ಗ್ರೀನ್ಯಾರ್,(ಫ್ರಾಂಕೋಯಿಸ್ ಅಗಸ್ಟ್) ವಿಕ್ಟರ್(1871-1935)
Grignard , ( Francois Auguste ) Victor (CHE.) 1912
ಫ್ರಾನ್ಸ್-ಸಾವಯವ ರಸಾಯನಶಾಸ್ತ್ರ-ಸಂಶ್ಲೇಷಣೆಯಲ್ಲಿ ಸಾವಚಿiÀುವ ಮೆಗ್ನೇಶಿಯಂ ಸಂಯುಕ್ತಗಳ ಬಳಕೆ ಅನಾವರಣಗೊಳಿಸಿದಾತ.
ಗ್ರೀನ್ಯಾರ್ ಲಿಯಾನ್ನಲ್ಲಿ ವಿದ್ಯಾಭ್ಯಾಸ ಮಾಡಿ, ಗಣಿತದ ಬೋಧಕನಾದನು. ನಂತರ ಗ್ರೀನ್ಯಾರ್, ರಸಾಯನಶಾಸ್ತ್ರದಲ್ಲಿ ಆಸಕ್ತನಾಗಿ ಪಿ.ಎ.ಬಾರ್ಬಿಯರ್ ಮಾರ್ಗದರ್ಶನದಲ್ಲಿ ಸಾವಯವ ರಸಾಯನಶಾಸ್ತ್ರದಲ್ಲಿ ಸಂಶೋಧನೆ ಪ್ರಾರಂಭಿಸಿದನು. ಆದರೆ ಗ್ರೀನ್ಯಾರ್ಗೆ ಸಂಶೋಧನೆಗೆ ಅಂತಹ ಉತ್ತಮ ವಿಷಯವೇನೂ ದಕ್ಕಲಿಲ್ಲ. ಪ್ರತಿಕ್ರಿಯಾಶೀಲ ಸಾವಯವ ಹ್ಯಾಲೋಜೆನ್ಗಳೊಂದಿಗೆ , ಒಣ ಡೈ ಈಥೈಲ್ ಈಥರ್ ದ್ರಾವಣದಲ್ಲಿ ಮೆಗ್ನೀಶಿಯಂ ಸಂಯೋಜನೆಗೊಳ್ಳುವುದೆಂದು ಗ್ರೀನ್ಯಾರ್ಗೆ ತಿಳಿಯಿತು. ಇವುಗಳನ್ನು ಪ್ರತ್ಯೇಕಿಸದೆ, ಹಲವಾರು ಕಾರ್ಬೊನಿಲ್ ಮತ್ತಿತರ ಸಂಯುಕ್ತಗಳೊಂದಿಗೆ ಪ್ರತಿಕ್ರಿ0iÉುಗೊಳಿಸಿ ಸಾವಯವ ಆಲ್ಕೋಹಾಲ್ಗಳನ್ನು ಪಡೆಯುವುದು ಸಾಧ್ಯ. ಈ ವಿಧಾನಗಳು ಸಾವಯವ ಸಂಶ್ಲೇಷಣೆಯಲ್ಲಿ ಕ್ರಾಂತಿಯನ್ನೇ ತಂದವು. ಮೊದಲ ಜಾಗತಿಕ ಯುದ್ದದಲ್ಲಿ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ ಗ್ರೀನ್ಯಾರ್ಗೆ ರೈಲ್ವೇ ಸೇತುವೆ ಕಾಯುವ ಕೆಲಸಕ್ಕೆ ನಿಯೋಜಿಸಲಾಯಿತು,. ಆದರೆ ಕೆಲಕಾಲದ ನಂತರ ಅವನನ್ನು ರಾಸಾಯನಿಕ ಅಸ್ತ್ರ ತಯಾರಿಕೆಯ ಕಾರ್ಖಾನೆಗೆ ವರ್ಗಾಯಿಸಲಾಯಿತು. ಇಲ್ಲಿ ಮಸ್ಟರ್ಡ್ ಅನಿಲದ ಪತ್ತೆ ಹಚ್ಚಿಕೆ, ಪಾಸ್ಜೀನ್ ತಯಾರಿಕೆಯಲ್ಲಿ ಗ್ರೀನ್ಯಾರ್ ನಿರತನಾದನು. 1919ರಲ್ಲಿ ಬಾರ್ಬಿಯರ್ ತೆರವುಗೊಳಿಸಿದ, ಹುದ್ದೆಯನ್ನು ಗ್ರೀನ್ಯಾರ್ ಅಲಂಕರಿಸಿದನು. 1912ರಲಿ ಗ್ರೀನ್ಯಾರ್ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದನು.
ಪೌಲ್, ಸಬಾಟೀರ್ (1854-1941) 1912
Paul , Sabatier
ಫ್ರ್ರಾನ್ಸ್-ರಸಾಯನಶಾಸ್ತ್ರ- ತೈಲ ಜಲಜನಕೀಕರಣ (Oil Hydrogenation) ಹಾಗೂ ಮೆಥಾನಲ್ ಸಂಶ್ಲೇಷಣಾ ಕೈಗಾರಿಕೆಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಾತ.
ಸಬಾಟೀರ್ 5 ನವೆಂಬರ್ 1854 ರಂದು ದಕ್ಷಿಣ ಫ್ರಾನ್ಸ್’ನಲ್ಲಿದ್ದ ಕ್ಯಾರಕಾಸೋನ್ನಲ್ಲಿ ಜನಿಸಿದನು. ಎಕೊಲೆ ನಾರ್ಮಲೆ, ಎಕೊಲೆ ಸುಪೀರಿಯರ್ನಲ್ಲಿ ಪ್ರವೇಶ ಗಳಿಸಿದ ಸಬಾಟೀರ್ ಎಕೊಲೆ ಸುಪೀರಿಯರ್ಗೆ 1874ರಲ್ಲಿ ಸೇರಿದನು. ಮೂರು ವರ್ಷಗಳ ನಂತರ ಪದವಿ ಮುಗಿಸಿ, 1878ರಲ್ಲಿ ಕಾಲೇಜ್ ಡಿ ಫ್ರಾನ್ಸ್’ನಲ್ಲಿದ್ದ ಬರ್ಥೆಲೊಟ್ಗೆ ಸಹಾಯಕನಾದನು. 1880ರಲ್ಲಿ ಡಾಕ್ಟರೇಟ್ ಗಳಿಸಿದ ಸಬಾಟೀರ್ ಬೊರಾಡೆಯರ್ಸ್ನ ವಿಜ್ಞಾನ ವಿಷಯದಲ್ಲಿ ಭೌತಶಾಸ್ತ್ರದಲ್ಲಿ ವಿಭಾಗದ ಸಿಬ್ಬಂದಿಯಾದನು. 1882ರಲ್ಲಿ ಟಾಲೋಯಸ್ ವಿಶ್ವವಿದ್ಯಾಲಯದಲ್ಲಿ ಇದೇ ಹುದ್ದೆಯನ್ನರಸಿ ಹೋದನು. 1884ರಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕನಾಗಿ ಆಯ್ಕೆಗೊಂಡನು. ಸಬಾಟೀರ್ನ ಆರಂಭಿಕ ಸಂಶೋಧನೆಗಳು ಗಂಧಕ ಹಾಗೂ ಲೌಹಿಕ ಸಲ್ಫೇಟ್ಗಳ ಔಷ್ಣೀಯ ರಸಾಯನಶಾಸ್ತ್ರದ ಮೇಲೆ ಕೇಂದ್ರಿಕೃತವಾಗಿದ್ದವು. ಸಲ್ಫೇಡ್, ಕ್ಲೋರೈಡ್, ಕ್ರೋಯೇಟ್ಗಳ ಭೌತ ರಾಸಾಯನಿಕ ಗುಣ ಧರ್ಮಗಳ ಅಧ್ಯಯನವನ್ನು ಸಹ ಸಬಾಟೀರ್ ಮಾಡಿದನು. ಕ್ರಿಯಾವರ್ಧಕ ವಿದ್ಯಾಮಾನ ಕುರಿತಾದ ಪ್ರಯೋಗ ನಡೆಸಿದ ಸಬಾಟೀರ್ ರಾಸಾಯನಿಕ ಕ್ರಿಯಾ ಸಿದ್ಧಾಂತ ಮಂಡಿಸಿದನು. ಸಣ್ಣಗೆ ಅರೆದ ಲೋಹದ ಜಲಜನಕೀಕರಣದಲ್ಲಿ (Hydrogenation) ನೆರವಾಗುವ ವೇಗ ವರ್ಧಕಗಳನ್ನು (Catalyst) ಕಂಡು ಹಿಡಿದ ಸಬಾಟೀರ್ ಮಾರ್ಗರೇನ್, ತೈಲ ಹೈಡ್ರೋಜೆನೇಷನ್ ಹಾಗೂ ಮೆಥಾನಲ್ ಸಂಶ್ಲೇಷಣಾ ಕೈಗಾರಿಕೆಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದನು. ಲಾಕ್ಟಟಲೈಸ್ ಎನ್ ಖಿಮಿ ಅಗ್ರ್ಯಾನಿಕ್ ಎಂಬ ಪ್ರೌಢ ಕೃತಿಯನ್ನು ಸಹ ಸಬಾಟೀರ್ 1913ರಲ್ಲಿ ಪ್ರಕಟಿಸಿದನು. ಸಬಾಟೀರ್ಫೆ್ರಂಚ್ ವಿಜ್ಞಾನ ಅಕಾಡೆಮಿಯ ಸದಸ್ಯನಾಗಿದ್ದನು. ಲಂಡನ್ ರಾಯಲ್ ಸೊಸೈಟಿ. ಫಿಲೆಡೆಲ್ಫಿಯಾ “ವಿಶ್ವವಿದ್ಯಾಲಯ , ನೆದರ್’ಲ್ಯಾಂಡ್ ರಾಯಲ್ ಸೊಸೈಟಿಯಿಂದ ಸಬಾಟೀರ್ ಗೌರವಿತನಾಗಿದ್ದನು. 1912ರಲ್ಲಿ ಸಬಾಟೀರ್ ರಸಾಯನ ಶಾಸ್ತ್ರದಲ್ಲಿನ ನೊಬೆಲ್ ಪ್ರಶಸ್ತಿ ಪಡೆದನು.
ವೆರ್ನರ್, ಅಲ್ಫ್ರೆಡ್ (1866-1919) 1913
Werner , Alfred
ಜರ್ಮನಿ-ಸ್ವಿಟ್ಸಲ್ರ್ಯಾಂಡ್ - ನಿರವಯವ ರಸಾಯನಶಾಸ್ತ್ರಜ್ಞ. ಸಮನ್ವಯ ಸಂಯುಕ್ತಗಳ ಆಧುನಿಕ ಸಿದ್ಧಾಂತ ಸ್ಥಾಪಿಸಿದಾತ.
ಫ್ರಾನ್ಸ್ ವಶದಲ್ಲಿದ್ದ ಅಲಾಸೇಸ್ನಲ್ಲಿ ವೆರ್ನರ್ ಜನಿಸಿದನು. ವೆರ್ನರ್ ನಾಲ್ಕು ವರ್ಷದವನಿರುವಾಗ ಅಲಾಸೇಸ್ ಜರ್ಮನಿಯ ವಶಕ್ಕೆ ಬಂದಿತು. 1919ರಲ್ಲಿ ಮತ್ತೊಮ್ಮೆ ಫೆ್ರಂಚರ ವಶವಾಯಿತು. ಇದರಿಂದ ಫ್ರೆಂಚ್ ಹಾಗೂ ಜರ್ಮನ್ ಸಂಸ್ಕೃತಿಗಳೆರಡೂ ವೆರ್ನರ್’ನನ್ನು ಪ್ರಭಾವಿಸಿದವು. ನೆಲಮಾಳಿಗೆಯ ಅನಾರೋಗ್ಯಕರ ವಾತಾವರಣದಲ್ಲಿ ಸತತ ಅಧ್ಯಯನ ನಡೆಸಿದ ಸಾಹಸಿ ವೆರ್ನರ್. ಆದರೆ ವೆರ್ನರ್ ಲೇಖನಗಳು ಜರ್ಮನಿಯಲ್ಲಿದ್ದವು. 20 ನೇ ವಯಸ್ಸಿನಿಂದ ಸ್ವಿಟ್ಸಲ್ರ್ಯಾಂಡ್ನಲ್ಲಿದ್ದ ವೆರ್ನರ್ ಝೂರಿಕ್ನಿಂದ ಪದವಿ ಗಳಿಸಿ, 1895ರಲ್ಲಿ ಪ್ರಾಧ್ಯಾಪಕನಾದನು. ಸಾರಜನಕ ಕೇಂದ್ರದಲ್ಲಿರುವ ರಾಸಾಯನಿಕಗಳ ರಾಚನಿಕ ಸ್ವರೂಪದ ಬಗೆಗೆ ಅಧ್ಯಯನ ನಡೆಸಿ, ವೆರ್ನರ್ ಡಾಕ್ಟರೇಟ್ ಗಳಿಸಿದನು. ಸಹಸಂಯೋಗತ್ವದ ಬಂಧಕ್ಕೆ (Covalent Bond)ನಿರ್ದಿಷ್ಟ ದಿಕ್ಕುಗಳಿರುತ್ತವೆ. ಮಿಥೇನ್ ಅಣುವಿನಲ್ಲಿ ಇಂಗಾಲದ ಪರಮಾಣು ಕ್ರಮ ಚತುರ್ಮುಖ (Regular Terahedron) ಕೇಂದ್ರದಲ್ಲಿದೆ. ನಾಲ್ಕು ಜಲಜನಕದ ಪರಮಾಣುಗಳು ಈ ಚತುರ್ಮುಖಿಯ ಶೃಂಗಗಳಲ್ಲಿವೆ. ಇಂಗಾಲದ ಪರಮಾಣುವೂ ಪ್ರತಿಯೊಂದು ಜಲಜನಕದ ಪರಮಾಣುವಿನೊಂದಿಗೆ 109028” ಕೋನದಲ್ಲಿ ಬಂಧಿತವಾಗಿದೆ. ಆದ್ದರಿಂದ ಇಂತಹ ಸಂಯುಕ್ತಗಳ ಸಂಯೋಗತ್ವ ಮೂರು ಆಯಾಮಗಳಲ್ಲಿರಬಲ್ಲದು. ವೆರ್ನರ್ ಈ ಆಧಾರದ ಮೇಲೆ ಕ್ರೋಮಿಯಂ ಕೋಬಾಲ್ಟ್ ಹಾಗೂ ರೋಡಿಯಂಗಳ ದ್ಯುತಿಪಟು ಸಂಯುಕ್ತಗಳನ್ನು (Photoactive) ಅನಾವರಣಗೊಳಿಸಿದನು. ಇದಕ್ಕೆ ಬೇಕಾದ ಸೈದ್ಧಾಂತಿಕ ದೃಷ್ಟಿ ತನಗೆ ಕನಸಿನಲ್ಲಿ ವೇದ್ಯವಾಯಿತೆಂದು ವೆರ್ನರ್ ಹೇಳಿದ್ದಾನೆ. 1892 ರಿಂದ ಲೋಹಗಳ ಸಂಯುಕ್ತಗಳ ಬಗೆಗೆ ವೆರ್ನರ್ ಅಧ್ಯಯನ ನಡೆಸಿದನು. ಇವುಗಳಲ್ಲಿ ಬಹುತೇಕ ರಾಸಾಯನಿಕಗಳಿಗೆ ಸರಿಯಾದ ರಾಚನಿಕ ವಿವರಣೆ, ಸಂಯೋಗ ಸಾಮಥ್ರ್ಯಗಳ ವಿವರಣೆ ಇರಲಿಲ್ಲ, ವೆರ್ನರ್ ಇವೆಲ್ಲವುಗಳಿಗೆ ಹೊಸ ದೃಷ್ಟಿ ಒದಗಿಸಿದನು. ಪರಿವರ್ತನೀಯ ಲೋಹದ ಪರಮಾಣುವಿಗೆ ಕೇಂದ್ರಿಯ ಹಾಗೂ ದ್ವಿತೀಯ ಸಂಯೋಗ ಸಾಮಥ್ರ್ಯವಿದೆಯೆಂದು ವೆರ್ನರ್ ತಿಳಿಸಿದನು. ಇವುಗಳನ್ನು ಲಿಂಗ್ಯಾಂಡ್ಸ್ ಎಂದು ಕರೆದನು. ಇಪ್ಪತ್ತು ವರ್ಷಗಳ ಕಾಲ ಈ ಸಿದ್ಧಾಂತ ರೂಪಿಸಲು ಶ್ರಮಿಸಿದ ವೆರ್ನರ್, ಅದರಲ್ಲಿ ಯಶಸ್ಸನ್ನು ಕಂಡನು. 1913ರಲ್ಲಿ ವೆರ್ನರ್ ನೊಬೆಲ್ ಪ್ರಶಸ್ತಿ ಗಳಿಸಿದನು.
ರಿಚರ್ಡ್ಸ್, ಥಿಯೋಡೊರ್ ವಿಲಿಯಂ (1868-1928) 1914
Richards , Theodore William
ಅಸಂಸಂ-ವೈಶ್ಲೇಷಿಕ ರಸಾಯನಶಾಸ್ತ್ರ (Analytical Chemistry) - ವೈಶ್ಲೇಷಿಕ ವಿಧಾನಗಳಿಂದ ಸಾಪೇಕ್ಷ ಅಣುತೂಕ (Relative Molecular Weight) ನಿರ್ಧರಿಸಿದಾತ.
ರಿಚಡ್ರ್ಸ್ ಹದಿನಾಲ್ಕು ವರ್ಷದ ಕಿಶೋರನಾಗಿದ್ದಾಗಲೇ ಖಗೋಳಶಾಸ್ತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದನು. ಆದರೆ ಆತನ ದೃಷ್ಟಿ ಚುರುಕಾಗಿರಲಿಲ್ಲದ್ದರಿಂದ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗಕ್ಕೆ ಸೇರಿದನು. ಹಾರ್ವರ್ಡ್ನಲ್ಲಿ ಪದವಿ ಗಳಿಸಿ, ಹೆಚ್ಚಿನ ಜ್ಞಾನಾರ್ಜನೆಗೆ ಯುರೋಪಿಗೆ ಭೇಟಿ ಇದ್ದನು. ಗಟ್ಟಿಂಜೆನ್ಲ್ಲಿ ಪ್ರಾಧ್ಯಾಪಕನಾಗುವಂತೆ ರಿಚರ್ಡ್ಸ್’ಗೆ ಆಹ್ವಾನವೀಯಲಾಯಿತು. ಇದನ್ನು ಒಪ್ಪದೆ, ರಿಚಡ್ರ್ಸ್ ಹಾರ್ವರ್ಡ್ಗೆ ಮರಳಿದನು. ಇಲ್ಲಿ ರಿಚಡ್ರ್ಸ್ ರಾಸಾಯನಿಕಗಳ ಅಣು ತೂಕವನ್ನು ಸರಿಯಾಗಿ ಅಳೆಯುವ ಸಾಧ್ಯತೆಗಳಿಗೆ ಯತ್ನಿಸಿ ಅದರಲ್ಲಿ ಅಪಾರ ಯಶಸ್ಸನ್ನು ಕಂಡನು. ರಿಚಡ್ರ್ಸ್ 25 ಧಾತುಗಳ ಹಾಗೂ ಆತನ ಸಂಗಡಿಗರು 40 ಧಾತುಗಳ ಅಣುತೂಕವನ್ನು ಪಡೆದು, ಪರಿಮಾಣಾತ್ಮಕ ರಸಾಯನಶಾಸ್ತ್ರಕ್ಕೆ (Volumetric Chemistry) ಭದ್ರ ಬುನಾದಿ ಹಾಕಿದರು. 1913ರಲ್ಲಿ ರಿಚಡ್ರ್ಸ್ ಸಾಮಾನ್ಯ ಸೀಸ ಹಾಗೂ ಯುರೇನಿಯಂ ವಿಕಿರಣಪಟು ಶೈಥಿಲ್ಯದಿಂದ ದಕ್ಕಿದ ಸೀಸದ ಅಣುತೂಕಗಳಲ್ಲಿ ವ್ಯತ್ಯಾಸ ಇದೆಯೆಂದು ತೋರಿಸಿದನು. ಇದು ವಿಕಿರಣ ಶೈಥಿಲ್ಯತೆಗೆ ಸಾಕ್ಷಿ ನೀಡಿತಲ್ಲದೆ ಸಾಡಿ ಮುನ್ಸೂಚಿಸಿದಂತೆ ಧಾತುಗಳ ಸಮಸ್ಥಾನಿಗಳ ಅಸ್ತಿತ್ವಕ್ಕೆ ಪ್ರಮಾಣವಾಯಿತು. ರೋಹಿತ ಮಾಪಕದಿಂದ, ಅತ್ಯುತ್ತಮವಾದ ಭೌತಿಕ ವಿಧಾನಗಳು ಜಾರಿಗೆ ಬರುವವರೆಗೆ ರಿಚಡ್ರ್ಸ್ ವಿಧಾನಗಳೇ ಅಣು ತೂಕದ ನಿರ್ಧಾರಕ್ಕೆ ಅತ್ಯುತ್ತಮ ಮಾರ್ಗಗಳಾಗಿದ್ದವು. 1914ರಲ್ಲಿ ರಿಚಡ್ರ್ಸ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ವಿಲ್ಷ್ಟೆಟೆರ್ , ರಿಚರ್ಡ್ (1872-1942) 1915
Willstatter , Richard
ಜರ್ಮನಿ-ಸಾವಯವ ರಸಾಯನಶಾಸ್ತ್ರ- ಕ್ಲೋರೋಫಿಲ್ನ ರಾಚನಿಕ ಸ್ವರೂಪ ಅನಾವರಣಗೊಳಿಸಿದಾತ.
ವಿಲ್ಷ್ಟೆಟೆರ್, ಹನ್ನೊಂದನೆ ವಯಸ್ಸಿನಲ್ಲಿರುವಾಗ, ಆತನ ತಂದೆ ನ್ಯೂಯಾರ್ಕ್ಗೆ ಹೋದನು. ವಿಲ್ಷ್ಟೆಟೆರ್ನ ಸೋದರ ಮಾವ ನ್ಯೂಯರ್ಕ್ನಲ್ಲಿ ಬಟ್ಟೆಯ ಕಾರ್ಖಾನೆ ತೆರೆದಿದ್ದನು. ಇದರ ಯಶಸ್ಸು ವಿಲ್ಷ್ಟೆಟೆರ್ ತಂದೆಯನ್ನು ಆಕರ್ಷಿಸಿದ್ದಿತು. ಆದರೆ ಈ ವ್ಯಾಪಾರದಲ್ಲಿ ಯಶಸ್ಸು ಗಳಿಸುವಲ್ಲಿ ಹದಿನೇಳು ವರ್ಷಗಳು ಸರಿದವು. ಈ ಕಾಲದಲ್ಲಿ ವಿಲ್ಷ್ಟೆಟರ್ ತಾಯಿ ಜರ್ಮನಿಯಲ್ಲಿ ತನ್ನಿಬ್ಬರು ಮಕ್ಕಳನ್ನು ಬೆಳೆಸಿದಳು. ವಿಲ್ಷ್ಟೆಟರ್ ಚಿಕ್ಕಪ್ಪ ಬ್ಯಾಟರಿ ಕಾರ್ಖಾನೆ ಹೊಂದಿದ್ದನು. ಆಗಾಗ್ಗೆ ಅಲ್ಲಿಗೆ ಭೇಟಿ ನೀಡುತ್ತಿದ್ದುದರಿಂದ ಅವನಿಗೆ ರಸಾಯನಶಾಸ್ತ್ರದಲ್ಲಿನ ಆಸಕ್ತಿಗೆ ಕಾರಣವಾಯಿತು. ವಿಲ್ಷ್ಟೆಟರ್ ಮ್ಯೂನಿಕ್ನಲ್ಲಿ ಬೇಯರ್ ಕೆಳಗೆ ವಿದ್ಯಾಭ್ಯಾಸ ಹೊಂದಿ 1894ರಲ್ಲಿ ಅಲ್ಕ ಲಾಯಿಡ್ಸ್ಗಳ ಮೇಲೆ ನಡೆಸಿದ ಸಂಶೋಧನೆಗಳಿಗಾಗಿ ಡಾಕ್ಟರೇಟ್ ಪಡೆದನು. ಇದಾದ ಮೇಲೆ ಝೂರಿಕ್ನಲ್ಲಿ ಪ್ರಾಧ್ಯಾಪಕನಾದನು. ಸಸ್ಯಗಳ ಬಣ್ಣ , ಕ್ವಿನೈನ್, ಕ್ಲೋರೋಫಿûಲ್ ಈತನ ಅಧ್ಯಯನದ ವಿಷಯಗಳಾಗಿದ್ದವು. ಟ್ಸೆಟ್, ವರ್ಣಾಲೇಖ (Chromatography) ತಂತ್ರಗಳನ್ನು ಬಳಕೆಗೆ ತಂದಿದ್ದನು. ಈ ತಂತ್ರದ ನೆರವಿನಿಂದ, ವಿಲ್ಷ್ಟೆಟರ್ ಕ್ಲೋರೋಫಿûಲ್-ಎ ಹಾಗೂ ಬಿ ವಿಧಗಳ ರಾಚನಿಕ ಸ್ವರೂಪ ನಿರ್ಧರಿಸಿದನು. ರಕ್ತದಲ್ಲಿನ ಹಿಮೋಗ್ಲೋಬಿನ್ ಕಬ್ಬಿಣದ ಒಂದು ಅಣುವನ್ನು ಹೊಂದಿರುವಂತೆ , ಕ್ಲೋರೋಫಿûಲ್ ಮೆಗ್ನೇಷಿಯಂನ ಒಂದು ಅಣುವನ್ನು ಹೊಂದಿರುವುದೆಂದು ವಿಲ್ಷ್ಟೆಟರ್ ತೋರಿಸಿದನು. ಕೊಕೇನ್ನ ಉತ್ಪನ್ನಗಳನ್ನು ಸಹ ಈತ ಅಭ್ಯಸಿಸಿದನು. 1915ರಲ್ಲಿ ಸಸ್ಯಗಳ ವರ್ಣಕಗಳ (Pigments) ವಿಷಯದಲ್ಲಿನ ಕಾರ್ಯಗಳಿಗಾಗಿ ನೊಬೆಲ್ ಪ್ರಶಸ್ತಿ ಪಡೆದನು. 1912ರಲ್ಲಿ ಬರ್ಲಿನ್-ಡಹ್ಲೆಮ್ನ ಕೈಸರ್ ವಿಲ್ಹೆಲ್ಮ್ ಸಂಸ್ಥೆ ಸೇರಲು ಬರ್ಲಿನ್ಗೆ ಮರಳಿದನು. ಇಲ್ಲಿ ಕೆರೋಟಿನ್ ಹಾಗೂ ಆಂಥೋಸೆಯನಿಸ್ಸ್ಗಳಲ್ಲಿ ಸಂಶೋಧನೆಯಲ್ಲಿ ಕ್ರಿಯಾಶೀಲನಾಗಿದ್ದನು. ಮೊದಲ ಜಾಗತಿಕ ಯುದ್ದದಲ್ಲಿ ವಿಷಾನಿಲ ರಕ್ಷಕ ಮುಖವಾಡ ನಿರ್ಮಿಸಿದ ವಿಲ್ಷ್ಟೆಟರ್ ¥sóÁಸ್ಜೀನ್ನ್ನು ಹೀರಿಕೊಳ್ಳುವ ರಾಸಾಯನಿಕ ತಯಾರಿಸಿದನು.
1916ರಲ್ಲಿ ಮ್ಯೂನಿಕ್ನಲ್ಲಿ ಬೇಯರ್ನಿಂದ ತೆರವಾದ ಪೀಠ ಅಲಂಕರಿಸಿದನು. ಸ್ಮಾಲ್ ಜೊತೆಗೆ ದ್ಯುತಿ ಸಂಶ್ಲೇಷಣೆ ಕಿಣ್ವ,ಪರಾಕ್ಸೈಡ್ಗಳ ಅರಿವಿಗೆ ಶ್ರಮಿಸಿದನು. ಭೂರಸಾಯನಶಾಸ್ತ್ರಜ್ಞ ವಿ.ಎಂಗೋಲ್ಷ್ಮಿತ್, ಯಹೂದಿಯೆಂದು ಆತನನ್ನು ಬೋಧಕ ಹುದ್ದೆಗೆ ಆಯ್ಕೆ ಮಾಡಲು ಆಡಳಿತ ಮಂಡಳಿ ನಿರಾಕರಿಸಿತು. ಜನಾಂಗ ಭೇದ ನೀತಿಯನ್ನು ವಿರೋಧಿಸಿದ ವಿಲ್ಷ್ಟೆಟರ್ ತನ್ನ 53ನೇ ವಯಸ್ಸಿನಲ್ಲಿ ನಿವೃತ್ತಿ ವೇತನವಿಲ್ಲದೆ, ಆಡಳಿತ ಮಂಡಳಿ ನೀಡಿದ ಮನೆಯನ್ನು ಹಿಂದುರುಗಿಸಿ ರಾಜಿನಾಮೆ ನೀಡಿದನು. ಮದುವೆಯಾದ ಐದೇ ವರ್ಷಗಳಲ್ಲಿ ವಿಲ್ಷ್ಟೆಟರ್ ಮಡದಿ ತೀರಿದಳು. ಕೊನೆಯ ಮಗ ಕೊನೆಯುಸಿರೆಳಿದಿದ್ದನು. ಮಗಳು ಮದುವೆಯಾಗಿ ಅಸಂಸಂಗಳಲ್ಲಿ ವಾಸಿಸುತ್ತಿದ್ದಳು. ಇವೆಲ್ಲ ಸನ್ನಿವೇಶಗಳು ವಿಲ್ಷ್ಟೆಟರ್ನನ್ನು ಏಕಾಂಗಿಯಾಗಿಸಿದವು. ಹಲವಾರು ದೇಶಗಳಿಂದ ಬಂದ ಆಹ್ವಾನಗಳನ್ನು ತಿರಸ್ಕರಿಸಿ ತನ್ನ ಉಳಿದ ಜೀವನವನ್ನು ಪ್ರಯಾಣ ಉಪನ್ಯಾಸಗಳಲ್ಲಿ ಕಳೆದನು. 1938ರಲ್ಲಿ ನ್ಯಾಷನಲ್ ಸೊಷಿಯಲಿಸ್ಟ್ ಪಕ್ಷ ಯಹೂದಿಗಳ ಬಂಧನಕ್ಕೆ ಸ್ವಯಂ ಸೇವಕನನ್ನು ಕರೆದಿರುವ ವಿಷಯ ವಿಲ್ಷ್ಟೆಟರ್ ಕಿವಿಗೆ ಬಿದ್ದಿತು. ಅವರಿಂದ ವಿಲ್ಷ್ಟೆಟರ್ ಎಚ್ಚರಿಕೆಯ ಬೆದರಿಕೆಗಳನ್ನು ಪಡೆದನು. ಇಂತಹ ಸ್ಥಿತಿಯಲ್ಲಿ ಬದುಕಿ ಉಳಿಯಬೇಕಾದರೆ ಜರ್ಮನಿ ತೊರೆದು ಹೋಗದೆ ಬೇರೆ ದಾರಿಯಿಲ್ಲವೆಂದು ಈತನಿಗೆ ಮನದಟ್ಟಾಯಿತು. ಅಪರಾಧಿಯಂತೆ ಕಳ್ಳ ಮಾರ್ಗದಲ್ಲೇ ಜರ್ಮನಿ ತೊರೆಯದೆ, ಸರಿಯಾದ ಕಾನೂನಿನ ಮಾರ್ಗದಲ್ಲೇ ಸ್ವಿಟ್ಸಲ್ರ್ಯಾಂಡ್ಗೆ ಹೋಗಲು ವಿಲ್ಷ್ಟೆಟರ್ ಯತ್ನಿಸಿದನು. ಆದರೆ ಈತನ ಪ್ರಾಮಾಣಿಕತೆ, ಸಜ್ಜನಿಕೆಗಳು ನಾಝಿಗಳೆದುರು ನಿಲ್ಲಲಿಲ್ಲ. ವಿಲ್ಷ್ಟೆಟರ್ ದಾಖಲೆಗಳು ಸರ್ಕಾರದ ವಶವಾದವು. 1939ರ ಮಾರ್ಚ್ನಲ್ಲಿ ತನ್ನ ಹಳೆಯ ವಿದ್ಯಾರ್ಥಿ ಸ್ಮಾಲ್ ಹಾಗೂ ಪ್ರಭಾವಿ ಸ್ನೇಹಿತರ ನೆರವಿನಿಂದ ಸ್ವಿಟ್ಸಲ್ರ್ಯಾಂಡ್ಗೆ ವಲಸೆ ಹೋಗಬೇಕಾಯಿತು.
ಹಾಬರ್, ಫ್ರಿಟ್ಸ್ (1868-1934 )
Haber , Fritz (CHE.) 1918
ಜರ್ಮನಿ-ಭೌತರಸಾಯನಶಾಸ್ತ್ರ-ಸಾರಜನಕ ಸ್ಥಿರೀಕರಣ ಸಂಸ್ಕರಣೆ ಕಾರ್ಯಗತಗೊಳಿಸಿದಾತ.
ಹಾಬರ್ 9 ಡಿಸೆಂಬರ್ 1868 ರಂದು ಬ್ರೆಸ್ಲೌದಲ್ಲಿ ಜನಿಸಿದನು. ಹಾಬರ್ ತಂದೆ ಬಣ್ಣದ ವ್ಯಾಪಾರಿಯಾಗಿದ್ದನು. ಬಾಲಕನಾಗಿರುವಾಗಲೇ ಹಾಬರ್ ಹಲವಾರು ರಾಸಾಯನಿಕ ಪ್ರಯೋಗಗಳನ್ನು ನಡೆಸಿದ್ದನು. ಕುಟುಂಬದ ವ್ಯವಹಾರಗಳಿಗೆ ಅನುಕೂಲವಾಗಲೆಂದು ಹಾಬರ್ ಸಾವಯವ ರಸಾಯನಶಾಸ್ತ್ರದಲ್ಲಿ ವಿದ್ಯಾಭ್ಯಾಸ ಹೊಂದಿದನು. 1886 ರಿಂದ 1891 ರವರೆಗೆ ಹೈಡೆಲ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಬುನ್ಸೆನ್ ಬರ್ಲಿನ್ನಲ್ಲಿ ಎ.ಡಬ್ಲ್ಯು.ಹಾಫ್ಮನ್ ಮತ್ತು ಚಾರ್ಲೋಟ್ಬರ್ಲ್ನ್ಲ್ಲಿ ಲಿಬೆರ್ಮನ್ ಕೈಕೆಳಗೆ ರಸಾಯನಶಾಸ್ತ್ರದ ಶಿಕ್ಷಣ ಪಡೆದನು. ಆದರೆ ಕೆಲಕಾಲದ ನಂತರ ಹೆಚ್ಚಿನ ಶಿಕ್ಷಣ ಗಳಿಸಲು, ಜೆನಾದಲ್ಲಿ ಲುಡ್ವಿಗ್ ಕ್ನೋರ್ನ ಮಾರ್ಗದರ್ಶನದಲ್ಲಿ ಶ್ರಮಿಸಿ, ಈಸ್ಟರ್ಗಳ ಬಗೆಗೆ ಲೇಖನ ಪ್ರಕಟಿಸಿದನು. ಇಷ್ಟಾದರೂ ಹಾಬರ್ಗೆ ಭೌತಶಾಸ್ತ್ರದಲ್ಲಿ ಅಥವಾ ರಸಾಯನಶಾಸ್ತ್ರದಲ್ಲಿ ಮುಂದುವರೆಯಬೇಕೆ ? ಎಂಬ ದ್ವಂದ್ವ ಕಾಡಿತು. 1884ರಲ್ಲಿ ಕಾರ್ಲ್ಷ್ರುಹೆಯಲ್ಲಿ ಹ್ಯಾನ್ಸ್ ಬಂಟೆಯ ಬಳಿ ರಸಾಯನ ಶಾಸ್ತ್ರ ವಿಭಾಗದಲ್ಲಿ ಸಹಾಯಕನಾದನು. ಈತನ ಪ್ರಭಾವದಿಂದ ಪೆಟ್ರೋಲಿಯಂ ರಸಾಯನಶಾಸ್ತ್ರದಲ್ಲಿ ಆಸಕ್ತಿ ಮೂಡಿತು. ಹೈಡ್ರೋಕಾರ್ಬನ್ಗಳ ಸಂಯೋಜನೆ, ವಿಯೋಜನೆ , ದಹ್ಯತೆಯ ಮೇಲೆ ಸಂಶೋಧನೆ ನಡೆಸಿದನು. 1906ರಲ್ಲಿ ಕಾರ್ಲ್ ಷ್ರುಹೆಯಲ್ಲಿ ಹೊಸದಾಗಿ ಸ್ಥಾಪನೆಗೊಂಡ ಭೌತ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥನಾದನು. 1911ರಲ್ಲಿ ಬರ್ಲಿನ್ ಡಹ್ಲೆಮ್ನ ಭೌತ ಹಾಗೂ ವೈದ್ಯುತ್ ರಸಾಯನಶಾಸ್ತ್ರ ವಿಭಾಗದ ಕಾರ್ಯದರ್ಶಿಯ ಹುದ್ದೆಯಿಂದ ಎಂಗ್ಲರ್ ನಿವೃತ್ತನಾದಾಗ, ಹಾಬರ್ ಆತನ ಸ್ಥಾನಕ್ಕೆ ನಿಯೋಜಿತನಾದನು. ಜರ್ಮನಿ ನಾಝಿ ಆಡಳಿತಕ್ಕೊಳಪಟ್ಟು ಈ ಸಂಸ್ಥೆಯ ಬಹುತೇಕ ವಿಜ್ಞಾನಿಗಳು ರಾಜಿನಾಮೆ ನೀಡುವಂತಹ ಪರಿಸ್ಥಿತಿ ಬಂದೊದಗಿತು. ಇದನ್ನು ಒಪ್ಪದ ಹಾಬರ್ 1933ರಲ್ಲಿ ತಾನೇ ರಾಜಿನಾಮೆ ನೀಡಿದನು. ಇದರ ನಂತರ ಸ್ವಿಟ್ಸಲ್ಯಾಂಡ್ಗೆ ಹೋಗಿ ನೆಲೆಸಿದನು. ಅಮೋನಿಯಂ ಸಂಶ್ಲೇಷಣೆಯನ್ನು ಕುರಿತಾಗಿ ಹಾಬರ್ ಆಳ ಅಧ್ಯಯನ ಮಾಡಿದನು. ಮಣ್ಣಿನ ಸಾರ ಹೆಚ್ಚಿಸಲು ಸಾರಜನಕದ ಪೂರೈಕೆಗೆ ರಾಸಾಯನಿಕ ಗೊಬ್ಬರವಾಗಿ ಚಿಲಿ ನೈಟ್ರೇಟನ್ನು ವ್ಯಾಪಕವಾಗಿ ಬಳಸಲಾಗುತ್ತಿದ್ದಿತು. ಇದನ್ನು ಗಮನಿಸಿದ ಕ್ರೂಕ್, ಇದೇ ರೀತಿ ಮುಂದುವರೆದದ್ದೇ ಆದರೆ, ಕಾಲಾನುಕ್ರಮದಲ್ಲಿ ಚಿಲಿ ನೈಟ್ರೇಟ್ ನಿಕ್ಷೇಪ ಖಾಲಿಯಾಗಿ, ಗೊಬ್ಬರ ಬರ ಎದುರಿಸಬೇಕಾಗುವುದೆಂದು ಎಚ್ಚರಿಸಿದ್ದನು. ಬುನ್ಸೆನ್ ಕೈಕೆಳಗೆ ಕೆಲಸ ಮಾಡುತ್ತಿದ್ದಾಗ ಜ್ವಾಲೆಯಲ್ಲಿ ಅನಿಲಗಳು ದಹಿಸಿದಾಗ ಉಂಟಾಗುವ ರಾಸಾಯನಿಕ ಕ್ರಿಯೆಗಳನ್ನು ಗಮನಿಸಿದ್ದ ಹಾಬರ್ಗೆ ವಾತಾವರಣದ ಸಾರಜನಕ ಬಳಸಿ ಅಮೋನಿಯ ತಯಾರಿಸಬಹುದೆಂದು ಅರಿತನು. 1898ರಲ್ಲಿ ನೈಟ್ರೋಬೆಂಜೀನ್ನ್ನು ಅಪಕರ್ಷಿಸಿ, ಬೇರೆ ರಾಸಾಯನಿಕ ಸಂಯುಕ್ತಗಳಿಗೂ ಅನ್ವಂiÀiವಾಗುವ ಸಾಮಾನ್ಯ ಆಪಕರ್ಷಕ ವಿಧಾನ ಜಾರಿಗೆ ತಂದನು. ದ್ರವದ ಆಮ್ಲತೆಯ (Acidity) ನಿರ್ಧಾರಕ್ಕೆ ರೂಪಿತವಾಗುವ ಬಿಲ್ಮನ್ ಕ್ವಿನ್ ಹೈಡ್ರೋನ್ ಎಲೆಕ್ಟ್ಯೋಡ್ನ ಹಿಂದೆ ಹಾಬರ್ ರೂಪಿಸಿದ ತತ್ತ್ವಗಳಿವೆ. ಇಂಜಿನ್ಗಳಲ್ಲಿನ ಚೈತನ್ಯ ನಷ್ಟವನ್ನು ಅಧ್ಯಯನ ಮಾಡಿ, ರಾಸಾಯನಿಕ ಬದಲಾವಣೆಗಳ ಮೂಲಕ ಇಂಧನ ಮಿತವ್ಯಯವನ್ನು ಸಾಧಿಸುವ ಪ್ರಯೋಗಗಳನ್ನು ಕೈಗೊಂಡನು. ಬುನ್ಸೆನ್ ಉರಿಯಲ್ಲಿನ ಹೊರ ಹಾಗೂ ಒಳಭಾಗಗಳ ಅಧ್ಯಯನ ನಡೆಸಿ ಜ್ವಾಲೆಯ ತಾಪಮಾನ ನಿರ್ಧರಿಸುವ ವಿಧಾನ ರೂಪಿಸಿದನು. 1905ರಲ್ಲಿ ಸಾರಜನಕ ಹಾಗೂ ಜಲಜನಕದಿಂದ ಅಮೋನಿಯಾವನ್ನು ಸಣ್ಣ ಪ್ರಮಾಣದಲ್ಲಿ ಉತ್ಪಾದಿಸುವ ವಿವರ ನೀಡಿದನು. ಇದಕ್ಕೆ ಕಬ್ಬಿಣವನ್ನು ಕ್ರಿಯಾ ವರ್ಧಕವಾಗಿ (Catalyst) ಬಳಸಿದ್ದನು. ನಂತರ ಬಾಷ್ ಹಾಗೂ ಮಿಟಾಷ್ಕ್ರ ಸಹಕಾರದಿಂದ, ಸಾರಜನಕ, ಜಲಜನಕಗಳನ್ನು, 150/200 ವಾಯುಭಾರದಲ್ಲಿ , 500 ಸೆಂ.ಗಿಂತಲೂ ಅಧಿಕ ತಾಪಮಾನದಲ್ಲಿ ಕ್ರಿಯಾಪ್ರೇರಕಗಳ ಮೇಲೆ ಸಾಗಿಸಿ, ಅಮೋನಿಯಾವನ್ನು ಸಂಶ್ಲೇಷಿಸುವಲ್ಲಿ ಯಶಸ್ವಿಯಾದನು. ಇದನ್ನು ಕೈಗಾರಿಕರಣಗೊಳಿಸಿ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲು, ಹಾಬರ್ ಕಾರ್ಲ್ ಬಾಷ್ ಜೊತೆ ಒಪ್ಪಂದ ಮಾಡಿಕೊಂಡನು. ಇದರ ಪರಿಣಾಮವಾಗಿ 1913ರಲ್ಲಿ ಹಾಬರ್-ಬಾಷ್ ಸಂಸ್ಕರಣಾ ವಿಧಾನ ಬಳಕೆಗೆ ಬಂದಿತು. 1980ರ ದಶಕದ ವೇಳೆಗೆ ಈ ವಿಧಾನದಿಂದ ಸರಿಸುಮಾರು, 10 ಕೋಟಿ ಟನ್ಗಳಿಗಿಂತಲೂ ಅಧಿಕ ಅಮೋನಿಯಾ ಪ್ರತಿ ವರ್ಷ ಉತ್ಪಾದನೆಗೊಳ್ಳುತ್ತಿರುವುದೆಂದು ಅಂದಾಜಿಸಲಾಗಿದೆ. ಮೊದಲನೆ ಜಾಗತಿಕ ಯುದ್ದದ ಸಮ0iÀiದಲ್ಲಿ ಆಸ್ಪೋಟಗಳ ತಯಾರಿಕೆಗೆ ಬೇಕಾದ ನೈಟ್ರಿಕ್ ಆಮ್ಲದ ಕೊರತೆ ತಲೆದೋರಿತು, ಹಾಬರ್, ಜರ್ಮನಿಯ ಮಿಲಿಟರಿಗಾಗಿ, ಅಮೋನಿಯಾವನ್ನು ಉತ್ಕರ್ಷಿಸಿ (Oxidise), ನೈಟ್ರಿಕ್ ಆಮ್ಲ ತಯಾರಿಸುವ ವಿಧಾನ ಕಂಡು ಹಿಡಿದನು. ಹಾಬರ್, ಜರ್ಮನ್ ಮಿಲಿಟರಿಗೆ ಸಲಹೆಗಾರನಾಗಿದ್ದು ವಿಷಾನಿಲಗಳಿಂದ ರಕ್ಷಣೆ ಪಡೆಯುವ ಮುಖವಾಡಗಳನ್ನು ತಯಾರಿಸಿದನು. 1918ರಲ್ಲಿ ಅಮೋನಿಯ ಸಂಶ್ಲೇಷಣೆಗಾಗಿ ಹಾಬರ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. 1933ರಲ್ಲಿ ಹಾಬರ್, ಯಹೂದಿ ವಿರೋದಿ ನೀತಿ ಪ್ರತಿಭಟಿಸಿ ತನ್ನ ಹುದ್ದೆಗೆ ರಾಜಿನಾಮೆ ನೀಡಿ , ಕೇಂಬ್ರಿಜ್ಗೆ ಹೋಗಿ ನೆಲೆಸಿದನು. ಆದರೆ ತನ್ನ ಶತ್ರು ದೇಶದಲ್ಲಿರಲು ಅವನ ಮನಸ್ಸು ಒಪ್ಪಲಿಲ್ಲ. ಆದ್ದರಿಂದ ಇಟಲಿಯಿಂದ ಬಂದ ಅಹ್ವಾನ ಮನ್ನಿಸಿ ಯಾತ್ರೆ ಕೈಗೊಂಡಾಗ , ಮಾರ್ಗ ಮಧ್ಯದಲ್ಲೇ ಅಸು ನೀಗಿದನು.
ನರ್ನ್’ಸ್ಟ್ , (ಹೆರ್ಮಾನ್) ವಾಲ್ಟರ್ (1864-1941) 1920
Nernst, ( Hermann ) Walther
ಜರ್ಮನಿ-ಭೌತಶಾಸ್ತ್ರ-ರಾಸಾಯನಿಕ ಔಷ್ಣೀಂiÀi ಗತಿಶಾಸ್ತ್ರದ (Thermodynamics) ಮುಂಚೂಣಿಗ. ಔಷ್ಣೀಯ ಗತಿಶಾಸ್ತ್ರದ ಮೂರನೇ ನಿಯಮ ನೀಡಿದಾತ.
ಪಶ್ಚಿಮ ಪ್ರಷ್ಯಾದ ಬ್ರೆಸೆನ್ ಸಂಸ್ಥಾನದಲ್ಲಿ 25 ಜೂನ್ 1864ರಂದು ನರ್ನ್’ಸ್ಟ್ ಜನನವಾಯಿತು. ನರ್ನ್’ಸ್ಟ್ ಜೂರಿಕ್ ,ಗ್ರಾಸ್ ಹಾಗೂ ವಿರ್ಸ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದನು. ವಿರ್ಸ್ಬರ್ಗ್ನಲ್ಲಿ ಖ್ಯಾತ ವಿಜ್ಞಾನಿ ಕೋಲ್ರಾಷ್ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪಡೆದನು. ನಂತರ ಲೀಪ್ಜಿಗ್ ವಿಶ್ವ ವಿದ್ಯಾಲಯದಲ್ಲಿ ವಿಲ್ಹೆಲ್ಮ್ ಓಸ್ವಾಲ್ಡ್ ಸಹಾಯಕನಾಗಿ ಭೌತ ರಸಾಯನಶಾಸ್ತ್ರ ವಿಭಾಗ ಸ್ಥಾಪಿಸಿದನು. 1890ರಲ್ಲಿ ಗಟ್ಟಿಂಜೆನ್ನಲ್ಲಿದ್ದ ನರ್ನ್’ಸ್ಟ್ 1905ರಲ್ಲಿ ಬರ್ಲಿನ್ ವಿಶ್ವವಿದ್ಯಾಲಯ ಸೇರಿದನು. ನರ್ನ್’ಸ್ಟ್ ಜರ್ಮನಿಯಲ್ಲಿ ಪದವಿಗೆ ವ್ಯಾಸಂಗ ಮಾಡುತ್ತಿರುವಾಗಲೇ, ರಾಸಾಯನಿಕ ಶಾಸ್ತ್ರದ ಸಮಸ್ಯೆಗಳಿಗೆ ಭೆತಶಾಸ್ತ್ರದ ಪರಿಹಾರಗಳನ್ನು ಹೇಗೆ ಒದಗಿಸಬಹುದೆಂದು ಚಿಂತಿಸುತ್ತಿದ್ದನು. 1905ರಲ್ಲಿ ಬರ್ಲಿನ್ನಲ್ಲಿ ಪ್ರಾಧ್ಯಾಪಕನಾದ ನರ್ನ್’ಸ್ಟ್ , ವೈದ್ಯುತ್ ರಸಾಯನಶಾಸ್ತ್ರ ಮತ್ತು ಔಷ್ಣೀಯಗತಿಶಾಸ್ತ್ರದಲ್ಲಿ ಕ್ರಿಯಾಶೀಲನಾಗಿದ್ದನು. 1904ರಲ್ಲಿ ವಿಶಿಷ್ಟ ವೈದ್ಯುತ್ ದೀಪ ತಯಾರಿಸಿ, ಅದರ ತಂತ್ರವನ್ನು ಮಿಲಿಯನ್ ಮಾರ್ಕ್ಗಳಿಗೆ ಮಾರಿದನು. ಆದರೆ ಎಡಿಸನ್ ಇದಾದ ಕೆಲವೇ ದಿನಗಳಲ್ಲಿ ಇದಕ್ಕಿಂತಲೂ ಸುಧಾರಿತ ವಿದ್ಯುತ್ ದೀಪದ ತಯಾರಿಕೆಯಲ್ಲಿ ಯಶಸ್ಸನ್ನು ಕಂಡದ್ದರಿಂದ, ನರ್ನ್’ಸ್ಟ್ ದೀಪ ಅಲ್ಪಕಾಲದಲ್ಲೇ ಬಳಕೆಯಿಂದ ಕಣ್ಮರೆಯಾಯಿತು. ಆದರೆ ಈ ವಿದ್ಯುತ್ ದೀಪದ ತಂತ್ರಜ್ಞಾನ ಮಾರಿ ಸಾಕಷ್ಟು ಶ್ರೀಮಂತನಾಗಿದ್ದ ನೆನ್ರ್ಸ್ಟ್ ಜಮೀನು ಖರೀದಿಸಿ, ಅಲ್ಲಿ ಮೋಟಾರ್ ಕಾರ್ ನಿರ್ಮಾಣದಲ್ಲಿ ತಲ್ಲೀನನಾದನು.ನೆನ್ರ್ಸ್ಟ್ ಶಾಖ ಪ್ರಮೇಯ ನೀಡಿ, ರಸಾಯನಶಾಸ್ತ್ರದಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿದನು. ಇದು ಮುಂದೆ ಔಷ್ಣೀಯ ಗತಿಶಾಸ್ತ್ರದ ಮೂರನೆ ನಿಯಮವೆಂದು ಹೆಸರಾಯಿತು.
ನೆನ್ರ್ಸ್ಟ್ ಇದನ್ನು ಔಷ್ಣೀಯ ಗತಿಶಾಸ್ತ್ರದ ಅಂತಿಮ ನಿಯಮವೆಂದು ಸಾರಿದನು. ಏಕೆಂದರೆ, ಮೊದಲ ನಿಯಮ ಮೂರು ಜನರಿಂದಲೂ, ಎರಡನೇ ನಿಯಮ ಇಬ್ಬರಿಂದಲೂ ನೀಡಲ್ಪಟ್ಟರೆ, ಮೂರನೆಯದು ತನ್ನೊಬ್ಬನಿಂದಲೇ ಬಂದಿದೆ ಎನ್ನುವುದು ನೆನ್ರ್ಸ್ಟ್ ವಾದವಾಗಿದ್ದಿತು. ಈ ಮೂರನೇ ನಿಯಮದ ಪ್ರಕಾರ ನಿರಪೇಕ್ಷ ಶೂನ್ಯ ತಾಪಮಾನದಲ್ಲಿ ಎಲ್ಲಾ ಪರಿಶುದ್ಧ ಪದಾರ್ಥಗಳೂ ಒಂದೇ ಎಂಟ್ರೋಪಿ ಹೊಂದಿರುತ್ತವೆ. ಆದರೆ ಈ ಪ್ರಮೇಯ ಸತ್ಯವೆಂದು ಇನ್ನು ವಿವಾದಾತೀತವಾಗಿ ಸಾಬೀತಾಗಬೇಕಾಗಿದೆ. ಏಕೆಂದರೆ ಈವರೆಗೆ ವಸ್ತುಗಳನ್ನು ನಿರಕ್ಷೇಪ ಶೂನ್ಯ ತಾಪಮಾನಕ್ಕೆ ಇಳಿಸುವುದು ಸಾಧ್ಯವಾಗಿಲ್ಲ ನಿರಪೇಕ್ಷ ಶೂನ್ಯದ ಸನಿಹ 0.00001 ಕೆಲ್ವಿನ್ ತಾಪಮಾನ ತಲುಪಲಾಗಿದೆ. ಹಾಗೆ ಆದಾಗ, ಮೂರನೆಯ ನಿಯಮವನ್ನು ನೆನ್ರ್ಸ್ಟ್ ಭಾವಿಸಿದಂತೆ ಒಬ್ಬನಿಂದ ನೀಡಲ್ಪಡದೆ, ಒಬ್ಬರಿಗಿಂತ ಹೆಚ್ಚಿನ ಜನರಿಂದ ಬಂದಿರುತ್ತದೆ. ವೈದ್ಯುತ್ ರಸಾಯನಶಾಸ್ತ್ರದ ಬಹುತೇಕ ಮೂಲ ಚಿಂತನೆಗಳ ಆದ್ಯ ಪ್ರವರ್ತಕ ನೆನ್ರ್ಸ್ಟ್. ಪರಮಾಣು ಕ್ಲೋರಿನ್ ಆಧಾರಿತ, ಜಲಜನಕ ಶೀಘ್ರ ರಾಸಾಯನಿಕ ಪ್ರತಿಕ್ರಿಯೆಗಳ ಪಥ ಪ್ರತಿಪಾದಿಸಿದ ಮೊದಲಿಗ .ಅಯಾನ್ ಸ್ವರೂಪದ ಸಂಯುಕ್ತಗಳು ನೀರಿನಲ್ಲಿ ಕರಗಿ ದ್ರಾವಣವಾದಾಗ ಅ್ಯನಯಾನ್ ಹಾಗೂ ಕ್ಯಾಟಯಾನ್ಗಳಾಗಿ ವಿಭಜನೆಗೊಳ್ಳುತ್ತವೆ. ಶುದ್ಧ ನೀರಿನ ಪರಾ ವೈದ್ಯುತ್ ಗುಣ ಪ್ರಬಲವಾಗಿರುವುದರಿಂದ ಅದು ವೈದ್ಯುತ್ ಅವಾಹಕದಂತೆ ವರ್ತಿಸುತ್ತದೆ. ಈ ಸ್ಥಿತಿಯಲ್ಲಿ ಧನ ಹಾಗೂ ಋಣ ಕಣಗಳ ಮಧ್ಯದ ಆಕರ್ಷಣೆ ಕುಗ್ಗಿರುತ್ತದೆ. ಆಯಾನ್ ಸ್ವರೂಪದ ಸಂಯುಕ್ತ ಕರಗಿದಾಗ, ಅಯಾನ್ಗಳು ಬೇರ್ಪಟ್ಟು ವಿದ್ಯುತ್ ಪ್ರವಹಿಸುತ್ತದೆಯೆಂದು ನರ್ನ್’ಸ್ಟ್ ತಿಳಿಸಿದನು. ಇದನ್ನು ಸ್ವತಂತ್ರವಾಗಿ ಜೆ.ಜೆ.ಥಾಮ್ಸನ್ ಸಹ ಪ್ರತಿಪಾದಿಸಿದ್ದನು. ಜಲಜನಕ ಹಾಗೂ ಕ್ಲೋರಿನ್ಗಳ ಮಿಶ್ರಣದ ಮೂಲಕ ಬೆಳಕನ್ನು ಹಾಯಿಸಿ ಹೈಡ್ರೋಜನ್ ಕ್ಲೋರೈಡ್ ಸಂಯುಕ್ತ ಪಡೆಯಬಹುದು. ಬೆಳಕಿನ ಚೈತನ್ಯದಿಂದಾಗಿ ಕ್ಲೋರಿನ್ ಪರಮಾಣು ಎರಡಾಗಿ ಒಡೆದು ಸರಪಳಿ ರಾಸಾಯನಿಕ ಕ್ರಿಯೆ ಜರುಗುವುದನ್ನು ನರ್ನ್’ಸ್ಟ್ ವಿವರಿಸಿದನು. ನೆನ್ರ್ಸ್ಟ್ದು ಬಹು ವಿಶಿಷ್ಟವಾದ ವ್ಯಕ್ತಿತ್ವ. ಈತ ಕರುಣಾಳುವಾಗಿದ್ದರೂ, ನಾಗರಿಕ ಸೋಗು, ನಡವಳಿಕೆಗಳಿಗೆ ಸೊಪ್ಪು ಹಾಕುತ್ತಿರಲಿಲ್ಲ. ನೆನ್ರ್ಸ್ಟ್ನ ಕುಟುಂಬ ವೈಜ್ಞಾನಿಕ ವಲಯದಲ್ಲಿ ಅದರಾತಿಥ್ಯಕ್ಕೆ ಹೆಸರಾಗಿದ್ದಿತು. ಮೊದಲನೇ ಜಾಗತಿಕ ಯುದ್ದದಲ್ಲಿ ಜರ್ಮನಿಗೆ ಸೋಲಾಗುವುದನ್ನು, ಗ್ರಹಿಸಿದ ನೆನ್ರ್ಸ್ಟ್, ಕೈಸರ್ಗೆ ಯುದ್ದ ನಿಲ್ಲಿಸಿ ಶಾಂತಿ ಘೋಷಿಸಬೇಕೆಂದು ಆಗ್ರಹಿಸಿದನಾದರೂ ಅದರಲ್ಲಿ ಯಶಸ್ಸನ್ನು ಕಾಣಲಿಲ್ಲ. ಯುದ್ದದಲ್ಲಿ ನೆನ್ರ್ಸ್ಟ್ ಮಕ್ಕಳಿಬ್ಬರೂ ಹತರಾದರು. ಮುಂದೆ ಅಸಂಸಂಗಳಿಗೆ ರಾಯಭಾರಿಯಾಗಬೇಕೆಂದು ಆಹ್ವಾನವನ್ನು ನೆನ್ರ್ಸ್ಟ್ ನಿರಾಕರಿಸಿದನು. 1920ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ನೆನ್ರ್ಸ್ಟ್ ಹಿಟ್ಲರ್ನ ನೀತಿ ನಿಯಮಗಳನ್ನು ವಿರೋಧಿಸಿದನು. ನೆನ್ರ್ಸ್ಟ್ ಜಗತ್ತು ಕಂಡ ಅತಿ ಶ್ರೇಷ್ಟ ಭೌತ ರಸಾಯನಶಾಸ್ತ್ರಜ್ಞನೆಂದು ದಾಖಲಾಗಿದ್ದಾನೆ.
Grignard , ( Francois Auguste ) Victor (CHE.) 1912
ಫ್ರಾನ್ಸ್-ಸಾವಯವ ರಸಾಯನಶಾಸ್ತ್ರ-ಸಂಶ್ಲೇಷಣೆಯಲ್ಲಿ ಸಾವಚಿiÀುವ ಮೆಗ್ನೇಶಿಯಂ ಸಂಯುಕ್ತಗಳ ಬಳಕೆ ಅನಾವರಣಗೊಳಿಸಿದಾತ.
ಗ್ರೀನ್ಯಾರ್ ಲಿಯಾನ್ನಲ್ಲಿ ವಿದ್ಯಾಭ್ಯಾಸ ಮಾಡಿ, ಗಣಿತದ ಬೋಧಕನಾದನು. ನಂತರ ಗ್ರೀನ್ಯಾರ್, ರಸಾಯನಶಾಸ್ತ್ರದಲ್ಲಿ ಆಸಕ್ತನಾಗಿ ಪಿ.ಎ.ಬಾರ್ಬಿಯರ್ ಮಾರ್ಗದರ್ಶನದಲ್ಲಿ ಸಾವಯವ ರಸಾಯನಶಾಸ್ತ್ರದಲ್ಲಿ ಸಂಶೋಧನೆ ಪ್ರಾರಂಭಿಸಿದನು. ಆದರೆ ಗ್ರೀನ್ಯಾರ್ಗೆ ಸಂಶೋಧನೆಗೆ ಅಂತಹ ಉತ್ತಮ ವಿಷಯವೇನೂ ದಕ್ಕಲಿಲ್ಲ. ಪ್ರತಿಕ್ರಿಯಾಶೀಲ ಸಾವಯವ ಹ್ಯಾಲೋಜೆನ್ಗಳೊಂದಿಗೆ , ಒಣ ಡೈ ಈಥೈಲ್ ಈಥರ್ ದ್ರಾವಣದಲ್ಲಿ ಮೆಗ್ನೀಶಿಯಂ ಸಂಯೋಜನೆಗೊಳ್ಳುವುದೆಂದು ಗ್ರೀನ್ಯಾರ್ಗೆ ತಿಳಿಯಿತು. ಇವುಗಳನ್ನು ಪ್ರತ್ಯೇಕಿಸದೆ, ಹಲವಾರು ಕಾರ್ಬೊನಿಲ್ ಮತ್ತಿತರ ಸಂಯುಕ್ತಗಳೊಂದಿಗೆ ಪ್ರತಿಕ್ರಿ0iÉುಗೊಳಿಸಿ ಸಾವಯವ ಆಲ್ಕೋಹಾಲ್ಗಳನ್ನು ಪಡೆಯುವುದು ಸಾಧ್ಯ. ಈ ವಿಧಾನಗಳು ಸಾವಯವ ಸಂಶ್ಲೇಷಣೆಯಲ್ಲಿ ಕ್ರಾಂತಿಯನ್ನೇ ತಂದವು. ಮೊದಲ ಜಾಗತಿಕ ಯುದ್ದದಲ್ಲಿ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ ಗ್ರೀನ್ಯಾರ್ಗೆ ರೈಲ್ವೇ ಸೇತುವೆ ಕಾಯುವ ಕೆಲಸಕ್ಕೆ ನಿಯೋಜಿಸಲಾಯಿತು,. ಆದರೆ ಕೆಲಕಾಲದ ನಂತರ ಅವನನ್ನು ರಾಸಾಯನಿಕ ಅಸ್ತ್ರ ತಯಾರಿಕೆಯ ಕಾರ್ಖಾನೆಗೆ ವರ್ಗಾಯಿಸಲಾಯಿತು. ಇಲ್ಲಿ ಮಸ್ಟರ್ಡ್ ಅನಿಲದ ಪತ್ತೆ ಹಚ್ಚಿಕೆ, ಪಾಸ್ಜೀನ್ ತಯಾರಿಕೆಯಲ್ಲಿ ಗ್ರೀನ್ಯಾರ್ ನಿರತನಾದನು. 1919ರಲ್ಲಿ ಬಾರ್ಬಿಯರ್ ತೆರವುಗೊಳಿಸಿದ, ಹುದ್ದೆಯನ್ನು ಗ್ರೀನ್ಯಾರ್ ಅಲಂಕರಿಸಿದನು. 1912ರಲಿ ಗ್ರೀನ್ಯಾರ್ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದನು.
ಪೌಲ್, ಸಬಾಟೀರ್ (1854-1941) 1912
Paul , Sabatier
ಫ್ರ್ರಾನ್ಸ್-ರಸಾಯನಶಾಸ್ತ್ರ- ತೈಲ ಜಲಜನಕೀಕರಣ (Oil Hydrogenation) ಹಾಗೂ ಮೆಥಾನಲ್ ಸಂಶ್ಲೇಷಣಾ ಕೈಗಾರಿಕೆಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಾತ.
ಸಬಾಟೀರ್ 5 ನವೆಂಬರ್ 1854 ರಂದು ದಕ್ಷಿಣ ಫ್ರಾನ್ಸ್’ನಲ್ಲಿದ್ದ ಕ್ಯಾರಕಾಸೋನ್ನಲ್ಲಿ ಜನಿಸಿದನು. ಎಕೊಲೆ ನಾರ್ಮಲೆ, ಎಕೊಲೆ ಸುಪೀರಿಯರ್ನಲ್ಲಿ ಪ್ರವೇಶ ಗಳಿಸಿದ ಸಬಾಟೀರ್ ಎಕೊಲೆ ಸುಪೀರಿಯರ್ಗೆ 1874ರಲ್ಲಿ ಸೇರಿದನು. ಮೂರು ವರ್ಷಗಳ ನಂತರ ಪದವಿ ಮುಗಿಸಿ, 1878ರಲ್ಲಿ ಕಾಲೇಜ್ ಡಿ ಫ್ರಾನ್ಸ್’ನಲ್ಲಿದ್ದ ಬರ್ಥೆಲೊಟ್ಗೆ ಸಹಾಯಕನಾದನು. 1880ರಲ್ಲಿ ಡಾಕ್ಟರೇಟ್ ಗಳಿಸಿದ ಸಬಾಟೀರ್ ಬೊರಾಡೆಯರ್ಸ್ನ ವಿಜ್ಞಾನ ವಿಷಯದಲ್ಲಿ ಭೌತಶಾಸ್ತ್ರದಲ್ಲಿ ವಿಭಾಗದ ಸಿಬ್ಬಂದಿಯಾದನು. 1882ರಲ್ಲಿ ಟಾಲೋಯಸ್ ವಿಶ್ವವಿದ್ಯಾಲಯದಲ್ಲಿ ಇದೇ ಹುದ್ದೆಯನ್ನರಸಿ ಹೋದನು. 1884ರಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕನಾಗಿ ಆಯ್ಕೆಗೊಂಡನು. ಸಬಾಟೀರ್ನ ಆರಂಭಿಕ ಸಂಶೋಧನೆಗಳು ಗಂಧಕ ಹಾಗೂ ಲೌಹಿಕ ಸಲ್ಫೇಟ್ಗಳ ಔಷ್ಣೀಯ ರಸಾಯನಶಾಸ್ತ್ರದ ಮೇಲೆ ಕೇಂದ್ರಿಕೃತವಾಗಿದ್ದವು. ಸಲ್ಫೇಡ್, ಕ್ಲೋರೈಡ್, ಕ್ರೋಯೇಟ್ಗಳ ಭೌತ ರಾಸಾಯನಿಕ ಗುಣ ಧರ್ಮಗಳ ಅಧ್ಯಯನವನ್ನು ಸಹ ಸಬಾಟೀರ್ ಮಾಡಿದನು. ಕ್ರಿಯಾವರ್ಧಕ ವಿದ್ಯಾಮಾನ ಕುರಿತಾದ ಪ್ರಯೋಗ ನಡೆಸಿದ ಸಬಾಟೀರ್ ರಾಸಾಯನಿಕ ಕ್ರಿಯಾ ಸಿದ್ಧಾಂತ ಮಂಡಿಸಿದನು. ಸಣ್ಣಗೆ ಅರೆದ ಲೋಹದ ಜಲಜನಕೀಕರಣದಲ್ಲಿ (Hydrogenation) ನೆರವಾಗುವ ವೇಗ ವರ್ಧಕಗಳನ್ನು (Catalyst) ಕಂಡು ಹಿಡಿದ ಸಬಾಟೀರ್ ಮಾರ್ಗರೇನ್, ತೈಲ ಹೈಡ್ರೋಜೆನೇಷನ್ ಹಾಗೂ ಮೆಥಾನಲ್ ಸಂಶ್ಲೇಷಣಾ ಕೈಗಾರಿಕೆಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದನು. ಲಾಕ್ಟಟಲೈಸ್ ಎನ್ ಖಿಮಿ ಅಗ್ರ್ಯಾನಿಕ್ ಎಂಬ ಪ್ರೌಢ ಕೃತಿಯನ್ನು ಸಹ ಸಬಾಟೀರ್ 1913ರಲ್ಲಿ ಪ್ರಕಟಿಸಿದನು. ಸಬಾಟೀರ್ಫೆ್ರಂಚ್ ವಿಜ್ಞಾನ ಅಕಾಡೆಮಿಯ ಸದಸ್ಯನಾಗಿದ್ದನು. ಲಂಡನ್ ರಾಯಲ್ ಸೊಸೈಟಿ. ಫಿಲೆಡೆಲ್ಫಿಯಾ “ವಿಶ್ವವಿದ್ಯಾಲಯ , ನೆದರ್’ಲ್ಯಾಂಡ್ ರಾಯಲ್ ಸೊಸೈಟಿಯಿಂದ ಸಬಾಟೀರ್ ಗೌರವಿತನಾಗಿದ್ದನು. 1912ರಲ್ಲಿ ಸಬಾಟೀರ್ ರಸಾಯನ ಶಾಸ್ತ್ರದಲ್ಲಿನ ನೊಬೆಲ್ ಪ್ರಶಸ್ತಿ ಪಡೆದನು.
ವೆರ್ನರ್, ಅಲ್ಫ್ರೆಡ್ (1866-1919) 1913
Werner , Alfred
ಜರ್ಮನಿ-ಸ್ವಿಟ್ಸಲ್ರ್ಯಾಂಡ್ - ನಿರವಯವ ರಸಾಯನಶಾಸ್ತ್ರಜ್ಞ. ಸಮನ್ವಯ ಸಂಯುಕ್ತಗಳ ಆಧುನಿಕ ಸಿದ್ಧಾಂತ ಸ್ಥಾಪಿಸಿದಾತ.
ಫ್ರಾನ್ಸ್ ವಶದಲ್ಲಿದ್ದ ಅಲಾಸೇಸ್ನಲ್ಲಿ ವೆರ್ನರ್ ಜನಿಸಿದನು. ವೆರ್ನರ್ ನಾಲ್ಕು ವರ್ಷದವನಿರುವಾಗ ಅಲಾಸೇಸ್ ಜರ್ಮನಿಯ ವಶಕ್ಕೆ ಬಂದಿತು. 1919ರಲ್ಲಿ ಮತ್ತೊಮ್ಮೆ ಫೆ್ರಂಚರ ವಶವಾಯಿತು. ಇದರಿಂದ ಫ್ರೆಂಚ್ ಹಾಗೂ ಜರ್ಮನ್ ಸಂಸ್ಕೃತಿಗಳೆರಡೂ ವೆರ್ನರ್’ನನ್ನು ಪ್ರಭಾವಿಸಿದವು. ನೆಲಮಾಳಿಗೆಯ ಅನಾರೋಗ್ಯಕರ ವಾತಾವರಣದಲ್ಲಿ ಸತತ ಅಧ್ಯಯನ ನಡೆಸಿದ ಸಾಹಸಿ ವೆರ್ನರ್. ಆದರೆ ವೆರ್ನರ್ ಲೇಖನಗಳು ಜರ್ಮನಿಯಲ್ಲಿದ್ದವು. 20 ನೇ ವಯಸ್ಸಿನಿಂದ ಸ್ವಿಟ್ಸಲ್ರ್ಯಾಂಡ್ನಲ್ಲಿದ್ದ ವೆರ್ನರ್ ಝೂರಿಕ್ನಿಂದ ಪದವಿ ಗಳಿಸಿ, 1895ರಲ್ಲಿ ಪ್ರಾಧ್ಯಾಪಕನಾದನು. ಸಾರಜನಕ ಕೇಂದ್ರದಲ್ಲಿರುವ ರಾಸಾಯನಿಕಗಳ ರಾಚನಿಕ ಸ್ವರೂಪದ ಬಗೆಗೆ ಅಧ್ಯಯನ ನಡೆಸಿ, ವೆರ್ನರ್ ಡಾಕ್ಟರೇಟ್ ಗಳಿಸಿದನು. ಸಹಸಂಯೋಗತ್ವದ ಬಂಧಕ್ಕೆ (Covalent Bond)ನಿರ್ದಿಷ್ಟ ದಿಕ್ಕುಗಳಿರುತ್ತವೆ. ಮಿಥೇನ್ ಅಣುವಿನಲ್ಲಿ ಇಂಗಾಲದ ಪರಮಾಣು ಕ್ರಮ ಚತುರ್ಮುಖ (Regular Terahedron) ಕೇಂದ್ರದಲ್ಲಿದೆ. ನಾಲ್ಕು ಜಲಜನಕದ ಪರಮಾಣುಗಳು ಈ ಚತುರ್ಮುಖಿಯ ಶೃಂಗಗಳಲ್ಲಿವೆ. ಇಂಗಾಲದ ಪರಮಾಣುವೂ ಪ್ರತಿಯೊಂದು ಜಲಜನಕದ ಪರಮಾಣುವಿನೊಂದಿಗೆ 109028” ಕೋನದಲ್ಲಿ ಬಂಧಿತವಾಗಿದೆ. ಆದ್ದರಿಂದ ಇಂತಹ ಸಂಯುಕ್ತಗಳ ಸಂಯೋಗತ್ವ ಮೂರು ಆಯಾಮಗಳಲ್ಲಿರಬಲ್ಲದು. ವೆರ್ನರ್ ಈ ಆಧಾರದ ಮೇಲೆ ಕ್ರೋಮಿಯಂ ಕೋಬಾಲ್ಟ್ ಹಾಗೂ ರೋಡಿಯಂಗಳ ದ್ಯುತಿಪಟು ಸಂಯುಕ್ತಗಳನ್ನು (Photoactive) ಅನಾವರಣಗೊಳಿಸಿದನು. ಇದಕ್ಕೆ ಬೇಕಾದ ಸೈದ್ಧಾಂತಿಕ ದೃಷ್ಟಿ ತನಗೆ ಕನಸಿನಲ್ಲಿ ವೇದ್ಯವಾಯಿತೆಂದು ವೆರ್ನರ್ ಹೇಳಿದ್ದಾನೆ. 1892 ರಿಂದ ಲೋಹಗಳ ಸಂಯುಕ್ತಗಳ ಬಗೆಗೆ ವೆರ್ನರ್ ಅಧ್ಯಯನ ನಡೆಸಿದನು. ಇವುಗಳಲ್ಲಿ ಬಹುತೇಕ ರಾಸಾಯನಿಕಗಳಿಗೆ ಸರಿಯಾದ ರಾಚನಿಕ ವಿವರಣೆ, ಸಂಯೋಗ ಸಾಮಥ್ರ್ಯಗಳ ವಿವರಣೆ ಇರಲಿಲ್ಲ, ವೆರ್ನರ್ ಇವೆಲ್ಲವುಗಳಿಗೆ ಹೊಸ ದೃಷ್ಟಿ ಒದಗಿಸಿದನು. ಪರಿವರ್ತನೀಯ ಲೋಹದ ಪರಮಾಣುವಿಗೆ ಕೇಂದ್ರಿಯ ಹಾಗೂ ದ್ವಿತೀಯ ಸಂಯೋಗ ಸಾಮಥ್ರ್ಯವಿದೆಯೆಂದು ವೆರ್ನರ್ ತಿಳಿಸಿದನು. ಇವುಗಳನ್ನು ಲಿಂಗ್ಯಾಂಡ್ಸ್ ಎಂದು ಕರೆದನು. ಇಪ್ಪತ್ತು ವರ್ಷಗಳ ಕಾಲ ಈ ಸಿದ್ಧಾಂತ ರೂಪಿಸಲು ಶ್ರಮಿಸಿದ ವೆರ್ನರ್, ಅದರಲ್ಲಿ ಯಶಸ್ಸನ್ನು ಕಂಡನು. 1913ರಲ್ಲಿ ವೆರ್ನರ್ ನೊಬೆಲ್ ಪ್ರಶಸ್ತಿ ಗಳಿಸಿದನು.
ರಿಚರ್ಡ್ಸ್, ಥಿಯೋಡೊರ್ ವಿಲಿಯಂ (1868-1928) 1914
Richards , Theodore William
ಅಸಂಸಂ-ವೈಶ್ಲೇಷಿಕ ರಸಾಯನಶಾಸ್ತ್ರ (Analytical Chemistry) - ವೈಶ್ಲೇಷಿಕ ವಿಧಾನಗಳಿಂದ ಸಾಪೇಕ್ಷ ಅಣುತೂಕ (Relative Molecular Weight) ನಿರ್ಧರಿಸಿದಾತ.
ರಿಚಡ್ರ್ಸ್ ಹದಿನಾಲ್ಕು ವರ್ಷದ ಕಿಶೋರನಾಗಿದ್ದಾಗಲೇ ಖಗೋಳಶಾಸ್ತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದನು. ಆದರೆ ಆತನ ದೃಷ್ಟಿ ಚುರುಕಾಗಿರಲಿಲ್ಲದ್ದರಿಂದ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗಕ್ಕೆ ಸೇರಿದನು. ಹಾರ್ವರ್ಡ್ನಲ್ಲಿ ಪದವಿ ಗಳಿಸಿ, ಹೆಚ್ಚಿನ ಜ್ಞಾನಾರ್ಜನೆಗೆ ಯುರೋಪಿಗೆ ಭೇಟಿ ಇದ್ದನು. ಗಟ್ಟಿಂಜೆನ್ಲ್ಲಿ ಪ್ರಾಧ್ಯಾಪಕನಾಗುವಂತೆ ರಿಚರ್ಡ್ಸ್’ಗೆ ಆಹ್ವಾನವೀಯಲಾಯಿತು. ಇದನ್ನು ಒಪ್ಪದೆ, ರಿಚಡ್ರ್ಸ್ ಹಾರ್ವರ್ಡ್ಗೆ ಮರಳಿದನು. ಇಲ್ಲಿ ರಿಚಡ್ರ್ಸ್ ರಾಸಾಯನಿಕಗಳ ಅಣು ತೂಕವನ್ನು ಸರಿಯಾಗಿ ಅಳೆಯುವ ಸಾಧ್ಯತೆಗಳಿಗೆ ಯತ್ನಿಸಿ ಅದರಲ್ಲಿ ಅಪಾರ ಯಶಸ್ಸನ್ನು ಕಂಡನು. ರಿಚಡ್ರ್ಸ್ 25 ಧಾತುಗಳ ಹಾಗೂ ಆತನ ಸಂಗಡಿಗರು 40 ಧಾತುಗಳ ಅಣುತೂಕವನ್ನು ಪಡೆದು, ಪರಿಮಾಣಾತ್ಮಕ ರಸಾಯನಶಾಸ್ತ್ರಕ್ಕೆ (Volumetric Chemistry) ಭದ್ರ ಬುನಾದಿ ಹಾಕಿದರು. 1913ರಲ್ಲಿ ರಿಚಡ್ರ್ಸ್ ಸಾಮಾನ್ಯ ಸೀಸ ಹಾಗೂ ಯುರೇನಿಯಂ ವಿಕಿರಣಪಟು ಶೈಥಿಲ್ಯದಿಂದ ದಕ್ಕಿದ ಸೀಸದ ಅಣುತೂಕಗಳಲ್ಲಿ ವ್ಯತ್ಯಾಸ ಇದೆಯೆಂದು ತೋರಿಸಿದನು. ಇದು ವಿಕಿರಣ ಶೈಥಿಲ್ಯತೆಗೆ ಸಾಕ್ಷಿ ನೀಡಿತಲ್ಲದೆ ಸಾಡಿ ಮುನ್ಸೂಚಿಸಿದಂತೆ ಧಾತುಗಳ ಸಮಸ್ಥಾನಿಗಳ ಅಸ್ತಿತ್ವಕ್ಕೆ ಪ್ರಮಾಣವಾಯಿತು. ರೋಹಿತ ಮಾಪಕದಿಂದ, ಅತ್ಯುತ್ತಮವಾದ ಭೌತಿಕ ವಿಧಾನಗಳು ಜಾರಿಗೆ ಬರುವವರೆಗೆ ರಿಚಡ್ರ್ಸ್ ವಿಧಾನಗಳೇ ಅಣು ತೂಕದ ನಿರ್ಧಾರಕ್ಕೆ ಅತ್ಯುತ್ತಮ ಮಾರ್ಗಗಳಾಗಿದ್ದವು. 1914ರಲ್ಲಿ ರಿಚಡ್ರ್ಸ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ವಿಲ್ಷ್ಟೆಟೆರ್ , ರಿಚರ್ಡ್ (1872-1942) 1915
Willstatter , Richard
ಜರ್ಮನಿ-ಸಾವಯವ ರಸಾಯನಶಾಸ್ತ್ರ- ಕ್ಲೋರೋಫಿಲ್ನ ರಾಚನಿಕ ಸ್ವರೂಪ ಅನಾವರಣಗೊಳಿಸಿದಾತ.
ವಿಲ್ಷ್ಟೆಟೆರ್, ಹನ್ನೊಂದನೆ ವಯಸ್ಸಿನಲ್ಲಿರುವಾಗ, ಆತನ ತಂದೆ ನ್ಯೂಯಾರ್ಕ್ಗೆ ಹೋದನು. ವಿಲ್ಷ್ಟೆಟೆರ್ನ ಸೋದರ ಮಾವ ನ್ಯೂಯರ್ಕ್ನಲ್ಲಿ ಬಟ್ಟೆಯ ಕಾರ್ಖಾನೆ ತೆರೆದಿದ್ದನು. ಇದರ ಯಶಸ್ಸು ವಿಲ್ಷ್ಟೆಟೆರ್ ತಂದೆಯನ್ನು ಆಕರ್ಷಿಸಿದ್ದಿತು. ಆದರೆ ಈ ವ್ಯಾಪಾರದಲ್ಲಿ ಯಶಸ್ಸು ಗಳಿಸುವಲ್ಲಿ ಹದಿನೇಳು ವರ್ಷಗಳು ಸರಿದವು. ಈ ಕಾಲದಲ್ಲಿ ವಿಲ್ಷ್ಟೆಟರ್ ತಾಯಿ ಜರ್ಮನಿಯಲ್ಲಿ ತನ್ನಿಬ್ಬರು ಮಕ್ಕಳನ್ನು ಬೆಳೆಸಿದಳು. ವಿಲ್ಷ್ಟೆಟರ್ ಚಿಕ್ಕಪ್ಪ ಬ್ಯಾಟರಿ ಕಾರ್ಖಾನೆ ಹೊಂದಿದ್ದನು. ಆಗಾಗ್ಗೆ ಅಲ್ಲಿಗೆ ಭೇಟಿ ನೀಡುತ್ತಿದ್ದುದರಿಂದ ಅವನಿಗೆ ರಸಾಯನಶಾಸ್ತ್ರದಲ್ಲಿನ ಆಸಕ್ತಿಗೆ ಕಾರಣವಾಯಿತು. ವಿಲ್ಷ್ಟೆಟರ್ ಮ್ಯೂನಿಕ್ನಲ್ಲಿ ಬೇಯರ್ ಕೆಳಗೆ ವಿದ್ಯಾಭ್ಯಾಸ ಹೊಂದಿ 1894ರಲ್ಲಿ ಅಲ್ಕ ಲಾಯಿಡ್ಸ್ಗಳ ಮೇಲೆ ನಡೆಸಿದ ಸಂಶೋಧನೆಗಳಿಗಾಗಿ ಡಾಕ್ಟರೇಟ್ ಪಡೆದನು. ಇದಾದ ಮೇಲೆ ಝೂರಿಕ್ನಲ್ಲಿ ಪ್ರಾಧ್ಯಾಪಕನಾದನು. ಸಸ್ಯಗಳ ಬಣ್ಣ , ಕ್ವಿನೈನ್, ಕ್ಲೋರೋಫಿûಲ್ ಈತನ ಅಧ್ಯಯನದ ವಿಷಯಗಳಾಗಿದ್ದವು. ಟ್ಸೆಟ್, ವರ್ಣಾಲೇಖ (Chromatography) ತಂತ್ರಗಳನ್ನು ಬಳಕೆಗೆ ತಂದಿದ್ದನು. ಈ ತಂತ್ರದ ನೆರವಿನಿಂದ, ವಿಲ್ಷ್ಟೆಟರ್ ಕ್ಲೋರೋಫಿûಲ್-ಎ ಹಾಗೂ ಬಿ ವಿಧಗಳ ರಾಚನಿಕ ಸ್ವರೂಪ ನಿರ್ಧರಿಸಿದನು. ರಕ್ತದಲ್ಲಿನ ಹಿಮೋಗ್ಲೋಬಿನ್ ಕಬ್ಬಿಣದ ಒಂದು ಅಣುವನ್ನು ಹೊಂದಿರುವಂತೆ , ಕ್ಲೋರೋಫಿûಲ್ ಮೆಗ್ನೇಷಿಯಂನ ಒಂದು ಅಣುವನ್ನು ಹೊಂದಿರುವುದೆಂದು ವಿಲ್ಷ್ಟೆಟರ್ ತೋರಿಸಿದನು. ಕೊಕೇನ್ನ ಉತ್ಪನ್ನಗಳನ್ನು ಸಹ ಈತ ಅಭ್ಯಸಿಸಿದನು. 1915ರಲ್ಲಿ ಸಸ್ಯಗಳ ವರ್ಣಕಗಳ (Pigments) ವಿಷಯದಲ್ಲಿನ ಕಾರ್ಯಗಳಿಗಾಗಿ ನೊಬೆಲ್ ಪ್ರಶಸ್ತಿ ಪಡೆದನು. 1912ರಲ್ಲಿ ಬರ್ಲಿನ್-ಡಹ್ಲೆಮ್ನ ಕೈಸರ್ ವಿಲ್ಹೆಲ್ಮ್ ಸಂಸ್ಥೆ ಸೇರಲು ಬರ್ಲಿನ್ಗೆ ಮರಳಿದನು. ಇಲ್ಲಿ ಕೆರೋಟಿನ್ ಹಾಗೂ ಆಂಥೋಸೆಯನಿಸ್ಸ್ಗಳಲ್ಲಿ ಸಂಶೋಧನೆಯಲ್ಲಿ ಕ್ರಿಯಾಶೀಲನಾಗಿದ್ದನು. ಮೊದಲ ಜಾಗತಿಕ ಯುದ್ದದಲ್ಲಿ ವಿಷಾನಿಲ ರಕ್ಷಕ ಮುಖವಾಡ ನಿರ್ಮಿಸಿದ ವಿಲ್ಷ್ಟೆಟರ್ ¥sóÁಸ್ಜೀನ್ನ್ನು ಹೀರಿಕೊಳ್ಳುವ ರಾಸಾಯನಿಕ ತಯಾರಿಸಿದನು.
1916ರಲ್ಲಿ ಮ್ಯೂನಿಕ್ನಲ್ಲಿ ಬೇಯರ್ನಿಂದ ತೆರವಾದ ಪೀಠ ಅಲಂಕರಿಸಿದನು. ಸ್ಮಾಲ್ ಜೊತೆಗೆ ದ್ಯುತಿ ಸಂಶ್ಲೇಷಣೆ ಕಿಣ್ವ,ಪರಾಕ್ಸೈಡ್ಗಳ ಅರಿವಿಗೆ ಶ್ರಮಿಸಿದನು. ಭೂರಸಾಯನಶಾಸ್ತ್ರಜ್ಞ ವಿ.ಎಂಗೋಲ್ಷ್ಮಿತ್, ಯಹೂದಿಯೆಂದು ಆತನನ್ನು ಬೋಧಕ ಹುದ್ದೆಗೆ ಆಯ್ಕೆ ಮಾಡಲು ಆಡಳಿತ ಮಂಡಳಿ ನಿರಾಕರಿಸಿತು. ಜನಾಂಗ ಭೇದ ನೀತಿಯನ್ನು ವಿರೋಧಿಸಿದ ವಿಲ್ಷ್ಟೆಟರ್ ತನ್ನ 53ನೇ ವಯಸ್ಸಿನಲ್ಲಿ ನಿವೃತ್ತಿ ವೇತನವಿಲ್ಲದೆ, ಆಡಳಿತ ಮಂಡಳಿ ನೀಡಿದ ಮನೆಯನ್ನು ಹಿಂದುರುಗಿಸಿ ರಾಜಿನಾಮೆ ನೀಡಿದನು. ಮದುವೆಯಾದ ಐದೇ ವರ್ಷಗಳಲ್ಲಿ ವಿಲ್ಷ್ಟೆಟರ್ ಮಡದಿ ತೀರಿದಳು. ಕೊನೆಯ ಮಗ ಕೊನೆಯುಸಿರೆಳಿದಿದ್ದನು. ಮಗಳು ಮದುವೆಯಾಗಿ ಅಸಂಸಂಗಳಲ್ಲಿ ವಾಸಿಸುತ್ತಿದ್ದಳು. ಇವೆಲ್ಲ ಸನ್ನಿವೇಶಗಳು ವಿಲ್ಷ್ಟೆಟರ್ನನ್ನು ಏಕಾಂಗಿಯಾಗಿಸಿದವು. ಹಲವಾರು ದೇಶಗಳಿಂದ ಬಂದ ಆಹ್ವಾನಗಳನ್ನು ತಿರಸ್ಕರಿಸಿ ತನ್ನ ಉಳಿದ ಜೀವನವನ್ನು ಪ್ರಯಾಣ ಉಪನ್ಯಾಸಗಳಲ್ಲಿ ಕಳೆದನು. 1938ರಲ್ಲಿ ನ್ಯಾಷನಲ್ ಸೊಷಿಯಲಿಸ್ಟ್ ಪಕ್ಷ ಯಹೂದಿಗಳ ಬಂಧನಕ್ಕೆ ಸ್ವಯಂ ಸೇವಕನನ್ನು ಕರೆದಿರುವ ವಿಷಯ ವಿಲ್ಷ್ಟೆಟರ್ ಕಿವಿಗೆ ಬಿದ್ದಿತು. ಅವರಿಂದ ವಿಲ್ಷ್ಟೆಟರ್ ಎಚ್ಚರಿಕೆಯ ಬೆದರಿಕೆಗಳನ್ನು ಪಡೆದನು. ಇಂತಹ ಸ್ಥಿತಿಯಲ್ಲಿ ಬದುಕಿ ಉಳಿಯಬೇಕಾದರೆ ಜರ್ಮನಿ ತೊರೆದು ಹೋಗದೆ ಬೇರೆ ದಾರಿಯಿಲ್ಲವೆಂದು ಈತನಿಗೆ ಮನದಟ್ಟಾಯಿತು. ಅಪರಾಧಿಯಂತೆ ಕಳ್ಳ ಮಾರ್ಗದಲ್ಲೇ ಜರ್ಮನಿ ತೊರೆಯದೆ, ಸರಿಯಾದ ಕಾನೂನಿನ ಮಾರ್ಗದಲ್ಲೇ ಸ್ವಿಟ್ಸಲ್ರ್ಯಾಂಡ್ಗೆ ಹೋಗಲು ವಿಲ್ಷ್ಟೆಟರ್ ಯತ್ನಿಸಿದನು. ಆದರೆ ಈತನ ಪ್ರಾಮಾಣಿಕತೆ, ಸಜ್ಜನಿಕೆಗಳು ನಾಝಿಗಳೆದುರು ನಿಲ್ಲಲಿಲ್ಲ. ವಿಲ್ಷ್ಟೆಟರ್ ದಾಖಲೆಗಳು ಸರ್ಕಾರದ ವಶವಾದವು. 1939ರ ಮಾರ್ಚ್ನಲ್ಲಿ ತನ್ನ ಹಳೆಯ ವಿದ್ಯಾರ್ಥಿ ಸ್ಮಾಲ್ ಹಾಗೂ ಪ್ರಭಾವಿ ಸ್ನೇಹಿತರ ನೆರವಿನಿಂದ ಸ್ವಿಟ್ಸಲ್ರ್ಯಾಂಡ್ಗೆ ವಲಸೆ ಹೋಗಬೇಕಾಯಿತು.
ಹಾಬರ್, ಫ್ರಿಟ್ಸ್ (1868-1934 )
Haber , Fritz (CHE.) 1918
ಜರ್ಮನಿ-ಭೌತರಸಾಯನಶಾಸ್ತ್ರ-ಸಾರಜನಕ ಸ್ಥಿರೀಕರಣ ಸಂಸ್ಕರಣೆ ಕಾರ್ಯಗತಗೊಳಿಸಿದಾತ.
ಹಾಬರ್ 9 ಡಿಸೆಂಬರ್ 1868 ರಂದು ಬ್ರೆಸ್ಲೌದಲ್ಲಿ ಜನಿಸಿದನು. ಹಾಬರ್ ತಂದೆ ಬಣ್ಣದ ವ್ಯಾಪಾರಿಯಾಗಿದ್ದನು. ಬಾಲಕನಾಗಿರುವಾಗಲೇ ಹಾಬರ್ ಹಲವಾರು ರಾಸಾಯನಿಕ ಪ್ರಯೋಗಗಳನ್ನು ನಡೆಸಿದ್ದನು. ಕುಟುಂಬದ ವ್ಯವಹಾರಗಳಿಗೆ ಅನುಕೂಲವಾಗಲೆಂದು ಹಾಬರ್ ಸಾವಯವ ರಸಾಯನಶಾಸ್ತ್ರದಲ್ಲಿ ವಿದ್ಯಾಭ್ಯಾಸ ಹೊಂದಿದನು. 1886 ರಿಂದ 1891 ರವರೆಗೆ ಹೈಡೆಲ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಬುನ್ಸೆನ್ ಬರ್ಲಿನ್ನಲ್ಲಿ ಎ.ಡಬ್ಲ್ಯು.ಹಾಫ್ಮನ್ ಮತ್ತು ಚಾರ್ಲೋಟ್ಬರ್ಲ್ನ್ಲ್ಲಿ ಲಿಬೆರ್ಮನ್ ಕೈಕೆಳಗೆ ರಸಾಯನಶಾಸ್ತ್ರದ ಶಿಕ್ಷಣ ಪಡೆದನು. ಆದರೆ ಕೆಲಕಾಲದ ನಂತರ ಹೆಚ್ಚಿನ ಶಿಕ್ಷಣ ಗಳಿಸಲು, ಜೆನಾದಲ್ಲಿ ಲುಡ್ವಿಗ್ ಕ್ನೋರ್ನ ಮಾರ್ಗದರ್ಶನದಲ್ಲಿ ಶ್ರಮಿಸಿ, ಈಸ್ಟರ್ಗಳ ಬಗೆಗೆ ಲೇಖನ ಪ್ರಕಟಿಸಿದನು. ಇಷ್ಟಾದರೂ ಹಾಬರ್ಗೆ ಭೌತಶಾಸ್ತ್ರದಲ್ಲಿ ಅಥವಾ ರಸಾಯನಶಾಸ್ತ್ರದಲ್ಲಿ ಮುಂದುವರೆಯಬೇಕೆ ? ಎಂಬ ದ್ವಂದ್ವ ಕಾಡಿತು. 1884ರಲ್ಲಿ ಕಾರ್ಲ್ಷ್ರುಹೆಯಲ್ಲಿ ಹ್ಯಾನ್ಸ್ ಬಂಟೆಯ ಬಳಿ ರಸಾಯನ ಶಾಸ್ತ್ರ ವಿಭಾಗದಲ್ಲಿ ಸಹಾಯಕನಾದನು. ಈತನ ಪ್ರಭಾವದಿಂದ ಪೆಟ್ರೋಲಿಯಂ ರಸಾಯನಶಾಸ್ತ್ರದಲ್ಲಿ ಆಸಕ್ತಿ ಮೂಡಿತು. ಹೈಡ್ರೋಕಾರ್ಬನ್ಗಳ ಸಂಯೋಜನೆ, ವಿಯೋಜನೆ , ದಹ್ಯತೆಯ ಮೇಲೆ ಸಂಶೋಧನೆ ನಡೆಸಿದನು. 1906ರಲ್ಲಿ ಕಾರ್ಲ್ ಷ್ರುಹೆಯಲ್ಲಿ ಹೊಸದಾಗಿ ಸ್ಥಾಪನೆಗೊಂಡ ಭೌತ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥನಾದನು. 1911ರಲ್ಲಿ ಬರ್ಲಿನ್ ಡಹ್ಲೆಮ್ನ ಭೌತ ಹಾಗೂ ವೈದ್ಯುತ್ ರಸಾಯನಶಾಸ್ತ್ರ ವಿಭಾಗದ ಕಾರ್ಯದರ್ಶಿಯ ಹುದ್ದೆಯಿಂದ ಎಂಗ್ಲರ್ ನಿವೃತ್ತನಾದಾಗ, ಹಾಬರ್ ಆತನ ಸ್ಥಾನಕ್ಕೆ ನಿಯೋಜಿತನಾದನು. ಜರ್ಮನಿ ನಾಝಿ ಆಡಳಿತಕ್ಕೊಳಪಟ್ಟು ಈ ಸಂಸ್ಥೆಯ ಬಹುತೇಕ ವಿಜ್ಞಾನಿಗಳು ರಾಜಿನಾಮೆ ನೀಡುವಂತಹ ಪರಿಸ್ಥಿತಿ ಬಂದೊದಗಿತು. ಇದನ್ನು ಒಪ್ಪದ ಹಾಬರ್ 1933ರಲ್ಲಿ ತಾನೇ ರಾಜಿನಾಮೆ ನೀಡಿದನು. ಇದರ ನಂತರ ಸ್ವಿಟ್ಸಲ್ಯಾಂಡ್ಗೆ ಹೋಗಿ ನೆಲೆಸಿದನು. ಅಮೋನಿಯಂ ಸಂಶ್ಲೇಷಣೆಯನ್ನು ಕುರಿತಾಗಿ ಹಾಬರ್ ಆಳ ಅಧ್ಯಯನ ಮಾಡಿದನು. ಮಣ್ಣಿನ ಸಾರ ಹೆಚ್ಚಿಸಲು ಸಾರಜನಕದ ಪೂರೈಕೆಗೆ ರಾಸಾಯನಿಕ ಗೊಬ್ಬರವಾಗಿ ಚಿಲಿ ನೈಟ್ರೇಟನ್ನು ವ್ಯಾಪಕವಾಗಿ ಬಳಸಲಾಗುತ್ತಿದ್ದಿತು. ಇದನ್ನು ಗಮನಿಸಿದ ಕ್ರೂಕ್, ಇದೇ ರೀತಿ ಮುಂದುವರೆದದ್ದೇ ಆದರೆ, ಕಾಲಾನುಕ್ರಮದಲ್ಲಿ ಚಿಲಿ ನೈಟ್ರೇಟ್ ನಿಕ್ಷೇಪ ಖಾಲಿಯಾಗಿ, ಗೊಬ್ಬರ ಬರ ಎದುರಿಸಬೇಕಾಗುವುದೆಂದು ಎಚ್ಚರಿಸಿದ್ದನು. ಬುನ್ಸೆನ್ ಕೈಕೆಳಗೆ ಕೆಲಸ ಮಾಡುತ್ತಿದ್ದಾಗ ಜ್ವಾಲೆಯಲ್ಲಿ ಅನಿಲಗಳು ದಹಿಸಿದಾಗ ಉಂಟಾಗುವ ರಾಸಾಯನಿಕ ಕ್ರಿಯೆಗಳನ್ನು ಗಮನಿಸಿದ್ದ ಹಾಬರ್ಗೆ ವಾತಾವರಣದ ಸಾರಜನಕ ಬಳಸಿ ಅಮೋನಿಯ ತಯಾರಿಸಬಹುದೆಂದು ಅರಿತನು. 1898ರಲ್ಲಿ ನೈಟ್ರೋಬೆಂಜೀನ್ನ್ನು ಅಪಕರ್ಷಿಸಿ, ಬೇರೆ ರಾಸಾಯನಿಕ ಸಂಯುಕ್ತಗಳಿಗೂ ಅನ್ವಂiÀiವಾಗುವ ಸಾಮಾನ್ಯ ಆಪಕರ್ಷಕ ವಿಧಾನ ಜಾರಿಗೆ ತಂದನು. ದ್ರವದ ಆಮ್ಲತೆಯ (Acidity) ನಿರ್ಧಾರಕ್ಕೆ ರೂಪಿತವಾಗುವ ಬಿಲ್ಮನ್ ಕ್ವಿನ್ ಹೈಡ್ರೋನ್ ಎಲೆಕ್ಟ್ಯೋಡ್ನ ಹಿಂದೆ ಹಾಬರ್ ರೂಪಿಸಿದ ತತ್ತ್ವಗಳಿವೆ. ಇಂಜಿನ್ಗಳಲ್ಲಿನ ಚೈತನ್ಯ ನಷ್ಟವನ್ನು ಅಧ್ಯಯನ ಮಾಡಿ, ರಾಸಾಯನಿಕ ಬದಲಾವಣೆಗಳ ಮೂಲಕ ಇಂಧನ ಮಿತವ್ಯಯವನ್ನು ಸಾಧಿಸುವ ಪ್ರಯೋಗಗಳನ್ನು ಕೈಗೊಂಡನು. ಬುನ್ಸೆನ್ ಉರಿಯಲ್ಲಿನ ಹೊರ ಹಾಗೂ ಒಳಭಾಗಗಳ ಅಧ್ಯಯನ ನಡೆಸಿ ಜ್ವಾಲೆಯ ತಾಪಮಾನ ನಿರ್ಧರಿಸುವ ವಿಧಾನ ರೂಪಿಸಿದನು. 1905ರಲ್ಲಿ ಸಾರಜನಕ ಹಾಗೂ ಜಲಜನಕದಿಂದ ಅಮೋನಿಯಾವನ್ನು ಸಣ್ಣ ಪ್ರಮಾಣದಲ್ಲಿ ಉತ್ಪಾದಿಸುವ ವಿವರ ನೀಡಿದನು. ಇದಕ್ಕೆ ಕಬ್ಬಿಣವನ್ನು ಕ್ರಿಯಾ ವರ್ಧಕವಾಗಿ (Catalyst) ಬಳಸಿದ್ದನು. ನಂತರ ಬಾಷ್ ಹಾಗೂ ಮಿಟಾಷ್ಕ್ರ ಸಹಕಾರದಿಂದ, ಸಾರಜನಕ, ಜಲಜನಕಗಳನ್ನು, 150/200 ವಾಯುಭಾರದಲ್ಲಿ , 500 ಸೆಂ.ಗಿಂತಲೂ ಅಧಿಕ ತಾಪಮಾನದಲ್ಲಿ ಕ್ರಿಯಾಪ್ರೇರಕಗಳ ಮೇಲೆ ಸಾಗಿಸಿ, ಅಮೋನಿಯಾವನ್ನು ಸಂಶ್ಲೇಷಿಸುವಲ್ಲಿ ಯಶಸ್ವಿಯಾದನು. ಇದನ್ನು ಕೈಗಾರಿಕರಣಗೊಳಿಸಿ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲು, ಹಾಬರ್ ಕಾರ್ಲ್ ಬಾಷ್ ಜೊತೆ ಒಪ್ಪಂದ ಮಾಡಿಕೊಂಡನು. ಇದರ ಪರಿಣಾಮವಾಗಿ 1913ರಲ್ಲಿ ಹಾಬರ್-ಬಾಷ್ ಸಂಸ್ಕರಣಾ ವಿಧಾನ ಬಳಕೆಗೆ ಬಂದಿತು. 1980ರ ದಶಕದ ವೇಳೆಗೆ ಈ ವಿಧಾನದಿಂದ ಸರಿಸುಮಾರು, 10 ಕೋಟಿ ಟನ್ಗಳಿಗಿಂತಲೂ ಅಧಿಕ ಅಮೋನಿಯಾ ಪ್ರತಿ ವರ್ಷ ಉತ್ಪಾದನೆಗೊಳ್ಳುತ್ತಿರುವುದೆಂದು ಅಂದಾಜಿಸಲಾಗಿದೆ. ಮೊದಲನೆ ಜಾಗತಿಕ ಯುದ್ದದ ಸಮ0iÀiದಲ್ಲಿ ಆಸ್ಪೋಟಗಳ ತಯಾರಿಕೆಗೆ ಬೇಕಾದ ನೈಟ್ರಿಕ್ ಆಮ್ಲದ ಕೊರತೆ ತಲೆದೋರಿತು, ಹಾಬರ್, ಜರ್ಮನಿಯ ಮಿಲಿಟರಿಗಾಗಿ, ಅಮೋನಿಯಾವನ್ನು ಉತ್ಕರ್ಷಿಸಿ (Oxidise), ನೈಟ್ರಿಕ್ ಆಮ್ಲ ತಯಾರಿಸುವ ವಿಧಾನ ಕಂಡು ಹಿಡಿದನು. ಹಾಬರ್, ಜರ್ಮನ್ ಮಿಲಿಟರಿಗೆ ಸಲಹೆಗಾರನಾಗಿದ್ದು ವಿಷಾನಿಲಗಳಿಂದ ರಕ್ಷಣೆ ಪಡೆಯುವ ಮುಖವಾಡಗಳನ್ನು ತಯಾರಿಸಿದನು. 1918ರಲ್ಲಿ ಅಮೋನಿಯ ಸಂಶ್ಲೇಷಣೆಗಾಗಿ ಹಾಬರ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. 1933ರಲ್ಲಿ ಹಾಬರ್, ಯಹೂದಿ ವಿರೋದಿ ನೀತಿ ಪ್ರತಿಭಟಿಸಿ ತನ್ನ ಹುದ್ದೆಗೆ ರಾಜಿನಾಮೆ ನೀಡಿ , ಕೇಂಬ್ರಿಜ್ಗೆ ಹೋಗಿ ನೆಲೆಸಿದನು. ಆದರೆ ತನ್ನ ಶತ್ರು ದೇಶದಲ್ಲಿರಲು ಅವನ ಮನಸ್ಸು ಒಪ್ಪಲಿಲ್ಲ. ಆದ್ದರಿಂದ ಇಟಲಿಯಿಂದ ಬಂದ ಅಹ್ವಾನ ಮನ್ನಿಸಿ ಯಾತ್ರೆ ಕೈಗೊಂಡಾಗ , ಮಾರ್ಗ ಮಧ್ಯದಲ್ಲೇ ಅಸು ನೀಗಿದನು.
ನರ್ನ್’ಸ್ಟ್ , (ಹೆರ್ಮಾನ್) ವಾಲ್ಟರ್ (1864-1941) 1920
Nernst, ( Hermann ) Walther
ಜರ್ಮನಿ-ಭೌತಶಾಸ್ತ್ರ-ರಾಸಾಯನಿಕ ಔಷ್ಣೀಂiÀi ಗತಿಶಾಸ್ತ್ರದ (Thermodynamics) ಮುಂಚೂಣಿಗ. ಔಷ್ಣೀಯ ಗತಿಶಾಸ್ತ್ರದ ಮೂರನೇ ನಿಯಮ ನೀಡಿದಾತ.
ಪಶ್ಚಿಮ ಪ್ರಷ್ಯಾದ ಬ್ರೆಸೆನ್ ಸಂಸ್ಥಾನದಲ್ಲಿ 25 ಜೂನ್ 1864ರಂದು ನರ್ನ್’ಸ್ಟ್ ಜನನವಾಯಿತು. ನರ್ನ್’ಸ್ಟ್ ಜೂರಿಕ್ ,ಗ್ರಾಸ್ ಹಾಗೂ ವಿರ್ಸ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದನು. ವಿರ್ಸ್ಬರ್ಗ್ನಲ್ಲಿ ಖ್ಯಾತ ವಿಜ್ಞಾನಿ ಕೋಲ್ರಾಷ್ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪಡೆದನು. ನಂತರ ಲೀಪ್ಜಿಗ್ ವಿಶ್ವ ವಿದ್ಯಾಲಯದಲ್ಲಿ ವಿಲ್ಹೆಲ್ಮ್ ಓಸ್ವಾಲ್ಡ್ ಸಹಾಯಕನಾಗಿ ಭೌತ ರಸಾಯನಶಾಸ್ತ್ರ ವಿಭಾಗ ಸ್ಥಾಪಿಸಿದನು. 1890ರಲ್ಲಿ ಗಟ್ಟಿಂಜೆನ್ನಲ್ಲಿದ್ದ ನರ್ನ್’ಸ್ಟ್ 1905ರಲ್ಲಿ ಬರ್ಲಿನ್ ವಿಶ್ವವಿದ್ಯಾಲಯ ಸೇರಿದನು. ನರ್ನ್’ಸ್ಟ್ ಜರ್ಮನಿಯಲ್ಲಿ ಪದವಿಗೆ ವ್ಯಾಸಂಗ ಮಾಡುತ್ತಿರುವಾಗಲೇ, ರಾಸಾಯನಿಕ ಶಾಸ್ತ್ರದ ಸಮಸ್ಯೆಗಳಿಗೆ ಭೆತಶಾಸ್ತ್ರದ ಪರಿಹಾರಗಳನ್ನು ಹೇಗೆ ಒದಗಿಸಬಹುದೆಂದು ಚಿಂತಿಸುತ್ತಿದ್ದನು. 1905ರಲ್ಲಿ ಬರ್ಲಿನ್ನಲ್ಲಿ ಪ್ರಾಧ್ಯಾಪಕನಾದ ನರ್ನ್’ಸ್ಟ್ , ವೈದ್ಯುತ್ ರಸಾಯನಶಾಸ್ತ್ರ ಮತ್ತು ಔಷ್ಣೀಯಗತಿಶಾಸ್ತ್ರದಲ್ಲಿ ಕ್ರಿಯಾಶೀಲನಾಗಿದ್ದನು. 1904ರಲ್ಲಿ ವಿಶಿಷ್ಟ ವೈದ್ಯುತ್ ದೀಪ ತಯಾರಿಸಿ, ಅದರ ತಂತ್ರವನ್ನು ಮಿಲಿಯನ್ ಮಾರ್ಕ್ಗಳಿಗೆ ಮಾರಿದನು. ಆದರೆ ಎಡಿಸನ್ ಇದಾದ ಕೆಲವೇ ದಿನಗಳಲ್ಲಿ ಇದಕ್ಕಿಂತಲೂ ಸುಧಾರಿತ ವಿದ್ಯುತ್ ದೀಪದ ತಯಾರಿಕೆಯಲ್ಲಿ ಯಶಸ್ಸನ್ನು ಕಂಡದ್ದರಿಂದ, ನರ್ನ್’ಸ್ಟ್ ದೀಪ ಅಲ್ಪಕಾಲದಲ್ಲೇ ಬಳಕೆಯಿಂದ ಕಣ್ಮರೆಯಾಯಿತು. ಆದರೆ ಈ ವಿದ್ಯುತ್ ದೀಪದ ತಂತ್ರಜ್ಞಾನ ಮಾರಿ ಸಾಕಷ್ಟು ಶ್ರೀಮಂತನಾಗಿದ್ದ ನೆನ್ರ್ಸ್ಟ್ ಜಮೀನು ಖರೀದಿಸಿ, ಅಲ್ಲಿ ಮೋಟಾರ್ ಕಾರ್ ನಿರ್ಮಾಣದಲ್ಲಿ ತಲ್ಲೀನನಾದನು.ನೆನ್ರ್ಸ್ಟ್ ಶಾಖ ಪ್ರಮೇಯ ನೀಡಿ, ರಸಾಯನಶಾಸ್ತ್ರದಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿದನು. ಇದು ಮುಂದೆ ಔಷ್ಣೀಯ ಗತಿಶಾಸ್ತ್ರದ ಮೂರನೆ ನಿಯಮವೆಂದು ಹೆಸರಾಯಿತು.
ನೆನ್ರ್ಸ್ಟ್ ಇದನ್ನು ಔಷ್ಣೀಯ ಗತಿಶಾಸ್ತ್ರದ ಅಂತಿಮ ನಿಯಮವೆಂದು ಸಾರಿದನು. ಏಕೆಂದರೆ, ಮೊದಲ ನಿಯಮ ಮೂರು ಜನರಿಂದಲೂ, ಎರಡನೇ ನಿಯಮ ಇಬ್ಬರಿಂದಲೂ ನೀಡಲ್ಪಟ್ಟರೆ, ಮೂರನೆಯದು ತನ್ನೊಬ್ಬನಿಂದಲೇ ಬಂದಿದೆ ಎನ್ನುವುದು ನೆನ್ರ್ಸ್ಟ್ ವಾದವಾಗಿದ್ದಿತು. ಈ ಮೂರನೇ ನಿಯಮದ ಪ್ರಕಾರ ನಿರಪೇಕ್ಷ ಶೂನ್ಯ ತಾಪಮಾನದಲ್ಲಿ ಎಲ್ಲಾ ಪರಿಶುದ್ಧ ಪದಾರ್ಥಗಳೂ ಒಂದೇ ಎಂಟ್ರೋಪಿ ಹೊಂದಿರುತ್ತವೆ. ಆದರೆ ಈ ಪ್ರಮೇಯ ಸತ್ಯವೆಂದು ಇನ್ನು ವಿವಾದಾತೀತವಾಗಿ ಸಾಬೀತಾಗಬೇಕಾಗಿದೆ. ಏಕೆಂದರೆ ಈವರೆಗೆ ವಸ್ತುಗಳನ್ನು ನಿರಕ್ಷೇಪ ಶೂನ್ಯ ತಾಪಮಾನಕ್ಕೆ ಇಳಿಸುವುದು ಸಾಧ್ಯವಾಗಿಲ್ಲ ನಿರಪೇಕ್ಷ ಶೂನ್ಯದ ಸನಿಹ 0.00001 ಕೆಲ್ವಿನ್ ತಾಪಮಾನ ತಲುಪಲಾಗಿದೆ. ಹಾಗೆ ಆದಾಗ, ಮೂರನೆಯ ನಿಯಮವನ್ನು ನೆನ್ರ್ಸ್ಟ್ ಭಾವಿಸಿದಂತೆ ಒಬ್ಬನಿಂದ ನೀಡಲ್ಪಡದೆ, ಒಬ್ಬರಿಗಿಂತ ಹೆಚ್ಚಿನ ಜನರಿಂದ ಬಂದಿರುತ್ತದೆ. ವೈದ್ಯುತ್ ರಸಾಯನಶಾಸ್ತ್ರದ ಬಹುತೇಕ ಮೂಲ ಚಿಂತನೆಗಳ ಆದ್ಯ ಪ್ರವರ್ತಕ ನೆನ್ರ್ಸ್ಟ್. ಪರಮಾಣು ಕ್ಲೋರಿನ್ ಆಧಾರಿತ, ಜಲಜನಕ ಶೀಘ್ರ ರಾಸಾಯನಿಕ ಪ್ರತಿಕ್ರಿಯೆಗಳ ಪಥ ಪ್ರತಿಪಾದಿಸಿದ ಮೊದಲಿಗ .ಅಯಾನ್ ಸ್ವರೂಪದ ಸಂಯುಕ್ತಗಳು ನೀರಿನಲ್ಲಿ ಕರಗಿ ದ್ರಾವಣವಾದಾಗ ಅ್ಯನಯಾನ್ ಹಾಗೂ ಕ್ಯಾಟಯಾನ್ಗಳಾಗಿ ವಿಭಜನೆಗೊಳ್ಳುತ್ತವೆ. ಶುದ್ಧ ನೀರಿನ ಪರಾ ವೈದ್ಯುತ್ ಗುಣ ಪ್ರಬಲವಾಗಿರುವುದರಿಂದ ಅದು ವೈದ್ಯುತ್ ಅವಾಹಕದಂತೆ ವರ್ತಿಸುತ್ತದೆ. ಈ ಸ್ಥಿತಿಯಲ್ಲಿ ಧನ ಹಾಗೂ ಋಣ ಕಣಗಳ ಮಧ್ಯದ ಆಕರ್ಷಣೆ ಕುಗ್ಗಿರುತ್ತದೆ. ಆಯಾನ್ ಸ್ವರೂಪದ ಸಂಯುಕ್ತ ಕರಗಿದಾಗ, ಅಯಾನ್ಗಳು ಬೇರ್ಪಟ್ಟು ವಿದ್ಯುತ್ ಪ್ರವಹಿಸುತ್ತದೆಯೆಂದು ನರ್ನ್’ಸ್ಟ್ ತಿಳಿಸಿದನು. ಇದನ್ನು ಸ್ವತಂತ್ರವಾಗಿ ಜೆ.ಜೆ.ಥಾಮ್ಸನ್ ಸಹ ಪ್ರತಿಪಾದಿಸಿದ್ದನು. ಜಲಜನಕ ಹಾಗೂ ಕ್ಲೋರಿನ್ಗಳ ಮಿಶ್ರಣದ ಮೂಲಕ ಬೆಳಕನ್ನು ಹಾಯಿಸಿ ಹೈಡ್ರೋಜನ್ ಕ್ಲೋರೈಡ್ ಸಂಯುಕ್ತ ಪಡೆಯಬಹುದು. ಬೆಳಕಿನ ಚೈತನ್ಯದಿಂದಾಗಿ ಕ್ಲೋರಿನ್ ಪರಮಾಣು ಎರಡಾಗಿ ಒಡೆದು ಸರಪಳಿ ರಾಸಾಯನಿಕ ಕ್ರಿಯೆ ಜರುಗುವುದನ್ನು ನರ್ನ್’ಸ್ಟ್ ವಿವರಿಸಿದನು. ನೆನ್ರ್ಸ್ಟ್ದು ಬಹು ವಿಶಿಷ್ಟವಾದ ವ್ಯಕ್ತಿತ್ವ. ಈತ ಕರುಣಾಳುವಾಗಿದ್ದರೂ, ನಾಗರಿಕ ಸೋಗು, ನಡವಳಿಕೆಗಳಿಗೆ ಸೊಪ್ಪು ಹಾಕುತ್ತಿರಲಿಲ್ಲ. ನೆನ್ರ್ಸ್ಟ್ನ ಕುಟುಂಬ ವೈಜ್ಞಾನಿಕ ವಲಯದಲ್ಲಿ ಅದರಾತಿಥ್ಯಕ್ಕೆ ಹೆಸರಾಗಿದ್ದಿತು. ಮೊದಲನೇ ಜಾಗತಿಕ ಯುದ್ದದಲ್ಲಿ ಜರ್ಮನಿಗೆ ಸೋಲಾಗುವುದನ್ನು, ಗ್ರಹಿಸಿದ ನೆನ್ರ್ಸ್ಟ್, ಕೈಸರ್ಗೆ ಯುದ್ದ ನಿಲ್ಲಿಸಿ ಶಾಂತಿ ಘೋಷಿಸಬೇಕೆಂದು ಆಗ್ರಹಿಸಿದನಾದರೂ ಅದರಲ್ಲಿ ಯಶಸ್ಸನ್ನು ಕಾಣಲಿಲ್ಲ. ಯುದ್ದದಲ್ಲಿ ನೆನ್ರ್ಸ್ಟ್ ಮಕ್ಕಳಿಬ್ಬರೂ ಹತರಾದರು. ಮುಂದೆ ಅಸಂಸಂಗಳಿಗೆ ರಾಯಭಾರಿಯಾಗಬೇಕೆಂದು ಆಹ್ವಾನವನ್ನು ನೆನ್ರ್ಸ್ಟ್ ನಿರಾಕರಿಸಿದನು. 1920ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ನೆನ್ರ್ಸ್ಟ್ ಹಿಟ್ಲರ್ನ ನೀತಿ ನಿಯಮಗಳನ್ನು ವಿರೋಧಿಸಿದನು. ನೆನ್ರ್ಸ್ಟ್ ಜಗತ್ತು ಕಂಡ ಅತಿ ಶ್ರೇಷ್ಟ ಭೌತ ರಸಾಯನಶಾಸ್ತ್ರಜ್ಞನೆಂದು ದಾಖಲಾಗಿದ್ದಾನೆ.