ಹಾಫ್ , ಜಾಕೊಬಸ್, ಹೆನ್ರಿಕಸ್ ವಾನ್ ಟಿ (1852-1911)
Hoff , Jacobus Henrikus Von t 1901
ಡೆನ್ಮಾರ್ಕ್-ಭೌತ ರಸಾಯನಶಾಸ್ತ್ರ- ತ್ರಿದಿಶಾ ರಸಾಯನಶಾಸ್ತ್ರದ (StereoChemistry) ಸ್ಥಾಪಕ.
ಹಾಫ್ ಶ್ರೀಮಂತ ವೈದ್ಯ ದಂಪತಿಗಳ ಮಗ. ಹದಿನೇಳನೇ ವಯಸ್ಸಿನಲ್ಲಿದ್ದಾಗ ತಾನು ರಸಾಯನಶಾಸ್ತ್ರ ಓದುವದಾಗಿ ಹೇಳಿದನು. ಇದಕ್ಕೆ ತಂದೆ ತಾಯಿಗಳಿಂದ ಪೂರಕ ಪ್ರೇರಕ ಬೆಂಬಲ ದೊರೆಯಲಿಲ್ಲ. ಹಾಫ್, ತಂದೆ ತಾಯಿಗಳ ವಿರೋಧ ಲೆಕ್ಕಿಸದೆ ಡೆಲ್ಫ್ಟಾ ಪಾಲಿಟೆಕ್ನಿಕ್ ಸೇರಿ ಡಿಪ್ಲೊಮಾ ಗಳಿಸಿದನು. ಮುಂದೆ ಲೀಡೆನ್, ಬಾನ್, ಪ್ಯಾರಿಸ್ನಲ್ಲಿ ರಸಾಯನಶಾಸ್ತ್ರದ ವಿದ್ಯಾಭ್ಯಾಸ ಮುಂದುವರೆಸಿದನು. 22ನೇ ವಯಸ್ಸಿನಲ್ಲಿ ತಾಯ್ನಾಡಿಗೆ ಹಿಂದಿರುಗಿದನು. 23ನೇ ವಯಸ್ಸಿನಲ್ಲಿ ಹಾಫ್ ಶಾಲಾ ಉಪಾಧ್ಯಾಯನ ಕೆಲಸಕ್ಕೆ ಸೀರಲು ಯತ್ನಿಸಿದನು. ಅವನನ್ನು ಹಗಲುಗನಸಿನವನೆಂದು ತಿರಸ್ಕರಿಸಲಾಯಿತು. 1876ರಲ್ಲಿ ಪಶು ಚಿಕಿತ್ಸಕನ ಸಹಾಯಕನಾಗಿ ಕೆಲಸ ಮಾಡಿದನು. 1896ರಲ್ಲಿ ಅ್ಯಮಸ್ಟರ್ಡ್ಯಾಂನಲ್ಲಿ ಪ್ರಾಧ್ಯಾಪಕನಾದ ಹಾಫ್ ನಂತರ ಬರ್ಲಿನ್ಗೆ ಹೋಗಿ ನೆಲೆಸಿದನು. ಈ ಕಾಲದಲ್ಲಿಯೇ ಹಲವಾರು ಪ್ರಯೋಗಗಲ ಫಲಿತಾಂಶವಾಗಿ ಹಾಫ್ ಪ್ರಕಟಿಸಿದ ಲೇಖನ ತ್ರಿದಿಶಾ ರಸಾಯನಶಾಸ್ತ್ರದ ಉಗಮಕ್ಕೆ ಕಾರಣವಾಯಿತು. ಬಯೋಟ್, ಬಹುತೇಕ ಸಾವಯವ ಸಂಯುಕ್ತಗಳು ದೃಗ್ಕ್ರಿಯಾಶೀಲವಾಗಿರುವುದೆಂದೂ, ಧೃವೀಕೃತ (Polarised) ಬೆಳಕಿನ ಸಮತಲವನ್ನು ತಿರುಗಿಸುವುವೆಂದೂ ತಿಳಿಸಿದ್ದನು. ಪಾಸ್ತರ್ ಇದನ್ನು ಸ್ಪಟಿಕೀಯ ಘನಗಳಿಗೂ ವಿಸ್ತರಿಸಿದನು. ಕೆಕುಲೆ ಸಾವಯವ ರಾಸಾಯನಿಕಗಳ ಅಣುಗಳ ಜೋಡಣೆಯನ್ನು ವಿವರಿಸಿದ್ದನು. ಈ ಜೋಡಣೆಯ ಆಧಾರದ ಮೇಲೆ ಬೇರೆ ಬೇರೆ ಬಗೆಯ ರಾಸಾಯನಿಕಗಳು ದಕ್ಕುವುದೆಂದು ಹೇಳಿದ್ದನು. ಹಾಫ್ ಇದರತ್ತ ಗಮನಹರಿಸಿ ಈ ರಾಸಾಯನಿಕಗಳಲ್ಲಿ ಒಂದು ಧೃವೀಕೃತ ಬೆಳಕನ್ನು ಎಡಗಡೆಗೂ ಮತ್ತೊಂದನ್ನು ಬಲಗಡೆಗೂ ತಿರುಗುಸುವುದೆಂದು ತಿಳಿಸಿದನು. ಇದು ಅಣು ರಚನೆಯ ಸಾಮಾನ್ಯ ಸಿದ್ಧಾಂತದ ಉಗಮಕ್ಕೆ ಕಾರಣವಾಯಿತು. ಜೆ.ಎ.ಬೆಲ್ ಸ್ವತಂತ್ರವಾಗಿ ಇದೇ ತೀರ್ಮಾನಕ್ಕೆ ಬಂದಿದ್ದನು. ಆದರೆ ಸಿದ್ಧಾಂತ ರೂಪದಲ್ಲಿ ತಿಳಿಸಿರಲಿಲ್ಲ. ಹಾಫ್ ಮತ್ತು ಬೆಲ್ ಪ್ಯಾರಿಸ್ನ ವುರ್ಟ್ ಪ್ರಯೋಗಾಲಯದಲ್ಲಿ ಹಲವಾರು ಬೇರಿ ಪರಸ್ಪರ ಭೇಟಿಯಾಗಿದ್ದರು. 1901ರಲ್ಲಿ ಹಾಫ್ ರಸಾಯನಶಾಸ್ತ್ರದ ಮೊಟ್ಟ ಮೊದಲ ನೊಬೆಲ್ ಪ್ರಶಸ್ತಿ ಪಡೆದನು.
ಹರ್ಮಾನ್, ಫಿಷರ್ ಎಮಿಲ್ (1852-1919 )
Hermann , Emil Fisher (CHE.) 1902
ಜರ್ಮನಿ-ಸಾವಯವ ರಸಾಯನಶಾಸ್ತ್ರ-ನೈಸರ್ಗಿಕ ಔತ್ಪನ್ನಿಕ ರಸಾಯನಶಾಸ್ತ್ರದ ಪರಿಣಿತ.
ಫಿಷರ್, ಕೊಲೊನ್ ಜಿಲ್ಲೆಯ ಯುಷ್ಕೆರ್ಕೆನ್ ಪಟ್ಟಣದಲ್ಲಿ 9 ಅಕ್ಟೋಬರ್ 1852ರಂದು ಜನಿಸಿದನು. ಫಿಷರ್ನ ತಂದೆ ದಿನಸಿ ಅಂಗಡಿ ಇಟ್ಟಿದ್ದನು. ಮಗ ವ್ಯಾಪಾರಿಯಾದರೂ ಅಗಿರಲಿ, ರಸಾಯನಶಾಸ್ತ್ರಜ್ಞನೇ ಆಗಲಿ ಎಂಬ ಮುಂದಾಲೋಚನೆಯಿಂದ ಉಣ್ಣೆ ಮಗ್ಗ ಹಾಗೂ ಪೇಯ ತಯಾರಿಕೆಯ ಕಾರ್ಖಾನೆಯನ್ನು ಖರೀದಿಸಿದ್ದನು. ಆದರೆ ಓದಿನಲ್ಲಿ ತುಂಬಾ ಜಾಣನಾಗಿದ್ದಫಿಷರ್ ಸಣ್ಣ ವಯಸ್ಸಿನಲ್ಲೇ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿದನಾದರೂ , ಕಾಲೇಜಿಗೆ ಸೇರುವಷ್ಟು ವಯಸ್ಸು ಅವನಿಗಿರಲಿಲ್ಲ, ಹೀಗಾಗಿ ಅವನು ತನ್ನ ಚಿಕ್ಕಪ್ಪನೊಂದಿಗೆ ಮರ ಮುಟ್ಟುಗಳ ವ್ಯಾಪಾರಕ್ಕಿಳಿದನು. ಸ್ವಂತ ಖರ್ಚಿನಲ್ಲಿ ಪ್ರಯೋಗಾಲಯ ತೆಗೆದು , ಬಂಧು ಬಾಂಧವರಿಂದ ವ್ಯಾಪಾರಕ್ಕೆ ನಾಲಾಯಕ್ಕಾದವನೆಂದು ನಿಂದನೆಯ ಸುರಿ ಮಳೆ ಪಡೆದನು. ಇದರಿಂದ ಬೇಸತ್ತ ಫಿಷರ್ ಕಾಲೇಜು ಶಿಕ್ಷಣ ಪಡೆಯಲು ನಿರ್ಧರಿಸಿದನು. 1887ರಲ್ಲಿ ಖ್ಯಾತ ರಸಾಯನಶಾಸ್ತ್ರಜ್ಞ ಕೆಕುಲೆಯಡಿಯಲ್ಲಿ ಫಿಷರ್ , ರಸಾಯನಶಾಸ್ತ್ರ ,ಸಸ್ಯಶಾಸ್ತ್ರ ಕಲಿತನು. 1875ರಲ್ಲಿ ಸ್ಟ್ರಾಸ್ಬರ್ಗ್ಗೆ ಹೋಗಿ ಬೇಯರ್’ನ ಶಿಷ್ಯನಾದನು. ಬೇಯರ್ ಮ್ಯೂನಿಕ್ಗೆ ಹೋದಾಗಲೂಫಿಷರ್ ಅವನನ್ನು ಹಿಂಬಾಲಿಸಿದನು. ಈ ವೇಳೆಗಾಗಲೇಫಿಷರ್ ಫಿûನೈಲ್ ಹೈಡ್ರೋಝೈನ್ ಅನಾವರಣಗೊಳಿಸಿದ್ದನು. ಸತತ ಪರಿಶ್ರಮ ದೃಢ ನಿರ್ಧಾರದಿಂದ ಉತ್ತಮ ರಸಾಯನ ತಜ್ಞನಾಗಿದ್ದ ಫಿûಷರ್’ಗೆ ಸತತ ಧೂಮಪಾನ, ಮಧ್ಯ ಸೇವನೆ ಚಟಗಳಾಗಿದ್ದವು. ಇವುಗಳಿಂದ ಆಗಾಗ್ಗೆ ಆರೋಗ್ಯ ಹದಗೆಟ್ಟು ಚೇತರಿಸಿಕೊಳ್ಳಲು ಹೆಣಗುತ್ತಿದ್ದನು. ಹೀಗಿದ್ದರೂ ಸಹ,ಫಿಷರ್ ಸಕ್ಕರೆ, ಫ್ಯೂರಿನ್, ಬಣ್ಣ, ಇಂಡೋಲ್ ಹೀಗೆ ನಾನಾ ಬಗೆಯ ರಾಸಾಯನಿಕಗಳ ಮೇಲೆ ಸಂಶೋಧನೆ ಮಾಡುವುದನ್ನು ನಿಲ್ಲಿಸಿರಲಿಲ್ಲ. 1885ರಲ್ಲಿ ವುರ್ಝ್ಬರ್ಗ್ಗೆ ಪ್ರಾಧ್ಯಾಪಕನಾಗಿ ಹೋದನು , 1892ರಲ್ಲಿ ಬರ್ಲಿನ್ನಲ್ಲಿ ಹಾ¥sóïಮನ್ನಿಂದ ತೆರನಾಗಿದ್ದ ಸ್ಥಾನವನ್ನು ಅಲಂಕರಿಸಿದನು. ಈ ಸ್ಥಾನ ಸಂಶೋಧನೆಗಿಂತಲೂ, ಆಡಳಿತದಲ್ಲಿ ಹೆಚ್ಚು ಗಮನ ಹರಿಸುವಂತಹದಾಗಿದ್ದುದರಿಂದ ಫಿಷರ್ ರೋಸಿಹೋದನು. ನೈಸರ್ಗಿಕ ರಾಸಾಯನಿಕಗಳಿಂದ, ಕಾರ್ಬೋ ಹೈಡ್ರೇಟ್ಸ್, ಸಕ್ಕರೆ, ಗ್ಲುಕೋಸ್ಗಳ ಟ್ಯಾನಿಸ್, ಡೆಪಿಸೈಡ್ಗಳ ಸಂಶ್ಲೇಷಣೆ ಮತ್ತು ಅಧ್ಯಯನ ಫಿûಷರ್ನ ಅನನ್ಯ ಕೊಡುಗೆಗಳು. ಇವು ಜೀವ ರಸಾಯನಶಾಸ್ತ್ರದಲ್ಲಿ ಬಹು ಪ್ರಮುಖ ಪಾತ್ರ ವಹಿಸುತ್ತವೆ. 1899ರಲ್ಲಿ ಪೆಪ್ಟಿನ್,ಪ್ರೋಟೀನ್ಗಳಲ್ಲಿ, ಅವನು ಅಧಿಕೃತವಾಣಿಯಾದನು. 1882ರಿಂದ 1906ರವರೆಗೆ ಫಿಷರ್ ನಡೆಸಿದ ಸಂಶೋಧನೆಗಳು ವಿಶ್ವ ಖ್ಯಾತಿ ತಂದವು. ಪ್ಯೂರಿನ್ ಹಾಗೂ ಸಕ್ಕರೆಗಳ ಮೇಲೆ ತರಕಾರಿಗಳಲ್ಲಿ ಬೆಳೆಗಳಲ್ಲಿ, ಪ್ರಾಣಿಗಳ ಮೂತ್ರಗಳಲ್ಲಿರುವ ಅಡೆನೈನ್, ಕ್ಸಾಂಥೈನ್, ಗುವ್ನೈನ್ಗಳಂತಹ ರಾಸಯನಿಕಗಳ ಮೂಲ ಒಂದೇ ಆಗಿದ್ದು, ಒಂದರಿಂದ ಇನ್ನೊಂದನ್ನು ಪಡೆಯಬಹುದೆಂದು ಸಾಧಿಸಿದನು. ಒಂದು ವರ್ಷದ ಹಿಂದಷ್ಟೇ ಸ್ಥಾಪಿಸಲ್ಪಟ್ಟ ನೊಬೆಲ್ ಪ್ರಶಸ್ತಿಯನ್ನು 1902ರಲ್ಲಿ ಪಡೆದು, ಅದನ್ನು ಪಡೆದು ಎರಡನೆಯವನಾಗಿಫಿಷರ್ ಇತಿಹಾಸದಲ್ಲಿ ದಾಖಲಾಗಿದ್ದಾನೆ. ಚಹಾ, ಕಾಫಿû, ಕೊಕೊಗಳಲ್ಲಿರುವ ಟ್ಯಾನಿನ್, ಕೆಫಿನ್ ಹಾಗೂ ಕೋಕಾಗಳನ್ನು ಅಧ್ಯಯನ ನಡೆಸಿದ ಮೊದಲಿಗ ಫಿಷರ್.
ಅರೇನಿಯಸ್, ಸ್ವಾಂತೆ (ಆಗಸ್ಟ್) (1859-1927) - 1903
Arrthenius , Svante (August)
ಸ್ವೀಡನ್-ಭೌತರಸಾಯನಶಾಸ್ತ್ರಜ್ಞ. ಆಯೋನಿಕ ವಿಘಟನೆಯ ಸಿದ್ಧಾಂತ ಮಾಡಿಸಿದಾತ.
ರೈತನ ಮಗನಾದ ಅರೇನಿಯಸ್, ಉಪ್ಸಾಲ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಅಧ್ಯಯನ ಮಾಡಿದನಲ್ಲದೆ, ನಂತರ ಸ್ಟಾಕ್ಹೋಂಗೆ ಉನ್ನತ ಪದವಿಗಾಗಿ ತೆರಳಿದನು. ಸ್ಟಾಕ್ಹೋಂನಲ್ಲಿ ಅರೇನಿಯಸ್ ಎಲೆಕ್ಟೋಲೈಟ್ ದ್ರಾವಣಗಳ ಸ್ವಭಾವ ಅರಿಯಲು ಉನ್ಮುಖನಾದನು. ಹಲವು ವರ್ಷಗಳ ಪರಿಶೋಧನೆಯ ನಂತರ ಎಲೆಕ್ಟೋಲೈಟ್ ದ್ರಾವಣಗಳು ವೈದ್ಯುತ್ ಪ್ರವಾಹ ಹರಿಸುವ ಕಾರಣ ನೀಡಿದನು. ಎಲೆಕ್ಟೋಲೈಟ್ ದ್ರಾವಣಗಳು ಧನ ಹಾಗೂ ಋಣ ಆವಿಷ್ಟಿತ ಕಣಗಳನ್ನು ಹೊಂದಿರುವುದರಿಂದ ವೈದುತ್ ಪ್ರವಾಹ ಹರಿಯುವುದೆಂದು ಸೋದಾಹರಣವಾಗಿ ನಿರೂಪಿಸಿದನು. 1880ರ ವೇಳೆಗೆ ಈ ಸಿದ್ಧಾಂತದ ಬಗೆಗೆ ಸಾಕಷ್ಟು ಆಧಾರಗಳನ್ನು ಅರೇನಿಯಸ್ ಒದಗಿಸಿದರೂ ಸ್ವೀಡನ್ನ ವೈಜ್ಞಾನಿಕ ಸಮುದಾಯದಲ್ಲಿ ತಕ್ಷಣ ಇವು ಅಂಗೀಕೃತವಾಗಲಿಲ್ಲ. ಮುಂದೆ ಲವಣಗಳು. ಘನ ಸ್ಥಿತಿಯಲ್ಲೂ ಆವಿಷ್ಟಿತ ಕಣಗಳಿಂದಾಗಿರುವುದೆಂದು ತಿಳಿಸಿದನು. ಅರೇನಿಯಸ್ನ ಈ ಸಾಧನೆಯನ್ನು ಗುರುತಿಸಿ 1903ರಲ್ಲಿ ರಸಾಯನಶಾಸ್ತ್ರದಲ್ಲಿನ ನೊಬೆಲ್ ಪ್ರಶಸ್ತಿ ನೀಡಲಾಯಿತು. ಅರೇನಿಯಸ್ನ ಆಸಕ್ತ ರಂಗಗಳು ಹಲವು. ಭೌತಶಾಸ್ತ್ರ, ರೋಗರೋಧಶಾಸ್ತ್ರ, ವಿಶ್ವಶಾಸ್ತ್ರ ಅವನ ನೆಚ್ಚಿನ ಅಧ್ಯಯನದ ವಿಷಯಗಳಾಗಿದ್ದವು. ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೆಡ್ ಪ್ರಮಾಣ ಹೆಚ್ಚಾದಾಗ, ವಾತಾವರಣ ಹೆಚ್ಚಿನ ಶಾಖಗಳಿಸುವ ಹಸಿರು ಮನೆ ಪರಿಣಾಮವನ್ನು ಗುರುತಿಸಿದ ಮೊದಲಿಗ ಅರೇನಿಯಸ್, ‘ಅರೇನಿಯಸ್ ಸಮಿಕರಣ’ ದ ಮೂಲ ಕತೃವೂ ಈತನೇ
ರಾಮ್ಸೆ, ಸರ್ ವಿಲಿಯಂ (1852-1916) 1904
Ramsay , Sir William
ಬ್ರಿಟನ್-ರಸಾಯನಶಾಸ್ತ್ರ-ಆದರ್ಶ (Nobel )ಅನಿಲಗಳನ್ನು ಅನಾವರಣಗೊಳಿಸಿದಾತ.
ರಾಮ್ಸೆ ಗ್ಲಾಸ್ಗೋದಲ್ಲಿ ರಸಾಯನಶಾಸ್ತ್ರ ಓದಿ ,ಹೈಡೆಲ್ಬರ್ಗ್ನಲ್ಲಿ ಬುನ್ಸೆನ್ ಕೆಳಗೆ ಕೆಲಸ ಮಾಡಿದನು. 1880ರಲ್ಲಿ ಬ್ರಿಸ್ಟಲ್ನಲ್ಲಿ ಅನಿಲಗಳ ಸಾಂದ್ರತೆ ನಿರ್ಧರಿಸಲು ಪ್ರಾರಂಭಿಸಿದನು. 1884ರಲ್ಲಿ ಲಂಡನ್ಗೆ ಹೋಗಿ ನೆಲೆಸಿದ ರಾಮ್ಸೆ ತನ್ನ ಸಂಶೋಧನೆಗಳನ್ನು ಮುಂದುವರಿಸಿದನು. ರಾಮ್ಸೆ ಗಾಳಿಯಲ್ಲಿರುವ ಸಾರಜನಕ, ಪ್ರಯೋಗಾಲಯದಲ್ಲಿ ಸಿದ್ಧಗೊಳಿಸಿದುದಕ್ಕಿಂತಲೂ ಶೇಕಡಾ 0.5ಕ್ಕೂ ಹೆಚ್ಚುತೂಕ ಹೊಂದಿರುವುದೆಂದು ತೋರಿಸಿ ,ಗಾಳಿಯಲ್ಲಿ ನಮಗೆ ಅಜ್ಞಾತವಾಗಿರುವ ಬೇರೆ ಯಾವುದೇ ಅನಿಲ ಇರುವುದರಿಂದ ಹೀಗಾಗುತ್ತಿರಬಹುದೆಂದು ತರ್ಕಿಸಿದನು. ಈ ಅನಿಲವನ್ನು ಹುಡುಕಲೇಬೇಕೆಂದು ದೃಢ ನಿರ್ಧಾರ ತಳೆದನು. ಒಣ ಗಾಳಿಯಲ್ಲಿ ಆಮ್ಲಜನಕ ತೆಗೆದ ರಾಮ್ಸೆ , ಬಿಸಿಗೊಳಿಸಿದ ಮೆಗ್ನೇಷಿಯಂ, ಮೇಲೆ ಹಾಯಿಸಿದಾಗ ಅದು ಸಾರಜನಕವನ್ನು ಹೀರಿ ಮೆಗ್ನೀಷಿಯಂ ನೈಟ್ರೇಟ್ಗೆ ಬದಲಾಯಿತು. ಆಗ ಸಾಂದ್ರವಾದ, ಜಡ ಅನಿಲ ಉಳಿಯಿತು. ಇದನ್ನು ರ್ಯಾಮ್ಸೆ ಆರ್ಗಾನ್ ಎಂದು ಹೆಸರಿಸಿದನು. ಇದು ವಾತಾವರಣದಲ್ಲಿ ಶೇಕಡಾ 1 ಕ್ಕಿಂತಲೂ ಅಲ್ಪ ಪ್ರಮಾಣದಲ್ಲಿದೆ. ಇದು ಬೇರೆಲ್ಲಿ ಇರಬಹುದೆಂದು ಹುಡುಕಲು ಯತ್ನಿಸಿದ ರಾಮ್ಸೆ, ಕ್ಲೆವೈಟ್ ಖನಿಜದಲ್ಲಿ ಹೊಸದೊಂದು ಧಾತುವನ್ನು ಗುರುತಿಸಿದನು. ಕ್ರೂಕ್ಸ್ ಇದರ್ ರೋಹಿತದ ಅಧ್ಯಯನದಿಂದಅದು ಹೀಲಿಯಂ ಎಂದು ತೋರಿಸಿದನು. ಇದನ್ನು ಮೊದಲಿಗೆ ಸೂರ್ಯನಲ್ಲಿ ಮಾತ್ರ ಇದೆಯೆಂದು ನಂಬಲಾಗಿದ್ದಿತು. ರ್ಯಾಮ್ಸೆಯ ಮುಂದುವರಿದ ಹುಡುಕಾಟದಲ್ಲಿ ಕ್ರಿಪ್ಟಾನ್, ಕ್ಸೆನಾನ್ ಹಾಗೂ ನಿಯಾನ್ ಲಭ್ಯವಾದವು. ಈ ಐದು ಹೊಸ ಅನಿಲಗಳನ್ನು ರ್ಯಾಮ್ಸೆ ಶೂನ್ಯ ಸಂಯೋಗ ಸಾಮಥ್ರ್ಯದ ಜಡ ಅನಿಲಗಳೆಂದು ಕರೆದನು. 1910ರಲ್ಲಿ ಆರನೇ ಜಡ ಅನಿಲ ರಾಡಾನ್ ಪತ್ತೆ ಹಚ್ಚಿದನು. ಇದು ವಿಕಿರಣ ಶೈಥಿಲ್ಯ ಹೊಂದಿದ ರೇಡಿಯಂನೊಂದಿಗೆ ಹೀಲಿಯಂ ಪ್ರತಿಕ್ರಿಯೆ ಹೊಂದಿದಾಗ ರೂಪುಗೊಳ್ಳುತ್ತದೆ. ಆರ್ಗಾನ್ ಹೊರತು ಉಳಿದವುಗಳೆಲ್ಲ ಬಹು ಅಪರೂಪದವು. 1962ರಲ್ಲಿ ಬಾರ್ಟ್ಲೆಟ್ ಕ್ಸೆನಾನ್, ಕ್ರಿಪ್ಟಾನ್ಗಳಲ್ಲಿ ಅತ್ಯಲ್ಪ ಕ್ರಿಯಾಶೀಲತೆ ಇದೆಯೆಂದು ತೋರಿಸಿದನು. ಈ ಅನಿಲಗಳು ರಾಸಾಯನಿಕ ಬಂಧಗಳನ್ನು ಅರ್ಥ ಮಾಡಿಕೊಳ್ಳಲು ನೆರವಾದವು. ಇವೆಲ್ಲವುಗಳಿಗೂ ವಿಶಿಷ್ಟವಾದ ರೋಹಿತವಿದೆ. ಇದಕ್ಕೆ ರ್ಯಾಡಾನ್ ಮಾತ್ರ ಅಪವಾದ. ಜಡ ವಾತಾವರಣ ಬೇಕಾದ ಸಂದರ್ಭಗಳಲ್ಲಿ ಇವು ನೆರವಾಗುತ್ತವೆ. ಹೀಲಿಯಂ ಅತ್ಯಲ್ಪ ಕುದಿ ಬಿಂದು -230 ಡಿಗ್ರಿ ಸೆಲ್ಸಿಯಸ್ ಹೊಂದಿದ್ದು ಅತಿಶೀತಲ ಸ್ಥಿತಿ ನಿರ್ಮಿಸಲು ಬಳಕೆಯಾಗುತ್ತದೆ. ಭೂಮಿಯಲ್ಲಿ ಅಪರೂಪವೆನಿಸಿದರೂ, ಈ ವಿಶ್ವದಲ್ಲಿ ಜಲಜನಕದ ನಂತರ,ಅತಿ ವಿಪುಲವಾಗಿರುವ ಧಾತುವೆಂದರೆ ಹೀಲಿಯಂ. ಇದು ಜಗತ್ತಿನ ದ್ರವ್ಯರಾಶಿಯಲ್ಲಿ ಶೇಕಡ 23ರಷ್ಟಿದೆ. ಆವರ್ತ ಕೋಷ್ಟಕದಲ್ಲಿನ ಒಂದು ಸಮೂಹವನ್ನೇ ಸಂಪೂರ್ಣವಾಗಿ ಪತ್ತೆ ಹಚ್ಚಿದ ಏಕೈಕ ವ್ಯಕ್ತಿ ರಾಮ್ಸೆ ಇಂತಹ ಸಾಧನೆ ಇತಿಹಾಸದಲ್ಲಿ ಎಂದೂ ಘಟಿಸಿಲ್ಲ. 1904ರಲ್ಲಿ ರಾಮ್ಸೆ ನೊಬೆಲ್ ಪ್ರಶಸ್ತಿ ಪಡೆದನು.
ಜೊಹಾನ್, ಫ್ರೆಡರಿಕ್ ವಿಲ್ಹೆಲ್ಮ್ ಅಡಾಲ್ಫ್ ವಾನ್ ಬೇಯರ್ (1835-1917)-1905
Johann , Freidrich Wilhelm
ಜರ್ಮನಿ -ರಸಾಯನಶಾಸ್ತ್ರ-ಸಾವಯವ ರಸಾಯನಶಾಸ್ತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದಾತ.
ಜೊಹಾನ್ 31 ಅಕ್ಟೋಬರ್ 1835ರಂದು ಬರ್ಲಿನ್ನಲ್ಲಿ ಜನಿಸಿದನು. ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಗಣಿತ ಹಾಗೂ ಭೌತಶಾಸ್ತ್ರದ ಪದವಿ ಗಳಿಸಿದ ಜೊಹಾನ್ ನಂತರ ಹೈಡೆಲ್ಬರ್ಗ್ನಲ್ಲಿ ಬುನ್ಸೆನ್ ಮಾರ್ಗದರ್ಶನದಲ್ಲಿ ರಸಾಯನಶಾಸ್ತ್ರವನ್ನು ಕಲಿತನು. ಆಗಸ್ಟ್ ಕೆಕುಲೆಯ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ ಜೊಹಾನ್ 1858ರಲ್ಲಿ ಡಾಕ್ಟರೇಟ್ ಗಳಿಸಿದನು. 1860ರಲ್ಲಿ ಬರ್ಲಿನ್ ಟ್ರೇಡ್ ಅಕಾಡೆಮಿಯಲ್ಲಿ ಉಪನ್ಯಾಸಕನಾದನು. 1871ರಲ್ಲಿ ಸ್ಟ್ರಾರ್ಸ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದನು. 1875ರಲ್ಲಿ ಮ್ಯೂನಿಕ್ ವಿಶ್ವವಿದ್ಯಾಲಯದಲ್ಲಿ ಲೀಬಿಖ್ನಿಂದ ತೆರನಾದ ಪ್ರಾಧ್ಯಾಪಕ ಹುದ್ದೆ ವಹಿಸಿಕೊಂಡನು. ಜೊಹಾನ್ ಸಸ್ಯಗಳ ಇಂಡಿಗೋ ವರ್ಣ ಮತ್ತು ಥ್ಯಾಲಿನ್ ವರ್ಣಗಳನ್ನು ಅನಾವರಣಗೊಳಿಸಿದನು. ನೈಟ್ರೋ ಸಂಯುಕ್ತಗಳು, ಪಾಲಿಅಸಿಟಿಲಿನ್ ಆಕ್ಸೋಲಿಯಂ ಲವಣ, ಯೂರಿಕ್ ಆಮ್ಲದ ವ್ಯುತ್ಪನ್ನಗಳ ಅಧ್ಯಯನದಲ್ಲಿ ಪರಿಶ್ರಮಿಸಿದನು. ಬಾರಿಬ್ಯುಟ್ರೇಟ್ಗಳ ಮೂಲ ಸಂಯುಕ್ತವಾದ ಬಾರಿಬ್ಯೂಟರಿಕ್ ಆಮ್ಲವನ್ನು 1864ರಲ್ಲಿ ಅನಾವರಣಗೊಳಿಸಿದನು. 1863ರಲ್ಲಿ ಇಂಡೋಲ್ನ್ನು ಸಂಶ್ಲೇಷಿಸಿ ಅದರ ರಾಸಾಯನಿಕ ಸ್ವರೂಪವನ್ನು ವಿವರಿಸಿದನು. ರಾಸಾಯನಿಕ ತ್ರಿವಳಿ ಬಂಧ, ಇಂಗಾಲದ ಉಂಗುರಗಳ ಸಿದ್ಧಾಂತ ನೀಡಿದರು. ಲಿಯೋ ಬೇಕ್ಲ್ಯಾಂಡ್ ಬೇಕಲೈಟ್ನ್ನು ಅನಾವರಣಗೊಳಿಸಿಸುವ ಮೊದಲೇ 1872ರಲ್ಲಿ ಫಿನಾಲ್ ಮತ್ತು ಫಾರ್ಮಾಲ್ಡಿಹೈಡ್ನ್ನು ಕುರಿತಾಗಿ ಪ್ರಯೋಗಗಳನ್ನು ನಡೆಸಿದ್ದನು. ಸಾವಯವ ರಸಾಯನ ಶಾಸ್ತ್ರದಲ್ಲಿನ ಗಮನಾರ್ಹ ಕೊಡುಗೆಗಾಗಿ 1905ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮ್ವಾಸಾ, (ಫರ್ಡಿನ್ಯಾಂಡ್ ಫ್ರೆಡರಿಕ್) ಹೆನ್ರಿ (1852-1907)-1906
Moissan , ( Ferdinand Frederic) Henri
ಫ್ರಾನ್ಸ್-ನಿರವಯವ ರಸಾಯನಶಾಸ್ತ್ರ- ಫ್ಲೂರಿನ್ ಪ್ರತ್ಯೇಕಿಸಿದಾತ-ಅಧಿಕ ತಾಪಮಾನದ ರಸಾಯನಶಾಸ್ತ್ರದ ಮೂಂಚೂಣಿಗ.
ಕಡು ಬಡತನದಲ್ಲಿ ಜನಿಸಿದ ಮ್ವಾಸಾಗೆ ವಿದ್ಯಾಭ್ಯಾಸ ಗಗನ ಕುಸುಮವಾಗಿದ್ದಿತು. ಮದುವೆಯಾದ ಮೇಲೆ, ಉದಾರಿಯಾದ ಮಾವನಿಂದಾಗಿ ಮ್ವಾಸಾ ಕನಸುಗಳು ನನಸಾಗತೊಡಗಿದವು, ರಸಾಯನಶಾಸ್ತ್ರದಲ್ಲಿ ಪದವಿ ಪದೆದ ಮ್ವಾಸಾ ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕನಾದನು. ಫ್ಲೂರಿನ್ನನ್ನು ಪ್ರತ್ಯೇಕಿಸಲು ಡೇವಿಯನ್ನು ಒಳಗೊಂಡಂತೆ ಹಲವಾರು ಜನ ಯತ್ನಿಸಿದ್ದರು. ಫ್ಲೂರಿನ್ ತೀವ್ರ ಪ್ರತಿಕ್ರಿಯಾಕಾರಿಯಾಗಿದ್ದು, ಅದನ್ನು ಸಂಗ್ರಹಿಸುವ ಪಾತ್ರೆಯೊಂದಿಗೆ ಪ್ರತಿಕ್ರಿಯಿಸುತ್ತಿತ್ತು. ಇದರಿಂದಾಗಿ ಹಲವಾರು ಅವಘಡಗಳು ಸಂಭವಿಸಿದ್ದವು. 1886ರಲ್ಲಿ ಮ್ವಾಸಾ ಪೊಇಟ್ಯಾಷಿಯಂ ಫ್ಲೊರೈಡ್ ದ್ರಾವಣವನ್ನು 50 ಡಿಗ್ರಿ ಸೆಲ್ಫಿಯಸ್ನಲ್ಲಿ ವಿದ್ಯುದ್ವಿಭಜನೆಗೆ (Electrolysis) ಪ್ಲಾಟಿನಂ ಹಾಗೂ ಕ್ಯಾಲ್ಸಿಯಂ ಮಿಶ್ರ ಧಾತುವಿನ ಪಾತ್ರೆಯಲ್ಲಿ ಪ್ರತ್ಯೇಕಿಸಿದ ಫ್ಲೂರಿನ್ನನ್ನು ಸಂಗ್ರಹಿಸಿದನು. ಫ್ಲೂರಿನ್ ಅತ್ಯಂತ ಕ್ರಿಯಾಶೀಲ ಧಾತುವೆಂದು ಖ್ಯಾತವಾಗಿದೆ. ಮ್ವಾಸಾ ಶುದ್ದ ಬೋರೋನ್ ಪಡೆದ ಮೊದಲಿಗ. ಕೃತಕವಾಗಿ ವಜ್ರ ತಯಾರಿಸುವ ವಿಧಾನ ಕಂಡು ಹಿಡಿದಾತ. ಅಧಿಕ ತಾಪಮಾನ ರಸಾಯನಶಾಸ್ತ್ರದಲ್ಲಿ ಕುತೂಹಲ ಹೊಂದಿದ್ದ ಮ್ವಾಸಾ, ಇಂಗಾಲದ ಚಾಪ (Arc) ಬಳಸಿ 3000 ಸೆಂ. ಗಿಂತಲೂ ಅಧಿಕ ತಾಪಮಾನದ ಕುಲುಮೆ ನಿರ್ಮಿಸಿದನು. ಮ್ವಾಸಾ ಕೃತಕ ವಜ್ರ , ಪಚ್ಚೆ, ವೈಡೂರ್ಯ , ಬೋರೈಡ್, ಕಾರ್ಬೈಡ್ ಸಿಲಿಸ್ಶೆಡ್ಗಳನ್ನು ಪಡೆದನು. ಆಗಿನ ಕಾಲಕ್ಕೆ ಅಷ್ಟೊಂದು ಪರಿಚಿತವಲ್ಲದ ಲೋಹಗಳನ್ನು ಸಂಸ್ಕರಿಸಿದನು. 1906ರಲ್ಲಿ ಮ್ವಾಸಾ ನೊಬೆಲ್ ಪ್ರಶಸ್ತಿ ಪಡೆದನು.
ಬುಖ್ನೆರ್, ಎಡ್ಯೂಯಾರ್ಡ್ (1860-1919 ) -1907
Buchner , Eduard
ಜರ್ಮನಿ-ಸಾವಯವ ರಸಾಯನಶಾಸ್ತ್ರ -ಹುದುಗುವಿಕೆಗೆ ಜೀವಂತ ಕೋಶಗಳು ಅಗತ್ಯವಿಲ್ಲವೆಂದು ತೋರಿಸಿದಾತ.
ಅಣ್ಣನಿಂದ ವಿಜ್ಞಾನದತ್ತ ಆಕರ್ಷಿತನಾಗಿದ್ದ ಬುಕ್ನೆರ್, ನೇಗೇಲಿಯ ಮಾರ್ಗದರ್ಶನದಲ್ಲಿ ಜೀವ ಶಾಸ್ತ್ರವನ್ನು, ಬೇಯರ್ನ ಮಾರ್ಗದರ್ಶನದಲ್ಲಿ ರಸಾಯನಶಾಸ್ತ್ರವನ್ನು ಕಲಿತನು. ಬೇಯರ್ನ ಸಹಾಯಕನಾಗಿ ಕೆಲಸ ಪ್ರಾರಂಭಿಸಿದ ಈತ 1893ರಲ್ಲಿ ಕೀಲ್ನಲ್ಲಿ ಪ್ರಾಧ್ಯಾಪಕನಾಗಿ, ಮುಂದೆ ಹಲವಾರು ಬಾರಿ ಬೇರೆ ಸಂಸ್ಥೆಗಳಿಗೆ ಸೇರಿ, ಅಂತಿಮವಾಗಿ 1911ರಲ್ಲಿ ವುರ್ಝ್ಬರ್ಗ್ನಲ್ಲಿ ನೆಲೆಸಿದನು. ಬುಖ್ನೆರ್ ಮೊದಲನೇ ಜಾಗತಿಕ ಯುದ್ದದಲ್ಲಿ ಸೇವಾ ಕಾರ್ಯಚರಣೆಯಲ್ಲಿ ಕೊಲ್ಲಲ್ಪಟ್ಟನು. 1897ರಲ್ಲಿ ಬುಖ್ನೆರ್ ವೀಕ್ಷಣೆಗಳು ಪ್ರಕರಣಗೊಳ್ಳುವವರೆಗೆ ಹುದುಗುವಿಕೆಗೆ ಜೀವಂತ ಈಸ್ಟ್ ಕೋಶಗಳ ಅಗತ್ಯವಿದೆ0iÉುಂದು ಭಾವಿಸಲಾಗಿತ್ತು. ಬುಕ್ನೆರ್ ಈಸ್ಟ್ ಕೋಶಗಳನ್ನು ಮರಳಿನೊಡನೆ ರುಬ್ಬಿ, ಕೋಶದಿಂದ ಮುಕ್ತವಾದ ಆಹರಣ (Extract ) ಪಡೆದು, ಅದನ್ನು ಸಕ್ಕರೆ ದ್ರಾವಣಕ್ಕೆ ಸೇರಿಸಿ, ಹುದುಗುವಿಕೆ ತರುವಲ್ಲಿ ಯಶಸ್ವಿಯಾದನು. ಪ್ರತಿ ರಾಸಾಯನಿಕ ಕ್ರಿ0iÉುಗೂ ಒಂದು ಜೈವಿಕ ಅಗೋಚರ ಮಧ್ಯಸ್ಥಿಕೆ ಬೇಕೆಂಬ ಆಗಿನ ಚೇತನವಾದಿಗಳಿಗೆ ಇದರಿಂದ ಭಾರಿ ಹಿನ್ನೆಡೆ ಯುಂಟಾಗಿ, ರಾಸಾಯನಿಕ ಕ್ರಿಯಾ ಭೌತಿಕ ಅಣುಮೂಲದ್ದೆಂದು ಖಚಿತಗೊಂಡಿತು. ಈಸ್ಟ್ನಿಂದ ತಾನು ಪಡೆದ ಆಹರಣವನ್ನು ಬುಖ್ನೆರ್ ಝೈಮೇಸ್ ಎಂದು ಕರೆದನು. ಈಗ ಇದೊಂದು ಕಿಣ್ವ (Enzyme) ಎಂದು ಗುರುತಿಸಲ್ಪಟ್ಟಿದೆ. ಈಗ ಇವು ಕಾರ್ಯ ನಿರ್ವಹಿಸುವ ವಿಶಿಷ್ಟ ಬಗೆಯ ಪ್ರೊಟೀನ್ಗಳೆಂದೂ ಇವು ಎಲ್ಲಾ ಜೀವರಾಸಾಯನಿಕ ಕ್ರಿಯೆಗಳಿಗೂ ಕಾರಣವೆಂದೂ, ಸಾಬೀತಾಗಿದೆ. 1907ರ ನೊಬೆಲ್ ಪಾರಿತೋಷಕ ಪಡೆದ ಬುಖ್ನೆರ್ 1919ರಲ್ಲಿ ಯುದ್ಧದಲ್ಲಿ ಹತನಾದನು. ಈತನ ಅಣ್ಣ ಹ್ಯಾನ್ ಬುಖ್ನೆರ್ ಸೂಕ್ಷ್ಮಜೀವಿಶಾಸ್ತ್ರದಲ್ಲಿ ಕೆಲಸ ಮಾಡಿ ರಕ್ತ ದ್ರವದಲ್ಲಿರುವ ಪ್ರೊಟೀನ್ ಅಂಶ ರೋಗ ಪ್ರತಿರೋಧಕ್ಕೆ ಬಹು ಮುಖ್ಯವಾದುದೆಂದು ತೋರಿಸಿದ್ದಾನೆ.
ರುದರ್’ಫೋರ್ಡ್,ಅರ್ನ್ಸ್ಟ್ (1871-1937) 1908
Rutherford , Ernest, 1st Baron Rutherford
ನ್ಯೂಝಿಲ್ಯಾಂಡ್-ಬ್ರಿಟನ್ ಭೌತಶಾಸ್ತ್ರ- ಬೈಜಿಕ ಭೌತಶಾಸ್ತ್ರದ (Nuclear Physics) ಸಂಸ್ಥಾಪಕ.
ನ್ಯೂಜಿಲ್ಯಾಂಡಿನ ನೆಲ್ಸನ್ನ ಅವಿಭಕ್ತ ಕುಟುಂಬದಲ್ಲಿ ಜನಿಸಿದ ರುದರ್’ಫೋರ್ಡ್ ಶಿಷ್ಯವೇತನ ಗೆದ್ದು ಕ್ಯಾಟೆನ್ಬರಿ ಕಾಲೇಜಿಗೆ ಸೇರಿದನು. ಪದವಿ ಅಂತಿಮ ವರ್ಷದಲ್ಲಿ ಭೌತಶಾಸ್ತ್ರ ಹಾಗೂ ಗಣಿತಗಳತ್ತ ಗಮನ ಕೇಂದ್ರೀಕರಿಸಿದನು. ಹಟ್ರ್ಸ್ ರೇಡಿಯೋ ತರಂಗ ಕಂಡು ಹಿಡಿದ ಆರನೇ ವರ್ಷದಲ್ಲಿ ರುದರ್’ಫೋರ್ಡ್ ಅದರ ಪ್ರೇಷಕ ನಿರ್ಮಿಸಿದ್ದನು. 1895ರಲ್ಲಿ ಮತ್ತೊಮ್ಮೆ ಕೇಂಬ್ರಿಜ್ ಶಿಷ್ಯ ವೇತನ ಗೆದ್ದು ಅಲ್ಲಿ ಜೆ.ಜೆ. ಥಾಮ್ಸನ್ ಮಾರ್ಗ ದರ್ಶನದಲ್ಲಿ , ಗಾಳಿಯಲ್ಲಿ ಕ್ಷ-ಕಿರಣ ಪಾರಗಮನ ಅಭ್ಯಸಿಸಿದನು. ರುದರ್’ಫೋರ್ಡ್, ಜೆ.ಜೆ. ಥಾಮ್ಸನ್ ಕೈ ಕೆಳಗಿನ ಪ್ರಥಮ ಸಂಶೋಧಕ ವಿದ್ಯಾರ್ಥಿಯಾಗಿದ್ದನು. ರುದರ್’ಫೋರ್ಡ್ ಮೆಕ್ಗಿಲ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದನು. ರುದರ್’ಫೋರ್ಡ್ ಖ್ಯಾತ ರಸಾಯನಶಾಸ್ತ್ರಜ್ಞ ಸಾಡಿಯ ಸಹಾಯದಿಂದ ಬೈಜಿಕ ಭೌತಶಾಸ್ತ್ರದಲ್ಲಿ ಕಾರ್ಯ ನಿರತನಾದನು. ರುದರ್’ಫೋರ್ಡ್’ಗೆ ಸಾಕಷ್ಟು ಪ್ರಮಾಣದಲ್ಲಿ ಪ್ರಯೋಗಗಳಿಗೆ ಬೆಂಬಲ ದೊರೆಯಿತು. ಸಾಡಿ ಹಾಗೂ ರುದರ್’ಫೋರ್ಡ್ ಹದಿನೆಂಟು ತಿಂಗಳುಗಳಲ್ಲಿ ಒಂಬತ್ತು ಲೇಖನ ಪ್ರಕಟಿಸಿದರು. 1896ರಲ್ಲಿ ಬೆಕೂರೆ, ಯುರೇನಿಯಂನಲ್ಲಿ ವಿಕಿರಣಪಟುತ್ವ (Radio Activity) ಅನಾವರಣಗೊಳಿಸಿದ್ದನು. ಜೆ.ಸಿಷ್ಮಿಡ್ಜ್ , ಪೀರೆ ಹಾಗೂ ಮೇರಿ ಕ್ಯೂರಿ ಬೇರೆ ಧಾತುಗಳಲ್ಲಿನ ವಿಕಿರಣ ಪಟುತ್ವವನ್ನು ತೋರಿಸಿದ್ದರು. ರುದರ್’ಫೋರ್ಡ್ ಈ ಧಾತುಗಳನ್ನು ಅಭ್ಯಸಿಸಿ, ವಿಕಿರಣಶೀಲತೆಯಲ್ಲಿ ಎರಡು ಬಗೆಯ ಕಾರಣಗಳಿವೆಯೆಂದು ಹೇಳಿದನು. ಹೀಲಿಯಂ ಬೀಜ ಹೋಲುವ ಆಲ್ಫಾ ಕಿರಣ ಹಾಗೂ ಎಲೆಕ್ಟ್ರಾನ್ಗಳ ಬೀಟಾ ಕಿರಣಗಳಿವು. ಇದಾದ ಎರಡು ವರ್ಷಗಳ ನಂತರ ಇವುಗಳಿಗಿಂತ ಪ್ರಬಲವಾದ ಗಾಮಾ ಕಿರಣಗಳನ್ನು ಸಹ ರುದರ್’ಫೋರ್ಡ್ ಪತ್ತೆ ಹಚ್ಚಿದನು. 1903ರಲ್ಲಿ ಸಾಡಿಯ ಜೊತೆಗೂಡಿ,. ಕ್ರಮವಾದ ಪರಿವರ್ತನೆಗಳಿಂದ ವಿಭಿನ್ನ ಪ್ರಮಾಣಗಳಲ್ಲಿ ಅನಿರ್ದಿಷ್ಟ ಸಮಯಾವಧಿಗಳಲ್ಲಿ ರೇಡಿಯೋ ವಿಕಿರಣ ಹೊರಹೊಮ್ಮುವುದೆಂದು ರುದರ್’ಫೋರ್ಡ್ ಪ್ರತಿಪಾದಿಸಿದನು. ಕಿರಣಗಳ ಹೊಮ್ಮಿಕೆ ಅನಿರ್ದಿಷ್ಟ ಸಮಯದ್ದಾದರೂ, ವಿಕಿರಣಪಟು ಧಾತುಗಳಲ್ಲಿನ ಅರ್ಧ ಪರಮಾಣುಗಳು ಶೈಥಿಲ್ಯ (Decay) ಹೊಂದುವ ಸರಾಸರಿ ಅವಧಿ ಒಂದೇ ಇರುತ್ತದೆಯೆಂದು ವಿವರಿಸಿದನು. ಕೆಲವು ಧಾತುಗಳು ಯಾವಾಗಲೂ ಒಂದೇ ಸ್ಥಿತಿಯಲಿದ್ದರೆ ಇನ್ನೂ ಕೆಲವು ತಮ್ಮ ಪರಮಾಣುಗಳನ್ನು ಶೈಥಿಲ್ಯದಿಂದ ಕಳೆದುಕೊಂಡು , ಬೇರೆ ಧಾತುಗಳಾಗಿ ಬದಲಾಗುವುದು ಕ್ರಾಂತಿಕಾರಕವೆನಿಸಿತು. ಟಿ.ರಾಡ್ಸ್ನೊಂದಿಗೆ ರುದರ್’ಫೋರ್ಡ್ ಆಲ್ಪಾ ಕಿರಣಗಳ ದ್ರವ್ಯ ಹಾಗೂ ಆವಿಷ್ಟ ನಿರ್ಧರಿಸಿ, ಅದು ಹೀಲಿಯಂ ಬೀಜಕ್ಕೆ ಸಮನಾಗಿರುವುದೆಂದು ತೋರಿಸಿದನು. 1907ರಲ್ಲಿ ರುದರ್’ಫೋರ್ಡ್ ಅಲ್ಪಾಕಿರಣಗಳ ದ್ರವ್ಯ ಹಾಗೂ ಆವೇಶ ನಿರ್ಧರಿಸಿ ಅದು ಹೀಲಿಯಂ ಬೀಜಕ್ಕೆ ಸಮನಾಗಿರುವುದೆಂದು ತೋರಿಸಿದನು. ಇದೇ ವರ್ಷ ರುದರ್’ಫೋರ್ಡ್ ಬ್ರಿಟನ್ಗೆ ಮರಳಿ, ಮ್ಯಾಂಚೆಸ್ಟರ್ನಲ್ಲಿ ಗೀಗರ್ ಜೋತೆಗೆ ವಿಕಿರಣಪಟುತ್ವದ ಅಧ್ಯಯನ ಮುಂದುವರೆಸಿದನು. ಗೀಗರ್ ಈ ಕಿರಣಗಳನ್ನು ಎಣಿಸುವ ಸಾಧನ ನಿರ್ಮಿಸಿದನು. ಗೀಗರ್ ಹಾಗೂ ಮಾರ್ಸಡೆನ್ ಈ ಆಲ್ಫಾ ಕಣಗಳಲ್ಲಿ 8000ರಲ್ಲಿ ಒಂದು ಕಣ ಬಂಗಾರದ ರೇಕಿಗೆ ತಾಗಿ ಹಿಂದಕ್ಕೆ ಪುಟಿಯುವುದನ್ನು ಗಮನಿಸಿದರು. ಹಗುರವಾಗಿರುವ ಎಲೆಕ್ಟ್ರಾನ್ಗೆ ಡಿಕ್ಕಿಹೊಡೆದು, ಆಲ್ಪಾಕಿರಣಗಳು ಇಷ್ಟೊಂದು ಹಿಂದಕ್ಕೆ ಪುಟಿಯಲಾರದೆಂದು ತರ್ಕಿಸಿದ, ರುದರ್’ಫೋರ್ಡ್ ಪರಮಾಣುವಿನ ಕೇಂದ್ರದಲ್ಲಿ ಎಲೆಕ್ಟ್ರಾನ್ನಷ್ಟು ಸಂಖ್ಯೆಯಲ್ಲಿ, ಅದಕ್ಕೆ ವಿರುದ್ಧವಾದ ಆವಿಷ್ಟ ಹೊಂದಿರುವ, ಭಾರವಾದ ಬೀಜವಿರುವುದೆಂದು 1911ರಲ್ಲಿ ಹೇಳಿದನು. ಇದರಿಂದಾಗಿ ಪರಮಾಣುವಿನಲ್ಲಿ ಋಣ ಹಾಗೂ ಧನ ಆವಿಷ್ಟಗಳು ಪರಸ್ಪರ ನಿರಸನಗೊಳ್ಳುತ್ತವೆ . ಇದು ಮೊದಲ ಬಾರಿಗೆ ಪರಮಾಣುವಿನ ಸರಿಯಾದ ಮಾದರಿಯಾಗಿದ್ದಿತು. ಬೊಹ್ರ್ ಇದನ್ನು ಅಭಿವೃದ್ದಿಗೊಳಿಸಿ, ಎಲೆಕ್ಟ್ರಾನ್ಗಳು ಪರಮಾಣುವಿನ ಬೀಜದ ಸುತ್ತಲೂ ಸುತ್ತುವುದೆಂದು ತಿಳಿಸಿ, ಪ್ಲಾಂಕ್ನ ಸಿದ್ಧಾಂತಕ್ಕೆ ಕಾರಣ ನೀಡಿದನು. ಮೊದಲನೇ ಜಾಗತಿಕ ಯುದ್ದ ಪ್ರಾರಂಭವಾಗಿ ರುದರ್’ಫೋರ್ಡ್ ಸೈನಿಕ ವಿಧಾನಗಳಿಂದ ಜಲಾಂತರ್ಗಾಮಿಗಳನ್ನು ಪತ್ತೆ ಹಚ್ಚುವ ಯೋಜನೆಗೆ ನಿಯೋಜಿಸಲಾಯಿತು,. 1919ರಲ್ಲಿ ಜೆ.ಜೆ.ಥಾಮ್ಸನ್ ತೆರವುಗೊಳಿಸಿದ ಕೇಂಬ್ರಿಜ್ನ ಕ್ಯಾವೆಂಡಿಷ್ ಪ್ರಾಧ್ಯಾಪಕ ಹುದ್ದೆಗೇರಿದ ರುದರ್’ಫೋರ್ಡ್ ಕೆಲವೇ ದಿನಗಳಲ್ಲಿ ಪರಮಾಣು ಬೀಜವನ್ನು ಕೃತಕ ವಿಧಾನಗಳಿಂದ ಒಡೆಯಬಹುದೆಂದು ಅನಾವರಣಗೊಳಿಸಿದನು. ರುದರ್ಪೆÇೀರ್ಡ್ನ ಸಹಾಯಕರು ಆಗಿನ್ನೂ ಯುದ್ದದಿಂದ ತಮ್ಮ ಕೆಲಸಗಳಿಗೆ ಮರಳಿರಲಿಲ್ಲ. ಆದುದರಿಂದ ರುದರ್’ಫೋರ್ಡ್ ಖುದ್ದಾಗಿ ತಾನೇ ಪ್ರಯೋಗ ನಿರತನಾದನು. ಸಾರಜನಕದಂತಹ ಪರಮಾಣುವಿನ ಬೀಜವನ್ನು ತಾಡಿಸುವ ಆಲ್ಫಾ ಕಿರಣಗಳು, ಪ್ರೋಟಾನ್ನ್ನು ಬೀಜದಿಂದ ಹೊರಹಾಕಿ, ಹಗುರ ಪರಮಾಣುವಿಗೆ ಕಾರಣವಾಗುತ್ತವೆ. 1920ರಿಂದ 1924 ರವರೆಗೆ ರುದರ್’ಫೋರ್ಡ್ ಹಾಗೂ ಚಾಡ್ವಿಕ್ ಹಗುರ ಪರಮಾಣುಗಳನ್ನು ಆಲ್ಪಾ ಕಣಗಳಿಂದ ಒಡೆಯಬಹುದೆಂದು ತೋರಿಸಿದರಲ್ಲದೆ ಮುಂದೆ ನ್ಯೂಟ್ರಾನ್ ಅಸ್ತಿತ್ವವನ್ನು ಘೋಷಿಸಿದರು. ಕಾಕ್ಕ್ರಾಫ್ಟ್ ಹಾಗೂ ಇ. ಟಿ.ಎಸ್.ವಾಲ್ಟನ್ ರುದರ್’ಫೋರ್ಡ್ ಸಲಹೆಗಳ ಆಧಾರದ ಮೇಲೆ ಭಾರ ಧಾತುಗಳನ್ನು ಒಡೆಯುವ ವಿಧಾನ ರೂಪಿಸಿದರು. ರುದರ್’ಫೋರ್ಡ್ ಎಂ.ಓಲಿಪ್ರಾಯರಿನ್ ಹಾಗೂ ಪಿ.ಹಾರ್ಟೆಕ್ ಜೊತೆಗೂಡಿ, 1934ರಲ್ಲಿ ಡ್ಯುಟೇರಿಯಂನ್ನು ಡ್ಯುಟೇರಿಯಂ ಬೀಜದಿಂದ ತಾಡಿಸಿ, ಬೈಜಿಕ ಸದಳನ (Nuclear Fusion )ಸಾಧಿಸಿ ಟ್ರೈಟಿಯಂನ್ನು ಪಡೆದರು. 1920ರ ಸುಮಾರಿನಲ್ಲಿ ರುದರ್’ಫೋರ್ಡ್ ನ್ಯೂಟ್ರಾನ್ ಹಾಗೂ ಟ್ರೈಟಿಯಂ ಅಸ್ತಿತ್ವವನ್ನು ಗ್ರಹಿಸಿದ್ದನು. ಬೈಜಿಕ ಭೌತಶಾಸ್ತ್ರದಲ್ಲಿನ ಸಾಧನೆಗಾಗಿ 1908ರಲ್ಲಿ ರುದರ್’ಫೋರ್ಡ್ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಗಳಿಸಿದನು. ಜಗತ್ತಿನ ಹಲವಾರು ಖ್ಯಾತ ವಿಜ್ಞಾನಿಗಳು ರುದರ್’ಫೋರ್ಡ್ ಶಿಷ್ಯರಾಗಿದ್ದರು.
