ಕಾಕ್ಕ್ರಾಪ್ಟ್, ಸರ್ ಜಾನ್ ಡೌಗ್ಲಾಸ್ (1897-1976 ) 1951
Cockcroft, Sir John Douglas
ಬ್ರಿಟನ್ -ಭೌತಶಾಸ್ತ್ರ ವೇಗೋತ್ಕರ್ಷಿತ ಕಣಗಳಿಂದ ಅಣು ಬೀಜಗಳಲ್ಲಿ ಪಾರವಿಕಲ್ಪ (Transmutation) ತಂದ ಮೊದಲಿಗ.
ಕಾಕ್ಕ್ರಾಪ್ಟ್ ಪದವಿ ಪ್ರಾಪ್ತಿಗಾಗಿ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ ಸೇರಿದ ಒಂದೇ ವರ್ಷದಲ್ಲಿ ಮೊದಲ ಜಾಗತಿಕ ಯುದ್ದ ಪ್ರಾರಂಭವಾಯಿತು. ಇದರಿಂದಾಗಿ ಕಾಕ್ಕ್ರಾಪ್ಟ್ ಶಿಕ್ಷಣವನ್ನು ಮೊಟಕುಗೊಳಿಸಿ ರಾಯಲ್ ಫೀಲ್ಡ್ ಆರ್ಟಿಲರಿಯಲ್ಲಿ ಸಂಜ್ಞೆಕಾರನಾಗಿ ಸೇರಬೇಕಾಯಿತು. ಮೂರು ವರ್ಷಗಳ ಕಾಲ ಹಾಗೂ ನಂತರ ನಡೆದ ಯುದ್ದಗಳಲ್ಲಿ ಕಾಕ್ಕ್ರಾಪ್ಟ್ ಯಶಸ್ವಿ ಹಾಗೂ ಗಣನೀಯವಾದ ಸೇವೆ ಸಲ್ಲಿಸಿದನು. ನಂತರ ಮೆಟ್ರೋಪಾಲಿಟನ್ ವಿಕರ್ಸ್ ಎಲೆಕ್ಟ್ರಿಕ್ ಕಂಪನಿ ಸೇರಿದನು. 1924ರಲ್ಲಿ ಕೇಂಬ್ರಿಜ್ನಿಂದ ಗಣಿತದಲ್ಲಿ ಪದವಿ ಗಳಿಸಿದನು. ಪದವಿ ಪಡೆದ ನಂತರ ಕಾಕ್ಕ್ರಾಪ್ಟ್ ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿದ್ದ ವಿಶ್ವ ವಿಖ್ಯಾತನಾಗಿದ್ದ ರುದರ್’ಫೋರ್ಡ್ ನೇತೃತ್ವದ ಸಂಶೋಧನಾ ತಂಡದ ಸದಸ್ಯನಾಗಿ ವೃತ್ತಿ ಜೀವನ ಪ್ರಾರಂಭಿಸಿದನು. 1932ರಲ್ಲಿ ಇ.ಟಿ.ಎಸ್. ವಾಲ್ಟರ್ ಜೊತೆ ಸೇರಿ ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿ ನಡೆಸಿದ ಸಂಶೋಧನೆಗಳಿಗಾಗಿ 1951ರ ಭೌತಶಾಸ್ತ್ರದಲ್ಲಿನ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಖಚಿತ ನಿರ್ಧಾರದ ನಿಲುವಿನವನೂ, ಸ್ಪಷ್ಟ ಚಿಂತಕನೂ ಆಗಿದ್ದ ಕಾಕ್ಕ್ರಾಪ್ಟ್ ವ್ಯವಸ್ಥಿತ ಕ್ರಿಯಾಶೀಲವ್ಯಕ್ತಿ. ಜೀವಿತದ ಕೊನೆ ಎರಡು ದಶಕಗಳಲ್ಲಿ ಸಂಶೋಧನೆಗಿಂತಲೂ, ಅದರ ನಿರ್ವಹಣೆಯತ್ತ ಒಲಿದಿದ್ದ ಕಾಕ್ಕ್ರಾಪ್ಟ್ 1940ರಲ್ಲಿ ಅಸಂಸಂಗಳೊಡನೆ ಯುದ್ದ ಕಾಲದ ತಾಂತ್ರಿಕ ಒಪ್ಪಂದಗಳಿಗಾಗಿ ನೇಮಿಸಲ್ಪಟ್ಟ ‘ಏರ್ಬೌರ್ಡ್ ಮಿಷನ್ನ ಸಕ್ರಿಯ ಸದಸ್ಯನಾಗಿದ್ದನು. 1946ರಲ್ಲಿ ಪರಮಾಣು ಚೈತನ್ಯ ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕದನಾದನು. 1959ರಲ್ಲಿ ಕೇಂಬ್ರಿಜ್ನ ಚರ್ಚಿಲ್ ಕಾಲೇಜಿನ ಸಂಸ್ಥಾಪಕ ಆಚಾರ್ಯನಾಗಿ ನೇಮಕಗೊಂಡು ಹಲವು ಗೌರವಗಳಿಗೆ ಪಾತ್ರನಾದನು. ಸಂಶೋಧಕ ಹಾಗೂ ಸಮರ್ಥ ಆಡಳಿತಗಾರನಾಗಿದ್ದ ಕಾಕ್ಕ್ರಾಪ್ಟ್ ವೈಜ್ಞಾನಿಕ ಹಾಗೂ ರಾಜಕೀಯ ರಂಗಗಳಲ್ಲಿ ಖ್ಯಾತನಾಗಿದ್ದನು. 1928ರಲ್ಲಿ ಗ್ಯಾಮೊವ್, ಕಣಗಳಿಂದ ಪರಮಾಣುಗಳನ್ನು ತಾಡಿಸ ಹೊರಟಾಗ ಅವು ಪರಮಾಣುವಿನ ಬೀಜವನ್ನು ಕ್ವಾಂಟಂ ಸುರಂಗಗೊಳ್ಳುವ (Quantum Tunneling) ಕ್ರಿಯೆಯಿಂದ ಪ್ರವೇಶಿಸಬಹುದೆಂದು ಸೂಚಿಸಿದ್ದನು. ಅದಲ್ಲದೆ ಕೂಲಂಬ್ ನಿರ್ಧರಿಸಿದಂತೆ ಒಂದೇ ವಿದ್ಯುದಾವಿಷ್ಟದ ಕಣಗಳು ಒಂದನ್ನೊಂದು ವಿಕರ್ಷಿಸುವ ಬಲಕ್ಕಿಂತಲೂ ಕಡಿಮೆ ಬಲ, ಕಣಗಳ ಬೈಜಿಕ ಪ್ರವೇಶಕ್ಕೆ ಸಾಕಾಗುವುದೆಂದು ಹೊರಗೆಡಹಿದನು. ಈ ಹೇಳಿಕೆಗಳ ಆಧಾರದ ಮೇಲೆ ಕಾಕ್ಕ್ರಾಪ್ಟ್ ಹಾಗೂ ವಾಲ್ಟರ್ ವಿಭವ ದ್ವಯ (Voltage Doubles ) ಉಪಕರಣ ನಿರ್ಮಿಸಿ ಪ್ರೋಟಾನಗಳನ್ನು 0.8ಒevಗೆ ವೇಗೋತ್ಕರ್ಷಗೊಳಿಸಿ ಲಿಥಿಯಂ ಲಕ್ಷ್ಯವನ್ನು ತಾಡಿಸಿದಾಗ, ಅದರಿಂದ ಆಲ್ಪಾ ಕಣಗಳು ಬಿಡುಗಡೆಯಾದವು. ಇದರಿಂದಾಗಿ ಮೊಟ್ಟ ಮೊದಲ ಕೃತಕವಾದ ಬೈಜಿಕ ಕ್ರಿಯೆಯಾದ ಪಾರವಿಕಲ್ಪ ಜರುಗಿತು. ಸಮಾಂತರದಲ್ಲಿ ರುದರ್’ಫೋರ್ಡ್ ಪಾರವಿಕಲ್ಪದ ಅಧ್ಯಯನಕ್ಕೆ ತನ್ನದೇ ಆದ ವಿಧಾನ ರೂಪಿಸಿಕೊಂಡಿದ್ದು ಅದಕ್ಕಾಗಿ ತಾಡಿಸುವ ಕಣಗಳ ಪೂರೈಕೆಗಾಗಿ ನೈಸರ್ಗಿಕವಾದ ವಿಕಿರಣಶೀಲ ಆಕರದ ಮೊರೆ ಹೊಕ್ಕಿದ್ದನು. ಕಾಕ್ಕ್ರಾಪ್ಟ್ ಹಾಗೂ ವಾಲ್ಟರ್’ರವರ ಈ ಯಶಸ್ವಿ ಪ್ರಯೋಗ ಭೌತಶಾಸ್ತ್ರದ ಬೈಜಿಕ ಅಧ್ಯಯನಕ್ಕೆ ಹೊಸ ಮಾರ್ಗವನ್ನೇ ತೆರೆಯಿತು. ಇದರ ಫಲವಾಗಿ ಸೈಕ್ಲೋಟ್ರಾನ್ ಹಾಗೂ ಸರೇಖೀಯ ವೇಗೋತ್ಕರ್ಷಕಗಳು ನಿರ್ಮಾಣಗೊಂಡವು. ಕಾಕ್ಕ್ರಾಪ್ಟ್ ಬೈಜಿಕ ವಿರಳನದಿಂದ ವಿದ್ಯುತ್ ಉತ್ಪಾದನೆಯ ಸಾಧ್ಯತೆಯನ್ನು ತಿಳಿಸಿದನಾದರೂ ರುದರ್’ಫೋರ್ಡ್ ಅದನ್ನು ಎಂದಿಗೂ ನನಸಾಗದ ಸಿಹಿ ಕನಸೆಂದು ನಿರ್ಲಕ್ಷಿಸಿದನು. ಆದರೆ ಮುಂದೆ ಔಷ್ಣೋಬೈಜಿಕ (Thermonuclear) ವಿದ್ಯುತ್ ಸ್ಥಾವರಗಳ ನಿರ್ಮಾಣ ಸಾಧ್ಯವಾಗಿ ಕಾಕ್ಕ್ರಾಪ್ಟ್ ನುಡಿದ ಭವಿಷ್ಯ ನಿಜವಾಯಿತು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಎರ್ನ್ಸ್ಟ್ ,ಥಾಮಸ್ ಸಿಂಟನ್ ವಾಲ್ಟನ್ (1903-1995) 1951
Ernst , Thomas Sinton Walton
ಐರ್ಲೆಂಡ್-ಭೌತಶಾಸ್ತ್ರ-
ಥಾಮಸ್ ತಂದೆ, ಟಿಪ್ಪರೇರಿ ಪಟ್ಟಣದಲಿ ಚರ್ಚ್ನ ಮಿನಿಸ್ಟರ್ ಆಗಿದ್ದನು. ಇದರಿಂದಾಗಿ ಊರಿಂದ ಊರಿಗೆ ವರ್ಗವಾಗುವ ಅನಿವಾರ್ಯತೆ ಈತನಿಗೆ ಒದಗಿ ಬಂದಿತು. 6 ಅಕ್ಟೋಬರ್ 1903ರಂದು ವಾಟರ್ಫೋರ್ಡ್ ಕೌಂಟಿಯ ಡುಂಗರ್ವನ್ನಲ್ಲಿ ಥಾಮಸ್ನ ಜನನವಾಯಿತು. ಬಾನ್ಬ್ರಿಡ್ಜ್ ಹಾಗೂ ಕುಕ್ಸ್ಟಿನ್ಗಳಲ್ಲಿ ಥಾಮಸ್ನ ಆರಂಭಿಕ ಶಿಕ್ಷಣ ಜರುಗಿತು. 1915ರಲ್ಲಿ ಬೆಲ್ಫಾಸ್ಟ್ನಲ್ಲಿದ್ದ ಆವಾಸಿ ಕಾಲೇಜಿಗೆ ಥಾಮಸ್ ಸೇರಿದನು. ಇಲ್ಲಿ ಗಣಿತ ಹಾಗೂ ಭೌತಶಾಸ್ತ್ರದಲ್ಲಿ ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣನಾದನು. 1922ರಲ್ಲಿ ವಿದ್ಯಾರ್ಥಿ ವೇತನ ಪಡೆದು ಡಬ್ಲಿನ್ನ ಟ್ರಿನಿಟಿ ಕಾಲೇಜ್ ಸೇರಿದನು. 1926ರಲ್ಲಿ ಪದವಿ ಗಳಿಸಿ 1927ರಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಸಹ ಪೂರೈಸಿದನು. ಇದೇ ವರ್ಷ ರಾಯಲ್ ಕಮಿಷನರ್ಸ್ ಫಾರ್ ದಿ ಎಕ್ಸಿಬಿಷ್ನ್ನಿಂದ ವಿದ್ಯಾರ್ಥಿವೇತನ ಗಳಿಸಿ, ಕೇಂಬ್ರಿಜ್ ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿ ರುದರ್ಫೋರ್ಡ್ನ ಸಹಾಯಕನಾದನು. 1930ರಲ್ಲಿ ಡಿಪಾರ್ಟ್ಮೆಂಟ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ನಿಂದ ಸಂಶೋಧನಾ ಪ್ರಶಸ್ತಿ ಪಡೆದು 1931ರಲ್ಲಿ ಡಾಕ್ಟರೇಟ್ ಪದವಿ ಗಳಿಸಿದನು. ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿ ಜಲಗತಿಶಾಸ್ತ್ರದಲ್ಲಿನ (Hydrodynamics) ಸಮಸ್ಯೆಗಳ ಅಧ್ಯಯನದಿಂದ ಥಾಮಸ್ನ ಸಂಶೋಧನಾ ಜೀವನ ಪ್ರಾರಂಭವಾಯಿತು. ಇಲ್ಲಿರುವಾಗ ಮುಂದೆ ಬೀಟಾಟ್ರಾನ್ ಎಂದು ಹೆಸರಾದ ಸರೇಖೀಯ ವೇಗೋತ್ಕರ್ಷಕಗಳನ್ನು (Linear Accelerator)ಬಳಸಿ, ಪರೋಕ್ಷ ಮಾರ್ಗದಿಂದ ವೇಗಗಾಮಿ ಕಣಗಳನ್ನು ಪಡೆಯಲು ಥಾಮಸ್ ಯತ್ನಿಸಿದನು. ಮುಂದೆ ಜೆ.ಡಿ.ಕಾಕ್ರಾಪ್ಟ್ನೊಂದಿಗೆ ಅಧಿಕ ಪ್ರಚನ್ನತೆಯಡಿಯಲ್ಲಿ (Potential) ವೇಗಗಾಮಿ ಕಣಗಳನ್ನು ಉತ್ಪಾದಿಸಿದನು. ಇದನ್ನು ಪರಿಷ್ಕರಿಸಿ ವಿಶಿಷ್ಟವಾದ ಪ್ರಾಯೋಗಿಕ ಸಲಕರಣೆಯೊಂದನ್ನು ರೂಪಿಸಿದನು. ಇದರಲ್ಲಿ ಹಗುರ ಕಣಗಳನ್ನು, ವೇಗಗಾಮಿ ಪ್ರೋಟಾನ್ಗಳಿಂದ ತಾಡಿಸಿ ಶಿಥಿಲಗೊಳಿಸಬಹುದೆಂದು ತೋರಿಸಿದನು. ಲಿಥಿಯಂ ಬೀಜವನ್ನು ವೇಗೋತ್ಕರ್ಷಗೊಳಿಸಿದ ಪ್ರೋಟಾನ್ಗಳಿಂದ ತಾಡಿಸಿ, ಹೀಲಿಯಂ ಬೀಜ ಪಡೆಯುವಲ್ಲಿ ಥಾಮಸ್ ಯಶಸ್ವಿಯಾದನು. ಥಾಮಸ್ ಡಬ್ಲಿನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್, ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ರಿಸರ್ಚ್ ಅಂಡ್ ಸ್ಟ್ಯಾಂಡಡ್ರ್ಸ್, ದಿ ರಾಯಲ್ ಸಿಟಿ ಆಫ್ ಡಬ್ಲಿನ್ ಹಾಸ್ಪಿಟಲ್, ರಾಯಲ್ ಐರಿಷ್ ಅಕಾಡೆಮಿ ಹೀಗೆ ಹಲವು ಹತ್ತಾರು ಶೈಕ್ಷಣೇತರ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದನು. ಬೈಜಿಕ ಭೌತಶಾಸ್ತ್ರ ,ಜಲಗತಿಶಾಸ್ತ್ರ ,ಸೂಕ್ಷ್ಮ ತರಂಗಗಳನ್ನು ಕುರಿತಾಗಿ ಹಲವಾರು ವೈಜ್ಞಾನಿಕ ಲೇಖನಗಳನ್ನು ಪ್ರಕಟಿಸಿದನು. 1938ರಲ್ಲಿ ಕಾಕ್ರಾಪ್ಟ್ ಹಾಗೂ ಥಾಮಸ್ ಲಂಡನ್ನ ರಾಯಲ್ ಸೊಸೈಟಿಯಿಂದ ಹ್ಯೂಗ್ಸ್ ಪದಕ ಪುರಸ್ಕೃತರಾದರು. 1959ರಲ್ಲಿ ಬೆಲ್ಫಾಸ್ಟ್ನ ಕೀನ್ಸ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಗಳಿಸಿದನು. 1951ರಲ್ಲಿ ಥಾಮಸ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಬ್ಲಾಖ್ ಫೆಲಿಕ್ಸ್ (1905-1983) -1952
Bloch , Felix (PHY.)
ಸ್ವಿಟ್ಸರ್’ಲ್ಯಾಂಡ್-ಅಸಂಸಂ- ಭೌತಶಾಸ್ತ್ರ- ಬೈಜಿಕ ಕಾಂತೀಯ ಅನುರಣನ ರೋಹಿತಮಾಪಕ (NMR-Nuclear Magnetic Resonance Spectrometer )ಉಪಜ್ಞೆಕಾರ
ಜೂರಿಕ್ ಹಾಗೂ ಲೀಪ್ಜೀಗ್ನಲ್ಲಿ ಶಿಕ್ಷಣ ಪಡೆದ ಬ್ಲಾಖ್ ಸ್ವಲ್ಪ ಕಾಲ ಜರ್ಮನಿಯಲ್ಲಿ ಉಪನ್ಯಾಸಕನಾದನು. 1933ರಲ್ಲಿ ಅಮೆರಿಕಾಕ್ಕೆ, ತೆರಳಿ ಸ್ಕ್ಯಾನ್ಫೆÇೀರ್ಡ್ನಲ್ಲಿ ನೆಲೆಸಿದನು. ಘನಸ್ಥಿತಿ ಭೌತಶಾಸ್ತ್ರಕ್ಕೆ ಭದ್ರಬುನಾದಿ ಹಾಕಿದ ಬ್ಲಾಖ್ ಘನಗಳಲ್ಲಿ ಎಲೆಕ್ಟ್ರಾನ್ಗಳ ನಡವಳಿಕೆಯನ್ನು ಸ್ಪುಟಗೊಳಿಸಿದನು. ಘನವೊಂದರಲ್ಲಿ ಮುಕ್ತವಾಗಿ ಚಲಿಸುವ ಎಲೆಕ್ಟ್ರಾನನ್ನು ಬ್ಲಾಖ್ ತರಂಗ ಫಲನ (Wave Function) ವಿವರಿಸುತ್ತದೆ. ಅಲ್ಲದೆ ಅನುಕಾಂತೀಯ (Paramagnetic) ಸಾಮಾಗ್ರಿಯಲ್ಲಿ ಎರಡು ಕಾಂತ ವಲಯಗಳ ಮಧ್ಯದ ಗಡಿಯ ಸ್ವರೂಪವನ್ನು ಬ್ಲಾಖ್ ತರಂಗ ವಿವರಿಸುತ್ತದೆ. 1946ರಲ್ಲಿ ಬ್ಲಾಖ್ ಬೈಜಿಕ ಕಾಂತೀಯ ಅಮರಣದ ತಂತ್ರವನ್ನು ಪರಿಚಯಿಸಿದನು. ಇದೇ ತಂತ್ರವನ್ನು ಸ್ವತಂತ್ರವಾಗಿ ಪರ್ಸೆಲ್ ಸಹ ಅಭಿವೃದ್ದಿಗೊಳಿಸಿದನು. ಬ್ಲಾಖ್ನ ತಂತ್ರದಿಂದ ಯಾವುದೇ ಬೀಜದ ಚೈತನ್ಯದ ಸ್ಥಿತಿಯನ್ನು ಅರಿಯುವ ಮೂಲಕ, ಅದರ ನೆರೆಹೊರೆಯ ಪರಮಾಣುಗಳ ಸ್ಥಿತಿಯನ್ನು ಲೆಕ್ಕಚಾರ ಹಾಕಿ ತಿಳಿಯಬಹುದು. 1952ರಲ್ಲಿ ಬ್ಲಾಖ್ ಪರ್ಸೆಲ್ ಜೊತೆ ನೊಬೆಲ್ ಪ್ರಶಸ್ತಿ ಪಡೆದನು. ಬ್ಲಾಖ್ ಹಾಗೂ ಪರ್ಸೆಲ್ ರೂಪಿಸಿದ ತಂತ್ರ ರಸಾಯನಶಾಸ್ತ್ರದಲ್ಲಿ ಪ್ರಮುಖ ವಿಶ್ಲೇಷಣಾ ತಂತ್ರವಾಗಿ ನೆಲೆಗೊಂಡಿದೆ. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಪೆರ್ಸೆಲ್, ಎಡ್ವರ್ಡ್ ಮಿಲ್ಸ್ (1912--) 1952
Purcell , Edward Mills
ಅಸಂಸಂ-ಭೌತಶಾಸ್ತ್ರ- ಬೈಜಿಕ ಕಾಂತೀಯ ಅನುರಣನೆ ವಿಧಾನ (NMR-Nuclear Magnetic Resonance) ಅಭಿವೃದ್ದಿಗೊಳಿಸಿದಾತ. ತಾರಂತರದ 21 ಸೆಂ.ಮೀ ಸೂಕ್ಷ್ಮ ತರಂಗದ ಉತ್ಸರ್ಜನೆ ಪತ್ತೆ ಹಚ್ಚಿದಾತ.
ಪೆರ್ಸೆಲ್, ಪಡ್ರ್ಯೂನಿಂದ ವೈದ್ಯುತ್ ಇಂಜಿನಿಯರಿಂಗ್ನಲ್ಲಿ ಪದವಿ ಗಳಿಸಿ, ನಂತರ ಕಾರ್ಲ್ಸ್ರುಹೆ ಹಾಗೂ ಹಾರ್ವರ್ಡ್ಗಳಲ್ಲಿ ಭೌತಶಾಸ್ತ್ರದ ವ್ಯಾಸಂಗ ಮಾಡಿದನು. 1938ರಲ್ಲಿ ಇಲ್ಲಿಯೇ ಬೋಧಕನಾದನು. 1941ರಿಂದ 1945ರವರೆಗೆ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸೂಕ್ಷ್ಮ ತರಂಗ ರಡಾರ್ ಅಭಿವೃದ್ದಿಗೆ ಶ್ರಮಿಸಿದನು. ನಂತರ ಹಾರ್ವರ್ಡ್ನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. 1940ರಲ್ಲಿ ಘನ ಹಾಗೂ ದ್ರವಗಳಲ್ಲಿನ ಅಣುಬೀಜಗಳಲ್ಲಿನ ಕಾಂತೀಯ ಭ್ರಾಮ್ಯತೆಗಳನ್ನು ಅಳೆಯಲು ಬೈಜಿಕ ಕಾಂತೀಯ ಅನುರಣನ ವಿಧಾನ ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದನು. ಯಾವುದೇ ಗಿರಕಿ (Spin) ಉಳ್ಳ ಪರಮಾಣುವಿನ ಬೀಜವನ್ನು ಪ್ರಬಲ ಕಾಂತಕ್ಷೇತ್ರದಲ್ಲಿರಿಸಿದಾಗ ಅದು ಅನುರಣನ ಪ್ರಭಾವದಡಿಯಲ್ಲಿ ರೇಡಿಯೋ ಆವರ್ತದ ವ್ಯಾಪ್ತಿಯಲ್ಲಿ ವಿಕಿರಣವನ್ನು ಹೀರಿಕೊಳ್ಳುತ್ತದೆ. ಇದನ್ನು ಅಳೆದು ಅಣುವಿನ ರಾಚನಿಕ ಸ್ವರೂಪ ನಿರ್ಧರಿಸಬಹುದು. 1940ರ ನಂತರ ಬೈಜಿಕ ಕಾಂತೀಯ ಅನುರಣನ ವಿಧಾನ ಪ್ರಾಯೋಗಿಕ ಭೌತಶಾಸ್ತ್ರದಲ್ಲಿ ಪ್ರಮುಖ ಸ್ಥಾನ ಗಳಿಸಿತು. 1952ರಲ್ಲಿ ಪೆರ್ಸೆಲ್, ಬ್ಲಾಖ್ ಜೊತೆಗೆ ನೊಬೆಲ್ ಪ್ರಶಸ್ತಿ ಪಡೆದನು. 1951ರಲ್ಲಿ ಪೆರ್ಸೆಲ್, ಅಂತರ್ ತಾರಾ ಅಂತರಿಕ್ಷದಲ್ಲಿನ ತಟಸ್ಥ ಜಲಜನಕದ 21 ಸೆಂಮೀ ತರಂಗಾಂತರದ ವಿಕಿರಣವನ್ನು ಪತ್ತೆ ಹಚ್ಚಿದನು. ವ್ಯಾನ್ ಡೆ ಹಸ್ಟ್ ಈ ಮೊದಲೇ ಈ ವಿಕಿರಣದ ಅಸ್ತಿತ್ವದ ಮುನ್ಸೂಚನೆ ನೀಡಿದ್ದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಫ್ರಿಟ್ಸ್, ಝರ್ನಿಕ್ (1888-1966) 1953
Frits , Zernike
ನೆದರ್ಲ್ರ್ಯಾಂಡ್-ಭೌತಶಾಸ್ತ್ರ-ಪ್ರಾವಸ್ಥಾ ವೈದೃಶ್ಯ ಸೂಕ್ಷ್ಮದರ್ಶಕ (Phase Contrast Microscope) ಉಪಜ್ಞೆಕಾರ.
ಫ್ರಿಟ್ಸ್ ತಂದೆ ಅ್ಯಮಸ್ಟರ್ಡ್ಯಾಂನ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯನೂ ಗಣಿತದ ಉಪಾಧ್ಯಾಯನೂ ಆಗಿದ್ದನು. ಆತನ ತಾಯಿಯೂ ಗಣಿತದ ಉಪ್ದಾಧ್ಯಾಯಿನಿಯಾಗಿದ್ದಳು. ಇವರ ಆರು ಜನ ಮಕ್ಕಳಲ್ಲಿ ಫ್ರಿಟ್ಸ್ ಎರಡನೆಯವನಾಗಿ, 16 ಜುಲೈ 1888 ರಂದು ಜನಿಸಿದನು. ಬಾಲ್ಯ ಪ್ರತಿಭೆಯೆಂದು ಹೆಸರಾಗಿದ್ದ ಫ್ರಿಟ್ಸ್ ಹಲವಾರು ಪುಸ್ತಕಗಳನ್ನು ವಿಷಯವಾರು ಸಂಪಾದಿಸಿದ್ದನು. ಫಿû್ರಟ್ಸ್ನ ಅಣ್ಣ, ಅಕ್ಕ ತಂಗಿಯರು ಸಹ ತಮ್ಮ ಕ್ಷೇತ್ರಗಳಲ್ಲಿ ಪ್ರತಿಭಾವಂತರೆಂದು ಪರಿಗಣಿಸಲ್ಪಟ್ಟಿದ್ದರು. ತಂದೆಯಿಂದ ಫ್ರಿಟ್ಸ್ ಭೌತಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದನು. ಪ್ರೌಢಶಾಲೆಯಲ್ಲಿರುವಾಗ ಇತಿಹಾಸ, ಭಾಷೆಗಳನ್ನು ನಿರ್ಲಕ್ಷಿಸಿ, ವಿಜ್ಞಾನದ ವಿಷಯಗಳನ್ನು ಮಾತ್ರ ಅಧ್ಯಯನ ಮಾಡಿದನು. ಇದರಿಂದ ಕಾಲೇಜು ವಿಧ್ಯಾಭ್ಯಾಸಕ್ಕೆ ಅರ್ಹತೆ ದಕ್ಕಲಿಲ್ಲ. ನಂತರ ಭಾಷೆ ಹಾಗೂ ಇತಿಹಾಸಗಳಲ್ಲಿ ಸಿದ್ಧನಾಗಿ, ಪರೀಕ್ಷೆ ಎದುರಿಸಿ, “ವಿಶ್ವವಿದ್ಯಾಲಯ ಸೇರಿದನು. ಪ್ರೌಢಶಾಲೆಯಲ್ಲಿರುವಾಗ, ತಾನೇ ರಾಸಾಯನಿಕಗಳನ್ನು ಸಂಸ್ಕರಿಸಿ, ಬಣ್ಣದ ಛಾಯಾಗ್ರಹಣದ ಯತ್ನ ಮಾಡಿದನು. ಹಳೆಯ ಗುಜರಿ ಸಾಮಾನುಗಳನ್ನು ಬಳಸಿ, ಧೂಮಕೇತುವಿನ ಛಾಯಾಚಿತ್ರ ಪಡೆಯುವ ಸಾಧನವನ್ನು ಫ್ರಿಟ್ಸ್ ತಾನೇ ತಯಾರಿಸಿಕೊಂಡಿದ್ದನು. ತಂದೆ, ತಾಯಿಗಳೊಂದಿಗೆ ಸವಾಲೆಸೆಯುವಂತೆ ಗಣಿತದ ಪರಿಹಾರಗಳನ್ನು ಹುಡುಕುತ್ತಿದ್ದನು.1905ರಲ್ಲಿ ಅ್ಯಮಸ್ಟರ್ ಡ್ಯಾಂ ವಿಶ್ವವಿದ್ಯಾಲಯ ಸೇರಿ ರಾಸಾಯನಿಕ ಶಾಸ್ತ್ರವನ್ನು ಪ್ರಥಮ ಹಾಗೂ ಗಣಿತ ಭೌತಶಾಸ್ತ್ರವನ್ನು ದ್ವಿತೀಯ ವಿಷಯಗಳಾಗಿ ಆರಿಸಿಕೊಂಡನು. 1908ರಲ್ಲಿ ಸಂಭವನೀಯತೆ ಕುರಿತಾಗಿ ಲೇಖನ ಬರೆದು ಗಟ್ಟಿಂಜೆನ್ “ವಿಶ್ವವಿದ್ಯಾಲಯದ ಬಂಗಾರದ ಪದಕ ಪಡೆದನು. 1912ರಲ್ಲಿ ಹಾರ್ಲೆಮನ್ ಡಚ್ ಸೊಸೈಟಿ ಆಫ್ ಸೈನ್ಸ್ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಪ್ರತಿಫಲನ ಕುರಿತು ಲೇಖನವೊಂದು ಬರೆದು, ಅದರ ತೀರ್ಪುಗಾರರಾಗಿದ್ದ ಖ್ಯಾತ ವಿಜ್ಞಾನಿ ಲೊಹ್ರೆಂಟ್ಸ್ ಹಾಗೂ ವ್ಯಾಂಡರ್ ವಾಲ್ಸ್ರನ್ನು ಮೆಚ್ಚಿಸಿ, ಪ್ರಶಸ್ತಿ ಗಳಿಸಿದನು. ಪ್ರಶಸ್ತಿಯಾಗಿ ಪದಕ ಅಥವಾ ಹಣದ ಆಯ್ಕೆ ನೀಡಿದಾಗ, ಹಣವನ್ನೇ ಬಯಸಿದನು. ಈ ಲೇಖನವನ್ನು ವಿಸ್ತೃತಗೊಳಿಸಿ, ಸಂಪ್ರಂಬಂಧವಾಗಿಸಿ 1915ರಲ್ಲಿ ಡಾಕ್ಟರೇಟ್ ಗಳಿಸಿದನು. 1913ರಲ್ಲಿ ಗಟ್ಟಿಂಜೆನ್ನಲ್ಲಿದ್ದ ಖ್ಯಾತ ಖಗೋಳಶಾಸ್ತ್ರಜ್ಞನಾಗಿದ್ದ ಕ್ಯಾಪ್ಟೆಯ್ನ್, ತನ್ನ ಸಹಾಯಕನಾಗಿ ಬರುವಂತೆ ಫಿû್ರಟ್ಸ್ನನ್ನು ಆಹ್ವಾನಿಸಿದನು. 1915ರಲ್ಲಿ ಫ್ರಿಟ್ಸ್ ಗಟ್ಟಿಂಜೆನ್ನಲ್ಲಿ ಓರ್ನ್ಸ್ಟೀನ್ನಿಂದ ತೆರವುಗೊಂಡಿದ್ದ ಗಣಿತ ಉಪನ್ಯಾಸಕನ ಹುದ್ದೆ ವಹಿಸಿಕೊಂಡು ವೃತ್ತಿ ಜೀವನ ಪ್ರಾರಂಭಿಸಿದನು. 1920ರಲ್ಲಿ ಇಲ್ಲಿ ಪೂರ್ಣಾವಧಿ ಪ್ರಾಧ್ಯಾಪಕನಾಗಿ ನೇಮಕಗೊಂಡನು. ಜೆ.ಎ.ಪ್ರಿಟ್ಸ್ನ ಜೊತೆಗೆ ದ್ರವದಲ್ಲಿನ ಎರಡು ಅಣುಗಳ ಸ್ಥಾನ ನಿರ್ಧಾರ ಫಲನ (Function) ನೀಡಿದನು. ಬಹು ಸೂಕ್ಷ್ಮವಾದ ಗ್ಯಾಲ್ಬನೋ ಮಾಪಕವನ್ನು ಸಹ ಒಟ್ಟೋ ತಯಾರಿಸಿದನು. 1930ರಿಂದ ದೃಕ್ ಶಾಸ್ತ್ರದಲ್ಲಿ ಆಸಕ್ತಿ ತಳೆದು ಮಸೂರ, ಬಿಂಬಗಳನ್ನು ಪಡೆಯುವಲ್ಲಿ ಹಲವಾರು ಸುಧಾರಣೆಗಳನ್ನು ತಂದನು. 1930ರ ಒಂದು ಸಂಜೆ, ಜೆನಾದಲ್ಲಿರುವ ಝೀಸ್ ಕಾರ್ಖಾನೆಯಲ್ಲಿರುವಾಗ ಸಂಪೂರ್ಣ ಕಪ್ಪು ಬಣ್ಣ ಬಳಿಯಲಾಗಿದ್ದ ದೃಕ್ ಪ್ರಯೋಗಾಲಯದಲ್ಲಿ ಒಂದು ವಿಶಿಷ್ಟವಾದ ವಿದ್ಯಾಮಾನವನ್ನು ಗಮನಿಸಿದನು. ಈ ವಿದ್ಯಾಮನದಿಂದ ಫ್ರಿಟ್ಸ್ ಪ್ರಾವಸ್ಥಾ ವೈದೃಶ್ಯ ಸೂಕ್ಷ್ಮದರ್ಶಕ ನಿರ್ಮಾಣದ ಸಾಧ್ಯತೆ ವಿವರಿಸಿದನು. ಇದನ್ನು ಕಾರ್ಖಾನೆಯ ಆಡಳಿತ ಮಂಡಳಿಯ ಗಮನಕ್ಕೆ ತಂದನು. ಆದರೆ ಇದರ ಪ್ರಾಮುಖ್ಯತೆ ಅವರಿಗೆ ಅರಿವಾಗಲಿಲ್ಲ. 1941ರಲ್ಲಿ ಜರ್ಮನಿ ನೆದರ್’ಲ್ಯಾಂಡ್’ನ್ನು ಆಕ್ರಮಿಸಿ ಯುದ್ದಕ್ಕೆ ನೆರವಾಗುವ ಎಲ್ಲಾ ಬಗೆಯ ಸಂಶೋಧನೆಗಳನ್ನು ದಾಖಲುಗೊಳಿಸತೊಡಗಿತು. ಫ್ರಿಟ್ಸ್’ನ ಪ್ರಾವಸ್ಥಾ ವೈದೃಶ್ಯ ಸೂಕ್ಷದರ್ಶಕದ ವೈಶಿಷ್ಟತೆ, ಗುರುತಿಸಿದ ಜರ್ಮನಿಯ ಪರಿಶೀಲನಾ ಸಮಿತಿ, ಅಂತಿಮವಾಗಿ ಅದರ ನಿರ್ಮಾಣ ಕೈಗೆತ್ತಿಕೊಂಡಿತು. ಮುಂದೆ ಇದು ಬೃಹತ್ ಉದ್ದಿಮೆ ರೂಪ ತಾಳಿತು. ಈ ಕಾಲಕ್ಕೆ ಜರ್ಮನಿ, ನೆದರ್’ಲ್ಯಾಂಡನ್ನು ಆಕ್ರಮಿಸಿದ್ದಿತಲ್ಲದೆ, ಈ ಕಾರಣವಾಗಿ ಫ್ರಿಟ್ಸ್’ಗೆ ಅದರ ಉಪಜ್ಞೆಯ ಗೌರವ ದಕ್ಕಲಿಲ್ಲ. ವಿಜ್ಞಾನದಲ್ಲಿ ಅದರಲ್ಲೂ ವಿಶೇಷತವಾಗಿ ವೈದ್ಯಕೀಯದಲ್ಲಿ ಈ ಸೂಕ್ಷ್ಮ ದರ್ಶಕದ ಬಳಕೆಯಾಗಲಿಲ್ಲ. ಯುದ್ದದ ನಂತರ ಬೇರೆ ಕಂಪನಿಗಳು, ಪ್ರಾವಸ್ಥಾ ವೈದೃಶ್ಯ ಸೂಕ್ಷ್ಮದರ್ಶಕದ ತಯಾರಿಸಿ, ವಿಜ್ಞಾನದಲ್ಲಿ ವ್ಯಾಪಕವಾಗಿ ಬಳಕೆಗೆ ತಂದವು. ಫ್ರಿಟ್ಸ್’ನ ಸಾಧನೆಯನ್ನು ರಾಯಲ್ ಸೂಕ್ಷ್ಮದರ್ಶಕದ ಸಂಸ್ಥೆ ಗುರುತಿಸಿತು. ಲಂಡನ್ನ ರಾಯಲ್ ಸೊಸೈಟಿ ರಮ್’ಫೋರ್ಡ್ ಪದಕ ಪ್ರಿಟ್ಸ್ಗೆ ಪ್ರಧಾನಿಸಿತು. ಅ್ಯಮಸ್ಟರ್ ಡ್ಯಾಂ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತು. ಫ್ರಿಟ್ಸ್’ನ ಈ ಸಾಧನೆಗಾಗಿ 1953ರ ನೊಬೆಲ್ ಪ್ರಶಸ್ತಿ ನೀಡಲಾಯಿತು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಬಾರ್ನ್ , ಮ್ಯಾಕ್ಸ್(1882-1970) - 1954
Born , Max
ಜರ್ಮನ್-ಭೌತಶಾಸ್ತ್ರ - ಮಾತೃಕೆ ಬಲವಿಜ್ಞಾನ ( Matrix Mechanics) ಪರಿಚಯಿಸಿದಾತ. ಅಲೆಫಲನಗಳಿಗೆ (Wave Function)s ಸಂಖ್ಯಾಕಲನ (Statistical) ವಿವರಣೆ ನೀಡಿದಾತ.
ಮ್ಯಾಕ್ಸ್, ಬ್ರೆಸ್ಲೆ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕನಾಗಿದ್ದ ಅಂಗರಚನಾಶಾಸ್ತ್ರದ ವೈದ್ಯನ ಮಗ. ನಾಲ್ಕು ವರ್ಷದವನಿದ್ದಾಗ ತಾಯಿಯನ್ನು ಕಳೆದುಕೊಂಡ ಬಾರ್ನ್, ಅಜ್ಜಿಯ ಆರೈಕಯಲ್ಲಿ ಬೆಳೆದನು. ಬ್ರೆಸ್ಲೆ, ಹೈಡೆಲ್ಬರ್ಗ್, ಜೂರಿಕ್ ಹಾಗೂ ಕೇಂಬ್ರಿಜ್’ಗಳಲ್ಲಿ ವಿದ್ಯಾಭ್ಯಾಸ ಮಾಡಿದ ಬಾರ್ನ್, 1907ರಲ್ಲಿ ಗಟ್ಟಿಂಜೆನ್ನಿಂದ ಪಿ.ಎಚ್.ಡಿ. ಪಡೆದನು. ಗಟ್ಟಿಂಜೆನ್ನಲ್ಲಿ ಉಪನ್ಯಾಸಕನಾಗಿ ವೃತ್ತಿ ಜೀವನ ಪ್ರಾರಂಭಿಸಿದ ಬಾರ್ನ್ 1921ರಲ್ಲಿ ಅಲ್ಲೇ ಭೌತಶಾಸ್ತ್ರ ಪ್ರಾಧ್ಯಾಪಕನಾದನು. ಪ್ರಾಧ್ಯಾಪಕನಾಗಿರುವಾಗ, ಸೈದ್ಧಾಂತಿಕ ಭೌತಶಾಸ್ತ್ರದ ಶಾಖೆಯನ್ನು ತನ್ನ ವಿಶ್ವ ವಿದ್ಯಾಲಯದಲ್ಲಿ ಪ್ರಾರಂಭಿಸಿದನು. ಇಡೀ ಜಗತ್ತಿನಲ್ಲಿ ಕೊಪೆನ್ಹೆಗೆನ್ನ ನೀಲ್ಸ್ ಬೊಹ್ರ್ ಸಂಸ್ಥೆ ಹೊರತುಪಡಿಸಿದರೆ ಈ ಬಗೆಯ ಅಧ್ಯನದಲ್ಲಿ ಇದು ಎರಡನೆಯದೆಂದು ಖ್ಯಾತವಾಯಿತು. ಯಹೂದಿಯಾಗಿದ್ದ ಬಾರ್ನ್, ನಾಝಿಗಳ ಭಯದಿಂದಾಗಿ 1933ರಲ್ಲಿ ಜರ್ಮನಿಯನ್ನು ತೊರೆದು ಕೇಂಬ್ರಿಜ್ನಲ್ಲಿ ನೆಲೆಸಿ, ಎಡಿನ್ಬರೋದಲ್ಲಿ ಪ್ರಾಧ್ಯಾಪಕನಾಗಿ, 1953ರಲ್ಲಿ ನಿವೃತ್ತಿಯ ನಂತರ ಗಟ್ಟಿಂಜೆನ್ನಲ್ಲಿ ನಿವೃತ್ತ ಜೀವನ ಕಳೆದನು. 1954ರಲ್ಲಿ ಬಾರ್ನ್, ಕ್ವಾಂಟಂ ಬಲವಿಜ್ಞಾನದಲ್ಲಿ ಸಲ್ಲಿಸಿದ ಸೇವೆಗಾಗಿ ಬೊಥೆಯೊಂದಿಗೆ ನೊಬೆಲ್ ಪುರಸ್ಕೃತನಾದನು.ಬಾರ್ನ್ ಸಂಶೋಧನೆ ಪ್ರಾರಂಭಿಸಿದಾಗ ಜಾಲಂಧ್ರ ಗತಿಶೀಲತೆಯಲ್ಲಿ (Laltice Dynamics) ಆಸಕ್ತನಾಗಿದ್ದನು. ಘನವಸ್ತುಗಳು ಕಂಪಿಸುವಾಗ ಅದರ ಪರಮಾಣುಗಳು ಹೇಗೆ ಒಂದಕ್ಕೊಂದು ಬೆಸೆದುಕೊಂಡಿರುವುದೆಂದು ನಿಷ್ಕರ್ಷಿಸುವಲ್ಲಿ ನಿರತನಾಗಿದ್ದನು. ಇದರ ಫಲವಾಗಿ ಬಾರ್ನ್ ಹೇಬರ್ ಪ್ರತಿಕ್ರಿಯೆ ಚಕ್ರಗಳ ವಿವರಣೆ ಹೊರಬಂದಿತು. ಈ ವಿವರಣೆ ಅಯೋನಿಕ್ ಹರಳುಗಳ ಪರಮಾಣುಗಳ ಮಧ್ಯದ ಜಾಲಂಧ್ರ ಚೈತನ್ಯವನ್ನು (Laltice Energy) ಲೆಕ್ಕಹಾಕಲು ಶಕ್ತವಾಗಿದೆ. 1923ರವೇಳೆಗೆ ಪ್ಲಾಂಕ್ ,ಐನ್ಸ್ಟೀನ್ , ಬೊಹ್ರ್ ಹಾಗೂ ಸೊಮ್ಮರ್’ಫೀಲ್ದ್ ‘ನಿಂದ ಸ್ಥಾಪಿತಗೊಂಡಿದ್ದ ಕ್ವಾಂಟಂ ಬಲವಿಜ್ಞಾನ ಹಲವಾರು ವೈಜ್ಞಾನಿಕ ವೀಕ್ಷಣೆಗಳಿಗೆ ಸಮರ್ಪಕವಾದ ಉತ್ತರಕೊಡುವಲ್ಲಿ ಸೋತಿದ್ದಿತು. ಕಣಗಳು ಅಲೆಗಳಂತಹ ಗುಣಗಳನ್ನು ಹೊಂದಿದ್ದರೆ, ಇಂತಹ ವೀಕ್ಷಣೆಗಳಿಗೆ ವೈಜ್ಞಾನಿಕವಾದ ಸಮರ್ಪಕ ವಿವರಣೆ ನೀಡಬಹುದೆಂದು 1924ರಲ್ಲಿ ಬ್ರೊಗಿಲಿ ಸೂಚಿಸಿದನು. ಈ ಹಿನ್ನೆಲೆಯಲ್ಲಿ ಬಾರ್ನ್, ಇ.ಪಿ. ಜೋರ್ಡಾನ್ , ಹೈಸೆನ್ಬರ್ಗ್ ಹಾಗೂ ಪೌಲಿ ಸಂಯುಕ್ತವಾಗಿ ಹಲವಾರು ಹೊಸ, ವಿಸ್ತೃತ ಪರಿಕಲ್ಪನೆಗಳಿಗೆ ನಾಂದಿ ಹಾಡಿದರು. 1925ರಲ್ಲಿ ಬಾರ್ನ್, ಜೋರ್ಡಾನ್, ಜೊತೆ ಸೇರಿ, ಹೊಸದಾಗಿ ರೂಪುಗೊಳ್ಳುತ್ತಿರುವ ಪರಿಕಲ್ಪನೆಗಳನ್ನು ಸಮರ್ಥವಾಗಿ ಬಿಂಬಿಸುವ, ಹಾಗೂ ಪರಿಹಾರ ಒದಗಿಸುವ ಮಾತೃಕೆ ವಿಧಾನವನ್ನು ಕ್ವಾಂಟಂ ಬಲವಿಜ್ಞಾನದಲ್ಲಿ ಬಳಕೆಗೆ ತಂದನು. ಡಿರಾಕ್ ಈ ವಿಧಾನವನ್ನು ಬಳಸತೊಡಗಿದನು. 1926ರಲ್ಲಿ ನಂತರ ಷ್ರೊಡಿಂಜರ್ ಸಮಾನ ಅಲೆ ಬಲವಿಜ್ಞಾನ ರೂಪಿಸಿ, ಹಳೆಯ ಹಾಗೂ ಹೊಸ ಪರಿಕಲ್ಪನೆಗಳನ್ನು ಕ್ವಾಂಟಂ ಬಲವಿಜ್ಞಾನದಲ್ಲಿ ಸಮನ್ವಯಗೊಳಿಸಿದನು. ಬಾರ್ನ್ ಅಲೆಫಲನದ ಸಂಭವನೀಯ ವಿವರಣೆಯನ್ನು ಮಂಡಿಸಿದನು. ಷ್ರೋಡಿಂಜರ್’ನ ಅಲೆ ಬಲವಿಜ್ಞಾನದಲ್ಲಿ. ಪ್ರತಿಯೊಂದು ಕಣವೂ ಒಂದು ಅಲೆಯ ಪೊಟ್ಟಣದಂತೆ ಪರಿಗಣಿತವಾಗಿದೆ. ಈ ಅಲೆ, ಕ್ರಮೇಣ ಇಲ್ಲದಂತಾಗುತ್ತದೆ. ಆದರೆ ಬಾರ್ನ್ ಇದನ್ನು ಒಪ್ಪದೆ ಯಾವುದೇ ಬಿಂದುವಿನಲ್ಲಿ ಕಣದ ಇರುವಿಕೆಯನ್ನು ಸಂಭವನೀಯತೆಯಿಂದ ಮಾತ್ರ ತಿಳಿಸಬಹುದೆಂದು ವಾದಿಸಿದನಲ್ಲದೆ, ಅಂತಹ ಸಂಭವನೀಯ ಇರುವನ್ನು ಗಣಿತೀಯ ಸೂತ್ರದಿಂದ ನಿರೂಪಿಸಿದನು. ಕ್ವಾಂಟಂ ಬಲವಿಜ್ಞಾನಕ್ಕೆ ಸಂಭವನೀಯತೆ ತರುವುದರ ಮೂಲಕ, ಭೌತಶಾಸ್ತ್ರವನ್ನು ನಿರ್ಧಾರಕ ಸ್ಥಿತಿಯಿಂದ ಅನಿರ್ಧಾರಕ ಸ್ಥಿತಿಗೆ, ಒಯ್ಯುವುದೆಂದು ಅಂತಹ ಸಿದ್ದಾಂತ ಅನಪೇಕ್ಷಿತವೆಂದು ಐನ್ಸ್ಟೀನ್ ವಿರೋಧಿಸಿದನು. ಈ ವಿಚಾರವಾಗಿ ಬಾರ್ನ್ ಹಾಗೂ ಐನ್ಸ್ಟೀನ್ ಬಹು ವರ್ಷಗಳ ಕಾಲ ಸಂವಾದ, ನಡೆಸಿದ್ದರು. 1970ರಲ್ಲಿ ನಿಧನನಾದ ಬಾರ್ನ್ನನ್ನು ಗಟ್ಟಿಂಜೆನ್ನಲ್ಲಿ ಸಮಾಧಿ ಮಾಡಲಾಗಿದೆಯಲ್ಲದೆ, ಅದರ ಶಾಖೆಯ ಮೇಲೆ ಅವನು ಪ್ರಾರಂಭಿಸಿದ ಮಾತೃಕೆ ಬಲವಿಜ್ಞಾನದ ಮೂಲ ಸೂತ್ರ pq – p-h/2 ಸೂತ್ರವನ್ನು ಬರೆಯಲಾಗಿದೆ. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಬಾಥ್ ವಾಲ್ಟರ್ (1891-1957) 1954
Bothe , Walther
ಜರ್ಮನಿ-ಭೌತಶಾಸ್ತ್ರ -ನ್ಯೂಟ್ರಾನ್ ಪ್ರೋಟಾಗಳನ್ನು ಗುರುತಿಸಿದಾತ.
ಮೊದಲ ಜಾಗತಿಕ ಯುದ್ದದಲ್ಲಿ ,ಯುದ್ದ ಕೈದಿಯಾಗಿದ್ದ ವಾಲ್ಟರ್ ಬರ್ಲಿನ್ನಲ್ಲಿ ಪ್ಲಾಂಕ್ನ ಶಿಷ್ಯನಾಗಿದ್ದನು. 1925ರಲ್ಲಿ ಸಂಶೋಧನೆಗೆ ಇಳಿಯುವ ಮುನ್ನ ವಾಲ್ಟರ್ ಮೂರು ಜರ್ಮನ್ ವಿಶ್ವ ವಿದ್ಯಾಲಯಗಳಲ್ಲಿ ಬೋಧಕನಾಗಿದ್ದನು. ಗೀಗರ್ ಜೊತೆ ಸೇರಿ ವಾಲ್ಟರ್ , ಕಾಂಪ್ಟನ್ ಪರಿಣಾಮವನ್ನು ಅಭ್ಯಸಿಸತೊಡಗಿದನು. ಪ್ರತ್ಯೇಕ ಸಂಘಟನೆಗಳಲ್ಲಿ ಉದ್ಬವಗೊಂಡ ಒಂದು ಎಲೆಕ್ಟ್ರಾನ್ ಹಾಗೂ ಪ್ರೋಟಾನ್ಗಳನ್ನು ಕುರಿತಾಗಿ ಅಧ್ಯಯನ ಮಾಡಲು, ಪ್ರಾರಂಭಿಸಿದ, ವಾಲ್ಟರ್ ಅದಕ್ಕಾಗಿ ಹೊಸ ವಿಧಾನವೊಂದನ್ನು ರೂಪಿಸಿದನು. ಇದರ ಫಲಶೃತಿಯಾಗಿ ವಿಕಿರಣ ಅಲೆಯಂತೆ ವರ್ತಿಸುವುದೆಂದು ಖಚಿತಗೊಂಡಿತು. 1929ರಲ್ಲಿ ಇದೇ ಮಾದರಿಯಲ್ಲಿ ವಿಶ್ವ ಕಿರಣಗಳನ್ನು ಅಭ್ಯಸಿಸಿ, ಅವುಗಳು ಆವರೆಗೆ ನಂಬಿದಂತೆ ಕೇವಲ ಗಾಮಾ ಕಿರಣಗಳಿಂದಾಗಿರದೆ, ಭಾರದ ಇತರ ಕಣಗಳನ್ನು ಹೊಂದಿರುವುವೆಂದು ಸಾಧಿಸಿ ತೋರಿಸಿದನು. 1930ರಲಿ ಗೀಸೆಸ್ನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾದ ವಾಲ್ಟರ್ ಬೆರಿಲಿಯಂನ್ನು ಆಲ್ಫಾ ಕಣಗಳಿಂದ ತಾಡಿಸಿದಾಗ, ಹೊಸ ಬಗೆಯ ಆವಿಷ್ಟರಹಿತ ಕಣಗಳು ಉತ್ಸರ್ಜನೆಯಾಗುವುದನ್ನು ತೋರಿಸಿದನು. ಮುಂದೆ 1932ರಲ್ಲಿ ಚಾಡ್ವಿಕ್ ಆವಿಷ್ಟರಹಿತ ಕಣಗಳು ಅಣುವಿನ ಬೀಜಗಳಲ್ಲಿರುವ ನ್ಯೂಟ್ರಾನ್ ಗಳೆಂದು ತೋರಿಸಿದನು. ಎರಡನೇ ಜಾಗತಿಕ ಯುದ್ದದಲ್ಲಿ ಬೈಜಿಕ ಶಕ್ತಿಯ (Nuclear Power )ಬಗೆಗೆ ಹಲವಾರು ಸಂಶೋಧನೆ ಕೈಗೊಂಡಿದ್ದ ವಾಲ್ಟರ್, 1954ರಲಿ ನೊಬೆಲ್ ಪುರಸ್ಕಾರವನ್ನು ಹಂಚಿಕೊಂಡನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಪಾಲಿಕಾರ್ಪ್, ಕುಷ್ಕ್ (1911-1993) 1955
Polykarp , Kusch
ಜರ್ಮನಿ-ಅಸಂಸಂ -ಭೌತಶಾಸ್ತ್ರ-ಅಣ್ವಯಿಕ ದೂಲ ವಿಧಾನದಲ್ಲಿ ಜೈವಿಕ ಅಣುಗಳ ರಾಚನಿಕ ಅಧ್ಯಯನದ ಮುಂಚೂಣಿಗ.
ಪಾಲಿಕಾರ್ಪ್ 26 ಜನವರಿ 1911ರಂದು ಬ್ಲಾಕೆನ್ಬರ್ಗ್ನಲ್ಲಿ ಜನಿಸಿದನು. ಈತ ಒಂದು ವರ್ಷದವನಿರುವಾಗ ಈತನ ತಂದೆ ಅಸಂಸಂಗಳಿಗೆ ಬಂದು ನೆಲೆಸಿದನು. ಆರಂಭದಲ್ಲಿ ಪಾಲಿಕಾರ್ಪ್ ಆಸಕ್ತಿಗಳು ರಸಾಯನಶಾಸ್ತ್ರದಲ್ಲಿದ್ದವು. ಪದವಿಗಾಗಿ ಕ್ಲೀವ್ಲ್ಯಾಂಡ್ನ ಕೇಸ್ ಇನ್ಸ್ಟಿಟ್ಯೂಟ್’ ಆಫ್ ಟೆಕ್ನಾಲಜಿ ಸೇರಿದ ನಂತರ ಭೌತಶಾಸ್ತ್ರಕ್ಕೆ ಬದಲಾಗಿ 1931ರಲ್ಲಿ ಪದವಿ ಗಳಿಸಿದನು. ಇಲಿನಾಯ್ ವಿಶ್ವವಿದ್ಯಾಲಯದಿಂದ 1936ರಲ್ಲಿ ಡಾಕ್ಟರೇಟ್ ಗಳಿಸಿದನು. ಪಾಲಿಕಾರ್ಪ್ ದೃಗ್ ಅಣ್ವಯಿಕ ರೋಹಿತದರ್ಶಕಶಾಸ್ತ್ರ ಮತ್ತು ದ್ರವ್ಯ ರೋಹಿತಶಾಸ್ತ್ರಗಳಲ್ಲಿ ವಿಶೇಷ ಪರಿಣಿತಿ ಹೊಂದಿದ್ದನು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಪಾಲಿಕಾರ್ಪ್ ಸೂಕ್ಷ್ಮತರಂಗ ಜನಕಗಳ ಸಂಶೋಧನೆಯಲ್ಲಿ ನಿರತನಾಗಿದ್ದನು. 1949ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯ ಸೇರಿ ಐ.ಐ.ರಬಿಯ ಸಾಂಗತ್ಯದಲ್ಲಿ ಅಣ್ವಯಿಕ ದೂಲ (Molecular Beam) ವಿಧಾನ ಬಳಸಿ ರಾಸಾಯನಿಕಗಳ ರಾಚನಿಕ ಸ್ವರೂಪ ನಿರ್ಧರಿಸಿದನು. ಮುಂದೆ ಅಣ್ವಯಿಕ ದೂಲ ವಿಧಾನ ರಸಾಯನ ಮತ್ತು ಜೀವಶಾಸ್ತ್ರದ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿತು. ಈ ದಿಶೆಯಲ್ಲಿ ನೀಡಿದ ಗಮನಾರ್ಹ ಕಾಣಿಕೆಗಳಿಗಾಗಿ ಪಾಲಿಕಾರ್ಪ್ 1955ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ವಿಲ್ಲೀಸ್, ಯುಜೀನ್ ಲ್ಯಾಂಬ್ (1913--) 1955
Willis , Eugene Lamb , Jr.
ಅಸಂಸಂ-ಭೌತಶಾಸ್ತ್ರ-
ವಿಲ್ಲೀಸ್ನ ತಂದೆ ಲಾಂಸ್ ಏಂಜಲೇಸ್ನಲ್ಲಿ ದೂರವಾಣಿ ಇಂಜಿನಿಯರಾಗಿದ್ದನು. 12 ಜುಲೈ 1913 ರಂದು ವಿಲ್ಲೀಸ್ ಜನಿಸಿದನು. ಮೊದಲ ಮೂರು ವರ್ಷಗಳ ಶಿಕ್ಷಣವನ್ನು ಓಕ್ಲ್ಯಾಂಡ್ ಹಾಗೂ ಕ್ಯಾಲಿಫ್ಲೋರ್ನಿಯಾಗಳಲ್ಲಿ ಪಡೆದ ವಿಲ್ಲೀಸ್ ನಂತರ ಕ್ಯಾಲಿಫ್ನ ಸಾರ್ವಜನಿಕ ಶಾಲೆ ಸೇರಿದನು. ಇದೇ ವಿಶ್ವವಿದ್ಯಾಲಯದಿಂದ ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ಪದವಿ ಗಳಿಸಿ, ಶಿಕ್ಷಣ ಮುಂದುವರೆಸಿ 1938ರಲ್ಲಿ ಡಾಕ್ಟರೇಟ್ ಗಳಿಸಿದನು. ಇದೇ ವರ್ಷ ಕೊಲಂಬಿಯಾ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಸೇರಿದನು. 1943ರಲ್ಲಿ ಸಹಾಯ ಉಪನ್ಯಾಸಕನಾಗಿ, 1945ರಲ್ಲಿ ಉಪ ಪ್ರಾಧ್ಯಾಪಕನಾದನು. 1943ರಿಂದ 1951ರವರೆಗೆ ಕೊಲಂಬಿಯಾ ರೇಡಿಯೇಷನ್ ಲ್ಯಾಬೋರೇಟರಿಯಲ್ಲಿ ಸಂಶೋಧನಾ ಸಹಾಯಕನಾಗಿದ್ದನು. 1951ರಲ್ಲಿ ಕ್ಯಾಲಿಫ್ಲೋರ್ನಿಯಾದ ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯ ಸೇರಿ, ಅಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. 1953, 54 ರಲ್ಲಿ ಹಾವರ್ಡ್ನಲ್ಲಿ ವಿಶೇಷ ಉಪನ್ಯಾಸಕನಾದನು. 1956ರಿಂದ 1962ರ ವರೆಗೆ, ಇಂಗ್ಲೆಂಡ್ ನ್ಯೂ ಕಾಲೇಜ್ನ ಫೆಲೊಹಾಗೂ ವೈಕ್ಹೆಮ್ ಪ್ರಾಧ್ಯಾಪಕನಾದನು. ಇದಾದ ನಂತರ ಯೇಲ್ “ವಿಶ್ವವಿದ್ಯಾಲಯದ್ಫಲ್ಲಿ ಸೇವೆ ಸಲ್ಲಿಸಿದನು. ನ್ಯೂಟ್ರಾನ್ ಹಾಗೂ ದ್ರವ್ಯದ ಅಚಿತಕ್ರಿಯೆ, ಬೈಜಿಕ ರಚನೆಗಳ ಕ್ಷೇತ್ರ ಸಿದ್ಧಾಂತ (Nuclear Field Theory) , ಬೀಟಾ ಶೈಥಿಲ್ಯ (Decay) ಸಿದ್ಧಾಂತ, ವಿಶ್ವ ಕಿರಣಗಳಲ್ಲಿ ವಿದಳನಗೊಂಡ ಅವಶೇಷಗಳ ಏರಿಳಿತ ಕ್ರಮ ಕ್ರಮಭಂಗ ಸಮಸ್ಯೆಗಳು ವಿಲ್ಲೀಸ್ನ ಆಸಕ್ತಿಯ ವಿಷಯಗಳಾಗಿದ್ದವು. ಅಧಿಕ ಸ್ಥಿರ ಪರಮಾಣುಗಳಿಂದ ಎಲೆಕ್ಟ್ರಾನ್ ಉತ್ಸರ್ಜನೆ, ಬೈಜಿಕ ಅನುರಣನ ಪ್ರಯೋಗಗಳಿಗೆ ಬೇಕಾದ ತಿದ್ದುಪಡಿ, ಮ್ಯಾಗ್ನೆಟಾನ್ ಆಂದೋಳಕಗಳ (Oscillator) ಸಿದ್ಧಾಂತ ಹಾಗೂ ವಿನ್ಯಾಸ ಸೂಕ್ಷ್ಮತರಂಗ ರೋಹಿತಶಾಸ್ತ್ರ ಸಿದ್ಧಾಂತದಲ್ಲಿ ವಿಲ್ಲೀಸ್ಗೆ ವಿಶೇಷ ಪರಿಣಿತಿಯಿದ್ದಿತು. ಜಲಜನಕ, ಹೀಲಿಯಂ, ಡ್ಯುಟೋರಿಯಂಗಳ ಸೂಕ್ಷ್ಮ ರಚನೆ ವೈದ್ಯುತ್ಗತೀಯ ಚೈತನ್ಯ ಮಟ್ಟಗಳ ಪಲ್ಲಟಗಳ ಸಿದ್ಧಾಂತಗಳಲ್ಲಿ ವಿಲ್ಲೀಸ್ ಗಮನಾರ್ಹ ಕಾಣಿಕೆ ನೀಡಿದ್ದಾನೆ. 1953ರಲ್ಲಿ ಅಮೆರಿಕನ್ ಅಕಾಡೆಮಿ ಆಫ್ ಆಟ್ರ್ಸ್ ಅಂಡ್ ಸೈನ್ಸ್ನಿಂದ ರಮ್ಫೋರ್ಡ್ ಪ್ರೀಮಿಯಂ ಪ್ರಶಸ್ತಿ ಗಳಿಸಿದನು. 1954ರಲ್ಲಿ ಪೆನ್ಸಿಲ್ವೇನಿಯಾದಿಂದ ಗೌರವ ಡಾಕ್ಟರೇಟ್ ಲಭಿಸಿತು. ಅಸಂಸಂದ ನ್ಯಾಷನಲ್ ಅಕಾಡೆಮಿ ಆಫ ಸೈನ್ಸ್ನ ಹಾಗೂ ಅಮೆರಿಕನ್ ಫಿಸಿಕಲ್ ಸೊಸೈಟಿಯ ಸದಸ್ಯನಾಗಿಯೂ ವಿಲಿಯಂ ಸೇವೆ ಸಲ್ಲಿಸಿದನು. 1955ರಲ್ಲಿ ವಿಲ್ಲೀಸ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಬ್ರಾಟೇನ್, ವಾಲ್ಟರ್ (ಹೌಸರ್) (1902-1987) -1956
Brattain , Walter (Houser)
ಅಸಂಸಂ- ಭೌತಶಾಸ್ತ್ರ-ಟ್ರಾನ್ಸಿಸ್ಟರ್’ನ ಸಹ ಉಪಜ್ಞೆಕಾರ.
ಚೀನಾದಲ್ಲಿ ಜನಿಸಿದ ವಾಲ್ಟರ್, ವಾಷಿಂಗ್ಟನ್ನಲ್ಲಿ ಬೆಳೆದನು. 1929ರಲ್ಲಿ ಮಿನ್ನೆಸೊಟ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಗಳಿಸಿದನು. ಅದೇ ವರ್ಷ ಸಂಶೋಧನೆಗಳಿಗೆ ಹೆಸರುವಾಸಿಯಾಗಿದ್ದು, ಟೆಲಿಪೆÇೀನನ ಉಪಜ್ಞೆಕಾರನಾದ ಗ್ರಹಾಂ ಬೆಲ್ನಿಂದ ಸ್ಥಾಪಿಸಲ್ಪಟ್ಟ ಬೆಲ್ ಲ್ಯಾಬೋರೇಟರೀಸ್ಗೆ ಸೇರಿದನು. ಅತಿವಾಹಕಗಳ (Super Conductors) ಮೇಲ್ಮೈ ಗುಣಗಳನ್ನು ಕುರಿತಾಗಿ ಅಧ್ಯಯನ ಪ್ರಾರಂಭಿಸಿ ಮೊದಲಿಗೆ ತಾಮ್ರದ ಆಕ್ಸೈಡಗಳನ್ನು ಬಳಸಿದನು ಆದರೆ ಎರಡನೇ ಜಾಗತಿಕ ಯುದ್ದದ ನಂತರ ನಿಜವಾದ ಅರೆವಾಹಕವಾದ ಸಿಲಿಕಾನ್ ಹಾಗೂ ಜರ್ಮೇನಿಯಂ ಸುಲಭವಾಗಿ ದೊರೆಯತೊಡಗಿದವು. ಇದರಿಂದ ಅರೆ ವಾಹಕಗಳ ಮೇಲಿನ ಪ್ರಯೋಗಗಳು ಖಚಿತವೂ ಸ್ಪಷ್ಟವೂ ಆಗತೊಡಗಿದವು. ವಾಲ್ಟರ್, ಬಾರ್ಡೆನ್ ಹಾಗೂ ಷಾಕ್ಲೆ ಜೊತೆ ಸೇರಿ, ಪ್ರಯೋಗ ಹಾಗೂ ಸಿದ್ಧಾಂತಗಳ ಸಮನ್ವಯದ ಹಾದಿಯಲ್ಲಿ, 1947ರಲ್ಲಿ ಬಿಂದು ಸಂಪರ್ಕ ಹೊಂದಿದ ಟ್ರಾನ್ಸಿಸ್ಟರ್ನ್ನು ಅಭಿವೃದ್ದಿಗೊಳಿಸಿದನು. ಇದಕ್ಕಾಗಿ ಜರ್ಮೇನಿಯಂ ಸ್ಪಟಿಕಗಳನ್ನು ¨ಳಸಲಾಗಿದ್ದಿತು. ಟ್ರಾನ್ಸಿಸ್ಟಾರ್’ನ ಅಭಿವೃದ್ದಿ ಇಡೀ ಮನುಕುಲದ ಚರಿತ್ರೆಯಲ್ಲಿ ಗಮನಾರ್ಹ ಬದಲಾವಣೆ ತಂದಿತು. ಟ್ರಾನ್ಸಿಸ್ಟರ್ ಆವಿಷ್ಕಾರವಾಗುವ ಮೊದಲು ಎಲೆಕ್ಟ್ರಾನ್ ಉಪಕರಣಗಳಲ್ಲಿ ಶಾಖೋರ್ಜಿತ (Thermionic) ಡೈಯೋಡ್ , ಟ್ರಯೋಡ್ ಕವಾಟಗಳು ಬಳಕೆಯಲ್ಲಿದ್ದವು. ಟ್ರಾನ್ಸಿಸ್ಟರ್ಗಳ ಇವುಗಳಿಗೆ ಹೋಲಿಸಿದಂತೆ ಹಲವು ಸಹಸ್ರ ಪಟ್ಟು ಕಿರಿದಾಗಿಯೂ , ಪರಿಷ್ಕೃತವಾಗಿಯೂ ಕಡಿಮೆ ಶಕ್ತಿ ಬಳಕೆ ಹಾಗೂ ಅತ್ಯುತ್ತಮ ದಕ್ಷತೆಯನ್ನು ಹೊಂದಿವೆ. ಅದಲ್ಲದೆ ಟ್ರಾನ್ಸಿಸ್ಟರ್ಗಳನ್ನು ಕಿರುಜಾಗದಲ್ಲಿ ಜೋಡಿಸಿ, ಬೃಹತ್ತಾಗಿದ್ದ ಎಲೆಕ್ಟ್ರಾನಿಕ್ ಮಂಡ¯ಗಳನ್ನು ಅಂಗೈ ಅಗಲಕ್ಕೆ ಇಳಿಸುವುದೂ ಸಾಧ್ಯವಾಯಿತು. ಇದು ಇಡೀ ಜಗತ್ತನ್ನು ನೋಡುವ ದೃಷ್ಟಿಯನ್ನು ಬದಲಾಯಿಸಿತು. ಪ್ರಯೋಗಶೀಲನಾಗಿದ್ದ ವಾಲ್ಟರ್, ವಿಟ್ಮನ್ ಕಾಲೇಜನ್ನು ಸೇರಿ ಬೈಜಿಕ ಪೆÇರೆಗಳ ಮೇಲ್ಮುಖಗಳ ಗುಣಗಳ ಅಧ್ಯಯನದಲ್ಲಿ ನಿರತನಾದನು. 1956ರಲ್ಲಿ ಬ್ರಾಟೀನ್, ಬಾರ್ಡೀನ್ ಹಾಗೂ ಷಾಕ್ಲೆಯವರೊಂದಿಗೆ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಜಾನ್ , ಬಾರ್ಡಿನ್, (1908--)1956 & 1972
John , Bardeen
ಅಸಸಂ-ಭೌತಶಾಸ್ತ್ರ- ಟ್ರಾನ್ಸಿಸ್ಟರ್ನ ಸಹ ಉಪಜ್ಞೆಕಾರ- ಬಿ.ಸಿ.ಎಸ್. ಅತಿವಾಹಕ ಸಿದ್ಧಾಂತಕ್ಕೆ ಕಾಣಿಕೆ ಸಲ್ಲಿಸಿದಾತ-ಎರಡು ಬಾರಿ ನೊಬೆಲ್ ಪ್ರಶಸ್ತಿ ಪಡೆದಾತ.
ಶೈಕ್ಷಣಿಕ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ಬಾರ್ಡೀನ್ ವಿಸ್ಕಾನ್ಸಿನ್ನಲ್ಲಿ ವೈದ್ಯುತ್ ಇಂಜಿನಿಯರಿಂಗ್ ಪದವಿ ಗಳಿಸಿದ್ದನು. ಮೊದಲ 3 ವರ್ಷ ಬಾರ್ಡಿನ್ ಭೂಭೌತಶಾಸ್ತ್ರಜ್ಞನಾಗಿ ಗಲ್ಪ್ ಸಂಶೋಧನಾ ಪ್ರಯೋಗಾಲಯದಲ್ಲಿ ದುಡಿದನು. ನಂತರ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿಗ್ನರ್ ಕೈಕೆಳಗೆ 1936ರಲ್ಲಿ ಗಣಿತೀಯ ಭೌತಶಾಸ್ತ್ರದಲ್ಲಿ ಪಿ.ಎಚ್.ಡಿ ಪಡೆದನು. ಇದಾದ ನಂತರ ಕೆಲಕಾಲ ಮಿನ್ನೆಸೊಟಾ ವಿಶ್ವವಿದ್ಯಾಲಯದಲ್ಲಿ ನಂತರ ನೇವಲ್ ಆರ್ಡ್ನ್ಯಾನ್ಸ್ ಲ್ಯಾಬೋರೇಟರಿಯಲ್ಲಿ ದುಡಿದನು. ಎರಡನೇ ಜಾಗತಿಕ ಯುದ್ದದ ಕೊನೆಯ ವೇಳೆಗೆ ಬಾರ್ಡಿನ್ ಬೆಲ್ ಪ್ರಯೋಗಾಲಯದ ಘನಸ್ಥಿತಿ ಭೌತಶಾಸ್ತ್ರದ ಗುಂಪಿಗೆ ಸೇರಿದನು. ಬಾರ್ಡೀನ್ ಮಹತ್ತರವಾದ ಕಾರ್ಯಗಳು ಇಲ್ಲಿಂದ ಪ್ರಾರಂಭವಾಗಿ ಅವನು 1951ರಲ್ಲಿ ಇಲಿನಾಯಿಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಸೇರುವವರೆಗೆ ಅವ್ಯಾಹತವಾಗಿ ಮುಂದುವರೆದವು. ಬಾರ್ಡೀನ್, ಬ್ರಾಟೇನ್ ಹಾಗೂ ಷಾಕ್ಲೆ ಜೊತೆ ಸೇರಿ 1956ರ ನೊಬೆಲ್ ಪಾರಿತೋಷಕವನ್ನು ಬಿಂದು ಸಂಪರ್ಕ ಟ್ರಾನ್ಸಿಸ್ಟರ್ ಅಭಿವೃದ್ದಿಗಾಗಿ ಹಂಚಿಕೊಂಡನು. ಅದಲ್ಲದೆ 1972ರಲ್ಲಿ ಮತ್ತೊಮ್ಮೆ ಕೂಪರ್ ಹಾಗೂ ಷ್ರೀಫರ್ ಜೊತೆ ಅಲೆವಾಹಕತ್ವವನ್ನು ಕುರಿತಾಗಿ ಮಂಡಿಸಿದ ಸಿದ್ಧಾಂತಕ್ಕಾಗಿ ನೊಬೆಲ್ ಪಾರಿತೋಷಕವನ್ನು ಎರಡನೇ ಬಾರಿಗೆ ಪಡೆದನು. ಈ ಸಿದ್ಧಾಂತ ಈಗ ಬಾರ್ಡೀನ್ ಕೂಪರ್ ಷ್ರೀಫರ್ (ಬಿ.ಸಿ.ಎಸ್ ಸಿದ್ಧಾಂತ) ಸಿದ್ಧಾಂತವೆಂದೇ ಖ್ಯಾತ. ಬಾರ್ಡೀನ್ ಭೌತಶಾಸ್ತ್ರದಲ್ಲಿ ಎರಡು ಬಾರಿ ನೊಬೆಲ್ ಪಾರಿತೋಷಕ ಪಡೆದ ಮೊದಲಿಗ.1911ರಲ್ಲಿ ಕ್ಯಾಮೆರ್ಲಿಂಗ್ ಒನ್ನೆಸ್ ಅತಿವಾಹಕತ್ವವನ್ನು ಅನಾವರಣಗೊಳಿಸಿದ್ದರು. 150ಕೆ ಗಿಂತ ಕಡಿಮೆ ಉಷ್ಣತೆಯಲ್ಲಿ ಲೋಹವೊಂದು ತನ್ನೆಲ್ಲಾ ಕಾಂತ ಕ್ಷೇತ್ರವನ್ನು ಉಚ್ಛಾಟಿಸಿ , ವಿದ್ಯುತ್ ಪ್ರವಾಹಗಳನ್ನು ಕಾಯ್ದು ಕೊಳ್ಳುತ್ತದೆಯಲ್ಲದೆ ಶೂನ್ಯ ಪ್ರತಿರೋಧ ಸ್ಥಿತಿಯಲ್ಲಿರುತ್ತದೆ. 1950ರಲ್ಲಿ ನಡೆಸಿದ ಸಂಶೋಧನೆಗಳಿಂದ ಯಾವುದೇ ಲೋಹ ಅತಿವಾಹಕದಂತೆ ವರ್ತಿಸಲು ಇರಬೇಕಾದ ಗರಿಷ್ಟ ತಾಪಮಾನ ಆ ಲೋಹದ ಪರಮಾಣು ದ್ರವ್ಯರಾಶಿಗೆ ವಿಲೋಮವಾಗಿರುತ್ತದೆಯೆಂದು ತಿಳಿದು ಬಂದಿತು.ಇದನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ ಬಾರ್ಡೀನ್ ಲೋಹದ ಪರಮಾಣು ಜಾಲಂಧ್ರ (Lattice) ಲೋಹದಲ್ಲಿ ವಿದ್ಯುತ್ ವಾಹಕವಾಗಿರುವ ಎಲೆಕ್ಟ್ರಾನ್ಗಳೊಂದಿಗೆ ಅಂತ:ಕ್ರಿಯೆಗೊಳ್ಳುವುದಎಂದ ಹೀಗಾಗುತ್ತದೆಯೆಂದು ಪ್ರತಿಪಾದಿಸಿದನು. ಕೂಪರ್ 1956ರಲ್ಲಿ ಇಲಿನಾಯ್ ವಿಶ್ವವಿದ್ಯಾಲಯದಲ್ಲಿ ಹಲವಾರು ಅಧ್ಯಯನಗಳನ್ನು ಕೈಗೊಂಡು , ಎಲೆಕ್ಟ್ರಾನ್ಗಳು ತಮ್ಮೊಂಳಗೆ ತಾವೇ ದುರ್ಬಲವಾಗಿ ಆಕರ್ಷಿತಗೊಂಡು ತಮ್ಮ ಸುತ್ತಲಿನ ಲೋಹ ಜಾಲಂಧ್ರವನ್ನು ವಿರೂಪಗಳಿಸುವವೆಂದೂ ಸಾಧಿಸಿದನು. ಇಂತಹ ವಿದ್ಯಾಮಾನ ಜರುಗುವಾಗ, ಎಲೆಕ್ಟ್ರಾನ್ಗಳು ಜೋಡಿಗೊಳ್ಳುತ್ತವೆ. ಅಂತಹ ಜೋಡಿಯನ್ನು ಕೂಪರ್-ಜೋಡಿಗಳೆನ್ನುತ್ತಾರೆ. ಬಾರ್ಡೀ£–ಕೂಪರ್ ಹಾಗೂ ಷ್ರಿಫರ್ ಇನ್ನು ಮುಂದುವರೆದು ಇಂತಹ ಹಲವಾರು ಜೋಡಿಗಳು ರೂಪುಗೊಂಡು, ಅತಿವಾಹಕತೆಗೆ ಕಾರಣವಾಗುತ್ತವೆ ಎಂದು ತೋರಿಸಿದರು. ಬಿ.ಸಿ.ಎಸ್. ಸಿದ್ಧಾಂತ , ಅತಿವಾಹಕತೆಯತ್ತ ಗಂಭೀರ ನೋಟ ಹರಿಸುವಂತೆ ಮಾಡಿತಲ್ಲದೆ, ಸೂಕ್ಶ್ಮಾತಿಸೂಕ್ಷ್ಮ ಸ್ಥಿತಿಯಲ್ಲಿ , ಪರಮಾಣುವಿನ ಅಂತರಂಗದಲ್ಲಿ ಜರುಗುವ ಕ್ವಾಂಟಂ ಕ್ರಿಯೆ ಹೇಗೆ ಬಾಹ್ಯದಲ್ಲಿ ಎದ್ದು ಕಾಣುವಂತಹ, ಅತಿವಾಹಕತೆಯಂತಹ ಸ್ಥಿತಿಗೆ ಕಾರಣವಾಗಬಲ್ಲುದೆಂದು ಸ್ಪುಟಗೊಳಿಸಿತು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಷಾಕ್ಲೆ , ವಿಲಿಯಂ ಬ್ರಾಡ್’ಫೋರ್ಡ್ (1910-1989) 1956
Shockley , William Bradford
ಅಸಂಸಂ-ಭೌತಶಾಸ್ತ್ರ- ಟ್ರಾನ್ಸಿಸ್ಟರ್ ಉಪಜ್ಞೆಕಾರ.
ಷಾಕ್ಲೆಯ ತಂದೆ ತಾಯಿಗಳಿಬ್ಬರೂ ಗಣಿಗಾರಿಕೆ ಇಂಜಿನಿಯರಿಂಗ್ಗಳಾಗಿದ್ದರು. ಷಾಕ್ಲೆ ,ಲಂಡನ್ನಲ್ಲಿ ಜನಿಸಿದನು. ಕ್ಯಾಲಿಪೋರ್ನೀಯಾ ಹಾಗೂ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ನಲ್ಲಿ ವ್ಯಾಸಂಗ ಮಾಡಿದನು. 1936ರಿಂದ ಬೆಲ್ ಪ್ರಯೋಗಾಲಯಗಳಲ್ಲಿ ಕೆಲಸಕ್ಕೆ ಸೇರಿದನು. 1942ರಿಂದ 1944ರ ಅವಧಿಯಲ್ಲಿ ಅಸಂಸಂಗಳ ಜಲಾಂತರ್ಗಾಮಿ ವಿರೋಧಿ ಯುದ್ದ ಸಂಶೋಧನೆಯಲ್ಲಿ ಕೆಲಸ ಮಾಡಿದನು. ಎರಡನೇ ಜಾಗತಿಕ ಯುದ್ದದ ನಂತರ, ಬೆಲ್ ಪ್ರಯೋಗಾಲಯಗಳಿಗೆ ಮರಳಿ ಬಾರ್ಡೀನ್, ಬ್ರಾಟೀನ್ರವರ ಸಹಯೋಗದಲ್ಲಿ ನಿರ್ವಾತ ಕೊಳವೆಗಳಿಗೆ ಬದಲು ಅರೆವಾಹಕಗಳನ್ನು ಬಳಸಲು ಯತ್ನಿಸಿದನು. ಸೀಸದ ಸಲ್ಫೇಡ್ ಹಾಗೂ ಆ ಬಗೆಯ ಸ್ಪಟಿಕಗಳು, ವಿದ್ಯುತ್ ಪ್ರವಾಹವನ್ನು ಒಂದೇ ದಿಕ್ಕಿನಲ್ಲಿ ಹರಿಯಲು ಬಿಟ್ಟು ಕವಾಟಗಳಂತೆ ವರ್ತಿಸುತ್ತವೆ. ಬ್ರಿಟನ್ನಲ್ಲಿ ಜೆ.ಎ. ಫೆ್ಲಮಿಂಗ್ನ ಡಯೋಡ್ಗಳು ಬಳಕೆಯಲ್ಲಿದ್ದವು. ಷಾಕ್ಲೆ ಹಾಗೂ ಸಹೋದ್ಯೋಗಿಗಳ ಸಂಶೋಧನೆ, ಜರ್ಮೇನಿಯಂ ಉತ್ತಮ ಅರೆವಾಹಕವೆಂದು , ಅದರಲ್ಲಿನ ಕಲ್ಮಷಗಳ ಪ್ರಮಾಣಕ್ಕನುಗುಣವಾಗಿ,ಅದರ ವಾಹಕತೆ ಬದಲಾಗುವುದೆಂದು ಗುರುತಿಸಿದರು. ಇದರ ಮುಂದುವರಿದ ಸಂಶೋಧನೆಯ ಫಲವಾಗಿ ಬಿಂದು ಸಂಪರ್ಕ (Point Contact) ಟ್ರಾನ್ಸಿಸ್ಟರ್’ಗಳು 1947ರಲ್ಲಿ ನಿರ್ಮಾಣಗೊಂಡವು. ಇದಾದ ಒಂದು ತಿಂಗಳಲ್ಲೇ ಷಾಕ್ಲೆ, ವಿಭಿನ್ನ ಸಂಸ್ಕರಿತ ಸಿಲಿಕಾನ್ ಸ್ಪಟಿಕಗಳ ಸಂಧಿ ಟ್ರಾನ್ಸಿಸ್ಟರ್ ತಯಾರಿಸಿದನು. ಇಂತಹ ಘನಸ್ಥಿತಿಯ ಟ್ರಾನ್ಸಿಸ್ಟರ್ಗಳು ವಿದ್ಯುತ್ನ್ನು ವರ್ಧನೆಗೊಳಿಸುವಂತೆ ಶೋಧಿಸಿ ಕವಾಟದಂತೆಯೂ ವರ್ತಿಸುತ್ತವೆ. ಇವುಗಳಿಂದ ಬಹು ಕಿರಿದಾದ, ವಿದ್ಯುತ್ ಮಂಡಲಗಳ ರಚನೆ ಸಾಧ್ಯವಾಯಿತು. ಇವುಗಳಿಂದಾಗಿಯೇ ಎಲೆಕ್ಟ್ರಾನ್ ಕ್ರಾಂತಿ ಜರುಗಿ, ನಾಗರಿಕ ಜಗತ್ತಿನ ಸ್ವರೂಪವೇ ಬದಲಾಯಿತು. ರೇಡಿಯೋ , ದೂರದರ್ಶನ, ಗಣಕ,ನೂರಾರು ಬಗೆಯ ಸಾಧನಗಳು ಹೊರಬಂದವು. 1956ರಲ್ಲಿ ಷಾಕ್ಲೆ, ಬಾರ್ಡೀನ್ ಮತ್ತು ಬ್ರಾಟೇನ್ ನೊಬೆಲ್ ಪ್ರಶಸ್ತಿ ಪಡೆದನು. 1963ರಿಂದ ಷಾಕ್ಲೆ ,ಸ್ಟ್ಯಾನ್ ಪೋರ್ಡ್ನಲ್ಲಿ ಇಂಜಿನಿಯರಿಂಗ್ ಪ್ರಾಧ್ಯಾಪಕನಾದನು. 1965ರ ನಂತರ ಬುದ್ಧ್ದಿವಂತಿಕೆ, ಅನುವಂಶಿಕವೆಂದು ಕೆಲವು ಜನಾಂಗಗಳ ಜನಸಂಖ್ಯೆ ಅಭಿವೃದ್ದಿ ಮಾನವ ಕುಲದಲ್ಲಿ ಬುದ್ದಿವಂತಿಕೆಯನ್ನು ಕುಗ್ಗಿದುವುದೆಂಬ ಹೇಳಿಕೆ ನೀಡಿ ಸಾರ್ವಜನಿಕ ಟೀಕೆಗೆ ತುತ್ತಾದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಲೀ, ಸುಂಗ್ ಡೆವೊ (1926--) 1957
Lee ,Tsung Dao
ಚೀನಾ-ಅಸಂಸಂ-ಸೈದ್ಧಾಂತಿಕ ಭೌತಶಾಸ್ತ್ರ- ಕ್ಷೀಣ ಬೈಜಿಕ ಕ್ರಿಯೆಗಳಲ್ಲಿ (Weak Nuclear Interactions) ಸಾಮ್ಯತೆ (Parity) ಸಂರಕ್ಷಿಸಲ್ಪಡದೆಂದು ತೋರಿಸಿದಾತ.
ಲೀ ಸುಂಗ್ ಚೀನಾದಲ್ಲಿ ಭೌತಶಾಸ್ತ್ರದಲ್ಲಿ ಪದವಿ ಗಳಿಸಿದನು. ಎರಡನೇ ಜಾಗತಿಕ ಯುದ್ದದಲ್ಲಿ ಜಪಾನ್, ಚೀನಾದ ಮೇಲೆ ಆಕ್ರಮಣವೆಸಗಿದುದರಿಂದ ಲೀಯ ಅಧ್ಯಯನಕ್ಕೆ ತಡೆಯುಂಟಾಯಿತು. ಹೀಗಾಗಿ ಲೀ ಚೀನಾದ ಮತ್ತೊಂದು ದೂರ ಪ್ರಾಂತಕ್ಕೆ ಪಲಾಯನಗೈದನು. 1946ರಲ್ಲಿ ಅನುದಾನ ಪಡೆದು, ಖಭೌತಶಾಸ್ತ್ರದಲ್ಲಿ ಫರ್ಮಿಯ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ಅವಕಾಶ ಗಳಿಸಿದನು. ಪ್ರಿನ್ಸ್’ಟನ್, ಕೊಲಂಬಿಯಾಗಳಲ್ಲಿಕೆಲಸ ಮಾಡಿದನು. ವೈದ್ಯುತ್ ಕಾಂತೀಯ ಹಾಗೂ ಪ್ರಬಲ ಬೈಜಿಕ ಅಂತಕ್ರಿಯೆಗಳು ಸ್ಥೂಲದಲ್ಲಿರುವಂತೆ, ಸೂಕ್ಷ್ಮದಲ್ಲೂ ಒಂದೇ ಬಗೆಯದಾಗಿದ್ದು ಸರ್ವ ಸಮಂಜಸವಾಗಿರುತ್ತದೆ. 1956ರಲ್ಲಿ ಯಾಂಗ್ ಜೊತೆಗೂಡಿ ಲೀ ಇದು ಕ್ಷೀಣ ಬೈಜಿಕ ಕ್ರಿಯೆಗಳಿಗೆ ಅನ್ವಯವಾಗುವುದಿಲ್ಲವೆಂದು ತೋರಿಸಿದನು. ಇದಕ್ಕಾಗಿ ಇವರು ಬೀಜದ ಬೀಟಾ ಶ್ಶೆಥಿಲ್ಯವನ್ನು (Decay) ಪರಿಗಣಿಸಿದರು. ಹಲವಾರು ಪ್ರಯೋಗಗಳನ್ನು ಪರಿಶೋಧನೆಗಾಗಿ ರೂಪಿಸಿದರು. ಈ ಪ್ರಯೋಗಗಳನ್ನು ಪರಾಮರ್ಶಿಸಿ, ಲೀ ಹಾಗೂ ಯಾಂಗ್ ತಮ್ಮ ಹೇಳಿಕೆ ನಿಜವೆಂದು ಸಾರಿದರು. ಅತಿ ಹಗುರವಾದ ತಟಸ್ಥ ಕಣವನ್ನು ನ್ಯೂಟ್ರಿನೋ ಎನ್ನುತ್ತಾರೆ. ಲೀ ಹಾಗೂ ಯಾಂಗ್ ಎಲೆಕ್ಟ್ರಾನ್ನ ಉತ್ಸರ್ಜನೆಯಲ್ಲಿ ಹೊಮ್ಮಿದ ನ್ಯೂಟ್ರಿನೋ , ಮ್ಯುಯಾನ್ನ ಉತ್ಸರ್ಜನೆಯಲ್ಲಿ ಹೊಮ್ಮುವ ನ್ಯೂಟ್ರಿನೋಗಿಂತ ವಿಭಿನ್ನವಾಗಿರುತ್ತದೆಯೆಂದು ಹೇಳಿದರು. 1961ರಲ್ಲಿ ಇದನ್ನು ಪ್ರಯೋಗಗಳಿಂದ ಖಚಿತಪಡಿಸಲಾಯಿತು. ಕ್ಷೀಣ ಬೈಜಿಕ ಬಲ ಹೊಂದಿದ ಡಬ್ಲ್ಯೂ -ಬೊಸಾನ್ನ ಅಸ್ತಿತ್ವವನ್ನು ಲೀ ಹಾಗೂ ಯಂಗ್ ಮುನ್ನುಡಿದರು. ನಂತರ ಇದು ಪ್ರಯೋಗಗಳಿಂದ ಖಚಿತಗೊಂಡಿತು. 1977ರಲ್ಲಿ ಲೀ ಹಾಗೂ ಯಾಂಗ್ ನೊಬೆಲ್ ಪುರಸ್ಕೃತರಾದ ಮೊದಲ ಚೀನಿಯರಾದರು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಯಾಂಗ್, ಷೆನ್ನಿಂಗ್ (1922--) 1957
Yang , Chen Ning
ಚೀನಾ-ಅಸಂಸಂ-ಭೌತಶಾಸ್ತ್ರ- ಕ್ಷೀಣ ಬೈಜಿಕ ಕ್ರಿಯೆಗಳಲ್ಲಿ ಕ್ರಿಯಾ ಸಾಮ್ಯಾತೆ ಸಂರಕ್ಷಿಸಲ್ಪಡದೆಂದು ತೋರಿಸಿದಾತ.
ಯಾಂಗ್ನ ತಂದೆ ಗಣಿತದ ಪ್ರಾಧ್ಯಾಪಕನಾಗಿದ್ದನು. ಚೀನಾದ ಕುನ್ಮಿಂಗ್ನಲ್ಲಿ ಶಿಕ್ಷಣ ಪೂರೈಸಿದ ಯಾಂಗ್, ಅಸಂಸಂದಲ್ಲಿ ಟೆಲ್ಲರ್ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಗಳಿಸಲು ಚಿಕಾಗೋಗೆ ಹೋದನು. 1949ರಲ್ಲಿ ಪ್ರಿನ್ಸ್’ಟನ್ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡಿ ಸಂಸ್ಥೆ ಸೇರಿದನು. 1966ರಲ್ಲಿ ನ್ಯೂಯಾರ್ಕ್ ರಾಜ್ಯದ ವಿಶ್ವವಿದ್ಯಾಲಯದಲ್ಲಿ ಸೈದ್ಧಾಂತಿಕ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. ಯಾಂಗ್, ಲೀ ಜೊತೆಗೆ ನಡೆಸಿದ ಕೆಲಸಗಳಿಂದ ಭೌತಶಾಸ್ತ್ರದ ಸೈದ್ಧಾಂತಿಕ ಚಿಂತನೆಗಳಿಗೆ, ಮಹಾನ್ ತಿರುವು ದಕ್ಕಿತು,. ಭೌತಶಾಸ್ತ್ರದ ನಿಯಮಗಳು ಬಿಂಬ, ಪ್ರತಿಬಿಂಬಗಳೆರಡರಲ್ಲಿ ಒಂದೇ ರೀತಿಯಲ್ಲಿದ್ದು ಕಾರ್ಯ ಸಾರೂಪ್ಯತೆ ಸಂರಕ್ಷಿಸಲ್ಪಡುತ್ತದೆಯೆಂದು ನಂಬಲಾಗಿದ್ದಿತು. ಯಾಂಗ್ ಹಾಗೂ ಲೀ 1956ರಲ್ಲಿ ಕ್ಷೀಣ ಬೈಜಿಕ ಬಲಗಳಿಗೆ ಇದು ಅನ್ವಯವಾಗುವುದಿಲ್ಲ ಎಂಬ ಮುನ್ಸೂಚನೆ ನೀಡಿದರು. ವು ಹಲವಾರು ಕ್ಲಿಷ್ಟ ಪ್ರಯೋಗಗಳಿಂದ ಇದು ನಿಜವೆಂದು ತೋರಿಸಿದಳು. 1957ರಲ್ಲಿ ಯಾಂಗ್ ಹಾಗೂ ಲೀ ನೊಬೆಲ್ ಪ್ರಶಸ್ತಿ ಗಳಿಸಿದರು. ಯಾಂಗ್, ಆರ್.ಎಲ್.ಮಿಲ್ಸ್ ಜೊತೆಗೂಡಿ ಅಬೆಲಿಯನೇತರ ಗಾಜ್ ಸಿದ್ಧಾಂತ ರೂಪಿಸಿದರು. ಇದು ಯಾಂಗ್-ಮಿಲ್ ಸಿದ್ಧಾಂತ ಎಂದು ಹೆಸರಾಗಿದೆ,. ಈ ಸಿದ್ಧಾಂತ ಕಣ ಭೌತಶಾಸ್ತ್ರ ಹಾಗೂ ಕ್ವಾಂಟಂ ಕ್ಷೇತ್ರಗಳಲ್ಲಿನ ವಿಭಿನ್ನ ಮಾರ್ಗವೆಂದು ಪರಿಗಣಿಸಲಾಗಿದೆ. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಚೆರೆಂಕೊವ್, ಪಾವೆಲ್ ಅಲೆಕ್ಸೆಯೆವಿಖ್ (1904-1990 ) 1958
Cherenkov , Pavel Alekseyevich
ರಷ್ಯಾ-ಭೌತಶಾಸ್ತ್ರ - ಚೆರೆಂಕೊವ್ ಪರಿಣಾಮ ಅನಾವರಣಗೊಳಿಸಿದಾತ.
ವೊರೊನೆಝ್ ರಾಜ್ಯ ವಿಶ್ವವಿದ್ಯಾಲಯದಿಂದ ಪದವೀಧರನಾದ ಚೆರೆಂಕೊವ್ , ಲೆಬೆಡೆವ್ನ್ ಭೌತಶಾಸ್ತ್ರದ ಸಂಶೋಧನ ಸಂಸ್ಥೆಯಲ್ಲಿ 1930ರಲಿ ವೃತ್ತಿ ಜೀವನ ಪ್ರಾರಂಭಿಸಿದನು. 1934ರಲ್ಲಿ ಚೆರೆಂಕೊವ್ ಮೊದಲ ಬಾರಿಗೆ ರೇಡಿಯಂ ಧಾತುವಿನ ವಿಕಿರಣಕ್ಕೊಳಗಾದ ನೀರು ನೀಲ ಕಿರಣಗಳನ್ನು ಉತ್ಪರ್ಜಿಸುವುದನ್ನು ಗಮನಿಸಿದನು. ಇದನ್ನು ಹಲವರು ಈ ಮೊದಲೇ ಗಮನಿಸಿದ್ದಾದರೂ ಅದು ಪ್ರದೀಪ್ತಿಯಿಂದ (Luminiance) ಹಾಗಾಗುವ್ಯದೆಂದು ಭಾವಿಸಿದ್ದರು.ಆದರೆ ಕೆಲ ಸಮಯದಲ್ಲಿ , ನಾನಾ ದ್ರಾವಣಗಳೂ ಈ ಪರಿಣಾಮಗಳನ್ನು ತೋರಿಸಿರುವನ್ನು ಅರಿತ ಚೆರೆಂಕೊವ್ ಇದಕ್ಕೆ ಪ್ರದೀಪ್ತಿ ಕಾರಣವಲ್ಲವೆಂದು ಅರಿತನು. ಈ ದಿಶೆಯಲ್ಲಿ ಸಂಶೋಧನೆ ನಡೆಸಿ ರೇಡಿಯಂನಿಂದ ಹೊರಹೊಮ್ಮುವ ಕ್ಷಿಪ್ರ ಎಲೆಕ್ಟ್ರಾನ್ (ಬೀಟಾ ಕಿರಣಗಳಿಂದ) ಬೆಳಕು ಧೃವೀಕೃತಗೊಳ್ಳುವ್ಯದರಿಂದ ಹೀಗಾಗುವುದೆಂದು ತೋರಿಸಿದನು. 1937ರಲ್ಲಿ ಐ.ಎಂ.ಫ್ರಾಂಕ್ ಹಾಗೂ ಎ.ಇ.ಟ್ಯಾಮ್ ಜೊತೆ ಸೇರಿ, ಈ ಪರಿಣಾಮಕ್ಕೆ ವಿವರಣೆ ನೀಡಿದನು. ಇವರ ಸಹ ಸಂಶೋಧನೆಯಿಂದ ಆವಿಷ್ಟಿತ ಕಣಗಳು (Charged Particles) ದ್ರವ ಹಾಗೂ ಘನ ಮಾಧ್ಯಮದಲ್ಲಿ ಆ ಮಾಧ್ಯಮದಲ್ಲಿನ ಬೆಳಕಿನ ವೇಗಕ್ಕಿಂತಲೂ ಅಧಿಕ ವೇಗದಲ್ಲಿ ಸಾಗುವುದಎಂದ ಬೆಳಕು ಧೃವೀಕೃತಗೊಳ್ಳುವುದೆಂದು ತಿಳಿಯಿತಲ್ಲದೆ, ಬೆಳಕಿನ ಧೃವೀಕರಣ ಹಾಗೂ ಧೃವೀಕರಣ ದಿಕ್ಕನ್ನು ಖಚಿತವಾಗಿ ನಿರ್ಧರಿಸುವುದು ಸಾಧ್ಯವಾಯಿತು. ಭಾರ ಜಲ ಹೊಂದಿರುವ ಯುರೇನಿಯಂ ಪ್ರತಿಕ್ರಿಯಾಕಾರಕದ (Reactor ) ತಿರುಳಿನಲ್ಲಿ ನೀಲಿ ದೀಪ್ತಿ ಹೊಮ್ಮಿ ಚೆರೆಂಕೊವ ಪರಿಣಾಮ ಎದ್ದು ಕಾಣುತ್ತದೆ. ಅಧಿಕ ಆವಿಷ್ಟಿತ ಕಣಗಳ ಪತ್ತೆಗೆ ಒಂಟಿ ಕಣಗಳ ಪತ್ತೆಗೆ ಚೆರೆಂಕೊವ್ ಪರಿಣಾಮ ನೆರವಿಗೆ ಬರುತ್ತದೆ. ಗಾಳಿಯಲ್ಲಿ ವಿಮಾನ ಶಬ್ಧಾತೀತ ವೇಗ ಗಳಿಸಿದಾಗ, ಆಘಾತದಲೆ ಹಾಗೂ ಸ್ಥನಿಕ ಮೊಳಗು Sonic Boom ) ಉಂಟಾಗುವ ಕ್ರಿಯೆಯನ್ನು ಚೆರೆಂಕೊವ್ ಪರಿಣಾಮ ಹೋಲುತ್ತದೆ. ಚೆರೆಂಕೊವ್ ಫ್ರಾಂಕ್ ಹಾಗೂ ಟ್ಯಾಮ್ 1958ರ ನೊಬೆಲ ಪ್ರಶಸ್ತಿ ಪುರಸ್ಕೃತರಾದರು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಐಗೊರ್, ಯೆವ್ಜೆನಿಯೆವಿಖ್ ತಮ್ (1895--) 1958
Igor, Yevgenyevich Tamm
ರಷ್ಯಾ- ಭೌತಶಾಸ್ತ್ರ- ಎಲೆಕ್ಟ್ರಾನ್ಗಳ ವಿಕಿರಣತ್ವ ವಿವರಿಸಿದಾತ.
ಐಗೊರ್ 8 ಜುಲೈ 1895ರಂದು ವ್ಲಾಡಿವೊಸ್ಟಾಕ್ನಲ್ಲಿ ಜನಿಸಿದನು. ಈತನ ತಂದೆ ಇಂಜಿನಿಯರಾಗಿ ಸೇವೆ ಸಲ್ಲಿಸುತ್ತಿದ್ದನು. ಮಾಸ್ಕೊ ವಿಶ್ವವಿದ್ಯಾಲಯದಿಂದ 1918ರಲಿ ಭೌತಶಾಸ್ತ್ರದ ಪದವಿ ಪಡೆದನು. ಉಪನ್ಯಾಸಕ, ಪ್ರಾಧ್ಯಾಪಕನಾಗಿ ಐಗೊರ್ ಸೇವೆ ಸಲ್ಲಿಸಿದನು. 1934 ರಿಂದ ಮಾಸ್ಕೋದ ಲೆಬೆಡೆವ್ ವಿಶ್ವವಿದ್ಯಾಲಯದ ಸೈದ್ಧಾಂತಿಕ ವಿಭಾಗದ ಮುಖ್ಯಸ್ಥನಾದನು 1920ರಿಂದ 1944ರವರೆಗೆ ಐಗೊರ್, ಮ್ಯಾಂಡೆಲ್ಸ್ಟ್ಯಾಮ್ನ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದನು. ಈತನ ಸಂಶೋಧನೆ ಸ್ಪಟಿಕ ದೃಗ್ಶಾಸ್ತ್ರ ,ಸಾಪೇಕ್ಷ ಸಿದ್ಧಾಂತ ಮತ್ತು ಘನ ಕಾಯಗಳಲ್ಲಿ ವಿಸರಿಸುವ ಬೆಳಕಿನ ಕ್ವಾಂಟಂ ಅಧ್ಯಯನಗಳಲಿ ಕೇಂದ್ರಕೃತವಾಗಿದ್ದವು. ಐಗೊರ್, ಐ.ಎಂ.ಫ್ರಾಂಕ್ ಸಹ ಯೋಗದಲ್ಲಿ ನಿರ್ದಿಷ್ಟ ಮಾಧ್ಯಮದಲ್ಲಿ ಬೆಳಕಿನ ವೇಗಕ್ಕಿಂತಲೂ ಅಧಿಕ ವೇಗ ಗಳಿಸಬಲ್ಲ ಎಲೆಕ್ಟ್ರಾನ್ಗಳ ವಿಕಿರಣತ್ವ ವಿವರಿಸುವ ಚೆರ್ನೆಂಕೊವ್ ಪರಿಣಾಮ ಹಾಗೂ ವಿಶ್ವ ಕಿರಣ ವೃಷ್ಟಿಯನ್ನು ಕುರಿತಾಗಿ ಸೈದ್ಧಾಂತಿಕ ಚಿಂತನೆ ನಡೆಸಿದನು. ಔಷ್ಣೀಯ ಬೈಜಿಕ (Theronuclear) ಕ್ರಿಯಾ ನಿಯಂತ್ರಣ ಕುರಿತಾಗಿ ಐಗೊರ್ ನಡೆಸಿದ ಸಂಶೋಧನೆಗಳು ಸಹ ಗಮನಾರ್ಹವಾಗಿವೆ. ಪ್ರಾಥಮಿಕ ಕಣಗಳನ್ನು ಮತ್ತು ನ್ಯೂಟ್ರಾನ್ ಕಾಂತೀಯ ಭ್ರಾಮ್ಯತೆ (Magnetic Moment) ವಿವರಿಸುವ ಕೃತಿಗಳನ್ನು ಐಗೊರ್ ರಚಿಸಿದ್ದಾನೆ. ಈ ಸಂಶೋಧನೆಗಳಿಗಾಗಿ ಐಗೊರ್ 1958ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಇಲ್ಯಾ ,ಮೈಖೆಲೋವಿಖ್ ಫ್ರಾಂಕ್ (1908-1990) 1958
Ilya , Michailovich Frank
ರಷ್ಯಾ-ಭೌತಶಾಸ್ತ್ರ- ಚೆರ್ನೆಂಕೊವ್ ಪರಿಣಾಮ ಅನಾವರಣಗೊಳಿಸಿದಾತ.
ಇಲ್ಯಾ 23 ಅಕ್ಟೋಬರ್ 1908ರಂದು ಮಾಸ್ಕೋದಲ್ಲಿ ಜನಿಸಿದನು. 1930ರಲ್ಲಿ ಮಾಸ್ಕೋ ವಿಶ್ವ ವಿದ್ಯಾಲಯದಿಂದ ವಿಜ್ಞಾನದಲ್ಲಿ ಪದವಿ ಪಡೆದನು. 1934ರಲ್ಲಿ ಚೆರ್ನೆಂಕೊವ್ ಆವಿಷ್ಟ ಕಣಗಳಿಂದ ಉತ್ಸರ್ಜಿತಗೊಂಡ ಬೆಳಕಿನ ವೇಗ ನೀರಿನಂತಹ ಪಾರದರ್ಶಕ ಮಾಧ್ಯಮಗಳಲ್ಲಿ ಸಾಧಾರಣ ಬೆಳಕಿನ ವೇಗಕ್ಕಿಂತಲೂ ಅಧಿಕವಾಗಿರುವುದನ್ನು ಅನಾವರಣಗೊಳಿಸಿದನು. ಇದು ಚೆರ್ನೆಂಕೊವ್ ಪರಿಣಾಮವೆಂದು ಹೆಸರಾಯಿತು. ಇದಕ್ಕೆ ಇಲ್ಯಾ ಮತ್ತು ಐಗೊರ್ ಸೈದ್ಧಾಂತಿಕ ವಿವರಣೆ ನೀಡಿದರು. ಇದರ ಆಧಾರದ ಮೇಲೆ ಅಧಿಕ ವೇಗ ಹೊಂದಿರುವ ಬೈಜಿಕ ಕಣಗಳನ್ನು ಪತ್ತೆ ಹಚ್ಚುವುದು ಸಾಧ್ಯವಾಯಿತು. ಇಲ್ಯಾನ ಈ ಸಾಧನೆಗಾಗಿ 1958ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಗಾಮಾ ಕಿರಣ, ನ್ಯೂಟ್ರಾನ್ ಕಣ ದೂಲಗಳ ಸಂಶೋಧನೆಯಲ್ಲೂ ಇಲ್ಯಾ ಪರಿಶ್ರಮಿಸಿದನು. 1944ರಲ್ಲಿ ಇಲ್ಯಾ ಮಾಸ್ಕೊ ವಿಶ್ವವಿದ್ಯಾಲಯದ ಭೌತಶಾಸ್ತ್ರದ ಮುಖ್ಯಸ್ಥನಾದನು. 1946ರಲ್ಲಿ ಸೋವಿಯತ್ ರಷ್ಯಾದ ಅಕಾಡೆಮಿ ಆಫ್ ಸೈನ್ಸಸ್ ಸದಸ್ಯನಾಗಿ ನೇಮಕಗೊಂಡನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಚೇಂಬರ್ಲೇನ್, ಓವೆನ್ (1920--) 1959
Chamberlain , Owen
ಅಸಂಸಂ -ಭೌತಶಾಸ್ತ್ರ -ಪ್ರತಿ ಪ್ರೋಟಾನ್ ಅನಾವರಣಗೊಳಿಸಿದಾತ.
ಡಾರ್ಮೌತ್ ಹಾಗೂ ಚಿಕಾಗೋದಲ್ಲಿ ವಿದ್ಯಾಭ್ಯಾಸ ಮಾಡಿದ ಚೇಂಬರ್ಲೇನ್ ಬರ್ಕ್ಲೆಯ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ 1958ರಲ್ಲಿ ನೇಮಕಗೊಂಡನು, 1989ರವರೆಗೆ ಇಲ್ಲಿಯೇ ಸೇವೆ ಸಲ್ಲಿಸಿದನು. ಎರಡನೇ ಜಾಗತಿಕ ಯುದ್ದದಲ್ಲಿ ಸಮಯದಲ್ಲಿ ಮ್ಯಾನ್ಹಟ್ಟನ್ನಲ್ಲಿ ಬೈಜಿಕಾಸ್ತ್ರ ತಯಾರಿಕಾ ಯೋಜನೆಯಲ್ಲಿ ಪಾಲ್ಗೊಂಡು , ಭಾರ ಧಾತುಗಳ ಹಠಾತ್ ಪರಮಾಣು ವಿದಳನದ (Atomic Fission) ಬಗ್ಗೆ ಸಂಶೋಧನಾ ಪ್ರಯುಕ್ತನಾದನು. ಯುದ್ದದ ನಂತರ , ಬರ್ಕ್ಲೆಯ ಕಣ ವೇಗೋತ್ಕರ್ಷಕಗಳಲ್ಲಿ ಕೆಲಸ ಮಾಡಿದ ಚೇಂಬರ್ಲೇನ್ ಸೆರ್ಗ್ರೆ ಹಾಗೂ ಇನ್ನಿತರ ಸಂಗಡಿಗರ ಜೊತೆಗೂಡಿ 1955ರಲ್ಲಿ ಪ್ರತಿ ಪ್ರೋಟಾನನ್ನು ಕಂಡು ಹಿಡಿದನು. ಇದು ಪ್ರೋಟಾನನಷ್ಟೇ ತೂಕವಿದ್ದು, ವಿದ್ಯುದಾವಿಷತೆಯಲ್ಲಿ ಅದಕ್ಕೆ ವಿರುದ್ದವಾಗಿರುತ್ತದೆ. 1926ರಲ್ಲೇ ಡಿರಾಕ್ ಸೈದ್ಧಾಂತಿಕವಾಗಿ ಪ್ರತಿ ಪ್ರೋಟಾನಗಳ ಅಸ್ತಿತ್ವವನ್ನು ಮುನ್ನಡಿದಿದ್ದನು. ಪ್ರತಿ ಪ್ರೋಟಾನನ್ನು ಕಂಡು ಹಿಡಿದಿದ್ದಕ್ಕಾಗಿ ಸೆಗ್ರೆ ಜೊತೆ ಸೇರಿ ಚೆಂಬರ್ಲೇನ್ 1959ರ ನೊಬೆಲ್ ಪ್ರಶಸ್ತಿ ಪಡೆದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಸೆಗ್ರೆ ಎಮಿಲಿಯೋ ಜಿನೊ (1905-1989) 1959
Segre , Emillio Gino
ಇಟಲಿ-ಅಸಂಸಂ ಭೌತಶಾಸ್ತ್ರ-ಪ್ರತಿ ಪ್ರೋಟಾನ್ ಅನಾವರಣಗೊಳಿಸಿದಾತ.
ಸೆಗ್ರೆ, ರೋಮ್ನಲ್ಲಿ ಇಂಜಿನಿಯರಿಂಗ್ ಪದವಿಗೆ ಸೇರಿದನಾದರೂ 1927ರಲ್ಲಿ ಭೌತಶಾಸ್ತ್ರ ವಿಭಾಗಕ್ಕೆ ಬದಲಾಯಿಸಿಕೊಂಡನು. ಇಲ್ಲಿಫರ್ಮಿ ಕೈಕೆಳಗೆ ಮೊದಲ ಸಂಶೋಧನಾ ವಿದ್ಯಾರ್ಥಿಯಾದನು. 1928ರಲ್ಲಿ ಡಾಕ್ಟರೇಟ್ ಗಳಿಸಿದನು. ಸೆಗ್ರೆ ,ಪಾಲೆರ್ಮೋ ಪ್ರಯೋಗಾಲಯಗಳ ನಿರ್ದೇಶಕ ಸ್ಥಾನಕ್ಕೇರಿದನು. 1938ರಲ್ಲಿ ಯಹೂದಿಯೆಂಬ ಕಾರಣಕ್ಕೆ ಆ ಹುದ್ದೆಯಿಂದ ಉಚ್ಛಾಟಿಸಲ್ಪಟ್ಟನು. ನಂತರ ಅಸಂಸಂಗಳಿಗೆ ಹೋಗಿ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯ ಸೇರಿದನು. ಎರಡನೇ ಜಾಗತಿಕ ಯುದ್ದದಲ್ಲಿ ಪರಮಾಣು ಅಸ್ತ್ರ ತಯಾರಿಕೆಯ ಮ್ಯಾನ್ಹಟನ್ ಯೋಜನೆಯಲ್ಲಿ ಸಕ್ರಿಯ ಪಾತ್ರ ವಹಿಸಿದನು. ಸೆಗ್ರೆ 1937ರಲ್ಲಿ ಟೆಕ್ನೇಷಿಯಂ 1940ರಲ್ಲಿ ಅಸ್ಟಟೈನ್ ಹಾಗೂ ಪ್ಲುಟೋನಿಯಂ ಎಂಬ ಮೂರು ಹೊಸ ಧಾತುಗಳನ್ನು ಅನಾವರಣಗೊಳಿಸಿದ ತಂಡದಲ್ಲಿ ಪ್ರಮುಖನಾಗಿದ್ದನು. ಸೈಕ್ಲೊಟ್ರಾನ್ನಲ್ಲಿ, ಮಾಲಿಬ್ಡಿನಮ್ ಧಾತುವನ್ನು ಡ್ಯುಟೋರಿಯಂ ಬೀಜದಿಂದ ವಿನಾಶಗೊಳಿಸಿ, ಟೆಕ್ನೇಷಿಯಂ ಪಡೆಯಲಾಯಿತು. ಇದು ಜಗತ್ತಿನಲ್ಲಿ ಮೊಟ್ಟ ಮೊದಲು ಕೃತಕವಾಗಿ ಸೃಜಿತಗೊಂಡ ಧಾತುವಾಗಿದೆ. ಟೆಕ್ನೇಷಿಯಂ ವಿಕಿರಣಶೀಲವಾಗಿದ್ದು , ಇದರ ಸಮಸ್ಥಾನಿ ವೈದ್ಯಕೀಯದಲ್ಲಿ ಬಳಕೆಯಾಗುತ್ತದೆ. ಎರಡನೇ ಜಾಗತಿಕ ಯುದ್ದದ ನಂತರ ಸೆಗ್ರೆ, ಡಿರಾಕ್ನಿಂದ ಮುನ್ಸೂಚಿಸಲ್ಪಟ್ಟಿದ್ದ, ಪ್ರೋಟಾನ್ನ ಪ್ರತಿಕಿರಣ ಹುಡುಕಲು ಯತ್ನಿಸಿದನು. 1955ರಲ್ಲಿ ಬಕ್ರ್ಲೆ ಬೆವಟ್ರಾನ್ ಪ್ರೋಟಾನ್ ಅ್ಯಕ್ಸಿಲರೇಟರ್ನಲ್ಲಿ ಪ್ರೋಟಾನ್ ಪ್ರೋಟಾನ್ನ್ನು ತಾಮ್ರದ ಲಕ್ಷ್ಯದ ಮೇಲೆ ಘಟ್ಟಿಸಿ, ಪ್ರತಿ ಪ್ರೋಟಾನ್ ಪಡೆಯಲಾಯಿತು. 1959ರಲ್ಲಿ ಸೆಗ್ರೆ ಹಾಗೂ ಚೇಂಬರ್ಲಿನ್ ಪ್ರತಿಪ್ರೋಟಾನ್ ಅನಾವರಣಗೊಳಿಸಿದ್ದಕ್ಕೆ ನೊಬೆಲ್ ಪ್ರಶಸ್ತಿ ಪಡೆದರು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಗ್ಲೇಸರ್, ಡೊನಾಲ್ಡ್ ಆರ್ಥರ್ (1926--)1960
Glaser, Donald Arthur
ಅಸಂಸಂ-ಭೌತಶಾಸ್ತ್ರ ಮೂಲಕಣಗಳ ವೀಕ್ಷಣೆಗೆ ಗುಳ್ಳೆ ಕೋಠಿ (Bubble Chamber) ನಿರ್ಮಿಸಿದಾತ.
ಕ್ಲೀವ್ಲ್ಯಾಂಡ್ನ ಕೇಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದ ಗ್ಲೇಸರ್, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿ ವಿಶ್ವ ಕಿರಣಗಳ ಬಗ್ಗೆ ಅಧ್ಯಯನ ಮಾಡಿ, 1950ರಲ್ಲಿ ಡಾಕ್ಟರೇಟ್ ಗಳಿಸಿದನು. ಮಿಷಿಗನ್, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಗಳಲ್ಲಿ ವೃತ್ತಿ ಜೀವನ ಮುಂದುವರೆಸಿ, 1964ರಲ್ಲಿ ಅಣ್ವಕ ಜೀವಶಾಸ್ತ್ರದತ್ತ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದನು. ಮೂಲಕಣಗಳನ್ನು ಪತ್ತೆ ಹಚ್ಚಲು ವಿಲ್ಸನ್ ಮೇಘ ಕೋಠಿಯನ್ನು ನಿರ್ಮಿಸಿದ್ದನು. ಈ ಕೋಠಿಯಲ್ಲಿ ಅಧಿಕ ಚೈತನ್ಯದ, ತೀವ್ರ ವೇಗದ ಮೂಲಕಣಗಳನ್ನು ಪತ್ತೆ ಮಾಡಲಾಗುತ್ತಿರಲಿಲ್ಲ. ಇದನ್ನು ಉತ್ತಮಗೊಳಿಸಲು ಗ್ಲೇಸರ್ ಯತ್ನಿಸಿದನು. ಅತಿಶಾಖದ, ದ್ರವದ ಮೂಲಕ ಹಾದು ಹೋಗುವ ಮೂಲ ಕಣಗಳು ತಮ್ಮ ಜಾಡಿನುದ್ದಕ್ಕೂ ಸಣ್ಣ ಅನಿಲದ ಗುಳ್ಳೆಗಳನ್ನು ಚಿಮ್ಮಿಸುತ್ತಾ ಸಾಗುವುವೆಂದೂ ಗ್ಲೇಸರ್ಗೆ ತಿಳಿಯಿತು. ಇದರ ಆಧಾರದ ಮೇಲೆ 1952ರಲ್ಲಿ ಡೀ ಈಥೈಲ್ ಈಥರ್ನಿಂದ ತುಂಬಿದ ಕಿರುಗಾತ್ರದ, ಗುಳ್ಳೆ ಕೋಠಿಯನ್ನು ನಿರ್ಮಿಸಿದನು. ಮೂಲಕಣಗಳ ಜಾಡುಗಳನ್ನು ಅಧಿಕ ವೇಗದ ಕ್ಯಾಮರಾಗಳಿಂದ ಚಿತ್ರಿಸಲಾಯಿತು. ಗ್ಲೇಸರ್ನ ತತ್ತ್ವದ ಮೇಲೆ ಅಲ್ವಾರೆಝ್ ಹಲವಾರು ಮೀಟರ್ ವ್ಯಾಸದ, ದ್ರವ ಜಲಜನಕ ತುಂಬಿದ ಗುಳ್ಳೆ ಕೋಠಿ ನಿರ್ಮಿಸಿದನು. ಇದು ಕಾರ್ಯವ್ಯಾಪ್ತಿ ಮತ್ತು ದಕ್ಷತೆಯಲ್ಲಿ ಗ್ಲೇಸರ್ನದಕ್ಕಿಂತಲೂ ಉತ್ತಮವಾಗಿದ್ದಿತು. 1960ರಿಂದ 1970ರ ದಶಕದವರೆಗೆ ಮೂಲ ಕಣಗಳ ಸಂಶೋಧನೆಯಲ್ಲಿ ತಾಂತ್ರಿಕತೆಯಲ್ಲಿ ಗ್ಲೇಸರ್ನ ವಿಧಾನ ಕ್ರಾಂತಿಯನ್ನೇ ತಂದಿತು. ಗ್ಲೇಸರ್ ನೀರು, ಅಲ್ಕೋಹಾಲ್, ಸೋಡಾ ನೀರುಗಳನ್ನು ಕೋಠಿಗಳಲ್ಲಿ ಬಳಸಲು ಯತ್ನಿಸಿದನಾದರೂ ಯಶಸ್ಸನ್ನು ಕಾಣಲಿಲ್ಲ. ನೀರು ಅಧಿಕ ಮೇಲ್ಮೈ ಕರ್ಷಣೆಯಿಂದ (Surface Tension) ನಿರರ್ಥಕ ಮಾಧ್ಯಮವೆನಿಸಿತು. 1960ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಗ್ಲೇಸರ್ ತನ್ನ ಸಾಧನೆಗಾಗಿ ಪಡೆದುಕೊಂಡನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
Cockcroft, Sir John Douglas
ಬ್ರಿಟನ್ -ಭೌತಶಾಸ್ತ್ರ ವೇಗೋತ್ಕರ್ಷಿತ ಕಣಗಳಿಂದ ಅಣು ಬೀಜಗಳಲ್ಲಿ ಪಾರವಿಕಲ್ಪ (Transmutation) ತಂದ ಮೊದಲಿಗ.
ಕಾಕ್ಕ್ರಾಪ್ಟ್ ಪದವಿ ಪ್ರಾಪ್ತಿಗಾಗಿ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ ಸೇರಿದ ಒಂದೇ ವರ್ಷದಲ್ಲಿ ಮೊದಲ ಜಾಗತಿಕ ಯುದ್ದ ಪ್ರಾರಂಭವಾಯಿತು. ಇದರಿಂದಾಗಿ ಕಾಕ್ಕ್ರಾಪ್ಟ್ ಶಿಕ್ಷಣವನ್ನು ಮೊಟಕುಗೊಳಿಸಿ ರಾಯಲ್ ಫೀಲ್ಡ್ ಆರ್ಟಿಲರಿಯಲ್ಲಿ ಸಂಜ್ಞೆಕಾರನಾಗಿ ಸೇರಬೇಕಾಯಿತು. ಮೂರು ವರ್ಷಗಳ ಕಾಲ ಹಾಗೂ ನಂತರ ನಡೆದ ಯುದ್ದಗಳಲ್ಲಿ ಕಾಕ್ಕ್ರಾಪ್ಟ್ ಯಶಸ್ವಿ ಹಾಗೂ ಗಣನೀಯವಾದ ಸೇವೆ ಸಲ್ಲಿಸಿದನು. ನಂತರ ಮೆಟ್ರೋಪಾಲಿಟನ್ ವಿಕರ್ಸ್ ಎಲೆಕ್ಟ್ರಿಕ್ ಕಂಪನಿ ಸೇರಿದನು. 1924ರಲ್ಲಿ ಕೇಂಬ್ರಿಜ್ನಿಂದ ಗಣಿತದಲ್ಲಿ ಪದವಿ ಗಳಿಸಿದನು. ಪದವಿ ಪಡೆದ ನಂತರ ಕಾಕ್ಕ್ರಾಪ್ಟ್ ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿದ್ದ ವಿಶ್ವ ವಿಖ್ಯಾತನಾಗಿದ್ದ ರುದರ್’ಫೋರ್ಡ್ ನೇತೃತ್ವದ ಸಂಶೋಧನಾ ತಂಡದ ಸದಸ್ಯನಾಗಿ ವೃತ್ತಿ ಜೀವನ ಪ್ರಾರಂಭಿಸಿದನು. 1932ರಲ್ಲಿ ಇ.ಟಿ.ಎಸ್. ವಾಲ್ಟರ್ ಜೊತೆ ಸೇರಿ ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿ ನಡೆಸಿದ ಸಂಶೋಧನೆಗಳಿಗಾಗಿ 1951ರ ಭೌತಶಾಸ್ತ್ರದಲ್ಲಿನ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಖಚಿತ ನಿರ್ಧಾರದ ನಿಲುವಿನವನೂ, ಸ್ಪಷ್ಟ ಚಿಂತಕನೂ ಆಗಿದ್ದ ಕಾಕ್ಕ್ರಾಪ್ಟ್ ವ್ಯವಸ್ಥಿತ ಕ್ರಿಯಾಶೀಲವ್ಯಕ್ತಿ. ಜೀವಿತದ ಕೊನೆ ಎರಡು ದಶಕಗಳಲ್ಲಿ ಸಂಶೋಧನೆಗಿಂತಲೂ, ಅದರ ನಿರ್ವಹಣೆಯತ್ತ ಒಲಿದಿದ್ದ ಕಾಕ್ಕ್ರಾಪ್ಟ್ 1940ರಲ್ಲಿ ಅಸಂಸಂಗಳೊಡನೆ ಯುದ್ದ ಕಾಲದ ತಾಂತ್ರಿಕ ಒಪ್ಪಂದಗಳಿಗಾಗಿ ನೇಮಿಸಲ್ಪಟ್ಟ ‘ಏರ್ಬೌರ್ಡ್ ಮಿಷನ್ನ ಸಕ್ರಿಯ ಸದಸ್ಯನಾಗಿದ್ದನು. 1946ರಲ್ಲಿ ಪರಮಾಣು ಚೈತನ್ಯ ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕದನಾದನು. 1959ರಲ್ಲಿ ಕೇಂಬ್ರಿಜ್ನ ಚರ್ಚಿಲ್ ಕಾಲೇಜಿನ ಸಂಸ್ಥಾಪಕ ಆಚಾರ್ಯನಾಗಿ ನೇಮಕಗೊಂಡು ಹಲವು ಗೌರವಗಳಿಗೆ ಪಾತ್ರನಾದನು. ಸಂಶೋಧಕ ಹಾಗೂ ಸಮರ್ಥ ಆಡಳಿತಗಾರನಾಗಿದ್ದ ಕಾಕ್ಕ್ರಾಪ್ಟ್ ವೈಜ್ಞಾನಿಕ ಹಾಗೂ ರಾಜಕೀಯ ರಂಗಗಳಲ್ಲಿ ಖ್ಯಾತನಾಗಿದ್ದನು. 1928ರಲ್ಲಿ ಗ್ಯಾಮೊವ್, ಕಣಗಳಿಂದ ಪರಮಾಣುಗಳನ್ನು ತಾಡಿಸ ಹೊರಟಾಗ ಅವು ಪರಮಾಣುವಿನ ಬೀಜವನ್ನು ಕ್ವಾಂಟಂ ಸುರಂಗಗೊಳ್ಳುವ (Quantum Tunneling) ಕ್ರಿಯೆಯಿಂದ ಪ್ರವೇಶಿಸಬಹುದೆಂದು ಸೂಚಿಸಿದ್ದನು. ಅದಲ್ಲದೆ ಕೂಲಂಬ್ ನಿರ್ಧರಿಸಿದಂತೆ ಒಂದೇ ವಿದ್ಯುದಾವಿಷ್ಟದ ಕಣಗಳು ಒಂದನ್ನೊಂದು ವಿಕರ್ಷಿಸುವ ಬಲಕ್ಕಿಂತಲೂ ಕಡಿಮೆ ಬಲ, ಕಣಗಳ ಬೈಜಿಕ ಪ್ರವೇಶಕ್ಕೆ ಸಾಕಾಗುವುದೆಂದು ಹೊರಗೆಡಹಿದನು. ಈ ಹೇಳಿಕೆಗಳ ಆಧಾರದ ಮೇಲೆ ಕಾಕ್ಕ್ರಾಪ್ಟ್ ಹಾಗೂ ವಾಲ್ಟರ್ ವಿಭವ ದ್ವಯ (Voltage Doubles ) ಉಪಕರಣ ನಿರ್ಮಿಸಿ ಪ್ರೋಟಾನಗಳನ್ನು 0.8ಒevಗೆ ವೇಗೋತ್ಕರ್ಷಗೊಳಿಸಿ ಲಿಥಿಯಂ ಲಕ್ಷ್ಯವನ್ನು ತಾಡಿಸಿದಾಗ, ಅದರಿಂದ ಆಲ್ಪಾ ಕಣಗಳು ಬಿಡುಗಡೆಯಾದವು. ಇದರಿಂದಾಗಿ ಮೊಟ್ಟ ಮೊದಲ ಕೃತಕವಾದ ಬೈಜಿಕ ಕ್ರಿಯೆಯಾದ ಪಾರವಿಕಲ್ಪ ಜರುಗಿತು. ಸಮಾಂತರದಲ್ಲಿ ರುದರ್’ಫೋರ್ಡ್ ಪಾರವಿಕಲ್ಪದ ಅಧ್ಯಯನಕ್ಕೆ ತನ್ನದೇ ಆದ ವಿಧಾನ ರೂಪಿಸಿಕೊಂಡಿದ್ದು ಅದಕ್ಕಾಗಿ ತಾಡಿಸುವ ಕಣಗಳ ಪೂರೈಕೆಗಾಗಿ ನೈಸರ್ಗಿಕವಾದ ವಿಕಿರಣಶೀಲ ಆಕರದ ಮೊರೆ ಹೊಕ್ಕಿದ್ದನು. ಕಾಕ್ಕ್ರಾಪ್ಟ್ ಹಾಗೂ ವಾಲ್ಟರ್’ರವರ ಈ ಯಶಸ್ವಿ ಪ್ರಯೋಗ ಭೌತಶಾಸ್ತ್ರದ ಬೈಜಿಕ ಅಧ್ಯಯನಕ್ಕೆ ಹೊಸ ಮಾರ್ಗವನ್ನೇ ತೆರೆಯಿತು. ಇದರ ಫಲವಾಗಿ ಸೈಕ್ಲೋಟ್ರಾನ್ ಹಾಗೂ ಸರೇಖೀಯ ವೇಗೋತ್ಕರ್ಷಕಗಳು ನಿರ್ಮಾಣಗೊಂಡವು. ಕಾಕ್ಕ್ರಾಪ್ಟ್ ಬೈಜಿಕ ವಿರಳನದಿಂದ ವಿದ್ಯುತ್ ಉತ್ಪಾದನೆಯ ಸಾಧ್ಯತೆಯನ್ನು ತಿಳಿಸಿದನಾದರೂ ರುದರ್’ಫೋರ್ಡ್ ಅದನ್ನು ಎಂದಿಗೂ ನನಸಾಗದ ಸಿಹಿ ಕನಸೆಂದು ನಿರ್ಲಕ್ಷಿಸಿದನು. ಆದರೆ ಮುಂದೆ ಔಷ್ಣೋಬೈಜಿಕ (Thermonuclear) ವಿದ್ಯುತ್ ಸ್ಥಾವರಗಳ ನಿರ್ಮಾಣ ಸಾಧ್ಯವಾಗಿ ಕಾಕ್ಕ್ರಾಪ್ಟ್ ನುಡಿದ ಭವಿಷ್ಯ ನಿಜವಾಯಿತು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಎರ್ನ್ಸ್ಟ್ ,ಥಾಮಸ್ ಸಿಂಟನ್ ವಾಲ್ಟನ್ (1903-1995) 1951
Ernst , Thomas Sinton Walton
ಐರ್ಲೆಂಡ್-ಭೌತಶಾಸ್ತ್ರ-
ಥಾಮಸ್ ತಂದೆ, ಟಿಪ್ಪರೇರಿ ಪಟ್ಟಣದಲಿ ಚರ್ಚ್ನ ಮಿನಿಸ್ಟರ್ ಆಗಿದ್ದನು. ಇದರಿಂದಾಗಿ ಊರಿಂದ ಊರಿಗೆ ವರ್ಗವಾಗುವ ಅನಿವಾರ್ಯತೆ ಈತನಿಗೆ ಒದಗಿ ಬಂದಿತು. 6 ಅಕ್ಟೋಬರ್ 1903ರಂದು ವಾಟರ್ಫೋರ್ಡ್ ಕೌಂಟಿಯ ಡುಂಗರ್ವನ್ನಲ್ಲಿ ಥಾಮಸ್ನ ಜನನವಾಯಿತು. ಬಾನ್ಬ್ರಿಡ್ಜ್ ಹಾಗೂ ಕುಕ್ಸ್ಟಿನ್ಗಳಲ್ಲಿ ಥಾಮಸ್ನ ಆರಂಭಿಕ ಶಿಕ್ಷಣ ಜರುಗಿತು. 1915ರಲ್ಲಿ ಬೆಲ್ಫಾಸ್ಟ್ನಲ್ಲಿದ್ದ ಆವಾಸಿ ಕಾಲೇಜಿಗೆ ಥಾಮಸ್ ಸೇರಿದನು. ಇಲ್ಲಿ ಗಣಿತ ಹಾಗೂ ಭೌತಶಾಸ್ತ್ರದಲ್ಲಿ ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣನಾದನು. 1922ರಲ್ಲಿ ವಿದ್ಯಾರ್ಥಿ ವೇತನ ಪಡೆದು ಡಬ್ಲಿನ್ನ ಟ್ರಿನಿಟಿ ಕಾಲೇಜ್ ಸೇರಿದನು. 1926ರಲ್ಲಿ ಪದವಿ ಗಳಿಸಿ 1927ರಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಸಹ ಪೂರೈಸಿದನು. ಇದೇ ವರ್ಷ ರಾಯಲ್ ಕಮಿಷನರ್ಸ್ ಫಾರ್ ದಿ ಎಕ್ಸಿಬಿಷ್ನ್ನಿಂದ ವಿದ್ಯಾರ್ಥಿವೇತನ ಗಳಿಸಿ, ಕೇಂಬ್ರಿಜ್ ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿ ರುದರ್ಫೋರ್ಡ್ನ ಸಹಾಯಕನಾದನು. 1930ರಲ್ಲಿ ಡಿಪಾರ್ಟ್ಮೆಂಟ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ನಿಂದ ಸಂಶೋಧನಾ ಪ್ರಶಸ್ತಿ ಪಡೆದು 1931ರಲ್ಲಿ ಡಾಕ್ಟರೇಟ್ ಪದವಿ ಗಳಿಸಿದನು. ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿ ಜಲಗತಿಶಾಸ್ತ್ರದಲ್ಲಿನ (Hydrodynamics) ಸಮಸ್ಯೆಗಳ ಅಧ್ಯಯನದಿಂದ ಥಾಮಸ್ನ ಸಂಶೋಧನಾ ಜೀವನ ಪ್ರಾರಂಭವಾಯಿತು. ಇಲ್ಲಿರುವಾಗ ಮುಂದೆ ಬೀಟಾಟ್ರಾನ್ ಎಂದು ಹೆಸರಾದ ಸರೇಖೀಯ ವೇಗೋತ್ಕರ್ಷಕಗಳನ್ನು (Linear Accelerator)ಬಳಸಿ, ಪರೋಕ್ಷ ಮಾರ್ಗದಿಂದ ವೇಗಗಾಮಿ ಕಣಗಳನ್ನು ಪಡೆಯಲು ಥಾಮಸ್ ಯತ್ನಿಸಿದನು. ಮುಂದೆ ಜೆ.ಡಿ.ಕಾಕ್ರಾಪ್ಟ್ನೊಂದಿಗೆ ಅಧಿಕ ಪ್ರಚನ್ನತೆಯಡಿಯಲ್ಲಿ (Potential) ವೇಗಗಾಮಿ ಕಣಗಳನ್ನು ಉತ್ಪಾದಿಸಿದನು. ಇದನ್ನು ಪರಿಷ್ಕರಿಸಿ ವಿಶಿಷ್ಟವಾದ ಪ್ರಾಯೋಗಿಕ ಸಲಕರಣೆಯೊಂದನ್ನು ರೂಪಿಸಿದನು. ಇದರಲ್ಲಿ ಹಗುರ ಕಣಗಳನ್ನು, ವೇಗಗಾಮಿ ಪ್ರೋಟಾನ್ಗಳಿಂದ ತಾಡಿಸಿ ಶಿಥಿಲಗೊಳಿಸಬಹುದೆಂದು ತೋರಿಸಿದನು. ಲಿಥಿಯಂ ಬೀಜವನ್ನು ವೇಗೋತ್ಕರ್ಷಗೊಳಿಸಿದ ಪ್ರೋಟಾನ್ಗಳಿಂದ ತಾಡಿಸಿ, ಹೀಲಿಯಂ ಬೀಜ ಪಡೆಯುವಲ್ಲಿ ಥಾಮಸ್ ಯಶಸ್ವಿಯಾದನು. ಥಾಮಸ್ ಡಬ್ಲಿನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್, ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ರಿಸರ್ಚ್ ಅಂಡ್ ಸ್ಟ್ಯಾಂಡಡ್ರ್ಸ್, ದಿ ರಾಯಲ್ ಸಿಟಿ ಆಫ್ ಡಬ್ಲಿನ್ ಹಾಸ್ಪಿಟಲ್, ರಾಯಲ್ ಐರಿಷ್ ಅಕಾಡೆಮಿ ಹೀಗೆ ಹಲವು ಹತ್ತಾರು ಶೈಕ್ಷಣೇತರ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದನು. ಬೈಜಿಕ ಭೌತಶಾಸ್ತ್ರ ,ಜಲಗತಿಶಾಸ್ತ್ರ ,ಸೂಕ್ಷ್ಮ ತರಂಗಗಳನ್ನು ಕುರಿತಾಗಿ ಹಲವಾರು ವೈಜ್ಞಾನಿಕ ಲೇಖನಗಳನ್ನು ಪ್ರಕಟಿಸಿದನು. 1938ರಲ್ಲಿ ಕಾಕ್ರಾಪ್ಟ್ ಹಾಗೂ ಥಾಮಸ್ ಲಂಡನ್ನ ರಾಯಲ್ ಸೊಸೈಟಿಯಿಂದ ಹ್ಯೂಗ್ಸ್ ಪದಕ ಪುರಸ್ಕೃತರಾದರು. 1959ರಲ್ಲಿ ಬೆಲ್ಫಾಸ್ಟ್ನ ಕೀನ್ಸ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಗಳಿಸಿದನು. 1951ರಲ್ಲಿ ಥಾಮಸ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಬ್ಲಾಖ್ ಫೆಲಿಕ್ಸ್ (1905-1983) -1952
Bloch , Felix (PHY.)
ಸ್ವಿಟ್ಸರ್’ಲ್ಯಾಂಡ್-ಅಸಂಸಂ- ಭೌತಶಾಸ್ತ್ರ- ಬೈಜಿಕ ಕಾಂತೀಯ ಅನುರಣನ ರೋಹಿತಮಾಪಕ (NMR-Nuclear Magnetic Resonance Spectrometer )ಉಪಜ್ಞೆಕಾರ
ಜೂರಿಕ್ ಹಾಗೂ ಲೀಪ್ಜೀಗ್ನಲ್ಲಿ ಶಿಕ್ಷಣ ಪಡೆದ ಬ್ಲಾಖ್ ಸ್ವಲ್ಪ ಕಾಲ ಜರ್ಮನಿಯಲ್ಲಿ ಉಪನ್ಯಾಸಕನಾದನು. 1933ರಲ್ಲಿ ಅಮೆರಿಕಾಕ್ಕೆ, ತೆರಳಿ ಸ್ಕ್ಯಾನ್ಫೆÇೀರ್ಡ್ನಲ್ಲಿ ನೆಲೆಸಿದನು. ಘನಸ್ಥಿತಿ ಭೌತಶಾಸ್ತ್ರಕ್ಕೆ ಭದ್ರಬುನಾದಿ ಹಾಕಿದ ಬ್ಲಾಖ್ ಘನಗಳಲ್ಲಿ ಎಲೆಕ್ಟ್ರಾನ್ಗಳ ನಡವಳಿಕೆಯನ್ನು ಸ್ಪುಟಗೊಳಿಸಿದನು. ಘನವೊಂದರಲ್ಲಿ ಮುಕ್ತವಾಗಿ ಚಲಿಸುವ ಎಲೆಕ್ಟ್ರಾನನ್ನು ಬ್ಲಾಖ್ ತರಂಗ ಫಲನ (Wave Function) ವಿವರಿಸುತ್ತದೆ. ಅಲ್ಲದೆ ಅನುಕಾಂತೀಯ (Paramagnetic) ಸಾಮಾಗ್ರಿಯಲ್ಲಿ ಎರಡು ಕಾಂತ ವಲಯಗಳ ಮಧ್ಯದ ಗಡಿಯ ಸ್ವರೂಪವನ್ನು ಬ್ಲಾಖ್ ತರಂಗ ವಿವರಿಸುತ್ತದೆ. 1946ರಲ್ಲಿ ಬ್ಲಾಖ್ ಬೈಜಿಕ ಕಾಂತೀಯ ಅಮರಣದ ತಂತ್ರವನ್ನು ಪರಿಚಯಿಸಿದನು. ಇದೇ ತಂತ್ರವನ್ನು ಸ್ವತಂತ್ರವಾಗಿ ಪರ್ಸೆಲ್ ಸಹ ಅಭಿವೃದ್ದಿಗೊಳಿಸಿದನು. ಬ್ಲಾಖ್ನ ತಂತ್ರದಿಂದ ಯಾವುದೇ ಬೀಜದ ಚೈತನ್ಯದ ಸ್ಥಿತಿಯನ್ನು ಅರಿಯುವ ಮೂಲಕ, ಅದರ ನೆರೆಹೊರೆಯ ಪರಮಾಣುಗಳ ಸ್ಥಿತಿಯನ್ನು ಲೆಕ್ಕಚಾರ ಹಾಕಿ ತಿಳಿಯಬಹುದು. 1952ರಲ್ಲಿ ಬ್ಲಾಖ್ ಪರ್ಸೆಲ್ ಜೊತೆ ನೊಬೆಲ್ ಪ್ರಶಸ್ತಿ ಪಡೆದನು. ಬ್ಲಾಖ್ ಹಾಗೂ ಪರ್ಸೆಲ್ ರೂಪಿಸಿದ ತಂತ್ರ ರಸಾಯನಶಾಸ್ತ್ರದಲ್ಲಿ ಪ್ರಮುಖ ವಿಶ್ಲೇಷಣಾ ತಂತ್ರವಾಗಿ ನೆಲೆಗೊಂಡಿದೆ. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಪೆರ್ಸೆಲ್, ಎಡ್ವರ್ಡ್ ಮಿಲ್ಸ್ (1912--) 1952
Purcell , Edward Mills
ಅಸಂಸಂ-ಭೌತಶಾಸ್ತ್ರ- ಬೈಜಿಕ ಕಾಂತೀಯ ಅನುರಣನೆ ವಿಧಾನ (NMR-Nuclear Magnetic Resonance) ಅಭಿವೃದ್ದಿಗೊಳಿಸಿದಾತ. ತಾರಂತರದ 21 ಸೆಂ.ಮೀ ಸೂಕ್ಷ್ಮ ತರಂಗದ ಉತ್ಸರ್ಜನೆ ಪತ್ತೆ ಹಚ್ಚಿದಾತ.
ಪೆರ್ಸೆಲ್, ಪಡ್ರ್ಯೂನಿಂದ ವೈದ್ಯುತ್ ಇಂಜಿನಿಯರಿಂಗ್ನಲ್ಲಿ ಪದವಿ ಗಳಿಸಿ, ನಂತರ ಕಾರ್ಲ್ಸ್ರುಹೆ ಹಾಗೂ ಹಾರ್ವರ್ಡ್ಗಳಲ್ಲಿ ಭೌತಶಾಸ್ತ್ರದ ವ್ಯಾಸಂಗ ಮಾಡಿದನು. 1938ರಲ್ಲಿ ಇಲ್ಲಿಯೇ ಬೋಧಕನಾದನು. 1941ರಿಂದ 1945ರವರೆಗೆ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸೂಕ್ಷ್ಮ ತರಂಗ ರಡಾರ್ ಅಭಿವೃದ್ದಿಗೆ ಶ್ರಮಿಸಿದನು. ನಂತರ ಹಾರ್ವರ್ಡ್ನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. 1940ರಲ್ಲಿ ಘನ ಹಾಗೂ ದ್ರವಗಳಲ್ಲಿನ ಅಣುಬೀಜಗಳಲ್ಲಿನ ಕಾಂತೀಯ ಭ್ರಾಮ್ಯತೆಗಳನ್ನು ಅಳೆಯಲು ಬೈಜಿಕ ಕಾಂತೀಯ ಅನುರಣನ ವಿಧಾನ ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದನು. ಯಾವುದೇ ಗಿರಕಿ (Spin) ಉಳ್ಳ ಪರಮಾಣುವಿನ ಬೀಜವನ್ನು ಪ್ರಬಲ ಕಾಂತಕ್ಷೇತ್ರದಲ್ಲಿರಿಸಿದಾಗ ಅದು ಅನುರಣನ ಪ್ರಭಾವದಡಿಯಲ್ಲಿ ರೇಡಿಯೋ ಆವರ್ತದ ವ್ಯಾಪ್ತಿಯಲ್ಲಿ ವಿಕಿರಣವನ್ನು ಹೀರಿಕೊಳ್ಳುತ್ತದೆ. ಇದನ್ನು ಅಳೆದು ಅಣುವಿನ ರಾಚನಿಕ ಸ್ವರೂಪ ನಿರ್ಧರಿಸಬಹುದು. 1940ರ ನಂತರ ಬೈಜಿಕ ಕಾಂತೀಯ ಅನುರಣನ ವಿಧಾನ ಪ್ರಾಯೋಗಿಕ ಭೌತಶಾಸ್ತ್ರದಲ್ಲಿ ಪ್ರಮುಖ ಸ್ಥಾನ ಗಳಿಸಿತು. 1952ರಲ್ಲಿ ಪೆರ್ಸೆಲ್, ಬ್ಲಾಖ್ ಜೊತೆಗೆ ನೊಬೆಲ್ ಪ್ರಶಸ್ತಿ ಪಡೆದನು. 1951ರಲ್ಲಿ ಪೆರ್ಸೆಲ್, ಅಂತರ್ ತಾರಾ ಅಂತರಿಕ್ಷದಲ್ಲಿನ ತಟಸ್ಥ ಜಲಜನಕದ 21 ಸೆಂಮೀ ತರಂಗಾಂತರದ ವಿಕಿರಣವನ್ನು ಪತ್ತೆ ಹಚ್ಚಿದನು. ವ್ಯಾನ್ ಡೆ ಹಸ್ಟ್ ಈ ಮೊದಲೇ ಈ ವಿಕಿರಣದ ಅಸ್ತಿತ್ವದ ಮುನ್ಸೂಚನೆ ನೀಡಿದ್ದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಫ್ರಿಟ್ಸ್, ಝರ್ನಿಕ್ (1888-1966) 1953
Frits , Zernike
ನೆದರ್ಲ್ರ್ಯಾಂಡ್-ಭೌತಶಾಸ್ತ್ರ-ಪ್ರಾವಸ್ಥಾ ವೈದೃಶ್ಯ ಸೂಕ್ಷ್ಮದರ್ಶಕ (Phase Contrast Microscope) ಉಪಜ್ಞೆಕಾರ.
ಫ್ರಿಟ್ಸ್ ತಂದೆ ಅ್ಯಮಸ್ಟರ್ಡ್ಯಾಂನ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯನೂ ಗಣಿತದ ಉಪಾಧ್ಯಾಯನೂ ಆಗಿದ್ದನು. ಆತನ ತಾಯಿಯೂ ಗಣಿತದ ಉಪ್ದಾಧ್ಯಾಯಿನಿಯಾಗಿದ್ದಳು. ಇವರ ಆರು ಜನ ಮಕ್ಕಳಲ್ಲಿ ಫ್ರಿಟ್ಸ್ ಎರಡನೆಯವನಾಗಿ, 16 ಜುಲೈ 1888 ರಂದು ಜನಿಸಿದನು. ಬಾಲ್ಯ ಪ್ರತಿಭೆಯೆಂದು ಹೆಸರಾಗಿದ್ದ ಫ್ರಿಟ್ಸ್ ಹಲವಾರು ಪುಸ್ತಕಗಳನ್ನು ವಿಷಯವಾರು ಸಂಪಾದಿಸಿದ್ದನು. ಫಿû್ರಟ್ಸ್ನ ಅಣ್ಣ, ಅಕ್ಕ ತಂಗಿಯರು ಸಹ ತಮ್ಮ ಕ್ಷೇತ್ರಗಳಲ್ಲಿ ಪ್ರತಿಭಾವಂತರೆಂದು ಪರಿಗಣಿಸಲ್ಪಟ್ಟಿದ್ದರು. ತಂದೆಯಿಂದ ಫ್ರಿಟ್ಸ್ ಭೌತಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದನು. ಪ್ರೌಢಶಾಲೆಯಲ್ಲಿರುವಾಗ ಇತಿಹಾಸ, ಭಾಷೆಗಳನ್ನು ನಿರ್ಲಕ್ಷಿಸಿ, ವಿಜ್ಞಾನದ ವಿಷಯಗಳನ್ನು ಮಾತ್ರ ಅಧ್ಯಯನ ಮಾಡಿದನು. ಇದರಿಂದ ಕಾಲೇಜು ವಿಧ್ಯಾಭ್ಯಾಸಕ್ಕೆ ಅರ್ಹತೆ ದಕ್ಕಲಿಲ್ಲ. ನಂತರ ಭಾಷೆ ಹಾಗೂ ಇತಿಹಾಸಗಳಲ್ಲಿ ಸಿದ್ಧನಾಗಿ, ಪರೀಕ್ಷೆ ಎದುರಿಸಿ, “ವಿಶ್ವವಿದ್ಯಾಲಯ ಸೇರಿದನು. ಪ್ರೌಢಶಾಲೆಯಲ್ಲಿರುವಾಗ, ತಾನೇ ರಾಸಾಯನಿಕಗಳನ್ನು ಸಂಸ್ಕರಿಸಿ, ಬಣ್ಣದ ಛಾಯಾಗ್ರಹಣದ ಯತ್ನ ಮಾಡಿದನು. ಹಳೆಯ ಗುಜರಿ ಸಾಮಾನುಗಳನ್ನು ಬಳಸಿ, ಧೂಮಕೇತುವಿನ ಛಾಯಾಚಿತ್ರ ಪಡೆಯುವ ಸಾಧನವನ್ನು ಫ್ರಿಟ್ಸ್ ತಾನೇ ತಯಾರಿಸಿಕೊಂಡಿದ್ದನು. ತಂದೆ, ತಾಯಿಗಳೊಂದಿಗೆ ಸವಾಲೆಸೆಯುವಂತೆ ಗಣಿತದ ಪರಿಹಾರಗಳನ್ನು ಹುಡುಕುತ್ತಿದ್ದನು.1905ರಲ್ಲಿ ಅ್ಯಮಸ್ಟರ್ ಡ್ಯಾಂ ವಿಶ್ವವಿದ್ಯಾಲಯ ಸೇರಿ ರಾಸಾಯನಿಕ ಶಾಸ್ತ್ರವನ್ನು ಪ್ರಥಮ ಹಾಗೂ ಗಣಿತ ಭೌತಶಾಸ್ತ್ರವನ್ನು ದ್ವಿತೀಯ ವಿಷಯಗಳಾಗಿ ಆರಿಸಿಕೊಂಡನು. 1908ರಲ್ಲಿ ಸಂಭವನೀಯತೆ ಕುರಿತಾಗಿ ಲೇಖನ ಬರೆದು ಗಟ್ಟಿಂಜೆನ್ “ವಿಶ್ವವಿದ್ಯಾಲಯದ ಬಂಗಾರದ ಪದಕ ಪಡೆದನು. 1912ರಲ್ಲಿ ಹಾರ್ಲೆಮನ್ ಡಚ್ ಸೊಸೈಟಿ ಆಫ್ ಸೈನ್ಸ್ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಪ್ರತಿಫಲನ ಕುರಿತು ಲೇಖನವೊಂದು ಬರೆದು, ಅದರ ತೀರ್ಪುಗಾರರಾಗಿದ್ದ ಖ್ಯಾತ ವಿಜ್ಞಾನಿ ಲೊಹ್ರೆಂಟ್ಸ್ ಹಾಗೂ ವ್ಯಾಂಡರ್ ವಾಲ್ಸ್ರನ್ನು ಮೆಚ್ಚಿಸಿ, ಪ್ರಶಸ್ತಿ ಗಳಿಸಿದನು. ಪ್ರಶಸ್ತಿಯಾಗಿ ಪದಕ ಅಥವಾ ಹಣದ ಆಯ್ಕೆ ನೀಡಿದಾಗ, ಹಣವನ್ನೇ ಬಯಸಿದನು. ಈ ಲೇಖನವನ್ನು ವಿಸ್ತೃತಗೊಳಿಸಿ, ಸಂಪ್ರಂಬಂಧವಾಗಿಸಿ 1915ರಲ್ಲಿ ಡಾಕ್ಟರೇಟ್ ಗಳಿಸಿದನು. 1913ರಲ್ಲಿ ಗಟ್ಟಿಂಜೆನ್ನಲ್ಲಿದ್ದ ಖ್ಯಾತ ಖಗೋಳಶಾಸ್ತ್ರಜ್ಞನಾಗಿದ್ದ ಕ್ಯಾಪ್ಟೆಯ್ನ್, ತನ್ನ ಸಹಾಯಕನಾಗಿ ಬರುವಂತೆ ಫಿû್ರಟ್ಸ್ನನ್ನು ಆಹ್ವಾನಿಸಿದನು. 1915ರಲ್ಲಿ ಫ್ರಿಟ್ಸ್ ಗಟ್ಟಿಂಜೆನ್ನಲ್ಲಿ ಓರ್ನ್ಸ್ಟೀನ್ನಿಂದ ತೆರವುಗೊಂಡಿದ್ದ ಗಣಿತ ಉಪನ್ಯಾಸಕನ ಹುದ್ದೆ ವಹಿಸಿಕೊಂಡು ವೃತ್ತಿ ಜೀವನ ಪ್ರಾರಂಭಿಸಿದನು. 1920ರಲ್ಲಿ ಇಲ್ಲಿ ಪೂರ್ಣಾವಧಿ ಪ್ರಾಧ್ಯಾಪಕನಾಗಿ ನೇಮಕಗೊಂಡನು. ಜೆ.ಎ.ಪ್ರಿಟ್ಸ್ನ ಜೊತೆಗೆ ದ್ರವದಲ್ಲಿನ ಎರಡು ಅಣುಗಳ ಸ್ಥಾನ ನಿರ್ಧಾರ ಫಲನ (Function) ನೀಡಿದನು. ಬಹು ಸೂಕ್ಷ್ಮವಾದ ಗ್ಯಾಲ್ಬನೋ ಮಾಪಕವನ್ನು ಸಹ ಒಟ್ಟೋ ತಯಾರಿಸಿದನು. 1930ರಿಂದ ದೃಕ್ ಶಾಸ್ತ್ರದಲ್ಲಿ ಆಸಕ್ತಿ ತಳೆದು ಮಸೂರ, ಬಿಂಬಗಳನ್ನು ಪಡೆಯುವಲ್ಲಿ ಹಲವಾರು ಸುಧಾರಣೆಗಳನ್ನು ತಂದನು. 1930ರ ಒಂದು ಸಂಜೆ, ಜೆನಾದಲ್ಲಿರುವ ಝೀಸ್ ಕಾರ್ಖಾನೆಯಲ್ಲಿರುವಾಗ ಸಂಪೂರ್ಣ ಕಪ್ಪು ಬಣ್ಣ ಬಳಿಯಲಾಗಿದ್ದ ದೃಕ್ ಪ್ರಯೋಗಾಲಯದಲ್ಲಿ ಒಂದು ವಿಶಿಷ್ಟವಾದ ವಿದ್ಯಾಮಾನವನ್ನು ಗಮನಿಸಿದನು. ಈ ವಿದ್ಯಾಮನದಿಂದ ಫ್ರಿಟ್ಸ್ ಪ್ರಾವಸ್ಥಾ ವೈದೃಶ್ಯ ಸೂಕ್ಷ್ಮದರ್ಶಕ ನಿರ್ಮಾಣದ ಸಾಧ್ಯತೆ ವಿವರಿಸಿದನು. ಇದನ್ನು ಕಾರ್ಖಾನೆಯ ಆಡಳಿತ ಮಂಡಳಿಯ ಗಮನಕ್ಕೆ ತಂದನು. ಆದರೆ ಇದರ ಪ್ರಾಮುಖ್ಯತೆ ಅವರಿಗೆ ಅರಿವಾಗಲಿಲ್ಲ. 1941ರಲ್ಲಿ ಜರ್ಮನಿ ನೆದರ್’ಲ್ಯಾಂಡ್’ನ್ನು ಆಕ್ರಮಿಸಿ ಯುದ್ದಕ್ಕೆ ನೆರವಾಗುವ ಎಲ್ಲಾ ಬಗೆಯ ಸಂಶೋಧನೆಗಳನ್ನು ದಾಖಲುಗೊಳಿಸತೊಡಗಿತು. ಫ್ರಿಟ್ಸ್’ನ ಪ್ರಾವಸ್ಥಾ ವೈದೃಶ್ಯ ಸೂಕ್ಷದರ್ಶಕದ ವೈಶಿಷ್ಟತೆ, ಗುರುತಿಸಿದ ಜರ್ಮನಿಯ ಪರಿಶೀಲನಾ ಸಮಿತಿ, ಅಂತಿಮವಾಗಿ ಅದರ ನಿರ್ಮಾಣ ಕೈಗೆತ್ತಿಕೊಂಡಿತು. ಮುಂದೆ ಇದು ಬೃಹತ್ ಉದ್ದಿಮೆ ರೂಪ ತಾಳಿತು. ಈ ಕಾಲಕ್ಕೆ ಜರ್ಮನಿ, ನೆದರ್’ಲ್ಯಾಂಡನ್ನು ಆಕ್ರಮಿಸಿದ್ದಿತಲ್ಲದೆ, ಈ ಕಾರಣವಾಗಿ ಫ್ರಿಟ್ಸ್’ಗೆ ಅದರ ಉಪಜ್ಞೆಯ ಗೌರವ ದಕ್ಕಲಿಲ್ಲ. ವಿಜ್ಞಾನದಲ್ಲಿ ಅದರಲ್ಲೂ ವಿಶೇಷತವಾಗಿ ವೈದ್ಯಕೀಯದಲ್ಲಿ ಈ ಸೂಕ್ಷ್ಮ ದರ್ಶಕದ ಬಳಕೆಯಾಗಲಿಲ್ಲ. ಯುದ್ದದ ನಂತರ ಬೇರೆ ಕಂಪನಿಗಳು, ಪ್ರಾವಸ್ಥಾ ವೈದೃಶ್ಯ ಸೂಕ್ಷ್ಮದರ್ಶಕದ ತಯಾರಿಸಿ, ವಿಜ್ಞಾನದಲ್ಲಿ ವ್ಯಾಪಕವಾಗಿ ಬಳಕೆಗೆ ತಂದವು. ಫ್ರಿಟ್ಸ್’ನ ಸಾಧನೆಯನ್ನು ರಾಯಲ್ ಸೂಕ್ಷ್ಮದರ್ಶಕದ ಸಂಸ್ಥೆ ಗುರುತಿಸಿತು. ಲಂಡನ್ನ ರಾಯಲ್ ಸೊಸೈಟಿ ರಮ್’ಫೋರ್ಡ್ ಪದಕ ಪ್ರಿಟ್ಸ್ಗೆ ಪ್ರಧಾನಿಸಿತು. ಅ್ಯಮಸ್ಟರ್ ಡ್ಯಾಂ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತು. ಫ್ರಿಟ್ಸ್’ನ ಈ ಸಾಧನೆಗಾಗಿ 1953ರ ನೊಬೆಲ್ ಪ್ರಶಸ್ತಿ ನೀಡಲಾಯಿತು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಬಾರ್ನ್ , ಮ್ಯಾಕ್ಸ್(1882-1970) - 1954
Born , Max
ಜರ್ಮನ್-ಭೌತಶಾಸ್ತ್ರ - ಮಾತೃಕೆ ಬಲವಿಜ್ಞಾನ ( Matrix Mechanics) ಪರಿಚಯಿಸಿದಾತ. ಅಲೆಫಲನಗಳಿಗೆ (Wave Function)s ಸಂಖ್ಯಾಕಲನ (Statistical) ವಿವರಣೆ ನೀಡಿದಾತ.
ಮ್ಯಾಕ್ಸ್, ಬ್ರೆಸ್ಲೆ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕನಾಗಿದ್ದ ಅಂಗರಚನಾಶಾಸ್ತ್ರದ ವೈದ್ಯನ ಮಗ. ನಾಲ್ಕು ವರ್ಷದವನಿದ್ದಾಗ ತಾಯಿಯನ್ನು ಕಳೆದುಕೊಂಡ ಬಾರ್ನ್, ಅಜ್ಜಿಯ ಆರೈಕಯಲ್ಲಿ ಬೆಳೆದನು. ಬ್ರೆಸ್ಲೆ, ಹೈಡೆಲ್ಬರ್ಗ್, ಜೂರಿಕ್ ಹಾಗೂ ಕೇಂಬ್ರಿಜ್’ಗಳಲ್ಲಿ ವಿದ್ಯಾಭ್ಯಾಸ ಮಾಡಿದ ಬಾರ್ನ್, 1907ರಲ್ಲಿ ಗಟ್ಟಿಂಜೆನ್ನಿಂದ ಪಿ.ಎಚ್.ಡಿ. ಪಡೆದನು. ಗಟ್ಟಿಂಜೆನ್ನಲ್ಲಿ ಉಪನ್ಯಾಸಕನಾಗಿ ವೃತ್ತಿ ಜೀವನ ಪ್ರಾರಂಭಿಸಿದ ಬಾರ್ನ್ 1921ರಲ್ಲಿ ಅಲ್ಲೇ ಭೌತಶಾಸ್ತ್ರ ಪ್ರಾಧ್ಯಾಪಕನಾದನು. ಪ್ರಾಧ್ಯಾಪಕನಾಗಿರುವಾಗ, ಸೈದ್ಧಾಂತಿಕ ಭೌತಶಾಸ್ತ್ರದ ಶಾಖೆಯನ್ನು ತನ್ನ ವಿಶ್ವ ವಿದ್ಯಾಲಯದಲ್ಲಿ ಪ್ರಾರಂಭಿಸಿದನು. ಇಡೀ ಜಗತ್ತಿನಲ್ಲಿ ಕೊಪೆನ್ಹೆಗೆನ್ನ ನೀಲ್ಸ್ ಬೊಹ್ರ್ ಸಂಸ್ಥೆ ಹೊರತುಪಡಿಸಿದರೆ ಈ ಬಗೆಯ ಅಧ್ಯನದಲ್ಲಿ ಇದು ಎರಡನೆಯದೆಂದು ಖ್ಯಾತವಾಯಿತು. ಯಹೂದಿಯಾಗಿದ್ದ ಬಾರ್ನ್, ನಾಝಿಗಳ ಭಯದಿಂದಾಗಿ 1933ರಲ್ಲಿ ಜರ್ಮನಿಯನ್ನು ತೊರೆದು ಕೇಂಬ್ರಿಜ್ನಲ್ಲಿ ನೆಲೆಸಿ, ಎಡಿನ್ಬರೋದಲ್ಲಿ ಪ್ರಾಧ್ಯಾಪಕನಾಗಿ, 1953ರಲ್ಲಿ ನಿವೃತ್ತಿಯ ನಂತರ ಗಟ್ಟಿಂಜೆನ್ನಲ್ಲಿ ನಿವೃತ್ತ ಜೀವನ ಕಳೆದನು. 1954ರಲ್ಲಿ ಬಾರ್ನ್, ಕ್ವಾಂಟಂ ಬಲವಿಜ್ಞಾನದಲ್ಲಿ ಸಲ್ಲಿಸಿದ ಸೇವೆಗಾಗಿ ಬೊಥೆಯೊಂದಿಗೆ ನೊಬೆಲ್ ಪುರಸ್ಕೃತನಾದನು.ಬಾರ್ನ್ ಸಂಶೋಧನೆ ಪ್ರಾರಂಭಿಸಿದಾಗ ಜಾಲಂಧ್ರ ಗತಿಶೀಲತೆಯಲ್ಲಿ (Laltice Dynamics) ಆಸಕ್ತನಾಗಿದ್ದನು. ಘನವಸ್ತುಗಳು ಕಂಪಿಸುವಾಗ ಅದರ ಪರಮಾಣುಗಳು ಹೇಗೆ ಒಂದಕ್ಕೊಂದು ಬೆಸೆದುಕೊಂಡಿರುವುದೆಂದು ನಿಷ್ಕರ್ಷಿಸುವಲ್ಲಿ ನಿರತನಾಗಿದ್ದನು. ಇದರ ಫಲವಾಗಿ ಬಾರ್ನ್ ಹೇಬರ್ ಪ್ರತಿಕ್ರಿಯೆ ಚಕ್ರಗಳ ವಿವರಣೆ ಹೊರಬಂದಿತು. ಈ ವಿವರಣೆ ಅಯೋನಿಕ್ ಹರಳುಗಳ ಪರಮಾಣುಗಳ ಮಧ್ಯದ ಜಾಲಂಧ್ರ ಚೈತನ್ಯವನ್ನು (Laltice Energy) ಲೆಕ್ಕಹಾಕಲು ಶಕ್ತವಾಗಿದೆ. 1923ರವೇಳೆಗೆ ಪ್ಲಾಂಕ್ ,ಐನ್ಸ್ಟೀನ್ , ಬೊಹ್ರ್ ಹಾಗೂ ಸೊಮ್ಮರ್’ಫೀಲ್ದ್ ‘ನಿಂದ ಸ್ಥಾಪಿತಗೊಂಡಿದ್ದ ಕ್ವಾಂಟಂ ಬಲವಿಜ್ಞಾನ ಹಲವಾರು ವೈಜ್ಞಾನಿಕ ವೀಕ್ಷಣೆಗಳಿಗೆ ಸಮರ್ಪಕವಾದ ಉತ್ತರಕೊಡುವಲ್ಲಿ ಸೋತಿದ್ದಿತು. ಕಣಗಳು ಅಲೆಗಳಂತಹ ಗುಣಗಳನ್ನು ಹೊಂದಿದ್ದರೆ, ಇಂತಹ ವೀಕ್ಷಣೆಗಳಿಗೆ ವೈಜ್ಞಾನಿಕವಾದ ಸಮರ್ಪಕ ವಿವರಣೆ ನೀಡಬಹುದೆಂದು 1924ರಲ್ಲಿ ಬ್ರೊಗಿಲಿ ಸೂಚಿಸಿದನು. ಈ ಹಿನ್ನೆಲೆಯಲ್ಲಿ ಬಾರ್ನ್, ಇ.ಪಿ. ಜೋರ್ಡಾನ್ , ಹೈಸೆನ್ಬರ್ಗ್ ಹಾಗೂ ಪೌಲಿ ಸಂಯುಕ್ತವಾಗಿ ಹಲವಾರು ಹೊಸ, ವಿಸ್ತೃತ ಪರಿಕಲ್ಪನೆಗಳಿಗೆ ನಾಂದಿ ಹಾಡಿದರು. 1925ರಲ್ಲಿ ಬಾರ್ನ್, ಜೋರ್ಡಾನ್, ಜೊತೆ ಸೇರಿ, ಹೊಸದಾಗಿ ರೂಪುಗೊಳ್ಳುತ್ತಿರುವ ಪರಿಕಲ್ಪನೆಗಳನ್ನು ಸಮರ್ಥವಾಗಿ ಬಿಂಬಿಸುವ, ಹಾಗೂ ಪರಿಹಾರ ಒದಗಿಸುವ ಮಾತೃಕೆ ವಿಧಾನವನ್ನು ಕ್ವಾಂಟಂ ಬಲವಿಜ್ಞಾನದಲ್ಲಿ ಬಳಕೆಗೆ ತಂದನು. ಡಿರಾಕ್ ಈ ವಿಧಾನವನ್ನು ಬಳಸತೊಡಗಿದನು. 1926ರಲ್ಲಿ ನಂತರ ಷ್ರೊಡಿಂಜರ್ ಸಮಾನ ಅಲೆ ಬಲವಿಜ್ಞಾನ ರೂಪಿಸಿ, ಹಳೆಯ ಹಾಗೂ ಹೊಸ ಪರಿಕಲ್ಪನೆಗಳನ್ನು ಕ್ವಾಂಟಂ ಬಲವಿಜ್ಞಾನದಲ್ಲಿ ಸಮನ್ವಯಗೊಳಿಸಿದನು. ಬಾರ್ನ್ ಅಲೆಫಲನದ ಸಂಭವನೀಯ ವಿವರಣೆಯನ್ನು ಮಂಡಿಸಿದನು. ಷ್ರೋಡಿಂಜರ್’ನ ಅಲೆ ಬಲವಿಜ್ಞಾನದಲ್ಲಿ. ಪ್ರತಿಯೊಂದು ಕಣವೂ ಒಂದು ಅಲೆಯ ಪೊಟ್ಟಣದಂತೆ ಪರಿಗಣಿತವಾಗಿದೆ. ಈ ಅಲೆ, ಕ್ರಮೇಣ ಇಲ್ಲದಂತಾಗುತ್ತದೆ. ಆದರೆ ಬಾರ್ನ್ ಇದನ್ನು ಒಪ್ಪದೆ ಯಾವುದೇ ಬಿಂದುವಿನಲ್ಲಿ ಕಣದ ಇರುವಿಕೆಯನ್ನು ಸಂಭವನೀಯತೆಯಿಂದ ಮಾತ್ರ ತಿಳಿಸಬಹುದೆಂದು ವಾದಿಸಿದನಲ್ಲದೆ, ಅಂತಹ ಸಂಭವನೀಯ ಇರುವನ್ನು ಗಣಿತೀಯ ಸೂತ್ರದಿಂದ ನಿರೂಪಿಸಿದನು. ಕ್ವಾಂಟಂ ಬಲವಿಜ್ಞಾನಕ್ಕೆ ಸಂಭವನೀಯತೆ ತರುವುದರ ಮೂಲಕ, ಭೌತಶಾಸ್ತ್ರವನ್ನು ನಿರ್ಧಾರಕ ಸ್ಥಿತಿಯಿಂದ ಅನಿರ್ಧಾರಕ ಸ್ಥಿತಿಗೆ, ಒಯ್ಯುವುದೆಂದು ಅಂತಹ ಸಿದ್ದಾಂತ ಅನಪೇಕ್ಷಿತವೆಂದು ಐನ್ಸ್ಟೀನ್ ವಿರೋಧಿಸಿದನು. ಈ ವಿಚಾರವಾಗಿ ಬಾರ್ನ್ ಹಾಗೂ ಐನ್ಸ್ಟೀನ್ ಬಹು ವರ್ಷಗಳ ಕಾಲ ಸಂವಾದ, ನಡೆಸಿದ್ದರು. 1970ರಲ್ಲಿ ನಿಧನನಾದ ಬಾರ್ನ್ನನ್ನು ಗಟ್ಟಿಂಜೆನ್ನಲ್ಲಿ ಸಮಾಧಿ ಮಾಡಲಾಗಿದೆಯಲ್ಲದೆ, ಅದರ ಶಾಖೆಯ ಮೇಲೆ ಅವನು ಪ್ರಾರಂಭಿಸಿದ ಮಾತೃಕೆ ಬಲವಿಜ್ಞಾನದ ಮೂಲ ಸೂತ್ರ pq – p-h/2 ಸೂತ್ರವನ್ನು ಬರೆಯಲಾಗಿದೆ. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಬಾಥ್ ವಾಲ್ಟರ್ (1891-1957) 1954
Bothe , Walther
ಜರ್ಮನಿ-ಭೌತಶಾಸ್ತ್ರ -ನ್ಯೂಟ್ರಾನ್ ಪ್ರೋಟಾಗಳನ್ನು ಗುರುತಿಸಿದಾತ.
ಮೊದಲ ಜಾಗತಿಕ ಯುದ್ದದಲ್ಲಿ ,ಯುದ್ದ ಕೈದಿಯಾಗಿದ್ದ ವಾಲ್ಟರ್ ಬರ್ಲಿನ್ನಲ್ಲಿ ಪ್ಲಾಂಕ್ನ ಶಿಷ್ಯನಾಗಿದ್ದನು. 1925ರಲ್ಲಿ ಸಂಶೋಧನೆಗೆ ಇಳಿಯುವ ಮುನ್ನ ವಾಲ್ಟರ್ ಮೂರು ಜರ್ಮನ್ ವಿಶ್ವ ವಿದ್ಯಾಲಯಗಳಲ್ಲಿ ಬೋಧಕನಾಗಿದ್ದನು. ಗೀಗರ್ ಜೊತೆ ಸೇರಿ ವಾಲ್ಟರ್ , ಕಾಂಪ್ಟನ್ ಪರಿಣಾಮವನ್ನು ಅಭ್ಯಸಿಸತೊಡಗಿದನು. ಪ್ರತ್ಯೇಕ ಸಂಘಟನೆಗಳಲ್ಲಿ ಉದ್ಬವಗೊಂಡ ಒಂದು ಎಲೆಕ್ಟ್ರಾನ್ ಹಾಗೂ ಪ್ರೋಟಾನ್ಗಳನ್ನು ಕುರಿತಾಗಿ ಅಧ್ಯಯನ ಮಾಡಲು, ಪ್ರಾರಂಭಿಸಿದ, ವಾಲ್ಟರ್ ಅದಕ್ಕಾಗಿ ಹೊಸ ವಿಧಾನವೊಂದನ್ನು ರೂಪಿಸಿದನು. ಇದರ ಫಲಶೃತಿಯಾಗಿ ವಿಕಿರಣ ಅಲೆಯಂತೆ ವರ್ತಿಸುವುದೆಂದು ಖಚಿತಗೊಂಡಿತು. 1929ರಲ್ಲಿ ಇದೇ ಮಾದರಿಯಲ್ಲಿ ವಿಶ್ವ ಕಿರಣಗಳನ್ನು ಅಭ್ಯಸಿಸಿ, ಅವುಗಳು ಆವರೆಗೆ ನಂಬಿದಂತೆ ಕೇವಲ ಗಾಮಾ ಕಿರಣಗಳಿಂದಾಗಿರದೆ, ಭಾರದ ಇತರ ಕಣಗಳನ್ನು ಹೊಂದಿರುವುವೆಂದು ಸಾಧಿಸಿ ತೋರಿಸಿದನು. 1930ರಲಿ ಗೀಸೆಸ್ನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾದ ವಾಲ್ಟರ್ ಬೆರಿಲಿಯಂನ್ನು ಆಲ್ಫಾ ಕಣಗಳಿಂದ ತಾಡಿಸಿದಾಗ, ಹೊಸ ಬಗೆಯ ಆವಿಷ್ಟರಹಿತ ಕಣಗಳು ಉತ್ಸರ್ಜನೆಯಾಗುವುದನ್ನು ತೋರಿಸಿದನು. ಮುಂದೆ 1932ರಲ್ಲಿ ಚಾಡ್ವಿಕ್ ಆವಿಷ್ಟರಹಿತ ಕಣಗಳು ಅಣುವಿನ ಬೀಜಗಳಲ್ಲಿರುವ ನ್ಯೂಟ್ರಾನ್ ಗಳೆಂದು ತೋರಿಸಿದನು. ಎರಡನೇ ಜಾಗತಿಕ ಯುದ್ದದಲ್ಲಿ ಬೈಜಿಕ ಶಕ್ತಿಯ (Nuclear Power )ಬಗೆಗೆ ಹಲವಾರು ಸಂಶೋಧನೆ ಕೈಗೊಂಡಿದ್ದ ವಾಲ್ಟರ್, 1954ರಲಿ ನೊಬೆಲ್ ಪುರಸ್ಕಾರವನ್ನು ಹಂಚಿಕೊಂಡನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಪಾಲಿಕಾರ್ಪ್, ಕುಷ್ಕ್ (1911-1993) 1955
Polykarp , Kusch
ಜರ್ಮನಿ-ಅಸಂಸಂ -ಭೌತಶಾಸ್ತ್ರ-ಅಣ್ವಯಿಕ ದೂಲ ವಿಧಾನದಲ್ಲಿ ಜೈವಿಕ ಅಣುಗಳ ರಾಚನಿಕ ಅಧ್ಯಯನದ ಮುಂಚೂಣಿಗ.
ಪಾಲಿಕಾರ್ಪ್ 26 ಜನವರಿ 1911ರಂದು ಬ್ಲಾಕೆನ್ಬರ್ಗ್ನಲ್ಲಿ ಜನಿಸಿದನು. ಈತ ಒಂದು ವರ್ಷದವನಿರುವಾಗ ಈತನ ತಂದೆ ಅಸಂಸಂಗಳಿಗೆ ಬಂದು ನೆಲೆಸಿದನು. ಆರಂಭದಲ್ಲಿ ಪಾಲಿಕಾರ್ಪ್ ಆಸಕ್ತಿಗಳು ರಸಾಯನಶಾಸ್ತ್ರದಲ್ಲಿದ್ದವು. ಪದವಿಗಾಗಿ ಕ್ಲೀವ್ಲ್ಯಾಂಡ್ನ ಕೇಸ್ ಇನ್ಸ್ಟಿಟ್ಯೂಟ್’ ಆಫ್ ಟೆಕ್ನಾಲಜಿ ಸೇರಿದ ನಂತರ ಭೌತಶಾಸ್ತ್ರಕ್ಕೆ ಬದಲಾಗಿ 1931ರಲ್ಲಿ ಪದವಿ ಗಳಿಸಿದನು. ಇಲಿನಾಯ್ ವಿಶ್ವವಿದ್ಯಾಲಯದಿಂದ 1936ರಲ್ಲಿ ಡಾಕ್ಟರೇಟ್ ಗಳಿಸಿದನು. ಪಾಲಿಕಾರ್ಪ್ ದೃಗ್ ಅಣ್ವಯಿಕ ರೋಹಿತದರ್ಶಕಶಾಸ್ತ್ರ ಮತ್ತು ದ್ರವ್ಯ ರೋಹಿತಶಾಸ್ತ್ರಗಳಲ್ಲಿ ವಿಶೇಷ ಪರಿಣಿತಿ ಹೊಂದಿದ್ದನು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಪಾಲಿಕಾರ್ಪ್ ಸೂಕ್ಷ್ಮತರಂಗ ಜನಕಗಳ ಸಂಶೋಧನೆಯಲ್ಲಿ ನಿರತನಾಗಿದ್ದನು. 1949ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯ ಸೇರಿ ಐ.ಐ.ರಬಿಯ ಸಾಂಗತ್ಯದಲ್ಲಿ ಅಣ್ವಯಿಕ ದೂಲ (Molecular Beam) ವಿಧಾನ ಬಳಸಿ ರಾಸಾಯನಿಕಗಳ ರಾಚನಿಕ ಸ್ವರೂಪ ನಿರ್ಧರಿಸಿದನು. ಮುಂದೆ ಅಣ್ವಯಿಕ ದೂಲ ವಿಧಾನ ರಸಾಯನ ಮತ್ತು ಜೀವಶಾಸ್ತ್ರದ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿತು. ಈ ದಿಶೆಯಲ್ಲಿ ನೀಡಿದ ಗಮನಾರ್ಹ ಕಾಣಿಕೆಗಳಿಗಾಗಿ ಪಾಲಿಕಾರ್ಪ್ 1955ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ವಿಲ್ಲೀಸ್, ಯುಜೀನ್ ಲ್ಯಾಂಬ್ (1913--) 1955
Willis , Eugene Lamb , Jr.
ಅಸಂಸಂ-ಭೌತಶಾಸ್ತ್ರ-
ವಿಲ್ಲೀಸ್ನ ತಂದೆ ಲಾಂಸ್ ಏಂಜಲೇಸ್ನಲ್ಲಿ ದೂರವಾಣಿ ಇಂಜಿನಿಯರಾಗಿದ್ದನು. 12 ಜುಲೈ 1913 ರಂದು ವಿಲ್ಲೀಸ್ ಜನಿಸಿದನು. ಮೊದಲ ಮೂರು ವರ್ಷಗಳ ಶಿಕ್ಷಣವನ್ನು ಓಕ್ಲ್ಯಾಂಡ್ ಹಾಗೂ ಕ್ಯಾಲಿಫ್ಲೋರ್ನಿಯಾಗಳಲ್ಲಿ ಪಡೆದ ವಿಲ್ಲೀಸ್ ನಂತರ ಕ್ಯಾಲಿಫ್ನ ಸಾರ್ವಜನಿಕ ಶಾಲೆ ಸೇರಿದನು. ಇದೇ ವಿಶ್ವವಿದ್ಯಾಲಯದಿಂದ ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ಪದವಿ ಗಳಿಸಿ, ಶಿಕ್ಷಣ ಮುಂದುವರೆಸಿ 1938ರಲ್ಲಿ ಡಾಕ್ಟರೇಟ್ ಗಳಿಸಿದನು. ಇದೇ ವರ್ಷ ಕೊಲಂಬಿಯಾ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಸೇರಿದನು. 1943ರಲ್ಲಿ ಸಹಾಯ ಉಪನ್ಯಾಸಕನಾಗಿ, 1945ರಲ್ಲಿ ಉಪ ಪ್ರಾಧ್ಯಾಪಕನಾದನು. 1943ರಿಂದ 1951ರವರೆಗೆ ಕೊಲಂಬಿಯಾ ರೇಡಿಯೇಷನ್ ಲ್ಯಾಬೋರೇಟರಿಯಲ್ಲಿ ಸಂಶೋಧನಾ ಸಹಾಯಕನಾಗಿದ್ದನು. 1951ರಲ್ಲಿ ಕ್ಯಾಲಿಫ್ಲೋರ್ನಿಯಾದ ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯ ಸೇರಿ, ಅಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. 1953, 54 ರಲ್ಲಿ ಹಾವರ್ಡ್ನಲ್ಲಿ ವಿಶೇಷ ಉಪನ್ಯಾಸಕನಾದನು. 1956ರಿಂದ 1962ರ ವರೆಗೆ, ಇಂಗ್ಲೆಂಡ್ ನ್ಯೂ ಕಾಲೇಜ್ನ ಫೆಲೊಹಾಗೂ ವೈಕ್ಹೆಮ್ ಪ್ರಾಧ್ಯಾಪಕನಾದನು. ಇದಾದ ನಂತರ ಯೇಲ್ “ವಿಶ್ವವಿದ್ಯಾಲಯದ್ಫಲ್ಲಿ ಸೇವೆ ಸಲ್ಲಿಸಿದನು. ನ್ಯೂಟ್ರಾನ್ ಹಾಗೂ ದ್ರವ್ಯದ ಅಚಿತಕ್ರಿಯೆ, ಬೈಜಿಕ ರಚನೆಗಳ ಕ್ಷೇತ್ರ ಸಿದ್ಧಾಂತ (Nuclear Field Theory) , ಬೀಟಾ ಶೈಥಿಲ್ಯ (Decay) ಸಿದ್ಧಾಂತ, ವಿಶ್ವ ಕಿರಣಗಳಲ್ಲಿ ವಿದಳನಗೊಂಡ ಅವಶೇಷಗಳ ಏರಿಳಿತ ಕ್ರಮ ಕ್ರಮಭಂಗ ಸಮಸ್ಯೆಗಳು ವಿಲ್ಲೀಸ್ನ ಆಸಕ್ತಿಯ ವಿಷಯಗಳಾಗಿದ್ದವು. ಅಧಿಕ ಸ್ಥಿರ ಪರಮಾಣುಗಳಿಂದ ಎಲೆಕ್ಟ್ರಾನ್ ಉತ್ಸರ್ಜನೆ, ಬೈಜಿಕ ಅನುರಣನ ಪ್ರಯೋಗಗಳಿಗೆ ಬೇಕಾದ ತಿದ್ದುಪಡಿ, ಮ್ಯಾಗ್ನೆಟಾನ್ ಆಂದೋಳಕಗಳ (Oscillator) ಸಿದ್ಧಾಂತ ಹಾಗೂ ವಿನ್ಯಾಸ ಸೂಕ್ಷ್ಮತರಂಗ ರೋಹಿತಶಾಸ್ತ್ರ ಸಿದ್ಧಾಂತದಲ್ಲಿ ವಿಲ್ಲೀಸ್ಗೆ ವಿಶೇಷ ಪರಿಣಿತಿಯಿದ್ದಿತು. ಜಲಜನಕ, ಹೀಲಿಯಂ, ಡ್ಯುಟೋರಿಯಂಗಳ ಸೂಕ್ಷ್ಮ ರಚನೆ ವೈದ್ಯುತ್ಗತೀಯ ಚೈತನ್ಯ ಮಟ್ಟಗಳ ಪಲ್ಲಟಗಳ ಸಿದ್ಧಾಂತಗಳಲ್ಲಿ ವಿಲ್ಲೀಸ್ ಗಮನಾರ್ಹ ಕಾಣಿಕೆ ನೀಡಿದ್ದಾನೆ. 1953ರಲ್ಲಿ ಅಮೆರಿಕನ್ ಅಕಾಡೆಮಿ ಆಫ್ ಆಟ್ರ್ಸ್ ಅಂಡ್ ಸೈನ್ಸ್ನಿಂದ ರಮ್ಫೋರ್ಡ್ ಪ್ರೀಮಿಯಂ ಪ್ರಶಸ್ತಿ ಗಳಿಸಿದನು. 1954ರಲ್ಲಿ ಪೆನ್ಸಿಲ್ವೇನಿಯಾದಿಂದ ಗೌರವ ಡಾಕ್ಟರೇಟ್ ಲಭಿಸಿತು. ಅಸಂಸಂದ ನ್ಯಾಷನಲ್ ಅಕಾಡೆಮಿ ಆಫ ಸೈನ್ಸ್ನ ಹಾಗೂ ಅಮೆರಿಕನ್ ಫಿಸಿಕಲ್ ಸೊಸೈಟಿಯ ಸದಸ್ಯನಾಗಿಯೂ ವಿಲಿಯಂ ಸೇವೆ ಸಲ್ಲಿಸಿದನು. 1955ರಲ್ಲಿ ವಿಲ್ಲೀಸ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಬ್ರಾಟೇನ್, ವಾಲ್ಟರ್ (ಹೌಸರ್) (1902-1987) -1956
Brattain , Walter (Houser)
ಅಸಂಸಂ- ಭೌತಶಾಸ್ತ್ರ-ಟ್ರಾನ್ಸಿಸ್ಟರ್’ನ ಸಹ ಉಪಜ್ಞೆಕಾರ.
ಚೀನಾದಲ್ಲಿ ಜನಿಸಿದ ವಾಲ್ಟರ್, ವಾಷಿಂಗ್ಟನ್ನಲ್ಲಿ ಬೆಳೆದನು. 1929ರಲ್ಲಿ ಮಿನ್ನೆಸೊಟ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಗಳಿಸಿದನು. ಅದೇ ವರ್ಷ ಸಂಶೋಧನೆಗಳಿಗೆ ಹೆಸರುವಾಸಿಯಾಗಿದ್ದು, ಟೆಲಿಪೆÇೀನನ ಉಪಜ್ಞೆಕಾರನಾದ ಗ್ರಹಾಂ ಬೆಲ್ನಿಂದ ಸ್ಥಾಪಿಸಲ್ಪಟ್ಟ ಬೆಲ್ ಲ್ಯಾಬೋರೇಟರೀಸ್ಗೆ ಸೇರಿದನು. ಅತಿವಾಹಕಗಳ (Super Conductors) ಮೇಲ್ಮೈ ಗುಣಗಳನ್ನು ಕುರಿತಾಗಿ ಅಧ್ಯಯನ ಪ್ರಾರಂಭಿಸಿ ಮೊದಲಿಗೆ ತಾಮ್ರದ ಆಕ್ಸೈಡಗಳನ್ನು ಬಳಸಿದನು ಆದರೆ ಎರಡನೇ ಜಾಗತಿಕ ಯುದ್ದದ ನಂತರ ನಿಜವಾದ ಅರೆವಾಹಕವಾದ ಸಿಲಿಕಾನ್ ಹಾಗೂ ಜರ್ಮೇನಿಯಂ ಸುಲಭವಾಗಿ ದೊರೆಯತೊಡಗಿದವು. ಇದರಿಂದ ಅರೆ ವಾಹಕಗಳ ಮೇಲಿನ ಪ್ರಯೋಗಗಳು ಖಚಿತವೂ ಸ್ಪಷ್ಟವೂ ಆಗತೊಡಗಿದವು. ವಾಲ್ಟರ್, ಬಾರ್ಡೆನ್ ಹಾಗೂ ಷಾಕ್ಲೆ ಜೊತೆ ಸೇರಿ, ಪ್ರಯೋಗ ಹಾಗೂ ಸಿದ್ಧಾಂತಗಳ ಸಮನ್ವಯದ ಹಾದಿಯಲ್ಲಿ, 1947ರಲ್ಲಿ ಬಿಂದು ಸಂಪರ್ಕ ಹೊಂದಿದ ಟ್ರಾನ್ಸಿಸ್ಟರ್ನ್ನು ಅಭಿವೃದ್ದಿಗೊಳಿಸಿದನು. ಇದಕ್ಕಾಗಿ ಜರ್ಮೇನಿಯಂ ಸ್ಪಟಿಕಗಳನ್ನು ¨ಳಸಲಾಗಿದ್ದಿತು. ಟ್ರಾನ್ಸಿಸ್ಟಾರ್’ನ ಅಭಿವೃದ್ದಿ ಇಡೀ ಮನುಕುಲದ ಚರಿತ್ರೆಯಲ್ಲಿ ಗಮನಾರ್ಹ ಬದಲಾವಣೆ ತಂದಿತು. ಟ್ರಾನ್ಸಿಸ್ಟರ್ ಆವಿಷ್ಕಾರವಾಗುವ ಮೊದಲು ಎಲೆಕ್ಟ್ರಾನ್ ಉಪಕರಣಗಳಲ್ಲಿ ಶಾಖೋರ್ಜಿತ (Thermionic) ಡೈಯೋಡ್ , ಟ್ರಯೋಡ್ ಕವಾಟಗಳು ಬಳಕೆಯಲ್ಲಿದ್ದವು. ಟ್ರಾನ್ಸಿಸ್ಟರ್ಗಳ ಇವುಗಳಿಗೆ ಹೋಲಿಸಿದಂತೆ ಹಲವು ಸಹಸ್ರ ಪಟ್ಟು ಕಿರಿದಾಗಿಯೂ , ಪರಿಷ್ಕೃತವಾಗಿಯೂ ಕಡಿಮೆ ಶಕ್ತಿ ಬಳಕೆ ಹಾಗೂ ಅತ್ಯುತ್ತಮ ದಕ್ಷತೆಯನ್ನು ಹೊಂದಿವೆ. ಅದಲ್ಲದೆ ಟ್ರಾನ್ಸಿಸ್ಟರ್ಗಳನ್ನು ಕಿರುಜಾಗದಲ್ಲಿ ಜೋಡಿಸಿ, ಬೃಹತ್ತಾಗಿದ್ದ ಎಲೆಕ್ಟ್ರಾನಿಕ್ ಮಂಡ¯ಗಳನ್ನು ಅಂಗೈ ಅಗಲಕ್ಕೆ ಇಳಿಸುವುದೂ ಸಾಧ್ಯವಾಯಿತು. ಇದು ಇಡೀ ಜಗತ್ತನ್ನು ನೋಡುವ ದೃಷ್ಟಿಯನ್ನು ಬದಲಾಯಿಸಿತು. ಪ್ರಯೋಗಶೀಲನಾಗಿದ್ದ ವಾಲ್ಟರ್, ವಿಟ್ಮನ್ ಕಾಲೇಜನ್ನು ಸೇರಿ ಬೈಜಿಕ ಪೆÇರೆಗಳ ಮೇಲ್ಮುಖಗಳ ಗುಣಗಳ ಅಧ್ಯಯನದಲ್ಲಿ ನಿರತನಾದನು. 1956ರಲ್ಲಿ ಬ್ರಾಟೀನ್, ಬಾರ್ಡೀನ್ ಹಾಗೂ ಷಾಕ್ಲೆಯವರೊಂದಿಗೆ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಜಾನ್ , ಬಾರ್ಡಿನ್, (1908--)1956 & 1972
John , Bardeen
ಅಸಸಂ-ಭೌತಶಾಸ್ತ್ರ- ಟ್ರಾನ್ಸಿಸ್ಟರ್ನ ಸಹ ಉಪಜ್ಞೆಕಾರ- ಬಿ.ಸಿ.ಎಸ್. ಅತಿವಾಹಕ ಸಿದ್ಧಾಂತಕ್ಕೆ ಕಾಣಿಕೆ ಸಲ್ಲಿಸಿದಾತ-ಎರಡು ಬಾರಿ ನೊಬೆಲ್ ಪ್ರಶಸ್ತಿ ಪಡೆದಾತ.
ಶೈಕ್ಷಣಿಕ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ಬಾರ್ಡೀನ್ ವಿಸ್ಕಾನ್ಸಿನ್ನಲ್ಲಿ ವೈದ್ಯುತ್ ಇಂಜಿನಿಯರಿಂಗ್ ಪದವಿ ಗಳಿಸಿದ್ದನು. ಮೊದಲ 3 ವರ್ಷ ಬಾರ್ಡಿನ್ ಭೂಭೌತಶಾಸ್ತ್ರಜ್ಞನಾಗಿ ಗಲ್ಪ್ ಸಂಶೋಧನಾ ಪ್ರಯೋಗಾಲಯದಲ್ಲಿ ದುಡಿದನು. ನಂತರ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿಗ್ನರ್ ಕೈಕೆಳಗೆ 1936ರಲ್ಲಿ ಗಣಿತೀಯ ಭೌತಶಾಸ್ತ್ರದಲ್ಲಿ ಪಿ.ಎಚ್.ಡಿ ಪಡೆದನು. ಇದಾದ ನಂತರ ಕೆಲಕಾಲ ಮಿನ್ನೆಸೊಟಾ ವಿಶ್ವವಿದ್ಯಾಲಯದಲ್ಲಿ ನಂತರ ನೇವಲ್ ಆರ್ಡ್ನ್ಯಾನ್ಸ್ ಲ್ಯಾಬೋರೇಟರಿಯಲ್ಲಿ ದುಡಿದನು. ಎರಡನೇ ಜಾಗತಿಕ ಯುದ್ದದ ಕೊನೆಯ ವೇಳೆಗೆ ಬಾರ್ಡಿನ್ ಬೆಲ್ ಪ್ರಯೋಗಾಲಯದ ಘನಸ್ಥಿತಿ ಭೌತಶಾಸ್ತ್ರದ ಗುಂಪಿಗೆ ಸೇರಿದನು. ಬಾರ್ಡೀನ್ ಮಹತ್ತರವಾದ ಕಾರ್ಯಗಳು ಇಲ್ಲಿಂದ ಪ್ರಾರಂಭವಾಗಿ ಅವನು 1951ರಲ್ಲಿ ಇಲಿನಾಯಿಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಸೇರುವವರೆಗೆ ಅವ್ಯಾಹತವಾಗಿ ಮುಂದುವರೆದವು. ಬಾರ್ಡೀನ್, ಬ್ರಾಟೇನ್ ಹಾಗೂ ಷಾಕ್ಲೆ ಜೊತೆ ಸೇರಿ 1956ರ ನೊಬೆಲ್ ಪಾರಿತೋಷಕವನ್ನು ಬಿಂದು ಸಂಪರ್ಕ ಟ್ರಾನ್ಸಿಸ್ಟರ್ ಅಭಿವೃದ್ದಿಗಾಗಿ ಹಂಚಿಕೊಂಡನು. ಅದಲ್ಲದೆ 1972ರಲ್ಲಿ ಮತ್ತೊಮ್ಮೆ ಕೂಪರ್ ಹಾಗೂ ಷ್ರೀಫರ್ ಜೊತೆ ಅಲೆವಾಹಕತ್ವವನ್ನು ಕುರಿತಾಗಿ ಮಂಡಿಸಿದ ಸಿದ್ಧಾಂತಕ್ಕಾಗಿ ನೊಬೆಲ್ ಪಾರಿತೋಷಕವನ್ನು ಎರಡನೇ ಬಾರಿಗೆ ಪಡೆದನು. ಈ ಸಿದ್ಧಾಂತ ಈಗ ಬಾರ್ಡೀನ್ ಕೂಪರ್ ಷ್ರೀಫರ್ (ಬಿ.ಸಿ.ಎಸ್ ಸಿದ್ಧಾಂತ) ಸಿದ್ಧಾಂತವೆಂದೇ ಖ್ಯಾತ. ಬಾರ್ಡೀನ್ ಭೌತಶಾಸ್ತ್ರದಲ್ಲಿ ಎರಡು ಬಾರಿ ನೊಬೆಲ್ ಪಾರಿತೋಷಕ ಪಡೆದ ಮೊದಲಿಗ.1911ರಲ್ಲಿ ಕ್ಯಾಮೆರ್ಲಿಂಗ್ ಒನ್ನೆಸ್ ಅತಿವಾಹಕತ್ವವನ್ನು ಅನಾವರಣಗೊಳಿಸಿದ್ದರು. 150ಕೆ ಗಿಂತ ಕಡಿಮೆ ಉಷ್ಣತೆಯಲ್ಲಿ ಲೋಹವೊಂದು ತನ್ನೆಲ್ಲಾ ಕಾಂತ ಕ್ಷೇತ್ರವನ್ನು ಉಚ್ಛಾಟಿಸಿ , ವಿದ್ಯುತ್ ಪ್ರವಾಹಗಳನ್ನು ಕಾಯ್ದು ಕೊಳ್ಳುತ್ತದೆಯಲ್ಲದೆ ಶೂನ್ಯ ಪ್ರತಿರೋಧ ಸ್ಥಿತಿಯಲ್ಲಿರುತ್ತದೆ. 1950ರಲ್ಲಿ ನಡೆಸಿದ ಸಂಶೋಧನೆಗಳಿಂದ ಯಾವುದೇ ಲೋಹ ಅತಿವಾಹಕದಂತೆ ವರ್ತಿಸಲು ಇರಬೇಕಾದ ಗರಿಷ್ಟ ತಾಪಮಾನ ಆ ಲೋಹದ ಪರಮಾಣು ದ್ರವ್ಯರಾಶಿಗೆ ವಿಲೋಮವಾಗಿರುತ್ತದೆಯೆಂದು ತಿಳಿದು ಬಂದಿತು.ಇದನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ ಬಾರ್ಡೀನ್ ಲೋಹದ ಪರಮಾಣು ಜಾಲಂಧ್ರ (Lattice) ಲೋಹದಲ್ಲಿ ವಿದ್ಯುತ್ ವಾಹಕವಾಗಿರುವ ಎಲೆಕ್ಟ್ರಾನ್ಗಳೊಂದಿಗೆ ಅಂತ:ಕ್ರಿಯೆಗೊಳ್ಳುವುದಎಂದ ಹೀಗಾಗುತ್ತದೆಯೆಂದು ಪ್ರತಿಪಾದಿಸಿದನು. ಕೂಪರ್ 1956ರಲ್ಲಿ ಇಲಿನಾಯ್ ವಿಶ್ವವಿದ್ಯಾಲಯದಲ್ಲಿ ಹಲವಾರು ಅಧ್ಯಯನಗಳನ್ನು ಕೈಗೊಂಡು , ಎಲೆಕ್ಟ್ರಾನ್ಗಳು ತಮ್ಮೊಂಳಗೆ ತಾವೇ ದುರ್ಬಲವಾಗಿ ಆಕರ್ಷಿತಗೊಂಡು ತಮ್ಮ ಸುತ್ತಲಿನ ಲೋಹ ಜಾಲಂಧ್ರವನ್ನು ವಿರೂಪಗಳಿಸುವವೆಂದೂ ಸಾಧಿಸಿದನು. ಇಂತಹ ವಿದ್ಯಾಮಾನ ಜರುಗುವಾಗ, ಎಲೆಕ್ಟ್ರಾನ್ಗಳು ಜೋಡಿಗೊಳ್ಳುತ್ತವೆ. ಅಂತಹ ಜೋಡಿಯನ್ನು ಕೂಪರ್-ಜೋಡಿಗಳೆನ್ನುತ್ತಾರೆ. ಬಾರ್ಡೀ£–ಕೂಪರ್ ಹಾಗೂ ಷ್ರಿಫರ್ ಇನ್ನು ಮುಂದುವರೆದು ಇಂತಹ ಹಲವಾರು ಜೋಡಿಗಳು ರೂಪುಗೊಂಡು, ಅತಿವಾಹಕತೆಗೆ ಕಾರಣವಾಗುತ್ತವೆ ಎಂದು ತೋರಿಸಿದರು. ಬಿ.ಸಿ.ಎಸ್. ಸಿದ್ಧಾಂತ , ಅತಿವಾಹಕತೆಯತ್ತ ಗಂಭೀರ ನೋಟ ಹರಿಸುವಂತೆ ಮಾಡಿತಲ್ಲದೆ, ಸೂಕ್ಶ್ಮಾತಿಸೂಕ್ಷ್ಮ ಸ್ಥಿತಿಯಲ್ಲಿ , ಪರಮಾಣುವಿನ ಅಂತರಂಗದಲ್ಲಿ ಜರುಗುವ ಕ್ವಾಂಟಂ ಕ್ರಿಯೆ ಹೇಗೆ ಬಾಹ್ಯದಲ್ಲಿ ಎದ್ದು ಕಾಣುವಂತಹ, ಅತಿವಾಹಕತೆಯಂತಹ ಸ್ಥಿತಿಗೆ ಕಾರಣವಾಗಬಲ್ಲುದೆಂದು ಸ್ಪುಟಗೊಳಿಸಿತು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಷಾಕ್ಲೆ , ವಿಲಿಯಂ ಬ್ರಾಡ್’ಫೋರ್ಡ್ (1910-1989) 1956
Shockley , William Bradford
ಅಸಂಸಂ-ಭೌತಶಾಸ್ತ್ರ- ಟ್ರಾನ್ಸಿಸ್ಟರ್ ಉಪಜ್ಞೆಕಾರ.
ಷಾಕ್ಲೆಯ ತಂದೆ ತಾಯಿಗಳಿಬ್ಬರೂ ಗಣಿಗಾರಿಕೆ ಇಂಜಿನಿಯರಿಂಗ್ಗಳಾಗಿದ್ದರು. ಷಾಕ್ಲೆ ,ಲಂಡನ್ನಲ್ಲಿ ಜನಿಸಿದನು. ಕ್ಯಾಲಿಪೋರ್ನೀಯಾ ಹಾಗೂ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ನಲ್ಲಿ ವ್ಯಾಸಂಗ ಮಾಡಿದನು. 1936ರಿಂದ ಬೆಲ್ ಪ್ರಯೋಗಾಲಯಗಳಲ್ಲಿ ಕೆಲಸಕ್ಕೆ ಸೇರಿದನು. 1942ರಿಂದ 1944ರ ಅವಧಿಯಲ್ಲಿ ಅಸಂಸಂಗಳ ಜಲಾಂತರ್ಗಾಮಿ ವಿರೋಧಿ ಯುದ್ದ ಸಂಶೋಧನೆಯಲ್ಲಿ ಕೆಲಸ ಮಾಡಿದನು. ಎರಡನೇ ಜಾಗತಿಕ ಯುದ್ದದ ನಂತರ, ಬೆಲ್ ಪ್ರಯೋಗಾಲಯಗಳಿಗೆ ಮರಳಿ ಬಾರ್ಡೀನ್, ಬ್ರಾಟೀನ್ರವರ ಸಹಯೋಗದಲ್ಲಿ ನಿರ್ವಾತ ಕೊಳವೆಗಳಿಗೆ ಬದಲು ಅರೆವಾಹಕಗಳನ್ನು ಬಳಸಲು ಯತ್ನಿಸಿದನು. ಸೀಸದ ಸಲ್ಫೇಡ್ ಹಾಗೂ ಆ ಬಗೆಯ ಸ್ಪಟಿಕಗಳು, ವಿದ್ಯುತ್ ಪ್ರವಾಹವನ್ನು ಒಂದೇ ದಿಕ್ಕಿನಲ್ಲಿ ಹರಿಯಲು ಬಿಟ್ಟು ಕವಾಟಗಳಂತೆ ವರ್ತಿಸುತ್ತವೆ. ಬ್ರಿಟನ್ನಲ್ಲಿ ಜೆ.ಎ. ಫೆ್ಲಮಿಂಗ್ನ ಡಯೋಡ್ಗಳು ಬಳಕೆಯಲ್ಲಿದ್ದವು. ಷಾಕ್ಲೆ ಹಾಗೂ ಸಹೋದ್ಯೋಗಿಗಳ ಸಂಶೋಧನೆ, ಜರ್ಮೇನಿಯಂ ಉತ್ತಮ ಅರೆವಾಹಕವೆಂದು , ಅದರಲ್ಲಿನ ಕಲ್ಮಷಗಳ ಪ್ರಮಾಣಕ್ಕನುಗುಣವಾಗಿ,ಅದರ ವಾಹಕತೆ ಬದಲಾಗುವುದೆಂದು ಗುರುತಿಸಿದರು. ಇದರ ಮುಂದುವರಿದ ಸಂಶೋಧನೆಯ ಫಲವಾಗಿ ಬಿಂದು ಸಂಪರ್ಕ (Point Contact) ಟ್ರಾನ್ಸಿಸ್ಟರ್’ಗಳು 1947ರಲ್ಲಿ ನಿರ್ಮಾಣಗೊಂಡವು. ಇದಾದ ಒಂದು ತಿಂಗಳಲ್ಲೇ ಷಾಕ್ಲೆ, ವಿಭಿನ್ನ ಸಂಸ್ಕರಿತ ಸಿಲಿಕಾನ್ ಸ್ಪಟಿಕಗಳ ಸಂಧಿ ಟ್ರಾನ್ಸಿಸ್ಟರ್ ತಯಾರಿಸಿದನು. ಇಂತಹ ಘನಸ್ಥಿತಿಯ ಟ್ರಾನ್ಸಿಸ್ಟರ್ಗಳು ವಿದ್ಯುತ್ನ್ನು ವರ್ಧನೆಗೊಳಿಸುವಂತೆ ಶೋಧಿಸಿ ಕವಾಟದಂತೆಯೂ ವರ್ತಿಸುತ್ತವೆ. ಇವುಗಳಿಂದ ಬಹು ಕಿರಿದಾದ, ವಿದ್ಯುತ್ ಮಂಡಲಗಳ ರಚನೆ ಸಾಧ್ಯವಾಯಿತು. ಇವುಗಳಿಂದಾಗಿಯೇ ಎಲೆಕ್ಟ್ರಾನ್ ಕ್ರಾಂತಿ ಜರುಗಿ, ನಾಗರಿಕ ಜಗತ್ತಿನ ಸ್ವರೂಪವೇ ಬದಲಾಯಿತು. ರೇಡಿಯೋ , ದೂರದರ್ಶನ, ಗಣಕ,ನೂರಾರು ಬಗೆಯ ಸಾಧನಗಳು ಹೊರಬಂದವು. 1956ರಲ್ಲಿ ಷಾಕ್ಲೆ, ಬಾರ್ಡೀನ್ ಮತ್ತು ಬ್ರಾಟೇನ್ ನೊಬೆಲ್ ಪ್ರಶಸ್ತಿ ಪಡೆದನು. 1963ರಿಂದ ಷಾಕ್ಲೆ ,ಸ್ಟ್ಯಾನ್ ಪೋರ್ಡ್ನಲ್ಲಿ ಇಂಜಿನಿಯರಿಂಗ್ ಪ್ರಾಧ್ಯಾಪಕನಾದನು. 1965ರ ನಂತರ ಬುದ್ಧ್ದಿವಂತಿಕೆ, ಅನುವಂಶಿಕವೆಂದು ಕೆಲವು ಜನಾಂಗಗಳ ಜನಸಂಖ್ಯೆ ಅಭಿವೃದ್ದಿ ಮಾನವ ಕುಲದಲ್ಲಿ ಬುದ್ದಿವಂತಿಕೆಯನ್ನು ಕುಗ್ಗಿದುವುದೆಂಬ ಹೇಳಿಕೆ ನೀಡಿ ಸಾರ್ವಜನಿಕ ಟೀಕೆಗೆ ತುತ್ತಾದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಲೀ, ಸುಂಗ್ ಡೆವೊ (1926--) 1957
Lee ,Tsung Dao
ಚೀನಾ-ಅಸಂಸಂ-ಸೈದ್ಧಾಂತಿಕ ಭೌತಶಾಸ್ತ್ರ- ಕ್ಷೀಣ ಬೈಜಿಕ ಕ್ರಿಯೆಗಳಲ್ಲಿ (Weak Nuclear Interactions) ಸಾಮ್ಯತೆ (Parity) ಸಂರಕ್ಷಿಸಲ್ಪಡದೆಂದು ತೋರಿಸಿದಾತ.
ಲೀ ಸುಂಗ್ ಚೀನಾದಲ್ಲಿ ಭೌತಶಾಸ್ತ್ರದಲ್ಲಿ ಪದವಿ ಗಳಿಸಿದನು. ಎರಡನೇ ಜಾಗತಿಕ ಯುದ್ದದಲ್ಲಿ ಜಪಾನ್, ಚೀನಾದ ಮೇಲೆ ಆಕ್ರಮಣವೆಸಗಿದುದರಿಂದ ಲೀಯ ಅಧ್ಯಯನಕ್ಕೆ ತಡೆಯುಂಟಾಯಿತು. ಹೀಗಾಗಿ ಲೀ ಚೀನಾದ ಮತ್ತೊಂದು ದೂರ ಪ್ರಾಂತಕ್ಕೆ ಪಲಾಯನಗೈದನು. 1946ರಲ್ಲಿ ಅನುದಾನ ಪಡೆದು, ಖಭೌತಶಾಸ್ತ್ರದಲ್ಲಿ ಫರ್ಮಿಯ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ಅವಕಾಶ ಗಳಿಸಿದನು. ಪ್ರಿನ್ಸ್’ಟನ್, ಕೊಲಂಬಿಯಾಗಳಲ್ಲಿಕೆಲಸ ಮಾಡಿದನು. ವೈದ್ಯುತ್ ಕಾಂತೀಯ ಹಾಗೂ ಪ್ರಬಲ ಬೈಜಿಕ ಅಂತಕ್ರಿಯೆಗಳು ಸ್ಥೂಲದಲ್ಲಿರುವಂತೆ, ಸೂಕ್ಷ್ಮದಲ್ಲೂ ಒಂದೇ ಬಗೆಯದಾಗಿದ್ದು ಸರ್ವ ಸಮಂಜಸವಾಗಿರುತ್ತದೆ. 1956ರಲ್ಲಿ ಯಾಂಗ್ ಜೊತೆಗೂಡಿ ಲೀ ಇದು ಕ್ಷೀಣ ಬೈಜಿಕ ಕ್ರಿಯೆಗಳಿಗೆ ಅನ್ವಯವಾಗುವುದಿಲ್ಲವೆಂದು ತೋರಿಸಿದನು. ಇದಕ್ಕಾಗಿ ಇವರು ಬೀಜದ ಬೀಟಾ ಶ್ಶೆಥಿಲ್ಯವನ್ನು (Decay) ಪರಿಗಣಿಸಿದರು. ಹಲವಾರು ಪ್ರಯೋಗಗಳನ್ನು ಪರಿಶೋಧನೆಗಾಗಿ ರೂಪಿಸಿದರು. ಈ ಪ್ರಯೋಗಗಳನ್ನು ಪರಾಮರ್ಶಿಸಿ, ಲೀ ಹಾಗೂ ಯಾಂಗ್ ತಮ್ಮ ಹೇಳಿಕೆ ನಿಜವೆಂದು ಸಾರಿದರು. ಅತಿ ಹಗುರವಾದ ತಟಸ್ಥ ಕಣವನ್ನು ನ್ಯೂಟ್ರಿನೋ ಎನ್ನುತ್ತಾರೆ. ಲೀ ಹಾಗೂ ಯಾಂಗ್ ಎಲೆಕ್ಟ್ರಾನ್ನ ಉತ್ಸರ್ಜನೆಯಲ್ಲಿ ಹೊಮ್ಮಿದ ನ್ಯೂಟ್ರಿನೋ , ಮ್ಯುಯಾನ್ನ ಉತ್ಸರ್ಜನೆಯಲ್ಲಿ ಹೊಮ್ಮುವ ನ್ಯೂಟ್ರಿನೋಗಿಂತ ವಿಭಿನ್ನವಾಗಿರುತ್ತದೆಯೆಂದು ಹೇಳಿದರು. 1961ರಲ್ಲಿ ಇದನ್ನು ಪ್ರಯೋಗಗಳಿಂದ ಖಚಿತಪಡಿಸಲಾಯಿತು. ಕ್ಷೀಣ ಬೈಜಿಕ ಬಲ ಹೊಂದಿದ ಡಬ್ಲ್ಯೂ -ಬೊಸಾನ್ನ ಅಸ್ತಿತ್ವವನ್ನು ಲೀ ಹಾಗೂ ಯಂಗ್ ಮುನ್ನುಡಿದರು. ನಂತರ ಇದು ಪ್ರಯೋಗಗಳಿಂದ ಖಚಿತಗೊಂಡಿತು. 1977ರಲ್ಲಿ ಲೀ ಹಾಗೂ ಯಾಂಗ್ ನೊಬೆಲ್ ಪುರಸ್ಕೃತರಾದ ಮೊದಲ ಚೀನಿಯರಾದರು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಯಾಂಗ್, ಷೆನ್ನಿಂಗ್ (1922--) 1957
Yang , Chen Ning
ಚೀನಾ-ಅಸಂಸಂ-ಭೌತಶಾಸ್ತ್ರ- ಕ್ಷೀಣ ಬೈಜಿಕ ಕ್ರಿಯೆಗಳಲ್ಲಿ ಕ್ರಿಯಾ ಸಾಮ್ಯಾತೆ ಸಂರಕ್ಷಿಸಲ್ಪಡದೆಂದು ತೋರಿಸಿದಾತ.
ಯಾಂಗ್ನ ತಂದೆ ಗಣಿತದ ಪ್ರಾಧ್ಯಾಪಕನಾಗಿದ್ದನು. ಚೀನಾದ ಕುನ್ಮಿಂಗ್ನಲ್ಲಿ ಶಿಕ್ಷಣ ಪೂರೈಸಿದ ಯಾಂಗ್, ಅಸಂಸಂದಲ್ಲಿ ಟೆಲ್ಲರ್ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಗಳಿಸಲು ಚಿಕಾಗೋಗೆ ಹೋದನು. 1949ರಲ್ಲಿ ಪ್ರಿನ್ಸ್’ಟನ್ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡಿ ಸಂಸ್ಥೆ ಸೇರಿದನು. 1966ರಲ್ಲಿ ನ್ಯೂಯಾರ್ಕ್ ರಾಜ್ಯದ ವಿಶ್ವವಿದ್ಯಾಲಯದಲ್ಲಿ ಸೈದ್ಧಾಂತಿಕ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. ಯಾಂಗ್, ಲೀ ಜೊತೆಗೆ ನಡೆಸಿದ ಕೆಲಸಗಳಿಂದ ಭೌತಶಾಸ್ತ್ರದ ಸೈದ್ಧಾಂತಿಕ ಚಿಂತನೆಗಳಿಗೆ, ಮಹಾನ್ ತಿರುವು ದಕ್ಕಿತು,. ಭೌತಶಾಸ್ತ್ರದ ನಿಯಮಗಳು ಬಿಂಬ, ಪ್ರತಿಬಿಂಬಗಳೆರಡರಲ್ಲಿ ಒಂದೇ ರೀತಿಯಲ್ಲಿದ್ದು ಕಾರ್ಯ ಸಾರೂಪ್ಯತೆ ಸಂರಕ್ಷಿಸಲ್ಪಡುತ್ತದೆಯೆಂದು ನಂಬಲಾಗಿದ್ದಿತು. ಯಾಂಗ್ ಹಾಗೂ ಲೀ 1956ರಲ್ಲಿ ಕ್ಷೀಣ ಬೈಜಿಕ ಬಲಗಳಿಗೆ ಇದು ಅನ್ವಯವಾಗುವುದಿಲ್ಲ ಎಂಬ ಮುನ್ಸೂಚನೆ ನೀಡಿದರು. ವು ಹಲವಾರು ಕ್ಲಿಷ್ಟ ಪ್ರಯೋಗಗಳಿಂದ ಇದು ನಿಜವೆಂದು ತೋರಿಸಿದಳು. 1957ರಲ್ಲಿ ಯಾಂಗ್ ಹಾಗೂ ಲೀ ನೊಬೆಲ್ ಪ್ರಶಸ್ತಿ ಗಳಿಸಿದರು. ಯಾಂಗ್, ಆರ್.ಎಲ್.ಮಿಲ್ಸ್ ಜೊತೆಗೂಡಿ ಅಬೆಲಿಯನೇತರ ಗಾಜ್ ಸಿದ್ಧಾಂತ ರೂಪಿಸಿದರು. ಇದು ಯಾಂಗ್-ಮಿಲ್ ಸಿದ್ಧಾಂತ ಎಂದು ಹೆಸರಾಗಿದೆ,. ಈ ಸಿದ್ಧಾಂತ ಕಣ ಭೌತಶಾಸ್ತ್ರ ಹಾಗೂ ಕ್ವಾಂಟಂ ಕ್ಷೇತ್ರಗಳಲ್ಲಿನ ವಿಭಿನ್ನ ಮಾರ್ಗವೆಂದು ಪರಿಗಣಿಸಲಾಗಿದೆ. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಚೆರೆಂಕೊವ್, ಪಾವೆಲ್ ಅಲೆಕ್ಸೆಯೆವಿಖ್ (1904-1990 ) 1958
Cherenkov , Pavel Alekseyevich
ರಷ್ಯಾ-ಭೌತಶಾಸ್ತ್ರ - ಚೆರೆಂಕೊವ್ ಪರಿಣಾಮ ಅನಾವರಣಗೊಳಿಸಿದಾತ.
ವೊರೊನೆಝ್ ರಾಜ್ಯ ವಿಶ್ವವಿದ್ಯಾಲಯದಿಂದ ಪದವೀಧರನಾದ ಚೆರೆಂಕೊವ್ , ಲೆಬೆಡೆವ್ನ್ ಭೌತಶಾಸ್ತ್ರದ ಸಂಶೋಧನ ಸಂಸ್ಥೆಯಲ್ಲಿ 1930ರಲಿ ವೃತ್ತಿ ಜೀವನ ಪ್ರಾರಂಭಿಸಿದನು. 1934ರಲ್ಲಿ ಚೆರೆಂಕೊವ್ ಮೊದಲ ಬಾರಿಗೆ ರೇಡಿಯಂ ಧಾತುವಿನ ವಿಕಿರಣಕ್ಕೊಳಗಾದ ನೀರು ನೀಲ ಕಿರಣಗಳನ್ನು ಉತ್ಪರ್ಜಿಸುವುದನ್ನು ಗಮನಿಸಿದನು. ಇದನ್ನು ಹಲವರು ಈ ಮೊದಲೇ ಗಮನಿಸಿದ್ದಾದರೂ ಅದು ಪ್ರದೀಪ್ತಿಯಿಂದ (Luminiance) ಹಾಗಾಗುವ್ಯದೆಂದು ಭಾವಿಸಿದ್ದರು.ಆದರೆ ಕೆಲ ಸಮಯದಲ್ಲಿ , ನಾನಾ ದ್ರಾವಣಗಳೂ ಈ ಪರಿಣಾಮಗಳನ್ನು ತೋರಿಸಿರುವನ್ನು ಅರಿತ ಚೆರೆಂಕೊವ್ ಇದಕ್ಕೆ ಪ್ರದೀಪ್ತಿ ಕಾರಣವಲ್ಲವೆಂದು ಅರಿತನು. ಈ ದಿಶೆಯಲ್ಲಿ ಸಂಶೋಧನೆ ನಡೆಸಿ ರೇಡಿಯಂನಿಂದ ಹೊರಹೊಮ್ಮುವ ಕ್ಷಿಪ್ರ ಎಲೆಕ್ಟ್ರಾನ್ (ಬೀಟಾ ಕಿರಣಗಳಿಂದ) ಬೆಳಕು ಧೃವೀಕೃತಗೊಳ್ಳುವ್ಯದರಿಂದ ಹೀಗಾಗುವುದೆಂದು ತೋರಿಸಿದನು. 1937ರಲ್ಲಿ ಐ.ಎಂ.ಫ್ರಾಂಕ್ ಹಾಗೂ ಎ.ಇ.ಟ್ಯಾಮ್ ಜೊತೆ ಸೇರಿ, ಈ ಪರಿಣಾಮಕ್ಕೆ ವಿವರಣೆ ನೀಡಿದನು. ಇವರ ಸಹ ಸಂಶೋಧನೆಯಿಂದ ಆವಿಷ್ಟಿತ ಕಣಗಳು (Charged Particles) ದ್ರವ ಹಾಗೂ ಘನ ಮಾಧ್ಯಮದಲ್ಲಿ ಆ ಮಾಧ್ಯಮದಲ್ಲಿನ ಬೆಳಕಿನ ವೇಗಕ್ಕಿಂತಲೂ ಅಧಿಕ ವೇಗದಲ್ಲಿ ಸಾಗುವುದಎಂದ ಬೆಳಕು ಧೃವೀಕೃತಗೊಳ್ಳುವುದೆಂದು ತಿಳಿಯಿತಲ್ಲದೆ, ಬೆಳಕಿನ ಧೃವೀಕರಣ ಹಾಗೂ ಧೃವೀಕರಣ ದಿಕ್ಕನ್ನು ಖಚಿತವಾಗಿ ನಿರ್ಧರಿಸುವುದು ಸಾಧ್ಯವಾಯಿತು. ಭಾರ ಜಲ ಹೊಂದಿರುವ ಯುರೇನಿಯಂ ಪ್ರತಿಕ್ರಿಯಾಕಾರಕದ (Reactor ) ತಿರುಳಿನಲ್ಲಿ ನೀಲಿ ದೀಪ್ತಿ ಹೊಮ್ಮಿ ಚೆರೆಂಕೊವ ಪರಿಣಾಮ ಎದ್ದು ಕಾಣುತ್ತದೆ. ಅಧಿಕ ಆವಿಷ್ಟಿತ ಕಣಗಳ ಪತ್ತೆಗೆ ಒಂಟಿ ಕಣಗಳ ಪತ್ತೆಗೆ ಚೆರೆಂಕೊವ್ ಪರಿಣಾಮ ನೆರವಿಗೆ ಬರುತ್ತದೆ. ಗಾಳಿಯಲ್ಲಿ ವಿಮಾನ ಶಬ್ಧಾತೀತ ವೇಗ ಗಳಿಸಿದಾಗ, ಆಘಾತದಲೆ ಹಾಗೂ ಸ್ಥನಿಕ ಮೊಳಗು Sonic Boom ) ಉಂಟಾಗುವ ಕ್ರಿಯೆಯನ್ನು ಚೆರೆಂಕೊವ್ ಪರಿಣಾಮ ಹೋಲುತ್ತದೆ. ಚೆರೆಂಕೊವ್ ಫ್ರಾಂಕ್ ಹಾಗೂ ಟ್ಯಾಮ್ 1958ರ ನೊಬೆಲ ಪ್ರಶಸ್ತಿ ಪುರಸ್ಕೃತರಾದರು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಐಗೊರ್, ಯೆವ್ಜೆನಿಯೆವಿಖ್ ತಮ್ (1895--) 1958
Igor, Yevgenyevich Tamm
ರಷ್ಯಾ- ಭೌತಶಾಸ್ತ್ರ- ಎಲೆಕ್ಟ್ರಾನ್ಗಳ ವಿಕಿರಣತ್ವ ವಿವರಿಸಿದಾತ.
ಐಗೊರ್ 8 ಜುಲೈ 1895ರಂದು ವ್ಲಾಡಿವೊಸ್ಟಾಕ್ನಲ್ಲಿ ಜನಿಸಿದನು. ಈತನ ತಂದೆ ಇಂಜಿನಿಯರಾಗಿ ಸೇವೆ ಸಲ್ಲಿಸುತ್ತಿದ್ದನು. ಮಾಸ್ಕೊ ವಿಶ್ವವಿದ್ಯಾಲಯದಿಂದ 1918ರಲಿ ಭೌತಶಾಸ್ತ್ರದ ಪದವಿ ಪಡೆದನು. ಉಪನ್ಯಾಸಕ, ಪ್ರಾಧ್ಯಾಪಕನಾಗಿ ಐಗೊರ್ ಸೇವೆ ಸಲ್ಲಿಸಿದನು. 1934 ರಿಂದ ಮಾಸ್ಕೋದ ಲೆಬೆಡೆವ್ ವಿಶ್ವವಿದ್ಯಾಲಯದ ಸೈದ್ಧಾಂತಿಕ ವಿಭಾಗದ ಮುಖ್ಯಸ್ಥನಾದನು 1920ರಿಂದ 1944ರವರೆಗೆ ಐಗೊರ್, ಮ್ಯಾಂಡೆಲ್ಸ್ಟ್ಯಾಮ್ನ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದನು. ಈತನ ಸಂಶೋಧನೆ ಸ್ಪಟಿಕ ದೃಗ್ಶಾಸ್ತ್ರ ,ಸಾಪೇಕ್ಷ ಸಿದ್ಧಾಂತ ಮತ್ತು ಘನ ಕಾಯಗಳಲ್ಲಿ ವಿಸರಿಸುವ ಬೆಳಕಿನ ಕ್ವಾಂಟಂ ಅಧ್ಯಯನಗಳಲಿ ಕೇಂದ್ರಕೃತವಾಗಿದ್ದವು. ಐಗೊರ್, ಐ.ಎಂ.ಫ್ರಾಂಕ್ ಸಹ ಯೋಗದಲ್ಲಿ ನಿರ್ದಿಷ್ಟ ಮಾಧ್ಯಮದಲ್ಲಿ ಬೆಳಕಿನ ವೇಗಕ್ಕಿಂತಲೂ ಅಧಿಕ ವೇಗ ಗಳಿಸಬಲ್ಲ ಎಲೆಕ್ಟ್ರಾನ್ಗಳ ವಿಕಿರಣತ್ವ ವಿವರಿಸುವ ಚೆರ್ನೆಂಕೊವ್ ಪರಿಣಾಮ ಹಾಗೂ ವಿಶ್ವ ಕಿರಣ ವೃಷ್ಟಿಯನ್ನು ಕುರಿತಾಗಿ ಸೈದ್ಧಾಂತಿಕ ಚಿಂತನೆ ನಡೆಸಿದನು. ಔಷ್ಣೀಯ ಬೈಜಿಕ (Theronuclear) ಕ್ರಿಯಾ ನಿಯಂತ್ರಣ ಕುರಿತಾಗಿ ಐಗೊರ್ ನಡೆಸಿದ ಸಂಶೋಧನೆಗಳು ಸಹ ಗಮನಾರ್ಹವಾಗಿವೆ. ಪ್ರಾಥಮಿಕ ಕಣಗಳನ್ನು ಮತ್ತು ನ್ಯೂಟ್ರಾನ್ ಕಾಂತೀಯ ಭ್ರಾಮ್ಯತೆ (Magnetic Moment) ವಿವರಿಸುವ ಕೃತಿಗಳನ್ನು ಐಗೊರ್ ರಚಿಸಿದ್ದಾನೆ. ಈ ಸಂಶೋಧನೆಗಳಿಗಾಗಿ ಐಗೊರ್ 1958ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಇಲ್ಯಾ ,ಮೈಖೆಲೋವಿಖ್ ಫ್ರಾಂಕ್ (1908-1990) 1958
Ilya , Michailovich Frank
ರಷ್ಯಾ-ಭೌತಶಾಸ್ತ್ರ- ಚೆರ್ನೆಂಕೊವ್ ಪರಿಣಾಮ ಅನಾವರಣಗೊಳಿಸಿದಾತ.
ಇಲ್ಯಾ 23 ಅಕ್ಟೋಬರ್ 1908ರಂದು ಮಾಸ್ಕೋದಲ್ಲಿ ಜನಿಸಿದನು. 1930ರಲ್ಲಿ ಮಾಸ್ಕೋ ವಿಶ್ವ ವಿದ್ಯಾಲಯದಿಂದ ವಿಜ್ಞಾನದಲ್ಲಿ ಪದವಿ ಪಡೆದನು. 1934ರಲ್ಲಿ ಚೆರ್ನೆಂಕೊವ್ ಆವಿಷ್ಟ ಕಣಗಳಿಂದ ಉತ್ಸರ್ಜಿತಗೊಂಡ ಬೆಳಕಿನ ವೇಗ ನೀರಿನಂತಹ ಪಾರದರ್ಶಕ ಮಾಧ್ಯಮಗಳಲ್ಲಿ ಸಾಧಾರಣ ಬೆಳಕಿನ ವೇಗಕ್ಕಿಂತಲೂ ಅಧಿಕವಾಗಿರುವುದನ್ನು ಅನಾವರಣಗೊಳಿಸಿದನು. ಇದು ಚೆರ್ನೆಂಕೊವ್ ಪರಿಣಾಮವೆಂದು ಹೆಸರಾಯಿತು. ಇದಕ್ಕೆ ಇಲ್ಯಾ ಮತ್ತು ಐಗೊರ್ ಸೈದ್ಧಾಂತಿಕ ವಿವರಣೆ ನೀಡಿದರು. ಇದರ ಆಧಾರದ ಮೇಲೆ ಅಧಿಕ ವೇಗ ಹೊಂದಿರುವ ಬೈಜಿಕ ಕಣಗಳನ್ನು ಪತ್ತೆ ಹಚ್ಚುವುದು ಸಾಧ್ಯವಾಯಿತು. ಇಲ್ಯಾನ ಈ ಸಾಧನೆಗಾಗಿ 1958ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಗಾಮಾ ಕಿರಣ, ನ್ಯೂಟ್ರಾನ್ ಕಣ ದೂಲಗಳ ಸಂಶೋಧನೆಯಲ್ಲೂ ಇಲ್ಯಾ ಪರಿಶ್ರಮಿಸಿದನು. 1944ರಲ್ಲಿ ಇಲ್ಯಾ ಮಾಸ್ಕೊ ವಿಶ್ವವಿದ್ಯಾಲಯದ ಭೌತಶಾಸ್ತ್ರದ ಮುಖ್ಯಸ್ಥನಾದನು. 1946ರಲ್ಲಿ ಸೋವಿಯತ್ ರಷ್ಯಾದ ಅಕಾಡೆಮಿ ಆಫ್ ಸೈನ್ಸಸ್ ಸದಸ್ಯನಾಗಿ ನೇಮಕಗೊಂಡನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಚೇಂಬರ್ಲೇನ್, ಓವೆನ್ (1920--) 1959
Chamberlain , Owen
ಅಸಂಸಂ -ಭೌತಶಾಸ್ತ್ರ -ಪ್ರತಿ ಪ್ರೋಟಾನ್ ಅನಾವರಣಗೊಳಿಸಿದಾತ.
ಡಾರ್ಮೌತ್ ಹಾಗೂ ಚಿಕಾಗೋದಲ್ಲಿ ವಿದ್ಯಾಭ್ಯಾಸ ಮಾಡಿದ ಚೇಂಬರ್ಲೇನ್ ಬರ್ಕ್ಲೆಯ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ 1958ರಲ್ಲಿ ನೇಮಕಗೊಂಡನು, 1989ರವರೆಗೆ ಇಲ್ಲಿಯೇ ಸೇವೆ ಸಲ್ಲಿಸಿದನು. ಎರಡನೇ ಜಾಗತಿಕ ಯುದ್ದದಲ್ಲಿ ಸಮಯದಲ್ಲಿ ಮ್ಯಾನ್ಹಟ್ಟನ್ನಲ್ಲಿ ಬೈಜಿಕಾಸ್ತ್ರ ತಯಾರಿಕಾ ಯೋಜನೆಯಲ್ಲಿ ಪಾಲ್ಗೊಂಡು , ಭಾರ ಧಾತುಗಳ ಹಠಾತ್ ಪರಮಾಣು ವಿದಳನದ (Atomic Fission) ಬಗ್ಗೆ ಸಂಶೋಧನಾ ಪ್ರಯುಕ್ತನಾದನು. ಯುದ್ದದ ನಂತರ , ಬರ್ಕ್ಲೆಯ ಕಣ ವೇಗೋತ್ಕರ್ಷಕಗಳಲ್ಲಿ ಕೆಲಸ ಮಾಡಿದ ಚೇಂಬರ್ಲೇನ್ ಸೆರ್ಗ್ರೆ ಹಾಗೂ ಇನ್ನಿತರ ಸಂಗಡಿಗರ ಜೊತೆಗೂಡಿ 1955ರಲ್ಲಿ ಪ್ರತಿ ಪ್ರೋಟಾನನ್ನು ಕಂಡು ಹಿಡಿದನು. ಇದು ಪ್ರೋಟಾನನಷ್ಟೇ ತೂಕವಿದ್ದು, ವಿದ್ಯುದಾವಿಷತೆಯಲ್ಲಿ ಅದಕ್ಕೆ ವಿರುದ್ದವಾಗಿರುತ್ತದೆ. 1926ರಲ್ಲೇ ಡಿರಾಕ್ ಸೈದ್ಧಾಂತಿಕವಾಗಿ ಪ್ರತಿ ಪ್ರೋಟಾನಗಳ ಅಸ್ತಿತ್ವವನ್ನು ಮುನ್ನಡಿದಿದ್ದನು. ಪ್ರತಿ ಪ್ರೋಟಾನನ್ನು ಕಂಡು ಹಿಡಿದಿದ್ದಕ್ಕಾಗಿ ಸೆಗ್ರೆ ಜೊತೆ ಸೇರಿ ಚೆಂಬರ್ಲೇನ್ 1959ರ ನೊಬೆಲ್ ಪ್ರಶಸ್ತಿ ಪಡೆದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಸೆಗ್ರೆ ಎಮಿಲಿಯೋ ಜಿನೊ (1905-1989) 1959
Segre , Emillio Gino
ಇಟಲಿ-ಅಸಂಸಂ ಭೌತಶಾಸ್ತ್ರ-ಪ್ರತಿ ಪ್ರೋಟಾನ್ ಅನಾವರಣಗೊಳಿಸಿದಾತ.
ಸೆಗ್ರೆ, ರೋಮ್ನಲ್ಲಿ ಇಂಜಿನಿಯರಿಂಗ್ ಪದವಿಗೆ ಸೇರಿದನಾದರೂ 1927ರಲ್ಲಿ ಭೌತಶಾಸ್ತ್ರ ವಿಭಾಗಕ್ಕೆ ಬದಲಾಯಿಸಿಕೊಂಡನು. ಇಲ್ಲಿಫರ್ಮಿ ಕೈಕೆಳಗೆ ಮೊದಲ ಸಂಶೋಧನಾ ವಿದ್ಯಾರ್ಥಿಯಾದನು. 1928ರಲ್ಲಿ ಡಾಕ್ಟರೇಟ್ ಗಳಿಸಿದನು. ಸೆಗ್ರೆ ,ಪಾಲೆರ್ಮೋ ಪ್ರಯೋಗಾಲಯಗಳ ನಿರ್ದೇಶಕ ಸ್ಥಾನಕ್ಕೇರಿದನು. 1938ರಲ್ಲಿ ಯಹೂದಿಯೆಂಬ ಕಾರಣಕ್ಕೆ ಆ ಹುದ್ದೆಯಿಂದ ಉಚ್ಛಾಟಿಸಲ್ಪಟ್ಟನು. ನಂತರ ಅಸಂಸಂಗಳಿಗೆ ಹೋಗಿ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯ ಸೇರಿದನು. ಎರಡನೇ ಜಾಗತಿಕ ಯುದ್ದದಲ್ಲಿ ಪರಮಾಣು ಅಸ್ತ್ರ ತಯಾರಿಕೆಯ ಮ್ಯಾನ್ಹಟನ್ ಯೋಜನೆಯಲ್ಲಿ ಸಕ್ರಿಯ ಪಾತ್ರ ವಹಿಸಿದನು. ಸೆಗ್ರೆ 1937ರಲ್ಲಿ ಟೆಕ್ನೇಷಿಯಂ 1940ರಲ್ಲಿ ಅಸ್ಟಟೈನ್ ಹಾಗೂ ಪ್ಲುಟೋನಿಯಂ ಎಂಬ ಮೂರು ಹೊಸ ಧಾತುಗಳನ್ನು ಅನಾವರಣಗೊಳಿಸಿದ ತಂಡದಲ್ಲಿ ಪ್ರಮುಖನಾಗಿದ್ದನು. ಸೈಕ್ಲೊಟ್ರಾನ್ನಲ್ಲಿ, ಮಾಲಿಬ್ಡಿನಮ್ ಧಾತುವನ್ನು ಡ್ಯುಟೋರಿಯಂ ಬೀಜದಿಂದ ವಿನಾಶಗೊಳಿಸಿ, ಟೆಕ್ನೇಷಿಯಂ ಪಡೆಯಲಾಯಿತು. ಇದು ಜಗತ್ತಿನಲ್ಲಿ ಮೊಟ್ಟ ಮೊದಲು ಕೃತಕವಾಗಿ ಸೃಜಿತಗೊಂಡ ಧಾತುವಾಗಿದೆ. ಟೆಕ್ನೇಷಿಯಂ ವಿಕಿರಣಶೀಲವಾಗಿದ್ದು , ಇದರ ಸಮಸ್ಥಾನಿ ವೈದ್ಯಕೀಯದಲ್ಲಿ ಬಳಕೆಯಾಗುತ್ತದೆ. ಎರಡನೇ ಜಾಗತಿಕ ಯುದ್ದದ ನಂತರ ಸೆಗ್ರೆ, ಡಿರಾಕ್ನಿಂದ ಮುನ್ಸೂಚಿಸಲ್ಪಟ್ಟಿದ್ದ, ಪ್ರೋಟಾನ್ನ ಪ್ರತಿಕಿರಣ ಹುಡುಕಲು ಯತ್ನಿಸಿದನು. 1955ರಲ್ಲಿ ಬಕ್ರ್ಲೆ ಬೆವಟ್ರಾನ್ ಪ್ರೋಟಾನ್ ಅ್ಯಕ್ಸಿಲರೇಟರ್ನಲ್ಲಿ ಪ್ರೋಟಾನ್ ಪ್ರೋಟಾನ್ನ್ನು ತಾಮ್ರದ ಲಕ್ಷ್ಯದ ಮೇಲೆ ಘಟ್ಟಿಸಿ, ಪ್ರತಿ ಪ್ರೋಟಾನ್ ಪಡೆಯಲಾಯಿತು. 1959ರಲ್ಲಿ ಸೆಗ್ರೆ ಹಾಗೂ ಚೇಂಬರ್ಲಿನ್ ಪ್ರತಿಪ್ರೋಟಾನ್ ಅನಾವರಣಗೊಳಿಸಿದ್ದಕ್ಕೆ ನೊಬೆಲ್ ಪ್ರಶಸ್ತಿ ಪಡೆದರು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಗ್ಲೇಸರ್, ಡೊನಾಲ್ಡ್ ಆರ್ಥರ್ (1926--)1960
Glaser, Donald Arthur
ಅಸಂಸಂ-ಭೌತಶಾಸ್ತ್ರ ಮೂಲಕಣಗಳ ವೀಕ್ಷಣೆಗೆ ಗುಳ್ಳೆ ಕೋಠಿ (Bubble Chamber) ನಿರ್ಮಿಸಿದಾತ.
ಕ್ಲೀವ್ಲ್ಯಾಂಡ್ನ ಕೇಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದ ಗ್ಲೇಸರ್, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿ ವಿಶ್ವ ಕಿರಣಗಳ ಬಗ್ಗೆ ಅಧ್ಯಯನ ಮಾಡಿ, 1950ರಲ್ಲಿ ಡಾಕ್ಟರೇಟ್ ಗಳಿಸಿದನು. ಮಿಷಿಗನ್, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಗಳಲ್ಲಿ ವೃತ್ತಿ ಜೀವನ ಮುಂದುವರೆಸಿ, 1964ರಲ್ಲಿ ಅಣ್ವಕ ಜೀವಶಾಸ್ತ್ರದತ್ತ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದನು. ಮೂಲಕಣಗಳನ್ನು ಪತ್ತೆ ಹಚ್ಚಲು ವಿಲ್ಸನ್ ಮೇಘ ಕೋಠಿಯನ್ನು ನಿರ್ಮಿಸಿದ್ದನು. ಈ ಕೋಠಿಯಲ್ಲಿ ಅಧಿಕ ಚೈತನ್ಯದ, ತೀವ್ರ ವೇಗದ ಮೂಲಕಣಗಳನ್ನು ಪತ್ತೆ ಮಾಡಲಾಗುತ್ತಿರಲಿಲ್ಲ. ಇದನ್ನು ಉತ್ತಮಗೊಳಿಸಲು ಗ್ಲೇಸರ್ ಯತ್ನಿಸಿದನು. ಅತಿಶಾಖದ, ದ್ರವದ ಮೂಲಕ ಹಾದು ಹೋಗುವ ಮೂಲ ಕಣಗಳು ತಮ್ಮ ಜಾಡಿನುದ್ದಕ್ಕೂ ಸಣ್ಣ ಅನಿಲದ ಗುಳ್ಳೆಗಳನ್ನು ಚಿಮ್ಮಿಸುತ್ತಾ ಸಾಗುವುವೆಂದೂ ಗ್ಲೇಸರ್ಗೆ ತಿಳಿಯಿತು. ಇದರ ಆಧಾರದ ಮೇಲೆ 1952ರಲ್ಲಿ ಡೀ ಈಥೈಲ್ ಈಥರ್ನಿಂದ ತುಂಬಿದ ಕಿರುಗಾತ್ರದ, ಗುಳ್ಳೆ ಕೋಠಿಯನ್ನು ನಿರ್ಮಿಸಿದನು. ಮೂಲಕಣಗಳ ಜಾಡುಗಳನ್ನು ಅಧಿಕ ವೇಗದ ಕ್ಯಾಮರಾಗಳಿಂದ ಚಿತ್ರಿಸಲಾಯಿತು. ಗ್ಲೇಸರ್ನ ತತ್ತ್ವದ ಮೇಲೆ ಅಲ್ವಾರೆಝ್ ಹಲವಾರು ಮೀಟರ್ ವ್ಯಾಸದ, ದ್ರವ ಜಲಜನಕ ತುಂಬಿದ ಗುಳ್ಳೆ ಕೋಠಿ ನಿರ್ಮಿಸಿದನು. ಇದು ಕಾರ್ಯವ್ಯಾಪ್ತಿ ಮತ್ತು ದಕ್ಷತೆಯಲ್ಲಿ ಗ್ಲೇಸರ್ನದಕ್ಕಿಂತಲೂ ಉತ್ತಮವಾಗಿದ್ದಿತು. 1960ರಿಂದ 1970ರ ದಶಕದವರೆಗೆ ಮೂಲ ಕಣಗಳ ಸಂಶೋಧನೆಯಲ್ಲಿ ತಾಂತ್ರಿಕತೆಯಲ್ಲಿ ಗ್ಲೇಸರ್ನ ವಿಧಾನ ಕ್ರಾಂತಿಯನ್ನೇ ತಂದಿತು. ಗ್ಲೇಸರ್ ನೀರು, ಅಲ್ಕೋಹಾಲ್, ಸೋಡಾ ನೀರುಗಳನ್ನು ಕೋಠಿಗಳಲ್ಲಿ ಬಳಸಲು ಯತ್ನಿಸಿದನಾದರೂ ಯಶಸ್ಸನ್ನು ಕಾಣಲಿಲ್ಲ. ನೀರು ಅಧಿಕ ಮೇಲ್ಮೈ ಕರ್ಷಣೆಯಿಂದ (Surface Tension) ನಿರರ್ಥಕ ಮಾಧ್ಯಮವೆನಿಸಿತು. 1960ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಗ್ಲೇಸರ್ ತನ್ನ ಸಾಧನೆಗಾಗಿ ಪಡೆದುಕೊಂಡನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು