ಆ್ಯಲ್ವರ್, ಗುಲ್ಸ್ಟ್ರ್ಯಾಂಡ್ –(1862--) 1911
Allvar , Gullstrand
ಜರ್ಮನಿ- ವೈದ್ಯಕೀಯ-ಕಣ್ಣಿನ ಸಂಶೊಧನೆಅಯ ಮುಂಚೂಣಿಗ.
ಆ್ಯಲ್ವರ್ನ ತಂದೆ ಪಟ್ಟಣ ಪಂಚಾಯಿತಿಯ ವೈದ್ಯಾಧಿಕಾರಿಯಾಗಿದ್ದನು. 5 ಜೂನ್ 1862ರಲ್ಲಿ ಲ್ಯಾಂಡ್ಸ್ ಕ್ವೊನಾ ಪಟ್ಟಣದಲ್ಲಿ ಆಲ್ವರ್ ಜನನವಾಯಿತು. 1880ರಲ್ಲಿ ವೈದ್ಯಕೀಯ ವ್ಯಾಸಂಗಕ್ಕೆ ಉಪ್ಸಾಲ ವಿಶ್ವವಿದ್ಯಾಲಯ ಸೇರಿದನು. 1885ರಲ್ಲಿ ವಿಧ್ಯಾಭ್ಯಾಸ ಮೊಟಕುಗೊಳಿಸಿ ವಿಯೆನ್ನಾಕ್ಕೆ ಹೋದನು. ಮುಂದಿನ ವರ್ಷ ಸ್ಟಾಕ್ ಹೋಂನಲ್ಲಿ ವೈದ್ಯಕೀಯ ಶಿಕ್ಷಣ ಮುಂದುವರೆಸಿ, 1888ರಲ್ಲಿ ಪದವಿ ಗಳಿಸಿದನು. 1890ರಲ್ಲಿ ಡಾಕ್ಟರೇಟ್ ಗಳಿಸಿದನು. 1891ರಲ್ಲಿ ನೇತ್ರಶಾಸ್ತ್ರದ ಉಪನ್ಯಾಸಕನಾದನು. 1894ರಲ್ಲಿ ಉಪ್ಸಾಲ ವಿಶ್ವವಿದ್ಯಾಲಯದ ಮೊದಲ ನೇತ್ರಶಾಸ್ತ್ರ ಪ್ರಾಧ್ಯಾಪಕನಾದನು. ಕಣ್ಣಿನ ಮರ್ಣಪಲ್ಲಟ, ದೋಷಗಳ ಸಿದ್ಧಾಂತವನ್ನು ಅ್ಯಲ್ವರ್ ಸ್ವತಂತ್ರವಾಗಿ, ಭೌತಶಾಸ್ತ್ರದ ಅಧ್ಯಯನದ ಮೂಲಕ ಮಂಡಿಸಿದನು. ಕಣ್ಣಿನ ಕ್ರಿಯಾಶೀಲತೆ, ಅದರ ಸ್ನಾಯುಗಳ ಚಲನೆ ಮತ್ತು ನಿಯಂತ್ರಣ, ಅಕ್ಷಿಪಟಲದ ವಿವರಗಳು ಅ್ಯಲ್ವರ್ನಿಂದ ಸಂಶೋಧನೆಗೊಳಗಾದವು. ಕಣ್ಣಿನ ಕ್ರಿಯೆಯನ್ನು ಅರಿಯಲು, ದೋಷಗಳನ್ನು ಅಳೆಯಲು ಅ್ಯಲ್ವರ್ ಹಲವಾರು ಹೊಸ ಬಗೆಯ ಸಾಧನಗಳನ್ನು ತಯಾರಿಸಿದನು. ಕಣ್ಣನ್ನು ಕುರಿತಾದ ಸಂಶೋಧನೆಗಳಿಗಾಗಿ ಆ್ಯಲ್ವರ್ 1911ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಕ್ಯಾರೆಲ್, ಅಲೆಕ್ಸಿಸ್ (1873-1944 ) 1912
Carrel , Alexis
ಫ್ರಾನ್ಸ್-ಅಸಂಸಂ -ರಕ್ತನಾಳ ಶಸ್ತ್ರ ಚಿಕಿತ್ಸೆ ಹಾಗೂ ಸಿಂಪಡಿಕೆ ವಿಧಾನಗಳನ್ನು ಅಭಿವೃದ್ದಿಗೊಳಿಸಿದಾತ.
1900ರಲ್ಲಿ ಲಿಯಾನ್ಸ್ನಿಂದ ವೈದ್ಯಕೀಯದಲ್ಲಿ ಪದವಿ ಪಡೆದ ಅಲೆಕ್ಸಾಸ್ ನಿಪುಣ ಶಸ್ತ್ರ ಚಿಕಿತ್ಸಕನಾಗಿದ್ದರೂ, ದೈನಂದಿನ ಶಸ್ತ್ರಚಿಕಿತ್ಸೆಗಳತ್ತ ವಿಮುಖಿಯಾಗಿದ್ದನು. 1904ರಲ್ಲಿ ದನಗಾಹಿಯಾಗಲು ಆಗಲು ಬಯಸಿ ಕೆನಡಾಕ್ಕೆ ಭೇಟಿ ನೀಡಿದನು. ಅದಾದ ನಂತರ ಚಿಕಾಗೋಗೆ ಹೋಗಿ 1906ರಲ್ಲಿ ರಾಕ್¥sóÉಲರ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ರಿಸರ್ಚ್ಗೆ ಸೇರಿದನು. 1934ರಲ್ಲಿ ನಿವೃತ್ತನಾಗುವವರೆಗೂ ಅಲೆಕ್ಸಿಸ್ ಆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದನು. ಮೊದಲನೇ ಜÁಗತಿಕ ಯುದ್ದದ ಸಮಯದಲ್ಲಿ ಕೆಲಕಾಲ ಫ್ರೆಂಚ್ ಸೇನೆಯಲ್ಲಿ ಶಸ್ತ್ರ ಚಿಕಿತ್ಸಕನಾಗಿದ್ದನು. ಈ ಅವಧಿಯಲ್ಲಿ ಡ್ಯಾಕಿನ್ ಜೊತೆ ಸೇರಿ ಕ್ಯಾರೆಲ್ ಡ್ಯಾಕಿನ್ ದ್ರಾವಣವನ್ನು ಆಳವಾದ ಗಾಯಗಳನ್ನು ಉಪಚರಿಸಲು ಬಳಸಿದನು. ಮೊದಲನೆ ಜಾಗತಿಕ ಯುದ್ದಕ್ಕೆ ಮೊದಲೇ ಅಂಗಾಂಗ ಕಸಿಯ ಬಗ್ಗೆ ಅಲೆಕ್ಸಿಸ್ ಆಸಕ್ತನಾಗಿದ್ದನು. ಕಸಿ ಮಾಡಿದ ಅಂಗಕ್ಕೆ ರಕ್ತ ಹೆಪ್ಪುಗಟ್ಟದಂತೆ ಸತತವಾಗಿ ರಕ್ತ ಸರಬರಾಜು ಮಾಡುವ ಸವಾಲು ಅಲೆಕ್ಸಿಸ್ಗೆ ಎದುರಾಯಿತು. ರಕ್ತನಾಳಗಳನ್ನು ಹೆಚ್ಚಿಗೆ ಗಾಯಗೊಳಿಸದೆ,ಸೂಕ್ಷವಾಗಿ ಹೊಲಿದು ಸೇರಿಸುವ ವಿಧಾನಗಳನ್ನು ಈತ ಜಾರಿಗೆ ತಂದನು. ಇದರಿಂದ ರಕ್ತನಾಳಗಳ ಕ್ರಾಂತಿಕಾರಕ ಬದಲಾವಣೆಗಳು ಬಂದವು. 1910ರಲ್ಲಿ ಅಲೆಕ್ಸಿಸ್ ಹೃದಯದ ಸನಿಹ ಹಾಯಿಕೆ (By-Pass) ಶಸ್ತ್ರಚಿಕಿತ್ಸೆಯ ವಿಧಾನವನ್ನು ವಿವರಿಸಿದನಲ್ಲದೆ, ಇದನ್ನು ಕಳೇಬರದ ಮೇಲೆ ಪ್ರಾಯೋಗಿಕವಾಗಿ ಈ ವಿಧಾನವನ್ನು ಪ್ರಯೋಗಿಸಿದನು. ಮುಂದಿನ ಅರ್ಧ ಶತಮಾನಗಳ ಕಾಲ ಈ ಶಸ್ತ್ರ ಚಿಕಿತ್ಸೆಯನ್ನು ಜೀವಂತ ಪ್ರಾಣಿಗಳ ಮೇಲೆ ಬಳಸುವುದು ಅಸಾಧ್ಯವಾಗಿದ್ದಿತು. ಅಲೆಕ್ಸಿಸ್ ತನ್ನ ಸಾಧನೆಗಳಿಗಾಗಿ 1912ರ ನೊಬೆಲ್ ಪ್ರಶಸ್ತಿ ಪಡೆದನು. ಅಲೆಕ್ಸಿಸ್, ಮೃತ ಅಂಗಗಳನ್ನು ರಕ್ತ ಅಥವಾ ರಕ್ತಕ್ಕೆ ಸಮಾನವಾದ ದ್ರವಗಳ ಕೃತಕ ಪರಿಚಲನೆಯಿಂದ ಜೀವಂತವಾಗಿರಿಸುವ ಸಾಧ್ಯತೆಯನ್ನು ಪರೀಕ್ಷಿಸಿದನು. ಸಿ.ಲಿಂಡ್ಬರ್ಗ್ ಜೊತೆ ಸೇರಿ 1935ರಲ್ಲಿ ಅಲೆಕ್ಸಿಸ್ ಕೃತಕ ಹೃದಯವನ್ನು ಸಿದ್ದಗೊಳಿಸಿದನು. ಮೂತ್ರನಾಳದ ಕಸಿಯಂತಹ ಶಸ್ತ್ರಚಿಕಿತ್ಸೆಗಳಲ್ಲಿ , ದಾನಿ ಹಾಗೂ ಸ್ವೀಕೃತರಿಬ್ಬರ ಅಂಗಾಂಗಗಳ ಪರಸ್ಪರ ತಿರಸ್ಕಾರವನ್ನು ತಡೆಯುವ ವಿಧಾನ ಅಂತಹ ಶಸ್ತ್ರಚಿಕಿತ್ಸೆಗಳ ಯಶಸ್ಸಿನ ಮೂಲವಾಗಿರುತ್ತದೆ. ಇದಕ್ಕೆ ಮಾರ್ಗೋಪಾಯಗಳನ್ನು ಕಂಡು ಹಿಡಿದನು ಅಲೆಕ್ಸಿಸ್ ವಂತರ ಬಂದ ವೈದ್ಯರುಗಳು ಈತ ರೂಪಿಸಿದ ಚಿಕಿತ್ಸ ವಿಧಾನಗಳನ್ನೇ.ಬಹುವಾಗಿ ಅವಲಂಬಿಸಿದರು.
ಚಾರ್ಲ್ಸ್, ರಾಬರ್ಟ್ ರಿಕೆಟ್ (1850-1935) 1913
Charles , Robert Richert
ಫ್ರಾನ್ಸ್ -ವೈದ್ಯಕೀಯ- ಅನಾಫೈಲಾಕ್ಸಿಸ್ ವಿದ್ಯಾಮಾನ ಅನಾವರಣಗೊಳಿಸಿದಾತ.
ಪ್ಯಾರಿಸ್ನಲ್ಲಿದ್ದ ವೈದ್ಯನ ಮಗನಾಗಿ 25 ಆಗಸ್ಟ್ 1850ರಂದು ಚಾರ್ಲ್ಸ್ ಜನನವಾಯಿತು. 1869ರಲ್ಲಿ ವೈದ್ಯಕೀಯ ಪದವಿ ಗಳಿಸಿ, 1878ರಲ್ಲಿ ವಿಜ್ಞಾನದಲ್ಲಿ ಡಾಕ್ಟರೇಟ್ ಗಳಿಸಿದನು. 1887ರಲ್ಲಿ ಪ್ಯಾರಿಸ್ನ ವೈದ್ಯಕೀಯ ನಿಕಾಯದಲ್ಲಿ ಅಂಗಕ್ರಿಯಾಶಾಸ್ತ್ರದ ಪ್ರಾಧ್ಯಾಪಕನಾದನು. ಚಾರ್ಲ್ಸ್ ರೋಗ ಹಾಗೂ ರೋಗಕಾರಣಗಳನ್ನು ಜೊತೆಯಾಗಿ ಅರಿಯಲು ಯತ್ನಿಸಿದನು. 1885ರಿಂದ 1895ರ ದಶಕದ ಅವಧಿಯಲ್ಲಿ ಚಾರ್ಲ್ಸ್ ಪ್ರಾಣಿಗಳು ತಮ್ಮ ದೇಹದ ತಾಪಮಾನವನ್ನು ಹೇಗೆ ನಿಯಂತ್ರಿಸಿಕೊಳ್ಳುತ್ತವೆಯೆಂದು ಕುರಿತಾಗಿ ಅಧ್ಯಯನ ನಡೆಸಿದನು. ರೋಗ ವಿರುದ್ಧ ಲಸಿಕೆ ಪಡೆದ ಪ್ರಾಣಿಯಲ್ಲಿನ ರಕ್ತ ಸೋಂಕಿಗೆ ವಿರುದ್ಧವಾಗಿ ಹೇಗೆ ಸಂರಕ್ಷಿಸುತ್ತದೆಯೆಂದು ತಿಳಿಸಿದನು. ಇದೇ ತತ್ತ್ವಕ್ಕನುಗುಣವಾಗಿ 6 ಡಿಸೆಂಬರ್ 1890ರಂದು ಕ್ಷಯ ರೋಗನಿವಾರಣೆಗೆ ರಸಿಕಾ ಚೈಕಿತ್ಸಕ (Serotherapentic) ಚುಚ್ಚು ಮದ್ದನ್ನು ಮೊಟ್ಟ ಮೊದಲ ಬಾರಿಗೆ ಮನುಷ್ಯರ ಮೇಲೆ ಬಳಸಿದನು. 1906ರಲ್ಲಿ ಕ್ಷಯ ಪೀಡಿತ ನಾಯಿಗಳಿಗೆ ಹಾಲು ಹಾಗೂ ಹಸಿಮಾಂಸ ನೀಡಿ ರೋಗವನ್ನು ನಿಯಂತ್ರಿಸಬಹುದೆಂದು ತೋರಿಸಿದನು. 1901ರಲ್ಲಿ ಚಾರ್ಲ್ಸ್, ಆಹಾರದಲ್ಲಿನ ಸೋಡಿಯಂ ಕ್ಲೋರೈಡ್ ಪ್ರಮಾಣ ಕಡಿಮೆ ಮಾಡಿದಾಗ ಪೆÇಟ್ಯಾಷಿಯಂ ಬ್ರೋಮೈಡ್ ಅಪಸ್ಮಾರದ ವಿರುದ್ದ ಬಹು ಪರಿಣಾಮಕಾರಿಯಾಗಿ ಕೆಲಸ ಮಾಡುವುದೆಂದು ತೋರಿಸಿದನು. ಜೀವಿಯೊಂದಕ್ಕೆ ಪ್ರೋಟೀನ್, ವಿಷ ಅಥವಾ ಕಲಿಲ (Colloidal) ರೂಪದ ಚುಚ್ಚು ಮದ್ದು ನೀಡಿದಾಗ ಅದು ವಿಶೇಷ ಸಂವೇದನೆಯನ್ನು ಬೆಳೆಸಿಕೊಳ್ಳುತ್ತದೆ. ಇದಕ್ಕೆ ಅನಾಫೆಲಿಕ್ಸಿಸ್ ಎನ್ನುತ್ತಾರೆ. ಈ ವಿದ್ಯಾಮಾನ ಗುರುತಿಸಿದ್ದುದ್ದಕ್ಕಾಗಿ ಚಾಲ್ರ್ಸ್ಗೆ 1913ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು. ಮುಂದೆ ಚಿಟಿಚಿಠಿhಥಿಟಚಿxis ತತ್ತ್ವವನ್ನು ವೈದ್ಯಕೀಯದಲ್ಲಿ ವ್ಯಾಪಕವಾಗಿ ಅಳವಡಿಸಿಕೊಳ್ಳಲಾಯಿತು.4 ಡಿಸೆಂಬರ್ 1985 ರಂದು ಪ್ಯಾರಿಸ್ನಲ್ಲಿ ಚಾರ್ಲ್ಸ್ ಮೃತನಾದನು.
ಬಾರ್ಡೆಟ್ ಜೂಲ್ಸ್ (ಜೀನ್ ಬ್ಯಾಪ್ಟಿಸ್ಟ್ ವಿನ್ಸೆಂಟ್) (1870-1961) 1919
Bordet , Jules (Jean Baptiste Vincent)
ಬೆಲ್ಜಿಯಂ - ಪ್ರತಿರೋಧಶಾಸ್ತ್ರ (Immunology)
1892ರಲ್ಲಿ ಬಾರ್ಡೆಟ್ ಬ್ರಸೆಲ್ಸೆನಲ್ಲಿ ವೈದ್ಯಕೀಯ ಪದವಿಗಳಿಸಿ, 1901ರಲ್ಲಿ ಅದೇ ವಿದ್ಯಾ¯ಯದಲ್ಲಿ ಬೋಧಕನಾದನು. 1898ರಲ್ಲಿ ಬಾರ್ಡೆನ್ ಪ್ಯಾರಿಸ್ನ ಪಾಸ್ತರ್ ಸಂಸ್ಥೆಯಲ್ಲಿ ಕ್ರಿಯಾಶೀಲನಾಗಿದ್ದಾಗ ರಕ್ತದ ರಸಿಕೆಯನ್ನು (Serum) 55 ಸೆಂಟಿಗ್ರೇಡ್ಗಿಂತಲೂ ಹೆಚ್ಚಿಗೆ ಕಾಯಿಸಿದಾಗ , ಅದರಲ್ಲಿರುವ ಪ್ರತಿಕಾಯಗಳು (Antibodies) ನಾಶವಾಗುವುದಿಲ್ಲವಾದರೂ, ಅವುಗಳಿಗೆ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿ ಇಲ್ಲದಂತಾಗುವುದೆಂದು ಕಂಡುಕೊಂಡನು. ಇದರ ವಿಸ್ತೃತ ಪರಿಶೀಲನೆಯಿಂದ ಬಾರ್ಡೆಟ್, ರಕ್ತದ ರಸಿಕೆಯಲ್ಲಿ ಶಾಖ ಸಂವೇದನೆಯುಳ್ಳ ಘಟಕವೊಂದು ಇರಬೇಕೆಂದು ತರ್ಕಿಸಿದನು. ಈ ಘಟಕವನ್ನು ಎಹ್ರ್ಲಿಖ್ ಪರಿಪೂರಕಗಳೆಂದು ಕರೆದಿದ್ದನು. ಬಾರ್ಡೆಟ್ ಈ ಘಟಕದ ಬಗೆಗೆ ಇನ್ನು ಹೆಚ್ಚಿನ ಸಂಶೋಧನೆ ಮುಂದುವರೆಸಿ, 1901ರಲ್ಲಿ, ಈ ಘಟಕ ಪ್ರತಿಕಾಯ ಮತ್ತು ಪ್ರತಿಜನಕದ (Antibody & Antigen)ಜೊತೆ ಪ್ರತಿಕ್ರಿಯೆಗೊಂಡು ಬಳಕೆಯಾಗುವುದನ್ನು ಸ್ಪಷ್ಟಗೊಳಿಸಿದನು. ಈ ಕ್ರಿಯೆಯ ಪರಿಪೂರಕ ಸ್ಥಿರೀಕರಣ ಎಂದು ಈಗ ಗುರುತಿಸಲಾಗಿದೆಯಲ್ಲದೆ ಇದು ಪ್ರತಿರೋಧಶಾಸ್ತ್ರದಲ್ಲಿ ಬಹು ಪ್ರಾಮುಖ್ಯತೆ ವಹಿಸಿದೆ. ಎಹ್ರ್ಲಿಖ್ ಪ್ರತಿಯೊಂದೂ ಪ್ರತಿಜನಕಕ್ಕೂ ಅದರದೇ ಆದ ಪರಿಪೂರಕ ಇದೆಯೆಂದು ಭಾವಿಸಿದ್ದನು. ಆದರೆ ಇದಕ್ಕೆ ತದ್ವಿರುದ್ದವಾಗಿ ಬಾರ್ಡೆಟ್ ಕೇವಲ ಒಂದೇ ಪರಿಪೂರಕ ಇರುವುದೆಂದು ನಂಬಿದ್ದನು.ಆದರೆ ನಮಗೀಗ ತಿಳಿದಿರುವಂತೆ ನಮ್ಮ ಪ್ರತಿರೋಧ ವ್ಯವಸ್ಥೆ ಒಟ್ಟು ಒಂಬತ್ತು ಬಗೆಯ ಪರಿಪೂರಕಗಳನ್ನು ಹೊಂದಿದೆಯಲ್ಲದೆ ಈ ಪ್ರತಿಯೊಂದು ಕಿಣ್ವ ವ್ಯವಸ್ಥೆಯಲ್ಲಿ ಹಲವಾರು ಬಗೆಯ ರೋಗಕಾರಣಗಳನ್ನು (Pathogen) ನಾಶಗೊಳಿಸುವ ಸಾಮರ್ಥ್ಯ ಹೊಂದಿವೆ. ಬಾರ್ಡೆಟ್ ದೇಹದ ಈ ಪ್ರತಿರೋಧ ವ್ಯವಸ್ಥೆಗಳ ಬಗ್ಗೆ ನಡೆಸಿದ ಸಂಶೋಧನೆಗಳಿಗಾಗಿ 1919ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
Allvar , Gullstrand
ಜರ್ಮನಿ- ವೈದ್ಯಕೀಯ-ಕಣ್ಣಿನ ಸಂಶೊಧನೆಅಯ ಮುಂಚೂಣಿಗ.
ಆ್ಯಲ್ವರ್ನ ತಂದೆ ಪಟ್ಟಣ ಪಂಚಾಯಿತಿಯ ವೈದ್ಯಾಧಿಕಾರಿಯಾಗಿದ್ದನು. 5 ಜೂನ್ 1862ರಲ್ಲಿ ಲ್ಯಾಂಡ್ಸ್ ಕ್ವೊನಾ ಪಟ್ಟಣದಲ್ಲಿ ಆಲ್ವರ್ ಜನನವಾಯಿತು. 1880ರಲ್ಲಿ ವೈದ್ಯಕೀಯ ವ್ಯಾಸಂಗಕ್ಕೆ ಉಪ್ಸಾಲ ವಿಶ್ವವಿದ್ಯಾಲಯ ಸೇರಿದನು. 1885ರಲ್ಲಿ ವಿಧ್ಯಾಭ್ಯಾಸ ಮೊಟಕುಗೊಳಿಸಿ ವಿಯೆನ್ನಾಕ್ಕೆ ಹೋದನು. ಮುಂದಿನ ವರ್ಷ ಸ್ಟಾಕ್ ಹೋಂನಲ್ಲಿ ವೈದ್ಯಕೀಯ ಶಿಕ್ಷಣ ಮುಂದುವರೆಸಿ, 1888ರಲ್ಲಿ ಪದವಿ ಗಳಿಸಿದನು. 1890ರಲ್ಲಿ ಡಾಕ್ಟರೇಟ್ ಗಳಿಸಿದನು. 1891ರಲ್ಲಿ ನೇತ್ರಶಾಸ್ತ್ರದ ಉಪನ್ಯಾಸಕನಾದನು. 1894ರಲ್ಲಿ ಉಪ್ಸಾಲ ವಿಶ್ವವಿದ್ಯಾಲಯದ ಮೊದಲ ನೇತ್ರಶಾಸ್ತ್ರ ಪ್ರಾಧ್ಯಾಪಕನಾದನು. ಕಣ್ಣಿನ ಮರ್ಣಪಲ್ಲಟ, ದೋಷಗಳ ಸಿದ್ಧಾಂತವನ್ನು ಅ್ಯಲ್ವರ್ ಸ್ವತಂತ್ರವಾಗಿ, ಭೌತಶಾಸ್ತ್ರದ ಅಧ್ಯಯನದ ಮೂಲಕ ಮಂಡಿಸಿದನು. ಕಣ್ಣಿನ ಕ್ರಿಯಾಶೀಲತೆ, ಅದರ ಸ್ನಾಯುಗಳ ಚಲನೆ ಮತ್ತು ನಿಯಂತ್ರಣ, ಅಕ್ಷಿಪಟಲದ ವಿವರಗಳು ಅ್ಯಲ್ವರ್ನಿಂದ ಸಂಶೋಧನೆಗೊಳಗಾದವು. ಕಣ್ಣಿನ ಕ್ರಿಯೆಯನ್ನು ಅರಿಯಲು, ದೋಷಗಳನ್ನು ಅಳೆಯಲು ಅ್ಯಲ್ವರ್ ಹಲವಾರು ಹೊಸ ಬಗೆಯ ಸಾಧನಗಳನ್ನು ತಯಾರಿಸಿದನು. ಕಣ್ಣನ್ನು ಕುರಿತಾದ ಸಂಶೋಧನೆಗಳಿಗಾಗಿ ಆ್ಯಲ್ವರ್ 1911ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಕ್ಯಾರೆಲ್, ಅಲೆಕ್ಸಿಸ್ (1873-1944 ) 1912
Carrel , Alexis
ಫ್ರಾನ್ಸ್-ಅಸಂಸಂ -ರಕ್ತನಾಳ ಶಸ್ತ್ರ ಚಿಕಿತ್ಸೆ ಹಾಗೂ ಸಿಂಪಡಿಕೆ ವಿಧಾನಗಳನ್ನು ಅಭಿವೃದ್ದಿಗೊಳಿಸಿದಾತ.
1900ರಲ್ಲಿ ಲಿಯಾನ್ಸ್ನಿಂದ ವೈದ್ಯಕೀಯದಲ್ಲಿ ಪದವಿ ಪಡೆದ ಅಲೆಕ್ಸಾಸ್ ನಿಪುಣ ಶಸ್ತ್ರ ಚಿಕಿತ್ಸಕನಾಗಿದ್ದರೂ, ದೈನಂದಿನ ಶಸ್ತ್ರಚಿಕಿತ್ಸೆಗಳತ್ತ ವಿಮುಖಿಯಾಗಿದ್ದನು. 1904ರಲ್ಲಿ ದನಗಾಹಿಯಾಗಲು ಆಗಲು ಬಯಸಿ ಕೆನಡಾಕ್ಕೆ ಭೇಟಿ ನೀಡಿದನು. ಅದಾದ ನಂತರ ಚಿಕಾಗೋಗೆ ಹೋಗಿ 1906ರಲ್ಲಿ ರಾಕ್¥sóÉಲರ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ರಿಸರ್ಚ್ಗೆ ಸೇರಿದನು. 1934ರಲ್ಲಿ ನಿವೃತ್ತನಾಗುವವರೆಗೂ ಅಲೆಕ್ಸಿಸ್ ಆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದನು. ಮೊದಲನೇ ಜÁಗತಿಕ ಯುದ್ದದ ಸಮಯದಲ್ಲಿ ಕೆಲಕಾಲ ಫ್ರೆಂಚ್ ಸೇನೆಯಲ್ಲಿ ಶಸ್ತ್ರ ಚಿಕಿತ್ಸಕನಾಗಿದ್ದನು. ಈ ಅವಧಿಯಲ್ಲಿ ಡ್ಯಾಕಿನ್ ಜೊತೆ ಸೇರಿ ಕ್ಯಾರೆಲ್ ಡ್ಯಾಕಿನ್ ದ್ರಾವಣವನ್ನು ಆಳವಾದ ಗಾಯಗಳನ್ನು ಉಪಚರಿಸಲು ಬಳಸಿದನು. ಮೊದಲನೆ ಜಾಗತಿಕ ಯುದ್ದಕ್ಕೆ ಮೊದಲೇ ಅಂಗಾಂಗ ಕಸಿಯ ಬಗ್ಗೆ ಅಲೆಕ್ಸಿಸ್ ಆಸಕ್ತನಾಗಿದ್ದನು. ಕಸಿ ಮಾಡಿದ ಅಂಗಕ್ಕೆ ರಕ್ತ ಹೆಪ್ಪುಗಟ್ಟದಂತೆ ಸತತವಾಗಿ ರಕ್ತ ಸರಬರಾಜು ಮಾಡುವ ಸವಾಲು ಅಲೆಕ್ಸಿಸ್ಗೆ ಎದುರಾಯಿತು. ರಕ್ತನಾಳಗಳನ್ನು ಹೆಚ್ಚಿಗೆ ಗಾಯಗೊಳಿಸದೆ,ಸೂಕ್ಷವಾಗಿ ಹೊಲಿದು ಸೇರಿಸುವ ವಿಧಾನಗಳನ್ನು ಈತ ಜಾರಿಗೆ ತಂದನು. ಇದರಿಂದ ರಕ್ತನಾಳಗಳ ಕ್ರಾಂತಿಕಾರಕ ಬದಲಾವಣೆಗಳು ಬಂದವು. 1910ರಲ್ಲಿ ಅಲೆಕ್ಸಿಸ್ ಹೃದಯದ ಸನಿಹ ಹಾಯಿಕೆ (By-Pass) ಶಸ್ತ್ರಚಿಕಿತ್ಸೆಯ ವಿಧಾನವನ್ನು ವಿವರಿಸಿದನಲ್ಲದೆ, ಇದನ್ನು ಕಳೇಬರದ ಮೇಲೆ ಪ್ರಾಯೋಗಿಕವಾಗಿ ಈ ವಿಧಾನವನ್ನು ಪ್ರಯೋಗಿಸಿದನು. ಮುಂದಿನ ಅರ್ಧ ಶತಮಾನಗಳ ಕಾಲ ಈ ಶಸ್ತ್ರ ಚಿಕಿತ್ಸೆಯನ್ನು ಜೀವಂತ ಪ್ರಾಣಿಗಳ ಮೇಲೆ ಬಳಸುವುದು ಅಸಾಧ್ಯವಾಗಿದ್ದಿತು. ಅಲೆಕ್ಸಿಸ್ ತನ್ನ ಸಾಧನೆಗಳಿಗಾಗಿ 1912ರ ನೊಬೆಲ್ ಪ್ರಶಸ್ತಿ ಪಡೆದನು. ಅಲೆಕ್ಸಿಸ್, ಮೃತ ಅಂಗಗಳನ್ನು ರಕ್ತ ಅಥವಾ ರಕ್ತಕ್ಕೆ ಸಮಾನವಾದ ದ್ರವಗಳ ಕೃತಕ ಪರಿಚಲನೆಯಿಂದ ಜೀವಂತವಾಗಿರಿಸುವ ಸಾಧ್ಯತೆಯನ್ನು ಪರೀಕ್ಷಿಸಿದನು. ಸಿ.ಲಿಂಡ್ಬರ್ಗ್ ಜೊತೆ ಸೇರಿ 1935ರಲ್ಲಿ ಅಲೆಕ್ಸಿಸ್ ಕೃತಕ ಹೃದಯವನ್ನು ಸಿದ್ದಗೊಳಿಸಿದನು. ಮೂತ್ರನಾಳದ ಕಸಿಯಂತಹ ಶಸ್ತ್ರಚಿಕಿತ್ಸೆಗಳಲ್ಲಿ , ದಾನಿ ಹಾಗೂ ಸ್ವೀಕೃತರಿಬ್ಬರ ಅಂಗಾಂಗಗಳ ಪರಸ್ಪರ ತಿರಸ್ಕಾರವನ್ನು ತಡೆಯುವ ವಿಧಾನ ಅಂತಹ ಶಸ್ತ್ರಚಿಕಿತ್ಸೆಗಳ ಯಶಸ್ಸಿನ ಮೂಲವಾಗಿರುತ್ತದೆ. ಇದಕ್ಕೆ ಮಾರ್ಗೋಪಾಯಗಳನ್ನು ಕಂಡು ಹಿಡಿದನು ಅಲೆಕ್ಸಿಸ್ ವಂತರ ಬಂದ ವೈದ್ಯರುಗಳು ಈತ ರೂಪಿಸಿದ ಚಿಕಿತ್ಸ ವಿಧಾನಗಳನ್ನೇ.ಬಹುವಾಗಿ ಅವಲಂಬಿಸಿದರು.
ಚಾರ್ಲ್ಸ್, ರಾಬರ್ಟ್ ರಿಕೆಟ್ (1850-1935) 1913
Charles , Robert Richert
ಫ್ರಾನ್ಸ್ -ವೈದ್ಯಕೀಯ- ಅನಾಫೈಲಾಕ್ಸಿಸ್ ವಿದ್ಯಾಮಾನ ಅನಾವರಣಗೊಳಿಸಿದಾತ.
ಪ್ಯಾರಿಸ್ನಲ್ಲಿದ್ದ ವೈದ್ಯನ ಮಗನಾಗಿ 25 ಆಗಸ್ಟ್ 1850ರಂದು ಚಾರ್ಲ್ಸ್ ಜನನವಾಯಿತು. 1869ರಲ್ಲಿ ವೈದ್ಯಕೀಯ ಪದವಿ ಗಳಿಸಿ, 1878ರಲ್ಲಿ ವಿಜ್ಞಾನದಲ್ಲಿ ಡಾಕ್ಟರೇಟ್ ಗಳಿಸಿದನು. 1887ರಲ್ಲಿ ಪ್ಯಾರಿಸ್ನ ವೈದ್ಯಕೀಯ ನಿಕಾಯದಲ್ಲಿ ಅಂಗಕ್ರಿಯಾಶಾಸ್ತ್ರದ ಪ್ರಾಧ್ಯಾಪಕನಾದನು. ಚಾರ್ಲ್ಸ್ ರೋಗ ಹಾಗೂ ರೋಗಕಾರಣಗಳನ್ನು ಜೊತೆಯಾಗಿ ಅರಿಯಲು ಯತ್ನಿಸಿದನು. 1885ರಿಂದ 1895ರ ದಶಕದ ಅವಧಿಯಲ್ಲಿ ಚಾರ್ಲ್ಸ್ ಪ್ರಾಣಿಗಳು ತಮ್ಮ ದೇಹದ ತಾಪಮಾನವನ್ನು ಹೇಗೆ ನಿಯಂತ್ರಿಸಿಕೊಳ್ಳುತ್ತವೆಯೆಂದು ಕುರಿತಾಗಿ ಅಧ್ಯಯನ ನಡೆಸಿದನು. ರೋಗ ವಿರುದ್ಧ ಲಸಿಕೆ ಪಡೆದ ಪ್ರಾಣಿಯಲ್ಲಿನ ರಕ್ತ ಸೋಂಕಿಗೆ ವಿರುದ್ಧವಾಗಿ ಹೇಗೆ ಸಂರಕ್ಷಿಸುತ್ತದೆಯೆಂದು ತಿಳಿಸಿದನು. ಇದೇ ತತ್ತ್ವಕ್ಕನುಗುಣವಾಗಿ 6 ಡಿಸೆಂಬರ್ 1890ರಂದು ಕ್ಷಯ ರೋಗನಿವಾರಣೆಗೆ ರಸಿಕಾ ಚೈಕಿತ್ಸಕ (Serotherapentic) ಚುಚ್ಚು ಮದ್ದನ್ನು ಮೊಟ್ಟ ಮೊದಲ ಬಾರಿಗೆ ಮನುಷ್ಯರ ಮೇಲೆ ಬಳಸಿದನು. 1906ರಲ್ಲಿ ಕ್ಷಯ ಪೀಡಿತ ನಾಯಿಗಳಿಗೆ ಹಾಲು ಹಾಗೂ ಹಸಿಮಾಂಸ ನೀಡಿ ರೋಗವನ್ನು ನಿಯಂತ್ರಿಸಬಹುದೆಂದು ತೋರಿಸಿದನು. 1901ರಲ್ಲಿ ಚಾರ್ಲ್ಸ್, ಆಹಾರದಲ್ಲಿನ ಸೋಡಿಯಂ ಕ್ಲೋರೈಡ್ ಪ್ರಮಾಣ ಕಡಿಮೆ ಮಾಡಿದಾಗ ಪೆÇಟ್ಯಾಷಿಯಂ ಬ್ರೋಮೈಡ್ ಅಪಸ್ಮಾರದ ವಿರುದ್ದ ಬಹು ಪರಿಣಾಮಕಾರಿಯಾಗಿ ಕೆಲಸ ಮಾಡುವುದೆಂದು ತೋರಿಸಿದನು. ಜೀವಿಯೊಂದಕ್ಕೆ ಪ್ರೋಟೀನ್, ವಿಷ ಅಥವಾ ಕಲಿಲ (Colloidal) ರೂಪದ ಚುಚ್ಚು ಮದ್ದು ನೀಡಿದಾಗ ಅದು ವಿಶೇಷ ಸಂವೇದನೆಯನ್ನು ಬೆಳೆಸಿಕೊಳ್ಳುತ್ತದೆ. ಇದಕ್ಕೆ ಅನಾಫೆಲಿಕ್ಸಿಸ್ ಎನ್ನುತ್ತಾರೆ. ಈ ವಿದ್ಯಾಮಾನ ಗುರುತಿಸಿದ್ದುದ್ದಕ್ಕಾಗಿ ಚಾಲ್ರ್ಸ್ಗೆ 1913ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು. ಮುಂದೆ ಚಿಟಿಚಿಠಿhಥಿಟಚಿxis ತತ್ತ್ವವನ್ನು ವೈದ್ಯಕೀಯದಲ್ಲಿ ವ್ಯಾಪಕವಾಗಿ ಅಳವಡಿಸಿಕೊಳ್ಳಲಾಯಿತು.4 ಡಿಸೆಂಬರ್ 1985 ರಂದು ಪ್ಯಾರಿಸ್ನಲ್ಲಿ ಚಾರ್ಲ್ಸ್ ಮೃತನಾದನು.
ಬಾರ್ಡೆಟ್ ಜೂಲ್ಸ್ (ಜೀನ್ ಬ್ಯಾಪ್ಟಿಸ್ಟ್ ವಿನ್ಸೆಂಟ್) (1870-1961) 1919
Bordet , Jules (Jean Baptiste Vincent)
ಬೆಲ್ಜಿಯಂ - ಪ್ರತಿರೋಧಶಾಸ್ತ್ರ (Immunology)
1892ರಲ್ಲಿ ಬಾರ್ಡೆಟ್ ಬ್ರಸೆಲ್ಸೆನಲ್ಲಿ ವೈದ್ಯಕೀಯ ಪದವಿಗಳಿಸಿ, 1901ರಲ್ಲಿ ಅದೇ ವಿದ್ಯಾ¯ಯದಲ್ಲಿ ಬೋಧಕನಾದನು. 1898ರಲ್ಲಿ ಬಾರ್ಡೆನ್ ಪ್ಯಾರಿಸ್ನ ಪಾಸ್ತರ್ ಸಂಸ್ಥೆಯಲ್ಲಿ ಕ್ರಿಯಾಶೀಲನಾಗಿದ್ದಾಗ ರಕ್ತದ ರಸಿಕೆಯನ್ನು (Serum) 55 ಸೆಂಟಿಗ್ರೇಡ್ಗಿಂತಲೂ ಹೆಚ್ಚಿಗೆ ಕಾಯಿಸಿದಾಗ , ಅದರಲ್ಲಿರುವ ಪ್ರತಿಕಾಯಗಳು (Antibodies) ನಾಶವಾಗುವುದಿಲ್ಲವಾದರೂ, ಅವುಗಳಿಗೆ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿ ಇಲ್ಲದಂತಾಗುವುದೆಂದು ಕಂಡುಕೊಂಡನು. ಇದರ ವಿಸ್ತೃತ ಪರಿಶೀಲನೆಯಿಂದ ಬಾರ್ಡೆಟ್, ರಕ್ತದ ರಸಿಕೆಯಲ್ಲಿ ಶಾಖ ಸಂವೇದನೆಯುಳ್ಳ ಘಟಕವೊಂದು ಇರಬೇಕೆಂದು ತರ್ಕಿಸಿದನು. ಈ ಘಟಕವನ್ನು ಎಹ್ರ್ಲಿಖ್ ಪರಿಪೂರಕಗಳೆಂದು ಕರೆದಿದ್ದನು. ಬಾರ್ಡೆಟ್ ಈ ಘಟಕದ ಬಗೆಗೆ ಇನ್ನು ಹೆಚ್ಚಿನ ಸಂಶೋಧನೆ ಮುಂದುವರೆಸಿ, 1901ರಲ್ಲಿ, ಈ ಘಟಕ ಪ್ರತಿಕಾಯ ಮತ್ತು ಪ್ರತಿಜನಕದ (Antibody & Antigen)ಜೊತೆ ಪ್ರತಿಕ್ರಿಯೆಗೊಂಡು ಬಳಕೆಯಾಗುವುದನ್ನು ಸ್ಪಷ್ಟಗೊಳಿಸಿದನು. ಈ ಕ್ರಿಯೆಯ ಪರಿಪೂರಕ ಸ್ಥಿರೀಕರಣ ಎಂದು ಈಗ ಗುರುತಿಸಲಾಗಿದೆಯಲ್ಲದೆ ಇದು ಪ್ರತಿರೋಧಶಾಸ್ತ್ರದಲ್ಲಿ ಬಹು ಪ್ರಾಮುಖ್ಯತೆ ವಹಿಸಿದೆ. ಎಹ್ರ್ಲಿಖ್ ಪ್ರತಿಯೊಂದೂ ಪ್ರತಿಜನಕಕ್ಕೂ ಅದರದೇ ಆದ ಪರಿಪೂರಕ ಇದೆಯೆಂದು ಭಾವಿಸಿದ್ದನು. ಆದರೆ ಇದಕ್ಕೆ ತದ್ವಿರುದ್ದವಾಗಿ ಬಾರ್ಡೆಟ್ ಕೇವಲ ಒಂದೇ ಪರಿಪೂರಕ ಇರುವುದೆಂದು ನಂಬಿದ್ದನು.ಆದರೆ ನಮಗೀಗ ತಿಳಿದಿರುವಂತೆ ನಮ್ಮ ಪ್ರತಿರೋಧ ವ್ಯವಸ್ಥೆ ಒಟ್ಟು ಒಂಬತ್ತು ಬಗೆಯ ಪರಿಪೂರಕಗಳನ್ನು ಹೊಂದಿದೆಯಲ್ಲದೆ ಈ ಪ್ರತಿಯೊಂದು ಕಿಣ್ವ ವ್ಯವಸ್ಥೆಯಲ್ಲಿ ಹಲವಾರು ಬಗೆಯ ರೋಗಕಾರಣಗಳನ್ನು (Pathogen) ನಾಶಗೊಳಿಸುವ ಸಾಮರ್ಥ್ಯ ಹೊಂದಿವೆ. ಬಾರ್ಡೆಟ್ ದೇಹದ ಈ ಪ್ರತಿರೋಧ ವ್ಯವಸ್ಥೆಗಳ ಬಗ್ಗೆ ನಡೆಸಿದ ಸಂಶೋಧನೆಗಳಿಗಾಗಿ 1919ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.