ಓಸ್ಟ್’ವಾಲ್ಡ್, ಫ್ರೀಡರಿಖ್, ವಿಲ್ಹೆಲ್ಮ್ (1853-1932) 1909
Ostwald , Friedrich Wilhelm
ಜರ್ಮನಿ - ಆಧುನಿಕ ಭೌತರಸಾಯನಶಾಸ್ತ್ರದ ಮುಂಚೂಣಿಗ.
ಆಧುನಿಕ ರಸಾಯನಶಾಸ್ತ್ರವನ್ನು ವಾನ್.ಟಿ ಹಾಫ್ ,ಆರೇನಿಯಸ್ ಹಾಗೂ ಓಸ್ವಾಲ್ಟ್ ಸ್ಥಾಪಿಸಿದರು. ಓಸ್ವಾಲ್ಟ್ ಬಾಲ್ಯದಿಂದಲೂ, ರಾಸಾಯನಿಕಶಾಸ್ತ್ರದಲ್ಲಿ ಆಸಕ್ತನಾಗಿದ್ದನು. ತಾನೇ ಬಣ್ಣ ತಯಾರಿಸಿಕೊಳ್ಳುವುದು, ಛಾಯಾಗ್ರಹಣಕ್ಕೆ ಸ್ವಂತ ಕಾಗದ ತಯಾರಿಸುವುದು ,ಪಟಾಕಿ ಮಾಡುವುದು ಆತನ ನೆಚ್ಚಿನ ಹವ್ಯಾಸಗಳಾಗಿದ್ದವು. ಲ್ಯಾಟ್ವಿಯಾದಲ್ಲಿ ರಷ್ಯನ್ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕಾಗಿದ್ದಿತು. ಓಸ್ಟ್ವಾಲ್ಡ್, ಪ್ರಯಾಸದಿಂದ ರಷ್ಯನ್ ಭಾಷೆ ಕಲಿತನು. ಓಸ್ಟ್ವಾಲ್ಟ್, ಡೊರ್ಪಾಟ್ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಗಳಿಸಿದನು. 1881ರಲ್ಲಿ ರಿಗಾ ಪಾಲಿಟೆಕ್ನಿಕ್ನಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕನಾದನು. ಅಲ್ಪಕಾಲದಲ್ಲೇ ಉತ್ತಮ ರಸಾಯನಶಾಸ್ತ್ರಜ್ಞನೆಂದು ಹೆಸರು ಗಳಿಸಿದ ಓಸ್ಟ್’ವಾಲ್ಡ್ ‘ಗೆ ಲೀಪ್ಜಿಗ್ ವಿಶ್ವವಿದ್ಯಾಲಯದಿಂದ 1887ರಲ್ಲಿ ಆಹ್ವಾನ ಬಂದಿತು. ತನ್ನ ಉಳಿದ ಜೀವನವನ್ನು ಲೀಪ್ಜಿಗ್ನಲ್ಲಿ ಕಳೆದ ಓಸ್ಟ್’ವಾಲ್ಡ್ ಲವಣ, ಎಸ್ಟರ್ಗಳ ಜಲ ಸಂಶ್ಲೇಷಣೆ (Hydrolysis) ದ್ರಾವಣಗಳ ವಾಹಕತೆ, ಸ್ನಿಗ್ದತೆ, ಅಯಾನಿಕರಣಗಳ ಬಗೆಗೆ ಅಧ್ಯಯನ ನಡೆಸಿದನು. ಭೌತ ರಸಾಯನಶಾಸ್ತ್ರದಲ್ಲಿ ಓಸ್ಟ್’ವಾಲ್ಡ್ ಹಲವಾರು ಹೊಸ ಮಾರ್ಗಗಳಿಗೆ ಅನುವು ಮಾಡಿದನು. ಓಸ್ಟ್’ವಾಲ್ಡ್, ನಿಜವಾಗಿಯೂ ಅಣುಗಳು ಅಸ್ಥಿತ್ವದಲ್ಲಿಲ್ಲವೆಂದು ಅವು ವಿಶ್ಲೇಷಣೆಗೆ ಉತ್ತಮ ತಳಹದಿ ಒದಗಿಸುವುದರಿಂದ ಬಳಸಬಹುದೆಂದು ನಂಬಿದ್ದನು. ಆದರೆ ಇಪ್ಪತ್ತನೇ ಶತಮಾನದ ಆದಿಯಲ್ಲಿ ಅಣುಗಳ ಅಸ್ತಿತ್ವಕ್ಕೆ ಪ್ರಬಲ ಸಾಕ್ಷ್ಯಾಧಾರಗಳು ದಕ್ಕಿದವು. ಜೀವನದ ಕೊನೆಯ ವರ್ಷಗಳಲ್ಲಿ ಓಸ್ಟ್’ವಾಲ್ಡ್ ಅಣು ಮತ್ತು ಪರಮಾಣುಗಳ ಅಸ್ತಿತ್ವವನ್ನು ಒಪ್ಪಿಕೊಂಡನು. 1909ರಲ್ಲಿ ಓಸ್ಟ್’ವಾಲ್ಡ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಒಟ್ಟೋ ,ವಲ್ಲಾಖ್ –(1847--) 1910
Otto , Wallach
ಜರ್ಮನಿ-ರಸಾಯನಶಾಸ್ತ್ರ- ಅಲಿಸೈಕ್ಲಿಕ್ ಸಂಯುಕ್ತಗಳ ಕುರಿತಾಗಿ ಆಳ ಸಂಶೋಧನೆ ನಡೆಸಿದಾತ.
ವಲ್ಲಾಖ್ 27 ಮಾರ್ಚ್ 1847ರಂದು ಜರ್ಮನಿಯ ಕೊನಿಗ್ಸ್ಬರ್ಗ್ನಲ್ಲಿ ಜನಿಸಿದನು. ಈತನ ತಂದೆ ಸರ್ಕಾರದಲ್ಲಿ ಉನ್ನತಾಧಿಕಾರಿಯಾಗಿದ್ದನು. ಪ್ಯಾಟ್ಸ್’ಡ್ಯಾಂ ಜಿಮ್ನಾಷಿಯಂನಲ್ಲಿ ಓದಿದ ವಲ್ಲಾಖ್ಗೆ ಕಲೆ ಹಾಗೂ ಚರಿತ್ರೆಯಲ್ಲಿ ಅಪಾರ ಆಸಕ್ತಿಯಿದ್ದಿತು. ಈ ಕಾಲದಲ್ಲಿ ರಸಾಯನಶಾಸ್ತ್ರಗಳ ಶಿಕ್ಷಣವಿರಲಿಲ್ಲ. 1867ರಲ್ಲಿ ವೊಹೊರ್ ಕೈಕೆಳಗೆ ರಸಾಯನಶಾಸ್ತ್ರ ಕಲಿಯಲು ಹೋದ ವಲ್ಲಾಖ್ ಫಿûಟಿಂಗ್ ಮತ್ತು ಹಬ್ನರ್ರವರ ಮಾರ್ಗದರ್ಶನ ಪಡೆದನು. ಇದಾದ ಸ್ವಲ್ಪ ಕಾಲದ ನಂತರ ಎ.ಡಬ್ಲ್ಯೂ ಹಾಫ್ಮನ್, ಜಿ.ಮ್ಯಾಗ್ನರ್ ಕೈಕೆಳಗೆ ರಸಾಯನಶಾಸ್ತ್ರದಲ್ಲಿ ಕೆಲಸ ಮಾಡಲು ಬರ್ಲಿನ್ಗೆ ಹೋದನು. ಇಲ್ಲಿಂದ ಗಟ್ಟಿಂಜೆನ್ಗೆ ಮರಳಿ ಹಬ್ನರ್ನೊಂದಿಗೆ ಕೆಲಸ ಮಾಡಿ 1869ರಲ್ಲಿ ಎರಡೂವರೆ ವರ್ಷದ ಪರಿಶ್ರಮದ ನಂತರ ಡಾಕ್ಟರೇಟ್ ಗಳಿಸಿದನು. ಈ ಕಾಲದಲ್ಲಿ ವೋಹ್ಲರ್ ಪ್ರಯೋಗಾಲಯ ಬೆಳಿಗ್ಗೆ ಏಳರಿಂದ, ಸಾಯಂಕಾಲ 5 ರವರೆಗೆ ತೆರೆದಿದ್ದು ನಂತರ ದೀಪವನ್ನು ಹಚ್ಚುವ ಅನಿಲದ ಸಂಪರ್ಕ ಕದಿಯಲಾಗುತ್ತಿತ್ತು. ರಾತ್ರಿ ಅವಧಿಯಲ್ಲಿ ಮೇಣದ ಬತ್ತಿಯ ದೀಪದ ಬೆಳಕಿನಲ್ಲಿ ವಲ್ಲಾಖ್ನ ವಿದ್ಯಾಭ್ಯಾಸ ಜರುಗಿತು. 1869 ರಿಂದ 1870ರ ಅವಧಿಯಲ್ಲಿ ಬರ್ಲಿನ್ನ ಎಚ್.ವಿಖೆಲ್ಹೌಸ್ನೊಂದಿಗೆ ಸಾರಜನಕ ಕಿರಣ ಹಾಗೂ ಬಿ ನ್ಯಾಫ್ರಿನಾಲ್ಗಳ ಮೇಲೆ ಕೆಲಸ ಮಾಡಿದನು. 1870ರಲ್ಲಿ ವೆಲ್ಲಾಖ್ಗೆ ಕೆಕಲೆಯ ಪರಿಚಯವಾಯಿತು. ಕೆಕಲೆ ಕಲಾ ಪ್ರೇಮಿಯೂ , ಕಲಾ ಸಾಧಕನಾಗಿದ್ದು ಬಾನ್ಗೆ ಬಂದು ಕಲೋಪಾಸನೆ ಮಾಡುವಂತೆ ಕರೆಯಿತ್ತನು. ಆದರೆ ಈ ಸಮಯದಲ್ಲಿ ಫ್ರಾಂಕೋ ಪ್ರಷ್ಯನ್ ಯುದ್ದ ಪ್ರಾರಂಭವಾಗಿ, ವಲ್ಲಾಖ್ ಸೇನೆಗೆ ನಿಯೋಜಿತನಾದನು. ಯುದ್ದದ ನಂತರ ಬರ್ಲಿನ್ನಲ್ಲಿ ನೆಲೆಸಿದ ವಲ್ಲಾಖ್ ಅಗ್ಫಾ ಕಾರ್ಖಾನೆಗೆ ಸೇರಿದನು. ಇಲ್ಲಿನ ರಾಸಾಯನಿಕ ಹೊಗೆಗೆ ವಲ್ಲಾಖ್ನ ಆರೋಗ್ಯ ಕೆಟ್ಟು, 1872ರಲ್ಲಿ ಬಾನ್ಗೆ ಮರಳಿ 1876ರಲ್ಲಿ ಪ್ರಾಧ್ಯಾಪಕನಾದನು. 1879ರಲ್ಲಿ ಔಷಧಿಶಾಸ್ತ್ರ, ವಿಭಾಗದ ಕಾರ್ಯದರ್ಶಿಯಾದನು. ಇದು ವಲ್ಲಾಖ್ ವೈದ್ಯಕೀಯ ರಸಾಯನಶಾಸ್ತ್ರದಲ್ಲಿ ಪರಿಣಿತಿ ಗಳಿಸುವಂತಾಯಿತು. ಫಾಸ್ಪರಸ್ ಪೆಂಟಾಕ್ಲೋರೈಡ್ಗಳು, ಆಮ್ಲ ಅಮೈಡ್ಗಳ ಮೇಲೆ ಪ್ರತಿಕ್ರಿಯಿಸಿ ಇಮೈನೋ ಕ್ಲೋರೈಡ್ಗಳಾಗುವುವೆಂದು ವಲ್ಲಾಖ್ ಕಂಡು ಹಿಡಿದನು. ಇದೇ ಕಾಲದಲ್ಲಿ ಕೆಕಲೆ ಹಳೆಯ ರಾಸಾಯನಿಕಗಳಿಂದ ತುಂಬಿದ್ದ ಕಪಾಟಿನಲ್ಲಿರುವ ರಾಸಾಯನಿಕಗಳ ಬಗೆಗೆ ತಿಳಿಸಬೇಕೆಂದು ಕೋರಿದನು. ಇವುಗಳನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿದ ವಲ್ಲಾಖ್ ಈ ರಾಸಾಯನಿಕಗಳನ್ನು ವರ್ಗೀಕರಿಣಗೊಳಿಸುವ ಸಾಮಾನ್ಯ ವಿಧಾನಗಳನ್ನು ರೂಪಿಸಿ ಆವರೆಗೆ ಸಾವಯವ ರಸಾಯನಶಾಸ್ತ್ರದಲ್ಲಿದ್ದ ಗೋಜಲನ್ನು ನಿವಾರಿಸಿದನು. ಕ್ಲೋರೈಡ್ನ್ನು ಡೈ ಕ್ಲೋರೈಡ್ ಅಸಿಟಿಕ್ ಆಮ್ಲವಾಗಿ ಪರಿವರ್ತಿಸುವ ವಿಧಾನವನ್ನು ವಲ್ಲಾಖ್ ರೂಪಿಸಿದನು. ಅಮಿಡೈಟ್ಸ್, ಕ್ಲೋರೈಡ್, ಗ್ಲೆಯೋಕ್ಸವೈನ್ಸ್, ಡಯಾಝೊ ಸಂಯುಕ್ತಗಳು ವಲ್ಲಾಖ್ನಿಂದ ತಪಾಸಣೆಗೊಳಪಟ್ಟವು. 1889ರಲ್ಲಿ ಗಟ್ಟಿಂಜೆನ್ ರಾಸಾಯನಿಕ ಸಂಸ್ಥೆಯ ನಿರ್ದೇಶಕನಾದನು. ವಲ್ಲಾಖ್ ಅಲಿಸೈಕ್ಲಿಕ್ ಸಂಯುಕ್ತಗಳ ಮೇಲೆ ಮಾಡಿದ ಗಮನಾರ್ಹ ಸಂಶೋಧನೆಗಳಿಗಾಗಿ 1910ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದನು.
Hoff , Jacobus Henrikus Von t 1901
ಡೆನ್ಮಾರ್ಕ್-ಭೌತ ರಸಾಯನಶಾಸ್ತ್ರ- ತ್ರಿದಿಶಾ ರಸಾಯನಶಾಸ್ತ್ರದ (StereoChemistry) ಸ್ಥಾಪಕ.
ಹಾಫ್ ಶ್ರೀಮಂತ ವೈದ್ಯ ದಂಪತಿಗಳ ಮಗ. ಹದಿನೇಳನೇ ವಯಸ್ಸಿನಲ್ಲಿದ್ದಾಗ ತಾನು ರಸಾಯನಶಾಸ್ತ್ರ ಓದುವದಾಗಿ ಹೇಳಿದನು. ಇದಕ್ಕೆ ತಂದೆ ತಾಯಿಗಳಿಂದ ಪೂರಕ ಪ್ರೇರಕ ಬೆಂಬಲ ದೊರೆಯಲಿಲ್ಲ. ಹಾಫ್, ತಂದೆ ತಾಯಿಗಳ ವಿರೋಧ ಲೆಕ್ಕಿಸದೆ ಡೆಲ್ಫ್ಟಾ ಪಾಲಿಟೆಕ್ನಿಕ್ ಸೇರಿ ಡಿಪ್ಲೊಮಾ ಗಳಿಸಿದನು. ಮುಂದೆ ಲೀಡೆನ್, ಬಾನ್, ಪ್ಯಾರಿಸ್ನಲ್ಲಿ ರಸಾಯನಶಾಸ್ತ್ರದ ವಿದ್ಯಾಭ್ಯಾಸ ಮುಂದುವರೆಸಿದನು. 22ನೇ ವಯಸ್ಸಿನಲ್ಲಿ ತಾಯ್ನಾಡಿಗೆ ಹಿಂದಿರುಗಿದನು. 23ನೇ ವಯಸ್ಸಿನಲ್ಲಿ ಹಾಫ್ ಶಾಲಾ ಉಪಾಧ್ಯಾಯನ ಕೆಲಸಕ್ಕೆ ಸೀರಲು ಯತ್ನಿಸಿದನು. ಅವನನ್ನು ಹಗಲುಗನಸಿನವನೆಂದು ತಿರಸ್ಕರಿಸಲಾಯಿತು. 1876ರಲ್ಲಿ ಪಶು ಚಿಕಿತ್ಸಕನ ಸಹಾಯಕನಾಗಿ ಕೆಲಸ ಮಾಡಿದನು. 1896ರಲ್ಲಿ ಅ್ಯಮಸ್ಟರ್ಡ್ಯಾಂನಲ್ಲಿ ಪ್ರಾಧ್ಯಾಪಕನಾದ ಹಾಫ್ ನಂತರ ಬರ್ಲಿನ್ಗೆ ಹೋಗಿ ನೆಲೆಸಿದನು. ಈ ಕಾಲದಲ್ಲಿಯೇ ಹಲವಾರು ಪ್ರಯೋಗಗಲ ಫಲಿತಾಂಶವಾಗಿ ಹಾಫ್ ಪ್ರಕಟಿಸಿದ ಲೇಖನ ತ್ರಿದಿಶಾ ರಸಾಯನಶಾಸ್ತ್ರದ ಉಗಮಕ್ಕೆ ಕಾರಣವಾಯಿತು. ಬಯೋಟ್, ಬಹುತೇಕ ಸಾವಯವ ಸಂಯುಕ್ತಗಳು ದೃಗ್ಕ್ರಿಯಾಶೀಲವಾಗಿರುವುದೆಂದೂ, ಧೃವೀಕೃತ (Polarised) ಬೆಳಕಿನ ಸಮತಲವನ್ನು ತಿರುಗಿಸುವುವೆಂದೂ ತಿಳಿಸಿದ್ದನು. ಪಾಸ್ತರ್ ಇದನ್ನು ಸ್ಪಟಿಕೀಯ ಘನಗಳಿಗೂ ವಿಸ್ತರಿಸಿದನು. ಕೆಕುಲೆ ಸಾವಯವ ರಾಸಾಯನಿಕಗಳ ಅಣುಗಳ ಜೋಡಣೆಯನ್ನು ವಿವರಿಸಿದ್ದನು. ಈ ಜೋಡಣೆಯ ಆಧಾರದ ಮೇಲೆ ಬೇರೆ ಬೇರೆ ಬಗೆಯ ರಾಸಾಯನಿಕಗಳು ದಕ್ಕುವುದೆಂದು ಹೇಳಿದ್ದನು. ಹಾಫ್ ಇದರತ್ತ ಗಮನಹರಿಸಿ ಈ ರಾಸಾಯನಿಕಗಳಲ್ಲಿ ಒಂದು ಧೃವೀಕೃತ ಬೆಳಕನ್ನು ಎಡಗಡೆಗೂ ಮತ್ತೊಂದನ್ನು ಬಲಗಡೆಗೂ ತಿರುಗುಸುವುದೆಂದು ತಿಳಿಸಿದನು. ಇದು ಅಣು ರಚನೆಯ ಸಾಮಾನ್ಯ ಸಿದ್ಧಾಂತದ ಉಗಮಕ್ಕೆ ಕಾರಣವಾಯಿತು. ಜೆ.ಎ.ಬೆಲ್ ಸ್ವತಂತ್ರವಾಗಿ ಇದೇ ತೀರ್ಮಾನಕ್ಕೆ ಬಂದಿದ್ದನು. ಆದರೆ ಸಿದ್ಧಾಂತ ರೂಪದಲ್ಲಿ ತಿಳಿಸಿರಲಿಲ್ಲ. ಹಾಫ್ ಮತ್ತು ಬೆಲ್ ಪ್ಯಾರಿಸ್ನ ವುರ್ಟ್ ಪ್ರಯೋಗಾಲಯದಲ್ಲಿ ಹಲವಾರು ಬೇರಿ ಪರಸ್ಪರ ಭೇಟಿಯಾಗಿದ್ದರು. 1901ರಲ್ಲಿ ಹಾಫ್ ರಸಾಯನಶಾಸ್ತ್ರದ ಮೊಟ್ಟ ಮೊದಲ ನೊಬೆಲ್ ಪ್ರಶಸ್ತಿ ಪಡೆದನು.
ಹರ್ಮಾನ್, ಫಿಷರ್ ಎಮಿಲ್ (1852-1919 )
Hermann , Emil Fisher (CHE.) 1902
ಜರ್ಮನಿ-ಸಾವಯವ ರಸಾಯನಶಾಸ್ತ್ರ-ನೈಸರ್ಗಿಕ ಔತ್ಪನ್ನಿಕ ರಸಾಯನಶಾಸ್ತ್ರದ ಪರಿಣಿತ.
ಫಿಷರ್, ಕೊಲೊನ್ ಜಿಲ್ಲೆಯ ಯುಷ್ಕೆರ್ಕೆನ್ ಪಟ್ಟಣದಲ್ಲಿ 9 ಅಕ್ಟೋಬರ್ 1852ರಂದು ಜನಿಸಿದನು. ಫಿಷರ್ನ ತಂದೆ ದಿನಸಿ ಅಂಗಡಿ ಇಟ್ಟಿದ್ದನು. ಮಗ ವ್ಯಾಪಾರಿಯಾದರೂ ಅಗಿರಲಿ, ರಸಾಯನಶಾಸ್ತ್ರಜ್ಞನೇ ಆಗಲಿ ಎಂಬ ಮುಂದಾಲೋಚನೆಯಿಂದ ಉಣ್ಣೆ ಮಗ್ಗ ಹಾಗೂ ಪೇಯ ತಯಾರಿಕೆಯ ಕಾರ್ಖಾನೆಯನ್ನು ಖರೀದಿಸಿದ್ದನು. ಆದರೆ ಓದಿನಲ್ಲಿ ತುಂಬಾ ಜಾಣನಾಗಿದ್ದಫಿಷರ್ ಸಣ್ಣ ವಯಸ್ಸಿನಲ್ಲೇ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿದನಾದರೂ , ಕಾಲೇಜಿಗೆ ಸೇರುವಷ್ಟು ವಯಸ್ಸು ಅವನಿಗಿರಲಿಲ್ಲ, ಹೀಗಾಗಿ ಅವನು ತನ್ನ ಚಿಕ್ಕಪ್ಪನೊಂದಿಗೆ ಮರ ಮುಟ್ಟುಗಳ ವ್ಯಾಪಾರಕ್ಕಿಳಿದನು. ಸ್ವಂತ ಖರ್ಚಿನಲ್ಲಿ ಪ್ರಯೋಗಾಲಯ ತೆಗೆದು , ಬಂಧು ಬಾಂಧವರಿಂದ ವ್ಯಾಪಾರಕ್ಕೆ ನಾಲಾಯಕ್ಕಾದವನೆಂದು ನಿಂದನೆಯ ಸುರಿ ಮಳೆ ಪಡೆದನು. ಇದರಿಂದ ಬೇಸತ್ತ ಫಿಷರ್ ಕಾಲೇಜು ಶಿಕ್ಷಣ ಪಡೆಯಲು ನಿರ್ಧರಿಸಿದನು. 1887ರಲ್ಲಿ ಖ್ಯಾತ ರಸಾಯನಶಾಸ್ತ್ರಜ್ಞ ಕೆಕುಲೆಯಡಿಯಲ್ಲಿ ಫಿಷರ್ , ರಸಾಯನಶಾಸ್ತ್ರ ,ಸಸ್ಯಶಾಸ್ತ್ರ ಕಲಿತನು. 1875ರಲ್ಲಿ ಸ್ಟ್ರಾಸ್ಬರ್ಗ್ಗೆ ಹೋಗಿ ಬೇಯರ್’ನ ಶಿಷ್ಯನಾದನು. ಬೇಯರ್ ಮ್ಯೂನಿಕ್ಗೆ ಹೋದಾಗಲೂಫಿಷರ್ ಅವನನ್ನು ಹಿಂಬಾಲಿಸಿದನು. ಈ ವೇಳೆಗಾಗಲೇಫಿಷರ್ ಫಿûನೈಲ್ ಹೈಡ್ರೋಝೈನ್ ಅನಾವರಣಗೊಳಿಸಿದ್ದನು. ಸತತ ಪರಿಶ್ರಮ ದೃಢ ನಿರ್ಧಾರದಿಂದ ಉತ್ತಮ ರಸಾಯನ ತಜ್ಞನಾಗಿದ್ದ ಫಿûಷರ್’ಗೆ ಸತತ ಧೂಮಪಾನ, ಮಧ್ಯ ಸೇವನೆ ಚಟಗಳಾಗಿದ್ದವು. ಇವುಗಳಿಂದ ಆಗಾಗ್ಗೆ ಆರೋಗ್ಯ ಹದಗೆಟ್ಟು ಚೇತರಿಸಿಕೊಳ್ಳಲು ಹೆಣಗುತ್ತಿದ್ದನು. ಹೀಗಿದ್ದರೂ ಸಹ,ಫಿಷರ್ ಸಕ್ಕರೆ, ಫ್ಯೂರಿನ್, ಬಣ್ಣ, ಇಂಡೋಲ್ ಹೀಗೆ ನಾನಾ ಬಗೆಯ ರಾಸಾಯನಿಕಗಳ ಮೇಲೆ ಸಂಶೋಧನೆ ಮಾಡುವುದನ್ನು ನಿಲ್ಲಿಸಿರಲಿಲ್ಲ. 1885ರಲ್ಲಿ ವುರ್ಝ್ಬರ್ಗ್ಗೆ ಪ್ರಾಧ್ಯಾಪಕನಾಗಿ ಹೋದನು , 1892ರಲ್ಲಿ ಬರ್ಲಿನ್ನಲ್ಲಿ ಹಾ¥sóïಮನ್ನಿಂದ ತೆರನಾಗಿದ್ದ ಸ್ಥಾನವನ್ನು ಅಲಂಕರಿಸಿದನು. ಈ ಸ್ಥಾನ ಸಂಶೋಧನೆಗಿಂತಲೂ, ಆಡಳಿತದಲ್ಲಿ ಹೆಚ್ಚು ಗಮನ ಹರಿಸುವಂತಹದಾಗಿದ್ದುದರಿಂದ ಫಿಷರ್ ರೋಸಿಹೋದನು. ನೈಸರ್ಗಿಕ ರಾಸಾಯನಿಕಗಳಿಂದ, ಕಾರ್ಬೋ ಹೈಡ್ರೇಟ್ಸ್, ಸಕ್ಕರೆ, ಗ್ಲುಕೋಸ್ಗಳ ಟ್ಯಾನಿಸ್, ಡೆಪಿಸೈಡ್ಗಳ ಸಂಶ್ಲೇಷಣೆ ಮತ್ತು ಅಧ್ಯಯನ ಫಿûಷರ್ನ ಅನನ್ಯ ಕೊಡುಗೆಗಳು. ಇವು ಜೀವ ರಸಾಯನಶಾಸ್ತ್ರದಲ್ಲಿ ಬಹು ಪ್ರಮುಖ ಪಾತ್ರ ವಹಿಸುತ್ತವೆ. 1899ರಲ್ಲಿ ಪೆಪ್ಟಿನ್,ಪ್ರೋಟೀನ್ಗಳಲ್ಲಿ, ಅವನು ಅಧಿಕೃತವಾಣಿಯಾದನು. 1882ರಿಂದ 1906ರವರೆಗೆ ಫಿಷರ್ ನಡೆಸಿದ ಸಂಶೋಧನೆಗಳು ವಿಶ್ವ ಖ್ಯಾತಿ ತಂದವು. ಪ್ಯೂರಿನ್ ಹಾಗೂ ಸಕ್ಕರೆಗಳ ಮೇಲೆ ತರಕಾರಿಗಳಲ್ಲಿ ಬೆಳೆಗಳಲ್ಲಿ, ಪ್ರಾಣಿಗಳ ಮೂತ್ರಗಳಲ್ಲಿರುವ ಅಡೆನೈನ್, ಕ್ಸಾಂಥೈನ್, ಗುವ್ನೈನ್ಗಳಂತಹ ರಾಸಯನಿಕಗಳ ಮೂಲ ಒಂದೇ ಆಗಿದ್ದು, ಒಂದರಿಂದ ಇನ್ನೊಂದನ್ನು ಪಡೆಯಬಹುದೆಂದು ಸಾಧಿಸಿದನು. ಒಂದು ವರ್ಷದ ಹಿಂದಷ್ಟೇ ಸ್ಥಾಪಿಸಲ್ಪಟ್ಟ ನೊಬೆಲ್ ಪ್ರಶಸ್ತಿಯನ್ನು 1902ರಲ್ಲಿ ಪಡೆದು, ಅದನ್ನು ಪಡೆದು ಎರಡನೆಯವನಾಗಿಫಿಷರ್ ಇತಿಹಾಸದಲ್ಲಿ ದಾಖಲಾಗಿದ್ದಾನೆ. ಚಹಾ, ಕಾಫಿû, ಕೊಕೊಗಳಲ್ಲಿರುವ ಟ್ಯಾನಿನ್, ಕೆಫಿನ್ ಹಾಗೂ ಕೋಕಾಗಳನ್ನು ಅಧ್ಯಯನ ನಡೆಸಿದ ಮೊದಲಿಗ ಫಿಷರ್.
ಅರೇನಿಯಸ್, ಸ್ವಾಂತೆ (ಆಗಸ್ಟ್) (1859-1927) - 1903
Arrthenius , Svante (August)
ಸ್ವೀಡನ್-ಭೌತರಸಾಯನಶಾಸ್ತ್ರಜ್ಞ. ಆಯೋನಿಕ ವಿಘಟನೆಯ ಸಿದ್ಧಾಂತ ಮಾಡಿಸಿದಾತ.
ರೈತನ ಮಗನಾದ ಅರೇನಿಯಸ್, ಉಪ್ಸಾಲ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಅಧ್ಯಯನ ಮಾಡಿದನಲ್ಲದೆ, ನಂತರ ಸ್ಟಾಕ್ಹೋಂಗೆ ಉನ್ನತ ಪದವಿಗಾಗಿ ತೆರಳಿದನು. ಸ್ಟಾಕ್ಹೋಂನಲ್ಲಿ ಅರೇನಿಯಸ್ ಎಲೆಕ್ಟೋಲೈಟ್ ದ್ರಾವಣಗಳ ಸ್ವಭಾವ ಅರಿಯಲು ಉನ್ಮುಖನಾದನು. ಹಲವು ವರ್ಷಗಳ ಪರಿಶೋಧನೆಯ ನಂತರ ಎಲೆಕ್ಟೋಲೈಟ್ ದ್ರಾವಣಗಳು ವೈದ್ಯುತ್ ಪ್ರವಾಹ ಹರಿಸುವ ಕಾರಣ ನೀಡಿದನು. ಎಲೆಕ್ಟೋಲೈಟ್ ದ್ರಾವಣಗಳು ಧನ ಹಾಗೂ ಋಣ ಆವಿಷ್ಟಿತ ಕಣಗಳನ್ನು ಹೊಂದಿರುವುದರಿಂದ ವೈದುತ್ ಪ್ರವಾಹ ಹರಿಯುವುದೆಂದು ಸೋದಾಹರಣವಾಗಿ ನಿರೂಪಿಸಿದನು. 1880ರ ವೇಳೆಗೆ ಈ ಸಿದ್ಧಾಂತದ ಬಗೆಗೆ ಸಾಕಷ್ಟು ಆಧಾರಗಳನ್ನು ಅರೇನಿಯಸ್ ಒದಗಿಸಿದರೂ ಸ್ವೀಡನ್ನ ವೈಜ್ಞಾನಿಕ ಸಮುದಾಯದಲ್ಲಿ ತಕ್ಷಣ ಇವು ಅಂಗೀಕೃತವಾಗಲಿಲ್ಲ. ಮುಂದೆ ಲವಣಗಳು. ಘನ ಸ್ಥಿತಿಯಲ್ಲೂ ಆವಿಷ್ಟಿತ ಕಣಗಳಿಂದಾಗಿರುವುದೆಂದು ತಿಳಿಸಿದನು. ಅರೇನಿಯಸ್ನ ಈ ಸಾಧನೆಯನ್ನು ಗುರುತಿಸಿ 1903ರಲ್ಲಿ ರಸಾಯನಶಾಸ್ತ್ರದಲ್ಲಿನ ನೊಬೆಲ್ ಪ್ರಶಸ್ತಿ ನೀಡಲಾಯಿತು. ಅರೇನಿಯಸ್ನ ಆಸಕ್ತ ರಂಗಗಳು ಹಲವು. ಭೌತಶಾಸ್ತ್ರ, ರೋಗರೋಧಶಾಸ್ತ್ರ, ವಿಶ್ವಶಾಸ್ತ್ರ ಅವನ ನೆಚ್ಚಿನ ಅಧ್ಯಯನದ ವಿಷಯಗಳಾಗಿದ್ದವು. ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೆಡ್ ಪ್ರಮಾಣ ಹೆಚ್ಚಾದಾಗ, ವಾತಾವರಣ ಹೆಚ್ಚಿನ ಶಾಖಗಳಿಸುವ ಹಸಿರು ಮನೆ ಪರಿಣಾಮವನ್ನು ಗುರುತಿಸಿದ ಮೊದಲಿಗ ಅರೇನಿಯಸ್, ‘ಅರೇನಿಯಸ್ ಸಮಿಕರಣ’ ದ ಮೂಲ ಕತೃವೂ ಈತನೇ
ರಾಮ್ಸೆ, ಸರ್ ವಿಲಿಯಂ (1852-1916) 1904
Ramsay , Sir William
ಬ್ರಿಟನ್-ರಸಾಯನಶಾಸ್ತ್ರ-ಆದರ್ಶ (Nobel )ಅನಿಲಗಳನ್ನು ಅನಾವರಣಗೊಳಿಸಿದಾತ.
ರಾಮ್ಸೆ ಗ್ಲಾಸ್ಗೋದಲ್ಲಿ ರಸಾಯನಶಾಸ್ತ್ರ ಓದಿ ,ಹೈಡೆಲ್ಬರ್ಗ್ನಲ್ಲಿ ಬುನ್ಸೆನ್ ಕೆಳಗೆ ಕೆಲಸ ಮಾಡಿದನು. 1880ರಲ್ಲಿ ಬ್ರಿಸ್ಟಲ್ನಲ್ಲಿ ಅನಿಲಗಳ ಸಾಂದ್ರತೆ ನಿರ್ಧರಿಸಲು ಪ್ರಾರಂಭಿಸಿದನು. 1884ರಲ್ಲಿ ಲಂಡನ್ಗೆ ಹೋಗಿ ನೆಲೆಸಿದ ರಾಮ್ಸೆ ತನ್ನ ಸಂಶೋಧನೆಗಳನ್ನು ಮುಂದುವರಿಸಿದನು. ರಾಮ್ಸೆ ಗಾಳಿಯಲ್ಲಿರುವ ಸಾರಜನಕ, ಪ್ರಯೋಗಾಲಯದಲ್ಲಿ ಸಿದ್ಧಗೊಳಿಸಿದುದಕ್ಕಿಂತಲೂ ಶೇಕಡಾ 0.5ಕ್ಕೂ ಹೆಚ್ಚುತೂಕ ಹೊಂದಿರುವುದೆಂದು ತೋರಿಸಿ ,ಗಾಳಿಯಲ್ಲಿ ನಮಗೆ ಅಜ್ಞಾತವಾಗಿರುವ ಬೇರೆ ಯಾವುದೇ ಅನಿಲ ಇರುವುದರಿಂದ ಹೀಗಾಗುತ್ತಿರಬಹುದೆಂದು ತರ್ಕಿಸಿದನು. ಈ ಅನಿಲವನ್ನು ಹುಡುಕಲೇಬೇಕೆಂದು ದೃಢ ನಿರ್ಧಾರ ತಳೆದನು. ಒಣ ಗಾಳಿಯಲ್ಲಿ ಆಮ್ಲಜನಕ ತೆಗೆದ ರಾಮ್ಸೆ , ಬಿಸಿಗೊಳಿಸಿದ ಮೆಗ್ನೇಷಿಯಂ, ಮೇಲೆ ಹಾಯಿಸಿದಾಗ ಅದು ಸಾರಜನಕವನ್ನು ಹೀರಿ ಮೆಗ್ನೀಷಿಯಂ ನೈಟ್ರೇಟ್ಗೆ ಬದಲಾಯಿತು. ಆಗ ಸಾಂದ್ರವಾದ, ಜಡ ಅನಿಲ ಉಳಿಯಿತು. ಇದನ್ನು ರ್ಯಾಮ್ಸೆ ಆರ್ಗಾನ್ ಎಂದು ಹೆಸರಿಸಿದನು. ಇದು ವಾತಾವರಣದಲ್ಲಿ ಶೇಕಡಾ 1 ಕ್ಕಿಂತಲೂ ಅಲ್ಪ ಪ್ರಮಾಣದಲ್ಲಿದೆ. ಇದು ಬೇರೆಲ್ಲಿ ಇರಬಹುದೆಂದು ಹುಡುಕಲು ಯತ್ನಿಸಿದ ರಾಮ್ಸೆ, ಕ್ಲೆವೈಟ್ ಖನಿಜದಲ್ಲಿ ಹೊಸದೊಂದು ಧಾತುವನ್ನು ಗುರುತಿಸಿದನು. ಕ್ರೂಕ್ಸ್ ಇದರ್ ರೋಹಿತದ ಅಧ್ಯಯನದಿಂದಅದು ಹೀಲಿಯಂ ಎಂದು ತೋರಿಸಿದನು. ಇದನ್ನು ಮೊದಲಿಗೆ ಸೂರ್ಯನಲ್ಲಿ ಮಾತ್ರ ಇದೆಯೆಂದು ನಂಬಲಾಗಿದ್ದಿತು. ರ್ಯಾಮ್ಸೆಯ ಮುಂದುವರಿದ ಹುಡುಕಾಟದಲ್ಲಿ ಕ್ರಿಪ್ಟಾನ್, ಕ್ಸೆನಾನ್ ಹಾಗೂ ನಿಯಾನ್ ಲಭ್ಯವಾದವು. ಈ ಐದು ಹೊಸ ಅನಿಲಗಳನ್ನು ರ್ಯಾಮ್ಸೆ ಶೂನ್ಯ ಸಂಯೋಗ ಸಾಮಥ್ರ್ಯದ ಜಡ ಅನಿಲಗಳೆಂದು ಕರೆದನು. 1910ರಲ್ಲಿ ಆರನೇ ಜಡ ಅನಿಲ ರಾಡಾನ್ ಪತ್ತೆ ಹಚ್ಚಿದನು. ಇದು ವಿಕಿರಣ ಶೈಥಿಲ್ಯ ಹೊಂದಿದ ರೇಡಿಯಂನೊಂದಿಗೆ ಹೀಲಿಯಂ ಪ್ರತಿಕ್ರಿಯೆ ಹೊಂದಿದಾಗ ರೂಪುಗೊಳ್ಳುತ್ತದೆ. ಆರ್ಗಾನ್ ಹೊರತು ಉಳಿದವುಗಳೆಲ್ಲ ಬಹು ಅಪರೂಪದವು. 1962ರಲ್ಲಿ ಬಾರ್ಟ್ಲೆಟ್ ಕ್ಸೆನಾನ್, ಕ್ರಿಪ್ಟಾನ್ಗಳಲ್ಲಿ ಅತ್ಯಲ್ಪ ಕ್ರಿಯಾಶೀಲತೆ ಇದೆಯೆಂದು ತೋರಿಸಿದನು. ಈ ಅನಿಲಗಳು ರಾಸಾಯನಿಕ ಬಂಧಗಳನ್ನು ಅರ್ಥ ಮಾಡಿಕೊಳ್ಳಲು ನೆರವಾದವು. ಇವೆಲ್ಲವುಗಳಿಗೂ ವಿಶಿಷ್ಟವಾದ ರೋಹಿತವಿದೆ. ಇದಕ್ಕೆ ರ್ಯಾಡಾನ್ ಮಾತ್ರ ಅಪವಾದ. ಜಡ ವಾತಾವರಣ ಬೇಕಾದ ಸಂದರ್ಭಗಳಲ್ಲಿ ಇವು ನೆರವಾಗುತ್ತವೆ. ಹೀಲಿಯಂ ಅತ್ಯಲ್ಪ ಕುದಿ ಬಿಂದು -230 ಡಿಗ್ರಿ ಸೆಲ್ಸಿಯಸ್ ಹೊಂದಿದ್ದು ಅತಿಶೀತಲ ಸ್ಥಿತಿ ನಿರ್ಮಿಸಲು ಬಳಕೆಯಾಗುತ್ತದೆ. ಭೂಮಿಯಲ್ಲಿ ಅಪರೂಪವೆನಿಸಿದರೂ, ಈ ವಿಶ್ವದಲ್ಲಿ ಜಲಜನಕದ ನಂತರ,ಅತಿ ವಿಪುಲವಾಗಿರುವ ಧಾತುವೆಂದರೆ ಹೀಲಿಯಂ. ಇದು ಜಗತ್ತಿನ ದ್ರವ್ಯರಾಶಿಯಲ್ಲಿ ಶೇಕಡ 23ರಷ್ಟಿದೆ. ಆವರ್ತ ಕೋಷ್ಟಕದಲ್ಲಿನ ಒಂದು ಸಮೂಹವನ್ನೇ ಸಂಪೂರ್ಣವಾಗಿ ಪತ್ತೆ ಹಚ್ಚಿದ ಏಕೈಕ ವ್ಯಕ್ತಿ ರಾಮ್ಸೆ ಇಂತಹ ಸಾಧನೆ ಇತಿಹಾಸದಲ್ಲಿ ಎಂದೂ ಘಟಿಸಿಲ್ಲ. 1904ರಲ್ಲಿ ರಾಮ್ಸೆ ನೊಬೆಲ್ ಪ್ರಶಸ್ತಿ ಪಡೆದನು.
ಜೊಹಾನ್, ಫ್ರೆಡರಿಕ್ ವಿಲ್ಹೆಲ್ಮ್ ಅಡಾಲ್ಫ್ ವಾನ್ ಬೇಯರ್ (1835-1917)-1905
Johann , Freidrich Wilhelm
ಜರ್ಮನಿ -ರಸಾಯನಶಾಸ್ತ್ರ-ಸಾವಯವ ರಸಾಯನಶಾಸ್ತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದಾತ.
ಜೊಹಾನ್ 31 ಅಕ್ಟೋಬರ್ 1835ರಂದು ಬರ್ಲಿನ್ನಲ್ಲಿ ಜನಿಸಿದನು. ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಗಣಿತ ಹಾಗೂ ಭೌತಶಾಸ್ತ್ರದ ಪದವಿ ಗಳಿಸಿದ ಜೊಹಾನ್ ನಂತರ ಹೈಡೆಲ್ಬರ್ಗ್ನಲ್ಲಿ ಬುನ್ಸೆನ್ ಮಾರ್ಗದರ್ಶನದಲ್ಲಿ ರಸಾಯನಶಾಸ್ತ್ರವನ್ನು ಕಲಿತನು. ಆಗಸ್ಟ್ ಕೆಕುಲೆಯ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ ಜೊಹಾನ್ 1858ರಲ್ಲಿ ಡಾಕ್ಟರೇಟ್ ಗಳಿಸಿದನು. 1860ರಲ್ಲಿ ಬರ್ಲಿನ್ ಟ್ರೇಡ್ ಅಕಾಡೆಮಿಯಲ್ಲಿ ಉಪನ್ಯಾಸಕನಾದನು. 1871ರಲ್ಲಿ ಸ್ಟ್ರಾರ್ಸ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದನು. 1875ರಲ್ಲಿ ಮ್ಯೂನಿಕ್ ವಿಶ್ವವಿದ್ಯಾಲಯದಲ್ಲಿ ಲೀಬಿಖ್ನಿಂದ ತೆರನಾದ ಪ್ರಾಧ್ಯಾಪಕ ಹುದ್ದೆ ವಹಿಸಿಕೊಂಡನು. ಜೊಹಾನ್ ಸಸ್ಯಗಳ ಇಂಡಿಗೋ ವರ್ಣ ಮತ್ತು ಥ್ಯಾಲಿನ್ ವರ್ಣಗಳನ್ನು ಅನಾವರಣಗೊಳಿಸಿದನು. ನೈಟ್ರೋ ಸಂಯುಕ್ತಗಳು, ಪಾಲಿಅಸಿಟಿಲಿನ್ ಆಕ್ಸೋಲಿಯಂ ಲವಣ, ಯೂರಿಕ್ ಆಮ್ಲದ ವ್ಯುತ್ಪನ್ನಗಳ ಅಧ್ಯಯನದಲ್ಲಿ ಪರಿಶ್ರಮಿಸಿದನು. ಬಾರಿಬ್ಯುಟ್ರೇಟ್ಗಳ ಮೂಲ ಸಂಯುಕ್ತವಾದ ಬಾರಿಬ್ಯೂಟರಿಕ್ ಆಮ್ಲವನ್ನು 1864ರಲ್ಲಿ ಅನಾವರಣಗೊಳಿಸಿದನು. 1863ರಲ್ಲಿ ಇಂಡೋಲ್ನ್ನು ಸಂಶ್ಲೇಷಿಸಿ ಅದರ ರಾಸಾಯನಿಕ ಸ್ವರೂಪವನ್ನು ವಿವರಿಸಿದನು. ರಾಸಾಯನಿಕ ತ್ರಿವಳಿ ಬಂಧ, ಇಂಗಾಲದ ಉಂಗುರಗಳ ಸಿದ್ಧಾಂತ ನೀಡಿದರು. ಲಿಯೋ ಬೇಕ್ಲ್ಯಾಂಡ್ ಬೇಕಲೈಟ್ನ್ನು ಅನಾವರಣಗೊಳಿಸಿಸುವ ಮೊದಲೇ 1872ರಲ್ಲಿ ಫಿನಾಲ್ ಮತ್ತು ಫಾರ್ಮಾಲ್ಡಿಹೈಡ್ನ್ನು ಕುರಿತಾಗಿ ಪ್ರಯೋಗಗಳನ್ನು ನಡೆಸಿದ್ದನು. ಸಾವಯವ ರಸಾಯನ ಶಾಸ್ತ್ರದಲ್ಲಿನ ಗಮನಾರ್ಹ ಕೊಡುಗೆಗಾಗಿ 1905ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮ್ವಾಸಾ, (ಫರ್ಡಿನ್ಯಾಂಡ್ ಫ್ರೆಡರಿಕ್) ಹೆನ್ರಿ (1852-1907)-1906
Moissan , ( Ferdinand Frederic) Henri
ಫ್ರಾನ್ಸ್-ನಿರವಯವ ರಸಾಯನಶಾಸ್ತ್ರ- ಫ್ಲೂರಿನ್ ಪ್ರತ್ಯೇಕಿಸಿದಾತ-ಅಧಿಕ ತಾಪಮಾನದ ರಸಾಯನಶಾಸ್ತ್ರದ ಮೂಂಚೂಣಿಗ.
ಕಡು ಬಡತನದಲ್ಲಿ ಜನಿಸಿದ ಮ್ವಾಸಾಗೆ ವಿದ್ಯಾಭ್ಯಾಸ ಗಗನ ಕುಸುಮವಾಗಿದ್ದಿತು. ಮದುವೆಯಾದ ಮೇಲೆ, ಉದಾರಿಯಾದ ಮಾವನಿಂದಾಗಿ ಮ್ವಾಸಾ ಕನಸುಗಳು ನನಸಾಗತೊಡಗಿದವು, ರಸಾಯನಶಾಸ್ತ್ರದಲ್ಲಿ ಪದವಿ ಪದೆದ ಮ್ವಾಸಾ ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕನಾದನು. ಫ್ಲೂರಿನ್ನನ್ನು ಪ್ರತ್ಯೇಕಿಸಲು ಡೇವಿಯನ್ನು ಒಳಗೊಂಡಂತೆ ಹಲವಾರು ಜನ ಯತ್ನಿಸಿದ್ದರು. ಫ್ಲೂರಿನ್ ತೀವ್ರ ಪ್ರತಿಕ್ರಿಯಾಕಾರಿಯಾಗಿದ್ದು, ಅದನ್ನು ಸಂಗ್ರಹಿಸುವ ಪಾತ್ರೆಯೊಂದಿಗೆ ಪ್ರತಿಕ್ರಿಯಿಸುತ್ತಿತ್ತು. ಇದರಿಂದಾಗಿ ಹಲವಾರು ಅವಘಡಗಳು ಸಂಭವಿಸಿದ್ದವು. 1886ರಲ್ಲಿ ಮ್ವಾಸಾ ಪೊಇಟ್ಯಾಷಿಯಂ ಫ್ಲೊರೈಡ್ ದ್ರಾವಣವನ್ನು 50 ಡಿಗ್ರಿ ಸೆಲ್ಫಿಯಸ್ನಲ್ಲಿ ವಿದ್ಯುದ್ವಿಭಜನೆಗೆ (Electrolysis) ಪ್ಲಾಟಿನಂ ಹಾಗೂ ಕ್ಯಾಲ್ಸಿಯಂ ಮಿಶ್ರ ಧಾತುವಿನ ಪಾತ್ರೆಯಲ್ಲಿ ಪ್ರತ್ಯೇಕಿಸಿದ ಫ್ಲೂರಿನ್ನನ್ನು ಸಂಗ್ರಹಿಸಿದನು. ಫ್ಲೂರಿನ್ ಅತ್ಯಂತ ಕ್ರಿಯಾಶೀಲ ಧಾತುವೆಂದು ಖ್ಯಾತವಾಗಿದೆ. ಮ್ವಾಸಾ ಶುದ್ದ ಬೋರೋನ್ ಪಡೆದ ಮೊದಲಿಗ. ಕೃತಕವಾಗಿ ವಜ್ರ ತಯಾರಿಸುವ ವಿಧಾನ ಕಂಡು ಹಿಡಿದಾತ. ಅಧಿಕ ತಾಪಮಾನ ರಸಾಯನಶಾಸ್ತ್ರದಲ್ಲಿ ಕುತೂಹಲ ಹೊಂದಿದ್ದ ಮ್ವಾಸಾ, ಇಂಗಾಲದ ಚಾಪ (Arc) ಬಳಸಿ 3000 ಸೆಂ. ಗಿಂತಲೂ ಅಧಿಕ ತಾಪಮಾನದ ಕುಲುಮೆ ನಿರ್ಮಿಸಿದನು. ಮ್ವಾಸಾ ಕೃತಕ ವಜ್ರ , ಪಚ್ಚೆ, ವೈಡೂರ್ಯ , ಬೋರೈಡ್, ಕಾರ್ಬೈಡ್ ಸಿಲಿಸ್ಶೆಡ್ಗಳನ್ನು ಪಡೆದನು. ಆಗಿನ ಕಾಲಕ್ಕೆ ಅಷ್ಟೊಂದು ಪರಿಚಿತವಲ್ಲದ ಲೋಹಗಳನ್ನು ಸಂಸ್ಕರಿಸಿದನು. 1906ರಲ್ಲಿ ಮ್ವಾಸಾ ನೊಬೆಲ್ ಪ್ರಶಸ್ತಿ ಪಡೆದನು.
ಬುಖ್ನೆರ್, ಎಡ್ಯೂಯಾರ್ಡ್ (1860-1919 ) -1907
Buchner , Eduard
ಜರ್ಮನಿ-ಸಾವಯವ ರಸಾಯನಶಾಸ್ತ್ರ -ಹುದುಗುವಿಕೆಗೆ ಜೀವಂತ ಕೋಶಗಳು ಅಗತ್ಯವಿಲ್ಲವೆಂದು ತೋರಿಸಿದಾತ.
ಅಣ್ಣನಿಂದ ವಿಜ್ಞಾನದತ್ತ ಆಕರ್ಷಿತನಾಗಿದ್ದ ಬುಕ್ನೆರ್, ನೇಗೇಲಿಯ ಮಾರ್ಗದರ್ಶನದಲ್ಲಿ ಜೀವ ಶಾಸ್ತ್ರವನ್ನು, ಬೇಯರ್ನ ಮಾರ್ಗದರ್ಶನದಲ್ಲಿ ರಸಾಯನಶಾಸ್ತ್ರವನ್ನು ಕಲಿತನು. ಬೇಯರ್ನ ಸಹಾಯಕನಾಗಿ ಕೆಲಸ ಪ್ರಾರಂಭಿಸಿದ ಈತ 1893ರಲ್ಲಿ ಕೀಲ್ನಲ್ಲಿ ಪ್ರಾಧ್ಯಾಪಕನಾಗಿ, ಮುಂದೆ ಹಲವಾರು ಬಾರಿ ಬೇರೆ ಸಂಸ್ಥೆಗಳಿಗೆ ಸೇರಿ, ಅಂತಿಮವಾಗಿ 1911ರಲ್ಲಿ ವುರ್ಝ್ಬರ್ಗ್ನಲ್ಲಿ ನೆಲೆಸಿದನು. ಬುಖ್ನೆರ್ ಮೊದಲನೇ ಜಾಗತಿಕ ಯುದ್ದದಲ್ಲಿ ಸೇವಾ ಕಾರ್ಯಚರಣೆಯಲ್ಲಿ ಕೊಲ್ಲಲ್ಪಟ್ಟನು. 1897ರಲ್ಲಿ ಬುಖ್ನೆರ್ ವೀಕ್ಷಣೆಗಳು ಪ್ರಕರಣಗೊಳ್ಳುವವರೆಗೆ ಹುದುಗುವಿಕೆಗೆ ಜೀವಂತ ಈಸ್ಟ್ ಕೋಶಗಳ ಅಗತ್ಯವಿದೆ0iÉುಂದು ಭಾವಿಸಲಾಗಿತ್ತು. ಬುಕ್ನೆರ್ ಈಸ್ಟ್ ಕೋಶಗಳನ್ನು ಮರಳಿನೊಡನೆ ರುಬ್ಬಿ, ಕೋಶದಿಂದ ಮುಕ್ತವಾದ ಆಹರಣ (Extract ) ಪಡೆದು, ಅದನ್ನು ಸಕ್ಕರೆ ದ್ರಾವಣಕ್ಕೆ ಸೇರಿಸಿ, ಹುದುಗುವಿಕೆ ತರುವಲ್ಲಿ ಯಶಸ್ವಿಯಾದನು. ಪ್ರತಿ ರಾಸಾಯನಿಕ ಕ್ರಿ0iÉುಗೂ ಒಂದು ಜೈವಿಕ ಅಗೋಚರ ಮಧ್ಯಸ್ಥಿಕೆ ಬೇಕೆಂಬ ಆಗಿನ ಚೇತನವಾದಿಗಳಿಗೆ ಇದರಿಂದ ಭಾರಿ ಹಿನ್ನೆಡೆ ಯುಂಟಾಗಿ, ರಾಸಾಯನಿಕ ಕ್ರಿಯಾ ಭೌತಿಕ ಅಣುಮೂಲದ್ದೆಂದು ಖಚಿತಗೊಂಡಿತು. ಈಸ್ಟ್ನಿಂದ ತಾನು ಪಡೆದ ಆಹರಣವನ್ನು ಬುಖ್ನೆರ್ ಝೈಮೇಸ್ ಎಂದು ಕರೆದನು. ಈಗ ಇದೊಂದು ಕಿಣ್ವ (Enzyme) ಎಂದು ಗುರುತಿಸಲ್ಪಟ್ಟಿದೆ. ಈಗ ಇವು ಕಾರ್ಯ ನಿರ್ವಹಿಸುವ ವಿಶಿಷ್ಟ ಬಗೆಯ ಪ್ರೊಟೀನ್ಗಳೆಂದೂ ಇವು ಎಲ್ಲಾ ಜೀವರಾಸಾಯನಿಕ ಕ್ರಿಯೆಗಳಿಗೂ ಕಾರಣವೆಂದೂ, ಸಾಬೀತಾಗಿದೆ. 1907ರ ನೊಬೆಲ್ ಪಾರಿತೋಷಕ ಪಡೆದ ಬುಖ್ನೆರ್ 1919ರಲ್ಲಿ ಯುದ್ಧದಲ್ಲಿ ಹತನಾದನು. ಈತನ ಅಣ್ಣ ಹ್ಯಾನ್ ಬುಖ್ನೆರ್ ಸೂಕ್ಷ್ಮಜೀವಿಶಾಸ್ತ್ರದಲ್ಲಿ ಕೆಲಸ ಮಾಡಿ ರಕ್ತ ದ್ರವದಲ್ಲಿರುವ ಪ್ರೊಟೀನ್ ಅಂಶ ರೋಗ ಪ್ರತಿರೋಧಕ್ಕೆ ಬಹು ಮುಖ್ಯವಾದುದೆಂದು ತೋರಿಸಿದ್ದಾನೆ.
ರುದರ್’ಫೋರ್ಡ್,ಅರ್ನ್ಸ್ಟ್ (1871-1937) 1908
Rutherford , Ernest, 1st Baron Rutherford
ನ್ಯೂಝಿಲ್ಯಾಂಡ್-ಬ್ರಿಟನ್ ಭೌತಶಾಸ್ತ್ರ- ಬೈಜಿಕ ಭೌತಶಾಸ್ತ್ರದ (Nuclear Physics) ಸಂಸ್ಥಾಪಕ.
ನ್ಯೂಜಿಲ್ಯಾಂಡಿನ ನೆಲ್ಸನ್ನ ಅವಿಭಕ್ತ ಕುಟುಂಬದಲ್ಲಿ ಜನಿಸಿದ ರುದರ್’ಫೋರ್ಡ್ ಶಿಷ್ಯವೇತನ ಗೆದ್ದು ಕ್ಯಾಟೆನ್ಬರಿ ಕಾಲೇಜಿಗೆ ಸೇರಿದನು. ಪದವಿ ಅಂತಿಮ ವರ್ಷದಲ್ಲಿ ಭೌತಶಾಸ್ತ್ರ ಹಾಗೂ ಗಣಿತಗಳತ್ತ ಗಮನ ಕೇಂದ್ರೀಕರಿಸಿದನು. ಹಟ್ರ್ಸ್ ರೇಡಿಯೋ ತರಂಗ ಕಂಡು ಹಿಡಿದ ಆರನೇ ವರ್ಷದಲ್ಲಿ ರುದರ್’ಫೋರ್ಡ್ ಅದರ ಪ್ರೇಷಕ ನಿರ್ಮಿಸಿದ್ದನು. 1895ರಲ್ಲಿ ಮತ್ತೊಮ್ಮೆ ಕೇಂಬ್ರಿಜ್ ಶಿಷ್ಯ ವೇತನ ಗೆದ್ದು ಅಲ್ಲಿ ಜೆ.ಜೆ. ಥಾಮ್ಸನ್ ಮಾರ್ಗ ದರ್ಶನದಲ್ಲಿ , ಗಾಳಿಯಲ್ಲಿ ಕ್ಷ-ಕಿರಣ ಪಾರಗಮನ ಅಭ್ಯಸಿಸಿದನು. ರುದರ್’ಫೋರ್ಡ್, ಜೆ.ಜೆ. ಥಾಮ್ಸನ್ ಕೈ ಕೆಳಗಿನ ಪ್ರಥಮ ಸಂಶೋಧಕ ವಿದ್ಯಾರ್ಥಿಯಾಗಿದ್ದನು. ರುದರ್’ಫೋರ್ಡ್ ಮೆಕ್ಗಿಲ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದನು. ರುದರ್’ಫೋರ್ಡ್ ಖ್ಯಾತ ರಸಾಯನಶಾಸ್ತ್ರಜ್ಞ ಸಾಡಿಯ ಸಹಾಯದಿಂದ ಬೈಜಿಕ ಭೌತಶಾಸ್ತ್ರದಲ್ಲಿ ಕಾರ್ಯ ನಿರತನಾದನು. ರುದರ್’ಫೋರ್ಡ್’ಗೆ ಸಾಕಷ್ಟು ಪ್ರಮಾಣದಲ್ಲಿ ಪ್ರಯೋಗಗಳಿಗೆ ಬೆಂಬಲ ದೊರೆಯಿತು. ಸಾಡಿ ಹಾಗೂ ರುದರ್’ಫೋರ್ಡ್ ಹದಿನೆಂಟು ತಿಂಗಳುಗಳಲ್ಲಿ ಒಂಬತ್ತು ಲೇಖನ ಪ್ರಕಟಿಸಿದರು. 1896ರಲ್ಲಿ ಬೆಕೂರೆ, ಯುರೇನಿಯಂನಲ್ಲಿ ವಿಕಿರಣಪಟುತ್ವ (Radio Activity) ಅನಾವರಣಗೊಳಿಸಿದ್ದನು. ಜೆ.ಸಿಷ್ಮಿಡ್ಜ್ , ಪೀರೆ ಹಾಗೂ ಮೇರಿ ಕ್ಯೂರಿ ಬೇರೆ ಧಾತುಗಳಲ್ಲಿನ ವಿಕಿರಣ ಪಟುತ್ವವನ್ನು ತೋರಿಸಿದ್ದರು. ರುದರ್’ಫೋರ್ಡ್ ಈ ಧಾತುಗಳನ್ನು ಅಭ್ಯಸಿಸಿ, ವಿಕಿರಣಶೀಲತೆಯಲ್ಲಿ ಎರಡು ಬಗೆಯ ಕಾರಣಗಳಿವೆಯೆಂದು ಹೇಳಿದನು. ಹೀಲಿಯಂ ಬೀಜ ಹೋಲುವ ಆಲ್ಫಾ ಕಿರಣ ಹಾಗೂ ಎಲೆಕ್ಟ್ರಾನ್ಗಳ ಬೀಟಾ ಕಿರಣಗಳಿವು. ಇದಾದ ಎರಡು ವರ್ಷಗಳ ನಂತರ ಇವುಗಳಿಗಿಂತ ಪ್ರಬಲವಾದ ಗಾಮಾ ಕಿರಣಗಳನ್ನು ಸಹ ರುದರ್’ಫೋರ್ಡ್ ಪತ್ತೆ ಹಚ್ಚಿದನು. 1903ರಲ್ಲಿ ಸಾಡಿಯ ಜೊತೆಗೂಡಿ,. ಕ್ರಮವಾದ ಪರಿವರ್ತನೆಗಳಿಂದ ವಿಭಿನ್ನ ಪ್ರಮಾಣಗಳಲ್ಲಿ ಅನಿರ್ದಿಷ್ಟ ಸಮಯಾವಧಿಗಳಲ್ಲಿ ರೇಡಿಯೋ ವಿಕಿರಣ ಹೊರಹೊಮ್ಮುವುದೆಂದು ರುದರ್’ಫೋರ್ಡ್ ಪ್ರತಿಪಾದಿಸಿದನು. ಕಿರಣಗಳ ಹೊಮ್ಮಿಕೆ ಅನಿರ್ದಿಷ್ಟ ಸಮಯದ್ದಾದರೂ, ವಿಕಿರಣಪಟು ಧಾತುಗಳಲ್ಲಿನ ಅರ್ಧ ಪರಮಾಣುಗಳು ಶೈಥಿಲ್ಯ (Decay) ಹೊಂದುವ ಸರಾಸರಿ ಅವಧಿ ಒಂದೇ ಇರುತ್ತದೆಯೆಂದು ವಿವರಿಸಿದನು. ಕೆಲವು ಧಾತುಗಳು ಯಾವಾಗಲೂ ಒಂದೇ ಸ್ಥಿತಿಯಲಿದ್ದರೆ ಇನ್ನೂ ಕೆಲವು ತಮ್ಮ ಪರಮಾಣುಗಳನ್ನು ಶೈಥಿಲ್ಯದಿಂದ ಕಳೆದುಕೊಂಡು , ಬೇರೆ ಧಾತುಗಳಾಗಿ ಬದಲಾಗುವುದು ಕ್ರಾಂತಿಕಾರಕವೆನಿಸಿತು. ಟಿ.ರಾಡ್ಸ್ನೊಂದಿಗೆ ರುದರ್’ಫೋರ್ಡ್ ಆಲ್ಪಾ ಕಿರಣಗಳ ದ್ರವ್ಯ ಹಾಗೂ ಆವಿಷ್ಟ ನಿರ್ಧರಿಸಿ, ಅದು ಹೀಲಿಯಂ ಬೀಜಕ್ಕೆ ಸಮನಾಗಿರುವುದೆಂದು ತೋರಿಸಿದನು. 1907ರಲ್ಲಿ ರುದರ್’ಫೋರ್ಡ್ ಅಲ್ಪಾಕಿರಣಗಳ ದ್ರವ್ಯ ಹಾಗೂ ಆವೇಶ ನಿರ್ಧರಿಸಿ ಅದು ಹೀಲಿಯಂ ಬೀಜಕ್ಕೆ ಸಮನಾಗಿರುವುದೆಂದು ತೋರಿಸಿದನು. ಇದೇ ವರ್ಷ ರುದರ್’ಫೋರ್ಡ್ ಬ್ರಿಟನ್ಗೆ ಮರಳಿ, ಮ್ಯಾಂಚೆಸ್ಟರ್ನಲ್ಲಿ ಗೀಗರ್ ಜೋತೆಗೆ ವಿಕಿರಣಪಟುತ್ವದ ಅಧ್ಯಯನ ಮುಂದುವರೆಸಿದನು. ಗೀಗರ್ ಈ ಕಿರಣಗಳನ್ನು ಎಣಿಸುವ ಸಾಧನ ನಿರ್ಮಿಸಿದನು. ಗೀಗರ್ ಹಾಗೂ ಮಾರ್ಸಡೆನ್ ಈ ಆಲ್ಫಾ ಕಣಗಳಲ್ಲಿ 8000ರಲ್ಲಿ ಒಂದು ಕಣ ಬಂಗಾರದ ರೇಕಿಗೆ ತಾಗಿ ಹಿಂದಕ್ಕೆ ಪುಟಿಯುವುದನ್ನು ಗಮನಿಸಿದರು. ಹಗುರವಾಗಿರುವ ಎಲೆಕ್ಟ್ರಾನ್ಗೆ ಡಿಕ್ಕಿಹೊಡೆದು, ಆಲ್ಪಾಕಿರಣಗಳು ಇಷ್ಟೊಂದು ಹಿಂದಕ್ಕೆ ಪುಟಿಯಲಾರದೆಂದು ತರ್ಕಿಸಿದ, ರುದರ್’ಫೋರ್ಡ್ ಪರಮಾಣುವಿನ ಕೇಂದ್ರದಲ್ಲಿ ಎಲೆಕ್ಟ್ರಾನ್ನಷ್ಟು ಸಂಖ್ಯೆಯಲ್ಲಿ, ಅದಕ್ಕೆ ವಿರುದ್ಧವಾದ ಆವಿಷ್ಟ ಹೊಂದಿರುವ, ಭಾರವಾದ ಬೀಜವಿರುವುದೆಂದು 1911ರಲ್ಲಿ ಹೇಳಿದನು. ಇದರಿಂದಾಗಿ ಪರಮಾಣುವಿನಲ್ಲಿ ಋಣ ಹಾಗೂ ಧನ ಆವಿಷ್ಟಗಳು ಪರಸ್ಪರ ನಿರಸನಗೊಳ್ಳುತ್ತವೆ . ಇದು ಮೊದಲ ಬಾರಿಗೆ ಪರಮಾಣುವಿನ ಸರಿಯಾದ ಮಾದರಿಯಾಗಿದ್ದಿತು. ಬೊಹ್ರ್ ಇದನ್ನು ಅಭಿವೃದ್ದಿಗೊಳಿಸಿ, ಎಲೆಕ್ಟ್ರಾನ್ಗಳು ಪರಮಾಣುವಿನ ಬೀಜದ ಸುತ್ತಲೂ ಸುತ್ತುವುದೆಂದು ತಿಳಿಸಿ, ಪ್ಲಾಂಕ್ನ ಸಿದ್ಧಾಂತಕ್ಕೆ ಕಾರಣ ನೀಡಿದನು. ಮೊದಲನೇ ಜಾಗತಿಕ ಯುದ್ದ ಪ್ರಾರಂಭವಾಗಿ ರುದರ್’ಫೋರ್ಡ್ ಸೈನಿಕ ವಿಧಾನಗಳಿಂದ ಜಲಾಂತರ್ಗಾಮಿಗಳನ್ನು ಪತ್ತೆ ಹಚ್ಚುವ ಯೋಜನೆಗೆ ನಿಯೋಜಿಸಲಾಯಿತು,. 1919ರಲ್ಲಿ ಜೆ.ಜೆ.ಥಾಮ್ಸನ್ ತೆರವುಗೊಳಿಸಿದ ಕೇಂಬ್ರಿಜ್ನ ಕ್ಯಾವೆಂಡಿಷ್ ಪ್ರಾಧ್ಯಾಪಕ ಹುದ್ದೆಗೇರಿದ ರುದರ್’ಫೋರ್ಡ್ ಕೆಲವೇ ದಿನಗಳಲ್ಲಿ ಪರಮಾಣು ಬೀಜವನ್ನು ಕೃತಕ ವಿಧಾನಗಳಿಂದ ಒಡೆಯಬಹುದೆಂದು ಅನಾವರಣಗೊಳಿಸಿದನು. ರುದರ್ಪೆÇೀರ್ಡ್ನ ಸಹಾಯಕರು ಆಗಿನ್ನೂ ಯುದ್ದದಿಂದ ತಮ್ಮ ಕೆಲಸಗಳಿಗೆ ಮರಳಿರಲಿಲ್ಲ. ಆದುದರಿಂದ ರುದರ್’ಫೋರ್ಡ್ ಖುದ್ದಾಗಿ ತಾನೇ ಪ್ರಯೋಗ ನಿರತನಾದನು. ಸಾರಜನಕದಂತಹ ಪರಮಾಣುವಿನ ಬೀಜವನ್ನು ತಾಡಿಸುವ ಆಲ್ಫಾ ಕಿರಣಗಳು, ಪ್ರೋಟಾನ್ನ್ನು ಬೀಜದಿಂದ ಹೊರಹಾಕಿ, ಹಗುರ ಪರಮಾಣುವಿಗೆ ಕಾರಣವಾಗುತ್ತವೆ. 1920ರಿಂದ 1924 ರವರೆಗೆ ರುದರ್’ಫೋರ್ಡ್ ಹಾಗೂ ಚಾಡ್ವಿಕ್ ಹಗುರ ಪರಮಾಣುಗಳನ್ನು ಆಲ್ಪಾ ಕಣಗಳಿಂದ ಒಡೆಯಬಹುದೆಂದು ತೋರಿಸಿದರಲ್ಲದೆ ಮುಂದೆ ನ್ಯೂಟ್ರಾನ್ ಅಸ್ತಿತ್ವವನ್ನು ಘೋಷಿಸಿದರು. ಕಾಕ್ಕ್ರಾಫ್ಟ್ ಹಾಗೂ ಇ. ಟಿ.ಎಸ್.ವಾಲ್ಟನ್ ರುದರ್’ಫೋರ್ಡ್ ಸಲಹೆಗಳ ಆಧಾರದ ಮೇಲೆ ಭಾರ ಧಾತುಗಳನ್ನು ಒಡೆಯುವ ವಿಧಾನ ರೂಪಿಸಿದರು. ರುದರ್’ಫೋರ್ಡ್ ಎಂ.ಓಲಿಪ್ರಾಯರಿನ್ ಹಾಗೂ ಪಿ.ಹಾರ್ಟೆಕ್ ಜೊತೆಗೂಡಿ, 1934ರಲ್ಲಿ ಡ್ಯುಟೇರಿಯಂನ್ನು ಡ್ಯುಟೇರಿಯಂ ಬೀಜದಿಂದ ತಾಡಿಸಿ, ಬೈಜಿಕ ಸದಳನ (Nuclear Fusion )ಸಾಧಿಸಿ ಟ್ರೈಟಿಯಂನ್ನು ಪಡೆದರು. 1920ರ ಸುಮಾರಿನಲ್ಲಿ ರುದರ್’ಫೋರ್ಡ್ ನ್ಯೂಟ್ರಾನ್ ಹಾಗೂ ಟ್ರೈಟಿಯಂ ಅಸ್ತಿತ್ವವನ್ನು ಗ್ರಹಿಸಿದ್ದನು. ಬೈಜಿಕ ಭೌತಶಾಸ್ತ್ರದಲ್ಲಿನ ಸಾಧನೆಗಾಗಿ 1908ರಲ್ಲಿ ರುದರ್’ಫೋರ್ಡ್ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಗಳಿಸಿದನು. ಜಗತ್ತಿನ ಹಲವಾರು ಖ್ಯಾತ ವಿಜ್ಞಾನಿಗಳು ರುದರ್’ಫೋರ್ಡ್ ಶಿಷ್ಯರಾಗಿದ್ದರು.
ಓಸ್ಟ್’ವಾಲ್ಡ್, ಫ್ರೀಡರಿಖ್, ವಿಲ್ಹೆಲ್ಮ್ (1853-1932) 1909
Ostwald , Friedrich Wilhelm
ಜರ್ಮನಿ - ಆಧುನಿಕ ಭೌತರಸಾಯನಶಾಸ್ತ್ರದ ಮುಂಚೂಣಿಗ.
ಆಧುನಿಕ ರಸಾಯನಶಾಸ್ತ್ರವನ್ನು ವಾನ್.ಟಿ ಹಾಫ್ ,ಆರೇನಿಯಸ್ ಹಾಗೂ ಓಸ್ವಾಲ್ಟ್ ಸ್ಥಾಪಿಸಿದರು. ಓಸ್ವಾಲ್ಟ್ ಬಾಲ್ಯದಿಂದಲೂ, ರಾಸಾಯನಿಕಶಾಸ್ತ್ರದಲ್ಲಿ ಆಸಕ್ತನಾಗಿದ್ದನು. ತಾನೇ ಬಣ್ಣ ತಯಾರಿಸಿಕೊಳ್ಳುವುದು, ಛಾಯಾಗ್ರಹಣಕ್ಕೆ ಸ್ವಂತ ಕಾಗದ ತಯಾರಿಸುವುದು ,ಪಟಾಕಿ ಮಾಡುವುದು ಆತನ ನೆಚ್ಚಿನ ಹವ್ಯಾಸಗಳಾಗಿದ್ದವು. ಲ್ಯಾಟ್ವಿಯಾದಲ್ಲಿ ರಷ್ಯನ್ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕಾಗಿದ್ದಿತು. ಓಸ್ಟ್ವಾಲ್ಡ್, ಪ್ರಯಾಸದಿಂದ ರಷ್ಯನ್ ಭಾಷೆ ಕಲಿತನು. ಓಸ್ಟ್ವಾಲ್ಟ್, ಡೊರ್ಪಾಟ್ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಗಳಿಸಿದನು. 1881ರಲ್ಲಿ ರಿಗಾ ಪಾಲಿಟೆಕ್ನಿಕ್ನಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕನಾದನು. ಅಲ್ಪಕಾಲದಲ್ಲೇ ಉತ್ತಮ ರಸಾಯನಶಾಸ್ತ್ರಜ್ಞನೆಂದು ಹೆಸರು ಗಳಿಸಿದ ಓಸ್ಟ್’ವಾಲ್ಡ್ ‘ಗೆ ಲೀಪ್ಜಿಗ್ ವಿಶ್ವವಿದ್ಯಾಲಯದಿಂದ 1887ರಲ್ಲಿ ಆಹ್ವಾನ ಬಂದಿತು. ತನ್ನ ಉಳಿದ ಜೀವನವನ್ನು ಲೀಪ್ಜಿಗ್ನಲ್ಲಿ ಕಳೆದ ಓಸ್ಟ್’ವಾಲ್ಡ್ ಲವಣ, ಎಸ್ಟರ್ಗಳ ಜಲ ಸಂಶ್ಲೇಷಣೆ (Hydrolysis) ದ್ರಾವಣಗಳ ವಾಹಕತೆ, ಸ್ನಿಗ್ದತೆ, ಅಯಾನಿಕರಣಗಳ ಬಗೆಗೆ ಅಧ್ಯಯನ ನಡೆಸಿದನು. ಭೌತ ರಸಾಯನಶಾಸ್ತ್ರದಲ್ಲಿ ಓಸ್ಟ್’ವಾಲ್ಡ್ ಹಲವಾರು ಹೊಸ ಮಾರ್ಗಗಳಿಗೆ ಅನುವು ಮಾಡಿದನು. ಓಸ್ಟ್’ವಾಲ್ಡ್, ನಿಜವಾಗಿಯೂ ಅಣುಗಳು ಅಸ್ಥಿತ್ವದಲ್ಲಿಲ್ಲವೆಂದು ಅವು ವಿಶ್ಲೇಷಣೆಗೆ ಉತ್ತಮ ತಳಹದಿ ಒದಗಿಸುವುದರಿಂದ ಬಳಸಬಹುದೆಂದು ನಂಬಿದ್ದನು. ಆದರೆ ಇಪ್ಪತ್ತನೇ ಶತಮಾನದ ಆದಿಯಲ್ಲಿ ಅಣುಗಳ ಅಸ್ತಿತ್ವಕ್ಕೆ ಪ್ರಬಲ ಸಾಕ್ಷ್ಯಾಧಾರಗಳು ದಕ್ಕಿದವು. ಜೀವನದ ಕೊನೆಯ ವರ್ಷಗಳಲ್ಲಿ ಓಸ್ಟ್’ವಾಲ್ಡ್ ಅಣು ಮತ್ತು ಪರಮಾಣುಗಳ ಅಸ್ತಿತ್ವವನ್ನು ಒಪ್ಪಿಕೊಂಡನು. 1909ರಲ್ಲಿ ಓಸ್ಟ್’ವಾಲ್ಡ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಒಟ್ಟೋ ,ವಲ್ಲಾಖ್ –(1847--) 1910
Otto , Wallach
ಜರ್ಮನಿ-ರಸಾಯನಶಾಸ್ತ್ರ- ಅಲಿಸೈಕ್ಲಿಕ್ ಸಂಯುಕ್ತಗಳ ಕುರಿತಾಗಿ ಆಳ ಸಂಶೋಧನೆ ನಡೆಸಿದಾತ.
ವಲ್ಲಾಖ್ 27 ಮಾರ್ಚ್ 1847ರಂದು ಜರ್ಮನಿಯ ಕೊನಿಗ್ಸ್ಬರ್ಗ್ನಲ್ಲಿ ಜನಿಸಿದನು. ಈತನ ತಂದೆ ಸರ್ಕಾರದಲ್ಲಿ ಉನ್ನತಾಧಿಕಾರಿಯಾಗಿದ್ದನು. ಪ್ಯಾಟ್ಸ್’ಡ್ಯಾಂ ಜಿಮ್ನಾಷಿಯಂನಲ್ಲಿ ಓದಿದ ವಲ್ಲಾಖ್ಗೆ ಕಲೆ ಹಾಗೂ ಚರಿತ್ರೆಯಲ್ಲಿ ಅಪಾರ ಆಸಕ್ತಿಯಿದ್ದಿತು. ಈ ಕಾಲದಲ್ಲಿ ರಸಾಯನಶಾಸ್ತ್ರಗಳ ಶಿಕ್ಷಣವಿರಲಿಲ್ಲ. 1867ರಲ್ಲಿ ವೊಹೊರ್ ಕೈಕೆಳಗೆ ರಸಾಯನಶಾಸ್ತ್ರ ಕಲಿಯಲು ಹೋದ ವಲ್ಲಾಖ್ ಫಿûಟಿಂಗ್ ಮತ್ತು ಹಬ್ನರ್ರವರ ಮಾರ್ಗದರ್ಶನ ಪಡೆದನು. ಇದಾದ ಸ್ವಲ್ಪ ಕಾಲದ ನಂತರ ಎ.ಡಬ್ಲ್ಯೂ ಹಾಫ್ಮನ್, ಜಿ.ಮ್ಯಾಗ್ನರ್ ಕೈಕೆಳಗೆ ರಸಾಯನಶಾಸ್ತ್ರದಲ್ಲಿ ಕೆಲಸ ಮಾಡಲು ಬರ್ಲಿನ್ಗೆ ಹೋದನು. ಇಲ್ಲಿಂದ ಗಟ್ಟಿಂಜೆನ್ಗೆ ಮರಳಿ ಹಬ್ನರ್ನೊಂದಿಗೆ ಕೆಲಸ ಮಾಡಿ 1869ರಲ್ಲಿ ಎರಡೂವರೆ ವರ್ಷದ ಪರಿಶ್ರಮದ ನಂತರ ಡಾಕ್ಟರೇಟ್ ಗಳಿಸಿದನು. ಈ ಕಾಲದಲ್ಲಿ ವೋಹ್ಲರ್ ಪ್ರಯೋಗಾಲಯ ಬೆಳಿಗ್ಗೆ ಏಳರಿಂದ, ಸಾಯಂಕಾಲ 5 ರವರೆಗೆ ತೆರೆದಿದ್ದು ನಂತರ ದೀಪವನ್ನು ಹಚ್ಚುವ ಅನಿಲದ ಸಂಪರ್ಕ ಕದಿಯಲಾಗುತ್ತಿತ್ತು. ರಾತ್ರಿ ಅವಧಿಯಲ್ಲಿ ಮೇಣದ ಬತ್ತಿಯ ದೀಪದ ಬೆಳಕಿನಲ್ಲಿ ವಲ್ಲಾಖ್ನ ವಿದ್ಯಾಭ್ಯಾಸ ಜರುಗಿತು. 1869 ರಿಂದ 1870ರ ಅವಧಿಯಲ್ಲಿ ಬರ್ಲಿನ್ನ ಎಚ್.ವಿಖೆಲ್ಹೌಸ್ನೊಂದಿಗೆ ಸಾರಜನಕ ಕಿರಣ ಹಾಗೂ ಬಿ ನ್ಯಾಫ್ರಿನಾಲ್ಗಳ ಮೇಲೆ ಕೆಲಸ ಮಾಡಿದನು. 1870ರಲ್ಲಿ ವೆಲ್ಲಾಖ್ಗೆ ಕೆಕಲೆಯ ಪರಿಚಯವಾಯಿತು. ಕೆಕಲೆ ಕಲಾ ಪ್ರೇಮಿಯೂ , ಕಲಾ ಸಾಧಕನಾಗಿದ್ದು ಬಾನ್ಗೆ ಬಂದು ಕಲೋಪಾಸನೆ ಮಾಡುವಂತೆ ಕರೆಯಿತ್ತನು. ಆದರೆ ಈ ಸಮಯದಲ್ಲಿ ಫ್ರಾಂಕೋ ಪ್ರಷ್ಯನ್ ಯುದ್ದ ಪ್ರಾರಂಭವಾಗಿ, ವಲ್ಲಾಖ್ ಸೇನೆಗೆ ನಿಯೋಜಿತನಾದನು. ಯುದ್ದದ ನಂತರ ಬರ್ಲಿನ್ನಲ್ಲಿ ನೆಲೆಸಿದ ವಲ್ಲಾಖ್ ಅಗ್ಫಾ ಕಾರ್ಖಾನೆಗೆ ಸೇರಿದನು. ಇಲ್ಲಿನ ರಾಸಾಯನಿಕ ಹೊಗೆಗೆ ವಲ್ಲಾಖ್ನ ಆರೋಗ್ಯ ಕೆಟ್ಟು, 1872ರಲ್ಲಿ ಬಾನ್ಗೆ ಮರಳಿ 1876ರಲ್ಲಿ ಪ್ರಾಧ್ಯಾಪಕನಾದನು. 1879ರಲ್ಲಿ ಔಷಧಿಶಾಸ್ತ್ರ, ವಿಭಾಗದ ಕಾರ್ಯದರ್ಶಿಯಾದನು. ಇದು ವಲ್ಲಾಖ್ ವೈದ್ಯಕೀಯ ರಸಾಯನಶಾಸ್ತ್ರದಲ್ಲಿ ಪರಿಣಿತಿ ಗಳಿಸುವಂತಾಯಿತು. ಫಾಸ್ಪರಸ್ ಪೆಂಟಾಕ್ಲೋರೈಡ್ಗಳು, ಆಮ್ಲ ಅಮೈಡ್ಗಳ ಮೇಲೆ ಪ್ರತಿಕ್ರಿಯಿಸಿ ಇಮೈನೋ ಕ್ಲೋರೈಡ್ಗಳಾಗುವುವೆಂದು ವಲ್ಲಾಖ್ ಕಂಡು ಹಿಡಿದನು. ಇದೇ ಕಾಲದಲ್ಲಿ ಕೆಕಲೆ ಹಳೆಯ ರಾಸಾಯನಿಕಗಳಿಂದ ತುಂಬಿದ್ದ ಕಪಾಟಿನಲ್ಲಿರುವ ರಾಸಾಯನಿಕಗಳ ಬಗೆಗೆ ತಿಳಿಸಬೇಕೆಂದು ಕೋರಿದನು. ಇವುಗಳನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿದ ವಲ್ಲಾಖ್ ಈ ರಾಸಾಯನಿಕಗಳನ್ನು ವರ್ಗೀಕರಿಣಗೊಳಿಸುವ ಸಾಮಾನ್ಯ ವಿಧಾನಗಳನ್ನು ರೂಪಿಸಿ ಆವರೆಗೆ ಸಾವಯವ ರಸಾಯನಶಾಸ್ತ್ರದಲ್ಲಿದ್ದ ಗೋಜಲನ್ನು ನಿವಾರಿಸಿದನು. ಕ್ಲೋರೈಡ್ನ್ನು ಡೈ ಕ್ಲೋರೈಡ್ ಅಸಿಟಿಕ್ ಆಮ್ಲವಾಗಿ ಪರಿವರ್ತಿಸುವ ವಿಧಾನವನ್ನು ವಲ್ಲಾಖ್ ರೂಪಿಸಿದನು. ಅಮಿಡೈಟ್ಸ್, ಕ್ಲೋರೈಡ್, ಗ್ಲೆಯೋಕ್ಸವೈನ್ಸ್, ಡಯಾಝೊ ಸಂಯುಕ್ತಗಳು ವಲ್ಲಾಖ್ನಿಂದ ತಪಾಸಣೆಗೊಳಪಟ್ಟವು. 1889ರಲ್ಲಿ ಗಟ್ಟಿಂಜೆನ್ ರಾಸಾಯನಿಕ ಸಂಸ್ಥೆಯ ನಿರ್ದೇಶಕನಾದನು. ವಲ್ಲಾಖ್ ಅಲಿಸೈಕ್ಲಿಕ್ ಸಂಯುಕ್ತಗಳ ಮೇಲೆ ಮಾಡಿದ ಗಮನಾರ್ಹ ಸಂಶೋಧನೆಗಳಿಗಾಗಿ 1910ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದನು.