuclea Weapon ) ತಯಾರಿಕೆಗೆ ಇದು ಹೇಗೆ ಕಾರಣವಾಗುವುದೆಂದು ಸೂಚಿಸಿದ್ದನು. ಎರಡನೇ ಜಾಗತಿಕ ಯುದ್ದದಲ್ಲಿ ಡೆನ್ಮಾರ್ಕ್ ನಾಝಿಗಳ ಕಣ್ಗಾವಲ ಕೆಳಗೆ ಬಂದಿತು. ನೀಲ್ಸ್ ಬೋರ್’ನ ತಾಯಿ ಯಹೂದಿಯಾದುದರಿಂದ ನಾಝಿಗಳ ಕೆಂಗಣ್ಣಿಗೆ ಗುರಿಯಾದ ನೀಲ್ಸ್ ಮೀನುಗಾರರ ದೋಣಿಯೊಂದರಲ್ಲಿ ಸ್ವೀಡನ್ನಿಗೆ ಪರಾರಿಯಾದನು. ಸ್ವೀಡನ್ ನಿಂದ ಒಂದು ಸಣ್ಣ ಯುದ್ದ ವಿಮಾನದಲ್ಲಿ ಯಾರಿಗೂ ತಿಳಿಯದಂತೆ ಇಂಗ್ಲೆಂಡಿಗೆ ಹೋದನು. ಡೆನ್ಮಾರ್ಕ್ ತೊರೆಯುವ ಮುಂಚೆ, ಯಾರಿಗೂ ತಿಳಿಯಬಾರದೆಂದು ನೊಬೆಲ್ ಪುರಸ್ಕೃತನಾದಾಗ ನೀಡಲಾಗಿದ್ದ ಚಿನ್ನದ ಪದಕವನ್ನು ನೀಲ್ಸ್ ಆಮ್ಲದಲ್ಲಿ ಕರಗಿಸಿ, ಅದರ ದ್ರಾವಣವನ್ನು ಒಯ್ದನು. ಮುಂದೆ ಅದನ್ನು ಮತ್ತೊಮ್ಮೆ ಲೋಹಕ್ಕೆ ಪರಿವರ್ತಿಸಿ, ಅದೇ ಚಿನ್ನದಿಂದ ಮತ್ತೊಮ್ಮೆ ನೊಬೆಲ್ ಪದಕ ಮಾಡಲಾಯಿತು. ಅಣ್ವಸ್ತ್ರ ಬಳಸದಂತೆ ರಷ್ಯಾ ಹಾಗೂ ಯುರೋಪಿಯನ್ ದೇಶಗಳು ಪರಸ್ಪರ ಒಪ್ಪಂದ ಮಾಡಿಕೊಳ್ಳಲು ಒತ್ತಾಯ ಹೇರುವ ದಿಶೆಯಲ್ಲಿ ಅಸಂಸಂಗಳು ಕ್ರಿಯಾಶೀಲವಾಗುವಂತೆ ಮಾಡಿದನು. ಇದರ ಫಲವಾಗಿ 1955ರಲ್ಲಿ ನೀಲ್ಸ್ ಜೀನೀವಾದಲ್ಲಿ ಶಾಂತಿಗಾಗಿ ಅಣುಶಕ್ತಿ ಬಳಕೆಗೆ ಚಲನೆ ನೀಡುವ ಸಮ್ಮೇಳನ ನಡೆಸಿದನು.
1962ರಲ್ಲಿ ನೀಲ್ಸ್ ಕೊನೆಯುಸಿರೆಳೆದಾಗ, ಐನ್ಸ್ಟೀನ್ ನಂತರದ ಇಪ್ಪತ್ತನೇ ಶತಮಾನದ ಮಹಾನ್ ಸೈದ್ಧಾಂತಿಕ ಭೌತಶಾಸ್ತ್ರನೆಂದು ವಿಶ್ವದಾದ್ಯಂತ ಖ್ಯಾತನಾಗಿದ್ದನು. ನೀಲ್ಸ್ ನ ಪರಮಾಣು ಮಾದರಿ, ಹಾಗೂ ಸಾದರ ಪಡಿಸಿದ್ದ ರೋಹಿತದ ಸಿದ್ಧಾಂತಗಳು ಜಲಜನಕದಂತಹ ಸರಳ ಧಾತುಗಳಿಗೆ ಮಾತ್ರ ಖಚಿತವಾಗಿ ಅನ್ವಯವಾಗುತ್ತಿದ್ದವು, ಮುಂದೆ ನೀಲ್ಸ್ ನ ಮಾದರಿಯಲ್ಲಿ ಹಲವಾರು ಸೈದ್ಧಾಂತಿಕ ಮಾರ್ಪಾಡುಗಳನ್ನು ಮಾಡಿ ಅದು ಎಲ್ಲಾ ಧಾತುಗಳಿಗೂ ಸರಿ ಹೊಂದುವಂತೆ ಮಾಡಲಾಯಿತು. ಬೇರೆ ಭೌತಶಾಸ್ತ್ರಜ್ಞರಿಗಿಂತ ಭಿನ್ನವಾಗಿದ್ದ ನೀಲ್ಸ್ ಸಹ ಸಂಶೋಧಕರಲ್ಲಿ , ವಿದ್ಯಾರ್ಥಿ ವೃಂದದಲ್ಲಿ, ಸಮಾನರಲ್ಲಿ ಬಹು ಜನಪ್ರಿಯನಾಗಿದ್ದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಮಿಲಿಕನ್, ರಾಬರ್ಟ್ ಆ್ಯಂಡ್ರೂಸ್ (1923--) 1923
Millikan , Robert Andrews
ಅಸಂಸಂ-ಭೌತಶಾಸ್ತ್ರ-ಐನ್ಸ್ಟೀನ್ ಮತ್ತು ಮ್ಯಾಕ್ಸ್ ಪ್ಲಾಂಕ್ ಸಿದ್ಧಾಂತಗಳಿಗೆ ಪ್ರಾಯೋಗಿಕ ಸಾಕ್ಷ್ಯ ಒದಗಿಸಿದಾತ.
ಮಿಲಿಕನ್ 22 ಮಾರ್ಚ್ 1868ರಂದು ಇಲಿನಾಯ್ನ ಮಾರಿಸನ್ ಪಟ್ಟಣದಲ್ಲಿ ಜನಿಸಿದನು. ಈತನ ಪೂರ್ವಿಕರು ಅಸಂಸಂಗಳಿಗೆ ಬಂದು ನೆಲೆಸಿದ ಪ್ರಥಮ ಕುಟುಂಬದಲ್ಲೊಬ್ಬರಾಗಿದ್ದರು. 1886ರಲ್ಲಿ ಓಹಿಯೋದ ಒಬೆರ್ಲಿನ್ ಕಾಲೇಜನ್ನು ಸೇರಿದನು. ಇಲ್ಲಿ ಗ್ರೀಕ್ ಹಾಗೂ ಗಣಿತ ಮಿಲಿಕನ್ ನೆಚ್ಚಿನ ವಿಷಯಗಳಾಗಿದ್ದವು. 1891ರಲ್ಲಿ ಪದವಿ ಗಳಿಸಿದ ನಂತರ, ಭೌತಶಾಸ್ತ್ರದ ಶಿಕ್ಷಕನಾಗಿ ಕೆಲಸ ಮಾಡಿದನು. 1893ರಲ್ಲಿ ಸ್ನಾತಕೋತ್ತರ ಪದವಿ ಗಳಿಸಿ, ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಬೆಳಕಿನ ಧೃವೀಕರಣದ ಮೇಲೆ ಸಂಪ್ರಬಂಧ ಮಂಡಿಸಿ ಡಾಕ್ಟರೇಟ್ ಗಳಿಸಿದನು. 1895ರಿಂದ ಒಂದು ವರ್ಷದ ಕಾಲ ಗಟ್ಟಿಂಜೆನ್ ಹಾಗೂ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿದನು. 1896ರಲ್ಲಿ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಸಹಾಯಕ ಬೋಧಕನಾದನು. ಇಲ್ಲಿ ಭೌತಶಾಸ್ತ್ರದ ಪಠ್ಯವನ್ನು ಪರಿಷ್ಕರಿಸಿದನು. ವೈದ್ಯುತ್ ,ದೃಗ್ ಹಾಗೂ ಅಣ್ವಯಿಕ ಭೌತಶಾಸ್ತ್ರಗಳ ಅಧ್ಯಯನದಲ್ಲಿ ಮಿಲಿಕನ್ ನಿರತನಾಗಿದ್ದನು. 1910ರಲ್ಲಿ ಪತನ ಹನಿ ವಿಧಾನ ಬಳಸಿ ಮಿಲಿಕನ್ ಎಲೆಕ್ಟ್ರಾನ್ನ ವೈದ್ಯುತ್ ಆವಿಷ್ಟವನ್ನು ಕರಾರುವಕ್ಕಾಗಿ ನಿರ್ಧರಿಸಿದನು. ಅಲ್ಲದೆ ಇದು ಎಲ್ಲಾ ಪರಮಾಣುಗಳಿಗೆ ಸ್ಥಿರವಾಗಿರುವುದೆಂದು ಸಾಧಿಸಿದನು. ಇದರಿಂದ ವಿದ್ಯುತ್ಗೆ ಪರಮಾಣು ವಿವರಣೆಯ ಹಿನ್ನೆಲೆ ಒದಗಿಸಿದನು. ದ್ಯುತಿ ವೈದ್ಯುತ್ ಪರಿಣಾಮ ಕುರಿತಾಗಿ ಹಲವಾರು ಪ್ರಯೋಗಗಳನ್ನು ನಡೆಸಿ, ಐನ್ಸ್ಟೀನ್ರ ದ್ಯುತಿವೈದ್ಯುತ್ ಸಿದ್ಧಾಂತಕ್ಕೆ , ಮಾಕ್ಸ್ ಪ್ಲಾಂಕ್ನ ಸಿದ್ಧಾಂತಕ್ಕೆ ಪುರಾವೆ ಒದಗಿಸಿದನು. ಈ ಕೆಲಸಗಳಿಗಾಗಿ ಮಿಲಿಕನ್ 1923ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. ಮಿಲಿಕನ್ನಿಂದ ಅತಿ ನೇರಳೆ ಹಾಗೂ ಕ್ಷ ಕಿರಣ ವಿಕಿರಣಗಳ ಮಧ್ಯದ ರೋಹಿತಗಳನ್ನು ಅನಾವರuಗೊಳಿಸಿದನು. ಮೊದಲನೆ ಜಾಗತಿಕ ಯುದ್ದದ ಸಮಯದಲ್ಲಿ ಜಲಾಂತರ್ಗಾಮಿ ವಿರೋಧಿ ತಂತ್ರ ರೂಪಿಸಲು ಯತ್ನಿಸಿದನು. ಮಿಲಿಕನ್ ಉತ್ತಮ ಟೆನಿಸ್ ಹಾಗೂ ಗಾಲ್ಫ್ ಆಟಗಾರನಾಗಿದ್ದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಕಾರ್ಲ್, ಎಂ ಸೀಗ್ಬನ್ –(1918--) 1924
Karl Siegbahn
ಸ್ವೀಡನ್-ಭೌತಶಾಸ್ತ್ರ-ರೋಹಿತ ಅಧ್ಯಯನಗಳ ಮುಂದಾಳು.
ಕಾರ್ಲ್ ಸ್ವೀಡನ್ನ ಒರೆಬ್ರೋ ಪಟ್ಟಣದಲ್ಲಿ 3 ಡಿಸೆಂಬರ್ 1886 ರಂದು ಜನಿಸಿದನು. ಈತನ ತಂದೆ ರೇಲ್ವೇ ಸ್ಟೇಷನ್ ಮಾಸ್ಟರ್ ಕೆಲಸದಲ್ಲಿದ್ದನು. 1906 ರಲ್ಲಿ ಲುಂಡ್ ವಿಶ್ವವಿದ್ಯಾಲಯ ಸೇರಿ ಕಾಂತ ಕ್ಷೇತ್ರದ ಬಗೆಗೆ ಸಂಶೋಧನೆ ನಡೆಸಿ 1911 ರಲ್ಲಿ ಡಾಕ್ಟರೇಟ್ ಗಳಿಸಿದನು. ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಜೆ.ಆರ್ ರೈಡ್ಬರ್ಗ್ನ ಸಹಾಯಕನಾಗಿ ಉಪನ್ಯಾಸಕ ಹುದ್ದೆಯಲ್ಲಿದ್ದನು. ರೈಡ್ಬರ್ಗ್ನ ಮರಣಾನಂತರ 1920 ರಲ್ಲಿ ಪ್ರಾಧ್ಯಾಪಕನಾಗಿ ನೇಮಕಗೊಂಡನು. 1923 ರಲ್ಲಿ ಉಪ್ಸಾಲ ವಿಶ್ವವಿದ್ಯಾಲಯಕ್ಕೆ ಹೋದನು. 1937 ರಲ್ಲಿ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ನಲ್ಲಿ ಪ್ರಾಯೋಗಿಕ ಸಂಶೋಧಕ ಪ್ರಾಧ್ಯಾಪಕನಾದನು. ನೊಬೆಲ್ ಇನ್ಸ್ಟಿಟ್ಯೂಟ್ ಆಫ್ ಅಕಾಡೆಮಿ ಭೌತಶಾಸ್ತ್ರದ ವಿಭಾಗ ಪ್ರಂಭಿಸಿದಾಗ ಕಾರ್ಲ್ ಅದರ ಪ್ರಥಮ ನಿರ್ದೇಶಕನಾಗಿ ನೇಮಕಗೊಂಡನು. 1912 ರಿಂದ 1937 ರ ಅವಧಿಯಲ್ಲಿ ಕಾರ್ಲ್ ಕ್ಷ-ಕಿರಣ ರೋಹಿತ ತಂತ್ರಗಳಲ್ಲಿ ಹಲವಾರು ಹೊಸ ವಿಧಾನಗಳನ್ನು ಪರಿಚಯಿಸಿದನು. ಕ್ಷ-ಕಿರಣ ನಳಿಕೆಗಳನ್ನು ಉತ್ತಮಪಡಿಸಿ ಪ್ರಯೋಗಗಳಲ್ಲಿ ಕರಾರುವಾಕ್ಕಾದ ಅಳತೆಗಳನ್ನು ಪಡೆಯುವಲ್ಲಿ ಯಶಸ್ವಿಯಾದನು. ಕಾರ್ಲ್ನ ಈ ಹೊಸ ತಂತ್ರದಿಂದ ಅಣುವಿನ ಶಲ್ಕದಲ್ಲಿನ ಎಲೆಕ್ಟ್ರಾನ್ಗಳ ಚೈತನ್ಯ ಮತ್ತು ವಿಕಿರಣ ತೀವ್ರತೆಯ ಅಳತೆ ನಿಖರವಾಗಿ ದಕ್ಕಿತು. ಕಾರ್ಲ್ ಸೀಗ್ಬನ್ ನೆತೃತ್ವದಲ್ಲಿ ಬೈಜಿಕ ಭೌತಶಾಸ್ತ್ರದಲ್ಲಿನ ಅಧ್ಜ್ಯಯನಗಳು ಸಾಗಿದವು. ಅಸ್ಥಿರ ಬೈಜಿಕ ಕೇಂದ್ರಗಳ ಪರಿಶೀಲನೆಗಾಗಿ ಸೈಕ್ಲೋಟ್ರಾನ್ ನಿರ್ಮಾಣದ ಮುಂದಾಳತ್ವವನ್ನು ಸಹ ಕಾರ್ಲ್ ವಹಿಸಿದ್ದನು. ವಿಶಿಷ್ಟವಾದ ಎಲೆಹ್ಟ್ರಾನ್ ಸೂಕ್ಷ್ಮದರ್ಶಕದ ನಿರ್ಮಾಣದಲ್ಲೂ ಕಾರ್ಲ್ ಪರಿಶ್ರಮಿಸಿದನು. ರೋಹಿತ ಅಧ್ಯಯನ ರಂಗದಲ್ಲಿ ಕಾರ್ಲ್ ಅಧಿಕೃತ ವಾಣಿಯಾಗಿದ್ದನು. ಇದರಲ್ಲಿನ ಸಾಧನೆಗಳಿಗಾಗಿ 1924ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಕಾರ್ಲ್ನ ಮಗನಾದ ಕಾಯ್ ಸೀಗ್ಬನ್ ಸಹ 1981ರಲ್ಲಿ ಭೌತಶಾಸ್ತ್ರದಲ್ಲಿನ ನೊಬೆಲ್ ಪ್ರಶಸ್ತಿ ಪುರಸ್ಕೃತನಾಗಿದ್ದಾನೆ. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಫ್ರಾಂಕ್ ,ಜೇಮ್ಸ್
Frank , James (PHY.) 1925
ಫ್ರಾಂಕ್ 26 ಆಗಸ್ಟ್ 1882 ರಂದು ಹ್ಯಾಂಬರ್ಗ್ನಲ್ಲಿ ಜನಿಸಿದನು. ಹೈಡೆಲ್ಬರ್ಗ್ ವಿಶ್ವವಿದ್ಯಾಲಯ ಸೇರಿ ರಸಾಯನಶಾಸ್ತ್ರದ ಪದವಿಗೆ ನೋಂದಾಯಿಸಿಕೊಂಡಫ್ರಾಂಕ್ ಒಂದು ವರ್ಷದ ನಂತರ ಬರ್¯ನ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದಲ್ಲಿ ಅಧ್ಯಯನ ಮುಂದುವರೆಸಿದನು. 1918ರಲ್ಲಿ ಮೊದಲ ಜಾಗತಿಕ ಯುದ್ದದಲ್ಲಿ ಭಾಗಿಯಾಗಿ ‘ಐರನ್ ಕ್ರಾಸ್’ ಪ್ರಶಸ್ತಿ ಪಡೆದನು. 1920ರಲ್ಲಿ ಗಟ್ಂಜೆನ್ ವಿಶ್ವವಿದ್ಯಾಲಯದ ಪ್ರಾಯೋಗಿಕ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥನಾದನು. ಇಲ್ಲಿ ಮ್ಯಾಕ್ಸ್ ಬಾರ್ನ್ನ ಸಾಂಗತ್ಯ ಫ್ರಾಂಕ್’ಗೆ ದಕ್ಕಿತು. ಇಲ್ಲಿ ಅತ್ಯುತ್ತಮ ಪ್ರಧ್ಯಾಪಕನೆಂದು ಮೇಧಾವಿ ಶಿಷ್ಯರುಗಳಿಂದ ಶ್ಲಾಘಿಸಲ್ಪಟ್ಟನು. ನಾಝಿಗಳು ಅಧಿಕಾರ ಹಿಡಿದ ನಂತರ ಅಸಂಸಂಗಳ ಬಾಲ್ಟಿಮೋರ್ ನಲ್ಲಿದ್ದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದನು. 1938ರಲ್ಲಿ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಭೌತರಸಾಯನಶಾಸ್ತ್ರದ ಪ್ರಾಧ್ಯಾಪಕನಾದನು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಮ್ಯಾನ್ಹಟ್ಟನ್ ಯೋಜನೆಯ ಕೇಂದ್ರವಾಗಿದ್ದ ಚಿಕಾಗೋ ವಿಶ್ವವಿದ್ಯಾಲಯದ ಲೌಹಿಕ ಪ್ರಯೋಗಾಲಯದ ನಿರ್ದೇಶಕನಾಗಿದ್ದನು.1947 ರಿಂದಫ್ರಾಂಕ್ ದ್ಯುತಿಸಂಶ್ಲೇಷಣಾ ಸಂಶೋಧನೆಯಲ್ಲಿ ನಿರತನಾದನು. ಹಟ್ರ್ಸ್ನೊಂದಿಗೆ ವಿವಿಧ ಅನಿಲಗಳಲ್ಲಿ ಮುಕ್ತ ಎಲೆಕ್ಟ್ರಾನ್ಗಳ ನಡವಳಿಕೆಯನ್ನು ಕುರಿತಾಗಿ ಹಲಾವಾರು ಪ್ರಯೋಗಳನ್ನು ಕೈಗೊಂಡನು. ಇದರಿಂದ ಬೊಹ್ರ್ ಅಣು ಸಿದ್ಧಾಂತಕ್ಕೆ ಪ್ರಾಯೋಗಿಕ ಸಾಕ್ಷ್ಯಗಳು ಲಭ್ಯವಾದವು. ಇದಕ್ಕಾಗುಫ್ರಾಂಕ್ 1925ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.ಫ್ರಾಂಕ್ ಜೀವನುದ್ದಕ್ಕೂ ಜೀವನ್ಮುಖಿ ನೆಲೆಯಲ್ಲಿ ಚಿಂತಿಸಿ ಅದರಂತೆ ಬದುಕಿದನು. ಜರ್ಮನಿಯಲ್ಲಿ ನಾಝಿಗಳ ಮಾನವ ಹಕ್ಕುಗಳ ನಿರಾಕರಣೆಯನ್ನು ವಿರೋಧಿಸಿ 1933ರಲ್ಲಿ ಗಟ್ಟಿಂಜೆನ್ನಲ್ಲಿ ತನ್ನ ಪ್ರಾಧ್ಯಾಪಕ ಹುದ್ದೆ ತೊರೆದ ಮೊದಲಿಗಫ್ರಾಂಕ್. 1945ರಲ್ಲಿ ಹಿರೋಷಿಮಾದ ಮೇಲೆ ಬೈಜಿಕಾಸ್ತ್ರ ಪ್ರಯೋಗಿಸುವ ಎರಡು ತಿಂಗಳು ಮೊದಲು ಸಹ ವಿಜ್ಞಾನಿಗಳೊಂದಿ ‘ಫ್ರಾಂಕ್ ವರದಿ ‘ ಸಿದ್ಧಪಡಿಸಿ ಜನವಸತಿ ಪ್ರದೇಶದ ಮೇಲೆ ಬೈಜಿಕಾಸ್ತ್ರದ ಬಳಕೆಯನ್ನು ತೀವ್ರವಾಗಿ ವಿರೋಧಿಸಿ, ಸರ್ಕಾರದ ನೀತಿಯ ವಿರುದ್ಧ ದನಿಯೆತ್ತಿದ ಮೊದಲಿಗರಲ್ಲೊಬ್ಬನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಗುಸ್ತಾವ್, ಲುಡ್ವಿಗ್ ಹಟ್ರ್ಸ್ (1887-1975) 1925
Gustav , Ludwig Hertz
ಜರ್ಮನಿ-ಭೌತಶಾಸ್ತ್ರ-ಎಲೆಕ್ಟ್ರಾನ್ಗಳ ಚೈತನ್ಯ ನಷ್ಟ ವಿವರಿಸಿದಾತ.
ಹಟ್ರ್ಸ್ ತಂದೆ ಹ್ಯಾಂಬರ್ಗ್ನಲ್ಲಿ ವಕೀಲನಾಗಿದ್ದನು. ಹಟ್ರ್ಸ್ 22 ಜುಲೈ 1887ರಂದು ಜನಿಸಿದನು. ಹ್ಯಾಂಬರ್ಗ್ನ ಜೊಹಾನ್ನಿಯಂ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿ, 1906ರಲ್ಲಿ ಗಟ್ಟಿಂಜೆನ್ ವಿಶ್ವವಿದ್ಯಾಲಯ ಸೇರಿದನು. ಮುಂದೆ ಬರ್ಲಿನ್ ಹಾಗೂ ಮ್ಯೂನಿಕ್ಗಳಲ್ಲಿ ವಿದ್ಯಾಭ್ಯಾಸ ಮಾಡಿ 1911ರಲ್ಲಿ ಪದವಿ ಗಳಿಸಿದನು. 1913ರಲ್ಲಿ ಬರ್ಲಿನ್ನ ಭೌತಶಾಸ್ತ್ರ ಸಂಶೋಧನಾ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕನಾದನು. ಮೊದಲನೆ ಜಾಗತಿಕ ಯುದ್ದ ಪ್ರಾರಂಭವಾಗಿ 1914ರಲ್ಲಿ ಸೇನೆಗೆ ನಿಯೋಜಿಸಲ್ಪಟ್ಟನು. 1915ರಲ್ಲಿ ಯುದ್ದ ರಂಗದಲ್ಲಿ ಗಾಯಗೊಂಡನು. 1917ರಲ್ಲಿ ಬರ್ಲಿನ್ಗೆ ಮರಳಿದನು. 1920 ರಿಂದ 1925 ರವರೆಗೆ ಐಂಡ್ ಹೂವೆನ್ನ ಫಿಲಿಪ್ಸ್ ಇನ್ಕ್ಯಾಂಡೆಸೆಂಟ್ ಲ್ಯಾಂಪ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದನು. 1925ರಲ್ಲಿ ಹ್ಯಾಲೆ ವಿಶ್ವವಿದ್ಯಾಲಯದ ಭೌತಶಾಸ್ತ್ರ ಸಂಸ್ಥೆಯ ಪ್ರಾಧ್ಯಾಪಕನಾಗಿ ನೇಮಕಗೊಂಡನು. 1929ರಲ್ಲಿ ಬರ್ಲಿನ್ಗೆ ಮರಳಿ ಬಂದು ಚಾರ್ಲೋಟೈನ್ಬರ್ಗ್ ತಾಂತ್ರಿಕ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ನಿರ್ದೇಶಕನಾದನು. ಇಲ್ಲಿ 1935ರವರೆಗಿದ್ದ ಹಟ್ರ್ಸ್ ರಾಜಕೀಯ ಕಾರಣಗಳಿಂದ ಇದಕ್ಕೆ ರಾಜಿನಾಮೆಯಿತ್ತು ಸೀಮನ್ಸ್ ಕಂಪನಿಗೆ ನಿರ್ದೇಶಕನಾದನು. 1945ರಲ್ಲಿ ಸೋವಿಯತ್ ರಷ್ಯಾಕ್ಕೆ ಹೋದ ಹಟ್ರ್ಸ್ 1954ರವರೆಗೆ ಅಲ್ಲಿಯ ಸಂಶೋಧನಾಲಯದಲ್ಲಿ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದನು. ಇದಾದ ನಂತರ ಲೀಪ್ಜಿಗ್ನ ಕಾರ್ಲ್ ಮಾಕ್ರ್ಸ್ “ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದ ನಿರ್ದೇಶಕನಾದನು. 1961ರನಂತರ ಲೀಪ್ಜಿಗ್ ಹಾಗೂ ಬರ್ಲಿನ್ ವಿಶ್ವವಿದ್ಯಾಲಯಗಳಲ್ಲಿ ನಿವೃತ್ತ ಪ್ರಾಧ್ಯಾಪಕನಾಗಿದ್ದನು. ಹಟ್ರ್ಸ್ ತನ್ನ ಆರಂಭಿಕ ಸಂಶೋಧನೆಗಳು ಇಂಗಾಲದ ಡೈ ಆಕ್ಸೈಡ್ನ ಒತ್ತಡ ಹಾಗೂ ಅಂಶಿಕ ಒತ್ತಡಗಳಿಗೆ ಸಂಬಂಧಿಸಿರುವಂತೆ ಅವಗೆಂಪು ಕಿರಣಗಳ ಹೀರಿಕೆಯನ್ನು ಕುರಿತಾಗಿದ್ದವು. 1913ರಿಂದ ಜೆ. ಫ್ರಾಂಕ್ ಜೊತೆಗೆ, ಎಲೆಕ್ಟ್ರಾನ್ ಸಂಘಾತದ ಅಧ್ಯಯನ ನಡೆಸಿದನು. ವಿವಿಧ ಅನಿಲಗಳಲ್ಲಿನ ಅಯಾನೀಕರಣದ ಸಾಧ್ಯತೆ ಸ್ವರೂಪಗಳ ಅರಿವಿಗೆ ಪ್ರಯೋಗಗಳನ್ನು ನಡೆಸಿದನು. ಸ್ಥಿರ ಚೈತನ್ಯದ ಸ್ಥಿತಿಯಲ್ಲಿರುವ ಪರಮಾಣುಗಳನ್ನು ಎಲೆಕ್ಟ್ರಾನ್ಗಳು ಸಂಘಟ್ಟಿಸಿದಾಗ, ಅವುಗಳಲ್ಲಿ ಚೈತನ್ಯ ನಷ್ಟವಾಗುತ್ತದೆ. ಆಗ ರೋಹಿತದ ರೇಖೆಗಳಲ್ಲಿ ಬದಲಾವಣೆಗಳಾಗುತ್ತವೆ. ಇಂತಹ ರೋಹಿತದ ರೇಖೆಗಳ ಸರಣಿಗಳನ್ನು ಹೇಗೆ, ಎಲೆಕ್ಟ್ರಾನ್ಗಳ ಚೈತನ್ಯ ನಷ್ಟದೊಂದಿಗೆ ಪರಿಣಾತ್ಮಕವಾಗಿ ವಿವರಿಸಬಹುದೆಂದು ತೋರಿಸಿದನು. ಹಟ್ರ್ಸ್ನ ಪ್ರಯೋಗಗಳು ಪ್ಲಾಂಕ್ನ ಕ್ವಾಂಟಂ ಸಿದ್ಧಾಂತ ಒಳಗೊಂಡಂತೆ ನೀಲ್ಸ್ ಬೊಹ್ರ್ನ ಪರಮಾಣು ರಚನಾ ಸಿದ್ಧಾಂತಕ್ಕೆ ಬೆಂಬಲ ಒದಗಿಸಿದವು. 1928ರಲ್ಲಿ ಬರ್ಲಿನ್ಗೆ ಬಂದ ಮೇಲೆ, ಯುದ್ದ ಕಾಲದಲ್ಲಿ ನಾಶವಾಗಿದ್ದ ಭೌತಶಾಸ್ತ್ರದ ವಿಭಾಗವನ್ನು ಪುನರುಜ್ಜೀವನಗೊಳಿಸುವ ಹೊಣೆ ಹಟ್ರ್ಸ್ ಮೇಲೆ ಬಿದ್ದಿತು. ಎಡೆಬಿಡದ ಪರಿಶ್ರಮದಿಂದ ಇದನ್ನು ಸುಸಜ್ಜಿತಗೊಳಿಸುವಲ್ಲಿ ಹಟ್ರ್ಸ್ ಯಶಸ್ವಿಯಾದನು. ಇಲ್ಲಿಯೇ ನಿಯಾನ್ನ ಸಮಸ್ಥಾನಿಗಳನ್ನು (Isotopes) ಧುಮ್ಮಿಕುವ ವಿಸರಣ (Cascading Diffusion) ವಿಧಾನದಿಂದ ಬೇರ್ಪಡಿಸಿದನು. ಹಟ್ರ್ಸ್ ಸ್ವತಂತ್ರವಾಗಿ ಹಾಗೂ, ಪ್ಲಾಂಕ್, ಕ್ಲಾಪರ್ಸ್ರವರೊಂದಿಗೆ ಎಲೆಕ್ಟ್ರಾನ್ ಹಾಗೂ ಪರಮಾಣುಗಳ ಸಂಘಟನೆಯಲ್ಲಾಗುವ ಚೈತನ್ಯದ ವರ್ಗಾಂತರವನ್ನು ಕುರಿತು, ಸಮಸ್ಥಾನಿಗಳನ್ನು ಕುರಿತು ಹಲವಾರು ಲೇಖನಗಳನ್ನು ಪ್ರಕಟಿಸಿದನು. ಹಟ್ರ್ಸ್ ಬರ್ಲಿನ್ನ ಅಕಾಡೆಮಿ ಆಫ್ ಸೈನ್ಸ್ನ ಗಟ್ಟಿಂಜೆನ್ ಅಕಾಡೆಮಿ ಆಫ್ ಸೈನ್ಸಸ್ ಸದಸ್ಯನಾಗಿದ್ದನು. ಸೋವಿಯತ್ ದೇಶದಲ್ಲಿರುವಾಗ ಅಕಾಡೆಮಿ ಆಫ್ ಸೈನ್ಸ್ನ ವಿದೇಶಿ ಸದಸ್ಯನಾಗಿದ್ದನು. ಜರ್ಮನಿಯ ಭೌತಶಾಸ್ತ್ರ ಸಮಾಜದ ಮಾಕ್ಸ್ ಪ್ಲಾಂಕ್ ಪದಕ ಪುರಸ್ಕೃತನಾದನು. 1925ರಲ್ಲಿ ಸಮಸ್ಥಾನಿಗಳು ಹಾಗೂ ಎಲೆಕ್ಟ್ರಾನ್ ಚೈತನ್ಯಗಳನ್ನು ಕುರಿತಾದ ಸಂಶೋಧನೆಗಳಿಗಾಗಿ ನೊಬೆಲ್ ಪ್ರಶಸ್ತಿ ಪಡೆದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಪೆರಿ, ಜೀನ್ ಬ್ಯಾಪ್ಟಿಸ್ಟ್ (1870-1942) 1926
Perrin , Jean Baptiste
ಫ್ರಾನ್ದ್-ಭೌತ ರಸಾಯನಶಾಸ್ತ್ರ- ಪರಮಾಣು ಅಸ್ತಿತ್ವವನ್ನು ಸಂದೇಹಕ್ಕೆಡೆಯಿಲ್ಲದಂತೆ ತೋರಿಸಿದಾತ.
ಪೆರಿನ್,ಪ್ಯಾರಿಸ್ ಲೈಯಾನ್ಗಳಲ್ಲಿ ವಿದ್ಯಾಭ್ಯಾಸ ಮಾಡಿ, 1910ರಲ್ಲಿ ಸೊರ್ಬೊನ್ನೆಯಲ್ಲಿ ಭೌತ ರಸಾಯನಶಾಸ್ತ್ರದ ಪ್ರಾಧ್ಯಾಪಕನಾಗಿದ್ದನು. 1941ರಲ್ಲಿ ಅಸಂಸಂಗಳಿಗೆ ಪಲಾಯನಗೈದನು. ಡಾಕ್ಟರೇಟ್ನ ಸಂಶೋಧನೆಯಲ್ಲಿರುವಾಗ ಪೆರಿನ್, ಕ್ಯಾಥೋಡ್ ಕಿರಣಗಳನ್ನು ಅಭ್ಯಸಿಸಿ ಅವು ಋಣಾತ್ಮಕ ಆವಿಷ್ಟ ಹೊಂದಿವೆಯೆಂದು ತೋರಿಸಿದನು. ಅವುಗಳ ಹಾಗೂ ಹಾಗೂ ದ್ರವ್ಯದ ಅಂದಾಜು ನೀಡಿದನು. ಪೆರಿನ್, ಕ್ಯಾಥೋಡ್ ಕಿರಣಗಳು ಅಲೆಗಳಲ್ಲವೆಂದು , ಅವು ಕಣಗಳೆಂದು ಸಂಶಯಾತೀತವಾಗಿ ಸಾಧಿಸಿದನು. ಜೆ.ಜೆ. ಥಾಮ್ಸನ್ ಪೆರಿನ್ನ ಪ್ರಯೋಗಗಳನ್ನು ಪರಿಷ್ಕರಿಸಿ ಈ ಕಣಗಳು ಎಲೆಕ್ಟ್ರಾನ್ಗಳೆಂದು ತೋರಿಸಿದನು. 1908ರಲ್ಲಿ ಪೆರಿನ್ ಕಾಂಬೋಡಿಯಾ ವೃಕ್ಷ ಗ್ಯಾಂಬೇಜ್ ರಾಳದಲ್ಲಿನ ಕಣ ವಿತರಣೆ ಹಾಗೂ ಚಲನೆಯನ್ನು ಬ್ರೌನಿಯನ್ ಚಲನೆಯ ಹಿನ್ನೆಲೆಯಲ್ಲಿ ವಿವರಿಸಿದನು. ಇದು ಐನ್ಸ್ಟೀನ್ ನೀಡಿದ ಸೈದ್ಧಾಂತಿಕ ವಿವರಗಳಿಗೆ ಬೆಂಬಲ ನೀಡಿತು. ಪೆರಿನ್, ಅವೋಗ್ಯಾಡ್ರೋ ಸಂಖ್ಯೆಯನ್ನು ಕರಾರುವಕ್ಕಾಗಿ ನಿರ್ಧರಿಸಿದನು. ಪರಮಾಣುಗಳ ಅಸ್ತಿತ್ವದ ಸಾಕ್ಷ್ಯ ಒದಗಿಸಿದ್ದಕ್ಕಾಗಿ ಪೆರೇನ್ 1926ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಅರ್ಥರ್, ಹೋಲಿ ಕಾಂಪ್ಟನ್ (1892--) -1927
Arthur, Holly Compton
ಜರ್ಮನಿ-ಭೌತಶಾಸ್ತ್ರ-ಎಲೆಕ್ಟ್ರಾನ್ಗಳ ಚೈತನ್ಯ ನಷ್ಟ ವಿವರಿಸಿದಾತ.
ಕಾಂಪ್ಟನ್ ತಂದೆ ವೋಸ್ಟರ್ನ ಡೀನ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕನಾಗಿದ್ದನು. 10 ಸೆಪ್ಟೆಂಬರ್ 1892 ರಂದು ಕಾಂಪ್ಟನ್ ಜನಿಸಿದನು.1913ರಲ್ಲಿ ವಿಜ್ಞಾನದಲ್ಲಿ ಪದವಿ ಗಳಿಸಿ, 1914ರಲ್ಲಿ ಪ್ರಿನ್ಸ್ಟನ್”ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಗಳಿಸಿ 1916ರಲ್ಲಿ ಡಾಕ್ಟರೇಟ್ ಗಳಿಸಿದನು. ಇದಾದ ನಂತರ ಮಿನ್ನೆಸೋಟಾದಲ್ಲಿ ಭೌತಶಾಸ್ತ್ರದ ಉಪನ್ಯಾಸಕನಾದನು 1919ರಲ್ಲಿ ವೆಸ್ಟಿಂಗ್ ಹೌಸ್ ಲ್ಯಾಂಪ್ ಕಂಪನಿ ಸೇರಿ, ಅಲ್ಲಿ ಸಂಶೋಧಕನಾಗಿ ವೃತ್ತಿ ಜೀವನ ಮುಂದುವರೆಸಿದನು. 1920ರಲ್ಲಿ ಸೇಂಟ್ ಲೂಯಿಯಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. 1923ರಲ್ಲಿ ಚಿಕಾಗೋ ವಿಶ್ವವಿದ್ಯಾಲಯಕ್ಕೆ ಹೋಗಿ ಪ್ರಾಧ್ಯಾಪಕನಾದನು. 1945ರಲ್ಲಿ ಸೇಂಟ್ ಲೂಯಿಗೆ ಮರಳಿ ಛಾನ್ಸೆಲರ್ನಾಗಿ ನೇಮಕಗೊಂಡಿದ್ದನು. 1954ರಲ್ಲಿ ಇಲ್ಲಿಂದ ನಿವೃತ್ತನಾಗಿ ಜೀವನದ ಕೊನೆಯತನಕ ವಾಷಿಂಗ್ಟನ್ ವಿಶ್ವವಿದ್ಯಾಲಯದ ಗೌರವ ಪ್ರಾಧ್ಯಾಪಕನಾಗಿದ್ದನು. ಕಾಂಪ್ಟನ್ ಪ್ರಿನ್ಸ್ಟನ್ನಲ್ಲಿ ತನ್ನ ಆರಂಭಿಕ ಸಂಶೋಧನಾ ಜೀವನ ಪ್ರಾರಂಭಿಸಿದಾಗ, ಭೂಮಿಯ ಆವರ್ತನೆಯನ್ನು ಪ್ರದರ್ಶಿಸುವ ವಿಧಾನ ರೂಪಿಸಿದನು. ಇದಾದ ಅಲ್ಪಾವಧಿಯಲ್ಲೇ ಕ್ಷ ಕಿರಣಗಳತ್ತ ತಿರುಗಿದನು. ಸ್ಪಟಿಕಗಳಿಂದ ಪ್ರತಿಫಲಿತಗೊಂಡ ಕ್ಷ ಕಿರಣಗಳ ತೀವ್ರತೆಯನ್ನು ಅಳೆದು, ಅದರ ಅಣುರಚನೆ ನಿರ್ಧರಿಸುವ ಸಿದ್ಧಾಂತವನ್ನು ಕಾಂಪ್ಟನ್ ಮಂಡಿಸಿದನು.
1918ರಲ್ಲಿ ಕ್ಷ ಕಿರಣಗಳ ಚದುರಿಕೆಯ ಅಧ್ಯಯನ ಪ್ರಾರಂಭಿಸಿದನು. ಇದನ್ನು ಕುರಿತಾದ ಪ್ರಯೋಗಗಳಿಂದ 1922ರಲ್ಲಿ ಮುಕ್ತ ಎಲೆಕ್ಟ್ರಾನ್ಗಳಿಗೆ ಸಂಘಟ್ಟಿಸಿ ಚದುರಿದ ಕ್ಷ ಕಿರಣದ ತರಂಗಾಂತರ (Wave Length) ದೀರ್ಘವಾಗುವುದು ತಿಳಿದು ಬಂದಿತು. ಇದರಿಂದ ಸಂಘಟನೆಯ ನಂತರ ಕ್ಷ ಕಿರಣಗಳಲ್ಲಿ ಮೊದಲಿಗಿಂತಲೂ ಅಲ್ಪ ಚೈತನ್ಯವಿರುವುದು ಖಚಿತವಾಯಿತು. ಈಗ ಇದನ್ನು ಕಾಂಪ್ಟನ್ ಪರಿಣಾಮವೆಂದು ಕರೆಯಲಾಗುತ್ತಿದೆ. ಕಾಂಪ್ಟನ್ ಸಿದ್ಧಾಂತ, ವೈದ್ಯುತ್ ಕಾಂತೀಯ ಅಲೆಗಳ ಕಣ ಸ್ವರೂಪಕ್ಕೆ ಸಾಕ್ಷ್ಯಗಳನ್ನು ಒದಗಿಸಿತು. ಮುಂದೆ ಸಿ. ಟಿ. ಅರ್ ವಿಲ್ಸನ್ ತಾನು ನಿರ್ಮಿಸಿದ ಮೇಘಕೋಠಿಯಲ್ಲಿ (Cloud Chamber) ಸಂಘಟ್ಟನೆಯಿಂದ ಹಿಂದಕ್ಕೆ ಸರಿಸಲ್ಪಟ್ಟ ಎಲೆಕ್ಟ್ರಾನ್ಗಳ ಜಾಡನ್ನು ಪಡೆದು ಕಾಂಪ್ಟನ್ ತೀರ್ಮಾನಗಳಿಗೆ ಸುಸ್ಪಷ್ಟವಾದ ಪುರಾವೆಗಳನ್ನು ಒದಗಿಸಿದನು. ಕಾಂಪ್ಟನ್ ಹಾಗೂ ಫ್ಲೆಕ್ಸೆನರ್ ಸಹಘಟನಾ ವಿಧಾನದಿಂದ ಕಾಂಪ್ಟನ್ ಪರಿಣಾಮಕ್ಕೆ ಪ್ರಾಯೋಗಿಕ ಸಾಕ್ಷ್ಯ ಒದಗಿಸಿದರು. ಜರ್ಮನಿಯ ವಿಜ್ಞಾನಿಗಳಾದ ಬೋಥೆ ಹಾಗೂ ಗೀಗರ್, ಸ್ವತಂತ್ರವಾಗಿ, ಇದೇ ಕಾಲಕ್ಕೆ ಇಂತಹದೇ ವಿಧಾನ ಅಭಿವೃದ್ದಿಗೊಳಿಸಿದರು. ಇವೆಲ್ಲ ಸಂಶೋಧನೆಗಳಿಗಾಗಿ ಕಾಂಪ್ಟನ್, ಟಿ.ಆರ್.ವಿಲ್ಸನ್ ನೊಂದಿಗೆ 1927ರ ನೊಬೆಲ್ ಪ್ರಶಸ್ತಿ ಪಡೆದನು. ಕಾಂಪ್ಟನ್, ಸಿ.ಎ¥sóï.ಹೆಗೆನ್ ಜೊತೆಗೂಡಿ ಕ್ಷ-ಕಿರಣಗಳ ಸಂಪೂರ್ಣ ಆಂತರಿಕ ಪ್ರತಿಫಲನ, ಹಾಗೂ ಸಂಪೂರ್ಣ ಧೃವೀಕರಣದ ವಿದ್ಯಾಮಾನಗಳ ಅಸ್ತಿತ್ವವನ್ನು ಪ್ರಯೋಗಗಳಿಂದ ತೋರಿಸಿದನು. ಇದರಿಂದ ಪರಮಾಣುವಿನಲ್ಲಿರುವ ಎಲೆಕ್ಟ್ರಾನ್ಗಳನ್ನು ಕರಾರುವಾಕ್ಕಾಗಿ ನಿರ್ಧರಿಸುವುದು ಸಾಧ್ಯವಾಯಿತು. ಕಾಂಪ್ಟನ್ ಹಾಗೂ ಡೋವನ್, ರೇಖಿತಫಲಕ (Grating) ಬಳಸಿ, ಕ್ಷ-ಕಿರಣಗಳ ತರಂಗಾಂತರ ನಿರ್ಧರಿಸಿದರು. ಇವುಗಳನ್ನು ಬಳಸಿ ಅವೋಗ್ಯಾಡ್ರೊ ಸಂಖ್ಯೆಯನ್ನು ನಿರ್ಧರಿಸಿದಾಗ ಎಲೆಕ್ಟ್ರಾನ್ಗಿರುವ ಆವೇಶದ ಪರಿಷ್ಕೃತ ಮೌಲ್ಯ ದಕ್ಕಿತು. 1930ರಿಂದ 1940ರ ಅವಧಿಯಲ್ಲಿ ಭೂಮಿಯ ವಿವಿಧ ಭಾಗಗಳಲ್ಲಿನ ವಿಶ್ವ ಕಿರಣಗಳ ತೀವ್ರತೆ ಹಾಗೂ ಸಾಂದ್ರತೆಯನ್ನು ನಿರ್ಧರಿಸುವ ಯೋಜನೆಯ ಮುಂದಾಳುವಾಗಿದ್ದನು.
1927ರಲ್ಲಿ ಜೆ. ಕ್ಲೇ ವಿಶ್ವ ಕಿರಣಗಳ ಸಾಂದ್ರತೆಯ ಮೇಲೆ ಅಕ್ಷಾಂಶಗಳ ಪರಿಣಾಮವಿರುವುದನ್ನು ಹೇಳಿದ್ದನು. ಕಾಂಪ್ಟಾನ್ ನೇತೃತ್ವದ ತಂಡದ ಸಂಶೋಧನೆಯಿಂದ ಇದು ಸರಿಯೆಂದು ಆದರೆ ಇದಕ್ಕೆ ಭೂಸ್ಥಾನಕ್ಕಿಂತಲೂ ಭೂಕಾಂತತ್ವವೇ ಪ್ರಮುಖ ನಿರ್ಧಾರಕ ಅಂಶವೆಂದು ತೀರ್ಮಾನಿಸಿದನು. ಇದರ ಆಧಾರದ ಮೇಲೆ ಭೂಕಾಂತತ್ವದ ತೀವ್ರತೆ ನಿರ್ಧರಿಸುವ ವಿಧಾನಗಳು ರೂಪುಗೊಂಡವು. ಕಾಂಪ್ಟನ್ ಹಲವಾರು ಪ್ರೌಢಲೇಖನಗಳನ್ನು ಖ್ಯಾತ ವೈಜ್ಞಾನಿಕ ಪತ್ರಿಕೆಗಳಲ್ಲಿ ಪ್ರಕಟಿಸಿದನು. ಅಸಂಸಂದ ಅಕಾಡೆಮಿ ಆಫ್ ಆಟ್ರ್ಸ್ ಅಂಡ್ ಸೈನ್ಸಸ್ನ ರುಮ್ಫೋರ್ಡ್ ಪದಕ 1927ರಲ್ಲಿ ಕಾಂಪ್ಟನ್ಗೆ ಪ್ರದಾನಿಸಲ್ಪಟ್ಟಿತು. 1928ರಲ್ಲಿ ರೇಡಿಯೋ ಲಾಜಿಕಲ್ ಸೊಸೈಟಿ ಆಫ್ ನಾರ್ಥ್ ಅಮೆರಿಕಾದ ಪದಕ, ಹ್ಯೂಗ್ಸ್ ಪದಕ 1940ರಲ್ಲಿ ಫ್ರಾಂಕ್ಲಿನ್ ಪದಕಗಳ ಗೌರವ ಕಾಂಪ್ಟನ್ನ್ನು ಅರಸಿ ಬಂದವು. ಹಲವಾರು ಗೌರವ, ಪದಕ, ಪ್ರಾಧ್ಯಾಪಕ ಹುದ್ದೆಗಳು, ತಂಡಗಳ ನೇತೃತ್ವದ ಜವಾಬ್ದಾರಿ ಕಾಂಪ್ಟನ್ ಜೀವನ ತುಂಬಿ ತುಳುಕಿದವು. 1941ರಲ್ಲಿ ಪರಮಾಣು ಚೈತನ್ಯವನ್ನು ಯುದ್ದಾಸ್ತ್ರವಾಗಿ ಬಳಸುವ ಸಾಧ್ಯತೆಯ ಅಧ್ಯಯನಕ್ಕಾಗಿ ಅಸಂಸಂ, ಸ್ಥಾಪಿಸಿದ ಸಮಿತಿಯ ಕಾರ್ಯದರ್ಶಿಯಾಗಿ ಕಾಂಪ್ಟನ್ ನೇಮಕಗೊಂಡನು. ಇದರ ಪರಿಣಾಮವಾಗಿ ಎನ್ರಿಕೋ ಫರ್ಮಿ, ಎಲ್ ಝಿಲಾರ್ಡ್, ಇ. ಪಿ. ವಿಗ್ನರ್ ಹಾಗೂ ಇತರರ ನೆರವಿನಲ್ಲಿ ಮೊಟ್ಟ ಮೊದಲ ನಿಯಂತ್ರಿತ ಯುರೇನಿಯಂ ವಿದಳನ (Fission) ಸ್ಥಾವರ ನಿರ್ಮಾಣಗೊಂಡಿತು. ಮುಂದೆ ಇದು ವಾಷಿಂಗ್ಟನ್ ಹ್ಯಾನ್ಪೆÇೀರ್ಡ್ನಲ್ಲಿ ಬೃಹತ್ ಪ್ಲುಟೋನಿಯಂ ಉತ್ಪಾದಿಸುವ ಸ್ಥಾವರದಲ್ಲಿ ಕೊನೆಗೊಂಡಿತು. ಇದರಿಂದ ಹಿರೋಷಿಮಾ, ನಾಗಸಾಕಿಗಳ ಮೇಲೆ ಪ್ರಯೋಗಿಸಿದ ಬೈಜಿಕಾಸ್ತ್ರ (Nuclear Weapon) ತಯಾರಾಯಿತು. ಪರಮಾಣು ಅಸ್ತ್ರ ಬಳಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದವರಲ್ಲಿ ಕಾಂಪ್ಟನ್ ಪ್ರಮುಖನು. ಬಿಡುವಿನ ವೇಳೆಯನ್ನು ಟೆನಿಸ್ ಆಟ ಸಂಗೀತ, ಛಾಯಾಗ್ರಾಹಣದಲ್ಲಿ ಕಳೆಯುತ್ತಿದ್ದ ಕಾಂಪ್ಟನ್ 15 ಮಾರ್ಚ್ 1962ರಂದು ನಿಧನನಾದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ವಿಲ್ಸನ್, ಚಾಲ್ರ್ಸ್ ಥಾಮಸ್ ರೀಸ್ (1869-1959) 1927
Wilson , Charles Thomson Rees
ಬ್ರಿಟನ್-ಭೌತಶಾಸ್ತ್ರ- ವಿಲ್ಸನ್ ಮೇಘ ಕೋಠಿಯ (Cloud Chamber) ಉಪಜ್ಞೆಕಾರ.
ವಿಲ್ಸನ್ ನಾಲ್ಕು ವರ್ಷದ ಹಸುಳೆಯಿರುವಾಗ ಆತನ ತಂದೆ ತಾಯಿಗಳು ಸ್ಕಾಟ್ಲೆಂಡ್ ತೊರೆದು ಮ್ಯಾಂಚೆಸ್ಟರ್ನಲ್ಲಿ ನೆಲೆಸಿದರು. ಇಲ್ಲಿ ಜೀವಶಾಸ್ತ್ರದ ವಿದ್ಯಾರ್ಥಿಯಾಗಿ ವಿಲ್ಸನ್ ಕಾಲೇಜು ಶಿಕ್ಷಣಕ್ಕೆ ಸೇರಿದನು. ನಂತರ ಕೇಂಬ್ರಿಜ್ಗೆ ಹೋಗಿ ಭೌತಶಾಸ್ತ್ರದಲ್ಲಿ ಉತ್ತಮ ಸಾಧನೆ ಮಾಡಿ ಬ್ರಾಡ್’ಫೋರ್ಡ್ನಲ್ಲಿ ಬೋಧಕನಾದನು. ನಾಲ್ಕು ವರ್ಷ ಇಲ್ಲಿದ್ದ ವಿಲ್ಸನ್ 1896ರಲ್ಲಿ ಕೇಂಬ್ರಿಜ್ ಸೇರಿದನು. 1894ರಲ್ಲಿ ವಿಲ್ಸನ್, ಬೆನ್ನೆವಿಸ್ ಪರ್ವತದ ತುದಿಯಿಂದ ಮೇಘಗಳ ಅದ್ಬುತ ದೃಶ್ಯ ಕಂಡನು. ಆದ್ರ್ರ ಗಾಳಿಯನ್ನು ಒಮ್ಮೆಲೆ ವಿಕಸಿಸುವಂತೆ ಮಾಡಿ, ಇಂತಹುದೇ ಪರಿಣಾಮಗಳನ್ನು ಕೃತಕವಾಗಿ ಪ್ರಯೋಗಾಲಯದಲ್ಲಿ ತರಲು ಯತ್ನಿಸಿದನು. ಅನಿಲ ಹಿಗ್ಗಿದಾಗ ಅದರ ತಾಪಮಾನ ಕುಸಿದು, ಸಣ್ಣ ಹನಿಗಳಾಗಿ ಲಭ್ಯ ಮೇಲ್ಮೈಗಳಲ್ಲಿ ಸಾಂದ್ರೀಕರಣಗೊಳ್ಳುತ್ತದೆ. ಇದಕ್ಕೆ ಯಾವುದೇ ಅಣು ಬೀಜಗಳು ಲಭ್ಯವಾದರೂ ಸಾಕಾಗುತ್ತದೆ. ಸೂಕ್ಷ್ಮ ಧೂಳು ಇಲ್ಲವಾದರೆ ಆವಿಷ್ಟಗೊಂಡಿರುವ ಕಣ ಬೀಜದಂತೆ ವರ್ತಿಸಿ ಸಾಂದ್ರೀಕರಣಕ್ಕೆ ನೆರವಾಗುತ್ತವೆಯೆಂದು ತೋರಿಸಿದನು. 1911ರಲ್ಲಿ ಈ ತತ್ತ್ವದ ಆಧಾರದ ಮೇಲೆ ವಿಲ್ಸನ್ ಸಾಧನವೊಂದನ್ನು ನಿರ್ಮಿಸಿದನು. ಈ ಸಾಧನದಲ್ಲಿ ಅಯಾನ್ಗಳನ್ನು ಸಣ್ಣ ಹನಿಗಳ ಜಾಡಿನ ರೂಪದಲ್ಲಿ ಪಡೆಯಲು ಸಾಧ್ಯವಾಯಿತು. ಈ ಸಾಧನ ಬಳಸಿ, ವಿಕಿರಣಪಟುತ್ವ ಧಾತುಗಳ ಆಲ್ಫಾ , ಬೀಟಾ ಶೈಥಿಲ್ಯವನ್ನು ಗುರುತಿಸುವುದು ಸುಲಭವಾಯಿತು. 1920ರಿಂದ 1930ರ ದಶಕದಲ್ಲಿ ಕಣ ಭೌತಶಾಸ್ತ್ರಜ್ಞರು ತಮ್ಮ ಪ್ರಯೋಗಗಳಿಗೆ ವ್ಯಾಪಕವಾಗಿ ವಿಲ್ಸನ್ ರೂಪಿಸಿದ ಮೇಘ ಕೋಠಿಯ ಮೊರೆ ಹೊಕ್ಕರು. 1895ರಲ್ಲಿ ಬೆನ್ ನೆವಿಸ್ ಪರ್ವತದ ತುದಿಯಲ್ಲಿರುವಾಗಲೇ, ಬಿರುಗಾಳಿಯೆದ್ದು, ವಿಲ್ಸನ್ ಸನಿಹ ಸಿಡಿಲೊಂದು ಬಡಿಯಿತು. ಇದರಿಂದ ಪ್ರೇರಿತನಾದ ವಿಲ್ಸನ್ ಒಣ ಹಾಗೂ ಆದ್ರ್ರ ಗಾಳಿಯ ವೈದ್ಯುತ್ ವಾಹಕತೆ ಅಳೆಯತೊಡಗಿದನು. ಇದಕ್ಕಾಗಿ ನಡೆಸಿದ ವ್ಯಾಪಕ ಪರೀಕ್ಷೆಗಳಿಂದ ಭೂಮಿಯಾಚೆಯಿಂದ ವೈದ್ಯುತ್ ಆವಿಷ್ಟಿತ ಕಿರಣಗಳು ಬರುತ್ತಿರಬಹುದೆಂದು ಹೇಳಿದನು. 1911ರಲ್ಲಿ ವಿ.ಎಫ್. ಹೆಸ್. ಇದರ ಸಮೂಲಾಗ್ರ ಅಧ್ಯಯನ ಮಾಡಿ ವಿಶ್ವ ಕಿರಣಗಳ ಅಸ್ತಿತ್ವವನ್ನು ಘೋಷಿಸಿದನು. ನಿವೃತ್ತಿಯ ನಂತರ ಸ್ಕಾಟ್ಲ್ಯಾಂಡ್ನಲ್ಲಿ ನೆಲೆಸಿದ ವಿಲ್ಸನ್, ತನ್ನ 86ನೇ ವಯಸ್ಸಿನಲ್ಲೂ ಸಿಡಿಲು, ಮಿಂಚುಗಳ ಅಧ್ಯಯನಕ್ಕಾಗಿ ಪರ್ವತಗಳನ್ನೇರುತ್ತಿದ್ದನು. 87ನೇ ವಯಸ್ಸಿನಲ್ಲಿ ಈ ಬಗ್ಗೆ ಲೇಖನ ಪ್ರಕಟಿಸಿದ್ದನು. 1927ರಲ್ಲಿ ವಿಲ್ಸನ್ ಹಾಗೂ ಆರ್ಥರ್ ಹೋಲಿ ಕಾಂಪ್ಟನ್ ನೊಬೆಲ್ ಪ್ರಶಸ್ತಿ ಪಡೆದರು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಓವೆನ್, ವಿಲಿಯಂ ರಿಚರ್ಡ್ಸನ್ (1879-1959) 1928
Owen , Williams Richardson
ಇಂಗ್ಲೆಂಡ್-ಭೌತಶಾಸ್ತ್ರ-ವಿದ್ಯುತ್ ವಿಸರ್ಜನೆ ನಿಯಮ ನೀಡಿದಾತ.
ವಿಲಿಯಂ 26 ಏಪ್ರಿಲ್ 1879ರಂದು ಜನಿಸಿದನು. ಬೌಟ್ಲಿ ಗ್ರ್ಯಾಮರ್ ಶಾಲೆಯಿಂದ ಪ್ರೌಢಶಿಕ್ಷಣ ಮುಗಿಸಿ, 1879ರಲ್ಲಿ, ವಿದ್ಯಾರ್ಥಿ ವೇತನ ಪಡೆದು ಟ್ರಿನಿಟಿ ಕಾಲೇಜನ್ನು ಸೇರಿದನು. ಕೇಂಬ್ರಿಜ್ ಹಾಗೂ ಲಂಡನ್ ವಿಶ್ವವಿದ್ಯಾಲಯಗಳಿಂದ ಅತ್ಯುತ್ತಮ ಶ್ರೇಣಿಯಲ್ಲಿ ಪದವಿ ಗಳಿಸಿದನು. 1900ರಲ್ಲಿ ಪದವಿ ಮುಗಿಸಿದ ತಕ್ಷಣವೇ, ಕ್ಯಾವೆಂಡಿಷ್ ಪ್ರಯೋಗಾಲಯ ಸೇರಿ ಬಿಸಿ ಕಾಯಗಳಿಂದ ಹೊಮ್ಮುವ ಅಧ್ಯಯನ ಪ್ರಾರಂಭಿಸಿದನು. 1902ರಲ್ಲಿ ಟ್ರಿನಿಟಿ ಕಾಲೇಜಿನ ಫೆಲೋ ಆಗಿ ಅಯ್ಕೆ ಹೊಂದಿದನು. 25 ನವೆಂಬರ್ 1901ರಲ್ಲಿ ಕೇಂಬ್ರಿಜ್ನ ಫಿಲಾಸಫಿಕಲ್ ಸೊಸೈಟಿಯಲ್ಲಿ ಕಾದ ಲೋಹಗಳಿಂದ ಹೊರ ಹೊಮ್ಮುವ ವಿದ್ಯುತ್ ನಿಯಮ ನೀಡಿದನು. ಇದನ್ನು ಮುಂದೆ ಹಲವಾರು ಜನರು ಪ್ರಯೋಗಗಳಿಂದ ಸರಿಯೆಂದು ತೋರಿಸಿದರು. ಇದಕ್ಕಾಗಿ ವಿಲಿಯಂ 1928ರ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. 1906 ರವರೆಗೆ ಇದೇ ವಿಷಯವನ್ನು ಕುರಿತಾಗಿ ವಿಲಿಯಂ ಇನ್ನು ಹೆಚ್ಚಿನ ಪ್ರಯೋಗಗಳನ್ನು ನಡೆಸಿದನು. ಈ ಕಾಲದಲ್ಲಿ ವಿಲಿಯಂ ಅಸಂಸಂಗಳ ಪ್ರಿನ್ಸ್’ಟನ್ ವಿಶ್ವವಿದ್ಯಾಲಯದಲ್ಲಿದ್ದನು. 1913ರ ತನಕ ಇಲ್ಲಿಯೇ ಇದ್ದ ವಿಲಿಯಂ ಈ ಕಾಲದಲ್ಲಿ ಔಷ್ಣೀಯ ವಿಸರ್ಜನೆ , ದ್ಯುತಿ ವೈದ್ಯುತ್ ಪರಿಣಾಮ ಗೈರೋಕಾಂತೀಯ ಪರಿಣಾಮಗಳ ಬಗೆಗೆ ಸಂಶೋಧನೆ ಮಾಡಿದನು. 1911ರಲ್ಲಿ ಅಮೆರಿಕನ್ ಫಿಲಾಸಫಿಕಲ್ ಸೊಸೈಟಿಯ ಸದಸ್ಯನಾಗಿ, 1913ರಲ್ಲಿ ಲಂಡನ್ನ ರಾಯಲ್ ಸೊಸೈಟಿಯ ಫೆಲೋ ಆಗಿ ನೇಮಕಗೊಂಡನು. 1914ರಲ್ಲಿ ತಾಯ್ನಾಡಾದ ಇಂಗ್ಲೆಂಡ್ಗೆ ಮರಳಿ ಲಂಡನ್ ವಿಶ್ವವಿದ್ಯಾಲಯದ ಕಿಂಗ್ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾದನು. 1920ರಲ್ಲಿ ರಾಯಲ್ ಸೊಸೈಟಿಯ ಹ್ಯೂಗ್ಸ್ ಪದಕ ದಕ್ಕಿತು. 1939ರಲ್ಲಿ ನೈಟ್ ಪದವಿ ಪ್ರಧಾನವಾಯಿತು. 1914 ಎಂದ ರಾಸಾಯನಿಕ ಕ್ರಿಯಾ ಮೂಲವಾದ ಎಲೆಕ್ಟ್ರಾನ್ ಸಿದ್ಧಾಂತ, ಕ್ವಾಂಟಂ ಅಧ್ಯಯನ ನಡೆಸಿದನು. ಎಲೆಕ್ಟ್ರಾನ್ ಸಿದ್ಧಾಂತ, ಕ್ವಾಂಟಂ ಸಿದ್ಧಾಂತ ಅಣ್ವಯಿಕ ಜಲಜನಕ ರೋಹಿತ, ಮೆದು ಕ್ಷ ಕಿರಣಗಳ ಕುರಿತಾಗಿ ವಿಲಿಯಂ ವಿಶೇಷ ಆಸಕ್ತಿ ಹೊಂದಿದ್ದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಬ್ರೊಗ್ಲಿ, ಲೂಯಿ-ವಿಕ್ಟರ್ ಪೀರೆ ರೇಮಂಡ್ ಡ್ಯೂಕ್ ಡೇ ಪ್ರಿನ್ಸ್ (1892-1987)-1929
Broglie , Louis-Victor Pierre Raymond , duc
ಫ್ರಾನ್ಸ್-ಭೌತಶಾಸ್ತ್ರ - ಕಣಗಳ ತರಂಗ ಸ್ವರೂಪವನ್ನು ಅನಾವರಣಗಳಿಸಿದಾತ.
ಬ್ರೊಗ್ಲಿ , ಫ್ರಾನ್ಸ್ನ ಖ್ಯಾತ ಪೀಡ್ಮಾಂಟೆಸಿ ಕುಟುಂಬದವನು. 1790ರಲ್ಲಿ ಫ್ರಾನ್ಸಿನ ದೊರೆಯಾಗಿದ್ದ ಹದಿನಾಲ್ಕನೇ ಲೂಯಿ ಬ್ರೊಗ್ಲಿಯ ಪೂರ್ವಜರಿಗೆ, ವಂಶಪಾರಂಪರ್ಯವಾದ ಡ್ಯೂಕ್ ಬಿರುದನ್ನು ನೀಡಿ ಗೌರವಿಸಿದ್ದನು. 1960ರಲ್ಲಿ ಭೌತಶಾಸ್ತ್ರಜ್ಞನೂ . ಲೂಯಿಯ ಹಿರಿಯಣ್ಣನೂ ಆಗಿದ್ದ ಮಾರಿಸ್ ತೀರಿಕೊಂಡ ನಂತರ , ಡ್ಯೂಕ್ ಬಿರುದು ಲೂಯಿಗೆ ದಕ್ಕಿತು. 1756 ಎಂದ 1763 ರವರೆಗೆ ಜರುಗಿದ ಯುದ್ದದಲ್ಲಿ ಆಸ್ಟ್ರಿಯನ್ ದೊರೆಗಳಿಗೆ ನೀಡಿದ ನೆರವಿಗಾಗಿ ಬ್ರೊಗ್ಲಿ ಕುಟುಂಬ ಪ್ರಿಝ್ ಎನ್ನುವ ಪಾರಂಪರಿಕ ಬಿರುದನ್ನು ಪಡೆಯಿತು. ಬ್ರೊಗ್ಲಿ ಮೂಲತ: ವೈಜ್ಞಾನಿಕ ಶಿಕ್ಷಣಾರ್ಥಿಯಲ್ಲ. ಸೊರೆಬೊನ್ನೆ ಕಾಲೇಜಿನಿಂದ ಚರಿತ್ರೆಯಲ್ಲಿ ಪದವಿ ಪಡೆದ ಬ್ರೊಗ್ಲಿ ಮೊದಲನೆ ಜಾಗತಿಕ ಯುದ್ದದ ಸಮಯದಲ್ಲಿ ಐಫೆಲ್ ಗೋಪುರದಲ್ಲಿ ರೇಡಿಯೋ ನಿಲಯದಲ್ಲಿ ಸೇವೆ ಸಲ್ಲಿಸುತ್ತಿದ್ದನು. ಇದರ ಪರಿಣಾಮವಾಗಿ ಅವನು ವಿಜ್ಞಾನದತ್ತ ಹೊರಳುವಂತಾಯಿತು. ಮುಂದುವರೆಸಿದ ವಿಧ್ಯಾಭ್ಯಾಸದ ಫಲವಾಗಿ ಸೊರೆಬೊನ್ನೆ ಕಾಲೇಜಿನಿಂದ ಬ್ರೊಗ್ಲಿ 1924ರಲ್ಲಿ ವಿಜ್ಞಾನದಲ್ಲಿ ಪಿ.ಎಚ್.ಡಿ. ಪಡೆದನು. 1924ರಿಂದ ಹೊಸದಾಗಿ ಸ್ಥಾಪಿತವಾಗಿದ್ದ ಹೆನ್ರಿ ಪ್ವಾನ್ಕ್ಯಾರೇ ಸಂಸ್ಥೆಯಲ್ಲಿ ಸೈದಾಂತಿಕ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. ಬ್ರೊಗ್ಲಿ ಕ್ವಾಂಟಂ ಬಲವಿಜ್ಞಾನದ ದಿಕ್ಕನ್ನು ಬದಲಿಸಿದ ರೀತಿಯನ್ನು ಅರಿಯಬೇಕೆಂದರೆ, ಆವರೆಗೆ, ಕ್ವಾಂಟಂ ಬಲವಿಜ್ಞಾನದಲ್ಲಿದ್ದ ಪರಿಕಲ್ಪನೆಗಳನ್ನು ಒಂದು ನೋಟ ಹರಿಸಬೇಕು. 1900ರಲ್ಲಿ ಮ್ಯಾಕ್ಸ್ ಪ್ಲಾಂಕ್, ಕ್ವಾಂಟಕ್ಕೆ ಬಲವಿಜ್ಞಾನಕ್ಕೆ ನಾಂದಿ ಹಾಡಿದನೆನ್ನಬಹುದು. ದ್ರವ್ಯರಾಶಿ ಹಾಗೂ ಚೈತನ್ಯಗಳ ಮಧ್ಯದ ಸಂಬಂಧ ಹಾಗೂ ಆಧುನಿಕ ಚಿಂತನೆಗಳು 1905ರಲ್ಲಿ ಆಲ್ಬರ್ಟ್ ಐನ್ಸ್ಟೀನ್ ಹಾಕಿದ ಭದ್ರ ಬುನಾದಿಯ ಮೇಲೆ ಬೆಳೆಯಲಾರಂಭಿಸಿದವು. ಇದರ ವiುಂದುವರಿಕೆಯಾಗಿ ವೀನ್ ವೈದ್ಯುತ್ ಕಾಂತೀಯ ನಿಯಮವನ್ನು ರೂಪಿಸಿದ್ದನು. ಈ ನಿಯಮದಂತೆ ಬೆಳಕು ತರಂಗ ರೂಪಿಯಾದುದು. ಆದರೆ ಹಲವಾರು ವೀಕ್ಷಿತ ವಿದ್ಯಾಮಾನಗಳು ಬೆಳಕನ್ನು ಕಣರೂಪಿಯಂತೆ ತೋರಿಸಿದ್ದವು. ಈ ನಿಟ್ಟಿನಲ್ಲಿ ಬ್ರೊಗ್ಲಿ ಬೆಳಕು ಕ್ವಾಂಟಂ ಅಲೆಯಂತೆ ವರ್ತಿಸುವ ಕಣರೂಪಿ ಏಕಿರಬಾರದೆಂದು ಚಿಂತಿಸಿದನು. ಇದರಿಂದ ಬೆಳಕು ಅಲೆ ಹಾಗೂ ಕಣರೂಪಿ ಎಂದೂ ಆಗುತ್ತದೆ. ಎಲೆಕ್ಟ್ರಾನ್ನಂತಹ ಕಣಗಳು ಹಲವಾರು ದ್ರವ್ಯರಾಶಿಯ ಅಲೆಗಳಂತೆ ಗುಂಪಿನಲ್ಲಿ ವೇಗಗಳಿಸುತ್ತವೆ. ಅಂತಹ ತರಂಗಾಂತರದಿಂದ ಕಣ ಅಲೆಯಂತೆ ತೋರುತ್ತದೆಯೆಂಬ ಬ್ರೊಗ್ಲಿಯ ಕ್ರಾಂತಿಕಾರಕ ನೋಟ 1924ರಲ್ಲಿ ಅವನು ಡಾಕ್ಟರೇಟ್ಗಾಗಿ ಮಂಡಿಸಿದ ಸಂಪ್ರಂಬಂಧದಲ್ಲಿ ವಿವರಿಸಲ್ಪಟ್ಟಿದ್ದಿತು. 1925ರಲ್ಲಿ ಅನ್ನಾಲೆಸ್ ಡೆ ಫಿಸಿಕ್ ಪತ್ರಿಕೆಯಲ್ಲಿ, ನೂರು ಪುಟಗಳಿಗಿಂತಲೂ, ಹೆಚ್ಚಿನ ಲೇಖನವಾಗಿ ಇದು ಪ್ರಕಟಗೊಂಡಿತು. ಸ್ಫಟಿಕ ಜಾಲಕದ (Crystal Lattice) ಅಣುಗಳನ್ನು ವಿವರ್ತನ (Diffraction) ಪಟ್ಟಿಯಂತೆ ಬಳಸಿ ಬೆಳಕನ್ನು ವ್ಯತಿಕರಣಗೊಳಿಸಿ (Interference)ನಡೆಸಿದ ಪ್ರಯೋಗ ಫಲಿತಾಂಶಗಳಿಂದ ಬ್ರೊಗ್ಲಿ ವಿವರಣೆಯಂತೆ, ಬೆಳಕು ಕ್ವಾಂಟಂ ಅಲೆಯಂತೆ ಗುಂಪಾಗಿ ವರ್ತಿಸುವುವೆಂದು ಖಚಿತವಾಯಿತು. 1927ರಲ್ಲಿ ನಿಧಾನಗತಿಯ ಎಲೆಕ್ಟ್ರಾನ್ಗಳನ್ನು ಬಳಸಿ, ಡೇವಿಸನ್ ಹಾಗೂ ಜರ್ಮರ್, ಕ್ಷಿಪ್ರಗತಿಯ ಎಲೆಕ್ಟ್ರಾನ್ಗಳನ್ನು ಬಳಸಿ ಜಿ.ಪಿ. ಥಾಮ್ಸನ್ ನಡೆಸಿದ ಪ್ರಯೋಗಗಳು ಬ್ರೊಗ್ಲಿಯ ಹೊಸ ವಿವರಣೆಗೆ ಸದೃಡ ಬೆಂಬಲ ಒದಗಿಸಿದವು. ಷ್ರೋಡಿಂಜರ್ ಬೆಳಕಿನ ಅಲೆ-ಕಣರೂಪದ ದ್ವಿಮುಖ ವರ್ತನೆಯನ್ನು ಆಧಾರವಾಗಿರಿಸಿಕೊಂಡು ಕ್ವಾಂಟಂ ಬಲವಿಜ್ಞಾನಕ್ಕೆ ಹೊಸ ರೂಪ ನೀಡಿದನು. ಇದರಿಂದಾಗಿ ಕ್ವಾಂಟಂ ಬಲವಿಜ್ಞಾನ ಹಲವಾರು ಸಂಭವನೀಯತೆಗಳ ಮೇಲೆ ನಿಂತು ಅದರ ನಿರ್ಧಾರಾತ್ಮಕತೆಯೇ ಚರ್ಚೆಗೀಡಾಯಿತು. 1929ರಲ್ಲಿ ಬ್ರೊಗ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ರಾಮನ್, ಸರ್ ಚಂದ್ರಶೇಖರ ವೆಂಕಟ (1888-1970) 1930
Raman , Sir Chandrasekhara Venkata
ಭಾರತ-ಭೌತಶಾಸ್ತ್ರ-ರಾಮನ್ ಪರಿಣಾಮ ಅನಾವರಣಗೊಳಿಸಿದಾತ.
ರಾಮನ್, ಮದ್ರಾಸ್ ವಿಶ್ವವಿದ್ಯಾಲಯದಿಂದ ವಿಜ್ಞಾನದಲ್ಲಿ ಅತ್ಯುತ್ತಮ ದರ್ಜೆಯಲ್ಲಿ ತೇರ್ಗಡೆಯಾದರೂ, ಆಗಿನ ಕಾಲದಲ್ಲಿ ಭಾರತದಲ್ಲಿ ಭೌತವಿಜ್ಞಾನಿಯಾಗಿ ಜೀವನ ಸಾಗಿಸುವುದು ಸಾಧ್ಯವಿರಲಿಲ್ಲ. ಆದ್ದರಿಂದ ಹತ್ತು ವರ್ಷಗಳ ಕಾಲ ಭಾರತೀಯ ಆಡಳಿತ ಸೇವೆಯ ವಿಭಾಗದಲ್ಲಿ ಲೆಕ್ಕಿಗನಾಗಿ ಸೇವೆ ಸಲ್ಲಿಸಿದನು. ಈಕಾಲದಲ್ಲಿ ಬಿಡುವಿನ ವೇಳೆಯಲ್ಲಿ ಭೌತಶಾಸ್ತ್ರದ ಅಧ್ಯಯನ ನಡೆಸುತ್ತಿದ್ದನು. ಶಬ್ದ ಹಾಗೂ ಬೆಳಕಿನ ವಕ್ರೀಭವನದ (Refraction) ಬಗೆಗೆ ರಾಮನ್ ಪ್ರಕಟಿಸಿದ ಲೇಖನಗಳು , ಕಲ್ಕತ್ತದಲ್ಲಿ ಪ್ರಾಧ್ಯಾಪಕ ಹುದ್ದೆ ಗಳಿಸಿಕೊಡುವಲ್ಲಿ ನೆರವಾದವು. 1917 ರಿಂದ 1933ರವರೆಗೆ ಇಲ್ಲಿದ್ದ ರಾಮನ್ 1925ರಲ್ಲಿ ಬೆಳಕಿನ ಚದುರಿಕೆಯ ಪರಿಣಾಮ ಗುರುತಿಸಿದನು. 1926ರಲ್ಲಿ ಇಂಡಿಯನ್ ಜರ್ನಲ್ ಆಫ್ ಫಿಸಿಕ್ಸ್ ಪ್ರಾರಂಭಿಸಿದನು. ಭಾರತೀಯ ವಿಜ್ಞಾನ ಕಾಂಗ್ರೆಸ್ನ ಅಧ್ಯಕ್ಷನಾದನು. 1930ರಲ್ಲಿ ನೊಬೆಲ್ ಪ್ರಶಸ್ತಿ ಸ್ವೀಕರಿಸಿದ ಏಷ್ಯಾ ಖಂಡದ ಮೊದಲಿಗನೆಂದು ಕೀರ್ತಿಗೆ ಪಾತ್ರನಾದನು. 1921ರಲ್ಲಿ ಮೆಡಿಟರೇನಿಯನ್ ಸಮುದ್ರದಲ್ಲಿ ಯಾನ ಮಾಡುತ್ತಿದ್ದಾಗ ಆಕಾಶ ಹಾಗು ಸಾಗರ ನೀಲಿಯಾಗಿರುವುದನ್ನು ರಾಮನ್ ಗಮನಿಸಿದನು. ರಾಲೆ, ಬೆಳಕಿನ ಚದುರಿಕೆಗೆ ವಾತಾವರಣದಲ್ಲಿ ತೇಲಾಡುವ ಕಣಗಳೇ ಕಾರಣಗಳೆಂದು ಹೇಳಿದ್ದನು. ಇದು ಸಮರ್ಪಕವಲ್ಲವೆಂದು ರಾಮನ್ಗೆ ಭಾಸವಾಯಿತು. ಇದಕ್ಕೆ ಬದಲಾಗಿ ಬೆಳಕಿನ ಚದುರಿಕೆಗೆ ನೀರಿನ ಕಣಗಳೇ ಕಾರಣಗಳೆಂದು ಹೇಳಿದನು. ಘನ, ದ್ರವ ಅಥವಾ ಅನಿಲದ ಮೇಲೆ ಬೆಳಕು ಬಿದ್ದಾಗ ,ಅವುಗಳ ಅಣುಗಳು ಚೈತನ್ಯ ಹೀರಿ ಅಥವಾ ಸೇರಿಸಿ, ಫೋಟಾನ್ಗಳನ್ನು ವಿಮುಖಗೊಳಿಸುತ್ತವೆ. ಇದೇ ಬೆಳಕಿನ ಚದುರಿಕೆಯ ಮೂಲ ಕಾರಣ ರಾಮನ್ನ ಈ ಅನಾವರಣ ಕ್ವಾಂಟಂ ಬಲಗತಿಶಾಸ್ತ್ರಕ್ಕೆ ಸಾಕ್ಷ್ಯಗಳನ್ನೊದಗಿಸಿತಲ್ಲದೆ ರಾಮನ್ ರೋಹಿತದರ್ಶನಕ್ಕೆ ಕಾರಣವಾಯಿತು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
Einstein , Albert
ಜರ್ಮನಿ-ಸ್ವಿಟ್ಸಲ್ರ್ಯಾಂಡ್-ಅಸಂಸಂ-ಸಾಪೇಕ್ಷ ಸಿದ್ಧಾಂತ ನೀಡಿದಾತ.
ಐನ್ಸ್ಟೀನ್ ತಂದೆ ವೈದ್ಯುತ್ ಇಂಜಿನಿಯರ್ ಆಗಿದ್ದು ವಿದ್ಯುತ್ ಉಪಕರಣಗಳನ್ನು ತಯಾರಿಸಿ ಮಾರುತ್ತಿದ್ದನು. ವ್ಯವಹಾರದಲ್ಲಿ ಏಳ್ಗೆ ಕಾಣದೆ, ಮೇಲಿಂದ ಮೇಲೆ ಈತ ಊರುಗಳನ್ನು ಬದಲಾಯಿಸುತ್ತಿದ್ದನು. ಉಲ್ಮ್ ಪಟ್ಟಣದಲ್ಲಿ ಐನ್ಸ್ಟೀನ್ನ ಜನನವಾಯಿತು. ಗಣಿತದಲ್ಲಿ ಉತ್ತಮ ಅಂಕ ಪಡೆಯದ ಕಾರಣ, ಬಹು ಪ್ರಯಾಸದಿಂದ 17ನೇ ವಯಸ್ಸಿನಲ್ಲಿ ಝೂರಿಕ್ನ ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದನು. ಇಲ್ಲಿಂದ ಪದವಿ ಗಳಿಸಿ ಸ್ವಿಟ್ಸರ್ಲ್ಯಾಂಡ್ ಪ್ರಜೆಯಾದನು. ಜೀವನೋಪಾಯಕ್ಕಾಗಿ ಶಾಲಾ ಶಿಕ್ಷಕ ಅಥವಾ ವಿಶ್ವವಿದ್ಯಾಲಯದಲ್ಲಿ ಯಾವುದಾದರೊಂದು ಕೆಲಸಕ್ಕೆ ಸೇರಲು ಯತ್ನಿಸಿ ವಿಫಲನಾದನು. ಅಂತಿಮವಾಗಿ ಹಿತೈಷಿಯೊಬ್ಬರ ನೆರವಿನಿಂದ ಬರ್ನ್ನಲ್ಲಿದ್ದ ಪೇಟೆಂಟ್ ಕಛೇರಿಯಲ್ಲಿ ಕೆಲಸಕ್ಕೆ ಸೇರಿದನು. ಇಲ್ಲಿ ಪೇಟೆಂಟ್ಗಾಗಿ ಸಲ್ಲಿಸಿದ ವಿವರಗಳನ್ನು ಪರಿಶೀಲಿಸುವ ಹೊಣೆ ಐನ್ಸ್ಟೀನ್ಗೆ ಬಿದ್ದಿತು. ಇದರಲ್ಲಿ ಸಾಕಷ್ಟು ಚುರುಕಾಗಿದ್ದ ಐನ್ಸ್ಟೀನ್ಗೆ ಸಾಕಷ್ಟು ಬಿಡುವಿನ ವೇಳೆ ದಕ್ಕಿ ಭೌತಶಾಸ್ತ್ರದಲ್ಲಿನ ತನ್ನ ಕೆಲಸಗಳನ್ನು ಮುಂದುವರೆಸಿದನು. 1903ರಲ್ಲಿ ಸಹಪಾಠಿಯಾಗಿದ್ದ ಮಿಲೆವಾ ಮಾರಿಕ್ಗಳನ್ನು ವಿವಾಹವಾದನು. ಇವರಿಗೆ ಒಬ್ಬ ಮಗಳು, ಇಬ್ಬರು ಗಂಡು ಮಕ್ಕಳು ಜನಿಸಿದರು. 1919ರಲ್ಲಿ ಈಕೆಯೊಂದಿಗೆ ವಿಚ್ಛೇದನ ಹೊಂದಿ, ಬಂಧುವಾಗಿದ್ದ ಎಲ್ಸಾಳನ್ನು ವಿವಾಹವಾದನು. ಈಕೆಗೆ ಹಿಂದಿನ ವಿವಾಹದಿಂದ ಇಬ್ಬರು ಹೆಣ್ಣುಮಕ್ಕಳಿದ್ದರು. 1905ರಲ್ಲಿ ಪೇಟೆಂಟ್ ಕಛೇರಿಯಲ್ಲಿರುವಾಗ ಐನ್ಸ್ಟೀನ್ ಪ್ರಕಟಿಸಿದ ಮೂರು ಲೇಖನಗಳು ಇಡೀ ಭೌತಶಾಸ್ತ್ರದ, ವಿಜ್ಞಾನದ, ಮಾನವನ ಚಿಂತನೆಯ ಗತಿಯನ್ನೇ ಬದಲಿಸಿದವು. 1909ರಲ್ಲಿ ಝೂರಿಕ್ ವಿಶ್ವವಿದ್ಯಾಲಯದಲ್ಲಿ ಕಿರಿಯ ಪ್ರಾಧ್ಯಾಪಕನಾದ ಐನ್ಸ್ಟೀನ್ 1910ರಲ್ಲಿ ಪ್ರಾಗ್ನಲ್ಲಿ ಪ್ರಾಧ್ಯಾಪಕನಾದನು. 1912ರಲ್ಲಿ ಝೂರಿಕ್ಗೆ ಮರಳಿದನು. 1913ರಲ್ಲಿ ಬರ್ಲಿನ್ನ ಕೈಸರ್ ವಿಲ್ಹೆಲ್ಮ್ ಸಂಸ್ಥೆಯ ನಿರ್ದೇಶಕನಾದನು. ಮೊದಲ ಜಾಗತಿಕ ಯುದ್ಧದ ಸಮಯದಲ್ಲಿ ಸಾಮಾನ್ಯ ಸಾಪೇಕ್ಷ ಸಿದ್ಧಾಂತ ರೂಪಿಸಿ 1915ರಲ್ಲಿ ಪ್ರಕಟಿಸಿದನು. 1921ರಲ್ಲಿ ನೊಬೆಲ್ ಪ್ರಶಸ್ತಿಗೆ ಪಾತ್ರನಾದನು. ಐನ್ಸ್ಟೀನ್ , ತನ್ನ ಹೊಸ ಸಿದ್ಧಾಂತ ಕುರಿತಾದಂತೆ ಉಪನ್ಯಾಸಗಳನ್ನು ನೀಡುತ್ತಾ ಸಂಚರಿಸತೊಡಗಿದನು. 1933ರಲ್ಲಿ ಹಿಟ್ಲರ್ ಅಧಿಕಾರಕ್ಕೆ ಬಂದಾಗ ಐನ್ಸ್ಟೀನ್ ಅಸಂಸಂಗಳ ಕ್ಯಾಲಿಫೋರ್ನಿಯಾದಲ್ಲಿದ್ದನು. ಇಲ್ಲಿಂದಲೇ ತನ್ನ ಕೆಲಸಕ್ಕೆ ರಾಜಿನಾಮೆ ನೀಡಿ, ಪ್ರಿನ್ಸ್ಟನ್ನ ವiುಂದುವರೆದ ಅಧ್ಯಯನ ಸಂಸ್ಥೆ ಸೇರಿದನು. ಐನ್ಸ್ಟೀನ್ನ ವೈಜ್ಞಾನಿಕ ಪ್ರಯತ್ನಗಳು ಗುರುತ್ವ , ವೈದ್ಯುತ್ ಕಾಂತೀಯ ಹಾಗೂ ಬೈಜಿಕ ಬಲಗಳನ್ನು ಒಂದೇ ಕ್ಷೇತ್ರದಲ್ಲಿ ಏಕ ಸೂತ್ರದ ಮೂಲಕ ಬಂಧಿಸುವಲ್ಲಿ ಕೇಂದ್ರಿಕೃತಗೊಂಡಿದ್ದವು. ಆದರೆ ಐನ್ಸ್ಟೀನ್ ಅಂತಿಮವಾಗಿ ಇದರಲ್ಲಿ ಯಶಸ್ಸನ್ನು ಕಾಣಲಿಲ್ಲ. ಹಿಟ್ಲರ್ ನೇತೃತ್ವದ ಜರ್ಮನಿ ಬೈಜಿಕಾಸ್ತ್ರ ತಯಾರಿಸುವ ಸಾಧ್ಯತೆಗಳನ್ನು ಅದರಿಂದ ಇಡೀ ವಿಶ್ವಕ್ಕೆ ಒದಗಬಹುದಾದ ಅಪಾಯವನ್ನು ವಿವರಿಸಿ, 1939ರಲ್ಲಿ ಅಸಂಸಂ ಅಧ್ಯಕ್ಷ ರೂಸ್ವೆಲ್ಟ್ಗೆ ಐನ್ಸ್ಟೀನ್ ಪತ್ರವೊಂದನ್ನು ಬರೆದನು. ಇದರಲ್ಲಿ ಅಸಂಸಂ ಬೈಜಿಕಾಸ್ತ್ರ ತಯಾರಿಕೆಗೆ ಮುಂದಾಗಬೇಕೆಂದು ಒತ್ತಾಯಿಸಿದ್ದನು. ಇದು ಹಾಗೂ ಇನ್ನಿತರ ವಿಜ್ಞಾನಿಗಳ ಒತ್ತಾಯದ ಮೇರೆಗೆ ರೂಸ್ವೆಲ್ಟ್ ಮ್ಯಾನ್ ಹಟನ್ ಯೋಜನೆಯ ಮೂಲಕ ಬೈಜಿಕಾಸ್ತ್ರ ತಯಾರಿಕೆಗೆ ಚಾಲನೆ ನೀಡಿದನು. ಎರಡನೇ ಜಾಗತಿಕ ಯುದ್ದದ ನಂತರ ಜನ್ಮ ತಳೆದ ಇಸ್ರೇಲ್ಗೆ ಅಧ್ಯಕ್ಷನಾಗುವ ಆಹ್ವಾನ ಐನ್ಸ್ಟೀನ್ಗೆ 1952ರಲ್ಲಿ ಬಂದಿತು. ಆದರೆ ಆತ ಇದನ್ನು ನಿರಾಕರಸಿದನು. ನಾಗಸಾಕಿ, ಹಿರೋಷಿಮಾಗಳ ಮೇಲೆ ಬೈಜಿಕಾಸ್ತ್ರ ದಾಳಿಯ ನಂತರದ ಪರಿಣಾಮಗಳನ್ನು ಕಂಡು ಪರಮಾಣು ನಿಶ್ಯಸ್ತ್ರೀಕರಣ ತರಲು ಯತ್ನಿಸಿದನು. ಸರಳ ಜೀವಿಯಾಗಿದ್ದ ಐನ್ಸ್ಟೀನ್ಗೆ ಸಂಗೀತ ಹಾಗೂ ಸಮುದ್ರಯಾನ ಬಿಡುವಿನ ಹವ್ಯಾಸಗಳಾಗಿದ್ದವು. 1828ರಲ್ಲಿ ರಾಬರ್ಟ್ ಬ್ರೌನ್, ನಿಶ್ಚಲ ನೀರಿನ ಮೇಲಿರುವ ಸೂಕ್ಷ್ಮವಾದ ಪರಾಗ ರೇಣುಗಳು ಯಾವುದೇ ಬಾಹ್ಯ ಪ್ರಚೋದನೆಯಿಲ್ಲದಿದ್ದರೂ, ತೀವ್ರ ಚಲನೆಯಲ್ಲಿರುವುದನ್ನು ವೀಕ್ಷಿಸಿ ದಾಖಲಿಸಿದ್ದನು. ಇದಕ್ಕೆ ಕಾರಣಗಳನ್ನು ನೀಡಲಾಗಿರಲಿಲ್ಲ.. ಆದರೆ ಐನ್ಸ್ಟೀನ್ ಗಣಿತದ ಲೆಕ್ಕಾಚಾರಗಳ ಮೂಲಕ ದ್ರವದ ಅಣುಗಳ ಚಲನೆಯೇ ಇದಕ್ಕೆ ಕಾರಣವೆಂದು ವಿವರಿಸಿದನು. ಇದು ಅಣುಗಳ ಅಸ್ತಿತ್ವಕ್ಕೆ ನೀಡಿದ ಮೊಟ್ಟ ಮೊದಲ ವಿವರಣೆಯಾಗಿದ್ದಿತು. 1908ರಲ್ಲಿ ಪೆರಿನ್ ತನ್ನ ವಿಶಿಷ್ಟ ಪ್ರಯೋಗಗಳ ಮೂಲಕ ಅಣುಗಳ ಅಸ್ತಿತ್ವವನ್ನು ಖಚಿತಗೊಳಿಸಿದನು. ಮ್ಯಾಕ್ಸ್ವೆಲ್ ಬೆಳಕು ತರಂಗರೂಪಿಯೆಂದು ವಿವರಿಸಿದ್ದನು. ಆವರೆಗಿನ ವೀಕ್ಷಣೆಗಳು ಇದಕ್ಕೆ ಬೆಂಬಲ ಒದಗಿಸಿದ್ದವು. ಆದರೆ ದ್ಯುತಿವೈದ್ಯುತ್ (Photoelectric) ಪರಿಣಾಮವನ್ನು ಮ್ಯಾಕ್ಸ್’ವೆಲ್ ಪರಿಗಣನೆಯಿಂದ ವಿವರಿಸಲು ಸಾಧ್ಯವಾಗಿರಲಿಲ್ಲ,. 1902ರಲ್ಲಿ ಲೆನಾರ್ಡ್ ದ್ಯುತಿ ವೈದ್ಯುತ್ ಪರಿಣಾವiದ ಮೇಲೆ ಹಲವಾರು ಪ್ರಯೋಗಗಳನ್ನು ನಡೆಸಿ, ಕೆಲವು ನಿರ್ದಿಷ್ಟ ಸಂಗತಿಗಳನ್ನು Sಚಿತಗೊಳಿಸಿದ್ದನು. ಇವುಗಳಿಂದ ಲೋಹದ ಫಲಕದಿಂದ ಉತ್ಸರ್ಜನೆಗೊಂಡ ಎಲೆಕ್ಟ್ರಾನ್ಗಳ ಚೈತನ್ಯ,ಫಲಕದ ಮೇಲೆ ಬಿದ್ದ ಬೆಳಕಿನ ತೀವ್ರತೆಯನ್ನು ಆಧರಿಸದೆ, ಆದರೆ ತರಂಗಾಂತರದ (Wave Length) ಮೇಲೆ ಅವಲಂಬಿತವಾಗಿರುವುದು ಖಚಿತವಾಗಿದ್ದಿತು. ಈ ತಿಳುವಳಿಕೆಯ ಹಿನ್ನೆಲೆಯಲ್ಲಿ ಐನ್ಸ್ಟೀನ್ , ಬೆಳಕು ಮ್ಯಾಕ್ಸ್ವೆಲ್ ಭಾವಿಸಿದಂತೆ ಅಲೆಯಾಗಿರದೆ, ಮ್ಯಾಕ್ಸ್ ಪ್ಲಾಂಕ್ ಮಾದರಿಯಲ್ಲಿ ನಿರ್ದಿಷ್ಟ ಚೈತನ್ಯ ಹೊಂದಿದ ಪೊಟ್ಟಣಗಳಲ್ಲಿ (ಕ್ವಾಂಟಂ) ಹೊಮ್ಮುವುದೆಂದು ಭಾವಿಸಿದಾಗ, ಲೆನಾರ್ಡ್ನ ವೀಕ್ಷಣೆಗಳನ್ನು ವಿವರಿಸಬಹುದೆಂದು ಗಣಿತೀಯವಾಗಿ ತೋರಿಸಿದನು. ಐನ್ಸ್ಟೀನ್ ಮೊದಲೆರಡು ಲೇಖನಗಳಲ್ಲಿ ಬ್ರೌನಿಯನ್ ಚಲನೆ, ದ್ಯುತಿ ವೈದ್ಯುತ್ ಪರಿಣಾಮಕ್ಕೆ ಪರಿಹಾರಗಳು ದಕ್ಕಿದವು. ತನ್ನ ಮೂರನೇ ಲೇಖನದಲ್ಲಿ ಸಮರೂಪದಲ್ಲಿ ಚಲಿಸುವ ಎರಡು ಕಾಯಗಳನ್ನು ಪರಿಗಣಿಸಿ ವಿಶೇಷ ಸಾಪೇಕ್ಷವಾದ (Special Theory of Relativity) ಮಂಡಿಸಿದನು. ಮ್ಯಾಕ್ಸ್’ವೆಲ್ ಬೆಳಕನ್ನು ಕುರಿತಾಗಿ ನೀಡಿದ್ದ ವೈದ್ಯುತ್ ಕಾಂತೀಯ ಸಿದ್ಧಾಂತ ಆವರೆಗಿನ ಅಭಿಜಾತ ಸಿದ್ಧಾಂತ ಹಲವಾರು ತತ್ತ್ವಗಳನ್ನು ಮುರಿದಿದ್ದಿತು. ಈ ಸಿದ್ಧಾಂತದಂತೆ ಬೆಳಕಿನ ವೇಗ , ಅದರ ಆಕರದ ವೇಗ ಅಥವಾ ಅದನ್ನು ವೀಕ್ಷಿಸುವವರ ವೇಗದಿಂದ ಸ್ವತಂತ್ರವಾಗಿ, ಯಾವಾಗಲೂ ಸ್ಥಿರವಾಗಿರುತ್ತದೆ. ಇದಕ್ಕೆ ಲೊಹ್ರೆಂಟ್ಸ್, ಫ್ರಿಟ್’ಜೆರಾಲ್ಡ್ ಮತ್ತು ಪ್ವಾನ್ಕ್ಯಾರೆ ವಿಶಿಷ್ಟ ಗಣಿತದಿಂದ ವಿವರಿಸಿದ್ದರು. ಇದರ ಮುಂದುವರಿಕೆಯಂತೆ ಐನ್ಸ್ಟೀನ್ ಬೆಳಕು ಎಲ್ಲಾ ಪರಾಮರ್ಶನ ಚೌಕಟ್ಟುಗಳಲ್ಲಿ ಒಂದೇ ವೇಗ ಹೊಂದಿರುವುದೆಂದು ಪ್ರತಿಪಾದಿಸಿದನು. ಈ ಮೊದಲೇ 1887 ರಲ್ಲಿ ಮೈಖೆಲ್ಸನ್ ಮತ್ತು ಮಾರ್ಲೆ ತಮ್ಮ ಪ್ರಯೋಗಗಳಿಂದ ಇದನ್ನು ಖಚಿತಗೊಳಿಸಿದ್ದರು. ಆದರೆ ಇದರ ಅರಿವು ಐನ್ಸ್ಟೀನ್ಗಿರಲಿಲ್ಲ. ಐನ್ಸ್ಟೀನ್ ಪರಿಕಲ್ಪನೆಗಳಿಂದ ಭೌತಿಕ ನಿಯಮಗಳು ಎಲ್ಲಾ ಚೌಕಟ್ಟುಗಳಲ್ಲೂ ಒಂದೇ ಆಗಿರುವುದೆಂದು ಸ್ಪಷ್ಟವಾಗಿ, ಮ್ಯಾಕ್ಸ್ವೆಲ್ ಸಿದ್ಧಾಂತ ಹಾಗೂ ಲೊಹ್ರೆಂಟ್ಸ್, ಫ್ರಿಟ್’ಜೆರಾಲ್ಡ್ , ಪ್ವಾನ್ಕ್ಯಾರೇ ವಿವರಣೆಗಳಿಗೂ ಹೊಂದಾಣಿಕೆಯಾಯಿತು. ಇದರ ಮುಂದುವರಿದ ವಿಶ್ಲೇಷಣೆಯಿಂದ ದ್ರವ್ಯ ಹಾಗೂ ಚೈತನ್ಯ E=mC2 (ಚೈತನ್ಯ = ದ್ರವ್ಯ x ಬೆಳಕಿನ ವೇಗ) ಸಂಬಂಧ ಹೊಂದಿರುವುದು ತಿಳಿದು ಬಂದಿತು. 1907ರಲ್ಲಿ ಸಾಮಾನ್ಯ ಸಾಪೇಕ್ಷವಾದದ (General Theory of Relativity)ಮೂಲಕ ಗುರುತ್ವದ ಪ್ರಭಾವದಿಂದ ಬೆಳಕಿನ ಕಿರಣಗಳು ಸಹ ಬಾಗುತ್ತವೆಯೆಂದು ಐನ್ಸ್ಟೀನ್ ಮುನ್ನುಡಿದನು. ದೂರದ ತಾರೆಯಿಂದ ಬರುವ ಬೆಳಕು ಸೂರ್ಯನ ಸನಿಹ ಹಾದುಬರುವಾಗ 1.7 ಸೆಕೆಂಡ್ಗಳಷ್ಟು ಕೋನದಲ್ಲಿ ಬಾಗುವುದೆಂದು ಲೆಕ್ಕಾಚಾರ ಹಾಕಿದನು. 1919ರಲ್ಲಿ ಪೂರ್ಣ ಸೂರ್ಯಗ್ರಹಣ ಜರುಗಿದಾಗ ಎಡಿಂಗ್ಟನ್ ನಡೆಸಿದ ಪ್ರಯೋಗಗಳು ಐನ್ಸ್ಟೀನ್ ಲೆಕ್ಕಾಚಾರಗಳು ಸರಿಯೆಂದು ಸಾರಿದವು. ಈ ಪ್ರಯೋಗದ ಫಲಿತಾಂಶಗಳು ಒಮ್ಮೆಲೇ ಐನ್ಸ್ಟೀನ್ನನ್ನು ಜಗದ್ವಿಖ್ಯಾತನನ್ನಾಗಿಸಿದವು. ರೀಮನ್ ರೇಖಾಗಣಿತ ಮಿಂಕೋವ್ಸ್ಕಿ ಪರಿಕಲ್ಪನೆ, ರಿಕ್ಕಿಯ ಸೂತ್ರಗಳನ್ನು ಬಳಸಿ, ಐನ್ಸ್ಟೀನ್ ಗುರುತ್ವಕ್ಕೆ 1915ರಲ್ಲಿ ಹೊಸ ವಿವರಣೆ ನೀಡಿದನು. ಈ ವ್ ಇವರಣೆಯಂತೆ ದ್ರವ್ಯದ ಸನಿಹದಲ್ಲಿರುವ ಆಕಾಶ, ದ್ರವ್ಯದ ಪರಿಣಾಮದಿಂದಾಗಿ ವಕ್ರಗೊಳ್ಳುತ್ತದೆ, ಈ ವಕ್ರತೆಯಲ್ಲಿ ಕಾಯಗಳು ಪರಸ್ಪರ ಬಂಧಿಸಲ್ಪಡುತ್ತವೆ. ಇದೇ ಗುರುತ್ವಬಲ ಎಂದು ಹೇಳಿದನು. ಇದರಿಂದಾಗಿ ಗುರುತ್ವ ಎನ್ನುವುದು ಆವರೆಗೆ ಭಾವಿಸಿದಂತೆ ಒಂದು ಬಲವಾಗಿರದೆ , ದ್ರವ್ಯ ಮತ್ತು ಆಕಾಶಗಳ ಮಧ್ಯದ ಅಂತಕ್ರಿಯೆಯಂದು ಸ್ಪಷ್ಟವಾಯಿತು. ಇದು ನ್ಯೂಟನ್ನ ಗುರುತ್ವ ನಿಯಮವನ್ನು ತನ್ನೊಳಗೆ ಹುದುಗಿಸಿಕೊಂಡಿದ್ದಿತು. ಅಲ್ಲದೆ ನ್ಯೂಟನ್ನ ಗುರುತ್ವ ನಿಯಮದಲ್ಲಿ ಅತ್ಯಲ್ಪ ತಿದ್ದುಪಡಿಯನ್ನು ಸೂಚಿಸಿತು. ಇದರ ಫಲವಾಗಿ ಶತಮಾನಗಳಿಗೊಮ್ಮೆ ಬುಧಗ್ರಹದ ಕಕ್ಷೆ 43 ಸೆಕೆಂಡ್ಗಳಷ್ಟು ವ್ಯತಸ್ತವಾಗಬೇಕು. ಇದನ್ನು ಮುಂದೆ ಇತರರು ಅಳೆದು ಸರಿಯೆಂದು ಸಾಧಿಸಿದರು. ಐನ್ಸ್ಟೀನ್ ಸಾಪೇಕ್ಷ ಸಿದ್ಧಾಂತದ ಉಪ ಉತ್ಪನ್ನವಾಗಿ, ಬೆಳಕು ಗುರುತ್ವದ ಒಂದು ಕ್ಷೇತ್ರದಿಂದ , ಇನ್ನೊಂದು ಕ್ಷೇತ್ರಕ್ಕೆ ಸಾಗುವಾಗ ಅದರ ತರಂಗಾಂತರ ಪಲ್ಲಟಗೊಳ್ಳಬೇಕು . 1925ರಲ್ಲಿ ಇದು ಅಂತರಿಕ್ಷದಿಂದ ಖಚಿತಗೊಂಡರೆ , 1959ರಲ್ಲಿ ಆರ್.ಪಾಂಡ್ ಹಾಗೂ ಜಿ.ರೆಬ್ಕಾ ಭೂಮಿಯ ಮೇಲೆ, 23 ಮೀ ಎತ್ತರದ ಗೋಪುರದ ಮೇಲೆ ಮೋಸ್ಬೌವೆರ್ ಪರಿಣಾಮದ ಮೂಲಕ ನಡೆಸಿದ ಪ್ರಯೋಗಗಳಿಂದ ಸರಿಯೆಂದು ತೋರಿಸಿದರು. ಐನ್ಸ್ಟೀನ್ ಸಿದ್ಧಾಂತಗಳಿಂದ ವಿಶ್ವ ಮಾದರಿಯೇ ಬದಲಾಯಿತು. ಸಾಪೇಕ್ಷ ಸಿದ್ಧಾಂತ ಬಳಸಿ, 1922ರಲ್ಲಿ ಫ್ರೀಡ್ಮನ್ ಹಿಗ್ಗುತ್ತಿರುವ ವಿಶ್ವದ ಸ್ವರೂಪ ನೀಡಿದನು. 1920ರಿಂದ 1930ರ ದಶಕದಲ್ಲಿ ಐನ್ಸ್ಟೀನ್ಗೆ ಬೌದ್ಧಿಕ ಅಘಾತಗಳು ಕಾದಿದ್ದವು. ಬಾರ್ನ್, ಕ್ವಾಂಟಂ ಬಲವಿಜ್ಞಾದಲ್ಲಿ ಸಂಭಾವ್ಯತಾ ಸಿದ್ಧಾಂತ ಸೇರಿಸಿ ಯಾವುದೇ ಘಟನೆ ನಿರ್ಧಾರಾತ್ಮಕವಲ್ಲವೆಂದೂ, ಅದು ಕೇವಲ ಸಂಭವನೀಯವೆಂದೂ, ದ್ರವ್ಯದ ಸ್ಥಿತಿಯೂ ಇದಕ್ಕೆ ಹೊರತಲ್ಲವೆಂದೂ ಸಾಧಿಸಿದನು. ಇದನ್ನು ಐನ್ಸ್ಟೀನ್ ತೀವ್ರವಾಗಿ ಆಲ್ಲಗಳೆದನು. ಆದರೆ ಕ್ವಾಂಟಂ ಸಿದ್ಧಾಂತ ಪ್ರಬಲವಾದಂತೆ, ಐನ್ಸ್ಟೀನ್ ನಿಲುವುಗಳು ಬದಲಾಗಲೇ ಬೇಕಾಯಿತು. ಇದರಿಂದಾಗಿ 1921ರಲ್ಲಿ ಮಹಾನ್ ಸಂಶೋಧನೆಗಳು ಹದಿಹರೆಯದ ಯುವಕರಿಗೆ ಹೊರತು ನನ್ನಂತಹವರಿಗಲ್ಲ ಎಂದು ಸಾರಿದನು. ಜಗತ್ತಿನ ಅರಿವಿನ ಸ್ವರೂಪ ಬದಲಿಸಿದ ಬೆರಳೆಣಿಕೆಯ ವಿಜ್ಞಾನಿಗಳಲ್ಲಿ ಐನ್ಸ್ಟೀನ್ ಸಹ ಒಬ್ಬನೆಂಬುದು ವಿವಾದಾತೀತ. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಬೊಹ್ರ್ ,ನೀಲ್ಸ್ (ಹೆನ್ರಿಕ್ ಡೇವಿಡ್) (1885-1962) -1922
ಡೆನ್ಮಾರ್ಕ್ -ಸೈದ್ಧಾಂತಿಕ ಭೌತಶಾಸ್ತ್ರ -ಪರಮಾಣುಗಳ ಎಲೆಕ್ಟ್ರಾನಿಕ್ ರಾಚನಿಕ ಸ್ವರೂಪ ತಿಳಿಸುವ ಕ್ವಾಂಟಂ ಸಿದ್ಧಾಂತ ಪ್ರತಿಪಾದಿಸಿದಾತ.
ಖ್ಯಾತ ಕೌಟುಂಬಿಕ ಹಿನ್ನೆಲೆಯಲ್ಲಿ ಹುಟ್ಟಿದ ನೀಲ್ಸ್ನ ತಂದೆ ಕೊಪೆನ್ಹೆಗ್ನಲ್ಲಿ ಅಂಗರಚನಾಶಾಸ್ತ್ರದ ಹೆಸರಾಂತ ಪ್ರಾಧ್ಯಾಪಕನಾಗಿದ್ದನು. ನೀಲ್ಸ್ ತಮ್ಮ ಹೆರಾಲ್ಡ್ ಪ್ರತಿಭಾವಂತ ಗಣಿತಜ್ಞ ನೀಲ್ಸ್ ಹಾಗೂ ಹೆರಾಲ್ಡ್ ಶ್ರೇಷ್ಟ ಮಧ್ಯದ ಕಾಲ್ಚೆಂಡಿನ ಆಟಗಾರರಾಗಿದ್ದರು. ನೀಲ್ಸ್ 1922ರಲ್ಲಿ ಭೌತಶಾಸ್ತ್ರದಲ್ಲಿನ ಸಾಧನೆಗಾಗಿ ನೊಬೆಲ್ ಪ್ರಶಸ್ತಿ ಪಡೆದರೆ, ಅದೇ ವರ್ಷ ಜನಿಸಿದ ಅವನ ಮಗ ಅಗೆ ಬೊಹ್ರ್ 1975ರಲ್ಲಿ ಭೌತಶಾಸ್ತ್ರದಲ್ಲಿನ ಸಾಧನೆಗಾಗಿ ನೊಬೆಲ್ ಪುರಸ್ಕೃತನಾದನು. 1911ರಲ್ಲಿ ಡಾಕ್ಟರೇಟ್ ಮುಗಿಸಿದ, ನೀಲ್ಸ್ ಮುಂದಿನ 8 ತಿಂಗಳ ಕಾಲ ಕೇಂಬ್ರಿಜ್ನಲ್ಲಿ ಜೆ.ಜೆ. ಥಾಮ್ಸನ್ ಜೊತೆ ಕೆಲಸ ಮಾಡಿದನು. ಪರಮಾಣು ರಚನೆಯನ್ನು ಕುರಿತಾದಂತೆ ನೀಲ್ಸ್ ನ ಪರಿಕಲ್ಪನೆಗಳು ಜೆ.ಜೆ. ಥಾಮನ್ಸ್ಗೆ ಒಪ್ಪಿಗೆಯಾಗಿರಲಿಲ್ಲ. ಇದರಿಂದಾಗಿ ನೀಲ್ಸ್ ಮ್ಯಾಂಚೆಸ್ಟರ್ಗೆ ತೆರಳಿ ರುದರ್’ಫೋರ್ಡ್ ದಿಗೆ ಸೇರಿ 4 ವರ್ಷಗಳ ಕಾಲ ಸಂಶೋಧನೆ ಮುಂದುವರೆಸಿದನು. ಈ ವೇಳೆಗೆ ರುದರ್’ಫೋರ್ಡ್ ಪರಮಾಣು ರಚನೆಯ ಸಿದ್ಧಾಂತವನ್ನು ಮಂಡಿಸಿದ್ದನು. ಈ ಸಿದ್ಧಾಂತದ ಮಾದರಿಯಲ್ಲಿ ಎಲೆಕ್ಟ್ರಾನ್ಗಳು ಕೇಂದ್ರ ಧನಾತ್ಮಕ ಬೀಜದ ಸುತ್ತ ಹರಡಿದ್ದವು. ಆದರೆ ಅಭಿಜಾತ ಭೌತಶಾಸ್ತ್ರಕ್ಕನುಗುಣವಾಗಿ , ಇಂತಹ ಮಾದರಿ ಸಮಸ್ಥಿತಿಯಲ್ಲಿದ್ದು, ಸ್ಥಿರವಾಗಿರಲು ಅಸಾಧ್ಯ. ಈ ಸೈದ್ಧಾಂತಿಕ ದೋಷದ ಬಗೆಗೆ ಆಳವಾಗಿ ಚಿಂತಿಸಿದ ನೀಲ್ಸ್, ಎಲೆಕ್ಟ್ರಾನ್ಗಳು ಒಂದು ನಿರ್ದಿಷ್ಟ ಕಕ್ಷೀಯ ಕೋನೀಯ ಆವೇಗ (Orbital Angular Momentum) ಹೊಂದಿದ್ದರೆ ಅವು ಸ್ಥಿರವಾಗಿ, ಸಮಸ್ಥಿತಿಯಲ್ಲಿರಬಹುದೆಂದು ಸೂಚಿಸಿದನು. ಇದಕ್ಕನುಗುಣವಾಗಿ ಪ್ರತಿ ಎಲೆಕ್ಟ್ರಾನ್ ಒಂದು ನಿರ್ದಿಷ್ಟ ಕಕ್ಷೆಯಲ್ಲಿ ಮಾತ್ರ ಸುತ್ತುತ್ತದೆ. ಹಾಗೆ ಸುತ್ತುವ ಎಲೆಕ್ಟ್ರಾನ್ ಚೈತನ್ಯಗಳಿಸಿ ಮೇಲಿನ ಕಕ್ಷೆಗಳಿಗೆ ಹಾರಬಹುದು ಅಥವಾ ಚೈತನ್ಯ ಕಳೆದುಕೊಂಡು ಕೆಳಗಿನ ಕಕ್ಷೆಗಳಿಗೆ ಕುಸಿಯಬಹುದೆಂದು, ನೀಲ್ಸ್ ವಾದಿಸಿದನು. ಇದರ ಪ್ರಕಾರ ವಿಕಿರಣ ಹೊರಹೊಮ್ಮುವ ಅಥವಾ ಒಳ ಹೀರಲ್ಫಡುವ ಕ್ರಿಯೆ ಎಲೆಕ್ಟ್ರಾನ್ ಗಳಿಸಿದ ಚೈತನ್ಯದ ಮೇಲೆ ಆಕ್ರಮಿಸಲಿರುವ ಕಕ್ಷೆಯ ಮೇಲೆ ಅವಲಂಬಿತವಾಗಿರುತ್ತದೆ. ನೀಲ್ಸ್ ತನ್ನ ಈ ಸಿದ್ಧಾಂತವನ್ನು ಜಲಜನಕದ ಎಲೆಕ್ಟ್ರಾನ್ ಚೈತನ್ಯ ಹೀರಿದಾಗ ಅಥವಾ ಬಿಡುಗಡೆಗೊಳಿಸಿದಾಗ ದಕ್ಕಬಹುದಾದ ರೋಹಿತದ ಸ್ವರೂಪವನ್ನು ನಿರ್ದರಿಸಲು ಬಳಸಿದನು.
1913ರಲ್ಲಿ ರಿಡ್ಬರ್ಗ್ ಹಾಗೂ ಬಾಮರ್ ಜಲಜನಕದ ಎಲೆಕ್ಟ್ರಾನ್ ಚೈತನ್ಯದ ರೋಹಿತವನ್ನು ಅಧ್ಯಯನ ನಡೆಸಿದಾಗ, ಅವು ನೀಲ್ಸ್ ಸಾದರಪಡಿಸಿದ ರೋಹಿತವನ್ನು ಚಾಚೂ ತಪ್ಪದಂತೆ ಹೋಲುತ್ತಿರುವುದು ಸ್ಪಷ್ಟವಾಯಿತು. 1916ರಲ್ಲಿ ನೀಲ್ಸ್ ಕೊಪೆನ್ಹೇಗ್ಗೆ ಮರಳಿ, ಎರಡು ವರ್ಷಗಳ ತರುವಾಯ, ಅಲ್ಲಿ ಸ್ಥಾಪನೆಗೊಂಡ ಸೈದ್ಧಾಂತಿಕ ಭೌತಶಾಸ್ತ್ರ ಸಂಸ್ಥೆಯ ಮೊದಲ ನಿರ್ದೇಶಕನಾದನು. ನೀಲ್ಸ್ ನಿರ್ದೇಶಕನಾಗಿದ್ದ ದೀರ್ಘ ಕಾಲದುದ್ದಕ್ಕೂ ಅವನ ಸಂಸ್ಥೆ ಜಗತ್ತಿನಾದ್ಯಂತ ಸೈದ್ಧಾಂತಿಕ ಭೌತಶಾಸ್ತ್ರದ ಕ್ವಾಂಟಂ ಸಿದ್ಧಾಂತದ ಕ್ಷೇತ್ರದಲ್ಲಿ ಜರುಗುತ್ತಿದ್ದ ಸಂಶೋಧನೆಗಳನ್ನು ಸಮನ್ವಯಗೊಳಿಸುವ ಕೇಂದ್ರವಾಗಿದ್ದಿತು. 1927ರಲ್ಲಿ ನೀಲ್ಸ್ ಪರಿಪೂರಕ ತತ್ತ್ವ (Complimentary Principle) ಮಂಡಿಸಿದನು. ಈ ತತ್ತ್ವದಂತೆ ಪರಮಾಣ್ವಕ ವಸ್ತುಗಳಿಗೂ (Atomic Objects) ಹಾಗೂ ಅವುಗಳನ್ನು ಅಳೆಯುತ್ತಿರುವ ಸಲಕರಣೆಗಳ, ಮಧ್ಯದ ಅಂತಕ್ರಿ0iÉು ಗುರುತಿಸುವಂತಹ ಯಾವ ವಿಭಿನ್ನತೆಯೂ ಇಲ್ಲ. ಈ ತತ್ತ್ವ ಬ್ರೊಗಿಲಿ ಭಾವಿಸಿದಂತೆ ದ್ರವ್ಯದ ಕಣ ಹಾಗೂ ಅಲೆ ಸ್ವರೂಪಗಳೆರಡಕ್ಕೂ ಸಮಾನ ಸ್ಥಾನ ನೀಡುವುದಲ್ಲದೆ, ಹೀಸೆನ್ಬರ್ಗ್ನ ಅನಿಶ್ಚಿತ ತತ್ತ್ವ ಹಾಗೂ ಬಾರ್ನ್ ದ್ರವ್ಯದ ಅಲೆಗಳನ್ನು ವಿವರಿಸಲು, ಬಳಸಿದ ಸಂಭಾವ್ಯತಾ ಮಾದರಿಗೂ ಸಲ್ಲುತ್ತದೆ. ನೀಲ್ಸ್ ಪರಿಪೂರಕ ತತ್ತ್ವಕ್ಕೆ ಜೋಡಿಯೆಂಬಂತೆ ಅನುಸಂವಾದಿ ತತ್ತ್ವವನ್ನು (Correspondence Principle) ಮಂಡಿಸಿದ್ದಾನೆ. ಈ ತತ್ತ್ವದ ಪ್ರಕಾರ ಸೂಕ್ಷ್ಮ ಮಟ್ಟದಲ್ಲಿ ಅಣು ಹಂತದಲ್ಲಿ ಅನ್ವಯಗೊಳ್ಳುವ ಕ್ವಾಂಟಂ ಸಿದ್ಧಾಂತ , ಸ್ಥೂಲ ಜಗತ್ತಿಗೂ , ಅಭಿಜಾತ ಭೌತಶಾಸ್ತ್ರಕ್ಕೆ ಅನ್ವಯವಾಗುತ್ತದೆ. 1930ರವೇಳೆಗೆ ರುದರ್’ಫೋರ್ಡ್ ನಡೆಸಿದ ಚಟುವಟಿಕೆಗಳು ಅಣ್ವಯಿಕ ಭೌತಶಾಸ್ತ್ರಕ್ಕೆ ಕಾರಣವಾಗಿದ್ದವು. ಈ ಜ್ಞಾನವನ್ನು ಬಳಸಿಕೊಂಡು ನೀಲ್, ತನ್ನ ಸಿದ್ಧಾಂತವನ್ನು ಪರಮಾಣು ಬೀಜಕ್ಕೂ ಅನ್ವಯಿಸಿದನು. ಈ ಅನ್ವಯ ಹಾಗೂ ಸಿದ್ಧಾಂತ ಮುಂದುವರಿಕೆಯಾಗಿ ಹೊಸ ಸಂಗತಿಗಳು ಬೆಳಕಿಗೆ ಬಂದವು. 1936ರಲ್ಲಿ ನೀಲ್ಸ್ ಪರಮಾಣು ಬೀಜದಲ್ಲಿ ಪ್ರೋಟಾನ್ ಹಾಗೂ ನ್ಯೂಟ್ರಾನ್ಗಳು ಪರಸ್ಪರ ಪ್ರಬಲ ಶಕ್ತಿಯಿಂದ ಬಂಧಿಸಲ್ಪಟ್ಟಿವೆ ಎಂದು ಸಾರಿದನು. 1939ರಲ್ ಜೆ. ಎ. ವೀಲರ್ ಜೊತೆ ಸೇರಿ, ನೀಲ್ಸ್ ಬೈಜಿಕ ಸದಳನ ಸಾಧ್ಯತೆಯನ್ನು, ಅದನ್ನು ವಿವರಿಸುವ ಸಿದ್ಧಾಂತವನ್ನು ಮಂಡಿಸಿದನಲ್ಲದೆ, ಯುರೇನಿಯಂ 235ರ ಸಮಸ್ಥಾನಿ (Isotope), ಯುರೇನಿಯಂ 238ಕ್ಕಿಂತಲು ಇಂತಹ ಸದಳನಕ್ಕೆ ಬಹು ಸಮರ್ಪಕವಾದುದೆಂದು ಸೂಚಿಸಿದನು. ಇದೇ ಸಂಗತಿಯನ್ನು ಆಲ್ಬರ್ಟ್ ಐನ್ಸ್ಟೀನ್ ತಿಳಿಸಿದ್ದನಲ್ಲದೆ, ಬೈಜಿಕಾಸ್ತ್ರ (Nuclea Weapon ) ತಯಾರಿಕೆಗೆ ಇದು ಹೇಗೆ ಕಾರಣವಾಗುವುದೆಂದು ಸೂಚಿಸಿದ್ದನು. ಎರಡನೇ ಜಾಗತಿಕ ಯುದ್ದದಲ್ಲಿ ಡೆನ್ಮಾರ್ಕ್ ನಾಝಿಗಳ ಕಣ್ಗಾವಲ ಕೆಳಗೆ ಬಂದಿತು. ನೀಲ್ಸ್ ಬೋರ್’ನ ತಾಯಿ ಯಹೂದಿಯಾದುದರಿಂದ ನಾಝಿಗಳ ಕೆಂಗಣ್ಣಿಗೆ ಗುರಿಯಾದ ನೀಲ್ಸ್ ಮೀನುಗಾರರ ದೋಣಿಯೊಂದರಲ್ಲಿ ಸ್ವೀಡನ್ನಿಗೆ ಪರಾರಿಯಾದನು. ಸ್ವೀಡನ್ ನಿಂದ ಒಂದು ಸಣ್ಣ ಯುದ್ದ ವಿಮಾನದಲ್ಲಿ ಯಾರಿಗೂ ತಿಳಿಯದಂತೆ ಇಂಗ್ಲೆಂಡಿಗೆ ಹೋದನು. ಡೆನ್ಮಾರ್ಕ್ ತೊರೆಯುವ ಮುಂಚೆ, ಯಾರಿಗೂ ತಿಳಿಯಬಾರದೆಂದು ನೊಬೆಲ್ ಪುರಸ್ಕೃತನಾದಾಗ ನೀಡಲಾಗಿದ್ದ ಚಿನ್ನದ ಪದಕವನ್ನು ನೀಲ್ಸ್ ಆಮ್ಲದಲ್ಲಿ ಕರಗಿಸಿ, ಅದರ ದ್ರಾವಣವನ್ನು ಒಯ್ದನು. ಮುಂದೆ ಅದನ್ನು ಮತ್ತೊಮ್ಮೆ ಲೋಹಕ್ಕೆ ಪರಿವರ್ತಿಸಿ, ಅದೇ ಚಿನ್ನದಿಂದ ಮತ್ತೊಮ್ಮೆ ನೊಬೆಲ್ ಪದಕ ಮಾಡಲಾಯಿತು. ಅಣ್ವಸ್ತ್ರ ಬಳಸದಂತೆ ರಷ್ಯಾ ಹಾಗೂ ಯುರೋಪಿಯನ್ ದೇಶಗಳು ಪರಸ್ಪರ ಒಪ್ಪಂದ ಮಾಡಿಕೊಳ್ಳಲು ಒತ್ತಾಯ ಹೇರುವ ದಿಶೆಯಲ್ಲಿ ಅಸಂಸಂಗಳು ಕ್ರಿಯಾಶೀಲವಾಗುವಂತೆ ಮಾಡಿದನು. ಇದರ ಫಲವಾಗಿ 1955ರಲ್ಲಿ ನೀಲ್ಸ್ ಜೀನೀವಾದಲ್ಲಿ ಶಾಂತಿಗಾಗಿ ಅಣುಶಕ್ತಿ ಬಳಕೆಗೆ ಚಲನೆ ನೀಡುವ ಸಮ್ಮೇಳನ ನಡೆಸಿದನು.
1962ರಲ್ಲಿ ನೀಲ್ಸ್ ಕೊನೆಯುಸಿರೆಳೆದಾಗ, ಐನ್ಸ್ಟೀನ್ ನಂತರದ ಇಪ್ಪತ್ತನೇ ಶತಮಾನದ ಮಹಾನ್ ಸೈದ್ಧಾಂತಿಕ ಭೌತಶಾಸ್ತ್ರನೆಂದು ವಿಶ್ವದಾದ್ಯಂತ ಖ್ಯಾತನಾಗಿದ್ದನು. ನೀಲ್ಸ್ ನ ಪರಮಾಣು ಮಾದರಿ, ಹಾಗೂ ಸಾದರ ಪಡಿಸಿದ್ದ ರೋಹಿತದ ಸಿದ್ಧಾಂತಗಳು ಜಲಜನಕದಂತಹ ಸರಳ ಧಾತುಗಳಿಗೆ ಮಾತ್ರ ಖಚಿತವಾಗಿ ಅನ್ವಯವಾಗುತ್ತಿದ್ದವು, ಮುಂದೆ ನೀಲ್ಸ್ ನ ಮಾದರಿಯಲ್ಲಿ ಹಲವಾರು ಸೈದ್ಧಾಂತಿಕ ಮಾರ್ಪಾಡುಗಳನ್ನು ಮಾಡಿ ಅದು ಎಲ್ಲಾ ಧಾತುಗಳಿಗೂ ಸರಿ ಹೊಂದುವಂತೆ ಮಾಡಲಾಯಿತು. ಬೇರೆ ಭೌತಶಾಸ್ತ್ರಜ್ಞರಿಗಿಂತ ಭಿನ್ನವಾಗಿದ್ದ ನೀಲ್ಸ್ ಸಹ ಸಂಶೋಧಕರಲ್ಲಿ , ವಿದ್ಯಾರ್ಥಿ ವೃಂದದಲ್ಲಿ, ಸಮಾನರಲ್ಲಿ ಬಹು ಜನಪ್ರಿಯನಾಗಿದ್ದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಮಿಲಿಕನ್, ರಾಬರ್ಟ್ ಆ್ಯಂಡ್ರೂಸ್ (1923--) 1923
Millikan , Robert Andrews
ಅಸಂಸಂ-ಭೌತಶಾಸ್ತ್ರ-ಐನ್ಸ್ಟೀನ್ ಮತ್ತು ಮ್ಯಾಕ್ಸ್ ಪ್ಲಾಂಕ್ ಸಿದ್ಧಾಂತಗಳಿಗೆ ಪ್ರಾಯೋಗಿಕ ಸಾಕ್ಷ್ಯ ಒದಗಿಸಿದಾತ.
ಮಿಲಿಕನ್ 22 ಮಾರ್ಚ್ 1868ರಂದು ಇಲಿನಾಯ್ನ ಮಾರಿಸನ್ ಪಟ್ಟಣದಲ್ಲಿ ಜನಿಸಿದನು. ಈತನ ಪೂರ್ವಿಕರು ಅಸಂಸಂಗಳಿಗೆ ಬಂದು ನೆಲೆಸಿದ ಪ್ರಥಮ ಕುಟುಂಬದಲ್ಲೊಬ್ಬರಾಗಿದ್ದರು. 1886ರಲ್ಲಿ ಓಹಿಯೋದ ಒಬೆರ್ಲಿನ್ ಕಾಲೇಜನ್ನು ಸೇರಿದನು. ಇಲ್ಲಿ ಗ್ರೀಕ್ ಹಾಗೂ ಗಣಿತ ಮಿಲಿಕನ್ ನೆಚ್ಚಿನ ವಿಷಯಗಳಾಗಿದ್ದವು. 1891ರಲ್ಲಿ ಪದವಿ ಗಳಿಸಿದ ನಂತರ, ಭೌತಶಾಸ್ತ್ರದ ಶಿಕ್ಷಕನಾಗಿ ಕೆಲಸ ಮಾಡಿದನು. 1893ರಲ್ಲಿ ಸ್ನಾತಕೋತ್ತರ ಪದವಿ ಗಳಿಸಿ, ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಬೆಳಕಿನ ಧೃವೀಕರಣದ ಮೇಲೆ ಸಂಪ್ರಬಂಧ ಮಂಡಿಸಿ ಡಾಕ್ಟರೇಟ್ ಗಳಿಸಿದನು. 1895ರಿಂದ ಒಂದು ವರ್ಷದ ಕಾಲ ಗಟ್ಟಿಂಜೆನ್ ಹಾಗೂ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿದನು. 1896ರಲ್ಲಿ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಸಹಾಯಕ ಬೋಧಕನಾದನು. ಇಲ್ಲಿ ಭೌತಶಾಸ್ತ್ರದ ಪಠ್ಯವನ್ನು ಪರಿಷ್ಕರಿಸಿದನು. ವೈದ್ಯುತ್ ,ದೃಗ್ ಹಾಗೂ ಅಣ್ವಯಿಕ ಭೌತಶಾಸ್ತ್ರಗಳ ಅಧ್ಯಯನದಲ್ಲಿ ಮಿಲಿಕನ್ ನಿರತನಾಗಿದ್ದನು. 1910ರಲ್ಲಿ ಪತನ ಹನಿ ವಿಧಾನ ಬಳಸಿ ಮಿಲಿಕನ್ ಎಲೆಕ್ಟ್ರಾನ್ನ ವೈದ್ಯುತ್ ಆವಿಷ್ಟವನ್ನು ಕರಾರುವಕ್ಕಾಗಿ ನಿರ್ಧರಿಸಿದನು. ಅಲ್ಲದೆ ಇದು ಎಲ್ಲಾ ಪರಮಾಣುಗಳಿಗೆ ಸ್ಥಿರವಾಗಿರುವುದೆಂದು ಸಾಧಿಸಿದನು. ಇದರಿಂದ ವಿದ್ಯುತ್ಗೆ ಪರಮಾಣು ವಿವರಣೆಯ ಹಿನ್ನೆಲೆ ಒದಗಿಸಿದನು. ದ್ಯುತಿ ವೈದ್ಯುತ್ ಪರಿಣಾಮ ಕುರಿತಾಗಿ ಹಲವಾರು ಪ್ರಯೋಗಗಳನ್ನು ನಡೆಸಿ, ಐನ್ಸ್ಟೀನ್ರ ದ್ಯುತಿವೈದ್ಯುತ್ ಸಿದ್ಧಾಂತಕ್ಕೆ , ಮಾಕ್ಸ್ ಪ್ಲಾಂಕ್ನ ಸಿದ್ಧಾಂತಕ್ಕೆ ಪುರಾವೆ ಒದಗಿಸಿದನು. ಈ ಕೆಲಸಗಳಿಗಾಗಿ ಮಿಲಿಕನ್ 1923ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. ಮಿಲಿಕನ್ನಿಂದ ಅತಿ ನೇರಳೆ ಹಾಗೂ ಕ್ಷ ಕಿರಣ ವಿಕಿರಣಗಳ ಮಧ್ಯದ ರೋಹಿತಗಳನ್ನು ಅನಾವರuಗೊಳಿಸಿದನು. ಮೊದಲನೆ ಜಾಗತಿಕ ಯುದ್ದದ ಸಮಯದಲ್ಲಿ ಜಲಾಂತರ್ಗಾಮಿ ವಿರೋಧಿ ತಂತ್ರ ರೂಪಿಸಲು ಯತ್ನಿಸಿದನು. ಮಿಲಿಕನ್ ಉತ್ತಮ ಟೆನಿಸ್ ಹಾಗೂ ಗಾಲ್ಫ್ ಆಟಗಾರನಾಗಿದ್ದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಕಾರ್ಲ್, ಎಂ ಸೀಗ್ಬನ್ –(1918--) 1924
Karl Siegbahn
ಸ್ವೀಡನ್-ಭೌತಶಾಸ್ತ್ರ-ರೋಹಿತ ಅಧ್ಯಯನಗಳ ಮುಂದಾಳು.
ಕಾರ್ಲ್ ಸ್ವೀಡನ್ನ ಒರೆಬ್ರೋ ಪಟ್ಟಣದಲ್ಲಿ 3 ಡಿಸೆಂಬರ್ 1886 ರಂದು ಜನಿಸಿದನು. ಈತನ ತಂದೆ ರೇಲ್ವೇ ಸ್ಟೇಷನ್ ಮಾಸ್ಟರ್ ಕೆಲಸದಲ್ಲಿದ್ದನು. 1906 ರಲ್ಲಿ ಲುಂಡ್ ವಿಶ್ವವಿದ್ಯಾಲಯ ಸೇರಿ ಕಾಂತ ಕ್ಷೇತ್ರದ ಬಗೆಗೆ ಸಂಶೋಧನೆ ನಡೆಸಿ 1911 ರಲ್ಲಿ ಡಾಕ್ಟರೇಟ್ ಗಳಿಸಿದನು. ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಜೆ.ಆರ್ ರೈಡ್ಬರ್ಗ್ನ ಸಹಾಯಕನಾಗಿ ಉಪನ್ಯಾಸಕ ಹುದ್ದೆಯಲ್ಲಿದ್ದನು. ರೈಡ್ಬರ್ಗ್ನ ಮರಣಾನಂತರ 1920 ರಲ್ಲಿ ಪ್ರಾಧ್ಯಾಪಕನಾಗಿ ನೇಮಕಗೊಂಡನು. 1923 ರಲ್ಲಿ ಉಪ್ಸಾಲ ವಿಶ್ವವಿದ್ಯಾಲಯಕ್ಕೆ ಹೋದನು. 1937 ರಲ್ಲಿ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ನಲ್ಲಿ ಪ್ರಾಯೋಗಿಕ ಸಂಶೋಧಕ ಪ್ರಾಧ್ಯಾಪಕನಾದನು. ನೊಬೆಲ್ ಇನ್ಸ್ಟಿಟ್ಯೂಟ್ ಆಫ್ ಅಕಾಡೆಮಿ ಭೌತಶಾಸ್ತ್ರದ ವಿಭಾಗ ಪ್ರಂಭಿಸಿದಾಗ ಕಾರ್ಲ್ ಅದರ ಪ್ರಥಮ ನಿರ್ದೇಶಕನಾಗಿ ನೇಮಕಗೊಂಡನು. 1912 ರಿಂದ 1937 ರ ಅವಧಿಯಲ್ಲಿ ಕಾರ್ಲ್ ಕ್ಷ-ಕಿರಣ ರೋಹಿತ ತಂತ್ರಗಳಲ್ಲಿ ಹಲವಾರು ಹೊಸ ವಿಧಾನಗಳನ್ನು ಪರಿಚಯಿಸಿದನು. ಕ್ಷ-ಕಿರಣ ನಳಿಕೆಗಳನ್ನು ಉತ್ತಮಪಡಿಸಿ ಪ್ರಯೋಗಗಳಲ್ಲಿ ಕರಾರುವಾಕ್ಕಾದ ಅಳತೆಗಳನ್ನು ಪಡೆಯುವಲ್ಲಿ ಯಶಸ್ವಿಯಾದನು. ಕಾರ್ಲ್ನ ಈ ಹೊಸ ತಂತ್ರದಿಂದ ಅಣುವಿನ ಶಲ್ಕದಲ್ಲಿನ ಎಲೆಕ್ಟ್ರಾನ್ಗಳ ಚೈತನ್ಯ ಮತ್ತು ವಿಕಿರಣ ತೀವ್ರತೆಯ ಅಳತೆ ನಿಖರವಾಗಿ ದಕ್ಕಿತು. ಕಾರ್ಲ್ ಸೀಗ್ಬನ್ ನೆತೃತ್ವದಲ್ಲಿ ಬೈಜಿಕ ಭೌತಶಾಸ್ತ್ರದಲ್ಲಿನ ಅಧ್ಜ್ಯಯನಗಳು ಸಾಗಿದವು. ಅಸ್ಥಿರ ಬೈಜಿಕ ಕೇಂದ್ರಗಳ ಪರಿಶೀಲನೆಗಾಗಿ ಸೈಕ್ಲೋಟ್ರಾನ್ ನಿರ್ಮಾಣದ ಮುಂದಾಳತ್ವವನ್ನು ಸಹ ಕಾರ್ಲ್ ವಹಿಸಿದ್ದನು. ವಿಶಿಷ್ಟವಾದ ಎಲೆಹ್ಟ್ರಾನ್ ಸೂಕ್ಷ್ಮದರ್ಶಕದ ನಿರ್ಮಾಣದಲ್ಲೂ ಕಾರ್ಲ್ ಪರಿಶ್ರಮಿಸಿದನು. ರೋಹಿತ ಅಧ್ಯಯನ ರಂಗದಲ್ಲಿ ಕಾರ್ಲ್ ಅಧಿಕೃತ ವಾಣಿಯಾಗಿದ್ದನು. ಇದರಲ್ಲಿನ ಸಾಧನೆಗಳಿಗಾಗಿ 1924ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಕಾರ್ಲ್ನ ಮಗನಾದ ಕಾಯ್ ಸೀಗ್ಬನ್ ಸಹ 1981ರಲ್ಲಿ ಭೌತಶಾಸ್ತ್ರದಲ್ಲಿನ ನೊಬೆಲ್ ಪ್ರಶಸ್ತಿ ಪುರಸ್ಕೃತನಾಗಿದ್ದಾನೆ. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಫ್ರಾಂಕ್ ,ಜೇಮ್ಸ್
Frank , James (PHY.) 1925
ಫ್ರಾಂಕ್ 26 ಆಗಸ್ಟ್ 1882 ರಂದು ಹ್ಯಾಂಬರ್ಗ್ನಲ್ಲಿ ಜನಿಸಿದನು. ಹೈಡೆಲ್ಬರ್ಗ್ ವಿಶ್ವವಿದ್ಯಾಲಯ ಸೇರಿ ರಸಾಯನಶಾಸ್ತ್ರದ ಪದವಿಗೆ ನೋಂದಾಯಿಸಿಕೊಂಡಫ್ರಾಂಕ್ ಒಂದು ವರ್ಷದ ನಂತರ ಬರ್¯ನ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದಲ್ಲಿ ಅಧ್ಯಯನ ಮುಂದುವರೆಸಿದನು. 1918ರಲ್ಲಿ ಮೊದಲ ಜಾಗತಿಕ ಯುದ್ದದಲ್ಲಿ ಭಾಗಿಯಾಗಿ ‘ಐರನ್ ಕ್ರಾಸ್’ ಪ್ರಶಸ್ತಿ ಪಡೆದನು. 1920ರಲ್ಲಿ ಗಟ್ಂಜೆನ್ ವಿಶ್ವವಿದ್ಯಾಲಯದ ಪ್ರಾಯೋಗಿಕ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥನಾದನು. ಇಲ್ಲಿ ಮ್ಯಾಕ್ಸ್ ಬಾರ್ನ್ನ ಸಾಂಗತ್ಯ ಫ್ರಾಂಕ್’ಗೆ ದಕ್ಕಿತು. ಇಲ್ಲಿ ಅತ್ಯುತ್ತಮ ಪ್ರಧ್ಯಾಪಕನೆಂದು ಮೇಧಾವಿ ಶಿಷ್ಯರುಗಳಿಂದ ಶ್ಲಾಘಿಸಲ್ಪಟ್ಟನು. ನಾಝಿಗಳು ಅಧಿಕಾರ ಹಿಡಿದ ನಂತರ ಅಸಂಸಂಗಳ ಬಾಲ್ಟಿಮೋರ್ ನಲ್ಲಿದ್ದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದನು. 1938ರಲ್ಲಿ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಭೌತರಸಾಯನಶಾಸ್ತ್ರದ ಪ್ರಾಧ್ಯಾಪಕನಾದನು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಮ್ಯಾನ್ಹಟ್ಟನ್ ಯೋಜನೆಯ ಕೇಂದ್ರವಾಗಿದ್ದ ಚಿಕಾಗೋ ವಿಶ್ವವಿದ್ಯಾಲಯದ ಲೌಹಿಕ ಪ್ರಯೋಗಾಲಯದ ನಿರ್ದೇಶಕನಾಗಿದ್ದನು.1947 ರಿಂದಫ್ರಾಂಕ್ ದ್ಯುತಿಸಂಶ್ಲೇಷಣಾ ಸಂಶೋಧನೆಯಲ್ಲಿ ನಿರತನಾದನು. ಹಟ್ರ್ಸ್ನೊಂದಿಗೆ ವಿವಿಧ ಅನಿಲಗಳಲ್ಲಿ ಮುಕ್ತ ಎಲೆಕ್ಟ್ರಾನ್ಗಳ ನಡವಳಿಕೆಯನ್ನು ಕುರಿತಾಗಿ ಹಲಾವಾರು ಪ್ರಯೋಗಳನ್ನು ಕೈಗೊಂಡನು. ಇದರಿಂದ ಬೊಹ್ರ್ ಅಣು ಸಿದ್ಧಾಂತಕ್ಕೆ ಪ್ರಾಯೋಗಿಕ ಸಾಕ್ಷ್ಯಗಳು ಲಭ್ಯವಾದವು. ಇದಕ್ಕಾಗುಫ್ರಾಂಕ್ 1925ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.ಫ್ರಾಂಕ್ ಜೀವನುದ್ದಕ್ಕೂ ಜೀವನ್ಮುಖಿ ನೆಲೆಯಲ್ಲಿ ಚಿಂತಿಸಿ ಅದರಂತೆ ಬದುಕಿದನು. ಜರ್ಮನಿಯಲ್ಲಿ ನಾಝಿಗಳ ಮಾನವ ಹಕ್ಕುಗಳ ನಿರಾಕರಣೆಯನ್ನು ವಿರೋಧಿಸಿ 1933ರಲ್ಲಿ ಗಟ್ಟಿಂಜೆನ್ನಲ್ಲಿ ತನ್ನ ಪ್ರಾಧ್ಯಾಪಕ ಹುದ್ದೆ ತೊರೆದ ಮೊದಲಿಗಫ್ರಾಂಕ್. 1945ರಲ್ಲಿ ಹಿರೋಷಿಮಾದ ಮೇಲೆ ಬೈಜಿಕಾಸ್ತ್ರ ಪ್ರಯೋಗಿಸುವ ಎರಡು ತಿಂಗಳು ಮೊದಲು ಸಹ ವಿಜ್ಞಾನಿಗಳೊಂದಿ ‘ಫ್ರಾಂಕ್ ವರದಿ ‘ ಸಿದ್ಧಪಡಿಸಿ ಜನವಸತಿ ಪ್ರದೇಶದ ಮೇಲೆ ಬೈಜಿಕಾಸ್ತ್ರದ ಬಳಕೆಯನ್ನು ತೀವ್ರವಾಗಿ ವಿರೋಧಿಸಿ, ಸರ್ಕಾರದ ನೀತಿಯ ವಿರುದ್ಧ ದನಿಯೆತ್ತಿದ ಮೊದಲಿಗರಲ್ಲೊಬ್ಬನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಗುಸ್ತಾವ್, ಲುಡ್ವಿಗ್ ಹಟ್ರ್ಸ್ (1887-1975) 1925
Gustav , Ludwig Hertz
ಜರ್ಮನಿ-ಭೌತಶಾಸ್ತ್ರ-ಎಲೆಕ್ಟ್ರಾನ್ಗಳ ಚೈತನ್ಯ ನಷ್ಟ ವಿವರಿಸಿದಾತ.
ಹಟ್ರ್ಸ್ ತಂದೆ ಹ್ಯಾಂಬರ್ಗ್ನಲ್ಲಿ ವಕೀಲನಾಗಿದ್ದನು. ಹಟ್ರ್ಸ್ 22 ಜುಲೈ 1887ರಂದು ಜನಿಸಿದನು. ಹ್ಯಾಂಬರ್ಗ್ನ ಜೊಹಾನ್ನಿಯಂ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿ, 1906ರಲ್ಲಿ ಗಟ್ಟಿಂಜೆನ್ ವಿಶ್ವವಿದ್ಯಾಲಯ ಸೇರಿದನು. ಮುಂದೆ ಬರ್ಲಿನ್ ಹಾಗೂ ಮ್ಯೂನಿಕ್ಗಳಲ್ಲಿ ವಿದ್ಯಾಭ್ಯಾಸ ಮಾಡಿ 1911ರಲ್ಲಿ ಪದವಿ ಗಳಿಸಿದನು. 1913ರಲ್ಲಿ ಬರ್ಲಿನ್ನ ಭೌತಶಾಸ್ತ್ರ ಸಂಶೋಧನಾ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕನಾದನು. ಮೊದಲನೆ ಜಾಗತಿಕ ಯುದ್ದ ಪ್ರಾರಂಭವಾಗಿ 1914ರಲ್ಲಿ ಸೇನೆಗೆ ನಿಯೋಜಿಸಲ್ಪಟ್ಟನು. 1915ರಲ್ಲಿ ಯುದ್ದ ರಂಗದಲ್ಲಿ ಗಾಯಗೊಂಡನು. 1917ರಲ್ಲಿ ಬರ್ಲಿನ್ಗೆ ಮರಳಿದನು. 1920 ರಿಂದ 1925 ರವರೆಗೆ ಐಂಡ್ ಹೂವೆನ್ನ ಫಿಲಿಪ್ಸ್ ಇನ್ಕ್ಯಾಂಡೆಸೆಂಟ್ ಲ್ಯಾಂಪ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದನು. 1925ರಲ್ಲಿ ಹ್ಯಾಲೆ ವಿಶ್ವವಿದ್ಯಾಲಯದ ಭೌತಶಾಸ್ತ್ರ ಸಂಸ್ಥೆಯ ಪ್ರಾಧ್ಯಾಪಕನಾಗಿ ನೇಮಕಗೊಂಡನು. 1929ರಲ್ಲಿ ಬರ್ಲಿನ್ಗೆ ಮರಳಿ ಬಂದು ಚಾರ್ಲೋಟೈನ್ಬರ್ಗ್ ತಾಂತ್ರಿಕ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ನಿರ್ದೇಶಕನಾದನು. ಇಲ್ಲಿ 1935ರವರೆಗಿದ್ದ ಹಟ್ರ್ಸ್ ರಾಜಕೀಯ ಕಾರಣಗಳಿಂದ ಇದಕ್ಕೆ ರಾಜಿನಾಮೆಯಿತ್ತು ಸೀಮನ್ಸ್ ಕಂಪನಿಗೆ ನಿರ್ದೇಶಕನಾದನು. 1945ರಲ್ಲಿ ಸೋವಿಯತ್ ರಷ್ಯಾಕ್ಕೆ ಹೋದ ಹಟ್ರ್ಸ್ 1954ರವರೆಗೆ ಅಲ್ಲಿಯ ಸಂಶೋಧನಾಲಯದಲ್ಲಿ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದನು. ಇದಾದ ನಂತರ ಲೀಪ್ಜಿಗ್ನ ಕಾರ್ಲ್ ಮಾಕ್ರ್ಸ್ “ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದ ನಿರ್ದೇಶಕನಾದನು. 1961ರನಂತರ ಲೀಪ್ಜಿಗ್ ಹಾಗೂ ಬರ್ಲಿನ್ ವಿಶ್ವವಿದ್ಯಾಲಯಗಳಲ್ಲಿ ನಿವೃತ್ತ ಪ್ರಾಧ್ಯಾಪಕನಾಗಿದ್ದನು. ಹಟ್ರ್ಸ್ ತನ್ನ ಆರಂಭಿಕ ಸಂಶೋಧನೆಗಳು ಇಂಗಾಲದ ಡೈ ಆಕ್ಸೈಡ್ನ ಒತ್ತಡ ಹಾಗೂ ಅಂಶಿಕ ಒತ್ತಡಗಳಿಗೆ ಸಂಬಂಧಿಸಿರುವಂತೆ ಅವಗೆಂಪು ಕಿರಣಗಳ ಹೀರಿಕೆಯನ್ನು ಕುರಿತಾಗಿದ್ದವು. 1913ರಿಂದ ಜೆ. ಫ್ರಾಂಕ್ ಜೊತೆಗೆ, ಎಲೆಕ್ಟ್ರಾನ್ ಸಂಘಾತದ ಅಧ್ಯಯನ ನಡೆಸಿದನು. ವಿವಿಧ ಅನಿಲಗಳಲ್ಲಿನ ಅಯಾನೀಕರಣದ ಸಾಧ್ಯತೆ ಸ್ವರೂಪಗಳ ಅರಿವಿಗೆ ಪ್ರಯೋಗಗಳನ್ನು ನಡೆಸಿದನು. ಸ್ಥಿರ ಚೈತನ್ಯದ ಸ್ಥಿತಿಯಲ್ಲಿರುವ ಪರಮಾಣುಗಳನ್ನು ಎಲೆಕ್ಟ್ರಾನ್ಗಳು ಸಂಘಟ್ಟಿಸಿದಾಗ, ಅವುಗಳಲ್ಲಿ ಚೈತನ್ಯ ನಷ್ಟವಾಗುತ್ತದೆ. ಆಗ ರೋಹಿತದ ರೇಖೆಗಳಲ್ಲಿ ಬದಲಾವಣೆಗಳಾಗುತ್ತವೆ. ಇಂತಹ ರೋಹಿತದ ರೇಖೆಗಳ ಸರಣಿಗಳನ್ನು ಹೇಗೆ, ಎಲೆಕ್ಟ್ರಾನ್ಗಳ ಚೈತನ್ಯ ನಷ್ಟದೊಂದಿಗೆ ಪರಿಣಾತ್ಮಕವಾಗಿ ವಿವರಿಸಬಹುದೆಂದು ತೋರಿಸಿದನು. ಹಟ್ರ್ಸ್ನ ಪ್ರಯೋಗಗಳು ಪ್ಲಾಂಕ್ನ ಕ್ವಾಂಟಂ ಸಿದ್ಧಾಂತ ಒಳಗೊಂಡಂತೆ ನೀಲ್ಸ್ ಬೊಹ್ರ್ನ ಪರಮಾಣು ರಚನಾ ಸಿದ್ಧಾಂತಕ್ಕೆ ಬೆಂಬಲ ಒದಗಿಸಿದವು. 1928ರಲ್ಲಿ ಬರ್ಲಿನ್ಗೆ ಬಂದ ಮೇಲೆ, ಯುದ್ದ ಕಾಲದಲ್ಲಿ ನಾಶವಾಗಿದ್ದ ಭೌತಶಾಸ್ತ್ರದ ವಿಭಾಗವನ್ನು ಪುನರುಜ್ಜೀವನಗೊಳಿಸುವ ಹೊಣೆ ಹಟ್ರ್ಸ್ ಮೇಲೆ ಬಿದ್ದಿತು. ಎಡೆಬಿಡದ ಪರಿಶ್ರಮದಿಂದ ಇದನ್ನು ಸುಸಜ್ಜಿತಗೊಳಿಸುವಲ್ಲಿ ಹಟ್ರ್ಸ್ ಯಶಸ್ವಿಯಾದನು. ಇಲ್ಲಿಯೇ ನಿಯಾನ್ನ ಸಮಸ್ಥಾನಿಗಳನ್ನು (Isotopes) ಧುಮ್ಮಿಕುವ ವಿಸರಣ (Cascading Diffusion) ವಿಧಾನದಿಂದ ಬೇರ್ಪಡಿಸಿದನು. ಹಟ್ರ್ಸ್ ಸ್ವತಂತ್ರವಾಗಿ ಹಾಗೂ, ಪ್ಲಾಂಕ್, ಕ್ಲಾಪರ್ಸ್ರವರೊಂದಿಗೆ ಎಲೆಕ್ಟ್ರಾನ್ ಹಾಗೂ ಪರಮಾಣುಗಳ ಸಂಘಟನೆಯಲ್ಲಾಗುವ ಚೈತನ್ಯದ ವರ್ಗಾಂತರವನ್ನು ಕುರಿತು, ಸಮಸ್ಥಾನಿಗಳನ್ನು ಕುರಿತು ಹಲವಾರು ಲೇಖನಗಳನ್ನು ಪ್ರಕಟಿಸಿದನು. ಹಟ್ರ್ಸ್ ಬರ್ಲಿನ್ನ ಅಕಾಡೆಮಿ ಆಫ್ ಸೈನ್ಸ್ನ ಗಟ್ಟಿಂಜೆನ್ ಅಕಾಡೆಮಿ ಆಫ್ ಸೈನ್ಸಸ್ ಸದಸ್ಯನಾಗಿದ್ದನು. ಸೋವಿಯತ್ ದೇಶದಲ್ಲಿರುವಾಗ ಅಕಾಡೆಮಿ ಆಫ್ ಸೈನ್ಸ್ನ ವಿದೇಶಿ ಸದಸ್ಯನಾಗಿದ್ದನು. ಜರ್ಮನಿಯ ಭೌತಶಾಸ್ತ್ರ ಸಮಾಜದ ಮಾಕ್ಸ್ ಪ್ಲಾಂಕ್ ಪದಕ ಪುರಸ್ಕೃತನಾದನು. 1925ರಲ್ಲಿ ಸಮಸ್ಥಾನಿಗಳು ಹಾಗೂ ಎಲೆಕ್ಟ್ರಾನ್ ಚೈತನ್ಯಗಳನ್ನು ಕುರಿತಾದ ಸಂಶೋಧನೆಗಳಿಗಾಗಿ ನೊಬೆಲ್ ಪ್ರಶಸ್ತಿ ಪಡೆದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಪೆರಿ, ಜೀನ್ ಬ್ಯಾಪ್ಟಿಸ್ಟ್ (1870-1942) 1926
Perrin , Jean Baptiste
ಫ್ರಾನ್ದ್-ಭೌತ ರಸಾಯನಶಾಸ್ತ್ರ- ಪರಮಾಣು ಅಸ್ತಿತ್ವವನ್ನು ಸಂದೇಹಕ್ಕೆಡೆಯಿಲ್ಲದಂತೆ ತೋರಿಸಿದಾತ.
ಪೆರಿನ್,ಪ್ಯಾರಿಸ್ ಲೈಯಾನ್ಗಳಲ್ಲಿ ವಿದ್ಯಾಭ್ಯಾಸ ಮಾಡಿ, 1910ರಲ್ಲಿ ಸೊರ್ಬೊನ್ನೆಯಲ್ಲಿ ಭೌತ ರಸಾಯನಶಾಸ್ತ್ರದ ಪ್ರಾಧ್ಯಾಪಕನಾಗಿದ್ದನು. 1941ರಲ್ಲಿ ಅಸಂಸಂಗಳಿಗೆ ಪಲಾಯನಗೈದನು. ಡಾಕ್ಟರೇಟ್ನ ಸಂಶೋಧನೆಯಲ್ಲಿರುವಾಗ ಪೆರಿನ್, ಕ್ಯಾಥೋಡ್ ಕಿರಣಗಳನ್ನು ಅಭ್ಯಸಿಸಿ ಅವು ಋಣಾತ್ಮಕ ಆವಿಷ್ಟ ಹೊಂದಿವೆಯೆಂದು ತೋರಿಸಿದನು. ಅವುಗಳ ಹಾಗೂ ಹಾಗೂ ದ್ರವ್ಯದ ಅಂದಾಜು ನೀಡಿದನು. ಪೆರಿನ್, ಕ್ಯಾಥೋಡ್ ಕಿರಣಗಳು ಅಲೆಗಳಲ್ಲವೆಂದು , ಅವು ಕಣಗಳೆಂದು ಸಂಶಯಾತೀತವಾಗಿ ಸಾಧಿಸಿದನು. ಜೆ.ಜೆ. ಥಾಮ್ಸನ್ ಪೆರಿನ್ನ ಪ್ರಯೋಗಗಳನ್ನು ಪರಿಷ್ಕರಿಸಿ ಈ ಕಣಗಳು ಎಲೆಕ್ಟ್ರಾನ್ಗಳೆಂದು ತೋರಿಸಿದನು. 1908ರಲ್ಲಿ ಪೆರಿನ್ ಕಾಂಬೋಡಿಯಾ ವೃಕ್ಷ ಗ್ಯಾಂಬೇಜ್ ರಾಳದಲ್ಲಿನ ಕಣ ವಿತರಣೆ ಹಾಗೂ ಚಲನೆಯನ್ನು ಬ್ರೌನಿಯನ್ ಚಲನೆಯ ಹಿನ್ನೆಲೆಯಲ್ಲಿ ವಿವರಿಸಿದನು. ಇದು ಐನ್ಸ್ಟೀನ್ ನೀಡಿದ ಸೈದ್ಧಾಂತಿಕ ವಿವರಗಳಿಗೆ ಬೆಂಬಲ ನೀಡಿತು. ಪೆರಿನ್, ಅವೋಗ್ಯಾಡ್ರೋ ಸಂಖ್ಯೆಯನ್ನು ಕರಾರುವಕ್ಕಾಗಿ ನಿರ್ಧರಿಸಿದನು. ಪರಮಾಣುಗಳ ಅಸ್ತಿತ್ವದ ಸಾಕ್ಷ್ಯ ಒದಗಿಸಿದ್ದಕ್ಕಾಗಿ ಪೆರೇನ್ 1926ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಅರ್ಥರ್, ಹೋಲಿ ಕಾಂಪ್ಟನ್ (1892--) -1927
Arthur, Holly Compton
ಜರ್ಮನಿ-ಭೌತಶಾಸ್ತ್ರ-ಎಲೆಕ್ಟ್ರಾನ್ಗಳ ಚೈತನ್ಯ ನಷ್ಟ ವಿವರಿಸಿದಾತ.
ಕಾಂಪ್ಟನ್ ತಂದೆ ವೋಸ್ಟರ್ನ ಡೀನ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕನಾಗಿದ್ದನು. 10 ಸೆಪ್ಟೆಂಬರ್ 1892 ರಂದು ಕಾಂಪ್ಟನ್ ಜನಿಸಿದನು.1913ರಲ್ಲಿ ವಿಜ್ಞಾನದಲ್ಲಿ ಪದವಿ ಗಳಿಸಿ, 1914ರಲ್ಲಿ ಪ್ರಿನ್ಸ್ಟನ್”ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಗಳಿಸಿ 1916ರಲ್ಲಿ ಡಾಕ್ಟರೇಟ್ ಗಳಿಸಿದನು. ಇದಾದ ನಂತರ ಮಿನ್ನೆಸೋಟಾದಲ್ಲಿ ಭೌತಶಾಸ್ತ್ರದ ಉಪನ್ಯಾಸಕನಾದನು 1919ರಲ್ಲಿ ವೆಸ್ಟಿಂಗ್ ಹೌಸ್ ಲ್ಯಾಂಪ್ ಕಂಪನಿ ಸೇರಿ, ಅಲ್ಲಿ ಸಂಶೋಧಕನಾಗಿ ವೃತ್ತಿ ಜೀವನ ಮುಂದುವರೆಸಿದನು. 1920ರಲ್ಲಿ ಸೇಂಟ್ ಲೂಯಿಯಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. 1923ರಲ್ಲಿ ಚಿಕಾಗೋ ವಿಶ್ವವಿದ್ಯಾಲಯಕ್ಕೆ ಹೋಗಿ ಪ್ರಾಧ್ಯಾಪಕನಾದನು. 1945ರಲ್ಲಿ ಸೇಂಟ್ ಲೂಯಿಗೆ ಮರಳಿ ಛಾನ್ಸೆಲರ್ನಾಗಿ ನೇಮಕಗೊಂಡಿದ್ದನು. 1954ರಲ್ಲಿ ಇಲ್ಲಿಂದ ನಿವೃತ್ತನಾಗಿ ಜೀವನದ ಕೊನೆಯತನಕ ವಾಷಿಂಗ್ಟನ್ ವಿಶ್ವವಿದ್ಯಾಲಯದ ಗೌರವ ಪ್ರಾಧ್ಯಾಪಕನಾಗಿದ್ದನು. ಕಾಂಪ್ಟನ್ ಪ್ರಿನ್ಸ್ಟನ್ನಲ್ಲಿ ತನ್ನ ಆರಂಭಿಕ ಸಂಶೋಧನಾ ಜೀವನ ಪ್ರಾರಂಭಿಸಿದಾಗ, ಭೂಮಿಯ ಆವರ್ತನೆಯನ್ನು ಪ್ರದರ್ಶಿಸುವ ವಿಧಾನ ರೂಪಿಸಿದನು. ಇದಾದ ಅಲ್ಪಾವಧಿಯಲ್ಲೇ ಕ್ಷ ಕಿರಣಗಳತ್ತ ತಿರುಗಿದನು. ಸ್ಪಟಿಕಗಳಿಂದ ಪ್ರತಿಫಲಿತಗೊಂಡ ಕ್ಷ ಕಿರಣಗಳ ತೀವ್ರತೆಯನ್ನು ಅಳೆದು, ಅದರ ಅಣುರಚನೆ ನಿರ್ಧರಿಸುವ ಸಿದ್ಧಾಂತವನ್ನು ಕಾಂಪ್ಟನ್ ಮಂಡಿಸಿದನು.
1918ರಲ್ಲಿ ಕ್ಷ ಕಿರಣಗಳ ಚದುರಿಕೆಯ ಅಧ್ಯಯನ ಪ್ರಾರಂಭಿಸಿದನು. ಇದನ್ನು ಕುರಿತಾದ ಪ್ರಯೋಗಗಳಿಂದ 1922ರಲ್ಲಿ ಮುಕ್ತ ಎಲೆಕ್ಟ್ರಾನ್ಗಳಿಗೆ ಸಂಘಟ್ಟಿಸಿ ಚದುರಿದ ಕ್ಷ ಕಿರಣದ ತರಂಗಾಂತರ (Wave Length) ದೀರ್ಘವಾಗುವುದು ತಿಳಿದು ಬಂದಿತು. ಇದರಿಂದ ಸಂಘಟನೆಯ ನಂತರ ಕ್ಷ ಕಿರಣಗಳಲ್ಲಿ ಮೊದಲಿಗಿಂತಲೂ ಅಲ್ಪ ಚೈತನ್ಯವಿರುವುದು ಖಚಿತವಾಯಿತು. ಈಗ ಇದನ್ನು ಕಾಂಪ್ಟನ್ ಪರಿಣಾಮವೆಂದು ಕರೆಯಲಾಗುತ್ತಿದೆ. ಕಾಂಪ್ಟನ್ ಸಿದ್ಧಾಂತ, ವೈದ್ಯುತ್ ಕಾಂತೀಯ ಅಲೆಗಳ ಕಣ ಸ್ವರೂಪಕ್ಕೆ ಸಾಕ್ಷ್ಯಗಳನ್ನು ಒದಗಿಸಿತು. ಮುಂದೆ ಸಿ. ಟಿ. ಅರ್ ವಿಲ್ಸನ್ ತಾನು ನಿರ್ಮಿಸಿದ ಮೇಘಕೋಠಿಯಲ್ಲಿ (Cloud Chamber) ಸಂಘಟ್ಟನೆಯಿಂದ ಹಿಂದಕ್ಕೆ ಸರಿಸಲ್ಪಟ್ಟ ಎಲೆಕ್ಟ್ರಾನ್ಗಳ ಜಾಡನ್ನು ಪಡೆದು ಕಾಂಪ್ಟನ್ ತೀರ್ಮಾನಗಳಿಗೆ ಸುಸ್ಪಷ್ಟವಾದ ಪುರಾವೆಗಳನ್ನು ಒದಗಿಸಿದನು. ಕಾಂಪ್ಟನ್ ಹಾಗೂ ಫ್ಲೆಕ್ಸೆನರ್ ಸಹಘಟನಾ ವಿಧಾನದಿಂದ ಕಾಂಪ್ಟನ್ ಪರಿಣಾಮಕ್ಕೆ ಪ್ರಾಯೋಗಿಕ ಸಾಕ್ಷ್ಯ ಒದಗಿಸಿದರು. ಜರ್ಮನಿಯ ವಿಜ್ಞಾನಿಗಳಾದ ಬೋಥೆ ಹಾಗೂ ಗೀಗರ್, ಸ್ವತಂತ್ರವಾಗಿ, ಇದೇ ಕಾಲಕ್ಕೆ ಇಂತಹದೇ ವಿಧಾನ ಅಭಿವೃದ್ದಿಗೊಳಿಸಿದರು. ಇವೆಲ್ಲ ಸಂಶೋಧನೆಗಳಿಗಾಗಿ ಕಾಂಪ್ಟನ್, ಟಿ.ಆರ್.ವಿಲ್ಸನ್ ನೊಂದಿಗೆ 1927ರ ನೊಬೆಲ್ ಪ್ರಶಸ್ತಿ ಪಡೆದನು. ಕಾಂಪ್ಟನ್, ಸಿ.ಎ¥sóï.ಹೆಗೆನ್ ಜೊತೆಗೂಡಿ ಕ್ಷ-ಕಿರಣಗಳ ಸಂಪೂರ್ಣ ಆಂತರಿಕ ಪ್ರತಿಫಲನ, ಹಾಗೂ ಸಂಪೂರ್ಣ ಧೃವೀಕರಣದ ವಿದ್ಯಾಮಾನಗಳ ಅಸ್ತಿತ್ವವನ್ನು ಪ್ರಯೋಗಗಳಿಂದ ತೋರಿಸಿದನು. ಇದರಿಂದ ಪರಮಾಣುವಿನಲ್ಲಿರುವ ಎಲೆಕ್ಟ್ರಾನ್ಗಳನ್ನು ಕರಾರುವಾಕ್ಕಾಗಿ ನಿರ್ಧರಿಸುವುದು ಸಾಧ್ಯವಾಯಿತು. ಕಾಂಪ್ಟನ್ ಹಾಗೂ ಡೋವನ್, ರೇಖಿತಫಲಕ (Grating) ಬಳಸಿ, ಕ್ಷ-ಕಿರಣಗಳ ತರಂಗಾಂತರ ನಿರ್ಧರಿಸಿದರು. ಇವುಗಳನ್ನು ಬಳಸಿ ಅವೋಗ್ಯಾಡ್ರೊ ಸಂಖ್ಯೆಯನ್ನು ನಿರ್ಧರಿಸಿದಾಗ ಎಲೆಕ್ಟ್ರಾನ್ಗಿರುವ ಆವೇಶದ ಪರಿಷ್ಕೃತ ಮೌಲ್ಯ ದಕ್ಕಿತು. 1930ರಿಂದ 1940ರ ಅವಧಿಯಲ್ಲಿ ಭೂಮಿಯ ವಿವಿಧ ಭಾಗಗಳಲ್ಲಿನ ವಿಶ್ವ ಕಿರಣಗಳ ತೀವ್ರತೆ ಹಾಗೂ ಸಾಂದ್ರತೆಯನ್ನು ನಿರ್ಧರಿಸುವ ಯೋಜನೆಯ ಮುಂದಾಳುವಾಗಿದ್ದನು.
1927ರಲ್ಲಿ ಜೆ. ಕ್ಲೇ ವಿಶ್ವ ಕಿರಣಗಳ ಸಾಂದ್ರತೆಯ ಮೇಲೆ ಅಕ್ಷಾಂಶಗಳ ಪರಿಣಾಮವಿರುವುದನ್ನು ಹೇಳಿದ್ದನು. ಕಾಂಪ್ಟಾನ್ ನೇತೃತ್ವದ ತಂಡದ ಸಂಶೋಧನೆಯಿಂದ ಇದು ಸರಿಯೆಂದು ಆದರೆ ಇದಕ್ಕೆ ಭೂಸ್ಥಾನಕ್ಕಿಂತಲೂ ಭೂಕಾಂತತ್ವವೇ ಪ್ರಮುಖ ನಿರ್ಧಾರಕ ಅಂಶವೆಂದು ತೀರ್ಮಾನಿಸಿದನು. ಇದರ ಆಧಾರದ ಮೇಲೆ ಭೂಕಾಂತತ್ವದ ತೀವ್ರತೆ ನಿರ್ಧರಿಸುವ ವಿಧಾನಗಳು ರೂಪುಗೊಂಡವು. ಕಾಂಪ್ಟನ್ ಹಲವಾರು ಪ್ರೌಢಲೇಖನಗಳನ್ನು ಖ್ಯಾತ ವೈಜ್ಞಾನಿಕ ಪತ್ರಿಕೆಗಳಲ್ಲಿ ಪ್ರಕಟಿಸಿದನು. ಅಸಂಸಂದ ಅಕಾಡೆಮಿ ಆಫ್ ಆಟ್ರ್ಸ್ ಅಂಡ್ ಸೈನ್ಸಸ್ನ ರುಮ್ಫೋರ್ಡ್ ಪದಕ 1927ರಲ್ಲಿ ಕಾಂಪ್ಟನ್ಗೆ ಪ್ರದಾನಿಸಲ್ಪಟ್ಟಿತು. 1928ರಲ್ಲಿ ರೇಡಿಯೋ ಲಾಜಿಕಲ್ ಸೊಸೈಟಿ ಆಫ್ ನಾರ್ಥ್ ಅಮೆರಿಕಾದ ಪದಕ, ಹ್ಯೂಗ್ಸ್ ಪದಕ 1940ರಲ್ಲಿ ಫ್ರಾಂಕ್ಲಿನ್ ಪದಕಗಳ ಗೌರವ ಕಾಂಪ್ಟನ್ನ್ನು ಅರಸಿ ಬಂದವು. ಹಲವಾರು ಗೌರವ, ಪದಕ, ಪ್ರಾಧ್ಯಾಪಕ ಹುದ್ದೆಗಳು, ತಂಡಗಳ ನೇತೃತ್ವದ ಜವಾಬ್ದಾರಿ ಕಾಂಪ್ಟನ್ ಜೀವನ ತುಂಬಿ ತುಳುಕಿದವು. 1941ರಲ್ಲಿ ಪರಮಾಣು ಚೈತನ್ಯವನ್ನು ಯುದ್ದಾಸ್ತ್ರವಾಗಿ ಬಳಸುವ ಸಾಧ್ಯತೆಯ ಅಧ್ಯಯನಕ್ಕಾಗಿ ಅಸಂಸಂ, ಸ್ಥಾಪಿಸಿದ ಸಮಿತಿಯ ಕಾರ್ಯದರ್ಶಿಯಾಗಿ ಕಾಂಪ್ಟನ್ ನೇಮಕಗೊಂಡನು. ಇದರ ಪರಿಣಾಮವಾಗಿ ಎನ್ರಿಕೋ ಫರ್ಮಿ, ಎಲ್ ಝಿಲಾರ್ಡ್, ಇ. ಪಿ. ವಿಗ್ನರ್ ಹಾಗೂ ಇತರರ ನೆರವಿನಲ್ಲಿ ಮೊಟ್ಟ ಮೊದಲ ನಿಯಂತ್ರಿತ ಯುರೇನಿಯಂ ವಿದಳನ (Fission) ಸ್ಥಾವರ ನಿರ್ಮಾಣಗೊಂಡಿತು. ಮುಂದೆ ಇದು ವಾಷಿಂಗ್ಟನ್ ಹ್ಯಾನ್ಪೆÇೀರ್ಡ್ನಲ್ಲಿ ಬೃಹತ್ ಪ್ಲುಟೋನಿಯಂ ಉತ್ಪಾದಿಸುವ ಸ್ಥಾವರದಲ್ಲಿ ಕೊನೆಗೊಂಡಿತು. ಇದರಿಂದ ಹಿರೋಷಿಮಾ, ನಾಗಸಾಕಿಗಳ ಮೇಲೆ ಪ್ರಯೋಗಿಸಿದ ಬೈಜಿಕಾಸ್ತ್ರ (Nuclear Weapon) ತಯಾರಾಯಿತು. ಪರಮಾಣು ಅಸ್ತ್ರ ಬಳಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದವರಲ್ಲಿ ಕಾಂಪ್ಟನ್ ಪ್ರಮುಖನು. ಬಿಡುವಿನ ವೇಳೆಯನ್ನು ಟೆನಿಸ್ ಆಟ ಸಂಗೀತ, ಛಾಯಾಗ್ರಾಹಣದಲ್ಲಿ ಕಳೆಯುತ್ತಿದ್ದ ಕಾಂಪ್ಟನ್ 15 ಮಾರ್ಚ್ 1962ರಂದು ನಿಧನನಾದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ವಿಲ್ಸನ್, ಚಾಲ್ರ್ಸ್ ಥಾಮಸ್ ರೀಸ್ (1869-1959) 1927
Wilson , Charles Thomson Rees
ಬ್ರಿಟನ್-ಭೌತಶಾಸ್ತ್ರ- ವಿಲ್ಸನ್ ಮೇಘ ಕೋಠಿಯ (Cloud Chamber) ಉಪಜ್ಞೆಕಾರ.
ವಿಲ್ಸನ್ ನಾಲ್ಕು ವರ್ಷದ ಹಸುಳೆಯಿರುವಾಗ ಆತನ ತಂದೆ ತಾಯಿಗಳು ಸ್ಕಾಟ್ಲೆಂಡ್ ತೊರೆದು ಮ್ಯಾಂಚೆಸ್ಟರ್ನಲ್ಲಿ ನೆಲೆಸಿದರು. ಇಲ್ಲಿ ಜೀವಶಾಸ್ತ್ರದ ವಿದ್ಯಾರ್ಥಿಯಾಗಿ ವಿಲ್ಸನ್ ಕಾಲೇಜು ಶಿಕ್ಷಣಕ್ಕೆ ಸೇರಿದನು. ನಂತರ ಕೇಂಬ್ರಿಜ್ಗೆ ಹೋಗಿ ಭೌತಶಾಸ್ತ್ರದಲ್ಲಿ ಉತ್ತಮ ಸಾಧನೆ ಮಾಡಿ ಬ್ರಾಡ್’ಫೋರ್ಡ್ನಲ್ಲಿ ಬೋಧಕನಾದನು. ನಾಲ್ಕು ವರ್ಷ ಇಲ್ಲಿದ್ದ ವಿಲ್ಸನ್ 1896ರಲ್ಲಿ ಕೇಂಬ್ರಿಜ್ ಸೇರಿದನು. 1894ರಲ್ಲಿ ವಿಲ್ಸನ್, ಬೆನ್ನೆವಿಸ್ ಪರ್ವತದ ತುದಿಯಿಂದ ಮೇಘಗಳ ಅದ್ಬುತ ದೃಶ್ಯ ಕಂಡನು. ಆದ್ರ್ರ ಗಾಳಿಯನ್ನು ಒಮ್ಮೆಲೆ ವಿಕಸಿಸುವಂತೆ ಮಾಡಿ, ಇಂತಹುದೇ ಪರಿಣಾಮಗಳನ್ನು ಕೃತಕವಾಗಿ ಪ್ರಯೋಗಾಲಯದಲ್ಲಿ ತರಲು ಯತ್ನಿಸಿದನು. ಅನಿಲ ಹಿಗ್ಗಿದಾಗ ಅದರ ತಾಪಮಾನ ಕುಸಿದು, ಸಣ್ಣ ಹನಿಗಳಾಗಿ ಲಭ್ಯ ಮೇಲ್ಮೈಗಳಲ್ಲಿ ಸಾಂದ್ರೀಕರಣಗೊಳ್ಳುತ್ತದೆ. ಇದಕ್ಕೆ ಯಾವುದೇ ಅಣು ಬೀಜಗಳು ಲಭ್ಯವಾದರೂ ಸಾಕಾಗುತ್ತದೆ. ಸೂಕ್ಷ್ಮ ಧೂಳು ಇಲ್ಲವಾದರೆ ಆವಿಷ್ಟಗೊಂಡಿರುವ ಕಣ ಬೀಜದಂತೆ ವರ್ತಿಸಿ ಸಾಂದ್ರೀಕರಣಕ್ಕೆ ನೆರವಾಗುತ್ತವೆಯೆಂದು ತೋರಿಸಿದನು. 1911ರಲ್ಲಿ ಈ ತತ್ತ್ವದ ಆಧಾರದ ಮೇಲೆ ವಿಲ್ಸನ್ ಸಾಧನವೊಂದನ್ನು ನಿರ್ಮಿಸಿದನು. ಈ ಸಾಧನದಲ್ಲಿ ಅಯಾನ್ಗಳನ್ನು ಸಣ್ಣ ಹನಿಗಳ ಜಾಡಿನ ರೂಪದಲ್ಲಿ ಪಡೆಯಲು ಸಾಧ್ಯವಾಯಿತು. ಈ ಸಾಧನ ಬಳಸಿ, ವಿಕಿರಣಪಟುತ್ವ ಧಾತುಗಳ ಆಲ್ಫಾ , ಬೀಟಾ ಶೈಥಿಲ್ಯವನ್ನು ಗುರುತಿಸುವುದು ಸುಲಭವಾಯಿತು. 1920ರಿಂದ 1930ರ ದಶಕದಲ್ಲಿ ಕಣ ಭೌತಶಾಸ್ತ್ರಜ್ಞರು ತಮ್ಮ ಪ್ರಯೋಗಗಳಿಗೆ ವ್ಯಾಪಕವಾಗಿ ವಿಲ್ಸನ್ ರೂಪಿಸಿದ ಮೇಘ ಕೋಠಿಯ ಮೊರೆ ಹೊಕ್ಕರು. 1895ರಲ್ಲಿ ಬೆನ್ ನೆವಿಸ್ ಪರ್ವತದ ತುದಿಯಲ್ಲಿರುವಾಗಲೇ, ಬಿರುಗಾಳಿಯೆದ್ದು, ವಿಲ್ಸನ್ ಸನಿಹ ಸಿಡಿಲೊಂದು ಬಡಿಯಿತು. ಇದರಿಂದ ಪ್ರೇರಿತನಾದ ವಿಲ್ಸನ್ ಒಣ ಹಾಗೂ ಆದ್ರ್ರ ಗಾಳಿಯ ವೈದ್ಯುತ್ ವಾಹಕತೆ ಅಳೆಯತೊಡಗಿದನು. ಇದಕ್ಕಾಗಿ ನಡೆಸಿದ ವ್ಯಾಪಕ ಪರೀಕ್ಷೆಗಳಿಂದ ಭೂಮಿಯಾಚೆಯಿಂದ ವೈದ್ಯುತ್ ಆವಿಷ್ಟಿತ ಕಿರಣಗಳು ಬರುತ್ತಿರಬಹುದೆಂದು ಹೇಳಿದನು. 1911ರಲ್ಲಿ ವಿ.ಎಫ್. ಹೆಸ್. ಇದರ ಸಮೂಲಾಗ್ರ ಅಧ್ಯಯನ ಮಾಡಿ ವಿಶ್ವ ಕಿರಣಗಳ ಅಸ್ತಿತ್ವವನ್ನು ಘೋಷಿಸಿದನು. ನಿವೃತ್ತಿಯ ನಂತರ ಸ್ಕಾಟ್ಲ್ಯಾಂಡ್ನಲ್ಲಿ ನೆಲೆಸಿದ ವಿಲ್ಸನ್, ತನ್ನ 86ನೇ ವಯಸ್ಸಿನಲ್ಲೂ ಸಿಡಿಲು, ಮಿಂಚುಗಳ ಅಧ್ಯಯನಕ್ಕಾಗಿ ಪರ್ವತಗಳನ್ನೇರುತ್ತಿದ್ದನು. 87ನೇ ವಯಸ್ಸಿನಲ್ಲಿ ಈ ಬಗ್ಗೆ ಲೇಖನ ಪ್ರಕಟಿಸಿದ್ದನು. 1927ರಲ್ಲಿ ವಿಲ್ಸನ್ ಹಾಗೂ ಆರ್ಥರ್ ಹೋಲಿ ಕಾಂಪ್ಟನ್ ನೊಬೆಲ್ ಪ್ರಶಸ್ತಿ ಪಡೆದರು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಓವೆನ್, ವಿಲಿಯಂ ರಿಚರ್ಡ್ಸನ್ (1879-1959) 1928
Owen , Williams Richardson
ಇಂಗ್ಲೆಂಡ್-ಭೌತಶಾಸ್ತ್ರ-ವಿದ್ಯುತ್ ವಿಸರ್ಜನೆ ನಿಯಮ ನೀಡಿದಾತ.
ವಿಲಿಯಂ 26 ಏಪ್ರಿಲ್ 1879ರಂದು ಜನಿಸಿದನು. ಬೌಟ್ಲಿ ಗ್ರ್ಯಾಮರ್ ಶಾಲೆಯಿಂದ ಪ್ರೌಢಶಿಕ್ಷಣ ಮುಗಿಸಿ, 1879ರಲ್ಲಿ, ವಿದ್ಯಾರ್ಥಿ ವೇತನ ಪಡೆದು ಟ್ರಿನಿಟಿ ಕಾಲೇಜನ್ನು ಸೇರಿದನು. ಕೇಂಬ್ರಿಜ್ ಹಾಗೂ ಲಂಡನ್ ವಿಶ್ವವಿದ್ಯಾಲಯಗಳಿಂದ ಅತ್ಯುತ್ತಮ ಶ್ರೇಣಿಯಲ್ಲಿ ಪದವಿ ಗಳಿಸಿದನು. 1900ರಲ್ಲಿ ಪದವಿ ಮುಗಿಸಿದ ತಕ್ಷಣವೇ, ಕ್ಯಾವೆಂಡಿಷ್ ಪ್ರಯೋಗಾಲಯ ಸೇರಿ ಬಿಸಿ ಕಾಯಗಳಿಂದ ಹೊಮ್ಮುವ ಅಧ್ಯಯನ ಪ್ರಾರಂಭಿಸಿದನು. 1902ರಲ್ಲಿ ಟ್ರಿನಿಟಿ ಕಾಲೇಜಿನ ಫೆಲೋ ಆಗಿ ಅಯ್ಕೆ ಹೊಂದಿದನು. 25 ನವೆಂಬರ್ 1901ರಲ್ಲಿ ಕೇಂಬ್ರಿಜ್ನ ಫಿಲಾಸಫಿಕಲ್ ಸೊಸೈಟಿಯಲ್ಲಿ ಕಾದ ಲೋಹಗಳಿಂದ ಹೊರ ಹೊಮ್ಮುವ ವಿದ್ಯುತ್ ನಿಯಮ ನೀಡಿದನು. ಇದನ್ನು ಮುಂದೆ ಹಲವಾರು ಜನರು ಪ್ರಯೋಗಗಳಿಂದ ಸರಿಯೆಂದು ತೋರಿಸಿದರು. ಇದಕ್ಕಾಗಿ ವಿಲಿಯಂ 1928ರ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. 1906 ರವರೆಗೆ ಇದೇ ವಿಷಯವನ್ನು ಕುರಿತಾಗಿ ವಿಲಿಯಂ ಇನ್ನು ಹೆಚ್ಚಿನ ಪ್ರಯೋಗಗಳನ್ನು ನಡೆಸಿದನು. ಈ ಕಾಲದಲ್ಲಿ ವಿಲಿಯಂ ಅಸಂಸಂಗಳ ಪ್ರಿನ್ಸ್’ಟನ್ ವಿಶ್ವವಿದ್ಯಾಲಯದಲ್ಲಿದ್ದನು. 1913ರ ತನಕ ಇಲ್ಲಿಯೇ ಇದ್ದ ವಿಲಿಯಂ ಈ ಕಾಲದಲ್ಲಿ ಔಷ್ಣೀಯ ವಿಸರ್ಜನೆ , ದ್ಯುತಿ ವೈದ್ಯುತ್ ಪರಿಣಾಮ ಗೈರೋಕಾಂತೀಯ ಪರಿಣಾಮಗಳ ಬಗೆಗೆ ಸಂಶೋಧನೆ ಮಾಡಿದನು. 1911ರಲ್ಲಿ ಅಮೆರಿಕನ್ ಫಿಲಾಸಫಿಕಲ್ ಸೊಸೈಟಿಯ ಸದಸ್ಯನಾಗಿ, 1913ರಲ್ಲಿ ಲಂಡನ್ನ ರಾಯಲ್ ಸೊಸೈಟಿಯ ಫೆಲೋ ಆಗಿ ನೇಮಕಗೊಂಡನು. 1914ರಲ್ಲಿ ತಾಯ್ನಾಡಾದ ಇಂಗ್ಲೆಂಡ್ಗೆ ಮರಳಿ ಲಂಡನ್ ವಿಶ್ವವಿದ್ಯಾಲಯದ ಕಿಂಗ್ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾದನು. 1920ರಲ್ಲಿ ರಾಯಲ್ ಸೊಸೈಟಿಯ ಹ್ಯೂಗ್ಸ್ ಪದಕ ದಕ್ಕಿತು. 1939ರಲ್ಲಿ ನೈಟ್ ಪದವಿ ಪ್ರಧಾನವಾಯಿತು. 1914 ಎಂದ ರಾಸಾಯನಿಕ ಕ್ರಿಯಾ ಮೂಲವಾದ ಎಲೆಕ್ಟ್ರಾನ್ ಸಿದ್ಧಾಂತ, ಕ್ವಾಂಟಂ ಅಧ್ಯಯನ ನಡೆಸಿದನು. ಎಲೆಕ್ಟ್ರಾನ್ ಸಿದ್ಧಾಂತ, ಕ್ವಾಂಟಂ ಸಿದ್ಧಾಂತ ಅಣ್ವಯಿಕ ಜಲಜನಕ ರೋಹಿತ, ಮೆದು ಕ್ಷ ಕಿರಣಗಳ ಕುರಿತಾಗಿ ವಿಲಿಯಂ ವಿಶೇಷ ಆಸಕ್ತಿ ಹೊಂದಿದ್ದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಬ್ರೊಗ್ಲಿ, ಲೂಯಿ-ವಿಕ್ಟರ್ ಪೀರೆ ರೇಮಂಡ್ ಡ್ಯೂಕ್ ಡೇ ಪ್ರಿನ್ಸ್ (1892-1987)-1929
Broglie , Louis-Victor Pierre Raymond , duc
ಫ್ರಾನ್ಸ್-ಭೌತಶಾಸ್ತ್ರ - ಕಣಗಳ ತರಂಗ ಸ್ವರೂಪವನ್ನು ಅನಾವರಣಗಳಿಸಿದಾತ.
ಬ್ರೊಗ್ಲಿ , ಫ್ರಾನ್ಸ್ನ ಖ್ಯಾತ ಪೀಡ್ಮಾಂಟೆಸಿ ಕುಟುಂಬದವನು. 1790ರಲ್ಲಿ ಫ್ರಾನ್ಸಿನ ದೊರೆಯಾಗಿದ್ದ ಹದಿನಾಲ್ಕನೇ ಲೂಯಿ ಬ್ರೊಗ್ಲಿಯ ಪೂರ್ವಜರಿಗೆ, ವಂಶಪಾರಂಪರ್ಯವಾದ ಡ್ಯೂಕ್ ಬಿರುದನ್ನು ನೀಡಿ ಗೌರವಿಸಿದ್ದನು. 1960ರಲ್ಲಿ ಭೌತಶಾಸ್ತ್ರಜ್ಞನೂ . ಲೂಯಿಯ ಹಿರಿಯಣ್ಣನೂ ಆಗಿದ್ದ ಮಾರಿಸ್ ತೀರಿಕೊಂಡ ನಂತರ , ಡ್ಯೂಕ್ ಬಿರುದು ಲೂಯಿಗೆ ದಕ್ಕಿತು. 1756 ಎಂದ 1763 ರವರೆಗೆ ಜರುಗಿದ ಯುದ್ದದಲ್ಲಿ ಆಸ್ಟ್ರಿಯನ್ ದೊರೆಗಳಿಗೆ ನೀಡಿದ ನೆರವಿಗಾಗಿ ಬ್ರೊಗ್ಲಿ ಕುಟುಂಬ ಪ್ರಿಝ್ ಎನ್ನುವ ಪಾರಂಪರಿಕ ಬಿರುದನ್ನು ಪಡೆಯಿತು. ಬ್ರೊಗ್ಲಿ ಮೂಲತ: ವೈಜ್ಞಾನಿಕ ಶಿಕ್ಷಣಾರ್ಥಿಯಲ್ಲ. ಸೊರೆಬೊನ್ನೆ ಕಾಲೇಜಿನಿಂದ ಚರಿತ್ರೆಯಲ್ಲಿ ಪದವಿ ಪಡೆದ ಬ್ರೊಗ್ಲಿ ಮೊದಲನೆ ಜಾಗತಿಕ ಯುದ್ದದ ಸಮಯದಲ್ಲಿ ಐಫೆಲ್ ಗೋಪುರದಲ್ಲಿ ರೇಡಿಯೋ ನಿಲಯದಲ್ಲಿ ಸೇವೆ ಸಲ್ಲಿಸುತ್ತಿದ್ದನು. ಇದರ ಪರಿಣಾಮವಾಗಿ ಅವನು ವಿಜ್ಞಾನದತ್ತ ಹೊರಳುವಂತಾಯಿತು. ಮುಂದುವರೆಸಿದ ವಿಧ್ಯಾಭ್ಯಾಸದ ಫಲವಾಗಿ ಸೊರೆಬೊನ್ನೆ ಕಾಲೇಜಿನಿಂದ ಬ್ರೊಗ್ಲಿ 1924ರಲ್ಲಿ ವಿಜ್ಞಾನದಲ್ಲಿ ಪಿ.ಎಚ್.ಡಿ. ಪಡೆದನು. 1924ರಿಂದ ಹೊಸದಾಗಿ ಸ್ಥಾಪಿತವಾಗಿದ್ದ ಹೆನ್ರಿ ಪ್ವಾನ್ಕ್ಯಾರೇ ಸಂಸ್ಥೆಯಲ್ಲಿ ಸೈದಾಂತಿಕ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. ಬ್ರೊಗ್ಲಿ ಕ್ವಾಂಟಂ ಬಲವಿಜ್ಞಾನದ ದಿಕ್ಕನ್ನು ಬದಲಿಸಿದ ರೀತಿಯನ್ನು ಅರಿಯಬೇಕೆಂದರೆ, ಆವರೆಗೆ, ಕ್ವಾಂಟಂ ಬಲವಿಜ್ಞಾನದಲ್ಲಿದ್ದ ಪರಿಕಲ್ಪನೆಗಳನ್ನು ಒಂದು ನೋಟ ಹರಿಸಬೇಕು. 1900ರಲ್ಲಿ ಮ್ಯಾಕ್ಸ್ ಪ್ಲಾಂಕ್, ಕ್ವಾಂಟಕ್ಕೆ ಬಲವಿಜ್ಞಾನಕ್ಕೆ ನಾಂದಿ ಹಾಡಿದನೆನ್ನಬಹುದು. ದ್ರವ್ಯರಾಶಿ ಹಾಗೂ ಚೈತನ್ಯಗಳ ಮಧ್ಯದ ಸಂಬಂಧ ಹಾಗೂ ಆಧುನಿಕ ಚಿಂತನೆಗಳು 1905ರಲ್ಲಿ ಆಲ್ಬರ್ಟ್ ಐನ್ಸ್ಟೀನ್ ಹಾಕಿದ ಭದ್ರ ಬುನಾದಿಯ ಮೇಲೆ ಬೆಳೆಯಲಾರಂಭಿಸಿದವು. ಇದರ ವiುಂದುವರಿಕೆಯಾಗಿ ವೀನ್ ವೈದ್ಯುತ್ ಕಾಂತೀಯ ನಿಯಮವನ್ನು ರೂಪಿಸಿದ್ದನು. ಈ ನಿಯಮದಂತೆ ಬೆಳಕು ತರಂಗ ರೂಪಿಯಾದುದು. ಆದರೆ ಹಲವಾರು ವೀಕ್ಷಿತ ವಿದ್ಯಾಮಾನಗಳು ಬೆಳಕನ್ನು ಕಣರೂಪಿಯಂತೆ ತೋರಿಸಿದ್ದವು. ಈ ನಿಟ್ಟಿನಲ್ಲಿ ಬ್ರೊಗ್ಲಿ ಬೆಳಕು ಕ್ವಾಂಟಂ ಅಲೆಯಂತೆ ವರ್ತಿಸುವ ಕಣರೂಪಿ ಏಕಿರಬಾರದೆಂದು ಚಿಂತಿಸಿದನು. ಇದರಿಂದ ಬೆಳಕು ಅಲೆ ಹಾಗೂ ಕಣರೂಪಿ ಎಂದೂ ಆಗುತ್ತದೆ. ಎಲೆಕ್ಟ್ರಾನ್ನಂತಹ ಕಣಗಳು ಹಲವಾರು ದ್ರವ್ಯರಾಶಿಯ ಅಲೆಗಳಂತೆ ಗುಂಪಿನಲ್ಲಿ ವೇಗಗಳಿಸುತ್ತವೆ. ಅಂತಹ ತರಂಗಾಂತರದಿಂದ ಕಣ ಅಲೆಯಂತೆ ತೋರುತ್ತದೆಯೆಂಬ ಬ್ರೊಗ್ಲಿಯ ಕ್ರಾಂತಿಕಾರಕ ನೋಟ 1924ರಲ್ಲಿ ಅವನು ಡಾಕ್ಟರೇಟ್ಗಾಗಿ ಮಂಡಿಸಿದ ಸಂಪ್ರಂಬಂಧದಲ್ಲಿ ವಿವರಿಸಲ್ಪಟ್ಟಿದ್ದಿತು. 1925ರಲ್ಲಿ ಅನ್ನಾಲೆಸ್ ಡೆ ಫಿಸಿಕ್ ಪತ್ರಿಕೆಯಲ್ಲಿ, ನೂರು ಪುಟಗಳಿಗಿಂತಲೂ, ಹೆಚ್ಚಿನ ಲೇಖನವಾಗಿ ಇದು ಪ್ರಕಟಗೊಂಡಿತು. ಸ್ಫಟಿಕ ಜಾಲಕದ (Crystal Lattice) ಅಣುಗಳನ್ನು ವಿವರ್ತನ (Diffraction) ಪಟ್ಟಿಯಂತೆ ಬಳಸಿ ಬೆಳಕನ್ನು ವ್ಯತಿಕರಣಗೊಳಿಸಿ (Interference)ನಡೆಸಿದ ಪ್ರಯೋಗ ಫಲಿತಾಂಶಗಳಿಂದ ಬ್ರೊಗ್ಲಿ ವಿವರಣೆಯಂತೆ, ಬೆಳಕು ಕ್ವಾಂಟಂ ಅಲೆಯಂತೆ ಗುಂಪಾಗಿ ವರ್ತಿಸುವುವೆಂದು ಖಚಿತವಾಯಿತು. 1927ರಲ್ಲಿ ನಿಧಾನಗತಿಯ ಎಲೆಕ್ಟ್ರಾನ್ಗಳನ್ನು ಬಳಸಿ, ಡೇವಿಸನ್ ಹಾಗೂ ಜರ್ಮರ್, ಕ್ಷಿಪ್ರಗತಿಯ ಎಲೆಕ್ಟ್ರಾನ್ಗಳನ್ನು ಬಳಸಿ ಜಿ.ಪಿ. ಥಾಮ್ಸನ್ ನಡೆಸಿದ ಪ್ರಯೋಗಗಳು ಬ್ರೊಗ್ಲಿಯ ಹೊಸ ವಿವರಣೆಗೆ ಸದೃಡ ಬೆಂಬಲ ಒದಗಿಸಿದವು. ಷ್ರೋಡಿಂಜರ್ ಬೆಳಕಿನ ಅಲೆ-ಕಣರೂಪದ ದ್ವಿಮುಖ ವರ್ತನೆಯನ್ನು ಆಧಾರವಾಗಿರಿಸಿಕೊಂಡು ಕ್ವಾಂಟಂ ಬಲವಿಜ್ಞಾನಕ್ಕೆ ಹೊಸ ರೂಪ ನೀಡಿದನು. ಇದರಿಂದಾಗಿ ಕ್ವಾಂಟಂ ಬಲವಿಜ್ಞಾನ ಹಲವಾರು ಸಂಭವನೀಯತೆಗಳ ಮೇಲೆ ನಿಂತು ಅದರ ನಿರ್ಧಾರಾತ್ಮಕತೆಯೇ ಚರ್ಚೆಗೀಡಾಯಿತು. 1929ರಲ್ಲಿ ಬ್ರೊಗ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ರಾಮನ್, ಸರ್ ಚಂದ್ರಶೇಖರ ವೆಂಕಟ (1888-1970) 1930
Raman , Sir Chandrasekhara Venkata
ಭಾರತ-ಭೌತಶಾಸ್ತ್ರ-ರಾಮನ್ ಪರಿಣಾಮ ಅನಾವರಣಗೊಳಿಸಿದಾತ.
ರಾಮನ್, ಮದ್ರಾಸ್ ವಿಶ್ವವಿದ್ಯಾಲಯದಿಂದ ವಿಜ್ಞಾನದಲ್ಲಿ ಅತ್ಯುತ್ತಮ ದರ್ಜೆಯಲ್ಲಿ ತೇರ್ಗಡೆಯಾದರೂ, ಆಗಿನ ಕಾಲದಲ್ಲಿ ಭಾರತದಲ್ಲಿ ಭೌತವಿಜ್ಞಾನಿಯಾಗಿ ಜೀವನ ಸಾಗಿಸುವುದು ಸಾಧ್ಯವಿರಲಿಲ್ಲ. ಆದ್ದರಿಂದ ಹತ್ತು ವರ್ಷಗಳ ಕಾಲ ಭಾರತೀಯ ಆಡಳಿತ ಸೇವೆಯ ವಿಭಾಗದಲ್ಲಿ ಲೆಕ್ಕಿಗನಾಗಿ ಸೇವೆ ಸಲ್ಲಿಸಿದನು. ಈಕಾಲದಲ್ಲಿ ಬಿಡುವಿನ ವೇಳೆಯಲ್ಲಿ ಭೌತಶಾಸ್ತ್ರದ ಅಧ್ಯಯನ ನಡೆಸುತ್ತಿದ್ದನು. ಶಬ್ದ ಹಾಗೂ ಬೆಳಕಿನ ವಕ್ರೀಭವನದ (Refraction) ಬಗೆಗೆ ರಾಮನ್ ಪ್ರಕಟಿಸಿದ ಲೇಖನಗಳು , ಕಲ್ಕತ್ತದಲ್ಲಿ ಪ್ರಾಧ್ಯಾಪಕ ಹುದ್ದೆ ಗಳಿಸಿಕೊಡುವಲ್ಲಿ ನೆರವಾದವು. 1917 ರಿಂದ 1933ರವರೆಗೆ ಇಲ್ಲಿದ್ದ ರಾಮನ್ 1925ರಲ್ಲಿ ಬೆಳಕಿನ ಚದುರಿಕೆಯ ಪರಿಣಾಮ ಗುರುತಿಸಿದನು. 1926ರಲ್ಲಿ ಇಂಡಿಯನ್ ಜರ್ನಲ್ ಆಫ್ ಫಿಸಿಕ್ಸ್ ಪ್ರಾರಂಭಿಸಿದನು. ಭಾರತೀಯ ವಿಜ್ಞಾನ ಕಾಂಗ್ರೆಸ್ನ ಅಧ್ಯಕ್ಷನಾದನು. 1930ರಲ್ಲಿ ನೊಬೆಲ್ ಪ್ರಶಸ್ತಿ ಸ್ವೀಕರಿಸಿದ ಏಷ್ಯಾ ಖಂಡದ ಮೊದಲಿಗನೆಂದು ಕೀರ್ತಿಗೆ ಪಾತ್ರನಾದನು. 1921ರಲ್ಲಿ ಮೆಡಿಟರೇನಿಯನ್ ಸಮುದ್ರದಲ್ಲಿ ಯಾನ ಮಾಡುತ್ತಿದ್ದಾಗ ಆಕಾಶ ಹಾಗು ಸಾಗರ ನೀಲಿಯಾಗಿರುವುದನ್ನು ರಾಮನ್ ಗಮನಿಸಿದನು. ರಾಲೆ, ಬೆಳಕಿನ ಚದುರಿಕೆಗೆ ವಾತಾವರಣದಲ್ಲಿ ತೇಲಾಡುವ ಕಣಗಳೇ ಕಾರಣಗಳೆಂದು ಹೇಳಿದ್ದನು. ಇದು ಸಮರ್ಪಕವಲ್ಲವೆಂದು ರಾಮನ್ಗೆ ಭಾಸವಾಯಿತು. ಇದಕ್ಕೆ ಬದಲಾಗಿ ಬೆಳಕಿನ ಚದುರಿಕೆಗೆ ನೀರಿನ ಕಣಗಳೇ ಕಾರಣಗಳೆಂದು ಹೇಳಿದನು. ಘನ, ದ್ರವ ಅಥವಾ ಅನಿಲದ ಮೇಲೆ ಬೆಳಕು ಬಿದ್ದಾಗ ,ಅವುಗಳ ಅಣುಗಳು ಚೈತನ್ಯ ಹೀರಿ ಅಥವಾ ಸೇರಿಸಿ, ಫೋಟಾನ್ಗಳನ್ನು ವಿಮುಖಗೊಳಿಸುತ್ತವೆ. ಇದೇ ಬೆಳಕಿನ ಚದುರಿಕೆಯ ಮೂಲ ಕಾರಣ ರಾಮನ್ನ ಈ ಅನಾವರಣ ಕ್ವಾಂಟಂ ಬಲಗತಿಶಾಸ್ತ್ರಕ್ಕೆ ಸಾಕ್ಷ್ಯಗಳನ್ನೊದಗಿಸಿತಲ್ಲದೆ ರಾಮನ್ ರೋಹಿತದರ್ಶನಕ್ಕೆ ಕಾರಣವಾಯಿತು. -ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು